ಕನ್ನಡಪ್ರಭ ವಾರ್ತೆ ಮುದಗಲ್
ಸಮೀಪದ ಉಳಿಮೇಶ್ವರ ಗ್ರಾಮದಲ್ಲಿ ಸತತ ಎರಡು ದಿನಗಳಿಂದ ಜರುಗಿದ ಶ್ರೀ ಸತ್ಯಮ್ಮ ದೇವಿ ದೇವಸ್ಥಾನದ ಜೀರ್ಣೋದ್ಧಾರ, ಚಂಡಿಕಾ ಯಾಗ, ಹೋಮ ಹವನದ ನಂತರ ಶ್ರೀ ಸತ್ಯಮ್ಮ ದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಂತರ ಜರುಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಯಾವುದೇ ದೇವಸ್ಥಾನ ತನ್ನ ಧಾರ್ಮಿಕ ಅನುಸಾರವಾಗಿ ತನ್ನ ಪಾವಿತ್ರ್ಯತೆಯನ್ನು ಹೊಂದಿಕೊಂಡಿರುತ್ತದೆ. ನಾವು ಮಕ್ಕಳನ್ನು ಸೇರಿಸಿ ವಿದ್ಯಾದಾನ ಮಾಡಿದರೆ ಅದಕ್ಕೆ ಶಾಲೆ, ಜನತೆಯ ಆರೋಗ್ಯವನ್ನು ತಪಾಸಣೆ ಮಾಡುವ ಕೇಂದ್ರಕ್ಕೆ ಆಸ್ಪತ್ರೆ, ಭಕ್ತಿಯಿಂದ ಭಗವಂತನ ನಾಮಸ್ಮರಣೆ, ದೇವರನ್ನು ಪ್ರತಿಷ್ಠಾಪಿಸಿ ಭಕ್ತಿಯನ್ನು ಸಮರ್ಪಿಸಿದರೆ ದೇವಸ್ಥಾನ ಎನ್ನುವ ಪರಿಪಾಠ ಹಿಂದುಗಳದ್ದಾಗಿದೆ.ಅದರಂತೆ ನಾವು ಇಂದು ಉಳಿಮೇಶ್ವರ ಗ್ರಾಮದಲ್ಲಿ ಶ್ರೀ ಸತ್ಯಮ್ಮ ದೇವಿ ದೇವಸ್ಥಾನವು ಹಳ್ಳದ ದಂಡೆಯ ಮೇಲೆ ಇರುವುದರಿಂದ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಅಂತಹ ದೇವಸ್ಥಾನವನ್ನು ಬೋವಿ ಸಮಾಜ ಬಾಂಧವರು ತಮ್ಮ ಆರಾಧ್ಯ ದೇವಿ ಎಂದು ಇಡೀ ದೇವಸ್ಥಾನವನ್ನೇ ಜೀರ್ಣೋದ್ಧಾರಗೊಳಿಸಿ ಭವ್ಯವಾದ ಮೂರ್ತಿ ಪ್ರತಿಷ್ಠಾಪಿಸಿ ಪ್ರಾಣ ಪ್ರತಿಷ್ಠಾಪಿಸಿದೆ.
ವೇದಿಕೆ ಮೇಲೆ ಅಂಕಲಿಮಠದ ಬಸವರಾಜ ಸ್ವಾಮಿಗಳು, ಅಮರನಾಥೇಶ್ವರ ಮಠ ಪೀಠಾಧೀಶ್ವರ ಮಹಾಂತ ಸಹದೇವಾನಂದ ಗಿರಿ ಜಿ ಮಹಾರಾಜ, ಪಂಚದರ್ಶನಾಮ ಜುನಾ ಅಖಾಡ, ಹಿಮಾಲಯ ಪೀಠಾಧೀಶ್ವರ ಅನಂತ ವಿಭೂಷಣ ಮಹಾಮಂಡಲೇಶ್ವರ ಶಿವಾಂಗಿನಂದ ಗಿರಿ ಜಿ ಮಹಾರಾಜ, ಸಿದ್ದು ವೈ ಬಂಡಿ, ನಾಗಲಾಪೂರ ವಿಎಸ್ಎಸ್ಎನ್ ಅದ್ಯಕ್ಷ ಶರಣಬಸವ ವ್ಯಾಕರನಾಳ ಸೇರಿದಂತೆ ಸತ್ಯಮ್ಮದೇವಿ ಸಂಘ, ಆಡಳಿತ ಮಂಡಳಿ ಸದಸ್ಯರು, ಸೇರಿದಂತೆ ಮುಂತಾದವರಿದ್ದರು.