<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Kannada Prabha</title>
        <link>https://www.kannadaprabha.in</link>
        <description><![CDATA[Kannada Prabha - No.1 News channel in Karnataka, which delivers Local and International news in Marathi language.]]></description>
        <image>
            <url>https://static-assets.asianetnews.com/images/ogimages/OG_Bangla.jpg</url>
            <width>143</width>
            <height>100</height>
            <link>https://www.kannadaprabha.in</link>
            <title>Kannada Prabha</title>
        </image>
        <lastBuildDate>Mon, 20 Apr 2026 06:02:58 +0530</lastBuildDate>
        <atom:link href="https://www.kannadaprabha.in/rss/crime-news" rel="self" type="application/rss+xml"/>
        <item>
            <title><![CDATA[ನಗರದಲ್ಲಿ ಮತ್ತೆ 23 ಕೋಟಿ ಡ್ರಗ್ಸ್‌ ಬೇಟೆ!]]></title>
            <link>https://www.kannadaprabha.in/karnataka-news/another-rs-23-crore-drug-bust-in-the-city/articleshow-1w6vzlb</link>
            <guid isPermaLink="true">https://www.kannadaprabha.in/karnataka-news/another-rs-23-crore-drug-bust-in-the-city/articleshow-1w6vzlb</guid>
            <pubDate>Fri, 17 Apr 2026 03:45:00 +0530</pubDate>
            <description><![CDATA[&lt;p&gt;ಮಾದಕ ವಸ್ತು ಮಾರಾಟ ಜಾಲದ ಮೇಲೆ ರಾಜಧಾನಿ ಪೊಲೀಸರ ಅಬ್ಬರದ ಕಾರ್ಯಾಚರಣೆ ಮತ್ತಷ್ಟು ಬಿರುಸುಗೊಂಡಿದ್ದು, ಈಗ ಮತ್ತೆ ಇಬ್ಬರು ವಿದೇಶಿ ಮಹಿಳೆಯರು ಸೇರಿದಂತೆ 10 ಮಂದಿಯನ್ನು ಬಂಧಿಸಿ 23 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.&lt;/p&gt;]]></description>
            <media:content url="https://static-assets.asianetnews.com/kp/json/16042026/pictures/330816BNG_467_16042026_1.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಬೆಂಗಳೂರು : &amp;nbsp;&lt;/strong&gt;ಮಾದಕ ವಸ್ತು ಮಾರಾಟ ಜಾಲದ ಮೇಲೆ ರಾಜಧಾನಿ ಪೊಲೀಸರ ಅಬ್ಬರದ ಕಾರ್ಯಾಚರಣೆ ಮತ್ತಷ್ಟು ಬಿರುಸುಗೊಂಡಿದ್ದು, ಈಗ ಮತ್ತೆ ಇಬ್ಬರು ವಿದೇಶಿ ಮಹಿಳೆಯರು ಸೇರಿದಂತೆ 10 ಮಂದಿಯನ್ನು ಬಂಧಿಸಿ 23 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.&lt;/p&gt;&lt;p&gt;ಯಲಹಂಕ ಉಪನಗರ, ದೇವರಜೀವನಹಳ್ಳಿ (ಡಿ.ಜೆ.ಹಳ್ಳಿ), ಬಾಣಸವಾಡಿ, ಕೋರಮಂಗಲ, ಬೊಮ್ಮನಹಳ್ಳಿ ಹಾಗೂ ಪುಲಿಕೇಶಿ ನಗರ ಠಾಣೆಗಳ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳಿಂದ 5.919 ಕೆಜಿ ಎಂಡಿಎಂಎ, 1.151 ಕೆಜಿ ಕೊಕೇನ್&zwnj;, 21 ಕೆಜಿ ಗಾಂಜಾ ಹಾಗೂ 19 ಗ್ರಾಂ ಎಕ್ಸೈಟಿಸಿ ಮಾತ್ರೆ ಸೇರಿದಂತೆ 11.81 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿಯಾಗಿದೆ. ಪ್ರಸುತ್ತ ಮಾರುಕಟ್ಟೆಯಲ್ಲಿ ಆ ಡ್ರಗ್ಸ್ ಮೌಲ್ಯವು 23.63 ಕೋಟಿ ರು. ಇದೆ. ಆರೋಪಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ವಿದೇಶಿ ಹಾಗೂ ಹೊರ ರಾಜ್ಯದ ವ್ಯಕ್ತಿಗಳಿಗೆ ತನಿಖೆ ನಡೆದಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ವಿದೇಶಿ ಮಹಿಳೆಯರ ಬಳಿ 11 ಕೋಟಿ ಡ್ರಗ್ಸ್ :&lt;/strong&gt;&lt;/h2&gt;&lt;p&gt;ಬಟ್ಟೆ ವ್ಯಾಪಾರದ ಸೋಗಿನಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಇಬ್ಬರು ವಿದೇಶಿ ಮಹಿಳೆಯರು ಯಲಹಂಕ ಉಪನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.&lt;/p&gt;&lt;p&gt;ನೈಜೀರಿಯಾ ಮೂಲದ ಪೀಸ್ ಗೋಡಿಯಾ ಅಲಿಯಾಸ್ ಎಲ್ಲ ಹಾಗೂ ಬಕ್ಕುಲಾ ಒಮತಯಾ ಅಲಿಯಾಸ್ ಬುಕ್ಕಿ ಬಂಧಿತರಾಗಿದ್ದು, ಆರೋಪಿಗಳಿಂದ 11.72 ಕೋಟಿ ರು. ಮೌಲ್ಯದ 5.8 ಕೆಜಿ ಎಂಡಿಎಂಎ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿದ್ದ ನೈಜೀರಿಯಾ ಮೂಲದ ಸ್ಯಾಮುಲ್&zwnj; ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;ನಾಲ್ಕು ವರ್ಷಗಳ ಹಿಂದೆ ವೈದ್ಯಕೀಯ ವೀಸಾದಡಿ ಭಾರತಕ್ಕೆ ಬಂದಿದ್ದ ಪೀಸ್ ಹಾಗೂ ಬುಕ್ಕಿ, ನಂತರ ನಗರಕ್ಕೆ ಬಂದು ನೆಲೆಸಿದ್ದರು. ಜಿಗಣಿ ಬಳಿ ಬಿಡಾರ ಹೂಡಿದ್ದ ಆರೋಪಿಗಳು, ಸುಲಭವಾಗಿ ಹಣ ಗಳಿಸಲು ಡ್ರಗ್ಸ್ ದಂಧೆ ಶುರು ಮಾಡಿದ್ದಾರೆ. ಬಟ್ಟೆ ವ್ಯಾಪಾರ ನಡೆಸುವುದಾಗಿ ಹೇಳಿಕೊಂಡು ಮರೆಯಲ್ಲಿ ಗ್ರಾಹಕರಿಗೆ ಡ್ರಗ್ಸ್ ಪೂರೈಸುತ್ತಿದ್ದರು. ಆದರೆ ಎಲ್ಲಿಂದ ಡ್ರಗ್ಸ್ ಖರೀದಿಸಿ ತಂದಿದ್ದರು ಎಂಬ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿಲ್ಲ ಎಂದು ಅಧಿಕಾರಿಗಳು ವಿವರಿಸಿದ್ದಾರೆ.&lt;/p&gt;&lt;p&gt;ಆನ್&zwnj;ಲೈನ್&zwnj; ಮೂಲಕ ಡ್ರಗ್ಸ್ ಡೀಲ್ ಅನ್ನು ವಿದೇಶಿ ಪೆಡ್ಲರ್&zwnj;ಗಳು ನಡೆಸುತ್ತಿದ್ದರು. ಗ್ರಾಹಕರಿಗೆ ಲೋಕೇಷನ್ ಹಂಚಿಕೊಳ್ಳುವ ಮೂಲಕ ಡ್ರಗ್ಸ್&zwnj; ಪೂರೈಸುತ್ತಿದ್ದರು. ಆನೇಕಲ್ ತಾಲೂಕಿನ ಕೃಷ್ಣದೊಡ್ಡಿ ಗ್ರಾಮದ ಮನೆಯೊಂದರಲ್ಲಿ ವಿದೇಶಿ ಪೆಡ್ಲರ್&zwnj;ಗಳು ಡ್ರಗ್ಸ್ ದಾಸ್ತಾನು ಮಾಡಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ಪೆಂಟರ್&zwnj; ಬಳಿ ₹11 ಕೋಟಿ ಕೊಕೇನ್&zwnj;!&lt;/strong&gt;&lt;/h3&gt;&lt;p&gt;ಡಿ.ಜೆ.ಹಳ್ಳಿ ಪೊಲೀಸರ ಬಲೆಗೆ ಮತ್ತೊಬ್ಬ ಪೆಡ್ಲರ್ ಬಿದ್ದಿದ್ದಾನೆ. ಮಾರುತಿನಗರದ ಸೈಯದ್ ಬಂಧಿತನಾಗಿದ್ದು, ಆರೋಪಿಯಿಂದ 11.44 ಕೋಟಿ ರು. ಮೌಲ್ಯದ 1.1 ಕೆಜಿ ಕೊಕೇನ್ ಜಪ್ತಿಯಾಗಿದೆ. ಆದರೆ ಈತ ಎಲ್ಲಿಂದ ಡ್ರಗ್ಸ್ ಖರೀದಿಸಿದ್ದ ಎಂಬುದು ಖಚಿತವಾಗಿಲ್ಲ. ಈ ಬಗ್ಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.&lt;/p&gt;&lt;p&gt;ಇನ್ನು 46 ಗ್ರಾಂ ಎಂಡಿಎಂಎ, 19 ಗ್ರಾಂ ಎಕ್ಸೈಟೆಸಿ ಪಿಲ್ಸ್&zwnj;, 6.6 ಗ್ರಾಂ ಕೊಕೇನ್ ಸೇರಿದಂತೆ 23.56 ಲಕ್ಷ ರು. ಮೌಲ್ಯದ ಡ್ರಗ್ಸ್ ಅನ್ನು ಬಾಣಸವಾಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/karnataka-news/another-rs-23-crore-drug-bust-in-the-city/articleshow-1w6vzlb"/>
        </item>
        <item>
            <title><![CDATA[50ಕ್ಕೂ ಹೆಚ್ಚು ಮಹಿಳೆಯರಿಗೆ ಬ್ಲ್ಯಾಕ್‌ಮೇಲ್ ವಂಚನೆ ಪತ್ತೆ]]></title>
            <link>https://www.kannadaprabha.in/crime-news/blackmail-scam-involving-over-50-women-detected/articleshow-2w119w5</link>
            <guid isPermaLink="true">https://www.kannadaprabha.in/crime-news/blackmail-scam-involving-over-50-women-detected/articleshow-2w119w5</guid>
            <pubDate>Sun, 19 Apr 2026 02:00:00 +0530</pubDate>
            <description><![CDATA[ಮಹಿಳಾ ಕಸ್ಟಮ್ಸ್ ಅಧಿಕಾರಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಪುಲಿಕೇಶಿನಗರ ಠಾಣೆ ಪೊಲೀಸರಿಂದ ಬಂಧಿತನಾಗಿರುವ ಆರೋಪಿ ಕೃಪಲಾನಿ(36) ಬ್ಲ್ಯಾಕ್&zwnj;ಮೇಲ್&zwnj; ಮಾಡಿ ಹಲವು ಮಹಿಳೆಯರಿಗೆ ವಂಚಿಸಿರುವುದು ತನಿಖೆ ವೇಳೆ ಪತ್ತೆಯಾಗಿದೆ.]]></description>
            <media:content url="https://static-gi.asianetnews.com/images/01kc6sk4zt9wck0h60gv0keg0k/kannada-prabha-1765459727354.jpeg" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ಬೆಂಗಳೂರು&lt;/p&gt;ಮಹಿಳಾ ಕಸ್ಟಮ್ಸ್ ಅಧಿಕಾರಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಪುಲಿಕೇಶಿನಗರ ಠಾಣೆ ಪೊಲೀಸರಿಂದ ಬಂಧಿತನಾಗಿರುವ ಆರೋಪಿ ಕೃಪಲಾನಿ(36) ಬ್ಲ್ಯಾಕ್&zwnj;ಮೇಲ್&zwnj; ಮಾಡಿ ಹಲವು ಮಹಿಳೆಯರಿಗೆ ವಂಚಿಸಿರುವುದು ತನಿಖೆ ವೇಳೆ ಪತ್ತೆಯಾಗಿದೆ. &lt;p&gt;ಆರೋಪಿ ಕೃಪಲಾನಿ ಮಹಿಳಾ ಕಸ್ಟಮ್ಸ್ ಅಧಿಕಾರಿಯೊಬ್ಬರಿಗೆ ಬ್ಲ್ಯಾಕ್&zwnj;ಮೇಲ್&zwnj; ಮಾಡಿ, ಆಕೆಯನ್ನು ಆರೇಳು ವರ್ಷಗಳಿಂದ ಲೈಂಗಿಕವಾಗಿ ಬಳಸಿಕೊಂಡಿದ್ದ. ಈ ಸಂಬಂಧ ಆಕೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.&lt;/p&gt;ಆರೋಪಿ ಸುಮಾರು 50ಕ್ಕೂ ಹೆಚ್ಚು ಅಧಿಕಾರಿಗಳನ್ನು ಪ್ರೀತಿ ಮತ್ತು ಮದುವೆಯ ಹೆಸರಿನಲ್ಲಿ ಬ್ಲ್ಯಾಕ್&zwnj;ಮೇಲ್ ಮಾಡಿರುವುದು ಬೆಳಕಿಗೆ ಬಂದಿದೆ. ಮಹಿಳಾ ಅಧಿಕಾರಿಗಳ ಜತೆ ಸಲುಗೆ ಬೆಳೆಸಿ ದೈಹಿಕ ಸಂಪರ್ಕ ಮಾಡಿ ನಂತರ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ. ಆ ಮೂಲಕ ತನ್ನ ಕುಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;p&gt;ಜಿಎಸ್​ಟಿ, ಕಸ್ಟಮ್ಸ್ ಅಧಿಕಾರಿಗಳೇ ಟಾರ್ಗೆಟ್:&lt;/p&gt;ಆರೋಪಿ ಕೃಪಲಾನಿ ಜಿಎಸ್&zwnj;ಟಿ ಮತ್ತು ಕಸ್ಟಮ್ಸ್ ವಿಭಾಗದ ಮಹಿಳಾ ಅಧಿಕಾರಿಗಳನ್ನು ಟಾರ್ಗೆಟ್ ಮಾಡುತ್ತಿದ್ದ. ಆರಂಭದಲ್ಲಿ ಕೆಲಸದ ನಿಮಿತ್ತ ಅಧಿಕಾರಿಗಳೊಂದಿಗೆ ಸಲುಗೆ ಬೆಳೆಸುತ್ತಿದ್ದ ಈತ, ಬಳಿಕ ಡಿನ್ನರ್, ಲಂಚ್ ಮಾಡುವ ನೆಪದಲ್ಲಿ ಆಪ್ತನಾಗುತ್ತಿದ್ದ. ನಂತರ ಪ್ರೀತಿ ಮತ್ತು ಮದುವೆಯ ನಾಟಕವಾಡಿ ದೈಹಿಕ ಸಂಪರ್ಕ ಬೆಳೆಸುತ್ತಿದ್ದ. ನಂತರ ದೈಹಿಕ ಸಂಪರ್ಕದ ಫೋಟೋ ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಅಧಿಕಾರಿಗಳನ್ನು ಬ್ಲ್ಯಾಕ್&zwnj;ಮೇಲ್ ಮಾಡುತ್ತಿದ್ದ ಎಂಬುದು ವಿಚಾರಣೆಯಲ್ಲಿ ತಿಳಿದು ಬಂದಿದೆ.&lt;p&gt;ಬಾಕ್ಸ್&zwnj;...&lt;/p&gt;ಪುರುಷ ಅಧಿಕಾರಿಗಳಿಗೂ ಬ್ಲ್ಯಾಕ್​ಮೇಲ್ !&lt;p&gt;ಆರೋಪಿಯು ಪುರುಷ ಅಧಿಕಾರಿಗಳನ್ನೂ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ. ಮೊದಲು ಅಧಿಕಾರಿಗಳ ಕಾರ್ಯವೈಖರಿ ಮತ್ತು ಇಲಾಖೆಯ ಒಳಗಿನ ಲೋಪದೋಷಗಳನ್ನು ತಿಳಿದುಕೊಳ್ಳುತ್ತಿದ್ದ. ಅದನ್ನು ಇಟ್ಟುಕೊಂಡು ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದನು.&lt;/p&gt;ಪೊಲೀಸರ ಮೊಬೈಲ್ ಕಸಿದು ಪ್ರಾಣ ಬೆದರಿಕೆ! &lt;p&gt;ಪೊಲೀಸರ ವಿಚಾರಣೆ ವೇಳೆಯೂ ಈತ ಉದ್ಧಟತನ ತೋರಿದ್ದಾನೆ. ವೈದ್ಯಕೀಯ ಪರೀಕ್ಷೆ ಮಾಡಿಸಲು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ ರಂಪಾಟ ಮಾಡಿದ್ದಾನೆ. ಪೊಲೀಸರ ಮೊಬೈಲ್ ಕಸಿದುಕೊಂಡು ಅವಾಚ್ಯವಾಗಿ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ವಿ.ವಿ. ಪುರ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಮತ್ತೊಂದು ಎಫ್&zwnj;ಐಆರ್ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;- ಆರೋಪಿ ಕೃಪಲಾನಿ ಜಿಎಸ್&zwnj;ಟಿ ಮತ್ತು ಕಸ್ಟಮ್ಸ್ ಮಹಿಳಾ ಅಧಿಕಾರಿಗಳೇ ಟಾರ್ಗೆಟ್ - ಆರಂಭದಲ್ಲಿ ಸಲುಗೆ ಬೆಳೆಸಿಕೊಂಡು ಬಳಿಕ ಡಿನ್ನರ್, ಲಂಚ್ ನೆಪದಲ್ಲಿ ಆಪ್ತನಾಗುತ್ತಿದ್ದ- ನಂತರ ಅವರೊಡನೆ ಪ್ರೇಮ, ಮದುವೆಯ ನಾಟಕವಾಡಿ ದೈಹಿಕ ಸಂಪರ್ಕ ಬೆಳೆಸುತ್ತಿದ್ದ-ನಂತರ ದೈಹಿಕ ಸಂಪರ್ಕದ ಫೋಟೋ,ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್&zwnj;ಮೇಲ್ ಮಾಡುತ್ತಿದ್ದ]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/blackmail-scam-involving-over-50-women-detected/articleshow-2w119w5"/>
        </item>
        <item>
            <title><![CDATA[ತ.ನಾಡು ಪಟಾಕಿ ಕಾರ್ಖಾನೆ  ಸ್ಫೋಟಕ್ಕೆ 23 ಕಾರ್ಮಿಕರು ಬಲಿ]]></title>
            <link>https://www.kannadaprabha.in/india-news/23-workers-killed-in-firecracker-factory-explosion-in-tamil-nadu/articleshow-4rpgf0s</link>
            <guid isPermaLink="true">https://www.kannadaprabha.in/india-news/23-workers-killed-in-firecracker-factory-explosion-in-tamil-nadu/articleshow-4rpgf0s</guid>
            <pubDate>Mon, 20 Apr 2026 06:02:54 +0530</pubDate>
            <description><![CDATA[&lt;p&gt;ತಮಿಳುನಾಡಿನ ವಿರುಧುನಗರ ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಭಾನುವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ 23 ಕಾರ್ಮಿಕರು ಸಾವನ್ನಪ್ಪಿದ್ದಾರೆ. ದುರಂತದಲ್ಲಿ 6 ಮಂದಿ ಗಾಯಗೊಂಡಿದ್ದು, ಈ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ.&lt;/p&gt;]]></description>
            <media:content url="https://static-gi.asianetnews.com/images/01kpk6fxky696c033m9sj9t25q/pattasu-accident-1776613324414.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ವಿರುಧನಗರ : &amp;nbsp;&lt;/strong&gt;ತಮಿಳುನಾಡಿನ ವಿರುಧುನಗರ ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಭಾನುವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ 23 ಕಾರ್ಮಿಕರು ಸಾವನ್ನಪ್ಪಿದ್ದಾರೆ. ದುರಂತದಲ್ಲಿ 6 ಮಂದಿ ಗಾಯಗೊಂಡಿದ್ದು, ಈ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ. ಜೊತೆಗೆ ಘಟನೆ ನಡೆದ ಕಟ್ಟಡದ ಅವಶೇಷಗಳಗಡಿ ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಏರಿಕೆಯ ಭೀತಿ ಇದೆ.&lt;/p&gt;&lt;h2&gt;ಕಟ್ಟನಾರಪಟ್ಟಿಯಲ್ಲಿರುವ ವನಜಾ ಪಟಾಕಿ ಕಾರ್ಖಾನೆ&lt;/h2&gt;&lt;p&gt;ಕಟ್ಟನಾರಪಟ್ಟಿಯಲ್ಲಿರುವ ವನಜಾ ಪಟಾಕಿ ಕಾರ್ಖಾನೆಯಲ್ಲಿ 100ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಆದರೆ ಪಟಾಕಿ ತಯಾರಿಕೆಯ ಸಮಯದಲ್ಲಿ ಸುರಕ್ಷತಾ ಮಾನದಂಡಗಳನ್ನು ನಿರ್ಲಕ್ಷಿಸುವುದರಿಂದ ಅಪಘಾತ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.&lt;/p&gt;&lt;p&gt;ಸ್ಫೋಟದ ಸುದ್ದಿ ತಿಳಿಯುತ್ತಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರಾದರೂ, ಮುಖ್ಯ ಸ್ಫೋಟದ ಹಲವು ಗಂಟೆಗಳ ಬಳಿಕವೂ ಸ್ಥಳದಲ್ಲಿ ಪಟಾಕಿ ಸಿಡಿಯುತ್ತಲೇ ಇದ್ದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಸ್ಫೋಟದ ತೀವ್ರತೆಗೆ ಸ್ಥಳದಲ್ಲೇ 23 ಜನರು ಸುಟ್ಟುಕರಕಲಾಗಿದ್ದು, ಹಲವರ ಗುರುತು ಪತ್ತೆ ಹಿಡಿಯುವುದು ಕಷ್ಟವಾಗಿದೆ. ಕಳೆದ ತಿಂಗಳು ಜಿಲ್ಲೆಯಲ್ಲಿ ಇಂತಹದ್ದೇ ಘಟನೆ ನಡೆದು ನಾಲ್ವರು ಸಾವನ್ನಪ್ಪಿದ್ದರು.&lt;/p&gt;&lt;h3&gt;ಆಗಿದ್ದೇನು?&lt;/h3&gt;&lt;p&gt;- ಭಾನುವಾರ ವಿರುಧುನಗರ ವಜನಾ ಪಟಾಕಿ ಕಾರ್ಖಾನೆಯಲ್ಲಿ 100 ಕಾರ್ಮಿಕರ ಕೆಲಸ&lt;/p&gt;&lt;p&gt;- ಈ ವೇಳೆ ಏಕಾಏಕಿ ಭಾರಿ ಸ್ಫೋಟ, ಪಟಾಕಿ ಕಾರ್ಖಾನೆಯ ಕಟ್ಟಡ ದಿಢೀರ್&zwnj; ಕುಸಿತ&lt;/p&gt;&lt;p&gt;- ಅವಶೇಷಗಳ ಅಡಿ ಇನ್ನಷ್ಟು ಜನ ಸಿಲುಕಿರುವ ಶಂಕೆ. ಶೋಧ ಕಾರ್ಯ ಮುಂದುವರಿಕೆ&lt;/p&gt;&lt;p&gt;- ಸ್ಫೋಟ ಘಟನೆಗೆ ನಿಖರ ಕಾರಣ ಇನ್ನೂ ನಿಗೂಢ. ಸುರಕ್ಷತಾ ಲೋಪವಾಗಿರುವ ಶಂಕೆ&lt;/p&gt;]]></content:encoded>
            <category>crime</category>
            <dc:creator>Sujatha NR</dc:creator>
            <atom:link href="https://www.kannadaprabha.in/india-news/23-workers-killed-in-firecracker-factory-explosion-in-tamil-nadu/articleshow-4rpgf0s"/>
        </item>
        <item>
            <title><![CDATA[ರಸ್ತೆ ಬದಿ ಮನೆ ಗೋಡೆಗೆ ಕಾರು ಡಿಕ್ಕಿ: ಬೈಕ್, ಮನೆ ಸಂಪೂರ್ಣ ಜಖಂ]]></title>
            <link>https://www.kannadaprabha.in/crime-news/a-car-collided-with-a-house-wall-on-the-side-of-the-road-the-bike-and-the-house-were-completely-damaged/articleshow-4tafel7</link>
            <guid isPermaLink="true">https://www.kannadaprabha.in/crime-news/a-car-collided-with-a-house-wall-on-the-side-of-the-road-the-bike-and-the-house-were-completely-damaged/articleshow-4tafel7</guid>
            <pubDate>Sun, 19 Apr 2026 01:45:00 +0530</pubDate>
            <description><![CDATA[ಕಾರು ರಸ್ತೆ ಬದಿಯ ಮನೆಗೆ ಡಿಕ್ಕಿಯಾಗಿ ಮನೆ, ಬೈಕ್ ಸಂಪೂರ್ಣ ಜಖಂಗೊಂಡಿರುವ ಘಟನೆ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ಕಾರಿನಲ್ಲಿ ಹಸುವಿನ ಕರುಗಳನ್ನು ತುಂಬಿಕೊಂಡು ಕೆ.ಆರ್.ಪೇಟೆ ಕಡೆಯಿಂದ ಮೈಸೂರಿಗೆ ತೆರಳುತ್ತಿದ್ದ ಅಪ್ರಾಪ್ತ ಸೇರಿದಂತೆ ಇಬ್ಬರು ಯುವಕರು ಇದ್ದರು.]]></description>
            <media:content url="https://static-assets.asianetnews.com/kp/json/18042026/pictures/18KMND20_406.JPG" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ಪಾಂಡವಪುರ&lt;/p&gt;ಕಾರು ರಸ್ತೆ ಬದಿಯ ಮನೆಗೆ ಡಿಕ್ಕಿಯಾಗಿ ಮನೆ, ಬೈಕ್ ಸಂಪೂರ್ಣ ಜಖಂಗೊಂಡಿರುವ ಘಟನೆ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.&lt;p&gt;ಕಾರಿನಲ್ಲಿ ಹಸುವಿನ ಕರುಗಳನ್ನು ತುಂಬಿಕೊಂಡು ಕೆ.ಆರ್.ಪೇಟೆ ಕಡೆಯಿಂದ ಮೈಸೂರಿಗೆ ತೆರಳುತ್ತಿದ್ದ ಅಪ್ರಾಪ್ತ ಸೇರಿದಂತೆ ಇಬ್ಬರು ಯುವಕರು ಇದ್ದರು. ಅಜಾಗರೂಕತೆಯಿಂದ ಕಾರನ್ನು ಚಾಲನೆ ಮಾಡಿಕೊಂಡು ಬಂದು ತಾಲೂಕಿನ ಚಿನಕುರಳಿ ಗ್ರಾಮದ ಪಶುವೈದ್ಯ ಆಸ್ಪತ್ರೆ ಮುಂಭಾಗದಲ್ಲಿ ಇದ್ದ ದಲಿತ ಸಮುದಾಯದ ಮೀನಾಕ್ಷಮ್ಮರಿಗೆ ಸೇರಿದ ಮನೆಗೆ ಡಿಕ್ಕಿ ಹೊಡೆದಿದ್ದಾರೆ.&lt;/p&gt;ಡಿಕ್ಕಿ ಹೊಡೆದ ರಭಸಕ್ಕೆ ಮನೆ ಗೋಡೆ ಸಂಪೂರ್ಣ ಕುಸಿದು ಮನೆ ಬಳಿ ನಿಲ್ಲಿಸಿದ ಬೈಕ್ ಮೇಲೆ ಬಿದ್ದು ಜಖಂಗೊಂಡಿದೆ. ಘಟನೆ ವೇಳೆ ಮನೆಯಲ್ಲಿ ಮೀನಾಕ್ಷಮ್ಮ ಸೇರಿದಂತೆ ಮಕ್ಕಳು ಎಲ್ಲರು ಮಲಗಿದ್ದು ಅದೃಷ್ಟಕ್ಕೆ ಯಾವುದೇ ಸಾವುನೋವು ಸಂಭವಿಸಿಲ್ಲ. ಡಿಕ್ಕಿ ಹೊಡೆದ ರಬಸಕ್ಕೆ ಕರುಗಳನ್ನು ತುಂಬಿದ್ದ ಕಾರು ಮೂರು ಪಲ್ಟಿಯಾಗಿದೆ. ಇದರಿಂದಾಗಿ ಕಾರಿನಲ್ಲಿದ್ದ ಹಲವರು ಹಸುವಿನ ಕರು ಒಂದು ಸಾವನ್ನಪ್ಪಿದೆ.&lt;p&gt;ಘಟನೆಯನ್ನು ಕಂಡ ಸ್ಥಳೀಯರು ಆಗಮಿಸಿ ಪೊಲೀಸರಿಗೆ ಮಾಹಿತಿಮುಟ್ಟಿಸಿ ಚಾಲಕರಿಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಸಿ ಇಬ್ಬರು ಯುವಕರು ಸಹ ಮೈಸೂರಿನ ಮುಸ್ಲಿಂ ಸಮುದಾಯದ ಯುವಕರು ಎಂದು ತಿಳಿದು ಬಂದಿದೆ.&lt;/p&gt;ಅಪ್ರಾಪ್ತ ಯುವಕನನ್ನು ಬಿಟ್ಟುಕಳುಹಿಸಿ ಓರ್ವ ಆರೋಪಿಯನ್ನು ಬಂಧಿಸಿ ದೂರು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಂಗ ಬಂಧನಕ್ಕೆ ಬಿಟ್ಟಿರುವ ಆರೋಪಿ ಬಗ್ಗೆ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ. &lt;p&gt;ಘಟನೆಯಲ್ಲಿ ವಶಕ್ಕೆ ಪಡೆದಿರುವ 18 ಕರುಗಳನ್ನು ಪೊಲೀಸರು ವೈದ್ಯಕೀಯ ಪರೀಕ್ಷೆ ನಡೆಸಿ ಪಶುಪಾಲನ ಕೇಂದ್ರಕ್ಕೆ ಬಿಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ದೂರು ದಾಖಲಾಗಿದೆ.&lt;/p&gt;ಪರಿಹಾರಕ್ಕೆ ಒತ್ತಾಯ:&lt;p&gt;ಘಟನೆಯಿಂದಾಗಿ ಮನೆ ಕಳೆದುಕೊಂಡಿರುವ ದಲಿತ ಸಮುದಾಯದ ಮೀನಾಕ್ಷಮ್ಮ ಕುಟುಂಬಸ್ಥರು ಸಂಕಷ್ಟಕ್ಕೆಸಿಲುಕಿದ್ದು ಪರಿಹಾರಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಮೀನಾಕ್ಷಮ್ಮ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದು ಇದೀಗ ನಡೆದ ಘಟನೆಯಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಸಂಬಂಧಿಸಿದವರು ಸೂಕ್ತಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.&lt;/p&gt;ನಿರ್ಮಾಣ ಹಂತದ ಹಾಸ್ಟೆಲ್ ಕಟ್ಟಡದಿಂದ ಬಿದ್ದು ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವು&lt;p&gt;ಮದ್ದೂರು:ನಿರ್ಮಾಣ ಹಂತದಲ್ಲಿದ್ದ ಹಾಸ್ಟೆಲ್ ಕಟ್ಟಡದಿಂದ ಬಿದ್ದು ತಮಿಳುನಾಡು ಮೂಲದ ಕೂಲಿ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಪಟ್ಟಣದ ಶಿಕ್ಷಕರ ಬಡಾವಣೆಯಲ್ಲಿ ಶನಿವಾರ ಬೆಳಗ್ಗೆ ಜರುಗಿದೆ.&lt;/p&gt;ತಮಿಳುನಾಡಿನ ಕಾವಾಸ್ (28) ಮೃತಪಟ್ಟ ಕೂಲಿ ಕಾರ್ಮಿಕ.ಶನಿವಾರ ಬೆಳಗ್ಗೆ ತನ್ನ ಸಹಕಾರ್ಮಿಕರೊಂದಿಗೆ ಕೆಲಸ ಮಾಡುತ್ತಿದ್ದಾಗ ಮೂರನೇ ಹಂತದ ಕಟ್ಟಡದಿಂದ ಬಿದ್ದು ಅಸುನೀಗಿದ್ದಾನೆ. ಕರ್ನಾಟಕ ಗೃಹ ಮಂಡಳಿ ನಾಲ್ಕು ಕೋಟಿ ರು. ವೆಚ್ಚದಲ್ಲಿ ಶಿಕ್ಷಕರ ಬಡಾವಣೆಯಲ್ಲಿ ಹಿಂದುಳಿದ ವರ್ಗಗಳ ಬಾಲಕಿರ ವಿದ್ಯಾರ್ಥಿ ನಿಲಯ ಕಟ್ಟಡ ಕಾಮಗಾರಿ ಕೈಗೊಂಡಿತ್ತು. ಬೆಂಗಳೂರು ಮೂಲದ ಸತ್ಯ ಅವರು ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದುಕೊಂಡಿದ್ದರು. ಕಳೆದ ವರ್ಷದ ಸೆಪ್ಟೆಂಬರ್ 30ರಂದು ಶಾಸಕ ಕೆ.ಎಂ.ಉದಯ್ ವಿದ್ಯಾರ್ಥಿ ನಿಲಯ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದರು.&lt;p&gt;ಪ್ರಾರಂಭಿಕ ಹಂತದಲ್ಲಿ ವಿದ್ಯಾರ್ಥಿನಿಲಯ ನಿರ್ಮಾಣ ಮಾಡಲು ಶಿಕ್ಷಕರ ಬಡಾವಣೆಯ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಸ್ಥಳದಲ್ಲಿ ಹಿಂದುಳಿದ ವರ್ಗಗಳ ಹಾಸ್ಟೆಲ್ ನಿರ್ಮಾಣ ಬದಲು ಕಚೇರಿ ಮಾಡಿಕೊಳ್ಳಿ ಎಂದು ಆಗ್ರಪಡಿಸಿದ್ದರು. ಸಾರ್ವಜನಿಕರ ಆಕ್ಷೇಪಣೆ ಹಿನ್ನೆಲೆಯಲ್ಲಿ ಪುರಸಭೆ ಕಟ್ಟಡ ನಿರ್ಮಾಣಕ್ಕೆ ಲೈಸೆನ್ಸ್ ನೀಡಲು ನಿರಾಕರಿಸಿತ್ತು. ಆದರೂ ಸಹ ಗುತ್ತಿಗೆದಾರರು ಲೈಸೆನ್ಸ್ ಪಡೆಯದೆ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಕಟ್ಟಡ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರು ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಕರ್ತವ್ಯ ಲೋಪದಆರೋಪದ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.&lt;/p&gt;ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/a-car-collided-with-a-house-wall-on-the-side-of-the-road-the-bike-and-the-house-were-completely-damaged/articleshow-4tafel7"/>
        </item>
        <item>
            <title><![CDATA[ತಾಲೂಕು ಆಸ್ಪತ್ರೆಗಳ ಮೇಲೆ ಲೋಕಾಯುಕ್ತ ದಾಳಿ]]></title>
            <link>https://www.kannadaprabha.in/crime-news/lokayukta-raids-taluk-hospitals/articleshow-4xnub7d</link>
            <guid isPermaLink="true">https://www.kannadaprabha.in/crime-news/lokayukta-raids-taluk-hospitals/articleshow-4xnub7d</guid>
            <pubDate>Sat, 18 Apr 2026 01:30:00 +0530</pubDate>
            <description><![CDATA[ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳು, ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿರುವ ಜಾರಿ ಅಧಿಕಾರಿ ಕಚೇರಿ ಹಾಗೂ ಕೆ.ಆರ್.ಪೇಟೆಯ ಎರಡು ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್&zwnj;ಗಳೂ ಸೇರಿದಂತೆ ಒಟ್ಟು ೯ ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ಶುಕ್ರವಾರ ದಾಳಿ ನಡೆಸುವ ಮೂಲಕ ಕಡತಗಳು, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.]]></description>
            <media:content url="https://static-assets.asianetnews.com/kp/json/17042026/pictures/17KMND_6_288.JPG" type="image/jpeg" height="390" width="690"/>
            <content:encoded><![CDATA[&lt;p&gt;ಮಂಡ್ಯ ಮಂಜುನಾಥ&lt;/p&gt;ಕನ್ನಡಪ್ರಭ ವಾರ್ತೆಮಂಡ್ಯಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳು, ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿರುವ ಜಾರಿ ಅಧಿಕಾರಿ ಕಚೇರಿ ಹಾಗೂ ಕೆ.ಆರ್.ಪೇಟೆಯ ಎರಡು ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್&zwnj;ಗಳೂ ಸೇರಿದಂತೆ ಒಟ್ಟು ೯ ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ಶುಕ್ರವಾರ ದಾಳಿ ನಡೆಸುವ ಮೂಲಕ ಕಡತಗಳು, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.ಸರ್ಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿ ಸ್ತ್ರೀಯರಿಗೆ ಸ್ಕ್ಯಾನಿಂಗ್ ಸೌಲಭ್ಯ ಸಿಗದಿರುವುದು, ಉದ್ದೇಶಪೂರ್ವಕವಾಗಿ ಸ್ಕ್ಯಾನಿಂಗ್&zwnj;ಗಾಗಿ ಖಾಸಗಿ ಆಸ್ಪತ್ರೆಗಳಿಗೆ, ಡಯಾಗ್ನೋಸ್ಟಿಕ್ ಸೆಂಟರ್&zwnj;ಗಳಿಗೆ ಶಿಫಾರಸು ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ದಿಢೀರ್ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದರು. ದಿಢೀರ್ ದಾಳಿಯಿಂದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಆತಂಕಗೊಂಡಿದ್ದರು.ಹೆಣ್ಣು ಭ್ರೂಣ ಹತ್ಯೆಗೆ ಮಂಡ್ಯ ಹಿಂದೊಮ್ಮೆ ಹೆಸರಾಗಿತ್ತು. ಇತ್ತೀಚಿನ ದಿನಗಳಲ್ಲಿ ಲಿಂಗಪತ್ತೆ, ಭ್ರೂಣಹತ್ಯೆಯಂತಹ ಪ್ರಕರಣಗಳು ನಿಯಂತ್ರಣದಲ್ಲಿದೆ. ಆದರೂ ಒಳಗೊಳಗೇ ನಿಗೂಢವಾಗಿ ಲಿಂಗಪತ್ತೆ ಮತ್ತು ಭ್ರೂಣಹತ್ಯೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಕೇಳಿಬರುತ್ತಿದ್ದ ದೂರು, ಸಾರ್ವಜನಿಕ ಆಸ್ಪತ್ರೆಗಳಲ್ಲಿ ತಂತ್ರಜ್ಞರನ್ನು ನೇಮಕ ಮಾಡಿಕೊಳ್ಳದೆ ಸ್ಕ್ಯಾನಿಂಗ್ ಯಂತ್ರಗಳನ್ನು ನಿರುಪಯುಕ್ತಗೊಳಿಸಿರುವುದು, ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಿ ಕಳುಹಿಸುತ್ತಿರುವ ಬಗ್ಗೆ ಹಲವರಿಂದ ದೂರು ಕೇಳಿಬಂದಿದ್ದವು ಎನ್ನಲಾಗಿದೆ.ಆ ಹಿನ್ನೆಲೆಯಲ್ಲಿ ಮಂಡ್ಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸುರೇಶ್ ಕುಮಾರ್ ನೇತೃತ್ವದಲ್ಲಿ ಮಂಡ್ಯ, ರಾಮನಗರ, ಚಾಮರಾಜನಗರ ಜಿಲ್ಲೆಗಳ ಲೋಕಾಯುಕ್ತ ಪೊಲೀಸರು ಒಂಬತ್ತು ಕಡೆಗಳಲ್ಲಿ ದಾಳಿ ನಡೆಸಿ ದಾಖಲೆ-ಕಡತಗಳ ಪರಿಶೀಲನೆ ನಡೆಸಿದರು.ರಾಜ್ಯಸರ್ಕಾರ ಗರ್ಭಿಣಿ ಸ್ತ್ರೀಯರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ೨೦ ಲಕ್ಷ ರು. ವೆಚ್ಚದಲ್ಲಿ ಎಲ್ಲಾ ತಾಲೂಕು ಆಸ್ಪತ್ರೆಗಳಿಗೆ ಸ್ಕ್ಯಾನಿಂಗ್ ಯಂತ್ರಗಳನ್ನು ನೀಡಿದೆ. ಆದರೆ, ಹೀಗೆ ಸ್ಕ್ಯಾನಿಂಗ್ ಸೌಲಭ್ಯವಿರುವ ತಾಲೂಕು ಆಸ್ಪತ್ರೆಗಳಲ್ಲಿ ಎಷ್ಟು ಕಡೆ ತಂತ್ರಜ್ಞರು ಇಲ್ಲ, ಎಲ್ಲೆಲ್ಲಿ ಸ್ಕ್ಯಾನಿಂಗ್ ಯಂತ್ರಗಳಿಗೆ ರೇಡಿಯಾಲಜಿಸ್ಟ್, ಆಪರೇಟರ್&zwnj;ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಬಳಕೆಯಾಗದೆ ಉಳಿದಿರುವ ಯಂತ್ರಗಳೆಷ್ಟು, ಎಷ್ಟು ಸ್ಕ್ಯಾನಿಂಗ್ ಪ್ರಕರಣಗಳನ್ನು ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ ಎಂಬ ಬಗ್ಗೆ ಲೋಕಾಯುಕ್ತ ಪೊಲೀಸರು ಮಾಹಿತಿ ಸಂಗ್ರಹಿಸಿದರು. ಸ್ಕ್ಯಾನಿಂಗ್ ಯಂತ್ರಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದ ಕಾರಣ ಕೋಟ್ಯಂತರ ರು. ವೆಚ್ಚದ ಸ್ಕ್ಯಾನಿಂಗ್ ಯಂತ್ರಗಳು ಹಾಳಾಗುತ್ತಿವೆ. ಇನ್ನು ಕೆಲವು ಆಸ್ಪತ್ರೆಗಳಲ್ಲಿ ಹಲವು ತಿಂಗಳಿಂದ ಸ್ಕ್ಯಾನಿಂಗ್ ಯಂತ್ರ ಕೆಟ್ಟುಹೋಗಿದ್ದರೂ ರಿಪೇರಿ ಮಾಡಿಸದೆ ಗರ್ಭಿಣಿ ಸ್ತ್ರೀಯರಿಗೆ ಸೌಲಭ್ಯ ಸಿಗದಂತೆ ಮಾಡಿರುವ ಬಗ್ಗೆಯೂ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್&zwnj;ಗಳಿಗೂ ಶಿಫಾರಸು ಮಾಡಿರುವುದೂ ಕಂಡುಬಂದಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.ಸರ್ಕಾರಿ ಆಸ್ಪತ್ರೆ ಅಧಿಕಾರಿಗಳ ಅಸಮರ್ಪಕ ಕಾರ್ಯನಿರ್ವಹಣೆಯಿಂದ ಲಿಂಗಪತ್ತೆ, ಭ್ರೂಣ ಹತ್ಯೆಯಂತಹ ಪ್ರಕರಣಗಳಿಗೆ ಕಾರಣವಾಗುತ್ತಿರಬಹುದೇ ಎಂಬ ಸಂಶಯದ ಮೇರೆಗೆ ಲೋಕಾಯುಕ್ತ ಪೊಲೀಸರು ತಪಾಸಣೆ ನಡೆಸಿ ಯಾವ ಯಾವ ಆಸ್ಪತ್ರೆಗಳಲ್ಲಿ ಎಷ್ಟು ಗರ್ಭಿಣಿಯರನ್ನು ಸ್ಕ್ಯಾನಿಂಗ್ ಮಾಡಲಾಗಿದೆ, ಒಟ್ಟಾರೆ ಸ್ಕ್ಯಾನಿಂಗ್&zwnj;ಗೆ ಬಂದ ಪ್ರಕರಣಗಳೆಷ್ಟು, ಶಿಫಾರಸು ಮಾಡಲಾದ ಪ್ರಕರಣಗಳೆಷ್ಟು, ಅದರಲ್ಲಿ 18 ವರ್ಷ ವಯಸ್ಸಿನ ಕೆಳಗಿನ ಗರ್ಭಿಣಿಯರು ಎಷ್ಟು ಮಂದಿ ಇದ್ದಾರೆ, ಎಷ್ಟು ಸಂಖ್ಯೆಯ ಸ್ಕ್ಯಾನಿಂಗ್ ಪ್ರಕರಣಗಳನ್ನು ಖಾಸಗಿ ಆಸ್ಪತ್ರೆಗಳಿಗೆ, ಡಯಾಗ್ನೋಸ್ಟಿಕ್ ಸೆಂಟರ್&zwnj;ಗಳಿಗೆ ಶಿಫಾರಸು ಮಾಡಲಾಗಿದೆ. ಡಯಾಗ್ನೋಸ್ಟಿಕ್ ಸೆಂಟರ್&zwnj;ನವರು ಮಾಡಿರುವ ಸ್ಕ್ಯಾನಿಂಗ್&zwnj;ಗಳೆಷ್ಟು ಎಂಬೆಲ್ಲಾ ವಿವರಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.ನಾಗಮಂಗಲ, ಕೆ.ಆರ್.ಪೇಟೆ, ಪಾಂಡವಪುರ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಗಳು. ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಗರ್ಭಿಣಿಯರ ಸ್ಕ್ಯಾನಿಂಗ್ ಬಗ್ಗೆ ದಾಖಲಾಗಿರುವ ಮಾಹಿತಿ, ಜಿಲ್ಲಾ ಜಾರಿ ಅಧಿಕಾರಿ ಕಚೇರಿಗೆ ನೀಡಿರುವ ವರದಿಗಳ ಬಗ್ಗೆ ಮಾಹಿತಿ ಪಡೆದು, ಪರಿಶೀಲನೆ ನಡೆಸಿದರು. ವರದಿಯಲ್ಲಿ ವ್ಯತ್ಯಾಸ ಇರುವ ಅಧಿಕಾರಿ, ಸಿಬ್ಬಂದಿಯ ವಿಚಾರಣೆಯನ್ನೂ ನಡೆಸಿದ್ದಾರೆ. ಈ ವೇಳೆ ಲೋಕಾಯುಕ್ತ ಡಿವೈಎಸ್ಪಿ ಸುನಿಲ್&zwnj;ಕುಮಾರ್, ಸಬ್&zwnj;ಇನ್ಸ್&zwnj;ಪೆಕ್ಟರ್ ಬ್ಯಾಟರಾಯಗೌಡ ಸೇರಿದಂತೆ ಇತರರು ದಾಳಿಯಲ್ಲಿ ಪಾಲ್ಗೊಂಡಿದ್ದರು. &lt;p&gt; &lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/lokayukta-raids-taluk-hospitals/articleshow-4xnub7d"/>
        </item>
        <item>
            <title><![CDATA[ಯೋಗೇಶ್‌ಗೌಡ ಕೊಲೆ ಕೇಸ್‌ : ಶಾಸಕ ವಿನಯ್‌ ಕುಲಕರ್ಣಿ ಕೊಲೆಗಾರ]]></title>
            <link>https://www.kannadaprabha.in/crime-news/yogesh-gowda-murder-case-vinay-kulkarni-held-guilty-of-murder/articleshow-b89g0ad</link>
            <guid isPermaLink="true">https://www.kannadaprabha.in/crime-news/yogesh-gowda-murder-case-vinay-kulkarni-held-guilty-of-murder/articleshow-b89g0ad</guid>
            <pubDate>Thu, 16 Apr 2026 04:19:13 +0530</pubDate>
            <description><![CDATA[&lt;p&gt;&amp;nbsp;ಧಾರವಾಡ ಜಿ.ಪಂ. ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ್ ಕುಲಕರ್ಣಿ, ಪೊಲೀಸ್&zwnj; ಇನ್ಸ್&zwnj;ಪೆಕ್ಟರ್&zwnj; ಆಗಿದ್ದ ಚನ್ನಕೇಶವ ಟಿಂಗರೀಕರ್&zwnj; ಸೇರಿದಂತೆ 17 ಆರೋಪಿಗಳನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ದೋಷಿಗಳೆಂದು ಘೋಷಿಸಿ ಮಹತ್ವದ ತೀರ್ಪು ನೀಡಿದೆ&lt;/p&gt;]]></description>
            <media:content url="https://static-gi.asianetnews.com/images/01kp7v1w3ssae3zg146z32qbb3/vinay-kulkarni-and-yogesh-gowda--1--1776232231033.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಬೆಂಗಳೂರು :&amp;nbsp;&lt;/strong&gt; ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ, ಧಾರವಾಡ ಜಿ.ಪಂ. ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ್ ಕುಲಕರ್ಣಿ, ಪೊಲೀಸ್&zwnj; ಇನ್ಸ್&zwnj;ಪೆಕ್ಟರ್&zwnj; ಆಗಿದ್ದ ಚನ್ನಕೇಶವ ಟಿಂಗರೀಕರ್&zwnj; ಸೇರಿದಂತೆ 17 ಆರೋಪಿಗಳನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ದೋಷಿಗಳೆಂದು ಘೋಷಿಸಿ ಮಹತ್ವದ ತೀರ್ಪು ನೀಡಿದೆ. ಶಿಕ್ಷೆ ಪ್ರಮಾಣವನ್ನು ಗುರುವಾರಕ್ಕೆ ಕಾಯ್ದಿರಿಸಿದೆ.&lt;/p&gt;&lt;p&gt;ಯೋಗೇಶ್&zwnj; ಗೌಡ ಕೊಲೆ ಪ್ರಕರಣ ಸಂಬಂಧ ಸುಮಾರು 8 ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ಸಂಜೆ ಅಂತಿಮ ತೀರ್ಪು ಪ್ರಕಟಿಸಿದೆ.&lt;/p&gt;&lt;p&gt;ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಂತೋಷ್&zwnj; ಗಜಾನನ ಭಟ್&zwnj; ಅವರು, 15ನೇ ಆರೋಪಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ವಿಕ್ರಮ್&zwnj; ಬಳ&zwj;್ಳಾರಿ, ಕೀರ್ತಿ ಕುಮಾರ್&zwnj; ಬಸವರಾಜ್&zwnj; ಕುರಹಟ್ಟಿ, ಸಂದೀಪ್&zwnj; ಸವದತ್ತಿ, ವಿನಾಯಕ ಕಟಗಿ, ಮಹಾಬಲೇಶ್ವರ ಹೊಂಗಲ್&zwnj;, ಸಂತೋಷ್&zwnj; ಸವದತ್ತಿ, ದಿನೇಶ್&zwnj;, ಅಶ್ವತ್ಥ್, ಸುನೀಲ್&zwnj;, ನಜೀರ್ ಅಹ್ಮದ್&zwnj;, ಶಹನವಾಜ್&zwnj;, ನೂತನ್&zwnj;, ಹರ್ಷಿತ್&zwnj;, ಚಂದ್ರಶೇಖರ್&zwnj; ಇಂಡಿ, ವಿಕಾಸ್&zwnj; ಕಲಬುರಗಿ, ಪೊಲೀಸ್&zwnj; ಇನ್ಸ್&zwnj;ಪೆಕ್ಟರ್&zwnj; ಚನ್ನಕೇಶವ ಬಿ.ಟಿಂಗರಿಕರ್&zwnj; ಅವರನ್ನು ಅಪರಾಧಿಗಳು ಎಂದು ಘೋಷಣೆ ಮಾಡಿದ್ದಾರೆ. ಇಬ್ಬರನ್ನು ಮಾತ್ರ ಖುಲಾಸೆ ಮಾಡಲಾಗಿದೆ.&lt;/p&gt;&lt;h2&gt;&lt;strong&gt;ಅಪರಾಧಿಗಳ ವಶಕ್ಕೆ ಪಡೆಯಲು ಸೂಚನೆ:&lt;/strong&gt;&lt;/h2&gt;&lt;p&gt;ಅಂತಿಮ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ವಿನಯ್&zwnj; ಕುಲಕರ್ಣಿ ಸೇರಿದಂತೆ ಪ್ರಕರಣದ 21 ಮಂದಿ ಆರೋಪಿಗಳು ಬುಧವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪ್ರಕರಣದಲ್ಲಿ 17 ಮಂದಿಯನ್ನು ದೋಷಿಗಳೆಂದು ಘೋಷಿಸಿದ ನ್ಯಾಯಾಧೀಶರು ಶಿಕ್ಷೆಯ ಪ್ರಮಾಣವನ್ನು ಗುರುವಾರ ಪ್ರಕಟಿಸುವುದಾಗಿ ತಿಳಿಸಿ ಕೂಡಲೇ ಅಪರಾಧಿಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆ ಸಿಬಿಐ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನ್ಯಾಯಾಧೀಶರ ಸೂಚನೆಯ ಹಿನ್ನೆಲೆಯಲ್ಲಿ ಅಪರಾಧಿಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಕರೆದುಕೊಂಡು ಹೋದರು. ಗುರುವಾರ ಶಿಕ್ಷೆಯ ಪ್ರಮಾಣ ಪ್ರಕಟವಾಗುವ ಹಿನ್ನೆಲೆಯಲ್ಲಿ 17 ಅಪರಾಧಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ.&lt;/p&gt;&lt;h3&gt;&lt;strong&gt;ಕೇಸ್&zwnj;ನಿಂದ ಇಬ್ಬರ ಖುಲಾಸೆ:&lt;/strong&gt;&lt;/h3&gt;&lt;p&gt;ಈ ಪ್ರಕರಣದ ಮೊದಲನೇ ಆರೋಪಿ ಬಸವರಾಜ್&zwnj; ಮುತ್ತಗಿ ಮತ್ತು 17ನೇ ಆರೋಪಿ ಶಿವಾನಂದ್&zwnj; ಅವರನ್ನು ಮಾಫಿ ಸಾಕ್ಷಿಯನ್ನಾಗಿಸಲಾಗಿದೆ. ಜತೆಗೆ 20ನೇ ಆರೋಪಿ ವಾಸುದೇವ್&zwnj; ರಾಮ ನೀಲೆಕಣಿ ಮತ್ತು 21ನೇ ಆರೋಪಿ ಸೋಮಶೇಖರ್&zwnj; ಬಸಪ್ಪ ನ್ಯಾಮಗೌಡ ಅವರನ್ನು ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಕೇಸ್&zwnj;ನಿಂದ ಖುಲಾಸೆ ಮಾಡಲಾಗಿದೆ.&lt;/p&gt;&lt;p&gt;ಈ ಮೊದಲು ಪ್ರಕರಣ ಸಂಬಂಧ ವಾದ-ಪ್ರತಿವಾದ ಆಲಿಸಿದ ಕೋರ್ಟ್ ಈ ಹಿಂದೆ ಏ.9ರಂದು ತೀರ್ಪು ನೀಡುವುದಾಗಿ ಹೇಳಿತ್ತು. ಆದರೆ, ಅಂದು ತೀರ್ಪು ಸಿದ್ಧಪಡಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದ ಕಾರಣ ಏ.15ಕ್ಕೆ ಮುಂದೂಡಿತ್ತು. ಇದೀಗ ತೀರ್ಪು ನೀಡಿರುವ ಕೋರ್ಟ್ 17 ಮಂದಿ ಆರೋಪಿಗಳು ಅಪರಾಧಿಗಳು ಎಂದು ಘೋಷಿಸಿದೆ.&lt;/p&gt;&lt;p&gt;ಪ್ರಕರಣದ 2 ರಿಂದ 16 ಮತ್ತು 18ನೇ ಆರೋಪಿಗಳು ಭಾರತೀಯ ದಂಡ ಸಂಹಿತೆ 302 (ಕೊಲೆ) ಆರೋಪದಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಸಗಿ ಶಿಕ್ಷೆಗೊಳಗಾಗಿದ್ದಾರೆ. ಹಾಗೆಯೇ 2 ರಿಂದ 16 ಮತ್ತು 18 ಹಾಗೂ 19ನೇ ಆರೋಪಿಗಳು 120 (ಬಿ) (ಅಪರಾಧಿಕ ಒಳ ಸಂಚು) ರೂಪಿಸಿದ್ದಾರೆ ಮತ್ತು 201 (ಸಾಕ್ಷ್ಯ ನಾಶ ಪಡಿಸಿದ್ದಾರೆ). ಇನ್ನು ಆರೋಪಿ 2 ರಿಂದ 14 ಮತ್ತು 18ನೇ ಆರೋಪಿಗಳು 143, 149 (ಅಕ್ರಮ ಕೂಟ), 147 (ಗಲಭೆ), 148 (ಆಯುಧಗಳಿಂದ ಕೃತ್ಯ) ಎಸಗಿದ್ದಾರೆ. 19ನೇ ಆರೋಪಿ 218 ಅಡಿಯಲ್ಲಿ ಸಾರ್ವಜನಿಕ ಸೇವೆಯಲ್ಲಿದ್ದು ತಪ್ಪುದಾಖಲೆಗಳನ್ನು ಸೃಷ್ಟಿಸಿ ಆರೋಪಿಯನ್ನು ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾನೆ.&lt;/p&gt;&lt;h3&gt;&amp;nbsp;&lt;strong&gt;ಇಂದು ವಾದ-ಪ್ರತಿವಾದ&lt;/strong&gt;&lt;/h3&gt;&lt;p&gt;ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರಕರಣದಲ್ಲಿ ಭಾಗಿಯಾಗಿರುವ ವಿನಯ್ ಕುಲಕರ್ಣಿ ಸೇರಿ 17 ಮಂದಿ ದೋಷಿಗಳು ಎಂದು ತೀರ್ಪು ನೀಡಿದೆ. ವಿನಯ್ ಕುಲಕರ್ಣಿ ಅವರು ಈ ಕೊಲೆ ಪ್ರಕರಣದ 15ನೇ ಆರೋಪಿಯಾಗಿದ್ದು, ಹತ್ಯೆಯ ಹಿಂದೆ ನಡೆದ ಒಳಸಂಚಿನಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ. ಅಪರಾಧಿಗಳಿಗೆ ನೀಡಲಾಗುವ ಶಿಕ್ಷೆಯ ಪ್ರಮಾಣದ ಕುರಿತು ಗುರುವಾರ ನ್ಯಾಯಾಲಯದಲ್ಲಿ ವಾದ-ಪ್ರತಿವಾದ ನಡೆಯಲಿದ್ದು, ನಂತರ ಅಂತಿಮ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ.&lt;/p&gt;&lt;p&gt;ಶಿಕ್ಷೆ ಏನಾಗಬಹುದು?&lt;/p&gt;&lt;p&gt;ಐಪಿಸಿ ಸೆಕ್ಷನ್&zwnj; 302 ಅಡಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅಥವಾ ಗಲ್ಲು ಶಿಕ್ಷೆ ವಿಧಿಸುವ ಅವಕಾಶವಿದೆ. ಅತೀ ಅಪರೂಪದ ಪ್ರಕರಣದಲ್ಲಿ ಮಾತ್ರ ಗಲ್ಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.&lt;/p&gt;&lt;p&gt;ಏನಿದು ಪ್ರಕರಣ?&lt;/p&gt;&lt;p&gt;ಧಾರವಾಡದ ಜಿ.ಪಂ. ಮಾಜಿ ಸದಸ್ಯ ಯೋಗೇಶ್&zwnj; ಗೌಡ ಅವರನ್ನು 2016ರ ಜೂ.15ರಂದು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದರು. ಈ ಸಂಬಂಧ ಧಾರವಾಡದ ಉಪನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಆರು ಜನರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.&lt;/p&gt;&lt;p&gt;ಕೊಲೆಯಾದ ಯೋಗೇಶ್&zwnj; ಗೌಡ ಕುಟುಂಬದ ಸದಸ್ಯರ ಒತ್ತಾಯದ ಮೇರೆಗೆ 2019ರಲ್ಲಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. ಸಿಬಿಐ ತನಿಖೆಯಲ್ಲಿ ಇದು ರಾಜಕೀಯ ಪ್ರೇರಿತ ಕೊಲೆ ಎಂಬುದು ತಿಳಿದು ಬಂದಿತ್ತು. ಈ ಕೊಲೆಯಲ್ಲಿ ಮಾಜಿ ಸಚಿವ ವಿನಯ್&zwnj; ಕುಲಕರ್ಣಿ ಕೈವಾಡವಿರುವ ಶಂಕೆ ಹಿನ್ನೆಲೆಯಲ್ಲಿ 2020ರ ನ.5ರಂದು ಸಿಬಿಐ ಅಧಿಕಾರಿಗಳು ವಿನಯ್&zwnj; ಕುಲಕರ್ಣಿ ಅವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ವಿನಯ್&zwnj; ಸೇರಿ ಒಟ್ಟು 21 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿದ್ದರು. ಇತ್ತೀಚೆಗಷ್ಟೇ ವಿನಯ್ ಕುಲಕರ್ಣಿ ಸುಪ್ರೀಂ ಕೋರ್ಟ್&zwnj;ನಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದರು.&lt;/p&gt;&lt;p&gt;&amp;nbsp;ಹೇಳುವುದಕ್ಕೆ ಏನೂ ಇಲ್ಲ. ನ್ಯಾಯಾಂಗ ನೀಡಿರುವ ತೀರ್ಪಿಗೆ ತಲೆಬಾಗುತ್ತೇನೆ. ಮುಂದಿನ ಕಾನೂನು ಹೋರಾಟದ ಬಗ್ಗೆ ನಮ್ಮ ವಕೀಲರ ಬಳಿ ಚರ್ಚಿಸುತ್ತೇನೆ.&lt;/p&gt;&lt;p&gt;-ವಿನಯ್&zwnj; ಕುಲಕರ್ಣಿ, ಶಾಸಕ ಹಾಗೂ ಕೊಲೆ ಪ್ರಕರಣದ ಅಪರಾಧಿ&lt;/p&gt;&lt;p&gt;ಟೈಮ್&zwnj; ಲೈನ್&zwnj;&lt;/p&gt;&lt;p&gt;ತೀರ್ಪಿನ ಹಿನ್ನೆಲೆಯಲ್ಲಿ ಇಡೀ ದಿನ ಆರೋಪಿಗಳು ಕೋರ್ಟ್&zwnj;ನಲ್ಲಿಯೇ ಇದ್ದರು&lt;/p&gt;&lt;p&gt;ಸಂಜೆ 5.20: ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶರು&lt;/p&gt;&lt;p&gt;ಸಂಜೆ 5.25: ತೀರ್ಪು ಪ್ರಕಟ&lt;/p&gt;&lt;p&gt;ಸಂಜೆ 5.25: ಅಪರಾಧಿಗಳನ್ನು ವಶಕ್ಕೆ ಪಡೆಯಲು ಸೂಚನೆ&lt;/p&gt;&lt;p&gt;ಸಂಜೆ 6: ಜೈಲಿಗೆ ಕರೆದೊಯ್ದ ಅಧಿಕಾರಿಗಳು&lt;/p&gt;&lt;p&gt;ಪ್ರಮುಖಾಂಶಗಳು&lt;/p&gt;&lt;p&gt;* ಬಿಜೆಪಿಗ ಯೋಗೇಶ್&zwnj; ಗೌಡ ಅವರನ್ನು 2016 ರ ಜೂ.15ರಂದು ಕೊಲೆ ಮಾಡಲಾಗಿತ್ತು&lt;/p&gt;&lt;p&gt;* ರಾಜಕೀಯ ವೈಷಮ್ಯದಿಂದ ಕೊಲೆ ಆಗಿದೆ ಎಂಬ ಬಲವಾದ ಆರೋಪ ಕೇಳಿಬಂದಿತ್ತು&lt;/p&gt;&lt;p&gt;* ಧಾರವಾಡ ಪೊಲೀಸರಿಂದ 6 ಮಂದಿ ವಿರುದ್ಧ ಕೋರ್ಟ್&zwnj;ಗೆ ದೋಷಾರೋಪ ಪಟ್ಟಿ ಸಲ್ಲಿಕೆ&lt;/p&gt;&lt;p&gt;* 2019ರಲ್ಲಿ ಪ್ರಕರಣಕ್ಕೆ ತಿರುವು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು.&lt;/p&gt;&lt;p&gt;* 2020ರ ನ.5ರಂದು ಸಿಬಿಐ ಅಧಿಕಾರಿಗಳಿಂದ ವಿನಯ್&zwnj; ಕುಲಕರ್ಣಿ ಬಂಧನ&lt;/p&gt;&lt;p&gt;* ವಿನಯ್&zwnj; ಸೇರಿ 21 ಮಂದಿ ಆರೋಪಿಗಳ ವಿರುದ್ಧ ಕೋರ್ಟ್&zwnj;ಗೆ ಚಾರ್ಜ್&zwnj;ಶೀಟ್&zwnj;&lt;/p&gt;&lt;p&gt;* ಏ.15ಕ್ಕೆ ತೀರ್ಪು. ವಿನಯ್ ಕುಲಕರ್ಣಿ ಸೇರಿ ಎಲ್ಲಾ 17 ಆರೋಪಿಗಳು ದೋಷಿ&lt;/p&gt;&lt;p&gt;* ಆರೋಪಿಗಳಾದ ವಾಸುದೇವ್&zwnj;, ಸೋಮಶೇಖರ್&zwnj; ಕೇಸ್&zwnj;ನಿಂದ ಖುಲಾಸೆ&lt;/p&gt;&lt;p&gt;* ಎ-1 ಬಸವರಾಜ್&zwnj; ಮುತ್ತಗಿ, ಎ-17 ಶಿವಾನಂದ್&zwnj; ಮಾಫಿ ಸಾಕ್ಷಿ&lt;/p&gt;&lt;p&gt;ಶಾಸಕ ಸ್ಥಾನಕ್ಕೆ ಕುತ್ತು?&lt;/p&gt;&lt;p&gt;ಶಾಸಕ ವಿನಯ್&zwnj; ಕುಲಕರ್ಣಿಗೆ ನೀಡಲಿರುವ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಗುರುವಾರ ಪ್ರಕಟಿಸಲಿದೆ. ಅದರ ಮೇಲೆ ವಿನಯ್&zwnj; ಕುಲಕರ್ಣಿ ಅವರ ಶಾಸಕ ಸ್ಥಾನದ ಭವಿಷ್ಯ ಕೂಡ ನಿರ್ಧಾರವಾಗಲಿದೆ. ಯಾವುದೇ ಜನಪ್ರತಿನಿಧಿ ವಿರುದ್ಧ 2 ವರ್ಷಕ್ಕಿಂತ ಹೆಚ್ಚಿನ ವರ್ಷ ಜೈಲು ಶಿಕ್ಷೆ ಪ್ರಕಟವಾದರೆ ತಕ್ಷಣ ಅವರ ಶಾಸಕ ಸ್ಥಾನ ರದ್ದಾಗುತ್ತದೆ. ಸದ್ಯ ವಿನಯ್ ಕುಲಕರ್ಣಿ ಪ್ರಕರಣ ಸಂಬಂಧ ಕೊಲೆ ಹಾಗೂ ಒಳಸಂಚು ಆರೋಪ ಸಾಬೀತು ಹಿನ್ನೆಲೆ ಜೀವಾವಧಿ ಶಿಕ್ಷೆ, ಮರಣದಂಡನೆಗೆ ಅವಕಾಶವಿದ್ದು, 2 ವರ್ಷಕ್ಕಿಂತ ಹೆಚ್ಚು ಶಿಕ್ಷೆಯಾದರೆ ಶಾಸಕ ಸ್ಥಾನದಿಂದ ಅನರ್ಹತೆಗೊಳ್ಳಲಿದ್ದಾರೆ. ಹೀಗಾಗಿ ವಿನಯ್ ಕುಲಕರ್ಣಿ ಶಾಸಕ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ.&lt;/p&gt;&lt;p&gt;ನಿಂತಲ್ಲೇ ಕುಸಿದು ಕಣ್ಣೀರಿಟ್ಟ ಶಾಸಕ&lt;/p&gt;&lt;p&gt;ನಾಯಾಧೀಶ ಸಂತೋಷ್&zwnj; ಗಜಾನನ್&zwnj; ಭಟ್&zwnj; ಅವರು ಕೊಲೆ ಪ್ರಕರಣದಲ್ಲಿ ಕುಲಕರ್ಣಿ ದೋಷಿ ಎಂದು ತೀರ್ಪು ನೀಡುತ್ತಿದ್ದಂತೆ ನಿಂತಲ್ಲೇ ಕುಸಿದ ಅವರು ಕಣ್ಣೀರಿಡಲು ಆರಂಭಿಸಿದರು. ಇನ್ನು ಕುಲಕರ್ಣಿ ಕಣ್ಣೀರಿಡುವಾಗ ಅವರನ್ನು ನೋಡುತ್ತಿದ್ದ ಮೂವರು ಮಕ್ಕಳು ಕೂಡ ಕೋರ್ಟ್&zwnj;ನಲ್ಲಿ ಕಣ್ಣೀರಿಟ್ಟರು. ಅಂತಿಮ ತೀರ್ಪಿಗೂ ಮುನ್ನ ವಿನಯ್&zwnj; ಕುಲಕರ್ಣಿ ಅವರು ಖುಲಾಸೆಯಾಗುವ ಭರವಸೆಯಲ್ಲಿದ್ದರು. ಆದರೆ ತೀರ್ಪು ಬರುತ್ತಿದಂತೆ ಕುಸಿದು ಕಣ್ಣೀರು ಹಾಕಿದರು.&lt;/p&gt;]]></content:encoded>
            <category>crime</category>
            <dc:creator>Sujatha NR</dc:creator>
            <atom:link href="https://www.kannadaprabha.in/crime-news/yogesh-gowda-murder-case-vinay-kulkarni-held-guilty-of-murder/articleshow-b89g0ad"/>
        </item>
        <item>
            <title><![CDATA[ಮೋಜಿಗಾಗಿ ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕುತ್ತಿದ್ದ ರ್‍ಯಾಪಿಡೋ ಚಾಲಕ]]></title>
            <link>https://www.kannadaprabha.in/crime-news/rapido-driver-used-to-break-into-locked-houses-for-fun/articleshow-hao6rsy</link>
            <guid isPermaLink="true">https://www.kannadaprabha.in/crime-news/rapido-driver-used-to-break-into-locked-houses-for-fun/articleshow-hao6rsy</guid>
            <pubDate>Fri, 17 Apr 2026 02:00:00 +0530</pubDate>
            <description><![CDATA[ಮಂಡ್ಯ ಜಿಲ್ಲೆ ಹೊಸಹಳ್ಳಿ ಗ್ರಾಮದ ನಾಗರಾಜ್ ಕ್ರಿಮಿನಲ್ ಹಿನ್ನಲೆಯುಳ್ಳವನಾಗಿದ್ದು, ನಗರದಲ್ಲಿ ರ್ಯಾಪಿಡೋ ಕ್ಯಾಬ್ ಚಾಲಕನಾಗಿ ಆತ ಕೆಲಸ ಮಾಡುತ್ತಿದ್ದ. ಸುಲಭವಾಗಿ ಹಣ ಸಂಪಾದನೆಗೆ ಆತ ದಾರಿ ತಪ್ಪಿದ್ದಾನೆ. ಈತನ ವಿರುದ್ಧ ರಾಮಮೂರ್ತಿ ನಗರ ಸೇರಿದಂತೆ ಇತರೆ ಪ್ರಕರಣಗಳು ದಾಖಲಾಗಿವೆ.]]></description>
            <media:content url="https://static-assets.asianetnews.com/kp/json/16042026/pictures/3121NAGARAJCITY_145.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು : &amp;nbsp;&lt;/strong&gt;ಹಗಲು ಹೊತ್ತಿನಲ್ಲೇ ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕುತ್ತಿದ್ದ ರ ಪಿಡೋ ಕ್ಯಾಬ್ ಚಾಲಕನೊಬ್ಬನನ್ನು ತಿಲಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;p&gt;ರಾಮಮೂರ್ತಿ ನಗರದ ನಿವಾಸಿ ನಾಗರಾಜ್ ಬಂಧಿತನಾಗಿದ್ದು, ಆರೋಪಿಯಿಂದ 240 ಗ್ರಾಂ ಚಿನ್ನಾಭರಣ, 89 ಗ್ರಾಂ ಬೆಳ್ಳಿ ಹಾಗೂ ಬೈಕ್ ಸೇರಿದಂತೆ 35 ಲಕ್ಷ ರು ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಜಯನಗರದ ಟಿ ಬ್ಲಾಕ್&zwnj; ನಲ್ಲಿ ಮನೆಯಲ್ಲಿ ಕಳ್ಳತನ ನಡೆದಿರುವ ಬಗ್ಗೆ ದೂರು ದಾಖಲಾಯಿತು. ಈ ಬಗ್ಗೆ ತನಿಖೆಗಿಳಿದ ಇನ್ಸ್&zwnj;ಪೆಕ್ಟರ್ ವಿಶ್ವನಾಥ್ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದೆ.&lt;/p&gt;&lt;p&gt;ಮಂಡ್ಯ ಜಿಲ್ಲೆ ಹೊಸಹಳ್ಳಿ ಗ್ರಾಮದ ನಾಗರಾಜ್ ಕ್ರಿಮಿನಲ್ ಹಿನ್ನಲೆಯುಳ್ಳವನಾಗಿದ್ದು, ನಗರದಲ್ಲಿ ರ್ಯಾಪಿಡೋ ಕ್ಯಾಬ್ ಚಾಲಕನಾಗಿ ಆತ ಕೆಲಸ ಮಾಡುತ್ತಿದ್ದ. ಸುಲಭವಾಗಿ ಹಣ ಸಂಪಾದನೆಗೆ ಆತ ದಾರಿ ತಪ್ಪಿದ್ದಾನೆ. ಈತನ ವಿರುದ್ಧ ರಾಮಮೂರ್ತಿ ನಗರ ಸೇರಿದಂತೆ ಇತರೆ ಪ್ರಕರಣಗಳು ದಾಖಲಾಗಿವೆ. ಹಗಲು ಹೊತ್ತಿನಲ್ಲಿ ಮನೆಗಳ್ಳತನ ಕೃತ್ಯಕ್ಕೆ ನಾಗರಾಜ್ ಕುಖ್ಯಾತನಾಗಿದ್ದ. ಮನೆ ಮುಂದಿನ ಗೇಟ್&zwnj; ಅನ್ನು ಹೊರಗಿನಿಂದ ಲಾಕ್ ಮಾಡಿಕೊಂಡು ಹೋಗಿರುವ ಮನೆಗಳನ್ನೇ ಗುರಿಯಾಗಿಸಿಕೊಂಡು ಆತ ಕಳ್ಳತನ ಕೃತ್ಯ ಎಸಗುತ್ತಿದ್ದ.&lt;/p&gt;&lt;p&gt;ಅಂತೆಯೇ ಕಳೆದ ತಿಂಗಳು ಜಯನಗರದ 4ನೇ ಹಂತದಲ್ಲಿ ವಾಸವಾಗಿರುವ ದೂರುದಾರರು, ಮನೆ ಬಾಗಿಲನ್ನು ಚೀಲ ಹಾಕಿ ಗೇಟ್ ಬಂದ್ ಮಾಡಿಕೊಂಡು ದಿನಸಿ ಖರೀದಿಗೆ ತೆರಳಿದ್ದರು. ಆಗ ಅವರ ಮನೆಯೊಳಗೆ ನುಗ್ಗಿ ಚಿನ್ನಾಭರಣ ದೋಚಿ ಆರೋಪಿ ಪರಾರಿಯಾಗಿದ್ದ. ಕೆಲ ಹೊತ್ತಿನ ತರುವಾಯ ದಿನಸಿ ಖರೀದಿಸಿ ದೂರುದಾರರು ಮರಳಿದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಪ್ರೇಯಸಿ ಜತೆ ಲಿವಿಂಗ್ ಇನ್&zwnj; ಟುಗೆದರ್&zwnj;!&lt;/strong&gt;&lt;/h2&gt;&lt;p&gt;ತನ್ನ ಪ್ರೇಯಸಿ ಜತೆ ಸಹಜೀವನವನ್ನು (ಲಿವಿಂಗ್ ಇನ್&zwnj; ಟುಗೆದರ್&zwnj;) ಮಂಡ್ಯದ ನಾಗರಾಜ್&zwnj; ನಡೆಸುತ್ತಿದ್ದ. ಕಳ್ಳತನ ಕೃತ್ಯದಲ್ಲಿ ಸಂಪಾದಿಸಿದ ಹಣದಲ್ಲಿ ಆತ ಮೋಜು ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.ಮುಖ್ಯಾಂಶಗಳು&lt;/p&gt;&lt;h3&gt;&lt;strong&gt;-ಬಂಧಿತ ಚಾಲಕನಿಂದ ₹ 35 ಲಕ್ಷದ 240 ಗ್ರಾಂ ಚಿನ್ನ, 89 ಗ್ರಾಂ ಬೆಳ್ಳಿ, ಬೈಕ್ ವಶ&lt;/strong&gt;&lt;/h3&gt;&lt;p&gt;&lt;strong&gt;- ಮಂಡ್ಯ ಜಿಲ್ಲೆ ಮೂಲದವಾನ ಆರೋಪಿ ನಾಗರಾಜ್&zwnj; ನಗರದಲ್ಲಿ ರ್&zwj;ಯಾಪಿಡೋ ಕ್ಯಾಬ್ ಚಾಲಕನಾಗಿದ್ದ&lt;/strong&gt;&lt;/p&gt;&lt;p&gt;&lt;strong&gt;- ಸುಲಭವಾಗಿ ಹಣ ಗಳಿಸಿ ಮೋಜು ಮಾಡಲು ಹಗಲು ಹೊತ್ತಿನಲ್ಲಿ ಮನೆಗಳಿಗೆ ಕನ್ನ ಹಾಕುತ್ತಿದ್ದ&lt;/strong&gt;&lt;/p&gt;&lt;p&gt;&lt;strong&gt;- ಮನೆ ಮುಂದಿನ ಗೇಟ್&zwnj; ಅನ್ನು ಹೊರಗಿನಿಂದ ಲಾಕ್ ಮಾಡಿರುವ ಮನೆಗಳೇ ಈತನಿಗೆ ಟಾರ್ಗೆಟ್&zwnj;&lt;/strong&gt;&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/rapido-driver-used-to-break-into-locked-houses-for-fun/articleshow-hao6rsy"/>
        </item>
        <item>
            <title><![CDATA[ಇಬ್ಬರು ವಿದ್ಯಾರ್ಥಿನಿಯರ ನಾಪತ್ತೆ ಇನ್ನೂ ನಿಗೂಢ]]></title>
            <link>https://www.kannadaprabha.in/crime-news/the-disappearance-of-two-female-students-is-still-a-mystery/articleshow-i1t4yz4</link>
            <guid isPermaLink="true">https://www.kannadaprabha.in/crime-news/the-disappearance-of-two-female-students-is-still-a-mystery/articleshow-i1t4yz4</guid>
            <pubDate>Thu, 16 Apr 2026 07:08:51 +0530</pubDate>
            <description><![CDATA[ವಿದ್ಯಾರಣ್ಯಪುರದಲ್ಲಿ ಪಿಯುಸಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ನಿಗೂಢವಾಗಿ ನಾಪತ್ತೆಯಾಗಿ 75 ದಿನಗಳೇ ಕಳೆದಿದ್ದು, ಇದುವರೆಗೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಇವರ ಪತ್ತೆ ಕಾರ್ಯ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.]]></description>
            <media:content url="https://static-gi.asianetnews.com/images/01kmsf71v8546thmp1s99f9n5s/police-1774676313960.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು : &amp;nbsp;&lt;/strong&gt;ವಿದ್ಯಾರಣ್ಯಪುರದಲ್ಲಿ ಪಿಯುಸಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ನಿಗೂಢವಾಗಿ ನಾಪತ್ತೆಯಾಗಿ 75 ದಿನಗಳೇ ಕಳೆದಿದ್ದು, ಇದುವರೆಗೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಇವರ ಪತ್ತೆ ಕಾರ್ಯ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.&lt;/p&gt;&lt;p&gt;ಈ ಇಬ್ಬರು ಹುಡುಗಿಯರ ಪತ್ತೆಗಾಗಿ ಪೊಲೀಸ್ ಇಲಾಖೆ 10 ಜನರ ವಿಶೇಷ ತಂಡವನ್ನು ರಚಿಸಿದ್ದು, ಈ ತಂಡವೂ ವಿದ್ಯಾರ್ಥಿನಿಯರಿಗಾಗಿ ಹಲವು ಕಡೆಗಳಲ್ಲಿ ಹುಡುಕಾಟ ನಡೆಸಿದ್ದು, ಇವರ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ. ಇವರನ್ನು ಅರಸಿ ಪೊಲೀಸರು ಹೋಗದೆ ಇರುವ ಜಾಗವಿಲ್ಲ, ಹುಡುಕಾಡದ ಸ್ಥಳವಿಲ್ಲ. ಆದರೂ ಈ ಹುಡುಗಿಯರು ಎಲ್ಲಿ ಹೋದರು, ಏನಾದರೂ ಎಂಬ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಇದು ಕುಟುಂಬಸ್ಥರನ್ನು ಕಂಗಾಲಾಗುವಂತೆ ಮಾಡಿದೆ.&lt;/p&gt;&lt;h2&gt;&lt;strong&gt;ಕಂಗಾಲಾದ ಪಾಲಕರು:&amp;nbsp;&lt;/strong&gt;&lt;/h2&gt;&lt;p&gt;ಈ ಇಬ್ಬರಿಗಾಗಿ ಕೇರಳದಲ್ಲಿಯೇ ಪೊಲೀಸ್ ತಂಡವೊಂದು ಬೀಡುಬಿಟ್ಟಿದ್ದು ಹುಡುಕಾಟ ನಡೆಸಿದೆ. ಇಬ್ಬರು ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದರು. ದ್ವಿತೀಯ ಪಿಯುಸಿ ಓದುತ್ತಿದ್ದ ತನಿಷ್ಕಾ ಹಾಗೂ ಆಕೆಯ ಜ್ಯೂನಿಯರ್ ತೇಜಸ್ವಿನಿ ನಾಪತ್ತೆಯಾಗಿದ್ದರು. ಇವರಿಗಾಗಿ ಮುಂಬೈ, ಚೆನೈ, ಕೊಯಮತ್ತೂರು, ದೆಹಲಿ, ಕಾಶಿ, ಕೇರಳ, ಚಾಮರಾಜನಗರ, ಮೈಸೂರು ಸೇರಿ ಸುಮಾರು 100 ಕ್ಕೂ ಹೆಚ್ಚು ಸ್ಥಳಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.&lt;/p&gt;&lt;h3&gt;ವಿದ್ಯಾರ್ಥಿನಿಯರು ಪೋನ್ ಮತ್ತು ಎಟಿಎಂ ಕಾರ್ಡ್ ಕೂಡ ಬಳಸಿಲ್ಲ&lt;/h3&gt;&lt;p&gt;ವಿದ್ಯಾರ್ಥಿನಿಯರು ಪೋನ್ ಮತ್ತು ಎಟಿಎಂ ಕಾರ್ಡ್ ಕೂಡ ಬಳಸಿಲ್ಲ, ಸ್ನೇಹಿತರು ಹಾಗೂ ಕುಟುಂಬದ ಸಂಪರ್ಕವನ್ನು ಮಾಡಿಲ್ಲ, ಇವರು ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದವರೆಗೂ ಹೋಗಿದ್ದ ಸುಳಿವು ಸಿಕ್ಕಿತ್ತು. ಆದರೆ ಅಲ್ಲಿಗೆ ಹೋಗುವಷ್ಟರಲ್ಲಿ ಇವರು ಅಲ್ಲಿಂದಲೂ ನಾಪತ್ತೆಯಾಗಿದ್ದರು. ಅಲ್ಲಿಂದ ಎಲ್ಲಿ ಹೋದರು ಅನ್ನೋದೇ ಈಗ ಯಕ್ಷ ಪ್ರಶ್ನೆಯಾಗಿದೆ.&lt;/p&gt;&lt;p&gt;ವಿದ್ಯಾರ್ಥಿಗಳ ಪಾಲಕರು ಹೈಕೋರ್ಟ್&zwnj;ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ವಿದ್ಯಾರ್ಥಿನಿಯರನ್ನು ಹುಡುಕಲು ಪೊಲೀಸರಿಗೆ ಒಂದು ವಾರದ ಕಾಲಾವಕಾಶ ನೀಡಿತ್ತು. ಈ ಗಡುವು ಮುಗಿದು ಒಂದು ತಿಂಗಳೇ ಕಳೆದಿದೆ. ಆದರೂ ಈ ಬಾಲಕಿಯರ ಸುಳಿವು ಪತ್ತೆಯಾಗದೇ ಇರುವುದು ಪಾಲಕರನ್ನು ಕಂಗಾಲಾಗುವಂತೆ ಮಾಡಿದೆ.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/the-disappearance-of-two-female-students-is-still-a-mystery/articleshow-i1t4yz4"/>
        </item>
        <item>
            <title><![CDATA[180 ಅಪ್ರಾಪ್ತೆಯರ ಫೋಟೋ ಬಳಸಿ 19ರ ತನ್ವೀರ್‌ನಿಂದ  ಬ್ಲ್ಯಾಕ್‌ಮೇಲ್‌]]></title>
            <link>https://www.kannadaprabha.in/india-news/amravati-bulldozer-action-home-of-19-year-old-who-filmed-blackmailed-minor-girls-demolished/articleshow-i303549</link>
            <guid isPermaLink="true">https://www.kannadaprabha.in/india-news/amravati-bulldozer-action-home-of-19-year-old-who-filmed-blackmailed-minor-girls-demolished/articleshow-i303549</guid>
            <pubDate>Thu, 16 Apr 2026 01:45:00 +0530</pubDate>
            <description><![CDATA[&lt;p&gt;&amp;nbsp; 180ಕ್ಕೂ ಹೆಚ್ಚು ಅಪ್ರಾಪ್ತ ಹೆಣ್ಣುಮಕ್ಕಳ ಅಶ್ಲೀಲ ಚಿತ್ರ ಸೆರೆಹಿಡಿದ 19 ವರ್ಷದ ಅಯಾನ್ ಅಹ್ಮದ್ ತನ್ವೀರ್&zwnj; ಎಂಬಾತ ಹೆಣ್ಣುಮಕ್ಕಳನ್ನು ಬ್ಲ್ಯಾಕ್&zwnj;ಮೇಲ್&zwnj; ಮಾಡುತ್ತಿದ್ದ ಆತಂಕಕಾರಿ ಪ್ರಕರಣ ಮಹಾರಾಷ್ಟ್ರದ ಅಮರಾವತಿಯಲ್ಲಿ ಬೆಳಕಿಗೆ ಬಂದಿದೆ.&amp;nbsp;&lt;/p&gt;]]></description>
            <media:content url="https://static-assets.asianetnews.com/kp/json/15042026/pictures/TANVEER_306.JPG" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;strong&gt;ಅಮರಾವತಿ&lt;/strong&gt;: ಮಹಾರಾಷ್ಟ್ರದ ನಾಸಿಕ್&zwnj; ಟಿಸಿಎಸ್&zwnj;ನ ಬಿಪಿಒನಲ್ಲಿ ಬೆಚ್ಚಿಬೀಳಿಸುವ ಕಾರ್ಪೊರೆಟ್&zwnj; ಜಿಹಾದ್&zwnj; ಬೆಳಕಿಗೆ ಬಂದ ಬೆನ್ನಲ್ಲೇ 180ಕ್ಕೂ ಹೆಚ್ಚು ಅಪ್ರಾಪ್ತ ಹೆಣ್ಣುಮಕ್ಕಳ ಅಶ್ಲೀಲ ಚಿತ್ರ ಸೆರೆಹಿಡಿದ 19 ವರ್ಷದ ಅಯಾನ್ ಅಹ್ಮದ್ ತನ್ವೀರ್&zwnj; ಎಂಬಾತ ಹೆಣ್ಣುಮಕ್ಕಳನ್ನು ಬ್ಲ್ಯಾಕ್&zwnj;ಮೇಲ್&zwnj; ಮಾಡುತ್ತಿದ್ದ ಆತಂಕಕಾರಿ ಪ್ರಕರಣ ಮಹಾರಾಷ್ಟ್ರದ ಅಮರಾವತಿಯಲ್ಲಿ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಆರೋಪಿಯನ್ನು ಬಂಧಿಸಲಾಗಿದ್ದು, ಆತನ ಮನೆಯನ್ನು ಬುಲ್ಡೋಜರ್&zwnj; ಬಳಸಿ ನೆಲಸಮ ಮಾಡಲಾಗಿದೆ.&lt;/p&gt;&lt;h2&gt;&lt;strong&gt;ಏನಿದು ಪ್ರಕರಣ?:&lt;/strong&gt;&lt;/h2&gt;&lt;p&gt;ವಾಟ್ಸಾಪ್&zwnj;, ಸ್ನಾಪ್&zwnj;ಚಾಟ್&zwnj;ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಹುಡುಗಿಯರನ್ನು ಸಂಪರ್ಕಿಸುತ್ತಿದ್ದ ಅಮರಾವತಿ ಜಿಲ್ಲೆಯ ಪರತವಾಡಾ ನಿವಾಸಿ ತನ್ವೀರ್&zwnj;, ಕ್ರಮೇಣ ಅವರ ಸ್ನೇಹ ಗಳಿಸಿ, ಪ್ರೇಮಪಾಶಕ್ಕೆ ಸಿಲುಕಿಸುತ್ತಿದ್ದ. ಬಳಿಕ ಅವರನ್ನು ಮುಂಬೈ ಪುಣೆಯಂತಹ ನಗರಗಳಿಗೆ ಕರೆದೊಯ್ದು, ಅನುಮತಿಯಿಲ್ಲದೆ ಅವರ ಖಾಸಗಿ ಫೋಟೋ, ವಿಡಿಯೋ ಚಿತ್ರೀಕರಿಸುತ್ತಿದ್ದ. ಬಳಿಕ ಅವುಗಳನ್ನು ಬಳಸಿ ಬ್ಲ್ಯಾಕ್&zwnj;ಮೇಲ್&zwnj; ಮಾಡಿ, ಅವರನ್ನು ವೇಶ್ಯಾವಾಟಿಯಲ್ಲಿ ತೊಡಗುವಂತೆಯೂ ಒತ್ತಾಯಿಸುತ್ತಿದ್ದ. ಕೆಲವರನ್ನು ಮತಾಂತರಕ್ಕೂ ಬಲವಂತ ಮಾಡಿದ್ದ.&lt;/p&gt;&lt;p&gt;ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಕೆಲ ಫೋಟೋ ವೈರಲ್&zwnj; ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಬಿಜೆಪಿ ಸಂಸದ ಅನಿಲ್&zwnj; ಬೊಂಡೆ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.&amp;nbsp;&lt;/p&gt;&lt;h3&gt;ಕೂಡಲೇ ಕ್ರಮ:&lt;/h3&gt;&lt;p&gt;ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಕಾರ್ಯಪ್ರವೃತ್ತರಾಗಿರುವ ಪೊಲೀಸರು, ತನ್ವೀರ್&zwnj;ನನ್ನು ಬಂಧಿಸಿ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಆತನನ್ನು ಏ.21ರ ವರೆಗೆ ಪೊಲೀಸ್&zwnj; ವಶಕ್ಕೆ ನೀಡಲಾಗಿದೆ. ಅತ್ತ ಅವನಿಗೆ ಸೇರಿದ್ದ ಮೊಬೈಲ್&zwnj; ಹಾಗೂ ಇತರೆ ಎಲೆಕ್ಟ್ರಾನಿಕ್&zwnj; ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ. ಅದರಲ್ಲಿ 180 ಅಪ್ರಾಪ್ತೆಯರ 350ಕ್ಕೂ ಹೆಚ್ಚು ಅಶ್ಲೀಲ ಚಿತ್ರ ಪತ್ತೆಯಾಗಿದೆ. ಜತೆಗೆ ತನ್ವೀರ್&zwnj; ಒಬ್ಬನೇ ಈ ಕೃತ್ಯಗಳನ್ನು ಮಾಡುತ್ತಿದ್ದನೇ ಅಥವಾ ಇದರ ದೊಡ್ಡ ಜಾಲ ಇದೆಯೇ ಎಂಬುದರ ಪತ್ತೆಯೂ ನಡೆಯುತ್ತಿದೆ. ಕೇಸ್&zwnj;ನ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ. ಸದ್ಯ 8 ಸಂತ್ರಸ್ತೆಯರನ್ನು ಗುರುತಿಸಲಾಗಿದ್ದು, ಇನ್ಯಾರಾದರೂ ಇದ್ದರೆ ಧೈರ್ಯವಾಗಿ ಮುಂದೆ ಬಂದು ದೂರು ದಾಖಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಹೆಚ್ಚಿನ ತನಿಖೆಗಾಗಿ ಬಲಿಪಶುಗಳ ಪರಿವಾರವನ್ನೂ ಸಂಪರ್ಕಿಸಲಾಗುತ್ತಿದೆ.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/amravati-bulldozer-action-home-of-19-year-old-who-filmed-blackmailed-minor-girls-demolished/articleshow-i303549"/>
        </item>
        <item>
            <title><![CDATA[ಯೋಗೇಶ್‌ ಗೌಡ ಕೊಲೆ ಕೇಸ್‌ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆ]]></title>
            <link>https://www.kannadaprabha.in/entertainment-news/bengaluru-court-sentences-cong-mla-vinay-kulkarni-to-life-imprisonment-in-murder/articleshow-iwbncho</link>
            <guid isPermaLink="true">https://www.kannadaprabha.in/entertainment-news/bengaluru-court-sentences-cong-mla-vinay-kulkarni-to-life-imprisonment-in-murder/articleshow-iwbncho</guid>
            <pubDate>Sat, 18 Apr 2026 06:09:55 +0530</pubDate>
            <description><![CDATA[ಹತ್ತು ವರ್ಷಗಳ ಹಿಂದೆ ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದ ಧಾರವಾಡದ ಜಿಪಂ ಮಾಜಿ ಸದಸ್ಯ ಯೋಗೇಶ್&zwnj; ಗೌಡ ಕೊಲೆ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 17 ಮಂದಿ ಅಪರಾಧಿಗಳಿಗೆ ಶುಕ್ರವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ.]]></description>
            <media:content url="https://static-gi.asianetnews.com/images/01kpdh942e2d4ymngdazxwe5vk/vinay-kulkarni-1776423309390.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು : &amp;nbsp;&lt;/strong&gt;ಹತ್ತು ವರ್ಷಗಳ ಹಿಂದೆ ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದ ಧಾರವಾಡದ ಜಿಪಂ ಮಾಜಿ ಸದಸ್ಯ ಯೋಗೇಶ್&zwnj; ಗೌಡ ಕೊಲೆ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 17 ಮಂದಿ ಅಪರಾಧಿಗಳಿಗೆ ಶುಕ್ರವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಮಾಜಿ ಸಚಿವ ಹಾಗೂ ಕಾಂಗ್ರೆಸ್&zwnj; ಹಾಲಿ ಶಾಸಕ ವಿನಯ್&zwnj; ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ ಮತ್ತು ಒಬ್ಬ ಅಪರಾಧಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.&lt;/p&gt;&lt;p&gt;ಪ್ರಕರಣದ 21 ಮಂದಿ ಆರೋಪಿಗಳ ಪೈಕಿ 17 ಮಂದಿಯನ್ನು ದೋಷಿ ಎಂದು ತೀರ್ಮಾನಿಸಿ ಏ.15ರಂದು ತೀರ್ಪು ನೀಡಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್&zwnj;, ಶುಕ್ರವಾರ ತೆರೆದ ನ್ಯಾಯಾಲಯದಲ್ಲಿ 17 ಮಂದಿ ಅಪರಾಧಿಗಳಿಗೂ ಶಿಕ್ಷೆ ಪ್ರಮಾಣ ಪ್ರಕಟಿಸಿದರು.&lt;/p&gt;&lt;p&gt;ಶಿಕ್ಷೆ ಪ್ರಮಾಣ ಪ್ರಕಟವಾಗುವ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಹಾಗೂ ಪೊಲೀಸರು ಶುಕ್ರವಾರ ಬೆಳಗ್ಗೆ ಬಿಗಿ ಭದ್ರತೆಯಲ್ಲಿ 17 ಮಂದಿ ಅಪರಾಧಿಗಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ನ್ಯಾಯಾಲಯಕ್ಕೆ ಕರೆತಂದಿದ್ದರು. ಸಂಜೆ ಸುಮಾರು 4.10ಕ್ಕೆ ನ್ಯಾಯಾಧೀಶ ಸಂತೋಷ್&zwnj; ಗಜಾನನ ಭಟ್&zwnj; ನ್ಯಾಯಾಲಯದ ಕೊಠಡಿ ಪ್ರವೇಶಿಸಿದರು. ಬಳಿಕ 17 ಮಂದಿ ಅಪರಾಧಿಗಳ ಹೆಸರು ಕೂಗಿದರು. ಈ ವೇಳೆ ವಿನಯ್&zwnj; ಕುಲಕರ್ಣಿ ಸೇರಿ 17 ಮಂದಿ ಅಪರಾಧಿಗಳು ನ್ಯಾಯಾಧೀಶರಿಗೆ ಕೈ ಮುಗಿದು ನಿಂತರು. ಈ ವೇಳೆ ನ್ಯಾಯಾಧೀಶರು ಶಿಕ್ಷೆ ಪ್ರಮಾಣ ಪ್ರಕಟಿಸಿದರು. ಜೀವಾವಧಿ ಶಿಕ್ಷೆ ಎಂದು ಹೇಳುತ್ತಿದಂತೆ ವಿನಯ್&zwnj; ಕುಲಕರ್ಣಿ ಸೇರಿ ಎಲ್ಲ ಆರೋಪಿಗಳು ಕಣ್ಣೀರಿಟ್ಟರು.&lt;/p&gt;&lt;p&gt;ನ್ಯಾಯಾಲಯದ ತೀರ್ಪಿನ ಬಳಿಕ ಅಪರಾಧಿಗಳನ್ನು ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.&lt;/p&gt;&lt;h2&gt;&lt;strong&gt;ಯಾವುದಕ್ಕೆ ಎಷ್ಟು ಶಿಕ್ಷೆ?:&lt;/strong&gt;&lt;/h2&gt;&lt;p&gt;ಭಾರತೀಯ ದಂಡ&zwnj; ಸಂಹಿತೆ (ಐಪಿಸಿ) ಸೆಕ್ಷನ್ 302 (ಕೊಲೆ) ಜತೆಗೆ 120ಬಿ (ಪಿತೂರಿ) ಅಡಿಯಲ್ಲಿನ ಶಿಕ್ಷಾರ್ಹ ಅಪರಾಧಗಳಿಗಾಗಿ ವಿಕ್ರಮ್ ಬಳ್ಳಾರಿ (ಎ2), ಕೀರ್ತಿಕುಮಾರ್ ಬಸವರಾಜ ಕುರಹಟ್ಟಿ (ಎ3), ಸಂದೀಪ್ ಸವದತ್ತಿ (ಎ4), ವಿನಾಯಕ ಕಟಗಿ (ಎ5), ಮಹಾಬಲೇಶ್ವರ ಹೊಂಗಲ್ ಅಲಿಯಾಸ್ ಮುದುಕ (ಎ6), ಸಂತೋಷ್ ಸವದತ್ತಿ (ಎ7), ಎಂ. ದಿನೇಶ್ (ಎ8), ಅಶ್ವತ್ (ಎ9), ಸುನೀಲ್ (ಎ10), ನಜೀರ್ ಅಹಮದ್ (ಎ11), ಶಹನವಾಜ್ (ಎ12), ನೂತನ್ (ಎ13), ಹರ್ಷಿತ್ (ಎ14), ವಿನಯ ಕುಲಕರ್ಣಿ (ಎ15), ಚಂದ್ರಶೇಖರ್ ಇಂಡಿ (ಎ16) ಹಾಗೂ ವಿಕಾಸ್ ಕಲ್ಬುರ್ಗಿಗೆ (ಎ18) ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ 30 ಸಾವಿರ ರು. ದಂಡ ವಿಧಿಸಿದೆ.&lt;/p&gt;&lt;p&gt;ಅಂತೆಯೇ ಐಪಿಸಿ ಸೆಕ್ಷನ್ 143 (ಅಕ್ರಮ ಕೂಟ) ಜತೆಗೆ 120ಬಿ (ಪಿತೂರಿ) ಅಡಿಯಲ್ಲಿನ ಶಿಕ್ಷಾರ್ಹ ಅಪರಾಧಕ್ಕಾಗಿ 2 ರಿಂದ 14 ಹಾಗೂ 18ನೇ ಆರೋಪಿಗಳಿಗೆ ತಲಾ 2 ಸಾವಿರ ರು. ದಂಡದೊಂದಿಗೆ 6 ತಿಂಗಳ ಅವಧಿಗೆ ಸಾದಾ ಜೈಲು ಶಿಕ್ಷೆ ವಿಧಿಸಿದೆ. ಐಪಿಸಿ ಸೆಕ್ಷನ್ 147 (ಗಲಭೆ) ಜತೆಗೆ 120ಬಿ ಅಡಿಯ ಅಪರಾಧಕ್ಕಾಗಿ ಆರೋಪಿ ಸಂಖ್ಯೆ 2 ರಿಂದ 14 ಹಾಗೂ 18ನೇ ಆರೋಪಿಗೆ ತಲಾ 2 ಸಾವಿರ ರು. ದಂಡದೊಂದಿಗೆ 1 ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿದೆ.&lt;/p&gt;&lt;p&gt;ಐಪಿಸಿ ಸೆಕ್ಷನ್ 148 (ಮಾರಕಾಸ್ತ್ರ ಹಿಡಿದು ಗಲಭೆ) ಜತೆಗೆ 120ಬಿ ಅಡಿಯಲ್ಲಿನ ಅಪರಾಧ ಕೃತ್ಯಕ್ಕಾಗಿ 2 ರಿಂದ 14 ಮತ್ತು 18ನೇ ಆರೋಪಿಗಳಿಗೆ 1 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ತಲಾ 2 ಸಾವಿರ ರು. ದಂಡ ವಿಧಿಸಲಾಗಿದೆ. ಐಪಿಸಿ ಸೆಕ್ಷನ್ 120ಬಿ (ಪಿತೂರಿ) ಅಡಿಯಲ್ಲಿನ ಅಪರಾಧಕ್ಕಾಗಿ 2 ರಿಂದ 16 ಹಾಗೂ 18ನೇ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 30 ಸಾವಿರ ರು. ದಂಡ ವಿಧಿಸಲಾಗಿದೆ.&lt;/p&gt;&lt;p&gt;ಚನ್ನಕೇಶವ ಟಿಂಗರೀಕರ್&zwnj;ಗೆ (ಎ19) ಐಪಿಸಿ ಸೆಕ್ಷನ್ 218 (ಸರ್ಕಾರಿ ಅಧಿಕಾರಿಯು ವ್ಯಕ್ತಿಯನ್ನು ಶಿಕ್ಷೆಯಿಂದ ಅಥವಾ ಆಸ್ತಿ ಮುಟ್ಟುಗೋಲಿನಿಂದ ರಕ್ಷಿಸಲು ಸುಳ್ಳು ದಾಖಲೆ ಸೃಷ್ಟಿ) ಅಡಿ 7 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 30 ಸಾವಿರ ರು. ದಂಡ, ಐಪಿಸಿ ಸೆಕ್ಷನ್ 201 (ಸಾಕ್ಷ್ಯಗಳ ಕಣ್ಮರೆಗೆ ಕಾರಣ ಅಥವಾ ಅಪರಾಧಿ ರಕ್ಷಿಸಲು ಸುಳ್ಳು ಮಾಹಿತಿ ನೀಡುವುದು) ಜತೆಗೆ 120ಬಿ ಅಡಿಯಲ್ಲಿನ ಅಪರಾಧಕ್ಕಾಗಿ, 2 ರಿಂದ 16, 18 ಮತ್ತು 19ನೇ ಆರೋಪಿಗಳಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 30 ಸಾವಿರ ರು. ದಂಡ ವಿಧಿಸಿದೆ.&lt;/p&gt;&lt;p&gt;ಐಪಿಸಿ ಸೆಕ್ಷನ್ 218 ಜತೆಗೆ 120ಬಿ ಅಡಿಯಲ್ಲಿನ ಅಪರಾಧಕ್ಕಾಗಿ ಎ19 ಚೆನ್ನಕೇಶವ ಟಿಂಗರೀಕರ್&zwnj;ಗೆ 3 ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ರು. ದಂಡ ವಿಧಿಸಲಾಗಿದೆ. ಮೇಲಿನ ಎಲ್ಲ ಪ್ರಕರಣಗಳಲ್ಲೂ ಅಪರಾಧಿಗಳು ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h3&gt;&lt;strong&gt;ಯೋಗೇಶ್&zwnj; ಗೌಡ ಮಕ್ಕಳಿಗೆ 16 ಲಕ್ಷ ರು. ಪರಿಹಾರ:&lt;/strong&gt;&lt;/h3&gt;&lt;p&gt;ಅಪರಾಧಿಗಳು ದಂಡ ಪಾವತಿಸಲು ವಿಫಲವಾಗಿ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಿದರೂ ದಂಡ ಪಾವತಿಸುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಪರಾಧಿಗಳಿಗೆ ವಿಧಿಸಲಾಗಿರುವ ಎಲ್ಲ ಶಿಕ್ಷೆಗಳೂ ಏಕಕಾಲದಲ್ಲಿ ಜಾರಿಯಾಗಲಿವೆ. ವಿಚಾರಣಾಧೀನ ಕೈದಿಗಳಾಗಿ ಅನುಭವಿಸಿದ ಬಂಧನದ ಅವಧಿ ಜೈಲು ಶಿಕ್ಷೆಯಿಂದ ಕಡಿತಗೊಳ್ಳಲಿದೆ. ದಂಡದ ಒಟ್ಟು ಮೊತ್ತದಿಂದ ಮೃತ ಯೋಗೇಶ್ ಗೌಡ ಮತ್ತು ಗುರುನಾಥ ಗೌಡ ಅವರ ಮಕ್ಕಳಿಗೆ 16 ಲಕ್ಷ ರು. ಪರಿಹಾರ ನೀಡಬೇಕು. ಉಳಿದ ದಂಡದ ಮೊತ್ತವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.&lt;/p&gt;&lt;p&gt;ಏನಿದು ಪ್ರಕರಣ?:&lt;/p&gt;&lt;p&gt;ಧಾರವಾಡದ ಜಿ.ಪಂ. ಮಾಜಿ ಸದಸ್ಯ ಯೋಗೇಶ್&zwnj; ಗೌಡ ಅವರನ್ನು 2016ರ ಜೂ.15ರಂದು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದರು. ಈ ಸಂಬಂಧ ಧಾರವಾಡದ ಉಪನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಆರು ಜನರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಬಳಿಕ ಈ ಪ್ರಕರಣವನ್ನು 2019ರಲ್ಲಿ ಸಿಬಿಐ ತನಿಖೆಗೆ ವಹಿಸಲಾಗಿತ್ತು. ಸಿಬಿಐ ತನಿಖೆಯಲ್ಲಿ ಇದು ರಾಜಕೀಯ ಪ್ರೇರಿತ ಕೊಲೆ ಎಂಬುದು ಬೆಳಕಿಗೆ ಬಂದಿತ್ತು. ಇದಕ್ಕೆ ಪೂರಕವಾಗಿ ಸಾಕ್ಷ್ಯಗಳನ್ನು ಸಂಗ್ರಹಿಸಿದ ಸಿಬಿಐ ಅಧಿಕಾರಿಗಳು 2020ರ ನ.5ರಂದು ವಿನಯ್&zwnj; ಕುಲಕರ್ಣಿ ಅವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ವಿನಯ್&zwnj; ಸೇರಿ ಒಟ್ಟು 21 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿದ್ದರು.&lt;/p&gt;&lt;p&gt;&lt;strong&gt;ಖುಲಾಸೆ ಗೊಂಡವರು ಯಾರು?&lt;/strong&gt;&lt;/p&gt;&lt;p&gt;ಪ್ರಕರಣದ 20ನೇ ಆರೋಪಿ ವಾಸುದೇವ ರಾಮ ನಿಲೇಕಣಿ, 21 ಆರೋಪಿ ಸೋಮಶೇಖರ್ ಬಸಪ್ಪ ನ್ಯಾಮನಗೌಡ, ಮಾಫಿ ಸಾಕ್ಷಿಯಾಗಿದ್ದ 1ನೇ ಆರೋಪಿ ಬಸವರಾಜ ಮುತ್ತಗಿ, 17ನೇ ಆರೋಪಿ ಶಿವಾನಂದ ಶ್ರೀಶೈಲ ಬಿರಾದಾರ್.&lt;/p&gt;&lt;p&gt;&lt;strong&gt;17ನೇ ಆರೋಪಿ ವಿರುದ್ಧ ಕ್ರಮಕ್ಕೆ ಅವಕಾಶ&lt;/strong&gt;&lt;/p&gt;&lt;p&gt;ಈ ಪ್ರಕರಣದಲ್ಲಿ ಮೊದಲಿಗೆ ಮಾಫಿ ಸಾಕ್ಷಿಯಾಗಿ ನಂತರ ವಿಚಾರಣಾ ನ್ಯಾಯಾಲಯದ ಎದುರು ಪ್ರತಿಕೂಲ ಸಾಕ್ಷ್ಯ ನುಡಿದಿದ್ದ ಪ್ರಕರಣದ 17ನೇ ಆರೋಪಿ ಶಿವಾನಂದ ಶ್ರೀಶೈಲ ಬಿರಾದಾರ್&zwnj; ವಿರುದ್ಧ ವಿಚಾರಣೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಲು ನ್ಯಾಯಾಲಯ ಅವಕಾಶ ನೀಡಿದೆ.&lt;/p&gt;&lt;p&gt;&lt;strong&gt;-ಬಾಕ್ಸ್&zwnj;-ಸುಳ್ಳು ಸಾಕ್ಷ್ಯ ಪ್ರಕರಣ ದಾಖಲಿಸಲು ನಿರ್ದೇಶನ&lt;/strong&gt;&lt;/p&gt;&lt;p&gt;ವಿಚಾರಣಾ ನ್ಯಾಯಾಲಯದ ಮುಂದೆ ಸುಳ್ಳು ಸಾಕ್ಷ್ಯ ನೀಡಿದ್ದಕ್ಕಾಗಿ ಪೊಲೀಸ್ ಅಧಿಕಾರಿಗಳಾದ ಶಿವಾನಂದ ಚಲವಾದಿ, ಬಾಬು ಕಟಗಿ, ಶಂಕರಗೌಡ ಬಸನಗೌಡ ಪಾಟೀಲ್ ಹಾಗೂ ಇತರ ಸ್ವತಂತ್ರ ಸಾಕ್ಷಿಗಳಾದ ದತ್ತಾತ್ರೇಯ ಗುಡಗಂಟಿ, ಆನಂದ ಈರಪ್ಪ ಉದ್ದಣ್ಣವರ್&zwnj;, ವಿನಾಯಕ ಬಿಂಜಿಯವರ್&zwnj;, ಮೋಹನ್&zwnj; ಈಚರಪ್ಪ ಮಲ್ಮುತ್ತಲ್, ವಿವೇಕಾನಂದ ದಳವಾಯಿ, ನಟರಾಜ್&zwnj; ಸರದೇಸಾಯಿ ಮತ್ತು ವಿಜಯ್&zwnj; ಕುಲಕರ್ಣಿ ವಿರುದ್ಧ ಸುಳ್ಳು ಸಾಕ್ಷ್ಯದ ಪ್ರಕರಣವನ್ನು ದಾಖಲಿಸಲು ಸಿಟಿ ಸಿವಿಲ್ ನ್ಯಾಯಾಲಯದ ರಿಜಿಸ್ಟ್ರಾರ್&zwnj;ಗೆ ನ್ಯಾಯಾಲಯ ನಿರ್ದೇಶಿಸಿದೆ.&lt;/p&gt;&lt;p&gt;&lt;strong&gt;ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಕುಲಕರ್ಣಿ&lt;/strong&gt;&lt;/p&gt;&lt;p&gt;ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್&zwnj; ಅವರು ತೆರೆದ ನ್ಯಾಯಾಲಯದಲ್ಲಿ ಶಿಕ್ಷೆ ಪ್ರಮಾಣ ಪ್ರಕಟಿಸುವಾಗ ಕಟಕಟೆ ಎದುರು 17 ಮಂದಿ ಅಪರಾಧಿಗಳು ತಲೆ ಬಗ್ಗಿಸಿ ಮೌನವಾಗಿ ನಿಂತಿದ್ದರು. ನ್ಯಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಹೇಳುತ್ತಿದ್ದಂತೆ ಅಪರಾಧಿ ವಿನಯ್&zwnj; ಕುಲಕರ್ಣಿ ಭಾವೋದ್ವೇಗಕ್ಕೆ ಒಳಗಾಗಿ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರು. ಉಳಿದ 16 ಮಂದಿ ಆರೋಪಿಗಳು ಭಾವುಕರಾಗಿ ಕಣ್ಣೀರು ಸುರಿಸಿದರು.&lt;/p&gt;&lt;p&gt;&lt;strong&gt;ಹೈಕೋರ್ಟ್&zwnj;ನಲ್ಲಿ ಮೇಲ್ಮನವಿಗೆ ಅವಕಾಶ&lt;/strong&gt;&lt;/p&gt;&lt;p&gt;ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್&zwnj;ನಲ್ಲಿ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ. ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಹಿನ್ನೆಲೆಯಲ್ಲಿ ಕಾನೂನು ಪ್ರಕಾರ ಅಪರಾಧಿಗಳು ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್&zwnj; ವಿಭಾಗೀಯ ಪೀಠ ವಿಚಾರಣೆ ನಡೆಸಲಿದೆ. ಈ ಪ್ರಕರಣದಲ್ಲಿ ಅಪರಾಧಿ ವಿನಯ್&zwnj; ಕುಲಕರ್ಣಿ ಜನಪ್ರತಿನಿಧಿ ಆಗಿರುವುದರಿಂದ ಜನಪ್ರತಿನಿಧಿಗಳ ಹೈಕೋರ್ಟ್&zwnj; ವಿಭಾಗೀಯ ಪೀಠವು ಈ ಅರ್ಜಿಯನ್ನು ವಿಚಾರಣೆ ನಡೆಸಲಿದೆ.&lt;/p&gt;&lt;p&gt;&lt;strong&gt;ಶಿಕ್ಷೆ ಅಮಾನತು, ಬೇಲ್&zwnj; ಹೈಕೋರ್ಟ್&zwnj; ವಿವೇಚನೆಗೆ:&lt;/strong&gt;&lt;/p&gt;&lt;p&gt;ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ ಈ ಶಿಕ್ಷೆಯನ್ನು ಅಮಾನತಿನಲ್ಲಿರಿಸಿ, ತಮಗೆ ಜಾಮೀನು ನೀಡುವಂತೆ ಅಪರಾಧಿಗಳು ಹೈಕೋರ್ಟ್&zwnj;ಗೆ ಮೇಲ್ಮನವಿ ಸಲ್ಲಿಸಬಹುದು. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಸಿಬಿಐಗೂ ಅವಕಾಶವಿದೆ. ಅಂತಿಮವಾಗಿ ಶಿಕ್ಷೆ ಅಮಾನತುಗೊಳಿಸುವ ಮತ್ತು ಜಾಮೀನು ಮಂಜೂರು ಮಾಡುವುದು ಹೈಕೋರ್ಟ್&zwnj; ವಿವೇಚನೆಗೆ ಒಳಪಟ್ಟಿರುತ್ತದೆ.&lt;/p&gt;&lt;p&gt;&lt;strong&gt;ಬೇರೆ ಬಟ್ಟೆ ಧರಿಸಲು ಅವಕಾಶಕ್ಕೆ ಮನವಿ&lt;/strong&gt;&lt;/p&gt;&lt;p&gt;ನ್ಯಾಯಾಧೀಶ ಸಂತೋಷ್&zwnj; ಗಜಾನನ ಭಟ್&zwnj; ಅವರು ಶಿಕ್ಷೆ ಪ್ರಮಾಣ ಪ್ರಕಟಿಸಿದ ಬಳಿಕ ಅಪರಾಧಿ ವಿನಯ್&zwnj; ಕುಲಕರ್ಣಿ ಪರ ವಕೀಲರು, ಅಪರಾಧಿಗಳು ಕಳೆದ ಮೂರು ದಿನಗಳಿಂದ ಒಂದೇ ಬಟ್ಟೆಯಲ್ಲಿದ್ದಾರೆ. ಹೀಗಾಗಿ ಬೇರೆ ಬಟ್ಟೆ ಧರಿಸಲು ಅವಕಾಶ ನೀಡುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಜೈಲು ಮ್ಯಾನುವೆಲ್&zwnj;ನಲ್ಲಿ ಇರುವ ಅವಕಾಶದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.&lt;/p&gt;&lt;p&gt;&lt;strong&gt;-ಬಾಕ್ಸ್&zwnj;-ಇತ್ತೀಚಿನ 2ನೇ ಮಹತ್ವದ ತೀರ್ಪು:&lt;/strong&gt;&lt;/p&gt;&lt;p&gt;ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್&zwnj; ಗಜಾನನ ಭಟ್&zwnj; ಅವರು ಇತ್ತೀಚೆಗೆ ನೀಡಿದ ಎರಡನೇ ಮಹತ್ವದ ತೀರ್ಪು ಇದಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್&zwnj; ರೇವಣ್ಣ ಅವರಿಗೆ ಜೀವಿತಾವಧಿ ಜೈಲು ಶಿಕ್ಷೆ ನೀಡಿದ್ದರು. ಇದೀಗ ಕೊಲೆ ಪ್ರಕರಣದಲ್ಲಿ ಹಾಲಿ ಶಾಸಕ ವಿನಯ್&zwnj; ಕುಲಕರ್ಣಿ ಸೇರಿ 16 ಮದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿದ್ದಾರೆ.&lt;/p&gt;&lt;p&gt;&lt;strong&gt;ಸನ್ನಡತೆ ಮೇಲೆ ಬಿಡುಗಡೆಗೆ ಅವಕಾಶ:&lt;/strong&gt;&lt;/p&gt;&lt;p&gt;ಘೋರ ಅಪರಾಧ ಪ್ರಕರಣಗಳಲ್ಲಿ ಜೀವಿತಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿ ಜೀವ ಇರುವವರೆಗೂ ಜೈಲು ಶಿಕ್ಷೆ ಅನುಭವಿಸಬೇಕು. ಇದರಲ್ಲಿ ಅಪರಾಧಿಗೆ ಶಿಕ್ಷೆ ಕಡಿಮೆ ಮಾಡುವ ಅಥವಾ ಕ್ಷಮಾಧಾನಕ್ಕೆ ಅವಕಾಶವೇ ಇಲ್ಲ. ಆದರೆ, ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿ 14 ವರ್ಷಗಳ ಶಿಕ್ಷೆ ಅನುಭವಿಸಿದ ಬಳಿಕ ಸನ್ನಡತೆ ಆಧಾರದ ಮೇಲೆ ಬಿಡುಗಡೆಗೆ ಅವಕಾಶವಿದೆ. ಈ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಯೋಗೇಶ್&zwnj; ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ 16 ಮಂದಿ ಅಪರಾಧಿಗಳೂ ಸನ್ನಡತೆ ವ್ಯಾಪ್ತಿಗೆ ಬರುತ್ತಾರೆ.&lt;/p&gt;&lt;p&gt;&lt;strong&gt;-ಬಾಕ್ಸ್&zwnj;-ಶಾಸಕ ಸ್ಥಾನದಿಂದ ಅನರ್ಹತೆ ನಿಶ್ಚಿತ:&lt;/strong&gt;&lt;/p&gt;&lt;p&gt;ಯಾವುದೇ ಶಾಸಕ ಎರಡು ವರ್ಷಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಗುರಿಯಾದರೆ ತಕ್ಷಣ ಆತನ ಶಾಸಕನ ಸ್ಥಾನ ರದ್ದಾಗುತ್ತದೆ. ಇದೀಗ ಕಾಂಗ್ರೆಸ್&zwnj; ಶಾಸಕ ವಿನಯ್&zwnj; ಕುಲಕರ್ಣಿ ಜೀವಾಧಿಗೆ ಶಿಕ್ಷೆಗೆ ಗುರಿಯಾಗಿರುವುದರಿಂದ ಶಾಸಕ ಸ್ಥಾನದಿಂದ ಅನರ್ಹಗೊಳ್ಳಲಿದ್ದಾರೆ. ನ್ಯಾಯಾಲಯದ ತೀರ್ಪು ಪ್ರತಿ ವಿಧಾನಸಭಾ ಸ್ಪೀಕರ್&zwnj;ಗೆ ತಲುಪಿದ ತಕ್ಷಣ ಸ್ಪೀಕರ್&zwnj; ಅವರು ಶಾಸಕ ಸ್ಥಾನ ಅನರ್ಹ ಸಂಬಂಧ ಅಧಿಸೂಚನೆ ಹೊರಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;&lt;strong&gt;ವಿನಯ್ ಕುಲಕರ್ಣಿ ಮುಂದಿನ ಆಯ್ಕೆಗಳೇನು?&amp;nbsp;&lt;/strong&gt;&lt;/p&gt;&lt;p&gt;ವಿನಯ್&zwnj; ಕುಲಕರ್ಣಿ ಹೈಕೋರ್ಟ್&zwnj;ನಲ್ಲಿ ಮೇಲ್ಮನವಿ ಸಲ್ಲಿಸಿ ಜಾಮೀನು ಕೋರಬಹುದು ಅಥವಾ ದೋಷಿ ಎಂಬ ತೀರ್ಪಿಗೆ ತಡೆಯಾಜ್ಞೆ ಕೋರಬಹುದು. ಒಂದು ವೇಳೆ ಹೈಕೋರ್ಟ್&zwnj; ತಡೆಯಾಜ್ಞೆ ನೀಡಿದರೆ ಶಾಸಕ ಸ್ಥಾನ ಉಳಿಯಲಿದೆ. ಇಲ್ಲವಾದರೆ, ಜೈಲುವಾಸದ ಜೊತೆಗೆ ಶಾಸಕ ಸ್ಥಾನ ಕಳೆದುಕೊಳ್ಳಲಿದ್ದಾರೆ. ಮುಂದೆ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲು ಕಾನೂನಿನಲ್ಲಿ ಅವಕಾಶವಿದೆ.&lt;/p&gt;&lt;p&gt;ಮುಂದೇನು?&lt;/p&gt;&lt;p&gt;1. ಶಿಕ್ಷೆ ಪ್ರಶ್ನಿಸಿ ಅಪರಾಧಿಗಳು ಹೈಕೋರ್ಟ್&zwnj;ನಲ್ಲಿ ಮೇಲ್ಮನವಿ ಸಲ್ಲಿಸಬಹುದು&lt;/p&gt;&lt;p&gt;2. ಶಿಕ್ಷೆಯನ್ನು ಅಮಾನತಿನಲ್ಲಿರಿಸಿ, ಜಾಮೀನು ನೀಡುವಂತೆ ಕೋರಬಹುದು&lt;/p&gt;&lt;p&gt;3. ಪ್ರಕರಣದ ತನಿಖಾಧಿಕಾರಿಗಳೂ ಇದಕ್ಕೆ ಆಕ್ಷೇಪಣೆಯನ್ನು ಸಲ್ಲಿಸಬಹುದು&lt;/p&gt;&lt;p&gt;4. ಶಿಕ್ಷೆ ಅಮಾನತು, ಜಾಮೀನು ಮಂಜೂರು ಹೈಕೋರ್ಟ್&zwnj; ವಿವೇಚನೆಗೆ&lt;/p&gt;&lt;p&gt;5. ಶಿಕ್ಷೆಗೆ ಹೈಕೋರ್ಟ್&zwnj; ತಡೆಯಾಜ್ಞೆ ನೀಡಿದರೆ ವಿನಯ್&zwnj; ಶಾಸಕತ್ವ ಸುರಕ್ಷಿತ--ಶಾಸಕ ಸ್ಥಾನದಿಂದ&lt;/p&gt;&lt;p&gt;ಶೀಘ್ರವೇ ಅನರ್ಹ&lt;/p&gt;&lt;p&gt;ಯಾವುದೇ ಶಾಸಕ ಎರಡು ವರ್ಷಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಗುರಿಯಾದರೆ ತಕ್ಷಣ ಆತನ ಶಾಸಕನ ಸ್ಥಾನ ರದ್ದಾಗುತ್ತದೆ. ನ್ಯಾಯಾಲಯದ ತೀರ್ಪು ಪ್ರತಿ ವಿಧಾನಸಭಾ ಸ್ಪೀಕರ್&zwnj;ಗೆ ತಲುಪಿದ ತಕ್ಷಣ ಸ್ಪೀಕರ್&zwnj; ಅವರು ವಿನಯ್&zwnj; ಕುಲಕರ್ಣಿಯನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಅಧಿಸೂಚನೆ ಹೊರಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/entertainment-news/bengaluru-court-sentences-cong-mla-vinay-kulkarni-to-life-imprisonment-in-murder/articleshow-iwbncho"/>
        </item>
        <item>
            <title><![CDATA[4ನೇ ಮಹಡಿಯಿಂದ ಅನಾರೋಗ್ಯ ಪೀಡಿತ ತಾಯಿಯ ಎಸೆದು ಕೊಂದ!]]></title>
            <link>https://www.kannadaprabha.in/crime-news/a-sick-mother-was-thrown-from-the-4th-floor-and-killed/articleshow-l4z3e2d</link>
            <guid isPermaLink="true">https://www.kannadaprabha.in/crime-news/a-sick-mother-was-thrown-from-the-4th-floor-and-killed/articleshow-l4z3e2d</guid>
            <pubDate>Thu, 16 Apr 2026 04:00:00 +0530</pubDate>
            <description><![CDATA[ಪಾರ್ಶ್ವ ವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದ ತಾಯಿ ಆರೈಕೆ ಮಾಡಲಾಗದೆ ನೊಂದ ಮಗ, ಮನೆಯ ನಾಲ್ಕನೇ ಮಹಡಿಯಿಂದ ಹೆತ್ತಮ್ಮನನ್ನು ಕೆಳಗೆ ಎಸೆದು ಕೊಂದಿರುವ ಹೃದಯವಿದ್ರಾವಕ ಘಟನೆ ನಗರದಲ್ಲಿ ಬುಧವಾರ ನಡೆದಿದೆ.]]></description>
            <media:content url="https://static-assets.asianetnews.com/kp/json/15042026/pictures/012415BNG_366_15042026_1.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು : &amp;nbsp;&lt;/strong&gt;ಪಾರ್ಶ್ವ ವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದ ತಾಯಿ ಆರೈಕೆ ಮಾಡಲಾಗದೆ ನೊಂದ ಮಗ, ಮನೆಯ ನಾಲ್ಕನೇ ಮಹಡಿಯಿಂದ ಹೆತ್ತಮ್ಮನನ್ನು ಕೆಳಗೆ ಎಸೆದು ಕೊಂದಿರುವ ಹೃದಯವಿದ್ರಾವಕ ಘಟನೆ ನಗರದಲ್ಲಿ ಬುಧವಾರ ನಡೆದಿದೆ.&lt;/p&gt;&lt;p&gt;ರಾಜರಾಜೇಶ್ವರಿ ನಗರದ ಬಿಇಎಂಎಲ್&zwnj; 3ನೇ ಹಂತದ ನಿವಾಸಿ ಸಾವಿತ್ರಮ್ಮ (75) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತಳ ಪುತ್ರ ಸಿ. ವೆಂಕಟೇಶ್ ಅಲಿಯಾಸ್ ದಶರಥ್&zwnj;ನನ್ನು ಆರ್&zwnj;.ಆರ್&zwnj;. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;p&gt;ತನ್ನ ಮನೆಯ ಮಹಡಿಯಿಂದ ತಾಯಿಯನ್ನು ಮಧ್ಯಾಹ್ನ ಬಿಸಾಡಿ ವೆಂಕಟೇಶ್ ಕೊಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;3 ವರ್ಷಗಳಿಂದ ನರಳಿದ ತಾಯಿ&lt;/strong&gt;&lt;/h2&gt;&lt;p&gt;ಖಾಸಗಿ ಕಂಪನಿಯಲ್ಲಿ ಮಾರುಕಟ್ಟೆ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ ವೆಂಕಟೇಶ್&zwnj;, ಬಿಇಎಲ್ ಲೇಔಟ್&zwnj;ನ 3ನೇ ಹಂತದಲ್ಲಿ ತನ್ನ ಕುಟುಂಬದ ಜತೆ ನೆಲೆಸಿದ್ದ. ಖಾಸಗಿ ಕ್ಲಿನಿಕ್&zwnj;ನಲ್ಲಿ ಆತನ ಪತ್ನಿ ಸಹಾಯಕಿಯಾಗಿದ್ದಾರೆ. ಮೂರು ವರ್ಷಗಳಿಂದ ಪಾರ್ಶ್ವವಾಯುಪೀಡಿತರಾಗಿ ಆತನ ತಾಯಿ ಸಾವಿತ್ರಮ್ಮ ಹಾಸಿಗೆ ಹಿಡಿದಿದ್ದರು. ಹಲವು ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ಕೊಡಿಸಿದರೂ ತಾಯಿ ಚೇತರಿಕೆ ಕಾಣದೆ ಹೋದಾಗ ವೆಂಕಟೇಶ್ ಬೇಸರಗೊಂಡಿದ್ದ. ಪ್ರತಿದಿನ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ನರಳಾಟ ನೋಡಿ ಆತನ ಮನವು ಸಹಿಸಲಾರದಷ್ಟು ತಳಮಳಿಸಿದೆ.&lt;/p&gt;&lt;p&gt;ಇದೇ ಯಾತನೆಯಲ್ಲೇ ಮಾತೃ ಹತ್ಯೆಗೆ ವೆಂಕಟೇಶ್ ನಿರ್ಧರಿಸಿದ್ದಾನೆ. ಅಂತೆಯೇ ಮಧ್ಯಾಹ್ನ ಮನೆಯಿಂದ ಹೊರಗೆ ಎತ್ತಿಕೊಂಡು ಹೋಗಿ ಮಹಡಿಯಿಂದ ತಾಯಿಯನ್ನು ಆತ ಎಸೆದಿದ್ದಾನೆ. ಕೆಳಗೆ ಬಿದ್ದ ಸಾವಿತ್ರಮ್ಮ ಗಂಭೀರ ಸ್ವರೂಪವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಾವಿತ್ರಮ್ಮ ಚೀರಾಟ ಕೇಳಿ ಸ್ಥಳೀಯರು ಜಮಾಯಿಸಿದ್ದಾರೆ. ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿ (ನಮ್ಮ-112)ಗೆ ಕರೆ ಮಾಡಿ ಘಟನೆ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಈ ಮಾಹಿತಿ ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ. ಬಳಿಕ ಮನೆ ಮಾಲಿಕರ ದೂರು ಆಧರಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮೃತರ ಪುತ್ರ ವೆಂಕಟೇಶ್&zwnj;ನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.&lt;/p&gt;&lt;h3&gt;&lt;strong&gt;ಅಮ್ಮನ ಕಷ್ಟ ನೋಡಲಾರದೆ ಹತ್ಯೆ&lt;/strong&gt;&lt;/h3&gt;&lt;p&gt;ಮೂರು ವರ್ಷಗಳಿಂದ ತಾಯಿ ಹಾಸಿಗೆ ಹಿಡಿದಿದ್ದಳು. ಬಹಳಷ್ಟು ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದೆ. ಆದರೆ ಆಕೆ ಸುಧಾರಿಸಲಿಲ್ಲ. ಪ್ರತಿ ದಿನ ಅಮ್ಮ ಕಷ್ಟಪಡುವುದು ನೋಡಲು ಸಂಕಟವಾಗುತ್ತಿತ್ತು. ಆ ಯಾತನಮಯ ಬದುಕಿಗೆ ತಾಯಿಗೆ ಮುಕ್ತಿ ಕೊಡಲು ನಿರ್ಧರಿಸಿದೆ ಎಂದು ವಿಚಾರಣೆ ವೇಳೆ ಆರೋಪಿ ವೆಂಕಟೇಶ್ ಹೇಳಿಕೆ ಕೊಟ್ಟಿರುವುದಾಗಿ ತಿಳಿದು ಬಂದಿದೆ.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/a-sick-mother-was-thrown-from-the-4th-floor-and-killed/articleshow-l4z3e2d"/>
        </item>
        <item>
            <title><![CDATA[ಉಪಕಾರಾಗೃಹಕ್ಕೆ ಗಾಂಜಾ, ಮೊಬೈಲ್ ಎಸೆದು ದುಷ್ಕರ್ಮಿಗಳು ಪರಾರಿ!]]></title>
            <link>https://www.kannadaprabha.in/crime-news/criminals-escaped-by-throwing-ganja-mobile-phone-to-sub-jail/articleshow-lg2rqhv</link>
            <guid isPermaLink="true">https://www.kannadaprabha.in/crime-news/criminals-escaped-by-throwing-ganja-mobile-phone-to-sub-jail/articleshow-lg2rqhv</guid>
            <pubDate>Mon, 20 Apr 2026 01:45:00 +0530</pubDate>
            <description><![CDATA[ಮಂಡ್ಯ ಉಪ ಕಾರಾಗೃಹದಲ್ಲಿ ಗಾಂಜಾ ಹಾಗೂ ಮೊಬೈಲ್ ಸಿಕ್ಕಿದ್ದು, ಅಪರಿಚಿತ ದುಷ್ಕರ್ಮಿಗಳು ಜೈಲಿನ ಹೊರ ಭಾಗದಿಂದ ಒಳಾವರಣಕ್ಕೆ ಎಸೆದು ಹೋಗಿದ್ದಾರೆ ಎಂದು ಜೈಲು ಅಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ.]]></description>
            <media:content url="https://static-assets.asianetnews.com/kp/json/19042026/pictures/CRIME_155.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ: &amp;nbsp;&lt;/strong&gt;ಮಂಡ್ಯ ಉಪ ಕಾರಾಗೃಹದಲ್ಲಿ ಗಾಂಜಾ ಹಾಗೂ ಮೊಬೈಲ್ ಸಿಕ್ಕಿದ್ದು, ಅಪರಿಚಿತ ದುಷ್ಕರ್ಮಿಗಳು ಜೈಲಿನ ಹೊರ ಭಾಗದಿಂದ ಒಳಾವರಣಕ್ಕೆ ಎಸೆದು ಹೋಗಿದ್ದಾರೆ ಎಂದು ಜೈಲು ಅಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ.&lt;/p&gt;&lt;h2&gt;ಕಾರಾಗೃಹದ ಮುಖ್ಯಗೋಡೆ ಒಳ ಭಾಗಕ್ಕೆ ವಸ್ತುವನ್ನು ಎಸೆದು ಹೋಗಿದ್ದಾರೆ.&lt;/h2&gt;&lt;p&gt;ಚಾಮುಂಡೇಶ್ವರಿನಗರ ಬಡಾವಣೆಯ ಉಪ ಕಾರಾಗೃಹದಲ್ಲಿ ಶನಿವಾರ ಬೆಳಗ್ಗೆ 8.40 ರಿಂದ 9ರ ಸಮಯದಲ್ಲಿ ಅಪರಿಚಿತ ದುಷ್ಕರ್ಮಿಗಳಿಬ್ಬರು ಬೈಕ್&zwnj;ನಲ್ಲಿ ಬಂದು ಕಾರಾಗೃಹದ ಮುಖ್ಯಗೋಡೆ ಒಳ ಭಾಗಕ್ಕೆ ವಸ್ತುವನ್ನು ಎಸೆದು ಹೋಗಿದ್ದಾರೆ.&lt;/p&gt;&lt;p&gt;ಜೈಲಿನ ಒಳಾವರಣಕ್ಕೆ ವಸ್ತು ಬಂದು ಬಿದ್ದಿದ್ದನ್ನು ಸಿಸಿ ಟಿಸಿ ದೃಶ್ಯಾವಳಿಗಳಲ್ಲಿ ಪರಿಶೀಲನೆ ನಡೆಸಿದಾಗ ಆ ವಸ್ತುವನ್ನು ಸೆಲ್ ನಂ. 4ರಲ್ಲಿರುವ ನಾಗ ಅಲಿಯಾಸ್ ಹಂದಿ ನಾಗ ಎಂಬಾತ ಬಂದು ತೆಗೆದುಕೊಂಡು ಹೋಗುತ್ತಿರುವುದು ಸಿಸಿ ಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ.&lt;/p&gt;&lt;p&gt;ತಕ್ಷಣ ಕಾರ್&zwj;ಯಪ್ರ ವೃತ್ತರಾದ ಜೈಲಿನ ಅಧಿಕಾರಿ ಮತ್ತು ಸಿಬ್ಬಂದಿ ನಾಗ ಅಲಿಯಾಸ್ ಹಂದಿ ನಾಗ ಇರುವ ಸೆಲ್ ನಂ.4ಕ್ಕೆ ಹೋಗಿ ತಪಾಸಣೆ ಮಾಡಿದಾಗ ಕಪ್ಪು ಟೇಪಿನಿಂದ ಸುತ್ತಿದ ಬಾಲ್ ದೊರೆತಿದೆ. ಅದನ್ನು ತೆರೆದು ಪರಿಶೀಲಿಸಲಾಗಿ ಅದರಲ್ಲಿ ಕಪ್ಪು ಬಣ್ಣದ ಒಂದು ಮೊಬೈಲ್ ಮತ್ತು ಗಾಂಜಾ ರೀತಿಯ ವಸ್ತು ಸುಮಾರು 10 ಗ್ರಾಂ ಸಿಕ್ಕಿದೆ ಎಂದು ಜೈಲು ಅಧಿಕಾರಿ ಪರಮಾನಂದ ಹರವಾಳ ಅವರು ಪಶ್ಚಿಮ ಠಾಣೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದು, ಜೈಲಿನ ಒಳ ಭಾಗಕ್ಕೆ ಬಾಲ್ ರೀತಿಯಲ್ಲಿ ಸುತ್ತಿದ ಗಾಂಜಾ ಮತ್ತು ಮೊಬೈಲ್&zwnj;ನ್ನು ಯಾರು ತಲುಪಿಸಿದ್ದರು ಎಂಬದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಜೂಜು: 12 ಮಂದಿ ಬಂಧನ&lt;/strong&gt;&lt;/h3&gt;&lt;p&gt;ಮಳವಳ್ಳಿ: ತಾಲೂಕಿನ ನೆಲಮಾಕನಹಳ್ಳಿ ಹೊರವಲಯದಲ್ಲಿ ಜೂಜಾಟದಲ್ಲಿ ತೊಡಗಿದ ಗುಂಪಿನ ಮೇಲೆ ದಾಳಿ ನಡೆಸಿದ ಗ್ರಾಮಾಂತರ ಪೊಲೀಸರು 12 ಮಂದಿಯನ್ನು ಬಂಧಿಸಿದ್ದಾರೆ. ಗ್ರಾಮದ ಪಿಕಳಿ ಮಲ್ಲೇಶ್&zwnj; ಅವರ ಜಮೀನಿನ ಸಮೀಪ ರಸ್ತೆಯ ಬದಿ ಶುಕ್ರವಾರ ರಾತ್ರಿ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ಗ್ರಾಮಾಂತರ ಪಿಎಸ್ಐ ಶಿವಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ 12 ಮಂದಿಯನ್ನು ಬಂಧಿಸಿ 32140 ರು. ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/criminals-escaped-by-throwing-ganja-mobile-phone-to-sub-jail/articleshow-lg2rqhv"/>
        </item>
        <item>
            <title><![CDATA[4 ಮಹಿಳೆಯರು ಸೇರಿ 6 ಮಂದಿ ಬಂಧಿಸಿ ₹8 ಕೋಟಿ ಡ್ರಗ್ಸ್ ಜಪ್ತಿ]]></title>
            <link>https://www.kannadaprabha.in/crime-news/6-people-including-4-women-arrested-drugs-worth-8-crore-seized/articleshow-lpum8aq</link>
            <guid isPermaLink="true">https://www.kannadaprabha.in/crime-news/6-people-including-4-women-arrested-drugs-worth-8-crore-seized/articleshow-lpum8aq</guid>
            <pubDate>Sun, 19 Apr 2026 02:00:00 +0530</pubDate>
            <description><![CDATA[ಪ್ರವಾಸಿಗರ ಸೋಗಿನಲ್ಲಿ ವಿದೇಶದಿಂದ ರಾಜ್ಯಕ್ಕೆ ಡ್ರಗ್ಸ್ ಕಳ್ಳ ಸಾಗಾಣಿಕೆಗೆ ಯತ್ನಿಸಿದ ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರು ಮಹಿಳೆಯರು ಸೇರಿ ಆರು ಮಂದಿಯನ್ನು ಬಂಧಿಸಿ ಎಂಟು ಕೋಟಿ ರು. ಮೌಲ್ಯದ ಡ್ರಗ್ಸ್&zwnj; ಅನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.]]></description>
            <media:content url="https://static-gi.asianetnews.com/images/01kc6sk4zt9wck0h60gv0keg0k/kannada-prabha-1765459727354.jpeg" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ಬೆಂಗಳೂರು &lt;/p&gt;ಪ್ರವಾಸಿಗರ ಸೋಗಿನಲ್ಲಿ ವಿದೇಶದಿಂದ ರಾಜ್ಯಕ್ಕೆ ಡ್ರಗ್ಸ್ ಕಳ್ಳ ಸಾಗಾಣಿಕೆಗೆ ಯತ್ನಿಸಿದ ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರು ಮಹಿಳೆಯರು ಸೇರಿ ಆರು ಮಂದಿಯನ್ನು ಬಂಧಿಸಿ ಎಂಟು ಕೋಟಿ ರು. ಮೌಲ್ಯದ ಡ್ರಗ್ಸ್&zwnj; ಅನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. &lt;p&gt;ಮೂರು ದಿನಗಳ ಅವಧಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಕಾರ್ಯಾಚರಣೆ ನಡೆಸಿ ಎಂಟು ಕೋಟಿ ರು ಮೌಲ್ಯದ 23.36 ಕೆಜಿ ಹೈಡ್ರೋ ಗಾಂಜಾವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಆರು ಮಂದಿ ಬ್ಯಾಂಕಾಕ್&zwnj; ನಿಂದ ಬಂದಿಳಿದ ಪ್ರಯಾಣಿಕರೇ ಆಗಿದ್ದಾರೆ. &lt;/p&gt; ಗುರುವಾರ ಬ್ಯಾಂಕಾಕ್&zwnj;ನಿಂದ ಬಂದ ಮಹಿಳೆಯರನ್ನು ಶಂಕೆ ಮೇರೆಗೆ ತಪಾಸಣೆಗೊಳಪಡಿಸಿದಾಗ ಡ್ರಗ್ಸ್&zwnj; ಪತ್ತೆಯಾಗಿದೆ. ತಮ್ಮ ಬ್ಯಾಗ್&zwnj;ಗಳಲ್ಲಿ ಡ್ರಗ್ಸ್ ಅಡಗಿಸಿ ರಾಜ್ಯಕ್ಕೆ ಮಹಿಳೆಯರು ಡ್ರಗ್ಸ್ ಸಾಗಿಸುತ್ತಿದ್ದರು. ಕೂಡಲೇ ಅವರನ್ನು ಬಂಧಿಸಿ 4.10 ಕೋಟಿ ರು. ಮೌಲ್ಯದ 11.72 ಕೆಜಿ ಹೈಡ್ರೋ ಗಾಂಜಾ ಜಪ್ತಿ ಮಾಡಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. &lt;p&gt;ಅದೇ ರೀತಿ ಕೆಐಎಗೆ ಶನಿವಾರ ಬಂದಿಳಿದ ಪ್ರಯಾಣಿಕನ ಬಳಿ 1.99 ಕೋಟಿ ರು. ಮೌಲ್ಯದ 5.70 ಕೆಜಿ ಹೈಡ್ರೋ ಗಾಂಜಾ ಹಾಗೂ ಶುಕ್ರವಾರ ಆಗಮಿಸಿದ ಪ್ರಯಾಣಿಕನ ಬಳಿ 2.02 ಕೋಟಿ ರು. ಮೌಲ್ಯದ 5.94 ಕೆಜಿ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/6-people-including-4-women-arrested-drugs-worth-8-crore-seized/articleshow-lpum8aq"/>
        </item>
        <item>
            <title><![CDATA[15-19 ಸಾವಿರಕ್ಕೆ ಐಪಿಎಲ್ ಟಿಕೆಟ್ಮಾರುತ್ತಿದ್ದ ಕ್ಯಾಂಟೀನ್‌ ನೌಕರ ಸೆರೆ]]></title>
            <link>https://www.kannadaprabha.in/karnataka-news/canteen-employee-arrested-for-selling-ipl-tickets-for-rs-15-19-000/articleshow-nzxtm84</link>
            <guid isPermaLink="true">https://www.kannadaprabha.in/karnataka-news/canteen-employee-arrested-for-selling-ipl-tickets-for-rs-15-19-000/articleshow-nzxtm84</guid>
            <pubDate>Fri, 17 Apr 2026 08:59:54 +0530</pubDate>
            <description><![CDATA[ಕಾಳ ಸಂತೆಯಲ್ಲಿ ಐಪಿಎಲ್ ಮಾರಾಟ ದಂಧೆ ವಿರುದ್ಧ ಸಿಸಿಬಿ ಕಾರ್ಯಾಚರಣೆ ಮುಂದುವರಿದಿದ್ದು, ಈಗ ದುಬಾರಿ ಬೆಲೆಗೆ ಐಪಿಎಲ್ ಟಿಕೆಟ್ ಮಾರಾಟಕ್ಕಿಳಿದಿದ್ದ ಚಿನ್ನಸ್ವಾಮಿ ಕ್ರೀಡಾಂಗಣದ ಕ್ಯಾಂಟೀನ್&zwnj; ನೌಕರನೊಬ್ಬ ಬಂಧಿತನಾಗಿದ್ದಾನೆ.]]></description>
            <media:content url="https://static-gi.asianetnews.com/images/01kn39qetxhv5305vxzry168yr/---------------------22--1775006104413.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು : &amp;nbsp;&lt;/strong&gt;ಕಾಳ ಸಂತೆಯಲ್ಲಿ ಐಪಿಎಲ್ ಮಾರಾಟ ದಂಧೆ ವಿರುದ್ಧ ಸಿಸಿಬಿ ಕಾರ್ಯಾಚರಣೆ ಮುಂದುವರಿದಿದ್ದು, ಈಗ ದುಬಾರಿ ಬೆಲೆಗೆ ಐಪಿಎಲ್ ಟಿಕೆಟ್ ಮಾರಾಟಕ್ಕಿಳಿದಿದ್ದ ಚಿನ್ನಸ್ವಾಮಿ ಕ್ರೀಡಾಂಗಣದ ಕ್ಯಾಂಟೀನ್&zwnj; ನೌಕರನೊಬ್ಬ ಬಂಧಿತನಾಗಿದ್ದಾನೆ.&lt;/p&gt;&lt;p&gt;ಚಿನ್ನಸ್ವಾಮಿ ಕ್ರೀಡಾಂಗಣದ ಶ್ರೀ ಲಕ್ಷ್ಮೀ ಕ್ಯಾಂಟರ್ಸ್&zwnj;ನ ಕೆಲಸಗಾರ ಪಿ. ಚಂದ್ರಶೇಖರ್&zwnj; ಬಂಧಿತನಾಗಿದ್ದು, ಆರೋಪಿ ಬಳಿ 100ಕ್ಕೂ ಹೆಚ್ಚು ಐಪಿಎಲ್&zwnj; ಟಿಕೆಟ್&zwnj;ಗಳು ಜಪ್ತಿಯಾಗಿವೆ.&lt;/p&gt;&lt;p&gt;ಈ ಪ್ರಕರಣದಲ್ಲಿ ತಪ್ಪಿಸಿಕೊಂಡಿರುವ ಕರ್ನಾಟಕ ರಾಜ್ಯ ಕ್ರಿಕೆಟ್&zwnj; ಅಸೋಸಿಯೇಷನ್&zwnj; (ಕೆಎಸ್&zwnj;ಸಿಎ) ಸದಸ್ಯ ಎನ್ನಲಾದ ಗಣೇಶ್&zwnj; ಹರಿಕೇಶ್&zwnj; ಪತ್ತೆಗೆ ಸಿಸಿಬಿ ತನಿಖೆ ಮುಂದುವರಿಸಿದೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ (ಆರ್&zwnj;ಸಿಬಿ) ಹಾಗೂ ಲಕ್ನೋ ಸೂಪರ್&zwnj; ಜೈಂಟ್ಸ್&zwnj; (ಎಲ್&zwnj;ಎಸ್&zwnj;ಜಿ) ಮಧ್ಯೆ ಬುಧವಾರ ನಡೆದ ಪಂದ್ಯದ ವೇಳೆ ಟಿಕೆಟ್&zwnj; ಮಾರುತ್ತಿದ್ದಾಗ ಆರೋಪಿಯನ್ನು ಸಿಸಿಬಿ ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಪ್ರತಿ ಟಿಕೆಟ್ ₹15-19 ಸಾವಿರ!&lt;/strong&gt;&lt;/h2&gt;&lt;p&gt;ಐಪಿಎಲ್ ಪಂದ್ಯಾವಳಿ ವೇಳೆ ಕಾಳಸಂತೆಯಲ್ಲಿ ಟಿಕೆಟ್ ಮಾರಾಟದ ಮೇಲೆ ಸಿಸಿಬಿ ನಿಗಾ ವಹಿಸಿದೆ. ಅಂತೆಯೇ ಬುಧವಾರ ಸಹ ಕ್ರೀಡಾಂಗಣದ ಬಳಿ ಸಿಸಿಬಿ ಕಾರ್ಯಾಚರಣೆಗಿಳಿದಿತ್ತು. ಆಗ ಸಂಪಂಗಿರಾಮನಗರದ ಬಳಿ ಟಿಕೆಟ್&zwnj; ಮಾರುತ್ತಿದ್ದ ಚಂದ್ರಶೇಖರ್&zwnj; ಸಿಸಿಬಿಗೆ ಸಿಕ್ಕಿಬಿದ್ದಿದ್ದಾನೆ. ವಿಚಾರಣೆ ವೇಳೆ ಗಣೇಶ್ ಹೆಸರನ್ನು ಆತ ಬಾಯ್ಬಿಟ್ಟಿದ್ದಾನೆ.&lt;/p&gt;&lt;p&gt;ನನಗೆ ಕೆಎಸ್&zwnj;ಸಿಎ ಸದಸ್ಯ ಎನ್ನಲಾದ ಗಣೇಶ್&zwnj; ಹರಿಕೇಶ್&zwnj; ಅವರು ಮಾ.28ರಂದು ನಡೆದ ಆರ್&zwnj;ಸಿಬಿ ಹಾಗೂ ಎಸ್&zwnj;ಆರ್&zwnj;ಎಚ್&zwnj; ನಡುವಣ ಪಂದ್ಯದ 81 ಹಾಗೂ ಎಲ್&zwnj;ಎಸ್&zwnj;ಜಿ ಮತ್ತು ಆರ್&zwnj;ಸಿಬಿ ಪಂದ್ಯದ 100 ಟಿಕೆಟ್&zwnj;ಗಳನ್ನು ನೀಡಿದ್ದರು. ಈ ಟಿಕೆಟ್&zwnj;ಗಳನ್ನು 15 ರಿಂದ 19 ಸಾವಿರ ರು.ಗೆ ಮಾರುವಂತೆ ಗಣೇಶ್ ಸೂಚಿಸಿದ್ದರು ಎಂದು ಆರೋಪಿ ಹೇಳಿರುವುದಾಗಿ ತಿಳಿದು ಬಂದಿದೆ.&lt;/p&gt;&lt;h3&gt;&lt;strong&gt;ಕಂಪನಿಗಳ ವಿರುದ್ಧ ಎಫ್&zwnj;ಐಆರ್&amp;nbsp;&lt;/strong&gt;&lt;/h3&gt;&lt;p&gt;ಐಪಿಎಲ್ ಟಿಕೆಟ್ ಅಕ್ರಮವಾಗಿ ಮಾರಾಟಕ್ಕೆ ಸಹಕರಿಸಿದ ಆರೋಪದ ಮೇರೆಗೆ ಖಾಸಗಿ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕ ವಿರುದ್ಧ ಸಿಸಿಬಿ ಠಾಣೆಯಲ್ಲಿ ಎಫ್&zwnj;ಐಆರ್ ದಾಖಲಾಗಿದೆ.&lt;/p&gt;&lt;p&gt;ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ ಪ್ರತಿ ಪಂದ್ಯಕ್ಕೆ 50 ರಿಂದ 100 ಟಿಕೆಟ್&zwnj;ಗಳನ್ನು ಸ್ವಸ್ತಿಕ್&zwnj; ಹೆವಿ ಎಂಜಿನಿಯರಿಂಗ್&zwnj; ಕಂಪನಿ ಹಾಗೂ ಧರಣಿ ಕಂಪ್ಯೂಟರ್ಸ್&zwnj; ಕಂಪನಿಗಳು ಖರೀದಿಸಿದ್ದವು. ಆದರೆ ಆನಂತರ ಈ ಟಿಕೆಟ್&zwnj;ಗಳನ್ನು ಕಾಳ ಸಂತೆಯಲ್ಲಿ ದುಬಾರಿ ಬೆಲೆಗೆ ಆ ಕಂಪನಿಗಳ ಯತ್ನಿಸಿವೆ ಎಂದು ಆರೋಪ ಕೇಳಿ ಬಂದಿದೆ. ಈ ಸಂಬಂಧ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.&lt;/p&gt;&lt;p&gt;ಪ್ರಸತ್ತ ಐಪಿಎಲ್ ಋತುವಿನಲ್ಲಿ ಕಾಳ ಸಂತೆಯಲ್ಲಿ ಐಪಿಎಲ್ ಟಿಕೆಟ್ ಮಾರಾಟ ಸಂಬಂಧ 10 ಪ್ರಕರಣಗಳು ದಾಖಲಾಗಿವೆ. ಅಕ್ರಮವಾಗಿ ಟಿಕೆಟ್ ಮಾರಾಟಕ್ಕೆ ಯತ್ನಿಸಿದರೆ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇವೆ.&lt;/p&gt;&lt;p&gt;&lt;strong&gt;-ಶ್ರೀಹರಿಬಾಬು, ಡಿಸಿಪಿ, ಸಿಸಿಬಿ&lt;/strong&gt;&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/karnataka-news/canteen-employee-arrested-for-selling-ipl-tickets-for-rs-15-19-000/articleshow-nzxtm84"/>
        </item>
        <item>
            <title><![CDATA[ಆಧಾರ್ ಕಾರ್ಡ್‍ನಲ್ಲಿ ಜನ್ಮದಿನ ಬದಲಿಸಿ ಮಾಡಲು ಹೊರಟ್ಟಿದ್ದ ಬಾಲ್ಯವಿವಾಹ ತಡೆದ ಅಧಿಕಾರಿಗಳು]]></title>
            <link>https://www.kannadaprabha.in/crime-news/officials-stop-child-marriage-by-changing-birth-date-on-aadhaar-card/articleshow-oex2woy</link>
            <guid isPermaLink="true">https://www.kannadaprabha.in/crime-news/officials-stop-child-marriage-by-changing-birth-date-on-aadhaar-card/articleshow-oex2woy</guid>
            <pubDate>Fri, 17 Apr 2026 04:46:27 +0530</pubDate>
            <description><![CDATA[ಆಧಾರ್ ಕಾರ್ಡ್&zwj;ನಲ್ಲಿ ಜನ್ಮದಿನಾಂಕ ತಿದ್ದುಪಡಿ ಮಾಡಿ ಬಾಲ್ಯ ವಿವಾಹ ಮಾಡಲು ಹೊರಟಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಮಹಿಳಾ ರಕ್ಷಣಾ ಘಟಕದ ಅಧಿಕಾರಿಗಳು ದಾಳಿ ನಡೆಸಿ ಮದುವೆ ನಿಲ್ಲಿಸಿ ಬಾಲಕಿಯನ್ನು ರಕ್ಷಿಸಿರುವ ಘಟನೆ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ.]]></description>
            <media:content url="https://static-assets.asianetnews.com/kp/json/16042026/pictures/16_DABASPETE_PH_14_571.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ದಾಬಸ್&zwj;ಪೇಟೆ : &amp;nbsp;&lt;/strong&gt;ಆಧಾರ್ ಕಾರ್ಡ್&zwj;ನಲ್ಲಿ ಜನ್ಮದಿನಾಂಕ ತಿದ್ದುಪಡಿ ಮಾಡಿ ಬಾಲ್ಯ ವಿವಾಹ ಮಾಡಲು ಹೊರಟಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಮಹಿಳಾ ರಕ್ಷಣಾ ಘಟಕದ ಅಧಿಕಾರಿಗಳು ದಾಳಿ ನಡೆಸಿ ಮದುವೆ ನಿಲ್ಲಿಸಿ ಬಾಲಕಿಯನ್ನು ರಕ್ಷಿಸಿರುವ ಘಟನೆ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ.&lt;/p&gt;&lt;p&gt;ತಾಲೂಕಿನ ಸಮುದಾಯ ಭವನವೊಂದರಲ್ಲಿ ಮಂಗಳವಾರ ತಡರಾತ್ರಿ ಬಾಲ್ಯ ವಿವಾಹ ನಡೆಸುತ್ತಿರುವ ಬಗ್ಗೆ ಮಕ್ಕಳ ಸಹಾಯವಾಣಿಗೆ ಬಂದ ಕರೆ ಹಿನ್ನೆಲೆ ಕಾರ್ಯಾಚರಣೆ ನಡೆಸಿದ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಬಾಲ್ಯವಿವಾಹ ನಡೆಸಲು ಯತ್ನಿಸುತ್ತಿರುವುದು ಖಚಿತವಾಗಿದೆ. ಈ ಹಿನ್ನೆಲೆ ಬಾಲಕಿಯನ್ನು ರಕ್ಷಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.&lt;/p&gt;&lt;h2&gt;18 ವರ್ಷಕ್ಕೆ 6 ತಿಂಗಳು ಬಾಕಿ:&lt;/h2&gt;&lt;p&gt;ಬೆಂಗಳೂರು ಉತ್ತರ ತಾಲೂಕು ಮೂಲದ ಬಾಲಕಿಯ ಜೊತೆ ನೆಲಮಂಗಲದ ಯುವಕನ ಮದುವೆ ನಿಶ್ಚಯವಾಗಿತ್ತು. ಯುವಕನಿಗೆ ಬಾಲಕಿ ದೂರದ ಸಂಬಂಧಿ ಎನ್ನಲಾಗಿದ್ದು, ಬಾಲಕಿಗೆ 18 ವರ್ಷ ತುಂಬಲು ಇನ್ನೂ 6 ತಿಂಗಳು ಬಾಕಿ ಇತ್ತು. ಆದರೂ ವಿವಾಹ ಮಾಡಲು ಪಾಲಕರು ನಿರ್ಧರಿಸಿ, ಬುಧವಾರ ಮಾಂಗಲ್ಯ ಧಾರಣೆಗೆ ಮುಹೂರ್ತ ನಿಗದಿಪಡಿಸಲಾಗಿತ್ತು.&lt;/p&gt;&lt;h3&gt;ಬಾಲ್ಯವಿವಾಹದ ಅರಿವಿದೆ:&lt;/h3&gt;&lt;p&gt;ತಾಲೂಕಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ, ಮಕ್ಕಳ ರಕ್ಷಣಾ ಘಟಕದ ವತಿಯಿಂದ ಬಾಲ್ಯ ವಿವಾಹ ನಿಷೇಧ ಕುರಿತು ಸಾಕಷ್ಟು ಅರಿವು ಮೂಡಿಸಲಾಗಿದೆ. ಈ ಬಗ್ಗೆ ಪಾಲಕರಿಗೂ ಅರಿವಿದೆ. ಆದ್ದರಿಂದಲೇ 18 ವರ್ಷ ತುಂಬದ ಬಾಲಕಿಯ ಜನ್ಮ ದಿನಾಂಕವನ್ನು ತಿದ್ದುಪಡಿ ಮಾಡಿ ವಿವಾಹಕ್ಕೆ ಸಿದ್ಧತೆ ನಡೆಸಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.&lt;/p&gt;&lt;p&gt;ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರು:&lt;/p&gt;&lt;p&gt;ಮಕ್ಕಳ ಸಹಾಯವಾಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಕ್ಕಳ ರಕ್ಷಣಾಘಟಕದ ಸಿಬ್ಬಂದಿ ಶ್ರೀನಿವಾಸ್, ಮುನಿರಾಜು, ರಾಜೇಶ್ವರಿ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ರಕ್ಷಣೆ ಮಾಡಿದ ಬಾಲಕಿಯನ್ನು ಆಕೆ ತಾಯಿಯೊಂದಿಗೆ ಸಖಿ ಕೇಂದ್ರಕ್ಕೆ ದಾಖಲಿಸಲಾಗಿತ್ತು. ನಂತರ ಬುಧವಾರ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;ಆಧಾರ್ ನಲ್ಲಿ ತಿದ್ದುಪಡಿ;&lt;/p&gt;&lt;p&gt;ಆಧಾರ್ ಕಾರ್ಡನ್ನು ಯಾರು ಬೇಕಾದರೂ ಹೇಗೆ ಬೇಕಾದರೂ ತಿದ್ದಿಕೊಳ್ಳಬಹುದು ಎಂಬುದು ಈ ಪ್ರಕರಣದಿಂದ ಖಚಿತವಾಗಿದೆ. ಬಾಲಕಿಯ ನಿಜವಾದ ಜನ್ಮದಿನಾಂಕ ಜನ್ಮ ಪ್ರಮಾಣ ಪತ್ರದಂತೆ 2008ರ ಅಕ್ಟೋಬರ್ 21 ಆಗಿದೆ. ಆದರೆ ಆಧಾರ್&zwj;ನಲ್ಲಿ 2007ರ ಅಕ್ಟೋಬರ್ 21 ಎಂದು ತಿದ್ದುಪಡಿ ಮಾಡಿರುವುದು ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ತಪಾಸಣೆ ನಡೆಸಿದಾಗ ತಿಳಿದು ಬಂದಿದೆ.&lt;/p&gt;&lt;p&gt;ಮದುವೆ ನಡೆಯುತ್ತಿರುವ ಬಗ್ಗೆ ಮಕ್ಕಳ ಸಹಾಯವಾಣಿಗೆ ದೂರು ಬಂದಿತ್ತು. ಇಲಾಖೆ ಸಿಬ್ಬಂದಿ ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಬಾಲಕಿಯ ಆಧಾರ್ ಕಾಡ್&zwj;ನಲ್ಲಿ ಜನ್ಮದಿನಾಂಕ ಅ. 21, 2007 ಎಂದು ನಮೂದಾಗಿದೆ. ಹೆಚ್ಚುವರಿ ಪರಿಶೀಲನೆಗಾಗಿ ಮನೆಯಿಂದ ಜನ್ಮ ದಿನಾಂಕ ಪ್ರಮಾಣ ಪತ್ರ ತರಿಸಿ ಪರಿಶೀಲಿಸಿದಾಗ ಅದರಲ್ಲಿ ಅ.21, 2008 ಎಂದು ನಮೂದಾಗಿರುವುದು ಪತ್ತೆಯಾಗಿದೆ. ಆದ್ದರಿಂದ ಬಾಲಕಿ ವಯಸ್ಸು 18 ವರ್ಷಕ್ಕಿಂತ ಕಡಿಮೆ ಇರುವ ಸಲುವಾಗಿ ಆಕೆಯನ್ನು ರಕ್ಷಣೆ ಮಾಡಲಾಗಿದೆ.&lt;/p&gt;&lt;p&gt;&lt;strong&gt;ಅನಿತಾಲಕ್ಷ್ಮೀ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ&lt;/strong&gt;&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/officials-stop-child-marriage-by-changing-birth-date-on-aadhaar-card/articleshow-oex2woy"/>
        </item>
        <item>
            <title><![CDATA[ಮಂತ್ರಾಲಯ ಸಮೀಪ ಭೀಕರ ಅಪಘಾತ ; 8 ಬಲಿ]]></title>
            <link>https://www.kannadaprabha.in/karnataka-news/fatal-accident-near-mantralaya-8-dead/articleshow-qul3q9s</link>
            <guid isPermaLink="true">https://www.kannadaprabha.in/karnataka-news/fatal-accident-near-mantralaya-8-dead/articleshow-qul3q9s</guid>
            <pubDate>Fri, 17 Apr 2026 02:00:00 +0530</pubDate>
            <description><![CDATA[&lt;p&gt;ಭೀಕರ ರಸ್ತೆ ಅಪಘಾತದಲ್ಲಿ ಮಂತ್ರಾಲಯದ ರಾಯರ ದರ್ಶನಕ್ಕೆ ಹೊರಟಿದ್ದ ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಎಂಟು ಭಕ್ತರು ಸಾವನ್ನಪ್ಪಿದ್ದಾರೆ. 11 ಮಂದಿ ಗಾಯಗೊಂಡಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ತಾಲೂಕಿನ ಚಿಲಕಲಡೋನ ಗ್ರಾಮದ ಬಳಿ ಗುರುವಾರ ಮುಂಜಾನೆ ಅಪಘಾತ ಸಂಭವಿಸಿದೆ.&lt;/p&gt;]]></description>
            <media:content url="https://static-assets.asianetnews.com/kp/json/16042026/pictures/ACCIDENT_30.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ರಾಯಚೂರು : &amp;nbsp;&lt;/strong&gt;ಭೀಕರ ರಸ್ತೆ ಅಪಘಾತದಲ್ಲಿ ಮಂತ್ರಾಲಯದ ರಾಯರ ದರ್ಶನಕ್ಕೆ ಹೊರಟಿದ್ದ ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಎಂಟು ಭಕ್ತರು ಸಾವನ್ನಪ್ಪಿದ್ದಾರೆ. 11 ಮಂದಿ ಗಾಯಗೊಂಡಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ತಾಲೂಕಿನ ಚಿಲಕಲಡೋನ ಗ್ರಾಮದ ಬಳಿ ಗುರುವಾರ ಮುಂಜಾನೆ ಅಪಘಾತ ಸಂಭವಿಸಿದೆ.&lt;/p&gt;&lt;h2&gt;ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆ 21 ಮಂದಿ ಭಕ್ತರು&lt;/h2&gt;&lt;p&gt;ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯಿಂದ ಒಟ್ಟು 21 ಮಂದಿ ಭಕ್ತರು ಬೊಲೆರೊ ವಾಹನದಲ್ಲಿ ರಾಯರ ದರ್ಶನಕ್ಕಾಗಿ ಮಂತ್ರಾಲಯಕ್ಕೆ ಪ್ರಯಾಣಿಸುತ್ತಿದ್ದರು. ಗುರುವಾರ ಬೆಳಗಿನ ಜಾವ ಚಿಲಕಲಡೋನ ಗ್ರಾಮದ ಬಳಿ ಇವರು ಪ್ರಯಾಣಿಸುತ್ತಿದ್ದ ಬೊಲೆರೊ ವಾಹನಕ್ಕೆ ಎದುರುಗಡೆಯಿಂದ ಬಂದ ಹಾರೋಬೂದಿ (ಫ್ಲೈ ಆ್ಯಷ್) ತುಂಬಿದ್ದ ಟ್ಯಾಂಕರ್&zwnj; ಡಿಕ್ಕಿ ಹೊಡೆಯಿತು. ದುರ್ಘಟನೆಯಲ್ಲಿ 8 ಜನರು ಸ್ಥಳದಲ್ಲಿಯೇ ಮೃತಪಟ್ಟರು. ಈ ಪೈಕಿ ಐವರು ಮಹಿಳೆಯರು, ಒಬ್ಬಳು ಮೂರು ವರ್ಷದ ಹೆಣ್ಣು ಮಗು, ಇಬ್ಬರು ಪುರುಷರು. ಗಾಯಗೊಂಡ 11 ಜನರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;p&gt;ಮೃತರನ್ನು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹುಡೇವು ಗ್ರಾಮದ ಮೀನಾಕ್ಷಮ್ಮ (54), ಪುಟ್ಟಮ್ಮ (60) ಮತ್ತು ಅಜಂಪುರ್&zwnj; ನಿವಾಸಿ ತಾಯಮ್ಮ (60), ಹಾಸನ ಜಿಲ್ಲೆ ಬೇಲೂರು ತಾಲೂಕಿನ ಶೆಟ್ಟಿಗೆರೆ ಗ್ರಾಮದ ಲೋಲಾಕ್ಷಿ (38), ಸುನೀಲ್ (27), ಕುಮಾರ (51) ಹಾಗೂ ನೆಹರು ನಗರದ ಎಸ್&zwnj;.ಕೆ.ವೀಣಾ (25), ಆಕೆಯ ಮಗಳು ನಿಶಿತಾ (3) ಎಂದು ಗುರುತಿಸಲಾಗಿದೆ.&lt;/p&gt;&lt;h3&gt;ಕೆಲಕಾಲ ಸಂಚಾರ ವ್ಯತ್ಯಯ&lt;/h3&gt;&lt;p&gt;ಘಟನೆಯಿಂದಾಗಿ ಮಂತ್ರಾಲಯಕ್ಕೆ ಹೋಗುವ ಮಾರ್ಗದಲ್ಲಿ ಕೆಲಕಾಲ ಸಂಚಾರ ವ್ಯತ್ಯಯವಾಗಿತ್ತು. ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/karnataka-news/fatal-accident-near-mantralaya-8-dead/articleshow-qul3q9s"/>
        </item>
        <item>
            <title><![CDATA[ವಿನಯ್‌ ಕುಲಕರ್ಣಿಗೆ ಎಷ್ಟು ಶಿಕ್ಷೆ? ಇಂದು ಪ್ರಕಟ]]></title>
            <link>https://www.kannadaprabha.in/karnataka-news/how-much-punishment-will-vinay-kulkarni-get-will-be-announced-today/articleshow-v18ocmu</link>
            <guid isPermaLink="true">https://www.kannadaprabha.in/karnataka-news/how-much-punishment-will-vinay-kulkarni-get-will-be-announced-today/articleshow-v18ocmu</guid>
            <pubDate>Fri, 17 Apr 2026 09:07:35 +0530</pubDate>
            <description><![CDATA[ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್&zwnj; ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್&zwnj; ಶಾಸಕ ವಿನಯ್&zwnj; ಕುಲಕರ್ಣಿ ಸೇರಿ 17 ಅಪರಾಧಿಗಳ ಶಿಕ್ಷೆ ಪ್ರಮಾಣವನ್ನು ಶುಕ್ರವಾರ ಪ್ರಕಟಿಸುವುದಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ​​ ಹೇಳಿದೆ.]]></description>
            <media:content url="https://static-gi.asianetnews.com/images/01fdm7mta96q1q2mwzasxgvv43/whatsapp-image-2021-08-21-at-4-58-36-pm-jpeg.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು : &amp;nbsp;&lt;/strong&gt;ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್&zwnj; ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಹಾಲಿ ಕಾಂಗ್ರೆಸ್&zwnj; ಶಾಸಕ ವಿನಯ್&zwnj; ಕುಲಕರ್ಣಿ ಸೇರಿ 17 ಅಪರಾಧಿಗಳ ಶಿಕ್ಷೆ ಪ್ರಮಾಣವನ್ನು ಶುಕ್ರವಾರ ಪ್ರಕಟಿಸುವುದಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ​​ ಹೇಳಿದೆ.&lt;/p&gt;&lt;p&gt;ಶಿಕ್ಷೆಯ ಪ್ರಮಾಣದ ಬಗ್ಗೆ ಗುರುವಾರ ನ್ಯಾಯಾಲಯದಲ್ಲಿ ಸುದೀರ್ಘ ವಾದ-ಪ್ರತಿವಾದ ನಡೆಯಿತು. ಈ ವೇಳೆ ನ್ಯಾಯಾಧೀಶರ ಮುಂದೆ ಹಾಜರಾಗಿದ್ದ ಪ್ರತಿಯೊಬ್ಬ ಅಪರಾಧಿಯೂ ತಮ್ಮ ಕೊನೆಯ ಹೇಳಿಕೆ ದಾಖಲಿಸಿದರು. ಈ ವೇಳೆ ಕೆಲವರು ತಮ್ಮ ವೈಯಕ್ತಿಕ ಸಮಸ್ಯೆಗಳು, ಆರೋಗ್ಯದ ಸ್ಥಿತಿ ಹಾಗೂ ಕುಟುಂಬದ ಜವಾಬ್ದಾರಿಯನ್ನು ವಿವರಿಸುತ್ತಾ ಶಿಕ್ಷೆ ಕಡಿಮೆ ಮಾಡುವಂತೆ ನ್ಯಾಯಾಧೀಶರ ಬಳಿ ಮನವಿ ಮಾಡಿ ಕಣ್ಣೀರಿಟ್ಟರು.&lt;/p&gt;&lt;p&gt;ಯೋಗೇಶ್&zwnj; ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ, ಒಬ್ಬ ಪೊಲೀಸ್ ಅಧಿಕಾರಿ ಸೇರಿ 17 ಮಂದಿ ಅಪರಾಧಿಗಳಿಗೆ ಜೀವಿತಾವಧಿ ಶಿಕ್ಷೆ ಜತೆಗೆ ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಸಿಬಿಐ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು.&lt;/p&gt;&lt;p&gt;ನ್ಯಾಯಾಧೀಶರಾದ ಸಂತೋಷ್&zwnj; ಗಜಾನನ ಭಟ್&zwnj; ಅವರು ಬುಧವಾರ ವಿನಯ್ ಕುಲಕರ್ಣಿ ಸೇರಿ 17 ಮಂದಿ ಆರೋಪಿಗಳನ್ನು ಅಪರಾಧಿಗಳು ಎಂದು ಘೋಷಿಸಿ ತೀರ್ಪು ಪ್ರಕಟಿಸಿದ್ದರು. ಶಿಕ್ಷೆಯ ಪ್ರಮಾಣ ಕುರಿತು ಗುರುವಾರ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಶುಕ್ರವಾರ ತೀರ್ಪು ನೀಡುವುದಾಗಿ ಹೇಳಿದರು.&lt;/p&gt;&lt;p&gt;ಇದಕ್ಕೂ ಮೊದಲು ಸಿಬಿಐ ಪರ ವಾದ ಮಂಡಿಸಿದ ಸಿಬಿಐ ವಿಶೇಷ ಅಭಿಯೋಜಕರಾದ ಶಿವಾನಂದ ಪೆರ್ಲ ಮತ್ತು ಹೇಮಾ, ಯೋಗೇಶ್&zwnj;ಗೌಡ ಕೊಲೆ ಪ್ರಕರಣದಲ್ಲಿ ಭಾರೀ ಪ್ರಮಾಣದಲ್ಲಿ ಅಪರಾಧಿಕ ಒಳಸಂಚು ನಡೆದಿದೆ. ಉದ್ದೇಶಪೂರ್ವಕವಾಗಿಯೇ ಹತ್ಯೆ ಮಾಡಿದ್ದಾರೆ. ಹೀಗಾಗಿ ಅಪರಾಧಿಗಳಿಗೆ ಯಾವುದೇ ವಿನಾಯಿತಿ ನೀಡದೆ, ಕಠಿಣಾತಿ ಕಠಿಣ ಶಿಕ್ಷೆಯಾದ ಜೀವಿತಾವಧಿ (ಕ್ಷಮಾದಾನವಿಲ್ಲದ ಜೀವನ ಪರ್ಯಂತ) ಶಿಕ್ಷೆ ವಿಧಿಸಬೇಕು. ಜತೆಗೆ ಹತ್ಯೆಗೀಡಾದ ಯೋಗೇಶ್&zwnj;ಗೌಡನ ಮೂವರು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಕೋರಿದರು.&lt;/p&gt;&lt;h2&gt;&lt;strong&gt;ವಿರಳಾತಿ ವಿರಳ ಪ್ರಕರಣ- ಸಿಬಿಐ:&lt;/strong&gt;&lt;/h2&gt;&lt;p&gt;ಯೋಗೇಶ್&zwnj; ಗೌಡನ ಕಣ್ಣಿಗೆ ಕಾರದಪುಡಿ ಎರಚಿ, ತಪ್ಪಿಸಿಕೊಳ್ಳಲು ಅವಕಾಶ ನೀಡದೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದೊಂದು ವಿರಳಾತಿ ವಿರಳ ಪ್ರಕರಣವಾಗಿದ್ದು, ಸಿಬಿಐ ತನಿಖೆ ಆರಂಭಿಸಿದ ಬಳಿಕ ಪಿತೂರಿ ಬಯಲಾಗಿದೆ. ಪೊಲೀಸ್&zwnj; ಅಧಿಕಾರಿಗಳು ಮತ್ತು ಇಡೀ ವ್ಯವಸ್ಥೆಯನ್ನು ದುರ್ಬಳಕೆ ಮಾಡಲಾಗಿದೆ. ನ್ಯಾಯಾಂಗಕ್ಕೆ ವಂಚಿಸಿರುವುದನ್ನು ಗಂಭೀರವಾಗಿ ಪರಿಗಣಿಸಿ ಶಿಕ್ಷೆ ವಿಧಿಸಬೇಕು. ಈ ಮೂಲಕ ಸಮಾಜದಲ್ಲಿ ಕಾನೂನು ಎಲ್ಲರಿಗೂ ಸಮಾನವಾಗಿದೆ ಎಂದು ಹೇಳುವ ಸಂದೇಶ ನೀಡಬೇಕು ಎಂದು ಸಿಬಿಐ ಪರ ವಕೀಲರು ಕೋರಿದರು.&lt;/p&gt;&lt;h3&gt;ಅಪರಾಧಿಗಳ ಅಳಲು ಹೇಗಿತ್ತು? 15ನೇ ಅಪರಾಧಿ ವಿನಯ್ ಕುಲಕರ್ಣಿ&lt;/h3&gt;&lt;p&gt;ಕಳೆದ 27 ವರ್ಷಗಳಿಂದ ಸಕ್ರಿಯ ರಾಜಕೀಯದಲ್ಲಿದ್ದೇನೆ, ಯಾರಿಗೂ ತೊಂದರೆ ನೀಡಿಲ್ಲ. ಮದುವೆ ವಯಸ್ಸಿಗೆ ಬಂದಿರುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ರಾಜಕೀಯ ದ್ವೇಷಕ್ಕಾಗಿ ಕೇಸ್ ಹಾಕಲಾಗಿದೆ. ನಾನೊಬ್ಬ ಕೃಷಿಕ, ಸುಮಾರು ಮೂರೂವರೆ ಸಾವಿರ ಹಸು ಮತ್ತು ಎಮ್ಮೆಗಳನ್ನು ಸಾಕುತ್ತಿದ್ದೇನೆ, ನನ್ನ ಮೇಲೆ ಅವಲಂಬಿತರಾದವರಿದ್ದಾರೆ.&lt;/p&gt;&lt;p&gt;&lt;strong&gt;4ನೇ ಅಪರಾಧಿ ಸಂದೀಪ್&zwnj; ಸವದತ್ತಿ:&lt;/strong&gt;&lt;/p&gt;&lt;p&gt;ಚಾಲಕನಾಗಿದ್ದು, ವಯಸ್ಸಾದ ತಂದೆ-ತಾಯಿ ಇದ್ದಾರೆ. ಮನೆಯಲ್ಲಿ ನಾನು ಒಬ್ಬನೇ ದುಡಿಯುವುದು, ಶಿಕ್ಷೆ ಕಠಿಣವಾದರೆ ಅವರ ಜೀವನ ಬೀದಿಗೆ ಬೀಳುತ್ತದೆ.&lt;/p&gt;&lt;p&gt;5ನೇ ಅಪರಾಧಿ ವಿನಾಯಕ್&zwnj; ಕಾಟಗಿ:&lt;/p&gt;&lt;p&gt;ರಿಯಲ್ ಎಸ್ಟೇಟ್ ಉದ್ಯೋಗಿಯಾಗಿದ್ದು, ನನ್ನ ಪೋಷಕರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ.&lt;/p&gt;&lt;p&gt;3ನೇ ಅಪರಾಧಿ ಕೀರ್ತಿ ಕುಮಾರ್&zwnj;:&lt;/p&gt;&lt;p&gt;ರಿಯಲ್&zwnj; ಎಸ್ಟೇಟ್&zwnj; ಏಜೆಂಟ್&zwnj; ಆಗಿದ್ದೆ. ನಾನು ತಪ್ಪು ಮಾಡಿಲ್ಲ.&lt;/p&gt;&lt;p&gt;ಅಪರಾಧಿ 4- ಸಂದೀಪ್&zwnj; ಸವದತ್ತಿ&lt;/p&gt;&lt;p&gt;ನನಗೆ ಚಿಕ್ಕ ಮಕ್ಕಳಿದ್ದಾರೆ. ನಾನು ತಪ್ಪು ಮಾಡಿಲ್ಲ.&lt;/p&gt;&lt;p&gt;ಅಪರಾಧಿ-9 ಅಶ್ವತ್ಥ್, ಅಪರಾಧಿ-10 ಸುನೀಲ್, ಅಪರಾಧಿ-11 ನಾಜೀರ್&zwnj; ಅಹಮ್ಮದ್:&lt;/p&gt;&lt;p&gt;ವಯಸ್ಸಾದ ತಂದೆ-ತಾಯಿ ಇದ್ದಾರೆ. ಸಣ್ಣ ಮಕ್ಕಳ ಭವಿಷ್ಯಕ್ಕಾಗಿ ಕರುಣೆ ತೋರಿ.&lt;/p&gt;&lt;p&gt;ಅಪರಾಧಿ- 6 ಮಹಾಬಲೇಶ್ವರ್:&lt;/p&gt;&lt;p&gt;ನನಗೆ ಒಂದು ವರ್ಷದ ಹಾಗೂ ಮೂರು ವರ್ಷದ ಮಕ್ಕಳಿದ್ದಾರೆ. ನಾನು ದುಡಿದರೆ ಮಾತ್ರ ನಮ್ಮ ಕುಟುಂಬ ನಡೆಯುತ್ತದೆ.&lt;/p&gt;&lt;p&gt;ಅಪರಾಧಿ-12 ಶಾನವಾಜ್&zwnj; ಮತ್ತು ಅಪರಾಧಿ-18 ವಿಕಾಸ್&zwnj; ಕಲಬುರ್ಗಿ:&lt;/p&gt;&lt;p&gt;ವೃತ್ತಿಯಲ್ಲಿ ಗುತ್ತಿಗೆದಾರರು ಮತ್ತು ಕೃಷಿಕರಾಗಿದ್ದು, ಚಿಕ್ಕ ಮಕ್ಕಳಿದ್ದಾರೆ. ಹೆಣ್ಣು ಮಕ್ಕಳ ಮದುವೆ ಮಾಡುವ ಜವಾಬ್ದಾರಿ ಇದೆ.&lt;/p&gt;&lt;p&gt;13ನೇ ಅಪರಾಧಿ ನೂತನ್&zwnj;: ನನಗೆ ಹೃದಯ ಶಸ್ತ್ರಚಿಕಿತ್ಸೆಯಾಗಿ ಸ್ಟಂಟ್ ಅಳವಡಿಸಲಾಗಿದೆ ಶಿಕ್ಷೆ ಕಡಿಮೆ ಮಾಡಿ.&lt;/p&gt;&lt;p&gt;ಅಪರಾಧಿ-16 ಚಂದ್ರಶೇಖರ್&zwnj; ಹಿಂಡಿ:&lt;/p&gt;&lt;p&gt;ನಾನು ಮತ್ತು ನನ್ನ ಪತ್ನಿ ಇಬ್ಬರೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಇತ್ತೀಚೆಗೆ ನಮ್ಮ ಮೊಮ್ಮಗನನ್ನು ಕಳೆದುಕೊಂಡಿದ್ದೇವೆ.&lt;/p&gt;&lt;p&gt;ಅಪರಾಧಿ-7 ಸಂತೋಷ್&zwnj; ಸವದತ್ತಿ:&lt;/p&gt;&lt;p&gt;ತೀವ್ರ ಕಣ್ಣಿನ ಸಮಸ್ಯೆಯಿಂದ ದೃಷ್ಟಿ ದೋಷ ಎದುರಿಸುತ್ತಿದ್ದೇನೆ.&lt;/p&gt;&lt;p&gt;ಅಪರಾಧಿ-19 ಚನ್ನಕೇಶವ (ಪೊಲೀಸ್ ಅಧಿಕಾರಿ):&lt;/p&gt;&lt;p&gt;ನಾನು ಇದುವರೆಗೂ ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಿಲ್ಲ ಮತ್ತು ಸಮಾಜದಲ್ಲಿ ಉತ್ತಮ ಹೆಸರು ಹೊಂದಿದ್ದೇನೆ. ಈ ಹಿಂದೆ ಪ್ರಶಸ್ತಿ ಕೂಡ ಪಡೆದುಕೊಂಡಿದ್ದೇನೆ.&lt;/p&gt;&lt;p&gt;ನೊಂದವರಿಗೆ ಪರಿಹಾರಕ್ಕೆ ಮನವಿ:&lt;/p&gt;&lt;p&gt;ಸಿಬಿಐ ವಿಶೇಷ ಅಭಿಯೋಜಕರಾದ ಹೇಮಾ, ನೊಂದವರಿಗೆ ಪರಿಹಾರ ನೀಡುವಂತೆ ಕೋರಿದರು. ಇದಕ್ಕೆ ನ್ಯಾಯಾಧೀಶರು ಯಾರಿಗೆ ಪರಿಹಾರ ಎಂದು ಪ್ರಶ್ನಿಸಿದರು. ಯೋಗೇಶ್&zwnj;ಗೌಡ ಅವರ ಮಕ್ಕಳಿಗೆ ಪರಿಹಾರ ನೀಡಬೇಕು ಎಂದರು. ನ್ಯಾಯಾಧೀಶರು, ಪತ್ನಿ ಮಲ್ಲಮ್ಮ ಈ ಪ್ರಕರಣದಲ್ಲಿ ನೊಂದ ವ್ಯಕ್ತಿ ಅಲ್ಲ ಎಂದರು. ಪತ್ನಿ ಮಲ್ಲಮ್ಮಗೆ ಅಲ್ಲ. ಬದಲಿಗೆ ಮಕ್ಕಳಿಗೆ ಪರಿಹಾರ ನೀಡುವಂತೆ ಮನವಿ ಮಾಡಿದರು. ಈ ಪ್ರಕರಣದಲ್ಲಿ ಪರಿಹಾರಕ್ಕೆ ಆದೇಶಿಸಬಾರದು ಎಂದು ವಿನಯ್&zwnj; ಕುಲಕರ್ಣಿ ಪರ ವಕೀಲರಾದ ಶ್ಯಾಮ್&zwnj; ಸುಂದರ್&zwnj; ಇದೇ ವೇಳೆ ಮನವಿ ಮಾಡಿದರು.&amp;nbsp;&lt;/p&gt;&lt;p&gt;ಯಾರಿಗೂ ತೊಂದರೆ ಕೊಟ್ಟಿಲ್ಲ: ಜಡ್ಜ್&zwnj; ಮುಂದೆ ವಿನಯ್&zwnj; ಕಣ್ಣೀರು:&lt;/p&gt;&lt;p&gt;ನಾನು ಕಳೆದ 27 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ, ಯಾರಿಗೂ ತೊಂದರೆ ಕೊಟ್ಟಿಲ್ಲ. ಮದುವೆ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕೃಷಿಕನಾದ ನಾನು ಸಾವಿರಾರು ಹಸುಗಳನ್ನು ಸಾಕುತ್ತಿದ್ದೇನೆ. ರಾಜಕೀಯ ಕಾರಣಕ್ಕೆ ನನ್ನ ಮೇಲೆ ಕೇಸ್ ಹಾಕಲಾಗಿದೆ. ಹೀಗಾಗಿ ಕಡಿಮೆ ಶಿಕ್ಷೆ ವಿಧಿಸಿ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ್ ಕುಲಕರ್ಣಿ ನ್ಯಾಯಾಧೀಶರ ಮುಂದೆ ಅಲವತ್ತುಕೊಂಡಿದ್ದಾರೆ.&amp;nbsp;&lt;/p&gt;&lt;p&gt;ಗುರುವಾರ ನ್ಯಾಯಾಲಯದಲ್ಲಿ ಶಿಕ್ಷೆಯ ಪ್ರಮಾಣದ ಬಗ್ಗೆ ಸುದೀರ್ಘ ವಾದ-ಪ್ರತಿವಾದ ನಡೆಯಿತು. ಈ ವೇಳೆ ನ್ಯಾಯಾಧೀಶರ ಮುಂದೆ ಹಾಜರಾಗಿದ್ದ ವಿನಯ್&zwnj; ಕುಲಕರ್ಣಿ ತಮ್ಮ ಕೊನೆಯ ಹೇಳಿಕೆ ದಾಖಲಿಸಿದರು.ವಿನಯ್&zwnj; ಕುಲಕರ್ಣಿ ಪರ ವಕೀಲರಾದ ಎಂ.ಎಸ್&zwnj;.ಶ್ಯಾಮ್&zwnj;ಸುಂದರ್&zwnj; ಅವರು, ವಿನಯ್&zwnj; ಕುಲಕರ್ಣಿ ಜನರ ವಿಶ್ವಾಸ ಗಳಿಸಿ ಜೈಲಿನಿಂದಲೇ ಸ್ಪರ್ಧಿಸಿ ಗೆದ್ದಿದ್ದಾರೆ. ಮೂರು ಬಾರಿ ಶಾಸಕ, ಒಮ್ಮೆ ಸಚಿವರು ಆಗಿದ್ದರು. ಅವರಿಗೆ ಮೂವರು ಮಕ್ಕಳಿದ್ದು, 3,500ಕ್ಕೂ ಅಧಿಕ ಆಕಳು/ಎಮ್ಮೆ ಸಾಕಿದ್ದು, ಅವುಗಳನ್ನು ನೋಡಿಕೊಳ್ಳಬೇಕಿದೆ.&amp;nbsp;&lt;/p&gt;&lt;p&gt;&amp;nbsp;ರಾಜಕೀಯ ಕಾರಣಕ್ಕಾಗಿ ಅವರನ್ನು ಕೃತ್ಯದಲ್ಲಿ ಸಿಲುಕಿಸಲಾಗಿದೆ. ಕಡಿಮೆ ಶಿಕ್ಷೆ ವಿಧಿಸಬೇಕು ಎಂದು ಕೋರಿದರು. ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ:ನ್ಯಾಯಾಲಯದ ಸೂಚನೆಯಂತೆ ಪೀಠದ ಮುಂದೆ ಹಾಜರಾದ ವಿನಯ್&zwnj; ಕುಲಕರ್ಣಿ, ನಾನು 27 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ನನ್ನ ಜೀವನದಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ. ರಾಜಕೀಯ ಪ್ರತೀಕಾರಕ್ಕಾಗಿ ಈ ಕೆಲಸ ಮಾಡಿದ್ದಾರೆ.&amp;nbsp;&lt;/p&gt;&lt;p&gt;ಮೂವರು ಮಕ್ಕಳಿದ್ದಾರೆ. ಆ ಪೈಕಿ ಇಬ್ಬರು ಹೆಣ್ಣುಮಕ್ಕಳು ಮದುವೆ ವಯಸ್ಸಿಗೆ ಬಂದಿದ್ದಾರೆ. ಮೂರು ಬಾರಿ ಶಾಸಕನಾಗಿದ್ದೇನೆ. ಎರಡು ಬಾರಿ ಸಂಸತ್&zwnj; ಚುನಾವಣೆಯಲ್ಲಿ ನಿಂತು ಸೋತಿದ್ದೇನೆ. ಒಮ್ಮೆ ಸಚಿವನಾಗಿದ್ದೇನೆ. ರಾಜಕೀಯ ಉದ್ದೇಶದಿಂದ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ. ಜತೆಗೆ 3,500 ಹಸು/ಎಮ್ಮೆ ಇವೆ. ಅವುಗಳನ್ನು ನೋಡಿಕೊಳ್ಳಬೇಕಿದೆ. ಹೀಗಾಗಿ, ವಿನಾಯಿತಿ ತೋರಬೇಕು ಎಂದು ಕೈಮುಗಿದು ಕಣ್ಣೀರಿಟ್ಟು ಮನವಿ ಮಾಡಿದರು.&amp;nbsp;&lt;/p&gt;&lt;p&gt;ಮುತ್ತಗಿ ಮನೆಗೆ ಹೆಚ್ಚುವರಿ ಭದ್ರತೆ:&lt;/p&gt;&lt;p&gt;ಜಿಪಂ ಸದಸ್ಯ ಯೋಗೇಶಗೌಡ ಹತ್ಯೆಯ ಎ-1 ಆರೋಪಿ, ಮಾಫಿ ಸಾಕ್ಷಿ ಬಸವರಾಜ ಮುತ್ತಗಿ ಅವರ ಮನೆಗೆ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ. ಶಾಸಕ ವಿನಯ್&zwnj; ಕುಲಕರ್ಣಿ ಪರಮಾಪ್ತನಾಗಿದ್ದ ಮುತ್ತಗಿ, ವಿನಯ್&zwnj; ವಿರುದ್ಧವಾಗಿ ಮಾಫಿ ಸಾಕ್ಷಿಯಾಗಿದ್ದಾರೆ. ಹೀಗಾಗಿ ಅವರು ತಮಗೆ ಜೀವ ಬೆದರಿಕೆ ಇದೆ ಎಂದು ಕೋರ್ಟ್&zwnj;ಗೆ ತಿಳಿಸಿದ್ದರು. ಅದರಂತೆ ಭದ್ರತೆ ಒದಗಿಸಲಾಗಿತ್ತು. ಬುಧವಾರ ವಿನಯ್&zwnj; ಸೇರಿದಂತೆ 17 ಜನ ಅಪರಾಧಿಗಳು ಎಂದು ಘೋಷಿಸಿದ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಬಂದೋಬಸ್ತ್&zwnj; ನಿಯೋಜನೆ ಮಾಡಲಾಗಿದೆ. ಧಾರವಾಡದ ಕೆಲಗೇರಿ ರಸ್ತೆಯಲ್ಲಿರುವ ಮುತ್ತಗಿ ನಿವಾಸಕ್ಕೆ ಸಿಆರ್&zwnj;ಫಿಎಫ್&zwnj;ನ 12 ಸಿಬ್ಬಂದಿ, ಒಂದು ಸಿಎಆರ್ ತುಕಡಿ ನಿಯೋಜಿಸಲಾಗಿದೆ.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/karnataka-news/how-much-punishment-will-vinay-kulkarni-get-will-be-announced-today/articleshow-v18ocmu"/>
        </item>
        <item>
            <title><![CDATA[ವಾಸ್ತು ದೋಷ ನಿವಾರಣೆ ಹೆಸರಲ್ಲಿ ಲೈಂಗಿಕ ಕಿರುಕುಳ: ಮಹಿಳೆ ದೂರು]]></title>
            <link>https://www.kannadaprabha.in/crime-news/woman-complains-of-sexual-harassment-in-the-name-of-removing-vastu-defects/articleshow-vmp5b61</link>
            <guid isPermaLink="true">https://www.kannadaprabha.in/crime-news/woman-complains-of-sexual-harassment-in-the-name-of-removing-vastu-defects/articleshow-vmp5b61</guid>
            <pubDate>Sun, 19 Apr 2026 02:00:00 +0530</pubDate>
            <description><![CDATA[ವಾಸ್ತು ದೋಷ ನಿವಾರಣೆ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಜ್ಯೋತಿಷಿ ವಿರುದ್ಧ ಆರೋಪಿಸಿ ಗೋವಿಂದರಾಜನಗರ ಠಾಣೆಗೆ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸುಳ್ಳು ಆರೋಪ ಹೊರಿಸಿ ಹಣ ಸುಲಿಗೆ ಮಹಿಳೆ ಹಾಗೂ ಆಕೆಯ ತಂಡ ಯತ್ನಿಸಿದೆ ಎಂದು ಆ ಜ್ಯೋತಿಷಿ ಸಹ ದೂರು ನೀಡಿದ್ದಾರೆ.]]></description>
            <media:content url="https://static-gi.asianetnews.com/images/01kc6sk4zt9wck0h60gv0keg0k/kannada-prabha-1765459727354.jpeg" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ಬೆಂಗಳೂರು &lt;/p&gt;ವಾಸ್ತು ದೋಷ ನಿವಾರಣೆ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಜ್ಯೋತಿಷಿ ವಿರುದ್ಧ ಆರೋಪಿಸಿ ಗೋವಿಂದರಾಜನಗರ ಠಾಣೆಗೆ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸುಳ್ಳು ಆರೋಪ ಹೊರಿಸಿ ಹಣ ಸುಲಿಗೆ ಮಹಿಳೆ ಹಾಗೂ ಆಕೆಯ ತಂಡ ಯತ್ನಿಸಿದೆ ಎಂದು ಆ ಜ್ಯೋತಿಷಿ ಸಹ ದೂರು ನೀಡಿದ್ದಾರೆ. &lt;p&gt;ಈ ಎರಡು ದೂರು ಆಧರಿಸಿ ಎಫ್&zwnj;ಐಆರ್ ದಾಖಲಿಸಿರುವ ಪೊಲೀಸರು, ಮಹಿಳೆ ಹಾಗೂ ಜ್ಯೋತಿಷಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. &lt;/p&gt;ಜ್ಯೋತಿಷಿ ಮೇಲೆ ಆಪಾದನೆ: ಮನೆ ವಾಸ್ತು ದೋಷ ಸಂಬಂಧ ಸಲಹೆ ಕೇಳಲು ಏ.14 ರಂದು ವಿಜಯನಗರದ ಸಮೀಪದ ''''ಶ್ರೀ ಅನಂತ್ ಮೆಡಿಕಲ್ ಸಲ್ಯೂಷನ್ಸ್&rsquo; ಗೆ ತೆರಳಿದ್ದೆ. ಆಗ ತನ್ನೊಂದಿಗೆ ಜ್ಯೋತಿಷಿ ಶಾಂತಕುಮಾರ್&zwnj; ಅನುಚಿತವಾಗಿ ವರ್ತಿಸಿದ್ದರು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಆ ಕಚೇರಿಯಲ್ಲಿದ್ದ ಅವರ ಪತ್ನಿ ಹಾಗೂ ಸಿಬ್ಬಂದಿ ದೌರ್ಜನ್ಯ ನಡೆಸಿದರು ಎಂದು ಮಹಿಳೆ ಆಪಾದಿಸಿದ್ದಾರೆ. &lt;p&gt;ವಾಸ್ತು ಸಲಹೆ ನೀಡಲು 15 ಸಾವಿರ ರು. ಹಣ ಪಡೆದಿದ್ದಾರೆ. ನನಗೆ ಲೈಂಗಿಕವಾಗಿ ಕಿರುಕುಳ ನೀಡಿದ ಜ್ಯೋತಿಷಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. &lt;/p&gt;ಹಣ ಕೊಡದಕ್ಕೆ ಸುಳ್ಳು ಆರೋಪ:ಜ್ಯೋತಿಷಿ&lt;p&gt;ವಾಸ್ತು ದೋಷ ನಿವಾರಣೆ ನೆಪದಲ್ಲಿ ನನ್ನನ್ನು ಮೂವರು ಅಪರಿಚಿತರು ಭೇಟಿಯಾದರು. ಆ ವೇಳೆ ಹಣ ನೀಡುವಂತೆ ಅವರು ಬೇಡಿಕೆ ಇಟ್ಟರು. ನಾನು ನಿರಾಕರಿಸಿದಾಗ ಮರ್ಯಾದೆ ಕಳೆಯುವುದಾಗಿ ಬೆದರಿಕೆ ಹಾಕಿದರು. ಈ ಬೆದರಿಕೆಗೆ ಬಗ್ಗದೆ ಹೋದಾಗ ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಅಲ್ಲದೆ ನನ್ನ ಮೇಲೆ ಮಹಿಳೆ ಹಾಗೂ ಆಕೆಯ ಇಬ್ಬರು ಸಹಚರರು ಹಲ್ಲೆ ನಡೆಸಿದ್ದಾರೆ ಎಂದು ಜ್ಯೋತಿಷಿ ಶಾಂತಕುಮಾರ್ ದೂರಿದ್ದಾರೆ.&lt;/p&gt;-ಹಣ ಕೊಡದಕ್ಕೆ ಮಹಿಳೆಯಿಂದಲೇ ಹಲ್ಲೆ: ಜ್ಯೋತಿಷಿ ಪ್ರತಿ ದೂರು-ಎರಡು ದೂರುಗಳನ್ನು ಆಧರಿಸಿ ಎಫ್&zwnj;ಐಆರ್ ದಾಖಲು-ಮಹಿಳೆ, ಜ್ಯೋತಿಷಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/woman-complains-of-sexual-harassment-in-the-name-of-removing-vastu-defects/articleshow-vmp5b61"/>
        </item>
        <item>
            <title><![CDATA[ದೂರು ಕೊಟ್ಟವಳ ವರಿಸಲು ವ್ಯಕ್ತಿಗೆ ಪೊಲೀಸ್‌ ಬೆದರಿಕೆ]]></title>
            <link>https://www.kannadaprabha.in/karnataka-news/police-threaten-man-to-marry-complainant/articleshow-x4eo2qa</link>
            <guid isPermaLink="true">https://www.kannadaprabha.in/karnataka-news/police-threaten-man-to-marry-complainant/articleshow-x4eo2qa</guid>
            <pubDate>Mon, 20 Apr 2026 05:45:47 +0530</pubDate>
            <description><![CDATA[ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಆರೋಪದಲ್ಲಿ ದೂರುದಾರೆಯನ್ನು ವಿವಾಹವಾಗುವಂತೆ ಆರೋಪಿಗೆ ಬೆದರಿಕೆ ಹಾಕಿದ ಪೊಲೀಸ್&zwnj; ಅಧಿಕಾರಿ ಮತ್ತು ದೂರುದಾರೆಯನ್ನೇ ಬಂಧಿಸಲು ಆದೇಶ ಹೊರಡಿಸಬೇಕಾಗುತ್ತದೆ ಎಂದು ಹೈಕೋರ್ಟ್&zwnj; ಎಚ್ಚರಿಕೆ ನೀಡಿದೆ.]]></description>
            <media:content url="https://static-assets.asianetnews.com/kp/json/19042026/pictures/HIGH_COURT_KARNATAKA_660.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವೆಂಕಟೇಶ್&zwnj; ಕಲಿಪಿ&lt;/strong&gt;&lt;/p&gt;&lt;p&gt;&lt;strong&gt;&amp;nbsp;ಬೆಂಗಳೂರು : &lt;/strong&gt;ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಆರೋಪದಲ್ಲಿ ದೂರುದಾರೆಯನ್ನು ವಿವಾಹವಾಗುವಂತೆ ಆರೋಪಿಗೆ ಬೆದರಿಕೆ ಹಾಕಿದ ಪೊಲೀಸ್&zwnj; ಅಧಿಕಾರಿ ಮತ್ತು ದೂರುದಾರೆಯನ್ನೇ ಬಂಧಿಸಲು ಆದೇಶ ಹೊರಡಿಸಬೇಕಾಗುತ್ತದೆ ಎಂದು ಹೈಕೋರ್ಟ್&zwnj; ಎಚ್ಚರಿಕೆ ನೀಡಿದೆ.&lt;/p&gt;&lt;p&gt;ಪ್ರಕರಣದ ಸಂಬಂಧ ತನ್ನ ವಿರುದ್ಧ ಮಹಿಳೆ ದಾಖಲಿಸಿರುವ ದೂರು ರದ್ದು ಕೋರಿ ಬೆಂಗಳೂರಿನ ಬೇಗೂರಿನ ವೈಭವ್&zwnj; ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಆದೇಶ ಮಾಡಿದೆ.&lt;/p&gt;&lt;p&gt;ದೂರುದಾರೆಯನ್ನು ಮದುವೆಯಾಗುವಂತೆ ಅರ್ಜಿದಾರನಿಗೆ ಬಲವಂತ ಮಾಡಿ ಕಿರುಕುಳ ನೀಡಿದ ಬಗ್ಗೆ ಮಂಗಳವಾರ ಮಧ್ಯಾಹ್ನ 2.30ಕ್ಕೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ವಿವರಣೆ ನೀಡಬೇಕು. ಈ ಕುರಿತ ಆರೋಪ ನಿಜವಾಗಿದ್ದರೆ, ಏಕೆ ನಿಮ್ಮ ವಿರುದ್ಧ ಕ್ರಿಮಿನಲ್&zwnj; ಪ್ರಕರಣ ದಾಖಲಿಸಲು ಆದೇಶಿಸಬಾರದು ಎಂಬುದಕ್ಕೆ ಕಾರಣ ತೋರಿಸಬೇಕು ಎಂದು ಸೂರ್ಯನಗರ ಪೊಲೀಸ್ ಠಾಣಾ ಅಧಿಕಾರಿ ಸಂಜೀವ್&zwnj; ಮಹಾಜನ್&zwnj;ಗೆ ನ್ಯಾಯಪೀಠ ತಾಕೀತು ಮಾಡಿದೆ.&lt;/p&gt;&lt;p&gt;ಮಹಿಳೆಯೊಬ್ಬರು ಅರ್ಜಿದಾರನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್&zwnj; 69 ಅಡಿಯಲ್ಲಿ ಕಳೆದ ಫೆ.16ರಂದು ದಾಖಲಿಸಿದ ದೂರು ಆಧರಿಸಿ ಬೊಮ್ಮನಹಳ್ಳಿ ಠಾಣಾ ಪೊಲೀಸರು ಎಫ್&zwnj;ಐಆರ್&zwnj; ದಾಖಲಿಸಿದ್ದರು. ಅದರ ರದ್ದತಿ ಕೋರಿ ಅರ್ಜಿದಾರ ಹೈಕೋರ್ಟ್&zwnj;ಗೆ ತಕರಾರು ಅರ್ಜಿ ಸಲ್ಲಿಸಿದ್ದರು.&lt;/p&gt;&lt;p&gt;ಈ ಅರ್ಜಿ ಮಾ.10ರಂದು ವಿಚಾರಣೆಗೆ ಬಂದಾಗ ಅರ್ಜಿದಾರ ಪರ ವಕೀಲ ಡಿ.ಮೋಹನ್&zwnj; ಕುಮಾರ್, ದೂರುದಾರೆಯೊಂದಿಗೆ ಅರ್ಜಿದಾರ ಸಂಬಂಧ ಹೊಂದಿದ್ದರು. ಆದರೆ, ದೂರುದಾರೆ ಮೊದಲೇ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದರು. ವಿಚ್ಛೇದನಕ್ಕೆ ಅರ್ಜಿ ಸಹ ಸಲ್ಲಿಸಿದ್ದಾರೆ. ವಿಚ್ಛೇದನ ಪಡೆಯುವ ಹಂತದಲ್ಲಿದ್ದಾಗ ಅರ್ಜಿದಾರ ದೂರುದಾರೆಯೊಂದಿಗೆ ಸಂಬಂಧ ಬೆಳೆಸಿದ್ದಾರೆ. ಹೀಗಿದ್ದರೂ ದೂರುದಾರೆ, ಅರ್ಜಿದಾರನ ವಿರುದ್ಧ ಮದುವೆಯಾಗುವುದಾಗಿ ವಂಚಿಸಿದ ಕೇಸು ದಾಖಲಿಸಿದ್ದಾರೆ ಎಂದು ನ್ಯಾಯಾಲಕ್ಕೆ ವಿವರಿಸಿದರು.&lt;/p&gt;&lt;p&gt;ಈ ವಾದ ಪರಿಗಣಿಸಿದ್ದ ಹೈಕೋರ್ಟ್&zwnj;, &lsquo;ದೂರುದಾರರು ಈಗಾಗಲೇ ವಿವಾಹಿತರಾಗಿದ್ದರೆ, ಅರ್ಜಿದಾರರು ಮದುವೆಯ ಭರವಸೆಗಾಗಿ ಅಪರಾಧ ನಡೆಸಿದ್ದಾರೆ ಎಂಬುದನ್ನು ಸಮರ್ಥಿಸಲು ಸಾಧ್ಯವಿಲ್ಲ&rsquo; ಎಂದು ಅಭಿಪ್ರಾಯ ಪಟ್ಟು ಅರ್ಜಿದಾರನ ವಿರುದ್ಧದ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿತ್ತು.&lt;/p&gt;&lt;h2&gt;&lt;strong&gt;ಪೊಲೀಸರಿಂದಲೇ ಬೆದರಿಕೆ:&lt;/strong&gt;&lt;/h2&gt;&lt;p&gt;ಅರ್ಜಿಯು ಮತ್ತೆ ಏ.18ರಂದು ವಿಚಾರಣೆಗೆ ಬಂದಾಗ ಅರ್ಜಿದಾರ ಪರ ವಕೀಲ ಡಿ.ಮೋಹನ್&zwnj; ಕುಮಾರ್&zwnj; ಹಾಜರಾಗಿ, ಅರ್ಜಿದಾರನ ವಿರುದ್ಧದ ತನಿಖೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದ ನಂತರವೂ ಸಂತ್ರಸ್ತೆ ಅರ್ಜಿದಾರನ ಮನೆಗೆ ಬಂದು ಗಲಾಟೆ ಮಾಡುತ್ತಿದ್ದಾರೆ. ಈ ಕುರಿತು ಅರ್ಜಿದಾರ ಸೂರ್ಯನಗರ ಪೊಲೀಸ್&zwnj; ಠಾಣೆಗೆ ದೂರು ನೀಡಿದ್ದರು. ಆದರೆ, ಸಂತ್ರಸ್ತೆ ವಿರುದ್ಧ ಕ್ರಮ ಜರುಗಿಸದೆ ಸೂರ್ಯನಗರ ಠಾಣೆಯ ಪೊಲೀಸ್&zwnj; ಅಧಿಕಾರಿ ಸಂಜೀವ್&zwnj; ಮಹಾಜನ್&zwnj;, ಸಂತ್ರಸ್ತೆಯನ್ನು ಮದುವೆಯಾಗು. ಕೋರ್ಟ್&zwnj;ಗೆ ದಾಖಲಿಸಿರುವ ಅರ್ಜಿ ವಾಪಸ್&zwnj; ಪಡೆದುಕೊ. ನಿನ್ನ ದೂರಿನ ಸಂಬಂಧ ಎಫ್&zwnj;ಐಆರ್&zwnj; ದಾಖಲಿಸುವುದಿಲ್ಲ. 20, 30 ಲಕ್ಷ ರು. ಕೊಡು ಎಂದು ಒತ್ತಾಯಿಸಿ ಅರ್ಜಿದಾರನಿಗೆ ಬೆದರಿಕೆ ಹಾಕಿದ್ದಾರೆ. ಸಂತ್ರಸ್ತೆಯಿಂದ ರಕ್ಷಣೆ ಕೋರಿ ಪೊಲೀಸ್&zwnj; ಇಲಾಖೆಯ ತುರ್ತು ಸಹಾಯವಾಣಿ ಸಂಖ್ಯೆ 112ಗೆ ಅರ್ಜಿದಾರರು 110 ಬಾರಿ ಕರೆ ಮಾಡಿದರೂ ರಕ್ಷಣೆ ಕೊಟ್ಟಿಲ್ಲ. ಸಂತ್ರಸ್ತೆ ಗಲಾಟೆ ಮಾಡಿ ಅರ್ಜಿದಾರ ತಾಯಿಯ ಕೈ-ಭುಜ ಕಚ್ಚಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.&lt;/p&gt;&lt;p&gt;ಇದರಿಂದ ಕೆರಳಿದ ನ್ಯಾಯಪೀಠ, &lsquo;ಅರ್ಜಿದಾರರ ಮತ್ತು ದೂರುದಾರೆ ನಡುವೆ ಒಪ್ಪಿತ ಸಂಬಂಧವಿದೆ ಎನ್ನಲಾಗಿದೆ. ಅರ್ಜಿದಾರನ ಪರ ಈ ನ್ಯಾಯಾಲಯವು ಮಧ್ಯಂತರ ಆದೇಶ ಮಾಡಿದ್ದರೂ, ದೂರುದಾರೆ ಹಾಗೂ ಪೊಲೀಸ್&zwnj; ಅಧಿಕಾರಿ ಸಂಜೀವ್&zwnj; ಮಹಾಜನ್&zwnj; ಅರ್ಜಿದಾರನಿಗೆ ನಿತ್ಯ ಕರೆ ಮಾಡಿ, ದೂರುದಾರೆಯನ್ನು ಮದುವೆಯಾಗುವಂತೆ ಬಲವಂತ ಮಾಡುತ್ತಿದ್ದಾರೆ. ಅರ್ಜಿದಾರ ಮತ್ತು ಆತನ ಕುಟುಂಬ ಸದಸ್ಯರಿಗೆ ಬೆದರಿಕೆ ಹಾಕಿ ಹಿಂಸೆ ನೀಡುತ್ತಿದ್ದಾರೆ. ಈ ಕುರಿತ ಕೆಲ ಫೋಟೋಗಳನ್ನು ಅರ್ಜಿದಾರರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ&rsquo; ಎಂದು ಬೇಸರ ವ್ಯಕ್ತಪಡಿಸಿತು.&lt;/p&gt;&lt;h3&gt;&lt;strong&gt;ನಾಳೆ ಹಾಜರಾಗಲು ಸೂಚನೆ&lt;/strong&gt;&lt;/h3&gt;&lt;p&gt;ಪೊಲೀಸ್&zwnj; ಅಧಿಕಾರಿಯು ಮಂಗಳವಾರ ಮಧ್ಯಾಹ್ನ 2.30ಕ್ಕೆ ಕೋರ್ಟ್&zwnj;ಗೆ ಹಾಜರಾಗಿ ವಿವರಣೆ ನೀಡಬೇಕು. ಒಂದೊಮ್ಮೆ ಅರ್ಜಿದಾರರಿಗೆ ಮತ್ತೆ ಯಾವುದೇ ರೀತಿ ಕಿರುಕುಳ ನೀಡುವ ಕೃತ್ಯದಲ್ಲಿ ಭಾಗಿಯಾದರೆ, ದೂರುದಾರೆ ಮತ್ತು ಪೊಲೀಸ್&zwnj; ಅಧಿಕಾರಿಯನ್ನು ಬಂಧಿಸಲು ಆದೇಶಿಸಬೇಕಾಗುತ್ತದೆ ಎಂದು ಖಡಕ್&zwnj; ಎಚ್ಚರಿಕೆ ನೀಡಿ ಮಂಗಳವಾರಕ್ಕೆ ವಿಚಾರಣೆ ಮುಂದೂಡಿದೆ.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/karnataka-news/police-threaten-man-to-marry-complainant/articleshow-x4eo2qa"/>
        </item>
        <item>
            <title><![CDATA[ಜಪ್ತಿ ಮಾಡಲಾದ 38 ಕೋಟಿಬೆಲೆಯ 128 ಕೆಜಿ ಡ್ರಗ್ಸ್ ನಾಶ]]></title>
            <link>https://www.kannadaprabha.in/karnataka-news/128-kg-of-seized-drugs-worth-rs-38-crores-destroyed/articleshow-zm5awnx</link>
            <guid isPermaLink="true">https://www.kannadaprabha.in/karnataka-news/128-kg-of-seized-drugs-worth-rs-38-crores-destroyed/articleshow-zm5awnx</guid>
            <pubDate>Sat, 18 Apr 2026 03:45:00 +0530</pubDate>
            <description><![CDATA[ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ 38 ಕೋಟಿ ರು. ಮೌಲ್ಯದ 128 ಕೆಜಿ ಡ್ರಗ್ಸ್ ಅನ್ನು ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ವಿಭಾಗದ (ಎನ್&zwnj;ಸಿಬಿ) ಬೆಂಗಳೂರು ವಲಯ ಶುಕ್ರವಾರ ನಾಶಗೊಳಿಸಿದೆ.]]></description>
            <media:content url="https://static-assets.asianetnews.com/kp/json/17042026/pictures/062117BNG_362_17042026_1.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಬೆಂಗಳೂರು : &amp;nbsp;&lt;/strong&gt;ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ 38 ಕೋಟಿ ರು. ಮೌಲ್ಯದ 128 ಕೆಜಿ ಡ್ರಗ್ಸ್ ಅನ್ನು ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ವಿಭಾಗದ (ಎನ್&zwnj;ಸಿಬಿ) ಬೆಂಗಳೂರು ವಲಯ ಶುಕ್ರವಾರ ನಾಶಗೊಳಿಸಿದೆ.&lt;/p&gt;&lt;h2&gt;ಡ್ರಗ್ಸ್ ಸುಟ್ಟು ಹಾಕಿದ ಎನ್&zwnj;ಸಿಬಿ ಅಧಿಕಾರಿಗಳು&lt;/h2&gt;&lt;p&gt;ಹೊಸಕೋಟೆ ಕೈಗಾರಿಕಾ ಪ್ರದೇಶದಲ್ಲಿ 13 ಪ್ರಕರಣಗಳಲ್ಲಿ ಡ್ರಗ್ಸ್ ಅನ್ನು ಎನ್&zwnj;ಸಿಬಿ ಅಧಿಕಾರಿಗಳು ಸುಟ್ಟು ಹಾಕಿದ್ದಾರೆ. ಇದೇ ವರ್ಷ ಎರಡನೇ ಬಾರಿ ವಶಪಡಿಸಿಕೊಂಡ ಡ್ರಗ್ಸ್ ಅನ್ನು ಎನ್&zwnj;ಸಿಬಿ ಅಗ್ನಿಗೆ ಆಹುತಿ ಮಾಡಿದ್ದು, ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಒಟ್ಟು 49 ಕೋಟಿ ರು ಮೌಲ್ಯದ 1735 ಕೆಜಿ ಡ್ರಗ್ಸ್ ನಾಶಗೊಳಿಸಿದೆ.&amp;nbsp;&lt;/p&gt;&lt;h3&gt;ಮಾದಕ ವಸ್ತುಗಳು ನಾಶ&lt;/h3&gt;&lt;p&gt;ಇದರಲ್ಲಿ ಎಂಡಿಎಂಎ, ಹೈಡ್ರೋ ಗಾಂಜಾ, ಕೊಕೇನ್&zwnj;, ಗಾಂಜಾ ಸೇರಿದಂತೆ ಇತರೆ ಮಾದಕ ವಸ್ತುಗಳು ಸೇರಿವೆ.&lt;/p&gt;&lt;p&gt;ಡ್ರಗ್ಸ್ ನಾಶಗೊಳಿಸುವ ವೇಳೆ ಬೆಂಗಳೂರು ವಲಯ ಎನ್&zwnj;ಸಿಬಿ ನಿರ್ದೇಶಕ ಸಚಿನ್ ಘೋರ್ಪಡೆ, ಸಿಸಿಬಿ ಡಿಸಿಪಿ ರಾಜಾ ಇಮಾಮ್ ಕಾಸಿಂ ಹಾಗೂ ಎನ್&zwnj;ಸಿಬಿ ಸಹಾಯಕ ನಿರ್ದೇಶಕ ಎಂ.ಆರ್&zwnj;.ಅರವಿಂದ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/karnataka-news/128-kg-of-seized-drugs-worth-rs-38-crores-destroyed/articleshow-zm5awnx"/>
        </item>
    </channel>
</rss>
