)
ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ವಯನಾಡು ಮತ್ತು ರಾಯ್ಬರೇಲಿಯಿಂದ ಸ್ಪರ್ಧಿಸಿದ ರಾಹುಲ್ ಗಾಂಧಿಗೆ ಪ್ರತಿ ಕ್ಷೇತ್ರಕ್ಕೆ ತಲಾ 70 ಲಕ್ಷ ರು. ಹಾಗೂ ಕರ್ನಾಟಕದ ಕಲಬುರಗಿ ಅಭ್ಯರ್ಥಿಯಾಗಿದ್ದ ಪಕ್ಷಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿಗೂ 70 ಲಕ್ಷ ರು. ನೀಡಿರುವುದಾಗಿ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ನೀಡಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.
ಉಳಿದಂತೆ ಕಿಶೋರಿ ಲಾಲ್ ಶರ್ಮಾ, ಕೆ.ಸಿ.ವೇಣುಗೋಪಾಲ್, ಮಾಣಿಕ್ಯ ಟ್ಯಾಗೋರ್, ವಿಜಯ್ ಇಂದರ್ ಸಿಂಗ್ಲಾ ಅವರಿಗೂ 70 ಲಕ್ಷ ರು. ನೀಡಲಾಗಿತ್ತು. ಚುನಾವಣೆಯಲ್ಲಿ ಪರಾಜಿತರಾದ ಉಳಿದ ಅಭ್ಯರ್ಥಿಗಳಿಗೂ ಹಣ ನೀಡಲಾಗಿತ್ತು.