<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Kannada Prabha</title>
        <link>https://www.kannadaprabha.in</link>
        <description><![CDATA[Kannada Prabha - No.1 News channel in Karnataka, which delivers Local and International news in Marathi language.]]></description>
        <image>
            <url>https://static-assets.asianetnews.com/images/ogimages/OG_Bangla.jpg</url>
            <width>143</width>
            <height>100</height>
            <link>https://www.kannadaprabha.in</link>
            <title>Kannada Prabha</title>
        </image>
        <lastBuildDate>Sun, 19 Jul 2026 02:45:07 +0530</lastBuildDate>
        <atom:link href="https://www.kannadaprabha.in/rss/crime-news" rel="self" type="application/rss+xml"/>
        <item>
            <title><![CDATA[12 ವರ್ಷದ ಪೋಕ್ಸೋ ಕೇಸ್‌ ವಿಚಾರಣೆ 2 ತಿಂಗಳಲ್ಲಿ ಪೂರ್ಣಗೊಳಿಸಿ: ಹೈಕೋರ್ಟ್‌]]></title>
            <link>https://www.kannadaprabha.in/crime-news/complete-trial-of-12-year-old-pocso-case-within-2-months-high-court/articleshow-1x7kuf1</link>
            <guid isPermaLink="true">https://www.kannadaprabha.in/crime-news/complete-trial-of-12-year-old-pocso-case-within-2-months-high-court/articleshow-1x7kuf1</guid>
            <pubDate>Tue, 14 Jul 2026 04:29:30 +0530</pubDate>
            <description><![CDATA[ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ನಗರದ ಪ್ರತಿಷ್ಠಿತ ಖಾಸಗಿ ಶಾಲೆಯೊಂದರಲ್ಲಿ 2014ರಲ್ಲಿ ನಡೆದಿದ್ದ 6 ವರ್ಷದ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಈಗಲೂ ವಿಚಾರಣೆಯ ಹಂತದಲ್ಲಿರುವುದಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿರುವ ಹೈಕೋರ್ಟ್, ಪ್ರಕರಣದ ವಿಚಾರಣೆಯನ್ನು 8 ವಾರದಲ್ಲಿ ಪೂರ್ಣಗೊಳಿಸಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ(ಪೋಕ್ಸೋ ವಿಶೇಷ ಕೋರ್ಟ್) ನಿರ್ದೇಶಿಸಿದೆ.]]></description>
            <media:content url="https://static-gi.asianetnews.com/images/01ktn8g40cfn90np10t5g1zgyr/----------------------2026-06-09t090917.634-1780977504268.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು : &lt;/strong&gt;ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ನಗರದ ಪ್ರತಿಷ್ಠಿತ ಖಾಸಗಿ ಶಾಲೆಯೊಂದರಲ್ಲಿ 2014ರಲ್ಲಿ ನಡೆದಿದ್ದ 6 ವರ್ಷದ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಈಗಲೂ ವಿಚಾರಣೆಯ ಹಂತದಲ್ಲಿರುವುದಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿರುವ ಹೈಕೋರ್ಟ್, ಪ್ರಕರಣದ ವಿಚಾರಣೆಯನ್ನು 8 ವಾರದಲ್ಲಿ ಪೂರ್ಣಗೊಳಿಸಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ(ಪೋಕ್ಸೋ ವಿಶೇಷ ಕೋರ್ಟ್) ನಿರ್ದೇಶಿಸಿದೆ.&lt;/p&gt;&lt;p&gt;ಪ್ರಕರಣದ ವಿಚಾರಣೆಯನ್ನು&zwnj; ತ್ವರಿತವಾಗಿ ಪೂರ್ಣಗೊಳಿಸಲು ವಿಶೇಷ ನ್ಯಾಯಾಲಯಕ್ಕೆ ನಿರ್ದೇಶಿಸುವಂತೆ ಕೋರಿ ಸಂತ್ರಸ್ತ ಬಾಲಕಿಯ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ&zwnj; ಪೀಠ ಈ ನಿರ್ದೇಶನ ನೀಡಿದೆ. 2014ರಲ್ಲಿ ನಡೆದ ಪ್ರಕರಣವು&zwnj; ಇನ್ನೂ ವಿಚಾರಣಾ ಹಂತದಲ್ಲಿಯೇ ಇದೆ. ಇಷ್ಟು ವರ್ಷಗಳ ಕಾಲ ಒಂದಿಲ್ಲೊಂದು ನೆಪದಲ್ಲಿ ಅನಗತ್ಯ ಮುಂದೂಡಿಕೆಗೆ ಒಳಗಾಗಿರುವುದನ್ನು ಒಪ್ಪಲಾಗದು. ಮುಗ್ಧ ಬಾಲಕಿಯೊಬ್ಬಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಕೋರ್ಟ್&zwnj;ನಲ್ಲಿ ಸುದೀರ್ಘ 12 ವರ್ಷಗಳ ಕಾಲ ಬಾಕಿ ಉಳಿದಿದೆ ಎಂಬ ಆಘಾತಕಾರಿ ಸಂಗತಿಗಿಂತಲೂ ಮತ್ತೊಂದಿಲ್ಲ. ಇದು ಹೈಕೋರ್ಟ್&zwnj; ಮನಸಾಕ್ಷಿಯನ್ನೇ ಬೆಚ್ಚಿಬೀಳಿಸುವಂತಿದೆ ಎಂದು&zwnj;&zwnj; ಪೀಠ ಕಟುವಾಗಿ ನುಡಿದಿದೆ.&lt;/p&gt;&lt;h3&gt;ಅನಗತ್ಯ ಮುಂದೂಡಿಕೆ ಮೂಲ ಗಾಯವನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ&lt;/h3&gt;&lt;p&gt;ಲೈಂಗಿಕ ದೌರ್ಜನ್ಯದಡಿ ಅವಮಾನಕ್ಕೆ ಒಳಗಾದ ಮಗುವನ್ನು ವಿಚಾರಣೆಯ ಭರದಲ್ಲಿ ಪದೇ ಪದೇ ಆಘಾತ ಅನುಭವಿಸುವಂತಹ ಸ್ಥಿತಿಗೆ ನೂಕುವುದು ಅನ್ಯಾಯ.&zwnj; ಪ್ರತಿಯೊಂದು ಅನಗತ್ಯ ಮುಂದೂಡಿಕೆ ಮೂಲ ಗಾಯವನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ ಹಾಗಾಗಿ, ಪ್ರಕರಣದ ವಿಚಾರಣೆಯನ್ನು ವಿಶೇಷ ನ್ಯಾಯಾಲಯವು ಎಂಟು ವಾರದಲ್ಲಿ ಪೂರ್ಣಗೊಳಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.&lt;/p&gt;&lt;h2&gt;&lt;strong&gt;ಶಾಲೆಯಲ್ಲೇ ಅತ್ಯಾಚಾರ:&lt;/strong&gt;&lt;/h2&gt;&lt;p&gt;6 ವರ್ಷದ ಬಾಲಕಿಯ ಮೇಲೆ 2014ರ ಜು.14ರಂದು ಅತ್ಯಾಚಾರ ನಡೆದಿದೆ ಎಂಬ ಆರೋಪದಡಿ ಪೊಲೀಸರು ನಗರದ ಶಾಲೆಯ ಇಬ್ಬರು ಜಿಮ್ನಾಸ್ಟಿಕ್ಸ್ ತರಬೇತುದಾರರನ್ನು ಬಂಧಿಸಿದ್ದರು. ಜಿಮ್ನಾಸ್ಟಿಕ್ಸ್ ಕ್ಲಾಸ್ ಮುಗಿದ ನಂತರ ಬಾಲಕಿಯನ್ನು ಕೊಠಡಿಯಲ್ಲೇ ಉಳಿಸಿಕೊಂಡು ಇಬ್ಬರೂ ಅತ್ಯಾಚಾರ ಎಸಗಿರುವುದು ತನಿಖೆಯಿಂದ ದೃಢಪಟ್ಟಿತ್ತು. ಪೊಲೀಸರು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಘಟನೆ ನಡೆದು 12 ವರ್ಷಗಳಾದರೂ ವಿಶೇಷ ನ್ಯಾಯಾಲಯ ವಿಚಾರಣೆಯನ್ನು ಪೂರ್ಣಗೊಳಿಸಿರಲಿಲ್ಲ.&zwnj; ಮತ್ತೊಂದೆಡೆ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಹಾಗಾಗಿ, ತ್ವರಿತಗತಿ ವಿಚಾರಣೆಗೆ ನಿರ್ದೇಶಿಸಬೇಕು ಎಂದು ಕೋರಿ ಸಂತ್ರಸ್ತೆಯ ತಂದೆ ಹೈಕೋರ್ಟ್ ಗೆ ಮನವಿ ಮಾಡಿದ್ದರು.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/complete-trial-of-12-year-old-pocso-case-within-2-months-high-court/articleshow-1x7kuf1"/>
        </item>
        <item>
            <title><![CDATA[ಸ್ತ್ರೀಯರ ಒಳ ಉಡುಪು ಕದ್ದು ಮತ್ತೆ ಇಟ್ಟು ಹೊಸ ಬಟ್ಟೆಗಳನ್ನು ಕದಿಯುತ್ತಿದ್ದವ ದುರುಳ ಬಂಧನ]]></title>
            <link>https://www.kannadaprabha.in/crime-news/arrest-of-a-miscreant-who-used-to-steal-women-s-innerwear-return-it-and-then-steal-new-clothes/articleshow-3dfba30</link>
            <guid isPermaLink="true">https://www.kannadaprabha.in/crime-news/arrest-of-a-miscreant-who-used-to-steal-women-s-innerwear-return-it-and-then-steal-new-clothes/articleshow-3dfba30</guid>
            <pubDate>Thu, 16 Jul 2026 04:45:00 +0530</pubDate>
            <description><![CDATA[ಮನೆ ಹೊರಗೆ ಒಣ ಹಾಕುತ್ತಿದ್ದ ಒಳ ಉಡುಪುಗಳನ್ನು ರಾತ್ರಿ ಕಳವು ಮಾಡುತ್ತಿದ್ದ ಕಿಡಿಗೇಡಿಯೊಬ್ಬನನ್ನು ಇಬ್ಬರು ಯುವತಿಯರು ಪತ್ತೆ ಹಚ್ಚಿ ಇಂದಿರಾನಗರ ಠಾಣೆ ಪೊಲೀಸರಿಗೆ ಹಿಡಿದು ಕೊಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.]]></description>
            <media:content url="https://static-gi.asianetnews.com/images/01kc6sk4zt9wck0h60gv0keg0k/kannada-prabha-1765459727354.jpeg" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ಬೆಂಗಳೂರು&lt;/p&gt;ಮನೆ ಹೊರಗೆ ಒಣ ಹಾಕುತ್ತಿದ್ದ ಒಳ ಉಡುಪುಗಳನ್ನು ರಾತ್ರಿ ಕಳವು ಮಾಡುತ್ತಿದ್ದ ಕಿಡಿಗೇಡಿಯೊಬ್ಬನನ್ನು ಇಬ್ಬರು ಯುವತಿಯರು ಪತ್ತೆ ಹಚ್ಚಿ ಇಂದಿರಾನಗರ ಠಾಣೆ ಪೊಲೀಸರಿಗೆ ಹಿಡಿದು ಕೊಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.&lt;p&gt;ಅಸ್ಸಾಂ ಮೂಲದ ಅಬ್ದುಲ್ ಹುಸೇನ್ ಬಂಧಿತನಾಗಿದ್ದು, ಕೆಲ ದಿನಗಳ ಹಿಂದೆ ಇಂದಿರಾನಗರ ಸಮೀಪ ಮನೆ ಹೊರಗೆ ಒಣ ಹಾಕುತ್ತಿದ್ದ ಮಹಿಳೆಯರ ಒಳ ಉಡುಪುಗಳನ್ನು ನಿರಂತರವಾಗಿ ಕಳ್ಳತನ ಮಾಡುತ್ತಿದ್ದ. ಈತನ ಕಾಟದಿಂದ ರೋಸಿ ಹೋದ ಯುವತಿಯರು, ತಾವೇ ಪತ್ತೆದಾರಿಕೆ ಮಾಡಿ ಖೆಡ್ಡಾಕ್ಕೆ ಕೆಡವಿದ್ದಾರೆ ಎಂದು ತಿಳಿದು ಬಂದಿದೆ.&lt;/p&gt;ರಹಸ್ಯ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದ: &lt;p&gt;ಅಬ್ದುಲ್ ಹುಸೇನ್, ನಗರದಲ್ಲಿ ಆನ್&zwnj;ಲೈನ್&zwnj; ಮಾರ್ಕೆಟಿಂಗ್ ಕಂಪನಿಯ ಡೆಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಇತ್ತೀಚಿಗೆ ವಿಕೃತ ಮನಸ್ಸಿನ ಆತ, ಇಂದಿರಾನಗರ ಸಮೀಪ ಯುವತಿಯರ ಒಳ ಉಡುಪು ಕಳ್ಳತನಕ್ಕಿಳಿದಿದ್ದ. ಮನೆ ಹೊರಗೆ ಒಣ ಹಾಕುತ್ತಿದ್ದ ಒಳ ಉಡುಪುಗಳು ರಾತ್ರಿ ನಾಪತ್ತೆ ಆಗುತ್ತಿದ್ದರಿಂದ ಆ ಮನೆಯ ಇಬ್ಬರು ಯುವತಿಗೆ ಅನುಮಾನ ಬಂದಿದೆ. ಒಳ ಉಡುಪು ಕಳ್ಳನ ಕಾಟದಿಂದ ಬೇಸತ್ತ ಅವರು, ಆತನನ್ನು ಹಿಡಿಯಲು ತಾವೇ ಮುಂದಾಗಿದ್ದಾರೆ. ಆನ್&zwnj;ಲೈನ್&zwnj;ನಲ್ಲಿ ಹಿಡನ್ ಕ್ಯಾಮೆರಾ ತರಿಸಿ ಮನೆ ಹೊರಗೆ ಇಟ್ಟಿದ್ದರು. ಎಂದಿನಂತೆ ಅವರ ಮನೆಗೆ ಹೊರಗೆ ಬಂದ ಕಳ್ಳ ಉಡುಪು ಕದ್ದು ಪರಾರಿಯಾಗಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಕೂಡಲೇ ಇಂದಿರಾನಗರ ಠಾಣೆಗೆ ತೆರಳಿ ಸಾಕ್ಷ್ಯ ಸಮೇತ ಸಂತ್ರಸ್ತೆಯರು ದೂರು ನೀಡಿದರು. ಈ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಳಿಕ ನ್ಯಾಯಾಲಯದಲ್ಲಿ ಜಾಮೀನು ಪಡೆದು ಆತ ಬಂಧ ಮುಕ್ತನಾಗಿದ್ದಾನೆ. &lt;/p&gt;ರಾತ್ರಿ ನಾಪತ್ತೆ ಬೆಳಗ್ಗೆ ಪತ್ತೆ!ಎರಡು ಬಾರಿ ಮಾತ್ರ ಒಳ ಉಡುಪುಗಳು ನಾಪತ್ತೆಯಾಗಿದ್ದವು ಎಂದು ಸಂತ್ರಸ್ತೆಯರು ಹೇಳಿಕೆ ಕೊಟ್ಟಿದ್ದಾರೆ. ಆ ಉಡುಪುಗಳು ರಾತ್ರಿ ನಾಪತ್ತೆಯಾಗಿ ಅದೇ ಸ್ಥಳದಲ್ಲಿ ಬೆಳಗ್ಗೆ ಪತ್ತೆಯಾಗಿದ್ದವು. ಹೀಗಾಗಿ ನೆರೆಹೊರೆಯಲ್ಲಿ ನೆಲೆಸಿರುವ ವ್ಯಕ್ತಿಗಳೇ ಈ ಕೃತ್ಯ ಎಸಗಿರುವ ಬಗ್ಗೆ ಅವರಿಗೆ ಶಂಕೆ ಮೂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/arrest-of-a-miscreant-who-used-to-steal-women-s-innerwear-return-it-and-then-steal-new-clothes/articleshow-3dfba30"/>
        </item>
        <item>
            <title><![CDATA[ಇ-ಕಾಮರ್ಸ್‌ ಡೆಲಿವರಿಗೆ ಹೋದಾಗ ಶೌಚಾಲಯ ಬಳಸುವ ನೆಪದಲ್ಲಿ ಮಹಿಳೆಗೆ ಯುವಕ ಕಿರುಕುಳ]]></title>
            <link>https://www.kannadaprabha.in/crime-news/young-man-harasses-woman-under-the-pretext-of-using-the-restroom-while-delivering-an-e-commerce-order/articleshow-77egrxc</link>
            <guid isPermaLink="true">https://www.kannadaprabha.in/crime-news/young-man-harasses-woman-under-the-pretext-of-using-the-restroom-while-delivering-an-e-commerce-order/articleshow-77egrxc</guid>
            <pubDate>Mon, 13 Jul 2026 05:42:07 +0530</pubDate>
            <description><![CDATA[ಡೆಲಿವರಿ ಕೊಡಲು ಹೋದ ವೇಳೆ ಅನುಮತಿಯಿಲ್ಲದೆ ಒಂಟಿಯಾಗಿದ್ದ ಮಹಿಳೆಯ ಮನೆಯಲ್ಲಿ ಶೌಚಾಲಯ ಬಳಸುವ ನೆಪದಲ್ಲಿ ಆಕೆಗೆ ಕಿರುಕುಳ ನೀಡಿದ ಆರೋಪದಡಿ ಡೆಲಿವರಿ ಬಾಯ್&zwnj;ನನ್ನು ಮಾರತ್ತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.]]></description>
            <media:content url="https://static-gi.asianetnews.com/images/01kxaxx1xaqckkc3v0ryy1xc3c/bengaluru-flipkart-delivery-boy-1783852074920.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಬೆಂಗಳೂರು : &amp;nbsp;&lt;/strong&gt;ಡೆಲಿವರಿ ಕೊಡಲು ಹೋದ ವೇಳೆ ಅನುಮತಿಯಿಲ್ಲದೆ ಒಂಟಿಯಾಗಿದ್ದ ಮಹಿಳೆಯ ಮನೆಯಲ್ಲಿ ಶೌಚಾಲಯ ಬಳಸುವ ನೆಪದಲ್ಲಿ ಆಕೆಗೆ ಕಿರುಕುಳ ನೀಡಿದ ಆರೋಪದಡಿ ಡೆಲಿವರಿ ಬಾಯ್&zwnj;ನನ್ನು ಮಾರತ್ತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;p&gt;ಬೆಳಗಾವಿಯ ಬೈಲಹೊಂಗಲ ಮೂಲದ ವಿಜಯ್ ಮಲ್ಲಿಕಾರ್ಜನ್&zwnj; ಕಾಮತ್&zwnj; (22) ಬಂಧಿತ ಆರೋಪಿ. ಆರೋಪಿ ಜು.11ರಂದು ಪಾಪಯ್ಯ ಗಾರ್ಡನ್ ಲೇಔಟ್&zwnj;ನಲ್ಲಿರುವ ಅಪಾರ್ಟ್&zwnj;ವೊಂದಕ್ಕೆ ಡೆಲಿವರಿಗೆ ಹೋದಾಗ ಕೃತ್ಯ ಎಸಗಿದ್ದಾನೆ. ಈ ಕುರಿತು ಮಹಿಳೆ ವಿಡಿಯೋ ಸಮೇತ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಪೊಲೀಸರಿಗೆ ದೂರು ನೀಡಿದ್ದರು.&lt;/p&gt;&lt;p&gt;ಆರೋಪಿ, ಇ-ಕಾಮರ್ಸ್&zwnj;ವೊಂದರ ಡೆಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾನೆ. ಶನಿವಾರ ಪಾಪಯ್ಯ ಗಾರ್ಡನ್&zwnj;ನ ಅಪಾರ್ಟ್&zwnj;ಮೆಂಟ್&zwnj;ನಲ್ಲಿರುವ ಮಹಿಳೆಯೊಬ್ಬರು ವಸ್ತುವೊಂದನ್ನು ಆರ್ಡರ್&zwnj; ಮಾಡಿದ್ದರು. ಅದನ್ನು ಮಹಿಳೆಗೆ ನೀಡಿದ ನಂತರ ಶೌಚಾಲಯ ಬಳಸಲು ಕೋರಿದ್ದಾನೆ. ಆಗ ಆಕೆ, ಮನೆಯಲ್ಲಿ ಯಾರು ಪುರುಷರು ಇಲ್ಲ ಎಂದು ನಿರಾಕರಿಸಿದ್ದಾರೆ. &amp;nbsp;&lt;/p&gt;&lt;h3&gt;ಪುರುಷರು ಇರುವ ಮನೆಯಲ್ಲಿ ಶೌಚಾಲಯಕ್ಕೆ ಹೋಗುವಂತೆ ಸೂಚಿಸಿದ್ದಾರೆ.&lt;/h3&gt;&lt;p&gt;&amp;nbsp;ಅಲ್ಲದೆ, ಪುರುಷರು ಇರುವ ಮನೆಯಲ್ಲಿ ಶೌಚಾಲಯಕ್ಕೆ ಹೋಗುವಂತೆ ಸೂಚಿಸಿದ್ದಾರೆ. ಆದರೂ ಆರೋಪಿ ಮನೆಯೊಳಗೆ ನುಗ್ಗಿ ಬೆಡ್&zwnj;ರೂಮ್&zwnj;ನಲ್ಲಿರುವ ಶೌಚಾಲಯ ಬಳಸಿದ್ದಾನೆ. ವಾಪಸ್&zwnj; ಬರುವಾಗ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಅದರಿಂದ ಆಘಾತಕ್ಕೊಳಗಾದ ಮಹಿಳೆ, ಕೂಡಲೇ ಮನೆಯಿಂದ ಹೊರಗಡೆ ಹೋಗಿ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಾರೆ. ಆತಂಕಗೊಂಡ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಮತ್ತೊಂದೆಡೆ ಇಡೀ ಘಟನೆಯನ್ನು ಮಹಿಳೆ ತನ್ನ ಮೊಬೈಲ್&zwnj;ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಈ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಲಾಗಿದೆ.&lt;/p&gt;&lt;h2&gt;&lt;strong&gt;ಲೈಂಗಿಕ ಕಿರುಕುಳ ನೀಡಿಲ್ಲ: ಆರೋಪಿ&lt;/strong&gt;&lt;/h2&gt;&lt;p&gt;ಆರೋಪಿಯ ವಿಚಾರಣೆಯಲ್ಲಿ ಲೈಂಗಿಕ ಕಿರುಕುಳ ನೀಡಲು ಮನೆಯೊಳಗೆ ಹೋಗಿಲ್ಲ. ಶೌಚಾಲಯಕ್ಕೆ ತುರ್ತಾಗಿ ಹೋಗಬೇಕಿತ್ತು. ಹೀಗಾಗಿ ಆಕೆಯ ಅನುಮತಿ ಇಲ್ಲದೆ ಹೋಗಿದ್ದೆ. ಹೊರತು ಆಕೆಗೆ ಯಾವುದೇ ರೀತಿಯ ಕಿರುಕುಳ ನೀಡಿಲ್ಲ. ಶೌಚಾಲಯದಲ್ಲಿದ್ದಾಗ ಆಕೆ ಜೋರಾಗಿ ಕೂಗಿಕೊಂಡರು. ಅದರಿಂದ ಗಾಬರಿಗೊಂಡು ಪ್ಯಾಂಟ್&zwnj; ಜಿಪ್&zwnj; ಹಾಕಿಕೊಳ್ಳದೆ, ಹೊರಬಂದು ನಂತರ ಜಿಪ್&zwnj; ಹಾಕಿಕೊಳ್ಳುತ್ತಿದ್ದೆ. ಅದೇ ವೇಳೆ ಆಕೆ ವಿಡಿಯೋ ಮಾಡಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ ಎಂದು ಪೊಲೀಸ್&zwnj; ಮೂಲಗಳು ತಿಳಿಸಿವೆ.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/young-man-harasses-woman-under-the-pretext-of-using-the-restroom-while-delivering-an-e-commerce-order/articleshow-77egrxc"/>
        </item>
        <item>
            <title><![CDATA[ಎಫ್‌ಎಸ್‌ಎಲ್ ಪರಿಶೀಲನೆಗೆ ಸಿಸಿ ಕ್ಯಾಮೆರಾ ದೃಶ್ಯಾವಳಿ..!]]></title>
            <link>https://www.kannadaprabha.in/crime-news/cctv-footage-sent-for-fsl-examination/articleshow-7ggw9wy</link>
            <guid isPermaLink="true">https://www.kannadaprabha.in/crime-news/cctv-footage-sent-for-fsl-examination/articleshow-7ggw9wy</guid>
            <pubDate>Wed, 15 Jul 2026 01:30:00 +0530</pubDate>
            <description><![CDATA[ಮಳವಳ್ಳಿ ಪಟ್ಟಣದ ಪುರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಾವಳಿಗಳ ಹಾರ್ಡ್&zwnj;ಡಿಸ್ಕ್&zwnj;ನ್ನು ಪರಿಶೀಲನೆಗೆ ಒಳಪಡಿಸಿ ಲಭ್ಯ ಮಾಹಿತಿಯನ್ನು ಮೇಲ್ಮನವಿದಾರರಿಗೆ ನೀಡುವಂತೆ ಕರ್ನಾಟಕ ಮಾಹಿತಿ ಆಯೋಗ ಆದೇಶಿಸಿದೆ.]]></description>
            <media:content url="https://static-assets.asianetnews.com/kp/json/14072026/pictures/00000_363.JPG" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಪ್ರಭ ವಾರ್ತೆ ಮಳವಳ್ಳಿ&lt;/p&gt;ಪಟ್ಟಣದ ಪುರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಾವಳಿಗಳ ಹಾರ್ಡ್&zwnj;ಡಿಸ್ಕ್&zwnj;ನ್ನು ಪರಿಶೀಲನೆಗೆ ಒಳಪಡಿಸಿ ಲಭ್ಯ ಮಾಹಿತಿಯನ್ನು ಮೇಲ್ಮನವಿದಾರರಿಗೆ ನೀಡುವಂತೆ ಕರ್ನಾಟಕ ಮಾಹಿತಿ ಆಯೋಗ ಆದೇಶಿಸಿದೆ.&lt;p&gt;ಎಂ.ಆರ್.ನಾಗರಾಜು ಎಂಬುವರು ೨೦೨೨ರ ಆಗಸ್ಟ್&zwnj;ನಲ್ಲಿ ಡಿವೈಎಸ್ಪಿ ಅವರಿಗೆ ಅರ್ಜಿ ಸಲ್ಲಿಸಿ, ಪುರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ೧೦-೧೦-೨೦೨೧ ರಿಂದ ೩೧-೦೩-೨೦೨೨ರ ವರೆಗಿನ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನು ನೀಡುವಂತೆ ಕೋರಿದ್ದರು. ಮಾಹಿತಿ ಹಕ್ಕು ಕಾಯ್ದೆ ೮(೧)(ಜೆ) ಪ್ರಕಾರ ನೀಡಲು ಸಾಧ್ಯವಿಲ್ಲ ಎಂದು ಅಂದಿನ ಡಿವೈಎಸ್ಪಿ ಆಗಿದ್ದ ನವೀನ್&zwnj;ಕುಮಾರ್, ಪುರ ಹಾಗೂ ಗ್ರಾಮಾಂತರ ಠಾಣೆಯ ಅಧಿಕಾರಿಗಳು ನಿರಾಕರಿಸಿದ್ದರು ಎನ್ನಲಾಗಿದೆ.&lt;/p&gt;ಈ ಸಂಬಂಧ ಅರ್ಜಿದಾರ ಎಂ.ಆರ್.ನಾಗರಾಜು ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಯೋಗದ ನಾಲ್ಕನೇ ಪೀಠದ ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಎರಡು ಪೊಲೀಸ್ ಠಾಣೆಯ ಸಿಸಿ ಕ್ಯಾಮೆರಾಗಳ ಹಾರ್ಡ್&zwnj;ಡಿಸ್ಕ್&zwnj;ನ್ನು ಎ-ಎಸ್&zwnj;ಎಲ್&zwnj;ಗೆ ಕಳುಹಿಸಿ ತನಿಖೆಗೆ ಒಳಪಡಿಸಿ ಅದರಲ್ಲಿರುವ ಲಭ್ಯ ದೃಶ್ಯಾವಳಿಯನ್ನು ಅರ್ಜಿದಾರರಿಗೆ ನೀಡಬೇಕು. ಕೇಳಿರುವ ದೃಶ್ಯಾವಳಿಗಳನ್ನು ಮಾತ್ರವೇ ನೀಡಬೇಕು. ಕ್ಯಾಮೆರಾದಲ್ಲಿ ದಾಖಲಾಗಿರುವ ಇತರೆ ಮಾಹಿತಿಯನ್ನು ನ್ಯಾಯಾಲಯಗಳ ಆದೇಶಗಳಂತೆ ಮುಸುಕು ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.&lt;p&gt;ಆಯೋಗದ ಇತಿಹಾಸದಲ್ಲಿಯೇ ಸಿಸಿ ಕ್ಯಾಮೆರಾಗಳನ್ನು ಎ-ಎಸ್&zwnj;ಎಲ್ ಪರಿಶೀಲನೆಗೆ ಒಳಪಡಿಸಿ ಅರ್ಜಿದಾರರಿಗೆ ಅದರಲ್ಲಿರುವ ದೃಶ್ಯಾವಳಿಗಳನ್ನು ಕೊಡಿಸಿರುವ ಅಪರೂಪದ ಪ್ರಕರಣ ಇದಾಗಿದೆ. ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿದ್ದ ಹಿರಿಯ ಪೊಲೀಸ್ ಅಧಿಕಾರಿ ವಿರುದ್ಧ ಶಿಸ್ತು ಕ್ರಮಕ್ಕೂ ಶಿಫಾರಸು ಮಾಡಿದೆ.&lt;/p&gt;ಆಗಿನ ಡಿವೈಎಸ್ಪಿ ಹಾಗೂ ಈಗ ಬಳ್ಳಾರಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ನವೀನ್&zwnj;ಕುಮಾರ್ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಸೂಚನೆ ನೀಡಲಾಗಿತ್ತು. ನವೀನ್&zwnj;ಕುಮಾರ್ ಅವರು ತಾವು ನಿಯಮಬದ್ಧವಾಗಿಯೇ ಅರ್ಜಿ ವರ್ಗಾವಣೆ ಮಾಡಿರುವುದಾಗಿ ತಮ್ಮ ಸಮಜಾಯಿಷಿಯನ್ನು ಬಳ್ಳಾರಿ ಎಸ್ಪಿ ಹಾಗೂ ಮಾಹಿತಿ ಆಯೋಗಕ್ಕೆ ನೀಡಿದ್ದಾರೆ.&lt;p&gt;ಅರ್ಜಿ ನಿಯಮಬದ್ಧ ವರ್ಗಾವಣೆ ಮಾಡದೇ ಅಧಿಕಾರಿಗಳ ಮೌಖಿಕ ಸೂಚನೆಯ ಮೇರೆಗೆ ಹಿಂಬರಹ ನೀಡಿದ್ದ ಎರಡು ಠಾಣೆಗಳಲ್ಲಿ ಆಗ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರೂ ಸಿಪಿಐಗಳಿಗೆ ಮಾಹಿತಿ ಹಕ್ಕು ಅರ್ಜಿಗಳನ್ನು ನಿರ್ಲಕ್ಷ್ಯ ಮಾಡದಂತೆ ಆಯೋಗ ಎಚ್ಚರಿಕೆ ನೀಡಲಾಗಿದೆ.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/cctv-footage-sent-for-fsl-examination/articleshow-7ggw9wy"/>
        </item>
        <item>
            <title><![CDATA[ಶಾಲೆಯಲ್ಲಿ ಶಿಕ್ಷಕರು ಅವಮಾನ ಮಾಡಿದ್ದಕ್ಕೆ 7ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ]]></title>
            <link>https://www.kannadaprabha.in/crime-news/7th-grade-student-attempts-suicide-after-being-humiliated-by-teachers-at-school/articleshow-7puror0</link>
            <guid isPermaLink="true">https://www.kannadaprabha.in/crime-news/7th-grade-student-attempts-suicide-after-being-humiliated-by-teachers-at-school/articleshow-7puror0</guid>
            <pubDate>Thu, 16 Jul 2026 04:45:00 +0530</pubDate>
            <description><![CDATA[ತರಗತಿಯಲ್ಲಿ ಸಹಪಾಠಿ ಜತೆ ಜಗಳವಾಡಿದ್ದಕ್ಕೆ ಶಿಕ್ಷಕರು ದಂಡಿಸಿ ಅವಮಾನಿಸಿದರು ಎಂದು ಬೇಸರಗೊಂಡು ಖಾಸಗಿ ಶಾಲೆಯ 7ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಯತ್ನಿಸಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.]]></description>
            <media:content url="https://static-gi.asianetnews.com/images/01kc6sk4zt9wck0h60gv0keg0k/kannada-prabha-1765459727354.jpeg" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ಬೆಂಗಳೂರು&lt;/p&gt;ತರಗತಿಯಲ್ಲಿ ಸಹಪಾಠಿ ಜತೆ ಜಗಳವಾಡಿದ್ದಕ್ಕೆ ಶಿಕ್ಷಕರು ದಂಡಿಸಿ ಅವಮಾನಿಸಿದರು ಎಂದು ಬೇಸರಗೊಂಡು ಖಾಸಗಿ ಶಾಲೆಯ 7ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಯತ್ನಿಸಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. &lt;p&gt;ಚಿಕ್ಕಲಸಂದ್ರ ನಿವಾಸಿ ಕಿರಾಣಿ ಅಂಗಡಿ ಮಾಲಿಕ ಮಹೇಶ್ ಕುಮಾರ್ ದಂಪತಿ ಪುತ್ರ ಮಂಗಳವಾರ ಸಂಜೆ ಆತ್ಮಹತ್ಯೆ ಯತ್ನಿಸಿದ್ದು, ಕೂಡಲೇ ಆತನನ್ನು ಕೂಡಲೇ ರಕ್ಷಿಸಿ ಖಾಸಗಿ ಆಸ್ಪತ್ರೆಗೆ ಕುಟುಂಬದವರು ದಾಖಲಿಸಿದ್ದಾರೆ. ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ವಿದ್ಯಾರ್ಥಿ ಜೀವನ್ಮರಣ ಹೋರಾಟ ನಡೆಸಿದ್ದಾನೆ. &lt;/p&gt;ಚಿಕ್ಕಲಸಂದ್ರ ಬಳಿ ಮಹೇಶ್ ಅವರು ದಿನಸಿ ಅಂಗಡಿ ನಡೆಸುತ್ತಿದ್ದು, ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಅವರು ನೆಲೆಸಿದ್ದಾರೆ. ಖಾಸಗಿ ಕಂಪನಿಯಲ್ಲಿ ಅವರ ಪತ್ನಿ ಉದ್ಯೋಗದಲ್ಲಿದ್ದಾರೆ. ಮರಿಯಪ್ಪಪಾಳ್ಯ ಹತ್ತಿರದ ಖಾಸಗಿ ಶಾಲೆಯಲ್ಲಿ ಅವರ 13 ವರ್ಷದ ಕಿರಿಯ ಪುತ್ರ 7ನೇ ತರಗತಿಯಲ್ಲಿ ಓದುತ್ತಿದ್ದಾನೆ. ಎಂದಿನಂತೆ ಮಂಗಳವಾರ ಸಹ ಶಾಲೆಗೆ ಆತ ಹೋಗಿದ್ದ. ತರಗತಿಯಲ್ಲಿ ಸಹಪಾಠಿ ಜತೆ ಮಹೇಶ್ ಪುತ್ರ ಜಗಳವಾಡಿದ್ದಾನೆ. ಆಗ ತಂಟೆ ಮಾಡಿದ ಇಬ್ಬರು ವಿದ್ಯಾರ್ಥಿಗಳಿಗೆ ದಂಡಿಸಿದ ಶಿಕ್ಷಕರು, ಆ ಇಬ್ಬರನ್ನು ತರಗತಿಯಿಂದ ಹೊರಗೆ ನಿಲ್ಲಿಸಿ ಶಿಕ್ಷೆ ವಿಧಿಸಿದ್ದರು ಎನ್ನಲಾಗಿದೆ. &lt;p&gt;ತನಗೆ ಹೊಡೆದಿದ್ದಲ್ಲದೆ ತರಗತಿಯಿಂದ ಹೊರ ಹಾಕಿ ಸಹಪಾಠಿಗಳ ಮುಂದೆ ಅವಮಾನಿಸಿದರು ಎಂದು ಶಿಕ್ಷಕರ ಮೇಲೆ ಸಂತ್ರಸ್ತ ವಿದ್ಯಾರ್ಥಿ ಕೋಪಗೊಂಡಿದ್ದ. ಶಾಲೆಯಿಂದ ಸಂಜೆ ಮನೆಗೆ ಮರಳಿದಾಗಲೂ ಆತನ ಬೇಸರವಿತ್ತು. ಈ ನೋವಿನಲ್ಲೇ ಕೋಣೆಗೆ ತೆರಳಿ ನೇಣು ಬಿಗಿದುಕೊಂಡು ಆತ ಆತ್ಮಹತ್ಯೆ ಯತ್ನಿಸಿದ್ದಾನೆ. ತಕ್ಷಣವೇ ವಿದ್ಯಾರ್ಥಿಗೆ ರಕ್ಷಣೆಗೆ ಆತನ ಪೋಷಕರು ಧಾವಿಸಿದ್ದಾರೆ. ನೇಣಿನ ಕುಣಿಕೆಯಿಂದ ಇಳಿಸಿ ಸಮೀಪದ ಖಾಸಗಿ ಆಸ್ಪತ್ರೆಗೆ ವಿದ್ಯಾರ್ಥಿಯನ್ನು ದಾಖಲಿಸಿದ್ದಾರೆ. ತುರ್ತು ಚಿಕಿತ್ಸಾ ಘಟಕದಲ್ಲಿ ವಿದ್ಯಾರ್ಥಿಗೆ ಚಿಕಿತ್ಸೆ ಮುಂದುವರಿದಿದೆ. &lt;/p&gt;ಶಿಕ್ಷಕರ ವಿರುದ್ಧ ವಿದ್ಯಾರ್ಥಿನಿ ತಂದೆ ದೂರು&lt;p&gt;ತಮ್ಮ ಮಗನ ಆತ್ಮಹತ್ಯೆಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಖಾಸಗಿ ಶಾಲೆಯ ಶಿಕ್ಷಕರ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಗೆ ಸಂತ್ರಸ್ತ ವಿದ್ಯಾರ್ಥಿ ತಂದೆ ಮಹೇಶ್ ದೂರು ನೀಡಿದ್ದಾರೆ. ಈ ಆಧರಿಸಿ ಎಫ್&zwnj;ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/7th-grade-student-attempts-suicide-after-being-humiliated-by-teachers-at-school/articleshow-7puror0"/>
        </item>
        <item>
            <title><![CDATA[ಏರ್ ಕೂಲರ್ ಟ್ಯಾಂಕ್ ಸಿಡಿದು ಮೈಸೂರು ಮೂಲಕ ಮೆಕಾನಿಕ್ ಸಾವು: ಮತ್ತೊಬ್ಬನಿಗೆ ತೀವ್ರ ಗಾಯ]]></title>
            <link>https://www.kannadaprabha.in/crime-news/mechanic-dies-after-air-cooler-tank-explodes-in-mysuru-another-person-critically-injured/articleshow-f0l4978</link>
            <guid isPermaLink="true">https://www.kannadaprabha.in/crime-news/mechanic-dies-after-air-cooler-tank-explodes-in-mysuru-another-person-critically-injured/articleshow-f0l4978</guid>
            <pubDate>Sun, 19 Jul 2026 02:45:00 +0530</pubDate>
            <description><![CDATA[ಮೈಸೂರಿನ ಕ್ಲೈಮೇಟ್ ಮಾಸ್ಟರ್ ಎಂಟರ್ ಪ್ರೈಸಸ್ ನ ಕಂಪನಿಯಲ್ಲಿ ಮೆಕಾನಿಕ್ ಕೆಲಸ ಮಾಡುತ್ತಿದ್ದ ಮಹಮದ್ ಸಾಧಿಕ್ ಹಾಗೂ ಮಹಮ್ಮದ್ ಸಲ್ಮಾನ್ ಅವರು ಕೊಪ್ಪದ ಎನ್&zwnj;ಎಸ್&zwnj;ಎಲ್ ಸಕ್ಕರೆ ಕಾರ್ಖಾನೆ ಉತ್ಪಾದನಾ ಘಟಕದ ಏರ್ ಕೂಲರ್ ದುರಸ್ತಿಗಾಗಿ ಬಂದಿದ್ದರು.]]></description>
            <media:content url="https://static-assets.asianetnews.com/kp/json/18072026/pictures/18KMND11_516.JPG" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ಮದ್ದೂರು&lt;/p&gt;ಏರ್ ಕೂಲರ್ ಟ್ಯಾಂಕ್ ಸಿಡಿದು ಮೈಸೂರು ಮೂಲದ ಓರ್ವ ಮೆಕಾನಿಕ್ ಮೃತಪಟ್ಟು, ಮತ್ತೋರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಕೊಪ್ಪದ ಎನ್&zwnj;ಎಸ್&zwnj;ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಶುಕ್ರವಾರ ರಾತ್ರಿ ಜರುಗಿದೆ.&lt;p&gt;ಮೈಸೂರು ಗೌಸಿಯಾ ನಗರದ ಮಹಮದ್ ಸಾಧಿಕ್ (22) ಮೃತಪಟ್ಟ ವ್ಯಕ್ತಿ. ಮಹಮ್ಮದ್ ಸಲ್ಮಾನ್ (21) ತೀವ್ರ ಗಾಯಗೊಂಡಿದ್ದು. ಜಿಲ್ಲಾಸ್ಪತ್ರೆ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಈತನ ಪರಿಸ್ಥಿತಿ ಗಂಭೀರವಾಗಿದೆ. &lt;/p&gt;ಮೈಸೂರಿನ ಕ್ಲೈಮೇಟ್ ಮಾಸ್ಟರ್ ಎಂಟರ್ ಪ್ರೈಸಸ್ ನ ಕಂಪನಿಯಲ್ಲಿ ಮೆಕಾನಿಕ್ ಕೆಲಸ ಮಾಡುತ್ತಿದ್ದ ಮಹಮದ್ ಸಾಧಿಕ್ ಹಾಗೂ ಮಹಮ್ಮದ್ ಸಲ್ಮಾನ್ ಅವರುಗಳು ಕೊಪ್ಪದ ಎನ್&zwnj;ಎಸ್&zwnj;ಎಲ್ ಸಕ್ಕರೆ ಕಾರ್ಖಾನೆ ಉತ್ಪಾದನಾ ಘಟಕದ ಏರ್ ಕೂಲರ್ ದುರಸ್ತಿಗಾಗಿ ಶುಕ್ರವಾರ ಸಂಜೆ ಬಂದಿದ್ದರು.&lt;p&gt;ರಾತ್ರಿ 7 ಗಂಟೆ ಸಮಯದಲ್ಲಿ ದುರಸ್ತಿ ಮಾಡುವಾಗ ವಿದ್ಯುತ್ ಏರಿಳಿತದಿಂದ ಟ್ಯಾಂಕ್ ನಿಂದ ಅನಿಲ ಸೋರಿಕೆಯಾಗಿದ ಪರಿಣಾಮ ಸಿಲೆಂಡರ್ ಸ್ಫೋಟಗೊಂಡು ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಸುಟ್ಟು ಗಾಯವಾಗಿದ್ದ ಮಹಮದ್ ಸಾಧಿಕ್ ಹಾಗೂ ಮಹಮದ್ ಸಲ್ಮಾನ್ ಅವರುಗಳನ್ನು ಕಾರ್ಖಾನೆ ಸಿಬ್ಬಂದಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸಾಗಿಸುವಾಗ ಮಹಮದ್ ಸಾಧಿಕ್ ಮಾರ್ಗ ಮಧ್ಯ ಕೊನೆ ಉಸಿರೆಳದಿದ್ದಾನೆ. &lt;/p&gt;ಗಾಯಾಳು ಮಹಮದ್ ಸಲ್ಮಾನ್&zwnj;ಗೆ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈತನ ಸ್ಥಿತಿ ಚಿಂತಾ ಜನಕವಾಗಿದೆ. ಘಟನೆ ಸಂಬಂಧ ಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. &lt;p&gt;ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭರಾಣಿ ಸೇರಿದಂತೆ ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಯಶವಂತ ಕುಮಾರ್, ಮದ್ದೂರು ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ನಾರಾಯಣಿ, ಕೊಪ್ಪ ಠಾಣೆ ಪಿಎಸ್ಐ ಭೀಮಪ್ಪ ಬಾಣಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕಾರ್ಖಾನೆ ಮಾಲೀಕ, ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲುಮದ್ದೂರು:ತಾಲೂಕಿನ ಕೊಪ್ಪದ ಎನ್&zwnj;ಎಸ್&zwnj;ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಏರ್ ಕೂಲರ್ ಟ್ಯಾಂಕ್ ಸ್ಫೋಟದಿಂದ ಓರ್ವ ಮೃತಪಟ್ಟು, ಮತ್ತೋರ್ವ ಗಾಯಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರ್ಖಾನೆ ಮಾಲೀಕರು ಸೇರಿದಂತೆ ಹಲವು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.&lt;/p&gt;ಕಾರ್ಖಾನೆ ಮಾಲೀಕರು ಇಂಚಾರ್ಜ್ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್ ಮತ್ತು ಸೇಫ್ಟಿ ಮ್ಯಾನೇಜರ್ ವಿರುದ್ಧ ಸುರಕ್ಷತಾ ಕ್ರಮ ಹಾಗೂ ನಿರ್ಲಕ್ಷತನದ ಆರೋಪದ ಮೇಲೆ ಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಸಿಲೆಂಡರ್ ಟ್ಯಾಂಕ್ ಸ್ಫೋಟದಿಂದ ಮೃತಪಟ್ಟಿರುವ ಮಹಮ್ಮದ್ ಸಾಧಿಕ್ ಎಂಬುವುನ ಮರಣೋತ್ತರ ಪರೀಕ್ಷೆಯನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ನಡೆಸಿದ ನಂತರ ಶುಕ್ರವಾರ ಮಧ್ಯಾಹ್ನ ಶವವನ್ನು ವಾರಸುದಾರರ ವಶಕ್ಕೆ ಒಪ್ಪಿಸಲಾಯಿತು.]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/mechanic-dies-after-air-cooler-tank-explodes-in-mysuru-another-person-critically-injured/articleshow-f0l4978"/>
        </item>
        <item>
            <title><![CDATA[ಹಲಗೂರು ವೃತ್ತ ವ್ಯಾಪ್ತಿಯ 50ಕ್ಕೂ ಹೆಚ್ಚು ರೌಡಿಶೀಟರ್‌ಗಳ ಪರೇಡ್]]></title>
            <link>https://www.kannadaprabha.in/crime-news/parade-of-over-50-rowdy-sheeters-under-the-halagur-circle-jurisdiction/articleshow-gag5rx0</link>
            <guid isPermaLink="true">https://www.kannadaprabha.in/crime-news/parade-of-over-50-rowdy-sheeters-under-the-halagur-circle-jurisdiction/articleshow-gag5rx0</guid>
            <pubDate>Thu, 16 Jul 2026 02:15:00 +0530</pubDate>
            <description><![CDATA[ಸಮಾಜದಲ್ಲಿ ಶಾಂತಿ ಕದಡುವ ಹಾಗೂ ರೌಡಿ ಚಟುವಟಿಕೆಗಳಲ್ಲಿ ಭಾಗವಹಿಸದೇ ಉತ್ತಮ ಜೀವನ ರೂಪಿಸಿಕೊಳ್ಳಬೇಕು. ರೌಡಿಶೀಟರ್ ಪಟ್ಟಿಯಲ್ಲಿ ಇರುವವರು ಕಾನೂನು ಸುವ್ಯವಸ್ಥೆಗೆ ಭಂಗ ತಂದರೆ ಗಡಿಪಾರು ಮಾಡಲು ಶಿಫಾರಸ್ಸು ಮಾಡಲಾಗುವುದು.]]></description>
            <media:content url="https://static-assets.asianetnews.com/kp/json/15072026/pictures/593314KMND14_457.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಮಳವಳ್ಳಿ : &amp;nbsp;&lt;/strong&gt;ಪಟ್ಟಣದ ಡಿವೈಎಸ್ಪಿ ಕಚೇರಿ ಆವರಣದಲ್ಲಿ ಸೋಮವಾರ ಹಲಗೂರು ವೃತ್ತ ವ್ಯಾಪ್ತಿಯ 50ಕ್ಕೂ ಹೆಚ್ಚು ರೌಡಿಶೀಟರ್ ಗಳ ಪರೇಡ್ ನಡೆಸಲಾಯಿತು.&lt;/p&gt;&lt;p&gt;ಈ ವೇಳೆ ಹಲಗೂರು ಸಿಪಿಐ ಬಿ.ಎಸ್.ಶ್ರೀಧರ್ ಮಾತನಾಡಿ, ಯಾವುದೇ ಸಂದರ್ಭಗಳಲ್ಲೂ ನಿಮ್ಮ ಚಟುವಟಿಕೆಗಳನ್ನು ಮುಂದುವರೆಸಬಾರದು. ಮುಂದಿನ ದಿನಗಳಲ್ಲಿ ಯಾವುದೇ ಅಹಿತಕರ ಘಟನೆಗಳಲ್ಲಿ ಭಾಗಿಯಾಗಬಾರದು. ನಿಮ್ಮ ವರ್ತನೆಯಿಂದ ಕುಟುಂಬಸ್ಥರ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.&lt;/p&gt;&lt;p&gt;ಸಮಾಜದಲ್ಲಿ ಶಾಂತಿ ಕದಡುವ ಹಾಗೂ ರೌಡಿ ಚಟುವಟಿಕೆಗಳಲ್ಲಿ ಭಾಗವಹಿಸದೇ ಉತ್ತಮ ಜೀವನ ರೂಪಿಸಿಕೊಳ್ಳಬೇಕು. ರೌಡಿಶೀಟರ್ ಪಟ್ಟಿಯಲ್ಲಿ ಇರುವವರು ಕಾನೂನು ಸುವ್ಯವಸ್ಥೆಗೆ ಭಂಗ ತಂದರೆ ಗಡಿಪಾರು ಮಾಡಲು ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.&lt;/p&gt;&lt;p&gt;ನಿಮ್ಮ ಚಟುವಟಿಕೆಗಳ ಮೇಲೆ ಪೊಲೀಸ್ ಇಲಾಖೆ ನಿಗಾ ವಹಿಸುತ್ತದೆ. ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಿಳಾಸ ಬದಲಾವಣೆ ಹಾಗೂ ನಿಮ್ಮ ಮೇಲಿರುವ ಪ್ರಕರಣಗಳ ಬಗ್ಗೆ ನಿರಂತರವಾಗಿ ಮಾಹಿತಿ ಕಲೆ ಹಾಕಲಾಗುತ್ತದೆ. ಕಾನೂನು ಸುವ್ಯವಸ್ಥೆಗೆ ಭಂಗ ತಂದರೆ ಗಡಿಪಾರು ಮಾಡಲು ಮಾಡಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದರು.&lt;/p&gt;&lt;p&gt;ಹಲಗೂರು ಠಾಣೆ ಪಿಎಸ್ಐ ಲೋಕೇಶ್, ಬೆಳಕವಾಡಿ ಪಿಎಸ್ಐ ಬಿ.ವಿ.ಪ್ರಕಾಶ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.&amp;nbsp;&lt;/p&gt;&lt;h2&gt;&lt;strong&gt;ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ: 17 ಮಂದಿ ವಿರುದ್ಧ ಪ್ರಕರಣ ದಾಖಲು&lt;/strong&gt;&lt;/h2&gt;&lt;p&gt;ಹಲಗೂರು: ಪ್ರಸಿದ್ಧ ಪ್ರವಾಸಿ ತಾಣ ಮುತ್ತತ್ತಿಯಲ್ಲಿ ಮಂಗಳವಾರ ತಡರಾತ್ರಿ ಪೊಲೀಸರು ಜೂಜಾಡುತ್ತಿದ್ದವರ ಮೇಲೆ ದಾಳಿ ಮಾಡಿ ಪಣಕಿಟ್ಟಿದ್ದ 6,88,000 ರು. ವಶ ಪಡಿಸಿಕೊಂಡು 17 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ.ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಗ್ರಾಮದ 17 ಜನರು ಮಂಗಳವಾರ ಬೆಳಗ್ಗೆ ಮುತ್ತತ್ತಿಗೆ ಬಂದು ದೇವರ ದರ್ಶನ ಮಾಡಿ ನಂತರ ಪಾರ್ಟಿ ಹಾಲ್ ಒಂದರಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಖಚಿತ ಮಾಹಿತಿ ಮೇರೆಗೆ ಹಲಗೂರು ಸಬ್ ಇನ್ಸ್ ಪೆಕ್ಟರ್ ಲೋಕೇಶ್ ಪ್ರೊಪೋಸನರಿ ಜಯಂತ್, ಸುನಿಲ್ ಮತ್ತು ಗುಪ್ತ ಮಾಹಿತಿದಾರ ಮೋಹನ ಮತ್ತು ಮಹೇಂದ್ರ, ಗೋವರ್ಧನ್ ಸೇರಿದಂತೆ ಇತರೆ ಸಿಬ್ಬಂದಿ ದಾಳಿ ನಡೆಸಿ 17 ಜನರನ್ನು ಬಸ್ಸಿನಲ್ಲಿ ಕರೆ ತರುವಾಗ ಆರು ಜನರು ಕತ್ತಲಿನಲ್ಲಿ ಪೊಲೀಸರನ್ನು ತಳ್ಳಿ ತಪ್ಪಿಸಿಕೊಂಡು ಪರಿಯಾಗಿದ್ದಾರೆ.&lt;/p&gt;&lt;p&gt;ಒಟ್ಟು 17 ಜನರ ಮೇಲೆ ಪ್ರಕರಣ ದಾಖಸಿಕೊಂಡು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಮುತ್ತತ್ತಿ ಪ್ರವಾಸಿ ತಾಣದಲ್ಲಿ ಮದ್ಯಪಾನ, ಅಕ್ರಮ ಚಟುವಟಿಕೆ ತಡೆಯುವುದು ಹಾಗೂ ಕಾವೇರಿ ನದಿಯಲ್ಲಿ ಈಜುವುದನ್ನು ನಿಷೇಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಪೊಲೀಸರು ಪ್ರವಾಸಿಗರ ಮೇಲೆ ಹೆಚ್ಚಿನ ನಿಗಾ ವಹಿಸಿದ್ದಾರೆ.&amp;nbsp;&lt;/p&gt;&lt;h3&gt;&lt;strong&gt;ಬಸ್ಸಿನಲ್ಲಿ ಗೃಹಿಣಿ ವ್ಯಾನಿಟಿ ಬ್ಯಾಗ್ ನಲ್ಲಿ 16 ಗ್ರಾಂ ಚಿನ್ನ ಕಳತನ&amp;nbsp;&lt;/strong&gt;&lt;/h3&gt;&lt;p&gt;ಹಲಗೂರು: ಸಾರಿಗೆ ಬಸ್ಸಿನಲ್ಲಿ ಮಹಿಳೆಯ ವ್ಯಾನಿಟಿ ಬ್ಯಾಗ್ ನಲ್ಲಿದ್ದ 16 ಗ್ರಾಂ ಚಿನ್ನ ಹಾಗೂ ನಗದನ್ನು ಕಳ್ಳರು ಕಳವು ಮಾಡಿರುವ ಘಟನೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದಿದೆ.&lt;/p&gt;&lt;p&gt;ಬೆಂಗಳೂರಿನ ಸೋಮಣ್ಣರ ಪತ್ನಿ ನಿಶ್ಚಿತ ತಮ್ಮ ತವರೂರು ಡಿ.ಹಲಸಳ್ಳಿಗೆ ಬಂದು ನಂತರ ಸ್ವಗ್ರಾಮ ಬೆಂಗಳೂರಿಗೆ ಹೋಗಲು ಹಲಗೂರು ಸರ್ಕಾರಿ ಬಸ್ ನಿಲ್ದಾಣದಲ್ಲಿ ಇಳಿದಾಗ ತಾವು ವ್ಯಾನಿಟಿ ಬ್ಯಾಗ್ ನೋಡಿದ್ದು, ಅದರ ಜಿಪ್ ತೆಗೆದು 6 ಗ್ರಾಂ ಒಂದು ಜೊತೆ ಓಲೆ, ಆರು ಗ್ರಾಮ್ ಮಾಟಿ, ನಾಲ್ಕು ಗ್ರಾಂ ಗುಂಡು ಸೇರಿದಂತೆ 2,000 ರೂ ನಗದು ಸೇರಿದಂತೆ ಒಟ್ಟು 1,94,000 ಚಿನ್ನವನ್ನು ಬಸ್ಸಿನಲ್ಲಿ ಕಳ್ಳತನ ಮಾಡಿದ್ದಾರೆ ಎಂದು ಹಲಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಈ ಸಂಬಂಧ ಎಎಸ್ ಐ ರಮೇಶ್ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/parade-of-over-50-rowdy-sheeters-under-the-halagur-circle-jurisdiction/articleshow-gag5rx0"/>
        </item>
        <item>
            <title><![CDATA[ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಮಹಿಳೆ ಸಾವು]]></title>
            <link>https://www.kannadaprabha.in/crime-news/head-on-collision-between-bikes-woman-dies/articleshow-h0nz1sk</link>
            <guid isPermaLink="true">https://www.kannadaprabha.in/crime-news/head-on-collision-between-bikes-woman-dies/articleshow-h0nz1sk</guid>
            <pubDate>Wed, 15 Jul 2026 01:45:00 +0530</pubDate>
            <description><![CDATA[ಎರಡು ಬೈಕ್&zwnj;ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದು ಬೈಕ್&zwnj;ನ ಹಿಂಬದಿ ಕುಳಿತಿದ್ದ ಮಹಿಳೆ ಮೃತಪಟ್ಟಿರುವ ಘಟನೆ ಮಳವಳ್ಳಿ ತಾಲೂಕಿನ ಗೌಡಗೆರೆ ಗ್ರಾಮದ ಗೇಟ್ ಬಳಿ ಸೋಮವಾರ ಸಂಜೆ ನಡೆದಿದೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕು ಉಗನ್ಯ ಗ್ರಾಮದ ಪರಶಿವಮೂರ್ತಿ ಪತ್ನಿ ಸವಿತಾ ಮೃತಪಟ್ಟವರು.]]></description>
            <media:content url="https://static-assets.asianetnews.com/kp/json/14072026/pictures/DOWNLOAD_991.JPG" type="image/jpeg" height="390" width="690"/>
            <content:encoded><![CDATA[&lt;p&gt;ಮಳವಳ್ಳಿ:&lt;/p&gt;ಬೈಕ್&zwnj;ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದು ಬೈಕ್&zwnj;ನ ಹಿಂಬದಿ ಕುಳಿತಿದ್ದ ಮಹಿಳೆ ಮೃತಪಟ್ಟಿರುವ ಘಟನೆ ತಾಲೂಕಿನ ಗೌಡಗೆರೆ ಗ್ರಾಮದ ಗೇಟ್ ಬಳಿ ಸೋಮವಾರ ಸಂಜೆ ನಡೆದಿದೆ.&lt;p&gt;ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕು ಉಗನ್ಯ ಗ್ರಾಮದ ಪರಶಿವಮೂರ್ತಿ ಪತ್ನಿ ಸವಿತಾ (45) ಮೃತಪಟ್ಟವರು. &lt;/p&gt;ಗೌಡಗೆರೆ ಗ್ರಾಮದಲ್ಲಿ ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗೆ ತೆರಳಿ ಬೈಕ್&zwnj;ನಲ್ಲಿ ಪತಿಯೊಂದಿಗೆ ವಾಪಸ್ ಆಗುವ ವೇಳೆ ಗೌಡಗೆರೆ ಗೇಟ್ ಬಳಿ ಎದುರಿನಿಂದ ಬಂದ ಮತ್ತೊಂದು ಬೈಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. &lt;p&gt;ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸವಿತಾ ಅವರಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಿಮ್ಸ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಗುವಿನೊಂದಿಗೆ ತಾಯಿ ನಾಪತ್ತೆ: ದೂರು ದಾಖಲು&lt;/p&gt;ಮದ್ದೂರು:ಪತಿಯಿಂದ ಜೀವನಾಂಶ ಕೋರಿ ಸಲ್ಲಿಸಿದ್ದ ಕೇಸಿನ ವಿಚಾರಣೆಗೆ ಮದ್ದೂರು ನ್ಯಾಯಾಲಯಕ್ಕೆ ಬಂದಿದ್ದ ಪತ್ನಿ ತನ್ನ ಮಗುವಿನೊಂದಿಗೆ ನಾಪತ್ತೆಯಾಗಿದ್ದಾಳೆ ಎಂದು ಈಕೆ ತಾಯಿ ಸಿ.ಸರಸ್ವತಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ.&lt;p&gt;ತಾಲೂಕು ಆತಗೂರು ಹೋಬಳಿಯ ತೊರೆಶೆಟ್ಟಿಹಳ್ಳಿ ಮಂಜುನಾಥ್ ಪತ್ನಿ ಟಿ.ಜಿ.ಧನುಶ್ರೀ (24) ತನ್ನ ನಾಲ್ಕುವರೆ ವರ್ಷದ ಮಗ ಟಿ.ಎಂ.ದಾನಿಶ್ ಗೌಡನೊಂದಿಗೆ ಕಳೆದ ಜುಲೈ 4ರಿಂದ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಧನುಶ್ರೀ 5.5 ಅಡಿ ಎತ್ತರ, ಸಾಧಾರಣ ಮೈ ಕಟ್ಟು, ಕೋಲು ಮುಖ, ಗೋದಿ ಮೈಬಣ್ಣ ಈಕೆ ಮನೆಯಿಂದ ಹೊರಡುವಾಗ ಮೆರೂನ್ ರೆಡ್ ಕಲರ್ ಚೂಡಿದಾರ್ ಧರಿಸಿದ್ದಾರೆ. ಮಗ ದಾನಿಶ್ ಗೌಡ 4 ಅಡಿ ಎತ್ತರ, ಕೆಂಪು ಮೈಬಣ್ಣ , ದುಂಡು ಮುಖ ಹಾಗೂ ಕ್ರೀಮ್ ಕಲರ್ ಶರ್ಟ್, ಬ್ಲೂ ಕಲರ್ ಜೀನ್ಸ್ ಪ್ಯಾಂಟ್ ಧರಿಸಿದ್ದಾನೆ. ಇಬ್ಬರ ಬಗ್ಗೆ ಮಾಹಿತಿ ಉಳ್ಳವರು ಮದ್ದೂರು ಪೊಲೀಸರನ್ನು ಸಂಪರ್ಕಿಸುವಂತೆ ಕೋರಲಾಗಿದೆ.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/head-on-collision-between-bikes-woman-dies/articleshow-h0nz1sk"/>
        </item>
        <item>
            <title><![CDATA[10 ದಿನದ ಹಳೆಯದ್ದು ಎಂದು ಸುಳ್ಳು ಹೇಳಿ 2.5 ತಿಂಗಳ ಹಿಂದಿನ ಕಾರು ಮಾರಾಟ: ಹೈಕೋರ್ಟ್‌ ನೋಟಿಸ್]]></title>
            <link>https://www.kannadaprabha.in/crime-news/high-court-notice-over-sale-of-car-that-was-2-5-months-old-falsely-claimed-to-be-10-days-old/articleshow-invtywu</link>
            <guid isPermaLink="true">https://www.kannadaprabha.in/crime-news/high-court-notice-over-sale-of-car-that-was-2-5-months-old-falsely-claimed-to-be-10-days-old/articleshow-invtywu</guid>
            <pubDate>Tue, 14 Jul 2026 04:32:12 +0530</pubDate>
            <description><![CDATA[10 ದಿನಗಳ ಹಳೆಯ ವಾಹನವೆಂದು ಹೇಳಿ 82 ದಿನಗಳ ಹಳೆಯ ವಾಹನವನ್ನು(ಕಾರು) ನೀಡಿದ ಆರೋಪದ ಮೇಲೆ ದಾಖಲಾದ ದೂರು ರದ್ದುಪಡಿಸುವಂತೆ ಕೋರಿ ಆಟೋಮೊಬೈಲ್ಸ್ ಕಂಪನಿಯೊಂದರ ನಿರ್ದೇಶಕ ಸಲ್ಲಿಸಿರುವ ಅರ್ಜಿಯ ಸಂಬಂಧ ವೈಯಾಲಿಕಾವಲ್ ಠಾಣೆ ಪೊಲೀಸರಿಗೆ ಹೈಕೋರ್ಟ್&zwnj; ನೋಟಿಸ್ ಜಾರಿ ಮಾಡಿದೆ.]]></description>
            <media:content url="https://static-gi.asianetnews.com/images/01ktn8g40cfn90np10t5g1zgyr/----------------------2026-06-09t090917.634-1780977504268.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು : &amp;nbsp;&lt;/strong&gt;10 ದಿನಗಳ ಹಳೆಯ ವಾಹನವೆಂದು ಹೇಳಿ 82 ದಿನಗಳ ಹಳೆಯ ವಾಹನವನ್ನು(ಕಾರು) ನೀಡಿದ ಆರೋಪದ ಮೇಲೆ ದಾಖಲಾದ ದೂರು ರದ್ದುಪಡಿಸುವಂತೆ ಕೋರಿ ಆಟೋಮೊಬೈಲ್ಸ್ ಕಂಪನಿಯೊಂದರ ನಿರ್ದೇಶಕ ಸಲ್ಲಿಸಿರುವ ಅರ್ಜಿಯ ಸಂಬಂಧ ವೈಯಾಲಿಕಾವಲ್ ಠಾಣೆ ಪೊಲೀಸರಿಗೆ ಹೈಕೋರ್ಟ್&zwnj; ನೋಟಿಸ್ ಜಾರಿ ಮಾಡಿದೆ.&lt;/p&gt;&lt;h2&gt;ಹೈಕೋರ್ಟ್&zwnj;ಗೆ ಸಲ್ಲಿಸಿದ್ದ ಅರ್ಜಿ&lt;/h2&gt;&lt;p&gt;ಪ್ರಕರಣ ಸಂಬಂಧ ತಮ್ಮ ವಿರುದ್ಧದ ನಗರದ 1ನೇ ಎಸಿಜೆಎಂ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಸ್ಯಾಂಕಿ ರಸ್ತೆಯ ಟ್ರೈಡೆಂಟ್ ಆಟೋ ಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಸಮಿರ್ ಚೌಧರಿ ಮತ್ತು ರಕ್ಷಿತ್ ಹೈಕೋರ್ಟ್&zwnj;ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿತು.&lt;/p&gt;&lt;p&gt;ವಿಚಾರಣೆ ವೇಳೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನಿಮ್ಮ ಅರ್ಜಿದಾರರು 82 ದಿನಗಳ ಹಳೆಯ ವಾಹನವನ್ನು 10 ದಿನಗಳ ವಾಹನವೆಂದು ತಿಳಿಸಿ ದೂರುದಾರರಿಗೆ ಏಕೆ ಮಾರಾಟ ಮಾಡಿದ್ದೀರಿ ಎಂದು ಪ್ರಶ್ನಿಸಿತು. ಅದಕ್ಕೆ ಅರ್ಜಿದಾರರ ಪರ ವಕೀಲರು, ಲಭ್ಯವಿದ್ದ ವಾಹನವನ್ನು ನೀಡಲಾಗಿದೆ ಎಂದರು. ಇದರಿಂದ ಪೀಠ, ನೀವು (ಅರ್ಜಿದಾರರು) ಇದೇ ರೀತಿಯಲ್ಲಿ ಹಳೆಯ ವಾಹನಗಳನ್ನು ಮಾರಾಟ ಮಾಡುತ್ತೀರಾ? ಟ್ರೈಡೆಂಟ್ ಹುಂಡೈ ಕಂಪನಿಯು ಹಳೆಯ ವಾಹನಗಳನ್ನು ಮಾರಾಟ ಮಾಡುತ್ತದೆಯೇ? ಈ ವಾಹನವನ್ನು ಹೇಗೆ ಮಾರಾಟ ಮಾಡಿದಿರಿ ಎಂದು ಪ್ರಶ್ನಿಸಿತು.&lt;/p&gt;&lt;p&gt;ಅಂತಿಮವಾಗಿ ಅರ್ಜಿಯಲ್ಲಿ ಪ್ರತಿವಾದಿಗಳಾದ ವೈಯಾಲಿಕಾವಲ್ ಠಾಣಾ ಪೊಲೀಸರು ಮತ್ತು ದೂರುದಾರಾದ ಕೆ.ಬಿ.ವೆಂಕಟೇಶ್ ಕುಮಾರ್ ಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.&lt;/p&gt;&lt;h3&gt;ಅರ್ಜಿದಾರರಿಂದ 2025ರಲ್ಲಿ ವಾಹನ ಖರೀದಿಸಿದ್ದ ದೂರುದಾರ ವೆಂಕಟೇಶ್&lt;/h3&gt;&lt;p&gt;ಅರ್ಜಿದಾರರಿಂದ 2025ರಲ್ಲಿ ವಾಹನ ಖರೀದಿಸಿದ್ದ ದೂರುದಾರ ವೆಂಕಟೇಶ್ ಕುಮಾರ್, 2025ರ ಅ.18ರಂದು 1ನೇ ಎಸಿಜೆಎಂ ಕೋರ್ಟ್ ಖಾಸಗಿ ದೂರು ದಾಖಲಿಸಿದ್ದರು. ಅರ್ಜಿದಾರರು 10 ದಿನಗಳ ಹಳೆಯ ವಾಹನವೆಂದು ತಿಳಿಸಿ ನನಗೆ 82 ದಿನಗಳ ಹಳೆಯ ವಾಹನವನ್ನು ಮಾರಾಟ ಮಾಡಿದ್ದಾರೆ. ಆ ಮೂಲಕ ವಂಚಿಸಿದ್ದಾರೆ ಎಂದು ಆರೋಪಿಸಿದ್ದರು. ಪ್ರಕರಣವನ್ನು ತನಿಖೆ ನಡೆಸುವಂತೆ 2026ರ ಜ.8ರಂದು ವೈಯಾಲಿಕಾವಲ್ ಠಾಣಾ ಪೊಲೀಸರಿಗೆ ಕೋರ್ಟ್ ನಿರ್ದೇಶನ ನೀಡಿತ್ತು.&lt;/p&gt;&lt;p&gt;ದೂರಿನೊಂದಿಗೆ ಲಗತ್ತಿಸಿದ ಪ್ರಮಾಣ ಪತ್ರ ಹಾಗೂ ಇತ್ಯಾದಿ ದಾಖಲೆಗಳನ್ನು ಪರಿಶೀಲಿಸಿದ್ದು ತನಿಖೆಗೆ ಇದು ಅರ್ಹ ದೂರವಾಗಿದೆ. ಅದರಂತೆ ವೈಯಾಲಿಕಾವಲ್ ಠಾಣಾ ಪೊಲೀಸರು ದೂರಿನ ಕುರಿತು ತನಿಖೆ ನಡೆಸಿ ವರದಿಯನ್ನು ಸಲ್ಲಿಸಬೇಕು ಎಂದು ಎಸಿಜೆಎಂ ನ್ಯಾಯಾಲಯ ನಿರ್ದೇಶನ ನೀಡಿತ್ತು. ಇದರಿಂದ ತಮ್ಮ ವಿರುದ್ಧದ ದೂರಿನ ಸಂಬಂಧ ಎಸಿಜೆಎಂ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/high-court-notice-over-sale-of-car-that-was-2-5-months-old-falsely-claimed-to-be-10-days-old/articleshow-invtywu"/>
        </item>
        <item>
            <title><![CDATA[ಪತಿ, ಆತನ ಅಕ್ಕನ ಹೆಸರನ್ನು ಬರೆದಿಟ್ಟು ವಿವಾಹಿತೆ ಆತ್ಮಹತ್ಯೆ]]></title>
            <link>https://www.kannadaprabha.in/crime-news/married-woman-commits-suicide-after-leaving-a-note-naming-her-husband-and-his-sister/articleshow-kkx2zfs</link>
            <guid isPermaLink="true">https://www.kannadaprabha.in/crime-news/married-woman-commits-suicide-after-leaving-a-note-naming-her-husband-and-his-sister/articleshow-kkx2zfs</guid>
            <pubDate>Tue, 14 Jul 2026 04:00:00 +0530</pubDate>
            <description><![CDATA[ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ನವವಿವಾಹಿತೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.]]></description>
            <media:content url="https://static-gi.asianetnews.com/images/01kc6sk4zt9wck0h60gv0keg0k/kannada-prabha-1765459727354.jpeg" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ಬೆಂಗಳೂರು &lt;/p&gt;ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ನವವಿವಾಹಿತೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸುಂಕದಕಟ್ಟೆ ಸಮೀಪದ ನಿವಾಸಿ ಶ್ವೇತಾ (23) ಮೃತ ದುರ್ದೈವಿ. ಈ ಘಟನೆ ಸಂಬಂಧ ಮೃತಳ ಪತಿ ಮೂರ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕೌಟುಂಬಿಕ ವಿಚಾರವಾಗಿ ಭಾನುವಾರ ದಂಪತಿ ಮಧ್ಯೆ ಉಂಟಾದ ಜಗಳವು ದುರಂತ ಅಂತ್ಯ ಕಂಡಿದೆ. ಮನೆಯಲ್ಲಿ ಪತಿ ಇಲ್ಲದ ವೇಳೆ ನೇಣು ಬಿಗಿದುಕೊಂಡು ಶ್ವೇತಾ ಆತ್ಮಹತ್ಯೆಗೆ ಶರಣಾಗಿದ್ದು, ಕೆಲ ಹೊತ್ತಿನ ಬಳಿಕ ಆಕೆಯ ಪತಿ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ.&lt;p&gt;ರೈಲು ಪಯಣದಲ್ಲಿ ಪ್ರೀತಿ&lt;/p&gt;4 ತಿಂಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಹುಲಿತಿಮ್ಮಪುರ ಗ್ರಾಮದ ಶ್ವೇತಾ ಹಾಗೂ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಮೂರ್ತಿ ಪ್ರೇಮ ವಿವಾಹವಾಗಿದ್ದರು. ವರ್ಷದ ಹಿಂದೆ ಚಿಕ್ಕಮಗಳೂರಿಗೆ ಹೋಗಿ ಬರುವಾಗ ರೈಲಿನಲ್ಲಿ ಮೂರ್ತಿಗೆ ಶ್ವೇತಾ ಪರಿಚಯವಾಗಿ ಬಳಿಕ ಪ್ರೇಮವಾಗಿತ್ತು. ಕಾಮಾಕ್ಷಿಪಾಳ್ಯ ಸಮೀಪ ಖಾಸಗಿ ಶಾಲೆಯಲ್ಲಿ ಆಕೆ ಶಿಕ್ಷಕಿಯಾಗಿದ್ದರೆ, ಖಾಸಗಿ ವಿಮಾ ಕಂಪನಿಯಲ್ಲಿ ಮೂರ್ತಿ ನೌಕರಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.&lt;p&gt;ಮದುವೆ ಬಳಿಕ ಸುಂದಕಟ್ಟೆ ಬಳಿ ದಂಪತಿ ನೆಲೆಸಿದ್ದರು. ಇತ್ತೀಚಿಗೆ ಕೌಟುಂಬಿಕ ವಿಷಯವಾಗಿ ಇಬ್ಬರ ಮಧ್ಯೆ ಮನಸ್ತಾಪವಾಯಿತು. ತನ್ನ ಬಾಲ್ಯದಲ್ಲೇ ತಂದೆ-ತಾಯಿ ಕಳೆದುಕೊಂಡಿದ್ದ ಮೂರ್ತಿಯನ್ನು ಸಾಕಿ ಸಲುಹಿದ್ದು ಮಲ ಸೋದರಿ ನರಸಮ್ಮ. ರಾಜಗೋಪಾಲನಗರದಲ್ಲಿ ಆತನ ಸೋದರಿ ಕುಟುಂಬ ನೆಲೆಸಿದೆ. ಆದರೆ ತನ್ನ ಸೋದರಿ ಜತೆ ಸಂಬಂಧ ಕಡಿದುಕೊಳ್ಳುವಂತೆ ಪತಿಗೆ ಶ್ವೇತಾ ಒತ್ತಾಯಿಸುತ್ತಿದ್ದಳು. ಇದಕ್ಕೆ ಮೂರ್ತಿಯಿಂದ ಕಡು ವಿರೋಧವಿತ್ತು. ಇದೇ ವಿಚಾರವಾಗಿ ಮನೆಯಲ್ಲಿ ಪದೇ ಪದೇ ಜಗಳವಾಗಿತ್ತು. ಅಂತೆಯೇ ಭಾನುವಾರ ಸೋದರಿಗೆ ಕರೆ ಮಾಡಿ ಮೂರ್ತಿ ಮಾತನಾಡುತ್ತಿದ್ದುದನ್ನು ಗಮನಿಸಿದ ಶ್ವೇತಾ ಕೆಂಡವಾಗಿದ್ದಾಳೆ. ಆಗ ಜಗಳವಾಗಿ ಕೊನೆಗೆ ತನ್ನ ರೂಮಿಗೆ ತೆರಳಿ ನೇಣು ಬಿಗಿದುಕೊಂಡು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. &lt;/p&gt;ಡೆತ್&zwnj;ನೋಟ್&zwnj; ಪತ್ತೆ&lt;p&gt;ಮೃತಳ ಮನೆಯಲ್ಲಿ ಮರಣ ಪತ್ರ ಪತ್ತೆಯಾಗಿದೆ. ಇದರಲ್ಲಿ ತನ್ನ ಸಾವಿಗೆ ಪತಿ ಮೂರ್ತಿ ಹಾಗೂ ಆತನ ಅಕ್ಕನೇ ಕಾರಣರಾಗಿದ್ದಾರೆ. ಈ ಇಬ್ಬರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ವಿಧಿಸುವಂತೆ ಮೃತ ಶ್ವೇತಾ ಬರೆದಿದ್ದಾಳೆ ಎನ್ನಲಾಗಿದೆ.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/married-woman-commits-suicide-after-leaving-a-note-naming-her-husband-and-his-sister/articleshow-kkx2zfs"/>
        </item>
        <item>
            <title><![CDATA[ಸಂಪ್‌ ವಿಚಾರವಾಗಿ ಮರ್ಮಾಂಗಕ್ಕೆ ಒದ್ದು ವ್ಯಕ್ತಿಯ ಹತ್ಯೆ]]></title>
            <link>https://www.kannadaprabha.in/karnataka-news/man-killed-after-being-kicked-in-the-groin-during-a-dispute-over-a-water-sump/articleshow-l340l9e</link>
            <guid isPermaLink="true">https://www.kannadaprabha.in/karnataka-news/man-killed-after-being-kicked-in-the-groin-during-a-dispute-over-a-water-sump/articleshow-l340l9e</guid>
            <pubDate>Sat, 18 Jul 2026 03:30:00 +0530</pubDate>
            <description><![CDATA[ನೀರಿನ ಸಂಪ್&zwnj; ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಮಾಡಿದ್ದಾರೆ ಎಂದು ತಗಾದೆ ತೆಗೆದು ಪ್ಲಂಬರ್&zwnj;ನ ಭಾಮೈದನನ ಮರ್ಮಾಂಗಕ್ಕೆ ಒದ್ದು ಹತ್ಯೆಗೈದ ಆರೋಪದ ಮೇರೆಗೆ ನಿವೇಶನದ ಮಾಲೀಕ ಹಾಗೂ ಆತನ ಇಬ್ಬರು ಪುತ್ರರು ಸೇರಿದಂತೆ 4 ಮಂದಿಯನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.]]></description>
            <media:content url="https://static-assets.asianetnews.com/kp/json/17072026/pictures/MURDER_32.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು &amp;nbsp;: &amp;nbsp;&lt;/strong&gt;ನೀರಿನ ಸಂಪ್&zwnj; ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಮಾಡಿದ್ದಾರೆ ಎಂದು ತಗಾದೆ ತೆಗೆದು ಪ್ಲಂಬರ್&zwnj;ನ ಭಾಮೈದನನ ಮರ್ಮಾಂಗಕ್ಕೆ ಒದ್ದು ಹತ್ಯೆಗೈದ ಆರೋಪದ ಮೇರೆಗೆ ನಿವೇಶನದ ಮಾಲೀಕ ಹಾಗೂ ಆತನ ಇಬ್ಬರು ಪುತ್ರರು ಸೇರಿದಂತೆ 4 ಮಂದಿಯನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;h2&gt;ಕಿತ್ತನಹಳ್ಳಿ ನಿವಾಸಿ ರವಿ ಕೊಲೆಯಾದ ವ್ಯಕ್ತಿ&lt;/h2&gt;&lt;p&gt;ಕಿತ್ತನಹಳ್ಳಿ ನಿವಾಸಿ ರವಿ (38) ಕೊಲೆಯಾದ ವ್ಯಕ್ತಿ. ಹತ್ಯೆ ಸಂಬಂಧ ಕಡಬಗೆರೆಯ ದೇವರಾಜ್&zwnj;, ಇವರ ಮಕ್ಕಳಾದ ರಾಹುಲ್&zwnj;, ವಿನುತ್ ಹಾಗೂ ಸ್ನೇಹಿತ ವಿಘ್ನೇಶ್ ಎಂಬುವರನ್ನು ಬಂಧಿಸಲಾಗಿದೆ. ಸಂಪ್ ನಿರ್ಮಾಣ ವಿಚಾರವಾಗಿ ಪ್ಲಂಬರ್ ಮಂಜುನಾಥ್ ಹಾಗೂ ದೇವರಾಜ್ ಮಧ್ಯೆ ಗುರುವಾರ ಸಂಜೆ ನಡೆದ ಜಗಳದಲ್ಲಿ ಮಧ್ಯ ಪ್ರವೇಶಿಸಿದ ರವಿಯ ಹತ್ಯೆಯಾಗಿದೆ.&lt;/p&gt;&lt;p&gt;ಕಿತ್ತನಹಳ್ಳಿಯಲ್ಲಿ ಆಂಧ್ರ ಮೂಲದ ರವಿ ಹಾಗೂ ಆತನ ಭಾಮೈದ ಮಂಜುನಾಥ್ ಕುಟುಂಬಗಳು ನೆಲೆಸಿವೆ. ಮಂಜುನಾಥ್ ಕೊಳಾಯಿ ರಿಪೇರಿ (ಪ್ಲಂಬರ್) ಕೆಲಸ ಹಾಗೂ ರವಿ ಗಾರೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಇತ್ತೀಚೆಗೆ ಕಡಬಗೆರೆ ಸಮೀಪದ ತಮ್ಮ ನಿವೇಶನದಲ್ಲಿ ಸಂಪ್ ಹಾಗೂ ಶೆಡ್ ನಿರ್ಮಾಣದ ಕಾಮಗಾರಿಯನ್ನು ಮಂಜುನಾಥ್&zwnj;ಗೆ ಕಾಂಡಿಮೆಂಟ್ಸ್ ಮಾಲೀಕ ದೇವರಾಜ್ ವಹಿಸಿದ್ದರು. ಆದರೆ ಸರಿಯಾಗಿ ಕೆಲಸ ಮಾಡದ ಕಾರಣಕ್ಕೆ ಸಂಪ್ ಮುಚ್ಚಳ ಕಿತ್ತು ಬಂದಿತ್ತು. ಹೀಗಾಗಿ ದೇವರಾಜ್ ಅವರು ಕಳಪೆ ಕಾಮಗಾರಿ ಬಗ್ಗೆ ಮಂಜುನಾಥ್&zwnj;ಗೆ ಕರೆ ಮಾಡಿ ಬೈದಿದ್ದರು. ಬಳಿಕ ತಾನು ಬಂದು ಸರಿ ಮಾಡಿಕೊಡುವುದಾಗಿ ಆತ ಹೇಳಿದ್ದ. ಆದರೆ ಕೆಲಸ ಮಾಡದ ಕಾರಣ ದೇವರಾಜ್&zwnj; ಸಿಟ್ಟಾಗಿ ಪ್ಲಂಬರ್&zwnj;ಗೆ ಗುರುವಾರ ನಿರಂತರವಾಗಿ ಅವರು ಕರೆ ಮಾಡಿದ್ದಾರೆ. ಆದರೆ ಆತ ಕರೆ ಸ್ವೀಕರಿಸಿಲ್ಲ.&lt;/p&gt;&lt;h3&gt;ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ&lt;/h3&gt;&lt;p&gt;ಇದರಿಂದ ಕೆರಳಿದ ಅವರು, ತಮ್ಮ ಇಬ್ಬರು ಮಕ್ಕಳು ಹಾಗೂ ಸ್ನೇಹಿತ ವಿಘ್ನೇಶ್&zwnj;ನನ್ನು ಕರೆದುಕೊಂಡು ಮಂಜುನಾಥ್&zwnj; ಮನೆ ಬಳಿ ಬಂದಿದ್ದಾರೆ. ಆಗ ಮನೆಯಲ್ಲಿದ್ದ ಮಂಜುನಾಥ್ ಮೇಲೆ ಆರೋಪಿಗಳು ಗಲಾಟೆ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಸಿಟ್ಟಿನಲ್ಲಿ ಪರಸ್ಪರ ತಳ್ಳಾಟ ನೂಕಾಟವಾಗಿದೆ. ಅದೇ ವೇಳೆ ಮಂಜುನಾಥ್ ಬೆಂಬಲಕ್ಕೆ ಆತನ ಭಾಮೈದ ರವಿ ಬಂದಿದ್ದಾನೆ. ಈ ಜಗಳದ ಮಧ್ಯೆ ಆತನ ಮರ್ಮಾಂಗಕ್ಕೆ ದೇವರಾಜ್ ಪುತ್ರ ರಾಹುಲ್ ಬಲವಾಗಿ ಒದ್ದಿದ್ದಾನೆ. ಈ ಹೊಡೆತದಿಂದ ಆತ ಕುಸಿದು ಬಿದ್ದು ಅಸ್ವಸ್ಥನಾಗಿದ್ದಾನೆ. ತಕ್ಷಣವೇ ಆತನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಿ ರವಿ ಕೊನೆಯುಸಿರೆಳೆದಿದ್ದಾನೆ.&lt;/p&gt;&lt;p&gt;ಈ ಗಲಾಟೆ ಬಗ್ಗೆ ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಮಾದನಾಯನಕಹಳ್ಳಿ ಠಾಣೆ ಪೊಲೀಸರು, ಕೆಲವೇ ಕ್ಷಣಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/karnataka-news/man-killed-after-being-kicked-in-the-groin-during-a-dispute-over-a-water-sump/articleshow-l340l9e"/>
        </item>
        <item>
            <title><![CDATA[ಅಣ್ಣನ ಪ್ರೀತಿ ಒಪ್ಪದ ಯುವತಿಯನ್ನ ರಸ್ತೇಲೇ ಇರಿದು ಕೊಂದ ತಮ್ಮ]]></title>
            <link>https://www.kannadaprabha.in/karnataka-news/young-man-stabs-and-kills-woman-on-the-street-for-rejecting-his-brother-s-love/articleshow-nyfrcvd</link>
            <guid isPermaLink="true">https://www.kannadaprabha.in/karnataka-news/young-man-stabs-and-kills-woman-on-the-street-for-rejecting-his-brother-s-love/articleshow-nyfrcvd</guid>
            <pubDate>Fri, 17 Jul 2026 04:25:57 +0530</pubDate>
            <description><![CDATA[&lt;p&gt;ಪ್ರೀತಿ ನಿರಾಕರಿಸಿದ ಕಾರಣಕ್ಕೆ ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಖಾಸಗಿ ಕಾನೂನು ಕಾಲೇಜಿನ ವಿದ್ಯಾರ್ಥಿನಿಯನ್ನು ಹತ್ಯೆಗೈದಿದ್ದ ಸೋದರರನ್ನು ಜೆ.ಬಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/01kxfseap6wbjtnphh9jwydw6z/navi-mumbai-crime--1784015170246.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು : &amp;nbsp;&lt;/strong&gt;ಪ್ರೀತಿ ನಿರಾಕರಿಸಿದ ಕಾರಣಕ್ಕೆ ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಖಾಸಗಿ ಕಾನೂನು ಕಾಲೇಜಿನ ವಿದ್ಯಾರ್ಥಿನಿಯನ್ನು ಹತ್ಯೆಗೈದಿದ್ದ ಸೋದರರನ್ನು ಜೆ.ಬಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;p&gt;ಕೋಡಿಹಳ್ಳಿ ನಿವಾಸಿ ಅಮೃತಾ (23) ಕೊಲೆಯಾದ ವಿದ್ಯಾರ್ಥಿನಿ. ಈ ಹತ್ಯೆ ಸಂಬಂಧ ಧನುಷ್ ಹಾಗೂ ಆತನ ಸೋದರ ಸೂರ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಕೆಲಸ ಮುಗಿಸಿಕೊಂಡು ಮಂಗಳವಾರ ಸಂಜೆ ಅಮೃತಾ ಮನೆಗೆ ಮರಳುವಾಗ ಆಕೆಯನ್ನು ಅಡ್ಡಗಟ್ಟಿ ಸೂರ್ಯ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಹಲ್ಲೆಗೊಳಗಾಗಿದ್ದ ಆಕೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅಮೃತಾ ಕೊನೆಯುಸಿರೆಳಿದ್ದಾಳೆ. ಈ ಹತ್ಯೆಗೆ ಸೂರ್ಯನ ಆತನ ಸೋದರ ಪಾತ್ರ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಅಣ್ಣನ ಪ್ರೀತಿ ನಿರಾಕರಿಸಿದ್ದಕ್ಕೆ ಹತ್ಯೆ&lt;/strong&gt;&lt;/p&gt;&lt;p&gt;ತನ್ನ ಕುಟುಂಬದ ಜತೆ ನೆಲೆಸಿದ್ದ ಅಮೃತಾ, ಖಾಸಗಿ ಕಾನೂನು ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಅಲ್ಲದೆ ಫಿಜ್ಜಾ ಮಾರಾಟ ಮಳಿಗೆಯಲ್ಲಿ ಬಿಡುವಿನ ವೇಳೆ ಆಕೆ ಕೆಲಸ ಮಾಡುತ್ತಿದ್ದಳು. ವಿಲ್ಸನ್ ಗಾರ್ಡನ್ ಸಮೀಪದ ಹೊಂಬೇಗೌಡ ನಗರದಲ್ಲಿ ಧನುಷ್ ಕುಟುಂಬ ವಾಸವಾಗಿತ್ತು. ಕೆಲ ತಿಂಗಳ ಹಿಂದೆ ಓಂ ಶಕ್ತಿ ದೇವರ ಕಾರ್ಯಕ್ರಮದಲ್ಲಿ ಆತನಿಗೆ ಅಮೃತಾ ಪರಿಚಯವಾಗಿದ್ದಳು. ಈ ಸ್ನೇಹವು ಕ್ರಮೇಣ ಪರಸ್ಪರ ಪ್ರೀತಿಗೆ ತಿರುಗಿತು ಎಂದು ತಿಳಿದು ಬಂದಿದೆ.&lt;/p&gt;&lt;p&gt;ಈ ಜೋಡಿ ಹಸೆಮಣೆ ಏರಲು ಸಹ ನಿರ್ಧರಿಸಿತ್ತು. ಆದರೆ ಇತ್ತೀಚಿಗೆ ಧನುಷ್&zwnj;ನ ನಿಜ ಬಣ್ಣ ಆಕೆಗೆ ಗೊತ್ತಾಯಿತು. ಈಗಾಗಲೇ ಆತನಿಗೆ ಮದುವೆಯಾಗಿ 1 ಮಗುವಿನ ತಂದೆಯಾಗಿದ್ದ ಧನುಷ್&zwnj;, ಕೌಟುಂಬಿಕ ಕಲಹದಿಂದ ಪತ್ನಿಯಿಂದ ದೂರವಾಗಿದ್ದ. ಆದರೆ ತನ್ನ ಮದುವೆ ವಿಚಾರವನ್ನು ಪ್ರಿಯತಮೆಗೆ ತಿಳಿಸದೆ ಆತ ಮುಚ್ಚಿಟ್ಟಿದ್ದ. ಇತ್ತ ಪ್ರಿಯಕರನ ಮೊದಲ ವಿವಾಹ ಸುದ್ದಿ ತಿಳಿದು ಅಮೃತಾಳಿಗೆ ಆಘಾತವಾಗಿತ್ತು. ಇದಾದ ಬಳಿಕ ಆತನ ಸಂಪರ್ಕ ಕಡಿದುಕೊಳ್ಳಲು ಅಮೃತಾ ನಿರ್ಧರಿಸಿದ್ದಳು. ಇನ್ನು ಪ್ರಿಯತಮೆ ಒಲೈಕೆಗೆ ಹಲವು ಬಾರಿ ಯತ್ನಿಸಿದರೂ ಧನುಷ್ ವಿಫಲವಾಗಿದ್ದ. ತನ್ನ ಅಣ್ಣನ ಪ್ರೇಮ ವೈಫಲ್ಯ ತಿಳಿದು ಕೋಪಗೊಂಡ ಸೂರ್ಯ, ಇದೇ ವಿಷಯವಾಗಿ ಅಮೃತಾಳನ್ನು ಭೇಟಿಯಾಗಿ ಸಂಧಾನದ ಮಾತುಕತೆ ನಡೆಸಿದ್ದ. ಆಗಲೂ ಆಕೆ ಪ್ರೇಮ ತಿರಸ್ಕರಿಸಿದ್ದಳು. ಈ ಬೆಳವಣಿಗೆಯಿಂದ ಕೆರಳಿದ ಸೋದರರು, ಕೊನೆಗೆ ಅಮೃತಾಳ ಹತ್ಯೆಗೆ ನಿರ್ಧರಿಸಿದ್ದಾನೆ.&lt;/p&gt;&lt;p&gt;ಅಂತೆಯೇ ಫಿಜ್ಜಾ ಮಳಿಗೆಯಲ್ಲಿ ಕೆಲಸ ಮುಗಿಸಿಕೊಂಡು ಮರಳುತ್ತಿದ್ದ ಅಮೃತಾಳನ್ನು ಅಡ್ಡಗಟ್ಟಿ ಚಾಕುವಿನಿಂದ ಸೂರ್ಯ ಇರಿದಿದ್ದಾನೆ. ಹಲವು ಬಾರಿ ಇರಿತಕ್ಕೊಳಗಾಗಿದ್ದ ಆಕೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಳು. ಈ ಘಟನೆ ತಿಳಿದ ಕೂಡಲೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ತನ್ನ ಪ್ರೇಮ ನಿರಾಕರಿಸಿದ್ದಕ್ಕೆ ಅಮೃತಾಳಿಗೆ ಧನುಷ್ ಕೂಡ ಕೊಲ್ಲುವ ಬೆದರಿಕೆ ಹಾಕಿದ್ದ. ಹೀಗಾಗಿ ಆತನನ್ನು ಕೂಡ ಬಂಧಿಸಲಾಗಿದೆ. ಔಷಧ ಮಾರಾಟ ಪ್ರತಿನಿಧಿಯಾಗಿ ಸೂರ್ಯ ಕೆಲಸ ಮಾಡುತ್ತಿದ್ದರೆ, ಧನುಷ್ ಸಹ ಖಾಸಗಿ ಕಂಪನಿಯಲ್ಲಿ ನೌಕರಿಯಲ್ಲಿದ್ದ. ಉಢಾಳತನದಿಂದ ಸೋದರರು ಜೈಲು ಸೇರುವಂತಾಗಿದೆ.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/karnataka-news/young-man-stabs-and-kills-woman-on-the-street-for-rejecting-his-brother-s-love/articleshow-nyfrcvd"/>
        </item>
        <item>
            <title><![CDATA[ಬೀದರ್‌ನಲ್ಲಿ ಭಾರಿ ಪ್ರಮಾಣದ ಮಾರಕಾಸ್ತ್ರ ಜಪ್ತಿ; ಇಬ್ಬರ ಸೆರೆ]]></title>
            <link>https://www.kannadaprabha.in/crime-news/huge-quantity-of-arms-seized-in-bidar-both-were-arrested/articleshow-owcbzwf</link>
            <guid isPermaLink="true">https://www.kannadaprabha.in/crime-news/huge-quantity-of-arms-seized-in-bidar-both-were-arrested/articleshow-owcbzwf</guid>
            <pubDate>Fri, 17 Jul 2026 01:45:00 +0530</pubDate>
            <description><![CDATA[&lt;p&gt;ಜಿಲ್ಲೆಯ ಪೊಲೀಸರು ಭಾರಿ ಪ್ರಮಾಣದ ದೇಶಿ ನಿರ್ಮಿತ ಪಿಸ್ತೂಲ್&zwnj;ಗಳು ಹಾಗೂ ತಲವಾರುಗಳ ಮಾರಾಟದ ಜಾಲ ಪತ್ತೆ ಮಾಡಿರುವ ಬೆನ್ನಲ್ಲೇ, ಇದರ ಹಿಂದೆ ಯಾವುದಾದರೂ ವಿಧ್ವಂಸಕ ಕೃತ್ಯದ ಯೋಜನೆ ಇತ್ತೇ ಎಂಬ ಶಂಕೆಯಡಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.&lt;/p&gt;]]></description>
            <media:content url="https://static-assets.asianetnews.com/kp/json/16072026/pictures/16BDR2_(2)_717.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೀದರ್&zwnj; : &amp;nbsp;&lt;/strong&gt;ಜಿಲ್ಲೆಯ ಪೊಲೀಸರು ಭಾರಿ ಪ್ರಮಾಣದ ದೇಶಿ ನಿರ್ಮಿತ ಪಿಸ್ತೂಲ್&zwnj;ಗಳು ಹಾಗೂ ತಲವಾರುಗಳ ಮಾರಾಟದ ಜಾಲ ಪತ್ತೆ ಮಾಡಿರುವ ಬೆನ್ನಲ್ಲೇ, ಇದರ ಹಿಂದೆ ಯಾವುದಾದರೂ ವಿಧ್ವಂಸಕ ಕೃತ್ಯದ ಯೋಜನೆ ಇತ್ತೇ ಎಂಬ ಶಂಕೆಯಡಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.&lt;/p&gt;&lt;p&gt;ಈ ಕುರಿತು ಇಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್&zwnj; ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರು ಮಾಹಿತಿ ನೀಡಿದರು.&lt;/p&gt;&lt;h2&gt;ಜುಲೈ 15ರಂದು ಸಂಜೆ ಲಭ್ಯವಾದ ಖಚಿತ ಮಾಹಿತಿ&lt;/h2&gt;&lt;p&gt;ಬೀದರ್&zwnj; ಸಬ್&zwnj; ಅರ್ಬನ್&zwnj; ಪೊಲೀಸ್&zwnj; ಠಾಣೆಯ ಮಹಿಳಾ ಪಿಎಸ್&zwnj;ಐ ತಸ್ಲಿಂ ಸುಲ್ತಾನಾ ಅವರಿಗೆ ಜುಲೈ 15ರಂದು ಸಂಜೆ ಲಭ್ಯವಾದ ಖಚಿತ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ನಡೆಸಲಾಗಿತ್ತು. ರಿಂಗ್&zwnj; ರಸ್ತೆಯ ಪಕ್ಕದಲ್ಲಿ ಇಬ್ಬರು ವ್ಯಕ್ತಿಗಳು ಬೈಕ್&zwnj;ನಲ್ಲಿ ನಿಂತುಕೊಂಡು ದೇಶಿ ಪಿಸ್ತೂಲ್&zwnj;ಗಳನ್ನು ಮಾರಾಟ ಮಾಡಲು ಯತ್ನಿ ಸುತ್ತಿದ್ದ ಮಾಹಿತಿಯ ಮೇರೆಗೆ ಎಸ್&zwnj;ಪಿ ಪ್ರದೀಪ ಗುಂಟಿ ಹಾಗೂ ಎಎಸ್&zwnj;ಪಿ ಚಂದ್ರಕಾಂತ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಡಿಎಸ್&zwnj;ಪಿ ಎಸ್&zwnj;ಡಿ ಸನದಿ ನೇತೃತ್ವದಲ್ಲಿ ಡಿಎಸ್&zwnj;ಪಿ ದೂದ್&zwnj; ಪೀರ್&zwnj; ಹುಸೇನಸಾಬ್&zwnj; ಮುಲ್ಲಾ, ಡಿಎಆರ್&zwnj; ಡಿಎಸ್&zwnj;ಪಿ ಶರಣಪ್ಪ, ಸಿಪಿಐ ಪಾಲಾಕ್ಷಯ್ಯ, ಜಿಎಸ್&zwnj; ಬಿರಾದರ್&zwnj; ಹಾಗೂ ಪೊಲೀಸ್&zwnj; ಸಿಬ್ಬಂದಿಗಳಾದ ಎಂಡಿ ಆರೀಫ್&zwnj;, ಪ್ರಶಾಂತ್&zwnj;, ಅನೀಲ, ಹಣಮಂತ, ಮಲ್ಲಿಕಾರ್ಜುನ್&zwnj;, ಮಂಜುನಾಥ, ವರದರಾಜ್&zwnj;, ನವಾಜ್&zwnj;, ಗುರುನಾಥ್&zwnj;, ಶೇಖ್&zwnj; ಮೊದೀನ್&zwnj;, ರಾಜಕುಮಾರ ದಾನಾ, ಮಲ್ಲಿಕಾರ್ಜುನ್&zwnj;, ಶಿವಶಣರಪ್ಪ, ವಿಶೇಷ ತಂಡದೊಂದಿಗೆ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.&lt;/p&gt;&lt;p&gt;ಬಂಧಿತ ಆರೋಪಿಗಳನ್ನು ಗುರುನಾನಕ್&zwnj; ದೇವಸ್ಥಾನ ಪ್ರದೇಶದ ಹೊಟೆಲ್&zwnj; ಕೆಲಸಗಾರ ಅಮನ್&zwnj;ಜೋತ್&zwnj;ಸಿಂಗ್&zwnj; ರಂಜಿತ್&zwnj; ಸಿಂಗ್&zwnj; (21) ಮತ್ತು ಶಾಹಗಂಜ್&zwnj;ನ ಸಿದ್ಧಾರ್ಥ ಕಾಲೇಜು ವಿದ್ಯಾರ್ಥಿ ವೆಂಕಟೇಶ ತುಕಾರಾಮ್&zwnj; (21) ಎಂದು ಗುರುತಿಸಲಾಗಿದೆ. ಇವರ ಜೊತೆಗೆ ಮಹಾರಾಷ್ಟ್ರದ ನಾಂದೇಡ್&zwnj;ನ ಮುಖ್ಯ ಪೂರೈಕೆದಾರ ಬಲ್ಬೀರ್&zwnj;ಸಿಂಗ್&zwnj; @ ಶೇರು ಪ್ರತಾಪ್&zwnj;ಸಿಂಗ್&zwnj; (23) ಹಾಗೂ ಮತ್ತೊಬ್ಬ ಬೀದರ್&zwnj; ಮೂಲದ ವಿದ್ಯಾರ್ಥಿ ನವಜೋತ್&zwnj;ಸಿಂಗ್&zwnj; ಇಂದೇರ್&zwnj;ಸಿಂಗ್&zwnj; (24) ಎಂಬುವರ ಮೇಲೂ ಪ್ರಕರಣ ದಾಖಲಿಸಲಾಗಿದೆ.&lt;/p&gt;&lt;p&gt;ಇವರಿಂದ ಸುಮಾರು 3.50ಲಕ್ಷ ರುಪಾಯಿ ಮೌಲ್ಯದ 5 ದೇಶಿ ನಿರ್ಮಿತ ನಾಡ ಪಿಸ್ತೂಲ್&zwnj;ಗಳು, 2.6ಲಕ್ಷ ರೂಪಾಯಿ ಮೌಲ್ಯದ 26 ಸಜೀವ ಗುಂಡುಗಳು, ಪರೀಕ್ಷಾರ್ಥವಾಗಿ ಹಾರಿಸಲಾಗಿದ್ದ 10 ಖಾಲಿ ಗುಂಡುಗಳು, 13 ಸಾವಿರ ರೂಪಾಯಿ ಮೌಲ್ಯದ 5 ಲಾಂಗ್&zwnj; ತಲವಾರುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 50 ಸಾವಿರ ರೂಪಾಯಿ ಮೌಲ್ಯದ ಬಜಾಜ್&zwnj; ಪಲ್ಸರ್&zwnj; 220 ಬೈಕ್ ಸೇರಿದಂತೆ ಒಟ್ಟು 6.73 ಲಕ್ಷ ರುಪಾಯಿ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ. ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ, ಆರೋಪಿಗಳು ಈ ಮಾರಕಾಸ್ತ್ರಗಳನ್ನು ಮಹಾರಾಷ್ಟ್ರದ ನಾಂದೇಡ್&zwnj;ನ ಬಲ್ಬೀರ್&zwnj;ಸಿಂಗ್&zwnj; ಮತ್ತು ಬೀದರ್&zwnj;ನ ನವಜೋತ್&zwnj;ಸಿಂಗ್&zwnj; ಅವರಿಂದ ತಲಾ ಒಂದು ಪಿಸ್ತೂಲ್&zwnj;ಗೆ 70ಸಾವಿರ ರು.ಯಂತೆ ಹಾಗೂ ಒಂದು ಸಜೀವ ಗುಂಡಿಗೆ 10ಸಾವಿರ ರು.ಯಂತೆ ಖರೀದಿಸಿ ತಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಬೀದರ್&zwnj;ನಲ್ಲಿ ಇವುಗಳನ್ನು ತಲಾ 1 ಲಕ್ಷಕ್ಕೂ ಅಧಿಕ ಲಾಭಕ್ಕೆ ಸಾರ್ವಜನಿಕರಿಗೆ ಮಾರಾಟ ಮಾಡಲು ತರಲಾಗಿತ್ತು ಎಂದು ತಿಳಿದುಬಂದಿದೆ. ಜಪ್ತಿಯಾದ ಪಿಸ್ತೂಲ್&zwnj;ಗಳು ಯಾವುದೇ ನೋಂದಣಿ ಸಂಖ್ಯೆ ಹೊಂದಿರದೆ, ಗುಂಡು ಹಾರಿಸುವ ಸಂಪೂರ್ಣ ಸಾಮರ್ಥ್ಯ ಹೊಂದಿದ್ದವು ಎಂದು ಪೊಲೀಸರು ಖಚಿತಪಡಿಸಿದ್ದಾರೆ.&lt;/p&gt;&lt;h3&gt;ಸಮಯಪ್ರಜ್ಞೆ ಮೆರೆದ ಪಿಎಸ್&zwnj;ಐ ತಸ್ಲಿಂ ಸುಲ್ತಾನಾ ಕಾರ್ಯಶ್ಲಾಘನೆ:&lt;/h3&gt;&lt;p&gt;ಸಮಯಪ್ರಜ್ಞೆ ಮೆರೆದು ಅತ್ಯಂತ ಯಶಸ್ವಿಯಾಗಿ ದಾಳಿ ನಡೆಸಿ, ಜಿಲ್ಲೆಯಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ ಬೀದರ್&zwnj; ಸಬ್&zwnj; ಅರ್ಬನ್&zwnj; ಪೊಲೀಸ್&zwnj; ಠಾಣೆಯ ಮಹಿಳಾ ಪಿಎಸ್&zwnj;ಐ ತಸ್ಲಿಂ ಸುಲ್ತಾನಾ ಹಾಗೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಪೊಲೀಸ್&zwnj; ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ಎಸ್ಪಿ ಪ್ರದೀಪ ಗುಂಟಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.&lt;/p&gt;&lt;p&gt;&lt;strong&gt;ಶಸ್ತ್ರಾಸ್ತ್ರ ಜಪ್ತಿ; ನ್ಯಾಯಾಂಗ ಬಂಧನಕ್ಕೆ ಆರೋಪಿಗಳು:&lt;/strong&gt;&lt;/p&gt;&lt;p&gt;ಇಷ್ಟೊಂದು ಭಾರಿ ಪ್ರಮಾಣದ ಮಾರಕಾಸ್ತ್ರಗಳ ಮಾರಾಟ ಮತ್ತು ಖರೀದಿ ಜಾಲವು ಯಾವುದೋ ವಿಧ್ವಂಸಕ ಕೃತ್ಯದ ಯೋಜನೆಯನ್ನು ಮುನ್ಸೂಚಿಸುವಂತಿದೆ. ಇಂಥ ದುರ್ಘಟನೆ ನಡೆಯುವ ಮುನ್ನವೇ ನಮ್ಮ ಪೊಲೀಸರು ಜಾಲ ಬೇಧಿಸಿದ್ದ, ಸಂತಸದಾಯಕ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಈ ಪೈಕಿ ಸದ್ಯ ಇಬ್ಬರನ್ನು ಬಂಧಿಸಲಾಗಿದೆ ಎಂದು ಎಸ್&zwnj;ಪಿ ಪ್ರದೀಪ ಗುಂಟಿ ತಿಳಿಸಿದರು. ಈ ಮಾರಕಾಸ್ತ್ರಗಳನ್ನು ಖರೀದಿಸಲು ಯೋಜಿಸಿದ್ದ ಮತ್ತೊಬ್ಬ ಆರೋಪಿಯನ್ನೂ ಸಹ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗುವದು. ಸಧ್ಯ ನಗರದ ಹೊರವಲಯದ ರಿಂಗ್&zwnj; ರಸ್ತೆಯ ಜ್ಞಾನಸುಧಾ ಶಾಲೆಯ ಸಮೀಪ ಅಕ್ರಮವಾಗಿ ಮಾರಾಟ ಮಾಡಲು ತಂದಿದ್ದ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದ್ದು, ಬಂಧಿತ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/huge-quantity-of-arms-seized-in-bidar-both-were-arrested/articleshow-owcbzwf"/>
        </item>
        <item>
            <title><![CDATA[ಠಾಣೆ ಎದುರು ಅಮಾನತುಗೊಂಡ ಜೈಲರ್ ಆತ್ಮಹತ್ಯೆಗೆ ಯತ್ನ..!]]></title>
            <link>https://www.kannadaprabha.in/crime-news/suspended-jailer-attempts-suicide-in-front-of-police-station/articleshow-pzn5qar</link>
            <guid isPermaLink="true">https://www.kannadaprabha.in/crime-news/suspended-jailer-attempts-suicide-in-front-of-police-station/articleshow-pzn5qar</guid>
            <pubDate>Tue, 14 Jul 2026 01:45:00 +0530</pubDate>
            <description><![CDATA[ಪತಿ-ಪತ್ನಿ ನಡುವಿನ ಜಗಳದ ಹಿನ್ನೆಲೆಯಲ್ಲಿ ಪತ್ನಿ ಮೇಲೆ ನೀಡಿದ್ದ ದೂರಿನ ವಿರುದ್ಧ ಪೊಲೀಸರು ಕ್ರಮ ಜರುಗಿಸದ ಕಾರಣ ಅಮಾನತ್ತುಗೊಂಡಿರುವ ಜೈಲರ್ ಬೇಸತ್ತು ಮದ್ದೂರು ಪೊಲೀಸ್&zwnj; ಠಾಣೆ ಎದುರೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಭಾನುವಾರ ರಾತ್ರಿ ಜರುಗಿದೆ.]]></description>
            <media:content url="https://static-assets.asianetnews.com/kp/json/13072026/pictures/000000_165.JPG" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭ ವಾರ್ತೆ ಮದ್ದೂರು&lt;/p&gt;ಪತಿ-ಪತ್ನಿ ನಡುವಿನ ಜಗಳದ ಹಿನ್ನೆಲೆಯಲ್ಲಿ ಪತ್ನಿ ಮೇಲೆ ನೀಡಿದ್ದ ದೂರಿನ ವಿರುದ್ಧ ಪೊಲೀಸರು ಕ್ರಮ ಜರುಗಿಸದ ಕಾರಣ ಅಮಾನತ್ತುಗೊಂಡಿರುವ ಜೈಲರ್ ಬೇಸತ್ತು ಮದ್ದೂರು ಪೊಲೀಸ್&zwnj; ಠಾಣೆ ಎದುರೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಭಾನುವಾರ ರಾತ್ರಿ ಜರುಗಿದೆ.&lt;p&gt;ಘಟನೆ ಕುರಿತಂತೆ ಪೊಲೀಸರು ಗೌಪ್ಯತೆ ಕಾಪಾಡಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಶಿವಮೊಗ್ಗದ ಕಾರಾಗೃಹದಲ್ಲಿ ಕರ್ತವ್ಯ ಲೋಪದ ಮೇಲೆ ಈಚೆಗೆ ಅಮಾನತ್ತುಗೊಂಡಿರುವ ಜಯರಾಮ 52 ಠಾಣೆಯ ಸಿಬ್ಬಂದಿ ಎದುರೇ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಯತ್ನಿಸಿ ತೀವ್ರವಾಗಿ ಗಾಯಗೊಂಡಿದ್ದಾರೆ.&lt;/p&gt;ಭಾನುವಾರ ರಾತ್ರಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಜಯರಾಮನನ್ನು ರಕ್ಷಣೆ ಮಾಡಿದ ನಂತರ ಮದ್ದೂರು ಮತ್ತು ಮಂಡ್ಯ ಜಿಲ್ಲಾಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೆಂಕಿಯಿಂದ ಈತನ ತಲೆಗೆ ತೀವ್ರ ಸುಟ್ಟಗಾಯವಾಗಿದೆ. ಪರಿಸ್ಥಿತಿ ಚಿಂತಾ ಜನಕವಾಗಿದೆ.&lt;p&gt;ಮೂಲತಃ ಮಂಡ್ಯದ ದ್ವಾರಕಾನಗರದ ನಿವಾಸಿ ಜಯರಾಮು ಮದ್ದೂರು ತಾಲೂಕು ರುದ್ರಾಕ್ಷಿಪುರ ಗ್ರಾಮದ ಪತ್ನಿ ಹಾಗೂ ಜಯರಾಮ್ ನಡುವೆ ಕಳೆದ ಎರಡು ದಿನಗಳ ಹಿಂದೆ ಗಲಾಟೆಯಾಗಿದೆ. ಈ ಬಗ್ಗೆ ಜಯರಾಮ ಮದ್ದೂರು ಠಾಣೆಗೆ ದೂರು ನೀಡಿದ್ದರೂ ಸಹ ಕರ್ತವ್ಯದಲ್ಲಿದ್ದ ಅಧಿಕಾರಿಗಳು ದೂರು ದಾಖಲು ಮಾಡಿಕೊಳ್ಳದೆ ನಿರ್ಲಕ್ಷ ಮಾಡಿದ್ದರು. &lt;/p&gt;ಇದರಿಂದ ಬೇಸತ್ತು ಜಯರಾಮ ಭಾನುವಾರ ರಾತ್ರಿ ಠಾಣೆಗೆ ಹಾಜರಾಗಿ ಪತ್ನಿ ವಿರುದ್ಧ ದೂರು ದಾಖಲಿಸದ ಬಗ್ಗೆ ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಜಯರಾಮ ಸರ್ಕಲ್ ಇನ್ಸ್ ಪೆಕ್ಟರ್ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ನಾನು ನೀಡಿದ ದೂರಿನ ಬಗ್ಗೆ ಅಧಿಕಾರಿಗಳಿಂದ ಸೂಕ್ತ ಉತ್ತರ ಬಾರದ ಹಿನ್ನೆಲೆಯಲ್ಲಿ ಬೇಸತ್ತ ಜಯರಾಮ ಪಾನಮತ್ತನಾಗಿ ಠಾಣೆಗೆ ಬಂದು ಮಧ್ಯರಾತ್ರಿ ವೇಳೆಗೆ ಸಿಬ್ಬಂದಿ ಎದುರೇ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.&lt;p&gt;ಈ ಸಂಬಂಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಸೋಮವಾರ ಬೆಳಗ್ಗೆ ಮದ್ದೂರಿಗೆ ದಿಢೀರ್ ಭೇಟಿ ಘಟನೆ ಕುರಿತಂತೆ ಮಾಹಿತಿ ಪಡೆದುಕೊಂಡರು.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/suspended-jailer-attempts-suicide-in-front-of-police-station/articleshow-pzn5qar"/>
        </item>
        <item>
            <title><![CDATA[ಕಾರು-ಬೈಕ್ ನಡುವೆ ಡಿಕ್ಕಿ: ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಸಾವು]]></title>
            <link>https://www.kannadaprabha.in/crime-news/car-bike-collision-college-student-dies-on-the-spot/articleshow-s39vmqx</link>
            <guid isPermaLink="true">https://www.kannadaprabha.in/crime-news/car-bike-collision-college-student-dies-on-the-spot/articleshow-s39vmqx</guid>
            <pubDate>Sun, 19 Jul 2026 02:45:00 +0530</pubDate>
            <description><![CDATA[ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೆ.ಆರ್.ಪೇಟೆ ಪಟ್ಟಣದ ಹೋರವಲಯದ ಶ್ರೀಚೌಡೇಶ್ವರಿ ದೇವಾಲಯದ ಬಳಿಯ ಬೆಂಗಳೂರು-ಜಲಸೂರು ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.]]></description>
            <media:content url="https://static-assets.asianetnews.com/kp/json/18072026/pictures/DOWNLOAD_356.JPG" type="image/jpeg" height="390" width="690"/>
            <content:encoded><![CDATA[&lt;p&gt;ಕೆ.ಆರ್.ಪೇಟೆ:&lt;/p&gt;ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಹೋರವಲಯದ ಶ್ರೀಚೌಡೇಶ್ವರಿ ದೇವಾಲಯದ ಬಳಿಯ ಬೆಂಗಳೂರು-ಜಲಸೂರು ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.&lt;p&gt;ಪಟ್ಟಣದ ಸ್ಕಾಲರ್ ಪಿಯು ಕಾಲೇಜಿನ ವಿದ್ಯಾರ್ಥಿ ಹರ್ಮನ್ (17) ಸ್ಥಳದಲ್ಲಿಯೇ ಮೃತಪಟ್ಟ ವಿದ್ಯಾರ್ಥಿ. ಆತನ ಗೆಳೆಯ ಮಾರುಫ್ (16) ಗಂಭೀರವಾಗಿ ಗಾಯಗೊಂಡವರು.&lt;/p&gt;ಪಟ್ಟಣದ ಹೊರವಲಯದ ಬೆಂಗಳೂರು-ಜಲಸೂರು ರಾಜ್ಯ ಹೆದ್ದಾರಿಯಲ್ಲಿ ಕಾರು ಚಾಲಕನ ಅಜಾಗರೂಕತೆಯಿಂದ ಕಾರು ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್ ಸಂಪೂರ್ಣ ಜಖಂಗೊಂಡಿದೆ. &lt;p&gt;ಬೈಕ್ ಸವಾರ ಬಾಲಕ ಹರ್ಮನ್ ಸ್ಥಳದಲ್ಲಿಯೇ ಮೃತಪಟ್ಟರೆ ಮತ್ತೊಬ್ಬ ಬಾಲಕ ಮಾರುಫ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಕಾರ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.&lt;/p&gt;ಕ್ರಮಕ್ಕೆ ಸಾರ್ವಜನಿಕರ ಆಗ್ರಹ:&lt;p&gt;ಕಾಲೇಜಿಗೆ ಹೋಗಬೇಕಾದ ಬಾಲಕ ಸಾವಿನ ಮನೆ ಸೇರಿದ್ದು, ವಿದ್ಯಾರ್ಥಿಯ ಸಾವಿನಿಂದ ಪೋಷಕರು ಮತ್ತು ವಿದ್ಯಾರ್ಥಿಗಳು ಆಘಾತಕ್ಕೊಳಗಾಗಿದ್ದಾರೆ. ಇತ್ತೀಚೆಗೆ ಪಟ್ಟಣದಲ್ಲಿ ಅಪ್ರಾಪ್ತ ಬಾಲಕರು ಹೆಚ್ಚಾಗಿ ವಾಹನಗಳನ್ನು ಚಾಲನೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ. ಅಪ್ರಾಪ್ತರು ವಾಹನ ಚಲಾಯಿಸುವುದಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು. ಮಕ್ಕಳಿಗೆ ವಾಹನ ನೀಡುವ ಪೋಷಕರ ವಿರುದ್ಧ ಮುಲಾಜಿಲ್ಲದೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.&lt;/p&gt;ಬೆಂಗಳೂರು-ಜಲಸೂರು ಹೆದ್ದಾರಿಯ ಚೌಡೇಶ್ವರಿ ದೇವಾಲಯದ ಬಳಿ ವಾಹನಗಳ ವೇಗ ಹೆಚ್ಚಾಗಿರುವುದರಿಂದ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ಶಾಲಾ-ಕಾಲೇಜು ಸುತ್ತಮುತ್ತಲೂ ಅಪ್ರಾಪ್ತರು ಬೈಕ್ ಮತ್ತು ಸ್ಕೂಟಿ ಮುಂತಾದ ದ್ವಿಚಕ್ರ ವಾಹನಗಳಲ್ಲಿ ಅತಿ ವೇಗವಾಗಿ ಹೋಗುವುದು ಹಾಗೂ ತ್ರಿಬಲ್ ರೈಡಿಂಗ್ ಮಾಡುವುದು ನಡೆಯುತ್ತಿದೆ. ವೇಗ ನಿಯಂತ್ರಣಕ್ಕೆ ಕ್ರಮವಹಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/car-bike-collision-college-student-dies-on-the-spot/articleshow-s39vmqx"/>
        </item>
        <item>
            <title><![CDATA[ಆಸ್ತಿಯ ವಿಚಾರಕ್ಕೆ ಅಜ್ಜಿಯ ಕತ್ತುಸೀಳಿ ಕೊಂದ ಮೊಮ್ಮಗನ ಬಂಧನ]]></title>
            <link>https://www.kannadaprabha.in/karnataka-news/grandson-arrested-for-slitting-grandmother-s-throat-over-property-dispute/articleshow-ugyb25t</link>
            <guid isPermaLink="true">https://www.kannadaprabha.in/karnataka-news/grandson-arrested-for-slitting-grandmother-s-throat-over-property-dispute/articleshow-ugyb25t</guid>
            <pubDate>Fri, 17 Jul 2026 03:30:00 +0530</pubDate>
            <description><![CDATA[ಆಸ್ತಿ ವಿಚಾರವಾಗಿ ಅಜ್ಜಿಯ ಮೊಮ್ಮಗ ಅಜ್ಜಿಯ ಕತ್ತು ಸೀಳಿ ಕೊಲೆ ಮಾಡಿರುವ ಧಾರುಣ ಘಟನೆ ಬನ್ನೇರುಘಟ್ಟದ ಕೆಂಚಕಾಯನಹಳ್ಳಿಯಲ್ಲಿ ನಡೆದಿದೆ. ಕನಕಪುರ ತಾಲೂಕಿನ ಸಂತೆ ಕೊಡಳ್ಳಿ ಮೂಲದ ಗೌರಮ್ಮ ಕೊಲೆಯಾದ ಮಹಿಳೆ. ಪ್ರಜ್ವಲ್ ಕೊಲೆ ಆರೋಪಿ.]]></description>
            <media:content url="https://static-assets.asianetnews.com/kp/json/16072026/pictures/DEATH_999.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು ದಕ್ಷಿಣ : &amp;nbsp;&lt;/strong&gt;ಆಸ್ತಿ ವಿಚಾರವಾಗಿ ಅಜ್ಜಿಯ ಮೊಮ್ಮಗ ಅಜ್ಜಿಯ ಕತ್ತು ಸೀಳಿ ಕೊಲೆ ಮಾಡಿರುವ ಧಾರುಣ ಘಟನೆ ಬನ್ನೇರುಘಟ್ಟದ ಕೆಂಚಕಾಯನಹಳ್ಳಿಯಲ್ಲಿ ನಡೆದಿದೆ. ಕನಕಪುರ ತಾಲೂಕಿನ ಸಂತೆ ಕೊಡಳ್ಳಿ ಮೂಲದ ಗೌರಮ್ಮ ಕೊಲೆಯಾದ ಮಹಿಳೆ. ಪ್ರಜ್ವಲ್ ಕೊಲೆ ಆರೋಪಿ.&lt;/p&gt;&lt;h2&gt;ಮಗಳ ಮನೆ ಸಮೀಪ &amp;nbsp;ವಾಸ&lt;/h2&gt;&lt;p&gt;ಗೌರಮ್ಮ ಮಗಳ ಮನೆ ಸಮೀಪವಿರುವ ಕೆಂಚಕಾಯನಹಳ್ಳಿಯಲ್ಲಿ ವಾಸವಾಗಿದ್ದರು. ಗೌರಮ್ಮ ಅವರಿಗೆ ಇಬ್ಬರು ಮಕ್ಕಳು. ಮಗ ಪೇಂಟ್&zwnj; ಕೆಲಸ ಮಾಡುತ್ತಿದ್ದಾರೆ. ಮಗನ ವರ್ತನೆಗೆ ಬೇಸತ್ತು ಗೌರಮ್ಮ ಮಗಳ ಬಳಿ ಬಂದು ನೆಲೆಸಿದ್ದರು. ಕೆಂಗೇರಿಯಲ್ಲಿ ತಮಗಿದ್ದ ಹಣದಲ್ಲಿ ಮನೆ ಕಟ್ಟಿಸುತ್ತಿದ್ದರು. ತಮ್ಮ ಆಸ್ತಿಯನ್ನು ಮೊಮ್ಮಗ ಪ್ರಜ್ವಲ್&zwnj;ಗೆ ನೀಡಬಾರದು ಎಂದು ಗೌರಮ್ಮ ನಿರ್ಧಾರ ಮಾಡಿದ್ದರು. ಇದೇ ಕಾರಣಕ್ಕೆ ಪ್ರಜ್ವಲ್ ಅಜ್ಜಿಯೊಂದಿಗೆ ಆಗಾಗ ಜಗಳ ಮಾಡುತ್ತಿದ್ದ ಎಂದು ತಿಳಿದುಬಂದಿದೆ.&lt;/p&gt;&lt;p&gt;ಘಟನೆಯ ದಿನ ಗೌರಮ್ಮ ಅವರ ಪತಿ ದುರ್ಗಯ್ಯ ಕೆಲಸಕ್ಕೆ ಹೋಗಿದ್ದರು. ಮನೆಯಲ್ಲಿ ಗೌರಮ್ಮ ಒಬ್ಬರೇ ಇದ್ದರು. ಈ ವೇಳೆ ಪ್ರಜ್ವಲ್ ಮನೆಗೆ ಬಂದು ಹಣಕ್ಕಾಗಿ ಜಗಳ ಮಾಡಿದ್ದಾನೆ. ಮಾತು ಮಿತಿ ಮೀರಿ ಚಾಕುವಿನಿಂದ ಅಜ್ಜಿಯ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ. ಬಳಿಕ ತನ್ನ ತಾಯಿ ಬಳಿ ಅಜ್ಜಿಯನ್ನು ಯಾರೋ ಕೊಲೆ ಮಾಡಿ ಹೋಗಿದ್ದಾರೆ ಎಂದು ಸುಳ್ಳು ಹೇಳಿದ್ದಾನೆ.&amp;nbsp;&lt;/p&gt;&lt;h3&gt;ಆರೋಪಿ ಪ್ರಜ್ವಲ್&zwnj;ನನ್ನು ಬಂಧಿಸಿದ್ದಾರೆ&lt;/h3&gt;&lt;p&gt;&amp;nbsp;ತಾನು ಏನೂ ಮಾಡಿಲ್ಲ ಎಂಬಂತೆ ನಾಟಕ ಮಾಡಿದ್ದ. ಸ್ಥಳಕ್ಕೆ ಬಂದ ಬನ್ನೇರುಘಟ್ಟ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿ ಬೆರಳಚ್ಚು ತಜ್ಞರು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಸ್ಥಳ ಮಹಜರು ಮಾಡಿ ಅನುಮಾನದ ಮೇರೆಗೆ ಪ್ರಜ್ವಲ್&zwnj;ನನ್ನು ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಬಯಲಾಗಿದೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸರು ಪ್ರಕರಣ ದಾಖಲಲಿಸಿಕೊಂಡು ಆರೋಪಿ ಪ್ರಜ್ವಲ್&zwnj;ನನ್ನು ಬಂಧಿಸಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/karnataka-news/grandson-arrested-for-slitting-grandmother-s-throat-over-property-dispute/articleshow-ugyb25t"/>
        </item>
        <item>
            <title><![CDATA[ದರೋಡೆ, ಸುಲಿಗೆಯ 70 ಕೇಸಲ್ಲಿ94 ಜನ ಸೆರೆ: 4.91 ಕೋಟಿ ಜಪ್ತಿ]]></title>
            <link>https://www.kannadaprabha.in/karnataka-news/in-70-robbery-and-extortion-cases-94-arrested-4-91-crore-seized/articleshow-x51ipz0</link>
            <guid isPermaLink="true">https://www.kannadaprabha.in/karnataka-news/in-70-robbery-and-extortion-cases-94-arrested-4-91-crore-seized/articleshow-x51ipz0</guid>
            <pubDate>Sat, 18 Jul 2026 03:30:00 +0530</pubDate>
            <description><![CDATA[ಮನೆಗಳ್ಳತನ, ದರೋಡೆ ಹಾಗೂ ಸುಲಿಗೆ ಸೇರಿದಂತೆ ಸುಮಾರು 70 ಪ್ರಕರಣಗಳಲ್ಲಿ 94 ಆರೋಪಿಗಳನ್ನು ಪತ್ತೆ ಹಚ್ಚಿ 4.91 ಕೋಟಿ ರು.ಮೌಲ್ಯದ ವಸ್ತುಗಳನ್ನು ಉತ್ತರ ವಿಭಾಗದ ಪೊಲೀಸರು ಜಪ್ತಿ ಮಾಡಿದ್ದಾರೆ.]]></description>
            <media:content url="https://static-assets.asianetnews.com/kp/json/17072026/pictures/PROPERTY_PARADE_(4)_708.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು : &amp;nbsp;&lt;/strong&gt;ಮನೆಗಳ್ಳತನ, ದರೋಡೆ ಹಾಗೂ ಸುಲಿಗೆ ಸೇರಿದಂತೆ ಸುಮಾರು 70 ಪ್ರಕರಣಗಳಲ್ಲಿ 94 ಆರೋಪಿಗಳನ್ನು ಪತ್ತೆ ಹಚ್ಚಿ 4.91 ಕೋಟಿ ರು.ಮೌಲ್ಯದ ವಸ್ತುಗಳನ್ನು ಉತ್ತರ ವಿಭಾಗದ ಪೊಲೀಸರು ಜಪ್ತಿ ಮಾಡಿದ್ದಾರೆ. ಎಚ್&zwnj;ಎಂಟಿ ಮೈದಾನದಲ್ಲಿ ಉತ್ತರ ವಿಭಾಗದ ಪೊಲೀಸರು ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಕರಣಗಳ ಪತ್ತೆ ಕುರಿತು ನಗರದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದರು.&lt;/p&gt;&lt;h2&gt;13 ಠಾಣೆಗಳ ಪೊಲೀಸರು &amp;nbsp;ಕಾರ್ಯಾಚರಣೆ&lt;/h2&gt;&lt;p&gt;ಉತ್ತರ ವಿಭಾಗದ ಮಲ್ಲೇಶ್ವರ, ಶ್ರೀರಾಮಪುರ, ರಾಜಾಜಿನಗರ, ಸುಬ್ರಹ್ಮಣ್ಯನಗರ, ಮಹಾಲಕ್ಷ್ಮೀ ಲೇಔಟ್&zwnj;, ನಂದಿನಿ ಲೇಔಟ್&zwnj;, ಯಶವಂತಪುರ, ಆರ್&zwnj;ಎಂಸಿ ಯಾರ್ಡ್, ಜಾಲಹಳ್ಳಿ, ಜೆ.ಸಿ.ನಗರ, ಆರ್&zwnj;.ಟಿ.ನಗರ, ಸಂಜಯನಗರ ಹಾಗೂ ಹೆಬ್ಬಾಳ ಸೇರಿ 13 ಠಾಣೆಗಳ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ 2.462 ಕೆಜಿ ಚಿನ್ನಾಭರಣ, 11 ಗ್ರಾಂ ವಜ್ರ, 64 ಬೈಕ್&zwnj;ಗಳು, 4 ತ್ರಿಚಕ್ರ ವಾಹನಗಳು, 34.34 ಲಕ್ಷ ರು ನಗದು, 71 ವಿವಿಧ ಕಂಪನಿಯ ಮೊಬೈಲ್&zwnj;ಗಳು, 1 ಲ್ಯಾಪ್&zwnj;ಟಾಪ್&zwnj;, 11 ಸೀರೆಗಳು ಹಾಗೂ 44.780 ಕೆಜಿ ಶ್ರೀಗಂಧ ಮರದ ತುಂಡುಗಳು ಸೇರಿದಂತೆ 4.91 ಕೋಟಿ ರು ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.&lt;/p&gt;&lt;h3&gt;ಜಪ್ತಿಯಾದ ವಸ್ತುಗಳನ್ನು ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹಸ್ತಾಂತರಿಸಿದರು&lt;/h3&gt;&lt;p&gt;ಇದೇ ವೇಳೆ ಕಳ್ಳತನ ಕೃತ್ಯಗಳ ಸಂತ್ರಸ್ತರಿಗೆ ಜಪ್ತಿಯಾದ ವಸ್ತುಗಳನ್ನು ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹಸ್ತಾಂತರಿಸಿದರು. ಜಂಟಿ ಆಯುಕ್ತ (ಪಶ್ಚಿಮ) ವಂಶಿಕೃಷ್ಣ ಹಾಗೂ ಉತ್ತರ ವಿಭಾಗದ ಡಿಸಿಪಿ ಬಿ.ನೇಮಗೌಡ ಹಾಜರಿದ್ದರು.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/karnataka-news/in-70-robbery-and-extortion-cases-94-arrested-4-91-crore-seized/articleshow-x51ipz0"/>
        </item>
        <item>
            <title><![CDATA[2 ತೊಲೆ ಚಿನ್ನಕ್ಕಾಗಿ ಅತ್ತೆಯನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ಅಳಿಯ]]></title>
            <link>https://www.kannadaprabha.in/crime-news/son-in-law-hacks-mother-in-law-to-death-for-two-tolas-of-gold/articleshow-yylpzw0</link>
            <guid isPermaLink="true">https://www.kannadaprabha.in/crime-news/son-in-law-hacks-mother-in-law-to-death-for-two-tolas-of-gold/articleshow-yylpzw0</guid>
            <pubDate>Mon, 13 Jul 2026 05:47:44 +0530</pubDate>
            <description><![CDATA[&lt;p&gt;ಎರಡು ತೊಲ ಬಂಗಾರ ಕೊಡಲಿಲ್ಲ ಎಂಬ ಕಾರಣಕ್ಕೆ ಅತ್ತೆಯನ್ನು ಅಳಿಯನೇ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಯಲಹಂಕ ನ್ಯೂಟೌನ್&zwnj;ದಲ್ಲಿ ನಡೆದಿದೆ. ಅತ್ತೆ ರೋಶನಬಿ (50) ಎಂಬುವರನ್ನು ಕೊಲೆ ಮಾಡಿದ ಆರೋಪದ ಮೇಲೆ ಯಾದಗಿರಿ ಮೂಲದ ಅಕ್ಬರ್&zwnj; ಅಲಿ (35) ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/01kxb91s6xe6chaehkd9r2n481/jbjv-1783863764189.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಬೆಂಗಳೂರು : &amp;nbsp;&lt;/strong&gt;ಎರಡು ತೊಲ ಬಂಗಾರ ಕೊಡಲಿಲ್ಲ ಎಂಬ ಕಾರಣಕ್ಕೆ ಅತ್ತೆಯನ್ನು ಅಳಿಯನೇ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಯಲಹಂಕ ನ್ಯೂಟೌನ್&zwnj;ದಲ್ಲಿ ನಡೆದಿದೆ.&lt;/p&gt;&lt;p&gt;ಅತ್ತೆ ರೋಶನಬಿ (50) ಎಂಬುವರನ್ನು ಕೊಲೆ ಮಾಡಿದ ಆರೋಪದ ಮೇಲೆ ಯಾದಗಿರಿ ಮೂಲದ ಅಕ್ಬರ್&zwnj; ಅಲಿ (35) ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;h2&gt;ಜೆ.ಕೆ ಬಸವನಗರದಲ್ಲಿ ಕುಟುಂಬದೊಂದಿಗೆ ವಾಸವಿದ್ದ&lt;/h2&gt;&lt;p&gt;ಆರೋಪಿ ಅಕ್ಬರ್&zwnj; ಅಲಿ ಮೇಡಿ ಅಗ್ರಹಾರ ಸಮೀಪದ ಜೆ.ಕೆ ಬಸವನಗರದಲ್ಲಿ ಕುಟುಂಬದೊಂದಿಗೆ ವಾಸವಿದ್ದ. ಮನೆ ಸಮೀಪವೇ ಅತ್ತೆಯ ಮನೆ ಇದೆ. ಅಕ್ಬರ್&zwnj; ಅಲಿ 8 ವರ್ಷಗಳ ಹಿಂದೆ ರೋಶನಬಿ ಪುತ್ರಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಈಗಾಗಲೇ ಒಂದು ಹೆಣ್ಣು ಮಗುವಿತ್ತು. ಕಳೆದ ತಿಂಗಳು ಗಂಡು ಮಗು ಜನನವಾಗಿತ್ತು.&lt;/p&gt;&lt;h3&gt;ಎರಡು ತೊಲ ಬಂಗಾರ ಕೊಡಿ ಎಂದು ಅತ್ತೆಯ ಬಳಿ ಬೇಡಿಕೆ&lt;/h3&gt;&lt;p&gt;ಗಂಡು ಮಗವಾಗಿರುವ ಹಿನ್ನೆಲೆಯಲ್ಲಿ ಎರಡು ತೊಲ ಬಂಗಾರ ಕೊಡಿ ಎಂದು ಅತ್ತೆಯ ಬಳಿ ಬೇಡಿಕೆ ಇಟ್ಟಿದ್ದ. ಆದರೆ ರೋಶನಬಿ ಎರಡು ತೊಲ ಬಂಗಾರಕ್ಕೆ ಅಂದಾಜು 3-4 ಲಕ್ಷ ಬೇಕಾಗುತ್ತದೆ. ಹೀಗಾಗಿ ಹಣ ಹೊಂದಿಸಿಕೊಂಡು ಬಂಗಾರ ಕೊಡಿಸುವುದಾಗಿ ಹೇಳಿದ್ದಾರೆ. ಆದರೆ ಆರೋಪಿ ಅಕ್ಬರ್&zwnj; ಶುಕ್ರವಾರ ಮಧ್ಯಾಹ್ನ ಮದ್ಯದ ಅಮಲಿನಲ್ಲಿ ಅತ್ತೆಗೆ ಕರೆ ಮಾಡಿ ತನಗೆ ಬಂಗಾರ ಬೇಕೆ ಬೇಕು ಎಂದು ಪಟ್ಟು ಹಿಡಿದಿದ್ದಾನೆ. &amp;nbsp;&lt;/p&gt;&lt;p&gt;ಈ ವೇಳೆ ವಾಗ್ವಾದವಾಗಿದ್ದು, ಇದರಿಂದ ಕೆರಳಿದ ಆರೋಪಿ ಕೊಡಲಿ ತೆಗೆದುಕೊಂಡು ಹೋಗಿ ಅತ್ತೆಯ ತಲೆಗೆ ಹಲ್ಲೆ ಮಾಡಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಭಾನುವಾರ ಮೃತಪಟ್ಟಿದ್ದಾರೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿರುವ ಯಲಹಂಕ ನ್ಯೂಟೌನ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/son-in-law-hacks-mother-in-law-to-death-for-two-tolas-of-gold/articleshow-yylpzw0"/>
        </item>
        <item>
            <title><![CDATA[ಐದೇ ವರ್ಷದಲ್ಲಿ ಯಾದಗಿರಿಯ 16116 ಗರ್ಭಗಳೇ ನಾಪತ್ತೆ!]]></title>
            <link>https://www.kannadaprabha.in/karnataka-news/yadgir-news/16-116-pregnancies-go-unaccounted-for-in-yadgir-over-just-five-years/articleshow-zh44ysi</link>
            <guid isPermaLink="true">https://www.kannadaprabha.in/karnataka-news/yadgir-news/16-116-pregnancies-go-unaccounted-for-in-yadgir-over-just-five-years/articleshow-zh44ysi</guid>
            <pubDate>Mon, 13 Jul 2026 05:58:57 +0530</pubDate>
            <description><![CDATA[&lt;p&gt;ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊಂದಿರುವ, ಗರ್ಭಪಾತ ಹೆಚ್ಚಾಗಿ ನಡೆಯುತ್ತದೆ ಎಂಬ ದೂರುಗಳನ್ನು ಹೊತ್ತಿರುವ ಯಾದಗಿರಿ ಜಿಲ್ಲೆಯಲ್ಲಿ ದಿಗಿಲು ಹುಟ್ಟಿಸುವ ಸಂಗತಿಯೊಂದು ಬೆಳಕಿಗೆ ಬಂದಿದೆ. ಕಳೆದ ಐದು ವರ್ಷಗಳಲ್ಲಿ 53,595 ಮಹಿಳೆಯರು ಗರ್ಭ ಧರಿಸಿರುವ ಕುರಿತು ಸರ್ಕಾರಿ ವ್ಯವಸ್ಥೆಯಲ್ಲಿ ಅಧಿಕೃತವಾಗಿ ನೋಂದಣಿ&lt;/p&gt;]]></description>
            <media:content url="https://static-gi.asianetnews.com/images/01gvhcchy1nzy68bjzkfgay47r/pregnancy-1678841890753.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಆನಂದ್&zwnj; ಎಂ. ಸೌದಿ&lt;/strong&gt;&lt;/p&gt;&lt;p&gt;&lt;strong&gt;&amp;nbsp;ಯಾದಗಿರಿ : &amp;nbsp;&lt;/strong&gt;ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊಂದಿರುವ, ಗರ್ಭಪಾತ ಹೆಚ್ಚಾಗಿ ನಡೆಯುತ್ತದೆ ಎಂಬ ದೂರುಗಳನ್ನು ಹೊತ್ತಿರುವ ಯಾದಗಿರಿ ಜಿಲ್ಲೆಯಲ್ಲಿ ದಿಗಿಲು ಹುಟ್ಟಿಸುವ ಸಂಗತಿಯೊಂದು ಬೆಳಕಿಗೆ ಬಂದಿದೆ. ಕಳೆದ ಐದು ವರ್ಷಗಳಲ್ಲಿ 53,595 ಮಹಿಳೆಯರು ಗರ್ಭ ಧರಿಸಿರುವ ಕುರಿತು ಸರ್ಕಾರಿ ವ್ಯವಸ್ಥೆಯಲ್ಲಿ ಅಧಿಕೃತವಾಗಿ ನೋಂದಣಿಯಾಗಿದೆ. ಈ ಪೈಕಿ 35424 ಮಂದಿಗೆ ಹೆರಿಗೆಯೂ ಆಗಿದೆ. 2055 ಪ್ರಕರಣಗಳಲ್ಲಿ ಗರ್ಭಪಾತವಾಗಿದೆ. ಆದರೆ ಉಳಿದ 16,116 ಗರ್ಭಗಳ (ಶೇ.30) ಬಗ್ಗೆ ಮಾಹಿತಿಯೇ ಇಲ್ಲ!&lt;/p&gt;&lt;p&gt;ಆ ಗರ್ಭಗಳನ್ನು ಧರಿಸಿದ್ದ ಮಹಿಳೆಯರಿಗೆ ಹೆರಿಗೆಯಾಯಿತೆ? ಅವರಿಗೆ ಬೇರೆ ಏನಾದರೂ ಆಯಿತೆ? ಗರ್ಭಪಾತವಾಯಿತೆ? ಆ ಗರ್ಭಪಾತ ಸ್ವಾಭಾವಿಕವೋ? ಅಥವಾ ಬಲವಂತದ್ದೋ? ಯಾವುದಕ್ಕೂ ಉತ್ತರವೇ ಸಿಗುತ್ತಿಲ್ಲ. ಸರ್ಕಾರದ ತನಿಖಾ ವರದಿಯ ಪ್ರಕಾರ, ಈ ನಾಪತ್ತೆಯಾಗಿರುವ ಗರ್ಭಗಳಲ್ಲಿ ಬಹುತೇಕವು ಭ್ರೂಣ ಹತ್ಯೆ ಪಿಡುಗಿಗೆ ಬಲಿಯಾಗಿವೆ. ಈ ಅಮಾನವೀಯ ಕೆಲಸದಿಂದಾಗಿ ಯಾದಗಿರಿಯ ಲಿಂಗಾನುಪಾತ ಪ್ರಪಾತಕ್ಕೆ ಕುಸಿದಿದೆ!&lt;/p&gt;&lt;p&gt;ಯಾದಗಿರಿ ಜಿಲ್ಲೆಯಲ್ಲಿ 3 ಸಾವಿರಕ್ಕೂ ಹೆಚ್ಚು ಗರ್ಭಗಳ ನಾಪತ್ತೆ ಹಾಗೂ ಗಂಡು ಸಂತಾನ ಹಂಬಲಿಸಿ ಅಕ್ರಮವಾಗಿ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿರುವ ಕುರಿತು &lsquo;ಕನ್ನಡಪ್ರಭ&rsquo; ಮಾರ್ಚ್, ಏಪ್ರಿಲ್&zwnj; ಹಾಗೂ ಮೇ ತಿಂಗಳಲ್ಲಿ ವಿಶೇಷ ಸರಣಿ ವರದಿ ಪ್ರಕಟಿಸಿತ್ತು. ಈ ವರದಿಗಳು ಸಂಚಲನಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಅಂದಿನ ಆರೋಗ್ಯ ಸಚಿವ ದಿನೇಶ್&zwnj; ಗುಂಡೂರಾವ್&zwnj; ಅವರು ವಿಶೇಷ ಸಭೆ ನಡೆಸಿದ್ದರು. ಆರೋಗ್ಯ ಇಲಾಖೆಯ ಅಂದಿನ ಪ್ರಧಾನ ಕಾರ್ಯದರ್ಶಿಯಾಗಿದ್ದ, ಹಿರಿಯ ಐಎಎಸ್&zwnj; ಅಧಿಕಾರಿ ಹರ್ಷಗುಪ್ತ ಅವರ ಸೂಚನೆ ಮೇರೆಗೆ ರಾಜ್ಯಮಟ್ಟದ ಬಹುಶಿಸ್ತೀಯ ಸಮಿತಿಯನ್ನು ರಚನೆ ಮಾಡಲಾಗಿತ್ತು. ಏಪ್ರಿಲ್&zwnj;ನಲ್ಲಿ 5 ದಿನ ಯಾದಗಿರಿಗೆ ಭೇಟಿ ನೀಡಿ ತನಿಖೆ ನಡೆಸಿದ್ದ ಸಮಿತಿಯು ಇದೀಗ ಸರ್ಕಾರಕ್ಕೆ ತನ್ನ ವರದಿ ನೀಡಿದ್ದು, ಈ ವರದಿಯಲ್ಲಿ 16116 ಗರ್ಭಗಳ ಬಗ್ಗೆ ಮಾಹಿತಿ ಇಲ್ಲ ಎಂಬ ಅಂಶ ಪತ್ತೆಯಾಗಿದೆ. ಬೆಂಗಳೂರಿನ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಕೆಯಾದ ರಾಜ್ಯಮಟ್ಟದ ಸಮಿತಿಯ 74 ಪುಟಗಳ ವರದಿ &lsquo;ಕನ್ನಡಪ್ರಭ&rsquo;ಕ್ಕೆ ಲಭ್ಯವಾಗಿದೆ.&lt;/p&gt;&lt;p&gt;ಜಿಲ್ಲೆಯಲ್ಲಿ ಹೆಣ್ಣು ಭ್ರೂಣಹತ್ಯೆ, ಬಾಲಗರ್ಭಿಣಿಯರಲ್ಲಿನ ಗರ್ಭಪಾತಗಳು ಮತ್ತು ಶಿಶುಮರಣ ಪ್ರಮಾಣಗಳು ಹೆಚ್ಚುತ್ತಿವೆ. ನೋಂದಾಯಿತ ಗರ್ಭಧಾರಣೆಗಳಲ್ಲಿ &lsquo;ಯಾವುದೇ ಫಲಿತಾಂಶ ದಾಖಲಾಗದ&rsquo; ಪ್ರಕರಣಗಳ ಪ್ರಮಾಣ ದೊಡ್ಡ ಮಟ್ಟದಲ್ಲಿದೆ&rsquo; ಎಂದು ವರದಿ ಹೇಳುತ್ತದೆ.&lt;/p&gt;&lt;h2&gt;&lt;strong&gt;ನಾಪತ್ತೆ ಹೇಗೆ?&lt;/strong&gt;&lt;/h2&gt;&lt;p&gt;ಸಾಮಾನ್ಯವಾಗಿ, ಗರ್ಭ ಧರಿಸಿದ 10ರಿಂದ 12 ವಾರಗಳ ಬಳಿಕ ತಪಾಸಣೆಗೆ ಗರ್ಭಿಣಿಯರು ಆಸ್ಪತ್ರೆಗಳಿಗೆ ತೆರಳುತ್ತಾರೆ. 12 ವಾರ ತುಂಬಿದ ಬಳಿಕ ಖಾಸಗಿ ಸ್ಕ್ಯಾನಿಂಗ್&zwnj; ಸೆಂಟರ್&zwnj;ಗಳಿಗೆ ಹಣ ಕೊಟ್ಟು ಕುಟುಂಬ ಸದಸ್ಯರು ಭ್ರೂಣ ಲಿಂಗ ಪತ್ತೆ ಪರೀಕ್ಷೆ ಮಾಡಿಸುತ್ತಾರೆ. ಗಂಡು ಎಂದು ಸಾಬೀತಾದರೆ ಗರ್ಭ ಮುಂದುವರಿಯುತ್ತದೆ. ಹೆಣ್ಣು ಎಂದು ಗೊತ್ತಾಗುತ್ತಿದ್ದಂತೆ, ಆ ಗರ್ಭ ಧರಿಸಿದವರು ಸರ್ಕಾರದ ನಿಗಾದಿಂದಲೇ ಮಾಯವಾಗುತ್ತಾರೆ. ಅಂಥವರನ್ನು ಹುಡುಕಿ ಮನೆ ಮನೆಗೆ ಎಡತಾಕಿದಾಗ ಪ್ರಯಾಣ ಮಾಡುತ್ತಿರುವಾಗ ಸಮಸ್ಯೆಯಾಯಿತು, ಆರೋಗ್ಯ ಸಮಸ್ಯೆಯಿಂದ ಗರ್ಭ ಹೋಯಿತು ಎಂಬಿತ್ಯಾದಿ ನೆಪಗಳನ್ನು ಕುಟುಂಬದವರು ಹೇಳುತ್ತಾರೆ. ಆ ಕುರಿತಾದ ವೈದ್ಯಕೀಯ ದಾಖಲೆಗಳು ಇರುವುದಿಲ್ಲ. ಗರ್ಭ ಧರಿಸಿದಾಗ ನೀಡುವ ನೋಂದಣಿ ಪುಸ್ತಿಕೆಯನ್ನೇ ಸುಟ್ಟು ಹಾಕಲಾಗುತ್ತಿದೆ. ಗರ್ಭಪಾತ ಮಾತ್ರೆ ಬಳಕೆ ವ್ಯಾಪಕವಾಗಿದೆ. ಹೀಗಾಗಿ ಬಹುಪಾಲು ಗರ್ಭಗಳು ಭ್ರಣ ಹತ್ಯೆ ಪಿಡುಗಿಗೆ ಬಲಿಯಾಗಿರಬಹುದು ಎಂಬ ಅಂಶ ತನಿಖಾ ವರದಿಯಲ್ಲಿ ಇದೆ.&lt;/p&gt;&lt;p&gt;2021-22, 2022-23, 2023-24, 2024-25, 2025-26 (ಮೇ ವರೆಗೆ)ರ ಅಂದಾಜು ಮಾಹಿತಿಯಂತೆ, ಒಟ್ಟು 16,116 (ಶೇ.30.1) ಪ್ರಕರಣಗಳ ಬಗ್ಗೆ ಮಾಹಿತಿಯೇ ಇಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಪ್ರತಿವರ್ಷ ಸರಾಸರಿಯಂತೆ, 3 ಸಾವಿರಕ್ಕೂ ಅಧಿಕ ಗರ್ಭಗಳ ಬಗ್ಗೆ ಕೊನೆಯ ಹಂತದ &lsquo;ಔಟ್&zwnj; ಕಮ್&zwnj; ರಿಪೋರ್ಟ್&zwnj;&rsquo; ಇಲ್ಲ.&lt;/p&gt;&lt;h3&gt;&lt;strong&gt;ಹೆಚ್ಚುತ್ತಿವೆ ಹೆಣ್ಣು ಭ್ರೂಣ ಹತ್ಯೆಗಳು!:&lt;/strong&gt;&lt;/h3&gt;&lt;p&gt;ಜಿಲ್ಲೆಯಲ್ಲಿ ಕೇವಲ ಒಂದೇ ವರ್ಷದಲ್ಲಿ ಗರ್ಭಪಾತಗಳ ಸಂಖ್ಯೆಯಲ್ಲಿ ಶೇ.88.6% ರಷ್ಟು ಏರಿಕೆ ಕಂಡು ಬಂದಿದೆ. 2023-24ರಲ್ಲಿ 673 ಇದ್ದ ಪ್ರಕರಣಗಳು 2024-25ರ ವೇಳೆಗೆ 1,269ಕ್ಕೆ ತಲುಪಿವೆ. ಒಟ್ಟು ಪ್ರಸವಪೂರ್ವ ಆರೈಕೆ ನೋಂದಣಿಗೆ ಹೋಲಿಸಿದರೆ, ಗರ್ಭಪಾತದ ಈ ದರ ಶೇ.2.76% ರಿಂದ ಶೇ.4.41% ಕ್ಕೆ ಜಿಗಿದಿದೆ. ಈ ವರ್ಷದ ಕೊನೆಗೆ ಈ ಸಂಖ್ಯೆ ಸುಮಾರು 1,000 ತಲುಪುವ ಸಾಧ್ಯತೆಯಿದೆ ಎಂದು ವರದಿ ಹೇಳಿದ್ದು, ಯಾದಗಿರಿ ಜಿಲ್ಲೆಯಲ್ಲಿ ಗರ್ಭಪಾತಗಳು ನಿರಂತರವಾಗಿ ಹೆಚ್ಚುತ್ತಿರುವುದನ್ನು ಈ ಅಂಕಿ-ಅಂಶಗಳು ಪುಷ್ಟೀಕರಿಸುತ್ತಿವೆ.&lt;/p&gt;&lt;p&gt;ಎರಡು ಮತ್ತು ಮೂರು ಹೆಣ್ಣು ಮಕ್ಕಳನ್ನು ಹೊಂದಿರುವವರು, ಮೂರನೇ ಅಥವಾ ನಾಲ್ಕನೇ ಗರ್ಭ ಧರಿಸಿದಾಗ, ಅದು ಹೆಣ್ಣು ಎಂದು ಲಿಂಗಪತ್ತೆ ಮೂಲಕ ಪತ್ತೆಯಾದರೆ, ಅಸುರಕ್ಷಿತ ಗರ್ಭಪಾತಕ್ಕೆ ಮುಂದಾಗುತ್ತಿದ್ದಾರೆ. ಗಂಡು ಮಗುವಿಗಾಗಿ ಒಲವು, ಇದಕ್ಕಾಗಿ ಕುಟುಂಬದ ಒತ್ತಡಗಳಿಂದಾಗಿ ಕಾನೂನುಬಾಹಿರವಾಗಿ, ಅಸುರಕ್ಷಿತ ಗರ್ಭಪಾತಕ್ಕೆ ಮುಂದಾಗುತ್ತಿದ್ದಾರೆ. ಸುರಪುರ ತಾಲೂಕು, ಪಕ್ಕದ ವಿಜಯಪುರ ಜಿಲ್ಲೆಯ ತಾಳಿಕೋಟಿ, ಮುದ್ದೇಬಿಹಾಳ ಮುಂತಾದೆಡೆ ಇಂತಹ ಗರ್ಭಪಾತಗಳು ನಡೆಯುತ್ತಿವೆ ಎಂಬ ಸಂಗತಿ ಸಮಿತಿಯ ತನಿಖೆಯಲ್ಲಿ ವ್ಯಕ್ತವಾಗಿದೆ.&lt;/p&gt;&lt;p&gt;&lt;strong&gt;ಗರ್ಭಪಾತ ಮಾತ್ರೆಗಳ ಬೇಕಾಬಿಟ್ಟಿ ಮಾರಾಟ&lt;/strong&gt;&lt;/p&gt;&lt;p&gt;ಗರ್ಭಪಾತಕ್ಕೆ ಬಳಸುವ ಮಿಫೆಪ್ರಿಸ್ಟೋನ್ ಮತ್ತು ಮಿಸೊಪ್ರೊಸ್ಟೋಲ್ ಸಂಯೋಜನೆಯ ಔಷಧಗಳು (ಎಂಟಿಪಿ ಕಿಟ್&zwnj;ಗಳು) ವೈದ್ಯರ ಯಾವುದೇ ಲಿಖಿತ ಚೀಟಿ ಇಲ್ಲದೆಯೇ ಹಲವು ಅಂಗಡಿಗಳಲ್ಲಿ ಸುಲಭವಾಗಿ ಲಭ್ಯವಿರುವುದು ಸಮಿತಿಯ ತನಿಖೆಯಲ್ಲಿ ದೃಢಪಟ್ಟಿದೆ. ಕೆಲವು ಪ್ರಕರಣಗಳಲ್ಲಂತೂ, ಯಾವುದೇ ದಾಖಲೆಗಳಿಲ್ಲದೆ ಕೇವಲ ಮೌಖಿಕ ವಿನಂತಿಯ ಮೇರೆಗೆ ಗ್ರಾಹಕರಿಗೆ ಈ ಮಾತ್ರೆಗಳನ್ನು ನೇರವಾಗಿ ವಿತರಿಸಲಾಗಿದೆ.&lt;/p&gt;&lt;p&gt;&lt;strong&gt;ಬಾಲ ಗರ್ಭಿಣಿಯರು, ಗರ್ಭಪಾತಗಳು ಹೆಚ್ಚಳ&lt;/strong&gt;&lt;/p&gt;&lt;p&gt;ಯಾದಗಿರಿ ಜಿಲ್ಲೆಯಲ್ಲಿ ಶೇಕಡಾ 33.2% ರಷ್ಟು ಮಹಿಳೆಯರಿಗೆ 18 ವರ್ಷ ತುಂಬುವ ಮುಂಚೆಯೇ ವಿವಾಹವಾಗಿದೆ. 18 ವರ್ಷದೊಳಗಿನ ಗರ್ಭಧಾರಣೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಏರಿಕೆಯಾಗಿದೆ. 2021-22ರಲ್ಲಿ 91 ಇದ್ದ ಇಂತಹ ಪ್ರಕರಣಗಳ ಸಂಖ್ಯೆ, 2023-24ರ ವೇಳೆಗೆ 302ಕ್ಕೆ ಏರಿಕೆಯಾಗಿದೆ.&lt;/p&gt;&lt;p&gt;ಇನ್ನು, ಅವಿವಾಹಿತ ಹುಡುಗಿಯರ ಗರ್ಭಪಾತದ ವಿಷಯದಲ್ಲಿ ಪೋಷಕರು ಯಾವುದೇ ವಿವರಗಳನ್ನು ಬಹಿರಂಗಪಡಿಸಲು ಇಷ್ಟಪಟ್ಟಿಲ್ಲ. ಇವುಗಳನ್ನು ಅತ್ಯಂತ ರಹಸ್ಯವಾಗಿ ಮಾಡಲಾಗುತ್ತದೆ. ಹಳೆಯ ಗರ್ಭಪಾತಗಳ ಮಾಹಿತಿಯನ್ನು ಮರು-ಸಂಗ್ರಹಿಸಲು ಹೋದಾಗ, ಆ ಘಟನೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಕುಟುಂಬದವರೇ ಸಂಪೂರ್ಣವಾಗಿ ಸುಟ್ಟು ಹಾಕಿದ್ದರಿಂದ ಆ ದಾಖಲೆಗಳನ್ನು ಪಡೆಯಲು ಸಮಿತಿಗೆ ಸಾಧ್ಯವಾಗಲಿಲ್ಲ ಎನ್ನಲಾಗಿದೆ.&lt;/p&gt;&lt;h3&gt;&lt;strong&gt;ರಾಜ್ಯಮಟ್ಟದ ಬಹುಶಿಸ್ತೀಯ ಸಮಿತಿ:&lt;/strong&gt;&lt;/h3&gt;&lt;p&gt;ಭಾರತ ಸರ್ಕಾರದ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಪ್ರಾದೇಶಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ, ಬೆಂಗಳೂರು ಇದರ ಹಿರಿಯ ಪ್ರಾದೇಶಿಕ ನಿರ್ದೇಶಕರಾದ ಡಾ. ಸ್ಮಿತಾ ರಾವತ್, ರಾಷ್ಟ್ರೀಯ ಮಹಿಳಾ ಆರೋಗ್ಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಮುಂಬೈನ ಕ್ಲಿನಿಕಲ್ ರಿಸರ್ಚ್ ವಿಭಾಗದ ಮುಖ್ಯಸ್ಥರು ಹಾಗೂ ವಿಜ್ಞಾನಿ ಡಾ.ಅನುಶ್ರೀ ಪಾಟೀಲ್, ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಯಿಮ್ಸ್&zwnj;) ಮಕ್ಕಳ ಚಿಕಿತ್ಸಾ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾ ಡಾ.ಕುಮಾರ್ ಅಂಗಡಿ, ಹಿರಿಯ ಪ್ರಸೂತಿ ತಜ್ಞ, ಕೊಪ್ಪಳ ಜಿಲ್ಲೆ ಕನಕಗಿರಿಯ ಡಾ. ಈಶ್ವರ್ ಸವದಿ, ಕಲಬುರಗಿ ಜಿಮ್ಸ್&zwnj;ನ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ. ಉಷಾ ದೊಡ್ಡಮನಿ ಹಾಗೂ ಬೆಂಗಳೂರಿನ ನೂರಾ ಹೆಲ್ತ್&zwnj;ನ ವೈದ್ಯಕೀಯ ಮುಖ್ಯಸ್ಥರಾದ ಡಾ. ನೀಲಿಮಾ ದೇವದಾಸ್ ಅವರ ತಂಡ ಈ ವರದಿ ಸಲ್ಲಿಸಿದೆ. ಯಾದಗಿರಿಯ ಕುಟುಂಬ ಕಲ್ಯಾಣ ಜಿಲ್ಲಾ ಅಧಿಕಾರಿ ಡಾ. ಜ್ಯೋತಿ ಕಟ್ಟೀಮನಿ ನೋಡಲ್&zwnj; ಅಧಿಕಾರಿಯಾಗಿ ಪರಿಶೀಲನಾ-ಭೇಟಿ ವೇಳೆ ತಂಡದ ಜೊತೆಗಿದ್ದರು. ಸಮಿತಿ 2026ರ ಏಪ್ರಿಲ್ 6 ರಿಂದ 10ರವರೆಗೆ ಯಾದಗಿರಿ ಜಿಲ್ಲೆಗೆ ಐದು ದಿನಗಳ ಭೇಟಿ ಕೈಗೊಂಡಿತ್ತು.&lt;/p&gt;&lt;p&gt;53595 ಗರ್ಭ: 5 ವರ್ಷಗಳಲ್ಲಿ ಯಾದಗಿರಿಯಲ್ಲಿ ಗರ್ಭ ಧರಿಸಿದ ಮಹಿಳೆಯರ ಸಂಖ್ಯೆ&lt;/p&gt;&lt;p&gt;35424 ಹೆರಿಗೆ: ಸರ್ಕಾರದ ಬಳಿ ನೋಂದಣಿಯಾದವರ ಪೈಕಿ 35424 ಮಂದಿಗೆ ಹೆರಿಗೆ&lt;/p&gt;&lt;p&gt;2055 ಗರ್ಭಪಾತ: ಅಧಿಕೃತ ಅಂಕಿ-ಅಂಶಗಳ ಪ್ರಕಾರ ಐದು ವರ್ಷದಲ್ಲಾದ ಗರ್ಭಪಾತ&lt;/p&gt;&lt;p&gt;16116 ಗರ್ಭ: ಉಳಿದ ಗರ್ಭಗಳ ಬಗ್ಗೆ ಅಧಿಕಾರಿಗಳ ಬಳಿ ಯಾವುದೇ ಮಾಹಿತಿ ಇಲ್ಲ&lt;/p&gt;&lt;p&gt;&lt;strong&gt;ಏನಿದು ಕಣ್ಮರೆ ಆಟ?&lt;/strong&gt;&lt;/p&gt;&lt;p&gt;- 10-12 ವಾರ ತುಂಬಿದಾಗ ಗರ್ಭಿಣಿಯರು ತಪಾಸಣೆಗೆಂದು ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಆಗ ಅವರ ವಿವರ ನೋಂದಣಿಯಾಗುತ್ತದೆ&lt;/p&gt;&lt;p&gt;- 12 ವಾರದ ನಂತರ ಖಾಸಗಿ ಸ್ಕ್ಯಾನಿಂಗ್&zwnj; ಸೆಂಟರ್&zwnj;ಗೆ ಗರ್ಭಿಣಿಯನ್ನು ಕರೆದೊಯ್ಯುವ ಕುಟುಂಬವರು ಭ್ರೂಣ ಲಿಂಗ ಪತ್ತೆ ಮಾಡಿಸುತ್ತಾರೆ&lt;/p&gt;&lt;p&gt;- ಗಂಡು ಅಂತ ಗೊತ್ತಾದರೆ ಆ ಗರ್ಭ ಮುಂದುವರಿಯುತ್ತದೆ. ಹೆಣ್ಣು ಅಂತ ಗೊತ್ತಾಗುತ್ತಿದ್ದಂತೆ ಗರ್ಭ ಸರ್ಕಾರಿ ನಿಗಾದಿಂದ ಮಾಯವಾಗುತ್ತದೆ&lt;/p&gt;&lt;p&gt;- ಮನೆಗೆ ಹೋಗಿ ವಿಚಾರಿಸಿದರೆ ಪ್ರಯಾಣದ ವೇಳೆ ಅಥವಾ ಅನಾರೋಗ್ಯದಿಂದ ಗರ್ಭ ಹೋಗಿದೆ ಎಂದು ನೆಪಗಳನ್ನು ಹೇಳುತ್ತಾರೆ&lt;/p&gt;&lt;p&gt;- ವೈದ್ಯಕೀಯ ದಾಖಲೆಗಳನ್ನೇ ಸುಟ್ಟು ಹಾಕಿರುತ್ತಾರೆ. ನಾಪತ್ತೆಯಾದ ಗರ್ಭಗಳಲ್ಲಿ ಬಹುತೇಕವು ಭ್ರೂಣ ಹತ್ಯೆಗೆ ಬಲಿಯಾಗಿವೆ: ವರದಿ&lt;/p&gt;]]></content:encoded>
            <category>crime</category>
            <dc:creator>Sujatha NR</dc:creator>
            <atom:link href="https://www.kannadaprabha.in/karnataka-news/yadgir-news/16-116-pregnancies-go-unaccounted-for-in-yadgir-over-just-five-years/articleshow-zh44ysi"/>
        </item>
        <item>
            <title><![CDATA[ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಯುವಕ ಸಾವು, ಮತ್ತೊಬ್ಬನಿಗೆ ಗಂಭೀರ ಗಾಯ]]></title>
            <link>https://www.kannadaprabha.in/crime-news/head-on-collision-between-bikes-youth-dies-another-critically-injured/articleshow-zl4d5ct</link>
            <guid isPermaLink="true">https://www.kannadaprabha.in/crime-news/head-on-collision-between-bikes-youth-dies-another-critically-injured/articleshow-zl4d5ct</guid>
            <pubDate>Thu, 16 Jul 2026 02:00:00 +0530</pubDate>
            <description><![CDATA[ಬೈಕ್&zwnj;ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಮೃತಪಟ್ಟಿರುವ ಘಟನೆ ಕೆ.ಆರ್.ಪೇಟೆ ಪಟ್ಟಣದ ಹೊರವಲಯದ ಹೆಮ್ಮನಹಳ್ಳಿ ಗೇಟ್ ಸಮೀಪದ ಮೈಸೂರು ರಸ್ತೆಯಲ್ಲಿ ನಡೆದಿದೆ.]]></description>
            <media:content url="https://static-assets.asianetnews.com/kp/json/15072026/pictures/CHIKKAHALAGAIAH_906.JPG" type="image/jpeg" height="390" width="690"/>
            <content:encoded><![CDATA[&lt;p&gt;ಕೆ.ಆರ್.ಪೇಟೆ: &lt;/p&gt;ಬೈಕ್&zwnj;ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಮೃತಪಟ್ಟಿರುವ ಘಟನೆ ಪಟ್ಟಣದ ಹೊರವಲಯದ ಹೆಮ್ಮನಹಳ್ಳಿ ಗೇಟ್ ಸಮೀಪದ ಮೈಸೂರು ರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.&lt;p&gt;ತಾಲೂಕಿನ ಮುರುಕನಹಳ್ಳಿಯ ಯುವಕ ರಕ್ಷಿತ್ (21) ಮೃತಪಟ್ಟವರು ಎಂದು ಗುರುತಿಸಲಾಗಿದೆ.&lt;/p&gt;ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಕ್ಷಿತ್ ನನ್ನು ಕೂಡಲೇ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮುಂಜಾನೆ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆದಿದ್ದಾರೆ. ಅಪಘಾತದಲ್ಲಿ ಮತ್ತೋರ್ವ ಬೈಕ್ ಸವಾರ ಪ್ರಮೋದ್ ಸ್ಥಿತಿಯೂ ಗಂಭೀರವಾಗಿದ್ದು, ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ರಭಸಕ್ಕೆ ಎರಡೂ ಬೈಕ್&zwnj;ಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಕೆ.ಆರ್.ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ&lt;p&gt;ಕಾರಿನ ಚಕ್ರದ ಟೈರ್ ಸಿಡಿದು ಬೈಕ್&zwnj;ಗೆ ಡಿಕ್ಕಿ: ಸವಾರ ಸಾವು, ಮಹಿಳೆಗೆ ಗಾಯ&lt;/p&gt;ಪಾಂಡವಪುರ: ಕಾರಿನ ಚಕ್ರದ ಟೈರ್ ಸಿಡಿದು ಬೈಕ್&zwnj;ಗೆ ಡಿಕ್ಕಿಯಾದ ಪರಿಣಾಮ ಸವಾರ ಸಾವನ್ನಪ್ಪಿ, ಮಹಿಳೆ ಗಾಯಗೊಂಡಿರುವ ಘಟನೆ ತಾಲೂಕಿನ ಚಿನಕುರಳಿ- ಹುಳಿಗೆರೆ ಗ್ರಾಮಗಳ ಬಳಿ ನಡೆದಿದೆ. &lt;p&gt;ತಾಲೂಕಿನ ದುದ್ದ ಹೋಬಳಿ ಬೆಟ್ಟಹಳ್ಳಿಯ ಚಿಕ್ಕಹಲಗಯ್ಯ (70) ಅಪಘಾತದಲ್ಲಿ ಮೃತಪಟ್ಟವರು. ಮೃತರ ಪುತ್ರಿ ಶೋಭ ಗಾಯಗೊಂಡಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. &lt;/p&gt;ಹುಳಿಗೆರೆ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಮೀಪ ಚಲಿಸುತ್ತಿದ್ದ ವೇಳೆ ಕಾರಿನ ಟೈರ್ ಸಿಡಿದು ಪಕ್ಕದಲ್ಲೇ ಹೋಗುತ್ತಿದ್ದ ಬೈಕ್&zwnj;ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಚಿಕ್ಕಹಲಗಯ್ಯ ಅವರು ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರ ಪುತ್ರಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಯಿತು. &lt;p&gt;ಮುದಗಂದೂರು ಗ್ರಾಪಂ ಮಾಜಿ ಅಧ್ಯಕ್ಷರಾಗಿ, ಮಂಡಲ ಪಂಚಾಯ್ತಿ ಮಾಜಿ ಸದಸ್ಯರೂ ಆಗಿದ್ದ ಚಿಕ್ಕಹಲಗಯ್ಯ ಅವರು, ದಲಿತ ಸಂಘರ್ಷ ಸಮಿತಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಕೆಲಸ ಮಾಡಿದ್ದರು. ಮೃತರು ಪತ್ನಿ, ಓಬ್ಬ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. &lt;/p&gt;ಇಂದು (ಜು.16) ಬೆಳಗ್ಗೆ 11 ಗಂಟೆಗೆ ಬೆಟ್ಟಹಳ್ಳಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ. ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ಭಾರತೀಯ ರೆಡ್&zwnj;ಕ್ರಾಸ್ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ದಸಂಸ ಮುಖಂಡ ಕೃಷ್ಣ ಜಿ.ಮಲ್ಲಿಗೆರೆ ಇತರರು ಸಂತಾಪ ಸೂಚಿಸಿದ್ದಾರೆ.]]></content:encoded>
            <category>crime</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/crime-news/head-on-collision-between-bikes-youth-dies-another-critically-injured/articleshow-zl4d5ct"/>
        </item>
    </channel>
</rss>
