ಶೈಕ್ಷಣಿಕ ಬಲವರ್ಧನೆಗೆ ದೈಹಿಕ ಶಿಕ್ಷಕರು ಶ್ರಮಿಸಿ

KannadaprabhaNewsNetwork |  
Published : Jun 15, 2024, 01:08 AM IST
ಹೂವಿನಹಡಗಲಿಯ ತುಂಗಭದ್ರ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ತಾಲೂಕ ದೈಹಿಕ ಶಿಕ್ಷಕರ ಮಾಸಿಕ ಕಾರ್ಯಾಗಾರದಲ್ಲಿ ಮಾತನಾಡಿದ ಬಿಇಒ ಮಹೇಶ ವಿ.ಪೂಜಾರ. | Kannada Prabha

ಸಾರಾಂಶ

ಪ್ರಾರ್ಥನಾ ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗಬೇಕು. ಮಧ್ಯಾಹ್ನ ಬಿಸಿಯೂಟದ ವೇಳೆ ಕ್ರಮಬದ್ಧವಾಗಿ ಊಟ ಬಡಿಸುವ ಕೆಲಸವನ್ನು ನಿರ್ವಹಿಸಿ

ಹೂವಿನಹಡಗಲಿ: ಶಾಲೆಯ ಶೈಕ್ಷಣಿಕ ಪ್ರಗತಿಗೆ ದೈಹಿಕ ಶಿಕ್ಷಕರು ಶ್ರಮಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ. ಪೂಜಾರ ಹೇಳಿದರು.

ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಗುರುವಾರ ಶಾಲಾ ಶಿಕ್ಷಣ ಇಲಾಖೆ, ತುಂಗಭದ್ರಾ ವಿದ್ಯಾ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಾಲೂಕು ದೈಹಿಕ ಶಿಕ್ಷಕರ ಮಾಸಿಕ ಕಾರ್ಯಾಗಾರದಲ್ಲಿ ಮಾತನಾಡಿ, ಕ್ರೀಡೆ ತರಬೇತಿಯ ಜೊತೆಗೆ ಶಾಲೆಯ ಪರಿಸರ ಸ್ವಚ್ಛತೆ ಸಂರಕ್ಷಣೆಗೆ ಆದ್ಯತೆ ನೀಡಬೇಕಿದೆ ಎಂದರು.

ಪ್ರಾರ್ಥನಾ ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗಬೇಕು. ಮಧ್ಯಾಹ್ನ ಬಿಸಿಯೂಟದ ವೇಳೆ ಕ್ರಮಬದ್ಧವಾಗಿ ಊಟ ಬಡಿಸುವ ಕೆಲಸವನ್ನು ನಿರ್ವಹಿಸಿ ಎಂದು ಅವರು, ಸತತವಾಗಿ ಶಾಲೆಗೆ ಗೈರು ಹಾಜರಾಗುವ ಮಕ್ಕಳ ಮನೆಗೆ ಭೇಟಿ ನೀಡಿ ಮಾರ್ಗದರ್ಶನ ನೀಡಬೇಕು. ವಿಶೇಷ ಕ್ರೀಡಾ ನಿಧಿ ನಿಗದಿತ ಸಮಯದಲ್ಲಿ ಬ್ಯಾಂಕ್ ಖಾತೆಗೆ ಜಮಾ ಮಾಡಿ ಎಂದು ಹೇಳಿದರು.

ಜೂ.21ರಂದು ಎಲ್ಲ ಶಾಲೆಗಳಲ್ಲಿ ದೈಹಿಕ ಶಿಕ್ಷಕರು ಕಡ್ಡಾಯವಾಗಿ ಯೋಗ ದಿನಾಚರಣೆ ಆಚರಿಸಬೇಕೆಂದು ಹೇಳಿದರು.

ಕ್ಷೇತ್ರ ಸಮನ್ವಯಾಧಿಕಾರಿ ಎ.ಕೋಟೆಪ್ಪ, ನಿವೃತ್ತ ದೈಹಿಕ ಅಧೀಕ್ಷಕ ಎಸ್. ಮುಸ್ತಫಾ, ಗೌರವಾಧ್ಯಕ್ಷ ಬಿ.ಶಿವಾನಂದಪ್ಪ, ಮುಖ್ಯ ಗುರು ಸುರೇಶ ಅಂಗಡಿ ಮಾತನಾಡಿದರು.

ಜೆ.ಪ್ರಸನ್ನಕುಮಾರ್ ಆಯ್ಕೆ:

ಪ್ರಭಾರ ತಾಲೂಕು ದೈಹಿಕ ಅಧೀಕ್ಷಕರಾಗಿ ಜೆ.ಪ್ರಸನ್ನಕುಮಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ದೈಹಿಕ ಶಿಕ್ಷಕ ಎಂ.ಶಿವಣ್ಣ ನಿರ್ವಹಿಸಿದರು.

ನೂತನ ಪದಾಧಿಕಾರಿಗಳು:

ಇದೇ ಸಂದರ್ಭದಲ್ಲಿ ತಾಲೂಕು ದೈಹಿಕ ಶಿಕ್ಷಕರ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಬಿ.ಶಿವಾನಂದಪ್ಪ (ಗೌರವಾಧ್ಯಕ್ಷ), ಶಿವಪ್ಪ (ಗೌರವಾಧ್ಯಕ್ಷ), ಪಿ.ಎನ್. ಪಾಟೀಲ್ (ಅಧ್ಯಕ್ಷ), ಜಿ.ತಾತಪ್ಪ ( ಪ್ರಧಾನ ಕಾರ್ಯದರ್ಶಿ), ಸಿದ್ದೇಶ್ (ಖಜಾಂಚಿ), ಜಗದೀಶ್, ಪ್ರಕಾಶ್, ಅಂಬಿಕಾ, ಪಂಚಪ್ಪ (ಉಪಾಧ್ಯಕ್ಷರು)

ಸ್ವಾಮಿನಾಥ ರಾಮಸ್ವಾಮಿ, ಗಣಮುಖಿ (ಜಂಟಿ ಕಾರ್ಯದರ್ಶಿ), ಪರಮೇಶ್ವರ ನಾಯ್ಕ (ಸಂಘಟನಾ ಕಾರ್ಯದರ್ಶಿ), ನಾಗರಾಜ, ಲತಾ ( ಕ್ರೀಡಾ ಕಾರ್ಯದರ್ಶಿ), ಕೃಷ್ಣಪ್ಪ, ಕವಿತಾ (ಸಾಂಸ್ಕೃತಿಕ ಕಾರ್ಯದರ್ಶಿ)

ಬಾಷಾ, ರಾಜಶೇಖರ್ (ಪತ್ರಿಕಾ ಕಾರ್ಯದರ್ಶಿ), ಅಂಬಿಕಾ (ಉಪಾಧ್ಯಕ್ಷೆ) ಅವರನ್ನು ಆಯ್ಕೆ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎರಡೂ ಕ್ಷೇತ್ರದಲ್ಲೂ ಕಾಂಗ್ರೆಸ್‌ ಗೆಲ್ಲುತ್ತೆ: ಸುರ್ಜೇವಾಲಾ ವಿಶ್ವಾಸ
ದಾವಣಗೆರೆ ಟಿಕೆಟ್‌ ಘೋಷಣೆ ಮುನ್ನವೇ ಕೈ ನಾಮಪತ್ರ