ಪ್ರತಿಭೆ ಅನಾವರಣಕ್ಕೆ ಕ್ರೀಡೆ ಸೂಕ್ತ ಮಾರ್ಗ: ಶಶಿಕಿರಣ್

KannadaprabhaNewsNetwork | Updated : Aug 23 2024, 01:10 AM IST

ಸಾರಾಂಶ

ಕ್ರೀಡೆ ದೈಹಿಕವಾಗಿ ಸಬಲರನ್ನಾಗಿಸುವ ಜೊತೆಗೆ ಆರೋಗ್ಯವಾಗಿರಲು ಸಹಕಾರಿ ಆಗುವುದು. ಅಲ್ಲದೇ, ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹೊರತೆಗೆಯುವಂತಹ ಸೂಕ್ತ ಅವಕಾಶ ಕಲ್ಪಿಸಿ ಕೊಡುತ್ತದೆ ಎಂದು ಪ್ರಾಂಶುಪಾಲ ಶಶಿಕಿರಣ್ ಹೇಳಿದ್ದಾರೆ.

- ಉದ್ದಗಟ್ಟದಲ್ಲಿ ಹನುಮಂತಾಪುರ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟನೆ - - - ಕನ್ನಡಪ್ರಭ ವಾರ್ತೆ ಜಗಳೂರು

ಕ್ರೀಡೆ ದೈಹಿಕವಾಗಿ ಸಬಲರನ್ನಾಗಿಸುವ ಜೊತೆಗೆ ಆರೋಗ್ಯವಾಗಿರಲು ಸಹಕಾರಿ ಆಗುವುದು. ಅಲ್ಲದೇ, ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹೊರತೆಗೆಯುವಂತಹ ಸೂಕ್ತ ಅವಕಾಶ ಕಲ್ಪಿಸಿ ಕೊಡುತ್ತದೆ ಎಂದು ಪ್ರಾಂಶುಪಾಲ ಶಶಿಕಿರಣ್ ಹೇಳಿದರು.

ತಾಲೂಕಿನ ಉದ್ದಗಟ್ಟ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆ ಆವರಣದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಹನುಮಂತಾಪುರ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯವಾಗಿದೆ ಎಂದರು.

ತೀರ್ಪುಗಾರರು ತೀರ್ಪು ನೀಡುವಾಗ ನ್ಯಾಯ ಸಮ್ಮತವಾಗಿರಬೇಕು. ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ತಮ್ಮಲ್ಲಿರುವ ಕೌಶಲ್ಯ ಅನಾವರಣಗೊಳಿಸುವ ಮುಖೇನ ತಾಲೂಕುಮಟ್ಟ, ಜಿಲ್ಲಾಮಟ್ಟ, ರಾಜ್ಯಮಟ್ಟ ಮತ್ತು ರಾಷ್ಟ್ರಮಟ್ಟದವರೆಗೆ ಬೆಳೆಯುವಂತಹ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕ್ರೀಡಾಕೂಟದಲ್ಲಿ ೧೬ ಹಳ್ಳಿಗಳ ಶಾಲೆಯಿಂದ ೩೮೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು, ಕಬಡ್ಡಿ, ಖೋ ಖೊ, ವಾಲಿಬಾಲ್, ಥ್ರೋಬಾಲ್, ಸೇರಿದಂತೆ ವಿವಿಧ ಕ್ರೀಡೆಗಳನ್ನು ನಡೆಸಲಾಯಿತು.

ಬಾಲಕರ ಕಬಡ್ಡಿ ಪಂದ್ಯದಲ್ಲಿ ದೊಡ್ಡಬೊಮ್ಮನಹಳ್ಳಿ ಸ.ಹಿ.ಪ್ರಾ.ಶಾಲೆ ಪ್ರಥಮ ಸ್ಥಾನ, ಬಾಲಕಿರ ಕಬಡ್ಡಿ ಪಂದ್ಯದಲ್ಲಿ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಥಮ ಸ್ಥಾನ, ಬಾಲಕಿಯರ ಥ್ರೋಬಾಲ್ ಪಂದ್ಯದಲ್ಲಿ ಹುಚ್ಚವ್ವನಹಳ್ಳಿ ಸ.ಹಿ.ಪ್ರಾ.ಶಾಲೆ ಪ್ರಥಮ ಸ್ಥಾನ, ಬಾಲಕರ ಥ್ರೋಬಾಲ್ ಪಂದ್ಯ ಜಗಳೂರು ಗೊಲ್ಲರಹಟ್ಟಿ ಸ.ಹಿ.ಪ್ರಾ.ಶಾಲೆ ಪ್ರಥಮ ಸ್ಥಾನ, ಬಾಲಕರ ಮತ್ತು ಬಾಲಕಿಯರ ಖೋಖೋ ಪಂದ್ಯದಲ್ಲಿ ತಮಲೇಹಳ್ಳಿ ಸ.ಹಿ.ಪ್ರಾ.ಶಾಲೆ ಪ್ರಥಮ ಸ್ಥಾನ, ಬಾಲಕರ ವಾಲಿಬಾಲ್ ಪಂದ್ಯದಲ್ಲಿ ಸ.ಹಿ.ಪ್ರಾ.ಶಾಲೆ ಭರಮಸಮುದ್ರ ಪ್ರಥಮ ಸ್ಥಾನ, ಬಾಲಕಿಯರ ವಾಲಿಬಾಲ್ ಪಂದ್ಯದಲ್ಲಿ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಥಮ ಸ್ಥಾನ ಪಡೆದವು.

ಈ ಸಂದರ್ಭ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸುರೇಶ್ ರೆಡ್ಡಿ, ಅಣಬೂರು ಕ್ಲಸ್ಟರ್ ಸಿಆರ್ಪಿ ನಾಗಲಿಂಗಸ್ವಾಮಿ, ಹನುಮಂತಾಪುರ ಕ್ಲಸ್ಟರ್ ಸಿಆರ್ಪಿ ಲೋಕೇಶ್, ಶಿಕ್ಷಕರಾದ ಗೋಡೆ ಬಸವರಾಜು, ರೇಖ, ಕುಮಾರ್ ನಾಯ್ಕ, ಲೋಕೇಶ್, ಗೋವಿಂದಪ್ಪ, ರಾಜು, ಸೇರಿದಂತೆ ಮತ್ತಿತರರಿದ್ದರು.

- - - -22ಜೆ.ಎಲ್.ಆರ್.1:

ಜಗಳೂರು ತಾಲೂಕಿನ ಉದ್ದಗಟ್ಟ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆ ಆವರಣದಲ್ಲಿ ಹನುಮಂತಾಪುರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ಥ್ರೋಬಾಲ್ ಪಂದ್ಯದಲ್ಲಿ ಹುಚ್ಚವ್ವನಹಳ್ಳಿ ಸ.ಹಿ.ಪ್ರಾ.ಶಾಲೆ ಪ್ರಥಮ ಸ್ಥಾನ ಪಡೆದಿದೆ. ಉದ್ದಗಟ್ಟ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆ ಪ್ರಾಂಶುಪಾಲ ಶಶಿಕಿರಣ್ ಇತರರು ಇದ್ದರು.

Share this article