ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಫೆ. 18ರಂದು ಹಾವೇರಿಗೆ ಆಗಮಿಸಿ ಗಾಂಧಿ ಭವನ, ವಿಜ್ಞಾನ ಭವನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸೇರಿದಂತೆ ಅಂದಾಜು ₹ 411.60 ಕೋಟಿ ಮೊತ್ತದ 14 ಕಾಮಗಾರಿಗಳ ಉದ್ಘಾಟನೆ ಹಾಗೂ 11 ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ತಿಳಿಸಿದರು.
ಗೃಹ ಸಚಿವ ಜಿ.ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೋಳಿ, ಸಚಿವರಾದ ಎಚ್.ಕೆ.ಪಾಟೀಲ, ಜಮೀರ ಅಹ್ಮದ್, ಎಚ್.ಸಿ.ಮಹದೇವಪ್ಪ ಸೇರಿದಂತೆ ಹಲವು ಸಚಿವರು ಆಗಮಿಸಲಿದ್ದಾರೆ ಎಂದರು.
14 ಕಾಮಗಾರಿ ಲೋಕಾರ್ಪಣೆ: ₹3 ಕೋಟಿ ವೆಚ್ಚದ ಗಾಂಧಿ ಭವನ, ₹ 6.80 ಕೋಟಿ ಮೊತ್ತದ ಹಾವೇರಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ₹ 1875.25 ಲಕ್ಷ ವೆಚ್ಚದ ಹಾವೇರಿ ಜಿಲ್ಲಾ ಪೊಲೀಸ್ ಕಾರ್ಯಾಲಯ, ₹ 575.25 ಲಕ್ಷ ಮೊತ್ತದ ಆರ್ಮರಿ ಕಟ್ಟಡ, ಡಾಗ್ ಕೆನಾಲ್ ಮತ್ತು ಎಂ.ಟಿ.ಶೆಡ್ ಹಾಗೂ ₹ 1017.40 ಲಕ್ಷ ಮೊತ್ತದ ಮೂರು ಅಂತಸ್ತಿನ 36 ವಸತಿ ಗೃಹ, ₹ 11.27 ಕೋಟಿ ಮೊತ್ತದ ಹಾವೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಜಾನುವಾರು ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಜಾನುವಾರು ಶೆಡ್, ₹ 25 ಕೋಟಿ ಮೊತ್ತದ ಅಕ್ಕೂರ ಡಾ. ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ, ₹ 1.29 ಕೋಟಿ ಮೊತ್ತದ ಕೆಆರ್ಐಡಿಎಲ್ನ ಸ್ವಂತ ಕಚೇರಿ ಕಟ್ಟಡ, ₹ 23.75 ಕೋಟಿ ಮೊತ್ತದ ಕಳ್ಳಿಹಾಳ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಪಜಾ/ಪವ ಹಾಗೂ ₹1119.83 ಲಕ್ಷ ಮೊತ್ತದ ಗುತ್ತಲ ಆರ್.ಎಂ.ಎಸ್.ಎ.ಸರ್ಕಾರಿ ಉರ್ದು ಪ್ರೌಢಶಾಲೆ ಉದ್ಘಾಟನಾ ಸಮಾರಂಭ ಜರುಗಲಿದೆ.ಬ್ಯಾಡಗಿ ಕೃಷಿ ಉತ್ನನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ₹ 2.80 ಕೋಟಿ ಮೊತ್ತದ ರೈತ ಭವನ, ₹ 2 ಕೋಟಿ ಮೊತ್ತದ ಅರೇಮಲ್ಲಾಪೂರ ಕರ್ನಾಟಕ ಪಬ್ಲಿಕ್ ಸ್ಕೂಲ್ ಹಾಗೂ ₹ 75.42 ಲಕ್ಷ ಮೊತ್ತದ ಚೌಡಯ್ಯದಾನಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ₹ 5.54 ಕೋಟಿ ಮೊತ್ತದ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ, ಹಿರಿಯರಿಗೆ ಕನ್ನಡಕ ವಿತರಣೆ ಹಾಗೂ ಶಾಲಾ ಮಕ್ಕಳ ಕನ್ನಡ ವಿತರಣೆ ಕಾರ್ಯಕ್ರಮ ಉದ್ಘಾಟನೆ ಜರುಗಲಿದೆ.
10 ಕೋಟಿ ಮೊತ್ತದ ಬ್ಯಾಡಗಿ ತಾಲೂಕಾಡಳಿತ ಭವನ, ಬ್ಯಾಡಗಿ ತಾಲೂಕು ಎಕ್ಕುಂಬಿ-ಮೊಳಕಾಲ್ಮೂರ ರಾಜ್ಯ ಹೆದ್ದಾರಿಯಿಂದ ಬೀರೂರ-ಸಮ್ಮಸಗಿ ರಾಜ್ಯ ಹೆದ್ದಾರಿಗೆ ಕೋಡುವ ರಾಜ್ಯ ಹೆದ್ದಾರಿ ಸುಧಾರಣೆ ಮಾಡುವ ₹ 9.50 ಕೋಟಿ ಮೊತ್ತದ ಕಾಮಗಾರಿಗೆ ಹಾಗೂ ಬ್ಯಾಡಗಿ ತಾಲೂಕು ಎಕ್ಕುಂಬಿ-ಮೊಳಕಾಲ್ಮೂರ ರಾಜ್ಯ ಹೆದ್ದಾರಿಯಿಂದ ಬೀರೂರ-ಸಮ್ಮಸಗಿ ರಾಜ್ಯ ಹೆದ್ದಾರಿಗೆ ಕೋಡುವ ರಾಜ್ಯ ಹೆದ್ದಾರಿ ಆಯ್ದ ಭಾಗಗಳಲ್ಲಿ ಸುಧಾರಣೆ ಮಾಡುವ ₹ 4 ಕೋಟಿ ಮೊತ್ತದ ಕಾಮಗಾರಿ, ₹ 52 ಕೋಟಿ ಮೊತ್ತದ ರಟ್ಟಿಹಳ್ಳಿ ಪಟ್ಟಣಕ್ಕೆ ತುಂಗಭದ್ರಾ ನದಿಯಿಂದ ನೀರು ಸರಬರಾಜು ಕಾಮಗಾರಿ ಹಾಗೂ ₹ 50.13 ಲಕ್ಷ ಮೊತ್ತದ ಹಿರೇಕೆರೂರು ಪಶು ಆಸ್ಪತ್ರೆ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಹಾಗೂ ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಎಸ್ಎಫ್ಎನ್ ಗಾಜೀಗೌಡ್ರ, ನಗರಸಭೆ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಎಂ.ಎಂ.ಮೈದೂರ, ಪ್ರಸನ್ನಕುಮಾರ ಹಿರೇಮಠ ಇತರರು ಇದ್ದರು.