ಕನ್ನಡಪ್ರಭ ವಾರ್ತೆ ಉಡುಪಿ
ನೀರು ಮಾತ್ರವಲ್ಲದೇ ಅವರು ಕಳೆದೊಂದು ತಿಂಗಳಿಂದ ನಿತ್ಯವೂ ಸಾರ್ವಜನಿಕರಿಗೆ ಉಚಿತವಾಗಿ ಹಣ್ಣುಗಳ ತಂಪು ಪಾನೀಯ ವಿತರಿಸುತ್ತಿದ್ದಾರೆ. ಒಳಕಾಡು ಅವರ ಈ ಸೇವಾ ಕಾರ್ಯಕ್ಕೆ ಜೋಸ್ ಆಲೂಕ್ಕಾಸ್ ಆಭರಣ ಮಳಿಗೆ, ಶ್ರೀನಿಧಿ ಮೆಡಿಕಲ್ ಮತ್ತು ಫಾಸ್ಟ್ ನೆಟ್ ಆದಿಉಡುಪಿ ಸಹಕರಿಸುತ್ತಿವೆ.
ಪ್ರತಿದಿನ ನೇರಳೆ, ಪೇರಳೆ, ಅನಾನಸ್, ಶುಂಠಿ, ಲಿಂಬು, ಕಿತ್ತಳೆ, ಕೊಕ್ಕಂ, ನೆಲ್ಲಿ, ದ್ರಾಕ್ಷಿ, ಬೆಲ್ಲದ ಪಾನಕ ಹೀಗೆ ಮೊದಲಾದ ಪಾನೀಯಗಳನ್ನು ನುರಿತ ಪಾಕತಜ್ಞರಿಂದ ಸಿದ್ಧಪಡಿಸಿ ವಿತರಿಸುತ್ತಿದ್ದಾರೆ. ಮಣ್ಣಿನ ಹೂಜಿಗಳನ್ನು ಬಳಸಿಕೊಂಡು ಪ್ರಾಕೃತಿಕವಾಗಿ ಪಾನೀಯವನ್ನು ತಂಪಾಗಿಸುವ ವ್ಯವಸ್ಥೆಯನ್ನೂ ಮಾಡಿದ್ದಾರೆ. ನಿತ್ಯವೂ ನೂರಾರು ಮಂದಿ ಈ ಪಾನೀಯವನ್ನು ಕುಡಿದು ತಮ್ಮ ಬಾಯರಿಕೆ, ಆಯಾಸವನ್ನು ಪರಿಹರಿಸಿಕೊಳ್ಳುತಿದ್ದಾರೆ.ಈ ಬೇಸಿಗೆ ಕಾಲದಲ್ಲಿ ದೇಹಕ್ಕೆ ಅತ್ಯಗತ್ಯವಾಗಿ ಬೇಕಾಗುವ ಪೌಷ್ಟಿಕಾಂಶಗಳನ್ನು ಬಹುವಿಧ ಹಣ್ಣಿನ ಪಾನೀಯಗಳ ಮೂಲಕ ಒದಗಿಸುತ್ತಿರುವ ಒಳಕಾಡು ಅವರ ಸೇವೆ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಮಳೆಗಾಲ ಆರಂಭ ಆಗುವವರೆಗೆ ಹಣ್ಣಿನ ತಂಪು ಪಾನೀಯ ವಿತರಣೆ ನಡೆಯಲಿದೆ ಎಂದು ಒಳಕಾಡು ಅವರು ಹೇಳಿದ್ದಾರೆ.