ಕನ್ನಡಪ್ರಭ ವಾರ್ತೆ ಪಾವಗಡ
ಪಂಪುಸೆಟ್ ವಿತರಿಸಿ ಮಾತನಾಡಿದ ಅವರು, ಜಿಲ್ಲಾ ಅದಿಜಾಂಬವ ಅಭಿವೃದ್ಧಿ ನಿಗಮದ ವತಿಯಿಂದ ಕಳೆದ 2021-22 ಹಾಗೂ 22-23ನೇ ಸಾಲಿನಲ್ಲಿ ಆಯ್ಕೆಯಾದ ತಾಲೂಕಿನ 19ಮಂದಿ ಬಡ ಫಲಾನುಭವಿಗಳ ಕೊಳವೆಬಾವಿ ಕೊರೆಸಿದ್ದು, ಈ ಸಂಬಂಧ ಕೊಳವೆಬಾವಿಯಿಂದ ನೀರೆತ್ತಲು ಮೋಟಾರ್ ವೈರು, ಪೈಪು ಸ್ಟಾಟರ್ ಸೇರಿದಂತೆ ಇತರೆ ಅಗತ್ಯ ಪಂಪ್ಸೆಟ್ ಸಾಮಗ್ರಿಗಳನ್ನು ವಿತರಿಸಲಾಗಿದೆ ಎಂದರು.
ತಲ ಕೊಳವೆಬಾವಿಯ ಘಟಕದ ವೆಚ್ಚ 4.75ಲಕ್ಷ ರು.ಗಳಾಗಿದ್ದು ಒಟ್ಟು 90.25ಲಕ್ಷ ರು.ಗಳ ವೆಚ್ಚದ ಪಂಪ್ಸೆಟ್ ಸಾಮಗ್ರಿಗಳಲ್ಲು ತಾಲೂಕಿನ 19ಮಂದಿ ರೈತ ಫಲಾನುಭವಿಗಳಿಗೆ ವಿತರಿಸಲಾಗಿದೆ. ಸದುಪಯೋಗಪಡಿಸಿಕೊಳ್ಳುವ ಮೂಲಕ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳುವಂತೆ ಸಲಹೆ ನೀಡಿದರು.ಜಿಲ್ಲಾ ಅದಿಜಾಂಬವ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯರಾಮ್ ಮಾತನಾಡಿ, ಬಡ ರೈತರ ಪ್ರಗತಿಗೆ ಸರ್ಕಾರ ಗಂಗಕಲ್ಯಾಣ ಯೋಜನೆ ಅಡಿ ಕೊಳವೆಬಾವಿಯನ್ನು ಕೊರೆಸಿದ್ದು 19ಮಂದಿ ಫಲಾನುವಿಗಳ ಕೊಳವೆಬಾವಿ ಕೊರೆಯುವಿಕೆ ಹಾಗೂ ಮೋಟಾರ್ ಹಾಗೂ ಇತರೆ ಪಂಪ್ಸೆಟ್ ಸಾಮಗ್ರಿಗಳಿಗೆ ಒಟ್ಟು 90.75ಲಕ್ಷ ರು. ವಿನಿಯೋಗಿಸಲಾಗಿದೆ. ಪಂಪ್ಸೆಟ್ಗಳ ಸಾಮಗ್ರಿಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ರೈತರಿಗೆ ಕರೆ ನೀಡಿದರು.