<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Kannada Prabha</title>
        <link>https://www.kannadaprabha.in</link>
        <description><![CDATA[Kannada Prabha - No.1 News channel in Karnataka, which delivers Local and International news in Marathi language.]]></description>
        <image>
            <url>https://static-assets.asianetnews.com/images/ogimages/OG_Bangla.jpg</url>
            <width>143</width>
            <height>100</height>
            <link>https://www.kannadaprabha.in</link>
            <title>Kannada Prabha</title>
        </image>
        <lastBuildDate>Mon, 20 Jul 2026 13:40:57 +0530</lastBuildDate>
        <atom:link href="https://www.kannadaprabha.in/rss/entertainment-news" rel="self" type="application/rss+xml"/>
        <item>
            <title><![CDATA[ಬದರೀನಾಥ ದೇಗುಲ ಹುಂಡಿ ಲೂಟಿ : ಪ್ರಮುಖ ಆರೋಪಿ ಪ್ರಮೋದ್‌ ಸೆರೆ]]></title>
            <link>https://www.kannadaprabha.in/entertainment-news/suspended-employee-of-shri-badrinath-kedarnath-temple-committee-arrested-for-donation-irregularities/articleshow-08wpy0p</link>
            <guid isPermaLink="true">https://www.kannadaprabha.in/entertainment-news/suspended-employee-of-shri-badrinath-kedarnath-temple-committee-arrested-for-donation-irregularities/articleshow-08wpy0p</guid>
            <pubDate>Tue, 14 Jul 2026 02:00:00 +0530</pubDate>
            <description><![CDATA[ಮಮಂದಿರ ಬಳಿಕ ಬದರೀನಾಥ ದೇಗುಲದಲ್ಲಿ ಕೇಳಿ ಬಂದಿದ್ದ ಹುಂಡಿ ಅವ್ಯವಹಾರದ ತನಿಖೆ ಕೂಡ ಚುರುಕು ಪಡೆದುಕೊಂಡಿದೆ. ಪ್ರಕರಣದ ಪ್ರಮುಖ ಆರೋಪಿ, ಬಿಕೆಟಿಸಿ (ಬದರಿನಾಥ ಕೇದಾರನಾಥ ಟೆಂಪಲ್ ಟ್ರಸ್ಟ್) ಅಧ್ಯಕ್ಷರ ಮಾಜಿ ಪಿಎ ಪ್ರಮೋದ್&zwnj; ನೌಟಿಯಾಲ್&zwnj;ರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ]]></description>
            <media:content url="https://static-assets.asianetnews.com/kp/json/13072026/pictures/BADARINATH_645.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಡೆಹ್ರಾಡೂನ್&zwnj;: &lt;/strong&gt;ರಾಮಮಂದಿರ ಬಳಿಕ ಬದರೀನಾಥ ದೇಗುಲದಲ್ಲಿ ಕೇಳಿ ಬಂದಿದ್ದ ಹುಂಡಿ ಅವ್ಯವಹಾರದ ತನಿಖೆ ಕೂಡ ಚುರುಕು ಪಡೆದುಕೊಂಡಿದೆ. ಪ್ರಕರಣದ ಪ್ರಮುಖ ಆರೋಪಿ, ಬಿಕೆಟಿಸಿ (ಬದರಿನಾಥ ಕೇದಾರನಾಥ ಟೆಂಪಲ್ ಟ್ರಸ್ಟ್) ಅಧ್ಯಕ್ಷರ ಮಾಜಿ ಪಿಎ ಪ್ರಮೋದ್&zwnj; ನೌಟಿಯಾಲ್&zwnj;ರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.&amp;nbsp;&lt;/p&gt;&lt;h2&gt;ಭಾನುವಾರ ತಡರಾತ್ರಿಯೇ ಬಂಧನ&lt;/h2&gt;&lt;p&gt;ಭಾನುವಾರ ತಡರಾತ್ರಿಯೇ ಬಂಧನವಾಗಿದ್ದು, ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.&lt;/p&gt;&lt;h3&gt;ಪ್ರಮೋದ್&zwnj;ನನ್ನು ಟ್ರಸ್ಟ್&zwnj;ನಿಂದ ವಜಾಗೊಳಿಸಲಾಗಿತ್ತು&lt;/h3&gt;&lt;p&gt;ಹಗರಣ ಬೆಳಕಿಗೆ ಬರುತ್ತಿದ್ದಂತೆ ಪ್ರಮೋದ್&zwnj;ನನ್ನು ಟ್ರಸ್ಟ್&zwnj;ನಿಂದ ವಜಾಗೊಳಿಸಲಾಗಿತ್ತು. ಕಳೆದ ವಾರ ಎಫ್&zwnj;ಐಆರ್&zwnj; ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ದೇವಾಲಯದಲ್ಲಿ ಹುಂಡಿ ಕಳವು ನಡೆದಿರುವುದು ನಿಜ ಎಂದು ವರದಿ ನೀಡಿತ್ತು. ಇದರ ಬೆನ್ನಲ್ಲೇ ಈ ಬೆಳವಣಿಗೆ ಅಗಿದೆ.&lt;/p&gt;]]></content:encoded>
            <category>entertainment</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/entertainment-news/suspended-employee-of-shri-badrinath-kedarnath-temple-committee-arrested-for-donation-irregularities/articleshow-08wpy0p"/>
        </item>
        <item>
            <title><![CDATA[ಒಂದೇ ತಿಂಗಳಲ್ಲಿ ಗೋಲ್ಡನ್‌ಸ್ಟಾರ್‌ ಗಣೇಶ್‌ ನಟನೆಯ 2 ಸಿನಿಮಾ ಬಿಡುಗಡೆ]]></title>
            <link>https://www.kannadaprabha.in/entertainment-news/two-films-starring-golden-star-ganesh-to-release-in-the-same-month/articleshow-3pzov8u</link>
            <guid isPermaLink="true">https://www.kannadaprabha.in/entertainment-news/two-films-starring-golden-star-ganesh-to-release-in-the-same-month/articleshow-3pzov8u</guid>
            <pubDate>Fri, 03 Jul 2026 14:04:51 +0530</pubDate>
            <description><![CDATA[&lt;p&gt;ಜುಲೈ 2 ಗೋಲ್ಡನ್&zwnj;ಸ್ಟಾರ್ ಗಣೇಶ್&zwnj; ಜನ್ಮದಿನ. ಆ ಖುಷಿಯಲ್ಲಿ ಅವರ ನಟನೆಯ ಎರಡೆರಡು ಸಿನಿಮಾಗಳ ಬಿಡುಗಡೆ ದಿನಾಂಕ ರಿವೀಲ್&zwnj; ಆಗಿದೆ. ಧನಂಜಯ ಬಿ. ನಿರ್ದೇಶನದ ಪಿನಾಕಾ ಸಿನಿಮಾ ಅಕ್ಟೋಬರ್&zwnj; 2ರಂದು ತೆರೆಗೆ ಬಂದರೆ, ಅಕ್ಟೋಬರ್&zwnj; 16ರಂದು ಶ್ರೀನಿವಾಸ್&zwnj; ರಾಜು ನಿರ್ದೇಶನದ &lsquo;ಬೃಂದಾವಿಹಾರಿ&rsquo; ರಿಲೀಸ್&zwnj; ಆಗಲಿದೆ.&lt;/p&gt;]]></description>
            <media:content url="https://static-gi.asianetnews.com/images/01kwh8p522cq5g9qmbgdktp3w5/hhc-1782990967874.png" type="image/jpeg" height="390" width="690"/>
            <content:encoded><![CDATA[&lt;p&gt;ಜುಲೈ 2 ಗೋಲ್ಡನ್&zwnj;ಸ್ಟಾರ್ ಗಣೇಶ್&zwnj; ಜನ್ಮದಿನ. ಆ ಖುಷಿಯಲ್ಲಿ ಅವರ ನಟನೆಯ ಎರಡೆರಡು ಸಿನಿಮಾಗಳ ಬಿಡುಗಡೆ ದಿನಾಂಕ ರಿವೀಲ್&zwnj; ಆಗಿದೆ. ಧನಂಜಯ ಬಿ. ನಿರ್ದೇಶನದ ಪಿನಾಕಾ ಸಿನಿಮಾ ಅಕ್ಟೋಬರ್&zwnj; 2ರಂದು ತೆರೆಗೆ ಬಂದರೆ, ಅಕ್ಟೋಬರ್&zwnj; 16ರಂದು ಶ್ರೀನಿವಾಸ್&zwnj; ರಾಜು ನಿರ್ದೇಶನದ &lsquo;ಬೃಂದಾವಿಹಾರಿ&rsquo; ರಿಲೀಸ್&zwnj; ಆಗಲಿದೆ. ಈ ಎರಡೂ ಸಿನಿಮಾಗಳ ನಡುವೆ ಕೇವಲ 14 ದಿನಗಳ ಅಂತರವಷ್ಟೇ ಇದೆ.&lt;/p&gt;&lt;p&gt;ಸ್ಟಾರ್&zwnj; ನಟನೊಬ್ಬನ ಸಿನಿಮಾ ಇಷ್ಟು ಕಡಿಮೆ ಅಂತರದಲ್ಲಿ ಬಿಡುಗಡೆ ಆಗುತ್ತಿರುವುದು ಬಹಳ ಅಪರೂಪ ಎನ್ನಲಾಗಿದೆ. ಆದರೆ ಎರಡು ದೊಡ್ಡ ಸಿನಿಮಾಗಳ ನಡುವೆ ಒಂದು ತಿಂಗಳಾದರೂ ಅಂತರ ಇರಬೇಕಿತ್ತು ಎಂಬ ಮಾತೂ ಕೇಳಿಬರುತ್ತಿದೆ.&lt;/p&gt;&lt;p&gt;&lsquo;ಪಿನಾಕ&rsquo; ಚಿತ್ರ ಸಸ್ಪೆನ್ಸ್&zwnj; ಥ್ರಿಲ್ಲರ್&zwnj; ಆ್ಯಕ್ಷನ್&zwnj; ಸಿನಿಮಾವಾಗಿದ್ದು &lsquo;ಕ್ಷುದ್ರ ಮತ್ತು ರುದ್ರ ಶಕ್ತಿಗಳ ಕಾಳಗ&rsquo; ಹೈಲೈಟ್&zwnj;. ಪೀಪಲ್&zwnj; ಮೀಡಿಯಾ ಫ್ಯಾಕ್ಟರಿ ಈ ಚಿತ್ರವನ್ನು ನಿರ್ಮಾಣ ಮಾಡಿದೆ. &lsquo;ಕೃಷ್ಣಂ ಪ್ರಣಯ ಸಖಿ&rsquo; ಸಿನಿಮಾ ಬಳಿಕ ಗಣೇಶ್&zwnj; ಹಾಗೂ ಶ್ರೀನಿವಾಸ್&zwnj;ರಾಜು ಕಾಂಬಿನೇಶನ್&zwnj;ನಲ್ಲಿ ಬರುತ್ತಿರುವ &lsquo;ಬೃಂದಾವಿಹಾರಿ&rsquo; ರೊಮ್ಯಾಂಟಿಕ್&zwnj; ಡ್ರಾಮಾ. ಸಮೃದ್ಧಿ ವಿ. ಮಂಜುನಾಥ್&zwnj; ನಿರ್ಮಾಣವಿದೆ.&lt;/p&gt;&lt;h3&gt;&lt;strong&gt;ಇನ್ನೊಂದೆಡೆ ಗಣೇಶ್&zwnj; ತನ್ನ ಜನ್ಮದಿನವನ್ನು ತಿರುಪತಿ ತಿಮ್ಮಪ್ಪನ ಸಾನ್ನಿಧ್ಯದಲ್ಲಿ ಆಚರಿಸಿದ್ದಾರೆ.&lt;/strong&gt;&lt;/h3&gt;&lt;p&gt;&amp;nbsp;ಪ್ರೇಕ್ಷಕರಲ್ಲಿ ಸಿನಿಮಾ ನೋಡುವ ಕಾತರ ಕಡಿಮೆಯಾಗುತ್ತಿದೆ. ತಿಂಗಳಿಗೊಂದಾದರೂ ಪ್ರೇಕ್ಷಕರನ್ನು ಸೆಳೆಯುವಂಥಾ ಕನ್ನಡ ಸಿನಿಮಾ ಬಂದರೆ ಇಂಡಸ್ಟ್ರಿ ಬೆಳೆಯುತ್ತದೆ. ಈಗಾಗಲೇ ಒಪ್ಪಿಕೊಂಡ ಸಿನಿಮಾ ಬಿಡುಗಡೆ ಬಳಿಕ ಹೊಸ ಸಿನಿಮಾ ಕೆಲಸ ಶುರುಮಾಡುತ್ತೇನೆ.&lt;/p&gt;&lt;h2&gt;- ಗೋಲ್ಡನ್&zwnj;ಸ್ಟಾರ್ ಗಣೇಶ್&zwnj;&lt;/h2&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/two-films-starring-golden-star-ganesh-to-release-in-the-same-month/articleshow-3pzov8u"/>
        </item>
        <item>
            <title><![CDATA[ಯಶ್ ಟಾಕ್ಸಿಕ್‌ ತಬಾಹಿ ವೀಡಿಯೋ ಹಾಡು ಬಂತು]]></title>
            <link>https://www.kannadaprabha.in/entertainment-news/the-video-song-tabahi-from-yashs-toxic-has-been-released/articleshow-46ukquz</link>
            <guid isPermaLink="true">https://www.kannadaprabha.in/entertainment-news/the-video-song-tabahi-from-yashs-toxic-has-been-released/articleshow-46ukquz</guid>
            <pubDate>Thu, 09 Jul 2026 13:13:13 +0530</pubDate>
            <description><![CDATA[&lt;p&gt;ಯಶ್&zwnj; ನಟನೆಯ ಟಾಕ್ಸಿಕ್&zwnj; ಸಿನಿಮಾದ &lsquo;ತಬಾಹಿ&rsquo; ವೀಡಿಯೋ ಹಾಡು ಬಿಡುಗಡೆ ಆಗಿದೆ. ರಿಲೀಸ್&zwnj; ಆದ ಕೆಲವೇ ಕ್ಷಣಗಳಲ್ಲಿ ಈ ಹಾಡು ವೈರಲ್ ಆಗಿದೆ. ಕಾರಣ ಈ ಹಾಡಿನಲ್ಲಿ ಕಾಣಿಸಿಕೊಂಡಿರುವ ಯಶ್&zwnj; ಹಾಗೂ ಕಿಯಾರಾ ನಡುವಿನ ಬೋಲ್ಡ್&zwnj; ದೃಶ್ಯಗಳು.&lt;/p&gt;]]></description>
            <media:content url="https://static-gi.asianetnews.com/images/01kx2wn0qxjw4th3m669keyj0e/new-project---2026-07-09t125447.531-1783582327547.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;strong&gt; ಸಿನಿವಾರ್ತೆ&lt;/strong&gt;&lt;/p&gt;&lt;p&gt;ಯಶ್&zwnj; ನಟನೆಯ ಟಾಕ್ಸಿಕ್&zwnj; ಸಿನಿಮಾದ &lsquo;ತಬಾಹಿ&rsquo; ವೀಡಿಯೋ ಹಾಡು ಬಿಡುಗಡೆ ಆಗಿದೆ. ರಿಲೀಸ್&zwnj; ಆದ ಕೆಲವೇ ಕ್ಷಣಗಳಲ್ಲಿ ಈ ಹಾಡು ವೈರಲ್ ಆಗಿದೆ. ಕಾರಣ ಈ ಹಾಡಿನಲ್ಲಿ ಕಾಣಿಸಿಕೊಂಡಿರುವ ಯಶ್&zwnj; ಹಾಗೂ ಕಿಯಾರಾ ನಡುವಿನ ಬೋಲ್ಡ್&zwnj; ದೃಶ್ಯಗಳು.&lt;/p&gt;&lt;h2&gt;ಹಾಡಿನುದ್ದಕ್ಕೂ ಬೀಚು, ಕಾರು, ಪಬ್ಬು&lt;/h2&gt;&lt;p&gt;ಹಾಡಿನುದ್ದಕ್ಕೂ ಬೀಚು, ಕಾರು, ಪಬ್ಬು, ಸರ್ಕಸ್&zwnj; ಹೀಗೆ ಎಲ್ಲೆಲ್ಲೂ ರಾಯ ಮತ್ತು ನಾಡಿಯಾ ಜೋಡಿಯ ರೊಮ್ಯಾಂಟಿಕ್&zwnj; ಸೀನ್&zwnj;ಗಳೇ ಇವೆ. ಸಿನಿಮಾದಲ್ಲಿ ಈ ಜೋಡಿಯ ಅಪೀಯರೆನ್ಸ್&zwnj;, ಕೆಮೆಸ್ಟ್ರಿ ಹೇಗಿರಬಹುದು ಎಂಬುದು ಈ ಹಾಡಿನಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.&lt;/p&gt;&lt;h3&gt;ಪೋರ್ಚುಗೀಸರ ಕಾಲದ ಗೋವನ್&zwnj; ಪರಿಸರ&lt;/h3&gt;&lt;p&gt;ಪೋರ್ಚುಗೀಸರ ಕಾಲದ ಗೋವನ್&zwnj; ಪರಿಸರದಲ್ಲಿ ತೆರೆದುಕೊಳ್ಳುವ ಈ ಹಾಡಿನಲ್ಲಿ ಯಶ್&zwnj; ದೇಹದಾರ್ಢ್ಯ ಹಾಗೂ ಕಿಯಾರಾ ಗ್ಲಾಮರ್&zwnj; ಹೈಲೈಟ್&zwnj; ಆಗಿದೆ. ವಿಶೇಷ ಅಂದರೆ ಹಾಡಿನ ಮಧ್ಯೆ ನಯನತಾರಾ ಕಾಣಿಸಿಕೊಂಡಿದ್ದಾರೆ. ಇನ್ನೊಂದೆಡೆ ಈ ಹಾಡಿನಲ್ಲಿ ಬಾಲಿವುಡ್&zwnj; ನಟಿ ತಾರ ಸುತಾರಿಯಾ ಮತ್ತು ಯಶ್&zwnj; ನಡುವೆ ಡೈಲಾಗ್&zwnj; ಸಹ ಮೂಡಿಬಂದಿದ್ದು, ಇದಕ್ಕೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆ.26ರಂದು ಈ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/the-video-song-tabahi-from-yashs-toxic-has-been-released/articleshow-46ukquz"/>
        </item>
        <item>
            <title><![CDATA[ದೊಡ್ಡ ನಿರ್ಮಾಪಕರಿಂದ ಕನ್ನಡ ಚಿತ್ರರಂಗಕ್ಕೆ ಲಾಭವಿಲ್ಲ: ನೆನಪಿರಲಿ ಪ್ರೇಮ್‌]]></title>
            <link>https://www.kannadaprabha.in/entertainment-news/big-producers-have-brought-no-real-benefit-to-the-kannada-film-industry-nenapirali-prem/articleshow-5tkuqs1</link>
            <guid isPermaLink="true">https://www.kannadaprabha.in/entertainment-news/big-producers-have-brought-no-real-benefit-to-the-kannada-film-industry-nenapirali-prem/articleshow-5tkuqs1</guid>
            <pubDate>Sat, 18 Jul 2026 12:01:34 +0530</pubDate>
            <description><![CDATA[&lt;p&gt;. &lsquo;ಸ್ಟಾರ್&zwnj;ಗಳು ಕಿರುತೆರೆ ಬಿಡಿ ಸಂಭಾವನೆ ಕಡಿಮೆ ಮಾಡಿ&rsquo; ಎಂಬ ಲೇಖನದ ಚರ್ಚೆಯಾಗಲಿ. ಅದಕ್ಕಿಂತ ಮೊದಲು ಲೇಖನ ಬರೆದ ಆ ನಿರ್ಮಾಪಕ ಯಾರಂತ ಹೆಸರು ಹಾಕಿಕೊಳ್ಳಲಿ. ಹೀಗೆ ಹೆಸರೇ ಹಾಕಿಕೊಳ್ಳದೆ ಏನು ಬೇಕಾದರು ಹೇಳಿದರು ಅದನ್ನು ಲೆಕ್ಕಕ್ಕೆ ತೆಗೆದು ಕೊಳ್ಳಬೇಕಾ?&lt;/p&gt;]]></description>
            <media:content url="https://static-gi.asianetnews.com/images/01jr5p7sg4hh5g7504s3fjp7hs/nenapirali-prem.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;&amp;nbsp; ಸಿನಿವಾರ್ತೆ&lt;/strong&gt;&lt;/h2&gt;&lt;h3&gt;1. &lsquo;ಸ್ಟಾರ್&zwnj;ಗಳು ಕಿರುತೆರೆ ಬಿಡಿ ಸಂಭಾವನೆ ಕಡಿಮೆ ಮಾಡಿ&rsquo; ಎಂಬ ಲೇಖನದ ಚರ್ಚೆಯಾಗಲಿ. ಅದಕ್ಕಿಂತ ಮೊದಲು ಲೇಖನ ಬರೆದ ಆ ನಿರ್ಮಾಪಕ ಯಾರಂತ ಹೆಸರು ಹಾಕಿಕೊಳ್ಳಲಿ. ಹೀಗೆ ಹೆಸರೇ ಹಾಕಿಕೊಳ್ಳದೆ ಏನು ಬೇಕಾದರು ಹೇಳಿದರು ಅದನ್ನು ಲೆಕ್ಕಕ್ಕೆ ತೆಗೆದು ಕೊಳ್ಳಬೇಕಾ?&lt;/h3&gt;&lt;p&gt;2. ನನ್ನ ಪ್ರಕಾರ ಆ ನಿರ್ಮಾಪಕರು ಹೇಳಿರುವ ಅಭಿಪ್ರಾಯಗಳು ಸತ್ಯಕ್ಕೆ ದೂರವಾದ ಮಾತುಗಳು. ಈಗ ಚಿತ್ರರಂಗ ಯಾವ ಪರಿಸ್ಥಿತಿಯಲ್ಲಿದೆ, ನಿರ್ಮಾಪಕರ ಸ್ಥಿತಿ ಏನು ಅಂತ ಎಲ್ಲಾ ಹೀರೋಗಳಿಗೂ ಗೊತ್ತು. ಹೀಗಾಗಿ ಇಂತಿಷ್ಟೇ ಸಂಭಾವನೆ ಕೊಡಿ ಅಂತ ಯಾವ ಹೀರೋ ಕೂಡ ಡಿಮ್ಯಾಂಡ್&zwnj; ಮಾಡುತ್ತಿಲ್ಲ. &lsquo;ಅಡ್ವಾನ್ಸ್&zwnj; ಕೊಡಿ, ಸಿನಿಮಾ ಬಿಸಿನೆಸ್&zwnj; ಆದರೆ ಉಳಿದಿದ್ದು ಕೊಡಿ, ಸಿನಿಮಾ ಚೆನ್ನಾಗಿ ಕಲೆಕ್ಷನ್&zwnj; ಆದರೆ ಏನಾದರು ಸೇರಿಸಿಕೊಡಿ...&rsquo; ಹೀಗೆ ಅಡ್ಜಸ್ಟ್&zwnj;ಮೆಂಟ್&zwnj;ನಲ್ಲಿ ಸಿನಿಮಾಗಳು ನಡೆಯುತ್ತಿವೆ.&lt;/p&gt;&lt;p&gt;3. ಚಿತ್ರರಂಗ ಇರೋದು ನಾಲ್ಕೈದು ಮಂದಿಯಿಂದನಾ? ಯಾಕೆ ಬೇರೆ ಹೀರೋಗಳು, ಕಲಾವಿದರು, ತಂತ್ರಜ್ಞರು ಇಲ್ಲವೇ? ಅವರ ಜೊತೆಗೆ ಯಾಕೆ ಸಿನಿಮಾ ಮಾಡಲ್ಲ? ಗೆದ್ದಿರುವ ಹೀರೋಗಳ ಕಾಲ್&zwnj;ಶೀಟ್&zwnj; ಬೇಕು ಅಂದರೆ ಉಳಿದವರ ಕತೆ ಏನು?&lt;/p&gt;&lt;p&gt;4. ದೊಡ್ಡ ನಿರ್ಮಾಪಕರಿಂದ ಕನ್ನಡ ಚಿತ್ರರಂಗಕ್ಕೆ ಯಾವ ಲಾಭವೂ ಇಲ್ಲ. ಸಣ್ಣ ಸಣ್ಣ ನಿರ್ಮಾಪಕರು, ಹೊಸ ಹೊಸ ಕಲಾವಿದರು, ತಂತ್ರಜ್ಞರಿಂದ ಚಿತ್ರರಂಗ ನಡೆಯುತ್ತಿದೆ. ತಾವು ದೊಡ್ಡ ನಿರ್ಮಾಣ ಸಂಸ್ಥೆಗಳು, ನಿರ್ಮಾಪಕರು ಎಂದು ಹೇಳಿಕೊಳ್ಳುವವರು ಎಲ್ಲರ ಜೊತೆಗೂ ಸಿನಿಮಾ ಮಾಡಲಿ.&lt;/p&gt;&lt;p&gt;5. ಕ್ಯಾರವ್ಯಾನ್&zwnj; ವಿಷಯ. ಡಾ ರಾಜ್&zwnj;ಕುಮಾರ್&zwnj;, ವಿಷ್ಣುವರ್ಧನ್&zwnj; ಅವರ ಕಾಲದಲ್ಲಿ ಶೇ.90 ಚಿತ್ರೀಕರಣ ಸ್ಟುಡಿಯೋಗಳಲ್ಲೇ ನಡೆಯುತ್ತಿದ್ದವು. ಅಲ್ಲಿ ಗ್ರೀನ್&zwnj; ರೂಮುಗಳಿದ್ದವು. ಅವತ್ತಿಗೆ ಕ್ಯಾರವ್ಯಾನ್&zwnj; ಬೇಕಿರಲಿಲ್ಲ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಎಲ್ಲೆಂದರಲ್ಲಿ ಶೂಟಿಂಗ್&zwnj; ಮಾಡುತ್ತಿದ್ದರು. ಗೊತ್ತಿಲ್ಲದ ಊರು, ನಗರಗಳಿಗೆ ಹೋಗುತ್ತಿದ್ದೇವೆ. ಆ ಊರುಗಳಲ್ಲಿ ಬಾತ್&zwnj; ರೂಮು, ವಾಷ್&zwnj; ರೂಮಿಗೆ ಅಂತ ಯಾರದ್ದೋ ಮನೆಗಳಿಗೆ ಹೋಗಕ್ಕೆ ಆಗುತ್ತದೆಯೇ? ಇಲ್ಲ ಬೀದಿಯಲ್ಲಿ ನಿಂತು ಮಾಡಕ್ಕಾಗುತ್ತಾ? ನಾವು ಬಿಡಿ ಹೆಣ್ಣು ಮಕ್ಕಳ ಪರಿಸ್ಥಿತಿ ಏನು? ಸ್ಟುಡಿಯೋಗಳಲ್ಲಿ, ಹೋಟೆಲ್&zwnj;ಗಳಲ್ಲಿ ಶೂಟಿಂಗ್&zwnj; ಮಾಡುವಾಗ ಯಾರು ಕ್ಯಾರವ್ಯಾನ್&zwnj; ಕಳಸುತ್ತಾರೆ?&lt;/p&gt;&lt;p&gt;6. ಪ್ಯಾನ್&zwnj; ಇಂಡಿಯಾ ಸಿನಿಮಾ ಬಗ್ಗೆ. ವರ್ಷಕ್ಕೆ ಎಷ್ಟು ಪ್ಯಾನ್&zwnj; ಇಂಡಿಯಾ ಸಿನಿಮಾಗಳು ಬರುತ್ತಿವೆ, ಎಷ್ಟು ಮಂದಿ ವರ್ಷಗಳ ಕಾಲ ಕೂತು ಸಿನಿಮಾ ಮಾಡುತ್ತಿದ್ದಾರೆ ಅಂತ ಲೆಕ್ಕ ಕೊಡಿ. ಇಡೀ ಉದ್ಯಮದ ಹೀರೋಗಳು ಪ್ಯಾನ್&zwnj; ಇಂಡಿಯಾ ಸಿನಿಮಾಗಳ ಹಿಂದೆ ಹೋಗಿಲ್ಲ ತಾನೆ?&lt;/p&gt;&lt;p&gt;- ಹೀಗೆ ತುಂಬಾ ವಿಷಯಗಳಿವೆ ಮಾತಾಡಲು. ಮೊದಲು ಹೆಸರು ಹಾಕಿಕೊಂಡು ಅಭಿಪ್ರಾಯ ವ್ಯಕ್ತಪಡಿಸಲಿ. ಆಗ ಖಂಡಿತವಾಗಿಯೂ ಒಂದು ಒಳ್ಳೆಯ ರೀತಿಯಲ್ಲೇ ಚರ್ಚೆ ಮಾಡೋಣ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/big-producers-have-brought-no-real-benefit-to-the-kannada-film-industry-nenapirali-prem/articleshow-5tkuqs1"/>
        </item>
        <item>
            <title><![CDATA[ಭಿನ್ನ ಕಂಟೆಂಟ್‌ ಆರಿಸಿಕೊಳ್ಳಲು ಕಾರಣ ಅಪ್ಪು ಚಿಕ್ಕಪ್ಪ: ವಿನಯ್‌ ರಾಜ್‌ಕುಮಾರ್‌]]></title>
            <link>https://www.kannadaprabha.in/entertainment-news/appu-chikkappa-is-the-reason-i-choose-unique-content-says-vinay-rajkumar/articleshow-750m67x</link>
            <guid isPermaLink="true">https://www.kannadaprabha.in/entertainment-news/appu-chikkappa-is-the-reason-i-choose-unique-content-says-vinay-rajkumar/articleshow-750m67x</guid>
            <pubDate>Fri, 03 Jul 2026 13:46:18 +0530</pubDate>
            <description><![CDATA[&lt;p&gt;ದೇವನೂರು ಚಂದ್ರು ನಿರ್ದೇಶನದ, ಲಹರಿ ಫಿಲಂಸ್ ನಿರ್ಮಾಣದ &lsquo;ಗ್ರಾಮಾಯಣ&rsquo; ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ವಿನಯ್ ರಾಜ್&zwnj;ಕುಮಾರ್&zwnj;, ಮೇಘಾ ಶೆಟ್ಟಿ ನಟನೆಯ ಈ ಸಿನಿಮಾ ಕುರಿತು ವಿನಯ್&zwnj; ರಾಜ್&zwnj;ಕುಮಾರ್&zwnj; ಸಂದರ್ಶನ.&lt;/p&gt;]]></description>
            <media:content url="https://static-gi.asianetnews.com/images/01kwk4j081hgksgmta6gsfwkyy/vinay-rajkumar-gramayana-1783053746433.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗ್ರಾಮಾಯಣ ನಾಯಕನ ಸಂದರ್ಶನ&lt;/strong&gt;&lt;/p&gt;&lt;p&gt;ದೇವನೂರು ಚಂದ್ರು ನಿರ್ದೇಶನದ, ಲಹರಿ ಫಿಲಂಸ್ ನಿರ್ಮಾಣದ &lsquo;ಗ್ರಾಮಾಯಣ&rsquo; ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ವಿನಯ್ ರಾಜ್&zwnj;ಕುಮಾರ್&zwnj;, ಮೇಘಾ ಶೆಟ್ಟಿ ನಟನೆಯ ಈ ಸಿನಿಮಾ ಕುರಿತು ವಿನಯ್&zwnj; ರಾಜ್&zwnj;ಕುಮಾರ್&zwnj; ಸಂದರ್ಶನ.&lt;/p&gt;&lt;h2&gt;&lt;strong&gt;- ರಾಜೇಶ್ ಶೆಟ್ಟಿ&lt;/strong&gt;&lt;/h2&gt;&lt;p&gt;ಈ ಸಿನಿಮಾ ಒಪ್ಪಿಕೊಳ್ಳಲು ಏನು ಕಾರಣ?ಈ ಸಿನಿಮಾದ ನಿರ್ದೇಶಕ ದೇವನೂರು ಚಂದ್ರು ಅವರು ಈ ಕತೆ ಹೇಳಲು ಬಂದಾಗಲೇ ಬೌಂಡ್&zwnj; ಸ್ಕ್ರಿಪ್ಟ್&zwnj; ಹಿಡಿದುಕೊಂಡು ಬಂದಿದ್ದರು. ಲೊಕೇಷನ್ ಫೋಟೋಗಳಿದ್ದವು. ಎಲ್ಲಾ ಪಾತ್ರಗಳ ಕಾಸ್ಟ್ಯೂಮ್&zwnj; ಮೆಟೀರಿಯಲ್&zwnj; ತಂದಿದ್ದರು. ಸಿನಿಮಾದ ಪೋಸ್ಟರ್&zwnj; ಹೇಗಿರುತ್ತದೆ ಎಂದು ಪೇಂಟ್&zwnj; ಮಾಡಿಸಿಕೊಂಡು ಬಂದಿದ್ದರು. ಅವರ ತಯಾರಿ ನೋಡಿಯೇ ನಾನು ಇಂಪ್ರೆಸ್&zwnj; ಆದೆ. ಜೊತೆ ಆ ಸಂದರ್ಭದಲ್ಲಿ ನಾನು ಗ್ರಾಮೀಣ ಭಾಗದ, ಬೇರು ಮಟ್ಟದ ಕತೆಯ ಸಿನಿಮಾ ಮಾಡಿರಲಿಲ್ಲ. ಕತೆ ಮತ್ತು ನಿರ್ದೇಶಕರ ಪ್ರಯತ್ನ ಎರಡೂ ಉತ್ತಮ ಅನ್ನಿಸಿದ್ದರಿಂದ ಒಪ್ಪಿಕೊಂಡೆ.&lt;/p&gt;&lt;h3&gt;&lt;strong&gt;ತಯಾರಿ ಹೇಗಿತ್ತು?&lt;/strong&gt;&lt;/h3&gt;&lt;p&gt;ದೇವನೂರಿಗೆ ಹೋಗಿ ಅಲ್ಲಿ ಸ್ವಲ್ಪ ಸಮಯ ಕಾಲ ಕಳೆದೆ. ಆ ಊರಿನ ಭಾಷೆಯ ಸ್ಲ್ಯಾಂಗ್&zwnj; ಬೇರೆ ಥರ ಇದೆ. ಅದನ್ನು ಪ್ರಾಕ್ಟೀಸ್&zwnj; ಮಾಡಿದೆ. ಜೊತೆಗೆ ನನ್ನ ಪಾತ್ರ ಸ್ವಲ್ಪ ಫ್ರೀ ಇರುವ ಪಾತ್ರ. ಜಾಸ್ತಿ ಯೋಚನೆ ಮಾಡದೆ ಪ್ರತಿಕ್ರಿಯಿಸುವ ಪಾತ್ರ. ತಕ್ಷಣ ರಿಯಾಕ್ಟ್&zwnj; ಮಾಡುವ ಪಾತ್ರ. ಅದಕ್ಕಾಗಿ ಮಾನಸಿಕವಾಗಿ ತಯಾರಾಗುತ್ತಾ ಹೋದೆ. ಈ ತಯಾರಿಯ, ಸಿದ್ಧತೆಯನ್ನು ಈ ಸಿನಿಮಾದಲ್ಲಿಯೇ ಕಾಣಬಹುದು.&lt;/p&gt;&lt;p&gt;ಈ ಸಿನಿಮಾದ ವಿಶೇಷತೆ ಏನು?&lt;/p&gt;&lt;p&gt;ಕನ್ನಡದ ಕತೆ. ಅಪ್ಪಟ ಗ್ರಾಮೀಣ ಭಾಗದ ಕತೆ. ಬಹಳ ಸೊಗಸಾದ ಹಾಡುಗಳಿವೆ. ಜೊತೆಗೆ ಅತ್ಯುತ್ತಮ ಕಲಾವಿದರಿದ್ದಾರೆ. ಅಪರ್ಣಾ, ಗೋಪಾಲಕೃಷ್ಣ ದೇಶಪಾಂಡೆ, ಮೇಘಾ ಶೆಟ್ಟಿ ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ನಿರ್ದೇಶಕ ದೇವನೂರು ಚಂದ್ರು ಅವರು ಒಂದೊಳ್ಳೆ ಕತೆ ಬರೆದಿದ್ದಾರೆ. ಅದನ್ನು ಅಷ್ಟೇ ಚೆನ್ನಾಗಿ ತೆರೆ ಮೇಲೆ ಮೂಡುವ ಹಾಗೆ ಮಾಡಿದ್ದಾರೆ. ಈ ಸಿನಿಮಾ ನೋಡಿದ ಪ್ರೇಕ್ಷಕರಿಗೆ ಒಂದೊಳ್ಳೆ ಅನುಭವ ಸಿಗುತ್ತದೆ.&lt;/p&gt;&lt;p&gt;ಈ ಸಿನಿಮಾದ ಪಯಣ ಬಹಳ ದೀರ್ಘವಾಗಿತ್ತು. ರಿಲೀಸ್&zwnj;ವರೆಗೂ ಬರುವಾಗ ನಿಮ್ಮ ಮನಸ್ಥಿತಿ ಹೇಗಿತ್ತು?&lt;/p&gt;&lt;p&gt;ಈ ಪಯಣ ಶುರುವಾಗಿದ್ದು 8 ವರ್ಷಗಳ ಹಿಂದೆ. ಆದರೆ 2 ವರ್ಷದ ಹಿಂದೆ ಮತ್ತೆ ಹೊಸತಾಗಿ ಶೂಟ್ ಮಾಡಿದೆವು. ಈ ಜರ್ನಿ ಶುರುವಾಗಿದ್ದು 8 ವರ್ಷ ಹಿಂದೆಯೇ ಆಗಿದ್ದರೂ ಹೊಸತಾಗಿ ರೂಪುಗೊಂಡಿದ್ದು ಇತ್ತೀಚೆಗೆ. ಹಾಗಾಗಿ ಇದು ಹೊಸ ಸಿನಿಮಾ. ಕತೆ, ಸಿನಿಮಾ ಚೆನ್ನಾಗಿದ್ದಾಗ ಈ ಸಿನಿಮಾ ಬಿಡುಗಡೆಯಾಗಬೇಕು, ಪ್ರೇಕ್ಷಕರು ನೋಡಬೇಕು ಎಂಬ ಆಸೆ ನಮಗೂ ಇರುತ್ತದೆ. ಈ ಸಿನಿಮಾ ಬಿಡುಗಡೆಗಾಗಿ ನಾನೂ ಕಾಯುತ್ತಿದ್ದೆ. ಇದು ಈ ಸಿನಿಮಾ ಬಿಡುಗಡೆ ಮಾತ್ರವಲ್ಲ, ನನ್ನ ಆ ಪಾತ್ರಕ್ಕೂ ಬಿಡುಗಡೆ.&lt;/p&gt;&lt;p&gt;ನೀವು ವಿಭಿನ್ನ ಕತೆಗಳನ್ನೇ ಆರಿಸಿಕೊಳ್ಳುತ್ತೀರಿ. ಈ ಪ್ರಕ್ರಿಯೆ ಹೇಗಿರುತ್ತದೆ?&lt;/p&gt;&lt;p&gt;ನಾನು ಚಿಕ್ಕಂದಿನಿಂದಲೂ ಸಿನಿಮಾ ನೋಡಿಕೊಂಡು ಬೆಳೆದವನು. ನಮ್ಮ ಕನ್ನಡದ ಸಿನಿಮಾಗಳ ಜೊತೆ ಅಂತಾರಾಷ್ಟ್ರೀಯ ಸಿನಿಮಾಗಳನ್ನು ಕೂಡ ನೋಡಬೇಕು ಎಂದು ಹೇಳಿಕೊಟ್ಟಿದ್ದು ಚಿಕ್ಕಪ್ಪ ಪುನೀತ್&zwnj; ರಾಜ್&zwnj;ಕುಮಾರ್&zwnj; ಅವರು. ಹಾಗಾಗಿ ನನಗೆ ಬೇರೆ ರೀತಿಯ ಕಂಟೆಂಟ್&zwnj;ಗಳ ಮೇಲೆ ಆಸಕ್ತಿ ಜಾಸ್ತಿ.&lt;/p&gt;&lt;p&gt;ಈ ಸಿನಿಮಾ ಯಾಕೆ ನೋಡಬೇಕು?&lt;/p&gt;&lt;p&gt;ಒಂದೊಳ್ಳೆ ಕತೆ ಇದೆ. ಒಂದೊಳ್ಳೆ ಸಂದೇಶ ಇದೆ. ಎಂಟರ್&zwnj;ಟೇನಿಂಗ್&zwnj; ಆಗಿ ಸಿನಿಮಾ ರೂಪುಗೊಂಡಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/appu-chikkappa-is-the-reason-i-choose-unique-content-says-vinay-rajkumar/articleshow-750m67x"/>
        </item>
        <item>
            <title><![CDATA[ಕವಿತಾ ಲಂಕೇಶ್ ಪುತ್ರಿ ಇಶಾ ಲಂಕೇಶ್‌ ಚಿತ್ರರಂಗಕ್ಕೆ ಪದಾರ್ಪಣೆ]]></title>
            <link>https://www.kannadaprabha.in/entertainment-news/isha-lankesh-daughter-of-kavitha-lankesh-is-making-her-debut-in-the-film-industry/articleshow-9152l5i</link>
            <guid isPermaLink="true">https://www.kannadaprabha.in/entertainment-news/isha-lankesh-daughter-of-kavitha-lankesh-is-making-her-debut-in-the-film-industry/articleshow-9152l5i</guid>
            <pubDate>Fri, 10 Jul 2026 12:07:58 +0530</pubDate>
            <description><![CDATA[&lt;p&gt;ನಿರ್ದೇಶಕಿ ಕವಿತಾ ಲಂಕೇಶ್&zwnj; ಪುತ್ರಿ ಇಶಾ ಲಂಕೇಶ್&zwnj; ನಟಿಯಾಗಿ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅವರು ಪ್ರೀತಮ್&zwnj; ಗುಬ್ಬಿ ನಿರ್ದೇಶನದ, ಶಿವರಾಜ್&zwnj; ಕನಗನಪಲ್ಲಿ ನಿರ್ಮಾಣದ ಚಿತ್ರದಲ್ಲಿ ನಟಿಸುತ್ತಿದ್ದು, ಈ ಮೂಲಕ ಪಿ. ಲಂಕೇಶ್ ಕುಟುಂಬದಿಂದ ಮೊದಲ ನಟಿ ಚಿತ್ರರಂಗಕ್ಕೆ ಬಂದಂತಾಗಿದೆ. ಸಿನಿಮಾ ಕುರಿತು ಇಶಾ ಜೊತೆ ಮಾತುಕತೆ.&lt;/p&gt;]]></description>
            <media:content url="https://static-gi.asianetnews.com/images/01kx5bxegxsgjq3cx7qfp3jsrr/esha-1783665441308.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಆರ್&zwnj;. ಕೇಶವಮೂರ್ತಿ&lt;/strong&gt;&lt;/h2&gt;&lt;h3&gt;ನಟಿಯಾಗಬೇಕೆಂಬ ಯೋಚನೆ ಬಂದಿದ್ದು ಯಾವಾಗ?&lt;/h3&gt;&lt;p&gt;ಚಿಕ್ಕ ವಯಸ್ಸಿನಿಂದಲೂ ಅಮ್ಮನ ಜೊತೆಗೆ ಸಿನಿಮಾ ಶೂಟಿಂಗ್&zwnj;ಗೆ ಹೋಗುತ್ತಿದ್ದೆ. ಮುಂದೆ ಅವರಿಗೆ ಆರ್ಟ್&zwnj; ಡಿಪಾರ್ಟ್&zwnj;ಮೆಂಟ್&zwnj;ನಲ್ಲಿ ಸಹಾಯ ಕೂಡ ಮಾಡಲು ಶುರು ಮಾಡಿದೆ. ಸಿನಿಮಾ ವಾತಾವರಣದಲ್ಲೇ ಬೆಳೆದ ನನಗೆ ಸಹಜವಾಗಿ ನಟನೆ ಬಗ್ಗೆ ಆಸಕ್ತಿ ಹುಟ್ಟಿಕೊಂಡಿತ್ತು.&lt;/p&gt;&lt;p&gt;&lt;strong&gt;ನಿಮ್ಮ ನಟನೆಯ ಕನಸು ಮೊದಲು ಹಂಚಿಕೊಂಡಿದ್ದು ಯಾರ ಬಳಿ?&lt;/strong&gt;&lt;/p&gt;&lt;p&gt;ನನ್ನ ತಾಯಿ ಬಳಿಯೇ ಹೇಳಿಕೊಂಡಿದ್ದು. ಆದರೆ, ನಾನು ನಟನಾ ಕ್ಷೇತ್ರದಲ್ಲಿದ್ದರಿಂದ ಅವರಿಗೆ ನಾನು ಹೇಳೋದಕ್ಕಿಂತ ಅವರೇ ತಿಳಿದುಕೊಂಡು ಸಪೋರ್ಟ್&zwnj; ಮಾಡಿದರು. ಆದರೆ, ಯಾವತ್ತೂ ನೀನು ಇದೇ ಮಾಡು, ಸಿನಿಮಾಗೇ ಹೋಗು ಅಂತ ಮಾತ್ರ ಒತ್ತಾಯ ಮಾಡಿಲ್ಲ.&lt;/p&gt;&lt;p&gt;&lt;strong&gt;ತಾಯಿ ಜೊತೆಗೆ ಕಲಿತ ಸಿನಿಮಾ ವಿಷಯಗಳೇನು?&lt;/strong&gt;&lt;/p&gt;&lt;p&gt;ನಾನು ಅವರ ಜೊತೆಗೆ ಹೆಚ್ಚಾಗಿ ಕತೆ ಓದುವುದು, ಸ್ಕ್ರಿಫ್ಟ್&zwnj;, ಡೈಲಾಗ್&zwnj; ಕೇಳುವುದನ್ನು ಮಾಡುತ್ತಿದ್ದೆ. ಜೊತೆಗೆ ಆರ್ಟ್&zwnj; ಡಿಪಾರ್ಟ್&zwnj;ಮೆಂಟ್&zwnj;ನಲ್ಲಿ ಕೆಲಸ ಮಾಡಿದ್ದು.&lt;/p&gt;&lt;p&gt;&lt;strong&gt;ನೀವು ನಟನೆಗೆ ಏನೆಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದೀರಿ?&lt;/strong&gt;&lt;/p&gt;&lt;p&gt;ನಾನು ಡಿಗ್ರಿ ಓದಿದ್ದು ದೆಹಲಿಯ ಅಶೋಕ ಯೂನಿವರ್ಸಿಟಿಯಲ್ಲಿ. ಇಂಗ್ಲಿಷ್&zwnj; ಲಿಟರೇಚರ್&zwnj; ಆಂಡ್&zwnj; ಪರ್ಫಾರ್ಮೆನ್ಸ್&zwnj; ಆಯ್ಕೆ ಮಾಡಿಕೊಂಡಿದ್ದೆ. ನಾಲ್ಕು ವರ್ಷದ ಕೋರ್ಸ್&zwnj; ಇದು. ಅಲ್ಲಿ ಡ್ರಾಮಾಗಳಲ್ಲಿ ನಟಿಸಿದ್ದೇನೆ. ಯುಕೆಯಲ್ಲಿ ಆಕ್ಟಿಂಗ್&zwnj; ಕೋರ್ಸ್&zwnj; ಮಾಡಿಕೊಂಡು ಬಂದ ಮೇಲೆ ಜಾಹೀರಾತುಗಳಿಗೆ ಆಡಿಷನ್&zwnj; ಕೊಡುತ್ತಿದ್ದೆ. ಇದರ ನಡುವೆ ನಟ ಪ್ರಕಾಶ್&zwnj; ರೈ ಅವರ ನಿರ್ದಿಗಂತ ರಂಗಭೂಮಿ ಥಿಯೇಟರ್&zwnj;ನಲ್ಲಿ ಆ್ಯಕ್ಟಿಂಗ್&zwnj;ಗೆ ಪೂರಕವಾಗಿ ಸೈಕೋ ಫಿಜಿಕಲ್&zwnj; ಕೋರ್ಸ್&zwnj; ಮಾಡಿದ್ದೇನೆ.&lt;/p&gt;&lt;p&gt;&lt;strong&gt;ನಿಮ್ಮ ಮೊದಲ ಚಿತ್ರದ ಕತೆ ಯಾವ ರೀತಿ ಇದೆ?&lt;/strong&gt;&lt;/p&gt;&lt;p&gt;ಈಗಾಗಲೇ ಪೂರ್ತಿ ಕತೆ ಕೇಳಿದ್ದೇನೆ. ತುಂಬಾ ಫ್ರೆಶ್&zwnj; ಆಗಿದೆ. ಲವ್&zwnj; ಮತ್ತು ಅಡ್ವೆಂಚರ್&zwnj; ಸ್ಟೋರಿ. ಸ್ಟ್ರಾಂಗ್&zwnj; ಹಾಗೂ ಇಂಡಿಫೆಂಡೆಂಟ್ ವುಮನ್&zwnj; ಪಾತ್ರ ನನ್ನದು. ಈಗ ಬರುತ್ತಿರುವ ಕತೆಗಳಿಗಿಂತ ಬೇರೆ ರೀತಿ ಇದೆ.&lt;/p&gt;&lt;p&gt;&lt;strong&gt;ಪ್ರೀತಮ್ ಗುಬ್ಬಿ ಅವರ ನಿರ್ದೇಶನದಲ್ಲೇ ನಿಮ್ಮ ಮೊದಲ ಚಿತ್ರವಾಗಲು ಕಾರಣ?&lt;/strong&gt;&lt;/p&gt;&lt;p&gt;ಅವರು ಬಂದು ಕೇಳಿದ್ದಲ್ಲ, ನಾನೇ ಆಡಿಷನ್&zwnj; ಕೊಟ್ಟಿದ್ದು. ಅವರು ಕತೆ ಹೇಳಿದ ರೀತಿ, &lsquo;ನಿಮಗೆ ಆಸಕ್ತಿ ಇದ್ದರೆ ನೋಡಿ&rsquo; ಎಂದು ಹೇಳಿ ಅವರು ಕೊಟ್ಟ ಫ್ರೀಡಮ್&zwnj;. ಇದೆಲ್ಲವೂ ನನಗೆ ಇಷ್ಟವಾಯಿತು.&lt;/p&gt;&lt;p&gt;&lt;strong&gt;ನೀವು ಥಿಯೇಟರ್&zwnj;ನಲ್ಲಿ ಇತ್ತೀಚೆಗೆ ನೋಡಿದ ಸಿನಿಮಾಗಳು ಯಾವುವು?&lt;/strong&gt;&lt;/p&gt;&lt;p&gt;ರಕ್ಷಿತ್&zwnj; ಶೆಟ್ಟಿ ಅವರ &lsquo;ಸಪ್ತ ಸಾಗರದಾಚೆ ಎಲ್ಲೋ&rsquo; ಹಾಗೂ ರಾಜ್&zwnj; ಬಿ ಶೆಟ್ಟಿ ಅವರ &lsquo;ಸು ಫ್ರಮ್&zwnj; ಸೋ&rsquo; ಸಿನಿಮಾಗಳನ್ನು ನೋಡಿದ್ದೇನೆ. ಈ ಎರಡೂ ನನ್ನ ಮೆಚ್ಚಿನ ಸಿನಿಮಾಗಳೇ.&lt;/p&gt;&lt;p&gt;&lt;strong&gt;ನಿಮ್ಮ ತಾಯಿ ಅವರ ಸಿನಿಮಾಗಳನ್ನು ನೋಡಿದ್ದೀರಾ?&lt;/strong&gt;&lt;/p&gt;&lt;p&gt;ಎಲ್ಲಾ ಸಿನಿಮಾಗಳನ್ನು ಅಮ್ಮನಿಗೆ ಬೋರ್&zwnj; ಆಗುಷ್ಟು ಸಲ ನಾನು ನೋಡಿದ್ದೇನೆ. ನನಗೆ ಈ ಪೈಕಿ ಹೆಚ್ಚು ಇಷ್ಟ ಆಗಿದ್ದು &lsquo;ಅವ್ವ&rsquo; ಹಾಗೂ &lsquo;ದೇವೀರಿ&rsquo; ಚಿತ್ರಗಳು.&lt;/p&gt;&lt;p&gt;&lt;strong&gt;ಈಗ ಗೌರಿ ಲಂಕೇಶ್&zwnj; ಅವರು ಇದ್ದಿದ್ದರೆ?&lt;/strong&gt;&lt;/p&gt;&lt;p&gt;ತುಂಬಾ ಖುಷಿ ಆಗುತ್ತಿದ್ದರು. ಅವರು ತೀರಿಕೊಂಡಾಗ ನನಗೆ 13 ವರ್ಷ. ನಾನು ಆರ್ಟ್&zwnj; ಫೀಲ್ಡ್&zwnj;ಗೆ ಹೋಗುತ್ತೇನೆ ಅಂತ ಅವರಿಗೆ ಗೊತ್ತಿತ್ತು.&lt;/p&gt;&lt;p&gt;&lt;strong&gt;ನೀವು ಸಾಹಿತ್ಯದ ವಿದ್ಯಾರ್ಥಿ ಅಲ್ವ, ಯಾರ ಸಾಹಿತ್ಯ ನಿಮಗೆ ಹೆಚ್ಚು ಇಷ್ಟ?&lt;/strong&gt;&lt;/p&gt;&lt;p&gt;ನಮ್ಮ ತಾತ ಲಂಕೇಶ್&zwnj; ಅವರ &lsquo;ಕಲ್ಲು ಕರಗುವ ಸಮಯ&rsquo; ನನಗೆ ತುಂಬಾ ಇಷ್ಟ. ಮೊದಲಿನಿಂದಲೂ ಕುವೆಂಪು ಅವರ ಸಾಹಿತ್ಯ ಓದುತ್ತಿದ್ದೆ. ಆ ನಂತರ ಅರುಂಧತಿ ರಾಯ್&zwnj; ಹಾಗೂ ಅಮಿತ್&zwnj; ಚೌಧರಿ ಬರಹಗಳು ಇಷ್ಟ ಆಗುತ್ತಾ ಬಂದವು.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/isha-lankesh-daughter-of-kavitha-lankesh-is-making-her-debut-in-the-film-industry/articleshow-9152l5i"/>
        </item>
        <item>
            <title><![CDATA[ನಕ್ಕು ಹಗುರಾಗಿಸುವ ಆಹ್ಲಾದಕರ ಸಿನಿಮಾ ಮದರ್‌ ಪ್ರಾಮಿಸ್‌]]></title>
            <link>https://www.kannadaprabha.in/entertainment-news/mother-promise-is-a-delightful-film-that-leaves-audiences-smiling-and-light-hearted/articleshow-951gkrw</link>
            <guid isPermaLink="true">https://www.kannadaprabha.in/entertainment-news/mother-promise-is-a-delightful-film-that-leaves-audiences-smiling-and-light-hearted/articleshow-951gkrw</guid>
            <pubDate>Sat, 11 Jul 2026 13:33:19 +0530</pubDate>
            <description><![CDATA[&lt;p&gt;ಹೀರೋಯಿನ್&zwnj; ಜೊತೆ ಡ್ಯುಯೆಟ್ಟಿಲ್ಲದೆ, ಅಸಭ್ಯ ದೃಶ್ಯಗಳಿಲ್ಲದೆ, ಅಕರಾಳ ವಿಕರಾಳ ಗನ್&zwnj;ಗಳಿಲ್ಲದೆ, ಐಟಂ ಸಾಂಗಿಲ್ಲದೆ, ಅಬ್ಬರ ಹಾಹಾಕಾರವಿಲ್ಲದೆ, ಯಾವುದೇ ಸಿದ್ಧ ಸೂತ್ರಗಳಿಲ್ಲದೆ ಎಲ್ಲಾ ಮಾದರಿಗಳನ್ನು ಗಾಳಿಗೆ ತೂರಿ ತಯಾರಾಗಿರುವ ಒಂದು ಅತ್ಯಂತ ಆಹ್ಲಾದಕರ ಸಿನಿಮಾ ಮದರ್&zwnj; ಪ್ರಾಮಿಸ್&zwnj;.&lt;/p&gt;]]></description>
            <media:content url="https://static-gi.asianetnews.com/images/01kw4jjwh81aymw2jw0rfscsvm/2-1782565138984.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಚಿತ್ರ: ಮದರ್ ಪ್ರಾಮಿಸ್&lt;/strong&gt;&lt;/h2&gt;&lt;p&gt;ನಿರ್ದೇಶನ: ಪೂರ್ಣಚಂದ್ರ ಮೈಸೂರು&lt;/p&gt;&lt;p&gt;ತಾರಾಗಣ: ಧನಂಜಯ, ಮಹಾದೇವ ಪ್ರಸಾದ್&zwnj;, ಪೂರ್ಣಚಂದ್ರ, ನರೇಶ್ ಡಿಂಗ್ರಿ, ಗೀತಾ, ಯಶವಂತ್, ಶ್ರೀವತ್ಸ ಶ್ಯಾಮ್&lt;/p&gt;&lt;p&gt;ರೇಟಿಂಗ್: 3.5&lt;/p&gt;&lt;h3&gt;ರಾಜೇಶ್ ಶೆಟ್ಟಿ&lt;/h3&gt;&lt;p&gt;ಹೀರೋಯಿನ್&zwnj; ಜೊತೆ ಡ್ಯುಯೆಟ್ಟಿಲ್ಲದೆ, ಅಸಭ್ಯ ದೃಶ್ಯಗಳಿಲ್ಲದೆ, ಅಕರಾಳ ವಿಕರಾಳ ಗನ್&zwnj;ಗಳಿಲ್ಲದೆ, ಐಟಂ ಸಾಂಗಿಲ್ಲದೆ, ಅಬ್ಬರ ಹಾಹಾಕಾರವಿಲ್ಲದೆ, ಯಾವುದೇ ಸಿದ್ಧ ಸೂತ್ರಗಳಿಲ್ಲದೆ ಎಲ್ಲಾ ಮಾದರಿಗಳನ್ನು ಗಾಳಿಗೆ ತೂರಿ ತಯಾರಾಗಿರುವ ಒಂದು ಅತ್ಯಂತ ಆಹ್ಲಾದಕರ ಸಿನಿಮಾ ಮದರ್&zwnj; ಪ್ರಾಮಿಸ್&zwnj;.&lt;/p&gt;&lt;p&gt;ಇಲ್ಲಿ ಹೀರೋಗಳಿಲ್ಲ, ಬದಲಿಗೆ ಪಾತ್ರಗಳಿವೆ. ಬಿಲ್ಡಪ್&zwnj; ಇಲ್ಲ, ಬದಲಿಗೆ ಒಂದೊಳ್ಳೆ ಸ್ಕ್ರಿಪ್ಟ್&zwnj; ಇದೆ. ಸಂಕೀರ್ಣ ಕತೆಯಿಲ್ಲ, ಆಪ್ತ ಬದುಕಿದೆ. ಇಲ್ಲಿ ಘಟನೆಗಳೇ ವಿಲನ್&zwnj;ಗಳು. ಅನಿವಾರ್ಯತೆಯೇ ಶತ್ರು. ನಟ ಪೂರ್ಣಚಂದ್ರ ಇಲ್ಲಿ ಬರಹಗಾರನಾಗಿ, ನಿರ್ದೇಶಕನಾಗಿ ಅಪರಾವತಾರ ಮೆರೆದಿದ್ದಾರೆ. ನಿರೀಕ್ಷೆಯೇ ಇಲ್ಲದೆ ಸಿನಿಮಾ ನೋಡಿದವರಿಗೆ ಅಚ್ಚರಿ ಹುಟ್ಟಿಸುತ್ತಾರೆ.&lt;/p&gt;&lt;p&gt;ಡಾನ್&zwnj; ಒಬ್ಬನ ಅಮ್ಮ ಕೊಟ್ಟ ನೆಚ್ಚಿನ ಬೈಕ್&zwnj; ಕಾಣಿಸದೇ ಹೋದ ಕ್ಷಣದಿಂದ ಕತೆ ಆರಂಭವಾಗುತ್ತದೆ. ಆಮೇಲೆ ಇಲ್ಲಿನ ಪಾತ್ರಗಳು, ಅವರ ಬದುಕುಗಳು ಪರಸ್ಪರ ಹೆಣೆದುಕೊಂಡು ವಿಷಾದವು ತಮಾಷೆಯಾಗಿ ಎಲ್ಲರ ಬದುಕು ಗೋಜಲಾಗುವ ಹಂತಕ್ಕೆ ತಲುಪುತ್ತದೆ. ಬೆಂಗಳೂರಿಗೆ ಬದುಕು ಕಟ್ಟಿಕೊಳ್ಳಲು ಬಂದ ಬಹುತೇಕರು ಇಲ್ಲಿ ತಮ್ಮನ್ನು ತಾವು ಕಾಣಬಹುದು ಅನ್ನುವುದೇ ಈ ಬರವಣಿಗೆಯ ಹೆಗ್ಗಳಿಕೆ.&lt;/p&gt;&lt;p&gt;ಇಲ್ಲಿರುವ ಎಲ್ಲವೂ ನಾವು ನೀವು ಅಲ್ಲಿ ಇಲ್ಲಿ ನೋಡಿರುವ ಪಾತ್ರಗಳೇ, ಸನ್ನಿವೇಶಗಳೇ. ಹಾಗಾಗಿ ಸಿನಿಮಾ ಕನೆಕ್ಟ್&zwnj; ಆಗುತ್ತಾ ಹೋಗುತ್ತದೆ. ಪೂರ್ಣ ಇಲ್ಲಿ ಯಾವುದನ್ನೂ ಗಂಭೀರ ಮಾಡುವುದಿಲ್ಲ. ಗಂಭೀರ ಅನ್ನಿಸಿದಾಗೆಲ್ಲಾ ಏನೋ ಪಂಚ್&zwnj;ಲೈನ್&zwnj; ಕೊಟ್ಟು ನಗಿಸುತ್ತಾರೆ. ಹಗುರಾಗಿಸುತ್ತಾರೆ. ಅಷ್ಟರ ಮಟ್ಟಿಗೆ ಸೊಗಸಾದ ಬರವಣಿಗೆ. ಇದೊಂದು ಮನಸಾರೆ ನಗಿಸಿ ಹಗುರಗೊಳಿಸುವ ಸಿನಿಮಾ.&lt;/p&gt;&lt;p&gt;ಡಾಲಿ ಧನಂಜಯ, ಪೂರ್ಣಚಂದ್ರ ಮೈಸೂರು, ಯಶವಂತ್, ಅರುಣ, ಯಶವಂತ್ ಶೆಟ್ಟಿ, ಅಂಜನ್ ಸುಪ್ರೀತ್, ಮಹದೇವ್ ಪ್ರಸಾದ್, ನರೇಶ್ ಡಿಂಗ್ರಿ, ಶಮಂತ್ ವೇಣುಗೋಪಾಲ್, ಮಹೇಶ್ ತಿಲಕ್, ಶ್ರೀವತ್ಸ, ಶ್ರವಣ್ ಒಬ್ಬೊಬ್ಬರದೂ ಅದ್ಭುತ ನಟನೆ. ಅವರವರ ಪಾತ್ರವನ್ನು ಮನಸ್ಸಲ್ಲಿ ಕೆತ್ತಿ ಬಿಡುತ್ತಾರೆ.&lt;/p&gt;&lt;p&gt;ಆರಂಭದಲ್ಲಿ ಕತೆ ತೀವ್ರಗೊಳ್ಳುವುದು ಸ್ವಲ್ಪ ತಡವಾಗುತ್ತದೆ. ಇಂಟರ್ವಲ್&zwnj; ಹೊತ್ತಿಗೆ ಒಂದು ಹದಕ್ಕೆ ಬರುತ್ತದೆ. ಆಮೇಲೆ ದ್ವಿತೀಯಾರ್ಧ ಪೂರ್ತಿ ಇಹ ಮರೆಸುತ್ತಾರೆ. ಹಾಗಂತ ಸಂಕೀರ್ಣ ಕತೆ, ಲಾಜಿಕ್&zwnj; ನಿರೀಕ್ಷೆ ಇಡಬಾರದು. ಬಾಲಿವುಡ್&zwnj;ನ &lsquo;ವೆಲ್&zwnj;ಕಮ್&zwnj;&rsquo;, &lsquo;ಹೇರಾಫೇರಿ&rsquo; ಮಾದರಿಯ ಸಿನಿಮಾ. ಅಂತಿಮವಾಗಿ ಲೈಟಾಗಿ ಒಂದು ಸಂದೇಶ ದಾಟಿಸಿ ನಗುವನ್ನುಳಿಸಿ ಸಿನಿಮಾ ಮುಗಿಯುತ್ತದೆ.&lt;/p&gt;&lt;p&gt;ಆದರೆ ಅಲ್ಲಿಂದ ಆ ಪಾತ್ರಗಳು ಮನಸ್ಸಲ್ಲಿ ಬೆಳೆಯತೊಡಗುತ್ತವೆ. ಅದೇ ಈ ಸಿನಿಮಾದ ಶಕ್ತಿ. ಪೂರ್ಣಚಂದ್ರ ಈ ವರ್ಷಕ್ಕೊಂದು ತುಂಬಾ ಸೊಗಸಾದ ಸಿನಿಮಾವನ್ನು ಚಿತ್ರರಂಗಕ್ಕೆ ಕೊಟ್ಟಿದ್ದಾರೆ. ಅವರಿಂದ ಇನ್ನೂ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಬಹುದಾಗಿದೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/mother-promise-is-a-delightful-film-that-leaves-audiences-smiling-and-light-hearted/articleshow-951gkrw"/>
        </item>
        <item>
            <title><![CDATA[ಸ್ಟಾರ್‌ಗಳು ಕಿರುತೆರೆ ಬಿಡಿ, ಸಂಭಾವನೆ ಕಡಿಮೆ ಮಾಡಿ]]></title>
            <link>https://www.kannadaprabha.in/entertainment-news/stars-quit-television-and-reduce-your-remuneration/articleshow-bvbggmc</link>
            <guid isPermaLink="true">https://www.kannadaprabha.in/entertainment-news/stars-quit-television-and-reduce-your-remuneration/articleshow-bvbggmc</guid>
            <pubDate>Fri, 17 Jul 2026 12:59:15 +0530</pubDate>
            <description><![CDATA[&lt;p&gt;ಕನ್ನಡದ ಸ್ಟಾರ್&zwnj; ನಿರ್ಮಾಪಕರ ಲೇಖನವಿದು. ಇದು ಸತ್ಯ, ಆದರೆ ನನ್ನ ಹೆಸರು ಹೇಳಿದರೆ ಎಲ್ಲರೂ ಮುಗಿಬೀಳುತ್ತಾರೆ, ಹಾಗಾಗಕೂಡದು. ಸತ್ಯ ಮಾತ್ರ ಚರ್ಚೆಯಾಗಲಿ, ನನ್ನ ಹೆಸರು ಹಾಕಬೇಡಿ ಎಂದು ಅವರು ಹೇಳಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/01k64erd70xzcj957ccmgv177d/cinema-1758938805472.jpg" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡದ ಸ್ಟಾರ್&zwnj; ನಿರ್ಮಾಪಕರ ಲೇಖನವಿದು. ಇದು ಸತ್ಯ, ಆದರೆ ನನ್ನ ಹೆಸರು ಹೇಳಿದರೆ ಎಲ್ಲರೂ ಮುಗಿಬೀಳುತ್ತಾರೆ, ಹಾಗಾಗಕೂಡದು. ಸತ್ಯ ಮಾತ್ರ ಚರ್ಚೆಯಾಗಲಿ, ನನ್ನ ಹೆಸರು ಹಾಕಬೇಡಿ ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;- ಸೂರಪ್ಪ ಬಾಬು&lt;/strong&gt;&lt;/h2&gt;&lt;p&gt;1. ಕಲಾವಿದರು ಪ್ರಸ್ತುತ ಪಡೆದುಕೊಳ್ಳುತ್ತಿರುವ ಸಂಭಾವನೆಯಲ್ಲಿ 50% ಸಂಭಾವನೆ ಕಡಿಮೆ ಮಾಡಿಕೊಳ್ಳಬೇಕು&lt;/p&gt;&lt;p&gt;2. ನಿರ್ಮಾಪಕರು ಯಾವುದೇ ಕಾರಣಕ್ಕೂ ಓಟಿಟಿಗಳಿಗೆ ಸಿನಿಮಾ ಕೊಡಬಾರದು&lt;/p&gt;&lt;p&gt;3. ನಿರ್ದೇಶಕರು ನಿರ್ಮಾಪಕರಿಗೆ ಹೊರೆಯಾಗುವಂತಹ ನೂರು ದಿನಗಳ ಚಿತ್ರೀಕರಣ ನಿಲ್ಲಿಸಬೇಕು.&lt;/p&gt;&lt;p&gt;4. ನಾಯಕ ನಟರ ಜೊತೆಗಿರುವ ಸಿಬ್ಬಂದಿಗಳ ಅನಗತ್ಯ ಖರ್ಚುಗಳನ್ನು ಕಡಿತಗೊಳಿಸಬೇಕು. ಅಗತ್ಯವಿದ್ದಲ್ಲಿ ಮಾತ್ರ ಕ್ಯಾರವ್ಯಾನ್&zwnj;ಗಳನ್ನು ಬಳಸಬೇಕು. ಮನೆ ಅಥವಾ ಸ್ಟುಡಿಯೋಗಳಲ್ಲಿ ಚಿತ್ರೀಕರಿಸುವಾಗ ಕ್ಯಾರವ್ಯಾನ್&zwnj;ಗಳನ್ನು ನಿಷೇಧಿಸಬೇಕು.&lt;/p&gt;&lt;p&gt;5. ಚಿತ್ರೀಕರಣದ ಸಮಯದಲ್ಲಿ ಯಾವುದೇ ಕಲಾವಿದರಿರಲಿ, ಯಾವುದೇ ತಂತ್ರಜ್ಞರಿರಲಿ ಮೊಬೈಲ್ ಫೋನ್ ಬಳಸಬಾರದು.&lt;/p&gt;&lt;p&gt;6. ನಿರ್ದೇಶಕರು ಚಿತ್ರೀಕರಣಕ್ಕೆ ಬಳಸುವ ಸಾಧನಗಳಾದ ಗಿಂಬಲ್, ಜಿಮ್ಮಿ ಜಿಪ್ ಇನ್ನೂ ಇತರೆ ಸಾಧನಗಳನ್ನು ಅವಶ್ಯಕತೆ ಇದ್ದ ದಿನ ಮಾತ್ರ ತರಿಸಿಕೊಳ್ಳಬೇಕು.&lt;/p&gt;&lt;p&gt;7. ಪ್ಯಾನ್ ಇಂಡಿಯಾ ಚಿತ್ರಗಳ ಭ್ರಮೆಯಿಂದ ಮೊದಲು ಹೊರಬರಬೇಕು. ಪ್ಯಾನ್ ಇಂಡಿಯಾ ಸಿನಿಮಾ ವಿಭಾಗದಲ್ಲಿ ಕಾಂತಾರ ಬಿಟ್ಟರೆ ಯಾವ ಚಿತ್ರಗಳು ಯಶಸ್ಸು ಕಂಡಿಲ್ಲ.&lt;/p&gt;&lt;p&gt;8. ಸ್ಥಳೀಯ ಕಲಾವಿದರಿಗೆ ಹೆಚ್ಚೆಚ್ಚು ಅವಕಾಶ ಕಲ್ಪಿಸಿಕೊಡಬೇಕು. ಬೇರೆ ಭಾಷೆ ಕಲಾವಿದರಿಗೆ ದುಬಾರಿ ಸಂಭಾವನೆ ನೀಡಿ ನಮ್ಮ ಚಿತ್ರಗಳಲ್ಲಿ ಅವಕಾಶ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ.&lt;/p&gt;&lt;p&gt;9. ಕಾಂತಾರ ಚಿತ್ರದ ಕಥೆಯ ಹಾಗೆ ನಮ್ಮ ಮಣ್ಣಿನ ಸೊಗಡು, ನಮ್ಮ ಸಂಸ್ಕೃತಿ ಬಿಂಬಿಸುವ ಚಿತ್ರಗಳ ಮೇಲೆ ಒತ್ತು ಕೊಡಬೇಕು.&lt;/p&gt;&lt;p&gt;10. ನಾವು ಮಾಡುವ ಚಿತ್ರಗಳು, ಚಿತ್ರಕಥೆಗಳು ಉತ್ತಮವಾಗಿದ್ದರೆ ಖಂಡಿತ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಮಲಯಾಳಂನ ಎಷ್ಟೋ ಚಿತ್ರಗಳೇ ಸಾಕ್ಷಿ.&lt;/p&gt;&lt;h3&gt;&lt;strong&gt;ಕೆಲವರಷ್ಟೇ ಯಶಸ್ವಿ&lt;/strong&gt;&lt;/h3&gt;&lt;p&gt;ಯಶಸ್ಸಿನ ಉತ್ತುಂಗದಲ್ಲಿದ್ದ ಪುನೀತ್ ರಾಜಕುಮಾರ್&zwnj; ಅವರು ನಮ್ಮನ್ನು ಅಗಲಿದ್ದು ಚಿತ್ರರಂಗಕ್ಕೆ ದೊಡ್ಡ ನಷ್ಟ. ಅದೇ ರೀತಿ ಹಲವಾರು ಹಿಟ್ ಚಿತ್ರಗಳು ಕೊಟ್ಟು ಸಕ್ಸಸ್ ಆಗಿದ್ದ ಮತ್ತೊಬ್ಬ ನಟ ಜೈಲು ಸೇರಿದ್ದು ಚಿತ್ರರಂಗದ ಮಟ್ಟಿಗೆ ದೊಡ್ಡ ಹೊಡೆತ.&lt;/p&gt;&lt;p&gt;2000 ಇಸವಿ ನಂತರ ಚಿತ್ರರಂಗಕ್ಕೆ ಬಂದಂತಹ ಎಷ್ಟೋ ಕಲಾವಿದರು ಬೆರಳೆಣಿಕೆಯಷ್ಟು ಯಶಸ್ಸು ಕಂಡಿದ್ದು ಸತ್ಯ. ಅದರಲ್ಲೂ ವಿಶೇಷವಾಗಿ ಪುನೀತ್, ದರ್ಶನ್, ಸುದೀಪ್, ಯಶ್, ಗಣೇಶ್, ದುನಿಯಾ ವಿಜಯ್ ಹೊರತು ಪಡಿಸಿ ಬೇರೆ ಯಾವ ನಟರು ಪ್ರೇಕ್ಷಕರ ಹೃದಯ ಗೆಲ್ಲಲು ಅಷ್ಟಾಗಿ ಸಾಧ್ಯವಾಗಲಿಲ್ಲ. ವ್ಯಾಪಾರದ ವಿಷಯದಲ್ಲೂ ನಿರ್ಮಾಪಕರನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಈ ಕಟು ಸತ್ಯ ನಾವೆಲ್ಲರೂ ಒಪ್ಪಿಕೊಳ್ಳಲೆಬೇಕು. ಇಂದು ಚಿತ್ರರಂಗ ಉಳಿಯಬೇಕಾದರೆ ಈ ಮೇಲೆ ಹೇಳಿರುವ ಎಲ್ಲಾ ಮಾನದಂಡಗಳನ್ನು ಅಳವಡಿಸಿಕೊಳ್ಳಬೇಕು.&lt;/p&gt;&lt;p&gt;&lt;strong&gt;ರಿಷಬ್ ಶೆಟ್ಟಿ ಕನ್ನಡ ನಿರ್ಮಾಪಕರಿಗೆ ಕಾಲ್&zwnj;ಶೀಟ್&zwnj; ಕೊಡಲ್ಲ&lt;/strong&gt;&lt;/p&gt;&lt;p&gt;ರಿಷಬ್ ಶೆಟ್ಟಿಯವರು ಚಿತ್ರರಂಗಕ್ಕೆ ಬಂದಾಗ ಅವರ ಚಿತ್ರಗಳು ಯಶಸ್ವಿಯಾಗಲಿಲ್ಲ. ಆದರೆ ಕಾಂತಾರಕ್ಕೆ ಸಿಕ್ಕ ಭರ್ಜರಿ ಯಶಸ್ಸು ಅವರ ಎಲ್ಲಾ ಹಳೆಯ ಸೋಲುಗಳು ಮರೆಯುವಂತೆ ಮಾಡಿತು. ಆದರೆ ಇತ್ತೀಚಿನ ದಿನಗಳಲ್ಲಿ ರಿಷಬ್ ಶೆಟ್ಟಿ ಕೇವಲ ಪ್ಯಾನ್ ಇಂಡಿಯಾ ಸಿನಿಮಾಗಳನ್ನೇ ಗಮನದಲ್ಲಿ ಇಟ್ಟುಕೊಂಡು ಕನ್ನಡದ ನಿರ್ಮಾಪಕರಿಗೆ ಡೇಟ್ಸ್ ಕೊಡದೆ ಬೇರೆ ಭಾಷೆಯ ನಿರ್ಮಾಪಕರಿಗೆ ತಮ್ಮ ಕಾಲ್ ಶೀಟ್ ಕೊಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಅವರು ಹನುಮಾನ್ ಚಿತ್ರಕ್ಕೆ ಸಹಿ ಹಾಕಿದ್ದಾರೆ, ಇದನ್ನ ಪ್ರಶ್ನಿಸಿದರೆ ನಾನು ಕನ್ನಡಿಗ, ಹನುಮಂತ ಕನ್ನಡಿಗ ಎಂದು ಹೇಳುತ್ತಾರೆ. ಆ ಚಿತ್ರದ ನಿರ್ಮಾಪಕರಾಗಲಿ ತಂತ್ರಜ್ಞರಾಗಲಿ ಕನ್ನಡಿಗರಲ್ಲ. ಆ ಚಿತ್ರದಿಂದ ಕನ್ನಡಿಗರಿಗಾಗಲಿ, ಕನ್ನಡ ಚಿತ್ರರಂಗಕ್ಕಾಗಲಿ ಯಾವುದೇ ಪ್ರಯೋಜನವಿಲ್ಲ.&lt;/p&gt;&lt;h3&gt;ಸ್ಟಾರ್&zwnj;ಗಳು ಕಿರುತೆರೆ ಬಿಡಬೇಕು&lt;/h3&gt;&lt;p&gt;ಕನ್ನಡದ ಕೆಲವು ನಾಯಕ ನಟರು ಖಾಸಗಿ ವಾಹಿನಿಗಳಲ್ಲಿ ನಿರೂಪಕರಾಗಿ, ತೀರ್ಪುಗಾರರಾಗಿ ವಾರಾಂತ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ. ಬಹುತೇಕ ವಾಹಿನಿಗಳು ಪದೇ ಪದೇ ಆ ಕಾರ್ಯಕ್ರಮಗಳನ್ನು ಮರು ಪ್ರಸಾರ ಮಾಡುತ್ತಲೇ ಇರುತ್ತಾರೆ. ಅದರಿಂದ ಕಿರುತೆರೆಯಲ್ಲಿ ಸದಾ ಕಾಣಿಸಿಕೊಳ್ಳುವ ನಟರು ಜನಸಾಮಾನ್ಯರಿಗೆ ಸಾಮಾನ್ಯವೆನಿಸಿಬಿಡುತ್ತಾರೆ. ಚಿತ್ರರಂಗದಲ್ಲಿ ಸಂಪಾದಿಸಿದ ಹೆಸರು ಕೀರ್ತಿಯಿಂದ ವಾಹಿನಿಯವರು ನಟರನ್ನು ತಮ್ಮ ಸ್ವಾರ್ಥಕ್ಕಾಗಿ ಕರೆತಂದು ಅವರ ಜನಪ್ರಿಯತೆ ಕುಗ್ಗಿಸುತ್ತಿದ್ದಾರೆ. ತಮ್ಮ ನೆಚ್ಚಿನ ನಾಯಕರನ್ನು ಟಿವಿ ಪರದೆಯಲ್ಲಿ ಪ್ರತಿದಿನ ನೋಡುವ ಪ್ರೇಕ್ಷಕ ಹೇಗೆ ತಾನೇ ಚಿತ್ರಮಂದಿರಕ್ಕೆ ಬರುತ್ತಾನೆ ಎಂಬುದನ್ನು ಆ ನಾಯಕ ನಟರು ತಮ್ಮನ್ನು ತಾವೇ ಕೇಳಿಕೊಳ್ಳಬೇಕು.&lt;/p&gt;&lt;p&gt;&lt;strong&gt;ಚಿತ್ರರಂಗ ಕುಟುಂಬ ಅಂತ ಸುಮ್ಮನೆ ಹೇಳಬಾರದು&lt;/strong&gt;&lt;/p&gt;&lt;p&gt;ಚಿತ್ರರಂಗವೆಂಬುದು ಕುಟುಂಬವೆಂದು ಸಾರ್ವಜನಿಕ ವೇದಿಕೆಗಳಲ್ಲಿ ಮಾತ್ರವೇ ಹೇಳುವಂತಾಗಬಾರದು. ಅದನ್ನು ಜಾರಿಗೆ ತರುವ ಪ್ರಯತ್ನ ಆಗಬೇಕು. ನಾಯಕ ನಟರು ಕಿರುತೆರೆ ಬಿಟ್ಟು ಹಿರಿತೆರೆಯ ಕಡೆ ಹೆಚ್ಚಿನ ಗಮನ ಕೊಡಬೇಕು. ಹೆಚ್ಚೆಚ್ಚು ಸಿನಿಮಾಗಳು ಮಾಡುತ್ತಾ ಹೋದರೆ ಇಲ್ಲಿರುವ ಸ್ಥಳೀಯ ಕಲಾವಿದರಿಗೆ ತಂತ್ರಜ್ಞರಿಗೆ ಕೆಲಸ ಸಿಗುತ್ತೆ. ಒಂದು ಚಿತ್ರ ಪ್ರಾರಂಭವಾದರೆ ಕನಿಷ್ಠ ಒಂದು ಸಾವಿರದಿಂದ ಎರಡು ಸಾವಿರ ಕಾರ್ಮಿಕರಿಗೆ ಕೆಲಸ ಸಿಗುತ್ತೆ. ಆ ಕಾರ್ಮಿಕರ ಕುಟುಂಬಗಳಿಗೆ ನೆರವಾಗುತ್ತದೆ.&lt;/p&gt;&lt;p&gt;ರಾಜಕುಮಾರ್&zwnj;, ವಿಷ್ಣುವರ್ಧನ್, ಶಂಕರ್&zwnj;ನಾಗ್, ಅಂಬರೀಷ್ ಇನ್ನೂ ಹಲವು ಕಲಾವಿದರು ವರ್ಷಕ್ಕೆ ಎರಡರಿಂದ ಮೂರು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರು. ಅವರ ಸಾಧನೆಗಳ ಮುಂದೆ ನಾವೆಲ್ಲರೂ ಶೂನ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕೆಲವು ನಟರು ತಮ್ಮ ಅಹಂ, ಸ್ಟಾರ್&zwnj;ಡಮ್ ಪಕ್ಕಕ್ಕಿಟ್ಟು ಇನ್ನಾದರೂ ವರ್ಷಕ್ಕೆ ಎರಡು ಸಿನಿಮಾ ಮಾಡುವಂತಾಗಲಿ.&lt;/p&gt;&lt;p&gt;ಕೇವಲ ಹಣದ ವ್ಯಾಮೋಹಕ್ಕಾಗಿ ಸಿನಿಮಾ ಮಾಡದೆ ಕನ್ನಡ ಚಿತ್ರರಂಗದ ಏಳಿಗೆಗಾಗಿ, ಪ್ರೇಕ್ಷಕರಿಗಾಗಿ ಸಿನಿಮಾ ಮಾಡುವುದು ಅಭ್ಯಾಸ ಮಾಡಿಕೊಳ್ಳಬೇಕು. ಆ ಕಲಾವಿದ 50 ಕೋಟಿ ಸಂಭಾವನೆ ಪಡೆದುಕೊಂಡ, ನಾನೇನೂ ಕಮ್ಮಿ ನನಗೆ ನೂರು ಕೋಟಿ ಕೊಡಿ ಎನ್ನುತ್ತಾ ಚಿತ್ರರಂಗ ಹಾಳು ಮಾಡುವ ಕೆಲವು ನಟರು ಇನ್ನಾದರೂ ತಮ್ಮ ಅಹಂ ಬದಿಗಿಟ್ಟು ಚಿತ್ರರಂಗದ ಏಳಿಗೆಗಾಗಿ ದುಡಿಯುವ ಮನಸು ಮಾಡಬೇಕು.&lt;/p&gt;&lt;p&gt;ಕನ್ನಡ ಚಿತ್ರರಂಗ ಮತ್ತೆ ಪುಟಿದೆದ್ದು ಮೇಲೆ ಬರಬೇಕು. ಆದರೆ ಈಗಿರುವ ಸನ್ನಿವೇಶ ನೋಡುತ್ತಿದ್ದರೆ ಕನ್ನಡ ಚಿತ್ರರಂಗ ಭಾರತದ ಚಿತ್ರರಂಗದ ಭೂಪಟದಿಂದ ಬಹುತೇಕ ಕಾಣೆಯಾಗುವ ದಿನಗಳು ಹತ್ತಿರದಲ್ಲಿದೆ ಎಂದು ಹೇಳುವುದಕ್ಕೆ ಬಹಳ ನೋವಾಗುತ್ತದೆ. ಈಗಾದರೂ ನಮ್ಮ ನಾಯಕ ನಟರು ಎಚ್ಚೆತ್ತುಕೊಂಡು ಚಿತ್ರರಂಗದ ಕಣ್ಣಾಗಲಿ, ನಿರ್ಮಾಪಕರ ಗಣಿಯಾಗಲಿ, ಕನ್ನಡ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆ ತರಲಿ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/stars-quit-television-and-reduce-your-remuneration/articleshow-bvbggmc"/>
        </item>
        <item>
            <title><![CDATA[ಭಾರತೀಯರ ಕನಸನ್ನು ವಿಶ್ವಕ್ಕೆ ಪರಿಚಯಿಸುತ್ತಿದ್ದೇವೆ : ಯಶ್‌]]></title>
            <link>https://www.kannadaprabha.in/entertainment-news/we-are-taking-the-dreams-of-indians-to-the-world-yash/articleshow-bzso4gz</link>
            <guid isPermaLink="true">https://www.kannadaprabha.in/entertainment-news/we-are-taking-the-dreams-of-indians-to-the-world-yash/articleshow-bzso4gz</guid>
            <pubDate>Mon, 20 Jul 2026 13:40:54 +0530</pubDate>
            <description><![CDATA[&lt;p&gt;ಯಶ್&zwnj;, ರಣಬೀರ್&zwnj; ಕಪೂರ್&zwnj; ಸಾಯಿಪಲ್ಲವಿ, ಸನ್ನಿ ಡಿಯೋಲ್&zwnj;, ರಾಕುಲ್&zwnj;ಪ್ರೀತ್ ಸಿಂಗ್&zwnj; ಮುಂತಾದವರ ನಟನೆಯ ವಿಶ್ವದ ಬಹು ನಿರೀಕ್ಷಿತ &lsquo;ರಾಮಾಯಣ&rsquo; ಚಿತ್ರದ ಟ್ರೇಲರ್&zwnj; ಪ್ರದರ್ಶನಗೊಳ್ಳುವ ಮೂಲಕ ಮೊಟ್ಟ ಮೊದಲ ಪ್ಯಾನ್&zwnj; ಇಂಡಿಯಾ ಕಾರ್ಯಕ್ರಮಕ್ಕೆ ಚಿತ್ರತಂಡ ಸಾಕ್ಷಿ ಆಯಿತು.&lt;/p&gt;]]></description>
            <media:content url="https://static-gi.asianetnews.com/images/01kxv0pgrb97gq37nv27bhyn6q/yash-1784391877387.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಸಿನಿವಾರ್ತೆ&lt;/strong&gt;&lt;/p&gt;&lt;p&gt;ಯಶ್&zwnj;, ರಣಬೀರ್&zwnj; ಕಪೂರ್&zwnj; ಸಾಯಿಪಲ್ಲವಿ, ಸನ್ನಿ ಡಿಯೋಲ್&zwnj;, ರಾಕುಲ್&zwnj;ಪ್ರೀತ್ ಸಿಂಗ್&zwnj; ಮುಂತಾದವರ ನಟನೆಯ ವಿಶ್ವದ ಬಹು ನಿರೀಕ್ಷಿತ &lsquo;ರಾಮಾಯಣ&rsquo; ಚಿತ್ರದ ಟ್ರೇಲರ್&zwnj; ಪ್ರದರ್ಶನಗೊಳ್ಳುವ ಮೂಲಕ ಮೊಟ್ಟ ಮೊದಲ ಪ್ಯಾನ್&zwnj; ಇಂಡಿಯಾ ಕಾರ್ಯಕ್ರಮಕ್ಕೆ ಚಿತ್ರತಂಡ ಸಾಕ್ಷಿ ಆಯಿತು. ದೆಹಲಿಯ ಭಾರತ್&zwnj; ಮಂಟಪಂನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ, ತಮಿಳುನಾಡು, ಕೇರ&zwj;ಳ, ಮುಂಬೈ, ದೆಹಲಿ, ಆಂಧ್ರ-ತೆಲಂಗಾಣ ರಾಜ್ಯಗಳ ಮಾಧ್ಯಮ ಪ್ರತಿನಿಧಿಗಳು, ಆಯ್ದ ಗಣ್ಯರಿಗೆ ಮಾತ್ರ &lsquo;ರಾಮಾಯಾಣ&rsquo; ಚಿತ್ರದ 3ಡಿ ಟ್ರೇಲರ್&zwnj; ಪ್ರದರ್ಶನ ಮಾಡಲಾಯಿತು.&lt;/p&gt;&lt;p&gt;ಜುಲೈ 24ರಂದು ಅಮೆರಿಕಾದಲ್ಲಿ ನಡೆಯಲಿರುವ ಅದ್ದೂರಿ ಕಾರ್ಯಕ್ರಮದಲ್ಲಿ ಇದೇ ಟ್ರೇಲರ್&zwnj; ಬಿಡುಗಡೆ ಆಗಲಿದ್ದು, ಆ ನಂತರ ಟ್ರೇಲರ್&zwnj; ಅನ್ನು ಎಲ್ಲರೂ ನೋಡಬಹುದು.&lt;/p&gt;&lt;p&gt;3 ನಿಮಿಷದ ಟ್ರೇಲರ್&zwnj;ನಲ್ಲಿ ರಾವಣನಾಗಿ ಯಶ್&zwnj; ಅವರ ಆ್ಯಕ್ಷನ್&zwnj; ಪ್ಯಾಕ್&zwnj;, ರಾಮನ ಪಾತ್ರಧಾರಿ ರಣಬೀರ್&zwnj; ಕಪೂರ್&zwnj; ಅವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಾಣ ಬಿಡುವ ದೃಶ್ಯ, ಅಯೋಧ್ಯೆ ಬಿಟ್ಟು ಹೊರಡುವ ರಾಮ- ಸೀತೆಯ ದೃಶ್ಯ, ಕುಂಭಕರ್ಣನ ಪ್ರವೇಶ, ಯುದ್ಧದ ಸನ್ನಿವೇಶ, ಘರ್ಜಿಸುವ ಸಿಂಹವನ್ನೇ ಘರ್ಜಿಸಿ ಸದ್ದಗಡಿಸುವ ಯಶ್&zwnj;, ವಿಎಫ್&zwnj;ಎಕ್ಸ್&zwnj;, ಅತ್ಯಂತ ಸಹಜವಾಗಿ ಕಾಣಿಸಿಕೊಳ್ಳುವ ಸೀತೆಯ ಪಾತ್ರಧಾರಿ ಸಾಯಿಪಲ್ಲವಿ, ಹನುಮನಾಗಿ ಬರುವ ಸನ್ನಿ ಡಿಯೋಲ್&zwnj; ಪಾತ್ರಗಳ ಜೊತೆಗೆ ತಾಂತ್ರಿಕವಾಗಿ ವಿಎಫ್&zwnj;ಎಕ್ಸ್&zwnj;, ಹಿನ್ನೆಲೆ ಸಂಗೀತ ಸೇರಿ ಕೆಲವೇ ನಿಮಿಷಗಳ &lsquo;ರಾಮಾಯಣ&rsquo; ಚಿತ್ರದ ಟ್ರೇಲರ್&zwnj; ದೃಶ್ಯ ವೈಭವ ಕಟ್ಟಿಕೊಟ್ಟಿದೆ.&lt;/p&gt;&lt;p&gt;ಪ್ರಥಮ್&zwnj; ಸಂಕಲ್ಪ್&zwnj; ಹೆಸರಿನಲ್ಲಿ ನಡೆದ ಈ ಕಾರ್ಯಕ್ರಮದ ಕೊನೆಯಲ್ಲಿ ಸರ್ಪ್ರೈಸ್&zwnj; ಆಗಿ ಬಂದ ನಟ ಯಶ್&zwnj; ಅವರು &lsquo;ಎಲ್ಲರಿಗೂ ನಮಸ್ಕಾರ&rsquo; ಎಂದು ಕನ್ನಡದಲ್ಲೇ ಮಾತು ಶುರು ಮಾಡಿ, &lsquo;ತೆರೆ ಮೇಲೆ ನೋಡುತ್ತಿರುವ ಈ ರಿಜಲ್ಟ್&zwnj;ನ ಕ್ರೆಡಿಟ್ಟು ನಿರ್ಮಾಪಕ ನಮೀತ್&zwnj; ಮಲ್ಹೋತ್ರಾ ಅವರಿಗೆ ಸೇರಬೇಕು. ಅವರು ಕರೆದು ನನಗೆ ಪಾತ್ರ ಕೊಟ್ಟರು, ನನಗೆ ಹಿಂದಿ ಕಲಿಯಲು ಅವಕಾಶ ಸಿಕ್ಕಿತು. &lsquo;ರಾಮಾಯಣ&rsquo; ಸಿನಿಮಾ ಆಗಬೇಕೆಂಬುದು ಭಾರತೀಯರ ಕನಸು. ಈ ಕನಸನ್ನು ನಾವು ಗ್ಲೋಬಲ್&zwnj; ಪ್ಲಾಟ್&zwnj;ಫಾರಂನಲ್ಲಿ ಪರಿಚಯಿಸುತ್ತಿದ್ದೇನೆ. ರಣಬೀರ್&zwnj; ಕಪೂರ್&zwnj;, ಸಾಯಿ ಪಲ್ಲವಿ ಅವರು ಗ್ರೇಟ್&zwnj;, ಅದ್ಭುತ ನಟನೆ. ಅವರು ಪಾತ್ರಗಳಿಗೆ ಶರಣಾಗಿದ್ದಾರೆ&rsquo; ಎಂದರು.&lt;/p&gt;&lt;p&gt;ನಿರ್ಮಾಪಕ ನಮೀತ್&zwnj; ಮಲ್ಹೋತ್ರಾ ಮಾತನಾಡಿ, &lsquo;ನಾವು ರಾಮಾಯಣವನ್ನು ಸಿನಿಮಾ ಮಾಡಿ, ಇಡೀ ವಿಶ್ವಕ್ಕೆ ತೋರಿಸಲು ಸಂಕಲ್ಪ ಮಾಡಿದೇವು. ಇದು ಮೂರು ವ್ಯಕ್ತಿಗಳಿಂದ ಸಾಧ್ಯವಾಯಿತು. ಆ ಮೂವರಲ್ಲಿ ನನ್ನ ಫ್ರೆಂಡ್&zwnj; ಯಶ್&zwnj; ಕೂಡ ಒಬ್ಬರು. ನಟನೆ ಜೊತೆಗೆ ನಿರ್ಮಾಣದಲ್ಲೂ ಪಾಲುದಾರರಾಗುವ ಮೂಲಕ ನಮಗೆ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ. ಹಾಲಿವುಡ್&zwnj;ಗೆ ಇಂಡಿಯನ್&zwnj; ಚಿತ್ರರಂಗಕ್ಕೆ ಪ್ರವೇಶಿಸಬೇಕೆಂದು ಯೋಚಿಸಿ ವಿಎಫ್&zwnj;ಎಕ್ಸ್&zwnj; ಸಂಸ್ಥೆ ಶುರು ಮಾಡಿ ಆಸ್ಕರ್&zwnj; ಪ್ರಶಸ್ತಿ ಪಡೆದುಕೊಂಡೆವು. ಈಗ ಭಾರತೀಯರ ನೆಲದ ಕತೆಯನ್ನು ವಿಶ್ವಮಟ್ಟದಲ್ಲಿ ಹೇಳುತ್ತಿದ್ದೇವೆ. ಮೂವರು ಮಹಾತ್ಮರು ಬರೆದಿರುವ ರಾಮಾಯಣವನ್ನು ಆಧಾರವಾಗಿಟ್ಟುಕೊಂಡು ಈ ಚಿತ್ರ ಮಾಡಲಾಗಿದೆ. ಇಷ್ಟು ದೊಡ್ಡ ಕತೆಯಲ್ಲಿ 5 ಪಾತ್ರಗಳನ್ನು ಮಾತ್ರ ಆಧರಿಸಿ &lsquo;ರಾಮಾಯಣ&rsquo; ಚಿತ್ರ ಮಾಡಲು ಸಾಧ್ಯ. ಈ ಐದೂ ಮಂದಿಯೂ ಹೀರೋಗಳೇ. ಪ್ರತಿ ಭಾರತೀಯನ ಮನಸ್ಸಿನಲ್ಲಿ ರಾಮಾಯಣ ನೆಲೆಯೂರಬೇಕು&rsquo; ಎಂದರು. ಮಹರಾಜ ದಶರಥನ ಪಾತ್ರಧಾರಿ ಅರುಣ್ ಗೋವಿಲ್, ವಿವೇಕ್&zwnj; ಒಬೆರಾಯ್&zwnj;, ರಾಕುಲ್&zwnj; ಪ್ರೀತ್&zwnj; ಸಿಂಗ್&zwnj;, ಬಾಬಾ ರಾಮ್ ದೇವ್&zwnj; ಗುರೂಜಿ ಸೇರಿದಂತೆ ಹಲವು ಗಣ್ಯರು ಹಾಜರಿದ್ದು, ಚಿತ್ರದ ಬಗ್ಗೆ ಮಾತನಾಡಿದರು.&lt;/p&gt;&lt;p&gt;ಕಲಾವಿದರಿಗೆ ಇಂಥ ಪಾತ್ರಗಳು ಸಿಗೋದು ಸುಲಭ ಅಲ್ಲ. ನಾನು ಸೀತಾ ಮಾತೆಯ ಪಾತ್ರವನ್ನು ನಾನಾಗಿಯೇ ಆರಿಸಿಕೊಂಡೆ ಎಂದು ನಾನು ಭಾವಿಸುವುದಿಲ್ಲ. ಈ ಪಾತ್ರವನ್ನು ಮಾಡಲು ನನಗೆ ಆಶೀರ್ವಾದ ದಕ್ಕಿದೆ. ಇದು ನಾವು ಹುಡುಕಿಕೊಂಡು ಹೋಗುವ ಅಥವಾ ಹೀಗೆಯೇ ನಟಿಸಬೇಕು ಎಂದು ಮೊದಲೇ ಬರೆದಿಡುವ ಪಾತ್ರವಲ್ಲ ಇದು. ನಾನು ಶೂಟಿಂಗ್&zwnj; ಸಮಯದಲ್ಲಿ ಧ್ಯಾನದಲ್ಲಿ ಕುಳಿತು, &lsquo;ಸೀತಾ ಮಾತೆ, ನೀನೇ ನನ್ನ ಮೂಲಕ ನಟಿಸು. ನನ್ನಿಂದ ಏನನ್ನು ನಿರೀಕ್ಷಿಸುತ್ತೀಯೋ ಅದು ಈ ಚಿತ್ರಕ್ಕೆ ಸಿಗಲಿ&rsquo; ಎಂದು ಪ್ರಾರ್ಥಿಸುತ್ತಿದ್ದೆ.&lt;/p&gt;&lt;h2&gt;&lt;strong&gt;- ಸಾಯಿ ಪಲ್ಲವಿ&lt;/strong&gt;&lt;/h2&gt;&lt;p&gt;ರಾಮ ಹಾಗೂ ಸೀತೆ ಪಾತ್ರಗಳಿಗೆ ರಣಬೀರ್&zwnj; ಕಪೂರ್&zwnj;, ಸಾಯಿ ಪಲ್ಲವಿಯೇ ನನ್ನ ಮೊದಲ ಆಯ್ಕೆ ಆಗಿತ್ತು. ನಾನು ರಣಬೀರ್&zwnj; ಕಣ್ಣಲ್ಲಿ ರಾಮ, ಸಾಯಿ ಪಲ್ಲವಿ ಕಣ್ಣಲ್ಲಿ ಸೀತೆಯನ್ನು ಕಂಡೆ. ಸಿನಿಮಾ ನೋಡುವಾಗ ರಣಬೀರ್&zwnj;, ಸಾಯಿ ಪಲ್ಲವಿ ಬದಲಿಗೆ ರಾಮ, ಸೀತೆ ಕಾಣುತ್ತಾರೆ.&lt;/p&gt;&lt;h3&gt;- ನಿತೇಶ್&zwnj; ತಿವಾರಿ, ನಿರ್ದೇಶಕ&lt;/h3&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/we-are-taking-the-dreams-of-indians-to-the-world-yash/articleshow-bzso4gz"/>
        </item>
        <item>
            <title><![CDATA[ಸಂಭಾವನೆಗಳು ಭಾರವಾಗುತ್ತಿವೆ, ಕಷ್ಟಗಳು ಹೆಚ್ಚಾಗಿವೆ]]></title>
            <link>https://www.kannadaprabha.in/entertainment-news/responsibilities-have-grown-heavier-and-challenges-have-become-greater/articleshow-gpg82zw</link>
            <guid isPermaLink="true">https://www.kannadaprabha.in/entertainment-news/responsibilities-have-grown-heavier-and-challenges-have-become-greater/articleshow-gpg82zw</guid>
            <pubDate>Fri, 17 Jul 2026 12:47:12 +0530</pubDate>
            <description><![CDATA[&lt;p&gt;ಕಳೆದ ಎರಡು ದಶಕಗಳು ಕನ್ನಡ ಸಿನೆಮಾ ಇತಿಹಾಸದಲ್ಲೇ ಅತ್ಯಂತ ಸ್ಥಿತ್ಯಂತರಗಳನ್ನು ಕಂಡ ಸಮಯ. 2006ರಲ್ಲಿ ತೆರೆ ಕಂಡ &lsquo;ಮುಂಗಾರು ಮಳೆ&rsquo;, ಅಲ್ಲಿ ತನಕ ಕನ್ನಡ ಸಿನೆಮಾ ಗಳಿಕೆಯಲ್ಲಿ ಮಾಡಿದ ಎಲ್ಲಾ ದಾಖಲೆಗಳನ್ನೂ ಮುರಿದಿತ್ತು.&lt;/p&gt;]]></description>
            <media:content url="https://static-gi.asianetnews.com/images/01kt1cqw0k9chbzxfs2h5qgzb7/cinema-theatre--1--1780310863891.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;&amp;nbsp;- ಕೆ.ಎಂ. ಚೈತನ್ಯ, ಹಿರಿಯ ನಿರ್ದೇಶಕರು&lt;/strong&gt;&lt;/h2&gt;&lt;p&gt;ಕಳೆದ ಎರಡು ದಶಕಗಳು ಕನ್ನಡ ಸಿನೆಮಾ ಇತಿಹಾಸದಲ್ಲೇ ಅತ್ಯಂತ ಸ್ಥಿತ್ಯಂತರಗಳನ್ನು ಕಂಡ ಸಮಯ. 2006ರಲ್ಲಿ ತೆರೆ ಕಂಡ &lsquo;ಮುಂಗಾರು ಮಳೆ&rsquo;, ಅಲ್ಲಿ ತನಕ ಕನ್ನಡ ಸಿನೆಮಾ ಗಳಿಕೆಯಲ್ಲಿ ಮಾಡಿದ ಎಲ್ಲಾ ದಾಖಲೆಗಳನ್ನೂ ಮುರಿದಿತ್ತು. ಕನ್ನಡ ಚಿತ್ರರಂಗಕ್ಕೆ ಹೊಸ ಭರವಸೆ ತಂದಿತ್ತು. ಅಲ್ಲಿಯ ತನಕ ಸಿನೆಮಾಗಳಲ್ಲಿ ನಟರಿಗೆ ಮಾತ್ರ ಒಳ್ಳೆಯ ಸಂಭಾವನೆ ಇತ್ತು. ಮುಂಗಾರು ಮಳೆಯ ನಂತರ ನಿರ್ದೇಶಕರು, ಗೀತ ರಚನಾಕಾರರು, ನೃತ್ಯ ಸಂಯೋಜಕರು ಸೇರಿದಂತೆ ಎಲ್ಲಾ ವಿಭಾಗದ ತಂತ್ರಜ್ಞರಿಗೂ ಸಂಭಾವನೆಯಲ್ಲಿ ಹೆಚ್ಚುವರಿ ಆಯ್ತು.&lt;/p&gt;&lt;p&gt;ಇಪ್ಪತ್ತು ವರ್ಷಗಳ ಹಿಂದೆ ಇಂದಿನಷ್ಟು ಮಲ್ಟಿಪ್ಲೆಕ್ಸ್&zwnj;ಗಳಿರಲಿಲ್ಲ. ಅದೇ ಸಮಯದಲ್ಲಿ ಟಿ ವಿ. ಚಾನೆಲ್&zwnj;ಗಳು ಸಿನಿಮಾಗಳಿಗೆ ಒಳ್ಳೆಯ ಮೊತ್ತ ಕೊಟ್ಟು ಖರೀದಿಸಲು ಶುರು ಮಾಡಿದವು. ಆಡಿಯೋ ಕಂಪನಿಗಳು ಸಿನೆಮಾ ಆಡಿಯೋ ಹಕ್ಕುಗಳಿಗಾಗಿ ಒಳ್ಳೆಯ ಮೊತ್ತ ಕೊಡಲು ಪ್ರಾರಂಭಿಸಿದರು. ಅನೇಕ ನಿರ್ಮಾಪಕರು ಒಂದು ಸಿನೆಮಾ ಶುರು ಮಾಡುವ ಮುಂಚೆ ಅದರಿಂದ ಅವರಿಗೆ ಟಿ.ವಿ ಹಾಗೂ ಸಂಗೀತದಿಂದ ಎಷ್ಟು ಹಣ ಬರಬಹುದು ಎಂದು ಲೆಕ್ಕ ಹಾಕಿ ಮುಂದಿನ ಹಣ ಹೊಂಚುವುದರ ಬಗ್ಗೆ ಯೋಚಿಸುತ್ತಿದ್ದರು.&lt;/p&gt;&lt;p&gt;ಅದಾದ ಕೆಲವು ವರ್ಷಗಳಲ್ಲಿ ವಿರಳವಾಗಿದ್ದ ಮಲ್ಟಿಪ್ಲೆಕ್ಸ್&zwnj;ಗಳು ಅನೇಕ ಜಾಗಗಳಲ್ಲಿ ಹುಟ್ಟಿಕೊಂಡವು. ಸಿನಿಮಾ ನೋಡುವ ಅನುಭವವನ್ನು ಉತ್ತಮಗೊಳಿಸಿದವು. ಆ ಉತ್ತಮ ಅನುಭವಕ್ಕೆ ಪ್ರೇಕ್ಷಕ ಟಿಕೆಟ್ ದರಕ್ಕೆ ಹೆಚ್ಚು ಹಣ ತೆರಬೇಕಿತ್ತು. ನೋಡುವಾಗ ತಿನ್ನುವ ಪಾಪ್&zwnj;ಕಾರ್ನ್&zwnj;, ಕೂಲ್&zwnj; ಡ್ರಿಂಕ್ಸ್&zwnj;, ನೀರು ಎಲ್ಲಕ್ಕೂ ಸಿಂಗಲ್&zwnj; ಸ್ಕ್ರೀನ್&zwnj; ಚಿತ್ರಮಂದಿರಗಳಿಗಿಂತ ದುಬಾರಿ ಹಣ ಖರ್ಚು ಮಾಡಬೇಕಿತ್ತು. ನಿಧಾನಕ್ಕೆ ಈ ಮಲ್ಟಿಪ್ಲೆಕ್ಸ್&zwnj;ಗಳ ಅಭ್ಯಾಸ ನೋಡುಗರಿಗೆ ಹೆಚ್ಚಾಯ್ತು.&lt;/p&gt;&lt;p&gt;ಇದೇ ಸಮಯಕ್ಕೆ ಓಟಿಟಿಗಳು ಪ್ರವೇಶಿಸಿದವು. ಸಿನೆಮಾಗಳನ್ನು ಖರೀದಿಸಿದವು. ಸಿನಿಮಾ ಹಲವು ಕಡೆ ಹಣ ಗಳಿಸಬಲ್ಲದು ಎಂಬ ಭರವಸೆ ನಿರ್ಮಾಪಕರಲ್ಲಿ ಮೂಡಿತು. ಹತ್ತು, ಇಪ್ಪತ್ತು ಕೋಟಿಯಲ್ಲಿ ಆಗುತ್ತಿದ್ದ ಕನ್ನಡ ಸಿನೆಮಾಗಳು ಈಗ ನೂರು ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣ ಆಗಲು ಶುರುವಾದವು.&lt;/p&gt;&lt;p&gt;ಆ ಸಿನಿಮಾಗಳು ಒಂದು ವೇಳೆ ಚಿತ್ರಮಂದಿರದಲ್ಲಿ ಚೆನ್ನಾಗಿ ಓಡದೇ ಇದ್ದರೆ, ಆ ಚಿತ್ರ ತೆರೆಕಂಡ ಕೇವಲ ನಾಲ್ಕೈದು ವಾರಗಳಲ್ಲಿ ತಮ್ಮ ಓಟಿಟಿಯಲ್ಲಿ ಬಿಡುಗಡೆ ಮಾಡಿದರೆ ಸ್ವಲ್ಪ ಹೆಚ್ಚು ಮೊತ್ತ ಕೊಡುತ್ತಿದ್ದರು. ಎಲ್ಲರೂ ಈ ಓಟಿಟಿಗಳಿಗೆ ಒಗ್ಗಿ ಹೋದರು. ಒಂದು ಸಿನಿಮಾ ನೋಡಬೇಕೆಂದರೆ ಕೆಲವು ವಾರ ಕಾದರೆ ಸಾಕು, ಅವು ಓಟಿಟಿಯಲ್ಲಿ ಬಿಡುಗಡೆ ಆಗುತ್ತವೆ ಎಂಬ ಮನಸ್ಥಿತಿಗೆ ಬಂದರು.&lt;/p&gt;&lt;p&gt;ಆದ್ದರಿಂದ ಒಂದು ಸಿನಿಮಾಗೆ ಜನರನ್ನು ಕರೆದೊಯ್ಯಲು ಅದರ ಪ್ರಚಾರಕ್ಕೆ ನಿರ್ಮಾಪಕರು ಇನ್ನೂ ಹೆಚ್ಚು ಬಂಡವಾಳ ಹಾಕಬೇಕಾಯಿತು. ಅದ್ದೂರಿಯಾಗಿ, ದೊಡ್ಡ ತೆರೆಯ ಮೇಲೆ ಮಾತ್ರ ಸವಿಯುವಂತೆ ಇದ್ದರೆ, ಆ ಸಿನಿಮಾದ ಸುತ್ತ ಅತ್ಯಂತ ಮಾತುಕತೆ, ಕುತೂಹಲ ಕೆರಳಿಸಿದ್ದರೆ ಜನ ಚಿತ್ರಮಂದಿರಗಳಿಗೆ ಬರುತ್ತಾರೆ.&lt;/p&gt;&lt;p&gt;ಮುಂಚೆ ಒಂದು ಚಿತ್ರ ಬಿಡುಗಡೆ ಆಗುವ ಮೊದಲೇ ಅದನ್ನು ನಿರ್ಮಾಪಕರ ಜೊತೆ ಮಾತುಕತೆ ನಡೆಸಿ ಒಂದು ಮೊತ್ತ ಕೊಟ್ಟು ಅದರ ಡಿಜಿಟಲ್ ಹಕ್ಕು ಖರೀದಿಸುತ್ತಿದ್ದರು. ಈಗ ಹಾಗೆ ಮಾಡುತ್ತಿಲ್ಲ. ಒಂದು ಸಿನಿಮಾ ಮೊದಲು ಚಿತ್ರ ಮಂದಿರದಲ್ಲಿ ಬಿಡುಗಡೆ ಆಗಬೇಕು. ಅದು ಆ ಚಿತ್ರಮಂದಿರಗಳಲ್ಲಿ ಹೇಗೆ ನಡೆಯುತ್ತೋ ಅದನ್ನ ನೋಡಿಕೊಂಡು ಆ ಸಿನಿಮಾಗೆ ಎಷ್ಟು ಕೊಡಬೇಕು ಎಂದು ನಿರ್ಧಾರ ಮಾಡುತ್ತಾರೆ. ಅನೇಕ ಸಿನೆಮಾಗಳನ್ನು &lsquo;ಪೇ ಪರ್ ವ್ಯೂ&rsquo; ಎಂಬ ವರ್ಗದಲ್ಲಿ ತಮ್ಮ ಓಟಿಟಿ ಮೇಲೆ ಹಾಕುತ್ತಾರೆ. ಅಂದರೆ ಆ ಸಿನಿಮಾ ಎಷ್ಟು ಜನ ನೋಡುತ್ತಾರೆ, ಅದಕ್ಕೆ ತಕ್ಕಂತೆ ಒಂದು ಭಾಗವನ್ನ ನಿರ್ಮಾಪಕರಿಗೆ ಈ ಓಟಿಟಿಗಳು ನೀಡುತ್ತವೆ.&lt;/p&gt;&lt;p&gt;ಒಂದು ಸಿನಿಮಾ ನಿರ್ಮಿಸುವುದು ಬಹಳ ದೊಡ್ಡ ಸವಾಲಾಗಿ ನಿಂತಿದೆ. ಒಂದು ಕಡೆ ಜನ ಚಿತ್ರಮಂದಿರಗಳಿಗೆ ಬರುತ್ತಿಲ್ಲ. ಮುಂಚಿನ ಹಾಗೆ ಆ ಸಿನಿಮಾಗೆ ಹಾಕಿದ ಬಂಡವಾಳ ಹಿಂಪಡೆಯಲು ದಾರಿಗಳು ಕಮ್ಮಿಯಾಗುತ್ತಿವೆ. &zwj;&lt;/p&gt;&lt;h3&gt;&lt;strong&gt;ಲೇಖನದ ಜೀವವಾಕ್ಯದಂತೆ ನಡುವಲ್ಲಿ ದೊಡ್ಡ ಫಾಂಟಿನಲ್ಲಿ ಹಾಕಿ&lt;/strong&gt;&lt;/h3&gt;&lt;p&gt;ಸಿನಿಮಾದ ನಟರು ಹಾಗು ತಂತ್ರಜ್ಞರ ಸಂಭಾವನೆ ಮುಂಚಿನಂತೆಯೇ ಇದೆ. ಒಂದು ಸಿನೆಮಾ ನಿರ್ಮಾಣ ಮಾಡುವ ಬಂಡವಾಳಕ್ಕೂ, ಅದು ಗಳಿಸುವ ದುಡಿಮೆಗೂ ಇರುವ ಕಂದರ ಹೆಚ್ಚುತ್ತಿದೆ. ಇದಕ್ಕೆ ಸದ್ಯದ ನಮ್ಮ ಚಿತ್ರರಂಗದ ಪರಿಸ್ಥಿತಿಯಲ್ಲಿ ಯಾವ ಪರಿಹಾರವೂ ಕಾಣುತ್ತಿಲ್ಲ. ಯಾಕಂದ್ರೆ ಸಮಸ್ಯೆ ಇರುವುದು ಉದ್ಯಮದಲ್ಲಿ ಮಾತ್ರ ಅಲ್ಲ. ಬದಲಾದ ಜನರ ಆಸಕ್ತಿಯಲ್ಲಿ ಕೂಡ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/responsibilities-have-grown-heavier-and-challenges-have-become-greater/articleshow-gpg82zw"/>
        </item>
        <item>
            <title><![CDATA[ಸಿದ್ಧಗಂಗಾ ಮಠದ ಮಕ್ಕಳ ಜೊತೆ ಡಾಲಿ ಧನಂಜಯ]]></title>
            <link>https://www.kannadaprabha.in/entertainment-news/daali-dhananjaya-spends-time-with-the-children-of-siddaganga-mutt/articleshow-hof0cqd</link>
            <guid isPermaLink="true">https://www.kannadaprabha.in/entertainment-news/daali-dhananjaya-spends-time-with-the-children-of-siddaganga-mutt/articleshow-hof0cqd</guid>
            <pubDate>Sat, 04 Jul 2026 12:29:57 +0530</pubDate>
            <description><![CDATA[&lt;p&gt;&lsquo;ಸಂಬಂಧಗಳನ್ನು ಮರೆಯುತ್ತಿದ್ದೇವೆ. ಅನಗತ್ಯ ಕಾರಣಗಳಿಂದ ದೂರಾಗುತ್ತಿದ್ದೇವೆ. ಜಾತಿ, ಮತ, ಪಂಥ ಇತ್ಯಾದಿ ಎಲ್ಲಾ ಬಿಟ್ಟು ಒಂದಾಗೋಣ ಅನ್ನುವುದನ್ನು ಹೇಳುವುದಕ್ಕಿತ್ತು. ಅದಕ್ಕಾಗಿ ಈ ಹಾಡು ಮಾಡಿದ್ದೇವೆ&rsquo;. - ಈ ಮಾತು ಹೇಳಿದ್ದು ಡಾಲಿ ಧನಂಜಯ್&zwnj;&lt;/p&gt;]]></description>
            <media:content url="https://static-gi.asianetnews.com/images/01kwnyr2n9vk0pvqdrzmp61prv/daali-1783148317351.jpg" type="image/jpeg" height="390" width="690"/>
            <content:encoded><![CDATA[&lt;h2&gt;&amp;nbsp;&lt;strong&gt; ಸಿನಿವಾರ್ತೆ&lt;/strong&gt;&lt;/h2&gt;&lt;p&gt;&lsquo;ಸಂಬಂಧಗಳನ್ನು ಮರೆಯುತ್ತಿದ್ದೇವೆ. ಅನಗತ್ಯ ಕಾರಣಗಳಿಂದ ದೂರಾಗುತ್ತಿದ್ದೇವೆ. ಜಾತಿ, ಮತ, ಪಂಥ ಇತ್ಯಾದಿ ಎಲ್ಲಾ ಬಿಟ್ಟು ಒಂದಾಗೋಣ ಅನ್ನುವುದನ್ನು ಹೇಳುವುದಕ್ಕಿತ್ತು. ಅದಕ್ಕಾಗಿ ಈ ಹಾಡು ಮಾಡಿದ್ದೇವೆ&rsquo;.&lt;/p&gt;&lt;h3&gt;- ಈ ಮಾತು ಹೇಳಿದ್ದು ಡಾಲಿ ಧನಂಜಯ್&zwnj;.&amp;nbsp;&lt;/h3&gt;&lt;p&gt;ಅವರ ನಟನೆ, ನಿರ್ಮಾಣದ, ಪೂರ್ಣಚಂದ್ರ ಮೈಸೂರು ನಿರ್ದೇಶನದ &lsquo;ಮದರ್&zwnj; ಪ್ರಾಮಿಸ್&zwnj;&rsquo; ಚಿತ್ರದ &lsquo;ಓ ಬೆಳಕೇ ಬಾ ಬೆಳಕೆ&rsquo; ಹಾಡು ಬಿಡುಗಡೆಯಾಗಿದೆ. ಇಡೀ ಚಿತ್ರತಂಡ ತುಮಕೂರಿನ ಸಿದ್ದಗಂಗಾ ಮಠದಲ್ಲಿನ ಮಕ್ಕಳ ಜೊತೆ ಹೋಗಿ ಈ ಹಾಡನ್ನು ಚಿತ್ರೀರಿಸಿಕೊಂಡಿದೆ.&lt;/p&gt;&lt;p&gt;&lsquo;ಸಿದ್ಧಗಂಗಾ ಮಠದಲ್ಲಿ ಜಾತಿ ಭೇದವಿಲ್ಲದೆ, ಎಲ್ಲಾ ಊರಿನ ಮಕ್ಕಳು ಬಂದು ವಿದ್ಯಾಭ್ಯಾಸ ಪಡೆಯುತ್ತಾರೆ. ಆ ಸ್ಥಳದಲ್ಲಿದ್ದರೆ ಒಂದು ವಿಶಿಷ್ಟ ಅನುಭೂತಿ ಆವರಿಸುತ್ತದೆ. ಹಾಗಾಗಿ ಅಲ್ಲಿಯೇ ಹೋಗಿ ಈ ಹಾಡನ್ನು ಚಿತ್ರೀಕರಿಸಿಕೊಂಡೆವು. ಈ ಹಾಡು ನಮ್ಮ ಚಿತ್ರದ ಕ್ಲೈಮ್ಯಾಕ್ಸ್&zwnj;ನಲ್ಲಿ ಬರುತ್ತದೆ. ಬಹುತೇಕ ಸಿನಿಮಾ ನಮ್ಮನ್ನು ನಗಿಸುತ್ತದೆ, ಆದರೆ ಕೊನೆಯಲ್ಲಿ ಮೌನವಾಗಿಸುತ್ತದೆ. ಯಾಕೆ ಆ ಮೌನ ಅಂತ ತಿಳಿಯಲು ನೀವು ಸಿನಿಮಾ ನೋಡಬೇಕು&rsquo; ಅನ್ನುತ್ತಾರೆ ಧನಂಜಯ್&zwnj;.&lt;/p&gt;&lt;p&gt;ಧನಂಜಯ್&zwnj; ಅವರೇ ಈ ಹಾಡು ಬರೆದಿದ್ದು, ನವನೀತ್ ಶ್ಯಾಮ್&zwnj; ಸಂಗೀತ ನೀಡಿದ್ದಾರೆ. ಹರ್ಷ ಮುರುಂಡಿ ಶಿವಲಿಂಗಪ್ಪ ನಿರ್ಮಾಣದ ಈ ಸಿನಿಮಾ ಜುಲೈ 10ರಂದು ಬಿಡುಗಡೆಯಾಗುತ್ತಿದೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/daali-dhananjaya-spends-time-with-the-children-of-siddaganga-mutt/articleshow-hof0cqd"/>
        </item>
        <item>
            <title><![CDATA[ನಾಡಿದ್ದಿನಿಂದ 2000 ಕಿ.ಮಿ. ಫುಟ್ಪಾತ್‌ಸುರಕ್ಷತಾ ಅಭಿಯಾನ : ಕೃಷ್ಣ ಬೈರೇಗೌಡ]]></title>
            <link>https://www.kannadaprabha.in/entertainment-news/2000-km-of-footpath-from-nadisafety-campaign-krishna-byre-gowda/articleshow-kya03gg</link>
            <guid isPermaLink="true">https://www.kannadaprabha.in/entertainment-news/2000-km-of-footpath-from-nadisafety-campaign-krishna-byre-gowda/articleshow-kya03gg</guid>
            <pubDate>Tue, 30 Jun 2026 07:31:42 +0530</pubDate>
            <description><![CDATA[ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ಸಮಗ್ರ ಯೋಜನೆ ರೂಪಿಸಿಕೊಂಡು ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವಂತೆ ಬೆಂಗಳೂರು ನಗರರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.]]></description>
            <media:content url="https://static-gi.asianetnews.com/images/01h4vxqw6y5pxwhghn82n6y06f/22.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಬೆಂಗಳೂರು : &amp;nbsp;&lt;/strong&gt;ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ಸಮಗ್ರ ಯೋಜನೆ ರೂಪಿಸಿಕೊಂಡು ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವಂತೆ ಬೆಂಗಳೂರು ನಗರರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.&lt;/p&gt;&lt;p&gt;ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಜು.1ರಿಂದ &lsquo;ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನ&rsquo; ಕೈಗೆತ್ತಿಕೊಳ್ಳುವ ಸಂಬಂಧ ಸೋಮವಾರ ಆಯೋಜಿಸಿದ್ದ ವರ್ಚುವಲ್ ಸಭೆಯಲ್ಲಿ ಮಾತನಾಡಿ, ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್&zwnj; ಆದೇಶ ಹಾಗೂ ಬೀದಿ ಬದಿ ವ್ಯಾಪಾರಿಗಳ ಸಂರಕ್ಷಣಾ ಕಾಯ್ದೆಯನ್ನು ಪಾಲಿಸಬೇಕು. ಸಮಗ್ರ ಯೋಜನೆ ರೂಪಿಸಿಕೊಂಡು, ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಿಕೊಂಡು ಕಾರ್ಯಾಚರಣೆ ಕೈಗೊಳ್ಳಬೇಕು ಎಂದು ಹೇಳಿದರು.&lt;/p&gt;&lt;h2&gt;ಪಾದಚಾರಿ ಮಾರ್ಗಗಳ ಒತ್ತುವರಿ ತೆರವು&lt;/h2&gt;&lt;p&gt;ಮೊದಲಿಗೆ ಯಾವ ಯಾವ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲಾಗುತ್ತದೆ ಎಂಬುದರ ಪಟ್ಟಿಯನ್ನು ಸಿದ್ಧಪಡಿಸಬೇಕು. ನಂತರ ಅಂಗಡಿ ಮಾಲೀಕರು ಹಾಗೂ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಬೇಕು. ಅನಂತರ ನೋಟಿಸ್ ನೀಡಿ, ಅದರ ಬಳಿಕ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.ಒತ್ತುವರಿ ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ಪಾಲಿಕೆಯ ಅಧಿಕಾರಿಗಳು, ಉದ್ದಿಮೆ ಪರವಾನಗಿ ನೀಡುವ ಆರೋಗ್ಯಾಧಿಕಾರಿಗಳು, ಭದ್ರತೆಗಾಗಿ ಪೊಲೀಸ್ ಸಿಬ್ಬಂದಿ ಹಾಗೂ ಒತ್ತುವರಿ ತೆರವು ತಂಡಗಳ ಸಮನ್ವಯದೊಂದಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ನಗರದ ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳು ಸೇರಿದಂತೆ ಪ್ರಮುಖ ರಸ್ತೆಗಳನ್ನು ನಾನ್-ವೆಂಡಿಂಗ್ ವಲಯಗಳಾಗಿ ಅಧಿಸೂಚನೆ ಹೊರಡಿಸಲು ಕ್ರಮವಹಿಸಿ ಎಂದು ಸೂಚಿಸಿದರು.&lt;/p&gt;&lt;p&gt;ನಗರದಲ್ಲಿ ಸುಮಾರು 15 ಸಾವಿರ ಕಿ.ಮೀ. ರಸ್ತೆಗಳಿದ್ದು, ಇದರಲ್ಲಿ ಸುಮಾರು 1500 ಕಿ.ಮೀ. ರಸ್ತೆಯನ್ನು ನಾನ್-ವೆಂಡಿಂಗ್ ವಲಯಗಳಾಗಿ ಗುರುತಿಸಬೇಕು. ಇಲ್ಲಿ ಬೀದಿ ವ್ಯಾಪಾರಿಗಳು ಜೀವನ ನಡೆಸಲು ಮುಕ್ತ ಅವಕಾಶವಿದೆ. ಪಾಲಿಕೆ ಗುರುತಿಸುವ ನಾನ್-ವೆಂಡಿಂಗ್ ವಲಯಗಳ ರಸ್ತೆಗಳನ್ನು ಹೊರತುಪಡಿಸಿ ಉಳಿದ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಮುಕ್ತವಾಗಿ ವ್ಯಾಪಾರ ನಡೆಸಬಹುದು ಎಂದು ವಿವರಿಸಿದರು.&lt;/p&gt;&lt;p&gt;ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ನಾಗರಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು. ಯಾವ ರಸ್ತೆಗಳಲ್ಲಿ ಕಾರ್ಯಾಚರಣೆ ನಡೆಯಲಿದೆಯೋ, ಆ ರಸ್ತೆಗಳಲ್ಲಿ ಮುಂಚಿತವಾಗಿಯೇ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಈ ವೇಳೆ ಒತ್ತುವರಿಯನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸದಿದ್ದರೆ ಪಾಲಿಕೆಯಿಂದ ತೆರವುಗೊಳಿಸಿ, ಕಾನೂನಿನ ಪ್ರಕಾರ ದಂಡ ವಿಧಿಸಲಾಗುವುದು ಎಂಬುದನ್ನು ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.&lt;/p&gt;&lt;p&gt;ಸಭೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ ಮಹೇಶ್ವರ್ ರಾವ್, ನಗರ ಪಾಲಿಕೆಗಳ ಆಯುಕ್ತರಾದ ರಮೇಶ್ ಡಿ.ಎಸ್., ಪೊಮ್ಮಲ ಸುನೀಲ್ ಕುಮಾರ್, ಜಿ.ಜಗದೀಶ್, ರಮೇಶ್ ಕೆ.ಎನ್, ಡಾ.ರಾಜೇಂದ್ರ ಕೆ.ವಿ, ಸಂಚಾರ ಪೊಲೀಸ್ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.&lt;/p&gt;&lt;h3&gt;&lt;strong&gt;ಪಾದಚಾರಿ ಮಾರ್ಗಗಳ ದುರಸ್ತಿಗೊಳಿಸಿ&lt;/strong&gt;&lt;/h3&gt;&lt;p&gt;ನಗರದಲ್ಲಿ ಎಲ್ಲೆಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತದೆಯೋ, ಅದೇ ಸ್ಥಳಗಳಲ್ಲಿ ಸಮಾನಾಂತರವಾಗಿ ಪಾದಚಾರಿ ಮಾರ್ಗಗಳ ದುರಸ್ತಿ ಕಾರ್ಯವನ್ನೂ ತಕ್ಷಣ ಕೈಗೊಳ್ಳಬೇಕು. ಪಾದಚಾರಿಗಳಿಗೆ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಆದ್ಯತೆ ನೀಡಿ, ಹಾಳಾಗಿರುವ ಸ್ಲ್ಯಾಬ್&zwnj;ಗಳು, ಕರ್ಬ್&zwnj;ಗಳು ಹಾಗೂ ಅಗತ್ಯ ಸಿವಿಲ್ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಸಚಿವರು ಸೂಚನೆ ನೀಡಿದರು.&lt;/p&gt;]]></content:encoded>
            <category>entertainment</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/entertainment-news/2000-km-of-footpath-from-nadisafety-campaign-krishna-byre-gowda/articleshow-kya03gg"/>
        </item>
        <item>
            <title><![CDATA[ಹೀರೋಗಳೇ, ಕ್ಯಾರವಾನ್ ಬಿಟ್ಟು ಅಚೆ ಬನ್ನಿ, ಸಿನಿಮಾ ನಿರ್ಮಿಸಿ : ನಿರ್ಮಾಪಕ ರಮೇಶ್ ಯಾದವ್‌]]></title>
            <link>https://www.kannadaprabha.in/entertainment-news/heroes-step-out-of-your-caravans-and-make-films-producer-ramesh-yadav/articleshow-lestzgw</link>
            <guid isPermaLink="true">https://www.kannadaprabha.in/entertainment-news/heroes-step-out-of-your-caravans-and-make-films-producer-ramesh-yadav/articleshow-lestzgw</guid>
            <pubDate>Mon, 20 Jul 2026 13:32:40 +0530</pubDate>
            <description><![CDATA[&lt;p&gt;ಸಿನಿಮಾರಂಗ ಬಹಳ ಪವರ್&zwnj;ಫುಲ್&zwnj; ಕ್ಷೇತ್ರ. ನಟನೊಬ್ಬನನ್ನು ಮುಖ್ಯಮಂತ್ರಿ ಮಾಡಿಸುವಷ್ಟು ಪವರ್ ಇಲ್ಲಿದೆ. ಜೊತೆಗೆ ಇದೊಂದು ಉದ್ಯಮ. ಇಲ್ಲಿ ಬಂಡವಾಳ ಹೂಡುವ ನಿರ್ಮಾಪಕ ಬಿಸಿನೆಸ್&zwnj; ಮೈಂಡ್&zwnj;ಸೆಟ್&zwnj;ನಲ್ಲೂ ಯೋಚಿಸಬೇಕಾಗುತ್ತದೆ&lt;/p&gt;]]></description>
            <media:content url="https://static-gi.asianetnews.com/images/01kxqv8tvabkfj6t79xfmreefe/bkb-1784285522794.png" type="image/jpeg" height="390" width="690"/>
            <content:encoded><![CDATA[&lt;h2&gt;ನಿರ್ಮಾಪಕರಲ್ಲಿ ಸಣ್ಣ ದೊಡ್ಡ ಎಂಬ ವ್ಯತ್ಯಾಸ ಬೇಡ&lt;/h2&gt;&lt;p&gt;1. ಸಿನಿಮಾರಂಗ ಬಹಳ ಪವರ್&zwnj;ಫುಲ್&zwnj; ಕ್ಷೇತ್ರ. ನಟನೊಬ್ಬನನ್ನು ಮುಖ್ಯಮಂತ್ರಿ ಮಾಡಿಸುವಷ್ಟು ಪವರ್ ಇಲ್ಲಿದೆ. ಜೊತೆಗೆ ಇದೊಂದು ಉದ್ಯಮ. ಇಲ್ಲಿ ಬಂಡವಾಳ ಹೂಡುವ ನಿರ್ಮಾಪಕ ಬಿಸಿನೆಸ್&zwnj; ಮೈಂಡ್&zwnj;ಸೆಟ್&zwnj;ನಲ್ಲೂ ಯೋಚಿಸಬೇಕಾಗುತ್ತದೆ. ಮೊನ್ನೆ ಈ ಬಗ್ಗೆ ಮಾತನಾಡಿದ ನಟ ಪ್ರೇಮ್&zwnj; ಅವರೂ ಬಿಸಿನೆಸ್&zwnj; ಬಗ್ಗೆ ಯೋಚಿಸಿಯೇ ಮುಂದುವರಿದಿರುತ್ತಾರೆ. ತನಗೆ ಬರುವ ಲಾಭದ ಬಗ್ಗೆ ಅವರಿಗೆ ಯೋಚನೆ ಇದ್ದೇ ಇರುತ್ತದೆ. ಸ್ಟಾರ್&zwnj; ಸಿನಿಮಾ ಮಾಡಿದರೆ ಆರಂಭದಲ್ಲಾದರೂ ಜನರನ್ನು ಥಿಯೇಟರ್&zwnj;ಗೆ ಎಳೆದು ತರುವ ಶಕ್ತಿ ಇರುತ್ತದೆ. ಅದೇ ಬೇರೆಯವರನ್ನು ಹಾಕಿಕೊಂಡು ಸಿನಿಮಾ ಮಾಡಿದಾಗ ಆ ಮಿನಿಮಮ್ ಗ್ಯಾರಂಟಿಯೂ ಇರುವುದಿಲ್ಲ. ಕಥೆ, ಮೇಕಿಂಗ್ ಎಷ್ಟೇ ಚೆನ್ನಾಗಿದ್ದರೂ ಅದು ಜನರಿಗೆ ರುಚಿಸುತ್ತದೋ ಇಲ್ಲವೋ ಅನ್ನುವುದನ್ನು ಅಂದಾಜಿಸುವುದು ಕಷ್ಟ. ಇಂಥಾ ಸ್ಟಾರ್&zwnj;ಗಳು ನಮ್ಮಲ್ಲಿ ಒಂದು ಸಿನಿಮಾವನ್ನೂ ಮಾಡದೇ ಅಧಿಕ ಬಂಡವಾಳದ ಕಾರಣಕ್ಕೆ ಬೇರೆ ಭಾಷೆಗೇ ಆದ್ಯತೆ ನೀಡಿದರೆ ನಮ್ಮ ಇಂಡಸ್ಟ್ರಿಗೆ ಅಳಿವು ಉಳಿವಿನ ಪ್ರಶ್ನೆಯಾಗುತ್ತದೆ.&lt;/p&gt;&lt;p&gt;2. ನೆನಪಿರಲಿ ಪ್ರೇಮ್ ಅವರು ಕ್ಯಾರವಾನ್&zwnj; ಈ ಕಾಲದ ಅನಿವಾರ್ಯತೆ ಅನ್ನುವ ರೀತಿ ಮಾತನಾಡಿದರು. ಆದರೆ ಇವತ್ತು ಚಿತ್ರೀಕರಣ ವಿಳಂಬ ಆಗುವುದಕ್ಕೆ ಕ್ಯಾರವಾನ್ ಕೊಡುಗೆ ಬಹಳ ದೊಡ್ಡದು. ಕ್ಯಾರವಾನ್ ಒಳಗೆ ಸೇರಿಕೊಳ್ಳುವ ಕಲಾವಿದರನ್ನು ಅದರಿಂದ ಆಚೆ ಎಳೆದು ತರುವುದು ಬಹಳ ಕಷ್ಟ. ಅಸಿಸ್ಟೆಂಟ್ ಡೈರೆಕ್ಟರ್&zwnj; ಕ್ಯಾರವಾನ್ ಬಾಗಿಲು ಕಾಯುತ್ತ ನಿಂತಿರಬೇಕಾಗುತ್ತದೆ. ಆತ ಐದಾರು ಬಾರಿ ಕರೆದ ಬಳಿಕ ನಿಧಾನಕ್ಕೆ ನಟ, ನಟಿಯರು ಸೆಟ್&zwnj;ಗೆ ಬರುತ್ತಾರೆ. ಆದರೆ ಸೆಟ್&zwnj;ನಲ್ಲಿ ಒಂದೊಂದು ನಿಮಿಷಕ್ಕೂ ನಿರ್ಮಾಪಕ ಹಣ ತೆರಬೇಕಾಗುತ್ತದೆ. ವಿಳಂಬವಾದರೆ ಬಾಡಿಗೆಗೆ ತರುವ ಅನೇಕ ಪರಿಕರಗಳಿಂದ ಹಿಡಿದು ಲೈಟ್&zwnj;ಬಾಯ್&zwnj;ತನಕ ಪ್ರತಿಯೊಬ್ಬರಿಗೂ ಹೆಚ್ಚಿನ ಹಣ ತೆರಬೇಕು. ಈ ನಟ, ನಟಿಯರಿಂದ ಐವತ್ತು ದಿನಗಳ ಶೂಟಿಂಗ್ ಶೆಡ್ಯೂಲ್ ಎಪ್ಪತ್ತು ದಿನಗಳಿಗೆ ವಿಸ್ತರಿಸಿದಾಗ ಖರ್ಚು ಎಷ್ಟು ಹೆಚ್ಚಾಯ್ತು ಊಹಿಸಿ.&lt;/p&gt;&lt;p&gt;3. ನಮ್ಮ ಹೀರೋಗಳು ಇಷ್ಟೆಲ್ಲ ಮಾತನಾಡುತ್ತಾರಲ್ಲ, ಮೂರು ಸಿನಿಮಾ ಮಾಡಿದ ಬಳಿಕ ಅದರ ಸಂಭಾವನೆಯಲ್ಲಿ ಅವರೊಂದು ಸಿನಿಮಾ ನಿರ್ಮಾಣ ಮಾಡುತ್ತ ಹೋಗಲಿ. ಆಗ ಸಿನಿಮಾ ಸಂಖ್ಯೆ ಹೆಚ್ಚುತ್ತದೆ. ಇಂಡಸ್ಟ್ರಿಯ ಮಂದಿಗೆ ಕೆಲಸ ಸಿಗುತ್ತದೆ. ಜೊತೆಗೆ ನಿರ್ಮಾಪಕರ ಕಷ್ಟ ಏನು ಅನ್ನುವುದೂ ತಿಳಿಯುತ್ತದೆ.&lt;/p&gt;&lt;h3&gt;ಅನ್ನಕೊಟ್ಟ ಭಾಷೆಗೆ ಅಷ್ಟಾದರೂ ಮರ್ಯಾದೆ ಕೊಡಬೇಕು&lt;/h3&gt;&lt;p&gt;4. ಕನ್ನಡದ ನಟ, ನಟಿಯರು ಬೇರೆ ಭಾಷೆಯಲ್ಲಿ ಸಿನಿಮಾ ಮಾಡುವ ಬಗ್ಗೆ ನನಗೆ ತಕರಾರು ಇಲ್ಲ. ಆದರೆ ನಮ್ಮಲ್ಲಿ ವರ್ಷಕ್ಕೆ ಕನಿಷ್ಠ ಒಂದಾದರೂ ಸಿನಿಮಾ ಮಾಡಬೇಕು. ಅವರಿಗೆ ಅನ್ನಕೊಟ್ಟ ಭಾಷೆಗೆ ಅಷ್ಟಾದರೂ ಮರ್ಯಾದೆ ಕೊಡಬೇಕು.&lt;/p&gt;&lt;p&gt;5. ಈಗೀಗ ಸ್ಟಾರ್&zwnj;ಗಳು ಕಿರುತೆರೆಗೆ ಹೋಗುವುದು ಸಾಮಾನ್ಯವಾಗಿದೆ. ಅವರ ಸ್ಟಾರ್&zwnj; ವ್ಯಾಲ್ಯೂ ನೋಡಿ ಕಿರುತೆರೆಯವರು ಅವರನ್ನು ಆಹ್ವಾನಿಸಿರುತ್ತಾರೆ. ಆದರೆ ಸಿನಿಮಾ ಪ್ರೇಕ್ಷಕರ ಮನಸ್ಥಿತಿಯೇ ಬೇರೆ. ಎಷ್ಟೋ ಮಂದಿ ತಮ್ಮ ನೆಚ್ಚಿನ ಸ್ಟಾರ್&zwnj;ಗಳನ್ನು ನೋಡಲೆಂದೇ ಥಿಯೇಟರ್&zwnj;ಗೆ ಬರುತ್ತಾರೆ. ಅವರಿಗೆ ಈ ಸ್ಟಾರ್&zwnj;ಗಳು ಮನೆಯ ಟಿವಿಯಲ್ಲೇ ನೋಡಲು ಸಿಗುತ್ತಾರೆ ಅಂತಾದಾಗ ಅವರು ಸಿನಿಮಾಕ್ಕೆ ಯಾಕೆ ಬರುತ್ತಾರೆ. ಅದಕ್ಕೂ ಹೆಚ್ಚು ದಿನಾ ಅವರ ಮುಖ ನೋಡಿ ಅವರ ಬಗ್ಗೆ ಮೊದಲಿನ ಆಕರ್ಷಣೆ ಕಡಿಮೆ ಆಗುವ ಸಾಧ್ಯತೆಯೂ ಇದೆ.&lt;/p&gt;&lt;p&gt;6. ಡಾ.ರಾಜ್&zwnj;ಕುಮಾರ್ ನಿರ್ಮಾಪಕರನ್ನು ಅನ್ನದಾತರು ಎಂದು ಗೌರವಿಸುತ್ತಿದ್ದರು. ಸಿನಿಮಾಕ್ಕೆ ತಮ್ಮೆಲ್ಲ ಶ್ರಮ ಹಾಕಿ ಗೆಲ್ಲಿಸಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದರು. ಮನಸ್ಸು ಮಾಡಿದರೆ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶವಿತ್ತು. ಪರಭಾಷೆಗಳಲ್ಲಿ ನಟಿಸಬಹುದಿತ್ತು. ಅವರು ಅದೆಲ್ಲ ತ್ಯಜಿಸಿ ನಟನೆಯನ್ನೇ ಸರ್ವಸ್ವವಾಗಿಸಿಕೊಂಡರು. ಅವರಂತೆ ಇರಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಕಿಂಚಿತ್ತಾದರೂ ಅವರ ಗುಣಗಳನ್ನು ಇಂದಿನ ನಟ, ನಟಿಯರು ಅಳವಡಿಸಿಕೊಳ್ಳಬೇಕಿದೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/heroes-step-out-of-your-caravans-and-make-films-producer-ramesh-yadav/articleshow-lestzgw"/>
        </item>
        <item>
            <title><![CDATA[ಮಹಾಪ್ರಭು ಪುರಿ ಜಗನ್ನಾಥರ ಮಹಾ ಮಾರ್ಗದಲ್ಲಿ]]></title>
            <link>https://www.kannadaprabha.in/entertainment-news/on-the-grand-path-of-lord-jagannath-of-puri/articleshow-msasii4</link>
            <guid isPermaLink="true">https://www.kannadaprabha.in/entertainment-news/on-the-grand-path-of-lord-jagannath-of-puri/articleshow-msasii4</guid>
            <pubDate>Thu, 16 Jul 2026 13:28:05 +0530</pubDate>
            <description><![CDATA[&lt;p&gt;ಶ್ರೀ ಜಗನ್ನಾಥನಿಗೆ ಸಮರ್ಪಿತವಾದ ಹಲವು ಪ್ರಾರ್ಥನೆಗಳು ಮತ್ತು ಸ್ತೋತ್ರಗಳು ಬಾಲ್ಯದಿಂದಲೂ ನನ್ನ ಸ್ಮರಣೆಯಲ್ಲಿವೆ. ಶಾಲೆ ಮತ್ತು ಕಾಲೇಜಿನಲ್ಲಿ ನಾನು ಓದುತ್ತಿದ್ದಾಗ ಮಹಾಪ್ರಭು ಜಗನ್ನಾಥರ ಭಜನೆಗಳನ್ನು ಹಾಡಲು ನನಗೆ ಸಂತೋಷವಾಗುತ್ತಿತ್ತು&lt;/p&gt;]]></description>
            <media:content url="https://static-gi.asianetnews.com/images/01kqvc2hncaymdpgtat5rzatbq/droupadi-murmu-1777961354924.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;-ಶ್ರೀಮತಿ ದ್ರೌಪದಿ ಮುರ್ಮು, ಭಾರತದ ರಾಷ್ಟ್ರಪತಿ, ನವದೆಹಲಿ.&lt;/strong&gt;&lt;/h2&gt;&lt;p&gt;ಶ್ರೀ ಜಗನ್ನಾಥನಿಗೆ ಸಮರ್ಪಿತವಾದ ಹಲವು ಪ್ರಾರ್ಥನೆಗಳು ಮತ್ತು ಸ್ತೋತ್ರಗಳು ಬಾಲ್ಯದಿಂದಲೂ ನನ್ನ ಸ್ಮರಣೆಯಲ್ಲಿವೆ. ಶಾಲೆ ಮತ್ತು ಕಾಲೇಜಿನಲ್ಲಿ ನಾನು ಓದುತ್ತಿದ್ದಾಗ ಮಹಾಪ್ರಭು ಜಗನ್ನಾಥರ ಭಜನೆಗಳನ್ನು ಹಾಡಲು ನನಗೆ ಸಂತೋಷವಾಗುತ್ತಿತ್ತು. ನಾನು ಮಹಾಪ್ರಭುವಿಗೆ ತುಂಬಾ ಹತ್ತಿರವಾಗಿದ್ದೇನೆ ಎಂದು ಅನಿಸುತ್ತಿತ್ತು. ಈಗ ನಾನು ಭಜನೆಗಳನ್ನು ಹಾಡುವುದಿಲ್ಲ. ಆದರೆ, ನಾನು ಮಹಾಪ್ರಭುಗಳನ್ನು ಸ್ಮರಿಸುತ್ತಲೇ ಇರುತ್ತೇನೆ ಮತ್ತು ಪ್ರತಿದಿನ ಅವರ ಭಜನೆಗಳನ್ನು ಗುನುಗುತ್ತೇನೆ. ನನ್ನ ಬಳಿಯೇ ಮಹಾಪ್ರಭು ಇದ್ದಾರೆ ಎಂದು ನಾನು ಸದಾ ಭಾವಿಸುತ್ತೇನೆ. ಸಂಕಟ ಬಂದಾಗ ಭಗವಂತ ನನ್ನನ್ನು ರಕ್ಷಿಸುತ್ತಾನೆ. ಭಕ್ತ ಕವಿ ಮಧುಸೂದನರಾವ್ ರಚಿಸಿದ ಹಾಡನ್ನು ಇಂದಿಗೂ ನಾನು ಗುನುಗುತ್ತೇನೆ: &lsquo;ಮಹಾಪ್ರಭು ಹಗಲಿರುಳು ನನ್ನೊಂದಿಗೆ ಇರುತ್ತಾರೆ; ಈ ಸ್ಮರಣೆಯೊಂದಿಗೆ, ನಾನು ಸದಾ ನನ್ನ ಹೃದಯಾಂತರಾಳದಿಂದ ಆರಾಧಿಸುತ್ತೇನೆ&rsquo;.&lt;/p&gt;&lt;p&gt;ನನಗೆ ಜಗನ್ನಾಥರ ದರ್ಶನ ಭಾಗ್ಯ:ಲೌಕಿಕ ವಿಷಯಗಳನ್ನು ಸ್ವಲ್ಪಮಟ್ಟಿಗೆ ಅರ್ಥಮಾಡಿಕೊಳ್ಳುವ ವಯಸ್ಸನ್ನು ನಾನು ತಲುಪುವ ಹೊತ್ತಿಗೆ, ನಾನು ಮಹಾಪ್ರಭು ಜಗನ್ನಾಥರ ಹಿರಿಮೆಯನ್ನು ಅರಿತುಕೊಂಡಿದ್ದೆ. ನಮ್ಮ ಮನೆಯಲ್ಲಿ, ಮಹಾಪ್ರಭು ಜಗನ್ನಾಥರ ಮಹಿಮೆಯ ಬಗ್ಗೆ ಆಗಾಗ್ಗೆ ಚರ್ಚೆಗಳು ನಡೆಯುತ್ತಿದ್ದವು. ನಮ್ಮ ಹಳ್ಳಿಯಲ್ಲೂ ಇಂತಹ ಚರ್ಚೆಗಳು ಆಗಾಗ ನಡೆಯುತ್ತಿದ್ದವು. ನಾನು ಹಳ್ಳಿಯ ಶಾಲೆಯಲ್ಲಿ ಓದುತ್ತಿದ್ದಾಗ, ಭಕ್ತ ಸಲ್ಬೇಗ್ ಬರೆದ &lsquo;ಆಹೆ ನೀಲಾ ಶೈಲಾ&rsquo; ಪ್ರಾರ್ಥನೆಯನ್ನು ನಿಯಮಿತವಾಗಿ ಪಠಿಸಲಾಗುತ್ತಿತ್ತು. ನಮ್ಮ ಶಿಕ್ಷಕರು ಮಹಾಪ್ರಭು ಜಗನ್ನಾಥರ ಬಗ್ಗೆ ನಮಗೆ ತುಂಬಾ ಹೇಳುತ್ತಿದ್ದರು: ಪುರಿಯಲ್ಲಿ ಒಂದು ದೊಡ್ಡ ದೇವಾಲಯವಿದ್ದು, ಬೇರೆ ಯಾವುದೇ ದೇವಾಲಯವು ಅಷ್ಟು ಭವ್ಯವಾಗಿಲ್ಲ!&amp;nbsp;&lt;/p&gt;&lt;p&gt;ದೇವಾಲಯದಲ್ಲಿ, ಮಹಾಪ್ರಭು ಶ್ರೀ ಜಗನ್ನಾಥರನ್ನು ಅವರ ಸಹೋದರಿ ಸುಭದ್ರಾ ಮತ್ತು ಹಿರಿಯ ಸಹೋದರ ಬಲಭದ್ರ ಅವರೊಂದಿಗೆ ಪೂಜಿಸಲಾಗುತ್ತದೆ ಎಂದು ತಿಳಿಸುತ್ತಿದ್ದರು. ಮಹಾಪ್ರಭು ಜಗನ್ನಾಥರು ಗಾಢವಾದ ಬಣ್ಣ ಮತ್ತು ದುಂಡಾದ ಕಣ್ಣುಗಳನ್ನು ಹೊಂದಿದ್ದಾರೆ. ಸುಭದ್ರೆಯ ಮೈಬಣ್ಣ ಹಳದಿಯಾಗಿದ್ದರೆ, ಬಲಭದ್ರ ಬ್ರಹ್ಮಕಮಲದಂತೆ ಬಿಳಿ ಬಣ್ಣದವರಾಗಿದ್ದಾರೆ. ಒಮ್ಮೆ ಈ ದೇವತೆಗಳನ್ನು ನೋಡಿದರೆ, ನೀವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಜಗನ್ನಾಥರು &lsquo;ಮಹಾಪ್ರಭು&rsquo;, ಅವರ ಪ್ರಸಾದ &lsquo;ಮಹಾಪ್ರಸಾದ&rsquo;, ಅವರ ದೇವಾಲಯ &lsquo;ಬಡಾ ದೇಗುಲಾ&rsquo; ಅಥವಾ ದೊಡ್ಡ ದೇವಾಲಯ, ಅವರ ಮಾರ್ಗ &lsquo;ಬಡಾ ದಂಡ&rsquo;, ಅಂದರೆ ಮಹಾ ಮಾರ್ಗ ಮತ್ತು ಅವರ ಸಮುದ್ರವು &lsquo;ಮಹೋದಧಿ&rsquo; ಅಥವಾ ಮಹಾಸಾಗರ. ಪುರಿಯ ಪುರುಷೋತ್ತಮ ಕ್ಷೇತ್ರವು ನನ್ನ ಹುಟ್ಟೂರಾದ ಮಯೂರ್ಭಂಜ್ ಜಿಲ್ಲೆಯ ಉಪರ್ಬೇಡದಿಂದ ದೂರದಲ್ಲಿದೆ. ಪುರಿಗೆ ಭೇಟಿ ನೀಡುವ ಅವಕಾಶ ನನಗೆ ಹೇಗೆ ಸಿಗಲು ಸಾಧ್ಯ? ಎಂದುಕೊಳ್ಳುತ್ತಿದ್ದೆ. ನಾನು ಬೆಳೆದಂತೆ, ನಾನು ಭುವನೇಶ್ವರಕ್ಕೆ ಹೋಗಿ ಯುನಿಟ್ -2 ಬಾಲಕಿಯರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯಾಗಿ ಸೇರಿದೆ. ನಾನು ಅಲ್ಲಿನ ಹಾಸ್ಟೆಲ್&zwnj;ನಲ್ಲಿ ಉಳಿದುಕೊಂಡಿದ್ದೆ. ಆಗ ನನಗೆ ಪುರಿ, ಭುವನೇಶ್ವರ ಮತ್ತು ಕೊನಾರ್ಕ್&zwnj;ಗೆ ಭೇಟಿ ನೀಡುವ ಅವಕಾಶ ಲಭಿಸಿತು. ಮಹಾಪ್ರಭು ಜಗನ್ನಾಥರ ಮೊದಲ ದರ್ಶನದ ನೆನಪು ಇಂದಿಗೂ ಹಚ್ಚ ಹಸಿರಾಗಿದೆ. ಎಂತಹ ಪ್ರಭಾವ ಬೀರುವಂತಹ ದೇವಾಲಯ, ಅಂಥ ಭವ್ಯ ದೇವರ ಮೂರ್ತಿಗಳು! ಇವುಗಳನ್ನು ಎಂದಾದರೂ ಮರೆಯಲು ಸಾಧ್ಯವೇ?&lt;/p&gt;&lt;h2&gt;ರಥಯಾತ್ರೆಯ ವೈಭವ ಅನನ್ಯ:&lt;/h2&gt;&lt;p&gt;ಮಹಾಪ್ರಭು ಜಗನ್ನಾಥರ ರಥಯಾತ್ರೆಯನ್ನು ಯಾರಾದರೂ ಮರೆಯಲು ಸಾಧ್ಯವೇ? ಶ್ರೀ ಕ್ಷೇತ್ರದಲ್ಲಿ ವರ್ಷದ ಹನ್ನೆರಡು ತಿಂಗಳುಗಳಲ್ಲಿ ಹದಿಮೂರು ಹಬ್ಬಗಳನ್ನು ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ, ರಥಯಾತ್ರೆಯ ವೈಭವ ಅನನ್ಯವಾಗಿದೆ. ಮಹಾಪ್ರಭುಗಳ ದರ್ಶನಕ್ಕಾಗಿ ಭಕ್ತರು ವರ್ಷವಿಡೀ ದೇವಾಲಯಕ್ಕೆ ಬರುತ್ತಾರೆ. ಆದರೆ, ವರ್ಷಕ್ಕೊಮ್ಮೆ ಮಹಾಪ್ರಭುಗಳು ಸ್ವತಃ ದೇವಾಲಯದಿಂದ ಹೊರಬಂದು ವಿಶಾಲ ಪಥದೊಂದಿಗೆ ಗುಂಡಿಚಾ ದೇವಾಲಯಕ್ಕೆ ತೆರಳಿ ತಮ್ಮ ಭಕ್ತರಿಗೆ ದರ್ಶನ ನೀಡುತ್ತಾರೆ. ಮೂರು ಭವ್ಯವಾದ ರಥಗಳಲ್ಲಿ, ಮೂವರು ದೇವತೆಗಳು ಚಕ್ರರಾಜ ಸುದರ್ಶನನೊಂದಿಗೆ ಗುಂಡಿಚಾ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಅವರು ಏಳು ದಿನಗಳ ಕಾಲ ಅಲ್ಲಿಯೇ ಇದ್ದು ನಂತರ ಮರಳುತ್ತಾರೆ. ಮಹಾಪ್ರಭುಗಳ ಈ ಭವ್ಯ ಉತ್ಸವ ಅನುಪಮವಾದ್ದು.&lt;/p&gt;&lt;p&gt;ಬಾಲ್ಯದಿಂದಲೂ ನಾನು ಮಹಾಪ್ರಭು ಜಗನ್ನಾಥರ ಭಕ್ತೆಯಾಗಿದ್ದೇನೆ. ಅವರು ಸದಾ ನನಗೆ ಅತ್ಯಂತ ಪೂಜನೀಯ ದೇವರುಗಳಾಗಿದ್ದಾರೆ. ಅವರು ನನ್ನ ಜೀವನದ ಏರಿಳಿತಗಳನ್ನು ನಿಯಂತ್ರಿಸುತ್ತಾರೆ. ಅವರು ನನ್ನ ಸಂತೋಷ ಮತ್ತು ದುಃಖಗಳ ಚಿಲುಮೆಯಾಗಿದ್ದಾರೆ. ನನ್ನ ಜೀವನದಲ್ಲಿ ನಾನು ಅನೇಕ ಕಷ್ಟಗಳನ್ನು ಸಹಿಸಿಕೊಂಡಿದ್ದೇನೆ. ಮಹಾಪ್ರಭು ಸದಾ ನನ್ನನ್ನು ಆ ಎಲ್ಲಾ ತೊಂದರೆಗಳಿಂದ ಪಾರುಮಾಡಿದ್ದಾರೆ. ಅಷ್ಟಕ್ಕೂ ನಾನು ಅವರ ಪುತ್ರಿಯಲ್ಲವೇ.&lt;/p&gt;&lt;p&gt;ಭಾರತದ ರಾಷ್ಟ್ರಪತಿ ಹುದ್ದೆಗೆ ನನ್ನ ಉಮೇದುವಾರಿಕೆಯನ್ನು ಘೋಷಿಸಿದಾಗ, ನಾನು ಮಹಾಪ್ರಭು ನಾಮವನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸಿದೆ. ನಾನು ಮಹಾಪ್ರಭುಗಳನ್ನು ಪ್ರಾರ್ಥಿಸಿದೆ, &lsquo;ನೀವು ನನ್ನನ್ನು ಇಷ್ಟು ಎತ್ತರಕ್ಕೆ ಕರೆದೊಯ್ಯುತ್ತಿದ್ದೀರಿ. ಪ್ರತಿ ಹಂತದಲ್ಲೂ ನನಗೆ ಮಾರ್ಗದರ್ಶನ ನೀಡಿ ಮತ್ತು ಸದಾ ನನ್ನೊಂದಿಗೆ ಇರಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ&rsquo;. ಮಹಾಪ್ರಭು ನನ್ನ ಪ್ರಾರ್ಥನೆಯನ್ನು ಆಲಿಸುತ್ತಾರೆ. ಅವರು ಸದಾ ನನ್ನ ಪ್ರಾರ್ಥನೆಗಳಿಗೆ ಸ್ಪಂದಿಸುತ್ತಾರೆ. ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯಾಗಿ ನಾನು ದೆಹಲಿಯಲ್ಲಿ ಉಳಿದಿದ್ದಾಗ ರಥಯಾತ್ರೆಯ ಉತ್ಸವವನ್ನು ಆಚರಿಸಲಾಗುತ್ತಿತ್ತು. ಆದ್ದರಿಂದ, ನನಗೆ ಪುರಿಗೆ ಹೋಗಲು ಸಾಧ್ಯವಾಗಲಿಲ್ಲ. ರಥಯಾತ್ರೆಯ ದಿನ ಮುಂಜಾನೆ ದೆಹಲಿಯ ಹೌಜ್ ಖಾಸ್&zwnj;ನಲ್ಲಿರುವ ಶ್ರೀ ಜಗನ್ನಾಥ ದೇವಾಲಯಕ್ಕೆ ಹೋಗಿ ಮಹಾಪ್ರಭುಗಳ ದರ್ಶನ ಪಡೆದೆ. ನನ್ನ ಹೃದಯವು ಸಂತೋಷದಿಂದ ತುಂಬಿತ್ತು. ಅವರು ನನ್ನ ಮೇಲೆ ತಮ್ಮ ಆಶೀರ್ವಾದದ ಮಳೆ ಸುರಿಸಿದರು. ಆತ್ಮವಿಶ್ವಾಸದಿಂದ ನಾಮಪತ್ರ ಸಲ್ಲಿಸಿದೆ. ನಾನು ಚುನಾವಣಾ ಪ್ರಚಾರದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿದೆ. 2022ರ ಜುಲೈ 25ರಂದು ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಂಸತ್ತಿನ ಸೆಂಟ್ರಲ್ ಹಾಲ್&zwnj;ಗೆ ಹೋಗುವಾಗ ನಾನು ಮಹಾಪ್ರಭು ಜಗನ್ನಾಥ್ ಅವರನ್ನು ಪ್ರಾರ್ಥಿಸುತ್ತಿದ್ದೆ. ಅವರ ಆಶೀರ್ವಾದದಿಂದ, ಸಮಾರಂಭವು ಬಹಳ ಅಚ್ಚುಕಟ್ಟಾಗಿ ನಡೆಯಿತು.&lt;/p&gt;&lt;p&gt;ರಾಷ್ಟ್ರಪತಿಯಾಗಿ ನನ್ನ ಉದ್ಘಾಟನಾ ಭಾಷಣದ ಸಮಯದಲ್ಲಿ, ಮಹಾಪ್ರಭು ನನ್ನೊಂದಿಗೆ ಇದ್ದಾರೆ ಎಂದು ಅನಿಸುತ್ತಿತ್ತು.&lt;/p&gt;&lt;p&gt;ಆದಾಗ್ಯೂ, ಮಹಾಪ್ರಭುಗಳ ದರ್ಶನ ಪಡೆಯಲು ಪುರಿಗೆ ಹೋಗಲು ನನ್ನ ಹೃದಯ ಹಂಬಲಿಸುತ್ತಿತ್ತು. ದಿನಗಳು ಉರುಳಿದವು, ನನಗೆ ಪುರಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಆದರೆ, ಕೊನೆಗೂ ಈಡೇರಿತು; ಪರಮಾತ್ಮ ಅವಕಾಶ ಕೊಡದ ಹೊರತು ಯಾರಿಗಾದರೂ ದರ್ಶನ ಸಿಗುವುದಾದರೂ ಹೇಗೆ! &lsquo;ನಾನು ಏನಾದರೂ ತಪ್ಪು ಮಾಡಿದ್ದರೆ, ನನ್ನನ್ನು ಕ್ಷಮಿಸು, ಮಹಾಪ್ರಭು! ಆದರೆ ದಯವಿಟ್ಟು ನನ್ನನ್ನು ಪುರಿಗೆ ಕರೆಸಿ, ನಿಮ್ಮ ದರ್ಶನವನ್ನು ನನಗೆ ನೀಡು&rsquo; ಎಂದು ನಾನು ಮೌನವಾಗಿ ಆತನನ್ನು ಪ್ರಾರ್ಥಿಸಿದೆ. ಆತ &lsquo;ಭಾವ&rsquo; ಅಥವಾ ಭಾವನೆಗಳ ಮಹಾಪ್ರಭು. ಅವನು ನನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳದೇ ಇರಲು ಹೇಗೆ ಸಾಧ್ಯ? ಶೀಘ್ರದಲ್ಲೇ, ಪುರಿಗೆ ಪ್ರವಾಸವನ್ನು ನಿಗದಿಪಡಿಸಲಾಯಿತು.&lt;/p&gt;&lt;h3&gt;ಜಗ ರಕ್ಷಕನ ಮುಂದೆ ಶಿಷ್ಟಾಚಾರ ಏಕೆ?:&lt;/h3&gt;&lt;p&gt;ಅದು 2022ರ ನವೆಂಬರ್ 10ನೇ ದಿನವಾಗಿತ್ತು. ಪುರಿಗೆ ಬಂದ ನಂತರ, ಕಾರ್ಕೇಡ್ ಶ್ರೀ ಮಂದಿರದತ್ತ ಸಾಗಿತು. ಕಾರ್ಕೇಡ್ ಪುರಿಯ ಬಡಾ ದಂಡವನ್ನು ತಲುಪುತ್ತಿದ್ದಂತೆ, ಅಸಾಧಾರಣ ಭಾವನೆ ನನ್ನನ್ನು ಆವರಿಸಿತು. ಬಡಾ ದಂಡವು ಶ್ರೀ ಜಗನ್ನಾಥನಿಗೆ ಸೇರಿದೆ. ಇಲ್ಲಿ ಯಾವುದೇ ಪ್ರೋಟೋಕಾಲ್ ಅಗತ್ಯವಿದೆಯೇ? ಪುರಿ ಎಲ್ಲಾ ಯಾತ್ರಾ ಸ್ಥಳಗಳ ರಾಜನಾದ ಕ್ಷೇತ್ರರಾಜ ಎಂದು ಪ್ರಸಿದ್ಧವಾಗಿದೆ. ಮಹಾಪ್ರಭು ದೇವತೆಗಳ ದೇವರು. ಹೆಚ್ಚಿನ ಆಲೋಚನೆಗಳಿಲ್ಲದೆ, ನಾನು ನನ್ನ ಕಾರನ್ನು ನಿಲ್ಲಿಸಿದೆ. ನನ್ನ ಕಾರು ನಿಂತಾಗ, ನನ್ನ ಹಿಂಬಾಲಿಸಿದ ಎಲ್ಲಾ ಕಾರುಗಳು ಸಹ ನಿಂತವು. ಏನಾಗುತ್ತಿದೆ ಎಂದು ಯಾರಿಗೂ ಅರ್ಥವಾಗುವ ಮೊದಲು, ನಾನು ಬಡಾ ದಂಡವಾದ ಮಹಾ ಮಾರ್ಗದ ಮೇಲೆ ಬರಿಗಾಲಿನಲ್ಲಿ ನಡೆಯಲು ಪ್ರಾರಂಭಿಸಿದೆ. ಶ್ರೀ ಮಂದಿರವು ಸುಮಾರು ಎರಡು ಕಿಲೋಮೀಟರ್ ದೂರದಲ್ಲಿತ್ತು. ದೇವಾಲಯದ ನೀಲ-ಚಕ್ರ ಮತ್ತು ಶಿಖರದ ಪವಿತ್ರ ಪತಿತ ಪಾವನ ಧ್ವಜದ ಮೇಲೆ ನನ್ನ ಕಣ್ಣುಗಳನ್ನು ಕೇಂದ್ರೀಕರಿಸಿ, ನಾನು ಮುಂದೆ ನಡೆಯುತ್ತಲೇ ಇದ್ದೆ.&lt;/p&gt;&lt;p&gt;ನಾನು ನಡೆಯುವಾಗ, ರಸ್ತೆಯ ಎರಡೂ ಬದಿಗಳಲ್ಲಿ ನೆರೆದಿದ್ದ ಮಕ್ಕಳು, ಮಹಿಳೆಯರು, ಯುವಕರು ಮತ್ತು ವೃದ್ಧರತ್ತ ಕೈಮುಗಿಯುತ್ತಲೇ ಇದ್ದೆ. ನನ್ನ ಗಮನ ಮಹಾಪ್ರಭುಗಳ ಮೇಲೆ ಇತ್ತು. ನಾನು ದೇವಾಲಯದ ಸಿಂಹ-ದ್ವಾರದ ಬಳಿ ತಲುಪಿದ ಕ್ಷಣ, ನನಗೆ ಸುಮ್ಮನೆ ನಿಲ್ಲಲು ಸಾಧ್ಯವಾಗಲಿಲ್ಲ. ಅಷ್ಟೊತ್ತಿಗಾಗಲೇ ನಾನು ನನ್ನನ್ನೇ ಮರೆತಿದ್ದೆ. ಪವಿತ್ರ ರಸ್ತೆಯಾದ ಮಹಾಮಾರ್ಗದ ಧೂಳಿನಲ್ಲಿ ಸಾಷ್ಟಾಂಗ ನಮಸ್ಕಾರ ಮಾಡುತ್ತಾ ನಾನು ಮಹಾಪ್ರಭುಗಳಿಗೆ ನನ್ನ ವಿನಮ್ರ ನಮನಗಳನ್ನು ಅರ್ಪಿಸಿದೆ. ನಂತರ ನಾನು ದೇವಾಲಯವನ್ನು ಪ್ರವೇಶಿಸಿದೆ.&lt;/p&gt;&lt;p&gt;&amp;nbsp;ಗರ್ಭಗೃಹವನ್ನು ತಲುಪಿದ ನಂತರ ಮತ್ತು ನಾಲ್ಕು ದೇವತೆಗಳ ದರ್ಶನ ಪಡೆದ ನಂತರ, ನಾನು ದೈವಿಕ ಆನಂದದಿಂದ ಮುಳುಗಿದೆ. ಮಹಾಪ್ರಭುಗಳು ಬ್ರಹ್ಮಾಂಡದ ರಕ್ಷಕರು. ಎಲ್ಲರೂ ಕೈಬಿಟ್ಟಾಗ ಕೈ ಹಿಡಿಯುವವನು ಆತ. ಇಡೀ ಜಗತ್ತಿನ ಜನರ ದುಃಖವನ್ನು ನಿವಾರಿಸಲು ಅವರು ಸದಾ ಇರುತ್ತಾರೆ. ಅದಕ್ಕಾಗಿಯೇ ಅವನ ದುಂಡಾದ ಕಣ್ಣುಗಳ ರೆಪ್ಪೆಗಳು ಎಂದಿಗೂ ಮಿಟುಕಿಸುವುದಿಲ್ಲ. ಅವನಿಗೆ ಮೇಲು-ಕೀಳು ಎಂಬ ಭೇದವಿಲ್ಲ. ಅವನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಮತ್ತು ಎಲ್ಲರ ಸಮಾನತೆಯೇ ಆತನ ಮಂತ್ರ. ಮಹಾಪ್ರಭುವಿನ ಸಹಾನುಭೂತಿಯಿಂದ ಆಶೀರ್ವದಿಸಲ್ಪಟ್ಟ ನಾನು ಸಮಾಜದ ಪ್ರತಿಯೊಂದು ವರ್ಗದ ಸೇವೆಗೆ ನನ್ನನ್ನು ಸಮರ್ಪಿಸಿಕೊಂಡಿದ್ದೇನೆ. ದುಂಡು ಕಣ್ಣುಗಳಿದ್ದ ಮಹಾಪ್ರಭು ಜಗನ್ನಾಥರನ್ನು ನೋಡಿ, ನಾನು ಗೌರವದಿಂದ ಕೈಮುಗಿದು ಪ್ರಾರ್ಥಿಸಿದೆ, &lsquo;ಓ ಮಹಾಬಾಹು, ನಿಮ್ಮ ಆಶೀರ್ವಾದವು ಜನರ ಸೇವೆಗೆ ನನ್ನ ಸಮರ್ಪಣಾ ಮನೋಭಾವವನ್ನು ಶಾಶ್ವತವಾಗಿ ಉಳಿಸಿಕೊಳ್ಳಲಿ! ಓ ಕೃಪಾನಿಧಿ, ನಮ್ಮ ದೇಶಕ್ಕೆ, ಇಡೀ ಜಗತ್ತಿಗೆ ನಿಮ್ಮ ದಯಾಪರ ರಕ್ಷಣೆಯನ್ನು ನೀಡಿ.&rsquo; ಹೀಗೆ ಹೇಳುತ್ತಾ, ನಾನು ಭಕ್ತಿ-ಭಾವದಲ್ಲಿ ಮುಳುಗಿ ಹೋದೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/on-the-grand-path-of-lord-jagannath-of-puri/articleshow-msasii4"/>
        </item>
        <item>
            <title><![CDATA[ಗ್ರಾಮಾಯಣ  : ಊರು- ಕೇರಿಯಲ್ಲಿ ದೇವನೂರು ಸಂಚಾರ]]></title>
            <link>https://www.kannadaprabha.in/entertainment-news/devanurus-journey-through-villages-and-local-communities/articleshow-o3af9tt</link>
            <guid isPermaLink="true">https://www.kannadaprabha.in/entertainment-news/devanurus-journey-through-villages-and-local-communities/articleshow-o3af9tt</guid>
            <pubDate>Sat, 04 Jul 2026 12:18:42 +0530</pubDate>
            <description><![CDATA[&lt;p&gt;ಚಿತ್ರ: ಗ್ರಾಮಾಯಣ&lt;/p&gt;&lt;p&gt;ತಾರಾಗಣ: ವಿನಯ್&zwnj; ರಾಜ್&zwnj;ಕುಮಾರ್&zwnj;, ಮೇಘಾ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ, ಅಚ್ಯುತ್&zwnj; ಕುಮಾರ್&zwnj;, ಲೂಸ್&zwnj;ಮಾದ ಯೋಗಿ, ಅಪರ್ಣಾ ವಸ್ತಾರೆ, ಅರುಣ್&zwnj; ಸಾಗರ್&zwnj;, ಜಹಂಗೀರ್&zwnj;&lt;/p&gt;&lt;p&gt;ನಿರ್ದೇಶನ: ದೇವನೂರು ಚಂದ್ರು&lt;/p&gt;&lt;p&gt;ರೇಟಿಂಗ್&zwnj; : 3&lt;/p&gt;]]></description>
            <media:content url="https://static-gi.asianetnews.com/images/01kwk4j081hgksgmta6gsfwkyy/vinay-rajkumar-gramayana-1783053746433.jpg" type="image/jpeg" height="390" width="690"/>
            <content:encoded><![CDATA[&lt;h3&gt;&lt;strong&gt;ಆರ್&zwnj;.ಕೇಶವಮೂರ್ತಿ&lt;/strong&gt;&lt;/h3&gt;&lt;p&gt;ಕೆಲವು ಕೇಳಿಸಿಕೊಂಡ ಕತೆಗಳು, ಇನ್ನೂ ಕೆಲವು ಓದಿದ ಕತೆಗಳು, ಇವುಗಳ ನಡುವೆ ತಿಳಿದ ಕತೆಗಳೂ ಇರುತ್ತವೆ. ಆದರೆ, &lsquo;ಗ್ರಾಮಾಯಣ&rsquo; ನಮ್ಮತನವನ್ನು ಹೊತ್ತ ಅನುಭವದ ಕತೆಯಾಗಿ ಎಚ್ಚರಿಸುತ್ತದೆ, ಅಪ್ಪಿಕೊಳ್ಳುತ್ತದೆ, ದೂರ ತಳ್ಳುತ್ತದೆ, ದ್ವೇಷಿಸುತ್ತದೆ, ಪ್ರೀತಿಸುತ್ತದೆ, ಸ್ವಾಭಿಮಾನದ ಕಿಡಿಯಾಗಿಯೂ ಬದಲಾಯಿಸುತ್ತದೆ. ಕೊನೆಗೆ ಮನುಷ್ಯ- ಮನುಷ್ಯನಾಗಿರಬೇಕೆಂದು ಕಿವಿ ಹಿಂಡುತ್ತದೆ. ಈ ಕತೆಯನ್ನು ಹೆಕ್ಕಿ ತೆಗೆದಿರುವ ನಿರ್ದೇಶಕ ದೇವನೂರು ಚಂದ್ರು ಅವರು ಊರು-ಕೇರಿಯಲ್ಲಿ ಗಾಢವಾಗಿಯೇ ಸಂಚರಿಸಿದ್ದಾರೆಂಬುದು ಚಿತ್ರದ ಪ್ರತಿ ದೃಶ್ಯವೂ ಹೇಳುತ್ತದೆ. ಸಿಕ್ಸ್&zwnj; ಸೆನ್ಸ್&zwnj; ಸೀನ, ಕುಸುಮ, ಕರಿಬೆಕ್ಕು, ಸ್ವಾಮಿ, ಐದು ರೂಪಾಯಿ ಡಾಕ್ಟ್ರು, ನೀಟ್&zwnj; ನವೀನ... ಹೀಗೆ ಯಾವ ಪಾತ್ರಧಾರಿಯೂ ನೋಡುವಾಗ ಅಪರಿತವೆನಿಸಲ್ಲ. ನಮ್ಮ ನಡುವಿನ ವ್ಯಕ್ತಿ-ವ್ಯಕ್ತಿತ್ವಗಳೇ ತೆರೆ ಮೇಲೆ ಮೂಡಿದಂತೆ!&lt;/p&gt;&lt;p&gt;ಜಾತಿ, ಹಳ್ಳಿ ರಾಜಕೀಯದ ಮೇಲಾಟಗಳು, ಕುಡಿಯಲು ನೀರಿಲ್ಲದ ಊರಲ್ಲಿ ಎತ್ತರದ ದೇವಸ್ಥಾನ, ಪ್ರತಿಭೆ, ಜಾತಿ ಸಂಘಗಳ ನಿರ್ಮಾಣ, ರೈತರ ಜಮೀನು ಕಿತ್ತುಕೊಳ್ಳುವ ಅಭಿವೃದ್ಧಿಯ, ಒಬ್ಬ ದಲ್ಲಾಳಿ, ಅವನ ಮೇಲೊಬ್ಬ ಶಾಸಕ, ಈತನ ಮೇಲೊಬ್ಬ ಹೈಕಮ್ಯಾಂಡ್&zwnj;, ಇವರೆಲ್ಲರ ಕೆಳಗೆ ಬದುಕುತ್ತಿರುವ ಹಳ್ಳಿಯಲ್ಲಿ ಮನಸ್ಸಿಗೆ ಮುಟ್ಟೋ ಪ್ರೇಮ ಕತೆಯೂ ಇದೆ. ಮೈ ನರಿವೇಳಿಸೋ ದೇವರ ಆಟ, ಹಬ್ಬದ ಸಂಭ್ರಮವೂ ಇದೆ. ಹೀಗಾಗಿ ಕಾಲುದಾರಿಗಳಿಗೆ ಅಂಟಿಕೊಂಡಿರುವ ದೇವಪುರದ ಕೇರಿಯಲ್ಲಿ ಸಂಭ್ರಮ, ಸಂಘರ್ಷ, ಸಂಕಷ್ಟಗಳಿಗೆ ಕನ್ನಡಿ ಹಿಡಿಯುತ್ತಾ ಹೋಗುವ &lsquo;ಗ್ರಾಮಾಯಣ&rsquo; ನೆಲಮೂಲದ ಕಲ್ಚರಲ್&zwnj; ಕತೆಯಾಗುತ್ತದೆ.&lt;/p&gt;&lt;h2&gt;ನಾಯಕಿ ಪಾತ್ರವನ್ನು ಮರ ಸುತ್ತೋ ಬಳ್ಳಿಯನ್ನಾಗಿಸದೆ ಆಕೆಯನ್ನು ಕೃಷಿಕಳನ್ನಾಗಿಸಿದ್ದಾರೆ&lt;/h2&gt;&lt;p&gt;ದೇವರನ್ನು ಶಪಿಸುತ್ತಾ ಊರಾಚೆ ಕಳಿಸೋ ಹಬ್ಬ, ಚಿತೆ ಬಳಿ ನಿಂತು &lsquo;ಬರೋದಾದ್ರೆ ಒಳ್ಳೆಯದಕ್ಕೆ ಬಾ&rsquo; ಎಂದೇಳುವ ದೃಶ್ಯ, ಜಮೀನು ಉಳಿಸಿಕೊಳ್ಳುವ ವೃದ್ಧನ ತಾಪತ್ರೆಗಳನ್ನು ಭಾವುಕ ನೆಲೆಯಲ್ಲಿ ಹೇಳುವ ನಿರ್ದೇಶಕರು, ನಾಯಕಿ ಪಾತ್ರವನ್ನು ಮರ ಸುತ್ತೋ ಬಳ್ಳಿಯನ್ನಾಗಿಸದೆ ಆಕೆಯನ್ನು ಕೃಷಿಕಳನ್ನಾಗಿಸಿದ್ದಾರೆ. ನೇಗಿಲು ಹಿಡಿದು ಉಳುಮೆ ಮಾಡುತ್ತಾ, ನಡು ರಾತ್ರಿ ತೋಟಕ್ಕೆ ನೀರು ಹರಿಸುತ್ತಾ, ಹಸುಗಳನ್ನು ಮೇಯಿಸುತ್ತಾ ನೆಲದೊಡತಿಯಾಗುವ ಕುಸುಮ ಪಾತ್ರಧಾರಿ ಮೇಘಾ ಶೆಟ್ಟಿ, ನಿರ್ದೇಶಕ ಪಾ. ರಂಜಿತ್&zwnj; ಅವರ ಚಿತ್ರಗಳಲ್ಲಿನ &lsquo;ಗಟ್ಟಿ&rsquo;ಗಿತ್ತಿಯಂತೆ ಕಾಣುತ್ತಾಳೆ. ಸ್ವಾಮಿಯಾಗಿ ಗೋಪಾಲಕೃಷ್ಣ ದೇಶಪಾಂಡೆ ಅವರ ಪಾತ್ರಾಭಿನಯ, ಡೈಲಾಗ್&zwnj; ಡೆಲವರಿ, ಅವರ ಮ್ಯಾನರಿಸಂ ಚಿತ್ರಕ್ಕೆ ಅಗ್ರಸ್ಥಾನ ಕಲ್ಪಿಸಿದೆ. ವಿನಯ್&zwnj; ರಾಜ್&zwnj;ಕುಮಾರ್&zwnj; ಕಲಾವಿದನಾಗಿ ಮತ್ತಷ್ಟು ಮಾಗಿದ್ದು, ಪಾತ್ರಕ್ಕೆ ಜೀವ ತುಂಬುವಲ್ಲಿ ಅವರು &lsquo;ರಾಜಕುಮಾರ&rsquo;ನೇ ಸರಿ. ತಾಯಿ ಪಾತ್ರದಲ್ಲಿ ಅಪರ್ಣಾ ವಸ್ತಾರೆ ಅವರ ಒಡಲ ಧ್ವನಿ ಬಣ್ಣಿಸಲು ಪದಗಳ ಅಗತ್ಯವಿಲ್ಲ. ಕರಿಬೆಕ್ಕು ಆಗಿ ಲೂಸ್&zwnj;ಮಾದ ಯೋಗೀಶ್ ಅವರದ್ದು ಸಪರೇಟ್&zwnj; ದುನಿಯಾ. ರಮಣಿ ಪಾತ್ರಧಾರಿ ಜಹಂಗೀರ್&zwnj; ಅವರನ್ನೂ ಮರೆಯುವಂತಿಲ್ಲ.&lt;/p&gt;&lt;p&gt;ಪೂರ್ಣಚಂದ್ರ ತೇಜಸ್ವಿ ಅವರ ಹಿನ್ನೆಲೆ ಸಂಗೀತ, ಸಂತೋಷ್&zwnj; ರೈ ಪಾತಾಜೆ ಕ್ಯಾಮೆರಾ ಕಣ್ಣು, ಡಿಫರೆಂಟ್&zwnj; ಡ್ಯಾನಿ, ಚೇತನ್&zwnj; ಡಿಸೋಜಾ, ಅರ್ಜುನ್&zwnj; ರಾಜ್&zwnj; ಸಾಹಸ, ಮುರಳಿ- ಧನಂಜಯ್ ಕೊರಿಯೋಗ್ರಫಿ &lsquo;ಗ್ರಾಮಾಯಣ&rsquo; ಕತೆ ನಡೆಸೋ ಸಾರಥಿಗಳು. ಮೊದಲಾರ್ಧದಲ್ಲಿರುವ ಪೋರ್ಸ್&zwnj;, ವಿರಾಮದ ನಂತರವೂ ಮುಂದುವರಿಯಬೇಕಿತ್ತು ಅನಿಸೋದು ಬಿಟ್ಟರೆ ಒಂದೊಳ್ಳೆ ಚಿತ್ರ ನೋಡಿದ ಸಮಾಧಾನವಂತೂ &lsquo;ಗ್ರಾಮಾಯಣ&rsquo;ದಿಂದ ಲಭ್ಯವಾಗುತ್ತದೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/devanurus-journey-through-villages-and-local-communities/articleshow-o3af9tt"/>
        </item>
        <item>
            <title><![CDATA[ಪ್ರಜ್ವಲ್‌ ದೇವರಾಜ್ ಹೇಳಿದಂತೆ ನಡೆಯಲಿಲ್ಲ- ಬಾಕಿ ಸಂಭಾವನೆ ಚುಕ್ತಾ ಆಗಿದೆ]]></title>
            <link>https://www.kannadaprabha.in/entertainment-news/the-pending-remuneration-has-been-cleared-gurudath-ganiga/articleshow-p84fgvd</link>
            <guid isPermaLink="true">https://www.kannadaprabha.in/entertainment-news/the-pending-remuneration-has-been-cleared-gurudath-ganiga/articleshow-p84fgvd</guid>
            <pubDate>Sat, 11 Jul 2026 13:36:50 +0530</pubDate>
            <description><![CDATA[&lt;p&gt;&lsquo;ಪ್ರಜ್ವಲ್&zwnj; ದೇವರಾಜ್&zwnj; ಅವರ ಬಾಕಿ ಇದ್ದ ಸಂಭಾವನೆ ಕೊಟ್ಟಿದ್ದೇವೆ. ಟ್ರೇಲರ್&zwnj; ರಿಲೀಸ್&zwnj; ದಿನ ದಾಂಧಲೆ ಎಬ್ಬಿಸಿದವರ ವಿರುದ್ಧ ಎಫ್&zwnj;ಐಆರ್&zwnj; ದಾಖಲಿಸಲಾಗಿದೆ&rsquo; ಎಂದು ಕರಾವಳಿ ಸಿನಿಮಾದ ನಿರ್ದೇಶಕ, ನಿರ್ಮಾಪಕ ಗುರುದತ್&zwnj; ಗಾಣಿಗ ಹೇಳಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/01kx7hn2ra354jzcnebztab1h2/1-1783738567434.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;&amp;nbsp;ಸಿನಿವಾರ್ತೆ&lt;/strong&gt;&lt;/h2&gt;&lt;p&gt;&lsquo;ಪ್ರಜ್ವಲ್&zwnj; ದೇವರಾಜ್&zwnj; ಅವರ ಬಾಕಿ ಇದ್ದ ಸಂಭಾವನೆ ಕೊಟ್ಟಿದ್ದೇವೆ. ಟ್ರೇಲರ್&zwnj; ರಿಲೀಸ್&zwnj; ದಿನ ದಾಂಧಲೆ ಎಬ್ಬಿಸಿದವರ ವಿರುದ್ಧ ಎಫ್&zwnj;ಐಆರ್&zwnj; ದಾಖಲಿಸಲಾಗಿದೆ&rsquo; ಎಂದು ಕರಾವಳಿ ಸಿನಿಮಾದ ನಿರ್ದೇಶಕ, ನಿರ್ಮಾಪಕ ಗುರುದತ್&zwnj; ಗಾಣಿಗ ಹೇಳಿದ್ದಾರೆ.&lt;/p&gt;&lt;p&gt;ಈ ಬಗ್ಗೆ ವಿವರ ನೀಡಿದ ಅವರು, &lsquo;ಕರಾವಳಿ ಚಿತ್ರದಲ್ಲಿ ಪ್ರಜ್ವಲ್&zwnj;ಗೆ ಸಿಕ್ಸ್&zwnj;ಪ್ಯಾಕ್&zwnj; ಮಾಡಲು ಹೇಳಿದ್ದೆವು. ಅದಕ್ಕಾಗಿ 6 ತಿಂಗಳು ಚಿತ್ರೀಕರಣ ಮುಂದೂಡಿದ್ದೆವು. ಅವರ ಡಯಟ್&zwnj; ಇತ್ಯಾದಿಗಳಿಗೆ ಸಾಕಷ್ಟು ಖರ್ಚು ಮಾಡಿದ್ದೆವು. ಆದರೆ ಅವರಿಂದ ಸಿಕ್ಸ್&zwnj;ಪ್ಯಾಕ್&zwnj; ಮಾಡಲು ಸಾಧ್ಯವಾಗಿರಲಿಲ್ಲ. ಆ ಹಂತದಲ್ಲಿ ನಾವು ಬೇರೊಬ್ಬ ನಟನನ್ನು ಹಾಕಿಕೊಳ್ಳುವಂತೆಯೂ ಇರಲಿಲ್ಲ.&amp;nbsp;&lt;/p&gt;&lt;h3&gt;ಕಥೆಗೆ ಅಂಥಾ ದೇಹದಾರ್ಢ್ಯದ ಅಗತ್ಯವಿತ್ತು&lt;/h3&gt;&lt;p&gt;ಆದರೆ ಕಥೆಗೆ ಅಂಥಾ ದೇಹದಾರ್ಢ್ಯದ ಅಗತ್ಯವಿತ್ತು. ನಟನಿಂದ ಅದು ಸಾಧ್ಯವಾಗದ ಕಾರಣ ಸ್ವಲ್ಪ ಹಣವನ್ನು ಬಾಕಿ ಉಳಿಸಿಕೊಂಡಿದ್ದೆವು. ಸಿನಿಮಾದಲ್ಲಿ ಕ್ರಿಯೇಟಿವ್&zwnj; ನಿರ್ಧಾರ ತೆಗೆದುಕೊಳ್ಳುವ ಹಕ್ಕು ನಿರ್ದೇಶಕ, ನಿರ್ಮಾಪಕರಿಗೆ ಇರುತ್ತದೆ. ಪ್ರಜ್ವಲ್&zwnj; ಅವರಿಗೆ ಡಬ್ಬಿಂಗ್&zwnj; ಮಾಡುವಂತೆ ತಿಳಿಸಿ ಅವರಿಗಾಗಿ 2 ತಿಂಗಳು ಡಬ್ಬಿಂಗ್&zwnj; ಸ್ಟುಡಿಯೋವನ್ನೂ ಬುಕ್&zwnj; ಮಾಡಲಾಗಿತ್ತು. ಆದರೆ ಅವರು ಬರಲಿಲ್ಲ. ಚಿತ್ರರಂಗದ ಪ್ರಮುಖರಿಂದ ಹೇಳಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಅನಿವಾರ್ಯವಾಗಿ ಬೇರೆಯವರಿಂದ ಡಬ್ಬಿಂಗ್&zwnj; ಮಾಡಿಸಬೇಕಾಯ್ತು&rsquo; ಎಂದರು.&lt;/p&gt;&lt;p&gt;ಸದ್ಯ ಕರಾವಳಿ ಚಿತ್ರಕ್ಕೆ ಕಾರ್ತಿಕ್&zwnj; ಸಾಮಗ ಅವರಿಂದ ಡಬ್ಬಿಂಗ್&zwnj; ಮಾಡಿಸಲಾಗಿದೆ. ಚಿತ್ರಕ್ಕೆ ಸೆನ್ಸಾರ್&zwnj;ನಿಂದ ಯು/ಎ ಸರ್ಟಿಫಿಕೆಟ್&zwnj; ದೊರೆತಿದ್ದು, ಸಿನಿಮಾ ಜುಲೈ 24ರಂದು ತೆರೆಗೆ ಬರಲಿದೆ. ಚಿತ್ರದಲ್ಲಿ ಪ್ರಜ್ವಲ್&zwnj; ದೇವರಾಜ್&zwnj; ಧ್ವನಿ ಇರುವುದಿಲ್ಲ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/the-pending-remuneration-has-been-cleared-gurudath-ganiga/articleshow-p84fgvd"/>
        </item>
        <item>
            <title><![CDATA[ಮದರ್‌ ಪ್ರಾಮಿಸ್‌ ಮರುಶೋಧಿಸಿಕೊಳ್ಳುವ ಯತ್ನ: ಡಾಲಿ ಧನಂಜಯ]]></title>
            <link>https://www.kannadaprabha.in/entertainment-news/mother-promise-is-an-attempt-at-rediscovery-says-daali-dhananjaya/articleshow-r4qeumb</link>
            <guid isPermaLink="true">https://www.kannadaprabha.in/entertainment-news/mother-promise-is-an-attempt-at-rediscovery-says-daali-dhananjaya/articleshow-r4qeumb</guid>
            <pubDate>Fri, 10 Jul 2026 11:59:20 +0530</pubDate>
            <description><![CDATA[&lt;p&gt;ಇಲ್ಲಿ ದುಡಿದಿದ್ದನ್ನು ಇಲ್ಲಿಯೇ ಹಾಕುವ ಕನ್ನಡ ಚಿತ್ರರಂಗದ ಅತ್ಯಂತ ಮಹತ್ವದ ತಂಡಗಳಲ್ಲಿ ಒಂದು ಡಾಲಿ ಧನಂಜಯ ತಂಡ. ಅವರು ನಟಿಸಿ, ನಿರ್ಮಿಸಿರುವ, ಪೂರ್ಣಚಂದ್ರ ಮೈಸೂರು ನಿರ್ದೇಶನದ &lsquo;ಮದರ್ ಪ್ರಾಮಿಸ್&rsquo; ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಕುರಿತು, ಚಿತ್ರರಂಗದ ಕುರಿತು ಧನಂಜಯ ಅವರ ಅಂತರಂಗದ ಮಾತುಗಳು.&lt;/p&gt;]]></description>
            <media:content url="https://static-gi.asianetnews.com/images/01kn6ydw7h2f8vb16zfev2p39k/jvj-1775128473841.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;- ರಾಜೇಶ್ ಶೆಟ್ಟಿ&lt;/strong&gt;&lt;/h2&gt;&lt;h3&gt;&lt;strong&gt;ಮದರ್ ಪ್ರಾಮಿಸ್ ಚಿತ್ರದ ಸತ್ವ ಏನು? ಆತ್ಮ ಏನು?&lt;/strong&gt;&lt;/h3&gt;&lt;p&gt;ನಗುವೇ ಈ ಚಿತ್ರದ ಆತ್ಮ. ನಿರ್ದೇಶಕ ಪೂರ್ಣ ಬೆಂಗಳೂರಿನಲ್ಲಿ ಅವರು ನೋಡಿರುವ ಪಾತ್ರಗಳನ್ನು ಇಟ್ಟುಕೊಂಡು ಒಂದು ವಿಡಂಬನಾತ್ಮಕವಾಗಿ ಕತೆ ಹೇಳಿದ್ದಾರೆ. ಸಿನಿಮಾ ಪೂರ್ತಿ ನಗುವಿದೆ. ಹೊಸತನವಿದೆ. ಇದೊಂದು ಗ್ಯಾಂಗ್&zwnj;ಸ್ಟರ್&zwnj; ಕಾಮಿಡಿ. ಆದರೆ ಕ್ಲೈಮ್ಯಾಕ್ಸ್&zwnj;ನಲ್ಲಿ ಎಲ್ಲಾ ವಿಚಾರವೂ ಅನಾವರಣಗೊಂಡಾಗ, ಆ ಗ್ಯಾಂಗ್&zwnj;ಸ್ಟರ್&zwnj;ಗಳೆಲ್ಲಾ ಮಕ್ಕಳ ಥರ ಅನ್ನಿಸುತ್ತಾರೆ. ನಗುವೇ ತುಂಬಿರುವ ಒಂದು ಕತೆಯ ಅಂತ್ಯದಲ್ಲಿ ಸೊಗಸಾದ ಹೊ&zwj;ಳಹು ಇದೆ. ಅದು ಈ ಸಿನಿಮಾದ ಬೆರಗು.&lt;/p&gt;&lt;p&gt;&lt;strong&gt;ನಿಮ್ಮ ಪಾತ್ರದ ವೈಶಿಷ್ಟ್ಯವೇನು?&lt;/strong&gt;&lt;/p&gt;&lt;p&gt;ಈ ಸಿನಿಮಾದಲ್ಲಿ ನನ್ನ ಪಾತ್ರ ಒಂದು ಟ್ರ್ಯಾಕ್&zwnj; ಅಷ್ಟೇ. ಈ ಸಿನಿಮಾ ಬೇರೆಲ್ಲಾ ಪಾತ್ರಗಳ ಕತೆ. ಹಾಗೆ ನೋಡಿದರೆ ಅವರೆಲ್ಲರೂ ನಗಿಸಿದರೆ ನನ್ನದೊಂದು ಗಂಭೀರ ಪಾತ್ರ. ಗಂಭೀರವಾಗಿರುತ್ತೇನೆ. ಅಮ್ಮ ಕೊಡಿಸಿ ಸ್ಪೆಂಡ್ಲರ್&zwnj; ಬೈಕಿನ ಸುತ್ತಾ ಈ ಕತೆ ಸಾಗುತ್ತದೆ. ಈ ಪಾತ್ರ ನೀನು ಮಾಡಿದರೆ ಮಾತ್ರ, ನಾನು ಸಿನಿಮಾ ಮಾಡುತ್ತೇನೆ ಅಂತ ಪೂರ್ಣ ಹೇಳಿದ್ದ. ಅದಕ್ಕಾಗಿ ಮತ್ತು ಆ ಪಾತ್ರಕ್ಕಾಗಿ ಒಪ್ಪಿದೆ. ಆ ಪಾತ್ರದಲ್ಲೊಂದು ಕದಡುವ ಮೌನವಿದೆ.&lt;/p&gt;&lt;p&gt;&lt;strong&gt;ಈ ಸಿನಿಮಾ ನಿರ್ಮಾಣ ಯಾಕೆ ಮಾಡಿದಿರಿ?&lt;/strong&gt;&lt;/p&gt;&lt;p&gt;ನಾವು ನಿರಂತರವಾಗಿ ಸಿನಿಮಾ ಮಾಡುತ್ತಿರಬೇಕು. ಸೋಲು, ಗೆಲುವು ಬೇರೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರಾಮಾಣಿಕವಾದ ಪ್ರಯತ್ನ ಇರಬೇಕು. ಪ್ರಾಮಾಣಿಕವಾಗಿ ಕತೆ ಹೇಳಬೇಕು. ಈ ಪ್ರಾಮಾಣಿಕತೆ ಸ್ಕ್ರಿಪ್ಟ್&zwnj;ನಲ್ಲಿ ಕಾಣಬೇಕು. ನನಗೆ ಈ ಸಿನಿಮಾದ ಸ್ಕ್ರಿಪ್ಟ್&zwnj; ಓದುವಾಗಲೇ ಮಜಾ ಬಂದಿತ್ತು. ಯಾವ ಸ್ಕ್ರಿಪ್ಟ್&zwnj;ನಲ್ಲಿಯೇ ಮಜಾ ಕೊಡುತ್ತದೆಯೋ ಆ ಸಿನಿಮಾ ಮೇಲೆ ಹೆಚ್ಚು ನಂಬಿಕೆ ಇರುತ್ತದೆ. ಈ ಸಿನಿಮಾ ನಂಬಿಕೆ ಉಂಟು ಮಾಡಿತ್ತು.&lt;/p&gt;&lt;p&gt;&lt;strong&gt;ಪ್ರಮೋಷನ್&zwnj; ವಿಚಾರದಲ್ಲಿಯೂ ಬೇರೆ ದಾರಿ ಹಿಡಿದಿದ್ದೀರಿ. ಯಾಕೆ?&lt;/strong&gt;&lt;/p&gt;&lt;p&gt;ಯಾವುದೂ ಕೆಲಸ ಮಾಡದೇ ಇದ್ದಾಗ ನಮ್ಮನ್ನು ನಾವು ಮರುಶೋಧಿಸಿಕೊಳ್ಳಬೇಕು. ಹೊಸ ದಾರಿ ಹಿಡಿಯಬೇಕು. ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಹೀಗೆ ಎಲ್ಲರೂ ಅವರನ್ನು ಅವರು ಮರುಶೋಧಿಸಿಕೊಳ್ಳುತ್ತಿರಬೇಕು. ಈ ಸಿನಿಮಾ ಒಂದು ಭಿನ್ನ ಪ್ರಯತ್ನ. ಎಂಟರ್&zwnj;ಟೇನರ್&zwnj;. ಇದನ್ನು ಪ್ರೇಕ್ಷಕರಿಗೆ ತಲುಪಿಸುವುದಕ್ಕೂ ಭಿನ್ನ ದಾರಿ ಹಿಡಿಯುವ ಆಲೋಚನೆ ಮಾಡಿದೆವು. ಸೋಷಿಯಲ್&zwnj; ಮೀಡಿಯಾದಲ್ಲಿ ಎಂಟರ್&zwnj;ಟೇನಿಂಗ್&zwnj; ಕಂಟೆಂಟ್&zwnj; ಮಾಡಿದೆವು. ಅದು ಅನಿವಾರ್ಯವಾಗಿತ್ತು. ಯಾಕೆಂದರೆ ನಾವು ಸಿನಿಮಾ ಕುರಿತು ಜಾಸ್ತಿ ಮಾತನಾಡಿದಷ್ಟೂ ವಿಚಾರ ತೆಳುವಾಗುತ್ತಾ ಹೋಗುತ್ತದೆ. ಪ್ರೇಕ್ಷಕ ಬುದ್ಧಿವಂತ. ನಾವು ಅಪ್ರಾಮಾಣಿಕವಾಗಿ ಪ್ರಚಾರ ಮಾಡಿದಷ್ಟೂ ಅವನು ಹಿಂದೆ ಸರಿಯುತ್ತಾನೆ. ಹಾಗಾಗಬಾರದು ಎಂಬ ಕಾರಣಕ್ಕೆ ಸೋಮವಾರದಿಂದಲೇ ನೇರವಾಗಿ ಪ್ರೇಕ್ಷಕರಿಗೆ ತೋರಿಸಿದ್ದೇವೆ. ಮಂಗಳೂರಲ್ಲಿ ಶುರುವಾಗಿದ್ದು, ಶಿವಮೊಗ್ಗ, ಮೈಸೂರು, ಬೆಂಗಳೂರು ಹೀಗೆ ಬೇರೆ ಬೇರೆ ಕಡೆಯ ಪ್ರೇಕ್ಷಕರಿಗೆ ತಲುಪಿ ಎಲ್ಲಾ ಕಡೆಯಿಂದ ಮೆಚ್ಚುಗೆ ಬರುತ್ತಿದೆ. ಸಂತೋಷ ಮತ್ತು ಕೃತಜ್ಞತೆ.&lt;/p&gt;&lt;p&gt;&lt;strong&gt;ನೇರ ಪ್ರೇಕ್ಷಕರಿಗೆ ಸಿನಿಮಾ ತೋರಿಸುವ ನಿರ್ಧಾರ ತೆಗೆದುಕೊಂಡ ಕಾರಣ?&lt;/strong&gt;&lt;/p&gt;&lt;p&gt;ವಿಶ್ವಾಸ ಇದ್ದಾಗ ಆ ನಿರ್ಧಾರ ತಗೋಬಹುದು. ಯಾಕೆಂದರೆ ಒಬ್ಬ ಪ್ರೇಕ್ಷಕ ಇನ್ನೊಬ್ಬ ಪ್ರೇಕ್ಷನಿಗೆ ಹೇಳಿದರೆ ಮಾತ್ರ ಆತ ನಂಬುತ್ತಾನೆ. ಬೇರೆ ಯಾರು ಹೇಳಿದರೂ ನಂಬುತ್ತಿಲ್ಲ. ಅಂಥಾ ಸ್ಥಿತಿಗೆ ಚಿತ್ರರಂಗ ಬಂದಿದೆ. ಹಾಗಾಗಿ ನೇರ ಪ್ರೇಕ್ಷಕರಿಗೆ ತೋರಿಸಿದೆವು. ಮಂಗಳೂರಿನಲ್ಲಿ 400+ ಸೀಟ್ ಇದ್ದ ಚಿತ್ರಮಂದಿರಲ್ಲಿ ಪ್ರದರ್ಶನವಿತ್ತು. ಜನ ಬರುತ್ತಾರಾ ಎಂಬ ಭಯವಿತ್ತು. ಜನ ಬಂದರು. ತುಂಬಾ ಒಳ್ಳೆಯ ರೀತಿಯಲ್ಲಿ ಮೆಚ್ಚಿಕೊಂಡರು. ಅವರೇ ಬೇರೆ ಬೇರೆ ಭಾಗದ ಪ್ರೇಕ್ಷಕರಿಗೆ ತಿಳಿಸಿದರು. ಹಾಗಾಗಿಯೇ ನಮ್ಮ 21+ ಪ್ರೀಮಿಯರ್ ಶೋಗಳು ಬಹುತೇಕ ಫುಲ್&zwnj; ಆಗಿದ್ದು.&lt;/p&gt;&lt;p&gt;&lt;strong&gt;ನಟನೆ, ನಿರ್ಮಾಣ ಎರಡೂ ಪಾತ್ರ ನಿಭಾಯಿಸುವುದು ಎಷ್ಟು ಕಷ್ಟ, ಎಷ್ಟು ಸುಲಭ?&lt;/strong&gt;&lt;/p&gt;&lt;p&gt;ಗೀತ ಸಾಹಿತಿ ಕೂಡ. 3 ಹಾಡು ಬರೆದಿದ್ದೇನೆ. ಸಿನಿಮಾ ಮಾಡುವುದಕ್ಕೆಂದೇ ಇಲ್ಲಿ ಬಂದವನು. ನಟನೆ, ನಿರ್ಮಾಣ ನಿಭಾಯಿಸುವುದು ಸ್ವಲ್ಪ ಕಷ್ಟವಾಗುತ್ತದೆ. ಆದರೆ ಶ್ರಮ ಹಾಕುತ್ತೇನೆ. ಇನ್ನು ಹಾಡು ಬರೆಯುವುದು ನನ್ನ ಆತ್ಮತೃಪ್ತಿಗೆ, ನನ್ನ ಖುಷಿಗೆ.&lt;/p&gt;&lt;p&gt;&lt;strong&gt;ಈ ಸಿನಿಮಾದ ನಿಮ್ಮ ಕಲಿಕೆ ಏನು?&lt;/strong&gt;&lt;/p&gt;&lt;p&gt;ಈ ಸಿನಿಮಾದಲ್ಲಿ ಕೆಲಸ ಮಾಡಿರುವ ಬಹುತೇಕರು ಜೆನ್&zwnj; ಜೀಗಳು. ಅವರ ಆಲೋಚನಾ ವಿಧಾನ, ಕೆಲಸದ ವೇಗ ಎಲ್ಲವೂ ತಿಳಿದು ಬೆರಗಾಗಿದ್ದೇನೆ. ಹೊಸ ನೀರಿನ ಜೊತೆ ಹರಿದು ನಾನೂ ಹೊಸತಾಗುವ ಪ್ರಯತ್ನವಿದು.&lt;/p&gt;&lt;p&gt;&lt;strong&gt;ನಿಮ್ಮ ಹಾಡು ಕೇಳಿದರೆ ಬರ್ತಾ ಬರ್ತಾ ಹೆಚ್ಚು ಫಿಲಾಸಫಿಕಲ್ ಆಗುತ್ತಿದ್ದೀರಿ..&lt;/strong&gt;&lt;/p&gt;&lt;p&gt;ವಯಸ್ಸಾಗುತ್ತಾ ಹಾಗಾಗುವುದು ಸಹಜವಲ್ಲವೇ. ನಮ್ಮದೂ ಒಂದು ಜವಾಬ್ದಾರಿ ಇರುತ್ತದೆಯಲ್ಲವೇ. ಏನೋ ಹೇಳಬೇಕು ಅನ್ನಿಸುತ್ತಿರುತ್ತದೆ. ಅದನ್ನು ಹಾಡಿನ ಮೂಲಕ ಹೇಳುತ್ತೇನೆ. ಯಾರಿಗಾದರೂ ತಲುಪಿದರೆ ಅಷ್ಟರ ಮಟ್ಟಿಗೆ ಸಾರ್ಥಕ ಭಾವ. ಈ ಸಿನಿಮಾದ ಕ್ಲ್ಯೈಮ್ಯಾಕ್ಸ್&zwnj; ಕೂಡ ಈ ಕಾಲಕ್ಕೆ ಬೇಕಾದ ಒಂದು ಹೊಳಹು.&lt;/p&gt;&lt;p&gt;&lt;strong&gt;ಬರವಣಿಗೆ, ನಿರ್ದೇಶನ ಆಸೆ ಇದೆಯೇ?&lt;/strong&gt;&lt;/p&gt;&lt;p&gt;ಖಂಡಿತಾ ಇದೆ. ಆದರೆ ಆ ಜವಾಬ್ದಾರಿ ದೊಡ್ಡದು. ಅದಕ್ಕಾಗಿ ತಯಾರಾಗಬೇಕು.&lt;/p&gt;&lt;p&gt;&lt;strong&gt;ಮುಂದಿನ ದಾರಿ?&lt;/strong&gt;&lt;/p&gt;&lt;p&gt;ನಟನೆ, ನಿರ್ಮಾಣದ ಅಣ್ಣ ಫ್ರಂ ಮೆಕ್ಸಿಕೋ ಮತ್ತು ಹೆಗ್ಗಣ ಮುದ್ದು ಸಿದ್ಧವಿದೆ. ಬಿಡುಗಡೆಗೆ ಸಿದ್ಧವಾಗಬೇಕು. 666 ಡ್ರೀಮ್ ಥಿಯೇಟರ್&zwnj; ಇನ್ನೂ 20 ದಿನಗಳ ಶೂಟಿಂಗ್&zwnj; ಇದೆ. ಹಲಗಲಿ ಶೇ.50 ಚಿತ್ರೀಕರಣವಾಗಿದೆ. ಜಿಂಗೋ ಚಿತ್ರೀಕರಣ ಶುರುವಾಗಬೇಕಿದೆ. ದಾರಿ ಇನ್ನೂ ದೂರವಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/mother-promise-is-an-attempt-at-rediscovery-says-daali-dhananjaya/articleshow-r4qeumb"/>
        </item>
        <item>
            <title><![CDATA[ಭಾರತದಲ್ಲಿ ಅಮೆಜಾನ್ ಪ್ರೈಮ್‌ಗೆ ದಶಕದ ಸಂಭ್ರಮ]]></title>
            <link>https://www.kannadaprabha.in/entertainment-news/a-decade-of-amazon-prime-in-india-celebrtaion/articleshow-v7ehlg3</link>
            <guid isPermaLink="true">https://www.kannadaprabha.in/entertainment-news/a-decade-of-amazon-prime-in-india-celebrtaion/articleshow-v7ehlg3</guid>
            <pubDate>Sat, 11 Jul 2026 01:30:00 +0530</pubDate>
            <description><![CDATA[ಅಮೆಜಾನ್ ಪ್ರೈಮ್ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟು ಒಂದು ದಶಕ ಕಳೆದಿದೆ. ಈ ಕುರಿತ ವರದಿ ಇಲ್ಲಿದೆ.]]></description>
            <media:content url="https://static-assets.asianetnews.com/kp/json/10072026/pictures/AMAZON_(3)_797.JPG" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಪ್ರಭವಾರ್ತೆ ಬೆಂಗಳೂರು&lt;/p&gt;ಅತ್ಯಂತ ಪ್ರಸಿದ್ಧ ಅಮೆಜಾನ್ ಪ್ರೈಮ್ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟು ಒಂದು ದಶಕ ಕಳೆದಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಸಂಭ್ರಮಾಚರಣೆ ಮಾಡುತ್ತಿದೆ.&lt;p&gt;ಆಗ ಸಂಸ್ಥೆಯು ಗ್ರಾಹಕರಿಗೆ ಅತ್ಯಂತ ವೇಗದ ಮತ್ತು ಸುಲಭವಾದ ಶಾಪಿಂಗ್ ಅನುಭವ ಒಂದಗಿಸುವ ಒಂದು ಭರವಸೆ ನೀಡಿತ್ತು. ಈಗ ನೋಡಿದರೆ, ಹತ್ತು ವರ್ಷಗಳ ಸುದೀರ್ಘ ಪಯಣದ ನಂತರ ಇಂದು ಪ್ರೈಮ್ ಕೇವಲ ಡೆಲಿವರಿ ವ್ಯವಸ್ಥೆಯಾಗಿ ಉಳಿದಿಲ್ಲ. ಬದಲಿಗೆ ದೇಶಾದ್ಯಂತ ಲಕ್ಷಾಂತರ ಗ್ರಾಹಕರಿಗೆ ಶಾಪಿಂಗ್, ಬಂಪರ್ ಉಳಿತಾಯ, ಮನರಂಜನೆ ಮತ್ತು ದೈನಂದಿನ ಸೌಕರ್ಯಗಳನ್ನು ಒಂದೇ ಸೂರಿನಡಿ ಒದಗಿಸುವ ಬೃಹತ್ ಡಿಜಿಟಲ್ ಕುಟುಂಬವಾಗಿ ಬೆಳೆದು ನಿಂತಿದೆ.ಕಳೆದ ಹತ್ತು ವರ್ಷಗಳಲ್ಲಿ ಪ್ರೈಮ್ ಸೇವೆಯು ಕೇವಲ ಉಚಿತ ಮತ್ತು ವೇಗದ ಡೆಲಿವರಿಯನ್ನು ಮೀರಿ ವ್ಯಾಪಕವಾಗಿ ವಿಸ್ತರಣೆಗೊಂಡಿದೆ. ಓಟಿಟಿಯಲ್ಲಿ ಸೂಪರ್ ಹಿಟ್ ಸಿನಿಮಾಗಳ ಮನರಂಜನೆ, ಪ್ರೈಮ್ ಡೇ ನಂತಹ ವಿಶೇಷ ಶಾಪಿಂಗ್ ಹಬ್ಬಗಳು ಹಾಗೂ ಗ್ರಾಹಕರ ಹಣ ಉಳಿತಾಯಕ್ಕೆ ಹೊಸ ಮಾರ್ಗಗಳನ್ನು ಪರಿಚಯಿಸುವ ಮೂಲಕ ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ಈ ಸದಸ್ಯತ್ವವು ನಿರಂತರವಾಗಿ ವಿಕಸನಗೊಂಡಿದೆ. ಗ್ರಾಹಕರು ಈ ಎಲ್ಲಾ ಆಧುನಿಕ ಸೌಲಭ್ಯಗಳನ್ನು ನೇರವಾಗಿ ಅನುಭವಿಸುತ್ತಿದ್ದರೆ, ಇದರ ಯಶಸ್ಸಿನ ಹಿಂದೆ ಮತ್ತೊಂದು ರೋಚಕ ಕಥೆಯಿದೆ. ಅದುವೇ ಪ್ರೈಮ್ ಸೇವೆಯನ್ನು ಪ್ರತಿ ಹಂತದಲ್ಲೂ ಅತ್ಯುತ್ತಮವಾಗಿಸಲು ಹಗಲಿರುಳು ಶ್ರಮಿಸಿದ ತಾಂತ್ರಿಕ ಮತ್ತು ಕಾರ್ಯಕಾರಿ ತಂಡದ ಪರಿಶ್ರಮ.ಅಮೆಜಾನ್ ಪ್ರೈಮ್&zwnj; ನ ಸೀನಿಯರ್ ಮ್ಯಾನೇಜರ್ ಆದ ಪಲ್ಲವಿ ಸಿಂಗ್ ಅವರ ಪ್ರಕಾರ, ಕಳೆದ ಹತ್ತು ವರ್ಷಗಳ ಸುದೀರ್ಘ ಪಯಣದಲ್ಲಿ ಅವರು ಕಲಿತ ದೊಡ್ಡ ಪಾಠವೆಂದರೆ, ಗ್ರಾಹಕರ ನಿರೀಕ್ಷೆಗಳು ಎಂದಿಗೂ ಒಂದೇ ಕಡೆ ಸ್ಥಿರವಾಗಿರುವುದಿಲ್ಲ ಎಂಬುದನ್ನು ಅರ್ಥಮಾಡಿಕೊಂಡಿರುವುದು. ಈ ಕುರಿತು ಅವರು, &lsquo;ಇಂದಿನ ಭಾರತದಲ್ಲಿ ಪ್ರೈಮ್ ಸೇವೆ ಇರೋದಕ್ಕೂ, ಹತ್ತು ವರ್ಷಗಳ ಹಿಂದೆ ಇದ್ದುದಕ್ಕೂ ಭಾರಿ ವ್ಯತ್ಯಾಸವಿದೆ. ಏಕೆಂದರೆ ನಮ್ಮ ಗ್ರಾಹಕರು ಈಗ ಬದಲಾಗಿದ್ದಾರೆ. ಸೌಕರ್ಯ, ವೇಗ, ಮೌಲ್ಯ ಮತ್ತು ಮನರಂಜನೆಯ ವಿಷಯದಲ್ಲಿ ಅವರ ನಿರೀಕ್ಷೆಗಳು ನಿರಂತರವಾಗಿ ವಿಕಸನಗೊಳ್ಳುತ್ತಿವೆ ಮತ್ತು ಅದಕ್ಕೆ ತಕ್ಕಂತೆ ನಾವೂ ಕೂಡ ನಮ್ಮನ್ನು ಬದಲಾಯಿಸಿಕೊಳ್ಳುತ್ತಾ ಸಾಗುತ್ತಿದ್ದೇವೆ&rsquo; ಎಂದು ಹೇಳುತ್ತಾರೆ.ಇದೇ ಆಲೋಚನೆಯು ಆರಂಭದಿಂದಲೂ ಪ್ರೈಮ್ ಸೇವೆಯನ್ನು ರೂಪಿಸುತ್ತಾ ಬಂದಿದೆ. ಗ್ರಾಹಕರು ತಮ್ಮ ಸದಸ್ಯತ್ವದಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಿದ್ದಂತೆ, ಅವರ ದೈನಂದಿನ ಜೀವನವನ್ನು ಇನ್ನಷ್ಟು ಸುಲಭಗೊಳಿಸುವತ್ತ ಗಮನ ಹರಿಸಿದ ಪ್ರೈಮ್, ತನ್ನ ಕೊಡುಗೆಗಳನ್ನು ನಿರಂತರವಾಗಿ ಹೆಚ್ಚಿಸುತ್ತಾ ಸಾಗಿತು. ಇದನ್ನು ಪಲ್ಲವಿ ಅವರು ಅತ್ಯಂತ ಸರಳವಾಗಿ, &lsquo;ಯಾವುದೇ ಸೇವೆ ಅಥವಾ ಮೌಲ್ಯ ಎಂಬುದು ಎಂದಿಗೂ ಸ್ಥಿರವಾಗಿರುವುದಿಲ್ಲ&rsquo; ಎಂದು ಹೇಳುತ್ತಾರು. ಗ್ರಾಹಕರು ಯಾವುದೋ ಒಂದು ನಿರ್ದಿಷ್ಟ ಕಾರಣಕ್ಕಾಗಿ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಳ್ಳಬಹುದು, ಆದರೆ ಸಮಯ ಕಳೆದಂತೆ ಅದರ ಮೇಲಿನ ಅವರ ನಿರೀಕ್ಷೆಗಳು ಬದಲಾಗುತ್ತವೆ. ಭಾರತದಲ್ಲಿ ಪ್ರೈಮ್&zwnj; ನ ಈ ಅಭೂತಪೂರ್ವ ಬೆಳವಣಿಗೆಗೆ ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳನ್ನು ನಿರಂತರವಾಗಿ ಆಲಿಸುವುದು ಮತ್ತು ಅದಕ್ಕೆ ತಕ್ಕಂತೆ ಸ್ಪಂದಿಸುವುದೇ ಪ್ರಮುಖ ಕಾರಣವಾಗಿದೆ.ಗ್ರಾಹಕರು ಕೇವಲ ಕೊನೆಯ ಹಂತದ ಅತ್ಯುತ್ತಮ ಅನುಭವವನ್ನು ಮಾತ್ರ ಕಾಣುತ್ತಾರೆ. ಆದರೆ ಅದನ್ನು ಸಾಕಾರಗೊಳಿಸಲು ಅಮೆಜಾನ್&zwnj; ನ ವಿವಿಧ ವಿಭಾಗಗಳ ತಂಡಗಳು ಪ್ರತಿ ದಿನವೂ ಒಟ್ಟಾಗಿ ಶ್ರಮಿಸುತ್ತವೆ. ಅಮೆಜಾನ್ ಸಪ್ಲೈ ಚೈನ್ ವಿಭಾಗದ ಪ್ರೋಗ್ರಾಂ ಮ್ಯಾನೇಜರ್ ಆಗಿರುವ ಪುಷ್ಪಾ ಸಿಂಗ್ ಅವರಿಗೆ, ಭಾರತದಲ್ಲಿ ಪ್ರೈಮ್ ಆರಂಭವಾದ ಆ ದಿನಗಳ ನೆನಪುಗಳು ಇಂದಿಗೂ ಅತ್ಯಂತ ಸರಳ ಹಾಗೂ ಸುಂದರವಾಗಿ ನೆನಪಾಗಿ ಉಳಿದಿವೆ. ಅವರು ಈ ಕುರಿತು, &lsquo;ಭಾರತದಲ್ಲಿ ಪ್ರೈಮ್ ಲಾಂಚ್ ಆದ ಆ ದಿನ, ನಾನು ಫುಲ್&zwnj; ಫಿಲ್&zwnj; ಮೆಂಟ್ ಸೆಂಟರ್&zwnj; ನ (ದಾಸ್ತಾನು ಮಳಿಗೆ) ನೆಲದ ಮೇಲೆಯೇ ನಿಂತು ನಮ್ಮ ಮೊದಲ ಸದಸ್ಯರಿಗಾಗಿ ವೆಲ್ಕಮ್ ಕಿಟ್ ಗಳನ್ನು ಜೋಡಿಸಲು ಸಹಾಯ ಮಾಡುತ್ತಿದ್ದ ನೆನಪು ಇಂದಿಗೂ ಹಸಿರಾಗಿದೆ. ಅವುಗಳೇನು ಅತ್ಯಂತ ದುಬಾರಿ ಪ್ಯಾಕೇಜ್&zwnj; ಗಳಾಗಿರಲಿಲ್ಲ, ಆದರೆ ಆ ಪ್ರತಿಯೊಂದು ಕಿಟ್ ಅನ್ನು ಸಿದ್ಧಪಡಿಸುವಲ್ಲಿ ನಾವು ವಹಿಸಿದ ಕಾಳಜಿ ಮಾತ್ರ ಹಿರಿದಾಗಿತ್ತು. ನಾವು ಅಲ್ಲಿ ಕೇವಲ ಒಂದು ಬಾಕ್ಸ್ ಅನ್ನು ಪ್ಯಾಕ್ ಮಾಡುತ್ತಿರಲಿಲ್ಲ, ಬದಲಿಗೆ ಗ್ರಾಹಕರಿಗೆ ನೀಡಿದ ಒಂದು ಭರವಸೆಯನ್ನು ಪ್ಯಾಕ್ ಮಾಡುತ್ತಿದ್ದೆವು&rsquo; ಎಂದು ಹೇಳುತ್ತಾರೆ.ಗ್ರಾಹಕರ ಧ್ವನಿಯನ್ನು ಆಲಿಸುವುದು ಪ್ರೈಮ್&zwnj; ನ ಹೊಸತನದ ಹಾದಿಯನ್ನೂ ರೂಪಿಸಿದೆ. ಅಮೆಜಾನ್&zwnj; ನ ಡೀಲ್ಸ್ ಮತ್ತು ಈವೆಂಟ್ಸ್ ವಿಭಾಗದ ಸೀನಿಯರ್ ಮ್ಯಾನೇಜರ್ ಹಾಗೂ ಜೆನ್&zwnj; ಎಐ ಮಾರ್ಕೆಟಿಂಗ್ ಲೀಡ್ ಆಗಿರುವ ವರುಣ್ ಬಜಾಜ್ ಅವರ ಪ್ರಕಾರ, ಗ್ರಾಹಕರ ಒಳನೋಟಗಳು ಕೇವಲ ಹೊಸತನದ ಪ್ರಕ್ರಿಯೆಯ ಒಂದು ಭಾಗ ಮಾತ್ರವಲ್ಲ. &lsquo;ಗ್ರಾಹಕರ ಒಳನೋಟಗಳು ನಮ್ಮ ಹೊಸತನದ ಪ್ರಕ್ರಿಯೆಗೆ ಕೇವಲ ಒಂದು ಮಾಹಿತಿ) ಅಲ್ಲ. ಬದಲಿಗೆ, ಅವುಗಳೇ ನಮ್ಮ ಒಟ್ಟಾರೆ ಪ್ರಕ್ರಿಯೆಯಾಗಿವೆ&rsquo; ಎಂದು ಹೇಳುತ್ತಾರೆ.ಪ್ರೈಮ್ ಸದಸ್ಯತ್ವಕ್ಕೆ ಸೇರ್ಪಡೆಯಾದ ಪ್ರತಿಯೊಂದು ಅರ್ಥಪೂರ್ಣ ಸೌಲಭ್ಯವೂ ಸಹ ಗ್ರಾಹಕರು ನಿಖರವಾಗಿ ಏನನ್ನು ಬಯಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರೊಂದಿಗೇ ಆರಂಭವಾಗಿದೆ. ಆ ಒಳನೋಟಗಳನ್ನು ಆಧರಿಸಿಯೇ ಶಾಪಿಂಗ್ ಪ್ರಕ್ರಿಯೆಯನ್ನು ಇನ್ನಷ್ಟು ಸರಳ, ಹೆಚ್ಚು ಪ್ರಯೋಜನಕಾರಿ ಮತ್ತು ಆನಂದದಾಯಕ ಅನುಭವವನ್ನಾಗಿ ಪರಿವರ್ತಿಸಲಾಗಿದೆ.ಭಾರತದಲ್ಲಿ ಪ್ರೈಮ್ ಸೇವೆ ಇದೀಗ ತನ್ನ ಮುಂದಿನ ದಶಕದ ಪಯಣಕ್ಕೆ ಹೆಜ್ಜೆ ಇಡುತ್ತಿದ್ದು, ಗ್ರಾಹಕರ ದೈನಂದಿನ ಜೀವನಕ್ಕೆ ಈ ಸದಸ್ಯತ್ವವನ್ನು ಇನ್ನಷ್ಟು ಹತ್ತಿರವಾಗಿಸುವತ್ತ ಸಂಪೂರ್ಣ ಗಮನ ಹರಿಸಿದೆ. ಈ ಕುರಿತು ಪಲ್ಲವಿ ಸಿಂಗ್ ಅವರು ಮೆಲುಕು ಹಾಕುತ್ತಾ, &lsquo;ಭಾರತದಲ್ಲಿ ಪ್ರೈಮ್&zwnj; ನ ಮೊದಲ ದಶಕವು ಗ್ರಾಹಕರಿಗೆ ಈ ಸದಸ್ಯತ್ವದ ಪ್ರಯೋಜನಗಳನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿದೆ. ಆದರೆ, ಮುಂದಿನ ದಶಕವು ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಹೊಸ ಸೌಲಭ್ಯಗಳನ್ನು ಸೃಷ್ಟಿಸುವ ಮೂಲಕ ಮತ್ತು ಕಾಲಕ್ಕೆ ತಕ್ಕಂತೆ ಅವರ ಜೀವನಾಡಿಯಾಗಿ ಬೆಳೆಯುವ ಮೂಲಕ, ಪ್ರೈಮ್ ಅನ್ನು ಅವರ ಜೀವನದ ಅತ್ಯಗತ್ಯ ಭಾಗವನ್ನಾಗಿ ರೂಪಿಸುವುದಾಗಿದೆ&rsquo; ಎಂದಿದ್ದಾರೆ.ಪ್ರೈಮ್&zwnj; ನ ಮೊದಲ ದಶಕದ ಯಶೋಗಾಥೆಯು ಕೇವಲ ಇಂದು ಗ್ರಾಹಕರು ಅನುಭವಿಸುತ್ತಿರುವ ಸೌಲಭ್ಯಗಳಲ್ಲಿ ಮಾತ್ರವೇ ಅಡಗಿಲ್ಲ, ಬದಲಿಗೆ ಅದನ್ನು ನಿರಂತರವಾಗಿ ಕಟ್ಟಿ ಬೆಳೆಸುತ್ತಿರುವ ಉದ್ಯೋಗಿಗಳ ಶ್ರಮದಲ್ಲೂ ಅಡಗಿದೆ. ಗ್ರಾಹಕರ ಅಗತ್ಯಗಳು ಬದಲಾಗುತ್ತಿದ್ದಂತೆ, ಪ್ರೈಮ್&zwnj; ನ ಮುಂದಿನ ಅಧ್ಯಾಯವನ್ನು ರೂಪಿಸುವ ಹೊಸ ಆಲೋಚನೆಗಳು, ಅನುಭವಗಳು ಮತ್ತು ಹೊಸತನಗು ಸಹ ಅದಕ್ಕೆ ತಕ್ಕಂತೆ ವಿಕಸನಗೊಳ್ಳಲಿವೆ.&lt;/p&gt;]]></content:encoded>
            <category>entertainment</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/entertainment-news/a-decade-of-amazon-prime-in-india-celebrtaion/articleshow-v7ehlg3"/>
        </item>
        <item>
            <title><![CDATA[ಬೇಕಿಂಗ್‌ ಉದ್ಯಮ ಆರಂಭಿಸಿದ ಅಪ್ಪು ಕಿರಿಯ ಮಗಳು ವಂದಿತಾ]]></title>
            <link>https://www.kannadaprabha.in/entertainment-news/appus-younger-daughter-vanditha-launches-her-baking-venture/articleshow-w2kc66i</link>
            <guid isPermaLink="true">https://www.kannadaprabha.in/entertainment-news/appus-younger-daughter-vanditha-launches-her-baking-venture/articleshow-w2kc66i</guid>
            <pubDate>Fri, 17 Jul 2026 13:03:39 +0530</pubDate>
            <description><![CDATA[&lt;p&gt;ಪುನೀತ್&zwnj; ರಾಜ್&zwnj;ಕುಮಾರ್&zwnj; ಹಾಗೂ ಅಶ್ವಿನಿ ಕಿರಿಯ ಪುತ್ರಿ ವಂದಿತಾ ಇದೀಗ ಬೇಕಿಂಗ್&zwnj; ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಅಪ್ಪು ಪ್ರೀತಿಯಿಂದ ವಂದಿತಾ ಅವರನ್ನು ಕರೆಯುತ್ತಿದ್ದ &lsquo;ನುಕ್ಕಿ&rsquo; ಎಂಬ ಹೆಸರನ್ನಿಟ್ಟುಕೊಂಡು &lsquo;ನುಕಾಸ್&zwnj;&rsquo; ಆನ್&zwnj;ಲೈನ್&zwnj; ಕೆಫೆ ತೆರೆದಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/01kxjsqz1dtz9fbs5srd952e3r/vandita-puneeth-rajkumar-04-1784116149293.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ವಂದಿತಾ ಇದೀಗ ಬೇಕಿಂಗ್&zwnj; ಕ್ಷೇತ್ರಕ್ಕೆ&lt;/strong&gt;&lt;/h2&gt;&lt;p&gt;ಪುನೀತ್&zwnj; ರಾಜ್&zwnj;ಕುಮಾರ್&zwnj; ಹಾಗೂ ಅಶ್ವಿನಿ ಕಿರಿಯ ಪುತ್ರಿ ವಂದಿತಾ ಇದೀಗ ಬೇಕಿಂಗ್&zwnj; ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಅಪ್ಪು ಪ್ರೀತಿಯಿಂದ ವಂದಿತಾ ಅವರನ್ನು ಕರೆಯುತ್ತಿದ್ದ &lsquo;ನುಕ್ಕಿ&rsquo; ಎಂಬ ಹೆಸರನ್ನಿಟ್ಟುಕೊಂಡು &lsquo;ನುಕಾಸ್&zwnj;&rsquo; ಆನ್&zwnj;ಲೈನ್&zwnj; ಕೆಫೆ ತೆರೆದಿದ್ದಾರೆ.&amp;nbsp;&lt;/p&gt;&lt;h3&gt;ಕೇಕ್&zwnj;ಗಳು, ಬಿಸ್ಕೆಟ್&zwnj;ಗಳು, ತಿರಮಿಸು, ಬ್ರೆಡ್&zwnj;, ಬ್ರೌನಿ&lt;/h3&gt;&lt;p&gt;ನಾನಾ ಮಾದರಿಯ ಕೇಕ್&zwnj;ಗಳು, ಬಿಸ್ಕೆಟ್&zwnj;ಗಳು, ತಿರಮಿಸು, ಬ್ರೆಡ್&zwnj;, ಬ್ರೌನಿ ಸೇರಿ ಹಲವು ಐಟಂಗಳು ಇದರಲ್ಲಿವೆ.&lt;/p&gt;&lt;p&gt;ಇತ್ತೀಚೆಗೆ ವಿನಯ್&zwnj; ರಾಜ್&zwnj;ಕುಮಾರ್&zwnj; ಗ್ರಾಮಾಯಣ ಸಿನಿಮಾ ಬಿಡುಗಡೆ ಸಂದರ್ಭ ವಂದಿತಾ ಅಣ್ಣನಿಗಾಗಿ ವಿಶೇಷ ಕೇಕ್&zwnj; ತಯಾರಿಸಿದ್ದರು. ತನ್ನ ಪ್ರಿಯ ಹವ್ಯಾಸವಾದ ಬೇಕಿಂಗ್&zwnj; ಅನ್ನು ವಂದಿತಾ ಇದೀಗ ಉದ್ಯಮದ ಹಂತಕ್ಕೆ ಏರಿಸಿದ್ದಾರೆ. ಆರ್ಡರ್&zwnj; ಬಂದಾಗ ತನ್ನ ಕೈಯಾರ ತಿನಿಸುಗಳನ್ನು ತಯಾರಿಸಿ ಗ್ರಾಹಕರಿಗೆ ತಲುಪಿಸುತ್ತಾರೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/appus-younger-daughter-vanditha-launches-her-baking-venture/articleshow-w2kc66i"/>
        </item>
        <item>
            <title><![CDATA[ಕನ್ನಡಿಗರಿಗೆ ಅರೆಬೆಂದ ಸಿನಿಮಾ ಕೊಡೋದಕ್ಕೆ ಇಷ್ಟ ಇಲ್ಲ : ನಭಾ ನಟೇಶ್‌]]></title>
            <link>https://www.kannadaprabha.in/entertainment-news/i-dont-want-to-serve-half-baked-films-to-kannada-audiences-nabha-natesh/articleshow-wmsquo7</link>
            <guid isPermaLink="true">https://www.kannadaprabha.in/entertainment-news/i-dont-want-to-serve-half-baked-films-to-kannada-audiences-nabha-natesh/articleshow-wmsquo7</guid>
            <pubDate>Mon, 29 Jun 2026 14:28:21 +0530</pubDate>
            <description><![CDATA[&lt;p&gt;ಕನ್ನಡದಲ್ಲಿ &lsquo;ವಜ್ರಕಾಯ&rsquo; ಸಿನಿಮಾ ಮಾಡಿದ್ದ ನಟಿ ನಭಾ ನಟೇಶ್&zwnj; ಸದ್ಯ ತೆಲುಗಿನಲ್ಲಿ ಬ್ಯುಸಿ ಆಗಿದ್ದಾರೆ. ಅಭಿಷೇಕ್&zwnj; ನಾಮಾ ನಿರ್ದೇಶನದಲ್ಲಿ ಇವರು ನಟಿಸಿರುವ &lsquo;ನಾಗಬಂಧಂ&rsquo; ಸಿನಿಮಾ ಜು.3ಕ್ಕೆ ರಿಲೀಸ್&zwnj; ಆಗುತ್ತಿದೆ. ಆ ಹಿನ್ನೆಲೆಯಲ್ಲಿ ನಭಾ ಜೊತೆಗೆ ಮಾತು..&lt;/p&gt;]]></description>
            <media:content url="https://static-gi.asianetnews.com/images/01jmxm7630pz71m2b0g1gzspr9/nabha.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಪ್ರಿಯಾ ಕೆರ್ವಾಶೆ&lt;/strong&gt;&lt;/h2&gt;&lt;p&gt;- ಕೋವಿಡ್&zwnj; ನಂತರ ಸುದೀರ್ಘ ವಿರಾಮ ತಗೊಂಡ್ರಿ. ಏನೆಲ್ಲ ರಿಯಲೈಸೇಶನ್&zwnj; ಆಯ್ತು?&lt;/p&gt;&lt;p&gt;ಈ ಬ್ರೇಕ್&zwnj; ನನಗೆ ಆತ್ಮವಿಮರ್ಶೆ ಮಾಡಿಕೊಳ್ಳಲು ಸಾಕಷ್ಟು ಸಮಯ ಕೊಟ್ಟಿತು. ನನ್ನ ಬದುಕಿನ ಉದ್ದೇಶ ಏನು, ನಾನು ಯಾಕಾಗಿ ಹೀಗೆಲ್ಲ ಒದ್ದಾಡುತ್ತಿದ್ದೇನೆ, ಇದಕ್ಕೆಲ್ಲ ಅರ್ಥ ಇದೆಯಾ ಅಂತೆಲ್ಲ ಯೋಚಿಸಿದೆ. ಕೆಲವಕ್ಕೆ ಉತ್ತರ ಸಿಕ್ಕಿತು, ಮತ್ತೆ ಕೆಲವಕ್ಕೆ ಸಿಗಲಿಲ್ಲ. ಒಂದಂತೂ ಅರ್ಥ ಆಯ್ತು. ನನಗೆ ಖುಷಿ ಸಿಗುವುದು ಜನರಿಗೆ ಮನರಂಜನೆ ನೀಡುವುದರಲ್ಲಿ. ಅಭಿನಯವೇ ನನಗೆ ಒಲಿದ ಕಲೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಅಂತ ಅಂದುಕೊಂಡೆ.&lt;/p&gt;&lt;p&gt;- ಆಮೇಲೆ ನೀವು ಆಯ್ಕೆ ಮಾಡಿಕೊಂಡಿದ್ದು ಅಂಥಾ ಸಮರ್ಥ ಸಿನಿಮಾಗಳ?&lt;/p&gt;&lt;p&gt;ನಾಗಬಂಧಂ, ಸ್ವಯಂಭೂ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡಿದ್ದು ಅದರಲ್ಲಿ ನನ್ನ ಪಾತ್ರಕ್ಕಿರುವ ಸ್ಕೋಪ್&zwnj; ನೋಡಿ. ನಾಗಬಂಧಂನಲ್ಲಿ ಪಾರ್ವತಿ ಅನ್ನುವ ನನ್ನ ಪಾತ್ರಕ್ಕೆ ಸಾಕಷ್ಟು ಲೇಯರ್&zwnj;ಗಳಿವೆ. ಸ್ವಯಂಭೂ ಸಿನಿಮಾದಲ್ಲೂ ಉತ್ತಮ ಬೆಳವಣಿಗೆ ಇರುವ ಪಾತ್ರ.&lt;/p&gt;&lt;h3&gt;- ಎರಡೂ ಪೌರಾಣಿಕ ಚಿತ್ರಗಳು, ಯಾಕೆ?&lt;/h3&gt;&lt;p&gt;ಈಗಿನ ಟ್ರೆಂಡ್&zwnj; ಹಾಗಿದೆ. ಈಗ ಜನ ಇಷ್ಟಪಡುತ್ತಿರುವುದು ಪೌರಾಣಿಕ, ಐತಿಹಾಸಿಕ ಕಥೆಗಳನ್ನು. ಅಂಥಾ ಪಾತ್ರ ಸಿಕ್ಕಾಗ ಒಪ್ಪಿಕೊಂಡೆ. ಮೊದಲ ಸಿನಿಮಾ ವಜ್ರಕಾಯದಲ್ಲಿ ನನ್ನ ಪಾತ್ರ ಪಟಾಕಾ ಪಾರ್ವತಿ. ನಾಗಬಂಧಂನಲ್ಲೂ ನನ್ನ ಪಾತ್ರ ಪಾರ್ವತಿ. ಆ ಪಾತ್ರಕ್ಕಿಂತ ಕಂಪ್ಲೀಟ್&zwnj; ವಿರುದ್ಧ ಈ ಪಾರ್ವತಿ. ಆದರೆ ನನ್ನ ಸಿನಿಮಾ ಜರ್ನಿಯಲ್ಲಿ ಆ ಪಾರ್ವತಿಯಿಂದ ಈ ಪಾರ್ವತಿಗೆ ಒಂದು ಫುಲ್&zwnj; ಸರ್ಕಲ್&zwnj; ಆಗಿದೆ.&lt;/p&gt;&lt;p&gt;- ವಜ್ರಕಾಯ ಸಿನಿಮಾದ ಯಶಸ್ಸಿನ ನಂತರ ಕನ್ನಡ ಇಂಡಸ್ಟ್ರಿ ಕಡೆ ತಿರುಗೂ ನೋಡ್ಲಿಲ್ಲ?&lt;/p&gt;&lt;p&gt;ಹಾಗೆಲ್ಲ ಏನಿಲ್ಲ. ಕಲಾವಿದರಿಗೆ ಭಾಷೆಯ ಗಡಿ ಇರೋದಿಲ್ಲ. ನನಗೆ ತೃಪ್ತಿ ನೀಡುವಂಥಾ ಸಿನಿಮಾಗಳು ಸಿಕ್ಕಾಗ ಅದನ್ನು ಭಾಷೆಯ ವಿಚಾರಕ್ಕೆ ತಿರಸ್ಕರಿಸಲಾಗುವುದಿಲ್ಲ.&lt;/p&gt;&lt;p&gt;- ಪ್ರತಿಯೊಬ್ಬ ನಟಿಯೂ ಇದೇ ಮಾತು ಹೇಳ್ತಾರೆ, ಹೀಗಾದರೆ ಕನ್ನಡದಂಥಾ ಇಂಡಸ್ಟ್ರಿಗೆ ನಾಯಕಿಯರು ಸಿಗೋದು ಹೇಗೆ?&lt;/p&gt;&lt;p&gt;ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ದಿಗ್ಗಜರೇ ಇರೋದು. ಇಲ್ಲಿ ಯಾವುದಕ್ಕೂ ಕೊರತೆ ಆಗೋದಿಲ್ಲ. ನನ್ನ ಮೊದಲ ಸಿನಿಮಾ &lsquo;ವಜ್ರಕಾಯ&rsquo;ಕ್ಕೆ ಅತ್ಯುತ್ತಮ ಸ್ವಾಗತ ಸಿಕ್ಕಿತು. ಆ ಸಿನಿಮಾದ ನನ್ನ ಪಾತ್ರ ಪಟಾಕಾ ಪಾರ್ವತಿ ಮೂಲಕ ಜನ ಇನ್ನೂ ನನ್ನ ಗುರುತಿಸುತ್ತಾರೆ. ನಂಗೆ ಅತಿಯಾಸೆ. ಬಂದರೆ ಇನ್ನೊಂದು ಬ್ಯಾಂಗರ್&zwnj; ಜೊತೆಗೆ ಬರಬೇಕು. ಕನ್ನಡಿಗರಿಗೆ ಅರೆಬೆಂದ ಊಟ ಕೊಡೋದಕ್ಕೆ ಇಷ್ಟ ಇಲ್ಲ. ಕೊಟ್ರೆ ಮುದ್ದೆ, ನಾಟಿ ಕೋಳಿ ಸಾಂಬಾರ್&zwnj; ಅನ್ನೇ ಬಡಿಸ್ಬೇಕು.&lt;/p&gt;&lt;p&gt;- ಶೃಂಗೇರಿ ನಿಮ್ಮ ಊರು. ಅಲ್ಲಿಗೆ ಭೇಟಿ?&lt;/p&gt;&lt;p&gt;ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿರುವುದು ನೋಡಿ ತುಂಬ ಜನ ನಾನು ಆಂಧ್ರದಲ್ಲಿ ಸೆಟಲ್&zwnj; ಆಗಿದ್ದೀನಿ ಅಂದ್ಕೊಂಡಿದ್ದಾರೆ. ಆದರೆ ಬೆಂಗಳೂರು ಮತ್ತು ಶೃಂಗೇರಿಗಳಲ್ಲೇ ನನ್ನ ವಾಸ. ಖಾಸಗಿತನಕ್ಕೆ ಹೆಚ್ಚು ಒತ್ತು ಕೊಡುವ ಕಾರಣ ಹೋಗಿ ಬಂದಿದ್ದೆಲ್ಲ ಸೋಷಿಯಲ್&zwnj; ಮೀಡಿಯಾದಲ್ಲಿ ಹಾಕಿಕೊಳ್ಳೋದಿಲ್ಲ. ಕಡ್ಲೆ ಕಾಯಿ ಪರಿಷೆಯಲ್ಲಿ ಮಾಸ್ಕ್&zwnj; ಹಾಕ್ಕೊಂಡು ಓಡಾಡ್ತೀನಿ, ಬೆಂಗಳೂರಲ್ಲಿ ಯಾವ ಉತ್ಸವ ಇದ್ದರೂ ನೀವು ಸೂಕ್ಷ್ಮವಾಗಿ ಹುಡುಕಿದ್ರೆ ನಾನು ಕಂಡೇ ಕಾಣ್ತೀನಿ. ಆದರೆ ಕಣ್ಣು ನೋಡಿ ಪತ್ತೆ ಹಚ್ಚಬೇಕಷ್ಟೇ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/i-dont-want-to-serve-half-baked-films-to-kannada-audiences-nabha-natesh/articleshow-wmsquo7"/>
        </item>
    </channel>
</rss>
