<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Kannada Prabha</title>
        <link>https://www.kannadaprabha.in</link>
        <description><![CDATA[Kannada Prabha - No.1 News channel in Karnataka, which delivers Local and International news in Marathi language.]]></description>
        <image>
            <url>https://static-assets.asianetnews.com/images/ogimages/OG_Bangla.jpg</url>
            <width>143</width>
            <height>100</height>
            <link>https://www.kannadaprabha.in</link>
            <title>Kannada Prabha</title>
        </image>
        <lastBuildDate>Sat, 27 Jun 2026 12:43:30 +0530</lastBuildDate>
        <atom:link href="https://www.kannadaprabha.in/rss" rel="self" type="application/rss+xml"/>
        <item>
            <title><![CDATA[ಇ- ಫಾರ್ಮಸಿ ಎಂಬ ಪೆಡಂಭೂತಕ್ಕೆ ಬೇಕಿದೆ ಕಡಿವಾಣ]]></title>
            <link>https://www.kannadaprabha.in/special-news/the-menace-of-e-pharmacies-needs-to-be-reined-in/articleshow-kgkgseb</link>
            <guid isPermaLink="true">https://www.kannadaprabha.in/special-news/the-menace-of-e-pharmacies-needs-to-be-reined-in/articleshow-kgkgseb</guid>
            <pubDate>Sat, 27 Jun 2026 12:43:30 +0530</pubDate>
            <description><![CDATA[ವೆಬ್, ಆ್ಯಪ್ನಿಂ ದ ಔಷಧಿಗಳನ್ನು ನೇರವಾಗಿ ಮನೆ ಬಾಗಿಲಿಗೆ ತಲುಪಿಸುವ ಹೊಣೆಯನ್ನು ಇ-ಫಾರ್ಮಸಿ ಹೊತ್ತುಕೊಂಡಿವೆ. ಇದರಿಂದಾಗಿ ಔಷಧಿ ಮಾರಾಟ ಮಳಿಗೆಗಳು ಮತ್ತು ಇ-ಫಾರ್ಮಸಿಗಳು ಪರಸ್ಪರ ಸಾಮರಸ್ಯದ ಅನ್ವೇಷಣೆಯಲ್ಲಿ ತೊಡಗಿವೆ.]]></description>
            <media:content url="https://static-gi.asianetnews.com/images/01km767jd2njfss32des1dr2wk/medicine-1774062913954.jpg" type="image/jpeg" height="390" width="690"/>
            <content:encoded><![CDATA[&lt;p&gt;ಮನೆಯಲ್ಲೇ ಕುಳಿತು ಔಷಧಿ ಆರ್ಡರ್&zwnj; ಮಾಡುವ ವ್ಯವಸ್ಥೆಗೆ ಬೇಕಿದೆ ಸರ್ಕಾರದ ನಿಯಂತ್ರಣ । ಇಲ್ಲದಿದ್ದರೆ ಮುಂದಿದೆ ಅಪಾಯ&lt;/p&gt;&lt;p&gt;ವೆಬ್, ಆ್ಯಪ್ನಿಂ ದ ಔಷಧಿಗಳನ್ನು ನೇರವಾಗಿ ಮನೆ ಬಾಗಿಲಿಗೆ ತಲುಪಿಸುವ ಹೊಣೆಯನ್ನು ಇ-ಫಾರ್ಮಸಿ ಹೊತ್ತುಕೊಂಡಿವೆ. ಇದರಿಂದಾಗಿ ಔಷಧಿ ಮಾರಾಟ ಮಳಿಗೆಗಳು ಮತ್ತು ಇ-ಫಾರ್ಮಸಿಗಳು ಪರಸ್ಪರ ಸಾಮರಸ್ಯದ ಅನ್ವೇಷಣೆಯಲ್ಲಿ ತೊಡಗಿವೆ. ಕೂಡಲೇ ಸರ್ಕಾರವು ಮಧ್ಯಪ್ರವೇಶಿಸಿ ಸ್ಪಷ್ಟ ನಿಯಾಮವಳಿಗಳನ್ನು ರೂಪಿಸಿ ಮುಂದೆ ಆಗಬಹುದಾದ ಅನಾಹುತ ತಪ್ಪಿಸಬೇಕಿದೆ.&lt;/p&gt;&lt;h2&gt;&lt;strong&gt;-ಬಂಡು ಕಟ್ಟಿ, ಫಾರ್ಮಾಸಿಸ್ಟ್, ಇಳಕಲ್&lt;/strong&gt;&lt;/h2&gt;&lt;p&gt;ಭಾರತೀಯ ಔಷಧ ಮಾರಾಟ ಕ್ಷೇತ್ರವು ಕಳೆದ 10 ವರ್ಷಗಳಲ್ಲಿ ಹಲವಾರು ನಾಟಕೀಯ ಏರಿಳಿತಗಳನ್ನು ಕಂಡಿದೆ. ರೋಗಿಗಳನ್ನು &lsquo;ಗ್ರಾಹಕರು&rsquo; ಎಂದು ಹೇಳುವಷ್ಟು ತಂತ್ರಜ್ಞಾನವು ಮುಂದುವರೆದಿದೆ! ಡಿಜಿಟಲ್ ತಂತ್ರಜ್ಞಾನವು ರಾಕೆಟ್ ವೇಗದಲ್ಲಿ ಓಡುತ್ತಲಿದೆ. ಔಷಧ ಮಾರಾಟದ ವಿಷಯವು ಈಗ ತುಂಬಾ ಗೊಂದಲಕಾರಿಯೂ, ರೋಮಾಂಚಕವೂ ಆಗತೊಡಗಿದೆ. ಡಿಜಿಟಲ್ ಯುಗದಲ್ಲಿ ಪ್ರಿಸ್ಕ್ರಿಪ್ಷನ್ ತನ್ನ ಮೌಲ್ಯವನ್ನು ಕಳೆದುಕೊಂಡಿದೆ. ಎಐ ತನಗೆ ಬೇಕಾದ್ದನ್ನು ಸೃಷ್ಟಿಸಿಕೊಳ್ಳುತ್ತದೆ. ಸರ್ಕಾರವು ಮಧ್ಯಪ್ರವೇಶಿಸಿ ಮಿತಿಗಳನ್ನು ಹೇರುವುದಕ್ಕೆ ಇದು ಸಕಾಲ. ಇಲ್ಲವಾದರೆ ರಾಸಾಯನಿಕ ಔಷಧಗಳ ವಿಷಮ ಪರಿಣಾಮಗಳನ್ನು ಮುಂದಿನ ತಲೆಮಾರು ಕೂಡಾ ಅನುಭವಿಸಬೇಕಾದೀತು! ಸ್ಟೆರಾಯ್ಡ್, ಮುಂತಾದ ಅಪಾಯಕಾರಿ ಔಷಧಗಳು ಸುಲಭವಾಗಿ ಕೈಗೆ ಸಿಕ್ಕರೆ ಯುವಕರ ಬಾಳು ಹಾಳಾಗುತ್ತದೆ. ಅವು ಜೀವಮಾನವಿಡೀ ಮನುಷ್ಯನ ದೇಹದಲ್ಲಿ ಅವಿತು ಕುಳಿತ ಆಟವಾಡಿಸುತ್ತಲೇ ಇರುತ್ತವೆ.&lt;/p&gt;&lt;h3&gt;&lt;strong&gt;ನಿಯಮ ರೂಪಿಸುವಲ್ಲಿ ಸರ್ಕಾರ ವಿಫಲ:&lt;/strong&gt;&lt;/h3&gt;&lt;p&gt;ಸ್ಮಾರ್ಟ್&zwnj;ಫೋನ್&zwnj; ಹಾಗೂ ಇಂಟರ್ನೆಟ್ ಈಗ ಪ್ರತಿಯೊಬ್ಬರ ಕೈಗಳನ್ನೂ ಅಲಂಕರಿಸಿವೆ. ಅವು ಸಾಧನಕ್ಕಿಂತ ವ್ಯಸನಗಳಾಗತೊಡಗಿವೆ. ಇ-ಫಾರ್ಮಸಿಯನ್ನು ಹೊತ್ತು ತರುವ ಡಿಜಿಟಲ್ ವ್ಯಸನವು ಅನುಕೂಲತೆಯೆಂಬ ಭ್ರಮೆಯ &lsquo;ಸೋಲೊಮನ್ನನ ಸಾವಿರದೊಂದು ರಾತ್ರಿ&rsquo;ಯ ಮಾಂತ್ರಿಕ ಕಾರ್ಪೆಟ್ ತರ ಜನರ ಮನಸ್ಥಿತಿಯನ್ನು ಹೊತ್ತು ತಿರುಗತೊಡಗಿದೆ. ಎತ್ತರದಿಂದ ಕೆಳಗೆ ಬೀಳುವ ಅಪಾಯ ತುಂಬಾ ಹೆಚ್ಚಾಗಿದೆ. ವೆಬ್ ಅಥವಾ ಆ್ಯಪ್&zwj;ನಿಂದ ಔಷಧಿಗಳನ್ನು ನೇರವಾಗಿ ಜನರ ಮನೆಯ ಬಾಗಿಲಿಗೆ ತಲುಪಿಸುವ ಹೊಣೆಯನ್ನು ಇ-ಫಾರ್ಮಸಿ ಹೊತ್ತುಕೊಂಡಿವೆ. ಇ-ಸೇವೆಯು ಮನೆ ಬಾಗಿಲಿಗೆ ತಲುಪಿಸುವ ಅನುಕೂಲತೆ ಹಾಗೂ ಸ್ಪರ್ಧಾತ್ಮಕ ಬೆಲೆಯನ್ನು ನೀಡುತ್ತದೆ ಎಂಬ ಭ್ರಮೆಯನ್ನು ಹುಟ್ಟಿಸುತ್ತದೆ. ಸಮಯದ ಅಭಾವವಿರುವ ಬುದ್ಧಿವಂತ ಜನರಿಗೆ ವರದಾನ ಎನಿಸಿರುವ ಇದು ಭಸ್ಮಾಸುರನ ಹಸ್ತವಾಗದಿದ್ದರೆ ಸಾಕು. ಡಿಜಿಟಲ್ ಕ್ರಾಂತಿಯು ತುಂಬಾ ನಾಟಕೀಯತೆಯನ್ನು ಹೊತ್ತು ತಂದಿದೆ. ನೂರಾರು ವರ್ಷಗಳ ಇತಿಹಾಸವಿರುವ ಸಾಂಪ್ರದಾಯಿಕ ಔಷಧ ಮಾರಾಟ ಕ್ಷೇತ್ರವು ಇಷ್ಟು ದೊಡ್ಡ ಮಟ್ಟದಲ್ಲಿ ಗಲಿಬಿಲಿಗೊಳ್ಳುತ್ತಿದ್ದರೂ ಸರ್ಕಾರವೂ ತೆಪ್ಪಗೆ ಕುಳಿತಿದೆ. ಪರಿಸ್ಥಿತಿಯ ಮೇಲೆ ನಿಯಂತ್ರಣವನ್ನು ಸಾಧಿಸಿ ಜನಸಾಮಾನ್ಯರ ಆರೋಗ್ಯಕ್ಕೆ ಮಾರಕವಾಗದಂತೆ ಸ್ಪಷ್ಟ ನಿಯಮಾವಳಿಯನ್ನು ರೂಪಿಸಿ ಕೊಡುವಲ್ಲಿ ಸರ್ಕಾರವೂ ಪದೇಪದೇ ವಿಫಲವಾಗುತ್ತಿರುವುದೊಂದು ಸೋಜಿಗ.&lt;/p&gt;&lt;p&gt;ಹೈಬ್ರಿಡ್ ಮಾದರಿ ಅಳವಡಿಕೆ:&lt;/p&gt;&lt;p&gt;ಇ-ಫಾರ್ಮಸಿ ಎಂಬ ಡಿಜಿಟಲ್ ಕ್ರಾಂತಿಯು ಸಾಂಪ್ರದಾಯಕ ಔಷಧ ಮಾರಾಟಗಾರರನ್ನು ಈಗ ಬಡಿದೆಬ್ಬಿಸಿದೆ. ಕೊರೋನಾ ವೇಳೆ ಔಷಧ ಮಳಿಗೆಗಳು ಸಲ್ಲಿಸಿದ ಸೇವೆಯನ್ನು ದೇಶವು ಮರೆಯಬಾರದು. ಕೆಲವು ಔಷಧ ವಹಿವಾಟುಗಾರರು ತಮ್ಮನ್ನು ತಾವು ಸ್ಪರ್ಧಾತ್ಮಕಗೊಳಿಸಿಕೊಳ್ಳುತ್ತಿದ್ದರೆ, ಮಿಕ್ಕವರು ಸ್ತಂಭೀಭೂತರಾಗಿದ್ದಾರೆ. ಕೆಲವು ಔಷಧ ಮಾರಾಟಗಾರರು ಹೈಬ್ರಿಡ್ ಮಾದರಿಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ತಮ್ಮ ನಿಷ್ಠಾವಂತ ಗ್ರಾಹಕರನ್ನು ಹಾಗೂ ಹೊಸ ಡಿಜಿಟಲ್ ಮನಸ್ಸಿನವರ ಇಷ್ಟಗಳನ್ನು ಪೂರೈಸಲು ತಮ್ಮ ಅಂಗಡಿಗಳನ್ನು ಆನ್&zwnj;ಲೈನ್&zwnj; ಪ್ರಭಾವಕ್ಕೊಳಪಡಿಸುತ್ತಿದ್ದಾರೆ. ಈ ಕ್ರಿಯಾತ್ಮಕ ಬದಲಾವಣೆಯು ಔಷಧಿಗಳನ್ನು ಹೇಗೆ ವಿತರಿಸಲಾಗುತ್ತದೆ ಎಂಬುದನ್ನು ಮರುರೂಪಿಸುವುದಲ್ಲದೆ, ಆರೋಗ್ಯ ರಕ್ಷಣಾ ರಂಗದ ಮಿತಿಗಳನ್ನು ವಿಸ್ತಾರಗೊಳಿಸುತ್ತದೆ. ಆದರೆ ಗ್ರಾಮೀಣ ಭಾರತವು ಕೂಡಾ ಇ-ಫಾರ್ಮಸಿ ಎಂಬ ಮೋಹದ ಸೆರಗಿನ ತೆಕ್ಕೆಗೆ ಜಾರುತ್ತಿರುವುದು ಸೋಜಿಗವಾಗಿದೆ.&lt;/p&gt;&lt;p&gt;ಅಪಾಯಗಳ ಬಗ್ಗೆ ಅರಿವೇ ಇಲ್ಲ:&lt;/p&gt;&lt;p&gt;ಪಣ ತೊಟ್ಟಂತೆ ಜಿದ್ದಿಗೆ ಬಿದ್ದಿರುವ ಇ-ಫಾರ್ಮಸಿಯು ಪಾಲುದಾರಿಕೆ ಮತ್ತು ಹಲವಾರು ಸಹಯೋಗಗಳ ನೆರವಿನೊಂದಿಗೆ ಗೆಲ್ಲುವ ತವಕ ತೋರುತ್ತದೆ. ಆದರೆ ಕಾನೂನು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಮೌನವಾಗಿರುವುದು ಶೋಚನೀಯ. ಸರ್ಕಾರವು ಈಗ ಮಧ್ಯಪ್ರವೇಶಿಸುವ ಅಗತ್ಯವಿದೆ. ಸಾಂಪ್ರದಾಯಿಕ ಔಷಧ ಮಾರಾಟ ಮಳಿಗೆಗಳು ಮತ್ತು ಇ-ಫಾರ್ಮಸಿಗಳು ಪರಸ್ಪರ ಸಾಮರಸ್ಯದ ಅನ್ವೇಷಣೆಯಲ್ಲಿ ತೊಡಗಿವೆ. ಆದರೆ ಜನಸಾಮಾನ್ಯರ ಪಾಲಿಗೆ ಇದು ಇನ್ನೂ ಅಪಾಯಕಾರಿ ಆಗಬಹುದಾಗಿದೆ. ಎರಡೂ ಕ್ಷೇತ್ರಗಳು ತಮ್ಮ ಸಂಪನ್ಮೂಲಗಳನ್ನು ಹೆಚ್ಚಿಸಿಕೊಂಡು ಪರಿಣಾಮಕಾರಿ ಆರೋಗ್ಯ ರಕ್ಷಣಾ ಪರಿಸರ ವ್ಯವಸ್ಥೆಯನ್ನು ರಚಿಸಲು ಪರಸ್ಪರರ ಸಾಮರ್ಥ್ಯಗಳನ್ನು ಬಳಸಿಕೊಳ್ಳುತ್ತಿವೆ. ಕಾಲ ಕಳೆದಂತೆ ಭೌತಿಕ ಮತ್ತು ಡಿಜಿಟಲ್ ನಡುವಿನ ಗೆರೆಗಳು ಮಸುಕಾಗುತ್ತಲೇ ಇರುವುದರಿಂದ, ಗ್ರಾಹಕನು ಮತ್ತಷ್ಟು ಇ-ಫಾರ್ಮಸಿ ತೆಕ್ಕೆಗೆ ಜಾರುತ್ತಿದ್ದಾನೆ. ಮನೆಯವರೆಗೆ ತಲುಪಿಸುವ ಅನುಕೂಲತೆ ಮತ್ತು ಸ್ಪರ್ಧಾತ್ಮಕ ಬೆಲೆಯ ಬಗ್ಗೆ ಮಾತ್ರ ಗ್ರಾಹಕನು ತಲೆ ಕೆಡಿಸಿಕೊಂಡಿದ್ದಾನೆ. ರಾಸಾಯನಿಕಗಳಿಂದಾದ ಔಷಧಿಗಳು ತರಬಹುದಾದ ಅನಿರೀಕ್ಷಿತ ಅಪಾಯಗಳ ಬಗ್ಗೆ ಗ್ರಾಹಕನಿಗೆ ಮಾಹಿತಿ ಇಲ್ಲ.&lt;/p&gt;]]></content:encoded>
            <category><![CDATA[special]]></category>
            <dc:creator>Sujatha NR</dc:creator>
            <atom:link href="https://www.kannadaprabha.in/special-news/the-menace-of-e-pharmacies-needs-to-be-reined-in/articleshow-kgkgseb"/>
        </item>
        <item>
            <title><![CDATA[ನನ್ನ, ಡಿಕೆಶಿ ನಡುವೆ ವ್ಯವಹಾರಿಕ ಸಂಬಂಧವಿಲ್ಲ: ಬಿವೈವಿ]]></title>
            <link>https://www.kannadaprabha.in/politics-news/there-are-no-business-ties-between-dks-and-me-byv/articleshow-k81y872</link>
            <guid isPermaLink="true">https://www.kannadaprabha.in/politics-news/there-are-no-business-ties-between-dks-and-me-byv/articleshow-k81y872</guid>
            <pubDate>Sat, 27 Jun 2026 12:31:52 +0530</pubDate>
            <description><![CDATA[ವಿಧಾನ ಪರಿಷತ್ ಚುನಾವಣೆಯಲ್ಲಿ ಕೆಲವು ಬಿಜೆಪಿ ಶಾಸಕರ ಅಡ್ಡ ಮತದಾನಕ್ಕೆ ಸಂಬಂಧಿಸಿ ನನಗೂ ಕಾಂಗ್ರೆಸ್‌ ನಾಯಕರಿಗೂ ಸಂಬಂಧ ಇದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ವಾಸ್ತವದಲ್ಲಿ ನನಗೂ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ಯಾವುದೇ ವ್ಯವಹಾರಿಕ ಸಂಬಂಧ ಅಥವಾ ಸ್ನೇಹಾಚಾರಗಳಾಗಲಿ ಇಲ್ಲ]]></description>
            <media:content url="https://static-gi.asianetnews.com/images/01ksm2cbhfjvdxvq9veb346rg7/----------------------2026-05-27t120603.979-1779863793199.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಧರ್ಮಸ್ಥಳ : &lt;/strong&gt;ವಿಧಾನ ಪರಿಷತ್ ಚುನಾವಣೆಯಲ್ಲಿ ಕೆಲವು ಬಿಜೆಪಿ ಶಾಸಕರ ಅಡ್ಡ ಮತದಾನಕ್ಕೆ ಸಂಬಂಧಿಸಿ ನನಗೂ ಕಾಂಗ್ರೆಸ್&zwnj; ನಾಯಕರಿಗೂ ಸಂಬಂಧ ಇದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ವಾಸ್ತವದಲ್ಲಿ ನನಗೂ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ನಡುವೆ ಯಾವುದೇ ವ್ಯವಹಾರಿಕ ಸಂಬಂಧ ಅಥವಾ ಸ್ನೇಹಾಚಾರಗಳಾಗಲಿ ಇಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ, ಈಗ ಸಿಎಂ ಆದ ಕಾರಣ ಅವರಿಗೆ ಗೌರವ ಕೊಡುತ್ತಿದ್ದೇನೆ. ಅದು ಬಿಟ್ಟರೆ ಬೇರೇನೂ ನಮ್ಮೊಳಗೆ ಇಲ್ಲ. ಈ ಬಗ್ಗೆ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆ ಸತ್ಯಕ್ಕೆ ದೂರ ಎಂದು ತಿಳಿಸಿದರು. ಪರಿಷತ್&zwnj; ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಅಡ್ಡ ಮತದಾನ ಮಾಡಿದ ಶಾಸಕರು ಪಕ್ಷ ದ್ರೋಹಿಗಳು, ನಾನು ಕೂಡ ಹಾಗೆ ಮಾಡಿದ್ದರೆ, ನಾನು ಪಕ್ಷ ವಿರೋಧಿಗಳ ಸಾಲಿಗೆ ಸೇರುತ್ತಿದ್ದೆ. ಆದರೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್&zwnj; ಶಾ ನನಗೆ ಪಕ್ಷ ಸಂಘಟನೆಯ ಜವಾಬ್ದಾರಿ ನೀಡಿದ್ದಾರೆ. ನನ್ನನ್ನು ಸಿಎಂ ಮಾಡಲು ಪಕ್ಷ ಜವಾಬ್ದಾರಿ ನೀಡಿಲ್ಲ, ಆದರೆ ಪಕ್ಷದೊಳಗೆ ಇಂತಹ ವಿದ್ಯಮಾನ ನಡೆದಿರುವುದು ಬೇಸರ ತರಿಸಿದೆ ಎಂದರು.&lt;/p&gt;&lt;p&gt;ಅಡ್ಡ ಮತದಾನ ಕುರಿತಂತೆ ಪರಿಷತ್&zwnj; ಸದಸ್ಯ ಸಿ.ಟಿ.ರವಿ ನೇತೃತ್ವದ ಸಮಿತಿ ಇಷ್ಟರಲ್ಲೇ ಪ್ರಾಥಮಿಕ ವರದಿ ನೀಡಲಿದೆ. ನಾನು ದೆಹಲಿಯಲ್ಲಿ ಇದ್ದ ಕಾರಣ ಸಿ.ಟಿ.ರವಿ ತಂಡಕ್ಕೆ ಭೇಟಿ ಮಾಡಲು ಸಾಧ್ಯವಾಗಿಲ್ಲ. ಇದಕ್ಕೂ ಮೊದಲು ದೆಹಲಿಯಲ್ಲಿ ವರಿಷ್ಠರು ಕೂಡ ಈ ಬಗ್ಗೆ ನಾನು ಹಾಗೂ ವಿಪಕ್ಷ ನಾಯಕ ಅಶೋಕ್&zwnj; ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಸಮಿತಿಯ ವರದಿಯನ್ನು ನೋಡಿಕೊಂಡು ಮುಂದಿನ ಹೆಜ್ಜೆ ಇಡಲಾಗುವುದು. ಇಂದಲ್ಲ ನಾಳೆ ಸತ್ಯ ಹೊರಗೆ ಬಂದೇ ಬರುತ್ತದೆ ಎಂದರು.&lt;/p&gt;&lt;p&gt;ಮಾಜಿ ಸಿಎಂ ಡಿ.ವಿ.ಸದಾನಂದ ಗೌಡರು ಅಡ್ಡ ಮಾತದಾನ ಸಾಧ್ಯತೆ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದರು. ಅವರು ಒಳ್ಳೆಯ ಉದ್ದೇಶದಿಂದ ಹೇಳಿದ್ದಾರೆ ಎಂದ ಅವರು, ಅಡ್ಡ ಮತದಾನಕ್ಕೆ ನಾನು, ಆರ್&zwnj;.ಅಶೋಕ್&zwnj;, ಶೋಭಾ ಕರಂದ್ಲಾಜೆ ಕಾರಣ ಎಂಬ ಮಾಜಿ ಸಚಿವ ಎಸ್&zwnj;.ಟಿ.ಸೋಮಶೇಖರ್&zwnj; ಆರೋಪದಲ್ಲಿ ಹುರುಳು ಇಲ್ಲ. ಬಹುಶಃ ಅವರ ಜೊತೆ ನಮ್ಮ ಶಾಸಕರು ಸಂಪರ್ಕದಲ್ಲಿ ಇದ್ದಿರಬಹುದು. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸುದ್ದಿಗಾರರಲ್ಲಿ ಪ್ರಶ್ನೆಗೆ ವಿಜಯೇಂದ್ರ ಉತ್ತರಿಸಿದರು.&lt;/p&gt;&lt;h2&gt;&lt;strong&gt;ಕಾಣಿಕೆ ಅರ್ಪಣೆ&lt;/strong&gt;&lt;/h2&gt;&lt;p&gt;ಪರಿಷತ್&zwnj; ಚುನಾವಣೆಯಲ್ಲಿ ನಡೆದ ಅಡ್ಡಮತದಾನ, ವರಿಷ್ಠರ ಬುಲಾವ್&zwnj; ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ವಿಜಯೇಂದ್ರ ದೆಹಲಿಯಲ್ಲಿ ತೆರಳಿದ್ದರು. ಅಲ್ಲಿ ವರಿಷ್ಠರಿಗೆ ಮನವರಿಕೆ ಮಾಡುವ ಪ್ರಯತ್ನ ನಡೆಸಿದ ಬಳಿಕ ವಿಜಯೇಂದ್ರ ಗುರುವಾರ ನೇರವಾಗಿ ಮಂಗಳೂರಿಗೆ ವಿಮಾನದಲ್ಲಿ ಆಗಮಿಸಿ ತಡರಾತ್ರಿ ಧರ್ಮಸ್ಥಳ ತಲುಪಿದ್ದರು. ಇಲ್ಲಿನ ಸನ್ನಿಧಿ ಗೆಸ್ಟ್&zwnj;ಹೌಸ್&zwnj;ನಲ್ಲಿ ತಂಗಿದ್ದ ಅವರು, ಶುಕ್ರವಾರ ಬೆಳಗ್ಗೆ ಮಂಜುನಾಥ ಸ್ವಾಮಿ ದೇವರ ದರ್ಶನ ಪಡೆದರು. ವಿಶೇಷ ಪೂಜೆ ಸಲ್ಲಿಸಿ, ₹1,001 ಕಾಣಿಕೆ ಅರ್ಪಿಸಿದರು. ನಂತರ ಧರ್ಮಾಧಿಕಾರಿ ಡಾ। ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಆಶೀರ್ವಾದ ಪಡೆದರು.&lt;/p&gt;&lt;h3&gt;&amp;nbsp;ಅಡ್ಡ &lsquo;ಮತ&rsquo;ದಾರರಿಗೆ ಒಳ್ಳೆಯದು ಆಗಲಿ ಎಂದು ಪ್ರಾರ್ಥನೆ: ಬಿವೈವಿ&lt;/h3&gt;&lt;p&gt;ಅಡ್ಡ ಮತದಾನದಿಂದ ಶಾಸಕರನ್ನು ಕಾರ್ಯಕರ್ತರು ಅನುಮಾನದಿಂದ ನೋಡುವಂತಾಗಿದೆ. ಇದರಿಂದ ಲಕ್ಷಾಂತರ ಕಾರ್ಯಕರ್ತರಿಗೆ ನೋವಾಗಿದೆ. ಪರಿಷತ್&zwnj; ಚುನಾವಣೆ ಫಲಿತಾಂಶದ ಮಾರನೇ ದಿನವೇ ನನ್ನ ಮನಸ್ಸು ಘಾಸಿಗೊಂಡಿತ್ತು. ನಾನು ಭಾವನಾತ್ಮಕ ವ್ಯಕ್ತಿ, ಸತ್ಯ ತಿಳಿಯುವುದಕ್ಕಾಗಿಯೇ ನಾನು ಧರ್ಮಸ್ಥಳದಲ್ಲಿ ಶಾಸಕಾಂಗದ ಸಭೆ ನಡೆಸುತ್ತೇನೆ ಎಂದಿದ್ದೆ. ಆದರೆ ಪಕ್ಷದ ನಾಯಕರು, ಹಾಗೆ ಮಾಡುವುದು ಬೇಡ ಎಂದು ಕಿವಿ ಮಾತು ಹೇಳಿದರು. ನಾನು ಈ ಕ್ಷೇತ್ರದ ಪರಮಭಕ್ತನಾಗಿದ್ದು, ಅಂತಹವರಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ವಿಜಯೇಂದ್ರ ಹೇಳಿದರು.&lt;/p&gt;]]></content:encoded>
            <category><![CDATA[politics]]></category>
            <dc:creator>Sujatha NR</dc:creator>
            <atom:link href="https://www.kannadaprabha.in/politics-news/there-are-no-business-ties-between-dks-and-me-byv/articleshow-k81y872"/>
        </item>
        <item>
            <title><![CDATA[ರೈತರ ನೆರವಿಗಿಲ್ಲ ‘ವರುಣ ಮಿತ್ರ’ ಸಹಾಯವಾಣಿ]]></title>
            <link>https://www.kannadaprabha.in/karnataka-news/-varuna-mitra-helpline-not-helping-farmers/articleshow-poqwd38</link>
            <guid isPermaLink="true">https://www.kannadaprabha.in/karnataka-news/-varuna-mitra-helpline-not-helping-farmers/articleshow-poqwd38</guid>
            <pubDate>Fri, 26 Jun 2026 02:00:00 +0530</pubDate>
            <description><![CDATA[ಮಳೆ ಕೊರತೆ, ಬರ, ಪ್ರವಾಹ ಸೇರಿದಂತೆ ನೈಸರ್ಗಿಕ ವಿಕೋಪದಂತಹ ಕೆಟ್ಟಸ್ಥಿತಿಯಲ್ಲಿ ರೈತರಿಗೆ, ಜನ ಸಾಮಾನ್ಯರಿಗೆ ಅಗತ್ಯ ಸಲಹೆ-ಸೂಚನೆ, ನೆರವು ನೀಡುತ್ತಿದ್ದ ‘ಕೆಎಸ್‌ಎನ್‌ಡಿಎಂಸಿ’ಯ ‘ವರುಣ ಮಿತ್ರ’ ಸಹಾಯವಾಣಿ ಕೇಂದ್ರದಲ್ಲಿ ಇದೀಗ ರೈತರ ಕರೆ ಸ್ವೀಕಾರ ಮಾಡುವವರೇ ಇಲ್ಲವಾಗಿದೆ.]]></description>
            <media:content url="https://static-assets.asianetnews.com/kp/json/25062026/pictures/AGRICULTURE_ACTIVITY_99.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಶ್ವನಾಥ ಮಲೇಬೆನ್ನೂರು&lt;/strong&gt;&lt;/p&gt;&lt;p&gt;&lt;strong&gt;&amp;nbsp;ಚಿಕ್ಕಮಗಳೂರು : &amp;nbsp;&lt;/strong&gt;ಮಳೆ ಕೊರತೆ, ಬರ, ಪ್ರವಾಹ ಸೇರಿದಂತೆ ನೈಸರ್ಗಿಕ ವಿಕೋಪದಂತಹ ಕೆಟ್ಟಸ್ಥಿತಿಯಲ್ಲಿ ರೈತರಿಗೆ, ಜನ ಸಾಮಾನ್ಯರಿಗೆ ಅಗತ್ಯ ಸಲಹೆ-ಸೂಚನೆ, ನೆರವು ನೀಡುತ್ತಿದ್ದ &lsquo;ಕೆಎಸ್&zwnj;ಎನ್&zwnj;ಡಿಎಂಸಿ&rsquo;ಯ &lsquo;ವರುಣ ಮಿತ್ರ&rsquo; ಸಹಾಯವಾಣಿ ಕೇಂದ್ರದಲ್ಲಿ ಇದೀಗ ರೈತರ ಕರೆ ಸ್ವೀಕಾರ ಮಾಡುವವರೇ ಇಲ್ಲವಾಗಿದೆ.&lt;/p&gt;&lt;p&gt;ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಳೆ ಮುನ್ಸೂಚನೆ, ಪ್ರತಿ 15 ನಿಮಿಷಕ್ಕೆ ಮಳೆ ಮಾಪನ ಅಂಕಿ-ಅಂಶ ಸಂಗ್ರಹಣೆ, ವಿಪತ್ತು ನಿರ್ವಹಣೆಯಲ್ಲಿ ತಾಂತ್ರಿಕ ವಿಶ್ಲೇಷಣೆ, ವಿವರಣೆ ಹಾಗೂ ತಾಂತ್ರಿಕ ವರದಿ ಸಿದ್ಧಪಡಿಸುವಲ್ಲಿ ಇಡೀ ದೇಶದಲ್ಲಿ ಹೆಸರುವಾಸಿಯಾಗಿದ್ದ, ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್&zwnj;ಎನ್&zwnj;ಡಿಎಂಸಿ) ಇದೀಗ ನಿರ್ಲಕ್ಷ್ಯಕ್ಕೀಡಾಗಿದೆ ಎಂಬ ಆರೋಪ ಕೇಳಿ ಬಂದಿದೆ. &amp;nbsp;&lt;/p&gt;&lt;h2&gt;&lt;strong&gt;ಸಹಾಯವಾಣಿ ಕರೆ ಸಂಖ್ಯೆ 2.38 ಲಕ್ಷಕ್ಕೆ ಇಳಿಕೆ&lt;/strong&gt;&lt;/h2&gt;&lt;p&gt;ವರುಣ ಮಿತ್ರ ಕೇಂದ್ರದ ಕಾರ್ಯದ ಬಗ್ಗೆ ಪ್ರಧಾನಿ ಸಹ ಈ ಹಿಂದೆ ಶ್ಲಾಘಿಸಿದ್ದರು. 2011-12ರಲ್ಲಿ ಆರಂಭಗೊಂಡ ವರುಣ ಮಿತ್ರ ಸಹಾಯವಾಣಿ ಸೇವೆ ಈವರೆಗೆ ಬರೋಬ್ಬರಿ 1.70 ಕೋಟಿ ಗೂ ಅಧಿಕ ಕೆರೆ ಬಂದಿವೆ. 2023ರಲ್ಲಿ ಅತಿ ಹೆಚ್ಚು 22.49 ಲಕ್ಷ ಕರೆ ಸ್ವೀಕರವಾಗಿದ್ದು, 2024ರಲ್ಲಿ 17 ಲಕ್ಷಕ್ಕೆ ಇಳಿಕೆಯಾಗಿದ್ದು, 2025ರಲ್ಲಿ 11.59 ಲಕ್ಷಕ್ಕೆ ಕುಸಿದಿದೆ. ಪ್ರಸಕ್ತ 2026ರ ಮೇ ಅಂತ್ಯದ ವರೆಗೆ 2.38 ಲಕ್ಷ ಕೆರೆ ಮಾತ್ರ ಸ್ವೀಕಾರವಾಗಿವೆ.&amp;nbsp;&lt;/p&gt;&lt;h3&gt;&amp;nbsp;&lt;strong&gt;ವಿಜ್ಞಾನಿಗಳಿಗೆ ಕರೆ ಸ್ವೀಕರಿಸುವ ಹೊಣೆ&lt;/strong&gt;&lt;/h3&gt;&lt;p&gt;ಗ್ರಾಪಂ ಮಟ್ಟದಲ್ಲಿ ಅಳವಡಿಸಿದ್ದ ಮಳೆ ಮಾಪನ ಸೆನ್ಸಾರ್&zwnj;ಗಳಿಂದ ಸಂಗ್ರಹವಾಗುವ ದತ್ತಾಂಶ ವಿಶ್ಲೇಷಣೆ ಮಾಡಿ ವರದಿ ಸಿದ್ಧಪಡಿಸುತ್ತಿದ್ದ ಕೆಎಸ್&zwnj;ಎನ್&zwnj;ಡಿಎಂಸಿಯ ವಿಜ್ಞಾನಿಗಳಿಗೆ ಇದೀಗ, ವರುಣ ಮಿತ್ರ ಕೇಂದ್ರದಲ್ಲಿ ದೂರು ಕೇಳುವ ಕೆಲಸ ವಹಿಸಲಾಗಿದೆ. ವರುಣ ಮಿತ್ರ ಕೇಂದ್ರದಲ್ಲಿ ಕಾರ್ಯವರ್ಹಿಸುತ್ತಿದ್ದ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದ ಬಳಿಕ ವಿಜ್ಞಾನಿಗಳು ಈ ಕೆಲಸ ಮಾಡಬೇಕಾದ ಪರಿಸ್ಥಿತಿ ಕೆಎಸ್&zwnj;ಎನ್&zwnj;ಡಿಎಂಸಿಯಲ್ಲಿ ನಿರ್ಮಾಣಗೊಂಡಿದೆ. &amp;nbsp;&lt;/p&gt;&lt;h3&gt;&lt;strong&gt;8 ತಿಂಗಳಿಂದ ಸಿಬ್ಬಂದಿಗೆ ವೇತನವಿಲ್ಲ&lt;/strong&gt;&lt;/h3&gt;&lt;p&gt;ಕೆಎಸ್&zwnj;ಎನ್&zwnj;ಡಿಎಂಸಿ ಕಚೇರಿಯಲ್ಲಿ ಕಾರ್ಯವಹಿಸುತ್ತಿರುವ ಸಿಬ್ಬಂದಿಗೆ ಕಳೆದ 8 ತಿಂಗಳಿನಿಂದ ವೇತನ ಪಾವತಿಸಿಲ್ಲ. ವೇತನ ಬಗ್ಗೆ ಪ್ರಶ್ನಿಸಿದಾಗ ರಾಜ್ಯ ಸರ್ಕಾರ ಅನುದಾನ ನೀಡಿಲ್ಲ ಎಂದು ಸಂಸ್ಥೆಯ ನಿರ್ದೇಶಕರು ಸಬೂಬು ಹೇಳಲಾಗುತ್ತಿದೆ ಎಂದು ಕೆಎಸ್&zwnj;ಎನ್&zwnj;ಡಿಎಂಸಿಯ ನೌಕರರು ಪತ್ರ ಬರೆದಿರುವುದು &lsquo;ಕನ್ನಡಪ್ರಭ&rsquo;ಕ್ಕೆ ಲಭ್ಯವಾಗಿದೆ. &amp;nbsp;&lt;/p&gt;&lt;p&gt;ಒಂದು ತಿಂಗಳಲ್ಲಿ ಮಳೆ ಮಾಪನ ದುರಸ್ತಿ ಪೂರ್ಣರಾಜ್ಯದಲ್ಲಿ ಗ್ರಾಪಂ ಮಟ್ಟದಲ್ಲಿರುವ ಮಳೆ ಮಾಪನ ಸೆನ್ಸರ್&zwnj;ಗಳ ಪೈಕಿ 1,044 ಸೆನ್ಸರ್&zwnj; ದುರಸ್ತಿಗೆ ಈಗಾಗಲೇ ಕ್ರಮ ವಹಿಸಲಾಗಿದ್ದು, 452 ದುರಸ್ತಿ ಪೂರ್ಣಗೊಂಡಿದೆ. ಒಂದು ತಿಂಗಳಲ್ಲಿ ಎಲ್ಲ ಸೆನ್ಸರ್&zwnj; ದುರಸ್ತಿ ಪೂರ್ಣವಾಗಲಿದೆ. ಉಳಿದಂತೆ 1950 ಹೊಸ ಸೆನ್ಸರ್&zwnj; ಅಳವಡಿಕೆಗೆ ಕ್ರಮವಹಿಸಲಾಗಿದೆ ಎಂದು ಕೆಎಸ್&zwnj;ಎನ್&zwnj;ಡಿಎಂಸಿ ನಿರ್ದೇಶಕ ಎಂ.ಎಸ್&zwnj;. ದಿವಾಕರ್&zwnj; &lsquo;ಕನ್ನಡಪ್ರಭ&rsquo;ಕ್ಕೆ ಮಾಹಿತಿ ನೀಡಿದ್ದಾರೆ. ಕೆಎಸ್&zwnj;ಎನ್&zwnj;ಡಿಎಂಸಿ ಸಿಬ್ಬಂದಿಗೆ ಕಿರುಕುಳ?ಸಂಸ್ಥೆಯ ನೌಕರರಿಗೆ ಪಿಎಫ್&zwnj; ಕಡಿತಗೊಳಿಸದೇ ವೇತನ ನೀಡಲಾಗುತ್ತಿದೆ. ಹಾಲಿ ನಿರ್ದೇಶಕರ ನಿರ್ವಹಿಸಬೇಕಾದ ಇ- ಆಫೀಸ್&zwnj; ಅನ್ನು ಕೇಂದ್ರದ ಆಡಳಿತಾಧಿಕಾರಿಯೇ ನಿರ್ವಹಿಸುತ್ತಿದ್ದು, ನಿರ್ದೇಶಕರ ಪರವಾಗಿ ಆಡಳಿತಾಧಿಕಾರಿಯೇ ಟಿಪ್ಪಣಿ ಬರೆಯುತ್ತಿದ್ದಾರೆ. ಆಡಳಿತಾಧಿಕಾರಿ ವಿನಾಕಾರಣ ನೌಕರರಿಗೆ ನೋಟಿಸ್&zwnj; ನೀಡಿ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪವನ್ನು ಸಹ ನೌಕರರು ಮಾಡಿದ್ದಾರೆ.&lt;/p&gt;&lt;p&gt;2020ರ ನಂತರ ಕೆಎಸ್&zwnj;ಎನ್&zwnj;ಡಿಎಂಸಿಗೆ ಕಾಯಂ ನಿರ್ದೇಶಕರನ್ನು ನೇಮಕ ಮಾಡದೇ ಸರ್ಕಾರ ಐಎಎಸ್&zwnj; ಅಧಿಕಾರಿಗಳನ್ನು ನೇಮಿಸುತ್ತಿದೆ. ನಾಲ್ಕೈದು ತಿಂಗಳಿಗೆ ಈ ಐಎಎಸ್&zwnj; ಅಧಿಕಾರಿಗಳ ಬದಲಾವಣೆಯಿಂದ ಕೆಎಸ್&zwnj;ಎನ್&zwnj;ಡಿಎಂಸಿ ಸಮರ್ಪಕವಾಗಿ ಕಾರ್ಯನಿರ್ವಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಐಎಎಸ್&zwnj; ಅಧಿಕಾರಿಗಳು ಆಡಳಿತಾತ್ಮಕ ಕಾರ್ಯದಲ್ಲಿ ಮಾತ್ರ ಪರಿಣಿತರಾಗಿದ್ದು, ಕೆಎಸ್&zwnj;ಎನ್&zwnj;ಡಿಎಂಸಿಯ ಮೂಲ ಕಾರ್ಯದಲ್ಲಿ ತೊಡಗಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಸಹ ಕೇಳಿ ಬಂದಿವೆ.ಕೋಟ್&zwnj;.......ವರುಣ ಮಿತ್ರ ಸಹಾಯವಾಣಿ ಕೇಂದ್ರಕ್ಕೆ ಏಜೆನ್ಸಿ ಮೂಲಕ ಸಿಬ್ಬಂದಿ ನೇಮಿಸಲಾಗಿತ್ತು. ಅವಧಿ ಮುಕ್ತಾಯವಾದರಿಂದ ಇತರೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಾನೂ ಸಹ ವರುಣ ಮಿತ್ರ ಸಹಾಯವಾಣಿಯಲ್ಲಿ ಹೋಗಿ ಕುಳಿತು ಕರೆ ಸ್ವೀಕಾರ ಮಾಡುತ್ತೇನೆ. ದಿನಕ್ಕೆ ಈಗಲೂ 4 ರಿಂದ 5 ಸಾವಿರ ಕರೆ ಸ್ವೀಕಾರ ಮಾಡಲಾಗುತ್ತಿದೆ. ಈ ಬಾರಿ ಮಳೆ ಕೊರತೆ, ವೆಬ್&zwnj;ಸೈಟ್&zwnj;, ಮೊಬೈಲ್&zwnj; ಆ್ಯಪ್&zwnj;ನಲ್ಲಿ ಸಮಗ್ರ ಮಾಹಿತಿ ರೈತರಿಗೆ ದೊರೆಯುತ್ತಿರುವುದರಿಂದ ಸಹಾಯವಾಣಿಗೆ ಕರೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ.-ಎಂ.ಎಸ್&zwnj;.ದಿವಾಕರ್&zwnj;, ನಿರ್ದೇಶಕರು, ಕೆಎಸ್&zwnj;ಎನ್&zwnj;ಡಿಎಂಸಿ.&lt;/p&gt;]]></content:encoded>
            <category><![CDATA[karnataka]]></category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/karnataka-news/-varuna-mitra-helpline-not-helping-farmers/articleshow-poqwd38"/>
        </item>
        <item>
            <title><![CDATA[ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸಿಎಂ ಕ್ಲಾಸ್‌]]></title>
            <link>https://www.kannadaprabha.in/politics-news/cm-pulls-up-excise-department-officials/articleshow-3fa8woy</link>
            <guid isPermaLink="true">https://www.kannadaprabha.in/politics-news/cm-pulls-up-excise-department-officials/articleshow-3fa8woy</guid>
            <pubDate>Sat, 27 Jun 2026 11:47:59 +0530</pubDate>
            <description><![CDATA[ಸರ್ಕಾರದ ಘನತೆಗೆ ಧಕ್ಕೆ ತರುವ ಕೆಲಸ ಮಾಡಿದರೆ ನಾನು ನೋಡುತ್ತಾ ಸುಮ್ಮನೆ ಕೂರುವುದಿಲ್ಲ. ಅಂಥ ಯಾವ ಪ್ರಯತ್ನವನ್ನೂ ನಾನು ಸಹಿಸಲ್ಲ. ಬಹಳ ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಬಕಾರಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.]]></description>
            <media:content url="https://static-gi.asianetnews.com/images/01kv49pen8gct90780d58v95wf/cm-dk-shivakumar-1781482076840.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು : &lt;/strong&gt;ಸರ್ಕಾರದ ಘನತೆಗೆ ಧಕ್ಕೆ ತರುವ ಕೆಲಸ ಮಾಡಿದರೆ ನಾನು ನೋಡುತ್ತಾ ಸುಮ್ಮನೆ ಕೂರುವುದಿಲ್ಲ. ಅಂಥ ಯಾವ ಪ್ರಯತ್ನವನ್ನೂ ನಾನು ಸಹಿಸಲ್ಲ. ಬಹಳ ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಅಬಕಾರಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.&lt;/p&gt;&lt;p&gt;ವಿಧಾನಸೌಧದಲ್ಲಿ ಶುಕ್ರವಾರ ನಡೆದ ಅಬಕಾರಿ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಹಲವು ಸಲಹೆ ಸೂಚನೆ ನೀಡಿರುವ ಮುಖ್ಯಮಂತ್ರಿ ಅವರು, ಸರ್ಕಾರದ ಘನತೆ ಹಾಳು ಮಾಡಿದರೆ ಅಬಕಾರಿ ಸಿಬ್ಬಂದಿ, ಅಧಿಕಾರಿಗಳನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡುವ ಕಾನೂನು ತರುವ ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;h2&gt;ನೀವು ಘನತೆ ಉಳಿಸಿಕೊಂಡರೆ ಇಲಾಖೆಯ ಘನತೆ ಉಳಿಯುತ್ತದೆ&lt;/h2&gt;&lt;p&gt;ಸಭೆಯಲ್ಲಿ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಸಿಎಂ, ನೀವು ಘನತೆ ಉಳಿಸಿಕೊಂಡರೆ ಇಲಾಖೆಯ ಘನತೆ ಉಳಿಯುತ್ತದೆ. ಇಲಾಖೆ ಘನತೆ ಉಳಿದರೆ ಸರ್ಕಾರದ ಘನತೆ ಹೆಚ್ಚುತ್ತದೆ. ನೀವು ಸರ್ಕಾರದ ಘನತೆಗೆ ಧಕ್ಕೆ ತರುವ ಕೆಲಸ ಮಾಡಿದರೆ ನಾವು ನೋಡುತ್ತಾ ಕೂರುವುದಿಲ್ಲ. ಅಬಕಾರಿ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಲು ಆಗುವುದಿಲ್ಲ ಎಂದುಕೊಳ್ಳಬೇಡಿ. ಅಗತ್ಯಬಿದ್ದರೆ ವರ್ಗಾವಣೆ ಮಾಡಲು ಅಗತ್ಯವಾದ ಕಾನೂನು ಬದಲಾವಣೆಯನ್ನೂ ತರಲು ಅವಕಾಶಗಳಿವೆ. ಬಹಳ ಎಚ್ಚರಿಕೆಯಿಂದ ಕೆಲಸ ಮಾಡಿ. ಸರ್ಕಾರದ ಘನತೆ ಉಳಿಸುವ ವೃತ್ತಿಪರತೆ ಪ್ರದರ್ಶಿಸಿ. ಇಲ್ಲದಿದ್ದರೆ ಕಠಿಣ ಕ್ರಮ ಅನಿವಾರ್ಯವಾಗುತ್ತದೆ ತಾಕೀತು ಮಾಡಿದ್ದಾರೆ.&lt;/p&gt;&lt;h3&gt;ಕೆಟ್ಟ ಹೆಸರು ಸಹಿಸಲ್ಲ:&lt;/h3&gt;&lt;p&gt;ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಯಾರನ್ನೂ, ಯಾವ ಪ್ರಯತ್ನವನ್ನೂ ನಾನು ಸಹಿಸುವುದಿಲ್ಲ. ಇಲಾಖೆಯಲ್ಲಿ ಹೊಸದಾಗಿ ಆಲ್ಕೋಹಾಲ್&zwnj; ಪ್ರಮಾಣ ಆಧಾರಿತ ದರ ನಿಗದಿ ವ್ಯವಸ್ಥೆ(ಎಐಬಿ) ಪದ್ಧತಿ ಜಾರಿಯಾದ ಬಳಿಕ ನಿರೀಕ್ಷಿತ ಪ್ರಮಾಣದಲ್ಲಿ ಬೆಳವಣಿಗೆ ಆಗಿದೆ. ಹೊಸದಾಗಿ 574 ಸನ್ನದುಗಳನ್ನು ಇ-ಹರಾಜು ಹಾಕಲು ನಿರ್ಧರಿಸಲಾಗಿದೆ. ಪರವಾನಗಿ ನವೀಕರಣ ಮೊತ್ತವನ್ನು ಎರಡು ಕಂತುಗಳಲ್ಲಿ ಪಾವತಿಸಲು ಅವಕಾಶ ಕಲ್ಪಿಸಿ. ಅಕ್ಕ ಪಕ್ಕದ ರಾಜ್ಯಗಳಲ್ಲಿ ಇಲಾಖೆ ಹೇಗೆ ಕಾರ್ಯನಿರ್ವಹಿಸುತ್ತಿವೆ ಎನ್ನುವ ವರದಿ ನೋಡಿದ್ದೇನೆ. ಇಲಾಖೆಗೆ ಕೊಟ್ಟಿರುವ ಗುರಿ ತಲುಪಲು ಶ್ರಮಿಸಬೇಕು ಎಂದು ಸಿಎಂ ಸೂಚಿಸಿದರು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[politics]]></category>
            <dc:creator>Sujatha NR</dc:creator>
            <atom:link href="https://www.kannadaprabha.in/politics-news/cm-pulls-up-excise-department-officials/articleshow-3fa8woy"/>
        </item>
        <item>
            <title><![CDATA[ಶನಿವಾರ ಸರ್ಕಾರಿ ಶಾಲಾ ಸಮಯ  ಬದಲಾವಣೆ : ಇಂದಿನಿಂದಲೇ ಜಾರಿ]]></title>
            <link>https://www.kannadaprabha.in/karnataka-news/bengaluru-news/revised-saturday-timings-for-government-schools-come-into-effect-from-today/articleshow-6okt0gh</link>
            <guid isPermaLink="true">https://www.kannadaprabha.in/karnataka-news/bengaluru-news/revised-saturday-timings-for-government-schools-come-into-effect-from-today/articleshow-6okt0gh</guid>
            <pubDate>Sat, 27 Jun 2026 08:53:30 +0530</pubDate>
            <description><![CDATA[ಶಿಕ್ಷಕರು ಮತ್ತು ಮಕ್ಕಳ ಅನುಕೂಲಕ್ಕಾಗಿ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶನಿವಾರದ ದಿನಕ್ಕೆ ಮಾತ್ರ ಅನ್ವಯಿಸುವಂತೆ ಶಾಲಾ ಸಮಯದ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 8.30ರಿಂದ ಶಾಲೆ ಆರಂಭಿಸಿ ಮಧ್ಯಾಹ್ನ 12. 30ರವರೆಗೆ ತರಗತಿ ನಡೆಸಲು ಶಿಕ್ಷಣ ಇಲಾಖೆ ಏಕರೂಪದ ಸಮಯ ನಿಗದಿಪಡಿಸಿದೆ]]></description>
            <media:content url="https://static-gi.asianetnews.com/images/01kv217rkfwnsmtqgz9mxakmkz/----------------------2026-06-14t083113.766-1781406098031.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಬೆಂಗಳೂರು : &amp;nbsp;&lt;/strong&gt;ಶಿಕ್ಷಕರು ಮತ್ತು ಮಕ್ಕಳ ಅನುಕೂಲಕ್ಕಾಗಿ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಶನಿವಾರದ ದಿನಕ್ಕೆ ಮಾತ್ರ ಅನ್ವಯಿಸುವಂತೆ ಶಾಲಾ ಸಮಯದ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 8.30ರಿಂದ ಶಾಲೆ ಆರಂಭಿಸಿ ಮಧ್ಯಾಹ್ನ 12. 30ರವರೆಗೆ ತರಗತಿ ನಡೆಸಲು ಶಿಕ್ಷಣ ಇಲಾಖೆ ಏಕರೂಪದ ಸಮಯ ನಿಗದಿಪಡಿಸಿದೆ. ಇದು ಜೂ.27ರ ಶನಿವಾರದಿಂದಲೇ ಜಾರಿಯಾಗುತ್ತದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;ಪ್ರಸ್ತುತ ರಾಜ್ಯಾದ್ಯಂತ ಪ್ರಾದೇಶಿಕವಾರು ಬೇರೆ ಬೇರೆ ಶಾಲಾ ಸಮಯವನ್ನು ಪಾಲಿಸಲಾಗುತ್ತಿದೆ. ಕೆಲವೆಡೆ ಬೆಳಗ್ಗೆ 7.30ರಿಂದ 11.30, ಇನ್ನು ಕೆಲವೆಡೆ ಬೆಳಗ್ಗೆ 8ರಿಂದ 12 ಗಂಟೆ ಹೀಗೆ ಬೇರೆ ಬೇರೆ ಸಮಯ ಪಾಲನೆ ಆಗುತ್ತಿದೆ. ಇದರ ಬದಲು ವಿದ್ಯಾರ್ಥಿ ಹಾಗೂ ಶಿಕ್ಷಕ ಸ್ನೇಹಿಯಾಗಿ ರಾಜ್ಯಾದ್ಯಂತ ಒಂದೇ ಸಮಯ ನಿಗದಿಪಡಿಸಿ ಅದನ್ನು ಅನುಸರಿಸಲು ಸೂಚಿಸಲಾಗಿದೆ.&lt;/p&gt;&lt;h2&gt;&lt;strong&gt;ಆನ್&zwnj;ಲೈನ್ ಹಾಜರಾತಿ ಕಾರಣ:&lt;/strong&gt;&lt;/h2&gt;&lt;p&gt;ರಾಜ್ಯ ಸರ್ಕಾರ ದೇಶದಲ್ಲಿಯೇ ಮೊದಲ ಬಾರಿಗೆ ಸರ್ಕಾರಿ ನೌಕರರಿಗೆ ಕರ್ತವ್ಯ ಮೊಬೈಲ್&zwnj; ಅಪ್ಲಿಕೇಷನ್ ಮೂಲಕ ಎಐ ಆಧಾರಿತ ಡಿಜಿಟಲ್&zwnj; ಹಾಜರಾತಿ ಜಾರಿಗೊಳಿಸಿದೆ. ಈವರೆಗೆ ಶಿಕ್ಷಕರ ಹಾಜರಾತಿ ಪುಸ್ತಕದಲ್ಲಿ ಅವರ ಹಾಜರಿ ದಾಖಲಾಗುತ್ತಿತ್ತು. ಶನಿವಾರ ಬಸ್&zwnj; ಸಿಗದಿರುವುದು ಸೇರಿದಂತೆ ಬೇರೆ ಕಾರಣಗಳಿಂದ ಶಿಕ್ಷಕರು ತಡವಾಗಿ ಬಂದರೂ ಸಮಸ್ಯೆ ಆಗುತ್ತಿರಲಿಲ್ಲ. ಆದರೆ, ಈಗ ಒಂದು ನಿಮಿಷ ತಡವಾದರೂ ಗೈರು ಹಾಜರಾತಿ ಆಗುತ್ತದೆ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಸಾರಿಗೆಯನ್ನೇ ನಂಬಿರುವ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿದೆ. ಹಾಗಾಗಿ ಶನಿವಾರ ಶಾಲಾ ಸಮಯ ಬದಲಾವಣೆ ಮಾಡಬೇಕೆಂಬ ಅಭಿಪ್ರಾಯ ಶಿಕ್ಷಕರ ವಲಯದಲ್ಲಿ ಕೇಳಿಬಂದಿತ್ತು. ಹಾಗಾಗಿ ಸಮಯ ತಿದ್ದುಪಡಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.&lt;/p&gt;&lt;p&gt;ಶಿಕ್ಷಕರು ಮತ್ತು ವಿದ್ಯಾರ್ಥಿಗಳ ದೃಷ್ಟಿಯಿಂದ ರಾಜ್ಯಾದ್ಯಂತ ಪ್ರತಿ ಶನಿವಾರಕ್ಕೆ ಮಾತ್ರ ಶಾಲಾ ಸಮಯವನ್ನು ಏಕರೂಪವಾಗಿ ಬದಲಾವಣೆ ಮಾಡಲಾಗಿದೆ. ಕರ್ತವ್ಯ ಅಪ್ಲಿಕೇಷನ್&zwnj;ನಲ್ಲೂ ಇದನ್ನು ಅಪ್&zwnj;ಡೇಟ್&zwnj; ಮಾಡಲಾಗಿದೆ. ಜೂ.27ರಿಂದಲೇ ಇದು ಅನ್ವಯವಾಗಲಿದೆ.&lt;/p&gt;&lt;h3&gt;- ವಿಕಾಸ್ ಕಿಶೋರ್ ಸುರಳ್ಕರ್, ಶಾಲಾ ಶಿಕ್ಷಣ ಆಯುಕ್ತ&lt;/h3&gt;]]></content:encoded>
            <category><![CDATA[bengaluru]]></category>
            <dc:creator>Sujatha NR</dc:creator>
            <atom:link href="https://www.kannadaprabha.in/karnataka-news/bengaluru-news/revised-saturday-timings-for-government-schools-come-into-effect-from-today/articleshow-6okt0gh"/>
        </item>
        <item>
            <title><![CDATA[ಕಾವೇರಿ-ಗೋದಾವರಿ ನದಿ ಜೋಡಣೆಗೆ  ರಾಜ್ಯ ಸರ್ಕಾರದಿಂದ ಮೌಖಿಕ ಒಪ್ಪಿಗೆ]]></title>
            <link>https://www.kannadaprabha.in/karnataka-news/bengaluru-news/state-government-gives-in-principle-oral-approval-for-the-cauvery-godavari-river-linking-project/articleshow-w5ybyai</link>
            <guid isPermaLink="true">https://www.kannadaprabha.in/karnataka-news/bengaluru-news/state-government-gives-in-principle-oral-approval-for-the-cauvery-godavari-river-linking-project/articleshow-w5ybyai</guid>
            <pubDate>Sat, 27 Jun 2026 08:35:18 +0530</pubDate>
            <description><![CDATA[ಮಹತ್ವದ ಬೆಳವಣಿಗೆಯೊಂದರದಲ್ಲಿ ಕಾವೇರಿ-ಗೋದಾವರಿ ನದಿ ಜೋಡಣೆಯ ಮಹತ್ವದ ಯೋಜನೆಗೆ ಕರ್ನಾಟಕ ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ ಎನ್ನಲಾಗಿದೆ. ಗುರುವಾರ ತುಂಗಭದ್ರಾ ಬಳಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್‌. ಪಾಟೀಲ್‌ ಸಮ್ಮುಖದಲ್ಲಿ ನಡೆದ ಆಂತರಿಕ ಸಭೆ]]></description>
            <media:content url="https://static-gi.asianetnews.com/images/01k9ycn806jnhta2z3cmkmj0e4/cauvery-disputee-1763030245382.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು : &amp;nbsp;&lt;/strong&gt;ಮಹತ್ವದ ಬೆಳವಣಿಗೆಯೊಂದರದಲ್ಲಿ ಕಾವೇರಿ-ಗೋದಾವರಿ ನದಿ ಜೋಡಣೆಯ ಮಹತ್ವದ ಯೋಜನೆಗೆ ಕರ್ನಾಟಕ ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ ಎನ್ನಲಾಗಿದೆ.&lt;/p&gt;&lt;p&gt;ಗುರುವಾರ ತುಂಗಭದ್ರಾ ಬಳಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್&zwnj;. ಪಾಟೀಲ್&zwnj; ಸಮ್ಮುಖದಲ್ಲಿ ನಡೆದ ಆಂತರಿಕ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj;, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ರೇವಂತ್&zwnj; ರೆಡ್ಡಿ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.&lt;/p&gt;&lt;h2&gt;ಕಾವೇರಿ ಹಾಗೂ ಗೋದಾವರಿ ನದಿ ಜೋಡಣೆಗೆ ಕರ್ನಾಟಕ ಸರ್ಕಾರ ಒಪ್ಪಿಗೆ&lt;/h2&gt;&lt;p&gt;ಕಾವೇರಿ ಹಾಗೂ ಗೋದಾವರಿ ನದಿ ಜೋಡಣೆಗೆ ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ. ಕೇಂದ್ರ ಸರ್ಕಾರ ಒಟ್ಟು 1 ಲಕ್ಷ ಕೋಟಿ ರು. ವೆಚ್ಚದಲ್ಲಿ ಯೋಜನೆ ಜಾರಿಗೆ ಮುಂದಾಗಿದ್ದು, ಶೇ.10ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ. ಇದಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಅವರು ಸರ್ಕಾರದ ಪರ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;ರಾಜ್ಯಕ್ಕೆ ಗೋದಾವರಿಯಿಂದ 15.90 ಟಿಎಂಸಿ ನೀರು ಹಂಚಿಕೆಯಾಗಿದ್ದು, ಇದನ್ನು ಹೆಚ್ಚಳ ಮಾಡುವ ಬಗ್ಗೆ ಮೌಖಿಕವಾಗಿ ಶಿವಕುಮಾರ್&zwnj; ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಇಂದಿರಾಗಾಂಧಿ ಅವಧಿಯಲ್ಲಿ (1983) ಎನ್&zwnj;.ಟಿ.ರಾಮರಾವ್&zwnj; ನಾಯಕತ್ವದಲ್ಲಿ ಅವಿಭಜಿತ ಆಂಧ್ರಪ್ರದೇಶ, ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಒಟ್ಟಾಗಿ ಚೆನ್ನೈನ ಕುಡಿಯುವ ನೀರಿಗಾಗಿ 15 ಟಿಎಂಸಿ ಅಡಿ ನೀರು ಒದಗಿಸಿದ್ದವು. ಇಂಥ ಐತಿಹಾಸಿಕ ಒಕ್ಕೂಟ ವ್ಯವಸ್ಥೆಯ ಉದಾಹರಣೆ ದಕ್ಷಿಣ ರಾಜ್ಯಗಳ ಮುಂದಿದೆ. ಇದೇ ಒಕ್ಕೂಟ ವ್ಯವಸ್ಥೆಯ ಪೂರಕ ಮನೋಭಾವದೊಂದಿಗೆ ಮುಂದಿನ ಹಂತದಲ್ಲಿ ಚರ್ಚಿಸಿ ಕಾವೇರಿ-ಗೋದಾವರಿ ನದಿ ಜೋಡಣೆಗೆ ಒಪ್ಪಿಗೆ ನೀಡೋಣ. ಇದರಿಂದ ಒಂದು ರಾಜ್ಯದಲ್ಲಿ ಬರ ಬಂದರೆ ಮತ್ತೊಂದು ರಾಜ್ಯಕ್ಕೆ ನೆರವಾಗಬಹುದು ಎಂದು ಮೂರೂ ಮಂದಿ ಮುಖ್ಯಮಂತ್ರಿಗಳು ಚರ್ಚಿಸಿದ್ದಾರೆ ಎನ್ನಲಾಗಿದೆ.&lt;/p&gt;&lt;h3&gt;ಗಂಗಾ-ಕಾವೇರಿ ಜೋಡಣೆ ಬಗ್ಗೆಯೂ ಚರ್ಚೆ&lt;/h3&gt;&lt;p&gt;ಕೇಂದ್ರ ಸಚಿವ ಸಿ.ಆರ್&zwnj;.ಪಾಟೀಲ್&zwnj; ಅವರು ಸಿಎಂ ಡಿ.ಕೆ.ಶಿವಕುಮಾರ್ ಜತೆ ಗಂಗಾ ಹಾಗೂ ಕಾವೇರಿ ನದಿಗಳ ಜೋಡಣೆ ಬಗ್ಗೆಯೂ ಚರ್ಚಿಸಿದ್ದಾರೆ. ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದ ನಡುವಿನ ಕೆನ್&zwnj; ಬೆತ್ವಾ ಯೋಜನೆ, ರಾಜಸ್ತಾನ ಹಾಗೂ ಮಧ್ಯಪ್ರದೇಶದ ನಡುವಿನ ಪಾರ್ವತಿ-ಕಾಳಿ ಸಿಂಧು-ಚಂಬಲ್&zwnj; ನದಿ ಜೋಡಣೆಗಳನ್ನು ಯಶಸ್ವಿಯಾಗಿ ಕೈಗೆತ್ತಿಕೊಳ್ಳಲಾಗಿದೆ. ಇದೇ ಮಾದರಿಯಲ್ಲಿ ಗಂಗಾ-ಕಾವೇರಿ ನದಿ ಜೋಡಣೆಗೂ ಕೇಂದ್ರ ಉದ್ದೇಶಿಸಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.&lt;/p&gt;]]></content:encoded>
            <category><![CDATA[bengaluru]]></category>
            <dc:creator>Sujatha NR</dc:creator>
            <atom:link href="https://www.kannadaprabha.in/karnataka-news/bengaluru-news/state-government-gives-in-principle-oral-approval-for-the-cauvery-godavari-river-linking-project/articleshow-w5ybyai"/>
        </item>
        <item>
            <title><![CDATA[ಕೇಂದ್ರದಿಂದ ಯೋಜನೆ, ಅನುದಾನ  ಸೆಳೆಯಲು ದಿಲ್ಲಿ ಮಟ್ಟದಲ್ಲಿ ತಂಡ]]></title>
            <link>https://www.kannadaprabha.in/karnataka-news/bengaluru-news/team-to-be-set-up-in-delhi-to-secure-central-schemes-and-funds/articleshow-823shnm</link>
            <guid isPermaLink="true">https://www.kannadaprabha.in/karnataka-news/bengaluru-news/team-to-be-set-up-in-delhi-to-secure-central-schemes-and-funds/articleshow-823shnm</guid>
            <pubDate>Sat, 27 Jun 2026 08:18:50 +0530</pubDate>
            <description><![CDATA[ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಯೋಜನೆಗಳು ಹಾಗೂ ಅನುದಾನ ತರಲು ದೆಹಲಿ ಮಟ್ಟದಲ್ಲಿ ಪ್ರತ್ಯೇಕ ಅಧಿಕಾರಿಗಳ ತಂಡ ರಚನೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಐಎಎಸ್‌ ಅಧಿಕಾರಿಗಳು ಅಥವಾ ನಿವೃತ್ತ ಅಧಿಕಾರಿಗಳ ತಂಡ ರಚಿಸಲು ಸರ್ಕಾರ ತೀರ್ಮಾನಿಸಿದೆ]]></description>
            <media:content url="https://static-gi.asianetnews.com/images/01kv49pen8gct90780d58v95wf/cm-dk-shivakumar-1781482076840.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಬೆಂಗಳೂರು : &amp;nbsp;&lt;/strong&gt;ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಯೋಜನೆಗಳು ಹಾಗೂ ಅನುದಾನ ತರಲು ದೆಹಲಿ ಮಟ್ಟದಲ್ಲಿ ಪ್ರತ್ಯೇಕ ಅಧಿಕಾರಿಗಳ ತಂಡ ರಚನೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.&lt;/p&gt;&lt;h2&gt;ಕೇಂದ್ರ ಸರ್ಕಾರದೊಂದಿಗೆ ಸೌಹಾರ್ದಯುತ ಸಂಬಂಧ&lt;/h2&gt;&lt;p&gt;ಕೇಂದ್ರ ಸರ್ಕಾರದೊಂದಿಗೆ ಸೌಹಾರ್ದಯುತ ಸಂಬಂಧ ಹೊಂದುವ ಸಿಎಂ ಡಿ.ಕೆ. ಶಿವಕುಮಾರ್&zwnj; ಅವರ ಹೊಸ ರಾಜತಾಂತ್ರಿಕ ನಿಲುವಿಗೆ ಪೂರಕವಾಗಿ ರಾಜ್ಯ ಸರ್ಕಾರ ಈ ನಿಲುವು ತಳೆದಿದ್ದು, ಹಿರಿಯ ಐಎಎಸ್&zwnj; ಅಧಿಕಾರಿಗಳು ಅಥವಾ ನಿವೃತ್ತ ಅಧಿಕಾರಿಗಳ ತಂಡ ರಚಿಸಲು ಸರ್ಕಾರ ತೀರ್ಮಾನಿಸಿದೆ. ಇವರು ದೆಹಲಿ ಮಟ್ಟದಲ್ಲಿ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಂದ ಯೋಜನೆ ಹಾಗೂ ಅನುದಾನ ತರುವ ರೀತಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.&lt;/p&gt;&lt;h3&gt;ತಂಡ ರಚನೆಗೆ ಸಿಎಂ ಮುಂದಾಗಿದ್ದಾರೆ&lt;/h3&gt;&lt;p&gt;ಈವರೆಗೆ ದೆಹಲಿ ಮಟ್ಟದಲ್ಲಿರುವ ಅಧಿಕಾರಿಗಳು ರಾಜ್ಯದಿಂದ ತೆರಳುವ ಪ್ರತಿನಿಧಿಗಳ ಸ್ವಾಗತ ಹಾಗೂ ಉಪಚಾರ ಸಮಿತಿಯಂತೆ ಕೆಲಸ ಮಾಡುತ್ತಿದ್ದರು. ಆದರೆ ಕೇಂದ್ರ ಸಚಿವರು ರಾಜ್ಯದಿಂದ ಯಾವುದೇ ಪ್ರಸ್ತಾವನೆಗಳು ಬರುತ್ತಿಲ್ಲ. ಪ್ರಸ್ತಾವನೆಯೇ ಬಾರದೆ ಅನುದಾನ ನೀಡುವುದಾಗಿ ಹೇಗೆ? ಎಂಬ ಪ್ರಶ್ನೆಗಳು ಉದ್ಬವಿಸಿದ್ದವು. ಈ ಹಿನ್ನೆಲೆಯಲ್ಲಿ ತಂಡ ರಚನೆಗೆ ಸಿಎಂ ಮುಂದಾಗಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;ಎಚ್ಚೆತ್ತಿರುವ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಅನುದಾನ ಸೆಳೆಯುವ ಬಗ್ಗೆ ಕೆಲಸ ಮಾಡಲ ತಂಡ ರಚಿಸಲಿದೆ. ಪ್ರಸ್ತುತ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್&zwnj;ಗೆ ಯೋಜನೆ, ಅನುದಾನ ಹರಿಯುತ್ತಿದೆ. ಅದೇ ರೀತಿ ರಾಜ್ಯಕ್ಕೆ ಅವಕಾಶಗಳನ್ನು ಸೆಳೆಯಲು ತಂಡದ ಉಪಯೋಗ ಪಡೆಯಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್&zwnj; ಅವರು ಮುಂದಾಗಿದ್ದಾರೆ ಎನ್ನಲಾಗಿದೆ.&lt;/p&gt;]]></content:encoded>
            <category><![CDATA[bengaluru]]></category>
            <dc:creator>Sujatha NR</dc:creator>
            <atom:link href="https://www.kannadaprabha.in/karnataka-news/bengaluru-news/team-to-be-set-up-in-delhi-to-secure-central-schemes-and-funds/articleshow-823shnm"/>
        </item>
        <item>
            <title><![CDATA[ಮೇಕೆದಾಟು ಯೋಜನೆಗೆ  10-15 ದಿನದಲ್ಲಿ ಡಿಪಿಆರ್‌]]></title>
            <link>https://www.kannadaprabha.in/karnataka-news/bengaluru-news/dpr-for-the-mekedatu-project-to-be-ready-in-10-15-days/articleshow-3x27yvw</link>
            <guid isPermaLink="true">https://www.kannadaprabha.in/karnataka-news/bengaluru-news/dpr-for-the-mekedatu-project-to-be-ready-in-10-15-days/articleshow-3x27yvw</guid>
            <pubDate>Sat, 27 Jun 2026 07:54:28 +0530</pubDate>
            <description><![CDATA[ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದ ಬೆನ್ನಲ್ಲೆ ರಾಜ್ಯ ಸರ್ಕಾರವು ಕೇಂದ್ರ ಜಲ ಆಯೋಗದ ಎದುರು ಪರಿಷ್ಕೃತ ಡಿಪಿಆರ್‌ ಸಲ್ಲಿಸಲು ಸಿದ್ಧತೆ ನಡೆಸಿದೆ.]]></description>
            <media:content url="https://static-gi.asianetnews.com/images/01fvadzpz245455qjh8rmhvff4/rgrg.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;strong&gt;ಬೆಂಗಳೂರು : &amp;nbsp;&lt;/strong&gt;ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್&zwnj; ವಜಾಗೊಳಿಸಿದ ಬೆನ್ನಲ್ಲೆ ರಾಜ್ಯ ಸರ್ಕಾರವು ಕೇಂದ್ರ ಜಲ ಆಯೋಗದ ಎದುರು ಪರಿಷ್ಕೃತ ಡಿಪಿಆರ್&zwnj; ಸಲ್ಲಿಸಲು ಸಿದ್ಧತೆ ನಡೆಸಿದೆ.&lt;/p&gt;&lt;h2&gt;ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್&zwnj; ವಜಾಗೊಳಿಸಿದೆ&lt;/h2&gt;&lt;p&gt;ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ಇತ್ತೀಚೆಗೆ ಸುಪ್ರೀಂಕೋರ್ಟ್&zwnj; ವಜಾಗೊಳಿಸಿದೆ. ಅಲ್ಲದೆ, ಕರ್ನಾಟಕ ತಮ್ಮ ಜಾಗದಲ್ಲಿ ತಾವು ಯೋಜನೆ ಮಾಡಿಕೊಳ್ಳುವುದಕ್ಕೆ ತಮಿಳುನಾಡು ಆಕ್ಷೇಪಣೆ ಸಲ್ಲಿಸಲು ಬರುವುದಿಲ್ಲ. ನಿಮ್ಮ ಪಾಲಿನ ನೀರು ಅವರು ಬಿಡುತ್ತಿದ್ದಾರೆ. ಇದರ ಬಗ್ಗೆ ಕೇಂದ್ರ ಜಲ ಆಯೋಗ ನಿರ್ಧಾರ ಮಾಡಬೇಕು ಎಂದು ಹೇಳಿದೆ.&lt;/p&gt;&lt;h3&gt;ರಾಜ್ಯದ ಪಾಲಿಗೆ ದೊಡ್ಡ ಗೆಲುವಾಗಿದೆ&lt;/h3&gt;&lt;p&gt;ಇದು ರಾಜ್ಯದ ಪಾಲಿಗೆ ದೊಡ್ಡ ಗೆಲುವಾಗಿದ್ದು, ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಈ ಯೋಜನೆಗೆ ಇದ್ದ ಪ್ರಮುಖ ಅಡಚಣೆ ನಿವಾರಣೆಯಾದಂತಾಗಿದೆ. ಹೀಗಾಗಿ 10-15 ದಿನಗಳಲ್ಲಿ ಮತ್ತೆ ಪರಿಷ್ಕೃತ ಡಿಪಿಆರ್&zwnj; ಆಯೋಗದ ಎದುರು ಸಲ್ಲಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.&lt;/p&gt;]]></content:encoded>
            <category><![CDATA[bengaluru]]></category>
            <dc:creator>Sujatha NR</dc:creator>
            <atom:link href="https://www.kannadaprabha.in/karnataka-news/bengaluru-news/dpr-for-the-mekedatu-project-to-be-ready-in-10-15-days/articleshow-3x27yvw"/>
        </item>
        <item>
            <title><![CDATA[ಡಿಕೆಶಿ ಸರ್ಕಾರದ 100 ದಿನ ಕಾರ್ಯಕ್ರಮಕ್ಕೆ ಸಿದ್ಧತೆ]]></title>
            <link>https://www.kannadaprabha.in/karnataka-news/bengaluru-news/preparations-underway-for-the-dks-governments-100-day-programme/articleshow-d423abn</link>
            <guid isPermaLink="true">https://www.kannadaprabha.in/karnataka-news/bengaluru-news/preparations-underway-for-the-dks-governments-100-day-programme/articleshow-d423abn</guid>
            <pubDate>Sat, 27 Jun 2026 07:50:03 +0530</pubDate>
            <description><![CDATA[ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ತಮ್ಮ ಸರ್ಕಾರ 100 ದಿನ ಪೂರೈಸುವ ಸೆಪ್ಟೆಂಬರ್‌ ಎರಡನೇ ವಾರದಲ್ಲಿ ಮಹತ್ವದ ಯೋಜನೆಗಳನ್ನು ಪ್ರಕಟಿಸಲು ಸಿದ್ಧತೆ ನಡೆಸಿದ್ದು, ಈ ಬಗ್ಗೆ ಮುಂದಿನ ಎರಡು ದಿನಗಳಲ್ಲಿ ಸಭೆ ನಡೆಸಿ ನೀಲನಕ್ಷೆ ಸಿದ್ಧಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.]]></description>
            <media:content url="https://static-gi.asianetnews.com/images/01kvdxznvvkrber3ewje6r04aw/cj-1781805340539.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಬೆಂಗಳೂರು : &amp;nbsp;&lt;/strong&gt;ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಅವರು ತಮ್ಮ ಸರ್ಕಾರ 100 ದಿನ ಪೂರೈಸುವ ಸೆಪ್ಟೆಂಬರ್&zwnj; ಎರಡನೇ ವಾರದಲ್ಲಿ ಮಹತ್ವದ ಯೋಜನೆಗಳನ್ನು ಪ್ರಕಟಿಸಲು ಸಿದ್ಧತೆ ನಡೆಸಿದ್ದು, ಈ ಬಗ್ಗೆ ಮುಂದಿನ ಎರಡು ದಿನಗಳಲ್ಲಿ ಸಭೆ ನಡೆಸಿ ನೀಲನಕ್ಷೆ ಸಿದ್ಧಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.&lt;/p&gt;&lt;p&gt;ವಿನೂತನ ಹಾಗೂ ವಿಶಿಷ್ಟ ಯೋಜನೆಗಳನ್ನು ಪ್ರಕಟಿಸಲು ಉತ್ಸುಕರಾಗಿದ್ದು, ಈ ನಿಟ್ಟಿನಲ್ಲಿ ಸರಣಿ ಸಭೆಗಳ ಮೂಲಕ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಪಂಚ ಗ್ಯಾರಂಟಿ ಯೋಜನೆಗಳಂತಹ ಮಾದರಿ ಯೋಜನೆಗಳನ್ನು ನೀಡುವ ಮೂಲಕ ವಿಶಿಷ್ಟ ಛಾಪು ಒತ್ತಲು ಡಿ.ಕೆ.ಶಿವಕುಮಾರ್&zwnj; ಅಣಿಯಾಗಿದ್ದಾರೆ. ಇದಕ್ಕಾಗಿ ಮೊದಲು ತಮಗಿರುವ ಆರ್ಥಿಕ ಮಿತಿ ಅರಿಯಲು ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಗತಿಯ ಅಧ್ಯಯನಕ್ಕೆ ಇಳಿದಿದ್ದಾರೆ ಎಂದು ತಿಳಿದುಬಂದಿದೆ.&lt;/p&gt;&lt;h3&gt;ಸಂಪನ್ಮೂಲ ಕ್ರೂಢೀಕರಣದ ಬಗ್ಗೆ ನೀಲನಕ್ಷೆ&lt;/h3&gt;&lt;p&gt;ಹಿಂದಿನ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸರ್ಕಾರವು ಜಲಸಂಪನ್ಮೂಲ ಇಲಾಖೆಯಲ್ಲೇ 1 ಲಕ್ಷ ಕೋಟಿಗೂ ಹೆಚ್ಚು ಕಾಮಗಾರಿಗಳಿಗೆ ಅನುಮೋದನೆ ನೀಡಿ ಹೋಗಿದ್ದಾರೆ. ಇಂತಹ ಸಂಕಷ್ಟದ ಸ್ಥಿತಿಯಲ್ಲೂ ಸಿದ್ದರಾಮಯ್ಯ ಅವರು ಸಮರ್ಥವಾಗಿ ಆರ್ಥಿಕ ಸ್ಥಿತಿಯನ್ನು ನಿಭಾಯಿಸಿದ್ದಾರೆ. ಜತೆಗೆ ಪಂಚ ಗ್ಯಾರಂಟಿ ಯೋಜನೆ, ಅಭಿವೃದ್ಧಿ ಯೋಜನೆ ನೀಡಿದ್ದು, ಇವುಗಳನ್ನು ನಿರ್ವಹಿಸುವ ಜತೆಗೆ ಹೊಸ ಯೋಜನೆಗಳನ್ನು ನಿರ್ವಹಿಸಲು ಅಗತ್ಯವಿರುವ ಸಂಪನ್ಮೂಲ ಕ್ರೂಢೀಕರಣದ ಬಗ್ಗೆ ನೀಲನಕ್ಷೆ ಸಿದ್ಧಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;h2&gt;&lt;strong&gt;ಭಾರತ್&zwnj; ಜೋಡೋ ಸಂಘಕ್ಕೆ ಹಣ:&lt;/strong&gt;&lt;/h2&gt;&lt;p&gt;ಆರ್&zwnj;ಎಸ್&zwnj;ಎಸ್&zwnj; ನೂರಾರು ಶಿಕ್ಷಣ ಸಂಸ್ಥೆ, ಜಾಗಗಳನ್ನು ಮಾಡಿಕೊಂಡಿದೆ. ತಳಮಟ್ಟದಿಂದ ತಮ್ಮವರನ್ನು ರೂಪಿಸುವ ಕೆಲಸ ಮಾಡುತ್ತಿದೆ. ಇದೇ ರೀತಿ ಕಾಂಗ್ರೆಸ್&zwnj; ಸರ್ಕಾರದಿಂದ ಪಕ್ಷಾತೀತವಾಗಿ ಯುವಕರನ್ನು ಒಗ್ಗೂಡಿಸಲು ಭಾರತ್ ಜೋಡೋ ಸಂಘಕ್ಕೆ ಹಣ ನೀಡಲು ತೀರ್ಮಾನಿಸಿದ್ದು, ಶತಾಯಗತಾಯ ಇದಕ್ಕೆ ಹಣ ಹೊಂದಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.&lt;/p&gt;&lt;p&gt;- ಸೆಪ್ಟೆಂಬರ್&zwnj; 2ನೇ ವಾರದಲ್ಲಿ ಸಿಎಂ ಆಗಿ 100 ದಿನ ಪೂರೈಸಲಿರುವ ಡಿ.ಕೆ.ಶಿವಕುಮಾರ್&zwnj; । ಈ ವೇಳೆ ಮಹತ್ವದ ಯೋಜನೆಗಳ ಘೋಷಣೆ&lt;/p&gt;&lt;p&gt;- ಈ ಬಗ್ಗೆ ಮುಂದಿನ 2 ದಿನದಲ್ಲಿ ಮಹತ್ವದ ಸಭೆ ನಡೆಸಲಿರುವ ಮುಖ್ಯಮಂತ್ರಿ । ಆ ಸಭೆಯಲ್ಲಿ ನೀಲನಕ್ಷೆ ಸಿದ್ಧಪಡಿಸಲು ನಿರ್ಧಾರ: ಮೂಲಗಳು&lt;/p&gt;]]></content:encoded>
            <category><![CDATA[bengaluru]]></category>
            <dc:creator>Sujatha NR</dc:creator>
            <atom:link href="https://www.kannadaprabha.in/karnataka-news/bengaluru-news/preparations-underway-for-the-dks-governments-100-day-programme/articleshow-d423abn"/>
        </item>
        <item>
            <title><![CDATA[1 ತಿಂಗಳಲ್ಲಿ 70 ಸಲ ಅಯೋಧ್ಯೆ ಹುಂಡಿಗೆ ಕನ್ನ! - ₹7.5 ಕೋಟಿ ಎಗರಿಸಿದ್ದ ಗ್ಯಾಂಗ್]]></title>
            <link>https://www.kannadaprabha.in/karnataka-news/bengaluru-news/ayodhya-temple-donation-boxes-robbed-70-times-in-a-month/articleshow-y4nlghs</link>
            <guid isPermaLink="true">https://www.kannadaprabha.in/karnataka-news/bengaluru-news/ayodhya-temple-donation-boxes-robbed-70-times-in-a-month/articleshow-y4nlghs</guid>
            <pubDate>Sat, 27 Jun 2026 07:45:20 +0530</pubDate>
            <description><![CDATA[ದೃಶ್ಯ ಸೆರೆಯಾಗದಂತೆ ಒಬ್ಬ ಸಿಸಿಟೀವಿಗೆ ಅಡ್ಡಲಾಗಿ ನಿಂತರೆ, ಮತ್ತೊಬ್ಬ ಹುಂಡಿಯಿಂದ ಎಣಿಕೆಗೆಂದು ತೆಗೆದಿದ್ದ ಹಣ ಎಗರಿಸುತ್ತಿದ್ದ; ಮತ್ತೊಂದು ತಂಡ ನೋಟಿನ ಬಂಡಲ್‌ನೊಳಗೆ ಹೆಚ್ಚುವರಿ ನೋಟು ಸಿಕ್ಕಿಸಿ ಅದನ್ನು ಬ್ಯಾಂಕಿಗೆ ಜಮೆ ಮಾಡುವ ಮುನ್ನ ಲಪಟಾಯಿಸುತ್ತಿತ್ತು]]></description>
            <media:content url="https://static-gi.asianetnews.com/images/01kvqm125ednkjxhtxpvca6per/ayodhya-donation-scam-1782130444462.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;strong&gt;ಅಯೋಧ್ಯೆ:&lt;/strong&gt; ದೃಶ್ಯ ಸೆರೆಯಾಗದಂತೆ ಒಬ್ಬ ಸಿಸಿಟೀವಿಗೆ ಅಡ್ಡಲಾಗಿ ನಿಂತರೆ, ಮತ್ತೊಬ್ಬ ಹುಂಡಿಯಿಂದ ಎಣಿಕೆಗೆಂದು ತೆಗೆದಿದ್ದ ಹಣ ಎಗರಿಸುತ್ತಿದ್ದ; ಮತ್ತೊಂದು ತಂಡ ನೋಟಿನ ಬಂಡಲ್&zwnj;ನೊಳಗೆ ಹೆಚ್ಚುವರಿ ನೋಟು ಸಿಕ್ಕಿಸಿ ಅದನ್ನು ಬ್ಯಾಂಕಿಗೆ ಜಮೆ ಮಾಡುವ ಮುನ್ನ ಲಪಟಾಯಿಸುತ್ತಿತ್ತು. ಇನ್ನೊಂದು ತಂಡ, ದೇಗುಲ ಶೌಚಾಲಯದೊಳಗೇ ಹಣ ಬಚ್ಚಿಟ್ಟು ಬಳಿಕ ಎಲ್ಲರಿಗೂ ಹಂಚುವ ಕೆಲಸ ಮಾಡುತ್ತಿತ್ತು!&lt;/p&gt;&lt;p&gt;ಇದು ಕೋಟ್ಯಂತರ ಹಿಂದೂಗಳ ಶತಮಾನದ ಕನಸಾಗಿ ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಮಮಂದಿರದಲ್ಲಿ 8 ವಂಚಕರ ತಂಡ ನಗದು, ಚಿನ್ನ, ಬೆಳ್ಳಿ ಸೇರಿದಂತೆ ಅಮೂಲ್ಯ ವಸ್ತುಗಳನ್ನು ದೋಚುತ್ತಿದ್ದ ರೀತಿ!&lt;/p&gt;&lt;p&gt;ಹೌದು. ಇಲ್ಲಿನ ರಾಮಮಂದಿರಕ್ಕೆ ಭಕ್ತರು ಹುಂಡಿ ಮೂಲಕ ಸಲ್ಲಿಸಿದ ಕಾಣಿಕೆಯನ್ನು ಯಾವ ರೀತಿ ಕಳ್ಳತನ ಮಾಡಲಾಗುತ್ತಿತ್ತು ಎಂಬ ಬಗ್ಗೆ ವಿಶೇಷ ತನಿಖಾ ದಳದ ಪ್ರಾಥಮಿಕ ವರದಿಯು ಇಂಥ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದೆ. ಈ ವರ್ಷದ ಏ.27 ಮತ್ತು ಜೂ.5ರ ನಡುವೆ 70 ಬಾರಿ ಹಣ ಕದ್ದಿರುವುದು ಪತ್ತೆಯಾಗಿದೆ. ಇದುವರೆಗೆ ಅಂದಾಜು 7.5 ಕೋಟಿ ರು. ನಗದು ಮತ್ತು ಚಿನ್ನಾಭರಣದ ದೋಚಿದ ಸಂಶಯವಿದೆ.&lt;/p&gt;&lt;p&gt;&lt;strong&gt;3 ವಿಧದಲ್ಲಿ ಕನ್ನ:&lt;/strong&gt;&lt;/p&gt;&lt;p&gt;ಹುಂಡಿಯ ಹಣ ಎಣಿಕೆ ಶುರುವಾದಾಗ ಒಬ್ಬ ಸಿಬ್ಬಂದಿ ಉದ್ದೇಶಪೂರ್ವಕವಾಗಿ ಸಿಸಿ ಕ್ಯಾಮೆರಾಗೆ ಅಡ್ಡಲಾಗಿ ನಿಂತು, ಲೆಕ್ಕ ಮಾಡುತ್ತಿರುವುದು ಕಾಣದಂತೆ ಮರೆ ಮಾಡುತ್ತಿದ್ದರು. ಆಗ ಎಣಿಕೆಯಲ್ಲಿ ತೊಡಗಿದ್ದ ಸಿಬ್ಬಂದಿ ಕೆಲ ನೋಟುಗಳನ್ನು ತಮ್ಮ ಉಡುಪುಗಳನ್ನು ಮುಚ್ಚಿಟ್ಟುಕೊಳ್ಳುತ್ತಿದ್ದರು.&lt;/p&gt;&lt;p&gt;ಕೆಲವೊಮ್ಮೆ ಸಿಬ್ಬಂದಿ, ಬಂಡಲ್&zwnj;ಗೆ ಒಂದಿಷ್ಟು ಹೆಚ್ಚುವರಿ ನೋಟುಗಳನ್ನು ಸೇರಿಸುತ್ತಿದ್ದರು. ಬಳಿಕ ಅದನ್ನು ಬ್ಯಾಂಕ್&zwnj;ಗೆ ಜಮೆ ಮಾಡಲು ಒಯ್ಯುವಾಗ, ತಾವು ಸೇರಿಸಿದ್ದ ನೋಟುಗಳನ್ನು ತೆಗೆದುಕೊಳ್ಳುತ್ತಿದ್ದರು.&lt;/p&gt;&lt;p&gt;ಕದ್ದ ಹಣವನ್ನು ನೇರವಾಗಿ ದೇವಸ್ಥಾನದಿಂದ ಹೊರಗೆ ಒಯ್ಯಲಾಗದ ಕಾರಣ, ಅದನ್ನು ದೇವಳದ ಆವರಣದಲ್ಲೇ ಇರುವ ಶೌಚಾಲಯದಲ್ಲಿ ಇಡಲಾಗುತ್ತಿತ್ತು. ಬಳಿಕ ಸಮಯ ಸಾಧಿಸಿ, ಅಲ್ಲಿಂದ ಸಾಗಿಸಲಾಗುತ್ತಿತ್ತು. ಆ ಮೊತ್ತವನ್ನು, ಕಳ್ಳತನದಲ್ಲಿ ಭಾಗಿಯಾದ ಮತ್ತು ಸಹಕರಿಸಿದ ಸಿಬ್ಬಂದಿ ತಮ್ಮತಮ್ಮಲ್ಲೇ ಹಂಚಿಕೊಳ್ಳುತ್ತಿದ್ದರು.&lt;/p&gt;&lt;p&gt;&lt;strong&gt;ಆಭರಣ ಕೂಡ ಕಳವು:&lt;/strong&gt;&lt;/p&gt;&lt;p&gt;ಕಾಣಿಕೆಯಾಗಿ ಬಂದ ನಗದಿನ ಜತೆಗೆ ದಾನವಾಗಿ ಕೊಡಲಾದ ಚಿನ್ನ-ಬೆಳ್ಳಿಯ ಆಭರಣಗಳನ್ನೂ ಸಿಬ್ಬಂದಿ ಕದಿಯುತ್ತಿದ್ದರು. ಭಕ್ತರು ಬಾಲರಾಮನಿಗೆಂದು ಅರ್ಪಿಸುತ್ತಿದ್ದ ಓಲೆ, ನತ್ತು, ಬಳೆ, ಗೆಜ್ಜೆ ಇತ್ಯಾದಿಗಳನ್ನು ಕಳವು ಮಾಡಲಾಗಿದೆ.&lt;/p&gt;&lt;p&gt;&lt;strong&gt;ಅಧಿಕಾರಿಗಳ ನಿರ್ಲಕ್ಷ:&lt;/strong&gt;&lt;/p&gt;&lt;p&gt;ಭದ್ರತೆಯ ದೃಷ್ಟಿಯಿಂದ, ದೇವಸ್ಥಾನದಿಂದ ಹೊರಹೋಗುವ ವೇಳೆ ಸಿಬ್ಬಂದಿಯ ತಪಾಸಣೆ ನಡೆಸುವುದು ಕಡ್ಡಾಯ. ಮೊದಮೊದಲು ಇದರ ಪಾಲನೆಯಾಗುತ್ತಿತ್ತಾದರೂ, ಬಳಿಕ ಅನುದಿನದ ತಪಾಸಣೆಯನ್ನು ಸರಿಯಾಗಿ ನಡೆಸಲಾಗುತ್ತಿರಲಿಲ್ಲ. ಇದನ್ನು ಕಂಡುಕೊಂಡ ಸಿಬ್ಬಂದಿ, ತಮ್ಮ ವಸ್ತ್ರಗಳೊಳಗೇ ನಗದನ್ನು ಇಟ್ಟುಕೊಂಡು ಹೋಗುತ್ತಿದ್ದರು.&lt;/p&gt;&lt;p&gt;&lt;strong&gt;ಸಂಶಯ ಬಂದಿದ್ದು ಹೇಗೆ?:&lt;/strong&gt;&lt;/p&gt;&lt;p&gt;ನಿಯಮಿತವಾಗಿ ಬ್ಯಾಂಕ್&zwnj;ಗೆ ಜಮೆ ಮಾಡಲಾಗುತ್ತಿದ್ದ ಕಾಣಿಕೆ ಹಣದ ಕಡತಗಳ ಪರಿಶೀಲನೆ ವೇಳೆ, ಲೆಕ್ಕಾಚಾರದಲ್ಲಿ ಲೋಪವಾಗಿರುವ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಗೆ ಸಂಶಯ ಬಂದಿತ್ತು. 6ರಿಂದ 7 ಲಕ್ಷ ರು. ವರೆಗೆ ಸಂಗ್ರಹಿಸಬಹುದಾದ ಹುಂಡಿಯಲ್ಲಿ 500 ಮುಖಬೆಲೆಯ ನೋಟುಗಳ ಸಂಖ್ಯೆ ನಿರೀಕ್ಷೆಗಿಂತ ತುಂಬಾ ಕಡಿಮೆ ಇರುತ್ತಿದ್ದವು. ಅನುಮಾನ ಗಾಢವಾಗುತ್ತಿದ್ದಂತೆ ವಂಚನೆಯ ಪತ್ತೆಗಾಗಿ, ಹಣ ಲೆಕ್ಕ ಮಾಡಲಾಗುತ್ತಿದ್ದ ಕೋಣೆಯಲ್ಲಿ ಗೌಪ್ಯ ಕ್ಯಾಮೆರಾಗಳನ್ನು ಅಳವಡಿಸಲಾಯಿತು.&lt;/p&gt;&lt;p&gt;&lt;strong&gt;ತಿಂಗಳಲ್ಲಿ 70 ಬಾರಿ ಕಳ್ಳತನ&lt;/strong&gt;&lt;/p&gt;&lt;p&gt;ಹೀಗೆ ರಹಸ್ಯವಾಗಿ ಅಳವಡಿಸಿದ್ದ ಸಿಸಿಟೀವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಈ ವರ್ಷದ ಏ.27 ಮತ್ತು ಜೂ.5ರ ನಡುವೆ 70 ಬಾರಿ ಹಣ ಕದ್ದಿರುವುದು ಪತ್ತೆಯಾಗಿದೆ. ಇದುವರೆಗೆ ಅಂದಾಜು 7.5 ಕೋಟಿ ರು. ನಗದು ಮತ್ತು ಚಿನ್ನಾಭರಣದ ದೋಚಿದ ಸಂಶಯವಿದೆ. ಈ ಪೈಕಿ ಸದ್ಯ 80 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಈ ಕಳ್ಳಾಟ, 2024ರ ಜನವರಿಯಲ್ಲಿ ದೇವಾಲಯ ಸಾರ್ವಜನಿಕರಿಗೆ ತೆರೆದ ಹಂತದಲ್ಲೇ ಆರಂಭವಾಗಿತ್ತು ಎಂದು ಎಸ್&zwnj;ಐಟಿ ತನ್ನ ವರದಿಯಲ್ಲಿ ತಿಳಿಸಿದೆ.&lt;/p&gt;&lt;h3&gt;ಕಳ್ಳರು ಇವರೇ:&lt;/h3&gt;&lt;p&gt;ಸಿಸಿಟೀವಿ ಪರಿಶೀಲಿಸಿದಾಗ, 8 ಸಿಬ್ಬಂದಿ ಕಳ್ಳತನದಲ್ಲಿ ತೊಡಗಿದ್ದು ಕಂಡುಬಂದಿದೆ. ಆದರೆ ಇವರನ್ನೆಲ್ಲಾ ನಿಯಂತ್ರಿಸುತ್ತಿದ್ದ ಕಾಣದ ಕೈಗಳು ಟಿನ್ನು ಯಾದವ್&zwnj; ಮತ್ತು ಸುಭಾಶ್&zwnj; ಶ್ರೀವಾಸ್ತವರದ್ದು ಎನ್ನಲಾಗಿದೆ. ಕಾಣಿಕೆ ಎಣಿಕೆಗೆ ಸಿಬ್ಬಂದಿಯನ್ನು ನೇಮಿಸುವ ಜವಾಬ್ದಾರಿ ಹೊತ್ತಿದ್ದ ಇವರು, ತಮ್ಮೊಂದಿಗೆ ಕೈಜೋಡಿಸಲು ಒಪ್ಪಿಕೊಂಡವರನ್ನು ಆ ಕೆಲಸಕ್ಕೆ ನಿಯೋಜಿಸುತ್ತಿದ್ದರು ಎಂದು ತಿಳಿದುಬಂದಿದೆ.&lt;/p&gt;&lt;h2&gt;ನಗದು, ಚಿನ್ನ, ಬೆಳ್ಳಿ ಕದ್ದ 8 ಆರೋಪಿಗಳು ಅರೆಸ್ಟ್&zwnj;&amp;nbsp;&lt;/h2&gt;&lt;p&gt;ಅಯೋಧ್ಯಾ: ಇಲ್ಲಿನ ರಾಮ ಮಂದಿರದ ದೇಣಿಗೆ ಹಣ ಲೂಟಿ ಮಾಡಿದ ಪ್ರಕರಣದಲ್ಲಿ ಎಲ್ಲ 8 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎಲ್ಲರನ್ನೂ ಜೂ.29ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿ ಕೋರ್ಟ್&zwnj; ಆದೇಶಿಸಿದೆ.&lt;/p&gt;&lt;p&gt;ಬಂಧಿತರ ಪೈಕಿ ದೇಣಿಗೆ ಎಣಿಕೆ ಕೆಲಸ ಮಾಡುತ್ತಿದ್ದ ರಾಮಶಂಕರ್ ಮಿಶ್ರಾ ಅಲಿಯಾಸ್ ತಿನ್ನು ಯಾದವ್&zwnj;, ರಾಮಶಂಕರ್ ಮಿಶ್ರಾ ಅಲಿಯಾಸ್ ರವಿ ಮಿಶ್ರಾ, ಈತನ ಪುತ್ರ ಅನುಕಲ್ಪ್ ಮಿಶ್ರಾ ಹಾಗೂ ಅಳಿಯ ಲವಕುಶ ಮಿಶ್ರಾ, ಸೋದರಳಿಯ ಮನೀಶ್ ಕುಮಾರ್ ಯಾದವ್, ದೇವಸ್ಥಾನದ ಅಟೆಂಡೆಂಟ್&zwnj; ಅವಿನಾಶ್&zwnj; ಶುಕ್ಲಾ, ಮಾಜಿ ಬ್ಯಾಂಕ್ ಉದ್ಯೋಗಿ ಹಾಗೂ ಕಾಣಿಕೆ ಎಣಿಕೆ ಸಿಬ್ಬಂದಿಯ ಉಸ್ತುವಾರಿ ವಹಿಸಿದ್ದ ಸುಭಾಷ್ ಶ್ರೀವಾಸ್ತವ ಹಾಗೂ ಹಣದ ರಸೀದಿಗಳನ್ನು ತಿರುಚಿರುವ ಆರೋಪ ಎದುರಿಸುತ್ತಿರುವ ಕರುಣೇಶ್ ಪಾಂಡೆ ಸೇರಿದ್ದಾರೆ.&lt;/p&gt;&lt;p&gt;ದೇಗುಲದ ಹುಂಡಿ ಹಣ ಎಣಿಸುವ ಹೊಣೆಯನ್ನು ಪ್ರಮುಖ ಬ್ಯಾಂಕೊಂದು ಹೊತ್ತುಕೊಂಡಿತ್ತು, ಇದಕ್ಕೆ ವಿವಿಧ ಏಜೆನ್ಸಿಗಳ ಮೂಲಕ ಜನರನ್ನು ನೇಮಕ ಮಾಡಿತ್ತು. ಇದೀಗ ಬಂಧಿತರ ಪೈಕಿ 6 ಜನರು ಇದೇ ಬ್ಯಾಂಕ್&zwnj;ನಿಂದ ನಿಯೋಜಿತರಾಗಿದ್ದರು. ಅವರಿಗೆ ಬ್ಯಾಂಕ್&zwnj; ಮೂಲಕವೇ ವೇತನ ಪಾವತಿಯಾಗುತ್ತಿತ್ತು ಎಂಬುದು ತಿಳಿದುಬಂದಿದೆ. ಇನ್ನು ತಿನ್ನು ಯಾದವ್&zwnj; ಟ್ರಸ್ಟ್&zwnj;ನ ಕಾರ್ಯದರ್ಶಿ ಚಂಪತ್&zwnj; ರಾಯ್&zwnj; ಅವರ ಮಾಜಿ ಕಾರು ಚಾಲಕ ಎಂದು ಖಚಿತವಾಗಿದೆ.&lt;/p&gt;&lt;p&gt;ಕಳವು ಹೇಗೆ?&lt;/p&gt;&lt;p&gt;1. ಹುಂಡಿ ತೆಗೆಯುವಾಗ ಅದರ ಬಳಿ ಸಿಸಿಟೀವಿಗೆ ಅಡ್ಡಲಾಗಿ ಒಬ್ಬ ನಿಂತರೆ ಮತ್ತೊಬ್ಬ ಹಣ ಎಗರಿಸುತ್ತಿದ್ದ&lt;/p&gt;&lt;p&gt;2. ನೋಟಿನ ಕಂತೆ ಹೆಚ್ಚುವರಿ ನೋಟು ಸೇರಿಸಿ, ಕಡಿಮೆ ಲೆಕ್ಕ ತೋರಿಸುತ್ತಿದ್ದರು. ಬಳಿಕ ಅದನ್ನು ಎಳೆದುಕೊಳ್ಳುತ್ತಿದ್ದರು&lt;/p&gt;&lt;p&gt;3. ಬೇರೆ ವಿಧಾನದಲ್ಲಿ ಕದ್ದ ಹಣವನ್ನು ದೇಗುಲದ ಶೌಚಾಲಯದೊಳಗೆ ಹಣ ಬಚ್ಚಿಟ್ಟು ಬಳಿಕ ಹಂಚಿಕೊಳ್ಳಲಾಗುತ್ತಿತ್ತು&lt;/p&gt;]]></content:encoded>
            <category><![CDATA[bengaluru]]></category>
            <dc:creator>Sujatha NR</dc:creator>
            <atom:link href="https://www.kannadaprabha.in/karnataka-news/bengaluru-news/ayodhya-temple-donation-boxes-robbed-70-times-in-a-month/articleshow-y4nlghs"/>
        </item>
        <item>
            <title><![CDATA[ಎನ್ನಾರೈ ಇಲಾಖೆ ಬದಲು ಹೂಡಿಕೆ  ಆಕರ್ಷಣೆಗೆ ಪ್ರತ್ಯೇಕ ಸಚಿವಾಲಯ]]></title>
            <link>https://www.kannadaprabha.in/karnataka-news/bengaluru-news/separate-ministry-for-investment-promotion-to-replace-the-nri-department/articleshow-awvoo82</link>
            <guid isPermaLink="true">https://www.kannadaprabha.in/karnataka-news/bengaluru-news/separate-ministry-for-investment-promotion-to-replace-the-nri-department/articleshow-awvoo82</guid>
            <pubDate>Sat, 27 Jun 2026 07:38:06 +0530</pubDate>
            <description><![CDATA[ರಾಜ್ಯದಲ್ಲಿ ‘ಅನಿವಾಸಿ ಭಾರತೀಯ ವ್ಯವಹಾರಗಳ ಇಲಾಖೆ’ (ಎನ್‌ಆರ್‌ಐ) ಬದಲಿಗೆ ಹೂಡಿಕೆ ಸೆಳೆಯುವ ಹಾಗೂ ಹೂಡಿಕೆದಾರರಿಗೆ ನೆರವಾಗುವ ಸಲುವಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.]]></description>
            <media:content url="https://static-gi.asianetnews.com/images/01kswcy53xrefc0xxybkct43ms/save-money-from-salary-5--1--1780143297661.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;strong&gt;ಬೆಂಗಳೂರು : &amp;nbsp;&lt;/strong&gt;ರಾಜ್ಯದಲ್ಲಿ &lsquo;ಅನಿವಾಸಿ ಭಾರತೀಯ ವ್ಯವಹಾರಗಳ ಇಲಾಖೆ&rsquo; (ಎನ್&zwnj;ಆರ್&zwnj;ಐ) ಬದಲಿಗೆ ಹೂಡಿಕೆ ಸೆಳೆಯುವ ಹಾಗೂ ಹೂಡಿಕೆದಾರರಿಗೆ ನೆರವಾಗುವ ಸಲುವಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.&lt;/p&gt;&lt;p&gt;ಅಲ್ಲದೆ, ಹೂಡಿಕೆ ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಲು ಏಕಗವಾಕ್ಷಿ ಪದ್ಧತಿಯನ್ನು ಸಮರ್ಪಕ ರೀತಿಯಲ್ಲಿ ಅನುಷ್ಠಾನ ಮಾಡಲು ಸಹ ತೀರ್ಮಾನಿಸಿದೆ. ಕಳೆದ ಸಚಿವ ಸಂಪುಟ ಸಭೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಎನ್&zwnj;ಆರ್&zwnj;ಐ ಇಲಾಖೆ ಸ್ಥಾಪನೆ ಬಗ್ಗೆ ಪ್ರಸ್ತಾವನೆ ಮಂಡಿಸಲಾಗಿತ್ತು.&lt;/p&gt;&lt;h2&gt;ಬಂಡವಾಳ ಸೆಳೆಯಲು ಈ ಕ್ರಮ:&lt;/h2&gt;&lt;p&gt;ಆದರೆ ಸಭೆಯಲ್ಲಿ ಎನ್ಆರ್&zwnj;ಐ ಬದಲಿಗೆ ಎಲ್ಲಾ ಹೂಡಿಕೆದಾರರನ್ನು ಸೆಳೆಯಲು ಹಾಗೂ ಅವರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಪ್ರತ್ಯೇಕ ಸಚಿವಾಲಯದ ಅಗತ್ಯವಿದೆ ಎಂಬ ಚರ್ಚೆಯಾಯಿತು. ಈ ಹಿನ್ನೆಲೆಯಲ್ಲಿ ಎನ್&zwnj;ಆರ್&zwnj;ಐ ಖಾತೆ ಬದಲಿಗೆ ವಿದೇಶಿ ಹೂಡಿಕೆದಾರರು ಹಾಗೂ ಬೃಹತ್&zwnj; ಹೂಡಿಕೆದಾರರಿಗೆ ನೆರವಾಗಲು ಪ್ರತ್ಯೇಕ ಸಚಿವಾಲಯ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಮೂಲಗಳು ಹೇಳಿವೆ.&lt;/p&gt;&lt;h3&gt;ವಿವಿಧ ಇಲಾಖೆಗಳ ಪ್ರತಿನಿಧಿಗಳು&lt;/h3&gt;&lt;p&gt;ಸಚಿವಾಲಯದಲ್ಲಿ ಬೃಹತ್ ಕೈಗಾರಿಕೆ, ಐಟಿ-ಬಿಟಿ, ನಗರಾಭಿವೃದ್ಧಿ ಸೇರಿ ವಿವಿಧ ಇಲಾಖೆಗಳ ಪ್ರತಿನಿಧಿಗಳು ಇರಲಿದ್ದಾರೆ. ಹೂಡಿಕೆದಾರರನ್ನು ಗೌರವದಿಂದ ನಡೆದುಕೊಳ್ಳುವುದು. ಅವರಿಗೆ ಸೂಕ್ತ ಸಮಯ ಕಾಯ್ದಿರಿಸುವುದು. ಹೂಡಿಕೆಗೆ ಸಮಸ್ಯೆ ಆಗದಂತೆ ಈಸ್&zwnj; ಆಫ್&zwnj; ಡುಯಿಂಗ್ ಬ್ಯುಸಿನೆಸ್&zwnj;ಗೆ ನೆರವಾಗಲು ಸಚಿವಾಲಯ ಕೆಲಸ ಮಾಡಲಿದೆ.&lt;/p&gt;]]></content:encoded>
            <category><![CDATA[bengaluru]]></category>
            <dc:creator>Sujatha NR</dc:creator>
            <atom:link href="https://www.kannadaprabha.in/karnataka-news/bengaluru-news/separate-ministry-for-investment-promotion-to-replace-the-nri-department/articleshow-awvoo82"/>
        </item>
        <item>
            <title><![CDATA[ಸರ್ಕಾರದ ನಿರ್ಧಾರಗಳ ಫೈನಲ್‌ಗೆ  ರಾಜಕೀಯ ವ್ಯವಹಾರಗಳ ಸಮಿತಿ]]></title>
            <link>https://www.kannadaprabha.in/karnataka-news/bengaluru-news/political-affairs-committee-to-have-the-final-say-on-government-decisions/articleshow-9gq04lu</link>
            <guid isPermaLink="true">https://www.kannadaprabha.in/karnataka-news/bengaluru-news/political-affairs-committee-to-have-the-final-say-on-government-decisions/articleshow-9gq04lu</guid>
            <pubDate>Sat, 27 Jun 2026 07:31:03 +0530</pubDate>
            <description><![CDATA[ಇಡೀ ರಾಜ್ಯ ಸರ್ಕಾರದ ಮೇಲೆ ಜನಾಭಿಪ್ರಾಯ ಸೃಷ್ಟಿಸುವಂಥ ನೀತಿ, ನಿರ್ಧಾರಗಳನ್ನು ಇಲಾಖೆ ಮಟ್ಟದ ಬದಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಜಾರಿಗೆ ತರುವ ಉದ್ದೇಶದಿಂದ ‘ರಾಜಕೀಯ ವ್ಯವಹಾರಗಳ ಸಮಿತಿ’ ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.]]></description>
            <media:content url="https://static-gi.asianetnews.com/images/01jynqqb01yce3fqm1s5av16p9/----------------------2025-06-26t143417.509-1750928698369.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು : &amp;nbsp;&lt;/strong&gt;ಇಡೀ ರಾಜ್ಯ ಸರ್ಕಾರದ ಮೇಲೆ ಜನಾಭಿಪ್ರಾಯ ಸೃಷ್ಟಿಸುವಂಥ ನೀತಿ, ನಿರ್ಧಾರಗಳನ್ನು ಇಲಾಖೆ ಮಟ್ಟದ ಬದಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಜಾರಿಗೆ ತರುವ ಉದ್ದೇಶದಿಂದ &lsquo;ರಾಜಕೀಯ ವ್ಯವಹಾರಗಳ ಸಮಿತಿ&rsquo; ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.&lt;/p&gt;&lt;p&gt;ಈ ಹಿಂದೆ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವ ಮೊದಲು ಕಾಂಗ್ರೆಸ್&zwnj; ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಿ ಬಳಿಕ ಸರ್ಕಾರ ತೀರ್ಮಾನಿಸುತ್ತಿತ್ತು. ಇತ್ತೀಚೆಗೆ ಇದು ಬದಲಾಗಿ ಇಲಾಖೆ ಮಟ್ಟದಲ್ಲೇ ಪ್ರಮುಖ ತೀರ್ಮಾನಗಳು ನಡೆದಿದ್ದವು.&lt;/p&gt;&lt;p&gt;ಸಚಿವರು ಮಹತ್ವದ ತೀರ್ಮಾನಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸದೆ ಕೈಗೊಳ್ಳುತ್ತಿರುವ ಪರಿಪಾಠ ಇತ್ತೀಚೆಗೆ ಬೆಳೆದಿದೆ. ಇಂಥ ತೀರ್ಮಾನಗಳಿಂದ ಇಡೀ ಸರ್ಕಾರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂಬ ಭಾವನೆ ಹಿನ್ನೆಲೆಯಲ್ಲಿ, ಇನ್ನು ಮುಂದೆ ಯಾವುದೇ ಮಹತ್ವದ ತೀರ್ಮಾನವನ್ನು ಸಚಿವರು ಏಕಾಏಕಿ ಕೈಗೊಳ್ಳುವಂತಿಲ್ಲ.&lt;/p&gt;&lt;p&gt;ಬದಲಾಗಿ, ರಾಜಕೀಯ ವ್ಯವಹಾರಗಳ ಸಮಿತಿ ಮುಂದೆ ಇಂಥ ವಿಚಾರಗಳನ್ನು ತಂದು ಕೂಲಂಕಷವಾಗಿ ಚರ್ಚಿಸಿ ನಂತರ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂಬ ಉದ್ದೇಶದಿಂದ ಈ ಸಮಿತಿ ರಚನೆಗೆ ಸರ್ಕಾರ ಮುಂದಾಗಿದೆ.&lt;/p&gt;&lt;h2&gt;&lt;strong&gt;ಕಾರ್ಮಿಕ ಇಲಾಖೆ ತೀರ್ಮಾನ ಪುನರ್ ಪರಿಶೀಲನೆ:&lt;/strong&gt;&lt;/h2&gt;&lt;p&gt;ಈ ಹಿಂದೆ ಕಾರ್ಮಿಕ ಇಲಾಖೆ ಕನಿಷ್ಠ ವೇತನವನ್ನು ಶೇ.70 ರಷ್ಟು ಹೆಚ್ಚಳ ಮಾಡಿ ತೀರ್ಮಾನಿಸಿತ್ತು. ಇದರಿಂದ ಔದ್ಯಮಿಕ ವಲಯಕ್ಕೆ ದೊಡ್ಡ ಪೆಟ್ಟು ಬಿದ್ದಿದ್ದು, ಸರ್ಕಾರಕ್ಕೂ ಅನಾನುಕೂಲ ಉಂಟಾಗಿದೆ. ಹೀಗಾಗಿ ಇಂತಹ ತೀರ್ಮಾನಗಳನ್ನು ಮಾಡುವ ಮೊದಲು ಚರ್ಚಿಸಲು ರಾಜಕೀಯ ವ್ಯವಹಾರಗಳ ಸಮಿತಿ ರಚನೆಗೆ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;ಕಾರ್ಮಿಕ ಇಲಾಖೆಯ ಈ ತೀರ್ಮಾನದಂತೆ ಇನ್ನೂ ಕೆಲ ಇಲಾಖೆಗಳಲ್ಲಿ ಸಚಿವರೇ ತೀರ್ಮಾನ ಮಾಡಿರುವ ನೀತಿಗಳನ್ನು ಪುನರ್&zwnj; ಪರಿಶೀಲಿಸಲು ಸಾಧ್ಯವೇ ಎಂದೂ ಸಹ ಸರ್ಕಾರ ಚಿಂತನೆ ನಡೆಸಿದೆ.&lt;/p&gt;&lt;h3&gt;ಯಾಕೆ ಸಮಿತಿ ರಚನೆ?&lt;/h3&gt;&lt;p&gt;- ಹಿಂದೆ ಪ್ರಮುಖ ನಿರ್ಧಾರ ಕೈಗೊಳ್ಳುವ ಮೊದಲು ಕಾಂಗ್ರೆಸ್&zwnj; ಸಿಎಲ್ಪಿ ಸಭೆಯಲ್ಲಿ ಚರ್ಚಿಸಿ ಬಳಿಕ ಸರ್ಕಾರ ತೀರ್ಮಾನಿಸುತ್ತಿತ್ತು.&lt;/p&gt;&lt;p&gt;- ಇತ್ತೀಚೆಗೆ ಆಯಾ ಇಲಾಖೆ ಮಟ್ಟದಲ್ಲೇ ಪ್ರಮುಖ ತೀರ್ಮಾನಗಳು ನಡೆದಿದ್ದವು. ಸಚಿವರೇ ಪ್ರಮುಖ ನಿರ್ಧಾರ ಕೈಗೊಳ್ಳುತ್ತಿದ್ದರು.&lt;/p&gt;&lt;p&gt;- ಇಂಥ ತೀರ್ಮಾನಗಳಿಂದ ಸರ್ಕಾರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂಬ ಭಾವನೆ ಹಿನ್ನೆಲೆಯಲ್ಲಿ ಈ ಕ್ರಮ&lt;/p&gt;&lt;p&gt;- ಹಿಂದೆ ಕಾರ್ಮಿಕ ಇಲಾಖೆ ಕನಿಷ್ಠ ವೇತನ ಶೇ.70 ರಷ್ಟು ಹೆಚ್ಚಿಸಿತ್ತು. ಇದರಿಂದ ಔದ್ಯಮಿಕ ವಲಯಕ್ಕೆ ದೊಡ್ಡ ಪೆಟ್ಟು ಬಿದ್ದಿದ್ದು, ಸರ್ಕಾರಕ್ಕೂ ಸಮಸ್ಯೆ ಆಗಿತ್ತು.&lt;/p&gt;&lt;p&gt;- ಇಂತಹ ತೀರ್ಮಾನಗಳನ್ನು ಕೈಗೊಳ್ಳುವ ಮೊದಲು ಚರ್ಚೆ ನಡೆಸಲೆಂದೇ ರಾಜಕೀಯ ವ್ಯವಹಾರಗಳ ಸಮಿತಿ ರಚನೆಗೆ ನಿರ್ಧಾರ&lt;/p&gt;]]></content:encoded>
            <category><![CDATA[bengaluru]]></category>
            <dc:creator>Sujatha NR</dc:creator>
            <atom:link href="https://www.kannadaprabha.in/karnataka-news/bengaluru-news/political-affairs-committee-to-have-the-final-say-on-government-decisions/articleshow-9gq04lu"/>
        </item>
        <item>
            <title><![CDATA[ಸಿಂದೂರ ವೇಳೆ ಹುತಾತ್ಮ  ಯೋಧರ ಸಂಖ್ಯೆ, ಹೆಸರು  ಮೊದಲ ಸಲ ಬಹಿರಂಗ]]></title>
            <link>https://www.kannadaprabha.in/india-news/number-and-names-of-soldiers-martyred-during-operation-sindoor-revealed-for-the-first-time/articleshow-yfrmb5l</link>
            <guid isPermaLink="true">https://www.kannadaprabha.in/india-news/number-and-names-of-soldiers-martyred-during-operation-sindoor-revealed-for-the-first-time/articleshow-yfrmb5l</guid>
            <pubDate>Sat, 27 Jun 2026 07:20:08 +0530</pubDate>
            <description><![CDATA[ಪಹಲ್ಗಾಂ ನರಮೇಧಕ್ಕೆ ಪ್ರತಿಯಾಗಿ ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ್ದ ‘ಆಪರೇಷನ್‌ ಸಿಂದೂರ’ದ ವೇಳೆ ಹುತಾತ್ಮರಾದ ಭಾರತೀಯ ಯೋಧರ ಸಂಖ್ಯೆ ಮತ್ತು ಅವರ ಹೆಸರುಗಳನ್ನು ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಬಹಿರಂಗಪಡಿಸಿದೆ.]]></description>
            <media:content url="https://static-gi.asianetnews.com/images/01kw210fngvnnvxe20ef7x2h7n/operation-sindoor-1782479601328.jpeg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;strong&gt;ನವದೆಹಲಿ:&lt;/strong&gt; ಪಹಲ್ಗಾಂ ನರಮೇಧಕ್ಕೆ ಪ್ರತಿಯಾಗಿ ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ್ದ &lsquo;ಆಪರೇಷನ್&zwnj; ಸಿಂದೂರ&rsquo;ದ ವೇಳೆ ಹುತಾತ್ಮರಾದ ಭಾರತೀಯ ಯೋಧರ ಸಂಖ್ಯೆ ಮತ್ತು ಅವರ ಹೆಸರುಗಳನ್ನು ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಬಹಿರಂಗಪಡಿಸಿದೆ.&amp;nbsp;&lt;/p&gt;&lt;p&gt;ಇವರ ಹೆಸರನ್ನು ದೆಹಲಿಯ ಇಂಡಿಯಾ ಗೇಟ್&zwnj; ಬಳಿ ಇರುವ ರಾಷ್ಟ್ರೀಯ ಯುದ್ಧ ಸ್ಮಾರಕದ ಗೋಡೆಯ ಮೇಲೆ ಕೆತ್ತುವ ಮೂಲಕ ಶಾಶ್ವತ ಗೌರವ ನೀಡಿದೆ. ಅಲ್ಲಿ ನೀಡಿರುವ ಮಾಹಿತಿ ಅನ್ವಯ, ಸಿಂದೂರದ ವೇಳೆ 6 ಭಾರತೀಯ ಯೋಧರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ.&lt;/p&gt;&lt;p&gt;ಹುತಾತ್ಮರಾದ ಸುಬೇದಾರ್ ಮೇಜರ್ ಪವನ್ ಕುಮಾರ್ (10 ಪದಾತಿ ದಳ), ರೈಫಲ್&zwnj;ಮ್ಯಾನ್ ಸುನೀಲ್ ಕುಮಾರ್ (4ನೇ ಬೆಟಾಲಿಯನ್, ಜಮ್ಮು ಮತ್ತು ಕಾಶ್ಮೀರ ಲಘು ಪದಾತಿ ದಳ), ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ (5 ಫೀಲ್ಡ್ ರೆಜಿಮೆಂಟ್), ಅಗ್ನಿವೀರ್ ಮೂಡ್ ಮುರಳಿ ನಾಯಕ್ (851 ಲೈಟ್ ರೆಜಿಮೆಂಟ್), ಹವಿಲ್ದಾರ್ ಸುನೀಲ್ ಕುಮಾರ್ ಸಿಂಗ್ (237 ಫೀಲ್ಡ್ ವರ್ಕ್&zwnj;ಶಾಪ್) ಮತ್ತು ಸಾರ್ಜೆಂಟ್ ಸುರೇಂದ್ರ ಕುಮಾರ್ (39 ವಿಂಗ್, ಭಾರತೀಯ ವಾಯುಪಡೆ) ಅವರ ಹೆಸರನ್ನು ಅವರು ಸೇವೆಯಲ್ಲಿದ್ದ ಘಟಕದ ಹೆಸರಿನೊಂದಿಗೆ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿರುವ ತ್ಯಾಗ ಚಕ್ರದ ಗೋಡೆ ಸಂಖ್ಯೆ &lsquo;3ಡಿ&rsquo;ಯಲ್ಲಿ ಕೆತ್ತಲಾಗಿದೆ. ರಾಷ್ಟ್ರೀಯ ಯುದ್ಧ ಸ್ಮಾರಕದ ವೆಬ್&zwnj;ಸೈಟ್&zwnj;ನಲ್ಲಿಯೂ ಪ್ರಕಟಿಸಲಾಗಿದೆ.&lt;/p&gt;&lt;p&gt;ಈ 6 ಮಂದಿಯಲ್ಲಿ ಐವರು ಭಾರತೀಯ ಸೇನೆಯವರಾದರೆ, ಒಬ್ಬರು ವಾಯುಪಡೆ ಅಧಿಕಾರಿ. ರೈಫಲ್&zwnj;ಮನ್ ಸುನಿಲ್ ಕುಮಾರ್&zwnj;ಗೆ ಮರಣೋತ್ತರವಾಗಿ &lsquo;ವೀರ ಚಕ್ರ&rsquo;ವನ್ನು ನೀಡಲಾದರೆ, ಸಾರ್ಜೆಂಟ್ ಸುರೇಂದ್ರ ಕುಮಾರ್ ಅವರಿಗೆ &lsquo;ವಾಯು ಪದಕ&rsquo; ನೀಡಿ ಗೌರವಿಸಲಾಗಿದೆ.&lt;/p&gt;&lt;h2&gt;&lt;strong&gt;ವೀರ ಯೋಧರಿವರು&lt;/strong&gt;&lt;/h2&gt;&lt;h3&gt;- ಸುಬೇದಾರ್ ಮೇಜರ್ ಪವನ್ ಕುಮಾರ್&lt;/h3&gt;&lt;p&gt;- ರೈಫಲ್&zwnj;ಮ್ಯಾನ್ ಸುನೀಲ್ ಕುಮಾರ್&zwnj;&lt;/p&gt;&lt;p&gt;- ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್&zwnj;&lt;/p&gt;&lt;p&gt;- ಅಗ್ನಿವೀರ್ ಮೂಡ್ ಮುರಳಿ ನಾಯಕ್&lt;/p&gt;&lt;p&gt;- ಹವಿಲ್ದಾರ್ ಸುನೀಲ್ ಕುಮಾರ್ ಸಿಂಗ್&zwnj;&lt;/p&gt;&lt;p&gt;- ಸಾರ್ಜೆಂಟ್ ಸುರೇಂದ್ರ ಕುಮಾರ್&zwnj;&lt;/p&gt;]]></content:encoded>
            <category><![CDATA[India]]></category>
            <dc:creator>Sujatha NR</dc:creator>
            <atom:link href="https://www.kannadaprabha.in/india-news/number-and-names-of-soldiers-martyred-during-operation-sindoor-revealed-for-the-first-time/articleshow-yfrmb5l"/>
        </item>
        <item>
            <title><![CDATA[ವಿಪಕ್ಷಗಳ ವಿರೋಧವಿದ್ದರೂ ಶತಾಯಗತಾಯ ಜಾರಿ -ಟೌನ್‌ಶಿಪ್‌ ಬಿಡದಿಲ್ಲ: ಸರ್ಕಾರ]]></title>
            <link>https://www.kannadaprabha.in/politics-news/the-township-project-will-be-implemented-at-any-cost-the-government-will-not-back-down/articleshow-s72e1wg</link>
            <guid isPermaLink="true">https://www.kannadaprabha.in/politics-news/the-township-project-will-be-implemented-at-any-cost-the-government-will-not-back-down/articleshow-s72e1wg</guid>
            <pubDate>Sat, 27 Jun 2026 07:14:48 +0530</pubDate>
            <description><![CDATA[ಬಿಡದಿ ಟೌನ್‌ಶಿಪ್‌ ಯೋಜನೆಯನ್ನು ಶತಾಯಗತಾಯ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಒಂದೊಂದೇ ಪಂಚಾಯತಿಗೆ ಅಧಿಸೂಚನೆ ಹೊರಡಿಸಿ ಯೋಜನೆ ಜಾರಿಗೊಳಿಸಲು ತೀರ್ಮಾನಿಸಿದೆ. ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯಲೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಿರ್ಧರಿಸಿದ್ದಾರೆ.]]></description>
            <media:content url="https://static-gi.asianetnews.com/images/01kvmfr6w9tnq1z149c4aza4v9/---------------------50--1782025296777.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;strong&gt; ಬೆಂಗಳೂರು : &amp;nbsp;&lt;/strong&gt;ಬಿಡದಿ ಟೌನ್&zwnj;ಶಿಪ್&zwnj; ಯೋಜನೆಯನ್ನು ಶತಾಯಗತಾಯ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಒಂದೊಂದೇ ಪಂಚಾಯತಿಗೆ ಅಧಿಸೂಚನೆ ಹೊರಡಿಸಿ ಯೋಜನೆ ಜಾರಿಗೊಳಿಸಲು ತೀರ್ಮಾನಿಸಿದೆ.&lt;/p&gt;&lt;p&gt;ಇದಲ್ಲದೆ, ಟೌನ್&zwnj;ಶಿಪ್&zwnj;ಗಳನ್ನು ನಿರ್ಮಿಸುವಂತೆ ತಮಗೆ ಸಲಹೆ ನೀಡಿರುವ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯಲೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್&zwnj; ನಿರ್ಧರಿಸಿದ್ದಾರೆ.&lt;/p&gt;&lt;p&gt;&lsquo;ನೀವು ನೋಡಿದರೆ ಬಿಡದಿ ಟೌನ್&zwnj;ಶಿಪ್&zwnj; ವಿಚಾರಕ್ಕೆ ಪ್ರಶಂಶಿಸಿ ಬೆನ್ನು ತಟ್ಟಿದ್ದೀರಿ. ಆದರೆ, ನಿಮ್ಮವರು ರಾಜಕೀಯವಾಗಿ ವಿರೋಧ ಮಾಡುತ್ತಿದ್ದಾರೆ&rsquo; ಎಂದು ದೂರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.&lt;/p&gt;&lt;h2&gt;ಡಿಎಲ್&zwnj;ಎಫ್&zwnj; ಅವರು 400 ಕೋಟಿ ರು. ಠೇವಣಿ ಸಹ ಇಟ್ಟಿದ್ದರು&lt;/h2&gt;&lt;p&gt;ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಬಿಡದಿ, ಸೋಲೂರು, ಸಾತನೂರು, ನಂದಗುಡಿ ಸೇರಿ ಐದು ಉಪನಗರ ಯೋಜನೆ ಮಾಡಬೇಕು ಎಂದು ಸ್ವಾಧೀನಕ್ಕೆಅಧಿಸೂಚನೆ ಹೊರಡಿಸಿದ್ದರು. ಆಗ ಇದಕ್ಕಾಗಿ ಡಿಎಲ್&zwnj;ಎಫ್&zwnj; ಅವರು 400 ಕೋಟಿ ರು. ಠೇವಣಿ ಸಹ ಇಟ್ಟಿದ್ದರು. ಬಳಿಕ ಈ ಯೋಜನೆ ಜಾರಿ ಮಾಡದ ಎಚ್.ಡಿ. ಕುಮಾರಸ್ವಾಮಿ ಅವರು ಜಮೀನನ್ನು ಅಧಿಸೂಚನೆಯಿಂದ ಕೈಬಿಡಲು ಡಿನೋಟಿಫೈ ಮಾಡಲಿಲ್ಲ. ಬದಲಿಗೆ ರೆಡ್ ಜೋನ್&zwnj; ಎಂದು ಮಾಡಿ ಅಲ್ಲಿನ ರೈತರು ಜಮೀನು ಮಾರಾಟ, ಖರೀದಿ ವ್ಯವಹಾರ ಮಾಡದಂತೆ ಅತಂತ್ರಗೊಳಿಸಿದ್ದಾರೆ.&lt;/p&gt;&lt;p&gt;ಆಗ ಕುಮಾರಸ್ವಾಮಿ ಅವರು ಪ್ರತಿ ಎಕರೆಗೆ 50-60 ಲಕ್ಷ ರು. ಹಣ ಅಥವಾ ಪ್ರತಿ ಎಕರೆಗೆ 8,000 ಚದರಡಿ ಅಭಿವೃದ್ಧಿಪಡಿಸಿದ ಜಮೀನು ಪರಿಹಾರವಾಗಿ ನೀಡುವುದಾಗಿ ಪ್ರಕಟಿಸಿದ್ದರು. ಆದರೆ ನಮ್ಮ ಸರ್ಕಾರ 2.5 ಕೋಟಿ ರು.ವರೆಗೆ ಪರಿಹಾರ ಅಥವಾ ಶೇ.50 ರಷ್ಟು ಅಭಿವೃದ್ಧಿಪಡಿಸಿದ ಜಮೀನು ನೀಡಲು ಮುಂದಾಗಿದ್ದೇವೆ. ಹೀಗಿದ್ದರೂ ರಾಜಕೀಯ ಕಾರಣಗಳಿಗೆ ವಿರೋಧ ಮಾಡಲಾಗುತ್ತಿದೆ ಎಂದು ಪ್ರಧಾನಿ ಮೋದಿ ಅವರಿಗೆ ತಿಳಿಸಲು ಶಿವಕುಮಾರ್&zwnj; ಅವರು ಚಿಂತನೆ ನಡೆಸಿದ್ದಾರೆ. ಇದೇ ವೇಳೆ ಬಿಜೆಪಿ ಸರ್ಕಾರದ ಅವಧಿಯಲ್ಲೇ 1,000 ಎಕರೆ ಜಮೀನು ಸ್ವಾಧೀನಪಡಿಸಿಕೊಂಡ ವಿಚಾರವನ್ನೂ ಪ್ರಸ್ತಾಪಿಸಲಿದ್ದಾರೆ.&lt;/p&gt;&lt;h3&gt;ಬಗರ್&zwnj; ಹುಕುಂ ಸಮಸ್ಯೆ:&lt;/h3&gt;&lt;p&gt;ಯೋಜನೆಗೆ ಗುರುತಿಸಿರುವ ಜಮೀನಿನಲ್ಲಿ 1,500 ಎಕರೆ ಜಮೀನು ಬಗರ್&zwnj; ಹುಕುಂ ಸಾಗುವಳಿ ಮಾಡಿಕೊಂಡಿದ್ದು, ಕೆಂಪು ವಲಯದ ಹಿನ್ನೆಲೆಯಲ್ಲಿ ಕೆಲವರಿಗೆ ಸೂಕ್ತ ದಾಖಲೆಗಳು ಸೃಜನೆಯಾಗಿಲ್ಲ. ಇಂಥ ಶೇ.20 ರಷ್ಟು ಜಮೀನುಗಳನ್ನು ಕೆಲ ಬ್ರೋಕರ್&zwnj;ಗಳು ಅಗ್ರಿಮೆಂಟ್ ಮಾಡಿಸಿಕೊಂಡಿದ್ದು, ಅವರು ತಮಗೆ ಪರಿಹಾರ ಬರಲ್ಲ ಎಂಬ ಕಾರಣಕ್ಕೆ ಹೋರಾಟ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರ ಆರೋಪಿಸಿದೆ.&lt;/p&gt;&lt;p&gt;ಜತೆಗೆ ಎಚ್.ಡಿ. ಕುಮಾರಸ್ವಾಮಿ ಹಾಗೂ ಕುಟುಂಬ ಸದಸ್ಯರು ಹೊಂದಿರುವ ಆಸ್ತಿಗಳು, ಅವರ ದ್ವಂದ್ವ ನಿಲುವು ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.&lt;/p&gt;]]></content:encoded>
            <category><![CDATA[politics]]></category>
            <dc:creator>Sujatha NR</dc:creator>
            <atom:link href="https://www.kannadaprabha.in/politics-news/the-township-project-will-be-implemented-at-any-cost-the-government-will-not-back-down/articleshow-s72e1wg"/>
        </item>
        <item>
            <title><![CDATA[ತಾರಕಕ್ಕೇರಿದ ಟೌನ್ ಶಿಪ್ ಪರ ವಿರೋಧದ ಚಳವಳಿ]]></title>
            <link>https://www.kannadaprabha.in/karnataka-news/the-pro-township-opposition-movement-has-reached-a-fever-pitch/articleshow-954byhx</link>
            <guid isPermaLink="true">https://www.kannadaprabha.in/karnataka-news/the-pro-township-opposition-movement-has-reached-a-fever-pitch/articleshow-954byhx</guid>
            <pubDate>Sat, 27 Jun 2026 01:30:00 +0530</pubDate>
            <description><![CDATA[ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್)ಯೋಜನೆ ಪರ ಮತ್ತು ವಿರೋಧಿಸಿ ರೈತರು ಪ್ರತ್ಯೇಕವಾಗಿ ನಡೆಸುತ್ತಿರುವ ಚಳವಳಿ ತೀವ್ರ ಸ್ವರೂಪ ಪಡೆದಿದ್ದು, ಬೈರಮಂಗಲ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ]]></description>
            <media:content url="https://static-assets.asianetnews.com/kp/json/26062026/pictures/26KRMN2_920.JPG" type="image/jpeg" height="390" width="690"/>
            <content:encoded><![CDATA[&lt;p&gt;ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್)ಯೋಜನೆ ಪರ ಮತ್ತು ವಿರೋಧಿಸಿ ರೈತರು ಪ್ರತ್ಯೇಕವಾಗಿ ನಡೆಸುತ್ತಿರುವ ಚಳವಳಿ ತೀವ್ರ ಸ್ವರೂಪ ಪಡೆದಿದ್ದು, ಬೈರಮಂಗಲ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ.&lt;/p&gt;&lt;p&gt;ಬೈರಮಂಗಲ ವೃತ್ತದಲ್ಲಿ ಟೌನ್ ಶಿಪ್ ಯೋಜನೆ ವಿರುದ್ಧ ರೈತರು ಅನಿರ್ದಿಷ್ಟಾವಧಿ ಧರಣಿ ಗುರುವಾರ 475ನೇ ದಿನಕ್ಕೆ ಕಾಲಿಟ್ಟಿದೆ. ಆ ವೃತ್ತದಿಂದ ಕೂಗಳತೆ ದೂರದಲ್ಲಿಯೇ ಮತ್ತೊಂದು ರೈತರ ಗುಂಪು ಟೌನ್ ಶಿಪ್ ಯೋಜನೆಗೆ ಭೂಮಿ ಸ್ವಾಧೀನ ಪಡಿಸಿಕೊಂಡು ಪರಿಹಾರ ವಿತರಣೆ ಮಾಡಬೇಕೆಂದು ಆಗ್ರಹಿಸಿ ಪ್ರಾರಂಭಿಸಿರುವ ಪ್ರತಿಭಟನೆ 2ನೇ ದಿನವೂ ಮುಂದುವರೆದಿದೆ.&lt;/p&gt;&lt;p&gt;ಪರ - ವಿರೋಧದ ಚಳವವಳಿ ತಾರಕಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಬೈರಮಂಗಲ ಗ್ರಾಮದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತಿಗಾಗಿ ನಿಯೋಜನೆ ಮಾಡಲಾಗಿದೆ. ಎರಡೂ ಪ್ರತಿಭಟನೆಗಳ ಸ್ಥಳಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.&lt;/p&gt;&lt;h2&gt;ರೈತ ಮುಖಂಡನಿಗೆ ರೈತರಿಂದಲೇ ಘೇರಾವ್:&lt;/h2&gt;&lt;p&gt;ಯೋಜನೆ ವಿರುದ್ಧವಾಗಿರುವ ರೈತರ ಹೋರಾಟಕ್ಕೆ ಬೆಂಬಲ ನೀಡಿ ವಾಪಸ್ ತೆರಳುತ್ತಿದ್ದ ರೈತಸಂಘ ರಾಜ್ಯ ಘಟಕ ಸಂಚಾಲಕ ಮೀಸೆ ಮಂಜಣ್ಣ ಅವರಿದ್ದ ಕಾರನ್ನು ಯೋಜನೆ ಪರವಾಗಿರುವ ರೈತರು ಅಡ್ಡಗಟ್ಟಿ ತರಾಟೆ ತೆಗೆದುಕೊಂಡರು.&lt;/p&gt;&lt;p&gt;ಈ ವಿಚಾರ ತಿಳಿದ ಬೈರಮಂಗಲ ವೃತ್ತದಲ್ಲಿದ್ದ ರೈತರು ಅಲ್ಲಿಗೆ ಓಡಲು ಪ್ರಾರಂಭಿಸಿದರು. ಬಂದೋಬಸ್ತಿನಲ್ಲಿದ್ದ ಪೊಲೀಸರು ರೈತರನ್ನು ತಡೆದು ಅಲ್ಲಿಗೆ ಹೋಗ ಬೇಡಿ ಪರಿಸ್ಥಿತಿ ಬಿಗಡಾಯಿಸುತ್ತದೆ. ಅಲ್ಲಿರುವ ಪೊಲೀಸರು ಬಿಡಿಸಿ ಕಳುಹಿಸುತ್ತಾರೆ ಎಂದು ಸಮಾಧಾನ ಪಡಿಸಿದರು.&lt;/p&gt;&lt;p&gt;ಕಾರಿನಲ್ಲಿದ್ದ ರೈತ ಮುಖಂಡರೊಂದಿಗೆ ವಾಗ್ವಾದ ನಡೆಸಿದ ಯೋಜನೆ ಪರವಿರುವ ರೈತರು, ನಮಗೆ ಯೋಜನೆ ಬೇಕು. ಅದನ್ನು ವಿರೋಧ ಮಾಡಲು ನೀವ್ಯಾರು. ಹೊರಗಡೆಯಿಂದ ಬಂದು ಗೊಂದಲ ಸೃಷ್ಟಿ ಮಾಡುತ್ತಿದ್ದೀರಾ. ನೀವೆಲ್ಲರು ಪೇಮೆಂಟ್ ಗಿರಾಕಿಗಳು, ಎಷ್ಟು ಪೇಮೆಂಟ್ ಪಡೆದು ಬಂದಿದ್ದೀರಾ ಎಂದು ಕಿಡಿಕಾರಿದರು. ಪೊಲೀಸರು ಮಧ್ಯ ಪ್ರವೇಶಿಸಿ ಪ್ರತಿಭಟನಾಕಾರರ ಮನವೊಲಿಸಿ ಕಾರನ್ನು ಮುಂದಕ್ಕೆ ಕಳುಹಿಸಿಕೊಟ್ಟರು.&lt;/p&gt;&lt;h3&gt;ಪರ-ವಿರೋಧದ ಚಳವಳಿಗೆ ಸಾಥ್:&lt;/h3&gt;&lt;p&gt;ಮಾಜಿ ಶಾಸಕ ಎ.ಮಂಜುನಾಥ್ , ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್&zwnj;ಎಸ್ )ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಹಾಗೂ ವಿವಿಧ ರೈತ ಸಂಘಟನೆಗಳ ಮುಖಂಡರು ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗುತ್ತಾ ಯೋಜನೆ ವಿರುದ್ಧದ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.&lt;/p&gt;&lt;p&gt;ಟೌನ್ ಶಿಪ್ ಯೋಜನೆ ಪರವಾಗಿರುವ ರೈತರು ಪ್ರತಿಭಟನೆ&lt;/p&gt;&lt;p&gt;ಟೌನ್ ಶಿಪ್ ಯೋಜನೆ ಪರವಾಗಿರುವ ರೈತರು, ಬೈರಮಂಗಲ - ಕಂಚುಗಾರನಹಳ್ಳಿ ವ್ಯಾಪ್ತಿಯ ಜಿಬಿಐಟಿ ಯೋಜನೆಯ ಪರ ರೈತರ ಹೋರಾಟ ಸಮಿತಿ ಎಂಬ ಬ್ಯಾನರ್ ನಲ್ಲಿ ನಮ್ಮ ಭೂಮಿ - ನಮ್ಮ ಹಕ್ಕು. ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಜಿಬಿಐಟಿ ಯೋಜನೆಗೆ ಭೂಮಿ ನೀಡಲು ನಾವು ಸಿದ್ಧ - ಪಾಲುದಾರರಾಗಲೂ ಸಿದ್ಧ. 20 ವರ್ಷಗಳ ರೆಡ್ ಜೋನ್ ವನವಾಸಕ್ಕೆ ಮುಕ್ತಿ ಕೊಡುವಂತೆ ಘೋಷಣೆ ಬರೆದುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.&lt;/p&gt;&lt;p&gt;ಬೆಂಗಳೂರು ಪಕ್ಕದಲ್ಲಿಯೇ ಇದ್ದರೂ ಬಿಡದಿ ಅಭಿವೃದ್ಧಿ ಆಗಿಲ್ಲ. ಈ ಭಾಗದಲ್ಲಿ ನೀರಿನ ಕೊರತೆ ಇದ್ದು, ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ನಮ್ಮ ಮಕ್ಕಳೂ ಇದೇ ಭೂಮಿ ನಂಬಿ ಕೂರಲು ಆಗುವುದಿಲ್ಲ. ಹಾಗಾಗಿ ನಮಗೆ ಅಭಿವೃದ್ಧಿ ಬೇಕು. ಈ ಯೋಜನೆಗೆ ಭೂಮಿ ಕೊಟ್ಟೇ ಕೊಡುತ್ತೇವೆ. ಕುಮಾರಸ್ವಾಮಿರವರು ರಾಜಕೀಯ ಕಾರಣಕ್ಕಾಗಿ ಯೋಜನೆ ವಿರೋಧ ಮಾಡುತ್ತಿದ್ದಾರೆ ಎಂದು ಟೀಕಿಸಿದರು.&lt;/p&gt;&lt;p&gt;ಯೋಜನೆ ಪರ ರೈತರ ಪ್ರತಿಭಟನೆಯಲ್ಲಿ ಕೆಪಿಸಿಸಿ ಸದಸ್ಯ ಬ್ಯಾಟಪ್ಪ, ಭೂ ಮಾಲೀಕ ಹೊಸೂರು ರಾಜಣ್ಣ, ಜಿಬಿಡಿಎ ನಿರ್ದೇಶಕಿ ಕಲ್ಯಾಣ ಕುಮಾರಿ, ವಿಎಸ್ ಎಸ್ ಎನ್ ಅಧ್ಯಕ್ಷ ಮಂಜುನಾಥ್ ,ಮಾಜಿ ಅಧ್ಯಕ್ಷ ಎಚ್.ಎಸ್.ಸಿದ್ಧರಾಜು, ತಾಪಂ ಮಾಜಿ ಅಧ್ಯಕ್ಷರಾದ ಜಯಚಂದ್ರ, ಭೂ ಮಾಲೀಕರಾದ ಶಿವರಾಮು, ಅಪ್ಪಾಜಿ, ಯೋಗಾನಂದ್ , ಎಚ್.ಎಂ.ನಾಗರಾಜ್ , ನರಸಿಂಹರಾಜು ಮತ್ತಿತರರು ಭಾಗವಹಿಸಿದ್ದರು.&amp;nbsp;&lt;/p&gt;]]></content:encoded>
            <category><![CDATA[karnataka]]></category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/karnataka-news/the-pro-township-opposition-movement-has-reached-a-fever-pitch/articleshow-954byhx"/>
        </item>
        <item>
            <title><![CDATA[ಬೆಂಗಳೂರು ನಗರದ ಎಸ್‌.ಎಂ.ಕೃಷ್ಣ ದಶಪಥ ರಸ್ತೆ ಜೂ.27ಕ್ಕೆ ಲೋಕಾರ್ಪಣೆ]]></title>
            <link>https://www.kannadaprabha.in/karnataka-news/s-m-krishna-dasapatha-road-in-bangalore-city-to-be-inaugurated-on-june-27/articleshow-6cwqyo6</link>
            <guid isPermaLink="true">https://www.kannadaprabha.in/karnataka-news/s-m-krishna-dasapatha-road-in-bangalore-city-to-be-inaugurated-on-june-27/articleshow-6cwqyo6</guid>
            <pubDate>Sat, 27 Jun 2026 03:30:00 +0530</pubDate>
            <description><![CDATA[ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಅಂಗವಾಗಿ ಮಾಗಡಿ ರಸ್ತೆ ಕಡಬಗೆರೆ ಕ್ರಾಸ್‌ನಿಂದ ಮೈಸೂರು ರಸ್ತೆ ಚಲ್ಲಘಟ್ಟ ಮೆಟ್ರೋ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸುವ 60 ನಿಮಿಷದ ಪ್ರಯಾಣವನ್ನು ಕೇವಲ 15ಕ್ಕೆ ತಗ್ಗಿಸುವ ಎಸ್‌.ಎಂ.ಕೃಷ್ಣ ರಸ್ತೆ (ಎಂಎಆರ್‌) ಶನಿವಾರ ಉದ್ಘಾಟನೆಗೊಳ್ಳಲಿದೆ.]]></description>
            <media:content url="https://static-assets.asianetnews.com/kp/json/26062026/pictures/S_M_KRISHNA_ROAD_3_678.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು : &amp;nbsp;&lt;/strong&gt;ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಅಂಗವಾಗಿ ಮಾಗಡಿ ರಸ್ತೆ ಕಡಬಗೆರೆ ಕ್ರಾಸ್&zwnj;ನಿಂದ ಮೈಸೂರು ರಸ್ತೆ ಚಲ್ಲಘಟ್ಟ ಮೆಟ್ರೋ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸುವ 60 ನಿಮಿಷದ ಪ್ರಯಾಣವನ್ನು ಕೇವಲ 15ಕ್ಕೆ ತಗ್ಗಿಸುವ ಎಸ್&zwnj;.ಎಂ.ಕೃಷ್ಣ ರಸ್ತೆ (ಎಂಎಆರ್&zwnj;) ಶನಿವಾರ ಉದ್ಘಾಟನೆಗೊಳ್ಳಲಿದೆ.&lt;/p&gt;&lt;h2&gt;ಪುರಜ್ಯೋತಿಗೆ ಚಾಲನೆ&lt;/h2&gt;&lt;p&gt;ಇಂದು ಬೆಳಗ್ಗೆ 7ಕ್ಕೆ ನಾಡಪ್ರಭು ಕೆಂಪೇಗೌಡರ ಸಮಾಧಿ, ಕೆಂಪಾಪುರ, ಮಾಗಡಿಯಿಂದ ಪುರಜ್ಯೋತಿಗೆ ಚಾಲನೆ ನೀಡಲಾಗುವುದು. ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಪುರಜ್ಯೋತಿಗೆ ಚಾಲನೆ ನೀಡುವರು. ಕೆಂಪಾಂಬುಧಿ ಕೆರೆ ಗಡಿ ಗೋಪುರದಿಂದ ಮಾಜಿ ಸಚಿವ ಜಮೀರ್&zwnj; ಅಹ್ಮದ್&zwnj;ಖಾನ್&zwnj;, ಲಾಲ್&zwnj;ಬಾಗ್&zwnj; ಗಡಿಗೋಪುರದಿಂದ ಸಚಿವ ಕೃಷ್ಣಬೈರೇಗೌಡ, ಮೇಖ್ರಿ ವೃತ್ತ ಗಡಿ ಗೋಪುರದಿಂದ ಸಚಿವ ಬೈರತಿ ಸುರೇಶ್&zwnj;, ಹಲಸೂರು ಕೆರೆ ಗಡಿಗೋಪುರದಿಂದ ಸಚಿವ ಕೆ.ಜೆ.ಜಾರ್ಜ್&zwnj;, ಆವಿ ಚೆನ್ನಕಶ್ವ ದೇವಾಲಯದ ಆವರಣದಿಂದ ಸಚಿವ ಕೆ.ಎಚ್.ಮುನಿಯಪ್ಪ, ಹುತ್ರಿದುರ್ಗದ ಬಯಲು ಬಿಸಿಲು ಬಸವಣ್ಣನ ಸ್ಥಳದಿಂದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್&zwnj; ಅವರು ಪುರಜ್ಯೋತಿಗೆ ಚಾಲನೆ ನೀಡಲಿದ್ದಾರೆ.&lt;/p&gt;&lt;p&gt;ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯವರು ಎಸ್&zwnj;.ಎಂ.ಕೃಷ್ಣ ದಶಪಥ ರಸ್ತೆಯಲ್ಲಿ ಪುರಜ್ಯೋತಿ ಸ್ವೀಕರಿಸುವರು. ಇದೇ ಸಂದರ್ಭದಲ್ಲಿ ಎಸ್&zwnj;.ಎಂ.ಕೃಷ್ಣ ದಶಪಥ ರಸ್ತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಅವರು ನೂತನ ರಸ್ತೆಯನ್ನು ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ, ಬಿಡಿಎ ಅಧ್ಯಕ್ಷ ಎನ್&zwnj;.ಎ.ಹ್ಯಾರೀಸ್&zwnj;, ಶಾಸಕ ಎಸ್&zwnj;.ಟಿ.ಸೋಮಶೇಖರ್&zwnj; ಅಧ್ಯಕ್ಷತೆ ವಹಿಸುವರು.&lt;/p&gt;&lt;p&gt;ಮಧ್ಯಾಹ್ನ 12ಕ್ಕೆ ಜಿಬಿಎ, ಬಿಡಿಎ, ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಕಾರ್ಯಕ್ರಮ ಎಸ್&zwnj;.ಎಂ.ಕೃಷ್ಣ ರಸ್ತೆಯಲ್ಲಿ ನಡೆಯಲಿದೆ.&lt;/p&gt;&lt;h3&gt;&lt;strong&gt;ಎಸ್&zwnj;.ಎಂ.ಕೃಷ್ಣ ದಶಪಥ ರಸ್ತೆ ವಿಶೇಷ:&lt;/strong&gt;&lt;/h3&gt;&lt;p&gt;ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್&zwnj;ನಿಂದ ಮೈಸೂರು ರಸ್ತೆ ಚಲ್ಲಘಟ್ಟ ಮೆಟ್ರೋ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸುವುದರ ಜೊತೆಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯ ಎಲ್ಲಾ 9 ಬ್ಲಾಕ್&zwnj;ಗಳನ್ನು ಸಂಪರ್ಕಿಸುತ್ತದೆ. ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ ಸಂಪರ್ಕಿಸುವ ವಾಹನಗಳು ಪ್ರಸ್ತುತ ನೈಸ್ ರಸ್ತೆ ಅಥವಾ ನಾಯಂಡಹಳ್ಳಿ -ಸಮ್ಮನಹಳ್ಳಿ ಜಂಕ್ಷನ್ ಮುಖಾಂತರ ಚಲಿಸಬೇಕಾಗಿದ್ದು ಈ ಮಾರ್ಗದ ವಾಹನ ಸಂಚಾರ ಅವಧಿ 60 ನಿಮಿಷಗಳಷ್ಟಿತ್ತು. ಆದರೀಗ &lsquo;ಎಸ್.ಎಂ.ಕೃಷ್ಣ&rsquo; ರಸ್ತೆಯು ಸಂಚಾರ ಅವಧಿಯನ್ನು 15 ನಿಮಿಷಗಳಿಗೆ ತಗ್ಗಿಸಲಿದೆ. ಈ ರಸ್ತೆ ಕಂಬೀಪುರ, ಕೊಮ್ಮಘಟ್ಟ ಹಾಗೂ ಕೆಂಚನಪುರ ಪ್ರದೇಶಗಳಿಗೆ ಸುಗಮ ಸಂಪರ್ಕ ಒದಗಿಸಲಿದೆ. ಜೊತೆಗೆ ಮಾಚೋಹಳ್ಳಿ, ಕೊಡಿಗೆಹಳ್ಳಿ, ಕನ್ನಳ್ಳಿ, ಕೆಂಚನಪುರ, ಸೂಲಿಕೆರೆ, ಕೊಮ್ಮಘಟ್ಟ ಹಾಗೂ ಚಲ್ಲಘಟ್ಟ ಗ್ರಾಮಗಳಿಗೆ ಹೊಂದಿಕೊಂಡಂತಿದ್ದು, ಗ್ರಾಮಗಳ ಸರ್ವಾಂಗೀಣ ಅಭಿವೃದ್ದಿಗೆ ಸಹಕಾರಿಯಾಗಲಿದೆ.&lt;/p&gt;&lt;p&gt;ಮೈಸೂರು, ಮಾಗಡಿ, ಹಾಸನ, ಕುಣಿಗಲ್, ಮಂಡ್ಯ ಹಾಗೂ ರಾಮನಗರ ಭಾಗಗಳಿಂದ ಬೆಂಗಳೂರಿಗೆ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಹಣ ಮತ್ತು ಸಮಯ ಉಳಿತಾಯ ಮಾಡುವ ಪ್ರಮುಖ ಮಾರ್ಗವಾಗಲಿದೆ. 631 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಯೋಜನೆಯಲ್ಲಿ 3 ಪ್ರಮುಖ ಅಂಡರ್&zwnj;ಪಾಸ್&zwnj;ಗಳು, 11 ಸೇತುವೆಗಳು, 270 ಮೀಟರ್ ಉದ್ದದ ಸುರಂಗ ಮಾರ್ಗ, ಆಧುನಿಕ ಸರ್ವಿಸ್ ರಸ್ತೆ, ಸೈಕಲ್ ಟ್ರಾಕ್ ವ್ಯವಸ್ಥೆ ಒಳಗೊಂಡಿವೆ.&lt;/p&gt;]]></content:encoded>
            <category><![CDATA[karnataka]]></category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/karnataka-news/s-m-krishna-dasapatha-road-in-bangalore-city-to-be-inaugurated-on-june-27/articleshow-6cwqyo6"/>
        </item>
        <item>
            <title><![CDATA[ಜೂನ್ 29ಕ್ಕೆ ಸಿಎಂ ಡಿಕೆಗೆ ಬೃಹತ್ ಅಭಿನಂದನಾ ಸಮಾರಂಭ]]></title>
            <link>https://www.kannadaprabha.in/politics-news/a-grand-felicitation-ceremony-for-cm-dk-on-june-29th/articleshow-bu9dgy8</link>
            <guid isPermaLink="true">https://www.kannadaprabha.in/politics-news/a-grand-felicitation-ceremony-for-cm-dk-on-june-29th/articleshow-bu9dgy8</guid>
            <pubDate>Sat, 27 Jun 2026 03:30:00 +0530</pubDate>
            <description><![CDATA[ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ನೌಕರರ ಸಂಘ ಮತ್ತು ಒಕ್ಕೂಟದಿಂದ ಜೂನ್ 29ಕ್ಕೆ ಬೆಂಗಳೂರಿನ ತ್ರಿಪುರ ವಾಸಿನಿ, ಅರಮನೆ ಮೈದಾನ, ಗೇಟ್ ಸಂಖ್ಯೆ–2ರಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ]]></description>
            <media:content url="https://static-gi.asianetnews.com/images/01kvdxznvvkrber3ewje6r04aw/cj-1781805340539.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಬೆಂಗಳೂರು : &amp;nbsp;&lt;/strong&gt;ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ನೌಕರರ ಸಂಘ ಮತ್ತು ಒಕ್ಕೂಟದಿಂದ ಜೂನ್ 29ಕ್ಕೆ ಬೆಂಗಳೂರಿನ ತ್ರಿಪುರ ವಾಸಿನಿ, ಅರಮನೆ ಮೈದಾನ, ಗೇಟ್ ಸಂಖ್ಯೆ&ndash;2ರಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ. ಬಲರಾಮ್ ತಿಳಿಸಿದರು.&lt;/p&gt;&lt;h2&gt;ವಿವಿಧ ಜಿಲ್ಲೆಗಳಿಂದ ಆಗಮಿಸುವ ಸಾವಿರಾರು ವಿದ್ಯುತ್ ನೌಕರರು&lt;/h2&gt;&lt;p&gt;ಈ ವಿಷಯ ತಿಳಿಸಿದ ಅವರು, ಕಾರ್ಯಕ್ರಮದಲ್ಲಿ ಇಂಧನ ಸಚಿವ ಕೆಜೆ ಜಾರ್ಜ್, ರಾಜ್ಯದ ವಿವಿಧ ಎಸ್ಕಾಂಗಳ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ಹಿರಿಯ ಅಧಿಕಾರಿಗಳು, ವಿವಿಧ ನೌಕರರ ಸಂಘಗಳ ಪದಾಧಿಕಾರಿಗಳು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಸಾವಿರಾರು ವಿದ್ಯುತ್ ನೌಕರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.&lt;/p&gt;&lt;h3&gt;ಸೇವೆ ಗುಣಮಟ್ಟ ಹೆಚ್ಚಿಸುವ ಕುರಿತು ಚರ್ಚೆ&lt;/h3&gt;&lt;p&gt;ಕಾರ್ಯಕ್ರಮದಲ್ಲಿ ವಿದ್ಯುತ್ ಕ್ಷೇತ್ರವನ್ನು ಖಾಸಗಿಕರಣಗೊಳಿಸದೆ ಸರ್ಕಾರದ ಅಧೀನದಲ್ಲಿ ಮುಂದುವರಿಸಬೇಕು. ಖಾಸಗಿ ಕಂಪನಿಗಳಿಗೆ ವಿದ್ಯುತ್ ಸಾಗಣೆ ವಿತರಣೆ ಪರವಾನಗಿ ನೀಡಬಾರದು. ವಿದ್ಯುತ್ ಕ್ಷೇತ್ರದ ಅಭಿವೃದ್ಧಿ, ನೌಕರರ ಕಲ್ಯಾಣ ಹಾಗೂ ಸಾರ್ವಜನಿಕ ಸೇವೆ ಗುಣಮಟ್ಟ ಹೆಚ್ಚಿಸುವ ಕುರಿತು ಚರ್ಚೆಗಳು ನಡೆಯಲಿವೆ ಎಂದು ತಿಳಿಸಿದರು.&lt;/p&gt;&lt;p&gt;ಕವಿಪ್ರನಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶಿವರಾಂ, ಖಜಾಂಚಿ ವರದರಾಜ, ಕವಿ ಮಂಡಳಿ ಇಂಜಿನಿಯರ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿಗಳ ಚಂದ್ರಶೇಖರ್ ದೇಸಾಯಿ ಹಾಜರಿದ್ದರು.&lt;/p&gt;]]></content:encoded>
            <category><![CDATA[politics]]></category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/politics-news/a-grand-felicitation-ceremony-for-cm-dk-on-june-29th/articleshow-bu9dgy8"/>
        </item>
        <item>
            <title><![CDATA[ಟನಲ್‌ ರಸ್ತೆ ಗುದ್ದಲಿ ಪೂಜೆಗೆ ರಾಜ್ಯ ಸರ್ಕಾರ  ಸಿದ್ಧತೆ]]></title>
            <link>https://www.kannadaprabha.in/karnataka-news/state-government-prepares-for-tunnel-road-kudali-puja/articleshow-oh0gxug</link>
            <guid isPermaLink="true">https://www.kannadaprabha.in/karnataka-news/state-government-prepares-for-tunnel-road-kudali-puja/articleshow-oh0gxug</guid>
            <pubDate>Sat, 27 Jun 2026 03:30:00 +0530</pubDate>
            <description><![CDATA[ಹೆಬ್ಬಾಳ ಪಶುವೈದ್ಯಕೀಯ ಕಾಲೇಜಿನಿಂದ ಹೆಬ್ಬಾಳ ಕೆರೆವರೆಗೆ 2.2 ಕಿ.ಮೀ. ಉದ್ದದ 6 ಪಥದ ಕಿರು ಸುರಂಗ ರಸ್ತೆಗೆ 3-4 ದಿನಗಳಲ್ಲಿ ಗುದ್ದಲಿ ಪೂಜೆ ನೆರವೇರಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದಾರೆ.]]></description>
            <media:content url="https://static-gi.asianetnews.com/images/01kd26scxzs13rbaekyp2fcd42/----------------------2025-12-22t102818.338-1766379533246.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು : &amp;nbsp;&lt;/strong&gt;ಹೆಬ್ಬಾಳ ಪಶುವೈದ್ಯಕೀಯ ಕಾಲೇಜಿನಿಂದ ಹೆಬ್ಬಾಳ ಕೆರೆವರೆಗೆ 2.2 ಕಿ.ಮೀ. ಉದ್ದದ 6 ಪಥದ ಕಿರು ಸುರಂಗ ರಸ್ತೆಗೆ 3-4 ದಿನಗಳಲ್ಲಿ ಗುದ್ದಲಿ ಪೂಜೆ ನೆರವೇರಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ನೇತೃತ್ವದ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದಾರೆ. ಅಲ್ಲದೆ, ಹೆಬ್ಬಾಳದ ಎಸ್ಟೀಮ್&zwnj; ಮಾಲ್&zwnj;ನಿಂದ ಸಿಲ್ಕ್&zwnj;ಬೋರ್ಡ್&zwnj;ವರೆಗಿನ 16.74 ಕಿ.ಮೀ. ಉದ್ದದ ಟನಲ್&zwnj; ರಸ್ತೆ ನಿರ್ಮಾಣಕ್ಕೆ ಅದಾನಿ ಸೇರಿದಂತೆ 2 ಸಂಸ್ಥೆ ಮಾತ್ರ ಮುಂದೆ ಬಂದಿವೆ. ಹೀಗಾಗಿ ಕಾಂಗ್ರೆಸ್&zwnj; ಹೈಕಮಾಂಡ್&zwnj;ಗೆ ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್&zwnj; ಅವರು ಗಮನಕ್ಕೆ ತಂದಿದ್ದಾರೆ. ಹೈಕಮಾಂಡ್&zwnj; ಒಪ್ಪಿಗೆ ನೀಡಿದರೆ ಆ ಯೋಜನೆಗೂ ಚಾಲನೆ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;ಹೆಬ್ಬಾಳ ಪಶು ವೈದ್ಯಕೀಯ ಕಾಲೇಜಿನಿಂದ ಹೆಬ್ಬಾಳ ಕೆರೆವರೆಗೆ ಟೋಲ್&zwnj; ರಹಿತ ಟನಲ್&zwnj; ರಸ್ತೆ ನಿರ್ಮಾಣ ಮಾಡಲಾಗುತ್ತಿದ್ದು, ಈಗಾಗಲೇ ಟೆಂಡರ್&zwnj; ಪ್ರಕ್ರಿಯೆ ಮುಗಿದಿದೆ.&lt;/p&gt;&lt;h2&gt;&lt;strong&gt;ಬಿಡಿಎಯಿಂದ 7,000 ಕೋಟಿ ರು.:&lt;/strong&gt;&lt;/h2&gt;&lt;p&gt;ಹೆಬ್ಬಾಳ-ಸಿಲ್ಕ್&zwnj;ಬೋರ್ಡ್&zwnj; ಟನಲ್&zwnj; ರಸ್ತೆಯನ್ನು ಬೂಟ್&zwnj; ಮಾದರಿಯಲ್ಲಿ ನಿರ್ಮಿಸುತ್ತಿದ್ದು, ಒಟ್ಟಾರೆ ಯೋಜನಾ ವೆಚ್ಚದ ಶೇ.40 ರಷ್ಟು ಹಣವನ್ನು ವಿಜಿಎಫ್&zwnj; (ವಯಾಬಿಲಿಟಿ ಗ್ಯಾಪ್&zwnj; ಫಂಡಿಂಗ್&zwnj;) ಆಗಿ ಸರ್ಕಾರ ಭರಿಸಬೇಕಾಗುತ್ತದೆ. ಇದಕ್ಕಾಗಿ ಬಿಡಿಎಯಿಂದ 7,000 ಕೋಟಿ ರು. ಒದಗಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಇದಕ್ಕಾಗಿ ಬಿಡಿಎ ಜಮೀನನ್ನು ಹರಾಜು ಮಾಡಿ ಹಣ ಕ್ರೂಢೀಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;h3&gt;&lt;strong&gt;ಪರ್ಯಾಯ ಆಯ್ಕೆಯೇ ಇಲ್ಲ:&amp;nbsp;&lt;/strong&gt;&lt;/h3&gt;&lt;p&gt;ಬಿಜೆಪಿಯು ಟನಲ್&zwnj; ರಸ್ತೆಗೆ ವಿರೋಧಿಸಿದ್ದರೂ ಕೇಂದ್ರ ಸಚಿವ ನಿತಿನ್&zwnj; ಗಡ್ಕರಿ ಪ್ರೋತ್ಸಾಹ ನೀಡುತ್ತಿದ್ದಾರೆ. ನೀವು ಬೆಂಗಳೂರಿನ ರಸ್ತೆಗಳನ್ನು ನಮಗೆ ಹಸ್ತಾಂತರಿಸಿದರೆ ನಾವೇ ಟನಲ್&zwnj; ರಸ್ತೆ ನಿರ್ಮಿಸುತ್ತೇವೆ ಎಂದು ಹೇಳಿದ್ದಾರೆ ಎಂದು ಡಿ.ಕೆ. ಶಿವಕುಮಾರ್&zwnj; ಇತ್ತೀಚೆಗೆ ಹೇಳಿದ್ದರು. ಅಲ್ಲದೆ,ಬೆಂಗಳೂರಿನಲ್ಲಿ 1.35 ಕೋಟಿ ವಾಹನಗಳಿದ್ದು, ಭೂಸ್ವಾಧೀನ ತುಂಬಾ ದುಬಾರಿ ಆಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಟನಲ್&zwnj; ರಸ್ತೆ ಪರ್ಯಾಯ ಎಂಬಂತಾಗಿದೆ. ಮುಂಬೈನಲ್ಲೂ ಏಳು ಕಡೆ ಮಾಡುತ್ತಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲೂ ಟನಲ್&zwnj; ರಸ್ತೆ ನಿರ್ಮಾಣ ಮಾಡುತ್ತೇವೆ ಎಂದು ಸಮರ್ಥಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.&lt;/p&gt;&lt;p&gt;&lt;strong&gt;ಲಾಲ್&zwnj;ಬಾಗ್&zwnj;ಗೆ ಧಕ್ಕೆ ಆಗಲ್ಲ:&amp;nbsp;&lt;/strong&gt;&lt;/p&gt;&lt;p&gt;ಲಾಲ್&zwnj;ಬಾಗ್&zwnj; ಮೂಲಕ ಸುರಂಗ ರಸ್ತೆ ಹಾದು ಹೋಗಲು ವಿರೋಧ ಇದ್ದರೂ ಲಾಲ್&zwnj;ಬಾಗ್&zwnj;ಗೆ ಧಕ್ಕೆಯಾಗುವುದಿಲ್ಲ. ಲಾಲ್&zwnj;ಬಾಗ್&zwnj; ದಾಟಿದ ಬಳಿಕ ಮೂಲೆಯಲ್ಲಿ ಎಕ್ಸಿಟ್&zwnj; ನೀಡಲಾಗುತ್ತದೆ. ಜತೆಗೆ ವಿಧಾನಸೌಧದಿಂದ 1 ಕಿ.ಮೀ. ದೂರದಲ್ಲಿ ಎಂಟ್ರಿ, ಎಕ್ಸಿಟ್&zwnj; ವಿನ್ಯಾಸ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;]]></content:encoded>
            <category><![CDATA[karnataka]]></category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/karnataka-news/state-government-prepares-for-tunnel-road-kudali-puja/articleshow-oh0gxug"/>
        </item>
        <item>
            <title><![CDATA[ಬೆಂಗಳೂರು ನಗರದಲ್ಲಿ 15 ಲಕ್ಷ ಸಸಿ ನೆಡುವ ಅಭಿಯಾನ]]></title>
            <link>https://www.kannadaprabha.in/karnataka-news/campaign-to-plant-15-lakh-saplings-in-bengaluru-city/articleshow-ld6eo2x</link>
            <guid isPermaLink="true">https://www.kannadaprabha.in/karnataka-news/campaign-to-plant-15-lakh-saplings-in-bengaluru-city/articleshow-ld6eo2x</guid>
            <pubDate>Sat, 27 Jun 2026 03:30:00 +0530</pubDate>
            <description><![CDATA[ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಅಂಗವಾಗಿ ಬೆಂಗಳೂರು ನಗರದಲ್ಲಿ 15 ಲಕ್ಷ ಗಿಡ ನೆಡುವ ಕಾರ್ಯಕ್ರಮಕ್ಕೆ ಶನಿವಾರ ಬೆಳಗ್ಗೆ 7.15ಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಬಿಡಿಎ ಅಧ್ಯಕ್ಷ ಎನ್‌.ಎ.ಹ್ಯಾರೀಸ್‌ ಅವರು ಚಾಲನೆ ನೀಡಲಿದ್ದಾರೆ.]]></description>
            <media:content url="https://static-gi.asianetnews.com/images/01kv27hkke7t2nztk4cjs1v8aa/----------------------2026-06-14t102121.411-1781412712046.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಬೆಂಗಳೂರು : &amp;nbsp;&lt;/strong&gt;ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಅಂಗವಾಗಿ ಬೆಂಗಳೂರು ನಗರದಲ್ಲಿ 15 ಲಕ್ಷ ಗಿಡ ನೆಡುವ ಕಾರ್ಯಕ್ರಮಕ್ಕೆ ಶನಿವಾರ ಬೆಳಗ್ಗೆ 7.15ಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಮತ್ತು ಬಿಡಿಎ ಅಧ್ಯಕ್ಷ ಎನ್&zwnj;.ಎ.ಹ್ಯಾರೀಸ್&zwnj; ಅವರು ಚಾಲನೆ ನೀಡಲಿದ್ದಾರೆ.&lt;/p&gt;&lt;h2&gt;ಹಸಿರು ನಗರನ್ನಾಗಿ ಪರಿವರ್ತಿಸುವ ದೂರದೃಷ್ಟಿ&lt;/h2&gt;&lt;p&gt;ಬೆಂಗಳೂರನ್ನು ಐಟಿ ಹಬ್&zwnj; ಮಾತ್ರವಲ್ಲದೆ ಹಸಿರು ನಗರನ್ನಾಗಿ ಪರಿವರ್ತಿಸುವ ದೂರದೃಷ್ಟಿಯಿಂದ ದೀರ್ಘಕಾಲದ ಪರಿಸರ ಸುಸ್ಥಿರತೆಗಾಗಿ 15ಲಕ್ಷ ಸಸಿ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಚಲ್ಲಘಟ್ಟ ಮೆಟ್ರೋ ನಿಲ್ಧಾಣದ ಬಳಿಯಿಂದ 10ಕೆ ರನ್&zwnj; ಮತ್ತು 5ಕೆ ವಾಕಥಾನ್&zwnj; ಹಾಗೂ 15 ಲಕ್ಷ ಸಸಿ ನೆಡುವ ಅಭಿಯಾನ ಆರಂಭಗೊಳ್ಳಲಿದ್ದು ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಮತ್ತು ಸಂಘಸಂಸ್ಥೆಗಳು ಸೇರಿದಂತೆ ಸುಮಾರು ಒಂದು ಲಕ್ಷಕ್ಕೂ ಅಧಿಕ ಸ್ವಯಂಸೇವಕರು ಪಾಲ್ಗೊಳ್ಳಿದ್ದಾರೆ. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಒಂದರಲ್ಲೇ 5 ಲಕ್ಷ ಸಸಿಗಳು ನೆಡಲಾಗುತ್ತಿದೆ.&lt;/p&gt;&lt;h3&gt;10 ಲಕ್ಷ ಸಸಿ &amp;nbsp;ಬನಶಂಕರಿ 6ನೇ ಹಂತ ಸೇರಿ ಇತರ ಬಿಡಿಎ ಬಡಾವಣೆಗಳಲ್ಲಿ ನೆಡಲಾಗುವುದು&lt;/h3&gt;&lt;p&gt;ಉಳಿದ 10 ಲಕ್ಷ ಸಸಿಗಳನ್ನು ಬನಶಂಕರಿ 6ನೇ ಹಂತ ಸೇರಿದಂತೆ ಇತರ ಬಿಡಿಎ ಬಡಾವಣೆಗಳಲ್ಲಿ ಹಾಗೂ ಪ್ರಮುಖ ರಸ್ತೆಗಳ ಬದಿಗಳಲ್ಲಿ ವಿತರಿಸಿ ನೆಡಲಾಗುವುದು. ಒಟ್ಟಾರೆಯಾಗಿ ಈ ಯೋಜನೆಯು 15 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಿದೆ. ಮಾವು, ಹಲಸು, ಬೇವಿನ ಮರ, ಸಪೋಟ ಮುಂತಾದ ವೈವಿಧ್ಯಮಯ ಸ್ಥಳೀಯ ಮತ್ತು ಔಷಧೀಯ ಪ್ರಬೇಧಗಳೊಂದಿಗೆ ಸುಮಾರು 350 ಬಗೆಯ ಸ್ಥಳೀಯ ಔಷಧೀಯ ಸಸ್ಯಗಳನ್ನು ನೆಡಲು ಉದ್ದೇಶಿಸಲಾಗಿದೆ.&lt;/p&gt;]]></content:encoded>
            <category><![CDATA[karnataka]]></category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/karnataka-news/campaign-to-plant-15-lakh-saplings-in-bengaluru-city/articleshow-ld6eo2x"/>
        </item>
        <item>
            <title><![CDATA[ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಸಣ್ಣ ನಗರಗಳ ಉದ್ಯಮಿಗಳು : ವಿಶ್ವ ಎಂಎಸ್ಎಂಇ ದಿನ]]></title>
            <link>https://www.kannadaprabha.in/special-news/small-town-entrepreneurs-stepping-into-the-global-market-world-msme-day-special/articleshow-f4lnkg6</link>
            <guid isPermaLink="true">https://www.kannadaprabha.in/special-news/small-town-entrepreneurs-stepping-into-the-global-market-world-msme-day-special/articleshow-f4lnkg6</guid>
            <pubDate>Sat, 27 Jun 2026 00:15:00 +0530</pubDate>
            <description><![CDATA[ಸಣ್ಣ ನಗರಗಳ ಉದ್ಯಮಿಗಳು ಅಮೆಜಾನ್ ಮೂಲಕ ಬೆಳವಣಿಗೆ ಹೊಂದುತ್ತಿರುವ ಕುರಿತು ಅಮೆಜಾನ್ ಇಂಡಿಯಾದ ಸೆಲ್ಲರ್ ಪಾರ್ಟನರ್ ಸರ್ವಿಸಸ್‌ನ ನಿರ್ದೇಶಕರಾದ (ಪ್ರೊಡಕ್ಟ್ ಮ್ಯಾನೇಜ್‌ಮೆಂಟ್) ವಿಕ್ರಮ್ ದೇಶಪಾಂಡೆ ಅವರು ವಿಶ್ಲೇಷಣೆ ನಡೆಸಿದ್ದಾರೆ. ಅವರ ವಿಶ್ಲೇಷಣಾತ್ಮಕ ಬರಹ ಇಲ್ಲಿದೆ.]]></description>
            <media:content url="https://static-assets.asianetnews.com/kp/json/26062026/pictures/AMAZON_282.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು : &amp;nbsp;&lt;/strong&gt;ಅಮೆಜಾನ್ ಇಂಡಿಯಾದ ಸೆಲ್ಲರ್ ಪಾರ್ಟನರ್ ಸರ್ವಿಸಸ್&zwnj;ನ ನಿರ್ದೇಶಕರಾದ (ಪ್ರೊಡಕ್ಟ್ ಮ್ಯಾನೇಜ್&zwnj;ಮೆಂಟ್) ವಿಕ್ರಮ್ ದೇಶಪಾಂಡೆ ಅವರು ಸಣ್ಣ ನಗರಗಳ ಉದ್ಯಮಿಗಳ ಬೆಳವಣಿಗೆ ಕುರಿತು ವಿಶ್ಲೇಷಣೆ ನಡೆಸಿದ್ದಾರೆ. ಅವರ ವಿಶ್ಲೇಷಣಾತ್ಮಕ ಬರಹ ಇಲ್ಲಿದೆ:ರಾಜಸ್ಥಾನದ ಜೈಪುರದಲ್ಲಿ ಪ್ರಸನ್ನ ಪಾರೀಕ್ ಅವರು ಸಾಂಪ್ರದಾಯಿಕ ಆಯುರ್ವೇದ ಜ್ಞಾನವನ್ನು ಆಧುನಿಕ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಅಶ್ಪ್&zwnj; ವೇದ ಎಂಬ ಬ್ರ್ಯಾಂಡ್ ಆರಂಭಿಸಿದ್ದರು.&lt;/p&gt;&lt;p&gt;&amp;nbsp;ತೀವ್ರ ಪೈಪೋಟಿ ಇರುವ ಸೌಂದರ್ಯ ಮತ್ತು ವೆಲ್&zwnj; ನೆಸ್ ಮಾರುಕಟ್ಟೆಯಲ್ಲಿ ತಳವೂರಲು ಅವರಿಗೆ ಅಮೆಜಾನ್ ಡಿಜಿಟಲ್ ವೇದಿಕೆ ಭದ್ರ ಬುನಾದಿ ಹಾಕಿಕೊಟ್ಟಿತು. ರಾಜಸ್ಥಾನಕ್ಕೆ ಮಾತ್ರ ಸೀಮಿತವಾಗಿದ್ದ ಈ ಉತ್ಪನ್ನಗಳು, ಇಂದು ದೇಶದ ಮೂಲೆ ಮೂಲೆಗಳನ್ನು ತಲುಪಿವೆ. ಪ್ರಸ್ತುತ ಈ ಸಂಸ್ಥೆಯು ಅಮೆರಿಕ, ಬ್ರಿಟನ್ ಹಾಗೂ ಯುರೋಪ್ ಮಾರುಕಟ್ಟೆಗಳಿಗೂ ವಿಸ್ತರಿಸಲು ಸಜ್ಜಾಗಿದೆ. ಇದು ಸಣ್ಣ ನಗರಗಳ ಉದ್ಯಮಿಗಳಿಗೆ ತಂತ್ರಜ್ಞಾನ ಮತ್ತು ಡಿಜಿಟಲ್ ಮೂಲಸೌಕರ್ಯ ಸಿಕ್ಕರೆ ಭೌಗೋಳಿಕ ಮಿತಿಗಳನ್ನು ಮೀರಿ ಬೆಳೆಯಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.&lt;/p&gt;&lt;p&gt;ಈ ಮೂಲಕ ದೇಶದ ಆರ್ಥಿಕ ಪ್ರಗತಿಯಲ್ಲಿ ಕೇವಲ ಮುಂಬೈ, ದೆಹಲಿ, ಬೆಂಗಳೂರಿನಂತಹ ಮೆಟ್ರೋ ನಗರಗಳು ಮಾತ್ರವಲ್ಲದೆ, ದ್ವಿತೀಯ ಮತ್ತು ತೃತೀಯ ಹಂತದ ನಗರಗಳೂ ಪ್ರಮುಖ ಪಾತ್ರ ವಹಿಸುತ್ತಿವೆ.&lt;/p&gt;&lt;p&gt;ಪ್ರಸ್ತುತ ಮೊರಾದಾಬಾದ್&zwnj; ನ ಲೋಹದ ಪಾತ್ರೆಗಳ ಉದ್ಯಮ, ಸೂರತ್&zwnj; ನ ಜವಳಿ ಉದ್ಯಮ ಹಾಗೂ ಕೊಯಮತ್ತೂರಿನ ಉತ್ಪಾದನಾ ವಲಯಗಳು ದೇಶದ ಪ್ರಮುಖ ವಾಣಿಜ್ಯ ಕೇಂದ್ರಗಳಾಗಿ ಮಾರ್ಪಡುತ್ತಿವೆ. ದೇಶದಲ್ಲಿ ಸದ್ಯ ಸುಮಾರು 6 ಕೋಟಿ ಎಂಎಸ್&zwnj;ಎಂಇಗಳಿದ್ದು, ಇವು ಭಾರತದ ಒಟ್ಟು ಜಿಡಿಪಿಗೆ ಶೇ.30ರಷ್ಟು ಕೊಡುಗೆ ನೀಡುವ ಮೂಲಕ ಆರ್ಥಿಕತೆಯ ಬೆನ್ನೆಲುಬಾಗಿ ನಿಂತಿವೆ. ಅದರಲ್ಲೂ ವಿಶೇಷವಾಗಿ, ಮುಂದಿನ 2030ರ ವೇಳೆಗೆ ಭಾರತದ ಇ-ಕಾಮರ್ಸ್ ಮಾರುಕಟ್ಟೆಯು ಸುಮಾರು 345 ಬಿಲಿಯನ್ ಡಾಲರ್&zwnj; ತಲುಪುವ ಅಂದಾಜಿದ್ದು, ಇದಕ್ಕೆ ದ್ವಿತೀಯ ಮತ್ತು ತೃತೀಯ ಹಂತದ ನಗರಗಳ ಗ್ರಾಹಕರೇ ಪ್ರಮುಖ ಕಾರಣವಾಗಲಿದ್ದಾರೆ.&amp;nbsp;&lt;/p&gt;&lt;h2&gt;&lt;strong&gt;ಮೆಟ್ರೋ ಆಚೆಗಿನ ನಗರಗಳಲ್ಲಿ ಉದ್ಯಮಶೀಲತೆಯ ಹೊಸ ಅಲೆ&lt;/strong&gt;&lt;/h2&gt;&lt;p&gt;ದೇಶದ ಮಹಾನಗರಗಳ ಆಚೆಗಿನ ಸಣ್ಣ ಸಣ್ಣ ಪಟ್ಟಣಗಳಲ್ಲಿ ಉದ್ಯಮಶೀಲತೆ ಮತ್ತು ವ್ಯಾಪಾರ ಜಾಲಗಳು ಅತ್ಯಂತ ವೇಗವಾಗಿ ಬೆಳೆಯುತ್ತಿವೆ. ಜಗತ್ತಿನ ಅತ್ಯಂತ ಬಲಿಷ್ಠ ಜವಳಿ ಮತ್ತು ವಜ್ರ ಸಂಸ್ಕರಣಾ ಉದ್ಯಮವನ್ನು ಹೊಂದಿರುವ ಸೂರತ್ ಹಾಗೂ ಪ್ರಿಸಿಷನ್ ಇಂಜಿನಿಯರಿಂಗ್ ಹಬ್ ಆಗಿ ಗುರುತಿಸಿಕೊಂಡಿರುವ ಕೊಯಮತ್ತೂರು ನಗರಗಳು ದಶಕಗಳ ಕಾಲ ಜಾಗತಿಕ ಮಟ್ಟದಲ್ಲಿ ತೆರೆಮರೆಯಲ್ಲೇ ಉಳಿದಿದ್ದವು. ಅಂತೆಯೇ, ಜೈಪುರದ ಕುಶಲಕರ್ಮಿಗಳು ತಯಾರಿಸುವ ಅದ್ಭುತ ಕರಕುಶಲ ವಸ್ತುಗಳು ದೆಹಲ ತಲುಪುವ ಮುನ್ನವೇ ವಿದೇಶಿ ಮಾರುಕಟ್ಟೆಗಳಲ್ಲಿ ಸದ್ದು ಮಾಡುತ್ತಿದ್ದವು.&lt;/p&gt;&lt;p&gt;ಹಿಂದಿನ ದಶಕಗಳಲ್ಲಿ ಇಂತಹ ಸಣ್ಣ ಉದ್ಯಮಗಳು ಕೇವಲ ಸ್ಥಳೀಯ ಬೇಡಿಕೆ ಹಾಗೂ ಸೀಮಿತ ವಿತರಣಾ ಜಾಲಗಳ ಕಾರಣದಿಂದಾಗಿ ಬೆಳವಣಿಗೆ ಕಾಣದೆ ಸಂಕಷ್ಟ ಎದುರಿಸುತ್ತಿದ್ದವು. ಆದರೆ, ಇಂದಿನ ಡಿಜಿಟಲ್ ಕಾಮರ್ಸ್ ಯುಗವು ಈ ಭೌಗೋಳಿಕ ಮಿತಿಗಳನ್ನು ಸಂಪೂರ್ಣವಾಗಿ ಅಳಿಸಿಹಾಕಿದೆ. ಸಾವಿರಾರು ಕರಕುಶಲ ಸಂಸ್ಥೆಗಳು ಮತ್ತು ಮೊದಲ ತಲೆಮಾರಿನ ಉದ್ಯಮಿಗಳು ಇಂದು ದೇಶಾದ್ಯಂತ ಗ್ರಾಹಕರನ್ನು ತಲುಪಲು ಹಾಗೂ ಅವರ ನಂಬಿಕೆ ಗಳಿಸಲು ಈ ತಂತ್ರಜ್ಞಾನ ನೆರವಾಗಿದೆ. ಜೈಪುರದ ಒಬ್ಬ ಸಾಮಾನ್ಯ ಹ್ಯಾಂಡಿಕ್ರಾಫ್ಟ್ ವ್ಯಾಪಾರಿ ಯಾವುದೇ ಭೌತಿಕ ಮಳಿಗೆಯನ್ನು ತೆರೆಯದೆಯೇ ದೇಶದ ಯಾವುದೇ ಮೂಲೆಯ ಬೇಡಿಕೆಯನ್ನು ಪೂರೈಸಬಹುದಾಗಿದೆ.&lt;/p&gt;&lt;p&gt;ಕೇವಲ ಗ್ರಾಹಕರ ಬೇಡಿಕೆ ಮಾತ್ರವಲ್ಲದೆ, ಇತ್ತೀಚಿನ ದಿನಗಳಲ್ಲಿ ಸಣ್ಣ ನಗರಗಳ ಉದ್ಯಮಿಗಳ ಆಲೋಚನಾ ಶೈಲಿಯೂ ಡಿಜಿಟಲ್ ಮಯವಾಗಿದೆ.&amp;nbsp;&lt;/p&gt;&lt;h3&gt;&lt;strong&gt;ಸಮಾನ ಅವಕಾಶ ಕಲ್ಪಿಸಿದ ಡಿಜಿಟಲ್ ಮೂಲಸೌಕರ್ಯ:&lt;/strong&gt;&lt;/h3&gt;&lt;p&gt;ಡಿಜಿಟಲ್ ಕಾಮರ್ಸ್ ವೇದಿಕೆಗಳು ಎಂಎಸ್&zwnj;ಎಂಇ ಸಂಸ್ಥೆಗಳು ತಮ್ಮ ಸ್ಥಳೀಯ ಗಡಿಗಳನ್ನು ದಾಟಿ ಬೆಳೆಯಲು ಪ್ರಮುಖ ಅಸ್ತ್ರವಾಗಿ ಮಾರ್ಪಟ್ಟಿವೆ. ಈ ನಿಟ್ಟಿನಲ್ಲಿ ಅಮೆಜಾನ್ ಮಾರ್ಕೆಟ್ ಪ್ಲೇಸ್ ಹಿಂದೆ ಕೇವಲ ದೊಡ್ಡ ಬ್ರ್ಯಾಂಡ್&zwnj; ಗಳಿಗೆ ಮಾತ್ರ ಸೀಮಿತವಾಗಿದ್ದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಸಣ್ಣ ಉದ್ಯಮಗಳಿಗೂ ಲಭ್ಯವಾಗುವಂತೆ ಮಾಡಿದೆ. ಉದಾಹರಣೆಗೆ, ಎಐ ಆಧಾರಿತ ಲಿಸ್ಟಿಂಗ್ ಪರಿಕರಗಳು ಮಾರಾಟಗಾರರು ತಮ್ಮ ಉತ್ಪನ್ನಗಳ ವಿವರವಾದ ಕ್ಯಾಟಲಾಗ್ ಸಿದ್ಧಪಡಿಸಲು ನೆರವಾಗುತ್ತಿವೆ. ತಾಂತ್ರಿಕ ಜಟಿಲತೆಗಳಿಲ್ಲದೆ, ಸಾಮಾನ್ಯ ಇಂಗ್ಲಿಷ್ ಹಾಗೂ ಹಿಂಗ್ಲಿಷ್ (ಹಿಂದಿ+ಇಂಗ್ಲಿಷ್) ಭಾಷೆಗಳಲ್ಲಿ ದಿನದ 24 ಗಂಟೆಯೂ ಲಭ್ಯವಿರುವ ಎಐ-ಸೆಲ್ಲರ್ ಅಸಿಸ್ಟೆಂಟ್ ವ್ಯವಸ್ಥೆಯು ಉದ್ಯಮಿಗಳ ಆನ್&zwnj; ಲೈನ್ ಮಳಿಗೆ ನಿರ್ವಹಣೆಯ ಹೊರೆಯನ್ನು ಗಣನೀಯವಾಗಿ ತಗ್ಗಿಸಿದೆ.&lt;/p&gt;&lt;p&gt;ಈ ಆಧುನಿಕ ತಂತ್ರಜ್ಞಾನದ ಬಳಕೆಯಿಂದಾಗಿ ದಿನನಿತ್ಯದ ಸಾಂಪ್ರದಾಯಿಕ ಕೆಲಸಗಳಿಗೆ ತಗಲುತ್ತಿದ್ದ ಸಮಯವು ಶೇ.70 ರಷ್ಟು ಉಳಿತಾಯವಾಗುತ್ತಿದ್ದು, ಉತ್ಪನ್ನಗಳು ಆನ್&zwnj; ಲೈನ್&zwnj; ನಲ್ಲಿ ಗ್ರಾಹಕರಿಗೆ ಸುಲಭವಾಗಿ ಹುಡುಕಲು ಸಿಗುವಂತಾಗಿದೆ. ವಿಸ್ತಾರವಾದ ವಿತರಣಾ ಸೌಲಭ್ಯಗಳ ಕಾರಣದಿಂದಾಗಿ, ಲಕ್ನೋದ ಒಬ್ಬ ಉದ್ಯಮಿ ಹೈದರಾಬಾದ್&zwnj;ನ ಗ್ರಾಹಕನಿಗೆ ಕೇವಲ ಎರಡು ದಿನಗಳಲ್ಲಿ ಆರ್ಡರ್ ತಲುಪಿಸುವ ಭರವಸೆ ನೀಡಿ ಅದನ್ನು ಈಡೇರಿಸಲು ಸಾಧ್ಯವಾಗುತ್ತಿದೆ. ಇದರೊಂದಿಗೆ ಹೊಸ ಮಾರಾಟಗಾರರಿಗೆ ನೀಡಲಾಗುವ ವಿಶೇಷ ರಿವಾರ್ಡ್ ಪ್ರೋಗ್ರಾಂಗಳು ಮತ್ತು ರೂ.1000 ಕ್ಕಿಂತ ಕಡಿಮೆ ಬೆಲೆಯ ಉತ್ಪನ್ನಗಳ ಮೇಲಿನ ಶೂನ್ಯ ರೆಫರಲ್ ಶುಲ್ಕದಂತಹ ಸರಳೀಕೃತ ನಿಯಮಗಳು ಸಣ್ಣ ಉದ್ಯಮಗಳು ಯಾವುದೇ ಆತಂಕವಿಲ್ಲದೆ ಇ-ಕಾಮರ್ಸ್ ಕ್ಷೇತ್ರಕ್ಕೆ ಪ್ರವೇಶಿಸಲು ಉತ್ತೇಜನ ನೀಡುತ್ತಿವೆ. ಈ ಎಲ್ಲಾ ಪ್ರಯತ್ನಗಳ ಫಲವಾಗಿ ಸಣ್ಣ ನಗರಗಳ ಉದ್ಯಮಿಗಳು ಅಮೆಜಾನ್ ವೇದಿಕೆಯಲ್ಲಿ ದೀರ್ಘಾವಧಿಯ ಯಶಸ್ವಿ ಉದ್ಯಮಗಳನ್ನು ಸ್ಥಾಪಿಸುತ್ತಿದ್ದಾರೆ.&amp;nbsp;&lt;/p&gt;&lt;p&gt;&lt;strong&gt;ಎಂಎಸ್&zwnj;ಎಂಇಗಳ ಬೆಳವಣಿಗೆಗೆ ಪೂರಕ ವ್ಯವಸ್ಥೆ:&lt;/strong&gt;&lt;/p&gt;&lt;p&gt;ಆನ್&zwnj; ಲೈನ್ ಮಾರುಕಟ್ಟೆಯ ಮೂಲಕ ತಮ್ಮ ಮೊದಲ 500 ಆರ್ಡರ್&zwnj;ಗಳನ್ನು ಪಡೆಯುವ ಒಬ್ಬ ಸಾಮಾನ್ಯ ಉದ್ಯಮಿಗೆ ತಕ್ಷಣವೇ ಕೆಲವು ಸಂಕೀರ್ಣ ಪ್ರಶ್ನೆಗಳು ಎದುರಾಗುತ್ತವೆ. ದೊಡ್ಡ ಮಟ್ಟದಲ್ಲಿ ದಾಸ್ತಾನು ನಿರ್ವಹಣೆ ಮಾಡುವುದು ಹೇಗೆ? ಗ್ರಾಹಕರು ವಾಪಸ್ ಕಳುಹಿಸುವ ಉತ್ಪನ್ನಗಳನ್ನು ನಿಭಾಯಿಸುವುದು ಹೇಗೆ? ಮತ್ತು ಇಡೀ ಭಾರತದಾದ್ಯಂತ ತಲುಪುವಂತಹ ಒಂದು ಬ್ರ್ಯಾಂಡ್ ಅನ್ನು ಕಟ್ಟುವುದು ಹೇಗೆ? ಎಂಬ ಸವಾಲುಗಳು ಮೂಡುತ್ತವೆ.&lt;/p&gt;&lt;p&gt;ಸಣ್ಣ ಉದ್ಯಮಗಳಿಗೆ ಸಾಲದ ಸೌಲಭ್ಯ ಒದಗಿಸುವುದು, ಸ್ಟಾರ್ಟ್-ಅಪ್ ಧನಸಹಾಯ ಮತ್ತು ಡಿಜಿಟಲ್ ಮಾರುಕಟ್ಟೆಯಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಒಎನ್&zwnj;ಡಿಸಿ ಮತ್ತು ಜೆಮ್ ನಂತಹ ಸರ್ಕಾರದ ಪ್ರಮುಖ ಯೋಜನೆಗಳು ಈಗಾಗಲೇ ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿವೆ. ಇದೇ ವೇಳೆ, ಸರಬರಾಜು ಜಾಲ, ಗೋದಾಮು ನಿರ್ವಹಣೆ, ಡೆಲಿವರಿ ಪರಿಹಾರಗಳು, ಡಿಜಿಟಲ್ ಕೌಶಲ್ಯಗಳು ಮತ್ತು ಆಧುನಿಕ ತಂತ್ರಜ್ಞಾನದ ಅಳವಡಿಕೆಯು ಉದ್ಯಮಗಳು ದೊಡ್ಡ ಮಟ್ಟದಲ್ಲಿ ಬೆಳೆಯಲು ಪ್ರಮುಖ ಪಾತ್ರ ವಹಿಸುತ್ತಿವೆ. ಆನ್&zwnj; ಲೈನ್ ಮಾರುಕಟ್ಟೆಯನ್ನು ಬಳಸುವ ಮಾರಾಟಗಾರರಿಗೆ ಇನ್ವೆಂಟರಿ ನಿರ್ವಹಣೆ, ಆರ್ಡರ್ ಪ್ರಕ್ರಿಯೆ ಮತ್ತು ದೇಶಾದ್ಯಂತ ವಿತರಣೆಯನ್ನು ಸರಳಗೊಳಿಸಲು ಕಾರ್ಯಾಚರಣೆಯ ಬೆಂಬಲ ಸೇವೆಗಳು ನೆರವಾಗುತ್ತಿವೆ. ದೊಡ್ಡ ಮಟ್ಟದ ಆರಂಭಿಕ ಬಂಡವಾಳ ಹೂಡಿಕೆ ಇಲ್ಲದೆಯೇ ವಿವಿಧ ಪ್ರದೇಶಗಳ ಗ್ರಾಹಕರಿಗೆ ಸೇವೆ ನೀಡಲು ಬಯಸುವ ಉದ್ಯಮಗಳಿಗೆ ಈ ವ್ಯವಸ್ಥೆಗಳು ಅತ್ಯಂತ ಉಪಯುಕ್ತವಾಗಿವೆ. ಇಂತಹ ಬೆಂಬಲದ ಪ್ರಭಾವವು ಇಂದು ದೇಶದ ಹಲವು ಉದಯೋನ್ಮುಖ ಬ್ರ್ಯಾಂಡ್&zwnj; ಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇಂತಹ ಲಾಜಿಸ್ಟಿಕ್ಸ್ ಸೌಲಭ್ಯಗಳಿಂದಾಗಿ ತಾವು ಉತ್ಪನ್ನಗಳ ಗುಣಮಟ್ಟ ಸುಧಾರಣೆ, ಗ್ರಾಹಕರ ತೃಪ್ತಿ ಮತ್ತು ಬ್ರ್ಯಾಂಡ್ ನಿರ್ಮಾಣದ ಕಡೆಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗಿದೆ ಎಂದು ಹಲವು ಉದ್ಯಮಿಗಳು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.&amp;nbsp;&lt;/p&gt;&lt;p&gt;&lt;strong&gt;ಭಾರತದ ಪ್ರತಿಯೊಂದು ಹೊಸ ಪಿನ್-ಕೋಡ್&zwnj;ಗಳ ಸಬಲೀಕರಣ:&lt;/strong&gt;&lt;/p&gt;&lt;p&gt;ಉದ್ಯಮಶೀಲತೆಯ ಅವಕಾಶಗಳು ಕೇವಲ ಕೆಲವು ಪ್ರಮುಖ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದರೆ ಭಾರತವು ಜಾಗತಿಕ ಉತ್ಪಾದನೆ ಮತ್ತು ಬಳಕೆಯ ಶಕ್ತಿ ಕೇಂದ್ರವಾಗಲು ಸಾಧ್ಯವಿಲ್ಲ. ಮುಂದಿನ ದಶಕದ ಆರ್ಥಿಕ ಬೆಳವಣಿಗೆಯು, ಭಾರತದ (ಗ್ರಾಮೀಣ ಮತ್ತು ಸಣ್ಣ ನಗರ ಪ್ರದೇಶಗಳ) ಲಕ್ಷಾಂತರ ಸಣ್ಣ ಉದ್ಯಮಗಳು ಎಷ್ಟು ಪರಿಣಾಮಕಾರಿಯಾಗಿ ಬೆಳೆಯುತ್ತವೆ, ರಾಷ್ಟ್ರಮಟ್ಟದಲ್ಲಿ ಹೇಗೆ ಪೈಪೋಟಿ ನೀಡುತ್ತವೆ ಮತ್ತು ಜಾಗತಿಕ ವಾಣಿಜ್ಯದಲ್ಲಿ ಹೇಗೆ ಸಕ್ರಿಯವಾಗಿ ಪಾಲ್ಗೊಳ್ಳುತ್ತವೆ ಎಂಬುದರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ.&lt;/p&gt;&lt;p&gt;ಇದನ್ನು ಸಾಕಾರಗೊಳಿಸಲು ಅಗತ್ಯವಿರುವ ಭದ್ರವಾದ ಮೂಲಸೌಕರ್ಯಗಳು ಇಂದು ದೇಶದಲ್ಲಿ ಲಭ್ಯವಿವೆ. ಏಕೆಂದರೆ ಭಾರತದ ಮುಂದಿನ ಆರ್ಥಿಕ ಸ್ಥಿತ್ಯಂತರವು ಕೇವಲ ಬೆಂಗಳೂರು, ಮುಂಬೈ ಅಥವಾ ಗುರಗಾಂವ್&zwnj;ನಂತಹ ಮಹಾನಗರಗಳಲ್ಲಿ ಮಾತ್ರ ನಿರ್ಮಾಣವಾಗುತ್ತಿಲ್ಲ. ಬದಲಿಗೆ ಮೊರಾದಾಬಾದ್, ಸೂರತ್, ಕೊಯಮತ್ತೂರು, ರಾಜ್&zwnj;ಕೋಟ್, ಕಾನ್ಪುರ ಮತ್ತು ಒಂದು ಕಾಲದಲ್ಲಿ ಅತ್ಯಂತ ಸಣ್ಣ ಉದ್ಯಮ ಕೇಂದ್ರಗಳೆಂದು ಪರಿಗಣಿಸಲ್ಪಟ್ಟಿದ್ದ ದೇಶದ ಸಾವಿರಾರು ಪಿನ್-ಕೋಡ್&zwnj;ಗಳ ವ್ಯಾಪ್ತಿಯಲ್ಲಿ ಈ ಕ್ರಾಂತಿ ಸದ್ದಿಲ್ಲದೆ ನಡೆಯುತ್ತಿದೆ.&lt;/p&gt;]]></content:encoded>
            <category><![CDATA[special]]></category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/special-news/small-town-entrepreneurs-stepping-into-the-global-market-world-msme-day-special/articleshow-f4lnkg6"/>
        </item>
        <item>
            <title><![CDATA[ಕೇತನ್‌ ಹತ್ಯೆಗೆ ಪ್ರಚೋದಿಸಿದ್ದು ಸಿಯಾಳ ಪ್ರಿಯತಮ ಚೇತನ್‌]]></title>
            <link>https://www.kannadaprabha.in/india-news/chaudhary-instigated-goyal-to-eliminate-her-fiancee-police/articleshow-stvh7i7</link>
            <guid isPermaLink="true">https://www.kannadaprabha.in/india-news/chaudhary-instigated-goyal-to-eliminate-her-fiancee-police/articleshow-stvh7i7</guid>
            <pubDate>Sat, 27 Jun 2026 00:30:00 +0530</pubDate>
            <description><![CDATA[ಕೇತನ್ ಅಗರ್ವಾಲ್ ಹತ್ಯೆ ಮಾಡಲು ಸಿಯಾಗೆ ಆಕೆಯ ಪ್ರಿಯಕರ ಚೇತನ್‌ ಪ್ರಚೋದನೆ ನೀಡಿದ್ದ ಎಂಬ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ಸಿಯಾ ಮತ್ತು ಚೇತನ್‌ ಪರಸ್ಪರರ ಮೇಲೆ ಆರೋಪ ಹೊರಿಸಿದ್ದರಾದರೂ, ಇಬ್ಬರ ಹೇಳಿಕೆಯನ್ನು ಪರಿಶೀಲಿಸಿದಾಗ ಚೇತನ್‌ ಪ್ರಚೋದನೆ ನೀಡಿದ್ದು ತಿಳಿದುಬಂದಿದೆ]]></description>
            <media:content url="https://static-assets.asianetnews.com/kp/json/26062026/pictures/SIYA_AND_CHETAN_97.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪುಣೆ&lt;/strong&gt;: ಕೇತನ್ ಅಗರ್ವಾಲ್ ಹತ್ಯೆ ಮಾಡಲು ಸಿಯಾಗೆ ಆಕೆಯ ಪ್ರಿಯಕರ ಚೇತನ್&zwnj; ಪ್ರಚೋದನೆ ನೀಡಿದ್ದ ಎಂಬ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ಸಿಯಾ ಮತ್ತು ಚೇತನ್&zwnj; ಪರಸ್ಪರರ ಮೇಲೆ ಆರೋಪ ಹೊರಿಸಿದ್ದರಾದರೂ, ಇಬ್ಬರ ಹೇಳಿಕೆಯನ್ನು ಪರಿಶೀಲಿಸಿದಾಗ ಚೇತನ್&zwnj; ಪ್ರಚೋದನೆ ನೀಡಿದ್ದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;p&gt;ಹುಟ್ಟುಹಬ್ಬದ ನೆಪದಲ್ಲಿ ಜೂ.18ರಂದು ಕೇತನ್&zwnj;ರನ್ನು ಪುಣೆಯ ಲೋಹಗಡ ಕೋಟೆಗೆ ಕರೆಸಿದ್ದ ಸಿಯಾ, ಅಲ್ಲಿ ಬೆಟ್ಟಂದ ಮೇಲಿನ 400 ಅಡಿ ಆಳದ ಕಂದಕಕ್ಕೆ ಬಾವಿ ಪತಿಯನ್ನು ತಳ್ಳಿ ಹತ್ಯೆ ಮಾಡಿದ್ದಳು.&lt;/p&gt;&lt;h2&gt;&lt;strong&gt;ನಿಕಂ ನೇಮಕ?:&lt;/strong&gt;&lt;/h2&gt;&lt;p&gt;ಈ ನಡುವೆ, ಖ್ಯಾತ ವಕೀಲ ಉಜ್ವಲ್ ನಿಕಂ ಅವರನ್ನು ವಿಶೇಷ ಅಭಿಯೋಜಕರನ್ನಾಗಿ ನೇಮಿಸಿ ತ್ವರಿತ ನ್ಯಾಯಾಲಯದ ವಿಚಾರಣೆ ನಡೆಸಬೇಕೆಂಬ ಕೇತನ್&zwnj; ಕುಟುಂಬದ ಬೇಡಿಕೆಯನ್ನು ಮಹಾರಾಷ್ಟ್ರ ಸರ್ಕಾರ ಒಪ್ಪಿಕೊಂಡಿದೆ.&amp;nbsp;&lt;/p&gt;&lt;h3&gt;&lt;strong&gt;ಮಗಳು ಅಪರಾಧಿ ಆಗಿದ್ರೆ ಅವಳನ್ನೂ ಕೋಟೆಯಿಂದ ತಳ್ಳಿ: ಸಿಯಾ ತಂದೆ&lt;/strong&gt;&lt;/h3&gt;&lt;p&gt;&lt;strong&gt;ಪುಣೆ&lt;/strong&gt;: &lsquo;ನಮ್ಮ ಮಗಳು ನಿಜವಾಗಿಯೂ ದೋಷಿ ಆಗಿದ್ದರೆ ಅವಳನ್ನು ಲೋಹಗಡ ಕೋಟೆಯ ಮೇಲಿಂದ ತಳ್ಳಿಬಿಡಿ&rsquo; ಎಂದು, ಕೇತನ್&zwnj; ಹತ್ಯೆಗೈದ ಪ್ರಕರಣದಲ್ಲಿ ಬಂಧಿತ ಸಿಯಾಳ ತಂದೆ ಹೇಳಿದ್ದಾರೆ.ಘಟನೆ ಕುರಿತು ಪ್ರತಿಕ್ರಿಯಿಸಿರುವ ಸಿಯಾಳ ತಂದೆ, &lsquo;19 ವರ್ಷದ ಸಿಯಾ, ಚೇತನ್&zwnj;ನನ್ನು ಪ್ರೀತಿಸುತ್ತಿದ್ದಳು ಎಂದು ನಮಗೆ ಗೊತ್ತೇ ಇರಲಿಲ್ಲ. ಅವನನ್ನು ನಾವೆಂದೂ ನೋಡಿರಲಿಲ್ಲ. ಒಬ್ಬ ಮಗ (ಕೇತನ್&zwnj;) ಮತ್ತು ಒಂದು ಸುಂದರ ಸಂಬಂಧವನ್ನು ಕಳೆದುಕೊಂಡಿದ್ದೇವೆ. ತನಿಖೆಯಿಂದ ಯಾರು ದೋಷಿ ಎಂದು ತಿಳಿದುಬರುತ್ತದೆಯೋ ಅವರನ್ನು ಅದೇ (ಲೋಹಗಡ) ಕೋಟೆಯ ಮೇಲಿಂದ ತಳ್ಳಬೇಕು. ನಮ್ಮ ಮಗಳೇ ಆಗಿದ್ದರೂ ಅದೇ ಶಿಕ್ಷೆ ಕೊಡಬೇಕು&rsquo; ಎಂದಿದ್ದಾರೆ. ಸಿಯಾಳ ತಾಯಿ ಪೂಜಾ ಮಾತನಾಡಿ, &lsquo;ನಿಶ್ಚಿತಾರ್ಥ ಆದಂದಿನಿಂದ ಸಿಯಾ ಕೇವಲ ಕೇತನ್&zwnj; ಜತೆ ಮಾತನಾಡುತ್ತಿದ್ದಳು. ಅವಳು ಹತ್ಯೆಗೆ ಒಪ್ಪಿದ್ದಾಳೆ ಎಂದು ನಮಗೆ ಅನ್ನಿಸುವುದಿಲ್ಲ. ಅವಳಿಗೆ ಈ ಮದುವೆ ಇಷ್ಟವಿಲ್ಲದೆ ಇದ್ದಿದ್ದರೆ ನಮ್ಮೊಂದಿಗೆ ಆ ಬಗ್ಗೆ ಮಾತನಾಡುತ್ತಿದ್ದಳು. ಅವಳೀಗ ನಮಗೆ ದ್ರೋಹ ಬಗೆದಿದ್ದಾಳೆ&rsquo; ಎಂದು ಕಣ್ಣೀರಿಟ್ಟಿದ್ದಾರೆ.&lt;/p&gt;&lt;p&gt;&lt;strong&gt;ಕೇತನ್&zwnj; ವಿಗ್&zwnj; ಧರಿಸುತ್ತಿದ್ದಕ್ಕೆ ಕೊಲೆಗೆ ನಿರ್ಧರಿಸಿದ್ದ ಸಿಯಾ&lt;/strong&gt;&lt;/p&gt;&lt;p&gt;&lt;strong&gt;ಪುಣೆ&lt;/strong&gt;: ಭಾವಿ ಪತಿ ಕೇತನ್&zwnj;ಗೆ ತಲೆಯಲ್ಲಿ ಕೂದಲಿರಲಿಲ್ಲ. ಆತ ವಿಗ್&zwnj; ಧರಿಸುತ್ತಿದ್ದ. ಹೀಗಾಗಿ ಆತನನ್ನು ಮದುವೆಯಾಗುವುದಕ್ಕೆ ಇಷ್ಟವಿರಲ್ಲದೆ ಕೊಂದೆ ಎಂದು ಸಿಯಾ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಳೆ. &lsquo;ಕೇತನ್&zwnj; ವಿಗ್&zwnj; ಧರಿಸುತ್ತಿರುವುದು ನನಗೆ ಇಷ್ಟವಿರಲಿಲ್ಲ. ಹಾಗಂತ ಮದುವೆ ರದ್ದುಗೊಳಿಸಿ ತನ್ನ ಮನೆಯವರಿಗೆ ನೋವುಂಟು ಮಾಡಲು ನನಗೆ ಮನಸ್ಸಿರಲಿಲ್ಲ. ಹೀಗಾಗಿ ಆತನನ್ನು ಕೊಲ್ಲುವುದೇ ಸುಲಭದ ನಿರ್ಧಾರ ಎಂದು ನಿರ್ಧರಿಸಿದೆ&rsquo; ಎಂದಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಕೇತನ್&zwnj; ತಂದೆ ವಿಶಾಲ್&zwnj; ಅಗರ್ವಾಲ್ ಪ್ರತಿಕ್ರಿಯಿಸಿದ್ದು, &lsquo;ಕೇತನ್&zwnj; ವಿಗ್&zwnj; ಧರಿಸುತ್ತಿದ್ದನೆಂದು ಸಿಯಾ ಕುಟುಂಬಸ್ಥರಿಗೆ ಮೊದಲೇ ತಿಳಿಸಿದ್ದೆವು. ಆದರೆ ಕೊಲೆಗೆ ಇದೊಂದು ಕಾರಣವೇ?&rsquo; ಎಂದು ಪ್ರಶ್ನಿಸಿದ್ದಾರೆ.&amp;nbsp;&lt;/p&gt;]]></content:encoded>
            <category><![CDATA[India]]></category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/chaudhary-instigated-goyal-to-eliminate-her-fiancee-police/articleshow-stvh7i7"/>
        </item>
        <item>
            <title><![CDATA[ಎಸ್‌ಐಆರ್‌ ಈಗ 9ನೇ ತರಗತಿ ಸಮಾಜ ವಿಜ್ಞಾನ ಪಠ್ಯದ ಭಾಗ!]]></title>
            <link>https://www.kannadaprabha.in/india-news/sir-now-part-of-class-9-ncert-textbook-ec-lauded-for-impartial-polls/articleshow-wpr36mo</link>
            <guid isPermaLink="true">https://www.kannadaprabha.in/india-news/sir-now-part-of-class-9-ncert-textbook-ec-lauded-for-impartial-polls/articleshow-wpr36mo</guid>
            <pubDate>Sat, 27 Jun 2026 00:30:00 +0530</pubDate>
            <description><![CDATA[ಸರ್ಕಾರ ಮತ್ತು ವಿಪಕ್ಷಗಳ ನಡುವೆ ಭಾರೀ ಜಟಾಪಟಿಗೆ ಕಾರಣವಾಗಿರುವ ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ ವಿಷಯದ ಇದೀಗ ಎನ್‌ಸಿಇಆರ್‌ಟಿಯ 9ನೇ ತರಗತಿಯ ಸಾಮಾಜ ವಿಜ್ಞಾನ ಪಠ್ಯವಾಗಿ ಸೇರ್ಪಡೆಗೊಂಡಿದೆ.]]></description>
            <media:content url="https://static-assets.asianetnews.com/kp/json/26062026/pictures/NCERT_41.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ&lt;/strong&gt;: ಸರ್ಕಾರ ಮತ್ತು ವಿಪಕ್ಷಗಳ ನಡುವೆ ಭಾರೀ ಜಟಾಪಟಿಗೆ ಕಾರಣವಾಗಿರುವ ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ ವಿಷಯದ ಇದೀಗ ಎನ್&zwnj;ಸಿಇಆರ್&zwnj;ಟಿಯ 9ನೇ ತರಗತಿಯ ಸಾಮಾಜ ವಿಜ್ಞಾನ ಪಠ್ಯವಾಗಿ ಸೇರ್ಪಡೆಗೊಂಡಿದೆ. ದೇಶದ ಯಾವುದೇ ಅರ್ಹ ನಾಗರಿಕ ವೋಟರ್&zwnj; ಲಿಸ್ಟ್&zwnj;ನಿಂದ ಹೊರಗುಳಿಯಬಾರದು ಮತ್ತು ಅನರ್ಹನ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗದಂತೆ ನೋಡಿಕೊಳ್ಳಲು ಈ ವಿಶೇಷ ಪರಿಷ್ಕರಣೆ ನಡೆಸಲಾಗುತ್ತದೆ ಎಂದು ಪಠ್ಯದಲ್ಲಿ ಹೇಳಲಾಗಿದೆ. ಸುಳ್ಳು ಸುದ್ದಿಗಳು, ತಪ್ಪು ಮಾಹಿತಿ ಮತ್ತು ಬೆದರಿಕೆಗಳ ನಡುವೆಯೂ ಚುನಾವಣಾ ಆಯೋಗವು ನಿಷ್ಪಕ್ಷಪಾತವಾಗಿ ಚುನಾವಣೆಗಳನ್ನು ನಡೆಸಿದೆ ಎಂದು ಪಠ್ಯ ಪುಸ್ತಕದಲ್ಲಿ ಹೇಳಲಾಗಿದೆ.&lt;/p&gt;&lt;h2&gt;&lt;strong&gt;ನ್ಯಾಯಾಂಗ ಪಕ್ಷಪಾತರಹಿತ: ಎನ್&zwnj;ಸಿಇಆರ್&zwnj;ಟಿ ಹೊಸ ಪಠ್ಯ&amp;nbsp;&lt;/strong&gt;&lt;/h2&gt;&lt;p&gt;&lt;strong&gt;ನವದೆಹಲಿ&lt;/strong&gt;: &lsquo;ನ್ಯಾಯಾಂಗದ ಭ್ರಷ್ಟಾಚಾರ&rsquo; ಎಂಬ ಪಠ್ಯವನ್ನು ಕಳೆದ ವರ್ಷ 8ನೇ ತರಗತಿಯ ಪುಸ್ತಕದಲ್ಲಿ ಸೇರಿಸಿ ಎಡವಟ್ಟು ಮಾಡಿಕೊಂಡಿದ್ದ ಎನ್&zwnj;ಟಿಇಆರ್&zwnj;ಟಿ, ಈ ವರ್ಷ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಮಾತ್ರ &lsquo;ನ್ಯಾಯಾಂಗವು ಪಕ್ಷಪಾತರಹಿತ ಮತ್ತು ಸ್ವತಂತ್ರ ಸಂಸ್ಥೆ&rsquo; ಎಂದು ಬಣ್ಣಿಸಿದ ಪಠ್ಯ ಸೇರ್ಪಡೆ ಮಾಡಿದೆ. ವಿಶೇಷವೆಂದರೆ ಈ ಪಠ್ಯವನ್ನು ಎಂಟನೇ ತರಗತಿಯ ಪಠ್ಯ ಪುಸ್ತಕ ವಿವಾದ ಭುಗಿಲೇಳುವ ಮೊದಲೇ ಸಿದ್ಧಪಡಿಸಲಾಗಿತ್ತು.&amp;nbsp;&lt;/p&gt;&lt;h3&gt;&lsquo;ಅಧಿಕಾರದ ವಿಂಗಡಣೆ&rsquo; ಕುರಿತ ಪಠ್ಯ&lt;/h3&gt;&lt;p&gt;ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿನ ಪ್ರಜಾಪ್ರಭುತ್ವ ಕುರಿತ ಅಧ್ಯಾಯದ &lsquo;ಅಧಿಕಾರದ ವಿಂಗಡಣೆ&rsquo; ಕುರಿತ ಪಠ್ಯದಲ್ಲಿ ಮಾತ್ರ ನ್ಯಾಯಾಂಗವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ(ಪಿಐಎಲ್&zwnj;)ನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಮೂಲಕ ಎಲ್ಲರಿಗೂ ನ್ಯಾಯ ಸಿಗುವಂತೆ ನೋಡಿಕೊಳ್ಳುತ್ತದೆ. ನ್ಯಾಯಾಂಗವು ಪಕ್ಷಪಾತರಹಿತ ಮತ್ತು ಸ್ವತಂತ್ರ ಸಂಸ್ಥೆಯಾಗಿದ್ದು, ನಾಗರಿಕರ ಹಕ್ಕುಗಳನ್ನು ರಕ್ಷಿಸುತ್ತದೆ ಮತ್ತು ಸಂವಿಧಾನದ ಸ್ಪೂರ್ತಿಯನ್ನು ಎತ್ತಿಹಿಡಿಯುತ್ತದೆ ಎಂದು ಹೇಳಲಾಗಿದೆ.&lt;/p&gt;]]></content:encoded>
            <category><![CDATA[India]]></category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/sir-now-part-of-class-9-ncert-textbook-ec-lauded-for-impartial-polls/articleshow-wpr36mo"/>
        </item>
        <item>
            <title><![CDATA[ಮೈಕ್‌ ಮೂಲಕ ಆಜಾನ್‌ ಕರೆ ನಿಷೇಧಕ್ಕೆ ಡೆನ್ಮಾಕ್‌ ಚಿಂತನೆ]]></title>
            <link>https://www.kannadaprabha.in/india-news/country-feels-like-suburb-of-islam-denmark-plans-nationwide-ban-on-loudspeaker-azan/articleshow-dhbxlip</link>
            <guid isPermaLink="true">https://www.kannadaprabha.in/india-news/country-feels-like-suburb-of-islam-denmark-plans-nationwide-ban-on-loudspeaker-azan/articleshow-dhbxlip</guid>
            <pubDate>Sat, 27 Jun 2026 00:30:00 +0530</pubDate>
            <description><![CDATA[ದೇಶದ ಕೆಲ ಭಾಗಗಳು ಇಸ್ಲಾಮಾಬಾದ್‌ ರೀತಿ ಆಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿರುವ ಡೆನ್ಮಾರ್ಕ್‌ ಸರ್ಕಾರ, ಮುಸಲ್ಮಾನರ ನಿತ್ಯದ ಪ್ರಾರ್ಥನೆಯಾಗಿರುವ ಆಜಾನ್‌ ಅನ್ನು ಸಾರ್ವಜನಿಕವಾಗಿ ಮೊಳಗಿಸುವುದನ್ನು ನಿಷೇಧಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.]]></description>
            <media:content url="https://static-assets.asianetnews.com/kp/json/26062026/pictures/AAZAN_339.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೋಪನ್ ಹೇಗನ್&zwnj;&lt;/strong&gt;: ದೇಶದ ಕೆಲ ಭಾಗಗಳು ಇಸ್ಲಾಮಾಬಾದ್&zwnj; ರೀತಿ ಆಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿರುವ ಡೆನ್ಮಾರ್ಕ್&zwnj; ಸರ್ಕಾರ, ಮುಸಲ್ಮಾನರ ನಿತ್ಯದ ಪ್ರಾರ್ಥನೆಯಾಗಿರುವ ಆಜಾನ್&zwnj; ಅನ್ನು ಸಾರ್ವಜನಿಕವಾಗಿ ಮೊಳಗಿಸುವುದನ್ನು ನಿಷೇಧಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.&lt;/p&gt;&lt;h2&gt;ಮುಸಲ್ಮಾನರಿಗೆ ಪ್ರಾರ್ಥನೆಗೆ ಕರೆ ನೀಡುವುದಕ್ಕೆ ಡೆನ್ಮಾರ್ಕ್&zwnj;ನಲ್ಲಿ ಜಾಗ ಇಲ್ಲ&lt;/h2&gt;&lt;p&gt;ಈ ಬಗ್ಗೆ ಅಲ್ಲಿನ ವಲಸೆ ಸಚಿವ ಮೊರ್ಟೆನ್ ಬೋಡ್&zwnj;ಸ್ಕೋವ್ ಮಾತನಾಡಿದ್ದು, &lsquo;ಮುಸಲ್ಮಾನರಿಗೆ ಪ್ರಾರ್ಥನೆಗೆ ಕರೆ ನೀಡುವುದಕ್ಕೆ ಡೆನ್ಮಾರ್ಕ್&zwnj;ನಲ್ಲಿ ಜಾಗ ಇಲ್ಲ. ಇಲ್ಲಿರುವವರಿಗೆ, ಇಸ್ಲಾಮಾಬಾದ್&zwnj;ನಲ್ಲಿದ್ದೇವೆಯೋ ಅಥವಾ ಡೆನ್ಮಾರ್ಕ್&zwnj;ನಲ್ಲಿದ್ದೇವೆಯೋ ಎಂಬ ಅನುಮಾನ ಬರುವಂತಿರಬಾರದು&rsquo; ಎಂದಿದ್ದಾರೆ.&lt;/p&gt;&lt;h3&gt;ಆಜಾನ್&zwnj;ಗೆ ಕರೆ ನೀಡುವ ಧ್ವನಿವರ್ಧಕಗಳ ಮೇಲೆ ರಾಷ್ಟ್ರವ್ಯಾಪಿ ನಿರ್ಬಂಧ&lt;/h3&gt;&lt;p&gt;ಆಜಾನ್&zwnj;ಗೆ ಕರೆ ನೀಡುವ ಧ್ವನಿವರ್ಧಕಗಳ ಮೇಲೆ ರಾಷ್ಟ್ರವ್ಯಾಪಿ ನಿರ್ಬಂಧ ಹೇರುವುದಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಈಗಾಗಲೇ ಅಲ್ಲಿಂದ ಸಂಸತ್ತಿಗೆ ಸಲ್ಲಿಸಲಾಗಿದೆ. ಈಗಾಗಲೇ ಮುಖ ಮುಚ್ಚುವಂತೆ ಬುರ್ಖಾ, ನಿಕಾಬ್&zwnj; ಧರಿಸುವುದನ್ನು ಡೆನ್ಮಾರ್ಕ್&zwnj;ನಲ್ಲಿ ನಿಷೇಧಿಸಲಾಗಿದೆ.&lt;/p&gt;]]></content:encoded>
            <category><![CDATA[India]]></category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/country-feels-like-suburb-of-islam-denmark-plans-nationwide-ban-on-loudspeaker-azan/articleshow-dhbxlip"/>
        </item>
        <item>
            <title><![CDATA[ರಾಮಮಂದಿರ ಹುಂಡಿ ಕಳವು ಪ್ರಕರಣ ಚಂಪತ್‌ ರಾಯ್‌ ರಾಜೀನಾಮೆ -   ಟ್ರಸ್ಟಿ ಮಿಶ್ರಾ ಪದತ್ಯಾಗ]]></title>
            <link>https://www.kannadaprabha.in/india-news/ram-mandir-trust-general-secretary-champat-rai-resigns/articleshow-1k3remm</link>
            <guid isPermaLink="true">https://www.kannadaprabha.in/india-news/ram-mandir-trust-general-secretary-champat-rai-resigns/articleshow-1k3remm</guid>
            <pubDate>Sat, 27 Jun 2026 01:30:00 +0530</pubDate>
            <description><![CDATA[ಅಯೋಧ್ಯೆ ರಾಮಮಂದಿರ ದೇಣಿಗೆ ಅಕ್ರಮ ಪ್ರಕರಣದಲ್ಲಿ ನೈತಿಕ ಹೊಣೆ ಹೊತ್ತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ ತಮ್ಮ ಹುದ್ದೆಗೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಅವರೊಂದಿಗೆ ಟ್ರಸ್ಟ್‌ನ ಮತ್ತೊಬ್ಬ ಸದಸ್ಯ ಅನಿಲ್ ಮಿಶ್ರಾ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ.]]></description>
            <media:content url="https://static-assets.asianetnews.com/kp/json/26062026/pictures/CHAMPAT_466.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ದೇಶಾದ್ಯಂತ ಭಾರಿ ಗಮನ ಸೆಳೆದಿರುವ ಅಯೋಧ್ಯೆ ರಾಮಮಂದಿರ ದೇಣಿಗೆ ಅಕ್ರಮ ಪ್ರಕರಣದಲ್ಲಿ ಮೊದಲ ತಲದಂಡವಾಗಿದೆ. ದೇಗುಲದಲ್ಲಿ ನಡೆದ ಅಕ್ರಮದ ಸಂಬಂಧ ನೈತಿಕ ಹೊಣೆ ಹೊತ್ತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್&zwnj;ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್&zwnj; ತಮ್ಮ ಹುದ್ದೆಗೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಅವರೊಂದಿಗೆ ಟ್ರಸ್ಟ್&zwnj;ನ ಮತ್ತೊಬ್ಬ ಸದಸ್ಯ ಅನಿಲ್ ಮಿಶ್ರಾ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ.&lt;/p&gt;&lt;p&gt;ದೇಣಿಗೆ ಹಣದಲ್ಲಿ ಅಕ್ರಮ ನಡೆದಿರುವ ಆರೋಪಗಳ ಕುರಿತು ಸ್ವತಂತ್ರ ಹಾಗೂ ನ್ಯಾಯಸಮ್ಮತ ತನಿಖೆ ನಡೆಯಲು ಯಾವುದೇ ರೀತಿಯ ಪ್ರಭಾವ ಬೀಳಬಾರದು ಎಂಬ ಉದ್ದೇಶದಿಂದ ಚಂಪತ್ ರಾಯ್&zwnj; ಈ ನಿರ್ಧಾರ ಕೈಗೊಂಡಿದ್ದಾರೆ. ರಾಯ್&zwnj; ವಿರುದ್ಧ ವೈಯಕ್ತಿಕ ಆರೋಪಗಳಿಲ್ಲದಿದ್ದರೂ, ತನಿಖೆಯ ಪಾರದರ್ಶಕತೆಯನ್ನು ಕಾಪಾಡುವ ಉದ್ದೇಶದಿಂದ ಅವರು ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;h2&gt;ದೇಗುಲಕ್ಕೆ ಭಕ್ತರು ನೀಡಿದ ಕೋಟ್ಯಂತರ ರು. ದೇಣಿಗೆಯಲ್ಲಿ ಅಕ್ರಮ&lt;/h2&gt;&lt;p&gt;ದೇಗುಲಕ್ಕೆ ಭಕ್ತರು ನೀಡಿದ ಕೋಟ್ಯಂತರ ರು. ದೇಣಿಗೆಯಲ್ಲಿ ಅಕ್ರಮ ನಡೆದಿದೆ ಎಂದು ತಿಂಗಳ ಹಿಂದೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್&zwnj; ಯಾದವ್&zwnj; ಗಂಭೀರ ಆರೋಪ ಮಾಡಿದ್ದರು. ಈ ಬೆನ್ನಲ್ಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡವನ್ನು (ಎಸ್&zwnj;ಐಟಿ) ರಚಿಸಿ ಪ್ರಕರಣದ ತನಿಖೆಗೆ ಆದೇಶಿಸಿತ್ತು. ಇದು ಸರ್ಕಾರ ಮತ್ತು ವಿಪಕ್ಷಗಳ ನಡುವೆ ಭಾರಿ ಜಟಾಪಟಿಗೂ ಕಾರಣವಾಗಿತ್ತು.&lt;/p&gt;&lt;p&gt;ಈ ನಡುವೆ ಎಸ್&zwnj;ಐಟಿ, ಜೂ.23ರಂದು ಸರ್ಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸಿ ಪ್ರಮುಖ ಆರೋಪಗಳನ್ನು ಮಾಡಿತ್ತು. ಅದರಲ್ಲಿ ದೇಣಿಗೆ ಎಣಿಕೆ ಕಾರ್ಯದಲ್ಲಿದ್ದ ಸಿಬ್ಬಂದಿ ಸೇರಿದಂತೆ ಟ್ರಸ್ಟ್&zwnj;ಗೆ ಸಂಬಂಧಪಟ್ಟವರು ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಸಿಸಿಟೀವಿ ಮೇಲ್ವಿಚಾರಣೆಯಲ್ಲಿ ಲೋಪ, ಲೆಕ್ಕಪತ್ರದಲ್ಲಿ ಪಾರದರ್ಶಕತೆಯ ಕೊರತೆ ಹಾಗೂ ಕುಂಭಮೇಳದ ಸಮಯದಲ್ಲಿ ಅತಿ ಹೆಚ್ಚಿನ ಮೊತ್ತದ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿತ್ತು.&lt;/p&gt;&lt;p&gt;2 ದಿನಗಳ ಹಿಂದಷ್ಟೇ ಉತ್ತರ ಪ್ರದೇಶ ಪೊಲೀಸರು ಪ್ರಕರಣದ 8 ಪ್ರಮುಖ ಆರೋಪಿಗಳನ್ನು ಬಂಧಿಸಿದ್ದರು. ಈ ಪೈಕಿ ಓರ್ವ ಚಂಪತ್ ರಾಯ್ ಅವರ ಮಾಜಿ ಕಾರು ಚಾಲಕ ರಾಮಶಂಕರ್ ಯಾದವ್ ಅಲಿಯಾಸ್ ತಿನ್ನು ಯಾದವ್&zwnj; ಎಂದು ತಿಳಿದುಬಂದಿತ್ತು. ಇದರ ಬೆನ್ನಲ್ಲೇ ರಾಯ್&zwnj; ರಾಜೀನಾಮೆ ನೀಡಿದ್ದಾರೆ. ಇದು ಮಂದಿರದಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆದಿರುವ ಶಂಕೆಗೆ ಮತ್ತಷ್ಟು ಪುಷ್ಠಿ ನೀಡಿದೆ&lt;/p&gt;&lt;h2&gt;&lt;strong&gt;ನಗದು, ಚಿನ್ನ, ಬೆಳ್ಳಿ ಕದ್ದ 8 ಆರೋಪಿಗಳು ಅರೆಸ್ಟ್&zwnj;&amp;nbsp;&lt;/strong&gt;&lt;/h2&gt;&lt;p&gt;ಅಯೋಧ್ಯಾ: ಇಲ್ಲಿನ ರಾಮ ಮಂದಿರದ ದೇಣಿಗೆ ಹಣ ಲೂಟಿ ಮಾಡಿದ ಪ್ರಕರಣದಲ್ಲಿ ಎಲ್ಲ 8 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎಲ್ಲರನ್ನೂ ಜೂ.29ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿ ಕೋರ್ಟ್&zwnj; ಆದೇಶಿಸಿದೆ.&lt;/p&gt;&lt;p&gt;ಬಂಧಿತರ ಪೈಕಿ ದೇಣಿಗೆ ಎಣಿಕೆ ಕೆಲಸ ಮಾಡುತ್ತಿದ್ದ ರಾಮಶಂಕರ್ ಮಿಶ್ರಾ ಅಲಿಯಾಸ್ ತಿನ್ನು ಯಾದವ್&zwnj;, ರಾಮಶಂಕರ್ ಮಿಶ್ರಾ ಅಲಿಯಾಸ್ ರವಿ ಮಿಶ್ರಾ, ಈತನ ಪುತ್ರ ಅನುಕಲ್ಪ್ ಮಿಶ್ರಾ ಹಾಗೂ ಅಳಿಯ ಲವಕುಶ ಮಿಶ್ರಾ, ಸೋದರಳಿಯ ಮನೀಶ್ ಕುಮಾರ್ ಯಾದವ್, ದೇವಸ್ಥಾನದ ಅಟೆಂಡೆಂಟ್&zwnj; ಅವಿನಾಶ್&zwnj; ಶುಕ್ಲಾ, ಮಾಜಿ ಬ್ಯಾಂಕ್ ಉದ್ಯೋಗಿ ಹಾಗೂ ಕಾಣಿಕೆ ಎಣಿಕೆ ಸಿಬ್ಬಂದಿಯ ಉಸ್ತುವಾರಿ ವಹಿಸಿದ್ದ ಸುಭಾಷ್ ಶ್ರೀವಾಸ್ತವ ಹಾಗೂ ಹಣದ ರಸೀದಿಗಳನ್ನು ತಿರುಚಿರುವ ಆರೋಪ ಎದುರಿಸುತ್ತಿರುವ ಕರುಣೇಶ್ ಪಾಂಡೆ ಸೇರಿದ್ದಾರೆ.&amp;nbsp;&lt;/p&gt;&lt;p&gt;ದೇಗುಲದ ಹುಂಡಿ ಹಣ ಎಣಿಸುವ ಹೊಣೆಯನ್ನು ಪ್ರಮುಖ ಬ್ಯಾಂಕೊಂದು ಹೊತ್ತುಕೊಂಡಿತ್ತು, ಇದಕ್ಕೆ ವಿವಿಧ ಏಜೆನ್ಸಿಗಳ ಮೂಲಕ ಜನರನ್ನು ನೇಮಕ ಮಾಡಿತ್ತು. ಇದೀಗ ಬಂಧಿತರ ಪೈಕಿ 6 ಜನರು ಇದೇ ಬ್ಯಾಂಕ್&zwnj;ನಿಂದ ನಿಯೋಜಿತರಾಗಿದ್ದರು. ಅವರಿಗೆ ಬ್ಯಾಂಕ್&zwnj; ಮೂಲಕವೇ ವೇತನ ಪಾವತಿಯಾಗುತ್ತಿತ್ತು ಎಂಬುದು ತಿಳಿದುಬಂದಿದೆ. ಇನ್ನು ತಿನ್ನು ಯಾದವ್&zwnj; ಟ್ರಸ್ಟ್&zwnj;ನ ಕಾರ್ಯದರ್ಶಿ ಚಂಪತ್&zwnj; ರಾಯ್&zwnj; ಅವರ ಮಾಜಿ ಕಾರು ಚಾಲಕ ಎಂದು ಖಚಿತವಾಗಿದೆ.&lt;/p&gt;]]></content:encoded>
            <category><![CDATA[India]]></category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/ram-mandir-trust-general-secretary-champat-rai-resigns/articleshow-1k3remm"/>
        </item>
        <item>
            <title><![CDATA[ಬೆಂಗಳೂರು ತ್ರಿವಳಿ ಕೊಲೆ ಹಂತಕ ಪಾಂಡೀಚೇರಿಯ ಬಾರ್‌ನಲ್ಲಿ ಬಂಧನ]]></title>
            <link>https://www.kannadaprabha.in/crime-news/bangalore-triple-murder-suspect-arrested-at-a-bar-in-pondicherry/articleshow-1gn7zb5</link>
            <guid isPermaLink="true">https://www.kannadaprabha.in/crime-news/bangalore-triple-murder-suspect-arrested-at-a-bar-in-pondicherry/articleshow-1gn7zb5</guid>
            <pubDate>Sat, 27 Jun 2026 03:30:00 +0530</pubDate>
            <description><![CDATA[5 ದಿನಗಳ ಹಿಂದೆ ಕೆ.ಆರ್‌.ಪುರದಲ್ಲಿ ಭೀಕರವಾಗಿ ತನ್ನ ಪ್ರಿಯತಮೆಯ ಹೆತ್ತವರು ಹಾಗೂ ಸೋದರಿಯನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ ಹಂತಕ ಪಾಂಡಿಚೇರಿಯ ಮದ್ಯಂಗಡಿಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.]]></description>
            <media:content url="https://static-assets.asianetnews.com/kp/json/26062026/pictures/501426BNG_259_26062026_1.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಬೆಂಗಳೂರು : &amp;nbsp;&lt;/strong&gt;5 ದಿನಗಳ ಹಿಂದೆ ಕೆ.ಆರ್&zwnj;.ಪುರದಲ್ಲಿ ಭೀಕರವಾಗಿ ತನ್ನ ಪ್ರಿಯತಮೆಯ ಹೆತ್ತವರು ಹಾಗೂ ಸೋದರಿಯನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ ಹಂತಕ ಪಾಂಡಿಚೇರಿಯ ಮದ್ಯಂಗಡಿಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.&lt;/p&gt;&lt;h2&gt;ಮಾರತ್ತಹಳ್ಳಿಯ ಕೆನೆತ್ ಬಂಧಿತ&lt;/h2&gt;&lt;p&gt;ಮಾರತ್ತಹಳ್ಳಿಯ ಕೆನೆತ್ ಬಂಧಿತನಾಗಿದ್ದು, ಪಾಂಡಿಚೇರಿಯಲ್ಲಿ ಗುರುವಾರ ರಾತ್ರಿ ಮದ್ಯ ಸೇವಿಸುವಾಗ ಆತನನ್ನು ಸ್ಥಳೀಯ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ನಂತರ ಕೆ.ಆರ್&zwnj;.ಪುರ ಪೊಲೀಸರಿಗೆ ಕೆನೆತ್&zwnj;ನನ್ನು ಪಾಂಡಿಚೇರಿ ಪೊಲೀಸರು ಹಸ್ತಾಂತರಿಸಿದ್ದಾರೆ. ನಂತರ ಆರೋಪಿಯನ್ನು ಸುಪರ್ದಿಗೆ ಪಡೆದು ನಗರಕ್ಕೆ ಕೆ.ಆರ್&zwnj;.ಪುರ ಪೊಲೀಸರು ಕರೆತಂದಿದ್ದಾರೆ. &amp;nbsp;&lt;/p&gt;&lt;p&gt;ಸೀಗೇನಹಳ್ಳಿ ಸಮೀಪದ ತಮ್ಮ ಅಪಾರ್ಟ್&zwnj;ಮೆಂಟ್&zwnj;ಗೆ ಬಂದ ತಮ್ಮ ತಂದೆ ಸೋಮಸುಂದರ್, ತಾಯಿ ಮುತ್ತುಲಕ್ಷ್ಮೀ ಹಾಗೂ ತಂಗಿ ಸುಪ್ರಿಯಾ ಅ&zwj;ವರನ್ನು ಸೋಮವಾರ ರಾತ್ರಿ ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನೆತ್ ಹತ್ಯೆಗೈದಿದ್ದರು. ಈ ಹತ್ಯೆ ಬಳಿಕ ಬಂಧನಭೀತಿಯಿಂದ ನಗರ ತೊರೆದು ಪಾಂಡಿಚೇರಿಯಲ್ಲಿ ಆರೋಪಿಗಳು ತಲೆಮರೆಸಿಕೊಂಡಿದ್ದರು. ಮೊದಲು ಬುಧವಾರ ಶ್ವೇತಾಳನ್ನು ಬಂಧಿಸಿದ್ದ ತನಿಖಾ ತಂಡ, ಎರಡು ದಿನಗಳ ಬಳಿಕ ಸ್ಥಳೀಯ ಪೊಲೀಸರ ನೆರವಿನಿಂದ ಆಕೆಯ ಪ್ರಿಯಕರನ್ನು ಬಂಧಿಸಿದೆ.&lt;/p&gt;&lt;h3&gt;&lt;strong&gt;ಮೂವರನ್ನು ಕೊಂದು ತಣ್ಣಗೆ ಮದ್ಯ ಸೇವನೆ!:&lt;/strong&gt;&lt;/h3&gt;&lt;p&gt;ಮನೆಯಲ್ಲಿ ಸೋಮವಾರ ರಾತ್ರಿ 8.30 ಗಂಟೆಗೆ ಕುಟುಂಬದವರ ಹತ್ಯೆ ಬಳಿಕ ಪ್ರಿಯತಮೆಯನ್ನು ಬೈಕ್&zwnj;ನಲ್ಲಿ ಕರೆದು ಕೊಂಡು ಕೆನೆತ್ ನಗರ ತೊರೆದಿದ್ದ. ತಮಿಳುನಾಡು ಮೂಲಕ ಪಾಂಡಿಚೇರಿಯನ್ನು ಅವರು ತಲುಪಿದ್ದರು. ಅಲ್ಲಿ ಒಟ್ಟಾಗಿದ್ದರೆ ಪೊಲೀಸರಿಗೆ ಸುಳಿವು ಸಿಗಬಹುದು ಎಂದು ಪ್ರತ್ಯೇಕವಾಗಿ ತಲೆಮರೆಸಿಕೊಂಡಿದ್ದರು. ಆಗ ಬುಧವಾರ ಸಂಜೆ ಶ್ವೇತಾಳನ್ನು ಪೊಲೀಸರು ಸೆರೆ ಹಿಡಿದಿದ್ದರು.&amp;nbsp;&lt;/p&gt;&lt;p&gt;&amp;nbsp;ಇನ್ನು ವಿಚಾರಣೆ ವೇಳೆ ಪಾಂಡಿಚೇರಿಯಲ್ಲೇ ಕೆನೆತ್&zwnj; ಇರುವಿಕೆಗೆ ಕುರಿತು ಆಕೆ ಬಾಯ್ಪಿಟ್ಟಿದ್ದಳು. ಈ ಸುಳಿವು ಆಧರಿಸಿ ತನಿಖಾ ತಂಡಗಳು ಕಾರ್ಯಾಚರಣೆ ಮುಂದುವರಿಸಿದ್ದವು. ಪಾಂಡಿಚೇರಿಯ ಪೊಲೀಸ್ ಅಧಿಕಾರಿಗಳ ಭೇಟಿಯಾಗಿ ಕೆ.ಆರ್.ಪುರ ಪೊಲೀಸರು ನೆರವು ಕೋರಿದ್ದರು. ಆ ನಗರದ ಎಲ್ಲ ಠಾಣೆಗಳಿಗೆ ಆರೋಪಿ ಫೋಟೋ ರವಾನೆಯಾಗಿತ್ತು. ಈ ಪೋಟೋ ಆಧರಿಸಿ ಕೆನೆತ್&zwnj;ಗೆ ಸ್ಥಳೀಯ ಪೊಲೀಸರು ಹುಡುಕಾಟ ನಡೆಸಿದ್ದರು.&lt;/p&gt;&lt;p&gt;ಅಲ್ಲಿನ ಒರ್ಲೆನ್&zwnj; ಪೇಟೆ ಸಮೀಪದ ಬಾರ್&zwnj;ನಲ್ಲಿ ಕೆನೆತ್ ಮದ್ಯ ಸೇವಿಸುತ್ತಿದ್ದ. ಅದೇ ಬಾರ್&zwnj;ಗೆ ಆತನ ಫೋಟೋ ಹಿಡಿದು ಶೋಧನೆಗೆ ಒರ್ಲೆನ್&zwnj;ಪೇಟೆ ಪೊಲೀಸ್ ಠಾಣೆಯಸಹಾಯಕ ಸಬ್ ಇನ್ಸ್&zwnj;ಪೆಕ್ಟರ್ ರಾಮಲಿಂಗಂ ತೆರಳಿದ್ದರು. ಆ ವೇಳೆ ತಣ್ಣಗೆ ಮದ್ಯ ಸೇವಿಸುತ್ತ ಕುಳಿತಿದ್ದ ಕೆನೆತ್&zwnj;ನನ್ನು ಎಎಸ್&zwnj;ಐ ಗುರುತು ಹಿಡಿದಿದ್ದಾರೆ. ಕೂಡಲೇ ಆತನ್ನು ವಶಕ್ಕೆ ಪಡೆಯಲು ಯತ್ನಿಸಿದಾಗ ಆರೋಪಿ ಕಾಲ್ಕಿತ್ತಿದ್ದಾನೆ. ತಕ್ಷಣವೇ ಕೆನೆತ್&zwnj;ನನ್ನು ಸಾರ್ವಜನಿಕರ ನೆರವು ಪಡೆದು ರಾಮಲಿಂಗಂ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ. ತದನಂತರ ಅಲ್ಲೇ ಆರೋಪಿಗೆ ಹುಡುಕಾಟ ನಡೆಸುತ್ತಿದ್ದ ಕೆ.ಆರ್&zwnj;.ಪುರ ತನಿಖಾ ತಂಡಗಳಿಗೆ ಆರೋಪಿ ಸಿಕ್ಕಿರುವ ಮಾಹಿತಿ ರವಾನೆಯಾಗಿದೆ. ಬಳಿಕ ಒರ್ಲೆನ್ ಪೇಟೆ ಠಾಣೆಗೆ ತೆರಳಿ ಆತನನ್ನು ವಶಕ್ಕೆ ಪಡೆದು ನಗರಕ್ಕೆ ಕೆ.ಆರ್&zwnj;.ಪುರ ಠಾಣೆ ಪೊಲೀಸರು ಕರೆತಂದಿದ್ದಾರೆ.&lt;/p&gt;&lt;p&gt;ಕೆ.ಆರ್&zwnj;.ಪುರದಲ್ಲಿ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣದ ಆರೋಪಿಗಳ ಪತ್ತೆಗೆ 10 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಪಾಂಡಿಚೇರಿಯಲ್ಲಿ ಆರೋಪಿಗಳನ್ನು ತನಿಖಾ ತಂಡಗಳು ಬಂಧಿಸುವಲ್ಲಿ ಯಶಸ್ಸು ಕಂಡಿವೆ. ತಮ್ಮ ಕೃತ್ಯವನ್ನು ಇಬ್ಬರು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.&lt;/p&gt;&lt;p&gt;&lt;strong&gt;ನಗರ ಪೊಲೀಸ್ ಆಯುಕ್ತರ ಕಚೇರಿ ಪತ್ರಿಕಾ ಹೇಳಿಕೆ&lt;/strong&gt;&lt;/p&gt;&lt;p&gt;4 ದಿನಗಳ ಹಿಂದೆ ನಡೆದಿದ್ದ ತ್ರಿವಳಿ ಕೊಲೆ ಸಂಬಂಧ ಇಬ್ಬರು ಆರೋಪಿಗಳನ್ನು ಹುಡುಕಿಕೊಂಡು ಬೆಂಗಳೂರು ಪೊಲೀಸರು ಬಂದಿದ್ದರು. ನಮ್ಮ ಠಾಣೆಗೂ ಸಹ ಆರೋಪಿಗಳ ಪೋಟೋವನ್ನು ತನಿಖಾ ತಂಡ ಕೊಟ್ಟಿತ್ತು. ಬಾರ್&zwnj;ನಲ್ಲಿ ಗುರುವಾರ ರಾತ್ರಿ ಮದ್ಯ ಸೇವಿಸುವಾಗ ಆತನನ್ನು ಗುರುತು ಹಿಡಿದು ವಶಕ್ಕೆಪಡೆಯಲಾಯಿತು.&lt;/p&gt;&lt;p&gt;&lt;strong&gt;-ರಾಮಲಿಂಗಂ ಎಎಸ್&zwnj;ಐ, ಪಾಂಡಿಚೇರಿಯ ಒರ್ಲೆನ್&zwnj; ಪೇಟೆ&lt;/strong&gt;&lt;/p&gt;]]></content:encoded>
            <category><![CDATA[crime]]></category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/bangalore-triple-murder-suspect-arrested-at-a-bar-in-pondicherry/articleshow-1gn7zb5"/>
        </item>
        <item>
            <title><![CDATA[ಒಣಗಿದ ಮರದ ಕೊಂಬೆ ತಲೆಗೆ ಬಿದ್ದು ಬೈಕ್‌ ಸವಾರ ಐಸಿಯುಗೆ ದಾಖಲು]]></title>
            <link>https://www.kannadaprabha.in/crime-news/biker-admitted-to-icu-after-dead-tree-branch-falls-on-head/articleshow-yqxumrg</link>
            <guid isPermaLink="true">https://www.kannadaprabha.in/crime-news/biker-admitted-to-icu-after-dead-tree-branch-falls-on-head/articleshow-yqxumrg</guid>
            <pubDate>Sat, 27 Jun 2026 03:30:00 +0530</pubDate>
            <description><![CDATA[ಒಣಗಿದ ಮರದ ಕೊಂಬೆಯೊಂದು ಮುರಿದು ತಲೆ ಮೇಲೆ ಬಿದ್ದ ಪರಿಣಾಮ ದ್ವಿಚಕ್ರ ವಾಹನ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಜಾಜಿನಗರದ ರಾಮಮಂದಿರ ರಸ್ತೆಯಲ್ಲಿ ನಡೆದಿದೆ. ಗಾಯಗೊಂಡಿರುವ ಸತೀಶ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.]]></description>
            <media:content url="https://static-gi.asianetnews.com/images/01kvse1wtw6xt7qvxfp323sr3v/bengaluru-road--2--1782191289180.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು : &lt;/strong&gt;ಒಣಗಿದ ಮರದ ಕೊಂಬೆಯೊಂದು ಮುರಿದು ತಲೆ ಮೇಲೆ ಬಿದ್ದ ಪರಿಣಾಮ ದ್ವಿಚಕ್ರ ವಾಹನ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಜಾಜಿನಗರದ ರಾಮಮಂದಿರ ರಸ್ತೆಯಲ್ಲಿ ನಡೆದಿದೆ. ಗಾಯಗೊಂಡಿರುವ ಸತೀಶ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.&amp;nbsp;&lt;/p&gt;&lt;h2&gt;ಫೈನಾನ್ಸ್ ಹಣವನ್ನು ಸಂಗ್ರಹಿಸಲು &amp;nbsp;ಬೈಕ್&zwnj;ನಲ್ಲಿ ತೆರಳುತ್ತಿದ್ದ ವೇಳೆ ಬಿದ್ದಿದೆ&lt;/h2&gt;&lt;p&gt;ಫೈನಾನ್ಸ್ ಹಣವನ್ನು ಸಂಗ್ರಹಿಸಲು ಸತೀಶ್ ಅವರು ಬುಧವಾರ ಸಂಜೆ ಬೈಕ್&zwnj;ನಲ್ಲಿ ತೆರಳುತ್ತಿದ್ದ ವೇಳೆ ಮರದ ದೊಡ್ಡ ಕೊಂಬೆಯೊಂದು ತಲೆಯ ಮೇಲೆ ಬಿದ್ದಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ಸತೀಶ್ ಅವರು ಬೈಕ್&zwnj;ನಿಂದ ಕೆಳಗೆ ಬಿದ್ದಿದ್ದಾರೆ. ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿದ್ದು, ಕೂಡಲೇ ಅವರನ್ನು ಸ್ಥಳೀಯರ ನೆರವಿನೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮರದ ಕೊಂಬೆ ತಲೆ ಮೇಲೆ ಬಿದ್ದಾಗ ಸವಾರ ಸತೀಶ್ ಅವರು ಹೆಲ್ಮೆಟ್ ಧರಿಸಿರಲಿಲ್ಲ. ಒಂದು ವೇಳೆ ಹೆಲ್ಮೆಟ್ ಧರಿಸಿದ್ದಿದ್ದರೆ ತಲೆಗೆ ಹೆಚ್ಚಿನ ಗಾಯವಾಗುವುದು ತಪ್ಪಿಸಬಹುದಿತ್ತು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;h3&gt;&lt;strong&gt;ಸಾರ್ವಜನಿಕರ ಆಕ್ರೋಶ: &amp;nbsp;&lt;/strong&gt;&lt;/h3&gt;&lt;p&gt;ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ಪಾಲಿಕೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪಾಯಕಾರಿ ಆಗಿರುವ ಮರಗಳು ಆಗಾಗ ಬೀಳುತ್ತಲೇ ಇರುತ್ತವೆ. ಇತ್ತೀಚೆಗೆ ಸುರಿದ ಮಳೆಯಿಂದ ರಾಜಾಜಿನಗರದಲ್ಲಿ ಮರದ ಕೊಂಬೆ ಬಿದ್ದು ವ್ಯಕ್ತಿಯೊಬ್ಬರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿನ ಎಲ್ಲ ದುರ್ಬಲ ಮರಗಳನ್ನು ಪರಿಶೀಲಿಸಲು ಕೋರಲಾಗಿತ್ತು. ಆದರೂ, ಪಾಲಿಕೆಯವರು ನಿರ್ಲಕ್ಷ್ಯ ತೋರಿದ ಕಾರಣ ಘಟನೆ ಸಂಭವಿಸಿದೆ ಎಂದು ದೂರಿದ್ದಾರೆ.&lt;/p&gt;]]></content:encoded>
            <category><![CDATA[crime]]></category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/biker-admitted-to-icu-after-dead-tree-branch-falls-on-head/articleshow-yqxumrg"/>
        </item>
        <item>
            <title><![CDATA[ಓಮಿನಿ ಹಿಂಬದಿ ಬಾಗಿಲು ತೆರೆದು ಕೆಳಗೆ ಬಿದ್ದ ನಾಲ್ಕು ವಿದ್ಯಾರ್ಥಿಗಳು]]></title>
            <link>https://www.kannadaprabha.in/crime-news/four-students-fell-out-of-omni-s-rear-door-after-it-opened/articleshow-9gybi5l</link>
            <guid isPermaLink="true">https://www.kannadaprabha.in/crime-news/four-students-fell-out-of-omni-s-rear-door-after-it-opened/articleshow-9gybi5l</guid>
            <pubDate>Sat, 27 Jun 2026 03:30:00 +0530</pubDate>
            <description><![CDATA[ಖಾಸಗಿ ಶಾಲೆಗಳ ಮಕ್ಕಳನ್ನು ಕರೆದೊಯ್ಯುವಾಗ ಆಕಸ್ಮಿಕವಾಗಿ ಕಾರಿನ ಬಾಗಿಲು ತೆರೆದುಕೊಂಡ ಪರಿಣಾಮ ನಾಲ್ವರು ಮಕ್ಕಳು ಕೆಳಗೆ ಬಿದ್ದು ಗಾಯಗೊಂಡಿರುವ ಘಟನೆ ನಗರದ ಹೊರ ವಲಯದಲ್ಲಿ ನಡೆದಿದೆ.]]></description>
            <media:content url="https://static-assets.asianetnews.com/kp/json/26062026/pictures/SCHOOL_VAB_3_209.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು : &amp;nbsp;&lt;/strong&gt;ಖಾಸಗಿ ಶಾಲೆಗಳ ಮಕ್ಕಳನ್ನು ಕರೆದೊಯ್ಯುವಾಗ ಆಕಸ್ಮಿಕವಾಗಿ ಕಾರಿನ ಬಾಗಿಲು ತೆರೆದುಕೊಂಡ ಪರಿಣಾಮ ನಾಲ್ವರು ಮಕ್ಕಳು ಕೆಳಗೆ ಬಿದ್ದು ಗಾಯಗೊಂಡಿರುವ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ.&lt;/p&gt;&lt;h2&gt;ಕೆ.ಆರ್&zwnj;.ಪುರ ಸಮೀಪದ ಗಾಯಿತ್ರಿ ಲೇಔಟ್&zwnj;ನಲ್ಲಿ ಅಪಘಾತ&lt;/h2&gt;&lt;p&gt;ಕೆ.ಆರ್&zwnj;.ಪುರ ಸಮೀಪದ ಗಾಯಿತ್ರಿ ಲೇಔಟ್&zwnj;ನಲ್ಲಿ ಗುರುವಾರ ಸಂಜೆ ಈ ಅಪಘಾತ ಸಂಭವಿಸಿದ್ದು, ಚಾಲಕ ಸರ್ವೇಶ್ ರಾವ್ ವಿರುದ್ಧ ಅಜಾಗರೂಕತೆ ಆರೋಪದ ಮೇರೆಗೆ ಕೆ.ಆರ್&zwnj;.ಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತಕ್ಕೀಡಾದ ಓಮಿನಿ ಕಾರನ್ನು ಪೊಲೀಸರು ಜಪ್ತಿ ಸಹ ಮಾಡಿದ್ದಾರೆ. ಗಾಯಿತ್ರಿ ಲೇಔಟ್&zwnj; ಸುತ್ತಮುತ್ತಲಿನ 4 ಶಾಲೆಗಳ ಸುಮಾರು 9 ವಿದ್ಯಾರ್ಥಿಗಳನ್ನು ಪಿಕ್ ಅಂಡ್ ಡ್ರಾಪ್&zwnj;ಗೆ ಸರ್ವೇಶ್ ಮಾಡುತ್ತಿದ್ದ. &amp;nbsp;&lt;/p&gt;&lt;h3&gt;ಮಾರ್ಗ ಮಧ್ಯೆ ಕಾರಿನ ಹಿಂಬದಿ ಬಾಗಿಲು ದಿಢೀರನೇ ತೆರೆದುಕೊಂಡಿದೆ&lt;/h3&gt;&lt;p&gt;ಗುರುವಾರ ಸಂಜೆ ಶಾಲೆ ಮುಗಿದ ಬಳಿಕ ಮಕ್ಕಳನ್ನು ಮನೆಗೆ ಆತ ಕರೆದೊಯ್ಯುತ್ತಿದ್ದ. ಆಗ ಮಾರ್ಗ ಮಧ್ಯೆ ಕಾರಿನ ಹಿಂಬದಿ ಬಾಗಿಲು ದಿಢೀರನೇ ತೆರೆದುಕೊಂಡಿದೆ. ಇದರಿಂದ ನಾಲ್ವರು ವಿದ್ಯಾರ್ಥಿಗಳು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದೆ. ವಿಚಾರಣೆ ವೇಳೆ ಆಕಸ್ಮಿಕವಾಗಿ ಬಾಗಿಲು ತೆರೆದುಕೊಂಡಿದೆ ಎಂದು ಚಾಲಕ ಹೇಳಿಕೆ ಕೊಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;]]></content:encoded>
            <category><![CDATA[crime]]></category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/four-students-fell-out-of-omni-s-rear-door-after-it-opened/articleshow-9gybi5l"/>
        </item>
    </channel>
</rss>
