ಇಂದು, ನಾಳೆ ವಳಚ್ಚಿಲ್‌ನಲ್ಲಿ ಶ್ರೀನಿವಾಸ ಪ್ರತಿಷ್ಠಾ ಮಹೋತ್ಸವ, ಕಲ್ಯಾಣೋತ್ಸವ

KannadaprabhaNewsNetwork |  
Published : Feb 21, 2024, 02:02 AM IST
32 | Kannada Prabha

ಸಾರಾಂಶ

ಇಡೀ ಕರಾವಳಿ ಜಿಲ್ಲೆಯಲ್ಲಿ ಇಂತಹ ದೇವಾಲಯ ಇಲ್ಲ. ದೇವಾಲಯವನ್ನು ವಳಚ್ಚಿಲ್‌ನ ಬೆಟ್ಟದ ಮೇಲೆ ನಿರ್ಮಾಣ ಮಾಡಲಾಗಿದೆ. ಶ್ರೀನಿವಾಸ ದೇವರ ಮೂರ್ತಿಯನ್ನು ತಿರುಪತಿಯಿಂದಲೇ ತರಲಾಗಿದೆ ಎಂದು ಡಾ.ಎ. ರಾಘವೇಂದ್ರ ರಾವ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರವಳಚ್ಚಿಲ್‌ನಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾಲಯದ ಕಾಲೇಜು ಕ್ಯಾಂಪಸ್‌ನೊಳಗೆ ನೂತನ ದೇವಾಲಯದಲ್ಲಿ ಶ್ರೀನಿವಾಸ ದೇವರ ಪ್ರತಿಷ್ಠಾ ಮಹೋತ್ಸವ ಫೆ.21ರಂದು ಆರಂಭವಾಗಲಿದೆ. ಫೆ.22ರಂದು ಮಹಾಮಸ್ತಕಾಭಿಷೇಕ ಹಾಗೂ ಭವ್ಯ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಶ್ರೀನಿವಾಸ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎ. ರಾಘವೇಂದ್ರ ರಾವ್‌, ಇಡೀ ಕರಾವಳಿ ಜಿಲ್ಲೆಯಲ್ಲಿ ಇಂತಹ ದೇವಾಲಯ ಇಲ್ಲ. ದೇವಾಲಯವನ್ನು ವಳಚ್ಚಿಲ್‌ನ ಬೆಟ್ಟದ ಮೇಲೆ ನಿರ್ಮಾಣ ಮಾಡಲಾಗಿದೆ. ಶ್ರೀನಿವಾಸ ದೇವರ ಮೂರ್ತಿಯನ್ನು ತಿರುಪತಿಯಿಂದಲೇ ತರಲಾಗಿದೆ ಎಂದು ಹೇಳಿದರು.ಫೆ. 21ರಂದು ಬೆಳಗ್ಗೆ ಲಕ್ಷ್ಮೀನಾರಾಯಣ ಹೋಮ, ವಾಯುಸ್ತುತಿ ಪುನಶ್ಚರಣ ಹವನ, ಶಾಂತಿ ಪ್ರಾಯಶ್ಚಿತ್ತ ಹೋಮಗಳು, ವಿಷ್ಣು ಸಹಸ್ರ ನಾಮಾವಳಿ, ಪಾರಾಯಣ ಸೇರಿದಂತೆ ಶಾಸ್ರೋಕ್ತ ವಿಧಿವಿಧಾನಗಳೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಸಂಜೆ ಶ್ರೀನಿವಾಸ ದೇವರ ಭವ್ಯ ಮೆರವಣಿಗೆಯೊಂದಿಗೆ ಕೊನೆಗೊಳ್ಳುತ್ತದೆ, ನಂತರ ಸಾಂಪ್ರದಾಯಿಕ ಆಚರಣೆಗಳಾದ ಅಧಿವಾಸಹೋಮ ಮತ್ತು ಶಯ್ಯಾಧಿವಾಸ ಕಲಶ ಮಂಡಲ ಸೇವೆ ನಡೆಯಲಿದೆ ಎಂದು ತಿಳಿಸಿದರು.

ಫೆ.22ರಂದು ಸೂರ್ಯೋದಯವಾಗುತ್ತಿದ್ದಂತೆ ಗಣಹೋಮ ಮತ್ತು ಪ್ರತಿಷ್ಠಾ ಪ್ರಸನ್ನ ಪೂಜೆಯೊಂದಿಗೆ ಉತ್ಸವವು ಮುಂದುವರಿಯುತ್ತದೆ. ಕುಂಭ ಲಗ್ನದ ಅಡಿಯಲ್ಲಿ ಬೆಳಗ್ಗೆ 7:40ಕ್ಕೆ ನಡೆಯುವ ಪ್ರತಿಷ್ಠಾ ಸಮಾರಂಭವು ದಿನದ ಪ್ರಮುಖ ಅಂಶವಾಗಿದೆ. ಕಲಶಾಭಿಷೇಕ, ವಿಷ್ಣು ಸಹಸ್ರ ನಾಮ ಹವನ, ಕಲ್ಪೋಕ್ತ ಪೂಜೆ, ದಂಪತಿ ಪೂಜೆ, ಮಂತ್ರಾಕ್ಷತೆ ಮತ್ತು ಸಂತರ್ಪಣೆ ನಡೆಯಲಿದೆ. ಸಂಜೆ ಶ್ರೀನಿವಾಸ ಕಲ್ಯಾಣೋತ್ಸವವು ಗೋಧೂಳಿ ಲಗ್ನದಲ್ಲಿ ನಡೆದು ರಾತ್ರಿಯವರೆಗೂ ಮುಂದುವರಿಯಲಿದೆ. ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ನಂತರದ ದಿನಗಳಲ್ಲಿ ನಿತ್ಯವೂ ದೇವರಿಗೆ ಪೂಜೆ ನೆರವೇರಲಿದ್ದು, ಬೆಳಗ್ಗೆ 6ರಿಂದ ರಾತ್ರಿ 8ರವರೆಗೆ ದೇವರ ದರ್ಶನ ಪಡೆಯಬಹುದು ಎಂದು ಡಾ.ರಾಘವೇಂದ್ರ ರಾವ್‌ ಹೇಳಿದರು.ಶ್ರೀನಿವಾಸ ಸಮೂಹ ಸಂಸ್ಥೆ ಉಪಾಧ್ಯಕ್ಷ ಡಾ.ಎ. ಶ್ರೀನಿವಾಸ ರಾವ್, ಸಂಸ್ಥೆಯ ಪ್ರಮುಖರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣವನ್ನು ರಾಜ್ಯ ಸರ್ಕಾರ ಕೇಂದ್ರೀಕರಣಗೊಳಿಸಿದೆ
ಭಗವಂತನ ನಂಬಿಕೆ ಮೂಡಿಸುವುದು ಮಠಗಳ ಕರ್ತವ್ಯ