ಸರ್ಕಾರಿ ಶಾಲೆಗಳ ಉಳಿಸಿ, ಬೆಳೆಸಿ ಅಭಿಯಾನದಡಿ ಶಾಲೆಗಳಿಗೆ ಬಣ್ಣ ಸುಣ್ಣ ಹಚ್ಚಿ, ಹೊಸ ಬೆಳಕು ನೀಡಿದ್ದಾರೆ: ನೀಲಮ್ಮ ಮಲ್ಲೆ ಕನ್ನಡಪ್ರಭ ವಾರ್ತೆ ಯಾದಗಿರಿ
ಸರಕಾರಿ ಶಾಲೆಗಳ ಉಳಿವಿಗಾಗಿ ಬೆಂಗಳೂರಿನ ಸಹೃದಯಿ ಕನ್ನಡಿಗರ ತಂಡದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಖ್ಯಾತ ಗಜಲ್ ಕವಯಿತ್ರಿ ನೀಲಮ್ಮ ಬಿ. ಮಲ್ಲೆ ಹೇಳಿದರು. "ಸರ್ಕಾರಿ ಶಾಲೆಗಳ ಉಳಿಸಿ, ಬೆಳೆಸಿ " ಅಭಿಯಾನ ಅಂಗವಾಗಿ, ಸಹೃದಯಿ ಕನ್ನಡಿಗರ ಬೆಂಗಳೂರು ತಂಡ ಲಕ್ಷ್ಮೀ ನಗರ ಸರಕಾರಿ ಶಾಲೆಗೆ ಭೇಟಿ ನೀಡಿ ಶಾಲೆಗೆ ಸುಣ್ಣ ಬಣ್ಣ ಮಾಡಿ, ಬಳಿಕ ಮಕ್ಕಳಿಗೆ ಓದುವ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.ಸಹೋದರರು ನನ್ನ ಜಿಲ್ಲೆಗಳಲ್ಲಿ ಅನೇಕ ಸರಕಾರಿ ಶಾಲೆಗಳಿಗೆ ಬಣ್ಣ ಸುಣ್ಣ ಹಚ್ಚಿ, ಹೊಸ ಬೆಳಕು ತಂದಿರುವ ದೃಶ್ಯಗಳನ್ನು ಹಲವು ಮಾಧ್ಯಮಗಳಲ್ಲಿ ನೋಡಿದ್ದೇನೆ. ಹಾಗಾಗಿ ನಾನು ಸಹಿತ ಜಿಲ್ಲೆಯಲ್ಲಿ ಸಹೋದರಿ ಸುವರ್ಣ ರಾಥೋಡ್ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುವ ಪಟ್ಟಣದ ಲಕ್ಷ್ಮೀ ನಗರ ಸರಕಾರಿ ಶಾಲೆಗೆ ಸೌಲಭ್ಯವಿಲ್ಲದೆ ಬಣ್ಣ ಸುಣ್ಣವಿಲ್ಲದೆ ಬಿಕೋ ಎನ್ನುತ್ತಿತ್ತು. ಈ ನಿಟ್ಟಿನಲ್ಲಿ ಸಹೃದಯಿ ಕನ್ನಡಿಗರು ಬೆಂಗಳೂರು ತಂಡಕ್ಕೆ ಗಮನಕ್ಕೆ ತಂದ ಕೂಡಲೇ ಅವರ ಸ್ಪಂದಿಸಿ ಸರ್ಕಾರಿ ಶಾಲೆ ಉಳಿವಿಗಾಗಿ, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಮಾಡುತ್ತಿರುವ ಕಾರ್ಯ ಅಭಿನಂದನೀಯ ಎಂದು ತಿಳಿಸಿದರು.ಸಹೃದಯಿ ಕನ್ನಡಿಗರು ತಂಡದ ನಾಯಕ ಭಾಸ್ಕರ್ ಕೆ. ಮಾತನಾಡಿ, ಸರ್ವರು ಸಾರ್ವಜನಿಕ ಶಿಕ್ಷಣವನ್ನು ಪಡೆಯಬೇಕು. ಕನ್ನಡ ಶಾಲೆ ಮರೆಮಾಚಿ ಹೋಗುತ್ತಿವೆ. ಆ ಸರಕಾರಿ ಶಾಲೆಯಲ್ಲಿ ಶ್ರಮಿಕರ ಮಕ್ಕಳು, ಮಧ್ಯಮ ವರ್ಗದ ಮಕ್ಕಳು, ಕೃಷಿಕರ ಮಕ್ಕಳು ಓದುತ್ತಿದ್ದರು. ನಮ್ಮ ಸಹೃದಯಿ ಕನ್ನಡಿಗರು ತಂಡದಿಂದ ಸರ್ಕಾರಿ ಶಾಲೆಗಳ ಉಳಿವಿಗಾಗಿ ಸರ್ಕಾರಿ ಶಾಲೆ, ಉಳಿಸಿ ಅಭಿಯಾನ ಮತ್ತು ಸಂಕಲ್ಪ ಸೇವೆ ಸಂತೃಪ್ತಿ ಪಡಿಸುವ ನಿಟ್ಟಿನಲ್ಲಿ ಸೇವೆ ಮಾಡುತ್ತಿದ್ದೇವೆ ಎಂದರು.ಈ ಸಂದರ್ಭದಲ್ಲಿ ಸಹೃದಯಿ ಕನ್ನಡಿಗರು ತಂಡದ ಮೆಟ್ರೋ ರೈಲ್ವೆ ವಿಭಾಗ ಅಭಿಯಂತರಾದ ಹರೀಶ ಜಿ., ರಘುಕುಮಾರ, ರಾಜೇಶ ಎಂ., ಸರ್ಕಾರಿ ಶಾಲೆಯ ಮುಖ್ಯ ಗುರುಗಳಾದ ಸುವರ್ಣ ರಾಥೋಡ್, ಬಸವರಾಜ್ ಮಲ್ಲೆ, ರಮೇಶ ಮತ್ತು ಹಳೆ ವಿದ್ಯಾರ್ಥಿಗಳು ಹಾಗೂ ಯುವಕರು ಪಾಲ್ಗೊಂಡಿದ್ದರು.
ಮೂಲಭೂತ ಸೌಕರ್ಯಗಳು ಸಿಗದ, ಕೂಲಿ ಕಾರ್ಮಿಕರು ಓದುತ್ತಿರುವ ಸರ್ಕಾರಿ ಶಾಲೆಗಳಿಗೆ ನಮ್ಮ ತಂಡದಿಂದ ಸುಣ್ಣ ಬಣ್ಣ ಮಾಡಿಕೊಡುತ್ತೇವೆ. ಸರ್ಕಾರ ತನ್ನಷ್ಟಕ್ಕೆ ತಾನು ಮಾಡುತ್ತಾ ಹೋಗುತ್ತಿದೆ. ಆದರೂ ಕೆಲವೊಂದು ಕಡೆ ಮಕ್ಕಳಿಗೆ ಶಿಕ್ಷಣದ ತೊಂದರೆ ಆಗಬಾರದು ಎಂದು ನಾವೆಲ್ಲ ಸರ್ಕಾರಿ ನೌಕರರು ಸೇರಿ ಸಮಾಜ ಸೇವೆ ಮಾಡಲು ಪ್ರಾರಂಭಿಸಿದ್ದೇವೆ.ಚರಣ್ ಕುಮಾರ್, ವಿಭಾಗ ಅಭಿಯಂತರರು, ಮೆಟ್ರೋ ರೈಲ್ವೆ, ಬೆಂಗಳೂರು.
ನಮ್ಮ ತಂಡದಿಂದ ಉತ್ತರ ಕರ್ನಾಟಕಕ್ಕೂ ಸೇವೆಸಹೃದಯಿ ಕನ್ನಡಿಗರು ತಂಡದಿಂದ ದಕ್ಷಿಣ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲದೇ, ಉತ್ತರ ಕರ್ನಾಟಕಕ್ಕೂ ಸಹಿತ ಸೇವೆಯನ್ನು ಸಲ್ಲಿಸುತ್ತೇವೆ. ದಕ್ಷಿಣ ಕರ್ನಾಟಕದಲ್ಲಿ ಒಂದು ಸರ್ಕಾರಿ ಶಾಲೆಯಲ್ಲಿ 18 ರಿಂದ 20 ಮಕ್ಕಳಿದ್ದರೆ , ಉತ್ತರ ಕರ್ನಾಟಕ ಸರ್ಕಾರಿ ಶಾಲೆಯಲ್ಲಿ 50 ರಿಂದ 60 ಮಕ್ಕಳಿರುತ್ತಾರೆ. ಆದರೆ ಮೂಲಭೂತ ಸೌಕರ್ಯಗಳಿಲ್ಲದೆ ವಂಚಿತರಾದ ವಿದ್ಯಾರ್ಥಿಗಳು, ಶ್ರಮಿಕ ಕೂಲಿ ಕಾರ್ಮಿಕ ಮಕ್ಕಳಿಗೆ ಕಡ್ಡಾಯ ಶಿಕ್ಷಣ ದೊರೆಯಬೇಕು ಎಂದು ಮೆಟ್ರೋ ರೈಲ್ವೆ ಬೆಂಗಳೂರು ಕಿರಿಯ ಅಭಿಯಂತರರಾದ ಶಿವಪ್ರಕಾಶ್ ಆರ್. ಹೇಳಿದರು.