ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಚನ್ನಗಿರಿ ತಾಲೂಕಿನಲ್ಲಿ ಮಳೆ: ಮನೆಗಳು, ಶಾಲೆಗಳಿಗೆ ನುಗ್ಗಿದ ನೀರು

KannadaprabhaNewsNetwork | Published : Jun 14, 2025 5:49 AM

ತಾಲೂಕಿನಾದ್ಯಂತ ಗುರುವಾರ ರಾತ್ರಿ ಬಿರುಸಿನಿಂದ ಮಳೆಯಾಗಿದ್ದು, ಬಸವಾಪಟ್ಟಣ ಹೋಬಳಿಯಲ್ಲಿ 94.4 ಮೀ.ಮೀ ಮಳೆಯಾಗಿದೆ. ಈ ಹೋಬಳಿ ವ್ಯಾಪ್ತಿಯಲ್ಲಿ ಭಾರಿ ಅವಾಂತರ ಸೃಷ್ಠಿಸಿದೆ.

ಚನ್ನಗಿರಿ: ತಾಲೂಕಿನಾದ್ಯಂತ ಗುರುವಾರ ರಾತ್ರಿ ಬಿರುಸಿನಿಂದ ಮಳೆಯಾಗಿದ್ದು, ಬಸವಾಪಟ್ಟಣ ಹೋಬಳಿಯಲ್ಲಿ 94.4 ಮೀ.ಮೀ ಮಳೆಯಾಗಿದೆ. ಈ ಹೋಬಳಿ ವ್ಯಾಪ್ತಿಯಲ್ಲಿ ಭಾರಿ ಅವಾಂತರ ಸೃಷ್ಠಿಸಿದೆ.

ಹರಲಿಪುರ, ಕುಂಬಳೂರು, ಕುಂದೂರು ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ನೀರು ಹರಿಯುತ್ತಿದ್ದದರೂ, ವಾಹನಗಳು, ವಿದ್ಯಾರ್ಥಿಗಳು ನೀರಿನ ಮೇಲೆಯೇ ಸಂಚರಿಸುವಂತಾಯಿತು. ಬೆಳಲಗೆರೆ-ಬಸವಾಪಟ್ಟಣ ರಸ್ತೆಯ ಸಂಪರ್ಕ ಕಡಿತಗೊಂಡಿತ್ತು. ಕಾರಿಗನೂರು ಸರ್ಕಾರಿ ಶಾಲೆಯು ಶಿಥಿಲಗೊಂಡಿದ್ದು, ಅಧಿಕ ಮಳೆಯಿಂದಾಗಿ ಬೀಳುವ ಹಂತ ತಲುಪಿದೆ. ಶಿಕ್ಷಣ ಇಲಾಖೆ ನಿರ್ಲಕ್ಷ್ಯ ವಿರುದ್ಧ ಶುಕ್ರವಾರ ಬೆಳಗ್ಗೆ ಜಿಪಂ ಮಾಜಿ ಸದಸ್ಯ ತೇಜಸ್ವಿ ವಿ. ಪಟೇಲ್ ನೇತೃತ್ವದಲ್ಲಿ ಶಾಲಾ ಮಕ್ಕಳು ಪ್ರತಿಭಟಿಸಿದರು.

ಹರೋಸಾಗರದ ಹಳ್ಳ ತುಂಬಿ ಹರಿಯುತ್ತಿದೆ. ಯಲೋದಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಂಭಾಗ ಮತ್ತು ಶಾಲೆ ಒಳಗಡೆ ನೀರು ನುಗ್ಗಿತ್ತು. ಶೃಂಗಾರುಬಾಗು ಗ್ರಾಮ ಮತ್ತು ಜೆ.ಎಚ್. ಪಟೇಲ್ ಬಡಾವಣೆಯಲ್ಲಿ 5 ಮನೆಗಳು ಭಾಗಶಃ ಬಿದಿವೆ. ಜೆ.ಎಚ್. ಪಟೇಲ್ ನಗರದಲ್ಲಿ 10 ಮನೆಗಳಿಗೆ ಮಳೆಯ ನೀರು ನುಗ್ಗಿದೆ. ಮರಬನಹಳ್ಳಿ ಕೆರೆಯ ಏರಿ ಶಿಥಿಲಗೊಂಡಿದ್ದು, ತಹಸೀಲ್ದಾರ್ ಎನ್.ಜೆ. ನಾಗರಾಜ್ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

- - - (ಟಾಪ್‌ ಕೋಟ್‌) ಚನ್ನಗಿರಿ ತಾಲೂಕಿನ 16 ಗ್ರಾ.ಪಂ.ಗಳು ನನ್ನ ಮಾಯಕೊಂಡ ಕ್ಷೇತ್ರಕ್ಕೆ ಸೇರಿವೆ. ಗುರುವಾರ ರಾತ್ರಿ ಮಳೆಯಿಂದ ಆಗಿರುವ ತೊಂದರೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಕಾರಿಗನೂರು ಸರ್ಕಾರಿ ಶಾಲೆ ದುರಸ್ತಿ ಸಾಧ್ಯವಿಲ್ಲ. ಹೊಸದಾಗಿಯೇ ನಿರ್ಮಾಣ ಮಾಡಬೇಕು. ಅದಕ್ಕಾಗಿ ಕೆಪಿಎಸ್ ಮತ್ತು ಸಿ.ಎಸ್.ಆರ್. ಯೋಜನೆಗಳಡಿ ಶಾಲಾ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು.

- ಕೆ.ಎಸ್. ಬಸವಂತಪ್ಪ, ಶಾಸಕ, ಮಾಯಕೊಂಡ ಕ್ಷೇತ್ರ.

- - -

-13ಕೆಸಿಎನ್‌ಜಿ5:

ಜೆ.ಎಚ್. ಪಟೇಲ್ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ತಹಸೀಲ್ದಾರ್ ಎನ್.ಜೆ.ನಾಗರಾಜ್ ಪರಿಶೀಲನೆ ನಡೆಸಿದರು.