<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Kannada Prabha</title>
        <link>https://www.kannadaprabha.in</link>
        <description><![CDATA[Kannada Prabha - No.1 News channel in Karnataka, which delivers Local and International news in Marathi language.]]></description>
        <image>
            <url>https://static-assets.asianetnews.com/images/ogimages/OG_Bangla.jpg</url>
            <width>143</width>
            <height>100</height>
            <link>https://www.kannadaprabha.in</link>
            <title>Kannada Prabha</title>
        </image>
        <lastBuildDate>Thu, 04 Jun 2026 09:24:03 +0530</lastBuildDate>
        <atom:link href="https://www.kannadaprabha.in/rss/crime-news" rel="self" type="application/rss+xml"/>
        <item>
            <title><![CDATA[ಎಪಿಕೆ ಫೈಲ್‌ ಸೃಷ್ಟಿಸಿ ವಂಚನೆ ಕೇಸಲ್ಲಿ ಉದ್ಯೋಗಿ ಬಂಧನ ಬೇಡ : ಹೈಕೋರ್ಟ್]]></title>
            <link>https://www.kannadaprabha.in/crime-news/no-need-to-arrest-employee-in-fraud-case-by-creating-apk-file-high-court/articleshow-2gmaibm</link>
            <guid isPermaLink="true">https://www.kannadaprabha.in/crime-news/no-need-to-arrest-employee-in-fraud-case-by-creating-apk-file-high-court/articleshow-2gmaibm</guid>
            <pubDate>Thu, 28 May 2026 05:07:32 +0530</pubDate>
            <description><![CDATA[ಸ್ನೇಹಿತನ ವಾಟ್ಸಪ್&zwnj;ನಿಂದ ಬಂದ ಮದುವೆ ಆಮಂತ್ರಣದ ನಕಲಿ ಎಪಿಕೆ ಫೈಲ್&zwnj; ತೆರದಿದ್ದರಿಂದ 4 ಲಕ್ಷ ರು. ಬ್ಯಾಂಕ್&zwnj; ಖಾತೆಯಿಂದ ಕಡಿತವಾಗಿದೆ ಎಂದು ಪ್ಲಂಬರ್&zwnj; ಒಬ್ಬರು&zwnj; ನೀಡಿರುವ ದೂರಿನ ಸಂಬಂಧ ಲೀಗಲ್&zwnj;ಪೇ ಟೆಕ್ನಾಲಜಿ ಪ್ರೈವೇಟ್&zwnj; ಲಿಮಿಟೆಡ್&zwnj;ನ ಯಾವುದೇ ಉದ್ಯೋಗಿಯನ್ನು ಬಂಧಿಸದಂತೆ ಹೈಕೋರ್ಟ್&zwnj; ಸರ್ಕಾರಕ್ಕೆ ನಿರ್ದೇಶಿಸಿದೆ.]]></description>
            <media:content url="https://static-gi.asianetnews.com/images/01k8n4h9682whm9q01h82faa0s/karnataka-high-court-1761645995208.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಬೆಂಗಳೂರು : &lt;/strong&gt;ಸ್ನೇಹಿತನ ವಾಟ್ಸಪ್&zwnj;ನಿಂದ ಬಂದ ಮದುವೆ ಆಮಂತ್ರಣದ ನಕಲಿ ಎಪಿಕೆ ಫೈಲ್&zwnj; ತೆರದಿದ್ದರಿಂದ 4 ಲಕ್ಷ ರು. ಬ್ಯಾಂಕ್&zwnj; ಖಾತೆಯಿಂದ ಕಡಿತವಾಗಿದೆ ಎಂದು ಪ್ಲಂಬರ್&zwnj; ಒಬ್ಬರು&zwnj; ನೀಡಿರುವ ದೂರಿನ ಸಂಬಂಧ ಲೀಗಲ್&zwnj;ಪೇ ಟೆಕ್ನಾಲಜಿ ಪ್ರೈವೇಟ್&zwnj; ಲಿಮಿಟೆಡ್&zwnj;ನ ಯಾವುದೇ ಉದ್ಯೋಗಿಯನ್ನು ಬಂಧಿಸದಂತೆ ಹೈಕೋರ್ಟ್&zwnj; ಸರ್ಕಾರಕ್ಕೆ ನಿರ್ದೇಶಿಸಿದೆ.&amp;nbsp;&lt;/p&gt;&lt;h2&gt;ಹುಳಿಮಾವು ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ&lt;/h2&gt;&lt;p&gt;ಬೆಂಗಳೂರಿನ ಹುಳಿಮಾವು ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಲೀಗಲ್&zwnj;ಪೇ ಟೆಕ್ನಾಲಜಿಯ ನಿರ್ದೇಶಕ ಕುಂದನ್&zwnj; ಕುಮಾರ್&zwnj; ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್&zwnj;. ನಟರಾಜ್&zwnj; ಅವರ ಪೀಠ ಈ ಸೂಚನೆ ನೀಡಿದೆ.ನಕಲಿ ಎಪಿಕೆ ಫೈಲ್&zwnj; ಸೃಷ್ಟಿಸಿ, ಹಂಚಿಕೆ ಮಾಡಿರುವುದರಲ್ಲಿ&zwnj; ಅರ್ಜಿದಾರರ ಪಾತ್ರವಿಲ್ಲ. ಆ ಫೈಲ್&zwnj; ತೆಗೆಯುವಂತೆಯೂ ದೂರುದಾರರಿಗೆ ಅರ್ಜಿದಾರ ಸೂಚಿಸಿಲ್ಲ. ಪ್ರಕರಣದಲ್ಲಿನ ಸಾಕ್ಷಿಯು ಬಹುತೇಕ ದಾಖಲೆ ಮತ್ತು ವಿದ್ಯುನ್ಮಾನ ರೂಪದಲ್ಲಿದೆ. ಇದರಿಂದ ಅರ್ಜಿದಾರರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಅಗತ್ಯವಿಲ್ಲ.&zwnj; ಪೊಲೀಸರು ತನಿಖೆ ಮುಂದುವರಿಸಬಹುದಾಗಿದೆ. ಕಾನೂನಿನ ಅನ್ವಯ ಅಂತಿಮ ವರದಿ ಸಲ್ಲಿಸಬಹುದಾಗಿದೆ ಎಂದು ನ್ಯಾಯಾಲಯ ನಿರ್ದೇಶಿಸಿದೆ.&lt;/p&gt;&lt;h3&gt;&lt;strong&gt;ಪ್ರಕರಣವೇನು?:&lt;/strong&gt;&lt;/h3&gt;&lt;p&gt;ಹುಳಿಮಾವು ನಿವಾಸಿಯಾಗಿರುವ ಸಿದ್ದರಾಜುವಿಗೆ ಮಾ.27ರಂದು ಸ್ನೇಹಿತ ನಾಗರಾಜು ಎಂಬವರಿಂದ ವಾಟ್ಸಪ್&zwnj;ಗೆ ಮದುವೆ ಆಮಂತ್ರಣ ಎಂಬ ಎಪಿಕೆ ಫೈಲ್&zwnj; ಬಂದಿತ್ತು. ಆ ಫೈಲ್&zwnj; ಅನ್ನು ಸಿದ್ದರಾಜು ಕ್ಲಿಕ್&zwnj; ಮಾಡಿದ ತಕ್ಷಣ, ಮೊಬೈಲ್&zwnj; ಹ್ಯಾಕ್&zwnj; ಆಗಿ ಹಲವು ಅಪರಿಚಿತ ಸಂದೇಶಗಳು ನಿರಂತರವಾಗಿ ಬಂದಿದ್ದವು. ಸಂದೇಶವನ್ನು ಪರಿಶೀಲಿಸಲಾಗಿ ಹಂತ ಹಂತವಾಗಿ ಒಟ್ಟು 4 ಲಕ್ಷ ರು. ಕಡಿತವಾಗಿತ್ತು. ಈ ಹಿನ್ನೆಲೆಯಲ್ಲಿ ಸಿದ್ದರಾಜು ಅವರು ಹುಳಿಮಾವು ಠಾಣೆಯಲ್ಲಿ ದೂರು ನೀಡಿದ್ದರು.&amp;nbsp;&lt;/p&gt;&lt;p&gt;ವಿಚಾರಣೆಯ ಕೊನೆಯಲ್ಲಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಸ್ಮಾರ್ಟ್&zwnj;ಫೋನ್&zwnj; ಇಟ್ಟುಕೊಳ್ಳವುದರಿಂದ ಈ ಸಮಸ್ಯೆಯಾಗುತ್ತದೆ.&zwnj; ಸ್ಮಾರ್ಟ್&zwnj;ಫೋನ್&zwnj; ಬಳಸುವುದು ಬಾರದೇ ಇದ್ದರೆ ಅದನ್ನು ಇಟ್ಟುಕೊಳ್ಳಬಾರದು. ಇಂದು ಪ್ಲಂಬರ್, ಕಸಗುಡಿಸುವವರು ಸೇರಿ ಎಲ್ಲರ ಬಳಿಯೂ ಸ್ಮಾರ್ಟ್&zwnj;ಫೋನ್&zwnj; ಇದೆ. ವಾಟ್ಸಾಪ್&zwnj; ಮತ್ತು ಫೇಸ್&zwnj;ಬುಕ್&zwnj; ಬಳಸಲು ಅವರಿಗೆ ಸ್ಮಾರ್ಟ್&zwnj;ಫೋನ್&zwnj; ಬೇಕು. ಲಿಂಕ್&zwnj; ಆಗಿರದ ಒಂದು ಬ್ಯಾಂಕ್&zwnj; ಖಾತೆಯನ್ನು ಮಾತ್ರ ಹೊಂದಿರಬೇಕು. ಈ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ಮೌಖಿಕವಾಗಿ ನುಡಿದರು.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/no-need-to-arrest-employee-in-fraud-case-by-creating-apk-file-high-court/articleshow-2gmaibm"/>
        </item>
        <item>
            <title><![CDATA[ಸೊಸೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌: 75 ವರ್ಷದ ಮಾವನಿಗೆ ಜಾಮೀನು]]></title>
            <link>https://www.kannadaprabha.in/crime-news/daughter-in-law-sexual-assault-case-75-year-old-father-in-law-granted-bail/articleshow-4m7bykr</link>
            <guid isPermaLink="true">https://www.kannadaprabha.in/crime-news/daughter-in-law-sexual-assault-case-75-year-old-father-in-law-granted-bail/articleshow-4m7bykr</guid>
            <pubDate>Tue, 26 May 2026 03:45:00 +0530</pubDate>
            <description><![CDATA[ಸೊಸೆ ಮೇಲೆ&zwnj; ಪದೇ ಪದೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ 75 ವರ್ಷದ ಮಾವನಿಗೆ, ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದಾಗಿ ಸೊಸೆ&zwnj; ಸಲ್ಲಿಸಿದ ಪ್ರಮಾಣ ಪತ್ರ ಆಧರಿಸಿ ಹೈಕೋರ್ಟ್ ಜಾಮೀನು ನೀಡಿದೆ.]]></description>
            <media:content url="https://static-gi.asianetnews.com/images/01kc6sk4zt9wck0h60gv0keg0k/kannada-prabha-1765459727354.jpeg" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ಬೆಂಗಳೂರು&lt;/p&gt;ಸೊಸೆ ಮೇಲೆ&zwnj; ಪದೇ ಪದೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ 75 ವರ್ಷದ ಮಾವನಿಗೆ, ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದಾಗಿ ಸೊಸೆ&zwnj; ಸಲ್ಲಿಸಿದ ಪ್ರಮಾಣ ಪತ್ರ ಆಧರಿಸಿ ಹೈಕೋರ್ಟ್ ಜಾಮೀನು ನೀಡಿದೆ.&lt;p&gt;ಜಾಮೀನು ಮಂಜೂರು ಮಾಡುವಂತೆ ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ಪೀಠ ಈ ಆದೇಶ ಮಾಡಿದೆ.&lt;/p&gt;ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ, ಪರ ವಕೀಲರ ಮೂಲಕ ಪ್ರಮಾಣ ಪತ್ರ ಸಲ್ಲಿಸಿದ ಸಂತ್ರಸ್ತೆ,&zwnj; ಪ್ರಕರಣವನ್ನು ರಾಜೀ ಸಂಧಾನದ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲಾಗುತ್ತಿದೆ. ಆರೋಪಿಗೆ ಜಾಮೀನು ನೀಡಲು ನನ್ನ ಆಕ್ಷೇಪ ಇಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.&lt;p&gt;ಅದನ್ನು ದಾಖಲಿಸಿಕೊಂಡ ನ್ಯಾಯಪೀಠ, ಆರೋಪಿಯ ವಯಸ್ಸು ಹಾಗೂ ನ್ಯಾಯಾಂಗ ಬಂಧನ ಪರಿಶೀಲಿಸಿ ಜಾಮೀನು ಮಂಜೂರು ಮಾಡಲಾಗುತ್ತಿದೆ.&zwnj; ಆರೋಪಿಯು ಒಂದು ಲಕ್ಷ ರು. ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರು ಸ್ಥಳೀಯ ನಿವಾಸಿಗಳ ಭದ್ರತಾ ಖಾತರಿ ಒದಗಿಸಬೇಕು ಎಂಬುದು ಸೇರಿ ವಿವಿಧ ಷರತ್ತು ವಿಧಿಸಿದೆ.&lt;/p&gt;ಅಲ್ಲದೆ, ಜಾಮೀನು ಮಂಜೂರು ಮಾಡಿರುವುದು ಆರೋಪಿಯ ನಿರ್ದೋಷಿತ್ವ ಸಾಬೀತುಪಡಿಸುವುದಿಲ್ಲ. ಪ್ರಕರಣದ ವಿಚಾರಣೆ ಮುಂದುವರಿಯಲಿದೆ. ಆರೋಪಗಳ ಸತ್ಯಾಸತ್ಯತೆ ಬಗ್ಗೆ ಅಂತಿಮ ತೀರ್ಮಾನವನ್ನು ವಿಚಾರಣಾ ನ್ಯಾಯಾಲಯವೇ ಕೈಗೊಳ್ಳಲಿದೆ ಎಂದು ಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.&lt;p&gt;ಪ್ರಕರಣದ ಹಿನ್ನೆಲೆ: &lt;/p&gt;ಸಂತ್ರಸ್ತೆಯಾಗಿರುವ ಮಹಿಳೆಯು ತನ್ನ ಮಾನವನಿಂದ ಲೈಂಗಿಕ ದೌರ್ಜನ್ಯ, ಪತಿ, ಅತ್ತೆ ಹಾಗೂ ಅಜ್ಜಿಯಿಂದ ಕಿರುಕುಳ ಹಾಗೂ ಮಾನಸಿಕ ಹಿಂಸೆಗೆ ಒಳಗಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಈ ಸಂಬಂಧ ಮಾವನ, ಅತ್ತೆಯ ಕುಟುಂಬಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಆರೋಪಿಗೆ 75 ವರ್ಷ ವಯಸ್ಸಾಗಿದೆ. ಹಿರಿಯ ನಾಗರಿಕರಾಗಿದ್ದಾರೆ. ಕಳೆದ ಎಂಟು ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧ ಸುಳ್ಳು ಪ್ರಕರಣ ದಾಖಲಾಗಿದೆ. ಆರೋಪ ಸಂಬಂಧ ದೂರಿನ ದಿನಾಂಕ, ಸಮಯವನ್ನು ಉಲ್ಲೇಖಿಸಿಲ್ಲ. ಘಟನೆಗೆ ಪ್ರತ್ಯಕ್ಷ್ಯ ಸಾಕ್ಷಿಗಳಿಲ್ಲ. ಆದ್ದರಿಂದ ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/daughter-in-law-sexual-assault-case-75-year-old-father-in-law-granted-bail/articleshow-4m7bykr"/>
        </item>
        <item>
            <title><![CDATA[ಮಳವಳ್ಳಿ: ಸಾಲಬಾಧೆಯಿಂದ ಬೇಸತ್ತು ಯುವ ರೈತ ನೇಣಿಗೆ ಶರಣು]]></title>
            <link>https://www.kannadaprabha.in/crime-news/malavalli-tired-of-debt-a-young-farmer-surrendered-to-hanging/articleshow-5gd3eb8</link>
            <guid isPermaLink="true">https://www.kannadaprabha.in/crime-news/malavalli-tired-of-debt-a-young-farmer-surrendered-to-hanging/articleshow-5gd3eb8</guid>
            <pubDate>Tue, 02 Jun 2026 02:00:00 +0530</pubDate>
            <description><![CDATA[ಸಾಲಬಾಧೆ ತಾಳಲಾರದೇ ಯುವ ರೈತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ. ಗ್ರಾಮದ ರಾಜು ಅವರ ಪುತ್ರ ಯುವ ರೈತ ಟಿ.ಆರ್.ಚೇತನ್ ಗೌಡ (25) ಆತ್ಮಹತ್ಯೆ ಮಾಡಿಕೊಂಡವನು.]]></description>
            <media:content url="https://static-assets.asianetnews.com/kp/json/01062026/pictures/1KMND21_411.JPG" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ಮಳವಳ್ಳಿ&lt;/p&gt;ಸಾಲಬಾಧೆ ತಾಳಲಾರದೇ ಯುವ ರೈತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ತಳಗವಾದಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.&lt;p&gt;ಗ್ರಾಮದ ರಾಜು ಅವರ ಪುತ್ರ ಯುವ ರೈತ ಟಿ.ಆರ್.ಚೇತನ್ ಗೌಡ (25) ಆತ್ಮಹತ್ಯೆ ಮಾಡಿಕೊಂಡವನು. ತಂದೆ ಅನಾರೋಗ್ಯದಿಂದ ಕಳೆದ ಎರಡು ವರ್ಷಗಳಿಂದ ವ್ಯವಸಾಯದಲ್ಲಿ ತೊಡಗಿದ್ದ ಚೇತನ್ ಗೌಡ ಗ್ರಾಮ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ತಂದೆಯ ಹೆಸರಿನಲ್ಲಿ 1.40 ಲಕ್ಷ ರು. ಬೆಳೆ ಸಾಲ ಹಾಗೂ ಖಾಸಗಿ ಫೈನಾನ್ಸ್ ಸೇರಿದಂತೆ ವಿವಿಧೆಡೆ 5 ಲಕ್ಷ ರು.ನಷ್ಟು ಸಾಲ ಮಾಡಿದ್ದರು.&lt;/p&gt;ಹೈನುಗಾರಿಕೆ, ರೇಷ್ಮೆ ಸಾಕಾಣಿಕೆ, ಹಂದಿ ಸಾಕಾಣಿಕೆಯ ಮಾಡುತ್ತಿದ್ದರು. ಕಳೆದ ಒಂದು ವರ್ಷದಿಂದ ವ್ಯವಸಾಯದಲ್ಲಿ ಸಾಕಷ್ಟು ನಷ್ಟದಿಂದ ನೊಂದಿದ್ದ ಅವರು ಭಾನುವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ರೈತನ ಪತ್ನಿ ಎಂ&zwnj;.ಡಿ.ಸಂಜನಾ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕಾಲುವೆಗೆ ಬಿದ್ದು ವ್ಯಕ್ತಿ ಸಾವು&lt;p&gt;ಶ್ರೀರಂಗಪಟ್ಟಣ:&lt;/p&gt;ನಾಲಾ ದಡದಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದ ಯುವಕ ಕಾಲುವೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ನಗುವನಹಳ್ಳಿ ಗ್ರಾಮದ ಬಳಿಯ ವಿರಿಜಾ ನಾಲೆಯಲ್ಲಿ ಸಂಭವಿಸಿದೆ.&lt;p&gt;ನಗುವನಹಳ್ಳಿ ಕಾಲೋನಿ ನಿವಾಸಿ ಚರಣ್ (35) ಸಾವನ್ನಪ್ಪಿರುವ ವ್ಯಕ್ತಿ ಎಂದು ತಿಳಿದು ಬಂದಿದೆ. ಈತ ತನ್ನ ಸ್ನೇಹಿತ ಪವನ್ ನೊಂದಿಗೆ ಭಾನುವಾರ ರಾತ್ರಿ ಮಧ್ಯಪಾನ ಮಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಚರಣ್ ಕಾಲುವೆಗೆ ಬಿದ್ದು ನೀರಿಗೆ ಮುಳುಗಿ ಸಾವನ್ನಪ್ಪಿದ್ದು, ಸೋಮವಾರ ಬೆಳಗ್ಗೆ ಶವ ಪತ್ತೆಯಾಗಿದೆ. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/malavalli-tired-of-debt-a-young-farmer-surrendered-to-hanging/articleshow-5gd3eb8"/>
        </item>
        <item>
            <title><![CDATA[ಸರಗಳ್ಳರ ಬಂಧನ: ೭೦ ಲಕ್ಷ ರು. ಮೌಲ್ಯದ ಚಿನ್ನದ ಸರಗಳ ವಶ]]></title>
            <link>https://www.kannadaprabha.in/crime-news/arrest-of-thieves-70-lakhs-valuable-gold-chains-seized/articleshow-7d7581n</link>
            <guid isPermaLink="true">https://www.kannadaprabha.in/crime-news/arrest-of-thieves-70-lakhs-valuable-gold-chains-seized/articleshow-7d7581n</guid>
            <pubDate>Wed, 27 May 2026 01:45:00 +0530</pubDate>
            <description><![CDATA[ಮಳವಳ್ಳಿ ತಾಲೂಕು ತಳಗವಾದಿ ಗ್ರಾಮದ ಟಿ.ಪಿ.ರೋಹಿತ್ ಅಲಿಯಾಸ್ ಗೆದ್ವಾ (೨೦), ಟಿ.ಎನ್.ನಂಜೇಗೌಡ ಅಲಿಯಾಸ್ ಕಾಶಿ (೧೯), ಟಿ.ಎಚ್.ಗುರುಪ್ರಸಾದ್ ಅಲಿಯಾಸ್ ಗುರು (೩೬) ಹಾಗೂ ಎಸ್.ಮಾದೇಶ ಅಲಿಯಾಸ್ ಮಾದ (೨೦) ಎಂಬುವರೇ ಬಂಧಿತ ಆರೋಪಿಗಳು.]]></description>
            <media:content url="https://static-assets.asianetnews.com/kp/json/26052026/pictures/26KMND_3_166.JPG" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ಮಂಡ್ಯ&lt;/p&gt;ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಮಳವಳ್ಳಿ ತಾಲೂಕು ಕಿರುಗಾವಲು ಠಾಣೆ ಪೊಲೀಸರು ೪೭೫.೫ ಗ್ರಾಂ ತೂಕದ ೭೦ ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ. ಶೋಭರಾಣಿ ತಿಳಿಸಿದರು.&lt;p&gt;ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಳವಳ್ಳಿ ತಾಲೂಕು ತಳಗವಾದಿ ಗ್ರಾಮದ ಟಿ.ಪಿ.ರೋಹಿತ್ ಅಲಿಯಾಸ್ ಗೆದ್ವಾ (೨೦), ಟಿ.ಎನ್.ನಂಜೇಗೌಡ ಅಲಿಯಾಸ್ ಕಾಶಿ (೧೯), ಟಿ.ಎಚ್.ಗುರುಪ್ರಸಾದ್ ಅಲಿಯಾಸ್ ಗುರು (೩೬) ಹಾಗೂ ಎಸ್.ಮಾದೇಶ ಅಲಿಯಾಸ್ ಮಾದ (೨೦) ಎಂಬುವರೇ ಬಂಧಿತ ಆರೋಪಿಗಳು ಎಂದು ತಿಳಿಸಿದರು.&lt;/p&gt;ಮಳವಳ್ಳಿ ತಾಲೂಕು ಅಣಸಾಲೆ ಗ್ರಾಮದ ಪುಟ್ಟಮ್ಮ ಅವರು ತಮ್ಮ ಮನೆಯ ಇ-ಸ್ವತ್ತು ಮಾಡಿಸುವ ಸಲುವಾಗಿ ಕಳೆದ ಮಾ.೩೦ರಂದು ಚಿಕ್ಕಮುಲಗೂಡು ಗ್ರಾಮ ಪಂಚಾಯ್ತಿಗೆ ಹೋಗಿ ತಮ್ಮ ಊರಿಗೆ ವಾಪಸ್ಸು ತೆರಳುತ್ತಿದ್ದಾಗ ಚಿಕ್ಕಮುಲಗೂಡು- ರಾಮನಾಥ ಮೋಳೆ ರಸ್ತೆಯಲ್ಲಿ ಮಧ್ಯಾಹ್ನ ೧೨.೩೦ ಗಂಟೆ ಸಮಯದಲ್ಲಿ ಅಪರಿಚಿತರಿಬ್ಬರು ಬೈಕ್&zwnj;ನಲ್ಲಿ ಬಂದು ಪುಟ್ಟಮ್ಮ ಅವರ ಕತ್ತಿನಲ್ಲಿದ್ದ ಚಿನ್ನದ ತಾಳಿ ಮತ್ತು ಎರಡು ಗುಂಡುಗಳು ಸೇರಿ ಸುಮಾರು ೨೭ ಗ್ರಾಂ ತೂಕದ ಚಿನ್ನದ ಚೈನನ್ನು ಕಿತ್ತು ಪರಾರಿಯಾಗಿದ್ದರು ಎಂದರು.&lt;p&gt;ಚೈನು ಕಳೆದುಕೊಂಡ ಪುಟ್ಟಮ್ಮ ಅವರು ಕಿರುಗಾವಲು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡಾಗ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ರೋಹಿತ್&zwnj;ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿ ಸತ್ಯಾಂಶ ಬೆಳಕಿಗೆ ಬಂತು ಎಂದರು.&lt;/p&gt;ಸ್ಕೆಚ್ ಹಾಕುತ್ತಿದ್ದ ಗುರುಪ್ರಸಾದ್:&lt;p&gt;ಆರೋಪಿ ಗುರುಪ್ರಸಾದ್ ಮದುವೆಯಾಗಿದ್ದ. ತನ್ನ ಪತ್ನಿಗೆ ತಾನು ಸಿರಿವಂತ ಎಂದು ತೋರಿಸಿಕೊಳ್ಳುವ ಸಲುವಾಗಿ ಚಿನ್ನದ ಸರ ಕಳವು ಮಾಡುತ್ತಾ ಐಷಾರಾಮಿ ಜೀವನ ನಡೆಸುತ್ತಿದ್ದನು. ಕಳೆದ ೨೦೨೪ರಲ್ಲಿ ಪತ್ನಿ ಈತನೊಂದಿಗೆ ಜಗಳ ಮಾಡಿಕೊಂಡು ತವರು ಮನೆ ಸೇರಿಸಿಕೊಂಡಿದ್ದಳು. ಅಂದಿನಿಂದ ಚೈನ್ ಕಳವು ಮಾಡುವುದನ್ನು ಗುರುಪ್ರಸಾದ್ ನಿಲ್ಲಿಸಿದ್ದನು. ಈ ಮಧ್ಯೆ ಪತ್ನಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಆತ್ಮಹತ್ಯೆಗೆ ಗುರುಪ್ರಸಾದ್ ಕಾರಣ ಎಂದು ಆತನ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿತ್ತು ಎಂದರು.&lt;/p&gt;ಜೈಲಿನಿಂದ ಹೊರಗೆ ಬಂದ ಗುರುಪ್ರಸಾದ್ ಮತ್ತೆ ತಮ್ಮೂರಿನಲ್ಲಿ ಹಣದ ಅವಶ್ಯವಿರುವ ಯುವಕರನ್ನು ಒಗ್ಗೂಡಿಸಿ ತಂಡವೊಂದನ್ನು ಕಟ್ಟಿ ಆ ಮೂಲಕ ಚಿನ್ನದ ಸರ ಕಳವು ಮಾಡಲು ಸ್ಕೆಚ್ ಹಾಕಿದ್ದ. ಅದಕ್ಕಾಗಿ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಚೈನ್ ಕಳವು ಯೋಜನೆಯನ್ನು ಗುರುಪ್ರಸಾದ್ ರೂಪಿಸುತ್ತಿದ್ದ. ಅದನ್ನು ರೋಹಿತ್, ನಂಜೇಗೌಡ, ಮಾದೇಶ ಎರಡು ತಂಡಗಳಾಗಿ ವಿಭಜನೆಗೊಂಡು ಕಳವು ಮಾಡುತ್ತಿದ್ದರು. ಹೀಗೆ ಕದ್ದ ಚಿನ್ನಾಭರಣಗಳನ್ನು ಕೋಶಮಟ್ಟಂ ಎಂಬ ಚಿನ್ನಾಭರಣ ಗಿರವಿ ಸಂಸ್ಥೆಯಲ್ಲಿ ಮೊದಲು ಆರೋಪಿ ಗುರುಪ್ರಸಾದ್ ತಮ್ಮ, ತಾಯಿ, ಚಿಕ್ಕಮ್ಮ ಇತರೆ ಸಂಬಂಧಿಕರ ಒಡವೆಗಳು ಎಂದೇಳಿಕೊಂಡು ಗಿರವಿ ಇಡುತ್ತಿದ್ದ. ನಂತರ ಅದನ್ನು ಮಾರಾಟ ಮಾಡಿ ಉಳಿದ ಹಣವನ್ನೂ ಪಡೆದು ಎಲ್ಲರೂ ಹಂಚಿಕೊಳ್ಳುತ್ತಿದ್ದರು ಎಂದು ವಿವರಿಸಿದರು.&lt;p&gt;ಆರೋಪಿಗಳು ಮಂಡ್ಯ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೨೦೨೨ರಲ್ಲಿ ೨ ಪ್ರಕರಣ, ೨೩ರಲ್ಲಿ ೮ ಪ್ರಕರಣ, ೨೪ರಲ್ಲಿ ೨, ೨೬ರಲ್ಲಿ ೪ ಪ್ರಕರಣ ಸೇರಿ ೧೬ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಬನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಒಂದು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ರೋಹಿತ್ ಮತ್ತು ನಂಜೇಗೌಡ ತಂಡ ೪, ಗುರುಪ್ರಸಾದ್-ಮಾದೇಶ ತಂಡ ೮ ಹಾಗೂ ರೋಹಿತ್ ಮತ್ತು ಮಾದೇಶ ತಂಡ ೪ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದರು.&lt;/p&gt;ಆರೋಪಿಗಳಿಂದ ಒಟ್ಟು ೪೭೫.೫ ಗ್ರಾಂ ತೂಕದ ಚಿನ್ನದ ಒಡವೆಯನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್&zwnj;ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ೭೦,೩೭,೪೦೦ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.&lt;p&gt;ಅಪರ ಪೊಲೀಸ್ ಅಧೀಕ್ಷಕ ಎಸ್.ಇ. ಗಂಗಾಧರಸ್ವಾಮಿ, ಮಳವಳ್ಳಿ ಡಿವೈಎಸ್ಪಿ ಯಶ್ವಂತ್&zwnj;ಕುಮಾರ್ ಇತರರು ಗೋಷ್ಠಿಯಲ್ಲಿದ್ದರು.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/arrest-of-thieves-70-lakhs-valuable-gold-chains-seized/articleshow-7d7581n"/>
        </item>
        <item>
            <title><![CDATA[ಆರ್‌ಸಿಬಿ ಗೆಲುವು ಸಂಭ್ರಮ: ನಿಯಮ ಉಲ್ಲಂಘಿಸಿದ 87 ವಾಹನಗಳು ಜಪ್ತಿ]]></title>
            <link>https://www.kannadaprabha.in/crime-news/rcb-victory-celebration-87-vehicles-seized-for-violating-rules/articleshow-7y2cpac</link>
            <guid isPermaLink="true">https://www.kannadaprabha.in/crime-news/rcb-victory-celebration-87-vehicles-seized-for-violating-rules/articleshow-7y2cpac</guid>
            <pubDate>Tue, 02 Jun 2026 04:30:00 +0530</pubDate>
            <description><![CDATA[ಪೊಲೀಸರ ಸೂಚನೆ ಉಲ್ಲಂಘಿಸಿ ಭಾನುವಾರ ಐಪಿಎಲ್&zwnj; ಫೈನಲ್ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ (ಆರ್&zwnj;ಸಿಬಿ) ಗೆಲುವನ್ನು ಸಾರ್ವಜನಿಕವಾಗಿ ಸಂಭ್ರಮಿಸಿದವರಿಗೆ ನಗರ ಪೊಲೀಸರು ಚುರುಕು ಮುಟ್ಟಿಸಿದ್ದಾರೆ.]]></description>
            <media:content url="https://static-assets.asianetnews.com/kp/json/01062026/pictures/CAR_1_CITY_199.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು : &amp;nbsp;&lt;/strong&gt;ಪೊಲೀಸರ ಸೂಚನೆ ಉಲ್ಲಂಘಿಸಿ ಭಾನುವಾರ ಐಪಿಎಲ್&zwnj; ಫೈನಲ್ ಪಂದ್ಯದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ (ಆರ್&zwnj;ಸಿಬಿ) ಗೆಲುವನ್ನು ಸಾರ್ವಜನಿಕವಾಗಿ ಸಂಭ್ರಮಿಸಿದವರಿಗೆ ನಗರ ಪೊಲೀಸರು ಚುರುಕು ಮುಟ್ಟಿಸಿದ್ದಾರೆ.&lt;/p&gt;&lt;p&gt;ರಸ್ತೆಗಳಲ್ಲಿ ಜೋರಾಗಿ ಹಾರನ್&zwnj; ಮಾಡುತ್ತ ಹಾಗೂ ಅಡ್ಡಾದಿಡ್ಡಿಯಾಗಿ ವಾಹನ ಓಡಿಸಿ ಕೆಲವರು ನಿಯಮ ಉಲ್ಲಂಘಿಸಿದ್ದರು. ಈ ಸಂಬಂಧ 83 ಬೈಕ್&zwnj;ಗಳು, 3 ಆಟೋ ಹಾಗೂ 1 ಕಾರು ಸೇರಿದಂತೆ 87 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.&lt;/p&gt;&lt;h2&gt;ವಾಹನಗಳ ವಿರುದ್ಧ ಕ್ರಮ&lt;/h2&gt;&lt;p&gt;ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್&zwnj;ಸಿಬಿ ಗೆಲುವು ಸಾಧಿಸಿದರೆ ಸಾರ್ವಜನಿಕವಾಗಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡದಂತೆ ತಿಳಿಸಿ ಪೊಲೀಸರು ನಿರ್ಬಂಧ ವಿಧಿಸಿದ್ದರು. ಹೀಗಿದ್ದರೂ ರಸ್ತೆಗಿಳಿದ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದರು. ಈ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಗಸ್ತು ನಡೆಸಿದ್ದ ಪೊಲೀಸರು ವಾಹನಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಸನ್ ರೂಪ್&zwnj; ತೆಗೆದು ಜೈಕಾರ:&lt;/strong&gt;&lt;/h3&gt;&lt;p&gt;ಎಂ.ಜಿ.ರಸ್ತೆಯಲ್ಲಿ ಕಾರಿನ ಸನ್ ರೂಪ್&zwnj; ತೆಗೆದು ಕೂಗಿಕೊಳ್ಳುತ್ತ ಬರುತ್ತಿದ್ದವರು ಮಹಿಳಾ ಎಸಿಪಿ &lsquo;ಬ್ಯಾಟನ್&zwnj;&rsquo; ಬೀಸಿದ ಕೂಡಲೇ ಭೀತಿಗೊಂಡು ಕಾರಿನೊಳಗೆ ತೂರಿಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಂ.ಜಿ.ರಸ್ತೆಯಲ್ಲಿ ಭಾನುವಾರ ರಾತ್ರಿ ಕಬ್ಬನ್ ಪಾರ್ಕ್ ಎಸಿಪಿ ಪ್ರಿಯದರ್ಶಿನಿ ಸಾಣಿಕೊಪ್ಪ ನೇತೃತ್ವದ ತಂಡ ಗಸ್ತು ನಡೆಸಿತ್ತು. ಅದೇ ವೇಳೆ ಆರ್&zwnj;ಸಿಬಿ ಅಭಿಮಾನಿಗಳಿದ್ದ ಕಾರು ಬಂದಿದೆ. ಆ ಕಾರಿನ ಸನ್ ರೂಪ್ ತೆರೆದು ಇಬ್ಬರು ಬಾಲಕಿಯರು ಆರ್&zwnj;ಸಿಬಿ ಜೈಕಾರ ಹಾಕುತ್ತ ಬರುತ್ತಿದ್ದರು. ಆ ಕಾರಿಗೆ ತಮ್ಮ ಬ್ಯಾಟನ್&zwnj;ನಿಂದ ಎಸಿಪಿ ಹೊಡೆದರು. ಆಗ ಗಾಬರಿಗೊಂಡು ಸನ್&zwnj; ರೂಪ್&zwnj;ನಿಂದ ಕಾರಿನೊಳಗೆ ಬಾಲಕಿಯರು ಅವಿತುಕೊಂಡರು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/rcb-victory-celebration-87-vehicles-seized-for-violating-rules/articleshow-7y2cpac"/>
        </item>
        <item>
            <title><![CDATA[ಬೆಂಜ್ ಕಾರಲ್ಲಿ ಯುವಕನ ಕಿಡ್ನಾಪ್‌ ಮಾಡಿದ್ದ 6 ಆರೋಪಿಗಳ ಬಂಧನ]]></title>
            <link>https://www.kannadaprabha.in/crime-news/6-accused-arrested-for-kidnapping-a-youth-in-a-benz-car/articleshow-8b7m30e</link>
            <guid isPermaLink="true">https://www.kannadaprabha.in/crime-news/6-accused-arrested-for-kidnapping-a-youth-in-a-benz-car/articleshow-8b7m30e</guid>
            <pubDate>Tue, 26 May 2026 04:42:29 +0530</pubDate>
            <description><![CDATA[&lt;p&gt;ಯುವತಿ ವಿಚಾರವಾಗಿ ಯುವಕನನ್ನು ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ್ದ ಪ್ರಕರಣದ ಸಂಬಂಧ ಆರು ಆರೋಪಿಗಳನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;p&gt;ಮೊಹಮ್ಮದ್&zwnj; ಶಾಹಿದ್(21), ಸೈಯಿದ್&zwnj; ಅಲಿ (29), ಫರ್ವಿಜ್&zwnj; ಪಾಷಾ(25), ಮೊಹಮ್ಮದ್&zwnj; ಮೋಸಿನ್&zwnj;(27), ಮೊಹಮ್ಮದ್&zwnj; ಅರ್ಫಾತ್&zwnj; (27), ಅಫಾನ್ ಖಾನ್&zwnj;(26) ಬಂಧಿತ ಆರೋಪಿಗಳು&lt;/p&gt;]]></description>
            <media:content url="https://static-gi.asianetnews.com/images/01gsm9337jc4ck7v8anz89vpp9/Untitled-1676791614706.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು : &amp;nbsp;&lt;/strong&gt;ಯುವತಿ ವಿಚಾರವಾಗಿ ಯುವಕನನ್ನು ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ್ದ ಪ್ರಕರಣದ ಸಂಬಂಧ ಆರು ಆರೋಪಿಗಳನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;p&gt;ಮೊಹಮ್ಮದ್&zwnj; ಶಾಹಿದ್(21), ಸೈಯಿದ್&zwnj; ಅಲಿ (29), ಫರ್ವಿಜ್&zwnj; ಪಾಷಾ(25), ಮೊಹಮ್ಮದ್&zwnj; ಮೋಸಿನ್&zwnj;(27), ಮೊಹಮ್ಮದ್&zwnj; ಅರ್ಫಾತ್&zwnj; (27), ಅಫಾನ್ ಖಾನ್&zwnj;(26) ಬಂಧಿತ ಆರೋಪಿಗಳು. ತಲೆಮರೆಸಿಕೊಂಡಿರುವ ಅಬ್ನಾನ್ ಹಾಗೂ ಅಫ್ರೀದಿಗಾಗಿ ಶೋಧ ನಡೆಸಲಾಗಿದೆ. ಹಲ್ಲೆಗೊಳಗಾದ ಯಲಹಂಕ ನಿವಾಸಿಯಾದ ಮೊಹಮ್ಮದ್ ರಫೀಕ್&zwnj; ಎಂಬುವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.&lt;/p&gt;&lt;p&gt;ವಿಮಾನ ನಿಲ್ದಾಣಕ್ಕೆ ಹೋಗಿದ್ದ ಕ್ಯಾಬ್ ಚಾಲಕ ಮತ್ತು ಆತನ ಸ್ನೇಹಿತನನ್ನು ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಬಂದ ಗ್ಯಾಂಗ್&zwnj;ವೊಂದು ಅಪಹರಿಸಿ, ಚಾಕು ಹಾಗೂ ಕಬ್ಬಿಣದ ರಾಡ್&zwnj;ಗಳಿಂದ ಹಲ್ಲೆ ನಡೆಸಿದ್ದಲ್ಲದೆ ನಗದು ಹಾಗೂ ಮೊಬೈಲ್ ಸುಲಿಗೆ ಮಾಡಿದ್ದರು. ಆರೋಪಿಗಳಿಂದ ತಪ್ಪಿಸಿಕೊಂಡು ಬಂದ ಮೊಹಮ್ಮದ್&zwnj; ರಫೀ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಮಹಿಳೆಯೊಬ್ಬರ ವಿಚಾರಕ್ಕೆ ಸಂಬಂಧಿಸಿದ ಜಗಳವೇ ಈ ಕೃತ್ಯಕ್ಕೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಪ್ರಕರಣದ ವಿವರ:&lt;/strong&gt;&lt;/h2&gt;&lt;p&gt;ಮೊಹಮ್ಮದ್ ರಫೀಕ್ (30) ಮೂಲತಃ ಕೇರಳದವರಾಗಿದ್ದು, ಕಳೆದ 6 ತಿಂಗಳಿನಿಂದ ನಗರದಲ್ಲಿ ಬಾಡಿಗೆ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಮೇ 21ರ ತಡರಾತ್ರಿ 1ಗಂಟೆ ಸುಮಾರಿಗೆ ರಫೀಕ್ ತಮ್ಮ ಸ್ನೇಹಿತ ದೀಪಕ್&zwnj;ನನ್ನು ಪಿಕಪ್ ಮಾಡಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ದೀಪಕ್&zwnj;ನನ್ನು ಕರೆದುಕೊಂಡು ವಾಪಸ್ ಬರುತ್ತಿದ್ದಾಗ, ಬೇಗೂರು ಬಳಿ ಬಿಳಿ ಬಣ್ಣದ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಬಂದ 5-6 ಜನರ ಗ್ಯಾಂಗ್ ಇವರ ಕ್ಯಾಬ್ ಅನ್ನು ಅಡ್ಡಗಟ್ಟಿದೆ.&lt;/p&gt;&lt;p&gt;ಕಾರಿನಿಂದ ಇಳಿದ ದುಷ್ಕರ್ಮಿಗಳು ಚಾಕು ಮತ್ತು ಮಾರಕಾಸ್ತ್ರಗಳನ್ನು ತೋರಿಸಿ ರಫೀಕ್&zwnj;ನನ್ನು ಬಲವಂತವಾಗಿ ಬೆಂಜ್ ಕಾರಿಗೆ ಎಳೆದುಕೊಂಡಿದ್ದಾರೆ. ಅವರ ಬಳಿಯಿದ್ದ 21000 ರು. ನಗದು ಹಾಗೂ ಮೊಬೈಲ್ ಕಸಿದುಕೊಂಡು ನಗರದ ಕಡೆಗೆ ಚಲಿಸಿದ್ದಾರೆ. ಬಳಿಕ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ, ರಫೀಕ್&zwnj;ನಿಂದ ಆತನ ಮತ್ತೊಬ್ಬ ಸ್ನೇಹಿತ ಜಾಬಿರ್ ಎಂಬುವವನಿಗೆ ಕರೆ ಮಾಡಿಸಿದ್ದಾರೆ. ತನಗೆ ಅಪಘಾತವಾಗಿದೆ ಎಂದು ಸುಳ್ಳು ಹೇಳಿಸಿ ಜಾಬಿರ್&zwnj;ನನ್ನು ಸ್ಥಳಕ್ಕೆ ಬರುವಂತೆ ಪ್ಲಾನ್ ಮಾಡಿದ್ದರು.ಸ್ನೇಹಿತ ಕರೆ ಮಾಡಿದ್ದಕ್ಕೆ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಜಾಬಿರ್&zwnj; ಮೇಲೆಯೂ ಈ ಗ್ಯಾಂಗ್ ಕಬ್ಬಿಣದ ರಾಡ್&zwnj;ಗಳಿಂದ ಬೆದರಿಸಿ, ಇಬ್ಬರನ್ನೂ ಖಾಲಿ ಸೈಟ್&zwnj;ವೊಂದಕ್ಕೆ ಕರೆದೊಯ್ದು ಮನಬಂದಂತೆ ಥಳಿಸಿದೆ. ಈ ವೇಳೆ ರಫೀಕ್ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಆಟೋ ಮೂಲಕ ಮನೆಗೆ ಬಂದು ತಲುಪಿದ್ದಾರೆ. ನಂತರ ಮುಂಜಾನೆ 5 ಗಂಟೆ ಸುಮಾರಿಗೆ ಮತ್ತೊಬ್ಬ ಸ್ನೇಹಿತನ ಫೋನ್ ಬಳಸಿ ತುರ್ತು ಸಹಾಯವಾಣಿಯಾದ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.&lt;/p&gt;&lt;h3&gt;&lt;strong&gt;ಪೊಲೀಸರ ಕ್ಷಿಪ್ರ ಕಾರ್ಯಾಚರಣೆ:&lt;/strong&gt;&lt;/h3&gt;&lt;p&gt;ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ಸಂಪಿಗೆಹಳ್ಳಿ ಹೊಯ್ಸಳ ಸಿಬ್ಬಂದಿ ಗಾಯಗೊಂಡಿದ್ದ ಜಾಬಿರ್&zwnj;ನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಲ್ಲೆಯಿಂದಾಗಿ ಜಾಬಿರ್ ಕಿವಿಗೆ ಬಲವಾದ ಗಾಯಗಳಾಗಿವೆ. ಸದ್ಯ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿ ಮಾಡಿದವರು ಮತ್ತು ದೂರುದಾರರಿಗೆ ಮುಂಚಿತವಾಗಿ ಪರಿಚಯ ಇರಲಿಲ್ಲ. ಆದರೆ ಮಹಿಳೆಯೊಬ್ಬರ ವಿಚಾರದಲ್ಲಿ ಇವರ ನಡುವೆ ಗಲಾಟೆಯಾಗಿದ್ದು, ಇದೇ ದ್ವೇಷದಲ್ಲಿ ಅಪಹರಣ ಮತ್ತು ದರೋಡೆ ನಡೆಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಯುವತಿಯ ಹೊಸ ಲವರ್&zwnj;ನಿಂದ ಅಪಹರಣ ಸಂಚು:&lt;/strong&gt;&lt;/p&gt;&lt;p&gt;ಮೊಹಮ್ಮದ್ ರಫೀ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ. ಆದರೆ ಕಳೆದ 1 ವರ್ಷದ ಹಿಂದೆ ಬ್ರೇಕಪ್ ಆಗಿತ್ತು. ಬಳಿಕ ಆ ಯುವತಿ ಅಬ್ನಾನ್ ಜತೆಗೆ ಸಂಪರ್ಕಕ್ಕೆ ಬಂದಿದ್ದಳು. ನಂತರ ಇಬ್ಬರು ಪ್ರೀತಿಸಿ ಮದುವೆ ಆಗಲು ಮುಂದಾಗಿದ್ದರು. ಆದರೆ ಮದುವೆಗೆ ಕೆಲವೇ ದಿನಗಳು ಬಾಕಿ ಇದ್ದಾಗ ತನ್ನ ಮಾಜಿ ಪ್ರೇಯಸಿಯಾದ ಯುವತಿಯನ್ನು ಮೊಹಮ್ಮದ್&zwnj; ರಫೀ ಸಂಪರ್ಕ ಮಾಡಿದ್ದ ಎನ್ನಲಾಗಿದೆ. ಈ ವಿಚಾರದ ಸಂಬಂಧ ಮಾತನಾಡಲು ಹೋಗಿದ್ದಾಗ ರಫೀಕ್&zwnj; ಅಬ್ನಾನ್ ಮೇಲೆ ಹಲ್ಲೆ ಮಾಡಿ ಅವಮಾನ ಮಾಡಿ ಕಳಿಸಿದ್ದ. ಇದರಿಂದ ಕೋಪಗೊಂಡಿದ್ದ ಆತ ಅಪಹರಣಕ್ಕೆ ಸಂಚು ರೂಪಿಸಿದ್ದ.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/6-accused-arrested-for-kidnapping-a-youth-in-a-benz-car/articleshow-8b7m30e"/>
        </item>
        <item>
            <title><![CDATA[ನಿಗೂಢವಾಗಿ ನಾಪತ್ತೆಯಾಗಿದ್ದ ಕಸುವಿನಹಳ್ಳಿ ಗ್ರಾಮದ ವೃದ್ಧೆ ಶವವಾಗಿ ಪತ್ತೆ]]></title>
            <link>https://www.kannadaprabha.in/crime-news/an-old-woman-from-kasuvinahalli-village-who-went-missing-mysteriously-was-found-dead/articleshow-8dx2f9m</link>
            <guid isPermaLink="true">https://www.kannadaprabha.in/crime-news/an-old-woman-from-kasuvinahalli-village-who-went-missing-mysteriously-was-found-dead/articleshow-8dx2f9m</guid>
            <pubDate>Sun, 31 May 2026 01:15:00 +0530</pubDate>
            <description><![CDATA[ನಿಗೂಢವಾಗಿ ನಾಪತ್ತೆಯಾಗಿದ್ದ ನಂಜನಗೂಡು ತಾಲೂಕಿನ ಕಸುವಿನಹಳ್ಳಿ ಗ್ರಾಮದ ವೃದ್ಧೆಯ ಶವ ಪತ್ತೆಯಾಗಿದೆ. ಗ್ರಾಮದ ಜಮೀನೊಂದರ ಇಂಗು ಗುಂಡಿಯಲ್ಲಿ ಮೃತ ದೇಹ ಸಿಕ್ಕಿದ್ದು ಚಿನ್ನಾಭರಣಕ್ಕಾಗಿ ಸ್ಥಳೀಯನೋರ್ವ ಕೊಲೆ ಮಾಡಿದ್ದು, ಈ ಸಂಬಂಧ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.]]></description>
            <media:content url="https://static-assets.asianetnews.com/kp/json/30052026/pictures/30MYS55_3.JPG" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;strong&gt;ನಂಜನಗೂಡು &lt;/strong&gt;: &amp;nbsp;ನಿಗೂಢವಾಗಿ ನಾಪತ್ತೆಯಾಗಿದ್ದ ತಾಲೂಕಿನ ಕಸುವಿನಹಳ್ಳಿ ಗ್ರಾಮದ ವೃದ್ಧೆಯ ಶವ ಪತ್ತೆಯಾಗಿದೆ. ಗ್ರಾಮದ ಜಮೀನೊಂದರ ಇಂಗು ಗುಂಡಿಯಲ್ಲಿ ಮೃತ ದೇಹ ಸಿಕ್ಕಿದ್ದು ಚಿನ್ನಾಭರಣಕ್ಕಾಗಿ ಸ್ಥಳೀಯನೋರ್ವ ಕೊಲೆ ಮಾಡಿದ್ದು, ಈ ಸಂಬಂಧ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.&lt;/p&gt;&lt;p&gt;ಕಸುವಿನಹಳ್ಳಿ ಗ್ರಾಮದ ಶಿವರುದ್ರಮ್ಮ (63) ನಾಲ್ಕು ದಿನಗಳ ಹಿಂದೆ ಮನೆಯಿಂದ ತೆರಳಿದ್ದವರು ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ಬಗ್ಗೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು.&lt;/p&gt;&lt;p&gt;ಅನುಮನಾಸ್ಪದವಾಗಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಶಿವರುದ್ರಮ್ಮ ಅವರನ್ನ ಪತ್ತೆ ಹಚ್ಚುವ ಕಾರ್ಯಾಚರಣೆ ಆರಂಭಿಸಿದಾಗ ಕಸುವಿನಹಳ್ಳಿ ಗ್ರಾಮದ ಜಮೀನೊಂದರ ಇಂಗು ಗುಂಡಿಯೊಂದರಲ್ಲಿ ಮಹಿಳೆಯ ಮೃತದೇಹವನ್ನ ಹಾಕಿ ಕಲ್ಲು ಮಣ್ಣಿನಿಂದ ಅರೆಬರೆ ಮುಚ್ಚಿರುವ ದೃಶ್ಯ ಪೊಲೀಸರಿಗೆ ಕಂಡು ಬಂದಿದೆ. ಕೂಡಲೇ ಕಾರ್ಯೋನ್ಮುಖರಾದ ಪೊಲೀಸರು ತನಿಖೆ ಆರಂಭಿಸಿದಾಗ ನಿಗೂಢ ಕೊಲೆ ರಹಸ್ಯ ಬಯಲಾಗಿದ್ದು, ಗ್ರಾಮದ ನಿವಾಸಿ ಮಹದೇವಪ್ಪ ಎಂಬಾತನನ್ನ ಬಂಧಿಸಿದ್ದಾರೆ.&lt;/p&gt;&lt;h2&gt;&lt;strong&gt;ಪೂಜೆ ಬಿಲ್ವಪತ್ರೆ ಕೀಳಲು ಹೋದ ವೃದ್ಧೆ:&lt;/strong&gt;&lt;/h2&gt;&lt;p&gt;ಮೃತ ಶಿವರುದ್ರಮ್ಮ ಮೈಮೇಲೆ ಸುಮಾರು 70 ಗ್ರಾಂ ಚಿನ್ನಾಭರಣ ಧರಿಸಿದ್ದರು ಎನ್ನಲಾಗಿದ್ದು, ಅವರು ಮಹಾಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ಪೂಜೆ ಸಲ್ಲಿಸುವ ಉದ್ದೇಶದಿಂದ ಬಿಲ್ವಪತ್ರೆ ಕೀಳಲೆಂದು ಹೊರ ವಲಯದಲ್ಲಿರುವ ದೇವಾಲಯದ ಸಮೀಪಕ್ಕೆ ಆಗಮಿಸಿದ್ದರು. ಈ ಸಂದರ್ಭ ಸಮೀಪದ ಜಮೀನಿನಲ್ಲಿದ್ದ ಮಹದೇವಪ್ಪನನ್ನು ನೋಡಿ ಬಿಲ್ವಪತ್ರೆ ಕಿತ್ತುಕೊಡಲು ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಿದ ಮಹದೇವಪ್ಪ ಬಿಲ್ವಪತ್ರೆ ಕಿತ್ತುಕೊಡುವ ವೇಳೆ ವೃದ್ಧ ಮಹಿಳೆಯ ಮೈಮೇಲಿನ ಚಿನ್ನಾಭರಣಗಳನ್ನು ಗಮನಿಸಿ ಅವುಗಳನ್ನು ಲಪಟಾಯಿಸಲು ಆಲೋಚಿಸಿ, ತಾನು ಕೆಲಸ ಮಾಡುತ್ತಿರುವ ತೋಟದಲ್ಲಿ ಗಂಧದ ಮರದ ಪತ್ರೆಗಳಿದ್ದು, ಅವುಗಳನ್ನೂ ಸಹಾ ಪೂಜೆಗೆ ಕಿತ್ತುಕೊಡುವುದಾಗಿ ಅವರನ್ನು ಮನವೊಲಿಸಿ ಸಮೀಪದಲ್ಲೇ ತಾನು ಕೆಲಸ ನಿರ್ವಹಿಸುತ್ತಿದ್ದ ಜಮೀನಿಗೆ ಕರೆದೊಯ್ದು, ಗಂಧದ ಮರದ ಬಳಿ ಇದ್ದ ಇಂಗುಗುಂಡಿಗೆ ತಳ್ಳಿ ಕೆಳಕ್ಕೆ ಬೀಳಿಸಿ, ಬಳಿಕ ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.&lt;/p&gt;&lt;h3&gt;&lt;strong&gt;ಕೃತಕ ಚಿರತೆ ಹೆಜ್ಜೆ ಗುರುತು:&lt;/strong&gt;&lt;/h3&gt;&lt;p&gt;ನಂತರ ಮಹಿಳೆಯ ಮೈಮೇಲಿನ ಚಿನ್ನಾಭರಣಗಳನ್ನು ಕಿತ್ತುಕೊಂಡು ಮೃತ ದೇಹದ ಮೇಲೆ ಮಣ್ಣು ಮುಚ್ಚಿದ್ದಾನೆ. ಬಳಿಕ ಮಹಿಳೆಯ ಚಪ್ಪಲಿ ಹಾಗೂ ಅವರ ಕೈಲಿದ್ದ ಬ್ಯಾಗ್ ತೆಗೆದುಕೊಂಡು ಹೋಗಿ ಮೃತ ಶಿವರುದ್ರಮ್ಮನವರ ಜಮೀನಿನಲ್ಲಿ ಎಸೆದು ಚಿರತೆ ಹೆಜ್ಜೆ ಗುರುತನ್ನು ಕೃತಕವಾಗಿ ಮೂಡಿಸಿದ್ದಾನೆ. ಇನ್ನು ಮೃತ ಮಹಿಳೆಯ ಪತಿ ಗುರುಸ್ವಾಮಪ್ಪ ತನ್ನ ಪತ್ನಿ ಕಾಣೆಯಾಗಿರುವ ಬಗ್ಗೆ ಪೊಲಿಸರಿಗೆ ದೂರು ನೀಡಿ ಬಳಿಕ ಗ್ರಾಮದಲ್ಲಿ ಹುಡುಕಾಟ ನಡೆಸುತ್ತಿದ್ದ ವೇಳೆ ಸಹಾ ಈತ ಗ್ರಾಮಸ್ಥರ ಜೊತೆಯಲ್ಲಿಯೇ ಇದ್ದು, ಊರಿನಲ್ಲಿ ಚಿರತೆ ಕಾಟವಿದ್ದು, ವನ್ಯಮೃಗದ ದಾಳಿಯಾಗಿರಬಹುದು ಎಂದು ಹುಡುಕಾಟ ನಡೆಸುತ್ತಿದ್ದವರಿಗೆ ತಿಳಿಸುವ ಮೂಲಕ ಕೊಲೆ ಪ್ರಕರಣ ಮುಚ್ಚಿಹಾಕಲು ಮುಂದಾಗಿದ್ದಾನೆ.&lt;/p&gt;&lt;p&gt;ಆದರೆ, ಪೊಲೀಸರು ಸಂಶಯಗೊಂಡು ಮಹದೇವಪ್ಪನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆತ ಕೊಲೆ ಮಾಡಿರುವ ಕೃತ್ಯವನ್ನು ಒಪ್ಪಿಕೊಂಡು ಮೃತದೇಹವನ್ನು ಹೂಳಿದ್ದ ಸ್ಥಳವನ್ನು ತೋರಿಸಿಕೊಟ್ಟಿದ್ದಾನೆ, ಇನ್ನು ಕೈ ಸಾಲ ಹೆಚ್ಚಾಗಿದ್ದರಿಂದ ಚಿನ್ನಾಭರಣವನ್ನು ದೋಚಿ ಸಾಲ ತೀರಿಸುವ ಉದ್ದೇಶದಿಂದ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/an-old-woman-from-kasuvinahalli-village-who-went-missing-mysteriously-was-found-dead/articleshow-8dx2f9m"/>
        </item>
        <item>
            <title><![CDATA[ಹಾಕಿ ಆಟಗಾರರಿಗೆ ವಂಚಿಸಿದ ಸಂಸ್ಥೆ ವಿರುದ್ಧದ ಕೇಸ್‌ ರದ್ದಿಲ್ಲ : ಹೈಕೋರ್ಟ್]]></title>
            <link>https://www.kannadaprabha.in/karnataka-news/case-against-organization-that-cheated-hockey-players-not-quashed-high-court/articleshow-aqevio8</link>
            <guid isPermaLink="true">https://www.kannadaprabha.in/karnataka-news/case-against-organization-that-cheated-hockey-players-not-quashed-high-court/articleshow-aqevio8</guid>
            <pubDate>Thu, 04 Jun 2026 09:19:21 +0530</pubDate>
            <description><![CDATA[ವಿದೇಶಗಳಲ್ಲಿ ನಡೆಯುವ ಹಾಕಿ ಪಂದ್ಯಾವಳಿಯಲ್ಲಿ ಆಡಿಸುವ ನೆಪದಲ್ಲಿ ಲಕ್ಷಾಂತರ ಹಣ ಪಡೆದು ವಂಚಿಸಿದ ಆರೋಪದ ಸಂಬಂಧ ಖೇಲೊ ಮಾಸ್ಟರ್&zwnj; ಸಂಸ್ಥೆಯ ಪದಾಧಿಕಾರಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್&zwnj; ಪ್ರಕರಣ ರದ್ದಪಡಿಸಲು ಹೈಕೋರ್ಟ್&zwnj; ಬುಧವಾರ ನಿರಾಕರಿಸಿದೆ.]]></description>
            <media:content url="https://static-gi.asianetnews.com/images/01jwzfa3ba9c8vm6zjhxb2sy25/karnataka-high-court-1749107936618.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು : &amp;nbsp;&lt;/strong&gt;ವಿದೇಶಗಳಲ್ಲಿ ನಡೆಯುವ ಹಾಕಿ ಪಂದ್ಯಾವಳಿಯಲ್ಲಿ ಆಡಿಸುವ ನೆಪದಲ್ಲಿ ಲಕ್ಷಾಂತರ ಹಣ ಪಡೆದು ವಂಚಿಸಿದ ಆರೋಪದ ಸಂಬಂಧ ಖೇಲೊ ಮಾಸ್ಟರ್&zwnj; ಸಂಸ್ಥೆಯ ಪದಾಧಿಕಾರಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್&zwnj; ಪ್ರಕರಣ ರದ್ದಪಡಿಸಲು ಹೈಕೋರ್ಟ್&zwnj; ಬುಧವಾರ ನಿರಾಕರಿಸಿದೆ.&lt;/p&gt;&lt;h2&gt;ಕ್ರಿಮಿನಲ್ ಪ್ರಕರಣ ರದ್ದುಪಡಿಸಲಾಗದು&lt;/h2&gt;&lt;p&gt;ಖೇಲೊ ಮಾಸ್ಟರ್&zwnj; ಸಂಸ್ಥೆಯ ಖಜಾಂಜಿ ಎ. ಎನ್&zwnj;. ಸೋಮಯ್ಯ, ಅಧ್ಯಕ್ಷ ಎಚ್&zwnj;.ಎಂ. ಪ್ರಸನ್ನ, ಕಾರ್ಯದರ್ಶಿ ಎನ್.ಮಧು ಮತ್ತು ತಂಡದ ಮ್ಯಾನೇಜರ್&zwnj; ಪಿ. ಕೆ. ತೇಜಶ್ರೀ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಅರ್ಜಿದಾರರ ವಿರುದ್ದದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲಾಗದು ಎಂದು ನುಡಿಯಿತು.&lt;/p&gt;&lt;p&gt;ಆಗ ಅರ್ಜಿದಾರ ಪರ ವಕೀಲರು, ಅರ್ಜಿ ಹಿಂಪಡೆಯವುದಾಗಿ ತಿಳಿಸಿದರು. ಅದನ್ನು ಪರಿಗಣಿಸಿದ ಪೀಠ, ತನಿಖಾಧಿಕಾರಿಗಳ ಅಂತಿಮ ವರದಿ ಸಲ್ಲಿಸಿದ ಬಳಿಕ ಅದನ್ನು ಪ್ರಶ್ನಿಸುವ ಸ್ವಾತಂತ್ರ್ಯ ಕಲ್ಪಿಸಿ, ಅರ್ಜಿ ಹಿಂಪಡೆಯಲು ಅವಕಾಶ ಮಾಡಿಕೊಟ್ಟಿತು.&lt;/p&gt;&lt;p&gt;ಅಲ್ಲದೇ, ಬಡ ಹಾಕಿ ಆಟಗಾರರಿಗೆ ವಂಚಿಸಿದ್ದೀರಿ. ಇದೇ ರೀತಿ ಕ್ರಿಕೆಟಿಗರಿಗೆ ವಂಚಿಸಲಾಗುವುದೇ? ಸಾಧ್ಯವೇ ಇಲ್ಲ. ನಂಬಿಸಿ ಆಟಗಾರರಿಗೆ ವಂಚಿಸಿರುವುದರಿಂದ ಇದು ತನಿಖೆ ನಡೆಯಲೇಬೇಕಾದ ಪ್ರಕರಣವಾಗಿದೆ. ಹಾಕಿ ಆಟ, ಆದರೆ ಏನನ್ನು ಬಾಕಿ ಉಳಿಸಿಲ್ಲ (ಗೇಮ್&zwnj; ಹಾಕಿ, ಕುಚ್&zwnj; ನಹೀ ಬಾಕಿ ಎಂದು ಮಾರ್ಮಿಕವಾಗಿ ನುಡಿದ ಪೀಠ, ಎಲ್ಲಾ ಆರೋಪಿಗಳು ಹಣ ಮರಳಿಸಬೇಕು ಎಂದು ತಿಳಿಸಿ ಅರ್ಜಿ ವಿಲೇವಾರಿ ಮಾಡಿತು.&lt;/p&gt;&lt;h3&gt;15 ಆಟಗಾರರಿಂದ ತಲಾ 15 ಸಾವಿರ ರು. ವಸೂಲಿ&lt;/h3&gt;&lt;p&gt;ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು, ಮೊದಲಿಗೆ ಕೊರಿಯಾದಲ್ಲಿ ನಡೆಯುವ ಹಾಕಿ ಟೂರ್ನಿಗೆ ಕರೆದೊಯ್ಯಲಾಗುವುದು ಎಂದು 15 ಆಟಗಾರರಿಂದ ತಲಾ 15 ಸಾವಿರ ರು. ವಸೂಲಿ ಮಾಡಲಾಗಿತ್ತು. ವೀಸಾಗೆ ಅಗತ್ಯವಾದ ದಾಖಲೆ ಒದಗಿಸಲು ಆಟಗಾರರು ವಿಫಲರಾಗಿದ್ದರಿಂದ ಅದು ಸಾಧ್ಯವಾಗಲಿಲ್ಲ. ಆನಂತರ ಆಸ್ಟ್ರೇಲಿಯಾದಲ್ಲಿ ಟೂರ್ನಿ ನಡೆಸಲಾಗುತ್ತದೆ ಎಂದು ಪ್ರತಿಯೊಬ್ಬ ಆಟಗಾರನಿಂದ 1.5 ಲಕ್ಷ ಸಂಗ್ರಹಿಸಲಾಗಿತ್ತು. ಅದಕ್ಕೂ ವೀಸಾ ಪಡೆಯಲು ಆಟಗಾರರು ದಾಖಲೆ ಒದಗಿಸಲು ಸಾಧ್ಯವಾಗಿರಲಿಲ್ಲ. ಆದರೆ, ಶ್ರೀಲಂಕಾದಲ್ಲಿ ನಡೆದಿದ್ದ ಟೂರ್ನಿಗೆ ಆಟಗಾರರನ್ನು ಕರೆದೊಯ್ಯಲಾಗಿತ್ತು ಎಂದು ತಿಳಿಸಿದರು.&lt;/p&gt;&lt;p&gt;ದೂರುದಾರರ ಪರ ವಕೀಲರು, ಮೊದಲಿಗೆ ಕೊರಿಯಾಗೆ ಕರೆದೊಯ್ಯುವುದಾಗಿ ಹೇಳಿ 15 ಮಂದಿಯಿಂದ ತಲಾ 15 ಸಾವಿರ ಸಂಗ್ರಹಿಸಲಾಗಿತ್ತು. ಆನಂತರ ಆಸ್ಟ್ರೇಲಿಯಾಕ್ಕೆ ಕರೆದೊಯ್ಯುವುದಾಗಿ ಹೇಳಿ 17 ಮಂದಿಯಿಂದ ತಲಾ 1.3 ಲಕ್ಷ ರು. ಬ್ಯಾಂಕ್&zwnj;ಗೆ ವರ್ಗಾವಣೆ, 1.7 ಲಕ್ಷ ರು. ನಗದನ್ನು ಸ್ವೀಕರಿಸಲಾಗಿದೆ. ಆಟಗಾರರ ಹೆಸರಿನಲ್ಲಿ ಪ್ರಾಯೋಜಕತ್ವದ ನೆಪದಲ್ಲೂ ಹಣ ಸಂಗ್ರಹಿಸಲಾಗಿದೆ. ಅದನ್ನು ಅರ್ಜಿದಾರರು ತಮ್ಮ ಖಾತೆಗೆ ಹಾಕಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/karnataka-news/case-against-organization-that-cheated-hockey-players-not-quashed-high-court/articleshow-aqevio8"/>
        </item>
        <item>
            <title><![CDATA[ಕೊಲೆ ಕೇಸಲ್ಲಿ ಮಹಿಳೆ ಎಂಬ ಕಾರಣಕ್ಕೆ ಮಾತ್ರ ಬೇಲ್‌ ನೀಡಲಾಗುವುದಿಲ್ಲ: ಹೈಕೋರ್ಟ್‌]]></title>
            <link>https://www.kannadaprabha.in/crime-news/bail-cannot-be-granted-in-murder-cases-just-because-she-is-a-woman-high-court/articleshow-bpllrvd</link>
            <guid isPermaLink="true">https://www.kannadaprabha.in/crime-news/bail-cannot-be-granted-in-murder-cases-just-because-she-is-a-woman-high-court/articleshow-bpllrvd</guid>
            <pubDate>Tue, 26 May 2026 04:34:46 +0530</pubDate>
            <description><![CDATA[ಮಹಿಳೆ ಎಂಬ ಕಾರಣ ಜಾಮೀನು ನೀಡಲು ಸಾಕಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, &zwnj;ಪ್ರಿಯಕರನ&zwnj; ಜೊತೆಗೆ&zwnj; ಸಂಬಂಧ ಮುಂದುವರಿಸಲು ಅಡ್ಡಿಆಗಿದ್ದಾರೆಂದು ಪತಿಯನ್ನು ಕೊಲೆ ಮಾಡಿಸಿದ&zwnj; ಆರೋಪ ಎದುರಿಸುತ್ತಿರುವ ಮಹಿಳೆಯೊಬ್ಬಳಿಗೆ ಜಾಮೀನು ಮಂಜೂರು ಮಾಡಲು ನಿರಾಕರಿಸಿದೆ.]]></description>
            <media:content url="https://static-gi.asianetnews.com/images/01k8n4h9682whm9q01h82faa0s/karnataka-high-court-1761645995208.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಬೆಂಗಳೂರು : &lt;/strong&gt;ಮಹಿಳೆ ಎಂಬ ಕಾರಣ ಜಾಮೀನು ನೀಡಲು ಸಾಕಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, &zwnj;ಪ್ರಿಯಕರನ&zwnj; ಜೊತೆಗೆ&zwnj; ಸಂಬಂಧ ಮುಂದುವರಿಸಲು ಅಡ್ಡಿಆಗಿದ್ದಾರೆಂದು ಪತಿಯನ್ನು ಕೊಲೆ ಮಾಡಿಸಿದ&zwnj; ಆರೋಪ ಎದುರಿಸುತ್ತಿರುವ ಮಹಿಳೆಯೊಬ್ಬಳಿಗೆ ಜಾಮೀನು ಮಂಜೂರು ಮಾಡಲು ನಿರಾಕರಿಸಿದೆ.&lt;/p&gt;&lt;p&gt;ಪತಿ&zwnj; ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಚಿತ್ರದುರ್ಗದ ನಿವಾಸಿ ಸುನಿತಾ ಎಂಬಾಕೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನುತಿರಸ್ಕರಿಸಿದ ನ್ಯಾ.ವಿ. ಶ್ರೀಷಾನಂದ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.&zwnj; ಘಟನೆಯ ವಾಸ್ತವಾಂಶ ಪರಿಶೀಲಿಸಿದರೆ, ಮೊದಲ ಆರೋಪಿ ಮತ್ತು ಅರ್ಜಿದಾರ ಮಹಿಳೆ&zwnj;&zwnj; (ಎರಡನೇ ಆರೋಪಿ) ಅಕ್ರಮ ಸಂಬಂಧ ಹೊಂದಿದ್ದರು.&zwnj; ಮೊದಲನೇ ಆರೋಪಿಯು ಅರ್ಜಿದಾರೆಯನ್ನು ಪೋಷಣೆ ಮಾಡುವುದಾಗಿ ಭರವಸೆ ನೀಡಿದ್ದ. ಈ ಇಬ್ಬರು ಜೀವನ ಸಾಗಿಸಲು ಅಡ್ಡಿಯಾಗಿದ್ದಾರೆ ಎಂಬ ಕಾರಣಕ್ಕೆ&zwnj;ಅರ್ಜಿದಾರೆಯ ಪತಿಯನ್ನು ಕೊಲೆ ಮಾಡಲಾಗಿದೆ. ಪ್ರಕರಣದ ಮುಖ್ಯ ಸಾಕ್ಷಿದಾರರ ವಿಚಾರಣೆ ಬಾಕಿ&zwnj;&zwnj;ಯಿದೆ. ಹಾಗಾಗಿ, ಈ ಹಂತದಲ್ಲಿ ಆರೋಪಿಗೆ ಜಾಮೀನು ನೀಡಲಾಗದು ಎಂದು&zwnj; ಪೀಠ ಹೇಳಿದೆ&zwnj;.&lt;/p&gt;&lt;h2&gt;ಜಾಮೀನು ಮಂಜೂರು&lt;/h2&gt;&lt;p&gt;ಮಹಿಳೆ ಆಗಿರುವ ಕಾರಣ ಪರಿಗಣಿಸಿ ಜಾಮೀನು ಮಂಜೂರು ಮಾಡಬೇಕೆಂಬ ಅರ್ಜಿದಾರೆಯ ಪರ ವಕೀಲರ ವಾದ ಒಪ್ಪದ ಪೀಠ, ಮಹಿಳೆ ಎಂಬ ಕಾರಣವು ಜಾಮೀನು ಮಂಜೂರು ಮಾಡಲು ಸಾಕಾಗುವುದಿಲ್ಲ. ದೋಷಾರೋಪ&zwnj; ಪಟ್ಟಿ ಸಲ್ಲಿಕೆ ಆಗಿದೆ ಎಂಬ ಅಂಶ ಪರಿಗಣಿಸಿ ಜಾಮೀನು ನೀಡಲು ಸಾಧ್ಯವಿಲ್ಲ. ಆದರೆ, ಪ್ರಕರಣದ ಪ್ರಮುಖ ಸಾಕ್ಷಿಗಳ ವಿಚಾರಣೆ ಮುಗಿದ ನಂತರ ಸನ್ನಿವೇಶ ಬದಲಾದ ಆಧಾರದಲ್ಲಿ ಅರ್ಜಿದಾರೆ ಮತ್ತೊಮ್ಮೆ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.&lt;/p&gt;&lt;h3&gt;&lt;strong&gt;ಏನಿದು ಪ್ರಕರಣ?:&lt;/strong&gt;&lt;/h3&gt;&lt;p&gt;ಆಟೋ ಚಾಲಕ ರವಿಕುಮಾರ್ ಮೃತದೇಹವು 2025ರ ಜು.20ರಂದು ಚಿತ್ರದುರ್ಗದ ಶಿವಮೂರ್ತಿ ಬಡಾವಣೆಯಲ್ಲಿ ಪತ್ತೆಯಾಗಿತ್ತು. ಮೃತರ ತಲೆ ಮತ್ತು ಗುಪ್ತಾಂಗದ ಭಾಗಕ್ಕೆ ತೀವ್ರ ಗಾಯಗಳಾಗಿದ್ದವು. ಪ್ರಕರಣ ಸಂಬಂಧ ಮೃತರ ಮಗ ವಿಷ್ಣು ಚಿತ್ರದುರ್ಗದ ಗ್ರಾಮೀಣ ಪೊಲೀಸ್&zwnj; ಠಾಣೆಗೆ ದೂರು ನೀಡಿದ್ದರು. ಮೃತನ ಮಗಳು ಮತ್ತು ಅಳಿಯನ ನಡುವೆ ಮನಸ್ತಾಪವಿತ್ತು. ಮಗಳು ತಂದೆಯ ಮನೆ ಸೇರಿರುವ ಕಾರಣಕ್ಕೆ ಮೊದಲಿಗೆ ಅಳಿಯನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ನಡೆಸಿದ ಬಳಿಕ, ಅರ್ಜಿದಾರೆ ಸುನಿತಾ (ಮೃತರ ಪತ್ನಿ) ಮತ್ತು ಗಣೇಶ್ ನಡುವೆ ಅಕ್ರಮ ಸಂಬಂಧವಿತ್ತು. ಅಕ್ರಮ ಸಂಬಂಧವನ್ನು ಮುಂದುವರೆಸಲು ರವಿಕುಮಾರ್&zwnj; (ಮೃತರು) ಅಡ್ಡಿಯಾಗಿದ್ದರು. ಇದೇ ಕಾರಣದಿಂದ ಅವರು ಪಿತೂರಿ ನಡೆಸಿದ ರವಿಕುಮಾರ್&zwnj;ನನ್ನು ಕೊಲೆ&zwnj; ಮಾಡಿದ್ದಾರೆ ಎಂದು ತಿಳಿದು ಬಂದಿತ್ತು.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/bail-cannot-be-granted-in-murder-cases-just-because-she-is-a-woman-high-court/articleshow-bpllrvd"/>
        </item>
        <item>
            <title><![CDATA[ನೀಟ್ ರದ್ದಾಗಿದ್ದಕ್ಕೆ ಜೀವ ಕಳಕೊಂಡ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್ !]]></title>
            <link>https://www.kannadaprabha.in/crime-news/student-who-died-by-suicide-after-neet-cancellation-had-already-failed-in-puc/articleshow-cov0qxe</link>
            <guid isPermaLink="true">https://www.kannadaprabha.in/crime-news/student-who-died-by-suicide-after-neet-cancellation-had-already-failed-in-puc/articleshow-cov0qxe</guid>
            <pubDate>Mon, 25 May 2026 11:31:49 +0530</pubDate>
            <description><![CDATA[&lt;p&gt;ನೀಟ್ ಪರೀಕ್ಷೆ ರದ್ದಾದ ಕಾರಣಕ್ಕೆ ಆತ್ಮ*ತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದ್ದ ಕಲಬುರಗಿಯ ವಿದ್ಯಾರ್ಥಿನಿಯ ಸಾವಿನ ಪ್ರಕರಣಕ್ಕೆ ಪೊಲೀಸ್ ತನಿಖೆಯಲ್ಲಿ ಹೊಸ ತಿರುವು ದೊರೆತಿದ್ದು, ಆಕೆ ಪಿಯುಸಿ ಪರೀಕ್ಷೆಯಲ್ಲಿ ಫೇಲ್&zwnj; ಆಗಿದ್ದ ಸಂಗತಿ ಬೆಳಕಿಗೆ ಬಂದಿದೆ.&lt;/p&gt;]]></description>
            <media:content url="https://static-gi.asianetnews.com/images/01kse7seegn3d44e282eteyawn/neet-1779668138448.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಕಲಬುರಗಿ &amp;nbsp;: &amp;nbsp;&lt;/strong&gt;ನೀಟ್ ಪರೀಕ್ಷೆ ರದ್ದಾದ ಕಾರಣಕ್ಕೆ ಆತ್ಮ*ತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದ್ದ ಕಲಬುರಗಿಯ ವಿದ್ಯಾರ್ಥಿನಿಯ ಸಾವಿನ ಪ್ರಕರಣಕ್ಕೆ ಪೊಲೀಸ್ ತನಿಖೆಯಲ್ಲಿ ಹೊಸ ತಿರುವು ದೊರೆತಿದ್ದು, ಆಕೆ ಪಿಯುಸಿ ಪರೀಕ್ಷೆಯಲ್ಲಿ ಫೇಲ್&zwnj; ಆಗಿದ್ದ ಸಂಗತಿ ಬೆಳಕಿಗೆ ಬಂದಿದೆ. ಅಲ್ಲದೇ, ತನ್ನ ಪಾಲಕರಿಗೆ ಪಾಸ್&zwnj; ಆಗಿದ್ದೆನೆಂದು ಸುಳ್ಳು ಹೇಳಿರುವ ವಿಚಾರ ಗೊತ್ತಾಗಿದೆ.&lt;/p&gt;&lt;p&gt;ಭಾಗ್ಯಶ್ರೀ (18) ಶನಿವಾರ ಆತ್ಮ*ತ್ಯೆ ಮಾಡಿಕೊಂಡಿದ್ದಳು. ಈಕೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಪರೀಕ್ಷೆ ರದ್ದಾದ ಕಾರಣ ಸಾವಿಗೆ ಶರಣಾಗಿದ್ದಾರೆ ಎಂದು ಮೃತಳ ಮನೆಯವರೇ ಮಾಹಿತಿ ನೀಡಿದ್ದರು.&lt;/p&gt;&lt;h2&gt;&amp;nbsp;ನೀಟ್&zwnj; ಕೋಚಿಂಗ್ ಕೊಡಿಸಿದ್ದರು&amp;nbsp;&lt;/h2&gt;&lt;p&gt;ದ್ವಿತೀಯ ಪಿಯುಸಿ ಫಲಿತಾಂಶ ಬಂದಾಗ ಭಾಗ್ಯಶ್ರೀ ತಾನು ಶೇ.92ರಷ್ಟು ಅಂಕ ಪಡೆದು ಪಾಸ್ ಆಗಿರುವುದಾಗಿ ಹೆತ್ತವರ ಬಳಿ ಹೇಳಿಕೊಂಡಿದ್ದಳು. ಮಗಳ ಮಾತನ್ನು ನಂಬಿದ್ದ ಪಾಲಕರು, ಆಕೆ ವೈದ್ಯಕೀಯ ಶಿಕ್ಷಣದ ಕನಸು ಹೊತ್ತು ನೀಟ್ ಪರೀಕ್ಷೆ ಬರೆಯಲು ಸಂಪೂರ್ಣ ಬೆಂಬಲ ನೀಡಿ ಕೋಚಿಂಗ್ ಕೊಡಿಸಿದ್ದರು. ಇತ್ತೀಚೆಗಷ್ಟೇ ಭಾಗ್ಯಶ್ರೀ ನೀಟ್ ಪರೀಕ್ಷೆ ಬರೆದಿದ್ದಳು. ಸುಳ್ಳು ಹೇಳಿದ ವಿಷಯ ಮನೆಯವರಿಗೆ ಗೊತ್ತಾದರೆ ಎಲ್ಲಿ ಬೈಯುತ್ತಾರೋ ಅಥವಾ ಪಾಲಕರ ನಿರೀಕ್ಷೆ ಸುಳ್ಳಾಯಿತಲ್ಲ ಎಂಬ ಭಯದಿಂದಲೇ ಆತ್ಮ*ತ್ಯೆಯ ಮಾಡಿಕೊಂಡಿರಬಹುದು ಎಂಬ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;ಊಹಿಸಲಾಗದ ರೀತಿ ಸತ್ಯ ಬಯಲಾಗಿದೆ&lt;/h3&gt;&lt;p&gt;ಆದರೀಗ ಯಾರಿಗೂ ಊಹಿಸಲಾಗದ ರೀತಿ ಸತ್ಯ ಬಯಲಾಗಿದ್ದು, ಪೊಲೀಸರ ತನಿಖೆಯಲ್ಲಿ ಭಾಗ್ಯಶ್ರೀ ಪಿಯುಸಿ ಫಲಿತಾಂಶ ಪರಿಶೀಲಿಸಿದಾಗ ಆಕೆ ಪಾಲಕರಿಗೂ ಸುಳ್ಳು ಹೇಳಿರುವ ವಿಷಯ ತಿಳಿದು ಬಂದಿದೆ.&lt;/p&gt;&lt;p&gt;ಇದೀಗ ಭಾಗ್ಯಶ್ರೀ ಆತ್ಮ*ತ್ಯೆ ಕೇಸ್&zwnj; ತನಿಖೆ ನಡೆಸಿದ ಪೊಲೀಸರು ಆಕೆಯ ಫಲಿತಾಂಶ ಪರಿಶೀಲಿಸಿದ್ದು, ಮೊದಲ ಪರೀಕ್ಷೆಯಲ್ಲಿ ಗಣಿತ ಮತ್ತು ಭೌತಶಾಸ್ತ್ರ ಪರೀಕ್ಷೆಯಲ್ಲಿ ಫೇಲ್&zwnj; ಆಗಿರುವ ಸತ್ಯ ಸಂಗತಿ ಬಯಲಾಗಿದೆ. ಬಳಿಕ ಅವಳು ಎರಡೂ ವಿಷಯಗಳಿಗೆ ಮರು ಪರೀಕ್ಷೆ ಬರೆದಿದ್ದು, ಮೇ 21 ರಂದು ಪ್ರಕಟವಾದ ಫಲಿತಾಂಶದಲ್ಲಿ ಭೌತಶಾಸ್ತ್ರಕ್ಕೆ 51 ಅಂಕ ಪಡೆದು ತೇರ್ಗಡೆಯಾಗಿ ಗಣಿತದಲ್ಲಿ 24 ಅಂಕ ಪಡೆದು ಅನುತ್ತೀರ್ಣಗೊಂಡಿದ್ದಳು.&lt;/p&gt;]]></content:encoded>
            <category>crime</category>
            <dc:creator>Sujatha NR</dc:creator>
            <atom:link href="https://www.kannadaprabha.in/crime-news/student-who-died-by-suicide-after-neet-cancellation-had-already-failed-in-puc/articleshow-cov0qxe"/>
        </item>
        <item>
            <title><![CDATA[ತಂದೆ-ತಾಯಿಯನ್ನು ಹತ್ಯೆ ಮಾಡಿದ್ದಮಗ ಮಾನಸಿಕ ಅಸ್ವಸ್ಥನಲ್ಲ : ತನಿಖೆ]]></title>
            <link>https://www.kannadaprabha.in/karnataka-news/son-who-killed-parents-not-mentally-ill-investigation/articleshow-de0v724</link>
            <guid isPermaLink="true">https://www.kannadaprabha.in/karnataka-news/son-who-killed-parents-not-mentally-ill-investigation/articleshow-de0v724</guid>
            <pubDate>Thu, 04 Jun 2026 09:23:59 +0530</pubDate>
            <description><![CDATA[ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಗನೇ ತಂದೆ-ತಾಯಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಂದಿದ್ದ ಪ್ರಕರಣದ ಸಂಬಂಧ ತನಿಖೆ ಪೂರ್ಣಗೊಳಿಸಿರುವ ಎಚ್ಎಎಲ್ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಸುಮಾರು 500 ಪುಟಗಳ ಚಾರ್ಜ್&zwnj;ಶೀಟ್ ಸಲ್ಲಿಸಿದ್ದಾರೆ.]]></description>
            <media:content url="https://static-gi.asianetnews.com/images/01krrwnjq75w8xzmxew28c6t2c/whatsapp-image-2026-05-16-at-10.40.02-pm-1778951834343.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು : &amp;nbsp;&lt;/strong&gt;ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಗನೇ ತಂದೆ-ತಾಯಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಂದಿದ್ದ ಪ್ರಕರಣದ ಸಂಬಂಧ ತನಿಖೆ ಪೂರ್ಣಗೊಳಿಸಿರುವ ಎಚ್ಎಎಲ್ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಸುಮಾರು 500 ಪುಟಗಳ ಚಾರ್ಜ್&zwnj;ಶೀಟ್ ಸಲ್ಲಿಸಿದ್ದಾರೆ.&lt;/p&gt;&lt;p&gt;ಘಟನೆ ನಡೆದಾಗ ಆರೋಪಿ ರೋಹನ್&zwnj; ಚಂದ್ರ ಭಟ್&zwnj;ಗೆ ಸ್ಕಿಜೋಫ್ರೆನಿಯಾ ಅಥವಾ ಯಾವುದೇ ಮಾನಸಿಕ ಖಾಯಿಲೆ ಇರಲಿಲ್ಲ. ಆತ ಎಲ್ಲರಂತೆ ಸಾಮಾನ್ಯ ಮನಸ್ಥಿತಿಯಲ್ಲಿದ್ದ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;p&gt;ಕಳೆದ ಫೆಬ್ರವರಿಯಲ್ಲಿ ನೌಕಾಪಡೆಯ ನಿವೃತ್ತ ಕ್ಯಾಪ್ಟನ್&zwnj; ನವೀನ್ ಚಂದ್ರ ಭಟ್ ಹಾಗೂ ದಂತ ವೈದ್ಯೆಯಾಗಿದ್ದ ಶ್ಯಾಮಲಾ ಭಟ್ ಅವರನ್ನು ಪುತ್ರ ರೋಹನ್ ಚಂದ್ರ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ. ಆರಂಭದಲ್ಲಿ ಆರೋಪಿಯ ಮಾನಸಿಕ ಸ್ಥಿತಿ ಸರಿ ಇರಲಿಲ್ಲ ಎನ್ನಲಾಗಿತ್ತು. ಹೀಗಾಗಿ ಪೊಲೀಸರು ಆರೋಪಿಯನ್ನು ಪ್ರಾಥಮಿಕ ವಿಚಾರಣೆ ನಡೆಸಿ ನಿಮ್ಹಾನ್ಸ್&zwnj; ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಿದ್ದರು. ಒಂದು ವಾರ ಆತನನ್ನು ಅವಲೋಕಿಸಿ ಮತ್ತು ಚಿಕಿತ್ಸೆ ನೀಡಿದ ನಿಮ್ಹಾನ್ಸ್&zwnj; ಆಸ್ಪತ್ರೆಯ ವೈದ್ಯರು ಆತನಿಗೆ ಯಾವುದೇ ಮಾನಸಿಕ ಸಮಸ್ಯೆ ಇಲ್ಲ ಎಂದು ಪ್ರಮಾಣೀಕರಿಸಿದ್ದರು. ಜತೆಗೆ ಆತನನ್ನು ವಿಚಾರಣೆ ನಡೆಸಬಹುದು ಎಂದು ತಿಳಿಸಿದ್ದರು. ಅದರ ಆಧಾರದ ಮೇಲೆ ತನಿಖೆ ನಡೆಸಿ, 40 ಮಂದಿಯ ಸಾಕ್ಷಿಗಳ ಹೇಳಿಕೆ ಹಾಗೂ ಎಫ್&zwnj;ಎಸ್&zwnj;ಎಲ್&zwnj; ವರದಿಯನ್ನೊಳಗೊಂಡ 500 ಪುಟಗಳ ಚಾರ್ಜ್&zwnj;ಶೀಟ್&zwnj; ಅನ್ನು ಕೋರ್ಟ್&zwnj;ಗೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಹಣ ಕೊಡದಿದಕ್ಕೆ ಕೃತ್ಯ:&lt;/strong&gt;&lt;/h2&gt;&lt;p&gt;ಆರೋಪಿ ಹೊಸ ಬಿಜಿನೆಸ್&zwnj; ಆರಂಭಿಸಲು ಪಾಲಕರ ಬಳಿ ₹10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ. ಅವರು ಹಣ ಕೊಡಲು ನಿರಾಕರಿಸಿದ್ದಾಗ ಆಕ್ರೋಶಗೊಂಡು ಈ ಕೃತ್ಯ ಎಸಗಿದ್ದ. ತಂದೆ ಹೆಸರಿನಲ್ಲಿದ್ದ ಸಿಮ್&zwnj; ಅನ್ನು ಆರೋಪಿ ಬಳಸುತ್ತಿದ್ದ. ಅದನ್ನು ಪೋರ್ಟ್&zwnj; ಮಾಡಿಕೊಡಲು ತಂದೆಗೆ ಮನವಿ ಮಾಡಿದ್ದ ಅದಕ್ಕೂ ಸಹ ಅವರು ನಿರಾಕರಿಸಿದ್ದರು. ಈ ಎರಡು ಕಾರಣದಿಂದ ಆರೋಪಿ ಕೃತ್ಯ ಎಸಗಿರುವುದು ತನಿಖೆಯ ವೇಳೆ ಪತ್ತೆಯಾಗಿದೆ.&lt;/p&gt;&lt;p&gt;&lt;strong&gt;ಪ್ರಕರಣದ ವಿವರ:&lt;/strong&gt;&lt;/p&gt;&lt;p&gt;ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಚಾಕುವಿನಿಂದ ಇರಿದು ತಂದೆ ನವೀನ್ ಚಂದ್ರ ಭಟ್ (60) ಹಾಗೂ ತಾಯಿ ಡಾ.ಶ್ಯಾಮಲಾ ಭಟ್ (55) ಅವರನ್ನು ಹತ್ಯೆಗೈದಿದ್ದ ಆರೋಪದ ಮೇರೆಗೆ ಮಗ ರೋಹನ್&zwnj; ಚಂದ್ರ ಭಟ್&zwnj;(33)ನನ್ನು ಎಚ್​ಎಎಲ್ ಠಾಣೆ ಪೊಲೀಸರು ಬಂಧಿಸಿದ್ದರು.ಎಚ್​ಎಎಲ್​ನ ವಿಜ್ಞಾನ ನಗರದ ಅಪಾರ್ಟ್​​ಮೆಂಟ್​​​ನಲ್ಲಿ ಈ ಘಟನೆ ನಡೆದಿತ್ತು.&lt;/p&gt;&lt;p&gt;ನವೀನ್ ಚಂದ್ರ ಅವರು ನೌಕಾ ಸೇನೆಯ ನಿವೃತ್ತ ಕ್ಯಾಪ್ಟನ್, ಶ್ಯಾಮಲಾ ಅವರು ದಂತ ವೈದ್ಯೆಯಾಗಿದ್ದರು. ಫೆ.11 ರ ಬೆಳಗ್ಗೆ 7.30ರ ಸುಮಾರಿಗೆ ರೋಹನ್ ತನ್ನ ಪಾಲಕರಿಗೆ ಚಾಕುವಿನಿಂದ ಇರಿದಿದ್ದ. ತೀವ್ರ ಗಾಯಗೊಂಡ ಇಬ್ಬರನ್ನೂ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದರು. ನೆರೆಮನೆಯ ನಿವಾಸಿ ಹಾಗೂ ವೈದ್ಯೆ ಮಾಧವಿ ನಾಯರ್ ಎಂಬುವರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿತ್ತು.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/karnataka-news/son-who-killed-parents-not-mentally-ill-investigation/articleshow-de0v724"/>
        </item>
        <item>
            <title><![CDATA[ಲಾರಿ ಡಿಕ್ಕಿ: ಗೂಡ್ಸ್ ಟೆಂಪೋ ಚಾಲಕ ಸ್ಥಳದಲ್ಲೇ ಸಾವು]]></title>
            <link>https://www.kannadaprabha.in/crime-news/lorry-collision-goods-tempo-driver-died-on-the-spot/articleshow-febcoxa</link>
            <guid isPermaLink="true">https://www.kannadaprabha.in/crime-news/lorry-collision-goods-tempo-driver-died-on-the-spot/articleshow-febcoxa</guid>
            <pubDate>Tue, 26 May 2026 01:45:00 +0530</pubDate>
            <description><![CDATA[ಲಾರಿಗೆ ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಮನ್ಮೂಲ್ ಸಮೀಪದ ಬೆಂಗಳೂರು- ಮೈಸೂರು ಎಕ್ಸ್ ಪ್ರಸ್ ವೇ ನಲ್ಲಿ ಸೋಮವಾರ ಮುಂಜಾನೆ ಜರುಗಿದೆ.]]></description>
            <media:content url="https://static-assets.asianetnews.com/kp/json/25052026/pictures/25KMND15_427.JPG" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ಮದ್ದೂರು&lt;/p&gt;ಲಾರಿಗೆ ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಗೆಜ್ಜಲಗೆರೆ ಮನ್ಮೂಲ್ ಸಮೀಪದ ಬೆಂಗಳೂರು- ಮೈಸೂರು ಎಕ್ಸ್ ಪ್ರಸ್ ವೇ ನಲ್ಲಿ ಸೋಮವಾರ ಮುಂಜಾನೆ ಜರುಗಿದೆ. ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ಆಲೂರು ಗ್ರಾಮದ ಲೇ.ನಾರಾಯಣಸ್ವಾಮಿ ಪುತ್ರ ಮನೋಜ್ (26) ಮೃತ ಟೆಂಪೋ ಚಾಲಕ. ಬೆಂಗಳೂರಿನಿಂದ ಮನೆಗಳ ನಿರ್ಮಾಣದ ಕಬ್ಬಿಣದ ಸೆಂಟ್ರಿಂಗ್ ವಸ್ತುಗಳನ್ನು ಸಾಗಿಸುತ್ತಿದ್ದ ಲಾರಿ ಚಾಲಕ ರಸ್ತೆ ಬದಿ ನಿಲ್ಲಿಸಿದಾಗ ಮುಂಜಾನೆ 4 ಗಂಟೆ ಸಮಯದಲ್ಲಿ ಹಿಂದಿನಿಂದ ಬಂದ ಗೂಡ್ಸ್ ಟೆಂಪೋ ಲಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಚಾಲಕ ಮನೋಜ್ ಸ್ಥಳದಲ್ಲೇ ಕೊನೆ ಉಸಿರೆಳೆದಿದ್ದಾನೆ. &lt;p&gt;ಟೆಂಪೋ ಸಂಪೂರ್ಣ ಜಖಂಗೊಂಡಿದ್ದ ಕಾರಣ ಮನೋಜ್ ಶವವನ್ನು ಹೊರ ತೆಗೆಯಲು ಸಮಸ್ಯೆಯಾಗಿತ್ತು. ನಂತರ ಸಂಚಾರಿ ಠಾಣೆ ಪೊಲೀಸರ ಮನವಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಠಾಣಾಧಿಕಾರಿ ವಿ.ಕೃಷ್ಣಪ್ಪ, ಸಿಬ್ಬಂದಿ ಕುಮಾರ, ರಾಜು ಹಾಗೂ ಉತ್ತಮ್ ಅವರುಗಳ ತಂಡ ಸತತ ಒಂದು ಗಂಟೆ ಕಾಲ ಇಲಾಖೆ ರಕ್ಷಣಾ ಸಾಮಗ್ರಿಗಳನ್ನು ಬಳಸಿ ಟೆಂಪೋ ಚಾಲಕನ ಶವವನ್ನು ಹೊರ ತೆಗೆಯಲು ಯಶಸ್ವಿಯಾಗಿದ್ದಾರೆ. ಈ ಸಂಬಂಧ ಮದ್ದೂರು ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಲಾರಿ ಡಿಕ್ಕಿ: ಅಪರಿಚಿತ ಪಾದಚಾರಿ ಸಾವು&lt;/p&gt;ಮದ್ದೂರು: ಲಾರಿ ಡಿಕ್ಕಿಯಾಗಿ ಅಪರಿಚಿತ ಪಾದಚಾರಿ ಮೃತಪಟ್ಟಿರುವ ಘಟನೆ ತಾಲೂಕಿನ ತೊರೆಶೆಟ್ಟಿಹಳ್ಳಿಯ ಮದ್ದೂರು ತುಮಕೂರು ರಾಜ್ಯ ಹೆದ್ದಾರಿಯಲ್ಲಿ ಮೇ 20ರಂದು ನಡೆದಿದೆ. ಸುಮಾರು 60 ರಿಂದ 65 ವರ್ಷ ವಯಸ್ಸಿನ ಈ ವ್ಯಕ್ತಿ 5.5 ಅಡಿ ಎತ್ತರ, ಸಾಧಾರಣ ಶರೀರ, ಎಣ್ಣೆಗೆಂಪು ಮೈಬಣ್ಣ, ಮೃತನ ಮೈ ಮೇಲೆ ಗುಲಾಬಿ ಬಣ್ಣದ ಅರ್ಧ ತೋಳಿನ ಟೀ ಶರ್ಟ್ ಮತ್ತು ಖಾಕಿ ಬಣ್ಣದ ನಿಕ್ಕರ್ ಧರಿಸಿದ್ದಾನೆ. ಈತನ ಸಂಬಂಧಿಕರು ಇದ್ದಲ್ಲಿ ಕೆಸ್ತೂರು ಪೊಲೀಸರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/lorry-collision-goods-tempo-driver-died-on-the-spot/articleshow-febcoxa"/>
        </item>
        <item>
            <title><![CDATA[ಗುರಾಯಿಸಿದ ಕಾರಣಕ್ಕೆ ಆಟೋ ಚಾಲಕನ ಕೊಲೆ ಮಾಡಿದ್ದ ಇಬ್ಬರ ಬಂಧನ]]></title>
            <link>https://www.kannadaprabha.in/crime-news/two-arrested-for-murdering-auto-driver-over-harassment/articleshow-hic5nqg</link>
            <guid isPermaLink="true">https://www.kannadaprabha.in/crime-news/two-arrested-for-murdering-auto-driver-over-harassment/articleshow-hic5nqg</guid>
            <pubDate>Tue, 26 May 2026 03:45:00 +0530</pubDate>
            <description><![CDATA[ಮದ್ಯದ ಅಮಲಿನಲ್ಲಿ ತನ್ನನ್ನು ಗುರಾಯಿಸಿದ ಎಂದು ಆಟೋ ಚಾಲಕನೊಬ್ಬನಿಗೆ ಡ್ರ್ಯಾಗರ್ ನಿಂದ ಇರಿದು ಕೊಂದಿದ್ದ ಇಬ್ಬರನ್ನು ಚಿಕ್ಕಬಾಣವಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.]]></description>
            <media:content url="https://static-gi.asianetnews.com/images/01kc6sk4zt9wck0h60gv0keg0k/kannada-prabha-1765459727354.jpeg" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ಬೆಂಗಳೂರುಮದ್ಯದ ಅಮಲಿನಲ್ಲಿ ತನ್ನನ್ನು ಗುರಾಯಿಸಿದ ಎಂದು ಆಟೋ ಚಾಲಕನೊಬ್ಬನಿಗೆ ಡ್ರ್ಯಾಗರ್ ನಿಂದ ಇರಿದು ಕೊಂದಿದ್ದ ಇಬ್ಬರನ್ನು ಚಿಕ್ಕಬಾಣವಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.&lt;/p&gt;ಬಾಗಲೂರು ಸಮೀಪದ ರಜಾಕ್&zwnj; ಸಾಪ್&zwnj;ಪಾಳ್ಯದ ನಿವಾಸಿ ಸೈಯದ್ ಶಫಿ (36) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ದರ್ಶನ್ ಅಲಿಯಾಸ್ ದಾಸ ಹಾಗೂ ಆತನ ಸ್ನೇಹಿತನ್ನು ಬಂಧಿಸಲಾಗಿದೆ. ಚಿಕ್ಕಬಾಣವಾರ ಸಮೀಪದ ಅಬ್ಬಿಗೆರೆ ಮುಖ್ಯರಸ್ತೆಯ ಮೀನಾ ಬಾರ್&zwnj; ಬಳಿ ಭಾನುವಾರ ರಾತ್ರಿ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. &lt;p&gt;ತನ್ನ ಕುಟುಂಬ ಜತೆ ನೆಲೆಸಿದ್ದ ಶಫಿ, ಬಾಡಿಗೆ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ಅಬ್ಬಿಗೆರೆ ಮುಖ್ಯರಸ್ತೆಯ ಮೀನಾ ಬಾರ್&zwnj; ಬಳಿ ರಾತ್ರಿ ಆಟೋ ನಿಲ್ಲಿಸಿಕೊಂಡು ತನ್ನ ಗೆಳೆಯನ ಜತೆ ಶಫಿ ಮಾತನಾಡುತ್ತಿದ್ದ. ಅದೇ ವೇಳೆ ಬಾರ್&zwnj;ನಲ್ಲಿ ಗೆಳೆಯನ ಜತೆ ಮದ್ಯ ಸೇವಿಸಿ ಹೊರಬಂದ ದರ್ಶನ್&zwnj;, ರಸ್ತೆ ಬದಿ ಮೂತ್ರ ವಿರ್ಸಜನೆಗೆ ಹೋಗಿದ್ದ. ಆಗ ಅಲ್ಲೇ ರಸ್ತೆ ಬದಿ ಆಟೋದಲ್ಲಿದ್ದ ಶಫಿಯನ್ನು ನೋಡಿ ಏನೋ ಗುರಾಯಿಸುತ್ತೀಯಾ ಎಂದು ದರ್ಶನ್ ಕ್ಯಾತೆ ತೆಗಿದ್ದಾನೆ. ಈ ಹಂತದಲ್ಲಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. &lt;/p&gt;ಈ ವೇಳೆ ಕೆರಳಿದ ದರ್ಶನ್, ಏಕಾಏಕಿ ಡ್ರ್ಯಾಗರ್&zwnj;ನಿಂದ ಶಫಿಗೆ ಇರಿದು ಪರಾರಿಯಾಗಿದ್ದ. ಕೂಡಲೇ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲು ಆತನ ಸ್ನೇಹಿತ ಮುಂದಾಗಿದ್ದಾನೆ. ಆದರೆ ತೀವ್ರ ರಕ್ತಸ್ರಾವದಿಂದ ಶಫಿ ಕೊನೆಯುಸಿರೆಳಿದ್ದಾನೆ. ಈ ಘಟನೆ ಸಂಬಂಧ ಮೃತನ ತಂದೆ ದೂರು ನೀಡಿದರು. ಅದರಂತೆ ತನಿಖೆಗಿಳಿದ ಪೊಲೀಸರು, ಕೃತ್ಯದ ನಡೆದ ಕೆಲವೇ ತಾಸಿನೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/two-arrested-for-murdering-auto-driver-over-harassment/articleshow-hic5nqg"/>
        </item>
        <item>
            <title><![CDATA[ಪಿಡಿಒ ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ]]></title>
            <link>https://www.kannadaprabha.in/crime-news/lokayukta-police-attack-on-pdo-residences/articleshow-i85m3be</link>
            <guid isPermaLink="true">https://www.kannadaprabha.in/crime-news/lokayukta-police-attack-on-pdo-residences/articleshow-i85m3be</guid>
            <pubDate>Thu, 04 Jun 2026 01:30:00 +0530</pubDate>
            <description><![CDATA[ಉಪ ಲೋಕಾಯುಕ್ತ ಬಿ.ವೀರಪ್ಪ ಅವರ ಆದೇಶದ ಮೇರೆಗೆ ಮಂಡ್ಯ ಲೋಕಾಯುಕ್ತ ಪೊಲೀಸರು ಬುಧವಾರ ಬೆಳಗ್ಗೆಯಿಂದಲೇ ತಾಲೂಕಿನ ಬೇಲೂರು, ಬೇವಿನಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಒಗಳ ನಿವಾಸ, ಪಂಚಾಯ್ತಿ ಕಚೇರಿ, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿಗೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದರು.]]></description>
            <media:content url="https://static-assets.asianetnews.com/kp/json/03062026/pictures/3KMND_1_189.JPG" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ಮಂಡ್ಯ&lt;/p&gt;ಉಪ ಲೋಕಾಯುಕ್ತ ಬಿ.ವೀರಪ್ಪ ಅವರ ಆದೇಶದ ಮೇರೆಗೆ ಮಂಡ್ಯ ಲೋಕಾಯುಕ್ತ ಪೊಲೀಸರು ಬುಧವಾರ ಬೆಳಗ್ಗೆಯಿಂದಲೇ ತಾಲೂಕಿನ ಬೇಲೂರು, ಬೇವಿನಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಒಗಳ ನಿವಾಸ, ಪಂಚಾಯ್ತಿ ಕಚೇರಿ, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿಗೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದರು.&lt;p&gt;ಹದಿನೈದು ದಿನಗಳ ಹಿಂದೆ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಬೇಲೂರು, ಬೇವಿನಹಳ್ಳಿ ಗ್ರಾಮ ಪಂಚಾಯ್ತಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆ ಸಮಯದಲ್ಲಿ ಪಂಚಾಯ್ತಿಯ ಇ-ಸ್ವತ್ತು, ತೆರಿಗೆ ಸಂಗ್ರಹ, ಲೇ-ಔಟ್ ಶುಲ್ಕ, ಕೃಷಿ ಭೂಮಿ ಅನ್ಯಕ್ರಾಂತ ಸೇರಿದಂತೆ ಹಲವು ದಾಖಲೆಗಳನ್ನು ಪಂಚಾಯ್ತಿ ಅಧಿಕಾರಿಗಳು ಸಮರ್ಪಕವಾಗಿ ಒದಗಿಸದೆ ಮುಚ್ಚಿಡುವ ಪ್ರಯತ್ನ ನಡೆಸಿದ್ದರು.&lt;/p&gt;ಮಂಡ್ಯದಿಂದ ತೆರಳಿದ ನಂತರ ಉಪ ಲೋಕಾಯುಕ್ತರು ಬೇಲೂರು ಹಾಗೂ ಬೇವಿನಹಳ್ಳಿ ಪಂಚಾಯ್ತಿ ಕಚೇರಿ, ಪಿಡಿಒ ನಿವಾಸಗಳಲ್ಲಿ ಸಮಗ್ರ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಮಂಡ್ಯ ಲೋಕಾಯುಕ್ತ ಅಧೀಕ್ಷಕ ಸುರೇಶ್&zwnj;ಬಾಬು ಅವರಿಗೆ ಆದೇಶಿಸಿದ್ದರು.&lt;p&gt;ಅದರಂತೆ ಬುಧವಾರ ಲೋಕಾಯುಕ್ತ ಡಿವೈಎಸ್ಪಿ ಸುನೀಲ್&zwnj;ಕುಮಾರ್, ಲೋಕಾಯುಕ್ತ ನಿರೀಕ್ಷಕ ಬ್ಯಾಟರಾಯಗೌಡ ಸೇರಿದಂತೆ ಇನ್ನಿತರ ಅಧಿಕಾರಿಗಳ ನೇತೃತ್ವದ ತಂಡ ಬೇಲೂರು ಗ್ರಾಪಂ ಪಿಡಿಒ ಸಿದ್ದರಾಜು, ಬೇವಿನಹಳ್ಳಿ ಗ್ರಾಪಂ ಪಿಡಿಒ ಚಾಮರಾಜು ನಿವಾಸ ಮತ್ತು ತಾಲೂಕು ಪಂಚಾಯ್ತಿ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದರು.&lt;/p&gt;ಬೇವಿನಹಳ್ಳಿ ಗ್ರಾಪಂ ಪಿಡಿಒ ಮನೆಯಲ್ಲಿ ದಾಖಲೆಗಳ ಪರಿಶೀಲನೆ ವೇಳೆ ಚಾಮರಾಜು ಅವರು ಹಿಂದೆ ಪಿಡಿಒ ಆಗಿ ಕಾರ್ಯನಿರ್ವಹಿಸಿದ್ದ ನಾಗಮಂಗಲ ತಾಲೂಕಿನ ಕರಡಹಳ್ಳಿ, ಮಂಡ್ಯ ತಾಲೂಕಿನ ದೊಡ್ಡ ಗರುಡನಹಳ್ಳಿ ಗ್ರಾಪಂ ಸೀಲ್&zwnj;ಗಳು ಹಾಗೂ ಅಧ್ಯಕ್ಷರ ಸೀಲ್&zwnj;ಗಳು ಕಂಡುಬಂದವು. ವರ್ಗಾವಣೆಯಾದ ನಂತರವೂ ಸೀಲ್&zwnj;ಗಳನ್ನು ಇಟ್ಟುಕೊಂಡಿರುವುದನ್ನು ನೋಡಿದರೆ ಅವುಗಳ ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಲೋಕಾಯುಕ್ತ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಹಿಂದಿನ ಪಂಚಾಯ್ತಿಗಳಲ್ಲಿ ಕಾರ್ಯನಿರ್ವಹಿಸುವ ವೇಳೆ ಬ್ಯಾಂಕ್&zwnj;ಗೆ ಹಣ ಕಟ್ಟಿದ ಚಲನ್&zwnj;ಗಳನ್ನು ಜೊತೆಯಲ್ಲೇ ಇಟ್ಟುಕೊಂಡಿದ್ದು, ಅವೆಲ್ಲವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.&lt;p&gt;ಬೇವಿನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಸುಮಾರು ಎರಡು ಸಾವಿರ ಇ-ಸ್ವತ್ತುಗಳಿವೆ. ಪ್ರತಿಯೊಂದು ಇ-ಸ್ವತ್ತುಗಳನ್ನು ಪರಿಶೀಲನೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು ಆನ್&zwnj;ಲೈನ್&zwnj;ಗೆ ಅಪ್&zwnj;ಲೋಡ್ ಮಾಡಿರುವ ದಾಖಲೆಗಳೆಲ್ಲವೂ ಕಡತಗಳಲ್ಲಿವೆಯೇ, ಇಲ್ಲವೇ ಎಂಬ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ ನಿರೀಕ್ಷಕ ಬ್ಯಾಟರಾಯಗೌಡ ಅವರು ಹಿಂದಿನ ಐದು ವರ್ಷಗಳಲ್ಲಿ ನಡೆದಿರುವ ಇ-ಸ್ವತ್ತುಗಳನ್ನು ಪರಿಶೀಲನೆಗೊಳಪಡಿಸಿದ್ದಾರೆ.&lt;/p&gt;ಪಂಚಾಯ್ತಿ ವ್ಯಾಪ್ತಿಯಲ್ಲಿ ಆಗಿರುವ ತೆರಿಗೆ ಸಂಗ್ರಹವೆಷ್ಟು, ಬ್ಯಾಂಕಿಗೆ ಜಮೆ ಆಗಿರುವ ಹಣವೆಷ್ಟು, ಎಷ್ಟು ಲೇ-ಔಟ್&zwnj;ಗಳನ್ನು ನಿಯಮಾನುಸಾರ ನಿರ್ಮಿಸಲಾಗಿದೆ. ಅನಧಿಕೃತವಾಗಿ ಎಷ್ಟು ಲೇ-ಔಟ್&zwnj;ಗಳಿಗೆ ಅನುಮತಿ ನೀಡಲಾಗಿದೆ. ಭೂಮಿ ಅನ್ಯಕ್ರಾಂತ ಪ್ರಕ್ರಿಯೆಗಳು ಹೇಗೆಲ್ಲಾ ನಡೆದಿವೆ, ಕೆರೆಗಳ ಒತ್ತುವರಿಯಾಗಿವೆಯೇ ಎಂಬ ಬಗ್ಗೆ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.&lt;p&gt;ಉಪ ಲೋಕಾಯುಕ್ತ ಬಿ.ವೀರಪ್ಪನವರು ಬೇವಿನಹಳ್ಳಿ ಗ್ರಾಪಂಗೆ ಭೇಟಿ ನೀಡಿದ್ದ ಸಮಯದಲ್ಲಿ ಕೃಷಿ ಭೂಮಿಯ ಅನ್ಯಕ್ರಾಂತವನ್ನು ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಸಹಿಯೊಂದಿಗೆ ಜಿಲ್ಲಾಧಿಕಾರಿ ಆದೇಶವಿಲ್ಲದೆ ಪಿಡಿಒ ಚಾಮರಾಜು ಅವರೇ ಮಾಡಿದ್ದನ್ನು ಕಂಡು ಬೆರಗಾಗಿದ್ದರು. ಇದರ ಜೊತೆಗೆ ಕೃಷಿ ಭೂಮಿಯಲ್ಲಿ ಕಟ್ಟಡ ಕಟ್ಟಿದ ನಂತರ ಪರವಾನಗಿ ನೀಡಿ, ವಾಣಿಜ್ಯ ವ್ಯವಹಾರಕ್ಕೆ ಅನುಮತಿ ನೀಡಿರುವುದು ಕಂಡುಬಂದಿತ್ತು. ಆ ಹಿನ್ನೆಲೆಯಲ್ಲಿ ಎಲ್ಲಾ ಮಾಹಿತಿಯನ್ನು ವಿವರವಾಗಿ ಪಡೆದುಕೊಳ್ಳುವಲ್ಲಿ ಅಧಿಕಾರಿಗಳು ನಿರತರಾಗಿದ್ದರು.&lt;/p&gt;ತಾಪಂ ಕಚೇರಿಯಲ್ಲಿ ಡಿವೈಎಸ್ಪಿ ಸುನೀಲ್&zwnj;ಕುಮಾರ್ ಪರಿಶೀಲನೆ&lt;p&gt;ಕನ್ನಡಪ್ರಭ ವಾರ್ತೆ ಮಂಡ್ಯ&lt;/p&gt;ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿಗೆ ತೆರಳಿದ ಡಿವೈಎಸ್ಪಿ ಸುನೀಲ್&zwnj;ಕುಮಾರ್ ನೇತೃತ್ವದ ತಂಡ ಕಂದಾಯ ನಕ್ಷೆಯ ಬಗ್ಗೆ ಪರಿಶೀಲಿಸಿದರು. ನಕ್ಷೆಯಲ್ಲಿ ಒಂದು ಊರಿನ ವಿಸ್ತೀರ್ಣ, ಗಡಿ, ಎಷ್ಟು ಸರ್ವೇನಂಬರ್&zwnj;ಗಳು ಗ್ರಾಮದ ವ್ಯಾಪ್ತಿಗೆ ಬರಲಿವೆ, ಆ ಸರ್ವೆ ನಂಬರ್&zwnj;ಗಳಲ್ಲಿರುವ ಸರ್ಕಾರಿ ಜಮೀನು, ಗೋಮಾಳ, ಒತ್ತುವರಿಯಾಗಿದೆಯೇ. ಇಲ್ಲವೇ, ಅಕ್ರಮವಾಗಿ ಲೇಔಟ್&zwnj;ಗಳನ್ನು ನಿರ್ಮಿಸಲಾಗಿದೆಯೇ ಎಂಬ ಬಗ್ಗೆ ತಾಪಂ ಇಓ ಲೋಕೇಶ್&zwnj;ಮೂರ್ತಿ ಅವರನ್ನು ಮುಂದಿಟ್ಟುಕೊಂಡು ಪರಿಶೀಲನೆ ನಡೆಸಿ ಹೆಚ್ಚುವರಿ ಮಾಹಿತಿಯನ್ನು ಪಡೆದುಕೊಂಡರು.&lt;p&gt;ಗ್ರಾಮ ಪಂಚಾಯ್ತಿಗಳಲ್ಲಿರುವ ಇ-ಸ್ವತ್ತುಗಳು, ತಾಪಂನಲ್ಲಿ ದಾಖಲಿಸಿರುವ ಇ-ಸ್ವತ್ತುಗಳ ಸಂಖ್ಯೆಗೆ ತಾಳೆಯಾಗಲಿದೆಯೇ, ಪಂಚಾಯ್ತಿಯಿಗಳಿಂದ ಸಂಗ್ರಹವಾದ ತೆರಿಗೆ ಹಣ, ತಾಪಂನಲ್ಲಿ ನಮೂದಿಸಿರುವ ತೆರಿಗೆ ಹಣದ ಲೆಕ್ಕ ಸಮರ್ಪಕವಾಗಿದೆಯೇ ಎಂಬೆಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.&lt;/p&gt;ಪಂಚಾಯ್ತಿ ವ್ಯಾಪ್ತಿಯಲ್ಲಿ ಅನುಮತಿ ನೀಡಿರುವ ಲೇಔಟ್&zwnj;ಗಳಲ್ಲಿ ಎಲ್ಲವನ್ನೂ ನಿವೇಶನಗಳನ್ನಾಗಿ ಪರಿವರ್ತಿಸಲಾಗಿದೆಯೇ ಅಥವಾ ಸಾರ್ವಜನಿಕ ಉದ್ದೇಶಗಳಿಗೆ ಮೀಸಲಿಟ್ಟು ಬಡಾವಣೆ ರಚಿಸಲಾಗಿದೆಯೇ. ಯಾವ ಯಾವ ನಿಯಮಗಳು ಉಲ್ಲಂಘನೆಯಾಗಿವೆ ಎಂಬ ಕುರಿತಂತೆ ಮಾಹಿತಿ ಸಂಗ್ರಹಿಸಿದರು.&lt;p&gt;ಬುಧವಾರದಿಂದ ಆರಂಭವಾಗಿರುವ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ಗುರುವಾರವೂ ಮುಂದುವರೆಯುವ ಸಾಧ್ಯತೆಗಳಿವೆ. ಬೇವಿನಹಳ್ಳಿ ಹಾಗೂ ಬೇಲೂರು ಪಂಚಾಯಿತಿಗಳಲ್ಲಿರುವ ಕಡತಗಳನ್ನು ಸಂಪೂರ್ಣ ಪರಿಶೀಲಿಸಿ ವರದಿ ಸಲ್ಲಿಸುವಂತೆ ಉಪ ಲೋಕಾಯುಕ್ತ ಬಿ.ವೀರಪ್ಪನವರ ಆದೇಶದಂತೆ ಕಾರ್ಯಾಚರಣೆ ಚುರುಕನ್ನು ಪಡೆದುಕೊಂಡಿದೆ.&lt;/p&gt;ಲೋಕಾಯುಕ್ತ ಪೊಲೀಸ್ ಚಿಕ್ಕಣ್ಣ ಹಾಜರಿದ್ದರು.&lt;p&gt;ಸುಮ್ಮನೆ ಬಿಡೋಲ್ಲ ಎಂದಿದ್ದ ಬಿ.ವೀರಪ್ಪ&lt;/p&gt;ಕನ್ನಡಪ್ರಭ ವಾರ್ತೆ ಮಂಡ್ಯ&lt;p&gt;ಕಳೆದ ಮೇ ೨೦ರಂದು ಸಂಜೆ ತಾಲೂಕಿನ ಬೇಲೂರು ಗ್ರಾಮ ಪಂಚಾಯ್ತಿ ಕಚೇರಿಗೆ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ದಿಢೀರ್ ಭೇಟಿ ನೀಡಿದ ವೇಳೆ ಅಧಿಕಾರಿಗಳಿಗೆ ಯಾವುದೇ ಕಡತ ಸಿಗದಂತೆ ಬಚ್ಚಿಟ್ಟಿದ್ದರು. ಯಾವುದೇ ಕಡತಗಳನ್ನು ಕೇಳಿದರೂ ಅವುಗಳನ್ನು ಒದಗಿಸದೆ ದಿಕ್ಕುತಪ್ಪಿಸುವ ಪ್ರಯತ್ನ ನಡೆಸಿದ್ದರು. ಆ ಸಮಯದಲ್ಲಿ ಕೆಂಡಾಮಂಡಲರಾದ ಬಿ.ವೀರಪ್ಪ ಅವರು ನನಗೆಲ್ಲಾ ಗೊತ್ತಿದೆ. ಅಧಿಕಾರಿಗಳು ತಪ್ಪಿಸಿಕೊಳ್ಳುವ ಸಲುವಾಗಿ ಕಡತಗಳನ್ನು ಉದ್ದೇಶಪೂರ್ವಕವಾಗಿ ಬಚ್ಚಿಡುವ ಪ್ರಯತ್ನ ನಡೆಸಿದ್ದಾರೆ. ಇದೆಲ್ಲವೂ ವ್ಯವಸ್ಥಿತ ಸಂಚು. ಯಾವ ಕತಗಳನ್ನೂ ನೀಡದೆ, ನಿರ್ವಹಣೆ ಮಾಡದೆ ನಮ್ಮನ್ನೇ ದಿಕ್ಕುತಪ್ಪಿಸುತ್ತಿದ್ದೀರಿ. ನಾನು ಇದನ್ನು ಇಲ್ಲಿಗೆ ಬಿಡುವುದಿಲ್ಲ. ಎಲ್ಲರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವೆ. ಕಡತಗಳನ್ನು ಹಾಜರುಪಡಿಸುವವರೆಗೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದ್ದರು.&lt;/p&gt;ಮಂಡ್ಯಕ್ಕೆ ಭೇಟಿ ನೀಡಿ ಹೋದ ಹದಿನೈದೇ ದಿನದಲ್ಲಿ ಬೇಲೂರು, ಬೇವಿನಹಳ್ಳಿ ಗ್ರಾಪಂಗಳ ಕಡತಗಳ ಸಮಗ್ರ ಪರಿಶೀಲನೆಗೆ ಆದೇಶಿಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸುವುದರೊಂದಿಗೆ ಮತ್ತೊಮ್ಮೆ ಎರಡೂ ಪಂಚಾಯ್ತಿಗಳಿಗೆ ಶಾಕ್ ನೀಡಿದ್ದಾರೆ. ಕಳೆದ ವರ್ಷ ಇಂಡುವಾಳು, ಮಂಡ್ಯ ಗ್ರಾಮಾಂತರ ಪಂಚಾಯಿತಿಗಳಲ್ಲಿನ ಅಕ್ರಮಗಳನ್ನು ಬಯಲಿಗೆಳೆದಿದ್ದನ್ನು ಇಲ್ಲಿ ಸ್ಮರಿಸಬಹುದು.]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/lokayukta-police-attack-on-pdo-residences/articleshow-i85m3be"/>
        </item>
        <item>
            <title><![CDATA[ಮದುವೆ ಆಗಿದ್ದ ಗೆಳತಿ ನೋಡಲು ಹೋಗಿದ್ದ ಗುಜರಿ ವ್ಯಾಪಾರಿ ಕೊಲೆ]]></title>
            <link>https://www.kannadaprabha.in/crime-news/a-street-vendor-who-had-gone-to-see-his-married-girlfriend-was-murdered/articleshow-mbyertp</link>
            <guid isPermaLink="true">https://www.kannadaprabha.in/crime-news/a-street-vendor-who-had-gone-to-see-his-married-girlfriend-was-murdered/articleshow-mbyertp</guid>
            <pubDate>Thu, 28 May 2026 05:12:17 +0530</pubDate>
            <description><![CDATA[ತನ್ನ ಸ್ನೇಹಿತೆ ಮನೆಗೆ ಬಂದಿದ್ದ ಗುಜರಿ ವ್ಯಾಪಾರಿಯೊಬ್ಬನನ್ನು ಆಕೆಯ ಪತಿ ಹಾಗೂ ಸಂಬಂಧಿಕರು ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಬ್ಯಾಟರಾಟನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.]]></description>
            <media:content url="https://static-gi.asianetnews.com/images/01kpaqn2dbdgs1ykh3s3bta6ab/delhi-jafrabad-metro-stabbing-akil-ahmed-murder-match-refusal-case-youth-arrested-crime-news-002-1776329329067.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಬೆಂಗಳೂರು : &amp;nbsp; &amp;nbsp;&amp;nbsp;&lt;/strong&gt;ತನ್ನ ಸ್ನೇಹಿತೆ ಮನೆಗೆ ಬಂದಿದ್ದ ಗುಜರಿ ವ್ಯಾಪಾರಿಯೊಬ್ಬನನ್ನು ಆಕೆಯ ಪತಿ ಹಾಗೂ ಸಂಬಂಧಿಕರು ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಬ್ಯಾಟರಾಟನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.&lt;/p&gt;&lt;h2&gt;ಮೊಹಮ್ಮದ್ ಕಾಸಿಫ್&zwnj; (27) ಕೊಲೆಯಾದ ದುರ್ದೈವಿ&lt;/h2&gt;&lt;p&gt;ರಾಮನಗರದ ಬೀಡಿ ಕಾಲೋನಿಯ ನಿವಾಸಿ ಮೊಹಮ್ಮದ್ ಕಾಸಿಫ್&zwnj; (27) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಸ್ನೇಹಿತೆ ಪತಿ ಅಕ್ಬರ್ ಹಾಗೂ ಆತನ ಸಂಬಂಧಿಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. 2 ದಿನಗಳ ಹಿಂದೆ ಬಾಪೂಜಿನಗರದಲ್ಲಿರುವ ಗೆಳತಿ ಮನೆಗೆ ಮೊಹಮ್ಮದ್ ಬಂದಿದ್ದಾಗ ಈ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;p&gt;ರಾಮನಗರದಲ್ಲಿ ಗುಜರಿ ವ್ಯವಹಾರ ನಡೆಸಿಕೊಂಡು ಮೊಹಮ್ಮದ್, ತಮ್ಮ ಕುಟುಂಬದ ಜತೆ ಅಲ್ಲೇ ನೆಲೆಸಿದ್ದ. ಈ ಮೊದಲು ಬಾಪೂಜಿನಗರವು ಆತನ ನೆಲೆವೀಡಾಗಿತ್ತು. ಪ್ರೌಢಶಾಲೆಯಲ್ಲಿ ಓದುವಾಗ ಮೊಹಮ್ಮದ್&zwnj;ಗೆ ಅಕ್ಬರ್ ಪತ್ನಿ ಪರಿಚಯವಾಗಿತ್ತು. ಈತ 10ನೇ ತರಗತಿ ಹಾಗೂ ಆಕೆ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಹೀಗಿದ್ದರೂ ಇಬ್ಬರ ಮಧ್ಯೆ ಗೆಳೆತನ ಬೆಳೆದು ಆತ್ಮೀಯ ಒಡನಾಟ ಇತ್ತು. ಮದುವೆ ಬಳಿಕವು ಈ ಸ್ನೇಹವೂ ಮುಂದುವರೆದಿತ್ತು. ಆದರೆ ಈ ಸ್ನೇಹಕ್ಕೆ ಅಕ್ಬರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದ. ಹೀಗಿದ್ದರೂ ಗೆಳತನ ಜತೆ ಆತನ ಪತ್ನಿ ಸಂಪರ್ಕ ಅಭಾದಿತವಾಗಿತ್ತು ಎಂದು ತಿಳಿದು ಬಂದಿದೆ.&lt;/p&gt;&lt;p&gt;ಅಂತೆಯೇ ತನ್ನ ಸ್ನೇಹಿತೆಯನ್ನು ಕಾಣಲು ಬಾಪೂಜಿನಗರದಲ್ಲಿದ್ದ ಆಕೆಯ ಮನೆಗೆ ಸೋಮವಾರ ಸಂಜೆ ಮೊಹಮ್ಮದ್ ಬಂದಿದ್ದ. ಅದೇ ವೇಳೆ ಮನೆಗೆ ಬಂದ ಅಕ್ಬರ್&zwnj;ಗೆ ಮೊಹಮ್ಮದ್ ಕಂಡು ನಖಶಿಖಾಂತ ಉರಿದು ಹೋಗಿದೆ. ನೀನ್ಯಾಕೆ ಮನೆಗೆ ಬಂದೆ ಎಂದು ಪ್ರಶ್ನಿಸಿ ಏಕಾಏಕಿ ಆತನ ಮೇಲೆ ಹಲ್ಲೆ ನಡೆಸಿದ್ದಾನೆ. ಕೂಡಲೇ ಆತನ ಸಂಬಂಧಿಕರು ಬಂದು ಗಲಾಟೆಯಲ್ಲಿ ಕೈ ಜೋಡಿಸಿದ್ದಾರೆ. ಮನಬಂದಂತೆ ಹೊಡೆದು ಮೊಹಮ್ಮದ್&zwnj;ನನ್ನು ಆರೋಪಿಗಳು ಕಳುಹಿಸಿದ್ದಾರೆ. ಈ ಹಲ್ಲೆಯಿಂದ ಮೃತನ ದೇಹವು ಮೈ ಎಲ್ಲ ಹಣ್ಣುಗಾಯಿ ಆಗಿತ್ತು.&lt;/p&gt;&lt;h3&gt;ಈ ಘಟನೆ ಬಳಿಕ ರಾಮನಗರದ ಮನೆಗೆ ಮರಳಿದ ಮೊಹಮ್ಮದ್&zwnj;ಗೆ ರಾತ್ರಿ ಉಸಿರಾಟ ಸಮಸ್ಯೆ ಉಂಟಾಗಿದೆ. ತಕ್ಷಣವೇ ಆತನನ್ನು ಸಮೀಪದ ಆಸ್ಪತ್ರೆಗೆ ಕುಟುಂಬದವರು ಕರೆದೊಯ್ದು ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಗುಜರಿ ವ್ಯಾಪಾರಿ ಕೊನೆಯುಸಿರೆಳೆದಿದ್ದಾನೆ. ಈತನ ತಪಾಸಣೆ ನಡೆಸಿದ ವೈದ್ಯರು, ಮೃತನ ಮೇಲೆ ಮರಣಾಂತಿಕ ಹಲ್ಲೆ ನಡೆದಿದೆ ಎಂದಿದ್ದರು. ಬಳಿಕ ಬ್ಯಾಟರಾಯನಪುರ ಠಾಣೆಗೆ ಆಗಮಿಸಿ ಮೃತನ ಕುಟುಂಬದವರು ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/h3&gt;&lt;h3&gt;&lt;strong&gt;ಪ್ರೌಢಶಾಲೆಯಲ್ಲಿ ಓದುವಾಗ ಪರಿಚಯ ಆಗಿದ್ದ ಗೆಳತಿ&amp;nbsp;&lt;/strong&gt;&lt;/h3&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/a-street-vendor-who-had-gone-to-see-his-married-girlfriend-was-murdered/articleshow-mbyertp"/>
        </item>
        <item>
            <title><![CDATA[ಬೆಂಗಳೂರಲ್ಲೊಂದು ಮಹಾ ಸೈಬರ್‌ ಸುಲಿಗೆ : ರಾಜ್ಯದ ದೊಡ್ಡ ಡಿಜಿಟಲ್‌ ಅರೆಸ್ಟ್‌]]></title>
            <link>https://www.kannadaprabha.in/crime-news/massive-cyber-extortion-racket-in-bengaluru-states-biggest-digital-arrest/articleshow-obe0eku</link>
            <guid isPermaLink="true">https://www.kannadaprabha.in/crime-news/massive-cyber-extortion-racket-in-bengaluru-states-biggest-digital-arrest/articleshow-obe0eku</guid>
            <pubDate>Mon, 25 May 2026 09:12:16 +0530</pubDate>
            <description><![CDATA[&lt;p&gt;ಸಿಬಿಐ, ಜಾರಿ ನಿರ್ದೇಶನಾಲಯ(ಇ.ಡಿ.) ಅಧಿಕಾರಿಗಳ ಸೋಗಿನಲ್ಲಿ ವೃದ್ಧೆಯೊಬ್ಬರನ್ನು ಡಿಜಿಟಲ್&zwnj; ಅರೆಸ್ಟ್ ಮಾಡಿದ್ದ ಸೈಬರ್ ವಂಚಕರು, ಬರೋಬ್ಬರಿ 24 ಕೋಟಿ ರು. ಹಣ ವರ್ಗಾವಣೆ ಮಾಡಿಸಿಕೊಂಡ ಘಟನೆ ಬೆಂಗಳೂರಲ್ಲಿ ಬೆಳಕಿಗೆ ಬಂದಿದೆ.&lt;/p&gt;]]></description>
            <media:content url="https://static-gi.asianetnews.com/images/01kscc9g6xpz1bn0ewb280nakz/karnataka-biggest-digital-arrest-1779605749981.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಬೆಂಗಳೂರು : &amp;nbsp;&lt;/strong&gt;ಸಿಬಿಐ, ಜಾರಿ ನಿರ್ದೇಶನಾಲಯ(ಇ.ಡಿ.) ಅಧಿಕಾರಿಗಳ ಸೋಗಿನಲ್ಲಿ ವೃದ್ಧೆಯೊಬ್ಬರನ್ನು ಡಿಜಿಟಲ್&zwnj; ಅರೆಸ್ಟ್ ಮಾಡಿದ್ದ ಸೈಬರ್ ವಂಚಕರು, ಬರೋಬ್ಬರಿ 24 ಕೋಟಿ ರು. ಹಣ ವರ್ಗಾವಣೆ ಮಾಡಿಸಿಕೊಂಡ ಘಟನೆ ಬೆಂಗಳೂರಲ್ಲಿ ಬೆಳಕಿಗೆ ಬಂದಿದೆ. ರಾಜ್ಯದಲ್ಲೇ ಅತಿ ದೊಡ್ಡ ಈ ಸೈಬರ್&zwnj; ವಂಚನೆ(ವೈಯಕ್ತಿಕ) ಪ್ರಕರಣ ಇದಾಗಿದ್ದು, ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;p&gt;ಈ ಸಂಬಂಧ ಹೊರ ರಾಜ್ಯದ ಆರು ಮಂದಿಯನ್ನು ಸೈಬರ್ ಕಮಾಂಡ್ ಸೆಂಟರ್&zwnj; ಹಾಗೂ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಎನ್&zwnj;.ಶಿವಜ್ಞಾನಂ, ಮುಂಬೈನ ಅಕ್ಕಚ್&zwnj; ಮಲ್ಲಿಕ್&zwnj;, ಅಹಮದಾಬಾದ್ ಮೂಲದ ಪಲಕ್&zwnj; ಭಾಯಿ ಪಟೇಲ್, ಅಮಿತ್ ನರೇಂದ್ರ ಪಟೇಲ್, ದೆಹಲಿಯ ಓಂ ಪ್ರಕಾಶ್ ರಜಪೂತ್ ಮತ್ತು ಬಿಹಾರದ ಗೌರವ್ ಕುಮಾರ್ ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 6 ಮೊಬೈಲ್&zwnj;ಗಳನ್ನು ಜಪ್ತಿ ಮಾಡಲಾಗಿದೆ.&lt;/p&gt;&lt;h2&gt;₹5.45 ಕೋಟಿ ಉಳಿಸಿದ ಪೊಲೀಸರು:&lt;/h2&gt;&lt;p&gt;ಆರೋಪಿಗಳು ಶಿವಾಜಿನಗರ ನಿವಾಸಿ ಲಕ್ಷ್ಮೀ ರಾಮಮೂರ್ತಿ (74) ಎಂಬುವವರಿಗೆ ಫೆ.10 ರಿಂದ ಏ.24 ರವರೆಗೆ ಡಿಜಿಟಲ್&zwnj; ಅರೆಸ್ಟ್&zwnj; ಮಾಡಿ 24 ಕೋಟಿ ರು. ಸುಲಿಗೆ ಮಾಡಿದ್ದಾರೆ. ಸದ್ಯ ಬಂಧಿತ ಆರೋಪಿಗಳ ಖಾತೆಯಲ್ಲಿದ್ದ 4 ಕೋಟಿ ರು. ಫ್ರೀಜ್ ಮಾಡಿದ್ದು, ಕೋರ್ಟ್&zwnj; ಆದೇಶ ಮೇರೆಗೆ 1.45 ಕೋಟಿ ಋೂ. ವಾಪಸ್ ಪಡೆಯಲಾಗಿದೆ. ಉಳಿದ ಹಣ ದೇಶ-ವಿದೇಶದ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h3&gt;ಪ್ರಕರಣದ ವಿವರ:&lt;/h3&gt;&lt;p&gt;ಫೆ.10ರಂದು ವೃದ್ಧೆಗೆ ಸಿಬಿಐ ಮತ್ತು ಇ.ಡಿ. ಸೋಗಿನಲ್ಲಿ ಕರೆ ಮಾಡಿದ್ದ ವಂಚಕರು ನಿಮ್ಮ ಬ್ಯಾಂಕ್ ಖಾತೆಯನ್ನು ಮನಿ ಲ್ಯಾಂಡರಿಂಗ್ (ಅಕ್ರಮ ಹಣ ವರ್ಗಾವಣೆ) ಪ್ರಕರಣದಲ್ಲಿ ಬಳಸಲಾಗಿದೆ. ಉಗ್ರಗಾಮಿ ಚಟುವಟಿಕೆಗಳಿಗೆ ನಿಮ್ಮ ಹಣ ಬಳಸಲಾಗಿದೆ ಎಂದು ಹೇಳಿ ಬೆದರಿಸಿದ್ದಾರೆ. ನಂತರ ತಿಂಗಳುಗಟ್ಟಲೆ ಮಾನಸಿಕ ಒತ್ತಡ ಹಾಕಿರುವ ಸೈಬರ್ ವಂಚಕರು 10 ನಕಲಿ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 26 ಬಾರಿ ಆರ್&zwnj;ಟಿಜಿಎಸ್ ಮೂಲಕ 24 ಕೋಟಿ ರು. ವರ್ಗಾಯಿಸಿಕೊಂಡಿದ್ದಾರೆ.&lt;/p&gt;&lt;p&gt;ಒಂಟಿಯಾಗಿ ನೆಲೆಸಿದ್ದರು:&lt;/p&gt;&lt;p&gt;ವಂಚನೆಗೊಳಗಾದ ವೃದ್ಧೆ ಲಕ್ಷ್ಮೀ ರಾಮಮೂರ್ತಿ ಅಬುಧಾಬಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿ ನಿವೃತ್ತಿಯಾಗಿ ಬೆಂಗಳೂರಿಗೆ ಬಂದು ಶಿವಾಜಿನಗರದ ಅಪಾರ್ಟ್&zwnj;ಮೆಂಟ್&zwnj;ನ ಫ್ಲ್ಯಾಟ್&zwnj;ನಲ್ಲಿ ಒಂಟಿಯಾಗಿ ವಾಸವಾಗಿದ್ದಾರೆ. ಏರ್&zwnj;ಲೈನ್ಸ್&zwnj;ನಲ್ಲಿ ಲೆಕ್ಕ ಪರಿಶೋಧಕರಾಗಿದ್ದ ಪತಿ ನಿಧನರಾಗಿದ್ದಾರೆ. ಪತಿ-ಪತ್ನಿ ನಿವೃತ್ತಿ ಆದ ನಂತರ ಬಂದ ಹಣ ಹಾಗೂ ಬೆಂಗಳೂರು ಹಾಗೂ ಮುಂಬೈನಲ್ಲಿ ಇದ್ದ ಆಸ್ತಿಗಳನ್ನು ಮಾರಾಟ ಮಾಡಿದ್ದ ಹಣ ಅವರ ಖಾತೆಯಲ್ಲಿತ್ತು. ಇವರ ಇಬ್ಬರು ಗಂಡು ಮಕ್ಕಳು ಅಮೆರಿಕದಲ್ಲಿ ಸಾಫ್ಟ್&zwnj;ವೇರ್&zwnj; ಎಂಜಿನಿಯರ್&zwnj;ಗಳಾಗಿದ್ದು, ಅಲ್ಲಿನ ಗ್ರೀನ್&zwnj; ಕಾರ್ಡ್&zwnj; ಹೊಂದಿದ್ದಾರೆ. ಹೀಗಾಗಿ ಲಕ್ಷ್ಮೀ ರಾಮಮೂರ್ತಿ ಅವರು ಅಮೆರಿಕದಲ್ಲಿರುವ ಇಬ್ಬರು ಮಕ್ಕಳ ಜತೆ ನೆಲೆಸಲು ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದೆ.&lt;/p&gt;&lt;p&gt;ಅವರ ಬಳಿ ದೊಡ್ಡ ಪ್ರಮಾಣದ ಹಣ ಇರುವ ಮಾಹಿತಿ ಸಂಗ್ರಹಿಸಿದ್ದ ಸೈಬರ್ ವಂಚಕರು, ಸಿಬಿಐ ಮತ್ತು ಇ.ಡಿ. ಅಧಿಕಾರಿಗಳ ಸೋಗಿನಲ್ಲಿ ವಿಡಿಯೋ ಕರೆ ಮಾಡಿ ಬೆದರಿಸಿದ್ದಾರೆ.&lt;/p&gt;&lt;p&gt;ಸಯಮ ಪ್ರಜ್ಞೆ ಮೆರೆದ ಬ್ಯಾಂಕ್&zwnj;ನವರು:&lt;/p&gt;&lt;p&gt;&lsquo;ನಿಮ್ಮನ್ನು ತನಿಖೆಗೆ ಒಳಪಡಿಸಲಾಗುತ್ತಿದೆ. ಯಾರ ಜತೆಯೂ ಮಾತನಾಡಬಾರದು. ಖಾತೆಯಲ್ಲಿರುವ ಹಣವನ್ನು ಪರಿಶೀಲನೆಗಾಗಿ ಸರ್ಕಾರದ ಖಾತೆಗೆ ವರ್ಗಾವಣೆ ಮಾಡಬೇಕು&rsquo; ಎಂದು ಆರೋಪಿಗಳು ಬೆದರಿಸಿದ್ದಾರೆ. ಹೀಗೆ ಬೆದರಿಕೆ ಹಾಕಿ ಎರಡೂವರೆ ತಿಂಗಳವರೆಗೆ ವೃದ್ಧೆಯ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 24 ಕೋಟಿ ರು. ವರ್ಗಾವಣೆ ಮಾಡಿಕೊಂಡಿದ್ದಾರೆ. ನಂತರ ಮತ್ತಷ್ಟು ಹಣಕ್ಕಾಗಿ ಒತ್ತಡ ಹೇರಿದ ವಂಚಕರು, ಚಿನ್ನಾಭರಣ ಅಡಮಾನ ಇಡುವಂತೆ ಸೂಚಿಸಿದ್ದಾರೆ.&lt;/p&gt;&lt;p&gt;ವಂಚಕರ ಸೂಚಿಸಿದಂತೆ ಮನೆಯಲ್ಲಿದ್ದ 1.3 ಕೆ.ಜಿ. ಚಿನ್ನ ಅಡಮಾನವಿಡಲು ನಗರದ ಕಂಟೋನ್ಮೆಂಟ್&zwnj;ನಲ್ಲಿರುವ ಖಾಸಗಿ ಬ್ಯಾಂಕ್ ಶಾಖೆಗೆ ವೃದ್ಧೆ ತೆರಳಿದ್ದಾರೆ. ಆದರೆ, ಬ್ಯಾಂಕ್&zwnj;ನವರು ಅವರ ಖಾತೆಯಲ್ಲಿ ಕೋಟ್ಯಂತರ ಹಣ ವರ್ಗಾವಣೆಯಾಗಿರುವುದನ್ನು ಹಾಗೂ ದೊಡ್ಡ ಪ್ರಮಾಣದಲ್ಲಿ ಚಿನ್ನಾಭರಣ ತಂದಿರುವುದನ್ನು ಗಮನಿಸಿ ತಕ್ಷಣ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.&lt;/p&gt;&lt;p&gt;ಕೂಡಲೇ ಬ್ಯಾಂಕ್&zwnj;ಗೆ ಬಂದ ಅಧಿಕಾರಿಗಳು, ವೃದ್ಧೆಯನ್ನು ಪ್ರಶ್ನಿಸಿದ್ದಾರೆ. ಆರಂಭದಲ್ಲಿ ಆಕೆ ಮಾಹಿತಿ ನೀಡಲು ನಿರಾಕರಿಸಿದರು. ಬಳಿಕ ಆಕೆ ಮನವೊಲಿಸಿ ವಿಚಾರಿಸಿದಾಗ ಘಟನೆ ವಿವರಿಸಿದ್ದಾರೆ. ಕೂಡಲೇ ಆಕೆಯಿಂದ ದೂರು ಪಡೆದು ಎಫ್&zwnj;ಐಆರ್&zwnj; ದಾಖಲಿಸಿಕೊಂಡು ತನಿಖೆ ಆರಂಭಿಸಿ, ಎನ್&zwnj;ಸಿಆರ್&zwnj;ಪಿ ಪೋರ್ಟಲ್&zwnj; ಸಹಾಯದಿಂದ ನಕಲಿ ಖಾತೆಗಳನ್ನು ಜಪ್ತಿ ಮಾಡಲಾಗಿದೆ. ಬಳಿಕ ಟವರ್ ಲೊಕೇಷನ್&zwnj; ಆಧಾರದ ಮೇಲೆ ಆರೋಪಿಗಳನ್ನು ಬಂಧಿಸುವಲ್ಲಿ ಸೈಬರ್ ಕಮಾಂಡ್ ಸೆಂಟರ್&zwnj; ಮತ್ತು ಸಿಸಿಬಿ ತಂಡ ಯಶಸ್ವಿಯಾಗಿದೆ.&lt;/p&gt;&lt;p&gt;ಸೈಬರ್ ಕಮಾಂಡ್&zwnj; ಸೆಂಟರ್&zwnj;ನ ಡಿಜಿಪಿ ಪ್ರಣವ್&zwnj; ಮೊಹಂತಿ ಮಾರ್ಗದರ್ಶನದಲ್ಲಿ ಡಿಐಜಿಪಿ ಎಚ್&zwnj;.ಡಿ.ಆನಂದ್ ಕುಮಾರ್&zwnj; ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.&lt;/p&gt;&lt;p&gt;ಹಿಂದೆ 19 ಕೋಟಿ ರು. ವಂಚನೆ ಪ್ರಕರಣ&lt;/p&gt;&lt;p&gt;ಈ ಹಿಂದೆ ನಗರದ ಉದ್ಯಮಿಯೊಬ್ಬರಿಗೆ ಅಧಿಕ ಲಾಭಾಂಶ ನೀಡುವುದಾಗಿ ಹೇಳಿ ಹೂಡಿಕೆ ನೆಪದಲ್ಲಿ 19 ಕೋಟಿ ರು. ವರ್ಗಾವಣೆ ಮಾಡಿಕೊಂಡು ವಂಚಿಸಲಾಗಿತ್ತು. ಇದೀಗ ವೃದ್ಧೆಯೊಬ್ಬರಿಗೆ ಬರೋಬ್ಬರಿ 24 ಕೋಟಿ ರು. ವಂಚಿಸಿರುವುದು ರಾಜ್ಯದಲ್ಲೇ ನಡೆದಿರುವ ದೊಡ್ಡ ಮೊತ್ತದ ಸೈಬರ್&zwnj; ವಂಚನೆ ಪ್ರಕರಣ ಆಗಿದೆ.&lt;/p&gt;&lt;p&gt;ಸೈಬರ್&zwnj; ಪ್ರಕರಣಗಳು ಹೆಚ್ಚಾಗಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ನಗರದ ಬ್ಯಾಂಕ್&zwnj; ಅಧಿಕಾರಿಗಳ ಸಭೆ ನಡೆಸಿ ದೊಡ್ಡ ಮೊತ್ತದ ಹಣ ವರ್ಗಾವಣೆ ಮತ್ತು ಚಿನ್ನಾಭರಣಗಳ ವಹಿವಾಟು ನಡೆದ್ದಾಗ ಮಾಹಿತಿ ನೀಡುವಂತೆ ಸೂಚಿಸಲಾಗಿತ್ತು. ಅದರಂತೆ ಬ್ಯಾಂಕ್&zwnj;ನವರು ನಮಗೆ ಮಾಹಿತಿ ನೀಡಿದ್ದು, ಕಾರ್ಯಾಚರಣೆ ನಡೆಸಲು ಸಹಕಾರಿಯಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಸತತ ಸುಲಿಗೆ&lt;/p&gt;&lt;p&gt;- ನಿವೃತ್ತಿಯಿಂದ ಬಂದ ಹಣ, ಆಸ್ತಿ ಮಾರಾಟದಿಂದ ಸಿಕ್ಕ ಹಣವನ್ನು ಖಾತೆಯಲ್ಲಿಟ್ಟಿದ್ದ ವೃದ್ಧೆ&lt;/p&gt;&lt;p&gt;- ಫೆ.10ರಂದು ಕರೆ ಮಾಡಿದ್ದ ವಂಚಕರು. ಅಂದಿನಿಂದ ಈವರೆಗೆ 24 ಕೋಟಿ ರು. ಲೂಟಿ&lt;/p&gt;&lt;p&gt;- ಮನೆಯಲ್ಲಿರುವ ಚಿನ್ನಾಭರಣ ಅಡಮಾನವಿಟ್ಟು ಹಣ ನೀಡುವಂತೆ ಒಂಟಿ ವೃದ್ಧೆಗೆ ಕಿರುಕುಳ&lt;/p&gt;&lt;p&gt;- 1.3 ಕೆ.ಜಿ. ಚಿನ್ನದೊಂದಿಗೆ ಬಂದ ವೃದ್ಧೆ ಮೇಲೆ ಬ್ಯಾಂಕ್&zwnj;ನವರಿಗೆ ಶಂಕೆ. ಪೊಲೀಸರಿಗೆ ಮಾಹಿತಿ&lt;/p&gt;&lt;p&gt;- ಪೊಲೀಸರ ವಿಚಾರಣೆ ವೇಳೆ ರಾಜ್ಯದ ಅತಿದೊಡ್ಡ ಡಿಜಿಟಲ್&zwnj; ವಂಚನೆಯಾಗಿರುವುದು ಬೆಳಕಿಗೆ&lt;/p&gt;]]></content:encoded>
            <category>crime</category>
            <dc:creator>Sujatha NR</dc:creator>
            <atom:link href="https://www.kannadaprabha.in/crime-news/massive-cyber-extortion-racket-in-bengaluru-states-biggest-digital-arrest/articleshow-obe0eku"/>
        </item>
        <item>
            <title><![CDATA[ಬೆಂಗಳೂರು ವೃದ್ಧೆ ಡಿಜಿಟಲ್‌ ಅರೆಸ್ಟ್‌ ಕೇಸ್‌: ಬೆಳಗಾವಿಯಲ್ಲೂ ಆರೋಪಿಗಳಿಂದ ವಂಚನೆ]]></title>
            <link>https://www.kannadaprabha.in/crime-news/bengaluru-old-woman-digital-arrest-case-accused-cheated-in-belgaum-too/articleshow-uc4byku</link>
            <guid isPermaLink="true">https://www.kannadaprabha.in/crime-news/bengaluru-old-woman-digital-arrest-case-accused-cheated-in-belgaum-too/articleshow-uc4byku</guid>
            <pubDate>Tue, 26 May 2026 04:47:18 +0530</pubDate>
            <description><![CDATA[ವೃದ್ಧೆಗೆ ಡಿಜಿಟಲ್&zwnj; ಅರೆಸ್ಟ್&zwnj; ಮಾಡಿ ಬರೋಬ್ಬರಿ 24 ಕೋಟಿ ರು. ವರ್ಗಾಯಿಸಿಕೊಂಡು ವಂಚಿಸಿದ ಪ್ರಕರಣದಲ್ಲಿ ಸೈಬರ್&zwnj; ಕಮಾಂಡ್&zwnj; ಸೆಂಟರ್&zwnj; ಪೊಲೀಸರಿಂದ ಬಂಧನಕ್ಕೊಳಗಾಗಿರುವ ಆರೋಪಿಗಳು ಇದೇ ರೀತಿ ಹಲವು ಸೈಬರ್&zwnj; ವಂಚನೆ ಪ್ರಕರಣಗಳಲ್ಲಿಯೂ ಭಾಗಿಯಾಗಿರುವುದು ಪೊಲೀಸರ ತನಿಖೆಯ ವೇಳೆ ಪತ್ತೆಯಾಗಿದೆ.]]></description>
            <media:content url="https://static-gi.asianetnews.com/images/01kscc9g6xpz1bn0ewb280nakz/karnataka-biggest-digital-arrest-1779605749981.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಬೆಂಗಳೂರು : &amp;nbsp;&lt;/strong&gt;ವೃದ್ಧೆಗೆ ಡಿಜಿಟಲ್&zwnj; ಅರೆಸ್ಟ್&zwnj; ಮಾಡಿ ಬರೋಬ್ಬರಿ 24 ಕೋಟಿ ರು. ವರ್ಗಾಯಿಸಿಕೊಂಡು ವಂಚಿಸಿದ ಪ್ರಕರಣದಲ್ಲಿ ಸೈಬರ್&zwnj; ಕಮಾಂಡ್&zwnj; ಸೆಂಟರ್&zwnj; ಪೊಲೀಸರಿಂದ ಬಂಧನಕ್ಕೊಳಗಾಗಿರುವ ಆರೋಪಿಗಳು ಇದೇ ರೀತಿ ಹಲವು ಸೈಬರ್&zwnj; ವಂಚನೆ ಪ್ರಕರಣಗಳಲ್ಲಿಯೂ ಭಾಗಿಯಾಗಿರುವುದು ಪೊಲೀಸರ ತನಿಖೆಯ ವೇಳೆ ಪತ್ತೆಯಾಗಿದೆ.&lt;/p&gt;&lt;p&gt;ಶಿವಾಜಿನಗರ ನಿವಾಸಿ ಲಕ್ಷ್ಮೀ ರಾಮಮೂರ್ತಿ (74) ಎಂಬುವರಿಗೆ ಸೈಬರ್&zwnj; ಕ್ರೈಂ ಮಾಡಿ ವಂಚಿಸಿದ್ದ ಆರೋಪದ ಮೇಲೆ ತಮಿಳುನಾಡು ಮೂಲದ ಎನ್&zwnj;.ಶಿವಗ್ನಾನಂ, ಮುಂಬೈನ ಅಕ್ಕಚ್&zwnj; ಮಲ್ಲಿಕ್&zwnj;, ಅಹಮದಾಬಾದ್ ಮೂಲದ ಪಲಕ್&zwnj; ಭಾಯಿ ಪಟೇಲ್, ಅಮಿತ್ ನರೇಂದ್ರ ಪಟೇಲ್, ಬಿಹಾರದ ಗೌರವ್ ಕುಮಾರ್ ಮತ್ತು ದೆಹಲಿಯ ಓಂ ಪ್ರಕಾಶ್ ರಜಪೂತ್&zwnj;ನನ್ನು ಬಂಧಿಸಲಾಗಿತ್ತು.&lt;/p&gt;&lt;h2&gt;&lt;strong&gt;24 ಕೋಟಿ ರು. ವಂಚಿಸಿದ್ದರು:&lt;/strong&gt;&lt;/h2&gt;&lt;p&gt;2026ರ ಫೆ.10ರಿಂದ ಏ.24ರವರೆಗೆ ಲಕ್ಷ್ಮೀ ರಾಮಮೂರ್ತಿ ಅವರನ್ನು ಡಿಜಿಟಲ್&zwnj; ಅರೆಸ್ಟ್&zwnj; ಮಾಡಿ 24 ಕೋಟಿ ರು. ಸುಲಿಗೆ ಮಾಡಿದ್ದರು. ಬಂಧಿತ ಆರೋಪಿಗಳ ಖಾತೆಯಲ್ಲಿದ್ದ 4 ಕೋಟಿ ರು.ಫ್ರೀಜ್ ಮಾಡಲಾಗಿತ್ತು. ನಂತರ ಕೋರ್ಟ್&zwnj; ಆದೇಶದ ಮೇರೆಗೆ 1.45 ಕೋಟಿ ರು.ವಾಪಸ್ ಪಡೆಯಲಾಗಿತ್ತು. ಇದೀಗ ಆರೋಪಿಗಳಿಂದ ಮತ್ತೆ 1.46 ಕೋಟಿ ಹಣವನ್ನು ವಶಪಡಿಸಿಕೊಳ್ಳುವುದರಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.&lt;/p&gt;&lt;h3&gt;&lt;strong&gt;ವಿವರಗಳನ್ನು ಬೆಳಗಾವಿ ಸೈಬರ್&zwnj; ಕ್ರೈಂ ಪೊಲೀಸರಿಗೆ ತಿಳಿಸಲಾಗಿದೆ&lt;/strong&gt;&lt;/h3&gt;&lt;p&gt;ಬಂಧಿತ ಆರೋಪಿಗಳ ಪೈಕಿ ಗುಜರಾತ್&zwnj; ಮೂಲದ ಪಲಕ್&zwnj; ಭಾಯಿ ಪಟೇಲ್&zwnj; ಮತ್ತು ಅಮೀತ್&zwnj; ನರೇಂದ್ರ ಪಾಟೀಲ್&zwnj;, ಬೆಳಗಾವಿ ನಗರದ ಸೈಬರ್&zwnj; ಕ್ರೈಂ ಪೊಲೀಸ್&zwnj; ಸ್ಟೇಷನ್&zwnj; ವ್ಯಾಪ್ತಿಯಲ್ಲಿ (ಸಿಸಿಪಿಎಸ್&zwnj;) ನಡೆದಿದ್ದ 15 ಕೋಟಿಯ &lsquo;ಡಿಜಿಟಲ್ ಅರೆಸ್ಟ್&rsquo; ವಂಚನೆ ಪ್ರಕರಣದಲ್ಲೂ ಭಾಗಿಯಾಗಿರುವುದು ಪೊಲೀಸರ ತನಿಖೆ ವೇಳೆ ಪತ್ತೆಯಾಗಿದೆ. ಈ ಆರೋಪಿಗಳ ವಿವರಗಳನ್ನು ಬೆಳಗಾವಿ ಸೈಬರ್&zwnj; ಕ್ರೈಂ ಪೊಲೀಸರಿಗೆ ತಿಳಿಸಲಾಗಿದ್ದು, ಅವರು ಬಾಡಿ ವಾರಂಟ್ ಮೇಲೆ ಆರೋಪಿಗಳನ್ನು ಪಡೆದುಕೊಂಡಿದ್ದು, ಸದ್ಯ ಆರೋಪಿಗಳು ಬೆಳಗಾವಿ ಸೈಬರ್&zwnj; ಕ್ರೈಂ ಪೊಲೀಸರ ವಶದಲ್ಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಇನ್ನು ತಮಿಳುನಾಡಿನ ಈರೋಡ್&zwnj; ಮೂಲದ ಆರೋಪಿಯಾದ ಎನ್&zwnj;.ಶಿವಗ್ನಾನಂ ಕೂಡ 4 ಸೈಬರ್ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಹಾಗೆಯೇ ಮುಂಬೈ ಮೂಲದ ಆರೋಪಿ ಅಚ್ಚಕ್&zwnj; ಮಲ್ಲಿಕ್&zwnj; ಕೂಡ 3 ಸೈಬರ್ ವಂಚನೆ ಕೇಸಲ್ಲಿ ಭಾಗಿ ಆಗಿರುವುದು ತಿಳಿದುಬಂದಿದೆ. ಆರೋಪಿಗಳಿಂದ 1.46 ಕೋಟಿ ರು. ಹೆಚ್ಚುವರಿ ಹಣವನ್ನು ವಶಪಡಿಸಿಕೊಳ್ಳುವುದರ ಜತೆಗೆ, ಇನ್ನೂ 1.40 ಕೋಟಿ ರು. ವಶಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/bengaluru-old-woman-digital-arrest-case-accused-cheated-in-belgaum-too/articleshow-uc4byku"/>
        </item>
        <item>
            <title><![CDATA[ಅರ್ಜಿ ಹಾಕಿದವರಿಗೆ ಮನೆ ಕೊಡುವಂತೆ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಅರ್ಜಿದಾರರ ಒತ್ತಾಯ]]></title>
            <link>https://www.kannadaprabha.in/crime-news/applicants-urge-rajiv-gandhi-housing-corporation-to-provide-houses-to-those-who-have-applied/articleshow-uu8v4kd</link>
            <guid isPermaLink="true">https://www.kannadaprabha.in/crime-news/applicants-urge-rajiv-gandhi-housing-corporation-to-provide-houses-to-those-who-have-applied/articleshow-uu8v4kd</guid>
            <pubDate>Tue, 26 May 2026 04:50:58 +0530</pubDate>
            <description><![CDATA[&lt;p&gt;ಮುಖ್ಯಮಂತ್ರಿ ಅವರ 1 ಲಕ್ಷ ಮನೆ ಯೋಜನೆಯಡಿ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸುತ್ತಿರುವ ಫ್ಲ್ಯಾಟ್&zwnj;ಗಳ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ ಹಸ್ತಾಂತರಿಸುವಂತೆ ಅರ್ಜಿದಾರರು ಒತ್ತಾಯಿಸಿದ್ದಾರೆ. ನಿಗಮದ ಕಚೇರಿಗೆ ಭೇಟಿ ನೀಡಿದ 50ಕ್ಕೂ ಹೆಚ್ಚು ಅರ್ಜಿದಾರರು ಮನವಿ ಮಾಡಿದರು.&lt;/p&gt;]]></description>
            <media:content url="https://static-gi.asianetnews.com/images/01gh85kzsp8gwe2wgfxv4fmvg8/vidhansoudha.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಬೆಂಗಳೂರು : &amp;nbsp;&lt;/strong&gt;ಮುಖ್ಯಮಂತ್ರಿ ಅವರ 1 ಲಕ್ಷ ಮನೆ ಯೋಜನೆಯಡಿ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸುತ್ತಿರುವ ಫ್ಲ್ಯಾಟ್&zwnj;ಗಳ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ ಹಸ್ತಾಂತರಿಸುವಂತೆ ಅರ್ಜಿದಾರರು ಒತ್ತಾಯಿಸಿದ್ದಾರೆ. ಸೋಮವಾರ ನಿಗಮದ ಕಚೇರಿಗೆ ಭೇಟಿ ನೀಡಿದ 50ಕ್ಕೂ ಹೆಚ್ಚು ಅರ್ಜಿದಾರರು, ವ್ಯವಸ್ಥಾಪಕ ನಿರ್ದೇಶಕ ಪರಶುರಾಮ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.&lt;/p&gt;&lt;p&gt;ಫ್ಲ್ಯಾಟ್&zwnj;ಗಾಗಿ ಆರಂಭಿಕ ಠೇವಣಿ 1 ಲಕ್ಷ ರು.ಗಳನ್ನು 5 ವರ್ಷಗಳ ಹಿಂದೆಯೇ ಪಾವತಿ ಮಾಡಲಾಗಿದೆ. ಆದರೆ, ಈವರೆಗೂ ಫ್ಲ್ಯಾಟ್&zwnj;ಗಳ ಹಸ್ತಾಂತರ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಅರ್ಜಿದಾರರು ಅಸಮಾಧಾನ ವ್ಯಕ್ತಪಡಿಸಿದರು.&lt;/p&gt;&lt;h2&gt;ಚಿಕ್ಕಬಾಣವರ ಬಳಿ 796 ಮನೆಗಳನ್ನು ನಿರ್ಮಾಣ&lt;/h2&gt;&lt;p&gt;ಚಿಕ್ಕಬಾಣವರ ಬಳಿ 796 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿ ನಿರ್ಮಿಸುತ್ತಿರುವ ಮನೆಗಳಿಗಾಗಿ 500ಕ್ಕೂ ಹೆಚ್ಚು ಜನರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರಿಗೆ ತಾತ್ಕಾಲಿಕ ಮನೆ ಹಂಚಿಕೆ ಪತ್ರವನ್ನು ನೀಡಲಾಗಿದೆ. ಆದರೆ, ಫ್ಲ್ಯಾಟ್ ನಿರ್ಮಾಣ ಕಾಮಗಾರಿ ಮುಗಿದಿಲ್ಲ. ಕಳೆದ 6 ವರ್ಷಗಳಿಂದ ನಿಧಾನಗತಿಯಲ್ಲಿ ಕಾಮಗಾರಿ ಸಾಗಿದೆ ಎಂದು ಅರ್ಜಿದಾರರು ಅಸಮಾಧಾನ ವ್ಯಕ್ತಪಡಿಸಿದರು.&lt;/p&gt;&lt;p&gt;ಹಣಕಾಸು ಮತ್ತು ಕೆಲವು ತಾಂತ್ರಿಕ ಕಾರಣಗಳಿಂದ ಯೋಜನೆ ವಿಳಂಬವಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಮತ್ತೊಂದೆಡೆ ಸಾಲ ಸೌಲಭ್ಯ ನೀಡಲು ಬ್ಯಾಂಕಿನವರು ನಮ್ಮಿಂದ ವೇತನ ಚೀಟಿ ಕೇಳುತ್ತಿದ್ದಾರೆ. ಅರ್ಜಿ ಸಲ್ಲಿಸಿದ ಬಹುತೇಕರು ಕೂಲಿ ಕೆಲಸ ಮಾಡುವವರಾಗಿದ್ದಾರೆ. ಹೀಗಾಗಿ, ವೇತನ ಚೀಟಿ ಎಲ್ಲಿಂದ ತರುವುದು ಎಂದು ಅರ್ಜಿದಾರರು ಅಳಲು ತೋಡಿಕೊಂಡರು.&lt;/p&gt;&lt;h2&gt;&lt;strong&gt;ಬೇಗ ಪೂರ್ಣಗೊಳಿಸುವ ಭರವಸೆ:&lt;/strong&gt;&lt;/h2&gt;&lt;p&gt;ಮನವಿ ಸ್ವೀಕರಿಸಿದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪರಶುರಾಮ ಅವರು ಬಾಕಿ ಕೆಲಸಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಫ್ಲ್ಯಾಟ್&zwnj;ಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗುತ್ತದೆ ಎಂದು ಭರವಸೆ ನೀಡಿದರು.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/applicants-urge-rajiv-gandhi-housing-corporation-to-provide-houses-to-those-who-have-applied/articleshow-uu8v4kd"/>
        </item>
        <item>
            <title><![CDATA[ಡಗ್ಸ್‌ ಕೇಸಲ್ಲಿ ನೈಜೀರಿಯಾ ಪ್ರಜೆಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌]]></title>
            <link>https://www.kannadaprabha.in/crime-news/high-court-denies-bail-to-nigerian-national-in-dougs-case/articleshow-v2ih9bc</link>
            <guid isPermaLink="true">https://www.kannadaprabha.in/crime-news/high-court-denies-bail-to-nigerian-national-in-dougs-case/articleshow-v2ih9bc</guid>
            <pubDate>Thu, 28 May 2026 05:01:57 +0530</pubDate>
            <description><![CDATA[ಮಾದಕ ವಸ್ತುಗಳೊಂದಿಗೆ ಸಿಕ್ಕಿಬಿದ್ದ ಆರೋಪಿಗೆ ಜಾಮೀನು ನಿರಾಕರಿಸುವುದು ನಿಯಮ ಮತ್ತು ಜಾಮೀನು ಮಂಜೂರಾತಿಯು ಒಂದು ವಿನಾಯಿತಿ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಎಂಡಿಎಂಎ ಮಾದಕ ವಸ್ತು ಸಾಗಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ನೈಜೀರಿಯಾ ಪ್ರಜೆಗೆ ಜಾಮೀನು ನಿರಾಕರಿಸಿದೆ.]]></description>
            <media:content url="https://static-gi.asianetnews.com/images/01k8n4h9682whm9q01h82faa0s/karnataka-high-court-1761645995208.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು : &amp;nbsp;&lt;/strong&gt;ಮಾದಕ ವಸ್ತುಗಳೊಂದಿಗೆ ಸಿಕ್ಕಿಬಿದ್ದ ಆರೋಪಿಗೆ ಜಾಮೀನು ನಿರಾಕರಿಸುವುದು ನಿಯಮ ಮತ್ತು ಜಾಮೀನು ಮಂಜೂರಾತಿಯು ಒಂದು ವಿನಾಯಿತಿ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಎಂಡಿಎಂಎ ಮಾದಕ ವಸ್ತು ಸಾಗಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ನೈಜೀರಿಯಾ ಪ್ರಜೆಗೆ ಜಾಮೀನು ನಿರಾಕರಿಸಿದೆ.&amp;nbsp;&lt;/p&gt;&lt;h2&gt;ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ಪೀಠ ಈ ಆದೇಶ&lt;/h2&gt;&lt;p&gt;ಪ್ರಕರಣ &zwnj;ಸಂಬಂಧ ಜಾಮೀನು ಕೋರಿ ನೈಜೀರಿಯಾದ ಪ್ರಜೆ ಕ್ರಿಶ್ಚಿಯನ್&zwnj; ಸೊಪೋರುಚುಕ್ವು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ಪೀಠ ಈ ಆದೇಶ ನೀಡಿದೆ.ಪ್ರಕರಣದ ದಾಖಲೆಗಳ ಪ್ರಕಾರ&zwnj; ಆರೋಪಿ ಅಕ್ರಮವಾಗಿ ಭಾರತದಲ್ಲಿ ಉಳಿದಿದ್ದು, 1 ಕೆಜಿ ಎಂಡಿಎಂಎ ಸಹಿತ ಸಿಕ್ಕಿಬಿದ್ದಿದ್ದಾನೆ.&amp;nbsp;&lt;/p&gt;&lt;p&gt;ದಾಳಿ ನಡೆಸಿದ ಪೊಲೀಸರು ಆರೋಪಿಯಿಂದ ಮಾದಕ ವಸ್ತುಗಳ ಜೊತೆಗೆ ಮಿನಿ ಎಲೆಕ್ಟ್ರಾನಿಕ್ ತೂಕ ಯಂತ್ರ, ಮೊಬೈಲ್ ಹಾಗೂ ಬೈಕ್&zwnj; ಅನ್ನು ವಶಪಡಿಸಿಕೊಂಡಿದ್ದಾರೆ. ಬಂಧನದ ಕಾರಣಗಳನ್ನು ಸರಿಯಾಗಿ ತಿಳಿಸದಿರುವುದು ಕೆಲ ಪ್ರಕರಣಗಳಲ್ಲಿ ಜಾಮೀನು ನೀಡಲು ಆಧಾರವಾಗಬಹುದು. ಆದರೆ, ಡ್ರಗ್ಸ್ ಪ್ರಕರಣಗಳಲ್ಲಿ ಕೇವಲ ತಾಂತ್ರಿಕ ಲೋಪಗಳ ಆಧಾರದ ಮೇಲೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.&lt;/p&gt;&lt;h3&gt;&lt;strong&gt;ಪ್ರಕರಣದ ಹಿನ್ನೆಲೆ:&lt;/strong&gt;&lt;/h3&gt;&lt;p&gt;ಅರ್ಜಿದಾರ ಕ್ರಿಸ್ಟಿಯನ್ ಬಟ್ಟೆ ವ್ಯಾಪಾರಕ್ಕಾಗಿ ಬಿಸಿನೆಸ್ ವೀಸಾದ ಮೇಲೆ ಭಾರತಕ್ಕೆ ಬಂದಿದ್ದ. ಬಳಿಕ ಗೋವಾ, ದೆಹಲಿ ಮತ್ತು ಮುಂಬೈ ನಗರಗಳಲ್ಲಿ ವಾಸವಾಗಿದ್ದ.&zwnj;ಈ ವೇಳೆ ದಕ್ಷಿಣ ಆಫ್ರಿಕಾ ಮೂಲದ ಡ್ರಗ್ ಪೆಡ್ಲರ್&zwnj;ಗಳ ಪರಿಚಯ ಮಾಡಿಕೊಂಡು ಕಡಿಮೆ ದರದಲ್ಲಿ ಎಂಡಿಎಂಎ ಖರೀದಿಸಿ, ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ/ಬಿಟಿ ಉದ್ಯೋಗಿಗಳಿಗೆ ಪ್ರತಿ ಗ್ರಾಂಗೆ 15 ಸಾವಿರದಿಂದ 20 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ. ಆರೋಪಿಯನ್ನು ಬೇಗೂರು ಪೊಲೀಸರು 1ಕೆಜಿ ಎಂಡಿಎಂಎ ಕ್ರಿಸ್ಟಲ್&zwnj;ಗಳೊಂದಿಗೆ 2025ರ ಏ.6ರಂದು ಬಂಧಿಸಿದ್ದರು. ವಿಚಾರಣಾ ನ್ಯಾಯಾಲಯ ಈತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರಿಂದ ಹೈಕೋರ್ಟ್ ಮೆಟ್ಟಿಲೇರಿದ್ದ.&lt;/p&gt;&lt;p&gt;ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರನ್ನು ಬಂಧಿಸುವುದಕ್ಕೂ ಮುನ್ನ ಬಂಧನಕ್ಕೆ ಸೂಕ್ತ ಕಾರಣಗಳನ್ನು ತಿಳಿಸಿಲ್ಲ. ಆದ್ದರಿಂದ ಅರ್ಜಿದಾರರ ಬಂಧನ ಕಾನೂನುಬಾಹಿರವಾಗಿದ್ದು, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/high-court-denies-bail-to-nigerian-national-in-dougs-case/articleshow-v2ih9bc"/>
        </item>
        <item>
            <title><![CDATA[ಡೇಟಿಂಗ್‌ ಆ್ಯಪಲ್ಲಿ ಚೆಲುವೆ ಬಲೆಗೆ ಬಿದ್ದ ಟೆಕ್ಕಿಗೆ ₹1.6 ಕೋಟಿ ವಂಚನೆ]]></title>
            <link>https://www.kannadaprabha.in/crime-news/techie-cheated-of-1-6-crore-after-falling-for-a-hottie-on-a-dating-app/articleshow-ysz787q</link>
            <guid isPermaLink="true">https://www.kannadaprabha.in/crime-news/techie-cheated-of-1-6-crore-after-falling-for-a-hottie-on-a-dating-app/articleshow-ysz787q</guid>
            <pubDate>Fri, 29 May 2026 03:30:00 +0530</pubDate>
            <description><![CDATA[&lt;p&gt;ಡೇಟಿಂಗ್ ಆ್ಯಪ್&zwnj;ನಲ್ಲಿ &rsquo;ಬೆಳದಿಂಗಳ ಬಾಲೆ&rsquo;ಯೊಬ್ಬಳ ಮಾತಿಗೆ ಮರುಳಾಗಿ ಸಾಫ್ಟ್&zwnj;ವೇರ್ ಉದ್ಯೋಗಿಯೊಬ್ಬ 1.6 ಕೋಟಿ ರು.ಕಳೆದುಕೊಂಡ ಪ್ರಸಂಗ ನಡೆದಿದೆ. ನಗರದ ಎಲೆಕ್ಟ್ರಾನಿಕ್&zwnj; ಸಿಟಿ ನಿವಾಸಿಯಾದ 32 ವರ್ಷದ ಟೆಕ್ಕಿ ಮೋಸ ಹೋಗಿದ್ದು, ಈ ಸಂಬಂಧ ಆತ ನೀಡಿದ ದೂರಿನ ಮೇರೆಗೆ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಅಪರಿಚಿತಳ ವಿರುದ್ಧ ಎಫ್&zwnj;ಐಆರ್ ದಾಖಲಾಗಿದೆ.&lt;/p&gt;]]></description>
            <media:content url="https://static-assets.asianetnews.com/kp/json/28052026/pictures/ONLINE_CRIME_386.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು : &amp;nbsp;&lt;/strong&gt;ಡೇಟಿಂಗ್ ಆ್ಯಪ್&zwnj;ನಲ್ಲಿ &rsquo;ಬೆಳದಿಂಗಳ ಬಾಲೆ&rsquo;ಯೊಬ್ಬಳ ಮಾತಿಗೆ ಮರುಳಾಗಿ ಸಾಫ್ಟ್&zwnj;ವೇರ್ ಉದ್ಯೋಗಿಯೊಬ್ಬ 1.6 ಕೋಟಿ ರು.ಕಳೆದುಕೊಂಡ ಪ್ರಸಂಗ ನಡೆದಿದೆ. ನಗರದ ಎಲೆಕ್ಟ್ರಾನಿಕ್&zwnj; ಸಿಟಿ ನಿವಾಸಿಯಾದ 32 ವರ್ಷದ ಟೆಕ್ಕಿ ಮೋಸ ಹೋಗಿದ್ದು, ಈ ಸಂಬಂಧ ಆತ ನೀಡಿದ ದೂರಿನ ಮೇರೆಗೆ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಅಪರಿಚಿತಳ ವಿರುದ್ಧ ಎಫ್&zwnj;ಐಆರ್ ದಾಖಲಾಗಿದೆ.&lt;/p&gt;&lt;p&gt;ಕೆಲ ತಿಂಗಳ ಹಿಂದೆ ಟೆಕ್ಕಿಗೆ ಡೇಟಿಂಗ್ ಆ್ಯಪ್&zwnj;ನಲ್ಲಿ ರಿಯಾ ಅಗರ್ವಾಲ್ ಎಂಬಾಕೆಯ ಪರಿಚಯವಾಗಿದೆ. ಬಳಿಕ ಚಾಟಿಂಗ್ ನಡೆದು ಕೊನೆಗೆ ಮೊಬೈಲ್ ಸಂಖ್ಯೆಗಳು ಪರಸ್ಪರ ವಿನಿಯಮವಾಗಿವೆ. ಮಾತುಕತೆ ಮುಂದುವರಿದಿದೆ. ಆಗ ತಾನು ಹೇಳಿದಂತೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟ ಲಾಭಗಳಿಸಬಹುದು ಎಂದು ಆಕೆ ಆಮಿಷವೊಡ್ಡಿದ್ದಳು.&lt;/p&gt;&lt;p&gt;ಈ ಸಲಹೆಗೆ ಒಪ್ಪಿದ ಆತ ಮಾಯಾಂಗನೆ ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 1.6 ಕೋಟಿ ರು ಹಣ ವರ್ಗಾವಣೆ ಮಾಡಿದ್ದಾನೆ. ಮೊದಲು ಲಾಭವೆಂದು 4 ಸಾವಿರ ರು.ಮಾತ್ರ ಕೊಟ್ಟ ಆಕೆ, ಕೊನೆಗೆ ಟೆಕ್ಕಿಗೆ ಸೋಡಾ ಚೀಟಿ ನೀಡಿದ್ದಾಳೆ. ಹಣ ಸಂದಾಯವಾದ ಬಳಿಕ ಆಕೆ ವರಸೆ ಬದಲಾಗಿದೆ. ಆಗ ತನ್ನ ಹಣ ಮರಳಿಸುವಂತೆ ಸಂತ್ರಸ್ತ ಕೇಳುತ್ತಿದ್ದಂತೆ ಆ ಸುಂದರಿ ನಾಪತ್ತೆ ಆಗಿದ್ದಾಳೆ. ಅಂತಿಮವಾಗಿ ಟೆಕ್ಕಿಗೆ ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಬಳಿಕ ಸೈಬರ್ ಕ್ರೈಂ ಠಾಣೆಗೆ ಆತ ದೂರು ನೀಡಿದ್ದಾನೆ ಎಂದು ತಿಳಿದು ಬಂದಿದೆ.&lt;/p&gt;&lt;h2&gt;&lt;strong&gt;ಡೇಟಿಂಗ್&zwnj; ಆ್ಯಪ್&zwnj;ನಲ್ಲಿ ಸುಂದರಿ ಬಲೆಗೆ ಬಿದ್ದ ಎಲೆಕ್ಟ್ರಾನಿಕ್&zwnj; ಸಿಟಿ ನಿವಾಸಿ 32 ವರ್ಷದ ಟೆಕ್ಕಿ&lt;/strong&gt;&lt;/h2&gt;&lt;h3&gt;&lt;strong&gt;ರಿಯಾ ಅಗರ್ವಾಲ್ ಎಂಬಾಕೆಯ ಜೊತೆ ಮಾತುಕತೆ ಬಳಿಕ ಮೊಬೈಲ್&zwnj; ಸಂಖ್ಯೆ ವಿನಿಮಯ&lt;/strong&gt;&lt;/h3&gt;&lt;p&gt;&lt;strong&gt;ಟೆಕ್ಕಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭಗಳಿಸುವ ಆಮಿಷವೊಡ್ಡಿದ ವಂಚಕಿ&lt;/strong&gt;&lt;/p&gt;&lt;p&gt;&lt;strong&gt;ಸುಂದರಿಯ ಮಾತು ಕೇಳಿ 1.6 ಕೋಟಿ ರು. ವರ್ಗಾವಣೆ ಮಾಡಿ ಮೋಸ ಹೋದ ಎಂಜಿನಿಯರ್&zwnj;&lt;/strong&gt;&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/techie-cheated-of-1-6-crore-after-falling-for-a-hottie-on-a-dating-app/articleshow-ysz787q"/>
        </item>
    </channel>
</rss>
