ಕಲಾ ಗಂಗೋತ್ರಿಯಾದ ಮಾನಸ ಗಂಗೋತ್ರಿ.

KannadaprabhaNewsNetwork |  
Published : Jan 27, 2024, 01:18 AM IST
18 | Kannada Prabha

ಸಾರಾಂಶ

ಉಡುಪಿಯ ರೂಪಾ ವಸುಂಧರ ಆಚಾರ್ಯ ಅವರು ಕಸದಲ್ಲಿಯೂ ಚಿತ್ರ ಅರಳಿರಿಸಿದ್ದು ಗಮನ ಸೆಳೆಯಿತು. ಒಣಗಿದ ಎಲೆ, ಹೂಗಳನ್ನು ಬಳಸಿಕೊಂಡು ನವಿಲು, ಗಿಡ, ಮರ, ಪರಿಸರ, ಸಾಗರ, ಸರೋವರ ಸೇರಿದಂತೆ ನಾನಾ ಕಲಾಕೃತಿಗಳನ್ನು ನಿರ್ಮಿಸಿ ಪ್ರದರ್ಶನಕ್ಕಿರಿಸಿದ್ದರೆ ಬುಡಕಟ್ಟು ಕಲೆಯ ಭಾಗವಾದ ಟೊಟಮ್ಸ್ ಮಾದರಿಯ ಕಲಾಕೃತಿಗಳನ್ನು ಬೆಂಗಳೂರಿನ ಬಿ.ಎನ್. ನಾಗರಾಜು ನಿರ್ಮಿಸಿದ್ದರು.

- ಹೊಸ ಕಳೆಗಟ್ಟಿದ್ದ ಚಿತ್ರಸಂತೆ- ತಮಗಿಷ್ಟದ ಚಿತ್ರ ಖರೀದಿಸಿದ ಚಿತ್ರ ರಸಿಕರುಕನ್ನಡಪ್ರಭ ವಾರ್ತೆ ಮೈಸೂರು

ಸದಾ ತರಗತಿ, ಪಾಠ- ಪ್ರವಚನ, ಕಾರ್ಯಕ್ರಮ, ಹರಟೆ, ಸುತ್ತಾಟದಿಂದ ತುಂಬಿರುತ್ತಿದ್ದ ''''''''ಮಾನಸ ಗಂಗೋತ್ರಿ'''''''', ಶುಕ್ರವಾರ ''''''''ಕಲಾ ಗಂಗೋತ್ರಿ "ಯಾಗಿ ಕಂಗೊಳಿಸಿತು.

ಪ್ರವಾಸೋದ್ಯಮ ಇಲಾಖೆಯು ಮೈಸೂರು ಹಬ್ಬದ ಭಾಗವಾಗಿ ಆಯೋಜಿಸಿದ್ದ ಚಿತ್ರಸಂತೆಯು ಗಂಗೋತ್ರಿಗೆ ಹೊಸ ಕಳೆ ಕಟ್ಟಿಕೊಟ್ಟಿತು. ಚಿತ್ರ ಸಂತೆ ವೀಕ್ಷಿಸಲು ಸೇರಿದ್ದ ಚಿತ್ರಕಲಾ ರಸಿಕರು, ವರ್ಣಮಯ ಚಿತ್ರಗಳನ್ನು ಕಣ್ತುಂಬಿಕೊಂಡರು. ತಮಗಿಷ್ಟವಾದ ಚಿತ್ರಗಳನ್ನು ಖರೀದಿಸಿದರು. ಮತ್ತೆ ಕೆಲವರು ತಮ್ಮ ಚಿತ್ರವನ್ನು ತಾವೇ ಬಿಡಿಸಿಕೊಂಡು ಖುಷಿಪಟ್ಟರು.

ವರ್ಣಮಯ ಚಿತ್ರಗಳು, ಕಪ್ಪು ಬಿಳುಪಿನ ಚಿತ್ರಗಳನ್ನು ನೋಡಿದ ಸಾರ್ವಜನಿಕರು ಒಂದೊಂದೇ ಫೋಟೋವನ್ನು ಖರೀದಿಸತೊಡಗಿದರು. ಅನೇಕಾರು ಕಲಾವಿದರು ಮೈಸೂರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದರು.

ಉಡುಪಿಯ ರೂಪಾ ವಸುಂಧರ ಆಚಾರ್ಯ ಅವರು ಕಸದಲ್ಲಿಯೂ ಚಿತ್ರ ಅರಳಿರಿಸಿದ್ದು ಗಮನ ಸೆಳೆಯಿತು. ಒಣಗಿದ ಎಲೆ, ಹೂಗಳನ್ನು ಬಳಸಿಕೊಂಡು ನವಿಲು, ಗಿಡ, ಮರ, ಪರಿಸರ, ಸಾಗರ, ಸರೋವರ ಸೇರಿದಂತೆ ನಾನಾ ಕಲಾಕೃತಿಗಳನ್ನು ನಿರ್ಮಿಸಿ ಪ್ರದರ್ಶನಕ್ಕಿರಿಸಿದ್ದರೆ ಬುಡಕಟ್ಟು ಕಲೆಯ ಭಾಗವಾದ ಟೊಟಮ್ಸ್ ಮಾದರಿಯ ಕಲಾಕೃತಿಗಳನ್ನು ಬೆಂಗಳೂರಿನ ಬಿ.ಎನ್. ನಾಗರಾಜು ನಿರ್ಮಿಸಿದ್ದರು.

ಅಡಕೆ ಮರದ ದಿಮ್ಮಿಯನ್ನು ಕೊಳವೆ ಮಾದರಿಯಲ್ಲಿ ಸಿದ್ದಪಡಿಸಿಕೊಂಡು ಅದಕ್ಕೆ ಬಡುಕಟ್ಟು ಜನರ ವೇಷಭೂಷಣದಂತೆ ಚಿತ್ರ ಮೂಡಿಸಿ ಮಾರಾಟಕ್ಕಿರಿಸಲಾಗಿತ್ತು.

ಕಲಾವಿದೆ ವೀಣಾ ಚಂದನ್ ಅವರು ಮೈಸೂರು ಪಾರಂಪರಿಕ, ಗಂಜೀಫ, ಮಧು ಬನಿ, ತಂಜವೂರು ಪೇಟಿಂಗ್, ಪಟ್ ಚಿತ್ರ, ರಾಜಸ್ತಾನಿ ಪೈಟಿಂಗ್, ವರ್ಲಿ ಚಿತ್ರ, ಕೇರಳದ ಮ್ಯೂರಲ್ ಸೇರಿದಂತೆ 20ಕ್ಕೂ ಹೆಚ್ಚು ಚಿತ್ರ ಕಲಾ ಮಾದರಿಯ 100ಕ್ಕೂ ಹೆಚ್ಚು ಚಿತ್ರಪಟಗಳನ್ನು ಸಂತೆಯಲ್ಲಿ ಪ್ರದರ್ಶನಕ್ಕೆ ಇರಿಸಲಾಗಿತ್ತು.

ಎಂ.ವಿ. ಕೃಪಾ ಅವರು ರಚಿಸಿದ ಮಹಿಳೆಯ ಮೇಲಾಗುತ್ತಿರುವ ದೌರ್ಜನ್ಯವನ್ನು ಬಿಂಬಿಸುವಂತಹ ಚಿತ್ರಗಳು ಗಮನ ಸೆಳೆದವು.

ಚಿತ್ರ ಸಂತೆ ವೀಕ್ಷಣೆಗೆ ಆಗಮಿಸಿದ್ದ ಕಲಾ ರಸಿಕರು, ತಮಗಿಷ್ಟವಾದ ಚಿತ್ರಗಳನ್ನು ಖರೀದಿಸುವದರೊಂದಿಗೆ ತಮ್ಮ ಚಿತ್ರಗಳನ್ನು ಕಲಾವಿದರ ಕುಂಚದಲ್ಲಿ ಚಿತ್ರಿಸಿಕೊಂಡು ಸಂಭ್ರಮದಿಂದ ತೆರಳಿದ್ದು ಸಾಮಾನ್ಯವಾಗಿತ್ತು.

ಕಾರ್ಯಕ್ರಮ ಉದ್ಘಾಟನೆಗೊಳ್ಳುವುದರಲ್ಲಿ ಮತ್ತು ಕಲಾವಿದರು ಬರುವಲ್ಲಿ ಸಮಯ ಏರುಪೇರಾದ ಹಿನ್ನೆಲೆಯಲ್ಲಿ ಚಿತ್ರ ಸಂತೆ ತಡವಾಗಿ ಆರಂಭಗೊಂಡರೂ ಸಂಜೆಯ ಹೊತ್ತಿಗೆ ನಿರೀಕ್ಷೆ ಮೀರಿ ಚಿತ್ರ ರಸಿಕರು ಆಗಮಿಸಿದ್ದರು. ಚಿತ್ರ ಪಟಗಳೊಂದಿಗೆ ನಾನಾ ಕಲಾಕೃತಿಗಳ ಖರೀದಿಯಲ್ಲಿ ಸಾರ್ವಜನಿಕರು ನಿರತರಾಗಿದ್ದರು.

ರೇಷ್ಮೆ ಸೀರೆ, ತಿಂಡಿ ತಿನಿಸು

ಬಯಲು ರಂಗ ಮಂದಿರದ ಬಳಿ ನಿರ್ಮಿಸಿದ್ದ ಫ್ಲೀ ಮಾರ್ಕೆಟ್ ನಲ್ಲಿ ಸ್ಥಳೀಯ ಉತ್ಪನ್ನಗಳ ಜೊತೆಗೆ ಅನೇಕ ಬಗೆಯ ವಸ್ತುಗಳ ಮಾರಾಟ ನಡೆಯಿತು. 45 ಸ್ಟಾಲ್ ನಿರ್ಮಿಸಿ ಸ್ಥಳೀಯ ಉತ್ಪನ್ನಗಳ ಮಾರಾಟಕ್ಕೆ ವೇದಿಕೆ ಕಲ್ಪಿಸಲಾಗಿತ್ತು. ಕೆ.ಎಸ್.ಐ.ಸಿಯ ರೇಷ್ಮೇ ಸೀರೆಯಿಂದ ಹಿಡಿದು ಮಹಿಳೆಯ ಅಲಂಕಾರಿಕ ಆಭರಣ, ಬಟ್ಟೆ, ಬ್ಯಾಗ್, ಸಿದ್ದ ಉಡುಪುಗಳ ಪ್ರದರ್ಶನ ಇತ್ತು. ಇಲ್ಲಿಯೇ ನಂಜನಗೂಡು ರಸಬಾಳೆ ವ್ಯಾಪಾರ ಭರ್ಜರಿಯಾಗಿ ನಡೆಯಿತು.

ಸಮೀಪದಲ್ಲಿಯೇ ಫುಡ್ ಕೋರ್ಟ್ನಲ್ಲಿ ಮೇಲುಕೋಟೆ ಪುಳಿಯೋಗರೆ, ಬುಡಕಟ್ಟು ಶೈಲಿಯ ಬೊಂಬು ಬಿರಿಯಾನಿ ಸೇರಿದಂತೆ ತರಹೆವಾರಿ ತಿನಿಸುಗಳು ಕೂಡ ಲಭ್ಯವಿತ್ತು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ