ಕನ್ನಡಪ್ರಭ ವಾರ್ತೆ ಆಳಂದ
ಪ್ರಸಕ್ತ ಬೇಸಿಗೆ ಆರಂಭದಲ್ಲೇ ಸಿಎಂ ಸಲಹೆಗಾರ, ಹಿರಿಯ ಶಾಸಕ ಬಿ.ಆರ್. ಪಾಟೀಲ ಅವರ ಸ್ವಗ್ರಾಮ ಸರಸಂಬಾದಲ್ಲಿ ಕುಡಿವ ನೀರಿನ ಭೀಕರ ಸಮಸ್ಯೆ ತೆಲೆದೂರಿದ ಪರಿಣಾಮ ತಾಲೂಕು ಆಡಳಿತವು ಖಾಸಗಿಯವಾಗಿ ನೀರು ಖರೀದಿಸಿ ಪೂರೈಕೆಗೆ ಕ್ರಮವಹಿಸಿದೆ.ಇದಕ್ಕೆ ಹೊರತಾಗಿಯೂ ಗ್ರಾಮಗಳಲ್ಲಿ ರೈತರ ಗದ್ದೆಗಳಿಂದ ಲಭ್ಯವಿರುವ ನೀರು ಖರೀದಿಸಿ ಸದ್ಯ ಏಳು ಗ್ರಾಮಗಳಲ್ಲಿ ಪೂರೈಕೆಗೆ ನಡೆದಿದೆ. ಪರಿಸ್ಥಿತಿ ಮುಂದೆ ಮತ್ತಷ್ಟು ಬಿಗಡಾಯಿಸಲಿದೆ.
೨೦೨೩-೨೪ನೇ ಸಾಲಿನ ಹಂಗಾಮಿನ ಹಸಿಬರದ ನಡುವೆಯೂ ತಾಲೂಕಿನ ಹಲವಡೆ ಬೇಸಿಗೆ ಆರಂಭವಾಗುವ ಮುನ್ನವೇ ಕುಡಿವ ನೀರಿನ ಸಮಸ್ಯೆ ಕಾಡಲಾರಂಭಿಸಿದೆ.ದಿನಕಳೆದಂತೆ ಜೋರಾಗುತ್ತಿರುವ ನೆತ್ತಿ ಸುಡುವ ಬಿಸಲಿಗೆ ಈಗಲೇ ಜನ ಬಸವಳಿಯತೊಡಗಿದ್ದು, ಮಳೆಗಾಲದ ಮಳೆ ಈ ಬಾರಿ ಕೊರತೆ ಕಂಡಿದೆ, ಹೀಗಾಗಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗಾಗಿ ಹಿಂದೆಂದೂ ಕಂಡರಿಯದ ಸಮಸ್ಯೆ ತೆಲೆದೂರಿದೆ ಅಲ್ಲದೆ, ಈಗಲೇ ತಾಲೂಕಿನ ಏಳು ಗ್ರಾಮದಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಖಾಸಗಿವಾಗಿ ತಿಂಗಳಿಗೆ ೨೫ ಸಾವಿರ ರೂ.ಗಳಂತೆ ನೀರು ಖರೀದಿಸಿ ಪೂರೈಕೆಗೆ ತಾಲೂಕು ಆಡಳಿತ ಕ್ರಮವಹಿಸಲಾಗಿದೆ.
ನಿರೀಕ್ಷಿತ ಮಳೆಯಿಲ್ಲದೆ, ತಾಲೂಕಿನ ಬಹುತೇಕ ಕಡೆ ಅಂತರ್ಜಲ ಮೇಲೆಳದ ಹಿನ್ನೆಲೆಯಲ್ಲಿ ಗ್ರಾಪಂ ವ್ಯಾಪ್ತಿಯ ನೀರು ಪೂರೈಕೆಯ ತೆರೆದ ಬಾವಿ, ಕೊಳವೆ ಬಾವಿಗಳು ನೀರು ಬತ್ತಲಾರಂಭಿಸಿದು ದಿನಕಳೆದಂತೆ ಆತಂಕ ಸೃಷ್ಟಿಸಿದೆ.ಕೆಲವಡೆ ಸದ್ಯ ನೀರಿನ ಸಣ್ಣ, ಪುಟ್ಟ ತಾಂತ್ರಿಕ ಸಮಸ್ಯೆಗಳಿಂದ ನೀರು ಪೂರೈಕೆಯಲ್ಲಿ ಎದುರಾಗುವ ಸಮಸ್ಯೆ ನಿವಾರಣೆ ಕೈಗೊಳ್ಳಲಾಗುತ್ತಿದೆ. ಹಿಂದಿನ ಬರಗಾಲದಲ್ಲಿ ೪೫ ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿತ್ತಾದರು. ಈ ಬಾರಿ ಇದರ ವೇಗ್ ಸದ್ಯ ಕೊಂಚ ಕಡಿಮೆ ಎನಿಸಿದ್ದರು ಸಹ ನೀರಿನ ಮೂಲಗಳ ಹೆಚ್ಚು ಬತ್ತುತ್ತಿರುವುದು ಪರಿಸ್ಥಿತಿ ಮತ್ತಷ್ಟು ವಿಕೋಪಕಕ್ಕೆ ತಳ್ಳಲಾರಂಭಿಸಿದೆ.
ತಾಲೂಕಿನ ೧೪೦ ಹಳ್ಳಿಗಳ ಪೈಕಿ ೪೫ ಹಳ್ಳಿಗಳಲ್ಲಿ ನೀರಿನ ಭೀಕರತೆ ಶುರುವಾಗತೊಡಗಿದೆ. ಸದ್ಯಕ್ಕೆ ೭ ಹಳ್ಳಿಗಳಲ್ಲಿ ನೀರು ಖಾಸಗಿಯಾಗಿ ಖರೀದಿಸಿ ಪೂರೈಕೆ ಶುರವಾದರೆೆ. ಈ ಕ್ರಮ ಇನ್ನೂ ಹೆಚ್ಚಾಗಲಿದೆ.ಹಲವಡೆ ಕೊಳವೆ ಬಾವಿ, ತೆರೆದ ಬಾವಿ ಬತ್ತಿವೆ. ಹೀಗಾಗಿ ಇಲ್ಲಿಯ ರೈತರ ಗದ್ದೆಯಲ್ಲಿ ಕೊಳವೆ ಬಾವಿಯಿಂದ ತಿಂಗಳಿಗೆ ೨೫ ಸಾವಿರ ರುಪಾಯಿ ಕೊಟ್ಟು ನೀರು ಖರೀದಿಸಿ ಸರಸಂಬಾ, ಸಕ್ಕರಗಾ, ಝಳಕಿ ಕೆ. ಸಾವಳೇಶ್ವರ, ನಿಂಬಾಳ ಗ್ರಾಮದಲ್ಲಿ ಸಾರ್ವಜನಿಕರಿಗೆ ಪೂರೈಕೆ ಮಾಡಲಾಗುತ್ತಿದೆ.
ಮಾದನಹಿಪ್ಪರಗಾ ನೀರಿನ ಬಾವಿ ಬತ್ತಿಹೋಗಿದ್ದರಿಂದ ಖಾಸಗಿವಾಗಿ ನೀರು ಪಡೆಯಲಾಗಿತ್ತಾದರು, ಶಾಸಕರ ಅನುದಾನದಲ್ಲಿ ಎರಡು ಕೊಳವೆ ತೋಡಲಾಗಿದ್ದು, ನೀರು ದೊರೆತ್ತಿದ್ದರಿಂದ ಈ ನೀರನ್ನೇ ಪೂರೈಕೆ ಮಾಡಿ ಅನುಕೂಲ ಒದಗಿಸಲಾಗಿದೆ ಎಂದು ತಾಪಂ ಇಒ ಮಾನಪ್ಪ ಕಟ್ಟಿಮನಿ ಅವರು ಹೇಳಿದರು.ಮುನ್ನೆಚ್ಚರಿಕೆ ಕ್ರಮ: ಗ್ರಾಮೀಣ ಭಾಗದಲ್ಲಿ ಸಾರ್ವಜನಿಕವಾಗಿ ಇರುವ ಕೊಳವೆ ಬಾವಿಗಳ ದುರಸ್ಥಿಮಾಡಿ ಪೈಪ್ಲೈನ್ ಲೀಕೆಜ್ ಸರಿಪಡಿಸಿ ಟ್ಯಾಂಕ್ಗಳಲ್ಲಿ ನೀರು ಭರ್ತಿ ಮಾಡುವುದು ಹಾಗೂ ನೀರು ಪೋಲ್ಲಾಗದಂತೆ ಮಾಡಲು ಸಂಬಂಧಿತ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮುಂದಾಗಿದ್ದಾರೆ. ಅಲ್ಲದೆ, ಗ್ರಾಮಗಳಲ್ಲಿನ ಹಳೆಯ ಬಾವಿಗಳ ಹೂಳೆತ್ತಿ ಸ್ವಚ್ಛಗೊಳಿಸಿ ಪುನಶ್ಚೇತನಗೊಳಿಸುವ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಬೇಸಿಗೆಯಲ್ಲಿ ಒಂದೊಮ್ಮೆ ಯಾವ ಊರಲ್ಲೂ ನೀರೇ ಇಲ್ಲವಾಗಿದ್ದಲ್ಲಿ ಖಾಸಗಿ ಜಮೀನು ಮಾಲೀಕರ ಬಳಿ ನಾಲ್ಕು ತಿಂಗಳ ಅವಧಿಗಾಗಿ ತಿಂಗಳಿಗೆ ೨೫ ಸಾವಿರ ರುಪಾಯಿಯಂತೆ ನೀರು ಖರೀದಿಸಿ ಮನೆಗಳಿಗೆ ಪೂರೈಕೆಗೆ ಆಡಳಿತ ಮುಂದಾಗಿದೆ.
ಕೊನೆಯದಾಗಿ ನೀರಿನ ಸಮಸ್ಯೆ ಎದುರಾದ ಹಳ್ಳಿಯ ಸುತ್ತಮುತ್ತ ಸುಮಾರು ೫ ಕಿ.ಮೀ ದೂರದವರೆಗೆ ನೀರೆ ದೊರೆಯದೇ ಹೋದರೆ ತಾಲೂಕು ಆಡಳಿತವು ತಹಸೀಲ್ದಾರವರ ಮೂಲಕ ಸ್ಥಳೀಯವಾಗಿ ಟೆಂಡರ್ ಕರೆದು ಅಗತ್ಯ ಹಳ್ಳಿಗೆ ಟ್ಯಾಂಕರ್ ಮೂಲಕ ಕೊನೆಯ ಅಸ್ತçವಾಗಿ ನೀರು ಪೂರೈಕೆಗೆ ತಾಲೂಕು ಆಡಳಿತ ಸಿದ್ಧತೆಯಲ್ಲಿ ತೊಡಗಿದೆ. ಒಟ್ಟು ೧೪೦ ಹಳ್ಳಿಗಳಲ್ಲಿ ಸದ್ಯ ಖಾಸಗಿ ನೀರು ಖರೀದಿಸಿ ೪ ಹಳ್ಳಿಗೆ ಪೂರೈಕೆ ನಡೆದರೆ ಎರಡ್ಮೂರು ದಿನಗಳಲ್ಲಿ ಇನ್ನೂ ೩ ಹಳ್ಳಿಗೆ ಖರೀದಿ ನೀರು ಒದಗಿಸಲಾಗುವುದು ಹಂತ ಹಂಗವಾಗಿ ೪೫ ಹಳ್ಳಿಗೆ ನೀರಿನ ಅತಿ ಸಮಸ್ಯೆ ನಿವಾರಿಸುವಂತ ಪರಿಸ್ಥಿತಿ ತಾಲೂಕು ಆಡಳಿತ ಮುಂದಿದೆ.ನೀರಿನ ಭೀಕರ ಸಮಸ್ಯೆ ತಲೆದೂರಿದೆ: ನೀರಿನ ಸಮಸ್ಯೆ ನಿವಾರಣೆಗೆ ಅನುದಾನ ಕೊರತೆ ಇಲ್ಲ. ಅಗತ್ಯಕ್ಕೆ ತಕ್ಕಂತೆ ಅನುದಾನ ತರಲಾಗುವುದು. ಈ ಕುರಿತು ಅಧಿಕಾರಿಗಳ ಜೊತೆ ಮೂರು ಸಭೆ ಕೈಗೊಂಡಿದ್ದು, ಎಲ್ಲೂ ನೀರಿನ ಕೊರತೆ ಆಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಈ ಬಾರಿ ಭೀಕರ ನೀರಿನ ಸಮಸ್ಯೆ ತಲೆದೂರಲಿದೆ ಎಂದು ಸಿಎಂ ಸಲಹೆಗಾರ ಶಾಸಕ ಬಿ.ಆರ್. ಪಾಟೀಲ ಅವರು ಹೇಳಿದರು.
ಎಷ್ಟೇ ಕೊಳವೆ ಬಾವಿ ತೋಡಿದರು ನೀರು ಬರುತ್ತಿಲ್ಲ. ಪರ್ಯಾವಾಗಿ ದಾರಿ ಹುಡಲಾಗುವುದು. ಖಾಸಗಿವಾಗಿ ತಿಂಗಳಿಗೆ ೨೫ ಸಾವಿರ ಕೊಟ್ಟು ನೀರು ಖರೀದಿಸುವುದು ಮತ್ತು ಇದು ಸಾಧ್ಯವಾಗದ ಕಡೆ ಟ್ಯಾಂಕರ್ನಿಂದ ನೀರು ಪೂರೈಸುವಂತೆ ಸೂಚಿಸಿದ್ದೇನೆ ಎಂದು ಶಾಸಕರು ಹೇಳಿದರು.ಜೆಜೆ ವಿಫಲ: ಹಿಂದಿನ ನೀರಿನ ಮೂಲ ಹುಡಕಿ ಜೆಜೆಎಂ ಕೆಲಸ ಮಾಡಿಲ್ಲ. ತಾಲೂಕಿಗೆ ಜೆಜೆಂ ಅನುದಾನ ಸುಮಾರು ₹೧೬೨ ಕೋಟಿ ದುಡ್ಡು ಬಂದಿದೆ. ಇದರ ಕಾಮಗಾರಿ ಆದರೂ ನೀರಿನ ಸಮಸ್ಯೆ ನಿವಾರಣೆ ಆಗಿಲ್ಲ. ನೀರಿಲ್ಲದ ಊರಲ್ಲೂ ಪೈಪ್ಲೈನ್ ಮಾಡಿದ್ದಾರೆ. ನೀರಿನ ಮೂಲ ಹುಡಕಿ ಬಾವಿ ತೋಡಿ ಪೈಪ್ಲೈನ್ ಮಾಡುವ ಕೆಲಸವಾಗಿಲ್ಲ. ಇದರ ಅನುದಾನ ದುರಪಯೋಗ ಪಡಿಸಿ ಗುತ್ತಿಗೆದಾರರ ಜೇಬು ತುಂಬಿದೆ. ಹೊರೆತು ಸಮಸ್ಯೆ ನಿವಾರಣೆಯಾಗಿಲ್ಲ. ಅಂತರ್ಜಲ ಹೆಚ್ಚುವತನಕ ಯಾವ ಪ್ರಯೋಗವು ಯಶಸ್ವಿ ಆಗದು. ಈ ಕುರಿತು ಅಧೀವೇಶನದಲ್ಲಿ ಹಿಂದೆ ಪ್ರಸ್ತಾಪಿಸಿದ್ದೇನೆ. ಹಿಂದೆ ಮಳೆ ಹಂಗಾಮಿಗನುಸಾರ ಬಂದು ಅಂತರ್ಜಲ ಭರ್ತಿಯಾಗುತ್ತಿತ್ತು. ವರ್ಷ ಕಳೆದಂತೆ ಪರಿಸ್ಥಿತಿ ಭೀನ್ನವಾಗಿದೆ. ಕಳೆದ ವರ್ಷ ಸಕಾಲಕ್ಕೆ ಮಳೆ ಬರಲಿಲ್ಲ. ಮೇ ತಿಂಗಳಲ್ಲಿ ಬಂದಿದ್ದರಿಂದ ನೀರು ನಿಂತು ಅನುಕೂಲವಾಗಿದೆ. ಸಿರಪೂರ ಮಾದರಿ ಅಂತರ್ಜಲ ಕೆಲಸವಾದರೆ ಮಾತ್ರ ನೀರಿನ ಸಮಸ್ಯೆ ನಿವಾರಣೆಯಾಗಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು
ಆಳಂದ ಶಾಸಕ ಬಿ.ಆರ್. ಪಾಟೀಲ ಭರವಸೆ ನೀಡಿದ್ದಾರೆ.