ಕನಕಗಿರಿ:
ಗ್ರಾಮದ ಮುಖಂಡ ನಾಗನಗೌಡ ಮಾತನಾಡಿ, ೨೦೨೪-೨೫ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆ. ಕಾಟಾಪುರ ಗ್ರಾಮದ ಕೆರೆ ಹೂಳೆತ್ತಲು ₹ ೩೦ ಲಕ್ಷ ಅನುದಾನ ಬಿಡುಗಡೆಯಾಗಿದ್ದು, ೨೦೨೪ರ ಜುಲೈನಲ್ಲಿ ಡಿಪಿಆರ್ ಕೂಡಾ ಮಾಡಲಾಗಿದೆ. ಸದರಿ ಕಾಮಗಾರಿಗೆ ಸಂಬಂಧಿಸಿದಂತೆ ೧೪ ದಿನಗಳು ಮಾತ್ರ ಫಲಾನುಭವಿಗಳಿಗೆ ಕೆಲಸ ನೀಡಲಾಗಿದೆ. ಗ್ರಾಮಸ್ಥರು ಖಾತ್ರಿಯಡಿ ಕೆಲಸ ನೀಡುವಂತೆ ಅಧಿಕಾರಿಗಳಿಗೆ ಕೇಳಿದಾಗ ಫಾರಂ-೬ ನೀಡಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ತಿಳಿಸಿಲ್ಲ. ಇದರಿಂದ ಖಾತ್ರಿ ಫಲಾನುಭವಿಗಳು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಕಳೆದ ಮರ್ನಾಲ್ಕು ದಿನಗಳಿಂದ ತಾಲೂಕು ಪಂಚಾಯಿತಿ ಕಚೇರಿಗೆ ಖಾತ್ರಿ ಕೆಲಸ ನೀಡಲು ಮನವಿ ಮಾಡಿಕೊಂಡರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಖಾತ್ರಿ ಫಲಾನುಭವಿಗಳಿಗೆ ಕೆಲಸ ನೀಡುವಂತೆ ಸೂಚಿಸಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಜಶೇಖರ, ಕೆ. ಕಾಟಾಪುರ ಖಾತ್ರಿ ಫಲಾನುಭವಿಗಳಿಗೆ ಕೆಲಸ ನೀಡಲು ಕ್ರಮವಹಿಸಲಾಗುವುದು.ಫಲಾನುಭವಿಗಳು ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಫಾರಂ-6ನಲ್ಲಿ ಅರ್ಜಿ ಸಲ್ಲಿಸುವಂತೆ ತಿಳಿಸಿದರಲ್ಲದೆ, ಫಲಾನುಭವಿಗಳು ನರೇಗಾ ಕೆಲಸಕ್ಕಾಗಿ ತೊಂದರೆ ಅನುಭವಿಸುತ್ತಿರುವುದನ್ನು ಸರಿಪಡಿಸುವಂತೆ ಪಿಡಿಒ ಯು. ಮಲ್ಲಿಕಾರ್ಜುನಗೆ ಸೂಚಿಸಿದರು. ಈ ಹಿನ್ನಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ವಾಪಸ್ ಪಡೆದರು.