ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕನ್ನಡವೂ ಪರಿಪೂರ್ಣ ಭಾಷೆ
ಪ್ರಪಂಚದಲ್ಲಿ ಕೇವಲ ಮೂರು ಭಾಷೆಗಳು ಮಾತ್ರ ಪರಿಪೂರ್ಣ ಭಾಷೆಗಳು ಅದರೆಲ್ಲಿ ನಮ್ಮ ಕನ್ನಡ ಮತ್ತು ಸಂಸ್ಕೃತ ಭಾಷೆಗೆ ಮೊದಲೆರಡು ಸ್ಥಾನ ದಕ್ಕಿದೆ. ಅದಕ್ಕೆ ಕಾರಣ ನಮ್ಮ ಭಾಷೆ ನುಡಿದಂತೆ ಬರೆಯಬಹುದು, ಬರೆದಂತೆ ಓದಬಹುದು. ಇನ್ನೂ ಗ್ರೀಕ್ ಭಾಷೆಯೂ ಸಹ ಪರಿಪೂರ್ಣ ಭಾಷೆ ಎಂದು ಕರೆಸಿಕೊಂಡಿದೆ ಎಂದು ಹೇಳಿದರು. ಕರ್ನಾಟಕ ದಕ್ಷಿಣ ಪ್ರಾಂತ್ಯದ ಕೋಶ ಪ್ರಮುಖ ಮಧುಸೂದನ ದೇಸಾಯಿ ಮಾತನಾಡಿ, ಸಂಸ್ಕೃತ ಕೇವಲ ಭಾಷೆಯಲ್ಲ. ಅದು ಭಾರತದ ಆತ್ಮದ ಧ್ವನಿ. ಹಿಂದೆ ಭಾರತದ ಸಾಧನೆ ಹೇಗಿತ್ತು ಎಂಬುದನ್ನು ಸಂಸ್ಕೃತ ತೋರಿಸಿಕೊಡುತ್ತದೆ. ಈ ಭಾಷೆ ದೇಹದ ನರನಾಡಿಗಳ ಆರೋಗ್ಯ ವೃದ್ಧಿಗೂ ಕಾರಣಿಭೂತವಾಗಿದೆ. ನ್ಯಾಯಾಲಯ, ವಾಯು ಸೇನೆ, ನೌಕಾ ಸೇನೆ, ಭೂ ಸೇನೆ ಇತ್ಯಾದಿ ಎಲ್ಲಾ ಸ್ಥಳಗಳಲ್ಲಿ ಸಂಸ್ಕೃತದ ಧ್ಯೇಯ ವಾಕ್ಯಗಳನ್ನು ನಾವು ಕಾಣಬಹುದು ಎಂದರು.ಸಂಸ್ಕೃತ ಬಹಳ ವಿಸ್ತಾರ ಭಾಷೆಅಖಿಲ ಭಾರತ ಸಂಸ್ಕೃತ ವಿಶ್ವ ವಿದ್ಯಾಲಯದ ಉಪ ಕುಲಪತಿ ಶ್ರೀಶ್ ದೇವ್ ಪೂಜಾರಿ ಮಾತನಾಡಿ, ಸಂಸ್ಕೃತದಲ್ಲಿ ಅನೇಕ ಜ್ಞಾನ ಶಾಖೆಗಳು ಇವೆ. ನ್ಯಾಯಶಾಸ್ತ್ರ, ವೇದಾಂತಶಾಸ್ತ್ರ, ವ್ಯಾಕರಣಶಾಸ್ತ್ರ, ಮೀಮಾಂಸಾಶಾಸ್ತ್ರ, ಅರ್ಥಶಾಸ್ತ್ರ, ನೀತಿಶಾಸ್ತ್ರ, ಆಯುರ್ವೆದ, ವಾಸ್ತು, ಖಗೋಲವಿಜ್ಞಾನ. ಹೀಗೆ. ಅದರ ವ್ಯಾಪ್ತಿ ಬಹಳ ವಿಸ್ತಾರವಾದದ್ದು. ಪ್ರಾಚೀನ ಕಾಲದಲ್ಲಿ ಅಧ್ಯಯನವೆಂದರೆ ಸಂಸ್ಕೃತದ ಅಧ್ಯಯನ, ಅದರಲ್ಲೂ ವಿಶೇಷವಾಗಿ ಒಂದೊಂದು ಶಾಸ್ತ್ರದಲ್ಲಿ ಪಾಂಡಿತ್ಯವನ್ನು ಪಡೆಯುತ್ತಿದ್ದರು. ಆಗ ಸಂಸ್ಕೃತ ಆಡುಭಾಷೆಯೇ ಆಗಿದ್ದರಿಂದ ಅದನ್ನು ಭಾಷೆಯಾಗಿ ಕಲಿಯುವ ಅನಿವಾರ್ಯತೆ ಇರಲಿಲ್ಲ ಎಂದು ಹೇಳಿದರು.