<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Kannada Prabha</title>
        <link>https://www.kannadaprabha.in</link>
        <description><![CDATA[Kannada Prabha - No.1 News channel in Karnataka, which delivers Local and International news in Marathi language.]]></description>
        <image>
            <url>https://static-assets.asianetnews.com/images/ogimages/OG_Bangla.jpg</url>
            <width>143</width>
            <height>100</height>
            <link>https://www.kannadaprabha.in</link>
            <title>Kannada Prabha</title>
        </image>
        <lastBuildDate>Mon, 06 Jul 2026 13:43:07 +0530</lastBuildDate>
        <atom:link href="https://www.kannadaprabha.in/rss" rel="self" type="application/rss+xml"/>
        <item>
            <title><![CDATA[ಭಾರತಾಂಬೆಯ ಹೆಮ್ಮೆಯ ಪುತ್ರ ಡಾ। ಶ್ಯಾಮ ಮುಖರ್ಜಿ]]></title>
            <link>https://www.kannadaprabha.in/special-news/dr-syama-prasad-mukherjee-the-proud-son-of-mother-india/articleshow-bfvb77g</link>
            <guid isPermaLink="true">https://www.kannadaprabha.in/special-news/dr-syama-prasad-mukherjee-the-proud-son-of-mother-india/articleshow-bfvb77g</guid>
            <pubDate>Mon, 06 Jul 2026 13:43:07 +0530</pubDate>
            <description><![CDATA[ದೇಶ ನಿರ್ಮಾಣದ ಕಾರ್ಯವು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿದ್ದು ಎಂದು ನಂಬಿದ್ದ ಮುಖರ್ಜಿ ಅವರು ಪಂಡಿತ್ ನೆಹರು ಅವರ ಸಂಪುಟಕ್ಕೆ ಸೇರಿದರು. ಅವರು ಪ್ರಾಮಾಣಿಕತೆಯಿಂದ ಮತ್ತು ರಚನಾತ್ಮಕ ಮನೋಭಾವದಿಂದ ಸೇವೆ ಸಲ್ಲಿಸಿದರು.]]></description>
            <media:content url="https://static-gi.asianetnews.com/images/01kwtwzk9xaf80bcgca3ea4nmt/fotojet--15--1783314238781.jpg" type="image/jpeg" height="390" width="690"/>
            <content:encoded><![CDATA[&lt;h3&gt;&lt;strong&gt;ನರೇಂದ್ರ ಮೋದಿ&lt;/strong&gt;&lt;/h3&gt;&lt;h3&gt;&lt;strong&gt;ಪ್ರಧಾನಿ&lt;/strong&gt;&lt;/h3&gt;&lt;p&gt;ದೇಶ ನಿರ್ಮಾಣದ ಕಾರ್ಯವು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿದ್ದು ಎಂದು ನಂಬಿದ್ದ ಮುಖರ್ಜಿ ಅವರು ಪಂಡಿತ್ ನೆಹರು ಅವರ ಸಂಪುಟಕ್ಕೆ ಸೇರಿದರು. ಅವರು ಪ್ರಾಮಾಣಿಕತೆಯಿಂದ ಮತ್ತು ರಚನಾತ್ಮಕ ಮನೋಭಾವದಿಂದ ಸೇವೆ ಸಲ್ಲಿಸಿದರು. ಆದರೆ, ರಾಷ್ಟ್ರೀಯ ಪ್ರಾಮುಖ್ಯತೆಯ ಪ್ರಶ್ನೆಗಳು ಭಿನ್ನ ಹಾದಿಯನ್ನು ಬಯಸುತ್ತವೆ ಎಂದು ಅವರಿಗೆ ಅನ್ನಿಸಿದಾಗ ಮುಖರ್ಜಿ ಅವರು ಘನತೆಯಿಂದ ಅಧಿಕಾರ ತ್ಯಜಿಸಿದರು&lt;/p&gt;&lt;h2&gt;ಇಂದು ಡಾ। ಶ್ಯಾಮಪ್ರಸಾದ ಮುಖರ್ಜಿ 125ನೇ ಜಯಂತಿ&lt;/h2&gt;&lt;p&gt;ರಾಷ್ಟ್ರೀಯತೆ ಮತ್ತು ನಿಸ್ವಾರ್ಥ ಸೇವೆಯ ಆದರ್ಶಗಳನ್ನು ಗೌರವಿಸುವ ಅಸಂಖ್ಯಾತ ಜನರಿಗೆ ಜು.6 ವಿಶೇಷ ದಿನವಾಗಿದೆ. ನಾವು ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಅವರ 125ನೇ ಜನ್ಮ ಜಯಂತಿಯನ್ನು ಸ್ಮರಿಸುತ್ತಿದ್ದೇವೆ. ಅವರ ಜೀವನವು ಭಾರತ ಮಾತೆಯ ಬಗೆಗಿನ ಧೈರ್ಯ ಮತ್ತು ಅಚಲ ಬದ್ಧತೆಗೆ ಎಂದೆಂದಿಗೂ ಮಾದರಿಯಾಗಿದೆ. ಆಧುನಿಕ ಭಾರತದಲ್ಲಿ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಅವರಷ್ಟು ಆಳವಾಗಿ ಬುದ್ಧಿವಂತಿಕೆ, ಸಾರ್ವಜನಿಕ ಸೇವೆ ಮತ್ತು ನೈತಿಕ ದೃಢತೆಯ ಸಂಗಮವನ್ನು ಹೊಂದಿದ್ದ ನಾಯಕರು ಬಹಳ ಕಡಿಮೆ.&lt;/p&gt;&lt;p&gt;ಶ್ಯಾಮ ಪ್ರಸಾದ್ ಅವರು ತಮಗೆ ಸುಲಭವಾಗಿ, ಸಂರಕ್ಷಿತ ಮತ್ತು ಸುಖಮಯ ಜೀವನವನ್ನು ನೀಡಬಲ್ಲಂತಹ ಪರಿಸರದಲ್ಲಿ ಜನಿಸಿದ್ದರು. ಅವರ ತಂದೆ ಸರ್ ಅಶುತೋಷ್ ಮುಖರ್ಜಿ ಅವರು ಆ ಕಾಲದ ಪ್ರಮುಖ ಶಿಕ್ಷಣ ತಜ್ಞರು ಮತ್ತು ಬುದ್ಧಿ ಜೀವಿಗಳಲ್ಲಿ ಒಬ್ಬರಾಗಿದ್ದರು. ಆದರೆ, ವಿಧಿಯು ಅವರ ಮುಂದೆ ಸೌಲಭ್ಯಗಳ ಹಾದಿಯನ್ನು ಇರಿಸಿದ್ದರೂ ಅವರ ಆತ್ಮಸಾಕ್ಷಿಯು ಅವರನ್ನು ತ್ಯಾಗ ಮತ್ತು ರಾಷ್ಟ್ರ ಸೇವೆಯ ಹಾದಿಯತ್ತ ಕೊಂಡೊಯ್ಯಿತು. ವಸಾಹತುಶಾಹಿ, ಕೋಮುವಾದ, ಮಾನವೀಯ ಸವಾಲುಗಳು ಹೀಗೆ ಆ ಕಾಲದ ಯಾವುದೇ ಪ್ರಕ್ಷುಬ್ಧತೆಯ ವಿಷಯದಲ್ಲಿ ಮೌನ ಪ್ರೇಕ್ಷಕರಾಗಿ ಉಳಿಯಲು ಅವರಿಗೆ ಸಾಧ್ಯವಿರಲಿಲ್ಲ. ಈ ಹಾದಿಯಲ್ಲಿ ಅವರು ತಮ್ಮ ಶಿಶುವಿನ ಮರಣ ಮತ್ತು ನಂತರ ಪತ್ನಿಯ ಅಗಲಿಕೆಯಂತಹ ಆಳವಾದ ವೈಯಕ್ತಿಕ ದುರಂತಗಳನ್ನು ಅನುಭವಿಸಿದರು. ಆದರೂ, ಈ ದುರಂತಗಳು ಅವರ ಸಂಕಲ್ಪವನ್ನು ಇನ್ನಷ್ಟು ದೃಢಗೊಳಿಸಿದವು ಮತ್ತು ಸೇವೆಯ ಬಗೆಗಿನ ಅವರ ಬದ್ಧತೆಯನ್ನು ಹೆಚ್ಚಿಸಿದವು.&lt;/p&gt;&lt;p&gt;ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಅವರ ಸಾರ್ವಜನಿಕ ಜೀವನವನ್ನು ವ್ಯಾಖ್ಯಾನಿಸುವ ಒಂದು ಆದರ್ಶವಿದ್ದರೆ ಅದು ಭಾರತದ ಅವಿಭಾಜ್ಯತೆ. ದೇಶ ವಿಭಜನೆಯ ಪ್ರಕ್ಷುಬ್ಧತೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಭಾರತದ ಅವಿಭಾಜ್ಯ ಅಂಗವಾಗಿ ಉಳಿಯುವುದನ್ನು ಖಚಿತಪಡಿಸಿಕೊಳ್ಳಲು ಅವರು ದೃಢವಾಗಿ ನಿಂತರು. ಕೆಲವು ವರ್ಷಗಳ ನಂತರ, ಅದೇ ದೃಢ ನಂಬಿಕೆ ಅವರನ್ನು ಜಮ್ಮು ಮತ್ತು ಕಾಶ್ಮೀರದತ್ತ ಸೆಳೆಯಿತು. ಸೆರೆವಾಸ ಅವರನ್ನು ನಿರುತ್ಸಾಹಗೊಳಿಸಲಿಲ್ಲ ಮತ್ತು ಏಕಾಂತತೆ ಅವರನ್ನು ಕುಗ್ಗಿಸಲಿಲ್ಲ. ತಾವು ಯಾರ ಹಿತಕ್ಕಾಗಿ ಹೋರಾಡಿದ್ದರೋ, ಅಂತಹ ಅಸಂಖ್ಯಾತ ಜನರಿಂದ ದೂರವಿದ್ದಾಗಲೇ ಬಂಧನದಲ್ಲಿ ಅವರ ಜೀವನವು ಅಕಾಲಿಕವಾಗಿ ಕೊನೆಗೊಂಡಿತು. ಇತಿಹಾಸದಲ್ಲಿ ಒಬ್ಬ ವ್ಯಕ್ತಿಯ ಅಂತಿಮ ತ್ಯಾಗವು ರಾಜಕೀಯವನ್ನು ಮೀರಿ ರಾಷ್ಟ್ರೀಯ ಸ್ಮರಣೆಯ ಭಾಗವಾಗುವ ಕೆಲವು ಕ್ಷಣಗಳು ಬರುತ್ತವೆ. ಡಾ.ಮುಖರ್ಜಿ ಅವರ ಕೊನೆಯ ಪಯಣ ಅಂತಹ ಒಂದು ಕ್ಷಣವಾಗಿದೆ. ಆಚಾರ್ಯ ವಿನೋಬಾ ಭಾವೆಯವರು, &lsquo;ಡಾ.ಮುಖರ್ಜಿಯವರು ತಮಗೆ ನಂಬಿಕೆಯಿದ್ದ ಉದ್ದೇಶಕ್ಕಾಗಿ ತಮ್ಮನ್ನೇ ಬಲಿದಾನ ಮಾಡಿಕೊಂಡರು&rsquo; ಎಂದು ಹೇಳಿದ್ದರು. ಹಲವು ವರ್ಷಗಳ ನಂತರ, 2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ 370 ಮತ್ತು 35(ಎ) ವಿಧಿಗಳ ರದ್ದು ಅವರ ಹುತಾತ್ಮತೆಗೆ ನೀಡಿದ ಅತ್ಯಂತ ಸೂಕ್ತ ಗೌರವವಾಗಿದೆ.&lt;/p&gt;&lt;p&gt;&amp;nbsp;ಶಿಕ್ಷಣದ ಕುರಿತು ಮುಖರ್ಜಿ ದೃಷ್ಟಿಕೋನ&amp;nbsp;&lt;/p&gt;&lt;p&gt;ಡಾ.ಮುಖರ್ಜಿ ಅವರು ಭಾರತಕ್ಕೆ ಮತ್ತು ಭಾರತೀಯ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡಿದ್ದರು. ಅವರು ಕಲ್ಕತ್ತಾ ವಿಶ್ವವಿದ್ಯಾನಿಲಯದ ಅತಿಕಿರಿಯ ಉಪಕುಲಪತಿಯಾದರು. ತಮ್ಮ ವಿಶಿಷ್ಟ ಶೈಲಿಯಲ್ಲಿ, ದೇಶಭಕ್ತಿಯ ಮತ್ತು ಭವಿಷ್ಯದ ದೃಷ್ಟಿಯುಳ್ಳ ಸಕಾರಾತ್ಮಕ ಬದಲಾವಣೆಗಳನ್ನು ತಂದರು. ಶಿಕ್ಷಣ ತಜ್ಞರ ಸಮಾವೇಶವೊಂದರಲ್ಲಿ ಮಾತನಾಡಿದ್ದ ಮುಖರ್ಜಿಯವರು, &lsquo;ಶೈಕ್ಷಣಿಕ ಸಂಸ್ಥೆಗಳನ್ನು ಕೇವಲ ಗುಮಾಸ್ತರು ಮತ್ತು ಕಡಿಮೆ ಸಂಬಳ ಪಡೆಯುವ ಸಿಬ್ಬಂದಿಯನ್ನು ಸಿದ್ಧಪಡಿಸುವ ಕಾರ್ಖಾನೆಗಳೆಂದು ನೋಡುವುದು ತಪ್ಪು. ನಾವು ಪುರಸಭೆಗಳು, ಪ್ರಾಂತೀಯ ಮತ್ತು ಕೇಂದ್ರ ಶಾಸನಸಭೆಗಳಂತಹ ನಮ್ಮ ಸ್ವಯಂ-ಆಡಳಿತ ಸಂಸ್ಥೆಗಳಿಗೆ ನಾಯಕತ್ವವನ್ನು ನೀಡಬಲ್ಲ ಹಾಗೂ ಹಣಕಾಸು, ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರಗಳಂತಹ ಜೀವನದ ವಿವಿಧ ಕ್ಷೇತ್ರಗಳಲ್ಲಿ ವ್ಯವಹಾರಗಳನ್ನು ನಿರ್ವಹಿಸಬಲ್ಲ ವಿದ್ಯಾರ್ಥಿಗಳನ್ನು ಸಿದ್ಧಪಡಿಸಬೇಕು&rsquo; ಎಂದು ಅದ್ಭುತವಾಗಿ ಹೇಳಿದ್ದರು.&lt;/p&gt;&lt;p&gt;ಅವರ ನೇತೃತ್ವದಲ್ಲಿ, ಕಲ್ಕತ್ತಾ ವಿಶ್ವವಿದ್ಯಾನಿಲಯವು ಗ್ರಂಥಾಲಯದ ಮೂಲಸೌಕರ್ಯಗಳನ್ನು ಸುಧಾರಿಸುವುದು, ವಿಜ್ಞಾನದಲ್ಲಿ ಸಂಶೋಧನೆಯನ್ನು ಉತ್ತೇಜಿಸುವುದು, ಕಲಾಕೃತಿಗಳ ಅಧ್ಯಯನವನ್ನು ಪ್ರೋತ್ಸಾಹಿಸುವುದು ಮತ್ತು ಕೃಷಿಯಲ್ಲಿ ಕೋರ್ಸ್&zwnj;ಗಳನ್ನು ಸ್ಥಾಪಿಸುವಂತಹ ವಿಶಿಷ್ಟ ಪ್ರಯತ್ನಗಳನ್ನು ಕೈಗೊಂಡಿತು. ಕ್ರೀಡೆ, ಶಿಕ್ಷಕರ ತರಬೇತಿ ಮತ್ತು ವಿದ್ಯಾರ್ಥಿ ಕಲ್ಯಾಣದಂತಹ ಕ್ಷೇತ್ರಗಳತ್ತ ಅವರು ಗಮನ ಸೆಳೆದರು. ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳಲ್ಲಿ ಹೆಮ್ಮೆಯ ಭಾವನೆಯನ್ನು ಮೂಡಿಸಲು ಜ.24 ಅನ್ನು ವಿಶ್ವವಿದ್ಯಾನಿಲಯದ ಸ್ಥಾಪನಾ ದಿನವನ್ನಾಗಿ ಆಚರಿಸುವ ಪದ್ಧತಿ ಪ್ರಾರಂಭಿಸಿದರು. ವಿಶ್ವವಿದ್ಯಾಲಯಕ್ಕಾಗಿ ಗೀತೆ ರಚಿಸಲು ಅವರು ಸ್ವತಃ ಗುರುದೇವ ಟ್ಯಾಗೋರ್ ಅವರನ್ನೇ ಕೋರಿದ್ದರು.&lt;/p&gt;&lt;p&gt;&amp;nbsp;ಜನಸಂಘಕ್ಕೆ ದೀಪದ ಚಿಹ್ನೆ&amp;nbsp;&lt;/p&gt;&lt;p&gt;ಈ ಮನೋಭಾವದ ಮತ್ತೊಂದು ಉದಾಹರಣೆಯನ್ನು ಅವರ ಜೀವನದ ನಂತರದ ಭಾಗದಲ್ಲಿ, ಅವರು ಭಾರತೀಯ ಜನಸಂಘವನ್ನು ಸ್ಥಾಪಿಸಲು ನಿರ್ಧರಿಸಿದಾಗ ಕಾಣಬಹುದು. ಕಾಂಗ್ರೆಸ್ ಸರ್ವವ್ಯಾಪಿಯಾಗಿದ್ದ ಸಮಯದಲ್ಲಿ, ನಮ್ಮ ಸಾಂಸ್ಕೃತಿಕ ಬೇರುಗಳೊಂದಿಗೆ ಸಂಪರ್ಕ ಹೊಂದಿರುವಂತೆಯೇ ಭಾರತದ ಪ್ರಗತಿಗಾಗಿ ಧ್ವನಿ ಎತ್ತಲು ಪರ್ಯಾಯ ವೇದಿಕೆಯ ಅಗತ್ಯವಿದೆ ಎಂದು ಮುಖರ್ಜಿ ಭಾವಿಸಿದರು. ಪಕ್ಷದ ಚಿಹ್ನೆಯು ಮಣ್ಣಿನ ದೀಪವಾಗಿದ್ದುದು ಅರ್ಥಪೂರ್ಣವಾಗಿತ್ತು. ಒಂದು ದೀಪವು ಚಿಕ್ಕದಾಗಿ ಕಾಣಿಸಬಹುದು, ಆದರೆ ಅದು ತನ್ನ ಸುತ್ತಲಿನ ಕತ್ತಲೆಯನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದೆ. ಜನಸಂಘವು ಸಕ್ರಿಯವಾಗಿದ್ದ ವರ್ಷಗಳಲ್ಲಿ ಮತ್ತು ನಂತರದ ದಿನಗಳಲ್ಲಿ ಮಾಡಿದ್ದು ಕೂಡ ಇದನ್ನೇ.&lt;/p&gt;&lt;p&gt;&amp;nbsp;ಕೈಗಾರಿಕಾ ಕ್ಷೇತ್ರಕ್ಕೆ ಕೊಡುಗೆ:&amp;nbsp;&lt;/p&gt;&lt;p&gt;ಭಾರತದ ಕೈಗಾರಿಕಾ ಮತ್ತು ಪೂರೈಕೆ ಸಚಿವರಾಗಿ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಅವರ ಅಧಿಕಾರಾವಧಿಯು, ಅಭಿವೃದ್ಧಿಯ ಕುರಿತಾದ ಅವರ ಸಮಗ್ರ ಮತ್ತು ಮಾನವೀಯ ದೃಷ್ಟಿಕೋನವನ್ನು ಹೊಂದಿದ್ದ ಒಬ್ಬ ರಾಜನೀತಿ ತಜ್ಞರನ್ನು ಅನಾವರಣಗೊಳಿಸುತ್ತದೆ. ಅವರು ಕೈಗಾರಿಕೆಯನ್ನು ನವತಂತ್ರದ ಭಾರತಕ್ಕೆ ಘನತೆ, ಅವಕಾಶ ಮತ್ತು ಆತ್ಮವಿಶ್ವಾಸವನ್ನು ಮರಳಿ ತರುವ ಸಾಧನವಾಗಿ ನೋಡಿದರು. ಅವರು ಸಂಪತ್ತಿನ ಸೃಷ್ಟಿ ಮತ್ತು ಮೌಲ್ಯವರ್ಧನೆಯನ್ನು ಗೌರವಿಸಿದರು. ದಾಮೋದರ ವ್ಯಾಲಿ ಕಾರ್ಪೊರೇಷನ್, ಸಿಂಧ್ರಿ ರಸಗೊಬ್ಬರ ಕಾರ್ಖಾನೆ ಮತ್ತು ಬಲಿಷ್ಠ ಕೈಗಾರಿಕಾ ನೀತಿಯಂತಹ ಪ್ರವರ್ತಕ ಉಪಕ್ರಮಗಳ ಮೂಲಕ ಆಧುನಿಕ ಕೈಗಾರಿಕಾ ಭಾರತದ ಅಡಿಪಾಯವನ್ನು ಹಾಕುವಾಗ, ಅವರು ಭಾರತದ ಸಾಂಪ್ರದಾಯಿಕ ಶಕ್ತಿಗಳು ನಿರ್ಲಕ್ಷ್ಯಕ್ಕೆ ಒಳಗಾಗದಂತೆ ಏಕಕಾಲದಲ್ಲಿ ನೋಡಿಕೊಂಡರು. ಕೈಮಗ್ಗ, ಕುಟೀರ ಕೈಗಾರಿಕೆಗಳು, ಕುಶಲಕರ್ಮಿಗಳು ಮತ್ತು ಜವಳಿ ಕಾರ್ಮಿಕರು ಅವರಲ್ಲಿ ಸಮಾನವಾದ ಬದ್ಧತೆಯುಳ್ಳ ಚಾಂಪಿಯನ್ ಅನ್ನು ಕಂಡುಕೊಂಡರು.&lt;/p&gt;&lt;p&gt;ಇಲ್ಲಿ, ನಾನು ವೈಯಕ್ತಿಕ ಅನುಭವವನ್ನು ಹಂಚಿಕೊಳ್ಳಲು ಬಯಸುತ್ತೇನೆ. ಸ್ವಾವಲಂಬನೆಯ ಸ್ಪಷ್ಟ ದೃಷ್ಟಿಯೊಂದಿಗೆ ಡಾ.ಮುಖರ್ಜಿಯವರು ಸ್ಥಾಪಿಸಲು ಶ್ರಮಿಸಿದ ಸಿಂಧ್ರಿ ಕಾರ್ಖಾನೆಯನ್ನು, ಹಲವು ದಶಕಗಳ ಕಾಲ ದೇಶವನ್ನು ಆಳಿದವರು ನಿರ್ಲಕ್ಷಿಸಿದ್ದರು. ನಮ್ಮ ಸರ್ಕಾರಕ್ಕೆ ಅದರ ಪುನರುಜ್ಜೀವನಕ್ಕೆ ಕೊಡುಗೆ ನೀಡುವ ಅವಕಾಶ ದೊರೆತಿದ್ದು ನನ್ನ ಪಾಲಿಗೆ ಹೆಮ್ಮೆಯ ವಿಷಯವಾಗಿದೆ. ಭಾರತದ ನಾಗರಿಕತೆಯ ಪರಂಪರೆಯು ದೀರ್ಘಕಾಲದಿಂದಲೂ ಸಂವಾದ ಮತ್ತು ಚರ್ಚೆಗಳನ್ನು ಸಂಭ್ರಮಿಸಿದೆ. ಡಾ.ಮುಖರ್ಜಿಯವರು ಈ ಪ್ರಜಾ ಸಾಮಾಜಿಕ ಮನೋಭಾವವನ್ನು ಸಾಕಾರಗೊಳಿಸಿದ್ದರು. ದೇಶ ನಿರ್ಮಾಣದ ಕಾರ್ಯವು, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿದ್ದು ಎಂದು ನಂಬಿ, ಅವರು ಪಂಡಿತ್ ನೆಹರು ಅವರ ಸಂಪುಟಕ್ಕೆ ಸೇರಿದರು. ಅವರು ಪ್ರಾಮಾಣಿಕತೆಯಿಂದ ಮತ್ತು ರಚನಾತ್ಮಕ ಮನೋಭಾವದಿಂದ ಸೇವೆ ಸಲ್ಲಿಸಿದರು. ಆದರೆ, ರಾಷ್ಟ್ರೀಯ ಪ್ರಾಮುಖ್ಯತೆಯ ಪ್ರಶ್ನೆಗಳು ಭಿನ್ನ ಹಾದಿಯನ್ನು ಬಯಸುತ್ತವೆ ಎಂದು ಅವರಿಗೆ ಅನ್ನಿಸಿದಾಗ, ಅವರು ಘನತೆಯಿಂದ ಅಧಿಕಾರ ತ್ಯಜಿಸಿದರು ಮತ್ತು ರಾಷ್ಟ್ರಕ್ಕೆ ಅಗತ್ಯವೆಂದು ಅವರು ನಂಬಿದ್ದ ರಾಜಕೀಯ ಕೆಲಸಕ್ಕಾಗಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡರು.&lt;/p&gt;&lt;p&gt;&amp;nbsp;ಕಾಂಗ್ರೆಸ್&zwnj; ವಿರುದ್ಧ ಮುಖರ್ಜಿ ಹೋರಾಟ&amp;nbsp;&lt;/p&gt;&lt;p&gt;75 ವರ್ಷಗಳ ಹಿಂದೆ, ಪಂಡಿತ್ ನೆಹರು ಅವರು ಸಂವಿಧಾನಕ್ಕೆ ಮೊದಲ ತಿದ್ದುಪಡಿಯನ್ನು ತಂದರು, ಇದು ವಾಕ್ ಸ್ವಾತಂತ್ರ್ಯದ ಮೇಲಿನ ನೇರ ದಾಳಿಯಾಗಿತ್ತು. ಡಾ.ಮುಖರ್ಜಿಯವರು ಇದನ್ನು ತೀವ್ರವಾಗಿ ಟೀಕಿಸಿದವರಲ್ಲಿ ಒಬ್ಬರಾಗಿದ್ದರು. ಕಾಂಗ್ರೆಸ್ ಏನು ಮಾಡಲು ಸಮರ್ಥವಾಗಿದೆ ಎಂಬುದನ್ನು ಅವರು ಸಂಪೂರ್ಣವಾಗಿ ಅರಿತಿದ್ದರು ಮತ್ತು ಅವರು ಹೇಳಿದ್ದು ನಿಜವಾಯಿತು. 75 ವರ್ಷಗಳ ಹಿಂದೆ ಮೊದಲ ತಿದ್ದುಪಡಿಯನ್ನು ತಂದವರು, 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದರು ಮತ್ತು 50 ವರ್ಷಗಳ ಹಿಂದೆ 42ನೇ ತಿದ್ದುಪಡಿ ಕಾಯಿದೆಯನ್ನು ತಂದರು, ಇದು ಮತ್ತೊಮ್ಮೆ ಉದಾರವಾದಿ ಪ್ರಜಾಸತ್ತಾತ್ಮಕ ಮೌಲ್ಯಗಳ ಮೂಲದ ಮೇಲೆ ದಾಳಿ ಮಾಡಿತು.&lt;/p&gt;&lt;p&gt;ಡಾ.ಮುಖರ್ಜಿ ಅವರು ತಮ್ಮ ಮಾನವೀಯ ಪ್ರಯತ್ನಗಳಿಗಾಗಿಯೂ ಜನಪ್ರಿಯರಾಗಿದ್ದರು. 1943ರಲ್ಲಿ ಬಂಗಾಳದಲ್ಲಿ ಅತಿ ಭೀಕರ ಬರಗಾಲ ಉಂಟಾದಾಗ, ಡಾ.ಮುಖರ್ಜಿಯವರು ಸಂತ್ರಸ್ತರಿಗೆ ಸೇವೆ ಸಲ್ಲಿಸುವುದರಲ್ಲಿ ಮಗ್ನರಾದರು. ಜನರಿಗೆ ಆಹಾರ ಒದಗಿಸಲು ಹಲವಾರು ಕ್ಯಾಂಟೀನ್&zwnj;ಗಳು ಮತ್ತು ಪರಿಹಾರ ಕೇಂದ್ರಗಳನ್ನು ತೆರೆಯುವುದನ್ನು ಅವರು ಖಚಿತಪಡಿಸಿದರು. ಒಂದು ಕಡೆ, ಅವರು ತಮ್ಮ ಜನರ ಸಂಕಷ್ಟದಿಂದ ತೀವ್ರವಾಗಿ ನೊಂದಿದ್ದರೆ, ಇನ್ನೊಂದೆಡೆ ವಸಾಹತುಶಾಹಿ ಆಡಳಿತಗಾರರ ಸಂವೇದನಾಹೀನತೆಯು ಅವರನ್ನು ಅಸಹ್ಯಪಡುವಂತೆ ಮಾಡಿತ್ತು. ಅವರು &lsquo;ಪಂಚಶೇರ್ ಮನ್ವಾಂತರ್&rsquo; (ಐವತ್ತರ ಕ್ಷಾಮ) ಎಂಬ ಪುಸ್ತಕವನ್ನೂ ಬರೆದರು, ಅದರಲ್ಲಿ ಅವರು ತಮ್ಮ ನೋವನ್ನು ವ್ಯಕ್ತಪಡಿಸಿದರು. 1942ರಲ್ಲಿ ಮಿಡ್ನಾಪುರದಲ್ಲಿ ಸೂಪರ್ ಸೈಕ್ಲೋನ್ ಅಪ್ಪಳಿಸಿದಾಗ, ಪರಿಸ್ಥಿತಿಯನ್ನು ಸಾಮಾನ್ಯ ಸ್ಥಿತಿಗೆ ತರಲು ಅವರು ಮಾಡಿದ ಪ್ರಯತ್ನಗಳು ವ್ಯಾಪಕವಾಗಿ ಶ್ಲಾಘನೆಗೆ ಒಳಗಾದವು.&lt;/p&gt;&lt;p&gt;&amp;nbsp;ಯುವಕರಿಗೆ ಕರೆ:&amp;nbsp;&lt;/p&gt;&lt;p&gt;ಕಲ್ಕತ್ತಾದ ಕಾಲೇಜೊಂದರಲ್ಲಿ ಮಾತನಾಡಿದ್ದ ಡಾ.ಮುಖರ್ಜಿ, &lsquo;ನೀವು ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ, ಅದನ್ನು ಗಂಭೀರವಾಗಿ, ಸಂಪೂರ್ಣವಾಗಿ ಮತ್ತು ಚೆನ್ನಾಗಿ ಮಾಡಿ. ಅದನ್ನು ಅರ್ಧಕ್ಕೆ ಬಿಡಬೇಡಿ, ನೀವು ನಿಮ್ಮ ಅತ್ಯುತ್ತಮ ಪ್ರಯತ್ನವನ್ನು ನೀಡುವವರೆಗೂ ಎಂದಿಗೂ ತೃಪ್ತರಾಗಬೇಡಿ&rsquo; ಎಂದು ಯುವಕರಿಗೆ ಕರೆ ನೀಡಿದರು. ಭಾರತವು &lsquo;ವಿಕಸಿತ ಭಾರತ&rsquo;ದ ಗುರಿಯತ್ತ ಮುನ್ನಡೆಯುತ್ತಿರುವಾಗ, ನಾವು ಅವರಿಗೆ ಸಲ್ಲಿಸಬಹುದಾದ ಅತ್ಯುತ್ತಮ ಗೌರವವೆಂದರೆ, ಅವರು ಆಳವಾಗಿ ನಂಬಿದ್ದ ಬಲಿಷ್ಠ, ಸಂಘಟಿತ, ಆತ್ಮವಿಶ್ವಾಸವುಳ್ಳ ಮತ್ತು ಸಹಾನುಭೂತಿಯುಳ್ಳ ಭಾರತವನ್ನು ನಿರ್ಮಿಸಲು ಪ್ರತಿದಿನ ಶ್ರಮಿಸುವುದು ಮತ್ತು ಇಂದಿನ ಯುವಕರನ್ನು ನೋಡಿದಾಗ, ಅವರು ಸಂದರ್ಭಕ್ಕೆ ತಕ್ಕಂತೆ ಮುಂದೆ ಬಂದು, ನಿಖರವಾಗಿ ಅದನ್ನೇ ಮಾಡುತ್ತಾರೆ ಎಂಬ ದೃಢವಾದ ನಂಬಿಕೆ ನನಗಿದೆ.&lt;/p&gt;]]></content:encoded>
            <category><![CDATA[special]]></category>
            <dc:creator>Sujatha NR</dc:creator>
            <atom:link href="https://www.kannadaprabha.in/special-news/dr-syama-prasad-mukherjee-the-proud-son-of-mother-india/articleshow-bfvb77g"/>
        </item>
        <item>
            <title><![CDATA[ಕಲಬುರಗಿ ಲೀಡರ್‌ ಮಂದಿ ಸ್ಟ್ರಾಂಗ್‌ ಮಾತಾಡೋದಿಲ್ವಾ?]]></title>
            <link>https://www.kannadaprabha.in/special-news/dont-the-leaders-from-kalaburagi-speak-strongly/articleshow-mvfurxc</link>
            <guid isPermaLink="true">https://www.kannadaprabha.in/special-news/dont-the-leaders-from-kalaburagi-speak-strongly/articleshow-mvfurxc</guid>
            <pubDate>Mon, 06 Jul 2026 13:26:29 +0530</pubDate>
            <description><![CDATA[ಅಲ್ರಿ, ನೀವು ಹೇಳ್ದಂಗ ಸ್ಟ್ರಾಂಗ್‌ ಮಾತಾಡ್ಬೇಕೆಂದ್ರ ನಾವೇನ್‌ ಕಿರುಚಬೇಕಾ? ಕೂಗಾಡಬೇಕಾ? ಎಲ್ಲಿ ಏನ್‌ ಮಾತಾಡ್ಬೇಕು ಮಾತಾಡ್ತೇವೆ, ನೀವೇನು ಅಪೊಜಿಷನ್‌ ಥರಾ ಸ್ಟೇಟ್ಮೆಂಟ್‌ ಕೊಡ್ತಿದ್ದೀರಲ್ಲಾ... ನಮ್ಮ ಜನರ , ನಮ್ಮ ಭಾಗದ ಸಮಸ್ಯೆ ಎಲ್ಲಿ ಯಾವಾಗ ಹೇಗೆಲ್ಲಾ ಪ್ರಸ್ತಾಪಿಸಿ ಪರಿಹಾರ ಕಂಡಕೋ ಬೇಕೆಂಬುದು ಗೊತ್ತಿದೆ,]]></description>
            <media:content url="https://static-gi.asianetnews.com/images/01kwv6q6942079yffnw0jw5cch/rd-1783324449060.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯ, ರಾಷ್ಟ್ರ ರಾಜಕೀಯದಲ್ಲಿ ಗಮನ ಸೆಳೆಯುವ ಪ್ರಧಾನ ಪಾತ್ರ ನಿರ್ವಹಿಸ್ತಿರೋ ಕಲಬುರಗಿ ಲೀಡರ್&zwnj; ಮಂದಿ ಸ್ಟ್ರಾಂಗ್&zwnj; ಮಾತಾಡ್ತಾರೋ, ಇಲ್ವೋ? ತಮ್ಮನ್ನ ಆರಿಸಿ ಕಳಿಸಿದ ಜನರ ಸಮಸ್ಯೆಗೆ ಅವರು ಗಟ್ಟಿ ದನಿ ಆಗೋದಿಲ್ವಾ?&lt;/p&gt;&lt;p&gt;ಇಂಥದ್ದೊಂದು ಡೌಟು ಕಲಬುರಗಿ ಸುದ್ದಿ ಶೂರರಿಗೆ ಇದೆ. ಆದರೆ, ಕಲಬುರಗಿಯ ರಾಜ್ಯ ಹಾಗೂ ರಾಷ್ಟ್ರ ನಾಯಕರಿಗೆ ಮಾತ್ರ ಈ ಡೌಟ್&zwnj;ಗೆ ಅರ್ಥವೇ ಇಲ್ಲ. ಏಕೆಂದರೆ ಕಲಬುರಗಿ ಅಭಿವೃದ್ಧಿ ಪಥದಲ್ಲಿದೆ. ಇದಕ್ಕೆ ಬಿಸಿಲೂರಿನ ನಾಯಕರ ಸೇವೆಯೂ ಕಾರಣ.&lt;/p&gt;&lt;p&gt;ಇಂಥದ್ದೊಂದು ಡೌಟು, ಅದಕ್ಕೆ ಮಾರ್ ಏಟು ದೊರಕಿದ್ದು ಡಿ.ಕೆ.ಶಿವಕುಮಾರ್&zwnj; ನೇತೃತ್ವದ ಸರ್ಕಾರದಲ್ಲಿ ಸಚಿವರಾದ ನಂತರ ಶರಣಪ್ರಕಾಶ ಪಾಟೀಲರು ಜಿಲ್ಲೆಯಲ್ಲಿ ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲಿ.&lt;/p&gt;&lt;p&gt;ಮಹಾರಾಷ್ಟ್ರದಿಂದ ಭೀಮಾ ನೀರಿನ ಪಾಲು ಕೇಳಿ ಪಡೆವಲ್ರಿ, ನೀರಿನ ವಿಚಾರದಾಗ ಕಾವೇರಿ ತೀರದ ಜನನಾಯಕರನ್ನು ಹೋಲಿಸಿದ್ರೆ ಕಲಬುರಗಿ ಲೀಡರ್&zwnj; ಮಂದಿ ತುಸು ಡಲ್&zwnj;, ನಮ್ಮ್ಕಡಿ ಲೀಡರ್&zwnj; ಮಂದಿ ಯಾರೂ ಸ್ಟ್ರಾಂಗ್&zwnj; ಮಾತೇ ಆಡೋದಿಲ್ಲ, ಹೀಂಗಾಗಿ ನಮ್ಗ ಕಾಡೋ ಸಮಸ್ಯೆ ಹಂಗೇ ನಮ್ಮನ್ನ ಬಿಡದ್ಹಂಗೇ ಅಟಕಾಯಿಸಿಕೊಂಡಿರ್ತವೆ... ಎಂಬುದು ಪತ್ರಕರ್ತರ ಸವಾಲಿನ ರೂಪದ ಪ್ರಶ್ನೆ.&lt;/p&gt;&lt;p&gt;ಇದಕ್ಕೆ ಸಚಿವರು- ಅಲ್ರಿ, ನೀವು ಹೇಳ್ದಂಗ ಸ್ಟ್ರಾಂಗ್&zwnj; ಮಾತಾಡ್ಬೇಕೆಂದ್ರ ನಾವೇನ್&zwnj; ಕಿರುಚಬೇಕಾ? ಕೂಗಾಡಬೇಕಾ? ಎಲ್ಲಿ ಏನ್&zwnj; ಮಾತಾಡ್ಬೇಕು ಮಾತಾಡ್ತೇವೆ, ನೀವೇನು ಅಪೊಜಿಷನ್&zwnj; ಥರಾ ಸ್ಟೇಟ್ಮೆಂಟ್&zwnj; ಕೊಡ್ತಿದ್ದೀರಲ್ಲಾ... ನಮ್ಮ ಜನರ , ನಮ್ಮ ಭಾಗದ ಸಮಸ್ಯೆ ಎಲ್ಲಿ ಯಾವಾಗ ಹೇಗೆಲ್ಲಾ ಪ್ರಸ್ತಾಪಿಸಿ ಪರಿಹಾರ ಕಂಡಕೋ ಬೇಕೆಂಬುದು ಗೊತ್ತಿದೆ, ಅದ್ಕೇ ನಾನು 4ನೇ ಬಾರಿ ಸಚಿವ, ಜಿಲ್ಲೆಯ ಅನೇಕರು ಸಚಿವರಾಗಿ, ಶಾಸಕರಾಗಿ ಗಟ್ಟಿ ಧ್ವನಿಯಲ್ಲಿ ಮಾತಾಡೋದ್ರಿಂದ್ಲೇ ಕಲಬುರಗಿ ಪ್ರಗತಿ ಪಥದಲ್ಲಿ ಹೊಂಟಿದೆ... ಎಂದೆಲ್ಲಾ ಸಚಿವರು ತಮ್ಮನ್ನೂ ಸೇರಿಸಿಕೊಂಡು ಉಳಿದೆಲ್ಲಾ ಲೀಡರ್&zwnj;ಗಳಿಂದ ಅದ್ಹೇಗೆ ಬಿಸಿಲೂರು ಕಲಬುರಗಿ ಡೆವಲಪ್&zwnj;ಮೆಂಟ್&zwnj; ಆಗ್ತಿದೆ ಅನ್ನೋದನ್ನು ತುಂಬಾ ಸ್ಟ್ರಾಂಗ್&zwnj; ಆಗಿ ಹೇಳಿದರು.&lt;/p&gt;&lt;p&gt;ಈ ವಾದ-ಪ್ರತಿವಾದದ ಬಗ್ಗೆ ತೀರ್ಪನ್ನು ಕಲಬುರಗಿ ಮಹಾಜನತೆಯೇ ನೀಡಬೇಕು.&lt;/p&gt;&lt;h2&gt;&amp;nbsp;ಸಹೃದಯ ಮನುಷ್ಯ ಎಂದರಲ್ಲ.... ಅಷ್ಟೇ ಸಾಕು...&lt;/h2&gt;&lt;p&gt;ಪತ್ರಿಕಾಗೋಷ್ಠಿ ಅಥವಾ ಸಭೆಗಳಲ್ಲಿ ಕಾಂಗ್ರೆಸ್&zwnj; ವಿಚಾರ ಬಂದರೆ ಈಶ್ವರಪ್ಪನವರಿಗೆ ಅದೆಲ್ಲಿಂದಲೋ ಸಿಟ್ಟು, ಆಕ್ರೋಶ ಗರಿಗೆದರುತ್ತದೆ. ಯದ್ವಾ ತದ್ವಾ ಹರಿ ಹಾಯುತ್ತಾರೆ. ಆದರೆ, ಅದರ ಹೊರತಾದ ಕಡೆಗಳಲ್ಲಿ ಎಲ್ಲರ ಬಗೆಗೂ ಅವರೊಂದು ರೀತಿಯ ಸ್ನೇಹ ಪರತೆಯ ವ್ಯಕ್ತಿಯಂತೆ ನಡೆದುಕೊಳ್ಳುತ್ತಾರೆ.&lt;/p&gt;&lt;p&gt;ಹಾಗೆಯೇ ಈಶ್ವರಪ್ಪನವರ ವಿಚಾರ ಬಂದರೆ ಕಾಂಗ್ರೆಸ್ಸಿಗರೂ ಅಷ್ಟೇ. ಎಲ್ಲ ಸಿಟ್ಟು, ಆಕ್ರೋಶವನ್ನು ಹೊರ ಹಾಕಿ ಬಿಡುತ್ತಾರೆ. ಮುಖಾ ಮೂತಿ ನೋಡದೆ ಬಯ್ಯುತ್ತಾರೆ.&lt;/p&gt;&lt;p&gt;ಇತ್ತೀಚೆಗೆ ಪತ್ರಿಕಾಭವನದಲ್ಲಿ ಕಾಂಗ್ರೆಸ್&zwnj; ಮಾಜಿ ಸಚಿವ ಕಿಮ್ಮನೆ ರತ್ನಾಕರ್&zwnj; ಪತ್ರಿಕಾಗೋಷ್ಠಿ ಮುಗಿಸಿ ಹೊರ ಬರುತ್ತಿದ್ದಂತೆ ಮುಂದಿನ ಪತ್ರಿಕಾಗೋಷ್ಠಿಗೆಂದು ಆಗಮಿಸಿದ ಈಶ್ವರಪ್ಪ ಪರಸ್ಪರ ಎದುರಾದರು. ಸುಮ್ಮನೆ ನಕ್ಕು ಮುಂದೆ ಹೊರಟರು.&lt;/p&gt;&lt;p&gt;ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್&zwnj; ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಯನ್ನು ಟೀಕಿಸಿ ಇಂದಿಗೂ ಹರಿಜನರನ್ನು ದೇವಸ್ಥಾನದ ಒಳಗೆ ಬಿಡದೆ ಅವರನ್ನು ತುಳಿಯಲು ಕೆ.ಎಸ್.ಈಶ್ವರಪ್ಪನವರಂಥ ಸಂತತಿಗಳೇ ಕಾರಣ ಎನ್ನುತ್ತಲೇ, ಈಶ್ವರಪ್ಪ ಸಹೃದಯದ ಮನುಷ್ಯ. ಆದರೆ, ಮಾಧ್ಯಮ ಹಾಗೂ ವೇದಿಕೆಗಳು ಕಂಡರೆ ಅವರ ನಾಲಿಗೆ ನಿಲ್ಲುವುದಿಲ್ಲ. ತಮಗೆ ತೋಚಿದಂತೆ ಮಾತನಾಡುತ್ತಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಅವರನ್ನು ಟೀಕೆ ಮಾಡುತ್ತಿದ್ದರು. ಈಗ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಟೀಕೆ ಮಾಡುತ್ತಿದ್ದಾರೆ ಎಂದೆಲ್ಲ ಹೇಳಿದರು.&lt;/p&gt;&lt;p&gt;ಬಳಿಕ ನಡೆದ ಗೋಷ್ಠಿಯಲ್ಲಿ ಕೆ.ಎಸ್&zwnj;.ಈಶ್ವರಪ್ಪ ಅವರನ್ನು ಇದೇ ವಿಚಾರವಾಗಿ ಪತ್ರಕರ್ತರೊಬ್ಬರು ಕೆಣಕಿದರು. ಅದಕ್ಕೆ ಈಶ್ವರಪ್ಪ ಅವರು ಕಿಮ್ಮನೆ ರತ್ನಾಕರ್&zwnj; ಬಗ್ಗೆ ನಾನೇನು ಹೇಳಲ್ಲ. ಕೆ.ಎಸ್.ಈಶ್ವರಪ್ಪ ಸಹೃದಯದ ಮನುಷ್ಯ ಎಂದರಲ್ಲ, ಅಷ್ಟು ಸಾಕಲ್ಲವೇ ಎಂದು ನಕ್ಕರು.&lt;/p&gt;&lt;h3&gt;ಆ ಸದಸ್ಯೆಗೆ ಹೆರಿಗೆಯಾಗಿದ್ದು, ನನಗೆ ಗೊತ್ತಿಲ್ಲ ರ್ರಿ...!&lt;/h3&gt;&lt;p&gt;ಇದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರು ಪತ್ರಕರ್ತರಿಗೆ ನೀಡಿದ ಸ್ಪಷ್ಟನೆ.&lt;/p&gt;&lt;p&gt;ಆಗಿದ್ದೇನಪ್ಪಾ ಅಂದ್ರೆ... ಪಾಲಿಕೆ ಮೇಯರ್&zwnj;, ಉಪಮೇಯರ್&zwnj; ಚುನಾವಣೆಯಲ್ಲಿ ಸದಸ್ಯೆಯೊಬ್ಬರು ಸೇರಿ ಮೂವರು ಗೈರಾಗಿದ್ದರು. ಆಗ ಯಾರ್&zwj;ಯಾರು ಗೈರಾಗಿದ್ದಾರೋ ಅವರ ಹೆಸರು ಕೇಳಲು ಅಧಿಕಾರಿಯೊಬ್ಬರ ಬಳಿ ಪತ್ರಕರ್ತರು ತೆರಳಿದ್ದರು. ಅಧಿಕಾರಿ, ಇಂತಿಂಥವರು ಗೈರಾಗಿದ್ದಾರೆ ಎಂದು ತಿಳಿಸಿದರು.&lt;/p&gt;&lt;p&gt;ಅದಕ್ಕೆ ಪತ್ರಕರ್ತರೊಬ್ಬರು, ಆ ಸದಸ್ಯೆಗೆ ಹೆರಿಗೆ ಆಗಿದೆಯಂತೆ. ಅದಕ್ಕೆ ಗೈರಾಗಿದ್ದಾರಂತೆ ಹೌದಾ? ಎಂದು ಕೇಳೋದಾ? ಈ ಪ್ರಶ್ನೆ ಕೇಳುತ್ತಿದ್ದಂತೆ ಆ ಅಧಿಕಾರಿ ಕಕ್ಕಾಬಿಕ್ಕಿ. ಬಳಿಕ ಅವರು ನಗುತ್ತಲೇ, ಆ ಸದಸ್ಯೆಗೆ ಹೆರಿಗೆಯಾಗಿದ್ದು ನನಗೇನು ಗೊತ್ತಿಲ್ಲ ಬಿಡ್ರಿ.. ಅವರು ಚುನಾವಣೆಗೆ ಹಾಜರಾಗಿಲ್ಲ ಅನ್ನುವುದಷ್ಟೇ ನನಗೆ ಗೊತ್ತು ಎಂದು ಸ್ಪಷ್ಟನೆ ನೀಡುತ್ತಾ ಅಲ್ಲಿಂದ ಕಾಲ್ಕಿತ್ತರು.&lt;/p&gt;&lt;p&gt;&lt;strong&gt;-ಶೇಷಮೂರ್ತಿ ಅವಧಾನಿ&lt;/strong&gt;&lt;/p&gt;&lt;p&gt;&lt;strong&gt;-ಗಣೇಶ್&zwnj; ತಮ್ಮಡಿಹಳ್ಳಿ&lt;/strong&gt;&lt;/p&gt;&lt;p&gt;&lt;strong&gt;-ಶಿವಾನಂದ ಗೊಂಬಿ&lt;/strong&gt;&lt;/p&gt;]]></content:encoded>
            <category><![CDATA[special]]></category>
            <dc:creator>Sujatha NR</dc:creator>
            <atom:link href="https://www.kannadaprabha.in/special-news/dont-the-leaders-from-kalaburagi-speak-strongly/articleshow-mvfurxc"/>
        </item>
        <item>
            <title><![CDATA[ಗೃಹಜ್ಯೋತಿ: ಮನೆ ಬದಲಿಸಿರುವ  ಬಾಡಿಗೆದಾರರಿಗೆ ಆತಂಕ ಬೇಡ]]></title>
            <link>https://www.kannadaprabha.in/karnataka-news/bengaluru-news/gruha-jyothi-no-need-for-concern-among-tenants-who-have-changed-houses/articleshow-8v210ln</link>
            <guid isPermaLink="true">https://www.kannadaprabha.in/karnataka-news/bengaluru-news/gruha-jyothi-no-need-for-concern-among-tenants-who-have-changed-houses/articleshow-8v210ln</guid>
            <pubDate>Mon, 06 Jul 2026 13:17:30 +0530</pubDate>
            <description><![CDATA[ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿ ಪರಿಶೀಲನೆ ವೇಳೆ ಆಧಾರ್ ಮಾಹಿತಿ ಅಪ್‌ಡೇಟ್‌ ಕುರಿತು ‘ಬಾಡಿಗೆದಾರರು’ ಗೊಂದಲ, ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ]]></description>
            <media:content url="https://static-gi.asianetnews.com/images/01jmtqe4bb34rytc4w6r9cg285/1.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಬೆಂಗಳೂರು : &amp;nbsp;&lt;/strong&gt;ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿ ಪರಿಶೀಲನೆ ವೇಳೆ ಆಧಾರ್ ಮಾಹಿತಿ ಅಪ್&zwnj;ಡೇಟ್&zwnj; ಕುರಿತು &lsquo;ಬಾಡಿಗೆದಾರರು&rsquo; ಗೊಂದಲ, ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ. ಹಿಂದೆ ವಾಸವಿದ್ದ ಬಾಡಿಗೆದಾರರ ಆಧಾರ್ ಮಾಹಿತಿ ತೆರವಿನಿಂದ ತಮಗೆ ಈಗ ಸಿಗುತ್ತಿರುವ ಯೋಜನೆಯ ಅನುಕೂಲ ನಿಲ್ಲಲಿದೆಯೇ ಎಂಬ ಆತಂಕ ಅನೇಕರಲ್ಲಿ ಇರುವುದರಿಂದ ಬೆಸ್ಕಾಂ ಈ ಸ್ಪಷ್ಟನೆ ನೀಡಿದೆ.&lt;/p&gt;&lt;h3&gt;ಬಾಡಿಗೆದಾರರ ಆಧಾರ್ ವಿವರಗಳನ್ನು ಅಪ್&zwnj;ಡೇಟ್&zwnj; ಮಾಡಿಕೊಳ್ಳುತ್ತಾರೆ&lt;/h3&gt;&lt;p&gt;ಬೆಸ್ಕಾಂ ಮೀಟರ್ ರೀಡರ್ ಹಾಗೂ ಸಿಬ್ಬಂದಿ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿದಾಗ ಹಳೇ ಬಾಡಿಗೆದಾರರ ಆಧಾರ್ ವಿವರ ತೆಗೆದು, ಪ್ರಸ್ತುತ ವಾಸವಿರುವ ಬಾಡಿಗೆದಾರರ ಆಧಾರ್ ವಿವರಗಳನ್ನು ಅಪ್&zwnj;ಡೇಟ್&zwnj; ಮಾಡಿಕೊಳ್ಳುತ್ತಾರೆ. ಹಾಗಾಗಿ, ಯೋಜನೆ ಸ್ಥಗಿತಗೊಳ್ಳಲಿದೆ ಎಂಬ ಆತಂಕ ಬೇಡ ಎಂದು ಬೆಸ್ಕಾಂ ತಿಳಿಸಿದೆ.&lt;/p&gt;&lt;h2&gt;&lt;strong&gt;ವಿವರ ಬದಲಿಸಲು ಎಲ್ಲೂ ಹೋಗಬೇಕಿಲ್ಲ:&lt;/strong&gt;&lt;/h2&gt;&lt;p&gt;ಬಾಡಿಗೆದಾರರು ತಮ್ಮ ವಿವರಗಳನ್ನು ಬದಲಾಯಿಸಲು ಯಾವುದೇ ಕಚೇರಿಗೆ ಹೋಗಬೇಕಾದ ಅಗತ್ಯವಿಲ್ಲ. ಬೆಸ್ಕಾಂ ಸಿಬ್ಬಂದಿಯೇ ಮನೆ ಬಾಗಿಲಿಗೆ ಬಂದು ನಿಮ್ಮ ಆಧಾರ್ ಮತ್ತು ಬಾಡಿಗೆ, ಲೀಸ್ ಕರಾರು ವಿವರಗಳನ್ನು ಅಪ್&zwnj;ಡೇಟ್ ಮಾಡಿಕೊಳ್ಳುತ್ತಾರೆ. ಈ ಪ್ರಕ್ರಿಯೆ ಕೇವಲ ಫಲಾನುಭವಿಗಳ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿರುವ ಸಾಮಾನ್ಯ ಪ್ರಕ್ರಿಯೆಯಾಗಿದೆ. ಬೆಸ್ಕಾಂ ಸಿಬ್ಬಂದಿಗೆ ಅಗತ್ಯ ದಾಖಲೆಗಳನ್ನು ನೀಡಿ ಸಹಕರಿಸಬೇಕು.&amp;nbsp;&lt;/p&gt;&lt;p&gt;ಈ ಕುರಿತು ಮನೆ ಮಾಲೀಕರು ತಮ್ಮ ಬಾಡಿಗೆದಾರರಿಗೆ ಈ ಪ್ರಕ್ರಿಯೆಯಲ್ಲಿ ಸೂಕ್ತ ಮಾರ್ಗದರ್ಶನ ನೀಡಿ ಬೆಂಬಲಿಸಬೇಕೆಂದು ಬೆಸ್ಕಾಂ ಕೋರಿದೆ. ಹೆಚ್ಚಿನ ಮಾಹಿತಿಗೆ ಬೆಸ್ಕಾಂ ಸಹಾಯವಾಣಿ ಸಂಖ್ಯೆ 1912ಕ್ಕೆ ಸಂಪರ್ಕಿಸಬಹುದು ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.&lt;/p&gt;]]></content:encoded>
            <category><![CDATA[bengaluru]]></category>
            <dc:creator>Sujatha NR</dc:creator>
            <atom:link href="https://www.kannadaprabha.in/karnataka-news/bengaluru-news/gruha-jyothi-no-need-for-concern-among-tenants-who-have-changed-houses/articleshow-8v210ln"/>
        </item>
        <item>
            <title><![CDATA[SIR ವೇಳೆ ಮೃತಮಟ್ಟ ಅಧಿಕಾರಿ  ಭುವನಾಗೆ ₹1.3 ಕೋಟಿ ಪರಿಹಾರ]]></title>
            <link>https://www.kannadaprabha.in/karnataka-news/bidar-news/rs-1-3-crore-compensation-for-bhuvana-the-officer-who-died-during-the-sir-exercise/articleshow-9bp19ba</link>
            <guid isPermaLink="true">https://www.kannadaprabha.in/karnataka-news/bidar-news/rs-1-3-crore-compensation-for-bhuvana-the-officer-who-died-during-the-sir-exercise/articleshow-9bp19ba</guid>
            <pubDate>Mon, 06 Jul 2026 12:52:05 +0530</pubDate>
            <description><![CDATA[ಎಸ್ಐಆರ್ ಕಾರ್ಯಕ್ಕೆ ತೆರಳುತ್ತಿದ್ದ ವೇಳೆ ತುಮಕೂರು ಜಿಲ್ಲೆಯ ಗೂಳೂರು ಗ್ರಾಪಂ ವಿಎಲ್‌ಒ ಭುವನಾ ಅವರು ಮೃತಪಟ್ಟ ಹಿನ್ನೆಲೆಯಲ್ಲಿ ಮೃತರ ಕುಟುಂಬಕ್ಕೆ ವಿಮೆ ಮೊತ್ತ ₹1 ಕೋಟಿ ಹಾಗೂ ಚುನಾವಣಾ ಆಯೋಗದಿಂದ ₹30 ಲಕ್ಷ ಸೇರಿ ಒಟ್ಟು ₹1 ಕೋಟಿ 30 ಲಕ್ಷ ನೆರವು]]></description>
            <media:content url="https://static-gi.asianetnews.com/images/01kwpz4ka30g5rc4jrdhynk87t/bhuvana-1783182282050.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ತುಮಕೂರು: &amp;nbsp;&lt;/strong&gt;ಎಸ್ಐಆರ್ ಕಾರ್ಯಕ್ಕೆ ತೆರಳುತ್ತಿದ್ದ ವೇಳೆ ತುಮಕೂರು ಜಿಲ್ಲೆಯ ಗೂಳೂರು ಗ್ರಾಪಂ ವಿಎಲ್&zwnj;ಒ ಭುವನಾ ಅವರು ಮೃತಪಟ್ಟ ಹಿನ್ನೆಲೆಯಲ್ಲಿ ಮೃತರ ಕುಟುಂಬಕ್ಕೆ ವಿಮೆ ಮೊತ್ತ ₹1 ಕೋಟಿ ಹಾಗೂ ಚುನಾವಣಾ ಆಯೋಗದಿಂದ ₹30 ಲಕ್ಷ ಸೇರಿ ಒಟ್ಟು ₹1 ಕೋಟಿ 30 ಲಕ್ಷ ನೆರವು ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದ್ದಾರೆ.&lt;/p&gt;&lt;p&gt;ಎಸ್ಐಆರ್ ಕಾರ್ಯಕ್ಕೆ ತೆರಳುತ್ತಿದ್ದಾಗ ಅಪಘಾತದಿಂದ ಭುವನಾ ಸಾವನ್ನಪ್ಪಿದ್ದಕ್ಕೆ ಕೆಲಸದ ಒತ್ತಡವೇ ಕಾರಣ ಎಂದು ದೂರಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಕಂದಾಯ ನೌಕರರ ಸಂಘದಿಂದ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಡಿಸಿಎಂ ಅವರ ಭರವಸೆ ಮೇರೆಗೆ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದಾರೆ.&lt;/p&gt;&lt;h2&gt;ಇದೊಂದು ದುರಾದೃಷ್ಟಕರ ಘಟನೆ.&lt;/h2&gt;&lt;p&gt;ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಪರಮೇಶ್ವರ್&zwnj;, ಇದೊಂದು ದುರಾದೃಷ್ಟಕರ ಘಟನೆ. ಅಪಘಾತ ಒತ್ತಡದ ಕಾರಣದಿಂದ ಆಯಿತೇ ಅಥವಾ ಬೇರೆ ಕಾರಣಗಳಿಂದ ಆಯಿತೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.&lt;/p&gt;&lt;p&gt;ಪ್ರತಿಭಟನೆಗೆ ವ್ಹೀಲ್&zwnj;ಚೇರ್&zwnj;ನಲ್ಲೇ ಆಗಮಿಸಿದ ಯಶಸ್ವಿನಿ: ಈ ಮಧ್ಯೆ, ಪ್ರತಿಭಟನೆಗೆ ಅಪಘಾತದಲ್ಲಿ ಗಾಯಗೊಂಡ ತಿಪಟೂರು ತಾಲೂಕಿನ ಹುಣಸೆಘಟ್ಟ ಗ್ರಾಮ ಆಡಳಿತಾಧಿಕಾರಿ (ವಿಎಒ) ಯಶಸ್ವಿನಿ ಅವರು ವ್ಹೀಲ್&zwnj;ಚೇರ್&zwnj;ನಲ್ಲೇ ಆಗಮಿಸಿದ್ದರು. ಶನಿವಾರ ಅವರು ಎಸ್&zwnj;ಐಆರ್&zwnj; ಕಾರ್ಯ ನಿಮಿತ್ತ ತಿಪಟೂರಿನಿಂದ ಹುಣಸೇಘಟ್ಟಕ್ಕೆ ಹೋಗುವಾಗ ದಾರಿ ಮಧ್ಯೆ ಬೈಕ್ ನಿಂದ ಬಿದ್ದು ಗಾಯಗೊಂಡಿದ್ದರು.&lt;/p&gt;&lt;p&gt;ನನಗೆ ಆರೋಗ್ಯದ ಸಮಸ್ಯೆ ಇದ್ದುದ್ದರಿಂದ ಘಟನೆ ನಡೆದ ಕೂಡಲೇ ಬರಲಾಗಲಿಲ್ಲ. ಆದರೆ, ಜಿಲ್ಲಾಡಳಿತದ ಜೊತೆ ಸಂಪರ್ಕದಲ್ಲಿದ್ದು ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸೂಚನೆ ನೀಡಿದ್ದಾಗಿ ತಿಳಿಸಿದರು.&lt;/p&gt;&lt;p&gt;ಎಸ್ಐಆರ್ ಪೂರ್ಣಗೊಳಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಇದಕ್ಕೆ 2 ತಿಂಗಳಾದರೂ ಸಮಯಾವಕಾಶ ನೀಡಬೇಕಾಗಿತ್ತು. ಹೀಗಾಗಿ ಅಧಿಕಾರಿಗಳು ಭಯದ ವಾತಾವರಣದಲ್ಲಿ ಕೆಲಸ ಮಾಡುವಂತಾಗಿದೆ ಎಂದು ಅವರು ಹೇಳಿದರು.&lt;/p&gt;&lt;p&gt;ಈ ಮಧ್ಯೆ, ಮೃತ ಭುವನಾ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಅವರ ಹುಟ್ಟೂರು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ವರದನಾಯಕನಹಳ್ಳಿಯಲ್ಲಿ ಅವರ ಕುಟುಂಬಕ್ಕೆ ಸೇರಿದ ತೋಟದಲ್ಲಿ ಭಾನುವಾರ ಸಂಜೆ ಒಕ್ಕಲಿಗ ಸಂಪ್ರದಾಯದಂತೆ ನೆರವೇರಿತು. ಭುವನಾ ಅವರು ಎಸ್&zwnj;ಐಆರ್ ಪ್ರಕ್ರಿಯೆಗಾಗಿ ತೆರಳುತ್ತಿದ್ದ ವೇಳೆ ತುಮಕೂರಿನ ಗೂಳೂರು ಬಳಿ ಅವರ ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದು, ಅವರು ಮೃತಪಟ್ಟಿದ್ದರು.&lt;/p&gt;&lt;h3&gt;ಎಸ್&zwnj;ಐಆರ್ ಕಾರ್ಯದಲ್ಲಿ ಪಾಲ್ಗೊಂಡಿದ್ದ ಬಿಎಲ್&zwnj;ಒ ಹೃದಯಾಘಾತದಿಂದ &amp;nbsp;ಮೃತ&lt;/h3&gt;&lt;p&gt;&lt;strong&gt;ಬೀದರ್:&lt;/strong&gt; ಎಸ್&zwnj;ಐಆರ್ ಕಾರ್ಯದಲ್ಲಿ ಪಾಲ್ಗೊಂಡಿದ್ದ ಬಿಎಲ್&zwnj;ಒ ಹೃದಯಾಘಾತದಿಂದ ಮೃತಪಟ್ಟ ಘಟನೆ ಬೀದರ್&zwnj; ತಾಲೂಕಿನ ಅಮಲಾಪುರ ಗ್ರಾಮದಲ್ಲಿ ನಡೆದಿದೆ. ಭಾಲ್ಕಿ ತಾಲೂಕಿನ ಡೋಣಗಾಪುರ ಗ್ರಾಮದ ನಿವಾಸಿ ಸುನೀಲ್ (45) ಮೃತಪಟ್ಟ ಬಿಎಲ್&zwnj;ಒ. ಸುನೀಲ್ ಅವರು ಬೀದರ್ ತಾಲೂಕಿನ ಅಮಲಾಪುರ ಗ್ರಾಮದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಗುರುವಾರ ಅಮಲಾಪುರ ಗ್ರಾಮದ ಬೂತ್ ಸಂಖ್ಯೆ 33ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಎದೆ ನೋವು ಕಾಣಿಸಿಕೊಂಡು, ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ಬೀದರ್&zwnj;ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.&lt;/p&gt;]]></content:encoded>
            <category><![CDATA[bidar]]></category>
            <dc:creator>Sujatha NR</dc:creator>
            <atom:link href="https://www.kannadaprabha.in/karnataka-news/bidar-news/rs-1-3-crore-compensation-for-bhuvana-the-officer-who-died-during-the-sir-exercise/articleshow-9bp19ba"/>
        </item>
        <item>
            <title><![CDATA[ರಾಚೋಟೇಶ್ವರ  ಸ್ವಾಮೀಜಿಯವರ 33 ದಿನದ ಗಾಳಿ-ನೀರಿಲ್ಲದೆ ನಡೆದ ಯೋಗ ಸಮಾಧಿ ಧ್ಯಾನ ಅಂತ್ಯ]]></title>
            <link>https://www.kannadaprabha.in/karnataka-news/conclusion-of-dr-rachoteshwara-shivacharya-swamiji-s-33-day-shivayoga-samadhi-observance/articleshow-vgal6f3</link>
            <guid isPermaLink="true">https://www.kannadaprabha.in/karnataka-news/conclusion-of-dr-rachoteshwara-shivacharya-swamiji-s-33-day-shivayoga-samadhi-observance/articleshow-vgal6f3</guid>
            <pubDate>Mon, 06 Jul 2026 02:30:00 +0530</pubDate>
            <description><![CDATA[ಜೂ. 3ರಂದು ಶ್ರೀಮಠದಲ್ಲಿ ಡಾ. ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳ ಶಿವಯೋಗ ಸಮಾಧಿ ಪ್ರಕ್ರಿಯೆ ಆರಂಭವಾಗಿತ್ತು. ಗಾಳಿ-ಬೆಳಕು ಕಿಂಚಿತ್ತೂ ಆಡದಂತೆ ಮಂಟಪದ ಮುಖ್ಯದ್ವಾರಕ್ಕೆ ಕಲ್ಲುಗಳನ್ನಿಟ್ಟು ಸಿಮೆಂಟ್ ಹಾಕಿ ಸಂಪೂರ್ಣವಾಗಿ ಮುಚ್ಚಲಾಗಿತ್ತು.]]></description>
            <media:content url="https://static-assets.asianetnews.com/kp/json/05072026/pictures/5GDG11B_12.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಳಗುಂದ: &lt;/strong&gt;ಅನ್ನ, ನೀರು, ಗಾಳಿ ಸೇವಿಸದೆ 33 ದಿನಗಳ ಕಾಲ (775 ಗಂಟೆ) ಲೋಕ ಕಲ್ಯಾಣಕ್ಕಾಗಿ ಅಂತೂರ- ಬೆಂತೂರ ಗ್ರಾಮದ ಬೂದೀಶ್ವರ ಸಂಸ್ಥಾನ ಮಠದಲ್ಲಿ ಡಾ. ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಕೈಗೊಂಡಿದ್ದ ಶಿವಯೋಗ ಸಮಾಧಿ ಅನುಷ್ಠಾನ ಭಾನುವಾರ ಅಂತ್ಯಗೊಂಡಿತು.&lt;/p&gt;&lt;p&gt;33ನೇ ದಿನ ಭಾನುವಾರ ಶ್ರೀಮಠದ ಕಲ್ಲಿನ ಮಂಟಪದಲ್ಲಿ ಶಿವಯೋಗ ಸಮಾಧಿಯಲ್ಲಿದ್ದ ಶ್ರೀಗಳನ್ನು ನಾಡಿನ ವಿವಿಧ ಮಠಾಧೀಶರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ದ್ವಾರ ಒಡೆದರು. ಆನಂತರ ಶಿವಯೋಗ ಸಮಾಧಿದಲ್ಲಿದ್ದ ಡಾ. ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಗರ್ಭಗುಡಿಯಯಿಂದ ಹೊರಬಂದು ಸೇರಿದ್ದ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಿದರು.&lt;/p&gt;&lt;p&gt;ಮಹದಾಯಿ ಯೋಜನೆ ಶೀಘ್ರವಾಗಿ ಜಾರಿಯಾಗಲಿ, ದೇಶ ಕಾಯುವ ಯೋಧರು ಹಾಗೂ ದೇಶಕ್ಕೆ ಅನ್ನ ನೀಡುವ ರೈತರಿಗೆ ಒಳಿತಾಗಲಿ ಎಂಬ ಉದಾತ್ತ ಲೋಕ ಕಲ್ಯಾಣ ಸಂಕಲ್ಪದೊಂದಿಗೆ ಶ್ರೀಗಳು ಶಿವಯೋಗ ಸಮಾಧಿ ಅನುಷ್ಠಾನ ಕೈಗೊಂಡಿದ್ದರು. ಅನ್ನ, ನೀರು ಸೇವಿಸದೆ, ಗಾಳಿ, ಬೆಳಕು ಇಲ್ಲದ ಕಲ್ಲಿನ ಮಂಟಪದೊಳಗೆ ಶಿವಧ್ಯಾನ, ಯೋಗಸಾಧನೆಯಲ್ಲಿ ನಿರತರಾಗಿದ್ದರು.&lt;/p&gt;&lt;h2&gt;&lt;strong&gt;ಜೂ. 3ರಂದು ಆರಂಭ: &amp;nbsp;&lt;/strong&gt;&lt;/h2&gt;&lt;p&gt;ಜೂ. 3ರಂದು ಶ್ರೀಮಠದಲ್ಲಿ ಡಾ. ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳ ಶಿವಯೋಗ ಸಮಾಧಿ ಪ್ರಕ್ರಿಯೆ ಆರಂಭವಾಗಿತ್ತು. ಗಾಳಿ-ಬೆಳಕು ಕಿಂಚಿತ್ತೂ ಆಡದಂತೆ ಮಂಟಪದ ಮುಖ್ಯದ್ವಾರಕ್ಕೆ ಕಲ್ಲುಗಳನ್ನಿಟ್ಟು ಸಿಮೆಂಟ್ ಹಾಕಿ ಸಂಪೂರ್ಣವಾಗಿ ಮುಚ್ಚಲಾಗಿತ್ತು. ಹಠಯೋಗ ಹಾಗೂ ಕಠಿಣ ತಪಸ್ಸಿನ ಮೂಲಕ ಶ್ವಾಸ ನಿಯಂತ್ರಣ (ಪ್ರಾಣಾಯಾಮ) ಸಿದ್ಧಿಸಿಕೊಂಡಿರುವ ಶ್ರೀಗಳು, ಒಂದು ತಿಂಗಳಿಗೂ ಹೆಚ್ಚು ಕಾಲ ಆಹಾರ- ನೀರನ್ನು ಸೇವಿಸದೆ ಯೋಗ ಸಮಾಧಿಯಾಗಿ ಎದ್ದು ಬಂದರು. ಈ ಐತಿಹಾಸಿಕ ಕ್ಷಣಕ್ಕೆ ಅಂತೂರ-ಬೆಂತೂರ ಗ್ರಾಮ ಸಾಕ್ಷಿಯಾಯಿತು.&lt;/p&gt;&lt;h3&gt;&lt;strong&gt;775 ಶಿವಲಿಂಗು ಪ್ರತಿಷ್ಠಾಪನೆ: &amp;nbsp;&lt;/strong&gt;&lt;/h3&gt;&lt;p&gt;ಲೋಕ ಕಲ್ಯಾಣಕ್ಕಾಗಿ ಡಾ. ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಶಿವಯೋಗ ಸಮಾಧಿ ಕೈಗೊಂಡ ನಂತರ ಬೂದೀಶ್ವರ ಸಂಸ್ಥಾನ ಮಠದಲ್ಲಿ ನಿತ್ಯ ಪೂಜಾ ಕಾರ್ಯಗಳು, ಪುರಾಣ- ಪ್ರವಚನ, ಅಹೋರಾತ್ರಿ ಭಜನೆ, ಯಜ್ಞ-ಯಾಗಾದಿಗಳು ನೆರವೇರಿದವು. ಅಲ್ಲದೇ ಶ್ರೀಮಠದ ಆವರಣದಲ್ಲಿ ಭಕ್ತಾದಿಗಳ ಸಹಕಾರದಲ್ಲಿ 775 ಶಿವಲಿಂಗುಗಳನ್ನು ಪ್ರತಿಷ್ಠಾಪಿಸಲಾಗಿದೆ.&lt;/p&gt;&lt;p&gt;&lt;strong&gt;ಹರಿದುಬಂದ ಭಕ್ತಸಾಗರ: &amp;nbsp;&lt;/strong&gt;&lt;/p&gt;&lt;p&gt;ಶಿವಯೋಗ ಸಮಾಧಿಯಲ್ಲಿದ್ದ ಡಾ. ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳನ್ನು ಕಣ್ತುಂಬಿಕೊಳ್ಳಲು ಗದಗ ಹಾಗೂ ಹೊರಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು. ನಿಗದಿತ ಸಮಯದಲ್ಲಿ ಮಂಟಪದ ಬಾಗಿಲು ತೆರೆಯುತ್ತಿದ್ದಂತೆ ನೆರೆದಿದ್ದ ಭಕ್ತ ಸಾಗರ ಹರ ಹರ ಮಹಾದೇವ, ಜೈ ರಾಚೋಟೇಶ್ವರ ಸ್ವಾಮೀಜಿ ಕೀ ಜೈ ಎಂಬ ಜಯಘೋಷಗಳು ಮೊಳಗಿಸಿತು. ಶ್ರೀಗಳಿಗೆ ಅಭಿಷೇಕ ಮಾಡಿಸಲಾಯಿತು. ಆನಂತರ ಶ್ರೀಗಳು ಭಕ್ತರಿಗೆ ದರ್ಶನಾಶೀರ್ವಾದ ಕರುಣಿಸಿದರು.&lt;/p&gt;&lt;p&gt;ಆನಂತರ ಜರುಗಿದ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀಗಳಿಗೆ ತುಲಾಭಾರ ಸೇವೆ ನೆರವೇರಿತು. ಬಂದ ಭಕ್ತಾದಿಗಳಿಗೆ ಅಲ್ಲಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.&lt;/p&gt;&lt;p&gt;ಕಾರ್ಯಕ್ರಮ ಮುಗಿದ ಬಳಿಕ ಶ್ರೀಗಳನ್ನು ಜಿಲ್ಲಾಸ್ಪತ್ರೆಗೆ ಕರೆತಂದು ಆರೋಗ್ಯ ತಪಾಸಣೆ ಮಾಡಿಸಲಾಯಿತು.&lt;/p&gt;]]></content:encoded>
            <category><![CDATA[karnataka]]></category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/karnataka-news/conclusion-of-dr-rachoteshwara-shivacharya-swamiji-s-33-day-shivayoga-samadhi-observance/articleshow-vgal6f3"/>
        </item>
        <item>
            <title><![CDATA[ಇಸ್ರೋ ನೆರವು ಪಡೆದ ಬೆಳೆ ಸಮೀಕ್ಷೆಯಲ್ಲಿ ಕಳ್ಳಾಟಕ್ಕೆ ಬ್ರೇಕ್‌]]></title>
            <link>https://www.kannadaprabha.in/karnataka-news/gadag-news/isro-assisted-crop-survey-puts-a-stop-to-malpractices/articleshow-flqk3ls</link>
            <guid isPermaLink="true">https://www.kannadaprabha.in/karnataka-news/gadag-news/isro-assisted-crop-survey-puts-a-stop-to-malpractices/articleshow-flqk3ls</guid>
            <pubDate>Mon, 06 Jul 2026 12:13:44 +0530</pubDate>
            <description><![CDATA[ಫಸಲ್ ಬಿಮಾ ಯೋಜನೆಯಲ್ಲಿ ನಡೆಯುತ್ತಿದ್ದ ಅಕ್ರಮ ತಡೆಗಟ್ಟುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಳೆವಿಮೆಗೆ ಹೊಸ ಅಗತ್ಯ ಮಾರ್ಗಸೂಚಿಗಳನ್ನು ಒಳಗೊಂಡಿರುವ ಆದೇಶವನ್ನು ಜೂ.30ರಂದು ಹೊರಡಿಸಿದ್ದು, ಇದರಿಂದಾಗಿ ಬೆಳೆ ಸಮೀಕ್ಷೆ ಪ್ರಕ್ರಿಯೆ ಮತ್ತಷ್ಟು ಪಾರದರ್ಶಕ, ತಾಂತ್ರಿಕವಾಗಿ ಸಶಕ್ತವಾಗಲಿದೆ.]]></description>
            <media:content url="https://static-gi.asianetnews.com/images/01j0k14q6j4jkngas94essd25d/indian-farmer-field-75648-189--1-.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಕುಮಾರ ಕುಷ್ಟಗಿ&lt;/strong&gt;&lt;/p&gt;&lt;p&gt;&lt;strong&gt;&amp;nbsp; ಗದಗ : &amp;nbsp;&lt;/strong&gt;ಫಸಲ್ ಬಿಮಾ ಯೋಜನೆಯಲ್ಲಿ ನಡೆಯುತ್ತಿದ್ದ ಅಕ್ರಮ ತಡೆಗಟ್ಟುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಳೆವಿಮೆಗೆ ಹೊಸ ಅಗತ್ಯ ಮಾರ್ಗಸೂಚಿಗಳನ್ನು ಒಳಗೊಂಡಿರುವ ಆದೇಶವನ್ನು ಜೂ.30ರಂದು ಹೊರಡಿಸಿದ್ದು, ಇದರಿಂದಾಗಿ ಬೆಳೆ ಸಮೀಕ್ಷೆ ಪ್ರಕ್ರಿಯೆ ಮತ್ತಷ್ಟು ಪಾರದರ್ಶಕ, ತಾಂತ್ರಿಕವಾಗಿ ಸಶಕ್ತವಾಗಲಿದೆ.&lt;/p&gt;&lt;p&gt;ಬೆಳೆ ಸಮೀಕ್ಷೆಯಲ್ಲಿ ತಪ್ಪು ಮಾಹಿತಿ ದಾಖಲಿಸುವುದು, ಬೆಳೆ ಬೆಳೆಯದ ಜಮೀನಿನಲ್ಲೂ ಬೆಳೆ ತೋರಿಸುವುದು, ಒಂದೇ ಜಮೀನನ್ನು ಹಲವು ಬಾರಿ ದಾಖಲಿಸುವುದು, ಬೆಳೆ ವಿಮೆ ಹಾಗೂ ಪರಿಹಾರ ಪಡೆಯಲು ಸುಳ್ಳು ದಾಖಲೆಗಳನ್ನು ಸೃಷ್ಟಿಸುವುದು ಸೇರಿದಂತೆ ಹಲವು ಅಕ್ರಮಗಳ ಬಗ್ಗೆ ದೂರುಗಳು ಬರುತ್ತಿದ್ದವು. ಇದರಿಂದ ಸರ್ಕಾರದ ಕೋಟ್ಯಂತರ ರುಪಾಯಿ ಸಬ್ಸಿಡಿ, ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ ಹಾಗೂ ಇತರ ಕೃಷಿ ಯೋಜನೆಗಳಲ್ಲಿ ದುರುಪಯೋಗವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರವು ತಂತ್ರಜ್ಞಾನ ಆಧಾರಿತ ಸಮೀಕ್ಷೆಗೆ ಹೆಚ್ಚಿನ ಒತ್ತು ನೀಡಿದೆ.&lt;/p&gt;&lt;h2&gt;&lt;strong&gt;ನೂತನ ಆದೇಶದಲ್ಲೇನಿದೆ?:&lt;/strong&gt;&lt;/h2&gt;&lt;p&gt;ಮೊಬೈಲ್ ಆಧಾರಿತ ಡಿಜಿಟಲ್ ಬೆಳೆ ಸಮೀಕ್ಷೆ ಮಾಡಬೇಕು, ಪ್ರತಿ ದಾಖಲೆಗೆ ಜಿಯಾಗ್ರಾಫಿಕಲ್ ರೆಫರೆನ್ಸ್&zwnj; ಫೋಟೋ ಕಡ್ಡಾಯ. ಅಲ್ಲದೇ ಸ್ಥಳದಲ್ಲೇ ರೈತರ ಹಾಗೂ ಜಮೀನಿನ ಮಾಹಿತಿಯನ್ನು ಪರಿಶೀಲಿಸಿ ದಾಖಲಿಸುವ ವ್ಯವಸ್ಥೆ ರೂಪಿಸಲಾಗಿದೆ. ಇಸ್ರೋ ಸಹಾಯದಲ್ಲಿ ಕೇವಲ 5 ಮೀಟರ್ ಎತ್ತರದಿಂದ ರೈತರು ಜಮೀನುಗಳಲ್ಲಿ ಬಿತ್ತನೆ ಮಾಡಿದ ಬೆಳೆಗಳ ಫೋಟೋಗಳನ್ನು ತೆಗೆಯಲಾಗುತ್ತದೆ. ಇವುಗಳನ್ನು ಜಿಐಎಸ್ ಮಾಹಿತಿಯೊಂದಿಗೆ ಸಮನ್ವಯ ಮಾಡಿ ಸ್ಥಳದಲ್ಲಿಯೇ ಪರಿಶೀಲನೆ ಮಾಡಲಾಗುತ್ತದೆ. ಇದರಿಂದಾಗಿ ಬೆಳೆ ಬೆಳೆಯದ ಜಮೀನನ್ನು ಬೆಳೆ ಪ್ರದೇಶ ಎಂದು ದಾಖಲಿಸುವ ಅವಕಾಶ ಇರುವುದಿಲ್ಲ. ಜತೆಗೆ ಅಧಿಕಾರಿಗಳ ಜವಾಬ್ದಾರಿ ಹೆಚ್ಚಿಸಿದ್ದು, ತಪ್ಪು ದಾಖಲೆಗಳಿಗೆ ಸಹಿ ಮಾಡಿದಲ್ಲಿ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಸಮೀಕ್ಷೆ ಪೂರ್ಣಗೊಂಡ ಬಳಿಕ ಬಹುಹಂತದ ಪರಿಶೀಲನೆ ಮತ್ತು ದೃಢೀಕರಣ ಕಡ್ಡಾಯಗೊಳಿಸಲಾಗಿದೆ.&lt;/p&gt;&lt;h3&gt;ಹಲವು ರೀತಿಯಲ್ಲಿ ಲಾಭ:&lt;/h3&gt;&lt;p&gt;ನಕಲಿ ಬೆಳೆ ದಾಖಲೆಗಳನ್ನು ಸೃಷ್ಟಿಸುವುದು ಕಷ್ಟವಾಗುತ್ತದೆ. ಒಂದೇ ಜಮೀನಿಗೆ ಹಲವು ಬಾರಿ ದಾಖಲಾತಿ ಮಾಡುವ ಸಾಧ್ಯತೆ ಕಡಿಮೆ ಆಗುತ್ತದೆ. ಬೆಳೆ ವಿಮೆ ಹಾಗೂ ಪರಿಹಾರಕ್ಕೆ ಸಲ್ಲಿಸುವ ಸುಳ್ಳು ಮಾಹಿತಿಯನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ನೈಜವಾಗಿ ಬೆಳೆ ಬೆಳೆದ ರೈತರಿಗೆ ಮಾತ್ರ ಸರ್ಕಾರಿ ಸೌಲಭ್ಯಗಳು ತಲುಪುವ ಸಾಧ್ಯತೆ ಹೆಚ್ಚುತ್ತದೆ. ಉಪಗ್ರಹ ಮಾಹಿತಿ, ಜಿಯೋ ಟ್ಯಾಗ್ ಹಾಗೂ ಸ್ಥಳ ಪರಿಶೀಲನೆ ಒಂದಕ್ಕೊಂದು ಹೊಂದಾಣಿಕೆ ಆಗದಿದ್ದರೆ ತಕ್ಷಣವೇ ವ್ಯತ್ಯಾಸ ಪತ್ತೆಯಾಗಲಿದೆ.&lt;/p&gt;&lt;p&gt;ಬೇರೆ ಬ್ಯಾಂಕಲ್ಲಿ ಸಾಲ ಪಡೆದಿಲ್ಲ ಎಂದು ಸ್ವಯಂ ಘೋಷಣೆ ಕಡ್ಡಾಯ:&lt;/p&gt;&lt;p&gt;ಫಸಲ್ ಬಿಮಾ ಯೋಜನೆ ಬೆಳೆಸಾಲ ಪಡೆದುಕೊಂಡ ರೈತರು ಬೇರೆ ಬ್ಯಾಂಕ್&zwnj;ಗಳಲ್ಲಿ ಸಾಲ ಪಡೆದಿಲ್ಲ ಎಂಬುದನ್ನು ಸ್ವಯಂ ಘೋಷಿಸುವುದು ಕಡ್ಡಾಯ. ಆದರೆ ಯಾವ ಹೊಲದ ಮೇಲೆ ಬೆಳೆಸಾಲ ಪಡೆದಿರುತ್ತಾರೆಯೋ ಅದೇ ಬೆಳೆಗೆ ಸಹಜವಾಗಿಯೇ ಸಾಲಕೊಟ್ಟ ಬ್ಯಾಂಕ್&zwnj;ನಲ್ಲಿ ಬೆಳೆ ವಿಮೆ ಭರಣ ಮಾಡಲಾಗುತ್ತಿತ್ತು. ಅದೇ ಜಮೀನನ್ನು ರೈತರು ಗ್ರಾಮ ಒನ್ ಅಥವಾ ನೆಟ್ ಸೆಂಟರ್&zwnj;ಗಳಲ್ಲಿ ತಮಗೆ ಬೇಕಾದ ಬೆಳೆಗೆ ಇದುವರೆಗೂ ವಿಮೆ ಭರಣ ಮಾಡುತ್ತಿದ್ದರು. ಆದರೆ ಈ ಬಾರಿ ಬೆಳೆಸಾಲ ಪಡೆದುಕೊಂಡಿರುವ ರೈತರು ಕಡ್ಡಾಯವಾಗಿ ನಾನು ಬೇರೆಡೆ ಎಲ್ಲಿಯೂ ಸಾಲ ಪಡೆದುಕೊಂಡಿಲ್ಲ ಎಂದು ಸ್ವಯಂ ಧೃಢೀಕರಣ ಕೊಡಬೇಕಿದೆ. ಬ್ಯಾಂಕ್ ಸಾಲ, ಸ್ವಯಂ ಧೃಢೀಕರಣ ಪತ್ರ ಮತ್ತು ಹೊಲದಲ್ಲಿನ ಬೆಳೆ ಎಲ್ಲವೂ ತಾಳೆ ಆದಾಗ ಮಾತ್ರ ರೈತರಿಗೆ ವಿಮೆ ಪರಿಹಾರ ಸಿಗಲಿದೆ.&lt;/p&gt;&lt;p&gt;ತಪ್ಪು ಮಾಹಿತಿಗೆ ಕಡಿವಾಣ:&lt;/p&gt;&lt;p&gt;ಸರ್ಕಾರದ ನೂತನ ನಿಯಮಗಳ ಅಡಿಯಲ್ಲಿ ನೈಜ ರೈತರಿಗೆ ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಇನ್&zwnj;ಪುಟ್ ಸಬ್ಸಿಡಿ, ಕೃಷಿ ಯೋಜನೆಗಳ ಲಾಭ ಹಾಗೂ ಬ್ಯಾಂಕ್ ಸಾಲದ ಪ್ರಕ್ರಿಯೆಯಲ್ಲಿ ನಿಖರ ದಾಖಲೆಗಳು ಲಭ್ಯವಾಗಲಿವೆ. ತಪ್ಪು ಮಾಹಿತಿ ಹಾಗೂ ದಾಖಲೆಗಳನ್ನು ನೀಡುವುದಕ್ಕೆ ಕಡಿವಾಣ ಬೀಳಲಿದೆ. ಪ್ರಾಮಾಣಿಕ ರೈತರು ವಂಚಿತರಾಗುವ ಸಾಧ್ಯತೆಯೂ ಕಡಿಮೆಯಾಗಲಿದೆ.&lt;/p&gt;&lt;p&gt;-ಚೇತನಾ ಪಾಟೀಲ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಗದಗ&amp;nbsp;&lt;/p&gt;]]></content:encoded>
            <category><![CDATA[gadag]]></category>
            <dc:creator>Sujatha NR</dc:creator>
            <atom:link href="https://www.kannadaprabha.in/karnataka-news/gadag-news/isro-assisted-crop-survey-puts-a-stop-to-malpractices/articleshow-flqk3ls"/>
        </item>
        <item>
            <title><![CDATA[ಬೆಳಗಾವಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಭರ್ಜರಿ ಮಳೆ]]></title>
            <link>https://www.kannadaprabha.in/politics-news/heavy-rainfall-lashes-belagavi-and-shivamogga-districts/articleshow-91ns50b</link>
            <guid isPermaLink="true">https://www.kannadaprabha.in/politics-news/heavy-rainfall-lashes-belagavi-and-shivamogga-districts/articleshow-91ns50b</guid>
            <pubDate>Mon, 06 Jul 2026 11:22:10 +0530</pubDate>
            <description><![CDATA[ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಮಲೆನಾಡು ಭಾಗದಲ್ಲಿ ಮಳೆ ಅಬ್ಬರಿಸುತ್ತಿದೆ. ಶೃಂಗೇರಿ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತುಂಗಾನದಿ ಮೈದುಂಬಿ ಹರಿಯುತ್ತಿದ್ದು, ಗಾಜನೂರು ಜಲಾಶಯ ಭರ್ತಿಯಾಗಿದೆ.]]></description>
            <media:content url="https://static-gi.asianetnews.com/images/01ktgqqedqgydnprvbnmr8vpkv/karnataka-rain-red-alert--3--1780825700791.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;strong&gt; &amp;nbsp;ಬೆಂಗಳೂರು: &amp;nbsp;&lt;/strong&gt;ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಮಲೆನಾಡು ಭಾಗದಲ್ಲಿ ಮಳೆ ಅಬ್ಬರಿಸುತ್ತಿದೆ. ಶೃಂಗೇರಿ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತುಂಗಾನದಿ ಮೈದುಂಬಿ ಹರಿಯುತ್ತಿದ್ದು, ಗಾಜನೂರು ಜಲಾಶಯ ಭರ್ತಿಯಾಗಿದೆ.&lt;/p&gt;&lt;p&gt;&amp;nbsp;ಇದೇ ವೇಳೆ ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಮಳೆಗೆ ಕೃಷ್ಣಾ ಹಾಗೂ ಅದರ ಉಪನದಿಗಳಲ್ಲಿ ನದಿಯಲ್ಲಿ ಒಳಹರಿವು ಹೆಚ್ಚಿದೆ. ತೀರ್ಥಹಳ್ಳಿ, ಶೃಂಗೇರಿ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ತುಂಗಾನದಿ ಮೈದುಂಬಿ ಹರಿಯುತ್ತಿದೆ. ಇದರಿಂದಾಗಿ ಶಿವಮೊಗ್ಗ ಜಿಲ್ಲೆಯ ಗಾಜನೂರು ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ. ಈ ಮೂಲಕ ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲೇ ಮೊದಲು ಭರ್ತಿಯಾದ ಜಲಾಶಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಲಾಶಯಕ್ಕೆ 19,708 ಕ್ಯುಸೆಕ್ ಒಳಹರಿವಿದ್ದು, 8 ಕ್ರಸ್ಟ್ ಗೇಟ್&zwnj;ಗಳ ಮೂಲಕ 18,051 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಜಲಾಶಯದ ನೀರಿನ ಮಟ್ಟ 588.21 ಮೀಟರ್ (ಗರಿಷ್ಠ 588.24 ಮೀಟರ್&zwnj;) ತಲುಪಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಸದ್ಯ 15 ಸಾವಿರ ಕ್ಯುಸೆಕ್&zwnj; ನೀರು ಹರಿದು ಬರುತ್ತಿದ್ದು, ಜಲಾಶಯದ ಮಟ್ಟ 1749.85 ಅಡಿಗೆ ಏರಿಕೆ ಕಂಡಿದೆ.&lt;/p&gt;&lt;h2&gt;ಮಹಾರಾಷ್ಟ್ರದ ಪಶ್ಚಿಮಘಟ್ಟ ಹಾಗೂ ಬೆಳಗಾವಿ ಜಿಲ್ಲೆಯಾದ್ಯಂತ ಮಳೆ&lt;/h2&gt;&lt;p&gt;ಇದೇ ವೇಳೆ, ಮಹಾರಾಷ್ಟ್ರದ ಪಶ್ಚಿಮಘಟ್ಟ ಹಾಗೂ ಬೆಳಗಾವಿ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಜಿಲ್ಲೆಯ ಮಲಪ್ರಭಾ, ಕೃಷ್ಣಾ, ಘಟಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ ನದಿಗಳಿಗೆ ಒಳಹರಿವು ಹೆಚ್ಚಿದೆ. ಖಾನಾಪುರದ ಕಣಕುಂಬಿ ಅರಣ್ಯಪ್ರದೇಶದಲ್ಲಿ ಮಲಪ್ರಭಾ ನದಿ ದಡದಲ್ಲಿರುವ ಹಬ್ಬಾನಟ್ಟಿ ಗ್ರಾಮದ ಪುರಾತನ ಮಾರುತಿ ಮಂದಿರ ಭಾಗಶಃ ಜಲಾವೃತಗೊಂಡಿದೆ.&lt;/p&gt;&lt;h3&gt;ಕೃಷ್ಣೆಗೆ 55 ಸಾವಿರ ಕ್ಯುಸೆಕ್&zwnj;ಗೂ ಅಧಿಕ ಒಳಹರಿವಿದೆ&lt;/h3&gt;&lt;p&gt;ಜಿಲ್ಲೆಯ ಜೀವನದಿ ಕೃಷ್ಣೆಗೆ ಭಾನುವಾರ 55 ಸಾವಿರ ಕ್ಯುಸೆಕ್&zwnj;ಗೂ ಅಧಿಕ ಒಳಹರಿವಿದ್ದು, ನಿಪ್ಪಾಣಿ ತಾಲೂಕಿನಲ್ಲಿ ಮೂರು ಸಂಪರ್ಕ ಸೇತುವೆಗಳು ಜಲಾವೃತಗೊಂಡಿವೆ. ಘಟಪ್ರಭಾ ನದಿಗೆ 1,600ಕ್ಕೂ ಅಧಿಕ ಕ್ಯುಸೆಕ್&zwnj; ನೀರು ಹರಿದು ಬರುತ್ತಿದ್ದು, ಗೋಕಾಕ ಫಾಲ್ಸ್&zwnj; ಜಲಪಾತಕ್ಕೆ ಜೀವಕಳೆ ಬಂದಿದೆ. ಹಿಡಕಲ್&zwnj; ಜಲಾಶಯದ ನೀರಿನ ಮಟ್ಟ ಭಾನುವಾರ ಒಂದೂವರೆ ಅಡಿಯಷ್ಟು ಏರಿಕೆಯಾಗಿದೆ.&lt;/p&gt;&lt;p&gt;ಇದೇ ವೇಳೆ, ಹಾಸನ ಜಿಲ್ಲೆ ಸಕಲೇಶಪುರ ಪಟ್ಟಣದ ಆರೇಹಳ್ಳಿ ಬೀದಿ ಸಮೀಪ ನಿರ್ಮಾಣ ಹಂತದ ಲೇಔಟ್&zwnj;ಗಾಗಿ ಕಟ್ಟಿದ್ದ ತಡೆಗೋಡೆ ಸಂಪೂರ್ಣ ಕುಸಿದು ಹಾನಿ ಸಂಭವಿಸಿದೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಕಾರವಾರ ತಾಲೂಕಿನ ಬೋಳ್ವೆಯಲ್ಲಿ ಮರದ ಟೊಂಗೆಯೊಂದು ಮುರಿದು ಬಿದ್ದು ಕಾರು ಜಖಂಗೊಂಡಿದೆ. ಧಾರವಾಡದಲ್ಲಿ ಕೆಲವೆಡೆ ಮರಗಳು ಧರೆಗುರುಳಿವೆ. ಕೊಂಬೆಗಳು ವಿದ್ಯುತ್ ಕಂಬ ಹಾಗೂ ತಂತಿಗಳ ಮೇಲೆ ಬಿದ್ದ ಪರಿಣಾಮ ಭಾನುವಾರ ಹಲವು ಬಡಾವಣೆಗಳಲ್ಲಿ ವಿದ್ಯುತ್&zwnj; ಸಂಪರ್ಕ ಕಡಿತಗೊಂಡಿತ್ತು.&lt;/p&gt;]]></content:encoded>
            <category><![CDATA[politics]]></category>
            <dc:creator>Sujatha NR</dc:creator>
            <atom:link href="https://www.kannadaprabha.in/politics-news/heavy-rainfall-lashes-belagavi-and-shivamogga-districts/articleshow-91ns50b"/>
        </item>
        <item>
            <title><![CDATA[ಫುಟ್ಪಾತ್‌ ವ್ಯಾಪಾರಿಗಳಿಂದ ತಿಂಗಳಿಗೆ ₹30000 ಅನಧಿಕೃತ ಬಾಡಿಗೆ ವಸೂಲಿ!]]></title>
            <link>https://www.kannadaprabha.in/karnataka-news/30-000-in-unauthorized-rent-collected-monthly-from-footpath-vendors/articleshow-xgg39aa</link>
            <guid isPermaLink="true">https://www.kannadaprabha.in/karnataka-news/30-000-in-unauthorized-rent-collected-monthly-from-footpath-vendors/articleshow-xgg39aa</guid>
            <pubDate>Mon, 06 Jul 2026 02:00:00 +0530</pubDate>
            <description><![CDATA[ನಗರದ ಪ್ರಮುಖ ರಸ್ತೆಗಳು, ಫುಟ್‌ಪಾತ್ ಮತ್ತು ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ವ್ಯಾಪಾರ ಮಾಡುವ ಬೀದಿಬದಿ ವ್ಯಾಪಾರಿಗಳಿಂದ ತಿಂಗಳಿಗೆ ಗರಿಷ್ಠ 30,000 ರು.ವರೆಗೆ ಅನಧಿಕೃತವಾಗಿ ಬಾಡಿಗೆಯನ್ನು ವಸೂಲಿ ಮಾಡಲಾಗುತ್ತಿದೆ!]]></description>
            <media:content url="https://static-gi.asianetnews.com/images/01kwkek9r5k0b9zjqxethqngn9/whatsapp-image-2026-07-03-at-1.04.08-pm-1783064274693.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು : &lt;/strong&gt;ನಗರದ ಪ್ರಮುಖ ರಸ್ತೆಗಳು, ಫುಟ್&zwnj;ಪಾತ್ ಮತ್ತು ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ವ್ಯಾಪಾರ ಮಾಡುವ ಬೀದಿಬದಿ ವ್ಯಾಪಾರಿಗಳಿಂದ ತಿಂಗಳಿಗೆ ಗರಿಷ್ಠ 30,000 ರು.ವರೆಗೆ ಅನಧಿಕೃತವಾಗಿ ಬಾಡಿಗೆಯನ್ನು ವಸೂಲಿ ಮಾಡಲಾಗುತ್ತಿದೆ!&lt;/p&gt;&lt;p&gt;ಅನಧಿಕೃತವಾಗಿ, ಅಕ್ರಮವಾಗಿ ನಡೆಯುವ ಈ ಬಾಡಿಗೆ ದಂಧೆಗೆ ಸ್ಥಳೀಯ ಅಧಿಕಾರಿಗಳ ಕುಮ್ಮಕ್ಕು ಇದೆ ಎನ್ನುವ ಆರೋಪವಿದೆ. ಏಕೆಂದರೆ, ಅನಧಿಕೃತ ಬಾಡಿಗೆಯಲ್ಲಿ ಅವರಿಗೂ ಪಾಲು ಹೋಗುತ್ತದೆ. ಉದಾಹರಣೆಗೆ ನಗರದ ಅತ್ಯಂತ ಜನಪ್ರಿಯ ಹಾಗೂ ಹಳೆಯ ಫುಡ್ ಸ್ಟ್ರೀಟ್ ಆಗಿರುವ ವಿವಿ ಪುರ ಫುಡ್ ಸ್ಟ್ರೀಟ್&zwnj;ನಲ್ಲಿ ಬೀದಿಯಲ್ಲೇ ವ್ಯಾಪಾರ ನಡೆಯುತ್ತಿದೆ. ಇತ್ತೀಚೆಗೆ ರಸ್ತೆಯನ್ನು ವೈಟ್&zwnj;ಟಾಪಿಂಗ್ ಮಾಡಲಾಗಿದ್ದು ಬೀದಿಬದಿ ವ್ಯಾಪಾರಕ್ಕೆ ಹೇಳಿ ಮಾಡಿಸಿದಂತಿದೆ. ಅನೇಕ ಅಂಗಡಿ, ಮಳಿಗೆಗಳು ಇದ್ದರೂ ಫುಟ್&zwnj;ಪಾತ್ ಹಾಗೂ ರಸ್ತೆ ಮೇಲಿನ ವ್ಯಾಪಾರ ಜೋರಾಗಿರುತ್ತದೆ.&lt;/p&gt;&lt;p&gt;ಹೀಗೆ, ಫುಟ್&zwnj;ಪಾತ್ ಮೇಲೆ ವ್ಯಾಪಾರ ಮಾಡುವ ಕೆಲವರು ಹತ್ತಿರದ ಅಂಗಡಿಯವರಿಗೆ ಮಾಸಿಕ ಬಾಡಿಗೆಯನ್ನು ಪಾವತಿ ಮಾಡುತ್ತಿದ್ದಾರೆ. ಈ ಅನಧಿಕೃತ ಬಾಡಿಗೆ ಸಂಗ್ರಹದಲ್ಲಿ ಹಫ್ತಾ ವಸೂಲಿ ಮಾಡುವವರಿಗೂ ತಲುಪುತ್ತದೆ. ನಿಯಮಿತವಾಗಿ ಹಣ ಪಾವತಿ ಮಾಡದಿದ್ದರೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡಲು ಬಿಡುವುದಿಲ್ಲ ಎಂಬ ಆರೋಪಗಳು ಇವೆ.&lt;/p&gt;&lt;h2&gt;&lt;strong&gt;ಬಾಡಿಗೆ ಸಂಗ್ರಹ ನಿಜ ಎಂದ ಸಂಘ:&lt;/strong&gt;&lt;/h2&gt;&lt;p&gt;ಬೀದಿ ಬದಿ ವ್ಯಾಪಾರಿಗಳಿಂದ ಬಾಡಿಗೆ ಸಂಗ್ರಹಿಸುವುದು ಕೆಲವು ಕಡೆ ನಡೆಯುತ್ತಿದೆ. ಹೀಗಾಗಿ, ಬೀದಿ ಬದಿ ವ್ಯಾಪಾರಿಗಳ ಶೋಷಣೆ ಮತ್ತು ಎತ್ತಂಗಡಿ ಮಾಡುವುದನ್ನು ತಪ್ಪಿಸಲು ವಿಶಾಲವಾದ ಫುಟ್&zwnj;ಪಾತ್ ಇರುವ ಕಡೆ ಅಧಿಕೃತವಾಗಿಯೇ ಪಾಲಿಕೆಯಿಂದ ಮಾರ್ಕಿಂಗ್ ಮಾಡಿಕೊಡಬೇಕು ಎನ್ನುವ ಬೇಡಿಕೆ ಇಟ್ಟಿದ್ದೇವೆ. ಈಗಾಗಲೇ ಮಲ್ಲೇಶ್ವರ, ಕೆ.ಆರ್.ಮಾರುಕಟ್ಟೆ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗಾಗಿ ಜಾಗ ಮಾರ್ಕಿಂಗ್ ಮಾಡುವ ಯೋಜನೆ ಜಾರಿ ಮಾಡಲಾಗುತ್ತಿದೆ. ಇದರಿಂದ ಪಾಲಿಕೆಗೆ ಸ್ವಲ್ಪ ಆದಾಯವೂ ಬರುತ್ತದೆ. ವ್ಯಾಪಾರಿಗಳ ಶೋಷಣೆ ತಪ್ಪುತ್ತದೆ ಎಂದು ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಂಗಸ್ವಾಮಿ ಹೇಳಿದರು.&lt;/p&gt;&lt;p&gt;ಪ್ರಮುಖ ರಸ್ತೆಗಳಲ್ಲಿ ಈಗಾಗಲೇ ಅನೇಕ ವರ್ಷಗಳಿಂದ ಬೀದಿಬದಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳನ್ನು ಗುರುತಿಸಿ ಅವರು ಮಾತ್ರ ವ್ಯಾಪಾರ ಮಾಡಲು ಅವಕಾಶ ನೀಡಬೇಕು. ಅನಧಿಕೃತವಾಗಿ ವ್ಯಾಪಾರ ಮಾಡುವವರನ್ನು ಅಲ್ಲಿಂದ ತೆರವುಗೊಳಿಸಬೇಕು ಎನ್ನುವುದು ನಮ್ಮ ಸಂಘದ ಬೇಡಿಕೆಯಾಗಿದೆ ಎಂದು ರಂಗಸ್ವಾಮಿ ಹೇಳಿದರು.&lt;/p&gt;&lt;h3&gt;&lt;strong&gt;ತೆರವು ಕಾರ್ಯಾಚರಣೆ ಪ್ರಶ್ನಿಸಿ ಕೋರ್ಟ್ ಮೊರೆ:&lt;/strong&gt;&lt;/h3&gt;&lt;p&gt;5 ಪಾಲಿಕೆಗಳಿಂದ ನಗರದಲ್ಲಿ ನಡೆಯುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆ ಪ್ರಶ್ನಿಸಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮೊರೆ ಹೋಗುತ್ತೇವೆ ಎಂದು ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಂಗಸ್ವಾಮಿ ತಿಳಿಸಿದರು.&lt;strong&gt; &lt;/strong&gt;ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸದೆ ಏಕಾಏಕಿ ತೆರವು ಮಾಡಬಾರದು ಎಂದು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್&zwnj;ಗಳು ಅನೇಕ ಬಾರಿ ಆದೇಶದಲ್ಲಿ ತಿಳಿಸಿವೆ. ಹೈದ್ರಾಬಾದ್, ದೆಹಲಿ, ಚಂಡಿಗಢ ಸೇರಿದಂತೆ ಅನೇಕ ಕಡೆಗಳಲ್ಲಿ ಈ ರೀತಿಯ ಘಟನೆಗಳು ನಡೆದಿವೆ. ಬೀದಿ ಬದಿ ವ್ಯಾಪಾರಿಗಳ ಹಿತರಕ್ಷಣೆ, ಉಪ ಜೀವನ ಕಾಪಾಡಲು ಎತ್ತಂಗಡಿ ಮಾಡಬಾರದು ಎಂದು ಕೋರ್ಟ್ ಸೂಚನೆ ನೀಡಿವೆ. ಇದೇ ಆಧಾರದ ಮೇಲೆ ನಗರದಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಪ್ರಶ್ನಿಸಿ ಸಂಘದ ಮೂಲಕವೇ ಕೋರ್ಟ್ ಮೊರೆ ಹೋಗುತ್ತೇವೆ ಎಂದು ಅವರು ತಿಳಿಸಿದರು.&lt;/p&gt;]]></content:encoded>
            <category><![CDATA[karnataka]]></category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/karnataka-news/30-000-in-unauthorized-rent-collected-monthly-from-footpath-vendors/articleshow-xgg39aa"/>
        </item>
        <item>
            <title><![CDATA[ಬೆಂಗಳೂರಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಜೋರು]]></title>
            <link>https://www.kannadaprabha.in/karnataka-news/bengaluru-news/footpath-encroachment-clearance-drive-gains-momentum-in-bengaluru/articleshow-9fk5baa</link>
            <guid isPermaLink="true">https://www.kannadaprabha.in/karnataka-news/bengaluru-news/footpath-encroachment-clearance-drive-gains-momentum-in-bengaluru/articleshow-9fk5baa</guid>
            <pubDate>Mon, 06 Jul 2026 10:36:10 +0530</pubDate>
            <description><![CDATA[ರಜಾ ದಿನವಾದ ಭಾನುವಾರವೂ ನಗರದ ಕೆಲವೆಡೆ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ. ರಾಜರಾಜೇಶ್ವರಿ ನಗರ 5ನೇ ಹಂತದಲ್ಲಿ ಹೂವು, ಹಣ್ಣು, ತರಕಾರಿ ಮಾರಾಟ ಮಾಡುವ ಫುಟ್‌ಪಾತ್ ವ್ಯಾಪಾರಿಗಳಿಗೆ ಪಾಲಿಕೆಯ ಸಿಬ್ಬಂದಿ ಒತ್ತುವರಿ ತೆರವುಗೊಳಿಸುವಂತೆ ಕೋರಿದ್ದಾರೆ.]]></description>
            <media:content url="https://static-gi.asianetnews.com/images/01kwkek9r4mhd751ek9e3v1wdf/whatsapp-image-2026-07-03-at-1.04.09-pm-1783064274692.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಬೆಂಗಳೂರು : &amp;nbsp;&lt;/strong&gt;ರಜಾ ದಿನವಾದ ಭಾನುವಾರವೂ ನಗರದ ಕೆಲವೆಡೆ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ. ರಾಜರಾಜೇಶ್ವರಿ ನಗರ 5ನೇ ಹಂತದಲ್ಲಿ ಹೂವು, ಹಣ್ಣು, ತರಕಾರಿ ಮಾರಾಟ ಮಾಡುವ ಫುಟ್&zwnj;ಪಾತ್ ವ್ಯಾಪಾರಿಗಳಿಗೆ ಪಾಲಿಕೆಯ ಸಿಬ್ಬಂದಿ ಒತ್ತುವರಿ ತೆರವುಗೊಳಿಸುವಂತೆ ಕೋರಿದ್ದಾರೆ.&lt;/p&gt;&lt;p&gt;&amp;nbsp;ಆದರೆ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವ್ಯಾಪಾರಿಗಳು ಸ್ಥಳದಲ್ಲೇ ಪ್ರತಿಭಟನೆಗೆ ಕುಳಿತರು. ಅನೇಕ ವರ್ಷಗಳಿಂದ ವ್ಯಾಪಾರ ಮಾಡಿಕೊಂಡಿರುವ ನಾವು ಎಲ್ಲಿಗೆ ಹೋಗಬೇಕು? ನಮಗೆ ಫುಟ್&zwnj;ಪಾತ್ ವ್ಯಾಪಾರವೇ ಉಪಜೀವನಕ್ಕೆ ದಾರಿಯಾಗಿದೆ ಎಂದು ಪಟ್ಟು ಹಿಡಿದರು.&lt;/p&gt;&lt;h2&gt;ನಾಗರಿಕ ಪ್ರಜ್ಞೆ ಇಲ್ಲ ಎಂದು ಮಜುಂದಾರ್&zwnj; ಕಿಡಿ&lt;/h2&gt;&lt;p&gt;ಫುಟ್&zwnj;ಪಾತ್ ಮೇಲೆ ಕಾರು ನಿಲ್ಲಿಸಿ, ವೈರ್ ಸಹಿತ ರೋಡ್ ಕೋನ್ ಹಾಕಿಕೊಂಡಿರುವ ಫೋಟೋವೊಂದಕ್ಕೆ ಎಕ್ಸ್&zwnj;ನಲ್ಲಿ ಪ್ರತಿಕ್ರಿಯಿಸಿರುವ ಉದ್ಯಮಿ ಕಿರಣ್ ಮಜುಂದಾರ್&zwnj; ಶಾ &lsquo;ನಾಚಿಕೆಯಿಲ್ಲದ ನಡವಳಿಕೆ, ನಾಗರಿಕ ಪ್ರಜ್ಞೆಯೇ ಇಲ್ಲ&rsquo; ಎಂದು ಕಿಡಿ ಕಾರಿದ್ದಾರೆ.&amp;nbsp;&lt;/p&gt;&lt;h3&gt;ಫುಟ್&zwnj;ಪಾತ್ ಮೇಲೆ ಐಷಾರಾಮಿ ಬೆಂಜ್ ಕಾರು&lt;/h3&gt;&lt;p&gt;&amp;nbsp;ಇಂದಿರಾನಗರ 1ನೇ ಹಂತದ 5ನೇ ಮುಖ್ಯ ರಸ್ತೆಯಲ್ಲಿ ಮನೆ ಎದುರಿನ ವಿಶಾಲವಾದ ಫುಟ್&zwnj;ಪಾತ್ ಮೇಲೆ ಐಷಾರಾಮಿ ಬೆಂಜ್ ಕಾರು ನಿಲ್ಲಿಸಲಾಗಿದೆ. ಅಲ್ಲಿಗೆ ಬೇರೆ ಕಾರು ಹತ್ತಿರವೂ ಸುಳಿಯಬಾರದು ಎಂದು ವೈರ್ ಸಹಿತ ರೋಡ್ ಕೋನ್&zwnj;ಗಳನ್ನು ಅಳವಡಿಸಲಾಗಿದೆ. ಈ ಮೂಲಕ ಸಾರ್ವಜನಿಕ ಪಾದಚಾರಿ ಮಾರ್ಗವನ್ನು ಖಾಸಗಿ ಎಂಬಂತೆ ಬಳಸಿಕೊಳ್ಳುತ್ತಿರುವುದಕ್ಕೆ ನಾಗರಿಕರು ತೀವ್ರವಾಗಿ ಟೀಕಿಸಿದ್ದಾರೆ. ಇಂತಹ ವ್ಯಕ್ತಿಗಳ ಒತ್ತುವರಿ ತೆರವುಗೊಳಿಸುವಿರಾ ಎಂದು ಅನೇಕರು ಪ್ರಶ್ನಿಸಿದ್ದಾರೆ.&lt;/p&gt;]]></content:encoded>
            <category><![CDATA[bengaluru]]></category>
            <dc:creator>Sujatha NR</dc:creator>
            <atom:link href="https://www.kannadaprabha.in/karnataka-news/bengaluru-news/footpath-encroachment-clearance-drive-gains-momentum-in-bengaluru/articleshow-9fk5baa"/>
        </item>
        <item>
            <title><![CDATA[4 ವರ್ಷದ ಮಗು ಜತೆ ಕಟ್ಟಡದ ಮೇಲೆ ನಿಂತು ಆತ್ಮ*ತ್ಯೆಗೆ ಯತ್ನಿಸಿದ ಮಹಿಳೆ]]></title>
            <link>https://www.kannadaprabha.in/karnataka-news/bengaluru-news/woman-attempts-suicide-by-standing-atop-a-building-with-her-four-year-old-child/articleshow-kprvbbk</link>
            <guid isPermaLink="true">https://www.kannadaprabha.in/karnataka-news/bengaluru-news/woman-attempts-suicide-by-standing-atop-a-building-with-her-four-year-old-child/articleshow-kprvbbk</guid>
            <pubDate>Mon, 06 Jul 2026 10:27:37 +0530</pubDate>
            <description><![CDATA[ನಿವೃತ್ತ ಐಎಎಸ್‌ ಅಧಿಕಾರಿ, ಸ್ಥಳೀಯ ಯುವಕನೊಬ್ಬನಿಂದ ಆಗಿರುವ ಅನ್ಯಾಯ ಸರಿಪಡಿಸಲು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿಸಬೇಕೆಂದು ಒತ್ತಾಯಿಸಿ 4 ಅಂತಸ್ತಿನ ಕಟ್ಟಡದ ಮೇಲೆ ನಿಂತು ಆತ್ಮ*ತ್ಯೆಗೆ ಯತ್ನಿಸಿದ ತಾಯಿ ಹಾಗೂ ಮಗುವನ್ನು ಪೊಲೀಸ್‌ ಅಧಿಕಾರಿ ಸತತವಾಗಿ ಮನವೊಲಿಸಿ ರಕ್ಷಿಸಿದ ಘಟನೆ ನಡೆದಿದೆ]]></description>
            <media:content url="https://static-gi.asianetnews.com/images/01ktrwmrdjrb8ad4avxjsgvt86/mixcollage-10-jun-2026-07-17-pm-6463-1781099291056.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಬೆಂಗಳೂರು : &amp;nbsp;&lt;/strong&gt;ನಿವೃತ್ತ ಐಎಎಸ್&zwnj; ಅಧಿಕಾರಿ, ಸ್ಥಳೀಯ ಯುವಕನೊಬ್ಬನಿಂದ ಆಗಿರುವ ಅನ್ಯಾಯ ಸರಿಪಡಿಸಲು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿಸಬೇಕೆಂದು ಒತ್ತಾಯಿಸಿ 4 ಅಂತಸ್ತಿನ ಕಟ್ಟಡದ ಮೇಲೆ ನಿಂತು ಆತ್ಮ*ತ್ಯೆಗೆ ಯತ್ನಿಸಿದ ತಾಯಿ ಹಾಗೂ ಮಗುವನ್ನು ಪೊಲೀಸ್&zwnj; ಅಧಿಕಾರಿ ಸತತವಾಗಿ ಮನವೊಲಿಸಿ ರಕ್ಷಿಸಿದ ಘಟನೆ ಭಾನುವಾರ ಮಧ್ಯಾಹ್ನ 11.30ರ ಸುಮಾರಿಗೆ ದೊಡ್ಡಕಮ್ಮನಹಳ್ಳಿ ಸಮೀಪದ ನೋಬೋನಗರದ ಮಾರುತಿ ಡೆಂಟಲ್&zwnj; ಕಾಲೇಜು ಸಮೀಪದ ಕಟ್ಟಡದಲ್ಲಿ ನಡೆದಿದೆ.&lt;/p&gt;&lt;p&gt;ಕೇರಳ ಮೂಲದ ಮರಿಯಾ (32) ಮತ್ತು ಆಕೆಯ 4 ವರ್ಷದ ಮಗುವನ್ನು ರಕ್ಷಿಸಲಾಗಿದ್ದು, ಮಹಿಳೆಗೆ ಆಪ್ತ ಸಮಾಲೋಚಕರ ಮೂಲಕ ಕೌನ್ಸೆಲಿಂಗ್&zwnj; ಕೊಡಿಸಲಾಗುತ್ತಿದೆ. ಭಾನುವಾರ ಮಧ್ಯಾಹ್ನ 11.30ರ ಸುಮಾರಿಗೆ ದೊಡ್ಡಕಮ್ಮನಹಳ್ಳಿ ಸಮೀಪದ ನೋಬೋನಗರದ ಮಾರುತಿ ಡೆಂಟಲ್&zwnj; ಕಾಲೇಜು ಸಮೀಪದ ಕಟ್ಟಡದಲ್ಲಿ ಘಟನೆ ನಡೆದಿದೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?:&lt;/strong&gt;&lt;/h2&gt;&lt;p&gt;ಬಹಳ ವರ್ಷಗಳಿಂದ ನಗರದಲ್ಲಿಯೇ ವಾಸವಾಗಿರುವ ಮರಿಯಾ ಮೊದಲು ಸಣ್ಣ-ಪುಟ್ಟ ಕೆಲಸಕ್ಕೆ ಹೋಗುತ್ತಿದ್ದರು. ಇತ್ತೀಚೆಗೆ ಯಾವುದೇ ಕೆಲಸಕ್ಕೆ ಹೋಗುತ್ತಿರಲ್ಲಿಲ್ಲ. 4 ತಿಂಗಳಿಂದ ದೊಡ್ಡಕಮ್ಮನಹಳ್ಳಿಯ ಮಾರುತಿ ಡೆಂಟಲ್&zwnj; ಕಾಲೇಜು ಪಕ್ಕದ ಕಟ್ಟಡದ 4ನೇ ಅಂತಸ್ತಿನಲ್ಲಿರುವ ಕೊಠಡಿಯಲ್ಲಿ 4 ವರ್ಷದ ಮಗು ಜತೆ ವಾಸವಾಗಿದ್ದಾರೆ. ಭಾನುವಾರ ಮಧ್ಯಾಹ್ನ ತನ್ನ ಕೊಠಡಿ ಮೇಲ್ಭಾಗದಲ್ಲಿರುವ ವಾಟರ್&zwnj; ಟ್ಯಾಂಕ್&zwnj; ಮೇಲೆ ಹತ್ತಿ ಆತ್ಮ*ತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಸ್ಥಳಕ್ಕೆ ಬಂದ ಹುಳಿಮಾವು ಠಾಣೆಯ ಪೊಲೀಸರು ಮಹಿಳೆಗೆ ಮನವೊಲಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಈ ವೇಳೆ ನಿವೃತ್ತ ಐಎಎಸ್&zwnj; ಅಧಿಕಾರಿ, ಸ್ಥಳೀಯ ಯುವಕನೊಬ್ಬನಿಂದ ನನಗೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ. ಈ ಮಧ್ಯ ಅಗ್ನಿಶಾಮಕ ದಳ ಮತ್ತು ಸಿವಿಲ್&zwnj; ಡಿಫೆನ್ಸ್ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಕಟ್ಟಡದ ಕೆಳಗೆ ಬಲೂನ್ ಬೆಡ್&zwnj; ಸಿದ್ದಪಡಿಸಿಕೊಂಡಿದ್ದರು. ನಂತರ ಇನ್&zwnj;ಸ್ಪೆಕ್ಟರ್&zwnj; ಜಗದೀಶ್&zwnj; ಅವರು ಆಕೆಗೆ ಸುಮಾರು 2 ಗಂಟೆಗಳ ಕಾಲ ಆಕೆಯನ್ನು ಮನವೊಲಿಸಿ ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;p&gt;ಸಿಎಂ ಭೇಟಿ ಮಾಡಿಸಲು ಪಟ್ಟು:&lt;/p&gt;&lt;p&gt;ಮಹಿಳೆಯು ನನಗೆ ಪೊಲೀಸರು, ಕೋರ್ಟ್&zwnj; ಹಾಗೂ ಸರ್ಕಾರದಿಂದ ಅನ್ಯಾಯವಾಗಿದೆ. ಯಾರ ಮೇಲೂ ನಂಬಿಕೆ ಇಲ್ಲ. ನಾನು ಇಳಿಯಬೇಕೆಂದರೆ, ಕೂಡಲೇ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿಸಬೇಕೆಂದು ಬೇಡಿಕೆ ಇಟ್ಟಿದ್ದರು. ಪೊಲೀಸರು, ಭೇಟಿ ಮಾಡಿಸುವ ಭರವಸೆ ನೀಡಿದ ಬಳಿಕ ಆಕೆ ಕೆಳಗೆ ಇಳಿದು ಬಂದಿದ್ದಾರೆ. ವಿಚಾರಣೆ ವೇಳೆ ಈ ಹಿಂದಿನ ಪ್ರಕರಣಗಳಲ್ಲಿ ನನಗೆ ಅನ್ಯಾಯವಾಗಿದೆ. ನಿವೃತ್ತ ಐಎಎಸ್&zwnj; ಅಧಿಕಾರಿ ಹಾಗೂ ಹುಳಿಮಾವು ನಿವಾಸಿಯಾಗಿರುವ ಯುವಕನಿಂದ ಮೋಸವಾಗಿದೆ ಎಂದು ಹೇಳುತ್ತಿದ್ದಾರೆ. ಯಾವುದಕ್ಕೂ ಸಮರ್ಪಕ ಉತ್ತರ ನೀಡುತ್ತಿಲ್ಲ. ಸದ್ಯ ಆಕೆ ಆರೋಪಿಸಿದ ಯುವಕನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹುಳಿಮಾವು ಠಾಣೆಯಲ್ಲಿ ದೂರು ದಾಖಲಾಗಿದೆ.&lt;/p&gt;]]></content:encoded>
            <category><![CDATA[bengaluru]]></category>
            <dc:creator>Sujatha NR</dc:creator>
            <atom:link href="https://www.kannadaprabha.in/karnataka-news/bengaluru-news/woman-attempts-suicide-by-standing-atop-a-building-with-her-four-year-old-child/articleshow-kprvbbk"/>
        </item>
        <item>
            <title><![CDATA[ಬಿಎಂಟಿಸಿ ಬಸ್‌ಗೆ 3 ವರ್ಷದಲ್ಲಿ 150 ಜನ ಬಲಿ : 18 ವರ್ಷದಲ್ಲಿ ಬೆಂಗಳೂರಲ್ಲಿ 1142 ಜನ ಸಾವು]]></title>
            <link>https://www.kannadaprabha.in/karnataka-news/bengaluru-news/150-people-killed-in-bmtc-bus-accidents-in-three-years-1142-deaths-in-bengaluru-over-18-years/articleshow-wp149br</link>
            <guid isPermaLink="true">https://www.kannadaprabha.in/karnataka-news/bengaluru-news/150-people-killed-in-bmtc-bus-accidents-in-three-years-1142-deaths-in-bengaluru-over-18-years/articleshow-wp149br</guid>
            <pubDate>Mon, 06 Jul 2026 10:21:05 +0530</pubDate>
            <description><![CDATA[ನಗರದಲ್ಲಿ ಬಿಎಂಟಿಸಿ ಬಸ್‌ಗಳಿಂದ ಅಪಘಾತಕ್ಕೊಳಗಾಗಿ ಕಳೆದ 3 ವರ್ಷಗಳ ಅವಧಿಯಲ್ಲಿ ನಗರದ 150ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 18 ವರ್ಷಗಳಲ್ಲಿ 1,142 ಜನರು ಬಿಎಂಟಿಸಿ ಬಸ್‌ ಅಪಘಾತದಿಂದ ಮೃತಪಟ್ಟಿದ್ದಾರೆ.]]></description>
            <media:content url="https://static-gi.asianetnews.com/images/01kwrzr7h97emkhpeh72gyxxpk/bmtc-bus-accident-1783250034217.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು : &amp;nbsp;&lt;/strong&gt;ನಗರದಲ್ಲಿ ಬಿಎಂಟಿಸಿ ಬಸ್&zwnj;ಗಳಿಂದ ಅಪಘಾತಕ್ಕೊಳಗಾಗಿ ಕಳೆದ 3 ವರ್ಷಗಳ ಅವಧಿಯಲ್ಲಿ ನಗರದ 150ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 18 ವರ್ಷಗಳಲ್ಲಿ 1,142 ಜನರು ಬಿಎಂಟಿಸಿ ಬಸ್&zwnj; ಅಪಘಾತದಿಂದ ಮೃತಪಟ್ಟಿದ್ದಾರೆ.&lt;/p&gt;&lt;p&gt;ಹತ್ತು ವರ್ಷಗಳ ಹಿಂದಿನ ಅಂಕಿ-ಅಂಶ ಗಮನಿಸಿದರೆ ಕಳೆದ ಏಳೆಂಟು ವರ್ಷಗಳಿಂದ ಈಚೆಗೆ ಬಿಎಂಟಿಸಿ ಬಸ್&zwnj; ಅಪಘಾತದಿಂದ ಸಾವಿಗೀಡಾಗುವವರ ಸಂಖ್ಯೆ ಕಡಿಮೆಯಾಗಿದೆ. ಬಹುತೇಕ ರಸ್ತೆಗಳನ್ನು ಏಕಮುಖ ರಸ್ತೆ ಮಾಡಿರುವುದು. ಕಠಿಣ ಸಂಚಾರಿ ನಿಯಮಗಳ ಜಾರಿ, ಅನುಭವಿ ಚಾಲಕರ ನೇಮಕ ಸೇರಿದಂತೆ ವಿವಿಧ ಕ್ರಮಗಳಿಂದಾಗಿ ಬಿಎಂಟಿಸಿ ಬಸ್&zwnj;ಗಳಿಂದಾಗುತ್ತಿದ್ದ ಅವಘಡಗಳ ಸಂಖ್ಯೆ ಇಳಿಮುಖವಾಗಿದೆ. 2008ರಿಂದ 2014ರವರೆಗೆ ವರ್ಷದಲ್ಲಿ ಸರಾಸರಿ 90ಕ್ಕಿಂತ ಹೆಚ್ಚು ಜನರು ಬಿಎಂಟಿಸಿ ಬಸ್&zwnj;ಗಳಿಂದ ಸಾವಿಗೀಡಾಗುತ್ತಿದ್ದರು. ಆದರೆ ಕಳೆದ ಐದಾರು ವರ್ಷಗಳಲ್ಲಿ ಈ ಸಂಖ್ಯೆ ಸರಾಸರಿ 50ಕ್ಕೆ ಇಳಿದಿದೆ.&lt;/p&gt;&lt;h2&gt;&lt;strong&gt;18 ವರ್ಷದಲ್ಲಿ 5864 ಅಪಘಾತ:&lt;/strong&gt;&lt;/h2&gt;&lt;p&gt;ಕಳೆದ 18 ವರ್ಷಗಳ ಅವಧಿಯಲ್ಲಿ 5,864 ಬಾರಿ ಬಿಎಂಟಿಸಿ ಬಸ್​ಗಳಿಂದ​ ಅಪಘಾತಗಳು ಸಂಭವಿಸಿವೆ. ಇದರಿಂದ1,142 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 3 ವರ್ಷಗಳಲ್ಲಿ ಎಲೆಕ್ಟ್ರಿಕ್​​ ಬಸ್​​ಗಳ ಅಪಘಾತದಿಂದಾಗಿ 40ಕ್ಕೂ ಹೆಚ್ಚು ಮತ್ತು ಸಾಮಾನ್ಯ ಬಸ್​​ಗಳಿಂದಾಗಿ 100ಕ್ಕೂ ಹೆಚ್ಚು ಜನರ ಜೀವ ಹಾನಿಯಾಗಿದೆ. ಕಳೆದ 1 ವರ್ಷದಲ್ಲಿ ನಡೆದಿರುವ ಸಾಮಾನ್ಯ​​ ಬಿಎಂಟಿಸಿ ಬಸ್​​ಗಳ 104 ಅಪಘಾತಗಳಿಂದಲೇ 31 ಜನ ಪ್ರಾಣ ಕಳೆದುಕೊಂಡಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.&lt;/p&gt;&lt;h3&gt;ಒತ್ತಡದಲ್ಲಿ ಕೆಲಸವೇ ಘಟನೆಗೆ ಕಾರಣ?&lt;/h3&gt;&lt;p&gt;ಬಿಎಂಟಿಸಿ ಸಿಬ್ಬಂದಿ ಅತ್ಯಂತ ಒತ್ತಡದಲ್ಲಿ ಕೆಲಸ ಮಾಡುತ್ತಿರುವುದೇ ಇಂತಹ ಘಟನೆಗಳ ಹೆಚ್ಚಳಕ್ಕೆ ಕಾರಣ ಎಂಬ ಮಾತು ಮೊದಲಿನಿಂದಲೂ ಕೇಳಿ ಬರುತ್ತಿವೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ರೂಟ್&zwnj;ಗ​​ಳನ್ನು ಕ್ಲಿಯರ್ ಮಾಡಲು ಸಿಬ್ಬಂದಿಗೆ ಟಾರ್ಗೆಟ್​​ ನೀಡಲಾಗುತ್ತದೆ. 1991-95ರ ನಿಯಮಗಳನ್ನೇ ಇನ್ನೂ ಅನುಸರಿಸುತ್ತಿದ್ದಾರೆ. ಪ್ರತಿದಿನ 250 ರಿಂದ 300 ಕಿ.ಮೀ. ಬಸ್ ಓಡಿಸಲು ಅಧಿಕಾರಿಗಳು ಹೇಳುತ್ತಿದ್ದಾರೆ ಎನ್ನಲಾಗಿದೆ.&lt;/p&gt;]]></content:encoded>
            <category><![CDATA[bengaluru]]></category>
            <dc:creator>Sujatha NR</dc:creator>
            <atom:link href="https://www.kannadaprabha.in/karnataka-news/bengaluru-news/150-people-killed-in-bmtc-bus-accidents-in-three-years-1142-deaths-in-bengaluru-over-18-years/articleshow-wp149br"/>
        </item>
        <item>
            <title><![CDATA[ಬದರೀನಾಥ ಹುಂಡಿ ಕನ್ನ  ತನಿಖೆಗೆ ನಾಲ್ವರ ಸಮಿತಿ]]></title>
            <link>https://www.kannadaprabha.in/india-news/badrinath-donation-box-theft-four-member-committee-formed-to-investigate/articleshow-mhw9ufg</link>
            <guid isPermaLink="true">https://www.kannadaprabha.in/india-news/badrinath-donation-box-theft-four-member-committee-formed-to-investigate/articleshow-mhw9ufg</guid>
            <pubDate>Mon, 06 Jul 2026 07:19:13 +0530</pubDate>
            <description><![CDATA[ಉತ್ತರಾಖಂಡದ ಬದರೀನಾಥ ದೇವಸ್ಥಾನದ ದೇಣಿಗೆಯನ್ನೂ ಲೂಟಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಅದರ ತನಿಖೆಗೆಂದು ದೇಗುಲದ ಆಡಳಿತ ಮಂಡಳಿಯಾದ ಬಿಕೆಟಿಸಿ 4 ಸದಸ್ಯರ ಸಮಿತಿಯೊಂದನ್ನು ರಚಿಸಿದೆ.]]></description>
            <media:content url="https://static-gi.asianetnews.com/images/01kpszjh7b8xasssjd3kzbh6k1/char-dham-yatra-2026-badrinath-temple-opening-date-registration-history-timings-travel-guide-uttarakhand-5-1776840951019.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಡೆಹ್ರಾಡೂನ್&zwnj;:&lt;/strong&gt; ಅಯೋಧ್ಯೆ ರಾಮಮಂದಿರದ ರೀತಿಯೇ ಉತ್ತರಾಖಂಡದ ಬದರೀನಾಥ ದೇವಸ್ಥಾನದ ದೇಣಿಗೆಯನ್ನೂ ಲೂಟಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಅದರ ತನಿಖೆಗೆಂದು ದೇಗುಲದ ಆಡಳಿತ ಮಂಡಳಿಯಾದ ಬಿಕೆಟಿಸಿ 4 ಸದಸ್ಯರ ಸಮಿತಿಯೊಂದನ್ನು ರಚಿಸಿದೆ.&lt;/p&gt;&lt;h2&gt;ನಿಷ್ಪಕ್ಷ ತನಿಖೆಗಾಗಿ ಬಿಕೆಟಿಸಿಯ ಅಧ್ಯಕ್ಷರಾದ ಹೇಮಂತ್&zwnj; ದ್ವಿವೇದಿ ಸಮಿತಿ&lt;/h2&gt;&lt;p&gt;ನಿಷ್ಪಕ್ಷ ತನಿಖೆಗಾಗಿ ಬಿಕೆಟಿಸಿಯ ಅಧ್ಯಕ್ಷರಾದ ಹೇಮಂತ್&zwnj; ದ್ವಿವೇದಿ ಅವರು ಸಮಿತಿಯನ್ನು ರಚಿಸಿದ್ದು, ಲಭ್ಯವಿರುವ ಎಲ್ಲಾ ಸಾಕ್ಷ್ಯಗಳನ್ನು ಪರಿಶೀಲಿಸಿ 7 ದಿನಗಳೊಳಗಾಗಿ ವರದಿ ನೀಡುವಂತೆ ಸೂಚಿಸಿದ್ದಾರೆ. ಈ ಸಮಿತಿಯು ಸಿಸಿಟೀವಿ ದೃಶ್ಯಾವಳಿಗಳು, ಸಂಬಂಧಪಟ್ಟವರ ಹೇಳಿಕೆ ಸೇರಿದಂತೆ ಇತರೆ ಸಾಕ್ಷಿಗಳ ಆಧಾರದಲ್ಲಿ ತನಿಖೆ ನಡೆಸಲಿದೆ.&lt;/p&gt;&lt;h3&gt;ಎನ್&zwnj;ಜಿಒ ಒಂದರ ಆಪಾದನೆ&lt;/h3&gt;&lt;p&gt;ತಮ್ಮ ಆಪ್ತ ಕಾರ್ಯದರ್ಶಿ ದೇಗುಲದ ದೇಣಿಗೆಯನ್ನು ಕದ್ದಿದ್ದಾರೆ ಎಂಬ ಎನ್&zwnj;ಜಿಒ ಒಂದರ ಆಪಾದನೆಯನ್ನು ತಳ್ಳಿಹಾಕಿದ್ದ ದ್ವಿವೇದಿ, ಕೃತ್ಯ ನಿಜವಾಗಿಯೂ ನಡೆದಿದೆಯೇ ಎಂಬುದನ್ನು ಪತ್ತೆ ಮಾಡಿ, ತಪ್ಪಿತಸ್ಥರ ವಿರಿದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.&lt;/p&gt;]]></content:encoded>
            <category><![CDATA[India]]></category>
            <dc:creator>Sujatha NR</dc:creator>
            <atom:link href="https://www.kannadaprabha.in/india-news/badrinath-donation-box-theft-four-member-committee-formed-to-investigate/articleshow-mhw9ufg"/>
        </item>
        <item>
            <title><![CDATA[ಓಸಿ ವಿನಾಯ್ತಿ: ವಿದ್ಯುತ್‌ ಸಂಪರ್ಕಕ್ಕೆ  ಅರ್ಜಿಗೆ ಆ.15ರವರೆಗೆ ಅವಕಾಶ]]></title>
            <link>https://www.kannadaprabha.in/karnataka-news/bengaluru-news/oc-exemption-applications-for-electricity-connection-accepted-till-august-15/articleshow-2oc4738</link>
            <guid isPermaLink="true">https://www.kannadaprabha.in/karnataka-news/bengaluru-news/oc-exemption-applications-for-electricity-connection-accepted-till-august-15/articleshow-2oc4738</guid>
            <pubDate>Mon, 06 Jul 2026 07:13:55 +0530</pubDate>
            <description><![CDATA[ರಾಜ್ಯದಲ್ಲಿ 2400 ಚದರಡಿ ನಿವೇಶನದಲ್ಲಿ ನಿರ್ಮಿಸಿರುವ ವಸತಿ ಕಟ್ಟಡಗಳಿಗೆ (ಶೇ.20ರಷ್ಟು ಹೆಚ್ಚುವರಿ ವ್ಯತ್ಯಾಸದೊಂದಿಗೆ) ಓಸಿ, ಸಿಸಿ ಇಲ್ಲದೆ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ನೀಡಿದ್ದ ಗಡುವನ್ನು ಆ.15ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ತಿದ್ದುಪಡಿ ಆದೇಶ ಹೊರಡಿಸಿದೆ.]]></description>
            <media:content url="https://static-gi.asianetnews.com/images/01kbhfg9fskwrqq74n89mqpsw6/up-electricity-bill-relief-scheme-2025-1764744504825.jpg" type="image/jpeg" height="390" width="690"/>
            <content:encoded><![CDATA[&lt;h3&gt;&amp;nbsp;&lt;strong&gt;ಬೆಂಗಳೂರು:&lt;/strong&gt; ರಾಜ್ಯದಲ್ಲಿ 2400 ಚದರಡಿ ನಿವೇಶನದಲ್ಲಿ ನಿರ್ಮಿಸಿರುವ ವಸತಿ ಕಟ್ಟಡಗಳಿಗೆ (ಶೇ.20ರಷ್ಟು ಹೆಚ್ಚುವರಿ ವ್ಯತ್ಯಾಸದೊಂದಿಗೆ) ಓಸಿ, ಸಿಸಿ ಇಲ್ಲದೆ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ನೀಡಿದ್ದ ಗಡುವನ್ನು ಆ.15ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ತಿದ್ದುಪಡಿ ಆದೇಶ ಹೊರಡಿಸಿದೆ. &amp;nbsp;&lt;/h3&gt;&lt;h3&gt;ಮೊದಲು ಸೀಮಿತವಾಗಿ ಸಿಸಿ, ಓಸಿ ವಿನಾಯ್ತಿ&lt;/h3&gt;&lt;p&gt;ಈ ಮೊದಲು 2026ರ ಮೇ 31ರ ಒಳಗಾಗಿ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವ ಪ್ರಕರಣಗಳಿಗೆ ಸೀಮಿತವಾಗಿ ಸಿಸಿ, ಓಸಿ ವಿನಾಯ್ತಿಗೆ ಅವಕಾಶ ನೀಡಲು ತೀರ್ಮಾನಿಸಲಾಗಿತ್ತು. ನಂತರ ಇದರಿಂದ ಹೆಚ್ಚು ಅನುಕೂಲ ಆಗುವುದಿಲ್ಲ ಎಂಬ ಕಾರಣಕ್ಕೆ ಅರ್ಜಿ ಆಹ್ವಾನಿಸಿ ಆದೇಶ ಮಾಡಿದ ನಂತರದ 15 ದಿನಗಳವರೆಗೆ ಈಗಾಗಲೇ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು ಕಟ್ಟಡ ನಿರ್ಮಿಸಿ ಪೂರ್ಣಗೊಳಿಸಿರುವ ಪ್ರಕರಣ ಹಾಗೂ ​ಯಾವುದೇ ವಿದ್ಯುತ್ ಸಂಪರ್ಕ ಪಡೆಯದೇ ಕಟ್ಟಡ ಕಾಮಗಾರಿ ಪೂರ್ಣಗೊಂಡಿರುವ ಪ್ರಕರಣಗಳಿಗೆ ಅನ್ವಯವಾಗುವಂತೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲು ತೀರ್ಮಾನಿಸಲಾಗಿತ್ತು.&lt;/p&gt;&lt;p&gt;ಬಳಿಕ ಕಳೆದ ಸಚಿವ ಸಂಪುಟದಲ್ಲಿ ಮತ್ತೆ ಆ.15ರವರೆಗೆ ಹೆಚ್ಚುವರಿ ಕಾಲಾವಕಾಶ ನೀಡಲು ನಿರ್ಧರಿಸಲಾಗಿತ್ತು. ಅದರಂತೆ ಈಗ ಆದೇಶ ಹೊರಡಿಸಲಾಗಿದೆ.&lt;/p&gt;&lt;h2&gt;ವಾಣಿಜ್ಯ ಕಟ್ಟಡಗಳಿಗೆ ಅ&zwj;ವಕಾಶ ಇಲ್ಲ:&lt;/h2&gt;&lt;p&gt;ಅದರಂತೆ 2400 ಚದರ ಅಡಿವರೆಗೆ ಅಳತೆಯ ನಿವೇಶನಗಳಲ್ಲಿ ಶೇ.20% ಹೆಚ್ಚುವರಿ ವ್ಯತ್ಯಾಸದ ಮಿತಿಯೊಂದಿಗೆ ನಿರ್ಮಿಸಿರುವ ಜಿ+3 (ಜಿ+3) ಅಂತಸ್ತಿನ ವಸತಿ ಕಟ್ಟಡಗಳು ಅಥವಾ ಸ್ಟಿಲ್ಟ್ ಪಾರ್ಕಿಂಗ್ + 4 ಮಹಡಿಗಳನ್ನು ಹೊಂದಿರುವ ವಸತಿ ಕಟ್ಟಡಗಳಿಗೆ ಮಾತ್ರ ಈ ವಿನಾಯ್ತಿ ಅನ್ವಯಿಸಲಿದ್ದು, ಅಂಥ ಪ್ರಕರಣಗಳ ಕಟ್ಟಡ ಮಾಲೀಕರು ಶಾಶ್ವತ ವಿದ್ಯುತ್&zwnj; ಸಂಪರ್ಕಕ್ಕಾಗಿ ಆ.15ವರೆಗೆ ಅರ್ಜಿ ಸಲ್ಲಿಸಹುದು. ವಾಣಿಜ್ಯ ಕಟ್ಟಡಗಳಿಗೆ ಈ ಅವಕಾಶವಿಲ್ಲ.&lt;/p&gt;&lt;p&gt;- ಗಡುವು ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ&amp;nbsp;&lt;/p&gt;]]></content:encoded>
            <category><![CDATA[bengaluru]]></category>
            <dc:creator>Sujatha NR</dc:creator>
            <atom:link href="https://www.kannadaprabha.in/karnataka-news/bengaluru-news/oc-exemption-applications-for-electricity-connection-accepted-till-august-15/articleshow-2oc4738"/>
        </item>
        <item>
            <title><![CDATA[ಇಂದು ಬೆಳಗಾವಿಗೆ ಆರ್‌ಎಸ್‌ಎಸ್‌  ಸರಸಂಘಚಾಲಕ ಭಾಗವತ್‌]]></title>
            <link>https://www.kannadaprabha.in/karnataka-news/belagavi-news/rss-chief-bhagwat-to-visit-belagavi-today/articleshow-2qmrmgk</link>
            <guid isPermaLink="true">https://www.kannadaprabha.in/karnataka-news/belagavi-news/rss-chief-bhagwat-to-visit-belagavi-today/articleshow-2qmrmgk</guid>
            <pubDate>Mon, 06 Jul 2026 07:06:36 +0530</pubDate>
            <description><![CDATA[ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರು ಸೋಮವಾರ ಬೆಳಗಾವಿಗೆ ಆಗಮಿಸುವ ಹಿನ್ನೆಲೆಯಲ್ಲಿ ನಗರದಲ್ಲಿನ ಮೂರು ಪ್ರಮುಖ ಸ್ಥಳಗಳ ಸುತ್ತಲಿನ ಎರಡು ಕಿ.ಮೀ.ವ್ಯಾಪ್ತಿಯನ್ನು ರೆಡ್ ಝೋನ್ ಹಾಗೂ ನೋ ಫ್ಲೈ ಝೋನ್ ಎಂದು ಘೋಷಿಸಿ ಆದೇಶ]]></description>
            <media:content url="https://static-gi.asianetnews.com/images/01ktx3k8mwym0k943bv6h313hy/----------------------2026-06-12t100553.906-1781240799900.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;strong&gt; ಬೆಳಗಾವಿ : &amp;nbsp;&lt;/strong&gt;ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರು ಸೋಮವಾರ ಬೆಳಗಾವಿಗೆ ಆಗಮಿಸುವ ಹಿನ್ನೆಲೆಯಲ್ಲಿ ನಗರದಲ್ಲಿನ ಮೂರು ಪ್ರಮುಖ ಸ್ಥಳಗಳ ಸುತ್ತಲಿನ ಎರಡು ಕಿ.ಮೀ.ವ್ಯಾಪ್ತಿಯನ್ನು ರೆಡ್ ಝೋನ್ ಹಾಗೂ ನೋ ಫ್ಲೈ ಝೋನ್ ಎಂದು ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.&lt;/p&gt;&lt;h2&gt;ಬೆಳಗಾವಿ ನಗರದಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮ&lt;/h2&gt;&lt;p&gt;ಜುಲೈ 6ರಿಂದ 14ರವರೆಗೆ ಮೋಹನ್ ಭಾಗವತ್ ಅವರು ಬೆಳಗಾವಿ ನಗರದಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅವರ ಭದ್ರತೆ ಹಾಗೂ ಸಾರ್ವಜನಿಕ ಶಾಂತಿ&ndash;ಸುವ್ಯವಸ್ಥೆ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಬಂಧ ವಿಧಿಸಲಾಗಿದೆ.&lt;/p&gt;&lt;h3&gt;ವೈಮಾನಿಕ ಸಾಧನಗಳ ಹಾರಾಟವನ್ನು ನಿಷೇಧ&lt;/h3&gt;&lt;p&gt;ಬೆಳಗಾವಿಯ ಫೌಂಡ್ರಿ ಕ್ಲಸ್ಟರ್ ಅತಿಥಿಗೃಹ, ಅಂಗೋಳ ಕೈಗಾರಿಕಾ ಪ್ರದೇಶ, ಸಂತ ಮೀರಾ ಶಾಲೆ, ಸಹ್ಯಾದ್ರಿ ಕಾಲೊನಿ, ಭಾಗ್ಯನಗರ ನಾಲ್ಕನೇ ಕ್ರಾಸ್, ಅಂಗೋಳ ಹಾಗೂ ಶ್ರೀ ಜಗನ್ನಾಥರಾವ್ ಜೋಶಿ ಸ್ಮಾರಕ ಭವನ, ಗೂಡ್ಸ್&zwnj;ಶೆಡ್ ರಸ್ತೆ, ಶಾಸ್ತ್ರಿನಗರ, ಖಡೆಬಜಾರ್ ಸುತ್ತಲಿನ ಎರಡು ಕಿ.ಮೀ.ವ್ಯಾಪ್ತಿಯಲ್ಲಿ ಮಾನವರಹಿತ ವೈಮಾನಿಕ ಸಾಧನಗಳ ಹಾರಾಟವನ್ನು ನಿಷೇಧಿಸಲಾಗಿದೆ.&lt;/p&gt;&lt;p&gt;ಈ ಪ್ರದೇಶಗಳಲ್ಲಿ ಯುಎವಿ, ಯುಎಎಸ್, ಡ್ರೋನ್, ಮಾನವರಹಿತ ವಿಮಾನ ವ್ಯವಸ್ಥೆ ಹಾಗೂ ಪ್ಯಾರಾಗ್ಲೈಡರ್&zwnj;ಗಳ ಹಾರಾಟ, ಬಳಕೆ ಮತ್ತು ಕಾರ್ಯಾಚರಣೆಗೆ ಸಂಪೂರ್ಣ ನಿರ್ಬಂಧ ಇರಲಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ&ndash;2023ರ ಕಲಂ 163ರಡಿ ಪ್ರದತ್ತವಾದ ಅಧಿಕಾರ ಬಳಸಿ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ. ಆದೇಶದ ಕಟ್ಟುನಿಟ್ಟಿನ ಅನುಷ್ಠಾನದ ಹೊಣೆಯನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ವಹಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[belagavi]]></category>
            <dc:creator>Sujatha NR</dc:creator>
            <atom:link href="https://www.kannadaprabha.in/karnataka-news/belagavi-news/rss-chief-bhagwat-to-visit-belagavi-today/articleshow-2qmrmgk"/>
        </item>
        <item>
            <title><![CDATA[2ಕ್ಕಿಂತ ಹೆಚ್ಚು ಮದುವೆ ಆದ್ರೆ  ಬಂಗಾಳದಲ್ಲಿ ಸೌಲಭ್ಯ ಕಟ್!]]></title>
            <link>https://www.kannadaprabha.in/politics-news/benefits-to-be-withdrawn-in-bengal-for-those-with-more-than-two-marriages/articleshow-mfidnmc</link>
            <guid isPermaLink="true">https://www.kannadaprabha.in/politics-news/benefits-to-be-withdrawn-in-bengal-for-those-with-more-than-two-marriages/articleshow-mfidnmc</guid>
            <pubDate>Mon, 06 Jul 2026 06:59:47 +0530</pubDate>
            <description><![CDATA[ಎರಡಕ್ಕಿಂತ ಹೆಚ್ಚು ಮದುವೆ, ಮಕ್ಕಳಿಗೆ ಕಡ್ಡಾಯ ಲಸಿಕೆ ಹಾಕಲು ನಿರಾಕರಿಸುವವರು, ನಿರ್ದಿಷ್ಟ ಧಾರ್ಮಿಕ ಶಿಕ್ಷಣ ಸಂಸ್ಥೆಗಳಿಗೆ ಸೇರಲು ಸರ್ಕಾರಿ ಶಾಲೆ ಬಿಟ್ಟವರು ಅಥವಾ ಭಾರತೀಯ ಪ್ರಜೆಗಳಲ್ಲದವರಿಗೆ ಇನ್ನು ಮುಂದೆ ಪಶ್ಚಿಮ ಬಂಗಾಳದಲ್ಲಿ ರಾಜ್ಯ ಸರ್ಕಾರಿ ಕಲ್ಯಾಣ ಯೋಜನೆಯ ಸೌಲಭ್ಯಗಳು ಸಿಗುವುದಿಲ್ಲ!]]></description>
            <media:content url="https://static-gi.asianetnews.com/images/01kv7vr9c62t910cxajw0kmnbm/west-bengal-cm-suvendu-adhikari-addresses-a-media-conference-after-the-inauguration-of-an-exhibition-1781601674630.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;strong&gt;ಕೋಲ್ಕತಾ: &lt;/strong&gt;ಎರಡಕ್ಕಿಂತ ಹೆಚ್ಚು ಮದುವೆ, ಮಕ್ಕಳಿಗೆ ಕಡ್ಡಾಯ ಲಸಿಕೆ ಹಾಕಲು ನಿರಾಕರಿಸುವವರು, ನಿರ್ದಿಷ್ಟ ಧಾರ್ಮಿಕ ಶಿಕ್ಷಣ ಸಂಸ್ಥೆಗಳಿಗೆ ಸೇರಲು ಸರ್ಕಾರಿ ಶಾಲೆ ಬಿಟ್ಟವರು ಅಥವಾ ಭಾರತೀಯ ಪ್ರಜೆಗಳಲ್ಲದವರಿಗೆ ಇನ್ನು ಮುಂದೆ ಪಶ್ಚಿಮ ಬಂಗಾಳದಲ್ಲಿ ರಾಜ್ಯ ಸರ್ಕಾರಿ ಕಲ್ಯಾಣ ಯೋಜನೆಯ ಸೌಲಭ್ಯಗಳು ಸಿಗುವುದಿಲ್ಲ!&lt;/p&gt;&lt;p&gt;ಸರ್ಕಾರಿ ಕಲ್ಯಾಣ ಯೋಜನೆಗಳ ಕುರಿತು ಪುನರ್&zwnj; ಪರಿಶೀಲನಾ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಇಂಥ ನಿರ್ಧಾರ ಪ್ರಕಟಿಸಿದ್ದಾರೆ.&lt;/p&gt;&lt;p&gt;ಸರ್ಕಾರಿ ಕಲ್ಯಾಣ ಯೋಜನೆಗಳು ಕೇವಲ ಅರ್ಹರಿಗಷ್ಟೇ ತಲುಪಬೇಕೆಂಬ ಉದ್ದೇಶದಿಂದ ಪಶ್ಚಿಮ ಬಂಗಾಳ ಸರ್ಕಾರ ಇಂಥ ಕಠಿಣ ಷರತ್ತುಗಳನ್ನು ಹಾಕುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ನಿಯಮಗಳೇನು&lt;/strong&gt;?:&lt;/h2&gt;&lt;p&gt;ಮಕ್ಕಳಿಗೆ ಸರ್ಕಾರ ಕಡ್ಡಾಯ ಮಾಡಿದ ಲಸಿಕೆಗಳನ್ನು ಹಾಕಿಸದ ಪೋಷಕರು ಅಥವಾ ಪಾಲಕರು ಕರ್ನಾಟಕದ ಗೃಹ ಲಕ್ಷ್ಮಿ ಮಾದರಿಯ ಅನ್ನಪೂರ್ಣ ಯೋಜನೆಗೆ ಅನರ್ಹರಾಗುತ್ತಾರೆ. ಇದಲ್ಲದೆ ಯೋಜನೆಯ ಅರ್ಜಿಯಲ್ಲಿ 4 ಮಕ್ಕಳವರೆಗೆ ಲಸಿಕೆ ಹಾಕಿಸಿರುವ ಕುರಿತು ವಿವರ ನೀಡಬೇಕು. ಅಲ್ಲದೆ ಮಕ್ಕಳು ಯಾವ ಶಾಲೆಗೆ (ಅಂದರೆ ಸರ್ಕಾರಿ, ಸರ್ಕಾರೇತರ, ಸರ್ಕಾರಿ ಅನುದಾನಿತ ಅಥವಾ ಮದ್ರಸಾ ಶಾಲೆ) ತೆರಳುತ್ತಿದ್ದಾರೆ ಎಂಬ ಕುರಿತು ಸ್ಪಷ್ಟ ಮಾಹಿತಿ ನೀಡುವುದು ಕಡ್ಡಾಯ.&lt;/p&gt;&lt;h3&gt;ಶಾಲೆ ತೊರೆದಿರುವ ವ್ಯಕ್ತಿಗಳು ಹಣಕಾಸು ನೆರವನ್ನು ಕಳೆದುಕೊಳ್ಳಲಿದ್ದಾರೆ&lt;/h3&gt;&lt;p&gt;ಇನ್ನು ನಿರ್ದಿಷ್ಟ ಧಾರ್ಮಿಕ ಸಂಸ್ಥೆಗಳಿಗೆ ಸೇರುವ ಉದ್ದೇಶದಿಂದ ಶಾಲೆ ತೊರೆದಿರುವ ವ್ಯಕ್ತಿಗಳು ಹಣಕಾಸು ನೆರವನ್ನು ಕಳೆದುಕೊಳ್ಳಲಿದ್ದಾರೆ, ಇದರ ಜತೆಗೆ ಧರ್ಮದ ಆಧಾರದ ಮೇಲೆ ಜಾರಿಗೆ ತಂದಿರುವ ಎಲ್ಲಾ ಹಣಕಾಸು ಸೌಲಭ್ಯ ಯೋಜನೆಗಳನ್ನು ಇದೇ ವೇಳೆ ಸರ್ಕಾರ ರದ್ದು ಮಾಡಿದೆ.&lt;/p&gt;&lt;p&gt;ಸರ್ಕಾರವು 30 ಲಕ್ಷ ಅನರ್ಹಫಲಾನುಭವಿಗಳ ಪತ್ತೆಗಾಗಿ ಪರಿಶೀಲನಾ ಕಾರ್ಯವನ್ನೂ ಆರಂಭಿಸಿದೆ. ಹೊಸ ಅರ್ಜಿಯಲ್ಲಿ ಆಧಾರ್&zwnj;, ರೇಷನ್&zwnj; ಕಾರ್ಡ್&zwnj;, ಆಸ್ತಿ ಮತ್ತು ಕುಟುಂಬ ಸದಸ್ಯರು ಸರ್ಕಾರಿ ನೌಕರಿಯಲ್ಲಿದ್ದಾರೆಯೇ, ಇಲ್ಲವೇ ಎಂಬ ಕುರಿತು ಮಾಹಿತಿ ನೀಡಬೇಕಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[politics]]></category>
            <dc:creator>Sujatha NR</dc:creator>
            <atom:link href="https://www.kannadaprabha.in/politics-news/benefits-to-be-withdrawn-in-bengal-for-those-with-more-than-two-marriages/articleshow-mfidnmc"/>
        </item>
        <item>
            <title><![CDATA[ಆ್ಯಂಬುಲೆನ್ಸ್‌ ಚಾಲಕರಿಗೆ  15 ನಿಮಿಷಗಳ ‘ಡೆಡ್‌ಲೈನ್‌!’]]></title>
            <link>https://www.kannadaprabha.in/karnataka-news/bengaluru-news/15-minute-deadline-for-ambulance-drivers/articleshow-hdyf9se</link>
            <guid isPermaLink="true">https://www.kannadaprabha.in/karnataka-news/bengaluru-news/15-minute-deadline-for-ambulance-drivers/articleshow-hdyf9se</guid>
            <pubDate>Mon, 06 Jul 2026 06:52:12 +0530</pubDate>
            <description><![CDATA[‘ರಾಜ್ಯದಲ್ಲಿ ಇನ್ನು ಮುಂದೆ 108 ಆ್ಯಂಬುಲೆನ್ಸ್‌ನ ಚಾಲಕರು ಕರೆ ಬಂದ ಬಳಿಕ 15 ನಿಮಿಷದಲ್ಲಿ ಆ ಸ್ಥಳಕ್ಕೆ ತಲುಪಬೇಕು. ಇಲ್ಲದಿದ್ದರೆ ಅವರಿಗೆ 5 ಸಾವಿರ ರು. ದಂಡ ವಿಧಿಸಲಾಗುತ್ತದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್ ಎಚ್ಚರಿಕೆ ನೀಡಿದ್ದಾರೆ.]]></description>
            <media:content url="https://static-gi.asianetnews.com/images/01kw0nmghyn1sa5h0q22xzj10r/----------------------2026-06-26t060450.734-1782434120254.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;strong&gt; ಉಡುಪಿ : &amp;nbsp;&lt;/strong&gt;&lsquo;ರಾಜ್ಯದಲ್ಲಿ ಇನ್ನು ಮುಂದೆ 108 ಆ್ಯಂಬುಲೆನ್ಸ್&zwnj;ನ ಚಾಲಕರು ಕರೆ ಬಂದ ಬಳಿಕ 15 ನಿಮಿಷದಲ್ಲಿ ಆ ಸ್ಥಳಕ್ಕೆ ತಲುಪಬೇಕು. ಇಲ್ಲದಿದ್ದರೆ ಅವರಿಗೆ 5 ಸಾವಿರ ರು. ದಂಡ ವಿಧಿಸಲಾಗುತ್ತದೆ&rsquo; ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್ ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;h2&gt;&lt;strong&gt;&amp;nbsp;ರಾಷ್ಟ್ರೀಯ ಆ್ಯಂಬುಲೆನ್ಸ್ ಸೇವೆಗಳ ಮಾರ್ಗಸೂಚಿ&lt;/strong&gt;&lt;/h2&gt;&lt;p&gt;ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ. &lsquo;ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ರಾಷ್ಟ್ರೀಯ ಆ್ಯಂಬುಲೆನ್ಸ್ ಸೇವೆಗಳ ಮಾರ್ಗಸೂಚಿಗಳ ಪ್ರಕಾರ, ತುರ್ತು ಕರೆ ಬಂದ 20 ನಿಮಿಷಗಳ ಒಳಗೆ ಆ್ಯಂಬುಲೆನ್ಸ್ ಸ್ಥಳವನ್ನು ತಲುಪಬೇಕು. ಇದು ತುರ್ತು ವೈದ್ಯಕೀಯ ಚಿಕಿತ್ಸೆಯ ಪ್ರಮುಖ ಸಮಯವಾದ ''ಗೋಲ್ಡನ್ ಅವರ್'' ನ್ನು ಆಧರಿಸಿದೆ. ಆದರೆ, ನಮ್ಮ ರಾಜ್ಯದಲ್ಲಿ 15 ನಿಮಿಷದಲ್ಲಿ ತಲುಪುವ ನಿಯಮವನ್ನು ಜಾರಿಗೆ ತರುತ್ತೇವೆ. 15 ನಿಮಿಷದಲ್ಲಿ ಅವರು ಘಟನಾ ಸ್ಥಳಕ್ಕೆ ತಲುಪಿದರೆ ಶೇ.90ರಷ್ಟು ಸಮಸ್ಯೆ ಪರಿಹಾರವಾಗುತ್ತದೆ&rsquo; ಎಂದರು.&lt;/p&gt;&lt;h3&gt;ರಾಜ್ಯದಲ್ಲಿ 700ರಿಂದ 800 ಆ್ಯಂಬುಲೆನ್ಸ್ ಗಳಿವೆ&lt;/h3&gt;&lt;p&gt;&lsquo;ರಾಜ್ಯದಲ್ಲಿ 700ರಿಂದ 800 ಆ್ಯಂಬುಲೆನ್ಸ್ ಗಳಿವೆ. ಈ ಸೇವೆಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸಬೇಕಿದೆ. ಈ&zwnj; ಬಗ್ಗೆ ಕ್ಯಾಬಿನೆಟ್&zwnj;ನಲ್ಲಿ ಚರ್ಚಿಸಿ, ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ. ಮಾರ್ಗಸೂಚಿ ಬಿಡುಗಡೆಯಾಗಿ ಕಾರ್ಯಗತವಾಗಲು ಮೂರು ತಿಂಗಳು ಹಿಡಿಯುತ್ತದೆ&rsquo; ಎಂದರು.&lt;/p&gt;]]></content:encoded>
            <category><![CDATA[bengaluru]]></category>
            <dc:creator>Sujatha NR</dc:creator>
            <atom:link href="https://www.kannadaprabha.in/karnataka-news/bengaluru-news/15-minute-deadline-for-ambulance-drivers/articleshow-hdyf9se"/>
        </item>
        <item>
            <title><![CDATA[ಪಕ್ಷಾತೀತವಾಗಿ ಎಲ್ಲರ ಮತ  ಹಕ್ಕು ರಕ್ಷಣೆಗೆ ಕ್ರಮ: ಡಿಕೆಶಿ]]></title>
            <link>https://www.kannadaprabha.in/politics-news/steps-will-be-taken-to-protect-everyones-voting-rights-irrespective-of-party-affiliation-dk-shivakumar/articleshow-muw93hh</link>
            <guid isPermaLink="true">https://www.kannadaprabha.in/politics-news/steps-will-be-taken-to-protect-everyones-voting-rights-irrespective-of-party-affiliation-dk-shivakumar/articleshow-muw93hh</guid>
            <pubDate>Mon, 06 Jul 2026 06:46:30 +0530</pubDate>
            <description><![CDATA[ರಾಜ್ಯದಲ್ಲಿ ವಿಶೇಷ ತೀವ್ರ ಮತ ಪರಿಷ್ಕರಣೆ (ಎಸ್‌ಐಆರ್‌) ಸರಿಯಾಗಿ ನಡೆಯುತ್ತಿಲ್ಲ ಎಂದು ಪ್ರತಿಪಕ್ಷದವರು ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ‘ವಿರೋಧ ಪಕ್ಷದವರಿಗೆ ಅರೋಪ ಮಾಡುವುದೇ ಕೆಲಸ. ಮಾಡಿಕೊಳ್ಳಲಿ.]]></description>
            <media:content url="https://static-gi.asianetnews.com/images/01kwmag3kts8evf7r6byv3136e/bkbk-1783093530234.png" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;strong&gt;ಬೆಂಗಳೂರು : &amp;nbsp;&lt;/strong&gt;ರಾಜ್ಯದಲ್ಲಿ ವಿಶೇಷ ತೀವ್ರ ಮತ ಪರಿಷ್ಕರಣೆ (ಎಸ್&zwnj;ಐಆರ್&zwnj;) ಸರಿಯಾಗಿ ನಡೆಯುತ್ತಿಲ್ಲ ಎಂದು ಪ್ರತಿಪಕ್ಷದವರು ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj;, &lsquo;ವಿರೋಧ ಪಕ್ಷದವರಿಗೆ ಅರೋಪ ಮಾಡುವುದೇ ಕೆಲಸ. ಮಾಡಿಕೊಳ್ಳಲಿ. &amp;nbsp;&lt;/p&gt;&lt;h2&gt;ಪಕ್ಷಾತೀತವಾಗಿ ಎಲ್ಲ ಮತದಾರರ ಹಕ್ಕು ಉಳಿಸಬೇಕು&lt;/h2&gt;&lt;p&gt;ಪಕ್ಷಾತೀತವಾಗಿ ಎಲ್ಲ ಮತದಾರರ ಹಕ್ಕು ಉಳಿಸಬೇಕು ಎಂಬುದಷ್ಟೇ ನಮ್ಮ ಉದ್ದೇಶ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ&rsquo; ಎಂದಿದ್ದಾರೆ.&lt;/p&gt;&lt;p&gt;ಭಾನುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಮಾತು ಹೇಳಿದರು.&lt;/p&gt;&lt;h3&gt;ಪ್ರತಿಪಕ್ಷಗಳು ಇರುವುದೇ ಆರೋಪ ಮಾಡಲು&lt;/h3&gt;&lt;p&gt;&lsquo;ಪ್ರತಿಪಕ್ಷಗಳು ಇರುವುದೇ ಆರೋಪ ಮಾಡಲು. ಮಾಡಿಕೊಳ್ಳಲಿ. ಸರ್ಕಾರ ಇರುವುದು ಎಲ್ಲರಿಗೂ ನ್ಯಾಯ ಒದಗಿಸಲು. ಆ ಕೆಲಸ ನಾವು ಮಾಡುತ್ತೇವೆ. ರಾಜ್ಯದ ಎಲ್ಲ ಅರ್ಹ ಮತದಾರರ ಮತದಾನದ ಹಕ್ಕು ಉಳಿಯಬೇಕು ಎಂಬುದು ನಮ್ಮ ಉದ್ದೇಶ. ಎಲ್ಲರೂ ತಮ್ಮ ಮತದಾನದ ಹಕ್ಕು ಉಳಿಸಿಕೊಳ್ಳಿ ಎಂದು ಮನವಿ ಮಾಡಿದ್ದೇವೆ. ನಮ್ಮದೂ ಪ್ರತಿಭಟನೆ ಇದೆ. ಅದನ್ನು ನ್ಯಾಯಬದ್ಧವಾಗಿ ಎಲ್ಲಿ ಪ್ರತಿಭಟಿಸಬೇಕೋ ಪ್ರತಿಭಟಿಸುತ್ತೇವೆ&rsquo; ಎಂದರು.&lt;/p&gt;]]></content:encoded>
            <category><![CDATA[politics]]></category>
            <dc:creator>Sujatha NR</dc:creator>
            <atom:link href="https://www.kannadaprabha.in/politics-news/steps-will-be-taken-to-protect-everyones-voting-rights-irrespective-of-party-affiliation-dk-shivakumar/articleshow-muw93hh"/>
        </item>
        <item>
            <title><![CDATA[ಕೇಂದ್ರ ಚು.ಆಯೋಗ  ತಂಡ ಇಂದು ರಾಜ್ಯಕ್ಕೆ]]></title>
            <link>https://www.kannadaprabha.in/politics-news/central-election-commission-team-to-arrive-in-the-karnataka-today/articleshow-uygkov9</link>
            <guid isPermaLink="true">https://www.kannadaprabha.in/politics-news/central-election-commission-team-to-arrive-in-the-karnataka-today/articleshow-uygkov9</guid>
            <pubDate>Mon, 06 Jul 2026 05:06:34 +0530</pubDate>
            <description><![CDATA[ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಗೊಂದಲಗಳ ಬಗ್ಗೆ ದೂರು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳ ತಂಡವು ಸೋಮವಾರ ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡುತ್ತಿದೆ.]]></description>
            <media:content url="https://static-gi.asianetnews.com/images/01kwqxeq3k68f758wznaqjr98t/----------------------2026-07-05t064358.851-1783214070899.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು:&lt;/strong&gt; ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್&zwnj;ಐಆರ್&zwnj;) ಪ್ರಕ್ರಿಯೆಯಲ್ಲಿ ಗೊಂದಲಗಳ ಬಗ್ಗೆ ದೂರು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳ ತಂಡವು ಸೋಮವಾರ ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡುತ್ತಿದೆ. &amp;nbsp;&lt;/p&gt;&lt;h2&gt;ವಿ.ಅನ್ಬುಕುಮಾರ್&zwnj; ಅವರಿಂದ ಮಾಹಿತಿ ಸಂಗ್ರಹಿಸಲಿದೆ&lt;/h2&gt;&lt;p&gt;ರಾಜ್ಯದಲ್ಲಿ ನಡೆಯುತ್ತಿರುವ ಎಸ್&zwnj;ಐಆರ್&zwnj; ಪ್ರಕ್ರಿಯೆ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್&zwnj; ಅವರಿಂದ ಮಾಹಿತಿ ಸಂಗ್ರಹಿಸಲಿದೆ. ಅಂತೆಯೇ ರಾಜ್ಯದ ವಿವಿಧೆಡೆ ಸಂಚರಿಸಿ ಎಸ್&zwnj;ಐಆರ್&zwnj; ಪ್ರಕ್ರಿಯೆಯನ್ನು ಖುದ್ದು ವೀಕ್ಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.&amp;nbsp;&lt;/p&gt;&lt;h3&gt;ವಿವಿಧ ರಾಜಕೀಯ ಪಕ್ಷಗಳಿಂದ ಕೇಳಿ ಬಂದಿರುವ ಆರೋಪ&lt;/h3&gt;&lt;p&gt;&amp;nbsp;ಈ ಎಸ್&zwnj;ಐಆರ್&zwnj; ಪ್ರಕ್ರಿಯೆ ಬಗ್ಗೆ ವಿವಿಧ ರಾಜಕೀಯ ಪಕ್ಷಗಳಿಂದ ಕೇಳಿ ಬಂದಿರುವ ಆರೋಪಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಿದೆ. ಅಂತೆಯೆ ಸಲ್ಲಿಕೆಯಾಗಿರುವ ದೂರುಗಳ ಬಗ್ಗೆಯೂ ಕೇಂದ್ರ ಅಧಿಕಾರಿಗಳ ಈ ತಂಡವು ಸಮಾಲೋಚನೆ ನಡೆಸಲಿದೆ ಎಂದು ತಿಳಿದು ಬಂದಿದೆ.&amp;nbsp;&lt;/p&gt;]]></content:encoded>
            <category><![CDATA[politics]]></category>
            <dc:creator>Sujatha NR</dc:creator>
            <atom:link href="https://www.kannadaprabha.in/politics-news/central-election-commission-team-to-arrive-in-the-karnataka-today/articleshow-uygkov9"/>
        </item>
        <item>
            <title><![CDATA[ಎಸ್‌ಐಆರ್‌ ಹೋರಾಟಕ್ಕೆ ಬಿಜೆಪಿ ಲಗ್ಗೆ]]></title>
            <link>https://www.kannadaprabha.in/politics-news/bjp-joins-the-sir-protest/articleshow-xogtna6</link>
            <guid isPermaLink="true">https://www.kannadaprabha.in/politics-news/bjp-joins-the-sir-protest/articleshow-xogtna6</guid>
            <pubDate>Mon, 06 Jul 2026 05:00:12 +0530</pubDate>
            <description><![CDATA[ರಾಜ್ಯದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್‌) ಪ್ರಕ್ರಿಯೆಯು ಮನೆ-ಮನೆಗಳ ಬದಲು ಕೆಲವೆಡೆ ಮಸೀದಿ, ಮಂದಿರ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ನಡೆಯುತ್ತಿರುವ ಕಾರಣ ಗೊಂದಲಗಳು ಹಾಗೂ ಎಡವಟ್ಟುಗಳು ಸೃಷ್ಟಿಯಾಗಿವೆ.]]></description>
            <media:content url="https://static-gi.asianetnews.com/images/01kwkbzdat9qc6c6yhsa9ya8hf/sir-election--2--1783061525850.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;strong&gt; ಬೆಂಗಳೂರು : &amp;nbsp;&lt;/strong&gt;ರಾಜ್ಯದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್&zwnj;) ಪ್ರಕ್ರಿಯೆಯು ಮನೆ-ಮನೆಗಳ ಬದಲು ಕೆಲವೆಡೆ ಮಸೀದಿ, ಮಂದಿರ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ನಡೆಯುತ್ತಿರುವ ಕಾರಣ ಗೊಂದಲಗಳು ಹಾಗೂ ಎಡವಟ್ಟುಗಳು ಸೃಷ್ಟಿಯಾಗಿವೆ. ಹೀಗಾಗಿ ಇದರ ವಿರುದ್ಧ ಹೋರಾಟಕ್ಕೆ ಧುಮುಕಲು ರಾಜ್ಯದ ಪ್ರಮುಖ ಪ್ರತಿಪಕ್ಷ ಬಿಜೆಪಿ ನಿರ್ಧರಿಸಿದೆ. ಇದರ ಮೊದಲ ಭಾಗವಾಗಿ ಸೋಮವಾರ ಮಿತ್ರಪಕ್ಷ ಜೆಡಿಎಸ್&zwnj; ಜತೆ ಸೇರಿಕೊಂಡು ಚುನಾವಣಾ ಆಯೋಗಕ್ಕೆ ಎಸ್&zwnj;ಐಆರ್&zwnj; ಅಕ್ರಮಗಳ ದೂರು ನೀಡಲು ತೀರ್ಮಾನಿಸಿದೆ.&lt;/p&gt;&lt;p&gt;ಎಸ್ಐಆರ್&zwnj; ಪ್ರಕ್ರಿಯೆಯಲ್ಲಿ ಪ್ರಮಾದಗಳನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ಭಾನುವಾರ ಪಕ್ಷದ ಕಚೇರಿಯಲ್ಲಿ ಬೆಳಗ್ಗೆ ರಾಜ್ಯ ಪದಾಧಿಕಾರಿಗಳ ಸಭೆ ನಡೆಸಿದರೆ ಮಧ್ಯಾಹ್ನ ಕೋರ್ ಕಮಿಟಿ ಸಭೆ ನಡೆಸಿತು. ಈ ವೇಳೆ, &lsquo;ರಾಜ್ಯ ಪದಾಧಿಕಾರಿಗಳು ಹಾಗೂ ಹಿರಿಯ ನಾಯಕರನ್ನೊಳಗೊಂಡ ಕೋರ್ ಕಮಿಟಿ ಸದಸ್ಯರು ತಮಗೆ ವಹಿಸಿರುವ ಉಸ್ತುವಾರಿ ವಿಭಾಗ, ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಬೇಕು. ಇಡೀ ಪ್ರಕ್ರಿಯೆಯಲ್ಲಿ ಪಕ್ಷದ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಬೇಕು&rsquo; ಎಂದು ಸೂಚನೆ ನೀಡಿದೆ.&lt;/p&gt;&lt;h2&gt;&lt;strong&gt;ಸಮರ್ಪಕವಾಗಿ ನಡೆಯಬೇಕು:&lt;/strong&gt;&lt;/h2&gt;&lt;p&gt;ಎಸ್&zwnj;ಐಆರ್&zwnj; ಪ್ರಕ್ರಿಯೆ ಸಮರ್ಪಕವಾಗಿ ನಡೆಯಬೇಕು. ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ಇಡೀ ಪ್ರಕ್ರಿಯೆಯನ್ನು ಗೊಂದಲಮಯವಾಗಿಸುತ್ತಿದೆ. ಹೀಗಾಗಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಈ ಬಗ್ಗೆ ನಿಗಾ ವಹಿಸಬೇಕು ಎಂಬ ನಿಲುವಿಗೆ ಬರಲಾಗಿದೆ.&lt;/p&gt;&lt;p&gt;ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೋರ್ ಕಮಿಟಿ ಸಭೆಯಲ್ಲಿ ಎಸ್&zwnj;ಐಆರ್&zwnj; ಬಗ್ಗೆ ಹೆಚ್ಚು ಚರ್ಚೆಯಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಇಡೀ ವ್ಯವಸ್ಥೆ ಹಾಳು ಮಾಡುವಂಥ ಕೆಲಸ ಮಾಡುತ್ತಿದೆ. ಇದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕು. ಎಸ್&zwnj;ಐಆರ್&zwnj; ರಾಜ್ಯದಲ್ಲಿ ವ್ಯವಸ್ಥಿತವಾಗಿ ನಡೆಯಬೇಕು. ನಮ್ಮ ಪಕ್ಷದ ಕಾರ್ಯಕರ್ತರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂಬುದರ ಬಗ್ಗೆ ಚರ್ಚೆಯಾಗಿದೆ ಎಂದು ತಿಳಿಸಿದರು.&lt;/p&gt;&lt;h3&gt;ಹೊಣೆಗಾರಿಕೆ:&lt;/h3&gt;&lt;p&gt;ಕೋರ್ ಕಮಿಟಿಯ ಪ್ರತಿಯೊಬ್ಬ ಸದಸ್ಯರಿಗೆ ಒಂದೊಂದು ಪಕ್ಷದ ಸಂಘಟನಾತ್ಮಕ ವಿಭಾಗದ ಜವಾಬ್ದಾರಿ ವಹಿಸಲಾಗಿದೆ. ಒಂದೊಂದು ವಿಭಾಗದಲ್ಲಿ ಸುಮಾರು ಮೂರು ಜಿಲ್ಲೆಗಳು ಇರುತ್ತವೆ. ಆ ಜಿಲ್ಲೆಗಳಿಗೆ ಕೋರ್ ಕಮಿಟಿ ಸದಸ್ಯರು ಪ್ರವಾಸ ಕೈಗೊಂಡು ಪಕ್ಷದ ಹಾಲಿ ಶಾಸಕರು, ಸಂಸದರು, ಮಾಜಿ ಶಾಸಕರು, ಸಂಸದರು ಹಾಗೂ ಮುಖಂಡರನ್ನು ಭೇಟಿ ಮಾಡಿ ಎಸ್&zwnj;ಐಆರ್&zwnj; ಪ್ರಕ್ರಿಯೆಯನ್ನು ಇನ್ನಷ್ಟು ಚುರುಕಾಗಿ ಕೈಗೆತ್ತಿಕೊಳ್ಳುವಂತೆ ನೋಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.&lt;/p&gt;&lt;p&gt;ಕೋರ್&zwnj; ಕಮಿಟಿ ಸಭೆಯಲ್ಲಿ ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷಗಳ ನಾಯಕರಾದ ಆರ್.ಅಶೋಕ್&zwnj;, ಛಲವಾದಿ ನಾರಾಯಣಸ್ವಾಮಿ, ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್&zwnj;.ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ, ಮಾಜಿ ಸಚಿವ ಸಿ.ಟಿ.ರವಿ ಮತ್ತಿತರರು ಉಪಸ್ಥಿತರಿದ್ದರು.&lt;/p&gt;&lt;p&gt;ಕೇಂದ್ರ ಚು.ಆಯೋಗ ತಂಡ ಇಂದು ರಾಜ್ಯಕ್ಕೆ&lt;/p&gt;&lt;p&gt;ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್&zwnj;ಐಆರ್&zwnj;) ಪ್ರಕ್ರಿಯೆಯಲ್ಲಿ ಗೊಂದಲಗಳ ಬಗ್ಗೆ ದೂರು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳ ತಂಡವು ಸೋಮವಾರ ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡುತ್ತಿದೆ.&lt;/p&gt;&lt;p&gt;ಬಿಜೆಪಿ ನಿರ್ಧಾರಗಳೇನು?&lt;/p&gt;&lt;p&gt;- ರಾಜ್ಯದಲ್ಲಿ ಎಸ್&zwnj;ಐಆರ್&zwnj; ಪ್ರಕ್ರಿಯೆಯಲ್ಲಿ ಅಕ್ರಮ ಆರೋಪ. ಈ ಬಗ್ಗೆ ಬಿಜೆಪಿ ಸಭೆ&lt;/p&gt;&lt;p&gt;- ಎಸ್&zwnj;ಐಆರ್&zwnj; ಮೇಲೆ ನಿಗಾ. ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ನಿರ್ಧಾರ&lt;/p&gt;&lt;p&gt;- ಎಲ್ಲ ಕೋರ್ ಕಮಿಟಿ ಸದಸ್ಯರಿಗೆ ಪಕ್ಷದ ಸಂಘಟನಾತ್ಮಕ ವಿಭಾಗದ ಜವಾಬ್ದಾರಿ&lt;/p&gt;&lt;p&gt;- ಪ್ರತಿ ವಿಭಾಗದಲ್ಲಿ 3 ಜಿಲ್ಲೆಗಳು. ಆ ಜಿಲ್ಲೆಗಳಿಗೆ ಕೋರ್&zwnj; ಕಮಿಟಿ ಸದಸ್ಯರ ಪ್ರವಾಸ&lt;/p&gt;&lt;p&gt;- ಹಾಲಿ ಶಾಸಕ/ಸಂಸದರು, ಮಾಜಿ ಶಾಸಕ/ಸಂಸದರ ಜತೆ ಪ್ರವಾಸ ವೇಳೆ ಭೇಟಿ&lt;/p&gt;&lt;p&gt;- ಎಸ್&zwnj;ಐಆರ್&zwnj; ಪ್ರಕ್ರಿಯೆ ಇನ್ನಷ್ಟು ಚುರುಕಾಗಿ ನಡೆಯುವಂತೆ ನೋಡಿಕೊಳ್ಳಲು ನಿರ್ಧಾರ&amp;nbsp;&lt;/p&gt;]]></content:encoded>
            <category><![CDATA[politics]]></category>
            <dc:creator>Sujatha NR</dc:creator>
            <atom:link href="https://www.kannadaprabha.in/politics-news/bjp-joins-the-sir-protest/articleshow-xogtna6"/>
        </item>
        <item>
            <title><![CDATA[ವಿದ್ಯುತ್ ಸಂಪರ್ಕವಿಲ್ಲದ ಗ್ರಾಮ ಚಾವಡಿ!]]></title>
            <link>https://www.kannadaprabha.in/karnataka-news/village-meeting-hall-without-electricity-connection/articleshow-gmzyh0h</link>
            <guid isPermaLink="true">https://www.kannadaprabha.in/karnataka-news/village-meeting-hall-without-electricity-connection/articleshow-gmzyh0h</guid>
            <pubDate>Mon, 06 Jul 2026 03:15:00 +0530</pubDate>
            <description><![CDATA[ವಿದ್ಯುತ್ ಸಂಪರ್ಕವಿಲ್ಲದೇ ಯಾವುದೇ ಕೆಲಸಗಳು ಕಚೇರಿಯಲ್ಲಿ ಮಾಡಲು ಸಾಧ್ಯವಿಲ್ಲ. ಆದರೆ, ಕಳೆದ ಎರಡು ವರ್ಷಗಳಿಂದ ಇಲ್ಲಿಯ ಗ್ರಾಮ ಚಾವಡಿಯಲ್ಲಿ ಸಿಬ್ಬಂದಿ ವಿದ್ಯುತ್ ಸಂಪರ್ಕವಿಲ್ಲದೇ ಕತ್ತಲಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ]]></description>
            <media:content url="https://static-assets.asianetnews.com/kp/json/05072026/pictures/501007123GLD2_358.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಗುಳೇದಗುಡ್ಡ : &amp;nbsp;&lt;/strong&gt;ಪ್ರತಿಯೊಂದು ಕೆಲಸ ಕಾರ್ಯಗಳು ವಿದ್ಯುತ್ತನ್ನೇ ಅವಲಂಬಿಸಿದ ಇವತ್ತಿನ ಕಾಲದಲ್ಲಿ ವಿದ್ಯುತ್ ಸಂಪರ್ಕವಿಲ್ಲದೇ ಯಾವುದೇ ಕೆಲಸಗಳು ಕಚೇರಿಯಲ್ಲಿ ಮಾಡಲು ಸಾಧ್ಯವಿಲ್ಲ. ಆದರೆ, ಕಳೆದ ಎರಡು ವರ್ಷಗಳಿಂದ ಇಲ್ಲಿಯ ಗ್ರಾಮ ಚಾವಡಿಯಲ್ಲಿ ಸಿಬ್ಬಂದಿ ವಿದ್ಯುತ್ ಸಂಪರ್ಕವಿಲ್ಲದೇ ಕತ್ತಲಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ ಎಂದರೆ ಅಶ್ಚರ್ಯ ಪಡಬೇಕಾಗಿಲ್ಲ.&lt;/p&gt;&lt;h2&gt;ತಾಲೂಕು ಕೇಂದ್ರವಾಗಿರುವ ಗುಳೇದಗುಡ್ಡ ಪಟ್ಟಣದ ಹಳೆಯ ಕಟ್ಟಡದಲ್ಲಿ ಗ್ರಾಮ ಚಾವಡಿ&lt;/h2&gt;&lt;p&gt;ತಾಲೂಕು ಕೇಂದ್ರವಾಗಿರುವ ಗುಳೇದಗುಡ್ಡ ಪಟ್ಟಣದಲ್ಲಿ ಹಳೆಯ ಕಟ್ಟಡದಲ್ಲಿ ಗ್ರಾಮ ಚಾವಡಿ ಇದೆ. ಈ ಕಟ್ಟಡದಲ್ಲಿ ನಾಲ್ಕು ಕೊಠಡಿಗಳಿವೆ. ಮಳೆಗಾಲದಲ್ಲಿ ಅವು ಸೋರುತ್ತವೆ. ಅಲ್ಲಿರುವ ಮಹತ್ವದ ದಾಖಲೆಗಳು ಮಳೆಯಲ್ಲಿ ಸೋರಿಕೆಯಿಂದ ಹಾಳಾಗಿವೆ. ಈ ಕಟ್ಟಡದಲ್ಲಿ ಕಂದಾಯ ನಿರೀಕ್ಷಕರು, ಗ್ರಾಮ ಸಹಾಯಕರು ಇರುತ್ತಾರೆ. ಕತ್ತಲೆ ಆವರಿಸಿದ ಕೊಠಡಿಯಲ್ಲಿ ಅವರ ಕೆಲಸಗಳೂ ನಿಗದಿತ ಸಮಯದಲ್ಲಿ ಆಗುವುದಿಲ್ಲ. ಜನ ನಿತ್ಯ ಅಡ್ಡಾಡುವುದೂ ತಪ್ಪುತ್ತಿಲ್ಲ.&lt;/p&gt;&lt;p&gt;ಕಂಪ್ಯೂಟರ್&zwnj; ಗಳಿಲ್ಲ, ಏನಾದರೂ ಕಂಪ್ಯೂಟರ್&zwnj; ದಲ್ಲಿ ಕೆಲಸ ಮಾಡಬೇಕಿದ್ದರೆ ಹೊರಗಡೆ ಹೋಗಿ ಮಾಡಬೇಕು. ಝರಾಕ್ಸ ಮಶೀನ್ ಇಲ್ಲ, ಕಟ್ಟಡದಲ್ಲಿ ಪ್ಯಾನ್&zwnj; ಗಳಿಲ್ಲ, ಕೆಲವು ಸಲ ಹಗಲಿನಲ್ಲಿ ಮೋಡ ಕವಿದ ವಾತಾವರಣ ಇದ್ದರೆ ಕಟ್ಟಡದಲ್ಲಿ ಕತ್ತಲು ಆವರಿಸಿರುತ್ತದೆ. ಅಂದು ಕೆಲಸಗಳೇ ಬಂದ್ ಆಗುತ್ತವೆ. ಬೇಸಿಗೆಯಲ್ಲಿ ಬಿಸಿಲಿನ ತಾಪಕ್ಕೆ ಕಚೇರಿಯಲ್ಲಿ ಸಿಬ್ಬಂದಿ ಕೆಲಸ ಮಾಡದಂತಾಗಿದೆ. ಹೀಗಾಗಿ ಹೆಚ್ಚಿನ ಸಮಯ ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ನಿಗದಿತ ಸ್ಥಳದಲ್ಲಿಯೇ ಇರದೇ ಹೊರಗಡೆಯೇ ಇರಬೇಕಾಗುತ್ತದೆ. ಪಟ್ಟಣದ ಹಾಗೂ ಗ್ರಾಮದ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಬಂದಾಗ ಸಂಬಂಧಪಟ್ಟವರೇ ಇರುವುದಿಲ್ಲ. ಬದಲಾಗಿ ಕಚೇರಿಯಲ್ಲಿ ಸಿಬ್ಬಂದಿ ಮಾತ್ರ ಇರುವುದನ್ನು ಕಾಣುವಂತಾಗಿದೆ.&lt;/p&gt;&lt;h3&gt;ಎರಡು ವರ್ಷಗಳ ಹಿಂದೆ ಗ್ರಾಮ ಚಾವಡಿಯಲ್ಲಿ ವಿದ್ಯುತ್ ಸಂಪರ್ಕವಿತ್ತು.&lt;/h3&gt;&lt;p&gt;ಕಳೆದ ಎರಡು ವರ್ಷಗಳ ಹಿಂದೆ ಗ್ರಾಮ ಚಾವಡಿಯಲ್ಲಿ ವಿದ್ಯುತ್ ಸಂಪರ್ಕವಿತ್ತು. ಈ ಹಿಂದೆ ಇದ್ದ ಗ್ರಾಮ ಸಹಾಯಕರು ವಿದ್ಯುತ್ ಬಿಲ್ ಕಟ್ಟುತ್ತಿದ್ದರು. ಅವರು ವರ್ಗವಾಗಿ ಹೋದ ಮೇಲೆ ನಂತರ ಆ ಸ್ಥಾನಕ್ಕೆ ನಿಯುಕ್ತಿಯಾಗಿ ಬಂದ ಬೇರೊಬ್ಬ ಗ್ರಾಮ ಸಹಾಯಕರು ವಿದ್ಯುತ್ ಬಿಲ್ ಕಟ್ಟದ ಕಾರಣ ಹೆಸ್ಕಾಂ ಇಲಾಖೆಯವರು ವಿದ್ಯುತ್ ಸಂಪರ್ಕ ಕಟ್ ಮಾಡಿದ್ದಾರೆ. ಹೀಗಾಗಿ ಕಳೆದ 2 ವರ್ಷಗಳಿಂದ ಗ್ರಾಮ ಚಾವಡಿಗೆ ವಿದ್ಯುತ್ ಸಂಪರ್ಕವೇ ಇಲ್ಲ. ಆದರೂ ಅಲ್ಲಿ ಸಿಬ್ಬಂದಿ ಬಂದು ಹತ್ತಾರು ಸಹಿಗಳಿದ್ದರೆ ಮಾಡಿ, ಕಂಪ್ಯೂಟರ್ ಕೆಲಸ ಬಂದರೆ ಹೊರಗೆ ಹೋಗುತ್ತಾರೆ.&lt;/p&gt;&lt;p&gt;ಇವತ್ತು ಪ್ರತಿಯೊಂದು ಕೆಲಸ ಕಾರ್ಯಗಳು ಕಂಪ್ಯೂಟರ್ ಇಲ್ಲವೇ ಆನ್ಲೈನ್ ವ್ಯವಸ್ಥೆವನ್ನೇ ಅವಲಂಬಿಸಿವೆ. ಆದರೆ, ಇಲ್ಲಿನ ತಾಲೂಕು ಕೇಂದ್ರದ ಗ್ರಾಮ ಚಾವಡಿಗೆ ಮಾತ್ರ ವಿದ್ಯುತ್ ಸಂಪರ್ಕವಿಲ್ಲ. ಸಂಬಂಧಪಟ್ಟ ತಹಸೀಲ್ದಾರರು, ಪುರಸಭೆ ಮುಖ್ಯಾಧಿಕಾರಿಗಳು, ಕಂದಾಯ ನಿರೀಕ್ಷಕರು ಇದರ ಕಡೆ ಗಮನಹರಿಸದೇ ಇರುವ ವಿಷಯ ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;p&gt;&amp;nbsp;ಕಳೆದ 2 ವರ್ಷಗಳ ಹಿಂದೆ ಗ್ರಾಮ ಚಾವಡಿಯಲ್ಲಿ ವಿದ್ಯುತ್ ಸಂಪರ್ಕ ಇತ್ತು. ಹಿಂದಿನ ಗ್ರಾಮ ಲೆಕ್ಕಾಧಿಕಾರಿಗಳೇ ಅದರ ಬಿಲ್ ಕಟ್ಟುತ್ತಿದ್ದರು. ಆದರೆ ಎರಡು ವರ್ಷಗಳಿಂದ ವಿದ್ಯುತ್ ಸಂಪರ್ಕ ಕಟ್ ಆಗಿದೆ. ಕೆಲಸಕ್ಕೂ ತೊಂದರೆಯಾಗುತ್ತಿದೆ.&lt;/p&gt;&lt;p&gt;-ಎಸ್.ಡಿ. ಜೋಗಿನ ಕಂದಾಯ ನಿರೀಕ್ಷಕರು ಗುಳೇದಗುಡ್ಡ.ಗ್ರಾಮ ಚಾವಡಿ ಬ್ರಿಟಿಷರ ಕಾಲದ್ದು. ಸರಿಯಾಗಿ ನಿರ್ವಹಣೆ ಇಲ್ಲ. 2 ವರ್ಷಗಳಿಂದ ವಿದ್ಯುತ್ ಸಂಪರ್ಕ ಇಲ್ಲ ಅಂದರೆ ಅಲ್ಲಿ ಯಾವುದೇ ತ್ವರಿತ ಕೆಲಸಗಳು ನಡೆಯುವುದಿಲ್ಲ ಎಂದರ್ಥ. ತಹಸೀಲ್ದಾರರು ಗಮನಹರಿಸಬೇಕು.&lt;/p&gt;&lt;p&gt;&lt;strong&gt;-ಪ್ರಕಾಶ ಮುರಗೋಡ, ಮಾಜಿ ಉಪಾಧ್ಯಕ್ಷರು ಪುರಸಭೆ ಗುಳೇದಗುಡ್ಡ.&lt;/strong&gt;&lt;/p&gt;]]></content:encoded>
            <category><![CDATA[karnataka]]></category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/karnataka-news/village-meeting-hall-without-electricity-connection/articleshow-gmzyh0h"/>
        </item>
        <item>
            <title><![CDATA[ಮುತ್ತತ್ತಿ ನಿಷೇಧಿತ ಪ್ರದೇಶದಲ್ಲಿ ಮದ್ಯಪಾನ : 22 ಜನರ ಮೇಲೆ ಪ್ರಕರಣ ದಾಖಲು]]></title>
            <link>https://www.kannadaprabha.in/crime-news/alcohol-consumption-in-the-restricted-area-of-muttatti-case-registered-against-22-people/articleshow-hzivgii</link>
            <guid isPermaLink="true">https://www.kannadaprabha.in/crime-news/alcohol-consumption-in-the-restricted-area-of-muttatti-case-registered-against-22-people/articleshow-hzivgii</guid>
            <pubDate>Mon, 06 Jul 2026 02:00:00 +0530</pubDate>
            <description><![CDATA[ಮುತ್ತತ್ತಿ ಕಾವೇರಿ ನದಿ ಪ್ರದೇಶ ಹಾಗೂ ನಿಷೇಧಿತ ಜಾಗಗಳಲ್ಲಿ ಮದ್ಯಪಾನ ಮಾಡುವುದು, ಜೂಜಾಡಾವುದು, ಅನೈತಿಕ ಚಟುವಟಿಕೆಗಳಲ್ಲಿ ತೊಡುಗುವುದು ನಿಷೇಧಿಸಲಾಗಿದೆ. ಪ್ರವಾಸಿ ತಾಣಗಳಲ್ಲಿ ಮದ್ಯಪಾನ ಮಾಡುವುದು ಅಪರಾಧ.]]></description>
            <media:content url="https://static-assets.asianetnews.com/kp/json/05072026/pictures/5KMND27_313.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಹಲಗೂರು : &amp;nbsp;&lt;/strong&gt;ಪ್ರಸಿದ್ಧ ಪ್ರವಾಸಿ ತಾಣ ಮುತ್ತತ್ತಿ ಗ್ರಾಮದ ನಿಷೇಧಿತ ಕಾವೇರಿ ನದಿ ದಡದಲ್ಲಿ ಮದ್ಯಪಾನ ಮಾಡುತ್ತಿದ್ದ 5 ಗುಂಪುಗಳ ಮೇಲೆ ದಾಳಿ ಮಾಡಿದ ಪೊಲೀಸರು 22 ಜನರ ಮಂದಿ ಮೇಲೆ ಪ್ರಕರಣ ದಾಖಲಿಸಿದ್ದಾರೆ.&lt;/p&gt;&lt;h2&gt;&lt;strong&gt;ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು&lt;/strong&gt;&lt;/h2&gt;&lt;p&gt;ಮುತ್ತತ್ತಿ ಕಾವೇರಿ ನದಿಯಲ್ಲಿ ಇತ್ತೀಚೆಗೆ ಐವರು ಮೃತಪಟ್ಟ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಪರಿಶೀಲಿಸಿದ ನಂತರ ಮುಂದಿನ ದಿನಗಳಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.&lt;/p&gt;&lt;h3&gt;ಮದ್ಯಪಾನ ನಿಷೇಧ ಹಾಗೂ ಕಾವೇರಿ ನದಿಯಲ್ಲಿ ಈಜುವುದು ನಿಷೇಧ&lt;/h3&gt;&lt;p&gt;ಈ ಹಿನ್ನೆಲೆಯಲ್ಲಿ ಕಾವೇರಿ ನದಿ ದಡದ ಸಮೀಪ ಜಿಲ್ಲಾಡಳಿತ ಮದ್ಯಪಾನ ನಿಷೇಧ ಹಾಗೂ ಕಾವೇರಿ ನದಿಯಲ್ಲಿ ಈಜುವುದು ನಿಷೇಧಿಸಿತ್ತು. ಭಾನುವಾರ ಜಿಲ್ಲಾ ಎಸ್ಪಿ ಶೋಭರಾಣಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಯಶ್ವಂತ್ ಅವರ ಸೂಚನೆ ಮೇರೆಗೆ ಹಲಗೂರು ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ಹಾಗೂ ಮೂವರು ಸಬ್ ಇನ್ಸ್ ಪೆಕ್ಟರ್ ಗಳಾದ ಹಲಗೂರು ಲೋಕೇಶ್, ಕಿರಗವಾಲು ರವಿಕುಮಾರ್, ಬೆಳಕವಾಡಿ ಪ್ರಕಾಶ್ ಹಾಗೂ 25 ಪೊಲೀಸ್ ಸಿಬ್ಬಂದಿಗಳು ಮುತ್ತತ್ತಿಗೆ ಭೇಟಿ ನೀಡಿ ಕಾವೇರಿ ನದಿ ದಡದಲ್ಲಿ ಮದ್ಯಪಾನ ಮಾಡುತ್ತಿದ್ದ ಗುಂಪುಗಳ ಮೇಲೆ ದಾಳಿ ಮಾಡಿ ಬಂಧಿಸಿ ಪೊಲೀಸ್ ಠಾಣೆಗೆ ಕರೆತಂದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.&lt;/p&gt;&lt;p&gt;ಮುತ್ತತ್ತಿ ಕಾವೇರಿ ನದಿ ಪ್ರದೇಶ ಹಾಗೂ ನಿಷೇಧಿತ ಜಾಗಗಳಲ್ಲಿ ಮದ್ಯಪಾನ ಮಾಡುವುದು, ಜೂಜಾಡಾವುದು, ಅನೈತಿಕ ಚಟುವಟಿಕೆಗಳಲ್ಲಿ ತೊಡುಗುವುದು ನಿಷೇಧಿಸಲಾಗಿದೆ. ಪ್ರವಾಸಿ ತಾಣಗಳಲ್ಲಿ ಮದ್ಯಪಾನ ಮಾಡುವುದು ಅಪರಾಧ. ಅದನ್ನು ತಡೆಗಟ್ಟಲು, ಕಾವೇರಿ ನದಿಯಲ್ಲಿ ಸಾವು ನೋವುಗಳನ್ನು ತಪ್ಪಿಸಲು ಮುಂಜಾಗ್ರತೆ ಕ್ರಮವಾಗಿ ಪೊಲೀಸರು ಪ್ರತಿ ರಜಾ ದಿನಗಳು ಹಾಗೂ ಪ್ರತಿ ಭಾನುವಾರ ನಿರಂತರವಾಗಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಾರೆ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ತಿಳಿಸಿದ್ದಾರೆ.&lt;/p&gt;]]></content:encoded>
            <category><![CDATA[crime]]></category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/alcohol-consumption-in-the-restricted-area-of-muttatti-case-registered-against-22-people/articleshow-hzivgii"/>
        </item>
    </channel>
</rss>
