LIVE NOW
Published : Dec 26, 2025, 07:37 AM ISTUpdated : Dec 26, 2025, 01:23 PM IST

State News Live: ಪಾರಿವಾಳ ಪ್ರಿಯರಿಗೆ ಶಾಕ್ - ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಪಾರಿವಾಳಗಳಿಗೆ ಆಹಾರ ಹಾಕೋದು ನಿಷೇಧ

ಸಾರಾಂಶ

ಬೆಂಗಳೂರು (ಡಿ.26): ಒಂದೆಡೆ ಕರ್ನಾಟಕದಲ್ಲಿ ಸಿಎಂ ಕುರ್ಚಿ ಕಸರತ್ತು ನಡೆಯುತ್ತಿದೆ. ಇದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.27ರಂದು ದೆಹಲಿಯಲ್ಲಿ ನಡೆಯಲಿರುವ ಎಐಸಿಸಿ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಶುಕ್ರ ವಾರ ಸಂಜೆ ತೆರಳಲಿದ್ದಾರೆ. ಆದರೆ ಈ ವೇಳೆ ಅವಕಾಶ ಸಿಕ್ಕರೆ ಸಚಿವ ಸಂಪುಟ ಪುನಾರಚನೆ ಬಗ್ಗೆ ಮಾತ್ರ ಅವರು ಹೈಕಮಾಂಡ್ ಜತೆ ಚರ್ಚಿಸುವ' ಸಾಧ್ಯತೆ ಇದೆ.ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

 

01:23 PM (IST) Dec 26

ಪಾರಿವಾಳ ಪ್ರಿಯರಿಗೆ ಶಾಕ್ - ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಪಾರಿವಾಳಗಳಿಗೆ ಆಹಾರ ಹಾಕೋದು ನಿಷೇಧ

ಬೆಂಗಳೂರಿನಲ್ಲಿ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ, ಪಾಲಿಕೆಯು ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಈ ನಿಯಮವನ್ನು ಉಲ್ಲಂಘಿಸುವವರಿಗೆ ದಂಡ ಹಾಗೂ ಜೈಲು ಶಿಕ್ಷೆಯ ಎಚ್ಚರಿಕೆ ನೀಡಲಾಗಿದೆ.

Read Full Story

01:17 PM (IST) Dec 26

ಕ್ರಿಸ್‌ಮಸ್ ರಜೆ ಮುಗಿಸಿ ಕೆಲಸಕ್ಕೆ ಬರುತ್ತಿದ್ದ ಟೆಕ್ಕಿ; ಕಾರು ಮರಕ್ಕೆ ಡಿಕ್ಕಿಯಾಗಿ ಅಪ್ಪ-ಮಗ ಸಾವು

ಕ್ರಿಸ್‌ಮಸ್ ಹಬ್ಬದ ರಜೆ ಮುಗಿಸಿ ಗೌರಿಬಿದನೂರಿನಿಂದ ಬೆಂಗಳೂರಿಗೆ ಮರಳುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಕುಟುಂಬದ ಕಾರು ಮಾದನಾಯಕನಹಳ್ಳಿ ಬಳಿ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಟೆಕ್ಕಿ ಹಾಗೂ ಅವರ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದು, ಕುಟುಂಬದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Read Full Story

01:16 PM (IST) Dec 26

'ಮದುವೆ ಆಗಿ ತಿಂಗ್ಳಾದ್ರೂ ಅವಳನ್ನ ಟಚ್‌ ಕೂಡ ಮಾಡಿಲ್ಲ, ಆತ ಗಂಡಸೇ ಅಲ್ಲ..' ಸೂರಜ್‌ ವಿರುದ್ಧ ಗಾನವಿ ಕುಟುಂಬಸ್ಥರ ಆರೋಪ

ಮದುವೆಯಾಗಿ ಒಂದೂವರೆ ತಿಂಗಳಲ್ಲೇ ನವವಧು ಗಾನವಿ ಆ*ತ್ಮಹತ್ಯೆ ಮಾಡಿಕೊಂಡಿದ್ದು, ವರದಕ್ಷಿಣೆ ಕಿರುಕುಳ ಹಾಗೂ ಪತಿ ಸೂರಜ್ ನಪುಂಸಕ ಎಂದು ಮೃತರ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಪತಿ, ಅತ್ತೆ ಹಾಗೂ ನಾದಿನಿಯನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿ, ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ.

Read Full Story

01:08 PM (IST) Dec 26

Mark Movie Collection - ಕಿಚ್ಚ ಸುದೀಪ್‌ 'ಮಾರ್ಕ್' ಸಿನಿಮಾದ ಫಸ್ಟ್‌ ಡೇ ಕಲೆಕ್ಷನ್‌ ಎಷ್ಟು?

ಡಿಸೆಂಬರ್‌ 25 ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಹಬ್ಬ ಎಂದೇ ಹೇಳಬಹುದು. ಶಿವರಾಜ್‌ಕುಮಾರ್‌, ಉಪೇಂದ್ರ, ರಾಜ್‌ ಬಿ ಶೆಟ್ಟಿ ನಟನೆಯ ‘45’ ಸಿನಿಮಾ ಒಂದು ಕಡೆ ರಿಲೀಸ್‌ ಆದರೆ, ಇನ್ನೊಂದು ಕಡೆ ಕಿಚ್ಚ ಸುದೀಪ್‌ ನಟನೆಯ ‘ಮಾರ್ಕ್’‌ ಸಿನಿಮಾ ರಿಲೀಸ್‌ ಆಗಿದೆ. ಹಾಗಾದರೆ ಮಾರ್ಕ್ ಸಿನಿಮಾ ಕಲೆಕ್ಷನ್‌ ಎಷ್ಟು?

 

Read Full Story

12:58 PM (IST) Dec 26

ಸಿಲ್ಕ್ ಸ್ಮಿತಾ ಒಂಟಿಯಾಗಿ ಸತ್ತುಹೋದಳು.. ಸಾಯೋ ಮುಂಚೆ ಶ್ರೀದೇವಿ ಭೇಟಿಯಾಗಿದ್ರು - ಆ ಸತ್ಯ ಬಿಚ್ಚಿಟ್ಟ ಜಯಮಾಲಿನಿ

ನಟಿ ಜಯಮಾಲಿನಿ, ಶ್ರೀದೇವಿಯೊಂದಿಗಿನ ತಮ್ಮ ಬಾಂಧವ್ಯ ಮತ್ತು ಅವರ ಸಾವಿನ ಬಗ್ಗೆ ಮಾತನಾಡುತ್ತಾ ತುಂಬಾ ಭಾವುಕರಾದರು. ಕೃಷ್ಣ, ಶೋಭನ್ ಬಾಬು, ಎಂಜಿಆರ್ ಅವರಂತಹ ದಿಗ್ಗಜರೊಂದಿಗೆ ತಮ್ಮ ಸಿನಿಮಾ ಪಯಣವನ್ನು ನೆನಪಿಸಿಕೊಂಡರು. ಅವರು ಏನು ಹೇಳಿದ್ದಾರೆಂದು ಈ ಸ್ಟೋರಿಯಲ್ಲಿ ತಿಳಿಯೋಣ ಬನ್ನಿ..

 

Read Full Story

12:40 PM (IST) Dec 26

ಮಂಡ್ಯ ಜಿಲ್ಲೆಯಲ್ಲಿ ಸಿದ್ಧಪಡಿಸಿದ ಕೈಗಾರಿಕಾ ಭೂಮಿ ಇಲ್ಲ - ಸಚಿವ ಎಂ.ಬಿ.ಪಾಟೀಲ್

ಅಮೆರಿಕಾ ಮೂಲದ ಸ್ಯಾನ್ಸನ್ ಗ್ರೂಪ್‌ನಿಂದ ಸೆಮಿ ಕಂಡಕ್ಟರ್ ಫ್ಯಾಬ್ರಿಕೇಷನ್ ಯೂನಿಟ್ ಸ್ಥಾಪನೆಗೆ ಸಿದ್ಧಪಡಿಸದ ಕೈಗಾರಿಕಾ ಭೂಮಿ ಸದ್ಯಕ್ಕೆ ಜಿಲ್ಲೆಯಲ್ಲಿ ಲಭ್ಯವಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

Read Full Story

12:32 PM (IST) Dec 26

ಬೆಂಗಳೂರು ರಸ್ತೆಯಲ್ಲಿ ಯುವತಿಯನ್ನು ಬೈಕ್‌ನಲ್ಲಿ ಬೆನ್ನಟ್ಟಿ ಕಿರುಕುಳ ಕೊಟ್ಟ ಮೂವರು ಕಿಡಿಗೇಡಿಗಳು!

ಬೆಂಗಳೂರಿನ ಸಿಲ್ಕ್ ಬೋರ್ಡ್ ಮುಖ್ಯ ರಸ್ತೆಯಲ್ಲಿ ಯುವತಿಯೊಬ್ಬರನ್ನು ಮೂವರು ಕಿಡಿಗೇಡಿಗಳು ಬೈಕ್‌ನಲ್ಲಿ ಹಿಂಬಾಲಿಸಿ ಕಿರುಕುಳ ನೀಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸುದ್ದಗುಂಟೆ ಪಾಳ್ಯ ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.
Read Full Story

12:24 PM (IST) Dec 26

ಬೇರೆಯದನ್ನು ಬಿಟ್ರು; 120 ಅಡಿಕೆ ಮರ ಕಡಿದ್ರು; ಸಂಪೂರ್ಣ ತೋಟವನ್ನೇ ನಾಶ ಮಾಡಿದ ಅರಣ್ಯ ರಕ್ಷಕರು!

Areca Catechu: ಮಕ್ಕಳಂತೆ ಬೆಳೆಸಿದ ಅಡಿಕೆ ಮರಗಳನ್ನು ಅರಣ್ಯ ಇಲಾಖೆಯವರೇ ಕಟ್‌ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ನಡೆದಿದೆ. ಈ ಘಟನೆಯನ್ನು ರೈತರು ಖಂಡಿಸಿದ್ದಾರೆ. ಜಯರಾಮ್‌ ಹೆಗಡೆ ತೋಟದಲ್ಲಿಯೇ ಈ ಘಟನೆ ನಡೆದಿದೆ.

 

Read Full Story

12:16 PM (IST) Dec 26

ಗಾಂಧೀಜಿ ಕೊಡುಗೆ ಬಗ್ಗೆ ಬಿಜೆಪಿಯವರಿಗೆ ಜ್ಞಾನ ಇಲ್ಲ - ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ

ಬಿಜೆಪಿಯವರಿಗೆ ಕೃತಜ್ಞತೆ ಇಲ್ಲ. ಗಾಂಧೀಜಿಯವರ ಕೊಡುಗೆ ಬಗ್ಗೆ ಜ್ಞಾನ ಇಲ್ಲ. ಅದಕ್ಕಾಗಿಯೇ ನರೇಗಾದಲ್ಲಿರುವ ಗಾಂಧೀಜಿ ಅವರ ಹೆಸರು ಬದಲಾವಣೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.

Read Full Story

12:16 PM (IST) Dec 26

ಜಯದೇವ ಆಸ್ಪತ್ರೆ ಸೀನಿಯರ್ ನರ್ಸ್ ಕೊಲೆಗೆ ಟ್ವಿಸ್ಟ್; ಮದುವೆಯಾಗಲು ಒತ್ತಾಯಿಸಿದ್ದಕ್ಕೆ ಜೂನಿಯರ್‌ನಿಂದಲೇ ಕೊಲೆ!

ಬೆಂಗಳೂರಿನ ಕೆ.ಎಸ್ ಲೇಔಟ್‌ನಲ್ಲಿ ನಡೆದಿದ್ದ ಸ್ಟಾಫ್ ನರ್ಸ್ ಮಮತಾ ಹತ್ಯೆ ಪ್ರಕರಣವನ್ನು ಪೊಲೀಸರು 24 ಗಂಟೆಗಳಲ್ಲಿ ಭೇದಿಸಿದ್ದಾರೆ. ಮದುವೆ ವಿಚಾರವಾಗಿ ಪ್ರೇಯಸಿ ಬೆದರಿಕೆ ಹಾಕಿದ್ದರಿಂದ, ಆಕೆಯ ಸಹೋದ್ಯೋಗಿ ಹಾಗೂ ಪ್ರಿಯಕರ ಸುಧಾಕರ್ ಎಂಬಾತನೇ ಈ ಕೃತ್ಯ ಎಸಗಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ.
Read Full Story

12:06 PM (IST) Dec 26

ಪಾರ್ಟಿ ಬಳಿಕ ಮನೆಗೆ ಡ್ರಾಪ್‌ ಮಾಡ್ತಿನಿ ಅನ್ನೋ ಸಿಇಒ ಮಾತು ನಂಬಿ ಕಾರು ಹತ್ತಿದ ಮಹಿಳಾ ಮ್ಯಾನೇಜರ್‌ ಗ್ಯಾಂಗ್‌ರೇ*ಪ್‌!

ಉದಯಪುರದಲ್ಲಿ ಹೊಸ ವರ್ಷದ ಪಾರ್ಟಿ ಮುಗಿದ ನಂತರ ಐಟಿ ಕಂಪನಿಯ ಸಿಇಒ ಮತ್ತು ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ತನಗೆ ಲಿಫ್ಟ್ ಆಫರ್ ನೀಡಿ ಚಲಿಸುವ ಕಾರಿನಲ್ಲಿ ಅ*ತ್ಯಾಚಾರ ಮಾಡಿದ್ದಾರೆ ಎಂದು ಐಟಿ ಕಂಪನಿಯ ಮ್ಯಾನೇಜರ್‌ ಆರೋಪಿಸಿದ್ದಾರೆ.

 

Read Full Story

11:49 AM (IST) Dec 26

₹40 ಲಕ್ಷ ಖರ್ಚು ಮಾಡಿ ಮದುವೆ ಮಾಡಿದ ಮಗಳು 1 ತಿಂಗಳು ಸಂಸಾರ ಮಾಡಲಿಲ್ಲ; ಹನಿಮೂನ್ ಪೂರ್ಣಗೊಳಿಸದೇ ಪ್ರಾಣಬಿಟ್ಟಳು!

₹40 ಲಕ್ಷ ವೆಚ್ಚದಲ್ಲಿ ಅದ್ದೂರಿಯಾಗಿ ಮದುವೆಯಾಗಿ ಶ್ರೀಲಂಕಾ ಹನಿಮೂನ್‌ಗೆ ತೆರಳಿದ್ದ ನವವಿವಾಹಿತೆ,  ಅರ್ಧಕ್ಕೆ ಹನಿಮೂನ್ ಬಿಟ್ಟುಬಂದು ಅಪ್ಪನ ಮನೆಯಲ್ಲಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಮದುವೆಯಾದ ಒಂದೂವರೆ ತಿಂಗಳಲ್ಲೇ ನವವಿವಾಹಿತೆ ಗಾನವಿ ಸಾವನ್ನಪ್ಪಿದ್ದಾರೆ.

Read Full Story

11:41 AM (IST) Dec 26

ಸೈಲೆಂಟ್ ಆಗಿ OTTಯಲ್ಲಿ ರಿಲೀಸ್ ಆದ ಬಾಹುಬಲಿ ದಿ ಎಪಿಕ್ ಸಿನಿಮಾ.. ಯಾವುದರಲ್ಲಿ ಸ್ಟ್ರೀಮಿಂಗ್ ಆಗ್ತಿದೆ ಗೊತ್ತಾ?

ರಾಜಮೌಳಿ ನಿರ್ದೇಶನದ ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ, ರಮ್ಯಾ ಕೃಷ್ಣನ್ ನಟನೆಯ ಬಾಹುಬಲಿ ದಿ ಎಪಿಕ್ ಸಿನಿಮಾ ಈಗ OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಿದೆ. ಅದರ ಬಗ್ಗೆ ನೋಡೋಣ.

Read Full Story

11:20 AM (IST) Dec 26

Bigg Boss ಮನೆಯಲ್ಲಿ ನಡುರಾತ್ರಿ ಇದೇನಿದು? ಒಟ್ಟಿಗೇ ಮಲಗಿ ಸಿಕ್ಕಿಬಿದ್ದ ಸ್ಪರ್ಧಿಗಳು! ಇದೆಂಥ ದುರಂತ?

ತಮಿಳು ಬಿಗ್‌ಬಾಸ್‌ನಲ್ಲಿ ಸ್ಪರ್ಧಿ ವಿ.ಜೆ ಪಾರ್ವತಿ ಮಧ್ಯರಾತ್ರಿ ಸಹ ಸ್ಪರ್ಧಿ ಕಮರುದ್ದೀನ್ ಅವರ ಕಂಬಳಿಯೊಳಗೆ ನುಸುಳಿದ ಘಟನೆ ನಡೆದಿದೆ. ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯ ಪ್ರಸಾರವಾಗಿದ್ದು, ಟಿಆರ್‌ಪಿಗಾಗಿ ಅಸಭ್ಯತೆಯನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ

Read Full Story

11:15 AM (IST) Dec 26

ಮೇಕಿಂಗ್‌ನಿಂದ ಕತೆವರೆಗೆ.. ಟಾಕ್ಸಿಕ್’ನಿಂದ ‘ಕ್ರಿಮಿನಲ್’ವರೆಗೆ - 2026ರ ಬಹು ನಿರೀಕ್ಷಿತ ಸಿನಿಮಾಗಳು

2026ಕ್ಕೆ ಹ್ಯಾಟ್ರಿಕ್ ಹೀರೋ ಶಿವಣ್ಣನ ‘ಎ ಫಾರ್ ಆನಂದ್’, ‘ಡ್ಯಾಡಿ’ ಸೇರಿದಂತೆ ಹಲವು ಚಿತ್ರಗಳು ಬಿಡುಗಡೆಯಾಗಬಹುದು. ಡಾಲಿ ನಟನೆಯ ‘ಅಣ್ಣ ಫ್ರಂ ಮೆಕ್ಸಿಕೋ’, ‘ಜಿಂಗೋ’ ಸಿನಿಮಾಗಳು ಬರಬಹುದು.

Read Full Story

11:14 AM (IST) Dec 26

BBK 12 - ಗಿಲ್ಲಿ ನಟನ ಮದುವೆ ವಿಷಯ; ಸೀಕ್ರೇಟ್‌ ರಿವೀಲ್‌ ಮಾಡಿಯೇ ಬಿಟ್ರು ತಂದೆ-ತಾಯಿ!

Bigg Boss Kannada Season 12 Episode Update: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟ ಅವರು ಸಖತ್‌ ಆಗಿ ಆಡುತ್ತಿದ್ದಾರೆ. ಈಗ ಗಿಲ್ಲಿ ನಟನ ತಂದೆ-ತಾಯಿ ಮನೆಗೆ ಬಂದಿದ್ದು, ಮದುವೆ ವಿಚಾರ ಚರ್ಚೆ ಆಗಿದೆ. ಅಂದಹಾಗೆ ಅಶ್ವಿನಿ ಗೌಡ ಅವರು ಗಿಲ್ಲಿ ನಟನ ಮದುವೆ ಬಗ್ಗೆ ಮಾತನಾಡಿದ್ದಾರೆ.

Read Full Story

10:53 AM (IST) Dec 26

ಮೈಸೂರು ಅರಮನೆ ಮುಂಭಾಗ ಹೀಲಿಯಂ ಸಿಲಿಂಡರ್‌ ಸ್ಫೋಟ, ಹಲವು ಆಯಾಮದಲ್ಲಿ ಪೊಲೀಸರ ತನಿಖೆ!

ಮೈಸೂರು ಅರಮನೆ ಮುಂಭಾಗ ಹೀಲಿಯಂ ಸಿಲಿಂಡರ್ ಸ್ಫೋಟಗೊಂಡು ಬಲೂನ್ ಮಾರಾಟಗಾರ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಈ ಘಟನೆ ಆಕಸ್ಮಿಕವೇ ಅಥವಾ ಉದ್ದೇಶಪೂರ್ವಕವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read Full Story

10:38 AM (IST) Dec 26

ದ್ವೇಷಪೂರಿತ ದಾಳಿ ತಡೆಗೆ ರಕ್ಷಾ ಕವಚ ಈ ವಿಧೇಯಕ - ಸುಪ್ರೀಂ ಕೋರ್ಟ್‌ ವಕೀಲ ಸಂಕೇತ ಏಣಗಿ ಲೇಖನ

ಈ ವಿಧೇಯಕ ಶಿಕ್ಷೆ ನೀಡುವುದಕ್ಕೆ ಮಾತ್ರ ಸೀಮಿತವಾಗದೆ, ದ್ವೇಷ ಹರಡುವಿಕೆ ತಡೆಯುವ ಸಮಗ್ರ ಉದ್ದೇಶವನ್ನೂ ಹೊಂದಿದೆ. ದ್ವೇಷ ಭಾಷಣದ ಪ್ರಸಾರ, ಪ್ರಕಟಣೆ ಅಥವಾ ಪ್ರಚಾರವನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ.

Read Full Story

10:20 AM (IST) Dec 26

ಬಸ್‌ ದುರಂತವಾದ್ರೂ ಎಚ್ಚೆತ್ತುಕೊಳ್ಳದ KSRTC, ಫೋನ್‌ ಕಿವಿಯಲ್ಲಿಟ್ಟುಕೊಂಡೇ ಡ್ರೈವಿಂಗ್‌!

ಬೆಂಗಳೂರಿನಿಂದ ಬೆಳಗಾವಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕ, 40 ಪ್ರಯಾಣಿಕರ ಜೀವವನ್ನು ಪಣಕ್ಕಿಟ್ಟು ಡ್ರೈವಿಂಗ್ ಮಾಡುವಾಗಲೇ ಮೊಬೈಲ್‌ನಲ್ಲಿ ಮಾತನಾಡಿದ್ದಾನೆ. ಧಾರವಾಡದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಈ ಘಟನೆಯನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದಾರೆ.

Read Full Story

10:17 AM (IST) Dec 26

ಅಹಿಂದ, ಎಡಪಂಥೀಯರೇ ನಿಜವಾದ ದ್ವೇಷಭಾಷಣಕಾರರು - ಎನ್.ರವಿಕುಮಾರ್ ಲೇಖನ

ವಿಧೇಯಕಲ್ಲಿ ಜಾತಿ ಎಂಬ ಪದವನ್ನು ಏಕೆ ಕೈಬಿಡಲಾಗಿದೆ? ಜಾತಿ ವಿರುದ್ಧ ದ್ವೇಷ ಕಾರುವುದು, ದ್ವೇಷ ಭಾಷಣ, ದ್ವೇಷ ಅಪರಾಧದ ವ್ಯಾಪ್ತಿಗೆ ಬರುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಕಾನೂನು ತಜ್ಞರು, ಕಾಯ್ದೆ ಮಾಡಿದವರು ಸ್ಪಷ್ಟಪಡಿಸಬೇಕು.

Read Full Story

09:49 AM (IST) Dec 26

ಚಿತ್ರದುರ್ಗ ಬಸ್‌ ದುರಂತ - ಮೃತ ಸಂಖ್ಯೆ 7ಕ್ಕೆ ಏರಿಕೆ, ಬಸ್‌ ಡ್ರೈವರ್‌ ರಫೀಕ್‌ ಸಾವು

ಚಿತ್ರದುರ್ಗದ ಬಳಿ ನಡೆದ ಭೀಕರ ಬಸ್ ಅಪಘಾತದಲ್ಲಿ ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಚಿಕಿತ್ಸೆ ಪಡೆಯುತ್ತಿದ್ದ ಬಸ್ ಚಾಲಕ ಮೊಹಮದ್ ರಫೀಕ್ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸುಟ್ಟು ಕರಕಲಾದ ಮೃತದೇಹಗಳನ್ನು ಡಿಎನ್‌ಎ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು.

Read Full Story

09:41 AM (IST) Dec 26

ಜಗದ್ಗುರುಗಳ ಜೊತೆ ಕನ್ನಡ ನಟಿ ಪಲ್ಲವಿ ಮತ್ತಿಘಟ್ಟ 1 ಗಂಟೆ ಮಾತುಕತೆ ಸುಳ್ಳು - ಶೃಂಗೇರಿ ಪೀಠ ಸ್ಪಷ್ಟನೆ

Actress Pallavi Mattighatta: ಕನ್ನಡ ಕಿರುತೆರೆ ನಟಿ ಪಲ್ಲವಿ ಮತ್ತಿಘಟ್ಟ ಅವರು ಶೃಂಗೇರಿ ಕ್ಷೇತ್ರದ ಗುರುಗಳ ಜೊತೆ ಒಂದು ಗಂಟೆ ಮಾತನಾಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಮಠದವರು ಸ್ಪಷ್ಟೀಕರಣ ನೀಡಿದ್ದಾರೆ. ಹಾಗಾದರೆ ನಡೆದಿದ್ದು ಏನು?

 

Read Full Story

09:36 AM (IST) Dec 26

ವರ್ಷಾಂತ್ಯಕ್ಕೆ ಭರ್ತಿಯಾದ ಚಿತ್ರಮಂದಿರಗಳು - ಸ್ಯಾಂಡಲ್‌ವುಡ್‌ನಲ್ಲಿ ಕ್ರಿಸ್‌ಮಸ್‌ ಸಂಭ್ರಮ

ಡಿಸೆಂಬರ್‌ ಮಾಸದಲ್ಲಿ ಬಿಡುಗಡೆಯಾದ ಮೂರು ಸ್ಟಾರ್‌ ಸಿನಿಮಾಗಳು ಚಿತ್ರರಂಗಕ್ಕೆ ತಕ್ಕಮಟ್ಟಿನ ಚೈತನ್ಯ ತಂದಿವೆ. ಬಹುತೇಕ ಚಿತ್ರಮಂದಿರಗಳು ಭರ್ತಿಯಾಗಿ ಸ್ಯಾಂಡಲ್‌ವುಡ್‌ ಕಳೆಗಟ್ಟುತ್ತಿದೆ.

Read Full Story

09:25 AM (IST) Dec 26

ಯಶ್ ಎದುರು ಧುರಂಧರ್ 2 ಬ್ಲಾಕ್‌ಬಸ್ಟರ್ ಮಾಡಲು ನಿರ್ಮಾಪಕರ ಭರ್ಜರಿ ಪ್ಲಾನ್, 2000 ಕೋಟಿ ಪಕ್ಕಾ ಎಂದ ಜನ!

ರಣವೀರ್ ಸಿಂಗ್ ಅವರ 'ಧುರಂಧರ್ 2' ಮಾರ್ಚ್ 19, 2026 ರಂದು ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂನಲ್ಲಿ ಪ್ಯಾನ್ ಇಂಡಿಯಾ ರಿಲೀಸ್ ಆಗಲಿದೆ. 640 ಕೋಟಿ ಗಳಿಸಿದ ಮೊದಲ ಭಾಗದ ನಂತರ, ಸೀಕ್ವೆಲ್ ಪೋಸ್ಟ್ ಪ್ರೊಡಕ್ಷನ್‌ನಲ್ಲಿದೆ.

Read Full Story

09:09 AM (IST) Dec 26

BBK 12 - ಮಾಳು ನಿಪನಾಳ ಮಕ್ಕಳ ಅಬ್ಬರಕ್ಕೆ ಬೆರಗಾದ ಗಿಲ್ಲಿ ನಟ; ಅಂಥದ್ದೇನು ಮಾಡಿದ್ರು?

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋಗೆ ಫ್ಯಾಮಿಲಿ ರೌಂಡ್‌ ಇದ್ದು, ಈಗಾಗಲೇ ಮನೆಗೆ ಎಲ್ಲ ಸ್ಪರ್ಧಿಗಳ ಮನೆಯವರು ಎಂಟ್ರಿ ಕೊಟ್ಟಿದ್ದಾರೆ. ಈಗ ಮಾಳು ನಿಪನಾಳ ಅವರ ಕುಟುಂಬ ಕೂಡ ದೊಡ್ಮನೆಗೆ ಬಂದಿದೆ.

Read Full Story

08:40 AM (IST) Dec 26

Halli Power Show Winner - ಹಳ್ಳಿ ಪವರ್‌ ಶೋ ಗ್ರ್ಯಾಂಡ್‌ ಫಿನಾಲೆಯಲ್ಲಿ ಗೆಲ್ಲೋರು ಯಾರು?

Halli Power Show: ಸಿಟಿ ಲೈಫ್‌ ಬಿಟ್ಟು, ಹಳ್ಳಿಯಲ್ಲಿ ಜೀವನ ಮಾಡುವ ಕಥೆಯೇ ‘ಹಳ್ಳಿ ಪವರ್’ ರಿಯಾಲಿಟಿ ಶೋನ ತಿರುಳು. ಈಗ ಈ ಶೋ ಗ್ರ್ಯಾಂಡ್‌ ಫಿನಾಲೆ ಸಮಯ ಹತ್ತಿರ ಬಂದಿದೆ. ಹಾಗಾದರೆ ಯಾರು ವಿನ್ನರ್‌ ಆಗ್ತಾರೆ?

 

Read Full Story

08:26 AM (IST) Dec 26

ದಾವಣಗೆರೆಯ ಶೈಕ್ಷಣಿಕ ಪುನರುಜ್ಜೀವನದ ಶಿಲ್ಪಿ ಶಾಮನೂರು

ಡಾ.ಶಾಮನೂರು ಶಿವಶಂಕರಪ್ಪ ಅವರು ರಾಜ್ಯ ರಾಜಕಾರಣದಲ್ಲಿ ಸರಳ ಸಜ್ಜನ, ಸಾತ್ವಿಕ ರಾಜಕಾರಣಿಯಾಗಿದ್ದರು. ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರದಲ್ಲೂ ಅಚ್ಚಳಿಯದ ಮುದ್ರೆ ಒತ್ತಿದ್ದರು. ಅವರು ದೇಶದ ಯಾವುದೇ ರಾಜ್ಯ ವಿಧಾನಸಭೆ ಪ್ರತಿನಿಧಿಸುವ ಶಾಸಕರ ಪೈಕಿ ಅತ್ಯಂತ ಹಿರಿಯರು ಎನ್ನುವುದು ವಿಶೇಷ.

Read Full Story

08:15 AM (IST) Dec 26

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ

ಪ್ರಸ್ತುತ ದಿನಮಾನಗಳಲ್ಲಿ ನಾವು ಆಧುನಿಕ ಆಹಾರ ಪದ್ಧತಿ ಅಳವಡಿಕೆ ಮಾಡಿಕೊಂಡಿದ್ದೇವೆ. ಆದರೆ, ಯಾವುದು ಶುದ್ಧ ಮತ್ತು ಯಾವುದು ಅಶುದ್ಧ ಎಂಬುದನ್ನು ಪತ್ತೆ ಮಾಡುವುದೇ ಸವಾಲಿನ ಸಂಗತಿ ಆಗಿದೆ.

Read Full Story

07:41 AM (IST) Dec 26

ಒಬ್ಬ ಮಾರ್ಕ್‌, ಎರಡು ರಾತ್ರಿ, ಒಂದು ಹಗಲು: ಇಲ್ಲಿದೆ ಪವರ್‌ಫುಲ್‌ ಆ್ಯಕ್ಷನ್‌ ಸಿನಿಮಾ 'ಮಾರ್ಕ್' ವಿಮರ್ಶೆ

ಹೀರೋನ ಒಂದು ಏಟಿಗೇ ರಕ್ತ ಕಾರುವ, ಗಾಳಿಯಲ್ಲಿ ಹಾರುವ ಹತ್ತಾರು ವಿಲನ್‌ಗಳು, ನೆಲಕ್ಕೆ ಗುದ್ದಿದರೆ ನೆಲವೇ ಒಡೆಯುವಂಥಾ ಹೀರೋ ಕೇಂದ್ರಿತ ವೈಭವೀಕರಣಗಳು ಸಾಕಷ್ಟಿವೆ. ಬೋನಸ್‌ನಂತೆ ಡ್ಯಾನ್ಸಿಂಗ್ ಸ್ಟೈಲ್‌ ಫೈಟ್‌ ಇದೆ.

 

Read Full Story

07:41 AM (IST) Dec 26

ಗೃಹಲಕ್ಷ್ಮೀಯ 5 ಸಾವಿರ ಕೋಟಿ ಮಿಸ್‌ ಆಗಿದ್ದು ಹೇಗೆ?: ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ

ರಾಜ್ಯದಲ್ಲಿ ಇರುವುದು ಕಾಂಗ್ರೆಸ್‌ನ ಲೂಟಿ ಸರ್ಕಾರ. ಒಬ್ಬ ಆರ್ಥಿಕ ಸಚಿವರಿಗೆ ಗೃಹಲಕ್ಷ್ಮೀ ಯೋಜನೆಯ ₹5 ಸಾವಿರ ಕೋಟಿ ಬಗ್ಗೆ ಮಾಹಿತಿಯೇ ಇಲ್ಲವೆಂದರೆ ಹೇಗೆ? ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

 

Read Full Story

07:40 AM (IST) Dec 26

ದರ್ಶನ್ ಪತ್ನಿ ವಿಜಯಲಕ್ಷ್ಮೀ ನಿಂದನೆ ಪ್ರಕರಣ: ನಕಲಿ ಖಾತೆಗಳ ಮಾಹಿತಿ ಕೋರಿ ಮೆಟಾಗೆ ಸಿಸಿಬಿ ಪತ್ರ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣ ಸಂಬಂಧ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಮಾಲೀಕತ್ವದ ಮೆಟಾ ಕಂಪನಿಗೆ ಅಧಿಕಾರಿಗಳು ಪತ್ರ ಬರೆದು ಮಾಹಿತಿ ಕೋರಿದ್ದಾರೆ ಎಂದು ತಿಳಿದು ಬಂದಿದೆ.

 

Read Full Story

07:40 AM (IST) Dec 26

‘ಹೇಟ್‌’ಬುಕ್‌ ಕಮೆಂಟ್‌ಗಳಿಗೆ ದ್ವೇಷದ ಬಿಲ್‌ ಕಡಿವಾಣ?

ಶರವೇಗವಾಗಿ ಮೊಬೈಲ್‌ ಫೋನ್‌ಗಳನ್ನು ಸ್ಕ್ರೋಲ್‌ ಮಾಡುವ ಇವತ್ತಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಎಂಬುದು ನಮ್ಮನ್ನು ಪರಸ್ಪರ ಬೆಸೆಯುವ ವೇದಿಕೆಯಾಗಬೇಕಿತ್ತು. ದುರ್ದೈವವೆಂದರೆ, ಅದು ಈಗ ವಿಷ ಉಗುಳುವ ಪೆಡಂಭೂತವಾಗಿಬಿಟ್ಟಿದೆ.

 

Read Full Story

07:39 AM (IST) Dec 26

ಚುನಾವಣೆ ಯಾವಾಗ ನಡೆದರೂ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ: ಬಿ.ವೈ.ವಿಜಯೇಂದ್ರ ವಿಶ್ವಾಸ

ವಾಜಪೇಯಿ ಅವರ ದೇಶಭಕ್ತಿ ನಮಗೆ ಪ್ರೇರಣೆ ಆಗಬೇಕು. ಅವರ ದೂರದೃಷ್ಟಿತ್ವವನ್ನು ಅರ್ಥ ಮಾಡಿಕೊಳ್ಳಿ. ಅಸ್ತಿತ್ವ ಕಳಕೊಳ್ಳುತ್ತಿರುವ ಕಾಂಗ್ರೆಸ್ಸಿನ ಸ್ಥಿತಿಯನ್ನು ಪಂಚಾಯಿತಿ ಚುನಾವಣೆ ತೋರಿಸಿಕೊಟ್ಟಿದೆ ಎಂದರು ಬಿವೈವಿ.

 

Read Full Story

07:39 AM (IST) Dec 26

ಕುರ್ಚಿ ಸರ್ಕಸ್‌ ಮಧ್ಯೆ ಇಂದು ಸಿದ್ದು ದೆಹಲಿಗೆ - ನಾಳೆ ಸಿಡಬ್ಲುಸಿ ಸಭೆಯಲ್ಲಿ ಸಿಎಂ ಭಾಗಿ

ಒಂದೆಡೆ ಕರ್ನಾಟಕದಲ್ಲಿ ಸಿಎಂ ಕುರ್ಚಿ ಕಸರತ್ತು ನಡೆಯುತ್ತಿದೆ. ಇದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.27ರಂದು ದೆಹಲಿಯಲ್ಲಿ ನಡೆಯಲಿರುವ ಎಐಸಿಸಿ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಶುಕ್ರವಾರ ಸಂಜೆ ತೆರಳಲಿದ್ದಾರೆ.

 

Read Full Story

07:39 AM (IST) Dec 26

ಸಲಹೆ ಕೊಟ್ಟರೆ ದುರಹಂಕಾರದ ಮಾತು: ರಾಜ್ಯ ಸರ್ಕಾರದ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

ಮೂಲ ಸೌಕರ್ಯದ ಬಗ್ಗೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಸಲಹೆ ಕೊಟ್ಟರೆ, ರಾಜ್ಯ ಸರ್ಕಾರದವರು ದುರಂಹಕಾರದ ಮಾತುಗಳನ್ನು ಆಡುತ್ತಾರೆ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

 

Read Full Story

07:38 AM (IST) Dec 26

ಭೂಪರಿವರ್ತನೆ ಇನ್ನು ಅತಿ ಸರಳ

ರಾಜ್ಯ ಸರ್ಕಾರವು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿಗೆ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಮಾಸ್ಟರ್‌ ಪ್ಲಾನ್ ಏರಿಯಾ (ಸಮಗ್ರ ಯೋಜನಾ ಪ್ರದೇಶ) ಪ್ರಕಾರ ಭೂ ಬಳಕೆ ಮಾಡಿಕೊಳ್ಳಲು ಪ್ರತ್ಯೇಕವಾಗಿ ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

 

Read Full Story

More Trending News