ವಿಶೇಷ ವರದಿ
ಇಲ್ಲಿನ ನೇತ್ರಾವತಿ ನದಿಗೆ ಅಣೆಕಟ್ಟು ಕಟ್ಟಿ ಹಿನ್ನೀರು ನಿಲ್ಲಿಸಲಾದ ಬಳಿಕ ಗ್ರಾಮದ ಎಲ್ಲಾ ದಿಕ್ಕುಗಳಿಂದಲೂ ತ್ಯಾಜ್ಯ ನೀರು ನದಿಯ ಒಡಲನ್ನು ಸೇರುತ್ತಿರುವ ನಡುವೆ ಉಪ್ಪಿನಂಗಡಿಯಲ್ಲಿ ಅನಾರೋಗ್ಯಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಕಳವಳ ಮೂಡಿಸಿದೆ.
ಒಂದೆಡೆ ನೇತ್ರಾವತಿ ಹಿನ್ನೀರು ನಿಂತಂತಿದ್ದು, ವಸತಿ ಸಮುಚ್ಚಯಗಳಿಂದ ತ್ಯಾಜ್ಯ ನೀರು ಹರಿದು ನದಿ ಸೇರುತ್ತಿರುವ ದೃಶ್ಯಾವಳಿಗಳು ಕಳವಳ ಮೂಡಿಸುತ್ತಿದ್ದರೆ, ಇನ್ನೊಂದೆಡೆ ಚರಂಡಿಗಳಲ್ಲಿ ಅಲ್ಲಲ್ಲಿ ಸಂಗ್ರಹಗೊಂಡಿರುವ ತ್ಯಾಜ್ಯ ನೀರು ಸೊಳ್ಳೆ ಉತ್ಪಾದನಾ ಕೇಂದ್ರಗಳಾಗುತ್ತಿವೆ. ಹೆದ್ದಾರಿ ಅಗಲೀಕರಣದ ಕಾರಣಕ್ಕೆ ರಾಜಕಾಲುವೆಯಂತ ಚರಂಡಿ ನೀರು ಸರಾಗವಾಗಿ ಹರಿಯಲಾಗದೆ ಹೆದ್ದಾರಿ ಪಾರ್ಶ್ವದಲ್ಲಿ ದಾಸ್ತಾನುಗೊಂಡಿರುವುದು ಉಪ್ಪಿನಂಗಡಿಯನ್ನು ಅಕ್ಷರಷ ಹೈರಾಣವಾಗಿಸಿದೆ.ಜನತೆಗೆ ಡೆಂಘೀ ಆತಂಕ:
-ಡಾ.ಕೃಷ್ಣಾನಂದ, ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ........................ಸರ್ಕಾರಿ ಅಥವ ಖಾಸಗಿ ಆಸ್ಪತ್ರೆಯಲ್ಲಿ ಡೆಂಘೀ ಪ್ರಕರಣಗಳು ಕಂಡು ಬಂದರೆ ತಕ್ಷಣ ಇಲಾಖೆಗೆ ವರದಿ ಸಲ್ಲಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪರಿಸರದಲ್ಲಿ ಡೆಂಘೀ ಪ್ರಕರಣ ಹೆಚ್ಚಿದೆ ಎಂದರೆ ಒಪ್ಪಲಾಗದು. ಯಾವುದೇ ಡೆಂಘೀ ಪ್ರಕರಣ ಹೊಸದಾಗಿ ದಾಖಲಾಗಿಲ್ಲ.
-ಡಾ.ದೀಪಕ್ ರೈ, ಪುತ್ತೂರು ತಾಲೂಕು ಆರೋಗ್ಯಾಧಿಕಾರಿ. ...................ಹರಿದು ಹೋಗುವ ಚರಂಡಿಯ ತ್ಯಾಜ್ಯ ನೀರು ನದಿಯಲ್ಲಿ ನಿಂತ ನೀರಿನೊಂದಿಗೆ ಬೆರೆತು ದುರ್ನಾತಭರಿತವಾಗಿದೆ. ಎಲ್ಲೆಲ್ಲಾ ಚರಂಡಿ ನೀರು ಸರಾಗವಾಗಿ ಹರಿಯದೇ ಇದೆಯೋ ಅಲ್ಲೆಲ್ಲಾ ಸೊಳ್ಳೆ ಉತ್ಪಾದನೆಯಾಗಿ ಕೆಟ್ಟ ವಾಸನೆ ಪ್ರಸಹರಿಸುತ್ತಿದೆ. ಇದೆಲ್ಲದರ ಫಲವಾಗಿ ಪರಿಸರದಲ್ಲಿ ರೋಗ ಪಿಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.-ಕೈಲಾರ್ ರಾಜಗೋಪಾಲ ಭಟ್, ನೆಲ ಜಲ ಸಂರಕ್ಷಣ ಸಮಿತಿ ಅಧ್ಯಕ್ಷ.