ಬಿಸಿಲಿನ ಪ್ರಖರತೆಯಲ್ಲಿಯೂ ಮತಗಟ್ಟೆಗೆ ತೆರಳಿದ ಚುನಾವಣೆ ಸಿಬ್ಬಂದಿ

KannadaprabhaNewsNetwork |  
Published : May 07, 2024, 01:03 AM IST
ಫೋಟೊ ಶೀರ್ಷಿಕೆ: 6ಆರ್‌ಎನ್‌ಆರ್2ರಾಣಿಬೆನ್ನೂರು ತಾಲೂಕಿನಲ್ಲಿ ಲೋಕಸಭಾ ಚುನಾವಣೆ ಕ್ಷೇತ್ರದ ಚುನಾವಣೆ ಕರ‍್ಯ ನಿರ್ವಹಿಸಲು ನಿಯೋಜನೆಗೊಂಡ ಸಿಬ್ಬಂದಿ ಮತಗಟ್ಟೆಗೆ ತೆರಳಲು ವಾಹನದತ್ತ ಸಾಗುತ್ತಿರುವುದು. ಫೋಟೊ ಶೀರ್ಷಿಕೆ: 6ಆರ್‌ಎನ್‌ಆರ್2ಎರಾಣಿಬೆನ್ನೂರು ತಾಲೂಕಿನಲ್ಲಿ ಲೋಕಸಭಾ ಚುನಾವಣೆ ಕ್ಷೇತ್ರದ ಚುನಾವಣೆ ಕರ‍್ಯ ನಿರ್ವಹಿಸಲು ನಿಯೋಜನೆಗೊಂಡ ಸಿಬ್ಬಂದಿ ಕರೆದುಕೊಂಡು ಹೋಗಲು ಸಜ್ಜಾಗಿ ನಿಂತಿರುವ ಬಸ್ಸುಗಳುಫೋಟೊ ಶೀರ್ಷಿಕೆ: 6ಆರ್‌ಎನ್‌ಆರ್2ಬಿರಾಣಿಬೆನ್ನೂರು ತಾಲೂಕಿನಲ್ಲಿ ಲೋಕಸಭಾ ಚುನಾವಣೆ ಕ್ಷೇತ್ರದ ಚುನಾವಣೆ ಕರ‍್ಯ ನಿರ್ವಹಿಸಲು ನಿಯೋಜನೆಗೊಂಡ ಸಿಬ್ಬಂದಿಗೆ ಭೋಜನದ ವ್ಯವಸ್ಥೆ ಮಾಡಿರುವುದು  | Kannada Prabha

ಸಾರಾಂಶ

ರಾಣಿಬೆನ್ನೂರು ರೋಟರಿ ಸ್ಕೂಲಿನಲ್ಲಿ ಸ್ಥಾಪಿಸಲಾಗಿರುವ ಮಸ್ಟರಿಂಗ್ ಕೇಂದ್ರದಲ್ಲಿ ಸೋಮವಾರ ಲೋಕಸಭೆ ಚುನಾವಣೆಗೆ ನಿಯೋಜಿಸಲಾಗಿರುವ ಸಿಬ್ಬಂದಿಗೆ ಮತಯಂತ್ರಗಳನ್ನು ನೀಡಿ ಮತಗಟ್ಟೆಗಳಿಗೆ ಕಳುಹಿಸಿಕೊಡಲಾಯಿತು.

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ನಗರದ ರೋಟರಿ ಸ್ಕೂಲಿನಲ್ಲಿ ಸ್ಥಾಪಿಸಲಾಗಿರುವ ಮಸ್ಟರಿಂಗ್ ಕೇಂದ್ರದಲ್ಲಿ ಸೋಮವಾರ ಲೋಕಸಭೆ ಚುನಾವಣೆಗೆ ನಿಯೋಜಿಸಲಾಗಿರುವ ಸಿಬ್ಬಂದಿಗೆ ಮತಯಂತ್ರಗಳನ್ನು ನೀಡಿ ಮತಗಟ್ಟೆಗಳಿಗೆ ಕಳುಹಿಸಿಕೊಡಲಾಯಿತು.

ಸ್ಥಳೀಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 55 ಸೂಕ್ಷ್ಮ, 2 ಅತಿ ಸೂಕ್ಷ್ಮ ಸೇರಿದಂತೆ ಒಟ್ಟು 266 ಮತಗಟ್ಟೆಗಳಿವೆ. ಆ ಪೈಕಿ 183 ಮತಗಟ್ಟೆಗಳಿಗೆ ಕ್ಯಾಮೆರಾ ಅಳವಡಿಸಲಾಗಿದೆ. 1 ಯುವ ಮತದಾರರ ಮತಗಟ್ಟೆ, 5 ಸಖಿ ಮತಗಟ್ಟೆಗಳು, 1 ವಿಶೇಷ ಚೇತನರ ಮತಗಟ್ಟೆ, 1 ಥೀಮ್ ಬೂತ್ (ಗಂಗಾಜಲ ತಾಂಡಾ) ಹಾಗೂ ಕರೂರಿನಲ್ಲಿ ಒಂದೇ ಕಡೆ 7 ಮತಗಟ್ಟೆಗಳಿರುವುದು ಸೇರಿದಂತೆ 8 ವಿಶೇಷ ಮತಗಟ್ಟೆಗಳಿವೆ. 266 ಮತಗಟ್ಟೆಗಳಲ್ಲಿ ಪ್ರತಿಯೊಂದರಲ್ಲಿಯೂ ತಲಾ ಒಬ್ಬರು ಪಿಆರ್‌ಒ, ಒಬ್ಬರು ಎಪಿಆರ್‌ಒ ಹಾಗೂ ಇಬ್ಬರು ಪಿಒ ಸೇರಿದಂತೆ ಒಟ್ಟು 1152 ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

2 ಡಿವೈಎಸ್‌ಪಿ, 5 ಸಿಪಿಐ, 8 ಪಿಎಸ್‌ಐ, 15 ಎಎಸ್‌ಐ, 65 ಎಚ್‌ಸಿ, 172 ಪೇದೆ, 174 ಹೋಮಗಾರ್ಡ್ಸ್, ಸೆಂಟ್ರಲ್ ಪ್ಯಾರಾಮಿಲಿಟರಿ ಫೋರ್ಸ್, ಒಂದು ಕೆಎಸ್‌ಆರ್‌ಪಿ ಹಾಗೂ 3 ಡಿಆರ್ ವ್ಯಾನ್ ಸೇರಿ 66 ಜನರನ್ನು ನಿಯೋಜನೆ ಮಾಡಲಾಗಿದೆ.

ಚುನಾವಣಾ ಸಿಬ್ಬಂದಿ ಹಾಗೂ ಸಾಮಗ್ರಿಗಳನ್ನು ಮತಗಟ್ಟೆಗೆ ತೆಗೆದುಕೊಂಡು ಹೋಗಿಬರುವ ಸಲುವಾಗಿ 37 ಬಸ್, 11 ಕ್ರುಷರ್ ನಿಯೋಜಿಸಲಾಗಿದೆ. 23 ಸೆಕ್ಟರ್ ಅಧಿಕಾರಿಗಳ ಸಂಚಾರಿ ದಳ ಎಲ್ಲ ಮತಗಟ್ಟೆಗಳಿಗೂ ಸಂಚರಿಸಿ ಚುನಾವಣೆ ಉಸ್ತುವಾರಿ ನೋಡಿಕೊಳ್ಳಲಿದೆ.

ಬೆಳಗ್ಗೆಯಿಂದಲೆ ಚುನಾವಣೆ ಕರ್ತವ್ಯಕ್ಕೆ ನೇಮಕಗೊಂಡಿರುವ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಸಿಬ್ಬಂದಿ ಮತಗಟ್ಟೆಗೆ ತೆರಳುವ ಸಲುವಾಗಿ ಮಸ್ಟರಿಂಗ್ ಕೇಂದ್ರದಲ್ಲಿ ಜಮೆಯಾಗಿದ್ದರು. ಪ್ರತಿಯೊಂದು ಮತಗಟ್ಟೆ ಅಧಿಕಾರಿಗಳು ಮತಯಂತ್ರ, ಅದರಲ್ಲಿ ಅಳವಡಿಸಬೇಕಾಗಿರುವ ಮತಪತ್ರ ಮತ್ತಿತ್ತರ ಸಾಮಗ್ರಿಗಳನ್ನು ಪಡೆದುಕೊಳ್ಳುವಲ್ಲಿ ಮಗ್ನರಾಗಿದ್ದರು. ಚುನಾವಣಾ ಕರ್ತವ್ಯಕ್ಕೆ ತೆರಳಲು ಆಗಮಿಸಿದ್ದ ಎಲ್ಲ ಸಿಬ್ಬಂದಿಗೆ ಕಂದಾಯ ಇಲಾಖೆ ವತಿಯಿಂದ ಊಟ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಸಹಾಯಕ ಚುನಾವಣಾಧಿಕಾರಿ ರೇಷ್ಮಾ ಕೌಸರ ಹಾಗೂ ತಹಸೀಲ್ದಾರ ಸುರೇಶಕುಮಾರ ಟಿ. ಎಲ್ಲ ಪ್ರಕ್ರಿಯೆಗಳ ಉಸ್ತುವಾರಿ ವಹಿಸಿದ್ದರು.

ಈ ಬಾರಿ ಬಿಸಿಲಿನ ಪ್ರಮಾಣ ಅಧಿಕವಿರುವ ಕಾರಣ ಪ್ರತಿಯೊಂದು ಮತಗಟ್ಟೆಗೂ 20 ಲೀ. ನೀರಿನ ಖಾಲಿ ಕ್ಯಾನ್ ಕೂಡ ಮತಗಟ್ಟೆ ಪರಿಕರಗಳ ಜತೆ ವಿತರಣೆ ಮಾಡಿದ್ದು ವಿಶೇಷವಾಗಿತ್ತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ