ಶೇಷಮೂರ್ತಿ ಅವಧಾನಿ
ಜಿಲ್ಲೆಯ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿರುವ ಅಡ್ಡೂರು ಶ್ರೀನಿವಾಸುಲು ಅವರು ಠಾಣೆಯಲ್ಲಿ ಠಿಕಾಣಿ ಹೂಡಿದ್ರೆ ಸಾಲದು, ಜನರ ಮಧ್ಯೆ ಸುತ್ತಾಡಿ, ಅವರ ಕುಂದುಕೊರತೆಗೆ ಕಿವಿಯಾಗಿ, ಪರಿಹಾರ ಹುಡುಕಿ ಎಂದು ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಎಸ್ಪಿಯಾಗಿ ಸೋಮವಾರವಷ್ಟೇ ಅಧಿಕಾರ ವಹಿಸಿಕೊಂಡಿದ್ದ ಶ್ರೀನಿವಾಸುಲು ಅವರು ತಮ್ಮ ಬಿಡುವಿಲ್ಲದ ಕಚೇರಿ ಕೆಲಸಗಳ ನಡುವೆಯೇ ಕನ್ನಡಪ್ರಭ ಜೊತೆ ಮಾತನಾಡಿ, ಕಾನೂನು ಸುವ್ಯವಸ್ಥೆ ಹಾಗೂ ಜಿಲ್ಲಾ ಅಭಿವೃದ್ಧಿಗೆ ನೇರ ಸಂಬಂಧವಿದೆ, ಜನಸ್ನೇಹಿ ಪೊಲೀಸಿಂಗ್ ಅಂದ್ರೆ ಜನರ ಕುಂದುಕೊರತೆ ಆಲಿಸಿ ಪರಿಹಾರಕ್ಕೆ ಮುಂದಾಗೋದೇ ತಾನೆ? ಎಂದರಲ್ಲದೆ, ಪೊಲೀಸ್ ಅಧಿಕಾರಿಗಳಂದ್ರೆ ಠಾಣೆಯಲ್ಲೇ ಕುಳಿತಿಕೊಳ್ಳೋದಲ್ಲ, ಸುತ್ತಾಡಬೇಕು, ಸಮಸ್ಯೆ ಗ್ರಹಿಸಬೇಕು. ಸಾರ್ವಜನಿಕರ ಕುಂದುಕೊರತೆಗೆ ಕಿವಿಯಾಗಿ ಕಾನೂನು ರೀತ್ಯಾ ಪರಿಹಾರ ಒದಗಿಸೋದಕ್ಕೆ ಪ್ರಥಮಾದ್ಯತೆ ನೀಡುವಂತಾಗಬೇಕು. ಅಂದಾಗ ಮಾತ್ರ ಪೊಲೀಸ್ ಬಲದ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚುತ್ತದೆ, ಗೌರವ ಬಾವನೆ ಮೂಡುತ್ತದೆ ಎಂದು ಹೇಳಿದ್ದಾರೆ.ಕುಂದುಕೊರತೆ ಆಲಿಕೆ- ಪರಿಹಾರಕ್ಕೆ ಆದ್ಯತೆ: ಜಿಲಾದ್ಯಂತ ತಾವು ಜನರ ಕುಂದುಕೊರತೆ ಆಲಿಕೆಗೆ ಆದ್ಯತೆ ನೀಡೋದಾಗಿ ಹೇಳಿರುವ ಶ್ರೀನಿವಾಸುಲು, ಜನರ ಸಮಸ್ಯೆ, ಗೋಳಿಗೆ ತಾಳ್ಮೆಯಿಂದ ಕಿವಿಯಾದಾಗ ಮಾತ್ರ ಪರಿಹಾರದ ದಾರಿ ಸಿಗುತ್ತದೆ. ಕಾನೂನು ರೀತ್ಯಾ ಪರಿಹಾರ ನೀಡುವ ಮೂಲಕ ಪೊಲೀಸರು ಜಿಲ್ಲೆಯ ನೊಂದ ಜನರಿಗೆ ನೆರವಿನ ಹಸ್ತ ಚಾಚುವ ಅಗತ್ಯವಿದೆ ಎಂದು ಜನಸ್ನೇಹಿ ಪೊಲೀಸಿಂಗ್ನ ಪ್ರಮುಖ ಗುಣಲಕ್ಷವೇ ಇದಾಗಿದೆ ಎಂದು ಹೇಳಿದ್ದಾರೆ.
ನೊಂವರು, ಬೆಂದವರೇ ಠಾಣೆಗೆ ಬರೋದು ಅನ್ನೋದನ್ನ ಯಾರೂ ಮರೆಯಬಾರದು. ಅವರ ನೋವೇ ಅವರನ್ನ ನಮ್ಮಲ್ಲಿಗೆ ಎಳೆದು ತಂದಿರುತ್ತದೆ. ಹಾಗೇ ನೋವು ಹೊತ್ತು ಬಂದವರಿಗೆ ಸಮಾಧಾನ ಮಾಡುವ, ಅವರ ಸಮಸ್ಯೆ ಆಲಿಸಿ ಕಾನೂನು ಕ್ರಮಕ್ಕೆ ಮುಂದಾಗಲೇಬೇಕು. ಹಾಗೆ ಮಾಡದೆ ಸುಕಾಸುಮ್ಮನೆ ಇರುವಂತಹ ಪ್ರಕರಣಗಳೇನಾದರೂ ಗಮನಕ್ಕೆ ಬಂದಲ್ಲಿ ಅಂತಹ ಪ್ರಕರಣಗಳಲ್ಲಿ ತಮ್ಮದು ಝೀರೋ ಟಾಲರನ್ಸ್ ಎಂದು ಎಸ್ಪಿಯವರು ಠಾಣಾ ಹಂತದಲ್ಲಿನ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.ಗುಡ್ ಮಾರ್ನಿಂಗ್ ಬೀಟ್
ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯ ಆಧುನೀಕರಣ, ಪರಿಕರಗಳು, ವಾಹನ ಸವಲತ್ತು ಇತ್ಯಾದಿಗಳು ನಿರಂತರ ನಡೆದಿವೆ. ಪೊಲೀಸರು ಇಲ್ಲಿ ನೊಂದವರ ಕಮ್ಣೀರು ಒರೆಸಬೇಕಾಗಿದೆ. ಅದಕ್ಕಾಗಿ ಬರುವ ದಿನಗಳಲ್ಲಿ ತಾವು ಇಲ್ಲಿರೋವರೆಗೂ ಪೊಲೀಸರಿಗೆ ಸಂವೇದನಶೀಲರಾಗಿ ನೊಂದವರೊಂದಿಗೆ ಸ್ಪಂದಿಸುವ ಪಾಠ ಹೇಳುವ ಸಂಕಲ್ಪ ಶ್ರೀನಿವಾಸುಲು ಮಾಡಿದ್ದಾರೆ.
2ಅಧಿಕಾರಿಗಳು ಠಾಣೆಲೇ ಕುಳಿತುಕೊಳ್ಳದೆ ಹೊರಗೆ ಜನರ ನಡುವೆ ಸುತ್ತಾಡುವಂತೆ ಮಾಡೋದು
4ಪೊಲೀಸ್ ಠಾಣೆಗೆ ನೊಂದವರು ಯಾರೇ ಬಂದರೂ ತಕ್ಷಣ ಸ್ಪಂದನೆ ಸಿಗೋ ಹಾಗೆ ಕ್ರಮ
6ಸಮಸ್ಯೆಯ ತೀವ್ರತೆ ಆಧರಿಸಿ ಎಸ್ಪಿಯಿಂದಲೂ ಕ್ಷೇತ್ರ ಸಂಚಾರಕ್ಕೆ ಆದ್ಯತೆ
7ನೊಂದವರು ಠಾಣೆಗೆ ಬಂದಾಗ ಅಧಿಕಾರಿ ಇಲ್ಲವೆಂದು ಹೇಳದೆ ಲಭ್ಯವಿರೋ ಸಿಬ್ಬಂದಿ ಸ್ಪಂದನೆ ಕಡ್ಡಾಯ8ಅಧಿಕಾರಿಗಳು ಬಂದಾಕ್ಷಣ ಠಾಣೆಗೆ ಬಂದು ಹೋದವರ ಮಾಹಿತಿ ತಿಳಿಸಿ ಸಂಪರ್ಕಿಸಲು ಸೂಚನೆ
9ಜನರ ಸಮಸ್ಯೆಗೆ ಸ್ಪಂದಿಸುವ ಜೋಶ್ನಲ್ಲಿ ಕಾನೂನು ಬಿಟ್ಟು ಕ್ರಮ ಕೈಗೊಳ್ಳೋಹಾಗಿಲ್ಲ