ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದ ಡಾ. ಎಚ್.ಡಿ. ಚಂದ್ರಪ್ಪಗೌಡ ಅವರ ಆರೋಗ್ಯಲೋಕ, ವಿಜ್ಞಾನಲೋಕ ಸಂಪುಟಗಳ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನರಲ್ಲಿರುವ ಮೌಢ್ಯಗಳ ನಿವಾಋಣೆ ಕಾರಣಕ್ಕೆ ಚಂದ್ರಪ್ಪಗೌಡ ವೈದ್ಯಕೀಯ ಸಾಹಿತ್ಯ ಬರೆಯಲು ಮುಂದಾದರು. ವೈದ್ಯಕೀಯ ಸಾಹಿತ್ಯದ ಉದ್ದೇಶ ಜನರಲ್ಲಿ ಅರಿವು ಮೂಡಿಸಬೇಕು. ಈ ಕುರಿತು ಇಂದಿನ ಯುವ ವೈದ್ಯರು ಗಮನಹರಿಸಿ ಸಾಹಿತ್ಯ ರಚಿಸಲು ಮುಂದಾಗಬೇಕು. ಪ್ರಸ್ತುತ ಖಾಸಗಿ ವೈದ್ಯಲೋಕ ಜನರ ಮುಗ್ದತೆಯನ್ನು ಬಂಡವಾಳ ಮಾಡಿಕೊಂಡು ಲಾಭಕ್ಕೆ ಇಳಿದಿವೆ. ಇದು ಈ ನಾಡಿನ ದುರಂತ ಎಂದರು.ಸ್ವಸ್ಥ ಸಮಾಜಕ್ಕೆ ವೈದ್ಯಕೀಯ ಸಾಹಿತ್ಯ ಅತ್ಯಗತ್ಯ. ಇದನ್ನು ಸಾಂಪ್ರದಾಯಿಕ ಸಾಹಿತ್ಯ ಎಂದು ಯಾರೂ ಒಪ್ಪುವುದಿಲ್ಲ. ವೈದ್ಯಕೀಯ ಸಾಹಿತ್ಯದ ಹೊತ್ತಿಗೆಗಳು ಮನೆಯಲ್ಲಿದ್ದರೆ, ಆರೋಗ್ಯನಿಧಿ ಇದ್ದಂತೆ ಎಂದರು.
ಹಿಂದೆಲ್ಲಾ ವೈದ್ಯಕೀಯ ಸಾಹಿತ್ಯ ಬರೆಯುವ ಲೇಖಕರಿಗೆ ಮನ್ನಣೆ ದೊರೆಯುತ್ತಿರಲಿಲ್ಲ. ಪ್ರಸ್ತುತ ಕಾಲ ಬದಲಾಗಿದೆ. ದಿನ ಪತ್ರಿಕೆಗಳು ಕೂಡ ಪ್ರತಿ ವಾರ ಆರೋಗ್ಯ ಮಾಹಿತಿಗೆ ಒಂದು ಪುಟ ಮೀಸಲಿರಿಸಿವೆ. ಇಲ್ಲಿ ಗುಣಮಟ್ಟದ ವೈದ್ಯರು ಲಭ್ಯವಿದ್ದಾರೆ. ಆದರೆ, ಬರವಣಿಗೆ ಎಂದಾಕ್ಷಣ ವೈದ್ಯರು ಹಿಂದೆ ಸರಿಯುತ್ತಿದ್ದಾರೆ. ವೈದ್ಯರಲ್ಲಿ ಈ ಮನಃಸ್ಥಿತಿ ಬದಲಾಗಬೇಕು ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಅರಿವಳಿಕೆ ವೈದ್ಯಶಾಸ್ತ್ರ ಪ್ರಾಧ್ಯಾಪಕ ಡಾ.ಗುರುದತ್, ನವಕರ್ನಾಟಕ ಪಬ್ಲಿಕೇಷನ್ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ಉಡುಪ, ಹಂಪಿ ವಿಶ್ವವಿದ್ಯಾಲಯ ಪ್ರಸಾರಂಗ ನಿರ್ದೇಶಕ ಡಾ.ಮಾಧವ ಪೆರಾಜೆ, ಡಾ.ಚಂದನಾ, ಗೌತಮಿ, ಆಶಾ ಶೇಷಾದ್ರಿ ಸೇರಿ ಡಾ.ಚಂದ್ರಪ್ಪಗೌಡರ ಕುಟುಂಬ ವರ್ಗದವರು ಇದ್ದರು.
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದ ಡಾ. ಎಚ್.ಡಿ. ಚಂದ್ರಪ್ಪಗೌಡರ ಆರೋಗ್ಯ ಲೋಕ, ವಿಜ್ಞಾನ ಲೋಕ ಸಂಪುಟಗಳ ಬಿಡುಗಡೆಗೊಳಿಸಲಾಯಿತು.