ವಾಹನ ಸಂಚಾರಕ್ಕೆ 3 ದಿನ ಅವಕಾಶ । ಅತಿವೇಗದಲ್ಲಿ ಬೈಪಾಸ್ ಪೂರ್ಣ । ಬಿರುಸಿನಿಂದ ನಡೆಯುತ್ತಿರುವ ಪ್ರವೇಶದ್ವಾರದ ಬಾಕಿ ಕಾಮಗಾರಿಕನ್ನಡಪ್ರಭ ವಾರ್ತೆ ಸಕಲೇಶಪುರ
ಅಂದು ಸಕಲೇಶಪುರ ಪಟ್ಟಣದ ಆಗ್ರಹಾರ ಬಡಾವಣೆಯ ಸಮೀಪ ಕವಲೊಡೆದು ತೋಟದಗದ್ದೆ ಗ್ರಾಮ ಸಂದಿಸುತ್ತಿದ್ದ ನಾಲ್ಕು ಕಿಮೀ ಬೈಪಾಸ್ ರಸ್ತೆಗೆ ಪಟ್ಟಣದ ಬಾಳೆಗದ್ದೆ ಬಡಾವಣೆಯ ನಾಗರಿಕರು ವಿರೋದ ವ್ಯಕ್ತಪಡಿಸಿದ್ದರು. ಬೈಪಾಸ್ ರಸ್ತೆ ಪಟ್ಟಣದೊಳಗೆ ಹಾದುಹೋಗಲಿದೆ. ಇದರಿಂದ ಸಾಕಷ್ಟು ನಾಗರಿಕರು ಮನೆ, ಅಂಗಡಿಮುಂಗಟ್ಟುಗಳನ್ನು ಕಳೆದುಕೊಳ್ಳಲಿದ್ದಾರೆ ಎಂದು ದಾವಣಗೆರೆಯಲ್ಲಿದ್ದ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ ನಂತರ ಈ ಯೋಜನೆಯನ್ನು ಕೈಬಿಡಲಾಗಿತ್ತು.
೨೦೦೧ ರ ನಂತರ ಕೊಲ್ಲಹಳ್ಳಿ ಗ್ರಾಮ ಸಮೀಪ ಕವಲೊಡೆಯಲಿರುವ ಬೈಪಾಸ್ ರಸ್ತೆಗೆ ನೀಲನಕ್ಷೆ ಸಿದ್ದಪಡಿಸಿದ್ದು ಕೊಲ್ಲಹಳ್ಳಿ ಗ್ರಾಮ ಸಮೀಪದ ೨೧೪.೫ ನೇ ಕಿಮೀ ಸಮೀಪ ಕವಲೊಡೆಯುವ ಬೈಪಾಸ್ ರಸ್ತೆ ತೋಟದಗದ್ದೆ ಗ್ರಾಮ ಸಮೀಪದ ಕೊಲ್ಲಹಳ್ಳಿ ಗ್ರಾಮದ ಹೊರವಲಯದ ಮೂಲಕ ಮಳಲಿ ಗ್ರಾಮ ಸಂದಿಸುವ ಬೈಪಾಸ್ ರಸ್ತೆ ಕಾಮಗಾರಿ ೨೦೧೬ ರಲ್ಲಿ ಆರಂಭವಾಗಿತ್ತು. ಬೈಪಾಸ್ ಕಾಮಗಾರಿ ೨೦೨೨ ರ ನಂತರ ವೇಗ ಪಡೆದಿದ್ದು ೫.೫ ಕಿಮೀ ಕಾಂಕ್ರೀಟ್ ಕಾಮಗಾರಿ ಹಾಗೂ ೪೦೦ ಮೀಟರ್ ಉದ್ದದ ಎರಡು ಪಥದ ಹೇಮಾವತಿ ಸೇತುವೆ ಕೇವಲ ಒಂದು ವರ್ಷದಲ್ಲಿ ಮುಕ್ತಾಯಗೊಂಡಿದೆ. ಕಳೆದ ಒಂದು ತಿಂಗಳ ಹಿಂದೆ ಒಂದು ಪಥದ ಸೇತುವೆ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದ್ದರೆ, ಫೆಬ್ರವರಿ ೨೦ಕ್ಕೆ ಎರಡು ಪಥದ ಕಾಮಗಾರಿ ಸಹ ಮುಕ್ತಾಯಗೊಂಡಿದೆ.ಸದ್ಯ ಕೊಲ್ಲಹಳ್ಳಿ ಗ್ರಾಮ ಸಮೀಪ ಕವಲೊಡೆಯುವ ಬೈಪಾಸ್ ಪ್ರವೇಶದ್ವಾರದಲ್ಲಿ ಬಾಕಿ ಉಳಿದಿದ್ದ ಕಾಮಗಾರಿ ಕಳೆದ ಎರಡು ದಿನಗಳಿಂದ ಬಿರುಸಿನಿಂದ ನಡೆಯುತ್ತಿದೆ. ಸೇತುವೆಯ ಎರಡು ಬದಿಯ ಪಾದಚಾರಿ ರಸ್ತೆ ಕಾಮಗಾರಿ ಸಹ ವೇಗದಲ್ಲಿ ಸಾಗಿದೆ. ಉಳಿದಂತೆ ಹಳೇ ಬೇಲೂರು ರಸ್ತೆ ಸಮೀಪ ಒಂದು ಬದಿಯ ಕಾಮಗಾರಿಗೆ ಹೈಟೆನ್ಷನ್ ವಿದ್ಯುತ್ ಟವರ್ ಅಡ್ಡಿಯಾಗಿರುವುದರಿಂದ ಒಂದು ಬದಿಯ ಬೈಪಾಸ್ನ ನೂರು ಮೀಟರ್ ಕಾಮಗಾರಿ ಬಾಕಿಯಿದೆ. ಅದನ್ನು ಹೊರತುಪಡಿಸಿ ಬಹುತೇಕ ೫.೫ ಕಿ.ಮಿ ಬೈಪಾಸ್ ಕಾಮಗಾರಿ ಮುಕ್ತಾಯಗೊಂಡಿದೆ. ನೂರು ಮೀಟರ್ ಕಾಮಗಾರಿ ಬಾಕಿ ಉಳಿದಿರುವುದರಿಂದ ಬೈಪಾಸ್ನಲ್ಲಿ ಏಕಪಥದ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗುತ್ತಿದೆ.
ಇಲ್ಲ ಟ್ರಾಫಿಕ್:
ಸಿಮೆಂಟ್ ಮಂಜು, ಶಾಸಕ.
ಧಾರೇಶ್, ವರ್ತಕ.ಸಕಲೇಶಪುರ ಬೈಪಾಸ್ ರಸ್ತೆ.