ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಸಂಸೆ ಮತ್ತು ಮಲವಂತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಈ ರಸ್ತೆ ಅಭಿವೃದ್ಧಿ ಹೊಂದಿದರೆ ಎರಡು ಜಿಲ್ಲೆಗಳ ಸಂಪರ್ಕ ಬಹಳ ಹತ್ತಿರವಾಗಲಿದೆ.
ಎಳನೀರು ಪ್ರದೇಶದ ಜನರು ತಮ್ಮ ಪಂಚಾಯಿತಿ ಅಥವಾ ತಾಲೂಕು ಕಚೇರಿಗಳ ಕೆಲಸಕ್ಕೆ ಈಗ 120 ಕಿ.ಮೀ.ಗಿಂತ ಅಧಿಕ ದೂರ ಸಂಚಾರ ನಡೆಸಬೇಕಾಗಿದೆ. ಈ ರಸ್ತೆ ಅಭಿವೃದ್ಧಿ ಹೊಂದಿದರೆ ಮಲವಂತಿಗೆ 10 ಕಿ.ಮೀ., ತಾಲೂಕು ಕಚೇರಿಗೆ 30 ಕಿ.ಮೀ. ದೂರದಲ್ಲಿ ಕ್ರಮಿಸಿ ತಲುಪಬಹುದು.ಮಳೆಗಾಲದಲ್ಲಿ ಸಂಚಾರ ಅಸಾಧ್ಯವಾಗಿರುವ ಈ ರಸ್ತೆಯಲ್ಲಿ ಬೇಸಿಗೆ ಕಾಲದಲ್ಲಿ ಜೀಪು ಹಾಗೂ ಬೈಕುಗಳು ಕಷ್ಟಪಟ್ಟು ಸಂಚರಿಸುತ್ತವೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿರುವ ಈ ರಸ್ತೆಯಲ್ಲಿ ಹಲವಾರು ಜಲಪಾತ, ಸುಂದರ ಪರಿಸರ, ವನ್ಯಮೃಗಗಳ ಓಡಾಟವೂ ಇದೆ.ಈ ರಸ್ತೆ ಅಭಿವೃದ್ಧಿಗೆ ಹಲವು ವರ್ಷಗಳಿಂದ ಸಾಕಷ್ಟು ಬೇಡಿಕೆ ಇದ್ದು ಅದು ಕನಸಾಗಿ ಉಳಿದಿದೆ. ಈ ರಸ್ತೆ ಅಭಿವೃದ್ಧಿ ಬಗ್ಗೆ ಮಾಧ್ಯಮಗಳಲ್ಲಿ ಹಲವಾರು ಬಾರಿ ವರದಿ ಪ್ರಕಟವಾಗಿವೆ.
ಪ್ರಸ್ತುತ ಈ ರಸ್ತೆಯ ತೀರಾ ಅಗಲ ಕಿರಿಗಾಗಿದ್ದು ಅಗಲೀಕರಣಕ್ಕೆ ಅರಣ್ಯ ಇಲಾಖೆಯ ನೀತಿ ಅಡ್ಡಿಯಾಗಿದೆ. ರಸ್ತೆ ಅಭಿವೃದ್ಧಿಗೆ ಅರಣ್ಯ ಇಲಾಖೆಯಿಂದ ಅನುಮತಿ ಸಿಗದ ಕಾರಣ ಹಲವಾರು ಹೋರಾಟಗಳು ನಡೆದಿದ್ದರೂ ಅಭಿವೃದ್ಧಿ ಮರೀಚಿಕೆಯಾಗಿದೆ. ಈ ಬಗ್ಗೆ ಕಳೆದ ಅವಧಿಯಲ್ಲಿ ಶಾಸಕ ಹರೀಶ್ ಪೂಂಜ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು.
ಇದೀಗ ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಸಮೀಕ್ಷೆಗಳು ನಡೆದಿವೆ. ಇದು ಸಮೀಕ್ಷೆಗಳಿಗೆ ಸೀಮಿತವಾಗದೆ ರಸ್ತೆ ಅಭಿವೃದ್ಧಿ ಹೊಂದಬೇಕು. ಜತೆಗೆ ಇಲ್ಲಿನ ಅನೇಕ ಪರಿಸರಗಳಿಗೆ ನಾನಾ ರೀತಿಯ ಸವಲತ್ತುಗಳು ದೊರೆಯಬೇಕು ಎಂಬುದು ಸ್ಥಳೀಯರ ಆಶಯವಾಗಿದೆ.
ಶಾಸಕ ಹರೀಶ್ ಪೂಂಜ ವಿಶೇಷ ಮುತುವರ್ಜಿಯಲ್ಲಿ ಕಳೆದ ಅವಧಿಯಲ್ಲಿ ಎಳನೀರು ಪ್ರದೇಶದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆದಿದೆ. ಅಗತ್ಯ ಸ್ಥಳಗಳಲ್ಲಿ ಸೇತುವೆ ನಿರ್ಮಾಣ,ತಡೆಗೋಡೆ ರಚನೆ,ಕಿಂಡಿ ಅಣೆಕಟ್ಟು, ಕಿರು ಸೇತುವೆ, ಅಂಗನವಾಡಿ ಕೇಂದ್ರದ ಅಭಿವೃದ್ಧಿ ನಡೆದಿದೆ.
........................
-ಪ್ರಕಾಶ್ ಜೈನ್, ಅಧ್ಯಕ್ಷ, ಗ್ರಾ.ಪಂ.ಮಲವಂತಿಗೆ.