ಅಕ್ಕನಾಗಲಾಂಬಿಕೆಯವರ ವಚನ ಫಲಕಗಳ ಅನಾವರಣ- ಬಸವ ಸ್ಮರಣೋತ್ಸವ
ಕನ್ನಡಪ್ರಭ ವಾರ್ತೆ, ತರೀಕೆರೆನೀವುಗಳು ವಚನಗಳನ್ನು ಕಲಿತು ಮಕ್ಕಳಿಗೂ ಹೇಳಿಕೊಡಬೇಕೆಂದು ಸಾಣೆಹಳ್ಳಿ ತರಳಬಾಳು ಶಾಖಾ ಮಠ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ ಸಲಹೆ ಮಾಡಿದರು.
ಭಾನುವಾರ ತರೀಕೆರೆ ಶರಣರ ಬಳಗ, ಶರಣೆ ಅಕ್ಕನಾಗಲಾಂಬಿಕಾ ಸಮುದಾಯ ಸಮಿತಿಯಿಂದ ಪಟ್ಟಣದ ಅಕ್ಕನಾಗಲಾಂಬಿಕೆ ಸಮುದಾಯ ಭವನದಲ್ಲಿ ನಡೆದ ಅಕ್ಕನಾಗಲಾಂಬಿಕೆಯವರ ವಚನ ಫಲಕಗಳ ಅನಾವರಣ ಮತ್ತು ಬಸವ ಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಶರಣರು ವಚನಗಳ ರಕ್ಷಣೆಗೆ ಹೋರಾಟ ಮಾಡಿದರು. ಅಕ್ಕನಾಗಮ್ಮನವರು ಬಸವಣ್ಣನವರ ಬದುಕಿಗೆ ಬೆನ್ನೆಲುಬಾಗಿ ನಿಂತರು. ಬಾಲ್ಯದಿಂದಲೇ ಬಸವಣ್ಣನವರನ್ನು ಸಲುಹಿದ ಮಾಹಾತಾಯಿ ಅಕ್ಕನಾಗಮ್ಮ. ಅಕ್ಕನಾಗಮ್ಮ ವಚನ ಸಾಹಿತ್ಯವನ್ನು ಉಳಿಸುವುದಕ್ಕಾಗಿ ಕಲ್ಯಾಣದಿಂದ ಹೊರಟು ಇಲ್ಲಿ ಬಂದು ನೆಲಸಿದರು. ಇಲ್ಲಿಯೇ ಅನುಭವ ಮಂಟಪವನ್ನು ಸ್ಥಾಪಿಸಿದರು. ಈ ಸ್ಥಳ ಕರ್ನಾಟಕದಲ್ಲಿ ಪ್ರಖ್ಯಾತವಾಗಬೇಕು. ಜನರಿಂದ ಪ್ರೇರಿತವಾಗಬೇಕು ಎಂದು ಹೇಳಿದರು.ಈ ಸ್ಥಳ ಅಭಿವೃದ್ಧಿಯಾಗಬೇಕು. ಹಣಕಾಸಿನ ತೊಂದರೆ ಇದೆ, ಹನಿ ಹನಿಗೂಡಿದರೆ ಹಳ್ಳ, ಸಮುದಾಯ ಭವನದಲ್ಲಿ ಅತಿಥಿಗೃಹ, ಮೇಲ್ಮಹಡಿ ನಿರ್ಮಾಣ ವಾಗಬೇಕು. ಗ್ರಂಥಾಲಯ, ಪ್ರಾರ್ಥನಾ ಮಂದಿರ ನಿರ್ಮಾಣವಾಗಬೇಕು, ಎಲ್ಲರೂ ಅರ್ಥಿಕ ನೆರವು ನೀಡಿ ಸಹಕರಿಸಬೇಕು ಮತ್ತು ಅಭಿವೃದ್ಧಿ ಕಾರ್ಯವನ್ನು ನಿರ್ವಹಿಸಬೇಕು ಎಂದು ಹೇಳಿದರು.
ಜೂನ್ 15 ರಂದು ಸಾಣೆಹಳ್ಳಿಯಲ್ಲಿ ವಚನ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸ್ವಾಮಿಗಳಿಗೂ ವಚನ ಸ್ಪರ್ದೆ ಇದೆ, ಎಲ್ಲರೂ ವಚನ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.ಎನ್.ಎಸ್.ಜಯ್ಯಣ್ಣ ಮಾತನಾಡಿ ಅಕ್ಕನಾಗಮ್ಮನವರ ವಚನಗಳ ತಿರುಳು ಜನಸಾಮಾನ್ಯರಿಗೆ ಅರ್ಥವಾಗಬೇಕು, ವಚನಗಳ ಸಾರವನ್ನು ಪ್ರತಿಯೊಬ್ಬರು ಅರ್ಥೈಸಿಕೊಳ್ಳಬೇಕು. ವಚನಗಳಲ್ಲಿ ನುಡಿದಂತೆ ಶಣರು ನಡೆದಿದ್ದಾರೆ. ವಚನ ಗಳನ್ನು ಓದಬೇಕು, ಈ ಆಶಯದೊಂದಿಗೆ ಅಕ್ಕನಾಗಲಾಂಬಿಕೆ ಸಮುದಾಯ ಭವನದಲ್ಲಿ ಅಕ್ಕನಾಗಮ್ಮನವರ 13 ವಚನಗಳನ್ನು ಸುಂದರವಾಗಿ ಬರೆಸಿ ಅನಾವರಣ ಮಾಡಲಾಗಿದೆ ಎಂದು ಹೇಳಿದರು.
ಉಪನ್ಯಾಸಕ ಚೇತನಗೌಡ ಮಾತನಾಡಿ ಕಲ್ಯಾಣದ ಕ್ರಾಂತಿ ನಂತರ ಅಕ್ಕನಾಗಮ್ಮನವರು ವಚನಗಳನ್ನು ಬೆನ್ನ ಮೇಲೆ ಹೊತ್ತು ಪುಣ್ಯಕ್ಷೇತ್ರವಾದ ತರೀಕೆರೆಗೆ ತಂದು, ತಮ್ಮ 85ನೇ ವರ್ಷದಲ್ಲಿ ಎಣ್ಣೆಹೊಳೆ ಮಠದಲ್ಲಿ ಅನುಭವ ಮಂಟಪ ಸ್ಥಾಪಿಸಿ ತರೀಕೆರೆಯನ್ನು ಪುಣ್ಯಕ್ಷೇತ್ರವನ್ನಾಗಿಸಿದರು. ಗುರುಗಳ ದಯೆಯಿಂದ ಇಲ್ಲಿ ಅಕ್ಕನಾಗಲಾಂಬಿಕೆ ಸಮುದಾಯ ಭವನ ನಿರ್ಮಾಣವಾಯಿತು. ಅಲ್ಲಮಪ್ರಭು ಭಾರತದ ಅತ್ಯಂತ ಶ್ರೇಷ್ಠ ತತ್ವಜ್ಞಾನಿಗಳು, ಅಕ್ಕನಾಗಮ್ಮನವರು ತಮ್ಮ ಜೊತೆಯಲ್ಲಿ ತಂದ ಸಾವಿರಾರು ವಚನಗಳ ಕಟ್ಟಿನ ಹುಡುಕಾಟ ಮತ್ತು ಸಂಶೋಧನೆ ಅದಲ್ಲಿ ತರೀಕೆರೆ ಮತ್ತೊಂದು ಕಲ್ಯಾಣವಾಗುವ ಎಲ್ಲ ಸಾದ್ಯತೆಗಳಿವೆ. ಈ ನಿಟ್ಟಿನಲ್ಲಿ ಪರಮಪೂಜ್ಯರು ಬೆಳಕು ಚೆಲ್ಲಬೇಕು ಎಂದು ಕೋರಿದರು.ಶರಣ ಚಂದ್ರಶೇಖರ್ ನೇರಲಕೆರೆ ಸಮಾರಂಭದ ಅದ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಡಾ.ಜಿ.ವಿ. ಮಂಜುನಾಥ್ , ಭದ್ರಾವತಿ ರಾಷ್ಟ್ರೀಯ ಬಸವದಳ ಸುಮಾ ಸುನೀಲ್ ಉಪನ್ಯಾಸ ನೀಡಿದರು. ಅಕ್ಕನಾಗಲಾಂಬಿಕೆ ಕ್ಷೇತ್ರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಸವರಾಜಪ್ಪ, ಶರಣ ರಂಗಪ್ಪ, ಅಜ್ಜಂಪುರ ಎ.ಸಿ.ಚಂದ್ರಪ್ಪ, ಗಂಗಾಧರಪ್ಪ, ಚೆನ್ನಯ್ಯ, ಧರಣೇಶ್, ಪ್ರಸನ್ನ ಕುಮಾರ್, ಚಂದ್ರಶೇಖರ್, ಎ.ಸಿ.ನಾಗರಾಜ್, ಟಿ.ಆರ್.ಮಂಜುನಾಥ್, ಬಸವರಾಜ್, ಕವಿತ,ಸಮಿತಿ ಪದಾದಿಕಾರಿಗಳು, ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
-7ಕೆಟಿಆರ್.ಕೆ.8ಃ
ತರೀಕೆರೆಯಲ್ಲಿ ನಡೆದ ಅಕ್ಕನಾಗಲಾಂಬಿಕೆ ಅವರ ವಚನ ಫಲಕಗಳ ಅನಾವರಣ, ಬಸವ ಸ್ಮರಣೋತ್ಸವವನ್ನು ಸಾಣೆಹಳ್ಳಿ ತರಳಬಾಳು ಶಾಖಾ ಮಠ ಶ್ರೀ ಡಾ.ಪಂಡಿತಾರಾಧ್ಯಶಿವಾಚಾರ್ಯ ಸ್ವಾಮಿ ಉದ್ಘಾಟಿಸಿದರು. ಚಂದ್ರಶೇಖರ್ ನೆರಲಕೆರೆ, ಎ.ಸಿ.ಚಂದ್ರಪ್ಪ, ಅಕ್ಕನಾಗಲಾಂಬಿಕೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಸವರಾಜಪ್ಪ ಮತ್ತಿತರರು ಇದ್ದರು.