ಧಾರವಾಡ:
ಕರ್ನಾಟಕ ವಿವಿ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ವಿಭಾಗವು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133ನೇ ಜನ್ಮ ದಿನಾಚರಣೆ ಅಂಗವಾಗಿ ‘ಸಾಮಾಜಿಕ ನ್ಯಾಯ ಹಾಗೂ ಭಾರತದ ಸಂವಿಧಾನ: ಡಾ. ಬಿ.ಆರ್. ಅಂಬೇಡ್ಕರ್ ದೃಷ್ಟಿಕೋನಗಳು'' ವಿಷಯದ ಕುರಿತು ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿದ ಅವರು, ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಯುವ ಸಮುದಾಯವು ಆಳವಾಗಿ ಅಧ್ಯಯನ ಮಾಡುವ ಜತೆಗೆ ಅಧ್ಯಯನ, ಆಂದೋಲನ ಮತ್ತು ಅಧಿಕಾರ ತತ್ವ ಇಟ್ಟುಕೊಂಡು ಮುನ್ನಡೆಯಬೇಕು ಎಂದರು.
ಕೆಳ ಸಮುದಾಯದ ಕುರಿತು ಚಿಂತಿಸಿದವರ ಮೊದಲಿಗರಲ್ಲಿ ಬಸವೇಶ್ವರರು ನಂತರ ಡಾ. ಬಿ.ಆರ್. ಅಂಬೇಡ್ಕರ್. ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡಬೇಕು ಎಂಬುವುದು ಅವರ ವಿಚಾರವಾಗಿತ್ತು. ವಿದ್ಯಾರ್ಥಿಗಳು ಅಂಬೇಡ್ಕರ್ ಬರೆದ ಕೃತಿಗಳನ್ನು ಕಡ್ಡಾಯವಾಗಿ ಓದಲೇಬೇಕು ಎಂದ ಅವರು, ಸಾಮಾಜಿಕ ವ್ಯವಸ್ಥೆ ಬದಲಾಗಬೇಕು. ಆ ನಿಟ್ಟಿನಲ್ಲಿ ಸಮುದಾಯಗಳು ಸಂಘಟಿತವಾಗಬೇಕು. ಯುವ ಸಮುದಾಯವು ಹಿರಿಯರನ್ನು ಗೌರವಿಸಬೇಕು. ಪ್ರಗತಿಪರ ಸಾಹಿತ್ಯವನ್ನು ಓದಬೇಕು ಎಂದು ಸಲಹೆ ನೀಡಿದರು.ಚಿಂತಕ ಬೆಂಗಳೂರಿನ ಸುಬ್ಬು ಹೊಲೇಯಾರ್ ದಿಕ್ಸೂಚಿ ಭಾಷಣ ಮಾಡಿ, ಒಂದು ಮತ ಒಂದು ಮೌಲ್ಯ ಎಂಬ ತತ್ವದಡಿ ಅಂಬೇಡ್ಕರ್ ಮತದಾನಕ್ಕೆ ಹೆಚ್ಚು ಮಹತ್ವ ನೀಡಿದ್ದು ವಿಶೇಷ ಎಂದರು.
ವಿಚಾರ ಸಂಕಿರಣದಲ್ಲಿ ‘ದೇವನಾಂಪ್ರೀಯ’ ಮತ್ತು ‘ಸಾಮ್ರಾಟ್’ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಸಂಶೋಧನಾ ಲೇಖನಗಳ ಎರಡು ಸಂಶೋಧನಾ ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು.