ಉಲುಕ್ ಉಪ್ಪಿನಂಗಡಿ
ಧಾರ್ಮಿಕ, ವ್ಯಾವಹಾರಿಕ ಕೇಂದ್ರ ಉಪ್ಪಿನಂಗಡಿಯಲ್ಲಿ ನಾಲ್ಕು ದಶಕಗಳಿಂದ ಕಾಡುತ್ತಿದ್ದ ಚರಂಡಿ ಸಮಸ್ಯೆಗೆ ಸಹಸ್ರಾರು ಚರ್ಚೆಗಳು ನಡೆದರೂ ಪರಿಹಾರ ಸಿಕ್ಕಿರಲಿಲ್ಲ. ಇದೀಗ ಅಚ್ಚರಿ ಎಂಬಂತೆ ಪುತ್ತೂರು ಸಹಾಯಕ ಕಮಿಷನರ್ ನಿರ್ದೇಶನ, ಅದಕ್ಕೆ ಕೆಎನ್ಆರ್ ಸಂಸ್ಥೆಯ ಅಧಿಕಾರಿಗಳಿಂದ ವ್ಯಕ್ತವಾದ ಸ್ಪಂದನ ದೀರ್ಘ ಕಾಲದ ಸಮಸ್ಯೆ ಸುಲಭವಾಗಿ ಬಗೆಹರಿಯುವಂತೆ ಮಾಡಿದೆ.
ಚರಂಡಿ ಇತಿಹಾಸ:ಉಪ್ಪಿನಂಗಡಿ ಪೇಟೆಯ ಪಾಲಿಗೆ ರಾಜ ಕಾಲುವೆಗೆ ಹಲವು ಚರಂಡಿಗಳ ತ್ಯಾಜ್ಯ ಬಂದು ಸೇರುತ್ತದೆ. ಚರಂಡಿಯಲ್ಲಿ ಹರಿದು ಬರುವ ಕೊಳಚೆ ನೀರು ಉಪ್ಪಿನಂಗಡಿಯ ಸೂರಪ್ಪ ಕಾಂಪೌಂಡ್, ಶೆಣೈ ಆಸ್ಪತ್ರೆ, ಮಾದರಿ ಶಾಲೆಯಾಗಿ ನಟ್ಟಿಬೈಲು ಪ್ರದೇಶವನ್ನು ಕ್ರಮಿಸಿ ಕುಮಾರಧಾರಾ ನದಿ ಸೇರುತ್ತದೆ. ಹೀಗೆ ಕ್ರಮಿಸುವಾಗ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಸಾಧಿಸುವ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆಯಲ್ಲಿ ಹಾಕಲಾದ ಮೋರಿ ಬಳಸಿ ಸಾಗುವುದಾಗಿತ್ತು. ಮೋರಿಯ ಗಾತ್ರ ಸಣ್ಣದೋ, ಚರಂಡಿಯ ಹರಿಯುವಿಕೆಯ ಹಾದಿಯ ಹೂಳು ತುಂಬಿರುವುದೋ ಕಾರಣದಿಂದ ತ್ಯಾಜ್ಯ ನೀರು ಸರಾಗವಾಗಿ ಹರಿಯದೆ ವರ್ಷದ ಎಲ್ಲಾ ದಿನಗಳಲ್ಲಿಯೂ ಸಮಸ್ಯೆ ಕಾಡುತ್ತಿತ್ತು.
ಸಮಸ್ಯೆ ಬಗೆಹರಿಯದೆ ಹೋದಾಗ ಜನತೆ ಸಮಸ್ಯೆಯೊಂದಿಗೆ ಬದುಕಲು ಕಲಿತರು. ಶುದ್ದ ಪರಿಸರದ ಹಕ್ಕು ಕೇಳುವ ಬದಲು ಶುದ್ಧ ಪರಿಸರವನ್ನು ಅರಸಿ ಬೇರೆಡೆಗೆ ವಲಸೆ ಹೋಗಲು ಮುಂದಾದರು. ಅಂತಿಮವಾಗಿ ಈ ಸಮಸ್ಯೆಯನ್ನೇ ಮರೆತಿದ್ದರು. ಸಮಸ್ಯೆ ಪರಿಹಾರ ಆದದ್ದು ಹೀಗೆ...: ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕಾರಣಕ್ಕೆ ಉಪ್ಪಿನಂಗಡಿಯಲ್ಲಿ ಎತ್ತರಿಸಿದ ರಸ್ತೆಯ ಕಾಮಗಾರಿಯ ಕಾರಣದಿಂದ ಸುಗಮ ವಾಹನ ಸಂಚಾರಕ್ಕೆ ತಡೆಯುಂಟಾಗಿ ಜನ ಸಮಸ್ಯೆಗೆ ಸಿಲುಕಿತು. ಆಗ ಪತ್ರಿಕಾ ವರದಿಯಿಂದ ಎಚ್ಚೆತ್ತು ಮೇ ೨ ರಂದು ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹಾಪಾತ್ರ ಸ್ಥಳಕ್ಕೆ ಆಗಮಿಸಿದ್ದರು.
ಈ ರಸ್ತೆಯ ಕಾಮಗಾರಿ ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಕಾಮಗಾರಿ ನಿರತ ಅಧಿಕಾರಿಗಳು ತಿಳಿಸಿದರಾದರೂ , ಸಾರ್ವಜನಿಕರ ಹಿತಕ್ಕಾಗಿ ದೀರ್ಘ ಕಾಲದ ಸಮಸ್ಯೆಯ ನಿವಾರಣೆಗಾಗಿ ಸಾಮಾಜಿಕ ಬದ್ದತೆ ತೋರಿ ಕಾಮಗಾರಿಯನ್ನು ನಡೆಸಲು ನಿರ್ದೇಶನ ನೀಡಿದರು. ಕಾಮಗಾರಿಗೆ 15 ದಿನಗಳ ಗಡುವನ್ನೂ ವಿಧಿಸಿ , ಮೇಲ್ವಿಚಾರಣೆಗೆ ಸ್ಥಳೀಯ ಕಂದಾಯ ನಿರೀಕ್ಷಕರನ್ನು ಹಾಗೂ ಪಂಚಾಯತ್ ಪಿಡಿಒ ಅವರನ್ನು ನಿಯೋಜಿಸಿದರು.
......................ಸುಧೀರ್ಘ ಕಾಲ ಚರಂಡಿ ಸಮಸ್ಯೆ ಸಾರ್ವಜನಿಕರನ್ನು ಕಾಡುತ್ತಿರುವ ವಿಚಾರ ತಿಳಿದು ಸಮಸ್ಯೆಯ ಗಂಭೀರತೆ ಅರ್ಥವಾಗಿತ್ತು. ಅದಕ್ಕಾಗಿ ಕೆಎನ್ಆರ್ ಸಂಸ್ಥೆಯ ಮತ್ತು ಹೆದ್ದಾರಿ ಇಲಾಖೆಯ ಅಧಿಕಾರಿಗಳ ಸಹಕಾರ ಪಡೆದು ಬೃಹತ್ ಗಾತ್ರದ ಮೋರಿ ಅಳವಡಿಸಲು ಸೂಚಿಸಿದ್ದೆ. ನಮ್ಮ ಕರ್ತವ್ಯವೇ ಸಾರ್ವಜನಿಕರ ಸೇವೆ ಆಗಿರುವುದರಿಂದ ಇದನ್ನು ಮಾಡಲು ಮುಂದಾಗಿರುವೆನು ವಿನಃ ಇದರಲ್ಲಿ ಹೆಚ್ಚುಗಾರಿಕೆ ಇಲ್ಲ.
..................
-ನಂದಕುಮಾರ್, ಕೆಎನ್ಆರ್ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ............................
-ವಿದ್ಯಾಲಕ್ಷ್ಮೀ ಪ್ರಭು, ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ.
...............ಹಲವಾರು ವರ್ಷಗಳಿಂದ ದುರ್ನಾತ ಪ್ರಸಹರಿಸುತ್ತಿದ್ದ ಚರಂಡಿಯ ಸಮಸ್ಯೆ ಪುತ್ತೂರು ಸಹಾಯಕ ಕಮಿಷನರ್ ಅವರಿಂದ ಬಗೆಹರಿಯುತ್ತಿದೆ ಎಂದು ತಿಳಿಯಿತು. ಇನ್ನಾದರೂ ದುರ್ನಾತ ಮುಕ್ತ ಪರಿಸರ ನಮ್ಮದಾಗಲಿ.
-ವಿನೋದ್ ಕುಮಾರ್ ಚಂದ್ರಮಾ, ಜವಳಿ ಉದ್ಯಮಿ.