ಕನ್ನಡಪ್ರಭ ವಾರ್ತೆ ಕೋಲಾರ
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಹಣಕ್ಕೆ ಕೊರತೆಯಿಲ್ಲ, ಮೊದಲು ಜನ, ಜಾನುವಾರುಗಳಿಗೆ ನೀರು, ಮೇವು ಕೊಡುವ ಕೆಲಸ ಮಾಡಿ, ಅದನ್ನು ಬಿಟ್ಟು ನಿರ್ಲಕ್ಷ್ಯ ಮಾಡಿದ್ದೇ ಆದರೆ ಪರಿಣಾಮ ಸರಿ ಇರಲ್ಲ. ಇದನ್ನು ಎಚ್ಚರಿಕೆಯಂದೇ ತಿಳಿದುಕೊಳ್ಳಿ ಎಂದರು.
ಗ್ರಾಪಂಗಳ ಪಿಡಿಒಗಳು ಜನ, ಜಾನುವಾರುಗಳಿಗೆ ನೀರು, ಮೇವಿನ ವ್ಯವಸ್ಥೆ ಮಾಡಲು ಮುಂದಾಗಿ, ಸಣ್ಣಪುಟ್ಟ ಸಮಸ್ಯೆಗಳು ಜನಪ್ರತಿನಿಧಿಯವರೆಗೆ ಬರಬಾರದು. ಜನರಿಂದ ದೂರವಾಣಿ ಕರೆ ಬಂದರೆ ತಹಸೀಲ್ದಾರ್, ತಾಪಂ ಇಓರನ್ನು ಹೊಣೆ ಮಾಡಲಾಗುತ್ತದೆ. ಕ್ರಮಕೈಗೊಳ್ಳುವ ವಿಚಾರದಲ್ಲಿ ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಪ್ರತಿ ಹಳ್ಳಿಗೂ ಭೇಟಿ ನೀಡಿ ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.ಗ್ರಾಮಗಳಲ್ಲಿರುವ ಕೊಳವೆ ಬಾವಿಗಳಲ್ಲಿ ನೀರಿನ ಇಳುವರಿ ಕಡಿಮೆ ಆಗುತ್ತಿರುವ ಬಗ್ಗೆ ಪರಿಶೀಲಿಸಬೇಕು. ಡೀಸಿ, ತಹಸೀಲ್ದಾರ್ ಖಾತೆಯಲ್ಲಿ ದುಡ್ಡಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕುಡಿಯಲು ನೀರು, ಚರಂಡಿ, ಬೀದಿ ದೀಪ ಕೇಳುತ್ತಿದ್ದಾರೆ. ಬೆಸ್ಕಾಂ ಅಧಿಕಾರಿಯೊಂದಿಗೆ ಸಮನ್ವಯತೆ ಬೆಳೆಸಿಕೊಳ್ಳಬೇಕು. ಯಾವುದೇ ಗ್ರಾಮಗಳಲ್ಲಿ ಟಿಸಿ ಬದಲಾವಣೆ, ಸ್ಥಳಾಂತರ ಕೇಳಿದಾಗ ಕೂಡಲೇ ಮಾಡಿಕೊಡಬೇಕು, ಸರ್ಕಾರಿ ಕೊಳವೆಬಾವಿಗಳಿಗೆ ಸಕಾಲಕ್ಕೆ ನಿರಂತರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಅಧಿಕಾರಿಗಳು ಕಚೇರಿಯಿಂದ ಗ್ರಾಮಗಳಿಗೆ ತೆರಳಿ ಸಮಸ್ಯೆಗಳ ಬಗ್ಗೆ ಜನರಿಂದ ಮಾಹಿತಿ ಪಡೆಯಬೇಕು. ಸಮಸ್ಯೆಗಳ ಕುರಿತು ಗಮನಕ್ಕೆ ತಂದರೆ ಕೂಡಲೇ ಟಾಸ್ಕ್ ಸಮಿತಿಗೆ ಮಾಹಿತಿ ಬಗೆಹರಿಸಲು ಅನುಮೋದನೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ಹರ್ಷವರ್ಧನ್ ಮಾತನಾಡಿ, ಈಗಾಗಲೇ ತೀವ್ರ ಬರಗಾಲ ಎದುರಾಗಿದೆ, ತಾಲೂಕಿನಲ್ಲಿ ರಾಸುಗಳ ಸರ್ವೇ ನಡೆದಿದ್ದು, ೫೪ ಸಾವಿರಕ್ಕೂ ಹೆಚ್ಚು ಎಮ್ಮೆ, ಹಸು, ಕುರಿ, ಮೇಕೆಗಳು ಇವೆ. ಸದ್ಯಕ್ಕೆ ೧೩ ವಾರಗಳಿಗೆ ಆಗುವಷ್ಟು ೩೪ ಸಾವಿರ ಟನ್ ಮೇವು ದಾಸ್ತಾನು ಇದೆ ಎಂದರು.
ಸಭೆಯಲ್ಲಿ ನಗರಸಭೆ ಪೌರಾಯುಕ್ತ ಶಿವಾನಂದ, ಕುರಗಲ್ ಮತ್ತು ವೇಮಗಲ್ ಪಟ್ಟಣ ಪಂಚಾಯಿತಿ ಮುಖ್ಯ ಆಡಳಿತಾಧಿಕಾರಿ ವೆಂಕಟೇಶ್ ಮತ್ತಿತರ ಅಧಿಕಾರಿಗಳಿದ್ದರು.
ಕೆಸಿ ವ್ಯಾಲಿಯಿಂದ ಹಿಂದೆ ಜಿಲ್ಲೆಗೆ ೮೦ ಎಂಎಲ್ಡಿ ನೀರು ಹರಿಯುತ್ತಿತ್ತು, ಈಗ ೬೦ ಎಂಎಲ್ಡಿಗೆ ಇಳಿದಿದೆ, ಇದು ಮುಂದಿನ ದಿನಗಳಲ್ಲಿ ಇನ್ನು ಕಡಿಮೆಯಾಗಲಿದೆ. ಮಳೆಯಾದರೆ ಸಮಸ್ಯೆಗಳು ಎಲ್ಲಾ ನಿವಾರಣೆಯಾಗುತ್ತವೆ. ಚುನಾವಣೆ ಎದುರಾಗಿದೆ, ಕೆಲಸಗಳಿವೆ ಎಂದು ಸಬೂಬು ಹೇಳಬಾರದು ಎಂದು ಎಚ್ಚರಿಕೆ ನೀಡಿದರು.