ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಬಜೆಟ್ 3,71,383 ಕೋಟಿ ಗಾತ್ರವಿದ್ದು, ಈ ಪೈಕಿ ಶೇ.14ರಷ್ಟು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ನಿಗದಿಪಡಿಸಿದ್ದು, ತಮ್ಮ ನೆಲೆ ಭದ್ರಪಡಿಸಿಕೊಳ್ಳಲು ಮೈಸೂರು ಜಿಲ್ಲೆಗೆ ಯೋಜನೆ ಘೋಷಿಸಿ ಇತರೆ ಜಿಲ್ಲೆಗಳನ್ನೇ ಕಡೆಗಣಿಸಿದ್ದಾರೆ ಎಂದರು.
ಮೇಕೆದಾಟು ಯೋಜನೆ ಆರಂಭಿಸುವುದಾಗಿ ಹೋರಾಡಿದ್ದ ಕಾಂಗ್ರೆಸ್ ತನ್ನ ಬಜೆಟ್ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿಲ್ಲ. ಮೇಕೆದಾಟು ಜಾರಿಗಾಗಿ ಪಾದಯಾತ್ರೆ ಮಾಡಿದ್ದ ಕಾಂಗ್ರೆಸ್ಸಿಗರು ಈಗ ಅಧಿಕಾರದಲ್ಲಿದ್ದರೂ ಬಜೆಟ್ನಲ್ಲೇಕೆ ಘೋಷಿಸಿಲ್ಲ. ಚಿಕಿತ್ಸಾ ಕೇಂದ್ರ, ಕಲ್ಕೋಸ್ಕೋಪಿ ಚಿಕಿತ್ಸಾ ಉಪಕರಣ ಖರೀದಿ ಬಿಟ್ಟರೆ, ಜಿಲ್ಲೆಗೆ ಸಿದ್ದರಾಮ್ಯಯ ಸರ್ಕಾರ ಬಜೆಟ್ನಲ್ಲಿ ದೊಡ್ಡ ಸೊನ್ನೆ ಕೊಟ್ಟಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಅನುದಾನ ತರಲು ಸಿಎಂ ಮೇಲೆ ಒತ್ತಡ ಹೇರಲಿ ಎಂದು ಆಗ್ರಹಿಸಿದರು.ಭದ್ರಾ ಮೇಲ್ದಂಡೆ ಯೋಜನೆಗೆ ರಾಜ್ಯದ ಪಾಲನ್ನು ಘೋಷಿಸುವ ಕೆಲಸ ಸಿದ್ದರಾಮಯ್ಯ ಮಾಡಿಲ್ಲ. ನೀರಾವರಿ ಯೋಜನೆಗಳ ಆರ್ಥಿಕ ಸಂಪನ್ಮೂಲಗಳ ವಿವರಗಳ ನೀಡಿಲ್ಲ. ಕಾಂಗ್ರೆಸ್ ಸರ್ಕಾರದ ಉಚಿತ ಯೋಜನೆಗಳಿಗೆ ನಮ್ಮ ವಿರೋಧವಿಲ್ಲ. ಕಾಂಗ್ರೆಸ್ಸಿನವರು ಆಮ್ ಆದ್ಮಿ ಪಕ್ಷದ ಯೋಜನೆಗಳನ್ನೇ ಕದ್ದು ಗ್ಯಾರಂಟಿ ಯೋಜನೆಗಳ ಮಾಡಿದ್ದಾರೆ. ಆದರೆ, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೇ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನೇ ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.
ಎಂದು ಶಿವಕುಮಾರಪ್ಪ ದೂರಿದರು.
ಆಮ್ ಆದ್ಮಿ ಪಕ್ಷದ ಮುಖಂಡರಾದ ಬಸವರಾಜ ಕೆ.ಹಲಸಬಾಳು, ಧರ್ಮಾನಾಯ್ಕ, ಮಹಮ್ಮದ್ ಯೂಸೂಫ್ ಇತರರಿದ್ದರು.
ದಾವಣಗೆರೆ ಜಿಡಿಪಿ ಹೆಚ್ಚಳಕ್ಕೆ ಕಾರ್ಯಕ್ರಮವಿಲ್ಲಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಡಿಪಿಯಲ್ಲಿ ದಾವಣಗೆರೆ ಜಿಲ್ಲೆ 18ನೇ ಸ್ಥಾನದಲ್ಲಿದೆ. ನೆರೆಯ ಚಿತ್ರದುರ್ಗ, ಶಿವಮೊಗ್ಗಕ್ಕಿಂತಲೂ ಕೆಳಗಿದ್ದೇವೆ. ಈ ಜಿಲ್ಲೆಯೂ ಜಿಡಿಪಿಯಲ್ಲಿ ಹೆಚ್ಚಳವಾಗಲು ಪೂರಕವಾಗಿ ಯೋಜನೆ, ಕಾರ್ಯಕ್ರಮ ನೀಡಬೇಕಲ್ಲವೇ? ದಾವಣಗೆರೆಯ ಜವಳಿ ಪಾರ್ಕ್ಗೆ ಉತ್ತೇಜನ ನೀಡುವ ಕೆಲಸ ಆಗಿಲ್ಲ. ಫುಡ್ ಕೋರ್ಟ್ ಸ್ಥಾಪನೆ ಪ್ರಸ್ತಾಪವಿಲ್ಲ. ಕುಡಿಯುವ ನೀರು, ಮೂಲಸೌಕರ್ಯ, ಏತ ನೀರಾವರಿ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡದ ಬಜೆಟ್ ಇದು. ಲೋಕಸಭೆ ಚುನಾವಣೆಗೆ ಓಲೈಕೆ ರಾಜಕಾರಣದ ಬಜೆಟ್ ಇದಷ್ಟೇ.