ಮಾಗಡಿ: ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಧ್ವ ನವಮಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಮಧ್ವನಾಮಿ ಪ್ರಯುಕ್ತ ಮಧ್ವಾಚಾರ್ಯರ ವಿಗ್ರಹಕ್ಕೆ ವಿಶೇಷ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು, ಬೃಂದಾವನಕ್ಕೆ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಮಧ್ವಾಚಾರ್ಯರ ಮೂಲ ಹೆಸರು ವಾಸುದೇವ ಮಧ್ವಾಚಾರ್ಯ. ತಂದೆ ಮಧ್ಯಗೇಹ ಭಟ್ಟ ಮತ್ತು ತಾಯಿ ವೇದವತಿ. ಇವರ ಗುರುಗಳಾದ ಅಚ್ಯುತ ಪ್ರಜ್ಞರು ಸನ್ಯಾಸತ್ವ ನೀಡಿ ಪೂರ್ಣಪ್ರಜ್ಞರೆಂಬ ಹೆಸರಿಡುತ್ತಾರೆ. ಮಧ್ವಾಚಾರ್ಯರು ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ತಮ್ಮ ಶಿಷ್ಯರಿಗೆ ಐತರೇಯ ಉಪನಿಷದ್ ಬೋಧಿಸುತ್ತಿರುತ್ತಾರೆ.
ಈ ವೇಳೆ ಮಧ್ವಾಚಾರ್ಯರ ಮೇಲೆ ಪುಷ್ಟವೃಷ್ಠಿಯಾಗುತ್ತದೆ. ಆ ಕ್ಷಣದಲ್ಲಿ ಗುರುಗಳು ಕಣ್ಮರೆಯಾಗುತ್ತಾರೆ. ಆನಂತರ ಅವರು ಹೂರಾಶಿಯೊಳಗೆ ಕಾಣುತ್ತಾರೆ. ಇದೇ ದಿನ ಗುರುಗಳು ಬದರಿಕಾಶ್ರಮವನ್ನು ಪ್ರವೇಶಿಸಿದ ದಿನವೆಂದು ಹೇಳಲಾಗುತ್ತದೆ. ಈ ಕಾರಣ ಈ ದಿನದಂದು ಮಾದ್ವನವಮಿ ಆಚರಿಸುತ್ತಾರೆ ಎಂದು ಹೇಳಿದರು.ಶ್ರೀ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯರಂತೆ ಶ್ರೀ ಮಧ್ವಾಚಾರ್ಯರು ಸಹ ನಮ್ಮದೇಶಕಂಡ ಪ್ರಮುಖ ತತ್ವಜ್ಞಾನಿಗಳಾಗಿದ್ದಾರೆ. ಇವರು ದ್ವೈತವಾದದ ತತ್ತ್ವಶಾಸ್ತ್ರವನ್ನು ಪ್ರತಿಪಾದಿಸುತ್ತಾರೆ. ಉಡುಪಿಯ ಶ್ರೀ ಕೃಷ್ಣ ಮಠಕ್ಕೂ ಶ್ರೀಮದ್ವಾಚಾರ್ಯರಿಗೂ ಅವಿನಾಭಾವ ಸಂಬಂಧವಿದೆ. ಶ್ರೀ ಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಸ್ಥಾಪಿಸಿದವರು ಎಂದು ಹೇಳಲಾಗುತ್ತದೆ ಎಂದರು.
ಪೋಟೋ 18ಮಾಗಡಿ1:
ಮಾಗಡಿ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಮದ್ವನವಮಿ ಆಚರಿಸಲಾಯಿತು.