ಕನ್ನಡಪ್ರಭ ವಾರ್ತೆ ಕಮಲಾಪುರ
ಪ್ರತಿಭಟನೆಯಲ್ಲಿ ಮಾತನಾಡಿದ ಸೂರ್ಯಕಾಂತ್ ನಿಂಬಾಳ್ಕರ್ ತಾಲೂಕಿನ ಕಿಣ್ಣಿ ಸರಪಂಚ್ ಗ್ರಾಮದಲ್ಲಿ ಜು.1ರಂದು ಉದಯಕುಮಾರ ಚನ್ನಬಸಪ್ಪ ನೊಲಕರ ಈತನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ ದಾಖಲಿಸಿಕೊಳ್ಳದೆ.
ಪೋಕ್ಸೋ ಕೇಸ್ ಅಡಿಯಲ್ಲಿ ನೊಂದ ಬಾಲಕಿಯ ಕೇಸ್ ದಾಖಸಿಕೊಳ್ಳದೆ ದೂರಿಗೆ ಪ್ರತಿ ದೂರುವಾಗಿ ವಿದ್ಯಾರ್ಥಿಯ ತಂದೆ, ತಾಯಿ ಹಾಗೂ ಚಿಕ್ಕಪ್ಪನ ಮೇಲೆ ಹಲ್ಲೆ ಮಾಡಿದ ಆರೋಪಿಯನ್ನು ಬಂಧಿಸದೆ ಅವರ ಮೇಲೆ ಸುಳ್ಳು ಕೇಸು ದಾಖಲಿಸಿ ನಂತರ ಪೋಕ್ಸೋ ಕೇಸ್ ದಾಖಲಿಸಿಕೊಂಡು ಅಪರಾಧಿಗಳು ರಾಜಾರೋಷವಾಗಿ ಓಡಾಡುತ್ತಿದ್ದಾರೆ ಎಂದರು.ಆದರೆ, ಕಮಲಾಪುರ ಸಿಪಿಐ ಆದ ವಿ. ನಾರಾಯಣ ಅವರು ನೊಂದ ಬಾಲಕಿಗೆ ಕುಟುಂಬಕ್ಕೆ ರಕ್ಷಣೆ ನೀಡದೆ ಅವರವರ ಮಧ್ಯೆ ಹಣದ ವ್ಯವಹಾರ ಮಾಡಿಕೊಂಡು ಆರೋಪಿಯನ್ನು ಕಿಣ್ಣಿ ಸರಪಂಚ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ನೇಮಕ ಮಾಡುತ್ತಾರೆ ಇದರ ಬಗ್ಗೆ ಗ್ರಾಮಸ್ಥರು ಇವರೊಬ್ಬ ಪೋಕ್ಸೋ ಕೇಸ್ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ ಎಂದು ಆರೋಪಿಸಿದ್ದಾರೆ.
ಮುಖಂಡರಾದ ಸೂರ್ಯಕಾಂತ್ ಜಿಡಗಾ, ರಮೇಶ್ ಬೆಳಕೋಟಾ, ರವಿಕುಮಾರ ಕೋರಿ, ಅಂಬರಾಯ ದಸ್ತಾಪುರ,ಅ ಬಿ ಹೊಸಮನಿ, ಮತ್ತಿತರ ಇದ್ದರು.