ಕನ್ನಡಪ್ರಭ ವಾರ್ತೆ ಹುಣಸೂರು
ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಕನ್ನಡ ವಿಭಾಗದ ವತಿಯಿಂದ ಮೈಸೂರಿನ ಯದುನಂದನ ಪ್ರಕಾಶನದ ಸಹಯೋಗದಲ್ಲಿ ಆಯೋಜಿಸಿದ್ದ ಕಾಲೇಜು ಗ್ರಂಥಾಲಯಕ್ಕೆ ಉಚಿತವಾಗಿ 200ಕ್ಕೂ ಹೆಚ್ಚು ಪುಸ್ತಕಗಳ ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ಓದುವ ಹವ್ಯಾಸ ಸಹಜವಾಗಿ ಎಲ್ಲರಲ್ಲೂ ಇತ್ತು. ವಿದ್ಯಾರ್ಥಿಜೀವನದಲ್ಲಿ ಮಹನೀಯರ ಜೀವನಗಾಥೆ, ನಾಟಕ, ಕಲೆ,ಸಾಹಿತ್ಯ, ಸಂಸ್ಕೃತಿ, ಪ್ರಚಲಿತ ವಿದ್ಯಮಾನ ಎಲ್ಲವನ್ನೂ ಓದುತ್ತಿದ್ದರು. ಆದರೆ ಇದೀಗ ಆಧುನಿಕ ತಂತ್ರಜ್ಞಾನ ನಮಗೆ ಬೆರಳ ತುದಿಯಲ್ಲೇ ಮಾಹಿತಿಯನ್ನು ನೀಡುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ಕೇಳುವ ಮತ್ತು ನೋಡುವ ಸಂಸ್ಕೃತಿಗೆ ಸಿಕ್ಕುಬಿದ್ದಿದ್ದಾರೆ ಎಂದು ವಿಷಾದಿಸಿದರು.ವಿದ್ಯಾರ್ಥಿ ಜೀವನದಲ್ಲಿ ಪುಸ್ತಕವನ್ನು ಓದುವುದೇ ಒಂದು ದೊಡ್ಡ ಗುರಿಯಾಗಬೇಕು. ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಮಹಾತ್ಮರ ಜೀವನ ಚರಿತ್ರೆ ಓದಬೇಕು. ನಮ್ಮ ಬದುಕಿಗೆ ಅಲ್ಲಿ ಅನೇಕ ಮಾರ್ಗಗಳಿರುತ್ತದೆ. ಕಲೆ,ಕ್ರೀಡೆ,ಇತಿಹಾಸ,ಸ್ಪರ್ಥಾತ್ಮಕ ಪರಿಕ್ಷೆಗೆ ಸಂಬಂಧಿಸಿದ ಪುಸ್ತಕಗಳನ್ನು ಓದಬೇಕು ಎಂದು ಅವರು ಹೇಳಿದರು.
ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಕನ್ನಡ ಭಾಷೆಯ ಕೃತಿಗಳಿಗೆ ಬರಹ, ಗ್ರಂಥ, ಪುಸ್ತಕಕ್ಕೆ ಎಷ್ಟು ಮಹತ್ವವಿದೆ ಎಂಬುದು ಇದರಿಂದ ತಿಳಿಯುತ್ತದೆ. ಹಿಂದೆ ಹೆಣ್ಣು ಮಕ್ಕಳು ಕಥೆ,ಕಾದಂಬರಿಯನ್ನು ಓದುವ ಮೂಲಕ ಬದುಕನ್ನು ಗಟ್ಟಿಯಾಗಿ ಕಟ್ಟಿಕೊಳ್ಳುತ್ತಿದ್ದರು,ಇಂದು ಬದುಕಿನ ಪರೀಕ್ಷೆ ನಿಮ್ಮ ಸ್ಪರ್ಧಾತ್ಮಕ ಪರೀಕ್ಷೆಯ ಮೇಲೆ ನಿಂತಿದೆ. ಅದನ್ನು ಓದಿ ಪಾಸಾದರೆ ನಿಮ್ಮ ಬದುಕು ಕೂಡ ಉತ್ತೀಣವಾದಂತೆ ಎಂದು ಅವರು ಹೇಳಿದರು.
ಯದುನಂದನ ಪ್ರಕಾಶನವು ವಿದ್ಯಾರ್ಥಿಗಳಿಗಾಗಿ 200ಕ್ಕೂ ಹೆಚ್ಚು ಪುಸ್ತಕಗಳನ್ನು ಉಚಿತವಾಗಿ ನೀಡುತ್ತಿರುವ ಉದ್ದೇಶ ವಿದ್ಯಾರ್ಥಿಗಳು ಗ್ರಂಥಾಲಯಗಳಿಗೆ ತೆರಳಿ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳಸಿಕೊಳ್ಳಿರಿ ಎನ್ನುವುದಾಗಿದೆ. ವಿವಿಧ ಪ್ರಾಕಾರಗಳ ಪುಸ್ತಕ ನಿಮ್ಮ ಗೆಳೆಯರಾಗಲಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆಗೈದ ಸಾಧಕರು ತಾವು ಪುಸ್ತಕ ಓದಿ ಜ್ಞಾನ ಸಂಪಾದಿಸಿ ಸಾಧನೆಗೈದಿದ್ದಾಗಿ ತಿಳಿಸುತ್ತಾರೆಯೇ ಹೊರತು ಸಾಮಾಜಿಕ ಜಾಲತಾಣಗಳ ಮಾಹಿತಿಯನ್ನಲ್ಲ ಎನ್ನುತ್ತಾರೆ. ಓದುವ ಪ್ರವೃತ್ತಿ ಹೊಂದಿದವರು ಉದ್ಯೋಗ ಸಂದರ್ಶನದ ವೇಳೆ ಅವರ ಸ್ಫುಟಮಾತು, ಕ್ರಿಯಾಶೀಲ ಯೋಚನೆಗಳು ಸರಾಗವಾಗಿ ಹೊರಬರಲು ಸಾಧ್ಯವಿದೆ ಎಂದರು.
ಉದ್ಯಮಿ ನಿಂಗರಾಜು ಮಾತನಾಡಿ, ಸರ್ಕಾರಿ ಕೆಲಸ ಸಿಗದಿದ್ದಲ್ಲಿ ಸ್ವಯಂ ಉದ್ಯೋಗ ಆರಂಭಿಸಿ, ನೀವೇ ಬೇರೆಯವರಿಗೆ ಕೆಲಸ ನೀಡುವಂತಾಗಬೇಕು. ಯಾರಿಗಾದರೂ ಸ್ವಯಂ ಉದ್ಯೋಗ ಆರಂಭಿಸುವ ಬಗ್ಗೆ ಸಲಹೆ- ಸೂಚನೆ- ತರಬೇತಿ ಬೇಕಾದರೆ ತಾವು ನೀಡಲು ಸಿದ್ಧ ಎಂದರು.