-ಡೆಂಘೀ ಜ್ವರ ನಿಯಂತ್ರಣಕ್ಕೆ ಪೌರಾಯುಕ್ತೆ ರೇಣುಕಾ ಅವರಿಗೆ ಸೂಚನೆ
ಜಿಲ್ಲೆಯಾದ್ಯಂತ ಡೆಂಘೀ ಜ್ವರ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುತ್ತಿದ್ದು ಸೋಮವಾರ ಶಾಸಕ ವೀರೇಂದ್ರ ಪಪ್ಪಿ ಐತಿಹಾಸಿಕ ಸಂತೆ ಹೊಂಡಕ್ಕೆ ಗಪ್ಪಿ ಹಾಗೂ ಗಾಂಬೂಸಿಯ ಮೀನು ಮರಿಗಳನ್ನು ಬಿಟ್ಟರು.
ಈ ವೇಳೆ ಮಾತನಾಡಿದ ಅವರು ಚಿತ್ರದುರ್ಗ ನಗರದಲ್ಲಿ ಸ್ವಚ್ಚತೆಗೆ ಹೆಚ್ಚಿನ ಕಾಳಜಿ ವಹಿಸಬೇಕು. ಡೆಂಘೀ ಜ್ವರ ಮತ್ತಷ್ಟು ಬಾಧಿಸದಂತೆ ಎಚ್ಚರ ವಹಿಸಬಪೇಕು. ನಗರದ 35 ವಾರ್ಡ್ಗಳಲ್ಲಿಯೂ ಸಂಚರಿಸಿ ಸ್ವಚ್ಚತೆಯನ್ನು ಕಾಪಾಡಬೇಕು. ಚರಂಡಿಗಳನ್ನು ಸ್ವಚ್ಚಗೊಳಿಸಿ ಫಾಗಿಂಗ್ ಯಂತ್ರಗಳ ಮೂಲಕ ಸೊಳ್ಳೆಗಳನ್ನು ನಾಶಪಡಿಸಬೇಕು. ಎಲ್ಲೆಲ್ಲಿ ಪುಷ್ಕರಣಿಗಳಿವೆಯೋ ಅಲ್ಲೆಲ್ಲಾ ಮೀನು ಮರಿಗಳನ್ನು ಬಿಡುವಂತೆ ತಿಳಿಸಿದರು.ನಗರಸಭೆ ಪೌರಾಯುಕ್ತೆ ರೇಣುಕ ಮಾತನಾಡಿ, ಗಪ್ಪಿ ಹಾಗೂ ಗಾಂಬೂಸಿಯ ಮೀನುಗಳನ್ನು ಹೊಂಡದಲ್ಲಿ ಬಿಡುವುದರಿಂದ ಅವುಗಳು ಲಾರ್ವಗಳನ್ನು ತಿಂದು ಸೊಳ್ಳೆಗಳ ಸಂತತಿ ಕಡಿಮೆ ಮಾಡುತ್ತವೆ. ಮಳೆಗಾಲವಾದ್ದರಿಂದ ಚಿತ್ರದುರ್ಗ ನಗರಗದ ನಾಗರಿಕರು ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಲು ನಗರಸಭೆ ಜೊತೆ ಕೈಜೋಡಿಸಬೇಕೆಂದು ವಿನಂತಿಸಿದರು.
ಡೆಂಘೀ ಮುಂಜಾಗ್ರತೆ ಕ್ರಮ ಅನುಸರಿಸುವುದರ ಬಗ್ಗೆ ನಗರಸಭೆ ಕಸ ಸಾಗಿಸುವ ವಾಹನಗಳ ಮೂಲಕ ಜಾಗೃತಿ ಮೂಡಸಲಾಗುತ್ತಿದೆ. ಆರೋಗ್ಯ ಇಲಾಖೆಯವರು ಈಗಾಗಲೇ ಮನೆ ಮನೆಗೆ ತೆರಳಿ ಲಾರ್ವಾ ಸಮೀಕ್ಷೆ ಮಾಡಿದ್ದಾರೆ. ಅದರ ಅನುಸಾರ ನಾಗರಿಕರಿಗೆ ಡೆಂಘೀ ನಿಯಂತ್ರಕ್ಕೆ ಕೈಜೋಡಿಸಲು ವಿನಂತಿಸಿದ್ದೇವೆ ಎಂದು ರೇಣುಕಾ ಹೇಳಿದರು.
------------------
ಡೆಂಘೀ ನಿಯಂತ್ರಣದ ಸಂಬಂಧ ಸೋಮವಾರ ಶಾಸಕ ವೀರೇಂದ್ರ ಪಪ್ಪಿ ಐತಿಹಾಸಿಕ ಚಿತ್ರದುರ್ಗದ ಸಂತೆ ಹೊಂಡಕ್ಕೆ ಗಪ್ಪಿ ಹಾಗೂ ಗಾಂಬೂಸಿಯ ಮೀನು ಮರಿಗಳ ಬಿಟ್ಟರು.