ಕನ್ನಡಪ್ರಭ ವಾರ್ತೆ ರಿಪ್ಪನ್ಪೇಟೆ
ಈ ಕಾರ್ಯಕ್ರಮವು ಮೂರು ದಿನಗಳ ಕಾಲ ನಡೆಯಲಿದ್ದು ಸುಮಾರು 20 ರಿಂದ 25 ಲಕ್ಷ ರು. ವೆಚ್ಚವಾಗಲಿದ್ದು ಮಠದ ಭಕ್ತರ ಸಹಕಾರದೊಂದಿಗೆ ಈ ಎಲ್ಲಾ ಧರ್ಮಕಾರ್ಯಗಳು ನಡೆಯಬೇಕಾಗಿರುವುದರಿಂದಾಗಿ ನಾಲ್ಕು ಐದು ತಿಂಗಳ ಮೊದಲೇ ಪೂರ್ವ ಭಾವಿ ಸಭೆಯನ್ನು ಭಕ್ತ ಸಮೂಹದಲ್ಲಿ ಕರೆಯಲಾಗಿದು ಭಕ್ತರ ಸಲಹೆ ಸೂಚನೆಯನ್ವಯ ಕಾರ್ಯಕ್ರಮದ ರೂಪರೇಷ ಸಿದ್ಧಪಡಿಸಲಾಗುವುದೆಂದು ಶ್ರೀಗಳು ಸಭೆಯಲ್ಲಿ ಪ್ರಾಸ್ತಾವನೆ ಇಟ್ಟರು.
ನ.6ರಂದು ಸಂಜೆ ಶ್ರೀಶೈಲ ಪಂಚಪೀಠದ ಜಗದ್ದುರುಗಳು ಮತ್ತು ಕಾಶಿ ಪೀಠದ ಜಗದ್ಗುರುಗಳು ಹಾಗೂ ಉಜ್ಜಯನಿ ಪೀಠದ ಜಗದ್ಗುರುಗಳು ಕೋಣಂದೂರು ಮಠಕ್ಕೆ ದಯಮಾಡಿಸುವರು. ಅಂದು ರಾತ್ರಿ ನೂತನ ಗುರುನಿವಾಸ ಶಿಲಾಮಂಟಪ ಮತ್ತು ಕರ್ತೃ ಗದ್ದುಗೆಗೆ ಪ್ರವೇಶೋತ್ಸವದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಜರುಗುವುದು.ನ.7ರಂದು ಮುಂಜಾನೆ ಪೂಜೆಯೊಂದಿಗೆ ಉಭಯ ಜಗದ್ಗುರುಗಳಿಂದ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಜರುಗಲಿದ್ದು, ನ.8ರಂದು ಬೆಳಗ್ಗೆ ನೂತನ ಶಿಲಾಮಯ ಕಟ್ಟಡದ ಉದ್ಘಾಟನೆ ಮತ್ತು ಕರ್ತೃಗದ್ದುಗೆ ಲೋಕಾರ್ಪಣೆ ಕಾರ್ಯಕ್ರಮ ಜರುಗುವುದು. ನಂತರ ಧರ್ಮ ಸಮಾರಂಭದಲ್ಲಿ ಗುರು ವಿರಕ್ತ ಪೀಠಾಧ್ಯಕ್ಷರ ಸಮಾಗಮದಲ್ಲಿ ಧರ್ಮಜಾಗೃತಿ ಕಾರ್ಯಕ್ರಮವು ಶ್ರೀಶೈಲ, ಕಾಶಿ, ಮತ್ತು ಉಜ್ಜಯನಿ ಪಂಚಪೀಠಾಧ್ಯಕ್ಷರು ಮತ್ತು ಆನಂದಪುರಂ ಮುರುಘಾಮಠದ ಜಗದ್ಗುರು ಮ.ನಿ.ಪ್ರ ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧರ್ಮ ಜಾಗೃತಿ ಕಾರ್ಯಕ್ರಮ ಜರುವುದು. ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಉದ್ಯಮಿ ಕೆ.ಆರ್.ಪ್ರಕಾಶ್ ಕೋಣಂದೂರು ಇವರನ್ನು ಈ ಧರ್ಮಜಾಗೃತಿ ಸಮಾರಂಭದ ಸಮಿತಿ ಅಧ್ಯಕ್ಷರನ್ನಾಗಿ ಮತ್ತು ಆಯಾ ಗ್ರಾಮಗಳ ತಲಾ ಇಬ್ಬರು ಸದಸ್ಯರನ್ನು ಅಯ್ಕೆ ಮೂಲಕ ಸಂಪರ್ಕಿಸಲು ಸಭೆ ನಿರ್ಣಯಿಸಿತು.
---------------------------------