ಅವಶ್ಯಕತೆ ಇದ್ದರೆ ರಾಜ್ಯಸಭೆಗೆ ಗೌಡರು ಹೋಗುವ ಬಗ್ಗೆ ಬಿಜೆಪಿ ತೀರ್ಮಾನಿಸುತ್ತೆ: ಎಚ್ಡಿಕೆ

Published : May 25, 2026, 07:48 AM IST
HD Kumaraswamy

ಸಾರಾಂಶ

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಅವಶ್ಯಕತೆ ಇದ್ದಲ್ಲಿ ಅವರನ್ನು ರಾಜ್ಯಸಭೆ ಕಳುಹಿಸಲು ಬಿಜೆಪಿ ದೆಹಲಿ ನಾಯಕರೇ ತೀರ್ಮಾನಿಸುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದ್ದಾರೆ.

  ಬೆಂಗಳೂರು :  ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಅವಶ್ಯಕತೆ ಇದ್ದಲ್ಲಿ ಅವರನ್ನು ರಾಜ್ಯಸಭೆಗೆ ಕಳುಹಿಸುವ ಸಂಬಂಧ ಬಿಜೆಪಿ ದೆಹಲಿ ನಾಯಕರೇ ತೀರ್ಮಾನಿಸುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದ್ದಾರೆ.

ಬಿಜೆಪಿ ಜೊತೆಗೆ ಚರ್ಚೆ ಮಾಡಿಲ್ಲ

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರನ್ನು ರಾಜ್ಯ ಸಭೆಗೆ ಆಯ್ಕೆ ಮಾಡುವ ಸಂಬಂಧ ನಾವು ಈವರೆಗೂ ಬಿಜೆಪಿ ಜೊತೆಗೆ ಚರ್ಚೆ ಮಾಡಿಲ್ಲ. ದೇವೇಗೌಡರು ಸಹ ಯಾರೊಂದಿಗೂ ಚರ್ಚಿಸಿಲ್ಲ. ಕೇವಲ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ನೋಡುತ್ತಿದ್ದೇವೆ ಎಂದರು.

ಬಿಜೆಪಿಯಲ್ಲಿ 63 ಶಾಸಕರು ಇದ್ದಾರೆ

ಬಿಜೆಪಿಯಲ್ಲಿ 63 ಶಾಸಕರು ಇದ್ದಾರೆ. ಅವರ ಪಕ್ಷದಲ್ಲಿಯೂ ಹಲವು ಸಮಸ್ಯೆಗಳು ಇರುತ್ತವೆ. ಹೀಗಿರುವಾಗ ನಾವು ಹೇಗೆ ಚರ್ಚಿಸುವುದು? ದೇವೇಗೌಡರು ಸಹ ಹೇಗೆ ಚರ್ಚಿಸುತ್ತಾರೆ? ಅವಶ್ಯಕತೆ ಇದ್ದರೆ ದೆಹಲಿ ನಾಯಕರು ತೀರ್ಮಾನ ಮಾಡುತ್ತಾರೆ. ಬಿಜೆಪಿ ಅವರ ಅವಕಾಶ ತಪ್ಪಿಸಿ ದೇವೇಗೌಡರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಎಂದು ನಾವು ಒತ್ತಾಯ ಮಾಡಲು ಸಾಧ್ಯವಿಲ್ಲ. ಅದು ಅವರ ಪಕ್ಷದ ತೀರ್ಮಾನ ಎಂದು ಹೇಳಿದರು.

 

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ವರಿಷ್ಠರಿಂದ ದಿಢೀರ್‌ ಬುಲಾವ್‌: ನಾಡಿದ್ದು ಸಿದ್ದರಾಮಯ್ಯ ದಿಲ್ಲಿಗೆ
ಮೊದಲ ಭೇಟಿಯಲ್ಲೇ ರಾಜ್ಯ ಬಿಜೆಪಿಗರಿಗೆ ನಿತಿನ್‌ ಕ್ಲಾಸ್‌