72 ಜನರು ಡಯಾಲಿಸಿಸ್‌ ಚಿಕಿತ್ಸೆ ಪಡೆಯುವ ಅವಕಾಶ: ಕೆ.ಎಸ್.ಆನಂದ್

KannadaprabhaNewsNetwork | Published : Mar 16, 2024 1:48 AM

ಸಾರಾಂಶ

ಈ ಮೊದಲು ಆಸ್ಪತ್ರೆಯಲ್ಲಿದ್ದ ಎರಡು ಡಯಾಲಿಸಿಸ್ ಯಂತ್ರಗಳಿಂದ ಕೇವಲ 16 ಜನರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇದರಿಂದ ಬಹಳಷ್ಟು ಜನರು ಸರತಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿವಾರಿಸಲು 6 ಹೊಸ ಯಂತ್ರಗಳನ್ನು ಅಳವಡಿಸಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊಸ ಡಯಾಲಿಸಿಸ್ ಯಂತ್ರ ಸೇವೆಗೆ ಲೋಕಾರ್ಪಣೆ

ಕನ್ನಡಪ್ರಭ ವಾರ್ತೆ, ಕಡೂರು

ಈ ಮೊದಲು ಆಸ್ಪತ್ರೆಯಲ್ಲಿದ್ದ ಎರಡು ಡಯಾಲಿಸಿಸ್ ಯಂತ್ರಗಳಿಂದ ಕೇವಲ 16 ಜನರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇದರಿಂದ ಬಹಳಷ್ಟು ಜನರು ಸರತಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿವಾರಿಸಲು 6 ಹೊಸ ಯಂತ್ರಗಳನ್ನು ಅಳವಡಿಸಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊಸ ಡಯಾಲಿಸಿಸ್ ಯಂತ್ರಗಳನ್ನುಶುಕ್ರವಾರ ಸೇವೆಗೆ ಲೋಕಾರ್ಪಣೆ ಬಳಿಕ ಮಾತನಾಡಿದರು, ಈ ಮೊದಲು ಆಸ್ಪತ್ರೆಯಲ್ಲಿ ಎರಡು ಡಯಾಲಿಸಿಸ್ ಯಂತ್ರಗಳಿದ್ದು, ಕೇವಲ 16 ಜನರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಬಹಳಷ್ಟು ಜನರು ಸರತಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿಇತ್ತು. ಹಾಗಾಗಿ ಹೊಸದಾಗಿ 6 ಯಂತ್ರಗಳನ್ನು ಅಳವಡಿಸಿದ್ದು, ಇದರಿಂದ 72 ಜನರು ಚಿಕಿತ್ಸೆ ಪಡೆಯುವ ಅವಕಾಶ ಲಭ್ಯವಾಗಿದೆ. ವಾರಕ್ಕೆ 30 ಸಾವಿರ ರು. ಖರ್ಚು ಮಾಡಬೇಕಾದೆಡೆ ಉಚಿತವಾಗಿ ಡಯಾಲಿಸಿಸ್ ಚಿಕಿತ್ಸೆ ದೊರೆಯುತ್ತದೆ ಎಂದರು.

ಇದೇ ಆಸ್ಪತ್ರೆಯಲ್ಲಿ 12 ಲಕ್ಷ ರು. ವೆಚ್ಚದಲ್ಲಿ ಹೊಸದಾಗಿ ಲಿವರ್, ಕಿಡ್ನಿ ಮುಂತಾದ ಕಾರ್ಯಕ್ಷಮತೆ ಪರೀಕ್ಷಿಸುವ ಯಂತ್ರ ಕಾರ್ಯಾರಂಭ ಮಾಡಿದೆ. ಇಲ್ಲಿ ಏಕಕಾಲಕ್ಕೆ 32 ಜನರ ರಕ್ತ ಪರೀಕ್ಷೆ ಮಾಡಬಹುದಾಗಿದೆ. ಅಭಿವೃದ್ಧಿಗೆ ಸರ್ಕಾರದಲ್ಲಿ ಹಣವಿಲ್ಲ ಎನ್ನುವವರು ಇದನ್ನು ಗಮನಿಸಬೇಕು. ಹಿಂದೆ ಕೊರೊನಾ ಸಮಯದಲ್ಲಿ ಕೇವಲ ಹಣ ಹೊಡೆಯುವ ದಂಧೆ ಮಾಡಿದವರು ಆಸ್ಪತ್ರೆಗಳಿಗೆ ಇಂತಹ ಸೌಲಭ್ಯಗಳನ್ನು ನೀಡಲು ಏಕೆ ಮುಂದಾಗಲಿಲ್ಲ ಎಂಬುದಕ್ಕೆ ಉತ್ತರಿಸುವರೇ ಎಂದು ಕಿಡಿಕಾರಿದರು.

ಹಿಂದೆ ಕಾರ್ಯನಿರ್ವಹಿಸುತ್ತಿದ್ದ ರಕ್ತನಿಧಿ ಕೇಂದ್ರದಲ್ಲಿರುವ ಸುಮಾರು 13.50 ಲಕ್ಷ ರು. ಹಣವನ್ನು ಸಾರ್ವಜನಿಕ ಆಸ್ಪತ್ರೆಗೆ ಅಲ್ಟ್ರಾ ಸ್ಕ್ಯಾನಿಂಗ್ ಯಂತ್ರ ಖರೀದಿಸಲು ಬಳಸಲಾಗುತ್ತದೆ. ಶೀಘ್ರವೇ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತನಾಗುತ್ತೇನೆ ಎಂದರು.

ಪುರಸಭೆ ಹಿರಿಯ ಸದಸ್ಯರಾದ ಭಂಡಾರಿ ಶ್ರೀನಿವಾಸ್, ತೋಟದ ಮೋಹನ್, ಕಾಂತರಾಜು, ಟಿಎಂಒ. ಡಾ.ರವಿಕುಮಾರ್, ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಉಮೇಶ್, ಹಿರಿಯ ಲ್ಯಾಬ್ ಟೆಕ್ನಿಷಿಯನ್ ಸುರೇಶ್, ಮತ್ತಿತರರು ಇದ್ದರು.15ಕೆಕೆಡಿಯು2,

ಕಡೂರು ಸಾರ್ವ್ಜಜನಿಕ ಆಸ್ಪತ್ರ್ರೆಯಲ್ಲಿ ಡಯಾಲಿಸಿಸ್ ಯಂತ್ರಗಳನ್ನು ಶಾಸಕ ಕೆ.ಎಸ್.ಆನಂದ್ ಲೋಕಾರ್ಪಣೆಗೊಳಿಸಿ ಪರಿಶೀಲಿಸಿದರು.

Share this article