ಬಿಂದುಮಾಧವ ಮಣ್ಣೂರ
ತಾಲೂಕಿನ ತೊಗರಿ ಹೊಲಗದ್ದೆಗಳಲ್ಲೀಗ ಜೀವಕಳೆ ತುಂಬಿದೆ. ಈ ಬಾರಿ ಕಾಲಕಾಲಕ್ಕೆ ರೈತರು ಬಯಸಿದಂತೆಯೇ ಮಳೆಯಿಂದಾಗಿ ಇಡೀ ತಾಲೂಕಿನಲ್ಲಿ ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ.
ತಾಲೂಕಿನಲ್ಲಿ ತೊಗರಿಯನ್ನು ಖುಷ್ಕಿ ಭೂ ಪ್ರದೇಶ 65 ಸಾವಿರ ಹೆಕ್ಟೇರ್ನಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು ಈ ಪೈಕಿ 50 ಸವಿರ ಹೆಕ್ಟೇರ್ ಬಿತ್ತೆಪೂರ್ಣಗೊಂಡಿದೆ. ಇತ್ತ ನರಾವರಿಯಲ್ಲಿಯೂ 4, 300 ಹೆಕ್ಟೇರ್ ಗುರಿಯಲ್ಲಿ 700 ಹೆಕ್ಟೇರ್ ಬಿತ್ತನೆಯಾಗಿದೆ. ಹೀಗಾಗಿ ತೊಗರಿ ಬಿತ್ತನೆ ಮಾಡಿ ರೈತ ಲಾಭದ ಲೆಕ್ಕ ಹಾಕುತ್ತಿದ್ದಾನೆ.ರೈತರ ನಿರೀಕ್ಷೆಯಂತೆ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಮಳೆ ಬಿಡುವು ನೀಡಿದ್ದಾನೆ. ಇದು ಹೊಲದಲ್ಲ ಎಡೆ, ಕಸ ಕೀಳದು, ಔಷಧಿ ಸಿಂಪರಣೆ ಸೇರಿದಂತೆ ಕೃಷಿ ಕಾರ್ಯಕ್ಕೆ ಅನುಕೂಲವಾಗಿದೆ. ರಂಟೆ- ಕುಂಟೆ ಹೊಡೆದು ಕಳೆ ಕೀಳಲು ಅನುಕೂಲವಗಿದೆ, ಈ ವಾತಾವರಣದಲ್ಲಿ ಕೃಷಿ ಚಟುವಟಿಕೆಗಳು ಎಲ್ಲೆಡೆ ವೇಗ ಪಡೆದಿವೆ.
ಇವರು 20 ಎಕರೆಯಲ್ಲಿ ತೊಗರಿ ಬಿತ್ತನೆ ಮಾಡಿದ್ದಾರೆ. ಈ ಅಡೆತಡೆಗಳ ನಡುವೆಯೂ ಬೆಳೆ ಉತ್ತಮವಾಗಿರುವುದು ಅವರಿಗೆ ಖುಷಿ ತಂದಿದೆ.
ಈಗಾಗಲೇ ಸಾಕಷ್ಟು ಸಾಲ ಮಾಡಿಕೊಂಡಿರುವ ನನಗೆ ಇನ್ನಷ್ಟು ಸಾಲ ಮಾಡುವ ಶಕ್ತಿ ಇಲ್ಲ. ಹೀಗಾಗಿ ನಮ್ಮ ಕುಟುಂಬದ ಏಳೆಂಟು ಸದಸ್ಯರೇ ಮೂರ್ನಾಲ್ಕು ದಿನದಿಂದ ಹೊಲದಲ್ಲಿನ ಕಳೆ ಕೀಳುತ್ತಿದ್ದಾರೆಂದು ಮನೆ ಮಂದಿ ಕೃಷಿಯಲ್ಲಿರುವ ರಾಮ ನಗರದ ದಯಾನಂದ, ಅಣ್ಣಪ್ಪ ಬಿಜಾಪುರ, ಸಾಯಬಣ್ಣ ಕರೂಟಿ ಭೀಮಣ್ಣ ಹಡಲಗಿ ಹೇಳಿದ್ದಾರೆ.
ನೀರಿನ ಅಭಾವದಿಂದ ಈ ಬಾರಿ ಕಬ್ಬು ಬೆಳೆಯುವುದನ್ನು ಕಡಿಮೆ ಮಾಡಿ, ತೊಗರಿ ಮೊರೆ ಹೋಗಿದ್ದೇವೆ. ಕಳೆ ನಿಯಂತ್ರಣವೇ ಕಷ್ಟವಾಗಿದೆ, ಪಕ್ಕದ ರಾಮನಗರ, ಗ್ರಾಮದಿಂದ ಕೃಷಿ ಕಾರ್ಮಿಕರನ್ನು ಕರೆತಂದು ಕಸ ತೆಗೆಸುತ್ತಿದ್ದೇವೆ. ಇಷ್ಟಾದರೂ ತೊಗರಿ ಫಸಲು ವೈನಾಗಿದೆ. ಭೂಮಾತೆ ಕೈ ಹಿಡಿಯುವ ಭರವಸೆ ಮೂಡಿದೆ.
--------
- ಸಂತೋಷ ಅಲ್ಲಾಪೂರ , ರೈತ, ಮಣ್ಣೂರ