ಕನ್ನಡಪ್ರಭ ವಾರ್ತೆ ಮಂಡ್ಯ
ತೂಬಿನಕೆರೆ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಳೆದು ಮೂರು ದಿನಗಳಿಂದ ಮೀನುಗಳು ಬೆರಳಣಿಕೆಯಷ್ಟು ಕರೆಯಲ್ಲಿ ಮರಣ ಹೊಂದಿರುವುದು ಕಂಡು ಬಂದಿದೆ, ನಂತರ ಬುಧವಾರದಿಂದೀಚೆಗೆ ನೂರಾರು ಮೀನುಗಳು ಕೆರೆಯ ದಡದಲ್ಲಿ ಸತ್ತು ಬಿದ್ದಿವೆ, ಸತ್ತಿರುವ ಮೀನುಗಳಲ್ಲಿ ಮುಕ್ಕಾಲು ಕೆಜಿ ತೂಗುವ ಹಾಗೂ ಸಣ್ಣಸಣ್ಣ ಮೀನುಗಳ ಕಳೆಬರವೇ ಹೆಚ್ಚಿದೆ.
ಗ್ರಾಮಸ್ಥರು ಕರೆಯ ದಡದಲ್ಲಿ ಮೀನುಗಳು ಸತ್ತಿರುವುದರಿಂದ ಗಾಬರಿಗೊಂಡು ಮೀನು ಹಿಡಿಯಲು ಅಲ್ಲಿಗೆ ಬರುತ್ತಿದ್ದ ಕೆಲವು ಯವಕರಿಗೆ ಮೀನುಗಳು ಸತ್ತಿರುವ ವಿಷಯ ತಿಳಿಸಿ ಎಚ್ಚರಿಸಿದ್ದಾರೆ, ನಂತರ ಕೆರೆಯ ದಡದ ಬಳಿ ಸುತ್ತಲೂ ಮೀನುಗಳು ಸತ್ತಿರುವ ದೃಶ್ಯ ಕಂಡು ಬಂದಿದೆ. ಮೀನುಗಳು ಇಷ್ಟೊಂದು ಸಂಖ್ಯೆಯಲ್ಲಿ ಸಾವನ್ನಪ್ಪಲು ಕಾಣವೇನೆಂಬುದನ್ನು ತಿಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ತೂಬಿನಕೆರೆ ಗ್ರಾಮ ಪಂಚಾಯ್ತಿಯ ಪಿಡಿಒ ಸ್ವಾಮಿ ಅವರು, ಕೆರೆಯ ಪರಿಶೀಲನೆ ನಡೆಸಿದರು. ಜೊತೆಗೆ ಇಲ್ಲಿ ವಿಷಯುಕ್ತ ಪದಾರ್ಥಗಳು ಸೇರುವ ತ್ಯಾಜ್ಯವೇ ಇಲ್ಲ. ಆದರೂ ಇಷ್ಟೊಂದು ಮೀನುಗಳು ಮರಣ ಹೊಂದಿರುವುದು ಆಶ್ಚರ್ಯಕರವಾಗಿದೆ, ಈ ಬಗ್ಗೆ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಮೋಡ ಮುಸುಕಿದ ವಾತಾವರಣದಿಂದ ನೀರಿನಲ್ಲಿ ಆಮ್ಲಜನಕ ಕಡಿಮೆಯಾಗಿ ಕೆಲವು ಮೀನುಗಳು ಮರಣ ಹೊಂದಿರಬಹುದು ಎಂದಿದ್ದಾರೆ, ಹಾಗಾಗಿ ಮತ್ತಷ್ಟು ಮಾಹಿತಿ ಸಿಗುವವರೆಗೂ ಇಲ್ಲಿ ಮೀನುಗಳನ್ನು ಹಿಡಿಯಬಾರದು ಎಂದು ತಿಳಿಸಿದರು.
ಕಿಕ್ಕೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆ ಕಾರ್ಯಾಚರಣೆಗೆ ಮುಂದಾಗಿದ್ದಾರೆ.ಗಸ್ತು ಹೆಚ್ಚಿಸಲಾಗಿದೆ. ಅಪರಿಚಿತ ವ್ಯಕ್ತಿಗಳು ಗ್ರಾಮಗಳಲ್ಲಿ ಸುಳಿದಾಡುವುದು ಕಂಡುಬಂದಲ್ಲಿ ತಕ್ಷಣವೇ ಮಾಹಿತಿ ನೀಡಿದರೆ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಸಹಾಯವಾಗಲಿದೆ ಎಂದು ಇನ್ಸ್ಪೆಕ್ಟರ್ ರೇವತಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.