ಕಲಬುರಗಿ ಜಿಲ್ಲಾದ್ಯಂತ 315 ಗ್ರಾಮಗಳಲ್ಲಿ ನೀರಿನ ಸಂಕಷ್ಟ

KannadaprabhaNewsNetwork | Published : Mar 7, 2024 1:45 AM

ಸಾರಾಂಶ

ಕಲಬುರಗಿ ಜಿಲ್ಲಾದ್ಯಂತ 312 ಊರುಗಳಲ್ಲಿ ನೀರಿನ ಸಮಸ್ಯೆ ಕಾಡುವ ಆತಂಕವಿದೆ, ಈಗಾಗಲೇ ಅಫಜಲ್ಪುರ ಹಾಗೂ ಳಂದ, ಕಮಲಾಪುರದಲ್ಲಿ 22 ಊರುಗಳಲ್ಲಿ ನೀರಿನ ತೀವ್ರ ಅಭಾವ ತಲೆದೋರಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿ ಬೇಸಿಗೆ ಭೀಕರವಾಗಿರಲಿದೆ. ಈಗಾಗಲೇ ಆರಂಭದಲ್ಲೇ ಜಿಲ್ಲಾದ್ಯಂತ ಬಿಸಿ ಏರುತ್ತಿದೆ, ಜೊತೆಗೇ ನೀರಿನ ಸಮಸ್ಯೆಯೂ ಉಲ್ಬಣಿಸುತ್ತಿದೆ. ಜಿಲ್ಲಾದ್ಯಂತ 312 ಊರುಗಳಲ್ಲಿ ನೀರಿನ ಸಮಸ್ಯೆ ಕಾಡುವ ಆತಂಕವಿದೆ, ಈಗಾಗಲೇ ಅಫಜಲ್ಪುರ ಹಾಗೂ ಳಂದ, ಕಮಲಾಪುರದಲ್ಲಿ 22 ಊರುಗಳಲ್ಲಿ ನೀರಿನ ತೀವ್ರ ಅಭಾವ ತಲೆದೋರಿದೆ.

ಅಫಜಲ್ಪುರ ಹಾಗೂ ಆಳಂದ ತಾಲೂಕಿನ ಕುಡಿಯುವ ನೀರಿನ ತೀವ್ರ ಸಮಸ್ಯೆ ಇರುವ ಗ್ರಾಮಗಳಿಗೆ ಭೇಟಿ ನೀಡಿರುವ ಜಿಲ್ಲಾಡಳಿತದ ಅಧಿಕಾರಿಗಳು ಖಾಸಗಿ ಕೋಳವೆ ಬಾವಿ/ತೆರೆದ ಬಾವಿಗಳಿಂದ ಕುಡಿಯುವ ನೀರನ್ನು ಸರಬರಾಜು ಆದೇಶಿಸಿದ್ದಾರೆ.

ಅಫಜಲ್ಪುರ ತಾಲೂಕಿನಲ್ಲಿ 11 ಮತ್ತು ಆಳಂದ ತಾಲೂಕಿನಲ್ಲಿ 11 ಹಾಗೂ ಕಮಲಾಪೂರ ತಾಲೂಕಿನ 7 ಗ್ರಾಮಗಳಿಗೆ ಖಾಸಗಿ ಕೋಳವೆ/ತೆರೆದ ಬಾವಿಗಳಿಂದ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಸಮಾಧಾನದ ಸಂಗತಿ ಎಂದರೆ ಜಿಲ್ಲೆಯಲ್ಲಿ ಇಂದಿನವರೆಗೂ ಮೇವಿನ ಕೊರತೆ ಜಾನುವಾರುಗಳಿಗೆ ಕಾಡಿಲ್ಲ, ಆದಾಗ್ಯೂ ಮೇವಿನ ಅಂತರ್‌ ಜಿಲ್ಲಾ, ಅಂತರಾಜ್ಯ ಸರಬರಾಜಿಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿಗಳು ಆದೇ ಹೊರಡಿಸಿದ್ದಾರೆ.

ಇಂದಿಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌, ಜಿಪಂ ಸಿಇಓ ಭಂವರ್‌ ಸಿಂಗ್‌ ಮೀನಾ, ಪಾಲಿಕೆ ಆಯುಕ್ತ ಭುವನೇಶ ಪಾಟೀಲ್‌ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರ ಹಾಗೂ ಜಿಲ್ಲೆಯ ನೀರಿನ ಅಭಾವ, ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲೆಯ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರರು ಮತ್ತು ಕಾರ್ಯನಿರ್ವಾಹಕ ಇಂಜಿನಿಯರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಅಧಿಕಾರಿಗಳೊಂದಿಗೆ ಪ್ರತಿ ವಾರ ಬರಗಾಲ ಸ್ಥಿತಿಗಳ ಬಗ್ಗೆ ಮತ್ತು ನೀರಿನ ಕೊರತೆ ನೀಗಿಸುವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

315 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಆತಂಕ: ಜಿಪಂ ಸಿಇಓ ಭಂವರಸಿಂಗ್ ಮೀನಾ ಮಾತನಾಡಿ, ನೀರಿನ ಕೊರತೆ ಉದ್ಭವಿಸ ಬಹುದಾದ ಗ್ರಾಮಗಳ ವಿವರಗಳನ್ನು ನೂಡುತ್ತ ಜಿಲ್ಲೆಯ 854 ಗ್ರಾಮಗಳ ಪೈಕಿ 315 ಗ್ರಾಮಗಳು ಮುಂಬರುವ ದಿನಗಳಲ್ಲಿ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ. ಕಲಬುರಗಿ ತಾಲೂಕಿನಲ್ಲಿ 40 ಗ್ರಾಮಗಳು ಆಳಂದ ತಾಲೂಕಿನ 80 ಗ್ರಾಮಗಳು, ಚಿಂಚೋಳಿ ತಾಲೂಕಿನ 14 ಗ್ರಾಮಗಳು, ಅಫಜಲ್ಪುರ ತಾಲೂಕಿನ 86 ಗ್ರಾಮಗ ಜೇವರ್ಗಿ ತಾಲೂಕಿನ 5 ಗ್ರಾಮಗಳು, ಚಿತ್ತಾಪುರದ 14 ಗ್ರಾಮಗಳು, ಶಹಾಬಾದ ತಾಲೂಕಿನ 5 ಗ್ರಾಮಗಳು, ಕಾಳಗಿ ತಾಲೂಕಿನ 16 ಗ್ರಾಮಗಳು, ಯಡ್ರಾಮಿ ತಾಲೂಕಿನ 4 ಗ್ರಾಮಗಳು ಮತ್ತು ಕಮಲಾಪೂರ ತಾಲೂಕಿನ 23 ಗ್ರಾಮಗಳು ಹಾಗೂ ಸೇಡಂ ತಾಲೂಕಿನ 28 ಗ್ರಾಮಗಳು ಬೇಸಿಗೆ ಕಾಲದಲ್ಲಿ ನೀರಿನ ಕೊರ ಉದ್ಭವಿಸುವ ಗ್ರಾಮಗಳನ್ನು ಗುರುತಿಸಲಾಗಿದೆ ಎಂದರು.

ಒಟ್ಟು 174 ಖಾಸಗಿ ಬೋರ್ ವೆಲ್‍ಗಳನ್ನು ಗುರುತಿಸಿದೆ . ಅಗತ್ಯವಿದ್ದಲ್ಲಿ ಹೆಚ್ಚು ನೀರಿನ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳಿಗೆ ನೀರು ಸರಬರಾಜು ಮಾಡಲು ಜಿಲ್ಲಾಡಳಿತವು 91 ಟ್ಯಾಂಕರ್‌ಗಳನ್ನು ಗುರುತಿಸಲಾಗಿದ್ದು, ವಿಭಾಗದಲ್ಲಿ 9000 ಲೀಟರ್ ರ್ಸಾಮರ್ಥ್ಯವುಳ್ಳ 7 ಟ್ಯಾಂಕರ್‌ಗಳಿದ್ದು, ನೀರಿನ ಕೊರತೆ ಕಂಡುಬಂದ ಗ್ರಾಮಗಳಿಗೆ ಟ್ಯಾಂಕರ್‌್ ಮೂಲಕ ನೀರು ಸರಬುರಾಜು ಮಾಡಲಾಗುವುದು.

ಜಿಲ್ಲೆಯ ಗ್ರಾಮೀಣ ಭಾಗದಲ್ಲಿನ ಬೋರ್‌ವೆಲ್‌ಗಳ ಅಂಕಿ ಸಂಖ್ಯೆ: ಜಿಲ್ಲೆಯ ಅಫಜಲಪುರದಲ್ಲಿ ಒಟ್ಟು 86 ಹಳ್ಳಿಗಳಲ್ಲಿ 314 ಬೋರ್‌ವೆಲ್‌ಗಳಿದ್ದು, ಅದರಲ್ಲಿ 224 ಬೋರ್‌ವೆಲ್‌ಗಳು ಉಪಯೋ ಗದಲ್ಲಿದ್ದು, 90 ಬೋರ್‌ವೆಲ್‌ಗಳು ಬಳಕೆಗೆ ಬಾರದೆ ಇದ್ದು, 88ಗಳನ್ನು ರಿಪೇರ್ ಮಾಡಲಾಗುತ್ತಿದೆ, ಇದರಲ್ಲಿ 42 ಖಾಸಗಿ ಬೋರ್‌ವೆಲ್‌ಗಳಿವೆ. ಆಳಂದನಲ್ಲಿ 205 ಬೋರ್‌ವೆಲ್‌ಗಳಲ್ಲಿ 121 ಉಪಯೋಗಕ್ಕೆ ಹಾಗೂ 79 ಉಪಯೋಗಕ್ಕೆ ಬಾರದೆ ಇದ್ದು, ಚಿಂಚೋಳಿಯಲ್ಲಿ 54 ಉಪಯೋಗಕ್ಕೆ ಹಾಗೂ 41 ಉಪಯೋಗಕ್ಕೆ ಬಾರದೆ ಇರುವ ಬೋರ್‌ವೆಲ್‌ಗಳಿವೆ.

ಜಿಲ್ಲಾ- ನಗರ ಸಹಾಯವಾಣಿ: ನೀರಿನ ಸಮಸ್ಯೆ ಇದ್ದಲಿ ಸಾರ್ವಜನಿಕರು ನೇರವಾಗಿ ಜಿಲ್ಲಾ ಕೇಂದ್ರದಲ್ಲಿ ಆಪ ಸಹಾಯಕ್ಕೆ 7760009789 ಸಂಖ್ಯೆಯನ್ನು ಆರಂಭಿಸಿದೆ. ಜಿಲ್ಲಾ ವಿಪತ್ತು ತುರ್ತು ನಿರ್ವಾಹಣಾ ಕೇಂದ್ರ1077ನಲ್ಲಿ ಆರಂಬಿಸಲಾಗಿದೆ.

ಇನ್ನು ನಗರ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಕಾಡಿದಲ್ಲಿ ದೂರು/ಕುಂದುಕೊರತೆಗಳಿಗಾಗಿ 08472- 237247 (ಟೋಲ್ ಪ್ರೀ ನಂ. 18004258247), ಎಲ್‌ ಆಂಡ್‌ ಟಿ ಕಂಪನಿ, ಕೆಯುಐಡಿಎಫ್‍ಸಿ, ಸಂಖ್ಯೆ 0872-241364 ಗೂ ಕರೆ ನೀಡಿ ದೂರು ದಾಖಲಿಸಬಹುದಾಗಿದೆ.

ನಗರದಲ್ಲಿನ ನೀರಿನ ಕೊರತೆ ನೀಗಿಸಲು ಸಿದ್ಧತೆ: ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾದ ಭುವನೇಶ ಪಾಟೀಲ್ ದೇವಿದಾಸ ಅವರು,ಕಲಬುರಗಿ ನಗರಕ್ಕೆ ದಿನನಿತ್ಯಕ್ಕೆ ಸುಮಾರು 108.68 ಎಂಎಲ್ ಡಿ ನೀರಿನ ಅವಶ್ಯಕತೆ ಇದೆ. ಇದರಲ್ಲಿ 80.16 ಎಂಎಲ್‍ಡಿ ಒಟ್ಟು ನೀರು ವಿವಿಧ ಮೂಲಗಳಿಂದ ಲಭ್ಯವಿರುತ್ತದೆ. ಲಭ್ಯವಿರುವ ಮೂಲಗಳಾದ ಬೀಮಾ ನದಿಯ ಸರಡಗಿ ಬ್ಯಾರೇಜಿನಿಂದ 52.62 ಎಂಎಲ್ಡಿ ಒಟ್ಟು ಸಗಟು ನೀರನ್ನು ಕೋಟನೂರ ಮತ್ತು ಶೋರಗುಂಬಜ ನೀರಿನ ಶುದ್ಧಿಕರಣ ಘಟಕದಲ್ಲಿ ಶುದ್ಧಿಕರಿಸಿ ಪ್ರತಿದಿನ ಸುಮಾರು 43 ವಾರ್ಡಗಳಿಗೆ ಸರಬರಾಜು ಮಾಡಲಾಗುತ್ತಿದೆ ಮತ್ತು ಕುರಿಕೋಟಾ ಹತ್ತಿರದ ಬೆಣ್ಣೆ ಕೋರಾ ನದಿಯಿಂದ 22 ಎಂಎಲ್‍ಡಿ ಒಟ್ಟು ಸಗಟು ನೀರನ್ನು ಹಳೇ ಪಿಲ್ಟರ್ ಬೆಡ್ ನಲ್ಲಿಯ ನೀರಿನ ಶುದ್ದೀಕರಣ ಘಟಕದಲ್ಲಿ ಶುದ್ದೀಕರಿಸಿ ಸುಮಾರು 12 ವಾರ್ಡ್‍ಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದಿದ್ದಾರೆ.

ಕೊಳವೆ ಬಾವಿಗಳಿಂದ ಹಾಗೂ ಇತರ ಮೂಲಗಳಿಂದ 8 ಎಂಎಲ್‍ಡಿ ನೀರನ್ನು ನಗರಕ್ಕೆ ಒದಗಿಸಲಾಗುತ್ತಿದೆ. ಈ ವರ್ಷ ಮಳೆಯ ಅಭಾವದಿಂದಾಗಿ, ಸರಡಗಿ ಬ್ಯಾರೇಜಿನಲ್ಲಿ ನೀರಿನ ಅಭಾವ ಉಂಟಾಗುವ ಪರಿಸ್ಥಿತಿಯು ಇದ್ದು, ಸದರಿ ಅಭಾವವನ್ನು ಸರಿಪಡಿಸಲು ಈಗಾಗಲೇ 2 ಟಿ.ಎಂ.ಸಿ ನೀರನ್ನು ಜಲಾಶಯದಲ್ಲಿ ಕಾಯ್ದಿರಿಸಲು ಸಂಬಂಧಪಟ್ಟ ಕೆಬಿಜೆಎನ್.ಎಲ್ ಅದಿಕಾರಿಗಳಿಗೆ ಜಿಲ್ಲಾಡಳಿತ ಮುಖಾಂತರ ಕೋರಲಾಗಿದೆ ಎಂದರು.

ಮುಂಜಾಗ್ರತ ಕ್ರಮಕ್ಕಾಗಿ 40 ಟ್ಯಾಂಕರ್‌ಗಳನ್ನು ಕಾಯ್ದಿರಿಸಲಾಗಿದೆ. ಸಂಖ್ಯೆಗಳನ್ನು ಹೆಚ್ಚಿಸಲಾಗುವುದು. ಪ್ರಸ್ತುತ 7 ಟ್ಯಾಂಕರ್‌ಗಳು ಲಭ್ಯವಿದ್ದು, ಅವಶ್ಯಕತೆ ಅನುಗುಣವಾಗಿ ಟ್ಯಾಂಕರ್‌ಗಳ ನಗರದ ಸಾರ್ವಜನಿಕರು ಕುಡಿಯುವ , ಇದರೊಂದಿಗೆ ಮಹಾನಗರ ಪಾಲಿಕೆಯ ಅಬಿಯಂತರರು ಹಾಗೂ ನೈರ್ಮಲ್ಯ ನೀರೀಕ್ಷಕರು ಒಳಗೊಂಡ ‘ತುರ್ತು ಪರಿಹಾರ ತಂಡ ಪ್ರತಿ ವಾರ್ಡ್‍ಗಳಲ್ಲಿ ನಿಯೋಜಿಸಿ ಕಾರ್ಯನಿರ್ವಹಿಸಲು ಆದೇಶಿಸಲಾಗಿದೆ. ವಿವಿಧ ಅನುದಾನದಲ್ಲಿ ಕಲಬುರಗಿ ಮಹಾನಗರ ಪಾಲಿಕೆ ವತಿಯಿಂದ 100 ಹೊಸ ಕೊಳವೆ ಬಾವಿಗಳು ಕೊರೆಸಲು ಅನುಮೋದನೆಯನ್ನು ಪಡೆಯಲಾಗಿದೆ. ಈ ಕಾಮಗಾರಿಗಳಿಗೆ ಈಗಾಗಲೇ ಟೆಂಡರ್‌ ಪ್ರಕಟಣೆಯನ್ನು ಹೊರಡಿಸಲಾಗಿರುತ್ತದೆ ಎಂದು ವಿವರಿಸಿದರು.

Share this article