ಸಂಸದ ಡಾ. ಸಿ. ಎನ್‌. ಮಂಜುನಾಥ್ ಗೆಲುವಿಗೆ ಬಸವನ ಹರಕೆ ತೀರಿಸಿದ ಪತ್ನಿ ಅನುಸೂಯಮ್ಮ

KannadaprabhaNewsNetwork |  
Published : Sep 05, 2024, 12:30 AM ISTUpdated : Sep 05, 2024, 03:50 AM IST
ಸಂಸದ ಡಾ. ಸಿ.ಎನ್‌. ಮಂಜುನಾಥ್ ಅವರ ಪತ್ನಿ ಅನುಸೂಯಮ್ಮ  | Kannada Prabha

ಸಾರಾಂಶ

ಸಂಸದ ಡಾ.ಸಿ.ಎನ್‌. ಮಂಜುನಾಥ್ ಅವರ ಪತ್ನಿ ಅನುಸೂಯಮ್ಮ ಅವರು ಬುಧವಾರ ತಾಲೂಕಿನ ಚಿರಣಕುಪ್ಪೆ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಬಸವನನ್ನು ಬಿಟ್ಟು ತಮ್ಮ ಹರಕೆ ತೀರಿಸಿದರು.

ಕನಕಪುರ: ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪತಿ ಗೆದ್ದಿದ್ದಕ್ಕೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಸಂಸದ ಡಾ.ಸಿ.ಎನ್‌. ಮಂಜುನಾಥ್ ಅವರ ಪತ್ನಿ ಅನುಸೂಯಮ್ಮ ಅವರು ಬುಧವಾರ ತಾಲೂಕಿನ ಚಿರಣಕುಪ್ಪೆ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಬಸವನನ್ನು ಬಿಟ್ಟು ತಮ್ಮ ಹರಕೆ ತೀರಿಸಿದರು.

ಬಸವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭಾ ಚುನಾವಣೆ ವೇಳೆ ಮಂಜುನಾಥ್‌ ಅವರ ಗೆಲುವಿಗಾಗಿ ಹರಕೆ ಹೊತ್ತಿದ್ದೆ. ಅದರಂತೆ ಬಸವನಿಗೆ ಪೂಜೆ ಸಲ್ಲಿಸಿ, ಕರುವನ್ನು ದೇವಸ್ಥಾನಕ್ಕೆ ಒಪ್ಪಿಸಿದ್ದೇವೆ. ಕಾರಣಾಂತರಗಳಿಂದ ಮಂಜುನಾಥ್ ಅವರಿಗೆ ಕಾರ್ಯಕ್ರಮಕ್ಕೆ ಬರಲು ಆಗಿಲ್ಲ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮತಚೋರಿ ಹೆಸರಲ್ಲಿ ಸುಳ್ಳು ಪ್ರಚಾರ ತಪ್ಪು: ದೇವೇಗೌಡ
ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು