ನವದೆಹಲಿ : ಭಾರತದಲ್ಲಿ ಇವಿಎಂ ಯಂತ್ರದ ಬದಲು ಮರಳಿ ಬ್ಯಾಲೆಟ್ ಪೇಪರ್ ತರಬೇಕು ಎಂಬ ಕಾಂಗ್ರೆಸ್ ಬೇಡಿಕೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂಬು ನೀಡಿದ್ದಾರೆ. ಇವಿಎಂ ಬದಲು ಬ್ಯಾಲೆಟ್ ಪೇಪರ್ಗೆ ಹೋಗುವುದು ಒಳ್ಳೆಯದು’ ಎಂದು ಹೇಳಿವ ಮೂಲಕ ಇವಿಎಂ ಬಗ್ಗೆ ತಮ್ಮ ಅಸಮ್ಮತವನ್ನು ವ್ಯಕ್ತಪಡಿಸಿದ್ದಾರೆ.
ತಮ್ಮ ದೆಹಲಿ ಭೇಟಿ ವೇಳೆ ಮಾತನಾಡಿದ ಅವರು, ಜಗತ್ತಿನಲ್ಲಿ ಮುಂದುವರೆದ ದೇಶಗಳು ಇವಿಎಂ ಯಂತ್ರದಿಂದ ಬ್ಯಾಲೆಟ್ ಪೇಪರ್ಗೆ ಹೋಗಿವೆ. ಭಾರತದಲ್ಲಿಯೇ ಇದು ಆಗಬೇಕು ಎಂದರು. ಇವಿಎಂ ಯಂತ್ರದ ವಿಷಯದಲ್ಲಿ ಅನಗತ್ಯವಾಗಿ ಅನುಮಾನಕ್ಕೆ ಎಡೆ ಮಾಡಿಕೊಡುವುದು ಆಗುತ್ತಿವೆ. ಇವಿಎಂ ಯಂತ್ರವನ್ನು ತಂತ್ರಜ್ಞಾನದಿಂದ ತಿರುಚಬಹುದಾದ ಅವಕಾಶವಿದೆ. ಹೀಗಾಗಿ ಮರಳಿ ಬ್ಯಾಲೆಟ್ ಪೇಪರ್ ಜಾರಿ ತರಬೇಕು ಎಂದು ಆಗ್ರಹಿಸಿದರು.