ಬೆಂಗಳೂರು
ನಾನು ವಿವಾದಿತ ಸ್ಥಳಕ್ಕೆ ಹೋಗುವುದಿಲ್ಲ. ಮತ್ತೆ ಗೊಂದಲ ಆಗುವುದು ಬೇಡ ಅಂತಾ ಹೋಗುತ್ತಿಲ್ಲ. ಇಂತಹ ಘಟನೆಗಳು ಆದಾಗ ಪ್ರತಿಭಟನೆ ಆಗೇ ಆಗುತ್ತದೆ. ಬಿಜೆಪಿಗೆ ನೆಲೆ ಇಲ್ಲ. ಭಾವನಾತ್ಮಕ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ ಎಂಬುದನ್ನು ಒಪ್ಪುವುದಿಲ್ಲ. ಇಷ್ಟೆಲ್ಲಾ ಆಗಲೂ ರಾಜ್ಯ ಸರ್ಕಾರವೇ ನೇರ ಕಾರಣ. ಆದರೆ, ಪಿಡಿಓ ಅಮಾನತು ಮಾಡಿದ್ದಾರೆ. ಇದು ಸರಿಯಲ್ಲ. ಬಲಿಪಶು ಮಾಡುವ ಕೆಲಸ ಇದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಇಡೀ ಘಟನೆಯನ್ನು ನಿಭಾಯಿಸಲು ಸರ್ಕಾರ ವಿಫಲವಾಗಿದೆ. ಯಡವಟ್ಟು ಮಾಡಿದೆ. ಆರು ದಿನ ಧ್ವಜ ಹಾರಿಸಲು ಬಿಟ್ಟಿದ್ದೇ ತಪ್ಪು. ಅವಕಾಶ ನೀಡದಿದ್ದರೆ ಮೊದಲೇ ಹೇಳಬೇಕಿತ್ತು. ಏಕಾಏಕಿ ಒತ್ತಡಕ್ಕೆ ಒಳಗಾಗಿ ಧ್ವಜ ತೆರವು ಮಾಡಲಾಗಿದೆ. ಜಿಲ್ಲಾಡಳಿತ ತಪ್ಪು ಮಾಡಿದ್ದು, ಒತ್ತಡಕ್ಕೆ ಒಳಗಾಗಿದೆ. ಈಗ ಆರೋಪ ಮಾಡುವ ಸರ್ಕಾರ ಏಕೆ ಮೊದಲೇ ಕ್ರಮ ಕೈಗೊಳ್ಳಲಿಲ್ಲ. ಆರು ದಿನ ಬಿಟ್ಟು ಈಗ ಅಕ್ರಮ ಎನ್ನುವುದು ಸರಿಯಲ್ಲ ಎಂದು ಹೇಳಿದರು.ಹನುಮ ಧ್ವಜ ಕಟ್ಟಲು ಕಂಬ ಮಾಡಿದ್ದು. ರಾಷ್ಟ್ರ ಧ್ವಜ ಎಲ್ಲಿ ಬೇಕಾದರೂ ಹಾರಿಸಬಹುದು. ವಿವಾದಿತ ಕಂಬದಲ್ಲೇ ಹನಮ ಧ್ವಜ ಹಾರಿಸಬೇಕು. ಸರ್ಕಾರ ಬಲವಂತದ ಕ್ರಮ ಮಾಡುವುದು ಸರಿಯಲ್ಲ ಎಂದು ಸುಮಲತಾ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.