ಕನ್ನಡಪ್ರಭ ವಾರ್ತೆ ಬೆಂಗಳೂರು
ಕರಡನ್ನು ಶನಿವಾರ ಪ್ರಕಟಿಸಿದ್ದು, ಆಕ್ಷೇಪಣೆಗಳನ್ನು 30 ದಿನದೊಳಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಬೇಕಿದೆ. ಅಧಿಕೃತವಾಗಿ ಪ್ರಕಟಿಸಿದ ಬಳಿಕ ಈ ಹೊಸ ನಿಯಮಗಳು ಬಿಬಿಎಂಪಿ ಕಾಯ್ದೆ 2020ರ 9ನೇ ಅಧ್ಯಾಯದಲ್ಲಿ ಅನ್ವಯವಾಗಲಿವೆ ಎಂದು ತಿಳಿಸಲಾಗಿದೆ.
ಬಿಬಿಎಂಪಿ ಆಸ್ತಿ ನಿರ್ವಹಣಾ ವಿಭಾಗವು ಈ ನಿಯಮಗಳನ್ನು ಜಾರಿಗೊಳಿಸಬೇಕಿದ್ದು, ಮುಖ್ಯ ಆಯುಕ್ತರು ಮೇಲ್ವಿಚಾರಣೆ ವಹಿಸಿಕೊಳ್ಳಬೇಕಿದೆ. ವಲಯ ಮಟ್ಟದಲ್ಲಿ ವಲಯ ಆಯುಕ್ತರು ನಿಯಮಗಳನ್ನು ಜಾರಿಗೊಳಿಸುವ ಹೊಣೆಗಾರಿಕೆ ಹೊಂದಿದ್ದಾರೆ.ಮಾರ್ಗಸೂಚಿ ದರಕ್ಕೆ ಮಾರಾಟಬಿಬಿಎಂಪಿ ಮುಖ್ಯ ಆಯುಕ್ತರು ಆಸ್ತಿ ವಿಭಾಗದ ಮೂಲಕ ಪಾಲಿಕೆಯ ಸ್ಥಿರಾಸ್ತಿಗಳ ಉಸ್ತುವಾರಿ ನೋಡಿಕೊಳ್ಳಬೇಕು. ರಾಜ್ಯ ಅಥವಾ ಕೇದ್ರ ಸರ್ಕಾರ ಹೊರತುಪಡಿಸಿ ಪಾಲಿಕೆಯ ಸ್ಥಿರಾಸ್ತಿಯನ್ನು ಮಾರಾಟ ಮಾಡಲು ಬೇರೆ ಯಾರಿಗೂ ಅವಕಾಶವಿಲ್ಲ. ಕಂದಾಯ ಇಲಾಖೆಯು ಕಾಲಕಾಲಕ್ಕೆ ತಕ್ಕಂತೆ ನಿಗಧಿಪಡಿಸಿದ ಮಾರ್ಗಸೂಚಿ ದರಕ್ಕೆ ಅನುಗುಣವಾಗಿ ಮಾತ್ರ ಸ್ಥಿರಾಸ್ತಿ ಮಾರಾಟವಾಗಬೇಕು. ಆದಾಗ್ಯೂ ರಾಜ್ಯ ಸರ್ಕಾರವು ರಿಯಾಯಿತಿ ಅಥವಾ ವಿನಾಯಿತಿ ನೀಡುವ ಹಕ್ಕನ್ನು ಕಾಯ್ದಿರಿಸಿಕೊಂಡಿದೆ.
ಗುತ್ತಿಗೆ ನೀಡುವಾಗ ಸಾರ್ವಜನಿಕ ಹರಾಜು ಅನುಸರಿಸಬೇಕು. ಬಿಬಿಎಂಪಿಗೆ ಆಸ್ತಿಯ ಅವಶ್ಯತೆ ಇದ್ದರೆ ಗುತ್ತಿಗೆ ಅವಧಿಯನ್ನು ನವೀಕರಣ ಮಾಡದೆ ಸ್ವಂತ ಬಳಕೆಗೆ ಮೀಸಲಿಟ್ಟುಕೊಳ್ಳಬಹುದು. ಪರಿಶಿಷ್ಟ ಜಾರಿ ಮತ್ತು ಪಂಗಡದವರಿಗೆ ನಿಯಮಗಳಂತೆ ಮೀಸಲು ನೀಡಬೇಕು ಎಂಬುದ ಸೇರಿದಂತೆ ಹಲವು ನಿಯಮಗಳಿವೆ.