ಸದೃಢ ಆರೋಗ್ಯಕ್ಕೆ ಕ್ರೀಡೆಯೂ ಮುಖ್ಯ: ಪಿಡಿಓ

KannadaprabhaNewsNetwork |  
Published : Mar 04, 2024, 01:16 AM IST
ಚಿತ್ರ:ದೊಡ್ಡಾಲಗಟ್ಟದಲ್ಲಿ ನಡೆದ ತಾಲ್ಲೂಕು ಕ್ರೀಡಾಮೇಳವನ್ನು ಗ್ರಾಪಂ ಪಿಡಿಓ ಬಸವರಾಜ್‌ ಉದ್ಘಾಟಿಸಿದರು. | Kannada Prabha

ಸಾರಾಂಶ

ಆಲಘಟ್ಟ ಗ್ರಾಮದಲ್ಲಿ ನೆಹರು ಯುವ ಇಲಾಖೆ ಚಿತ್ರದುರ್ಗ ಹಾಗೂ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ವತಿಯಿಂದ ಚಿತ್ರದುರ್ಗ ತಾಲೂಕು ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಮನುಷ್ಯನಿಗೆ ಊಟ, ನಿದ್ರೆ, ಯೋಗ ಇವುಗಳು ಎಷ್ಟು ಮುಖ್ಯವೋ ದೇಹದ ಸಮತೋಲನ ಕಾಪಾಡುವುದು ಅಷ್ಟೇ ಮುಖ್ಯ ಹಾಗಾಗಿ ಪ್ರತಿಯೊಬ್ಬರೂ ಕ್ರೀಡಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ ಸದೃಢ ದೇಹವನ್ನು ಹೊಂದಿಸಿಕೊಳ್ಳಬೇಕೆಂದು ದೊಡ್ಡಾಲಗಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಎಲ್.ಬಸವರಾಜ್ ಅವರು ತಿಳಿಸಿದರು.

ತಾಲೂಕಿನ ಆಲಘಟ್ಟ ಗ್ರಾಮದಲ್ಲಿ ನೆಹರು ಯುವ ಇಲಾಖೆ ಚಿತ್ರದುರ್ಗ ಹಾಗೂ ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ವತಿಯಿಂದ ಆಯೋಜಿಸಿದ ಚಿತ್ರದುರ್ಗ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಒಳಾಂಗಣ ಕ್ರೀಡೆ ಬುದ್ದಿ ಹೆಚ್ಚಿಸಿದರೆ ಹೊರಾಂಗಣ ಕ್ರೀಡೆ ಶ್ರಮವನ್ನು ಹೆಚ್ಚಿಸುತ್ತದೆ ಸದೃಢ ದೇಹವನ್ನು ಗಟ್ಟಿಗೊಳಿಸಲು ಸಹಕಾರಿಯವಾಗಲಿದೆ ಎಂದು ಯುವ ಕ್ರೀಡಾಪಟುಗಳಿಗೆ ತಿಳಿಸಿದರು. ಮಡಿಲು ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆ ತಾಲೂಕು ಮಟ್ಟದ ಕ್ರೀಡೆಯನ್ನು ಆಯೋಜನೆ ಮಾಡಿರುವುದು ಸಂತಸದ ವಿಚಾರ ಒಂದು ಕ್ರೀಡೆಯನ್ನು ಆಯಚನ ಮಾಡುವುದರ ಮೂಲಕ ಯುವಕರನ್ನು ಒಗ್ಗೂಡಿಸಿ ಕ್ರೀಡೆಯಲ್ಲಿ ಭಾಗವಹಿಸಲು ಉತ್ತೇಜನವನ್ನು ನೀಡುವಂತಹ ಕಾರ್ಯ ಮಡಿಲು ಸಂಸ್ಥೆ ಮಾಡುತ್ತಿದೆ. ಯುವ ಸಮೋಹ ಕೆಟ್ಟ ಚಟಗಳಿಗೆ ಬಲಿಯಾಗದೆ ಉತ್ತಮ ಆರೋಗ್ಯದ ಕಡೆಗೆ ಗಮನಹರಿಸಬೇಕಾಗಿದೆ ಎಂದರು.

ಕರ್ನಾಟಕ ಭ್ರಷ್ಟಾಚಾರ ಮುಕ್ತ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ವಿಜಯ್‌ಕುಮಾರ್ ಮಾತನಾಡಿ, ಮಡಿಲು ಸಂಸ್ಥೆ ಈಗಾಗಲೇ ಈಗಾಗಲೇ ಜಿಲ್ಲೆಯಾದ್ಯಂತ ಉತ್ತಮ ರೀತಿಯ ಕೆಲಸ ಮಾಡಲಾಗುತ್ತಿದ್ದು, ಹಾಲುಘಟ್ಟ ಗ್ರಾಮದಲ್ಲೂ ಸಹ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ ಮುಂದಿನ ದಿನಗಳಲ್ಲಿ ಉತ್ತಮ ಮಟ್ಟಕ್ಕೆ ಈ ಸಂಸ್ಥೆಯ ಹೆಸರಾಗಬೇಕು ಎನ್ನುವುದು ನಮ್ಮ ಅಭಿಲಾಷೆ ನಮ್ಮದು ಎಂದರು.

ಗ್ರಾಮ ಪಂಚಾಯಿತಿ ವತಿಯಿಂದ ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಧಿಕಾರಿಗಳು ನಿರ್ದಿಷ್ಟ ಜಾಗವನ್ನು ನಿಗದಿ ಮಾಡಿ ಕೊಟ್ಟರೆ ರಾಜ್ಯಮಟ್ಟದಲ್ಲಿ ನಡೆಯುವಂತಹ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಂತಹ ಯುವಕರಿಗೆ ಸಹಕಾರ ನೀಡಬೇಕಾಗಿ ಮನವಿ ಮಾಡಿದರು.

ನಿವೃತ್ತ ಶಿಕ್ಷಕ ಓಂಕಾರಪ್ಪ ಮಾತನಾಡಿ, ಯುವಕರು ದೇಶದ ಮುಂದಿನ ನಾಯಕರು ಯುವ ಸಮುದಾಯ ಸಾಕಾಷ್ಟು ದೇಶಕ್ಕೆ ಕೊಡುಗೆಯನ್ನು ನೀಡಿದೆ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ಅಂತರಾಷ್ಟ್ರಮಟ್ಟಗಳಲ್ಲಿ ಪ್ರತಿನಿಧಿಸಿ ದೇಶ ಹಾಗೂ ರಾಜ್ಯಕ್ಕೆ ಉತ್ತಮ ಹೆಸರನ್ನು ತಂದಿದ್ದಾರೆ ಆ ಒಂದು ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ಸಹಾಯದ ಅವಶ್ಯಕತೆ ಇದೆ ಮುಂಬರುವಂತಹ ಸರ್ಕಾರಗಳು ಜನಪ್ರತಿನಿಧಿಗಳು ಸಂಘ ಸಂಸ್ಥೆಗಳು ಪ್ರೋತ್ಸಾಹವನ್ನು ನೀಡ ಬೇಕಾಗಿದೆ ಎಂದರು.

ಭರಮಸಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಲಿಂಗನಗೌಡ ನೆಗಳೂರು ಮಾತನಾಡಿ, ಯುವಕರು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವ ಸಂತಸ ವಿಚಾರವಾಗಿದೆ ಆದರೆ ಅವರ ಜೀವಕ್ಕೆ ರಕ್ಷಣೆ ಅವಶ್ಯಕತೆ ಇದೆ ಪ್ರತಿಯೊಬ್ಬ ಬೈಕ್ ಸವಾರರು ಹೆಲ್ಮೆಟ್ ಧರಿಸುವುದರ ಜೊತೆಗೆ ತಮ್ಮ ಪ್ರಾಣವನ್ನು ಕಾಪಾಡಿ ಕೊಳ್ಳಬೇಕೆಂದು ಕ್ರೀಡಾಪಟುಗಳಿಗೆ ತಿಳಿಸಿದರು.

ಈ ಒಂದು ಸಂದರ್ಭದಲ್ಲಿ ದೊಡ್ಡಾಲಘಟ್ಟ ಹಾಲು ಉತ್ಪಾದಕ ಒಕ್ಕೂಟದ ಅಧ್ಯಕ್ಷ ಪಿಎನ್ ನಾಗರಾಜ್, ಮಡಿಲು ಸಂಸ್ಥೆಯ ಅಧ್ಯಕ್ಷ ಕುಮಾರಸ್ವಾಮಿ ಸದಸ್ಯರಾದ ಮಹಾಂತೇಶ್, ಅಭಿಷೇಕ್ ,ಪ್ರದೀಪ್ ಕುಮಾರ್, ಆನಂದ್, ದ್ಯಾಮ್ ಕುಮಾರ್, ದರ್ಶನ್ ಗ್ರಾಮದ ಮುಖಂಡರಾದ ಸುಧಾಕರ್, ರಾಜು, ಕುಮಾರ್, ಅನಿಲ್, ಸುನಿಲ್, ಶಶಿಕುಮಾರ್, ಸುಮನ್, ಅಭಿಷೇಕ್, ಭರತ್ ಇತರರು ಇದ್ದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ