ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೊಯಮತ್ತೂರಿಗೆ ತೆರಳಿದ್ದ ವೇಳೆ ಅಚಾನಕ್ಕಾಗಿ ಅಲ್ಲಿನ ಸ್ವೀಟ್ ಅಂಗಡಿಯೊಂದಕ್ಕೆ ಭೇಟಿ ಕೊಟ್ಟು ತಮಗಿಷ್ಟವಾದ ಸಿಹಿತಿನಿಸುಗಳನ್ನು ಖರೀದಿಸಿ ಗಮನಸೆಳೆದರು.
ಕೊಯಮತ್ತೂರು: ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೊಯಮತ್ತೂರಿಗೆ ತೆರಳಿದ್ದ ವೇಳೆ ಅಚಾನಕ್ಕಾಗಿ ಅಲ್ಲಿನ ಸ್ವೀಟ್ ಅಂಗಡಿಯೊಂದಕ್ಕೆ ಭೇಟಿ ಕೊಟ್ಟು ತಮಗಿಷ್ಟವಾದ ಸಿಹಿತಿನಿಸುಗಳನ್ನು ಖರೀದಿಸಿ ಗಮನಸೆಳೆದರು.
ರಸ್ತೆಯಲ್ಲಿ ಅಂಗಡಿ ನೋಡುತ್ತಿದ್ದಂತೆಯೇ, ಆ ಅಂಗಡಿಗೆ ತೆರಳಲು ರಾಹುಲ್ ರಸ್ತೆಯ ಡಿವೈಡರ್ ನೆಗೆದಿದ್ದು ಎಲ್ಲರ ಗಮನ ಸೆಳೆದಿದೆ. ಬಳಿಕ ರಾಹುಲ್ ತಮಗೆ ಇಷ್ಟವಾದ ಗುಲಾಬ್ ಜಾಮೂನ್ ಖರೀದಿಸಿ, ತಮ್ಮ ಜೊತೆಗೆ ಬಂದಿದ್ದ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ಗೆ ಮೈಸೂರು ಪಾಕ್ ಕೊಡಿಸಿದರು. ಅಲ್ಲದೆ ಅಂಗಡಿಯಲ್ಲಿ 20-30 ನಿಮಿಷಗಳ ಕಾಲ ಇದ್ದು, ಎಲ್ಲ ಸಿಹಿತಿನಿಸುಗಳನ್ನು ರುಚಿ ಮಾಡಿ ಸಿಬ್ಬಂದಿಯೊಂದಿಗೆ ಚಿತ್ರ ತೆಗೆಸಿಕೊಂಡರು.
ಬಳಿಕ ತಾವು ಖರೀದಿಸಿದ ಸಿಹಿತಿನಿಸುಗಳ ಹಣವನ್ನು ಅಂಗಡಿಯವನಿಗೆ ನೀಡಿ ಹಿಂದಿರುಗಿದರು.
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.