ಕನ್ನಡಪ್ರಭ ವಾರ್ತೆ ಹಲಗೂರು
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಘದ ಉದ್ಘಾಟನಾ ಸಮಾರಂಭ ಮತ್ತು ನೂತನ ಕಚೇರಿಯನ್ನು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸಂಘಗಳು ಅಭಿವೃದ್ಧಿಯಾಗಬೇಕಾದರೆ ಎಲ್ಲಾ ಸದಸ್ಯರಲ್ಲೂ ಮುಕ್ತ ಮನಸ್ಸು ಇರಬೇಕು. ಸಂಘ ಸ್ಥಾಪನೆ ಮಾಡಿರುವ ಉದ್ದೇಶ ಆರ್ಥಿಕ ಮುಗ್ಗಟ್ಟಿನಿಂದ ಅಥವಾ ಇನ್ನಿತರ ಕಾರಣಗಳಿಂದ ಓದನ್ನು ಅರ್ಧಕ್ಕೆ ನಿಲ್ಲಿಸಿದ ಹಲವು ವಿದ್ಯಾರ್ಥಿಗಳ ಸರ್ವೇ ಮಾಡಿ ಅವರಿಗೆ ಅನುಕೂಲ ಮಾಡಲು. ವಿದ್ಯಾವಂತ ನಿರುದ್ಯೋಗಿಗಳು ಹಾಗೂ ಬಡ ವ್ಯಕ್ತಿಗಳ ಪರವಾಗಿ ಸಮಾಜ ಸೇವೆ ಮಾಡಲು ಸಹಕಾರಿ ಆಗಲಿದೆ ಎಂದರು.ಓದು ಒಬ್ಬ ವ್ಯಕ್ತಿಯಿಂದ ಕಿತ್ತುಕೊಳ್ಳಲಾಗದ ಸಂಪತ್ತು. ಪ್ರತಿಯೊಬ್ಬರಿಗೂ ವಿದ್ಯೆ ಅತ್ಯವಶ್ಯಕ. ಇದೇ ನಿಮ್ಮ ಭವಿಷ್ಯದ ಆಸ್ತಿ. ಮಕ್ಕಳಿಗೆ ಆಸ್ತಿ ಮಾಡದಿದ್ದರೆ ಒಳ್ಳೆಯ ಶಿಕ್ಷಣ ಕೊಡಿಸಬೇಕು. ಸಂಘಕ್ಕೆ ಬೆಂಬಲವಾಗಿ ನಿಂತರ ನಮ್ಮ ಕೈಲಾದ ಸಹಾಯ ಮಾಡೋಣ ಎಂದು ತಿಳಿಸಿದರು.
ಸಾಗ್ಯ ಕೆಂಪಯ್ಯ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಬಡವರ ,ವಿದ್ಯಾರ್ಥಿಗಳ, ವಿದ್ಯಾವಂತ ನಿರುದ್ಯೋಗಿಗಳ ಮತ್ತು ಗ್ರಾಮದ ಅಭಿವೃದ್ಧಿ ಬಗ್ಗೆ ಚಿಂತನೆ ,ಗ್ರಾಮದ ಪ್ರತಿಯೊಂದು ಬೀದಿ ಬೀದಿಯಲ್ಲಿ ನಮ್ಮ ಸದಸ್ಯರು ಸರ್ವೇ ಮಾಡಿ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಅಗತ್ಯವಿರುವ ಸಹಾಯವನ್ನು ದಾನಿಗಳ ಮೂಲಕ ಮಾಡಲು ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.