ಚೀನಾ ವಿಚಾರದಲ್ಲಿ ಕೇಂದ್ರ ದುರ್ಬಲ ಕಾಂಗ್ರೆಸ್ ಕಿಡಿ

KannadaprabhaNewsNetwork |  
Published : Apr 03, 2024, 01:33 AM ISTUpdated : Apr 03, 2024, 04:00 AM IST
 ಕಾಂಗ್ರೆಸ್ | Kannada Prabha

ಸಾರಾಂಶ

ಅರುಣಾಚಲಪ್ರದೇಶದ 30 ಹಳ್ಳಿಗಳಿಗೆ ಚೀನಾ ಚೀನಿ ಭಾಷೆಯಲ್ಲಿ ಹೆಸರು ಇಟ್ಟಿರುವುದು, ಚೀನಾ ವಿಷಯದಲ್ಲಿ ಬಿಜೆಪಿ ಸರ್ಕಾರ ದುರ್ಬಲವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಕಾಂಗ್ರೆಸ್‌ ಕಿಡಿಕಾರಿದೆ

ನವದೆಹಲಿ: ಅರುಣಾಚಲಪ್ರದೇಶದ 30 ಹಳ್ಳಿಗಳಿಗೆ ಚೀನಾ ಚೀನಿ ಭಾಷೆಯಲ್ಲಿ ಹೆಸರು ಇಟ್ಟಿರುವುದು, ಚೀನಾ ವಿಷಯದಲ್ಲಿ ಬಿಜೆಪಿ ಸರ್ಕಾರ ದುರ್ಬಲವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಕಾಂಗ್ರೆಸ್‌ ಕಿಡಿಕಾರಿದೆ. 

ಚೀನಾ ಉದ್ಧಟತನದ ಬಗ್ಗೆ ವಿದೇಶಾಂಗ ಸಚಿವರು. ಹೆಸರು ಬದಲಾವಣೆ ಮಾಡಿದ ಮಾತ್ರಕ್ಕೆ ಏನೂ ಬದಲಾಗಲ್ಲ. ಅರುಣಾಚಲ ಪ್ರದೇಶವು ಭಾರತಕ್ಕೆ ಸೇರಿದ್ದು. ಭವಿಷ್ಯದಲ್ಲಿಯೂ ಹಾಗೆಯೇ ಇರಲಿದೆ ಎಂದಿದ್ದಾರೆ. 

ಹಾಗಿದ್ದರೆ 2020ರ ಬಳಿಕ ಅರುಣಾಚಲ ಪ್ರದೇಶದ ವಿಚಾರದಲ್ಲಿ ಚೀನಾದ ಉದ್ಧಟತನಕ್ಕೆ ಕೇಂದ್ರ ಯಾವ ರೀತಿಯ ಕ್ರಮ ಕೈಗೊಂಡಿದೆ ಎಂದು ಕಾಂಗ್ರೆಸ್‌ ಪ್ರಶ್ನೆ ಮಾಡಿದೆ. ಅಲ್ಲದೆ ಈ ರೀತಿಯ ಹೇಳಿಕೆಗಳು ಕೇಂದ್ರ ಸರ್ಕಾರಕ್ಕೆ ಸೂಕ್ತವಲ್ಲ. ಸಮಸ್ಯೆ ಬಗೆ ಹರಿಸುವ ಬದಲು, ಇಂತಹ ಹೇಳಿಕೆಗಳನ್ನು ನೀಡುವುದು ಕೇಂದ್ರದ ದುರ್ಬಲ ನಡೆಯನ್ನು ತೋರಿಸುತ್ತದೆ ಎಂದು ಪಕ್ಷದ ವಕ್ತಾರ ಮನೀಷ್‌ ತಿವಾರಿ ಆರೋಪ ಮಾಡಿದ್ದಾರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ವಿಶ್ವದ ಅತಿದೊಡ್ಡ ದ್ವೀಪದ ಮೇಲೆ ಟ್ರಂಪ್‌ ವ್ಯಾಮೋಹ ಏಕೆ? ಅಮೆರಿಕ ತೆಕ್ಕೆಗೆ ಗ್ರೀನ್‌‘ಲ್ಯಾಂಡ್‌’?
ಇರಾನ್‌ ಜನತಾ ದಂಗೆ ದೇಶವ್ಯಾಪಿ, ಎಲ್ಲೆಡೆ ಕಿಚ್ಚು! ಒಂದೇ ದಿನ 200 ಪ್ರತಿಭಟನಾಕಾರರ ಹತ್ಯೆ?