ಕನ್ನಡಪ್ರಭ ವಾರ್ತೆ ನಂಜನಗೂಡು
ಈಗಾಗಲೇ ರಥದ ಚಕ್ರ ಬದಲಿಸುವ ಕಾರ್ಯ, ರಥವನ್ನು ಜಾತ್ರೆಗೆ ಸನ್ನದ್ಧಗೊಳಿಸುವ ಕೆಲಸ ಭರದಿಂದ ಸಾಗಿದೆ. ರಾಜ್ಯದ ವಿವಿಧ ಮೂಲೆಗಳಿಂದ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ ಮೂಲಸೌಕರ್ಯ ಸೇರಿದಂತೆ ಸಿದ್ಧತೆ ನಡೆಸಲಾಗಿದ್ದು, ತಾತ್ಕಾಲಿಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ತಾತ್ಕಾಲಿಕ ಆರೋಗ್ಯ ತಪಾಸಣಾ ಕೇಂದ್ರ ತೆರೆಯಲಾಗಿದೆ. ದೇವಾಲಯದ ಆಸು ಪಾಸಿನಲ್ಲಿ ಮತ್ತು ಕಪಿಲಾ ನದಿಯ ದಡದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗಿದೆ.
ಇನ್ನು ಸಾರಿಗೆ ಸಂಸ್ಥೆ ವತಿಯಿಂದ ಹೆಚ್ಚುವರಿ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೆ ಹೆಚ್ಚುವರಿ ರೈಲುಗಳನ್ನು ಮತ್ತು ರೈಲುಗಳಲ್ಲಿ ಹೆಚ್ಚುವರಿ ಬೋಗಿಗಳನ್ನು ಅಳವಡಿಸುವಂತೆ ರೈಲ್ವೆ ಇಲಾಖೆಗೆ ಪತ್ರ ಬರೆಯಲಾಗಿದೆ.ಪೊಲೀಸರ ಕಣ್ಗಾವಲು
ವಿದ್ಯುತ್ ದೀಪ ಅಲಂಕಾರ : ಜಾತ್ರಾ ಮಹೋತ್ಸವ ಅಂಗವಾಗಿ ದೇವಾಲಯದ ಆವರಣದ ಸುತ್ತಲೂ ಕೂಡ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ. ಅಲ್ಲದೆ ನಗರದ ಪ್ರಮುಖ ಬೀದಿಗಳಲ್ಲಿ ಹಾಗೂ ಕಟ್ಟಡಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿದೆ.
ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದಾಗಿ ಜಿಲ್ಲಾಡಳಿತ ಎಚ್ಚರಿಕೆ ವಹಿಸಿದ್ದು ಜಾತ್ರಾ ಮಹೋತ್ಸವದಂದು ವಿವಿಧ ಸಂಘ ಸಂಸ್ಥೆಗಳವರು ನೀಡುವ ಪ್ರಸಾದ ವಿತರಣೆಯಲ್ಲಿ ಕಡ್ಡಾಯವಾಗಿ ಆರೋಗ್ಯ ಇಲಾಖೆ ವತಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಇಡೀ ದಕ್ಷಿಣ ಭಾರತದಲ್ಲೇ ಒಂದೇ ಬಾರಿಗೆ 5 ರಥಗಳನ್ನು ಏಕ ಕಾಲದಲ್ಲಿ ಎಳೆಯುವ ಏಕೈಕ ಕ್ಷೇತ್ರವೆಂದು ನಂಜನಗೂಡು ನಂಜುಂಡೇಶ್ವರನ ದೊಡ್ಡ ಜಾತ್ರೆಯು ಪ್ರಸಿದ್ದಿಯಾಗಿದೆ. ಮೊದಲು ಗಣಪತಿ, ಪಾರ್ವತಿ ಸಮೇತ ಶ್ರೀಕಂಠೇಶ್ವರ, ಪಾರ್ವತಿ, ಸುಬ್ರಮಣ್ಯಸ್ವಾಮಿ, ಚಂಡಿಕೇಶ್ವರ ಸ್ವಾಮಿಯ ರಥಗಳು ರಥ ಬೀದಿಯಲ್ಲಿ ಚಲಿಸಲಿವೆ.
ಅಲ್ಲದೆ ಪಾರ್ವತಿ ರಥ, ಗಣಪತಿ, ಸುಭ್ರಮಣ್ಯೇಶ್ವರ, ಚಂಡಿಕೇಶ್ವರ ರಥಗಳನ್ನು ಸಿದ್ಧಪಡಿಸಲಾಗುತ್ತಿದೆ. ದೇವಾಲಯದ ಸುತ್ತಲೂ ಕೂಡ ತಳಿರು ತೋರಣ ಕಟ್ಟುವ ಮೂಲಕ ಜಾತ್ರೆಗೆ ಸಿದ್ಧತೆ ನಡೆಸಲಾಗಿದೆ.
ರಥದಲ್ಲಿ ವಜ್ರ ವೈಡುರ್ಯ ಖಚಿತ ಶ್ರೀಕಂಠೇಶ್ವರಸ್ವಾಮಿಯವರ ಮೂರ್ತಿಯನ್ನು ಇರಿಸಿ ಹೂವಿನಿಂದ ವಿಶೇಷವಾಗಿ ಅಲಂಕರಿಸಲಾಗುತ್ತದೆ. ನಿಗದಿತ ಸಮಯದಲ್ಲಿ ಅರ್ಚಕ ವೃಂದ ಧಾರ್ಮಿಕ ವಿಧಿವಿಧಾನ, ವೇದ ಘೋಷ ಮೊಳಗಿಸಿದ ನಂತರ ಮಹಾಮಂಗಳಾರತಿ, ಇಡುಗಾಯಿ ಒಡೆದು ರಥೋತ್ಸವಕ್ಕೆ ಚಾಲನೆ ನೀಡಲಾಗುವುದು.
ನಂತರ ಏ. 11ರ ಶುಕ್ರವಾರ ಉತ್ತರ ನಕ್ಷತ್ರದ ದಿನ ಅವಭೃತ ತೀರ್ಥಸ್ನಾನ ಮಾಡಿದರೆ, ಮಾಡಿದ ಪಾಪಗಳೆಲ್ಲವೂ ನಶಿಸಿ ಹೋಗುತ್ತದೆ ಎಂಬ ನಂಬಿಕೆ ಇದ್ದು ಭಕ್ತರು ಪುಣ್ಯಸ್ನಾನದಲ್ಲಿ ಪಾಲ್ಗೊಳ್ಳುವರು. ಅಲ್ಲದೆ ಅದೇ ದಿನ ಸಂಜೆ 7 ಗಂಟೆಗೆ ಕಪಿಲಾ ನದಿಯ ತೇಲುವ ದೇವಾಲಯದಲ್ಲಿ ತೆಪ್ಪೋತ್ಸವ ನಡೆಯಲಿದ್ದು ಲಕ್ಷಾಂತರ ಭಕ್ತರು ಇದಕ್ಕೆ ಸಾಕ್ಷಿಯಾಗಲಿದ್ದಾರೆ.
ವಿವಿಧ ಧಾರ್ಮಿಕ ಕಾರ್ಯಕ್ರಮಗಳುಜಾತ್ರಾ ಮಹೋತ್ಸವ ಅಂಗವಾಗಿ ಈಗಾಗಲೇ ದೇವಾಲಯದಲ್ಲಿ ಏ. 2 ರಿಂದಲೇ ವಿವಿಧ ರೀತಿಯ ಧಾರ್ಮಿಕ ಕೈಂಕಾರ್ಯ ಆರಂಭಿಸಲಾಗಿದೆ. ಜಾತ್ರಾ ಮಹೋತ್ಸದಂದು ಬೆಳಗ್ಗೆಯಿಂದಲೇ ವಿವಿಧ ಪೂಜಾ ಕಾರ್ಯಗಳು ಜರುಗಲಿವೆ. ಅಂದು ಸಂಜೆ ಹಂಸಾರೋಹಣ ನಂತರ ನಟೇಶೋತ್ಸವ, ಏ. 10ರಂದು ಮೃಗಯಾತ್ರಾಪೂರ್ವಕ ಅಶ್ವಾರೋಹಣ ನಂತರ ಮಹಾಭೂತಾರೋಹಣೋತ್ಸವ, ದೇವಿ ಪ್ರಣಯ ಕಲಹ ಸಂಧಾನೋತ್ಸವ, ಏ. 11ರಂದು ಚೂಣೋತ್ಸವ, ಅವಭೃತ ತೀರ್ಥಸ್ನಾನ, ರಾತ್ರಿ 7 ಗಂಟೆಗೆ ತೆಪ್ಪೋತ್ಸವ ನಂತರ ನರಾಂಧೂಳಿಕಾರೋಹಣೋತ್ಸವ, ಧ್ವಜಾವರೋಹಣ, ಏ. 12 ರಂದು ಪೌರ್ಣಿಮೆ ಅಂಗವಾಗಿ ಪುಷ್ಪಯಾಗ ಪೂರ್ವಕ ಪಂಚೋಪರಾಪೂರ್ವಕ ಕೈಲಾಸಯಾನಾ ರೋಹಣೋತ್ಸವ, ಏ. 13 ರಂದು ಮಹಾಸಂಪ್ರೋಕ್ಷಣೆ ಪೂರ್ವಕ ನಂದಿವಾಹನೋತ್ಸವ, ಶಯನೋತ್ಸವದೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.
ಜಾತ್ರಾ ಮಹೋತ್ಸವನ್ನು ಹಾಗೂ ರಥೋತ್ಸವವನ್ನು ರಾಜ್ಯದ ವಿವಿಧ ಭಾಗಗಳ ಭಕ್ತಾಧಿಗಳು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.