<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Kannada Prabha</title>
        <link>https://www.kannadaprabha.in</link>
        <description><![CDATA[Kannada Prabha - No.1 News channel in Karnataka, which delivers Local and International news in Marathi language.]]></description>
        <image>
            <url>https://static-assets.asianetnews.com/images/ogimages/OG_Bangla.jpg</url>
            <width>143</width>
            <height>100</height>
            <link>https://www.kannadaprabha.in</link>
            <title>Kannada Prabha</title>
        </image>
        <lastBuildDate>Fri, 04 Sep 2026 11:55:54 +0530</lastBuildDate>
        <atom:link href="https://www.kannadaprabha.in/rss/entertainment-news" rel="self" type="application/rss+xml"/>
        <item>
            <title><![CDATA[ಬಿಗ್‌ಬಾಸ್‌ ಶೋಗೆ ಈವರೆಗೂ  ಅನುಮತಿ ಕೊಟ್ಟಿಲ್ಲ: ಸಚಿವ ರೆಡ್ಡಿ]]></title>
            <link>https://www.kannadaprabha.in/karnataka-news/bengaluru-news/no-permission-has-been-granted-for-the-bigg-boss-show-so-far-minister-reddy/articleshow-204ntdl</link>
            <guid isPermaLink="true">https://www.kannadaprabha.in/karnataka-news/bengaluru-news/no-permission-has-been-granted-for-the-bigg-boss-show-so-far-minister-reddy/articleshow-204ntdl</guid>
            <pubDate>Tue, 01 Sep 2026 11:34:29 +0530</pubDate>
            <description><![CDATA[&lt;p&gt;ಖಾಸಗಿ ವಾಹಿನಿ ನಡೆಸುವ ಬಿಗ್&zwnj;ಬಾಸ್&zwnj; ರಿಯಾಲಿಟಿ ಶೋ ಸಂಬಂಧ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಇಲಾಖೆಯಿಂದ ಈವರೆಗೆ ಯಾವುದೇ ಅನುಮತಿ ಪಡೆದಿಲ್ಲ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರಷ್ಟೇ ಅನುಮತಿ ನೀಡಲಾಗುವುದು&lt;/p&gt;]]></description>
            <media:content url="https://static-gi.asianetnews.com/images/01ktba9brar8txe3c4sf6gpmdn/ramalinga-reddy-karnataka-congress-resignation-portfolio-dispute-dk-shivakumar-biography-news-50-1780643835658.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt; ಬೆಂಗಳೂರು : &lt;/strong&gt;ಖಾಸಗಿ ವಾಹಿನಿ ನಡೆಸುವ ಬಿಗ್&zwnj;ಬಾಸ್&zwnj; ರಿಯಾಲಿಟಿ ಶೋ ಸಂಬಂಧ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಇಲಾಖೆಯಿಂದ ಈವರೆಗೆ ಯಾವುದೇ ಅನುಮತಿ ಪಡೆದಿಲ್ಲ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರಷ್ಟೇ ಅನುಮತಿ ನೀಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.&lt;/p&gt;&lt;h2&gt;ಪರಿಸರ ಇಲಾಖೆಯಿಂದ ಅನುಮತಿ ಪಡೆಯಬೇಕು&lt;/h2&gt;&lt;p&gt;ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಬಿಗ್&zwnj;ಬಾಸ್ ರಿಯಾಲಿಟಿ ಶೋ ನಡೆಸುವುದಕ್ಕೆ ಪರಿಸರ ಇಲಾಖೆಯಿಂದ ಅನುಮತಿ ಪಡೆಯಬೇಕು. ಕಳೆದ ವರ್ಷ ತ್ಯಾಜ್ಯ ನೀರು ಸಂಸ್ಕರಣೆ ನಿಯಮ ಪಾಲಿಸಿಲ್ಲ ಎಂಬ ಕಾರಣಕ್ಕಾಗಿ ಬಿಗ್&zwnj;ಬಾಸ್&zwnj; ರಿಯಾಲಿಟಿ ಶೋ ಆಯೋಜಕರಿಗೆ ನೋಟಿಸ್&zwnj; ನೀಡಲಾಗಿತ್ತು. ಈಗ ಮತ್ತೆ ರಿಯಾಲಿಟಿ ಶೋ ಆರಂಭಕ್ಕೆ ಸಂಬಂಧಿಸಿದಂತೆ ಅನುಮತಿ ಕೋರಿ ಇಲಾಖೆಗೆ ಮನವಿ ಸಲ್ಲಿಸಿಲ್ಲ ಎಂದರು.&lt;/p&gt;&lt;h3&gt;ಬಿಗ್&zwnj;ಬಾಸ್&zwnj; ಆಯೋಜಕರು ಅನುಮತಿ ಕೋರಿ ಮನವಿ&lt;/h3&gt;&lt;p&gt;ಬಿಗ್&zwnj;ಬಾಸ್&zwnj; ಆಯೋಜಕರು ಅನುಮತಿ ಕೋರಿ ಮನವಿ ಸಲ್ಲಿಸಿದರೆ, ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಒಂದು ವೇಳೆ ನಿಯಮ ಪಾಲನೆಯಾಗದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಜತೆಗೆ, ನಿಯಮ ಉಲ್ಲಂಘನೆ ಆಗಿದ್ದಲ್ಲಿ ನಿಗದಿತ ದಂಡ ವಿಧಿಸಿ ಅಧಿಕಾರಿಗಳು ಮುಂದಿನ ಪ್ರಕ್ರಿಯೆ ಮಾಡಲಿದ್ದಾರೆ ಎಂದು ಹೇಳಿದರು.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/karnataka-news/bengaluru-news/no-permission-has-been-granted-for-the-bigg-boss-show-so-far-minister-reddy/articleshow-204ntdl"/>
        </item>
        <item>
            <title><![CDATA[400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ತಮ್ಮದೇ ಆದ ಛಾಪು ಮೂಡಿಸಿದ ಸಾಹುಕಾರ್‌ ಜಾನಕಿ ನೆನಪು]]></title>
            <link>https://www.kannadaprabha.in/entertainment-news/remembering-sowcar-janaki/articleshow-3fr45am</link>
            <guid isPermaLink="true">https://www.kannadaprabha.in/entertainment-news/remembering-sowcar-janaki/articleshow-3fr45am</guid>
            <pubDate>Sat, 22 Aug 2026 11:45:29 +0530</pubDate>
            <description><![CDATA[&lt;p&gt;ಕನ್ನಡ ಸೇರಿ ಎಲ್ಲಾ ಭಾಷೆಗಳಲ್ಲೂ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ತಮ್ಮದೇ ಆದ ಛಾಪು ಮೂಡಿಸಿದ ಹಿರಿಯ ನಟಿ ಸಾಹುಕಾರ್&zwnj; ಜಾನಕಿ ಅವರು ನಿಧನರಾಗಿದ್ದಾರೆ. 1954ರಲ್ಲಿ ಮೂಡಿ ಬಂದ &lsquo;ದೇವಕನ್ನಿಕಾ&rsquo; ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಬಂದ ಅವರಿಗೆ ಅಕ್ಷರ ನಮನ.&lt;/p&gt;]]></description>
            <media:content url="https://static-gi.asianetnews.com/images/01m0jjezf3wqgc5n3gt3x3r917/vvhv-1787329740258.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಸಿನಿವಾರ್ತೆ&lt;/strong&gt;&lt;/h2&gt;&lt;p&gt;ಕನ್ನಡ ಸೇರಿ ಎಲ್ಲಾ ಭಾಷೆಗಳಲ್ಲೂ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ತಮ್ಮದೇ ಆದ ಛಾಪು ಮೂಡಿಸಿದ ಹಿರಿಯ ನಟಿ ಸಾಹುಕಾರ್&zwnj; ಜಾನಕಿ ಅವರು ನಿಧನರಾಗಿದ್ದಾರೆ. 1954ರಲ್ಲಿ ಮೂಡಿ ಬಂದ &lsquo;ದೇವಕನ್ನಿಕಾ&rsquo; ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಬಂದ ಅವರಿಗೆ ಅಕ್ಷರ ನಮನ.&lt;/p&gt;&lt;h2&gt;&lt;strong&gt;ನನ್ನ ತಾಯಿ ಸಾಹೇಬ ನೋಡಿ ಮೆಚ್ಚಿದ್ದರು: ಜಯಮಾಲ&lt;/strong&gt;&lt;/h2&gt;&lt;p&gt;ನಾನು ಸಾಹುಕಾರ್&zwnj; ಜಾನಕಿ ಅವರ ಜೊತೆಗೆ ನಟಿಸಲಿಲ್ಲ. ಆದರೆ, ಅವರೊಂದಿಗೆ ನಾನು ಉತ್ತಮ ಒಡನಾಟ ಇಟ್ಟುಕೊಂಡಿದ್ದೆ. ಕನ್ನಡ ಚಿತ್ರರಂಗದಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಅವರನ್ನು ನಾವು ಆಹ್ವಾನಿಸುತ್ತಿದ್ದೆವು. ಅವರೂ ಕೂಡ ಪ್ರೀತಿಯಿಂದ ಬರುತ್ತಿದ್ದರು. ತಮ್ಮ ಸೋದರಿ ಕೃಷ್ಣ ಕುಮಾರಿ ಜೊತೆಗೆ ನೆಲೆಸಿದ್ದ ಸಾಹುಕಾರ್&zwnj; ಜಾನಕಿ ಅವರು ಸಾಯಿಬಾಬಾ ಭಕ್ತೆಯಾಗಿದ್ದರು. ಮನೆಗೆ ಯಾರೇ ಹೋದರೂ ತಾವೇ ಅಡುಗೆ ಮಾಡಿ ಬಡಿಸುತ್ತಿದ್ದರು. ಭಾರತದ ಅಗ್ರ ನಾಯಕ ನಟರ ಜೊತೆಗೆ ನಟಿಸಿದ್ದ ಸಾಹುಕಾರ್&zwnj; ಜಾನಕಿ ಅವರು, ನನ್ನ &lsquo;ತಾಯಿ ಸಾಹೇಬ&rsquo; ಸಿನಿಮಾ ನೋಡಿ ಮೆಚ್ಚಿ ಮಾತನಾಡಿದ್ದರು. ನಾನು ಅವರನ್ನು &lsquo;ಅಮ್ಮ&rsquo; ಅಂತಲೇ ಕರೆಯುತ್ತಿದ್ದೆ.&lt;/p&gt;&lt;p&gt;ಅವರು ನನಗೆ ಹೇಳಿದ ಕೆಲವು ಮಾತುಗಳು ಮರೆಯಲಾರೆ. &lsquo;ಜಯಮಾಲ ಜೀವನದಲ್ಲಿ ಏನೇ ಮಾಡು, ಆದರೆ ಬದುಕಿದ್ದಾಗಲೇ ಮಕ್ಕಳಿಗೆ ಆಸ್ತಿಗಳನ್ನು ಡಿವೈಡ್ ಮಾಡಬಾರದು. ನಾವು ಸತ್ತ ಮೇಲೆ ಅವರೇ ಮಾಡಿಕೊಳ್ಳಬೇಕು&rsquo; ಎಂದಿದ್ದರು. ಅಂದರೆ ವಯಸ್ಸಾದ ಮೇಲೆ ಆಸ್ತಿ ಮಕ್ಕಳಿಗೆ ಕೊಟ್ಟು ಅವರಿಂದ ದೂರ ಇರಬಾರದು ಅನ್ನೋ ಯೋಚನೆ ಅವರದ್ದು. &lsquo;ತಡವಾದರೂ ಪರ್ವಾಗಿಲ್ಲ, ನಾನು ಸಾಯಕ್ಕೂ ಮೊದಲೇ ದೇವರ ಪ್ರಸಾದಂತೆ ಬಂತಲ್ಲ&rsquo; ಎಂದು ಹೇಳಿ ಸಾಹುಕಾರ್&zwnj; ಜಾನಕಿ ಅವರು ಮನಸಾರೆ ಸಂಭ್ರಮಿಸಿದ್ದು ಪದ್ಮಶ್ರೀ ಪ್ರಶಸ್ತಿ ಬಂದಾಗ.&lt;/p&gt;&lt;h3&gt;&lt;strong&gt;ಕತೆ ಕೇಳಿ ನಕ್ಕರು, ಡ್ಯಾನ್ಸ್&zwnj; ಮಾಡ್ಬೇಕೆಂದಾಗ ನಾಚಿಕೊಂಡ್ರು: ಕೋಮಲ್&zwnj;&lt;/strong&gt;&lt;/h3&gt;&lt;p&gt;ನನ್ನ ನಟನೆಯ &lsquo;ಪುಂಗಿದಾಸ&rsquo; ಚಿತ್ರದಲ್ಲಿ ಸಾಹುಕಾರ್&zwnj; ಜಾನಕಿ ಹಾಗೂ ಸುದರ್ಶನ್&zwnj; ಜೋಡಿಯಾಗಿ ನಟಿಸಿದ್ದರು. ನಾನೇ ನಿರ್ದೇಶಕರನ್ನು ಜಾನಕಮ್ಮ ಮನೆಗೆ ಕರೆದುಕೊಂಡು ಹೋಗಿ ಕತೆ ಹೇಳಿಸಿದ್ದೆ. ಕತೆ ಕೇಳಿ ತುಂಬಾ ನಕ್ಕರು. &lsquo;ಕಾಮಿಡಿ ಎಷ್ಟು ಚೆನ್ನಾಗಿದಿಯೋ&rsquo; ಎಂದು ಮೆಚ್ಚಿಕೊಂಡರು. &lsquo;ಈ ಚಿತ್ರದಲ್ಲಿ ನನಗೆ ಯಾರು ಜೋಡಿ&rsquo; ಅಂತ ಕೇಳಿದರು. ನಾನು ಸುದರ್ಶನ್&zwnj; ಅವರ ಹೆಸರು ಹೇಳಿದಾಗ, &lsquo;ಅಯ್ಯೋ ಅವನು ನನಗಿಂತ ಚಿಕ್ಕವನು ಕಣೋ&rsquo; ಎಂದರು. ನಾನು ಜಾನಕಿ ಅವರನ್ನು ಮೇಡಮ್&zwnj; ಅಂತ ಕರೆದಾಗ, &lsquo;ಅಮ್ಮ ಅಂತ ಕರೀರಿ ಸಾಕು&rsquo; ಎಂದ ಮಹಾನ್&zwnj; ತಾಯಿ ಗುಣದ ನಟಿ ಅವರು.&lt;/p&gt;&lt;p&gt;ಈ ಚಿತ್ರಕ್ಕಾಗಿ 30 ದಿನ ಡೇಟ್ ಕೊಟ್ಟಿದ್ದರು. ಸಂಭಾವನೆ ವಿಚಾರ ಕೇಳಿದರೆ, &lsquo;ನಾನು ಹಣಕ್ಕಾಗಿ ಈ ಚಿತ್ರದಲ್ಲಿ ಮಾಡುತ್ತಿಲ್ಲವೋ. ಕತೆ ಇಷ್ಟವಾಗಿ ಮಾಡುತ್ತಿದ್ದೇನೆ&rsquo; ಎಂದಿದ್ದರು. ಅವರು 30 ದಿನಕ್ಕೆ ತೆಗೆದುಕೊಂಡಿದ್ದು 1.5 ಲಕ್ಷ ರುಪಾಯಿ ಮಾತ್ರ. ನನಗೆ ಸೀಗಡಿ ಮೀನು ಇಷ್ಟ ಎಂದು ಗೊತ್ತಾಗಿ ಜಾನಕಮ್ಮ ಅವರೇ ಮನೆಯಿಂದ ಸೀಗಡಿ ಅಡುಗೆ ಮಾಡಿಕೊಂಡು ಬರುತ್ತಿದ್ದರು. ಚಿತ್ರರಂಗದ ದೇವತೆ ಜೊತೆಗೆ ತೆರೆ ಹಂಚಿಕೊಂಡ ಭಾಗ್ಯವಂತ ನಾನು.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/remembering-sowcar-janaki/articleshow-3fr45am"/>
        </item>
        <item>
            <title><![CDATA[ನಕಲಿಗಿಂತ ಅಸಲಿಗೆ ಬೆಲೆ ಜಾಸ್ತಿ : ಯಶ್‌]]></title>
            <link>https://www.kannadaprabha.in/entertainment-news/the-original-is-more-valuable-than-the-imitation-yash/articleshow-5upr95f</link>
            <guid isPermaLink="true">https://www.kannadaprabha.in/entertainment-news/the-original-is-more-valuable-than-the-imitation-yash/articleshow-5upr95f</guid>
            <pubDate>Mon, 31 Aug 2026 12:54:13 +0530</pubDate>
            <description><![CDATA[&lt;p&gt;ಮಿಶ್ರ ಪ್ರತಿಕ್ರಿಯೆಗಳ ನಡುವೆಯೇ ಯಶ್&zwnj; ಅವರ &lsquo;ಟಾಕ್ಸಿಕ್&rsquo; ಸಿನಿಮಾದ ಕಲೆಕ್ಷನ್&zwnj; 250 ಕೋಟಿ ರು. ದಾಟಿದೆ.&lt;/p&gt;&lt;p&gt;ಇನ್ನೊಂದೆಡೆ ಸೋಷಿಯಲ್&zwnj; ಮೀಡಿಯಾದಲ್ಲಿ ಯಶ್&zwnj; ಅವರ ಬಯೋ ಟ್ರೆಂಡಿಂಗ್&zwnj; ಆಗಿದೆ.&lt;/p&gt;]]></description>
            <media:content url="https://static-gi.asianetnews.com/images/01m1b2qdf1md9svdwzbpj1qq9j/yash-toxic-overseas-collection-1788152100321.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt; ಸಿನಿವಾರ್ತೆ&lt;/strong&gt;&lt;/h2&gt;&lt;p&gt;ಮಿಶ್ರ ಪ್ರತಿಕ್ರಿಯೆಗಳ ನಡುವೆಯೇ ಯಶ್&zwnj; ಅವರ &lsquo;ಟಾಕ್ಸಿಕ್&rsquo; ಸಿನಿಮಾದ ಕಲೆಕ್ಷನ್&zwnj; 250 ಕೋಟಿ ರು. ದಾಟಿದೆ.&lt;/p&gt;&lt;p&gt;ಇನ್ನೊಂದೆಡೆ ಸೋಷಿಯಲ್&zwnj; ಮೀಡಿಯಾದಲ್ಲಿ ಯಶ್&zwnj; ಅವರ ಬಯೋ ಟ್ರೆಂಡಿಂಗ್&zwnj; ಆಗಿದೆ. ತನ್ನ ಇನ್&zwnj;ಸ್ಟಾಗ್ರಾಂ ಹಾಗೂ ಟ್ವಿಟರ್&zwnj;ಗಳ ಪ್ರೊಫೈಲ್&zwnj; ಬಯೋದಲ್ಲಿ ಯಶ್&zwnj;, &lsquo;ನೀವು ನೀವಾಗಿಯೇ ಇರಿ, ಏಕೆಂದರೆ ನಕಲಿಗಿಂತ ಅಸಲಿಗೆ ಬೆಲೆ ಜಾಸ್ತಿ&rsquo; ಎಂದು ಬರೆದುಕೊಂಡಿದ್ದಾರೆ.&lt;/p&gt;&lt;h3&gt;ಯಶ್&zwnj; ಅಭಿಮಾನಿ ವಲಯದಲ್ಲಿ ಸಂಚಲನ&lt;/h3&gt;&lt;p&gt;ಇದು ಯಶ್&zwnj; ಅಭಿಮಾನಿ ವಲಯದಲ್ಲಿ ಸಂಚಲನ ಮೂಡಿಸಿದೆ. ಸಿನಿಮಾದ ಬಗೆಗಿನ ನೆಗೆಟಿವ್&zwnj; ಟ್ರೋಲ್&zwnj;ಗಳಿಗೆ ರಾಕಿ ಭಾಯ್&zwnj; ಅಭಿಮಾನಿಗಳು ಯಶ್&zwnj; ಬಯೋದ ಸ್ಕ್ರೀನ್&zwnj; ಶಾಟ್ ಶೇರ್&zwnj; ಮಾಡಿ, ಒರಿಜಿನಲ್&zwnj; ಪ್ರಯತ್ನಗಳಿಗೆ ಸೋಲಿಲ್ಲ ಎಂದು ಪ್ರತಿಕ್ರಿಯೆ ಕೊಡುತ್ತಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/the-original-is-more-valuable-than-the-imitation-yash/articleshow-5upr95f"/>
        </item>
        <item>
            <title><![CDATA[ಯಶ್: ಮೂರು ರೂಪ, ಮೂರು ಛಾಯೆ-ವಿಷ್ಣು ನಟನೆಯ ವಿಜಯ್ ವಿಕ್ರಮ್ ಚಿತ್ರಕ್ಕೆ ಟಾಕ್ಸಿಕ್ ಹೋಲಿಕೆ]]></title>
            <link>https://www.kannadaprabha.in/entertainment-news/yash-three-roles-three-shade/articleshow-6ky76y5</link>
            <guid isPermaLink="true">https://www.kannadaprabha.in/entertainment-news/yash-three-roles-three-shade/articleshow-6ky76y5</guid>
            <pubDate>Fri, 14 Aug 2026 13:23:52 +0530</pubDate>
            <description><![CDATA[&lt;p&gt;&lsquo;ಟಾಕ್ಸಿಕ್&rsquo; ಚಿತ್ರದ ಟ್ರೇಲರ್ ಬಂದ ಬಳಿಕ ವಿಶ್ಲೇಷಣೆಗಳು ಆರಂಭವಾಗಿವೆ. ಮುಖ್ಯವಾಗಿ ರಾಯ ಮತ್ತು ಟಿಕೆಟ್ ಪಾತ್ರಧಾರಿಯ ಕುರಿತು ಅನೇಕ ಪರಿಕಲ್ಪನೆಗಳು ಓಡಾಡುತ್ತಿವೆ. ಅದರಲ್ಲಿ ತುಂಬಾ ಇಂಟರೆಸ್ಟಿಂಗ್&zwnj; ಆದ ಪರಿಕಲ್ಪನೆ ಎಂದರೆ ವಿಷ್ಣುವರ್ಧನ್ ನಟನೆಯ &lsquo;ವಿಜಯ ವಿಕ್ರಮ&rsquo; ಚಿತ್ರದ ಹೋಲಿಕೆ.&lt;/p&gt;]]></description>
            <media:content url="https://static-gi.asianetnews.com/images/01kzz54rxbhq2byhk0zatg4gcp/yash-toxic-cbfc-certificate-1786678240171.jpg" type="image/jpeg" height="390" width="690"/>
            <content:encoded><![CDATA[&lt;h3&gt;ಟ್ರೇಲರ್ ಬಂದ ಬಳಿಕ ವಿಶ್ಲೇಷಣೆಗಳು ಆರಂಭ&lt;/h3&gt;&lt;p&gt;&lsquo;ಟಾಕ್ಸಿಕ್&rsquo; ಚಿತ್ರದ ಟ್ರೇಲರ್ ಬಂದ ಬಳಿಕ ವಿಶ್ಲೇಷಣೆಗಳು ಆರಂಭವಾಗಿವೆ. ಮುಖ್ಯವಾಗಿ ರಾಯ ಮತ್ತು ಟಿಕೆಟ್ ಪಾತ್ರಧಾರಿಯ ಕುರಿತು ಅನೇಕ ಪರಿಕಲ್ಪನೆಗಳು ಓಡಾಡುತ್ತಿವೆ. ಅದರಲ್ಲಿ ತುಂಬಾ ಇಂಟರೆಸ್ಟಿಂಗ್&zwnj; ಆದ ಪರಿಕಲ್ಪನೆ ಎಂದರೆ ವಿಷ್ಣುವರ್ಧನ್ ನಟನೆಯ &lsquo;ವಿಜಯ ವಿಕ್ರಮ&rsquo; ಚಿತ್ರದ ಹೋಲಿಕೆ.&lt;/p&gt;&lt;p&gt;&lsquo;ವಿಜಯ ವಿಕ್ರಮ&rsquo; ಸಿನಿಮಾದಲ್ಲಿ ವಿಷ್ಣುವರ್ಧನ್ ದ್ವಿಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ತಂದೆ ವಿಕ್ರಮ್&zwnj; ಎಸ್ಟೇಟ್ ಮ್ಯಾನೇಜರ್ ಮಗಳನ್ನು ಅತ್ಯಾ*ರ ಮಾಡಿರುತ್ತಾನೆ. ಹಾಗೆ ಹುಟ್ಟಿದ ಮಗ ವಿಜಯ್. ಅನ್ಯಾಯ ಮಾಡಿದ ವಿಕ್ರಮ್ ವಿರುದ್ಧ ಹೋರಾಟಕ್ಕೆ ಸಿದ್ಧನಾಗುತ್ತಾನೆ. ಅದೇ ಕತೆಯನ್ನು ಟಾಕ್ಸಿಕ್&zwnj;ಗೂ ಹೋಲಿಕೆ ಮಾಡಲಾಗುತ್ತಿದೆ. ಟ್ರೇಲರ್&zwnj;ನಲ್ಲಿ ನೋಡಿದರೆ ಯಶ್ ನಟನೆಯ ರಾಯ ಮತ್ತು ಕಿಯಾರ ಅಡ್ವಾಣಿ ನಟನೆಯ ನಾದಿಯಾ ಪಾತ್ರಕ್ಕೂ ಸಂಬಂಧ ಇರುವಂತೆ ಅನ್ನಿಸುತ್ತಿದೆ. ಅಲ್ಲದೇ ಸರ್ಕಸ್ ಹಿನ್ನೆಲೆಯೂ ಇರುವುದರಿಂದ ಟಿಕೆಟ್ ಪಾತ್ರ ಆ ಜೋಡಿಯ ಮಗನಿರಬಹುದು ಎಂಬ ಊಹೆ ಪ್ರೇಕ್ಷಕ ಅಭಿಮಾನಿಗಳದು.&lt;/p&gt;&lt;p&gt;ಹಾಗಂತ ಇದಕ್ಕೆ ಯಾವುದೇ ಅಧಿಕೃತ ಸ್ಪಷ್ಟನೆ ಇಲ್ಲ. ಚಿತ್ರತಂಡ ಏನು ಬೇಕಾದರೂ ಮಾತಾಡಿಕೊಳ್ಳಿ ಅಂತ ಸುಮ್ಮನೆ ಇದೆ.&lt;/p&gt;&lt;p&gt;ಹಾಗೆ ನೋಡಿದರೆ ಈ ತಂದೆಯ ವಿರುದ್ಧ ಹೋರಾಡಲು ಬರುವ ಮಗನ ಪರಿಕಲ್ಪನೆ ಹೊಸತೇನೂ ಅಲ್ಲ. ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ &lsquo;ಬಭ್ರುವಾಹನ&rsquo; ಚಿತ್ರದಲ್ಲಿಯೂ ಇದೇ ಕತೆ. ತಂದೆ ಅರ್ಜುನನ ವಿರುದ್ಧ ಬಭ್ರುವಾಹನನ ಯುದ್ಧವೇ ಆ ಚಿತ್ರದ ಹೈಲೈಟ್. ಅಲ್ಲಿಯೂ ಡಾ. ರಾಜ್&zwnj;ಕುಮಾರ್ ಅವರು ತಂದೆ ಅರ್ಜುನ ಹಾಗೂ ಮಗ ಬಭ್ರುವಾಹನನಾಗಿ ದ್ವಿಪಾತ್ರದಲ್ಲಿ ಕ್ರಾಂತಿ ಮಾಡಿದ್ದರು.&lt;/p&gt;&lt;p&gt;ಈ ಪರಿಕಲ್ಪನೆಯನ್ನು &lsquo;ಟಾಕ್ಸಿಕ್&rsquo;ನಲ್ಲಿಯೂ ತರಲಾಗಿದೆಯೇ ಅನ್ನುವುದು ಸಿನಿಮಾ ಬಿಡುಗಡೆಯಾದ ಬಳಿಕವಷ್ಟೇ ತಿಳಿಯಬೇಕಿದೆ.&lt;/p&gt;&lt;h2&gt;ದೇಶದ ಪ್ರಸಿದ್ಧ ಕಾರ್ಯಕ್ರಮಗಳಲ್ಲಿ ಯಶ್ ಟಾಕ್ಸಿಕ್&lt;/h2&gt;&lt;p&gt;ಯಶ್ &lsquo;ಟಾಕ್ಸಿಕ್&zwnj;&rsquo; ಸಿನಿಮಾದ ಪ್ರಚಾರವೇ ವಿಭಿನ್ನವಾಗಿದೆ. ದೇಶದ ಅತ್ಯಂತ ಪ್ರಸಿದ್ಧ ಟಿವಿ ಶೋಗಳಲ್ಲಿ ಯಶ್ ಟಾಕ್ಸಿಕ್ ಸುದ್ದಿಯಾಗುತ್ತಿದೆ. ಅದರಲ್ಲೂ ವಿಶೇಷನಾಗಿ ಅಮಿತಾಬ್&zwnj; ಬಚ್ಚನ್&zwnj; ಅವರು ನಡೆಸಿಕೊಡುವ &lsquo;ಕೌನ್&zwnj; ಬನೇಗ ಕರೋಡ್&zwnj;ಪತಿ&rsquo; ಕಾರ್ಯಕ್ರಮದಲ್ಲೂ ಯಶ್&zwnj; ಕುರಿತಾದ ಪ್ರಶ್ನೆ ಬಂದಿದೆ. ಈ ಶೋದಲ್ಲಿ ಭಾರತದ ಸೂಪರ್&zwnj;ಸ್ಟಾರ್&zwnj;ಗಳಿಗೆ ಸಂಬಂಧಿಸಿ ಪ್ರಶ್ನೆಯೊಂದನ್ನು ಕೇಳಲಾಗಿದ್ದು, &lsquo;ರಜನಿಕಾಂತ್&zwnj; ಸೂಪರ್&zwnj; ಸ್ಟಾರ್, ಚಿರಂಜೀವಿ ಮೆಗಾ ಸ್ಟಾರ್&zwnj;, ಪವನ್&zwnj; ಕಲ್ಯಾಣ್&zwnj; ಪವರ್&zwnj; ಸ್ಟಾರ್&zwnj; ಆದರೆ ಯಶ್&zwnj; ಏನು?&rsquo; ಎಂಬ ಪ್ರಶ್ನೆ ಕೇಳಲಾಗಿತ್ತು. ಸ್ಪರ್ಧಿ &lsquo;ರಾಕಿಂಗ್&zwnj; ಸ್ಟಾರ್&zwnj;&rsquo; ಎನ್ನುವ ಮೂಲಕ ಸರಿಯುತ್ತರ ನೀಡಿದರು.&lt;/p&gt;&lt;p&gt;ಈ ವೇಳೆ ಅಮಿತಾಬ್&zwnj; ಬಚ್ಚನ್&zwnj; ಅವರು ಯಶ್&zwnj; ಸಿನಿಮಾ ಜರ್ನಿಯ ಬಗ್ಗೆ ಮಾತನಾಡಿ ಈ ಮಟ್ಟಿಗೆ ಬೆಳೆದ ಯಶ್&zwnj; ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಜತ್ ಶರ್ಮಾ ಅವರ &lsquo;ಆಪ್&zwnj; ಕಿ ಅದಾಲತ್&rsquo; ಕಾರ್ಯಕ್ರಮದಲ್ಲಿಯೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆ ಬೆಂಗಳೂರಿನ ಮೆಟ್ರೋ ರೈಲುಗಳಲ್ಲಿಯೂ ಟಾಕ್ಸಿಕ್&zwnj; ಪೋಸ್ಟರ್&zwnj;ಗಳೇ ರಾರಾಜಿಸುತ್ತಿವೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/yash-three-roles-three-shade/articleshow-6ky76y5"/>
        </item>
        <item>
            <title><![CDATA[ವಿಶ್ವನಾಯಕ ಯಶ್ ಮತ್ತು ಟಾಕ್ಸಿಕ್ ಎಂಬ ಮಾಯಾವಾಸ್ತವ]]></title>
            <link>https://www.kannadaprabha.in/entertainment-news/global-star-yash-and-the-magical-realism-of-toxic/articleshow-6xz9hu7</link>
            <guid isPermaLink="true">https://www.kannadaprabha.in/entertainment-news/global-star-yash-and-the-magical-realism-of-toxic/articleshow-6xz9hu7</guid>
            <pubDate>Fri, 28 Aug 2026 12:15:25 +0530</pubDate>
            <description><![CDATA[&lt;p&gt;ಯಶ್ ಈಗ ವಿಶ್ವನಾಯಕ. ಅವರು ಕನ್ನಡ ಸಿನಿಮಾವನ್ನು ಜಗತ್ತಿನ ದೊಡ್ಡ ಮಾರುಕಟ್ಟೆಯ ಮುಂದೆ ನಿಲ್ಲಿಸಬಲ್ಲರು. ಇದು ಸಾಮಾನ್ಯವಾದ ಕೆಲಸ ಅಲ್ಲ. ಕಥೆ, ಮಾತುಕತೆ, ಅಭಿಪ್ರಾಯ, ಒಳ್ಳೆಯ ಸಿನಿಮಾ, ಕೆಟ್ಟ ಸಿನಿಮಾ ಎಂಬೆಲ್ಲ ಮಾತುಗಳನ್ನು ಮೀರಿದ ಸಾಧನೆ ಇದು.&lt;/p&gt;]]></description>
            <media:content url="https://static-gi.asianetnews.com/images/01m1369r3mp5wtajfdhvqc1shk/yash-toxic-movie-dialogues-1787887411316.jpg" type="image/jpeg" height="390" width="690"/>
            <content:encoded><![CDATA[&lt;p&gt;ಯಶ್ ಈಗ ವಿಶ್ವನಾಯಕ. ಅವರು ಕನ್ನಡ ಸಿನಿಮಾವನ್ನು ಜಗತ್ತಿನ ದೊಡ್ಡ ಮಾರುಕಟ್ಟೆಯ ಮುಂದೆ ನಿಲ್ಲಿಸಬಲ್ಲರು. ಇದು ಸಾಮಾನ್ಯವಾದ ಕೆಲಸ ಅಲ್ಲ. ಕಥೆ, ಮಾತುಕತೆ, ಅಭಿಪ್ರಾಯ, ಒಳ್ಳೆಯ ಸಿನಿಮಾ, ಕೆಟ್ಟ ಸಿನಿಮಾ ಎಂಬೆಲ್ಲ ಮಾತುಗಳನ್ನು ಮೀರಿದ ಸಾಧನೆ ಇದು. ಕನ್ನಡ ನಟನ ಚಿತ್ರಕ್ಕಾಗಿ ಭಾರತದ ಬೇರೆ ಭಾಷೆಯ ಪ್ರೇಕ್ಷಕರು ಕಾಯುತ್ತಾರೆ ಅಂದರೆ ಇದು ಕನ್ನಡ ಚಿತ್ರರಂಗದ ಸಂಪತ್ತು.&lt;/p&gt;&lt;h2&gt;&lt;strong&gt;- ಜೋಗಿ&lt;/strong&gt;&lt;/h2&gt;&lt;p&gt;ಒಂದು ಸಿನಿಮಾವನ್ನು ಕೊಲ್ಲಲು ಕೆಟ್ಟ ಕಥೆ ಬೇಕಾಗಿಲ್ಲ. ಕೆಲವೊಮ್ಮೆ ತುಂಬಾ ದೊಡ್ಡ ಬಜೆಟ್ ಸಾಕು.&lt;/p&gt;&lt;p&gt;ಇದು ಟಾಕ್ಸಿಕ್ ಚಿತ್ರದ ಕುರಿತ ಹೇಳಿಕೆ ಅಲ್ಲ. ಟಾಕ್ಸಿಕ್ ಬಿಡುಗಡೆಯ ನಂತರ ಕನ್ನಡ ಚಿತ್ರರಂಗದಲ್ಲಿ ಹುಟ್ಟಿಕೊಂಡಿರುವ ಭ್ರಮೆಯ ಕುರಿತ ಮಾತು. ಒಂದು ಕನ್ನಡ ಸಿನಿಮಾ ಮೊದಲ ದಿನವೇ ನೂರು ಕೋಟಿ ಕ್ಲಬ್ ಸೇರಬಹುದು ಎಂಬುದನ್ನು ಟಾಕ್ಸಿಕ್ ಮತ್ತೊಮ್ಮೆ ತೋರಿಸಿದೆ. ಯಶ್ ಅವರ ಪರದೆಯ ಮೇಲಿನ ನಿಲುವು, ಆ್ಯಕ್ಷನ್ ಮತ್ತು ದೃಶ್ಯ ವೈಭವವನ್ನು ಮೆಚ್ಚುವವರಿದ್ದಾರೆ, ಕಥೆ, ನಿರೂಪಣೆ, ಎಡಿಟಿಂಗ್ ಮತ್ತು ಚಿತ್ರದ ಉದ್ದದ ಬಗ್ಗೆ ಪ್ರಶ್ನೆ ಎತ್ತುವವರೂ ಇದ್ದಾರೆ. ಇದರಲ್ಲಿ ಯಾವುದೇ ವೈರುಧ್ಯ ಹುಡುಕಬೇಕಾಗಿಲ್ಲ.&lt;/p&gt;&lt;p&gt;ಇವತ್ತು ಸಿನಿಮಾ ಬಿಡುಗಡೆಯಾಗುವ ಮೊದಲೇ ಬಾಕ್ಸ್ ಆಫೀಸ್ ಲೆಕ್ಕಾಚಾರ ಶುರುವಾಗುತ್ತದೆ. ಎಷ್ಟು ಟಿಕೆಟ್ ಮಾರಾಟವಾಗಿದೆ, ಎಷ್ಟು ಕೋಟಿ ಅಡ್ವಾನ್ಸ್ ಬಂದಿದೆ, ಮೊದಲ ದಿನ ಎಷ್ಟು, ಮೊದಲ ವಾರಾಂತ್ಯ ಎಷ್ಟು, ಯಾವ ರಾಜ್ಯದಲ್ಲಿ ಎಷ್ಟು, ಯಾವ ಭಾಷೆಯಲ್ಲಿ ಎಷ್ಟು? ಅಂದರೆ ಈಗ ಸಿನಿಮಾ ಅಂದರೆ ಒಂದೊಳ್ಳೆಯ ಕಥೆಯಷ್ಟೇ ಅಲ್ಲ, ಅದನ್ನು ಮೀರಿದ ಲೆಕ್ಕಾಚಾರ ಕೂಡ. ಈ ಲೆಕ್ಕಾಚಾರ ತಪ್ಪಲ್ಲ. ಸಿನಿಮಾ ಒಂದು ಉದ್ಯಮ. ಅದರಲ್ಲಿ ಹಣ ಇರಬೇಕು, ಹೂಡಿಕೆ ಮರಳಬೇಕು, ನಿರ್ಮಾಪಕ ಬದುಕಬೇಕು. ಆದರೆ ಸಿನಿಮಾ ಕೇವಲ ಇಂಥ ಲೆಕ್ಕಾಚಾರವಷ್ಟೇ ಆಗಿಬಿಟ್ಟಾಗ ಸಮಸ್ಯೆ ಶುರುವಾಗುತ್ತದೆ.&lt;/p&gt;&lt;p&gt;ಟಾಕ್ಸಿಕ್ ಬಿಡುಗಡೆಗೂ ಮುನ್ನವೇ ಅದರ ಮಾರುಕಟ್ಟೆಯ ಲೆಕ್ಕ ಶುರುವಾಗಿತ್ತು. ಯಶ್ ಅವರ ಹಿಂದಿನ ಚಿತ್ರಗಳ ಮಾರುಕಟ್ಟೆ, ಅವರ ಅಭಿಮಾನಿ ಬಳಗ, ಬಹುಭಾಷಾ ಬಿಡುಗಡೆ, ಚಿತ್ರದ ಪ್ರಮಾಣ ಇವೆಲ್ಲ ಸೇರಿ ಸಿನಿಮಾವನ್ನು ಬಿಡುಗಡೆಯಾಗುವ ಮೊದಲೇ ಒಂದು ಮೆಗಾಪ್ರಾಡಕ್ಟ್ ಮಾಡಿಬಿಟ್ಟಿದ್ದವು. ಇದನ್ನು ನಾವು ಯಶ್ ಅವರ ಮಾರ್ಕೆಟ್ ವ್ಯಾಲ್ಯೂ ಅಂದುಕೊಳ್ಳಬಹುದು. ಇಂಡಸ್ಟ್ರಿ ಕತೆಯನ್ನು ನೋಡುವುದಿಲ್ಲ, ವ್ಯಾಪಾರದ ಸಾಧ್ಯತೆಯನ್ನು ನೋಡುತ್ತದೆ. ಸ್ಟಾರ್&zwnj;ನ ಮಾರುಕಟ್ಟೆಯನ್ನು ಸಿನಿಮಾ ಉಳಿಸಬಹುದು, ಆದರೆ ಸಿನಿಮಾ ಇಲ್ಲದಿದ್ದರೆ ಸ್ಟಾರ್&zwnj;ನ ಮಾರುಕಟ್ಟೆ ಉಳಿಯಲಾರದು.&lt;/p&gt;&lt;p&gt;ಕೆಜಿಎಫ್ ಕನ್ನಡ ಸಿನಿಮಾದ ಇತಿಹಾಸವನ್ನು ಬದಲಿಸಿತು. ಅದು ಕನ್ನಡ ಸಿನಿಮಾಕ್ಕೆ ಹೊರಗೆ ಮಾರುಕಟ್ಟೆ ಇದೆ ಎಂದು ಸ್ಯಾಂಡಲ್&zwnj;ವುಡ್ ನಂಬುವಂತೆ ಮಾಡಿತು. ಕನ್ನಡದ ಸಿನಿಮಾ ಜಗತ್ತನ್ನೇ ಗೆಲ್ಲಬಹುದು ಎಂಬ ನಂಬಿಕೆ ಹುಟ್ಟಿತು. ಆದರೆ ಬಹುತೇಕರು ಕೆಜಿಎಫ್ ಎಂದರೆ ಕಪ್ಪು ಬಣ್ಣ, ದೊಡ್ಡ ಕಾರು, ದೊಡ್ಡ ಗನ್, ದೊಡ್ಡ ಕಟ್ಟಡ, ದೊಡ್ಡ ವಿಲನ್, ದೊಡ್ಡ ನಾಯಕ, ದೊಡ್ಡ ಡೈಲಾಗ್, ಅಬ್ಬರಿಸುವ ಹಿನ್ನೆಲೆ ಸಂಗೀತ ಎಂದುಕೊಂಡರು. ಕೆಜಿಎಫ್ ಅನ್ನು ಗೆಲ್ಲಿಸಿದ್ದು ಅದರ ಗಾತ್ರ ಮಾತ್ರವಲ್ಲ. ಅದರೊಳಗಿದ್ದ ಹಸಿವು, ಅದರ ಪಾತ್ರಗಳ ಮಹತ್ವಾಕಾಂಕ್ಷೆ, ಅದರ ಕಥೆಯ ವೇಗ, ಅದರ ದೃಶ್ಯಕಲ್ಪನೆ ಮತ್ತು ಅದನ್ನು ಹೇಳುವ ಧೈರ್ಯ. ಗೆಲುವಿನ ಸೂತ್ರವನ್ನು ನಕಲು ಮಾಡಬಹುದು, ಆದರೆ ಆ ಹಸಿವನ್ನು ನಕಲು ಮಾಡಲಾಗುವುದಿಲ್ಲ. ಕೆಜಿಎಫ್&zwnj;ನ ನಂತರ ಬಂದ ಚಿತ್ರಗಳಲ್ಲಿ ಅಗಾಧತೆ ಇತ್ತು, ಕೆಜಿಎಫ್ ಚಿತ್ರದ ಹಸಿವು ಇರಲಿಲ್ಲ.&lt;/p&gt;&lt;p&gt;ಟಾಕ್ಸಿಕ್ ಚಿತ್ರವನ್ನು ನಾವು ಈ ದಿಕ್ಕಿನಲ್ಲಿ ಚರ್ಚಿಸಬೇಕಾಗಿದೆ. ಅದು ಎಷ್ಟು ಕೋಟಿ ಗಳಿಸುತ್ತದೆ ಎಂಬುದಕ್ಕಿಂತ ಅದು ಕನ್ನಡ ಸಿನಿಮಾಗಳ ಆರ್ಥಿಕತೆಯ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದು ಮುಖ್ಯ. ದೊಡ್ಡ ಸ್ಟಾರ್, ದೊಡ್ಡ ಬಜೆಟ್, ಬಹುಭಾಷಾ ಮಾರುಕಟ್ಟೆ, ಜಾಗತಿಕ ಬಿಡುಗಡೆ, ದೊಡ್ಡ ಪ್ರಚಾರ, ಮೊದಲ ದಿನವೇ ದೊಡ್ಡ ಮೊತ್ತವನ್ನು ವಾಪಸ್ ಪಡೆಯುವ ಒತ್ತಡ -ಇವೆಲ್ಲ ಒಂದು ಸಿನಿಮಾ ನಿರ್ಮಾಣದ ಮೇಲೆ ಪ್ರಭಾವ ಬೀರುತ್ತವೆ. ನಿರ್ದೇಶಕನ ದಾರಿ ತಪ್ಪಿಸುತ್ತವೆ. ನಟನ ಹೆಗಲ ಮೇಲೆ ಭಾರ ಹೊರಿಸುತ್ತವೆ. ಒಂದು ಹಂತದ ನಂತರ ಸಿನಿಮಾ ಮಾಡುವುದಕ್ಕಿಂತ ಸಿನಿಮಾ ಮಾರಾಟ ಮಾಡುವುದೇ ಮುಖ್ಯವಾಗಿಬಿಟ್ಟರೆ, ಸಿನಿಮಾ ತನ್ನ ಸಹಜ ಸ್ವಭಾವವನ್ನು ಕಳೆದುಕೊಳ್ಳುತ್ತದೆ. ಕಥೆಗಿಂತ ಟ್ರೇಲರ್ ಮುಖ್ಯವಾಗುತ್ತದೆ. ಸಿನಿಮಾದ ಆಯಸ್ಸಿಗಿಂತ ಮೊದಲ ಮೂರು ದಿನಗಳ ಗಳಿಕೆ ಮುಖ್ಯವಾಗುತ್ತದೆ. ಪಾತ್ರಗಳಿಗಿಂತ ಸ್ಟಾರ್ ಇಮೇಜ್ ಮುಖ್ಯವಾಗುತ್ತದೆ. ನಿರ್ದೇಶಕನ ದೃಷ್ಟಿಗಿಂತ ಮಾರುಕಟ್ಟೆಯ ನಿರೀಕ್ಷೆ ಮುಖ್ಯವಾಗುತ್ತದೆ. ಆಗ ನಾವು ಸಿನಿಮಾ ಮಾಡುತ್ತಿರುವುದಿಲ್ಲ, ನಾವು ಒಂದು ದುಬಾರಿ ಪ್ರಾಡಕ್ಟನ್ನು ತಯಾರಿಸುತ್ತಿರುತ್ತೇವೆ.&lt;/p&gt;&lt;p&gt;ದೊಡ್ಡ ಬಜೆಟ್&zwnj;ನ ದೊಡ್ಡ ಸಮಸ್ಯೆಯೇ ಇದು. ಒಂದು ಸಿನಿಮಾ ನೂರು ಕೋಟಿ ರೂಪಾಯಿಗೆ ತಯಾರಾದಾಗ ನಿರ್ದೇಶಕನಿಗೆ ಇರುವ ಸ್ವಾತಂತ್ರ್ಯ ಅದೇ ಸಿನಿಮಾದ ಬಜೆಟ್ಟು ಐನೂರು ಕೋಟಿ ರೂಪಾಯಿ ಮುಟ್ಟಿದಾಗ ಕಡಿಮೆಯಾಗುತ್ತದೆ. ಹಾಕಿದ ಹಣ ವಾಪಸ್ ತರಬೇಕು. ಹೂಡಿಕೆದಾರನಿಗೆ ಉತ್ತರ ಕೊಡಬೇಕು. ವಿತರಕನಿಗೆ ಉತ್ತರ ಕೊಡಬೇಕು. ಸ್ಟಾರ್&zwnj;ನ ಮಾರುಕಟ್ಟೆಯನ್ನು ಕಾಪಾಡಬೇಕು. ಪ್ರೇಕ್ಷಕರ ನಿರೀಕ್ಷೆಯನ್ನು ತಲುಪಬೇಕು. ಓಟಿಟಿ ಹಕ್ಕುಮಾರಾಟ ಮಾಡಬೇಕು. ಹೀಗಾಗಿ ನಿರ್ದೇಶಕನ ಮುಂದೆ &lsquo;ನಾನು ಏನು ಹೇಳಬೇಕು?&rsquo; ಎಂಬ ಪ್ರಶ್ನೆಗಿಂತ &lsquo;ನನ್ನ ಸಿನಿಮಾವನ್ನು ಹೇಗೆ ಮಾರಾಟ ಮಾಡಬೇಕು?&rsquo; ಎಂಬ ಪ್ರಶ್ನೆ ಮೂಡಬಹುದು. ಇದು ಕಲೆಗೆ ಅಪಾಯಕಾರಿ. ಏಕೆಂದರೆ ಕಲೆ ಒಂಚೂರು ಹುಚ್ಚುತನವನ್ನು ಕೇಳುತ್ತದೆ, ಒಂದಿಷ್ಟು ಎಡವಟ್ಟುಗಳ ನಡುವೆಯೇ ಹುಟ್ಟುತ್ತದೆ. ದೊಡ್ಡ ಬಜೆಟ್ ವ್ಯಾಮೋಹದ ವಿರೋಧಿ, ಪರ್ಫೆಕ್ಷನ್ ಪ್ರೇಮಿ.&lt;/p&gt;&lt;p&gt;ಹಿರಿಯ ನಿರ್ದೇಶಕ ಟಿಎನ್ ಸೀತಾರಾಮ್ ಒಂದು ಪ್ರಶ್ನೆಯನ್ನು ಮುಂದಿಟ್ಟಿದ್ದರು. ಐನೂರು ಕೋಟಿ ಬಜೆಟ್ಟಿನ ಸಿನಿಮಾ ಬಂದಿದೆ ಸರಿ, ಆದರೆ ಒಬ್ಬ ಕೇವಲ ಐದು ಕೋಟಿ ರೂಪಾಯಿಯ ಸಿನಿಮಾ ಮಾಡಬೇಕಾಗಿ ಬಂದಾಗ ಏನಾಗುತ್ತದೆ? ಮುಂದಿನ ಹೊಸ ನಿರ್ದೇಶಕನಿಗೆ ಯಾರು ಅವಕಾಶ ಕೊಡುತ್ತಾರೆ? ಹೊಸ ನಟನನ್ನು ಯಾರು ನಂಬುತ್ತಾರೆ? ಒಳ್ಳೆಯ ಕಥೆ ಬರೆದ ಬರಹಗಾರನಿಗೆ ಯಾರು ಹಣ ಕೊಡುತ್ತಾರೆ? ಪ್ರಯೋಗ ಮಾಡುವ ನಿರ್ದೇಶಕನಿಗೆ ಯಾರು ಜಾಗ ಕೊಡುತ್ತಾರೆ? ಈ ಪ್ರಶ್ನೆಗಳು ಬಾಕ್ಸ್ ಆಫೀಸ್ ಸಂಖ್ಯೆಗಳಿಗಿಂತ ಮುಖ್ಯ. ದೊಡ್ಡ ಸಿನಿಮಾಗಳು ಉದ್ಯಮಕ್ಕೆ ಹಣ ತರಬಹುದು, ಆದರೆ ಸಣ್ಣ ಸಿನಿಮಾಗಳು ಉದ್ಯಮಕ್ಕೆ ಹೊಸ ರಕ್ತ ತರುತ್ತವೆ. ದೊಡ್ಡ ಸಿನಿಮಾಗಳು ಮಾರುಕಟ್ಟೆಯನ್ನು ವಿಸ್ತರಿಸುತ್ತವೆ, ಸಣ್ಣ ಸಿನಿಮಾಗಳು ಸಿನಿಮಾದ ಭಾಷೆಯನ್ನು ವಿಸ್ತರಿಸುತ್ತವೆ. ದೊಡ್ಡ ಸಿನಿಮಾ ಸಾವಿರಾರು ಜನರನ್ನು ಒಂದೇ ಸಮಯದಲ್ಲಿ ಥಿಯೇಟರ್&zwnj;ಗೆ ಕರೆತರುತ್ತದೆ, ಸಣ್ಣ ಸಿನಿಮಾ ನಾಳೆಯ ಪ್ರೇಕ್ಷಕನನ್ನು ಸೃಷ್ಟಿಸುತ್ತದೆ. ಒಂದು ಉದ್ಯಮವನ್ನು ಬೆಳೆಸುತ್ತದೆ, ಇನ್ನೊಂದು ಉದ್ಯಮಕ್ಕೆ ಅರ್ಥ ಕೊಡುತ್ತದೆ.&lt;/p&gt;&lt;p&gt;ನಮಗೆ ಹಲವು ಭ್ರಮೆಗಳಿವೆ. ಐದು ಕೋಟಿ ಸಿನಿಮಾವನ್ನು ಐನೂರು ಕೋಟಿ ಸಿನಿಮಾದ ಜೊತೆ ಹೋಲಿಸುತ್ತೇವೆ. ದೊಡ್ಡ ಸ್ಟಾರ್ ಇಲ್ಲ, ದೊಡ್ಡ ಸೆಟ್ ಇಲ್ಲ, ದೊಡ್ಡ ಪ್ರಚಾರ ಇಲ್ಲದಿದ್ದರೆ ಅದುಸಣ್ಣ ಸಿನಿಮಾ ಎಂದುಕೊಳ್ಳುತ್ತೇವೆ. ಆದರೆ ಒಂದು ಸಣ್ಣ ಕೋಣೆಯಲ್ಲಿ ಇಬ್ಬರು ಮನುಷ್ಯರು ಮಾತನಾಡುವ ದೃಶ್ಯ ನಮ್ಮನ್ನು ಹತ್ತು ವರ್ಷ ಕಾಡಬಹುದು. ಐನೂರು ಕೋಟಿ ಖರ್ಚು ಮಾಡಿದ ಯುದ್ಧದ ದೃಶ್ಯ ಐದು ದಿನದಲ್ಲಿ ಮರೆತುಹೋಗಬಹುದು.&lt;/p&gt;&lt;h3&gt;ಪ್ಯಾನ್-ಇಂಡಿಯಾ ಎಂಬ ಪದವೂ ಈಗ ಒಂದು ಮಾರುಕಟ್ಟೆಯ ಟ್ಯಾಗ್&lt;/h3&gt;&lt;p&gt;ಪ್ಯಾನ್-ಇಂಡಿಯಾ ಎಂಬ ಪದವೂ ಈಗ ಒಂದು ಮಾರುಕಟ್ಟೆಯ ಟ್ಯಾಗ್ ಆಗಿಬಿಟ್ಟಿದೆ. ಒಂದು ಚಿತ್ರವನ್ನು ನಾಲ್ಕು ಅಥವಾ ಐದು ಭಾಷೆಗಳಲ್ಲಿ ಬಿಡುಗಡೆ ಮಾಡಿದರೆ ಅದು ಪ್ಯಾನ್-ಇಂಡಿಯಾ ಸಿನಿಮಾ ಆಗುವುದಿಲ್ಲ. ಒಂದು ಕಥೆ ತನ್ನ ಸ್ಥಳೀಯತೆಯನ್ನು ಕಳೆದುಕೊಳ್ಳದೆ ಬೇರೆ ಭಾಷೆಯ ಮನುಷ್ಯನ ಮನಸ್ಸಿಗೆ ಹೋಗಬೇಕು. ಅದು ಕಷ್ಟ. ಅದಕ್ಕೆ ಹಣಕ್ಕಿಂತ ಬರವಣಿಗೆ ಬೇಕು. ಮಾರ್ಕೆಟಿಂಗ್&zwnj;ಗಿಂತ ಭಾವನೆ ಬೇಕು. ಕಾಂತಾರದ ದೊಡ್ಡ ಶಕ್ತಿ ಅದು ಕನ್ನಡತನವನ್ನು ಮರೆಮಾಡಲಿಲ್ಲ ಎಂಬುದರಲ್ಲಿ ಇತ್ತು. ಅದು ತನ್ನ ಮಣ್ಣನ್ನು, ತನ್ನ ನಂಬಿಕೆಯನ್ನು, ತನ್ನ ಜನಪದವನ್ನು, ತನ್ನ ಸಂಘರ್ಷವನ್ನು ಮುಂದೆ ಇಟ್ಟಿತು. ಅದು ಸ್ಥಳೀಯವಾಗಿತ್ತು. ಆದರೆ ಅದರ ಭಾವನೆ ಸ್ಥಳೀಯವಾಗಿರಲಿಲ್ಲ. ಇದೇ ಪ್ಯಾನ್-ಇಂಡಿಯಾದ ನಿಜವಾದ ಅರ್ಥ.&lt;/p&gt;&lt;p&gt;ಮುಂದೆ ಕನ್ನಡ ಚಿತ್ರರಂಗದಲ್ಲಿ ಎರಡು ದಾರಿಗಳು ಸ್ಪಷ್ಟವಾಗಬಹುದು. ಒಂದು ದಾರಿ ದೊಡ್ಡ ಸ್ಟಾರ್&zwnj;ಗಳ, ದೊಡ್ಡ ಬಜೆಟ್&zwnj;ಗಳ, ದೊಡ್ಡ ಮಾರುಕಟ್ಟೆಗಳ, ದೊಡ್ಡ ಅಪಾಯಗಳ ದಾರಿ. ಇನ್ನೊಂದು ದಾರಿ ಸಣ್ಣ ಬಜೆಟ್&zwnj;ಗಳ, ಹೊಸ ಮುಖಗಳ, ಹೊಸ ಕಥೆಗಳ, ಹೊಸ ನಿರ್ದೇಶಕರ, ಕಡಿಮೆ ಅಪಾಯದ ಆದರೆ ದೊಡ್ಡ ಕಲ್ಪನೆಯ ದಾರಿ. ದೊಡ್ಡ ಸ್ಟಾರ್&zwnj;ಗಳು ಉದ್ಯಮವನ್ನು ಉಳಿಸಬಹುದು. ಆದರೆ ಹೊಸ ನಿರ್ದೇಶಕರು ಉದ್ಯಮವನ್ನು ಬದಲಿಸುತ್ತಾರೆ. ಹೊಸ ಬರಹಗಾರರು ಭಾಷೆಯನ್ನು ಬದಲಿಸುತ್ತಾರೆ. ಹೊಸ ನಟರು ಪ್ರೇಕ್ಷಕರ ಕಲ್ಪನೆಯನ್ನು ಬದಲಿಸುತ್ತಾರೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/global-star-yash-and-the-magical-realism-of-toxic/articleshow-6xz9hu7"/>
        </item>
        <item>
            <title><![CDATA[ಕಿಚ್ಚ ಸುದೀಪ್‌ 54ನೇ ಹುಟ್ಟುಹಬ್ಬ ಆಚರಣೆ]]></title>
            <link>https://www.kannadaprabha.in/entertainment-news/kichcha-sudeep-celebrates-his-54th-birthday/articleshow-ahzy8vu</link>
            <guid isPermaLink="true">https://www.kannadaprabha.in/entertainment-news/kichcha-sudeep-celebrates-his-54th-birthday/articleshow-ahzy8vu</guid>
            <pubDate>Thu, 03 Sep 2026 12:17:00 +0530</pubDate>
            <description><![CDATA[&lt;p&gt;ಕಿಚ್ಚ ಸುದೀಪ್&zwnj; ತಮ್ಮ ಕುಟುಂಬದ ಸದಸ್ಯರು ಹಾಗೂ ಆಪ್ತ ಸ್ನೇಹಿತರ ಜೊತೆಗೆ ಕೇಕ್&zwnj; ಕಟ್&zwnj; ಮಾಡುವ ಮೂಲಕ ಸರಳವಾಗಿ ತಮ್ಮ 54ನೇ ಹುಟ್ಟುಹಬ್ಬವನ್ನು ಬುಧವಾರ (ಸೆ.2) ಆಚರಿಸಿಕೊಂಡರು. ಈ ಬಾರಿ ಅಭಿಮಾನಿಗಳ ಜೊತೆಗೆ ಅದ್ದೂರಿ ಹುಟ್ಟುಹಬ್ಬ ಸಂಭ್ರಮ ಇಲ್ಲವೆಂದು ಸ್ವತಃ ಸುದೀಪ್&zwnj; ಅವರೇ ಮೊದಲೇ ತಿಳಿಸಿದ್ದರು&lt;/p&gt;]]></description>
            <media:content url="https://static-gi.asianetnews.com/images/01m07p1wh2g8wa7wk5tfng98ft/jb-1786964406817.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt; ಸಿನಿವಾರ್ತೆ&lt;/strong&gt;&lt;/h2&gt;&lt;p&gt;ಕಿಚ್ಚ ಸುದೀಪ್&zwnj; ತಮ್ಮ ಕುಟುಂಬದ ಸದಸ್ಯರು ಹಾಗೂ ಆಪ್ತ ಸ್ನೇಹಿತರ ಜೊತೆಗೆ ಕೇಕ್&zwnj; ಕಟ್&zwnj; ಮಾಡುವ ಮೂಲಕ ಸರಳವಾಗಿ ತಮ್ಮ 54ನೇ ಹುಟ್ಟುಹಬ್ಬವನ್ನು ಬುಧವಾರ (ಸೆ.2) ಆಚರಿಸಿಕೊಂಡರು. ಈ ಬಾರಿ ಅಭಿಮಾನಿಗಳ ಜೊತೆಗೆ ಅದ್ದೂರಿ ಹುಟ್ಟುಹಬ್ಬ ಸಂಭ್ರಮ ಇಲ್ಲವೆಂದು ಸ್ವತಃ ಸುದೀಪ್&zwnj; ಅವರೇ ಮೊದಲೇ ತಿಳಿಸಿದ್ದರು ಕೂಡ ಬುಧವಾರ ರಾತ್ರಿ ಒಂದು ಗಂಟೆಯ ಹೊತ್ತಿಗೆ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸುದೀಪ್&zwnj; ಅವರ ನಿವಾಸಕ್ಕೆ ಆಗಮಿಸಿದ್ದರು.&lt;/p&gt;&lt;p&gt;ಈ ಬಾರಿಯ ವಿಶೇಷವಾಗಿ ಕಿಚ್ಚ ಸುದೀಪ್ ಅವರ ಸಾಲು ಸಾಲು ಹೊಸ ಸಿನಿಮಾಗಳು ಘೋಷಣೆಯಾಗಿವೆ ಮತ್ತು ಸಿನಿಮಾ ಪೋಸ್ಟರ್&zwnj;ಗಳು ಬಿಡುಗಡೆಯಾಗಿವೆ.&lt;/p&gt;&lt;h3&gt;ದೇವರಾಯನಾದ ಕಿಚ್ಚ&lt;/h3&gt;&lt;p&gt;ಸುದೀಪ್&zwnj; ನಟನೆಯ ಹೊಸ ಸಿನಿಮಾ &lsquo;ದೇವರಾಯ&rsquo; ಫಸ್ಟ್ ಲುಕ್ ಬಿಡುಗಡೆಯಾಗಿದೆ. ಶ್ರೀಕೃಷ್ಣ ದೇವರಾಯನ ಜೀವನ ಚರಿತ್ರೆಯನ್ನು ಹೇಳುವ ಐತಿಹಾಸಿಕ ಚಿತ್ರವಿದು. ಸದ್ಯಕ್ಕೆ ಯಾರು ನಿರ್ದೇಶಕರು ಎನ್ನುವುದು ಘೋಷಣೆಯಾಗಿಲ್ಲ. ಈ ಚಿತ್ರವನ್ನು ಪೀಪಲ್&zwnj; ಮೀಡಿಯಾ ಫ್ಯಾಕ್ಟರಿ ಹಾಗೂ ಪ್ರಿಯಾ ಸುದೀಪ್&zwnj; ಒಡೆತನದ ಸುಪ್ರಿಯಾನ್ವಿ ಪಿಕ್ಚರ್&zwnj; ಸ್ಟುಡಿಯೋಸ್&zwnj; ಜಂಟಿಯಾಗಿ ನಿರ್ಮಿಸುತ್ತಿದೆ.&lt;/p&gt;&lt;p&gt;&lt;strong&gt;ಬಿಆರ್&zwnj;ಬಿ ಹೊಸ ಪೋಸ್ಟರ್&zwnj;, ಸ್ಕೂಲ್&zwnj; ಬಸ್&zwnj; ಪ್ರೋಮೋ&lt;/strong&gt;&lt;/p&gt;&lt;p&gt;ಅನೂಪ್ ಭಂಡಾರಿ ನಿರ್ದೇಶನದ &lsquo;ಬಿಲ್ಲ ರಂಗ ಬಾಷಾ&rsquo; ಚಿತ್ರದ ಹೊಸ ಪೋಸ್ಟರ್&zwnj; ಕೂಡ ಬಿಡುಗಡೆ ಆಗಿದ್ದು, ಈ ಪೋಸ್ಟರ್&zwnj;ನ ಲುಕ್ಕು ಹೊಸದಾಗಿದೆ. ಇದರ ಜೊತೆಗೆ ತಮಿಳಿನ ಸಮುದ್ರಖನಿ ನಿರ್ದೇಶನ, ನಟನೆಯ &lsquo;ಸ್ಕೂಲ್&zwnj; ಬಸ್&zwnj;&rsquo; ಚಿತ್ರದಲ್ಲಿ ಸುದೀಪ್ ಗೆಸ್ಟ್&zwnj; ರೋಲ್&zwnj;ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದರ ಪ್ರೋಮೋ ಬಿಡುಗಡೆ ಆಗಿದೆ.&lt;/p&gt;&lt;p&gt;&lt;strong&gt;ಸುದೀಪ್&zwnj; ಹೊಸ ಚಿತ್ರಕ್ಕೆ ಜೋಗಿ ಪ್ರೇಮ್ ನಿರ್ದೇಶನ&lt;/strong&gt;&lt;/p&gt;&lt;p&gt;ನಿರ್ದೇಶಕ ಜೋಗಿ ಪ್ರೇಮ್&zwnj; ಹಾಗೂ ಕಿಚ್ಚ ಸುದೀಪ್&zwnj; &lsquo;ದಿ ವಿಲನ್&zwnj;&rsquo; ಚಿತ್ರದ ನಂತರ ಮತ್ತೆ ಹೊಸ ಸಿನಿಮಾ ಮೂಲಕ ಜೊತೆಯಾಗುತ್ತಿದ್ದಾರೆ. ಸ್ವತಃ ಜೋಗಿ ಪ್ರೇಮ್&zwnj; ಅವರು ಈ ಹೊಸ ಪ್ರಾಜೆಕ್ಟ್&zwnj; ಘೋಷಣೆ ಮಾಡಿದ್ದಾರೆ. ಅಕ್ಟೋಬರ್&zwnj; 20ಕ್ಕೆ ಈ ಚಿತ್ರಕ್ಕೆ ಮುಹೂರ್ತ ನಡೆಯಲಿದ್ದು, ಶೀರ್ಷಿಕೆ ಬಿಡುಗಡೆಯಾಗಲಿದೆ.&lt;/p&gt;&lt;p&gt;ಈ ಕುರಿತು ಪ್ರೇಮ್&zwnj;, &lsquo;ನಾನು ಮತ್ತು ಸುದೀಪ್&zwnj; ಸಿನಿಮಾ ಮಾಡಬೇಕು ಎಂಬುದು ಬಹು ದಿನಗಳ ಯೋಚನೆ. ಇದು ರೌಡಿಸಂ, ಭೂಗತ ಲೋಕ ಇತ್ಯಾದಿ ರೆಗ್ಯುಲರ್&zwnj; ಮಾಸ್&zwnj; ಫಾರ್ಮುಲಾ ಅಂಶಗಳಿಂದ ದೂರ ಇರುವ ಪಕ್ಕಾ ಫ್ಯಾಮಿಲಿ ಸಿನಿಮಾ. ಇದು ನಮ್ಮಿಬ್ಬರಿಗೂ ಇದು ಬೇರೆ ರೀತಿಯ ಸಿನಿಮಾ ಆಗಲಿದೆ&rsquo; ಎನ್ನುತ್ತಾರೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/kichcha-sudeep-celebrates-his-54th-birthday/articleshow-ahzy8vu"/>
        </item>
        <item>
            <title><![CDATA[ವರ್ಷಕ್ಕೆ 6 ತಿಂಗಳು ಕೆಲಸವಿಲ್ಲ, ಆ್ಯಂಕರಿಂಗ್‌ ಖುಷಿ ಕೊಡಲಿಲ್ಲ: ಅನುಪಮಾ ಗೌಡ]]></title>
            <link>https://www.kannadaprabha.in/entertainment-news/six-months-without-work-every-year-anchoring-didnt-bring-me-joy-anupama-gowda/articleshow-au5gt2e</link>
            <guid isPermaLink="true">https://www.kannadaprabha.in/entertainment-news/six-months-without-work-every-year-anchoring-didnt-bring-me-joy-anupama-gowda/articleshow-au5gt2e</guid>
            <pubDate>Thu, 20 Aug 2026 13:46:27 +0530</pubDate>
            <description><![CDATA[&lt;p&gt;ನಟಿ ಹಾಗೂ ಕಿರುತೆರೆ ನಿರೂಪಕಿ ಅನುಪಮಾ ಗೌಡ ಅವರು ಆ್ಯಂಕರಿಂಗ್&zwnj;ನಿಂದ ದೂರವಾಗುವ ನಿರ್ಧಾರ ಮಾಡಿದ್ದಾರೆ. ಈ ವಿಚಾರ ಸಾಕಷ್ಟು ಚರ್ಚೆಗಳಾಗಿದೆ. ಈ ಹಿನ್ನೆಲೆಯಲ್ಲಿ ಅನುಪಮಾ ಜತೆ ಮಾತುಕತೆ.&lt;/p&gt;]]></description>
            <media:content url="https://static-gi.asianetnews.com/images/01m04g2mxmb3drfgxx1gdab550/bigg-boss-actress-anchor-anupama-gowda-weight-loss-journey-1786857477044.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಆರ್. ಕೇಶವಮೂರ್ತಿ&lt;/strong&gt;&lt;/h2&gt;&lt;p&gt;&lt;strong&gt;ನಿರೂಪಣೆಯಿಂದ ದೂರವಾಗಬೇಕೆಂಬ ನಿರ್ಧಾರಕ್ಕೆ ಕಾರಣ ಏನು?&lt;/strong&gt;&lt;/p&gt;&lt;p&gt;ನಾನು ಹೋಸ್ಟ್&zwnj; ಮಾಡುತ್ತಿದ್ದ ಶೋ ನನಗೇ ವೈಯಕ್ತಿಕವಾಗಿ ಖುಷಿ ಕೊಡುತ್ತಿರಲಿಲ್ಲ. ಪ್ರೀತಿಯಿಂದ ಮಾಡಬೇಕಾದ ಕೆಲಸವನ್ನು ಉದ್ಯೋಗ ಅನ್ನೋ ರೀತಿಯಲ್ಲಿ ಮಾಡುತ್ತಿದ್ದೇನೆ ಅನಿಸಿತು. ಮನಸ್ಸಿಗೆ ತೃಪ್ತಿ ಕೊಡದ ಕೆಲಸ ಬೇಡವೆನಿಸಿ ಈ ನಿರ್ಧಾರ ತೆಗೆದುಕೊಂಡೆ.&lt;/p&gt;&lt;h3&gt;&lt;strong&gt;ಆ್ಯಂಕರಿಂಗ್&zwnj;ಗೆ ವಿದಾಯ ಹೇಳಲು ಬೇರೆ ಕಾರಣಗಳಿವೆ ಅಂತಿದ್ದಾರಲ್ಲ?&lt;/strong&gt;&lt;/h3&gt;&lt;p&gt;ಅದೆಲ್ಲವೂ ಸುಳ್ಳು. ನಾನು ಮಾಡುತ್ತಿದ್ದ ಕೆಲಸ ನಾನೇ ಎಂಜಾಯ್&zwnj; ಮಾಡಕ್ಕೆ ಆಗುತ್ತಿಲ್ಲ, ಇದರ ಜೊತೆಗೆ ವರ್ಷದಲ್ಲಿ ನಾನು ಎರಡೇ ಶೋ ಮಾಡುತ್ತಿದ್ದೆ. ಈ ಎರಡೂ ಶೋಗಳಿಂದ ವರ್ಷದಲ್ಲಿ 6 ತಿಂಗಳು ಕೆಲಸ, ಉಳಿದ 6 ತಿಂಗಳು ಖಾಲಿ ಕೂರಬೇಕಿತ್ತು. ಹಾಗಾಗಿ ಬೇರೆ ಏನಾದರು ಸ್ವಂತವಾಗಿ ಮಾಡೋ ಯೋಚನೆಯಿಂದ ನಿರೂಪಣೆ ಬಿಟ್ಟಿದ್ದು.&lt;/p&gt;&lt;p&gt;&lt;strong&gt;ನಿಮ್ಮ ಮತ್ತು ಕಲರ್ಸ್&zwnj; ವಾಹಿನಿಯ ನಂಟು ಹಳೆಯದು. ಬೇರೆ ಶೋಗಳು ನಿಮಗೆ ಕೊಡಬಹುದಿತ್ತಲ್ಲ?&lt;/strong&gt;&lt;/p&gt;&lt;p&gt;ಈ ವಿಚಾರದಲ್ಲಿ ನಾನು ಯಾರ ಮೇಲೂ ಆರೋಪ ಮಾಡಲಾರೆ. ಯಾಕೆಂದರೆ ಅವರಿಗೂ ವಾಹಿನಿಯಲ್ಲಿ ಶೋಗಳು ಅಪ್ರೂವ್&zwnj; ಆಗುತ್ತಿರಲಿಲ್ಲ. ಬಂದ ಶೋಗಳನ್ನು ನನಗೆ ಕೊಡುತ್ತಿದ್ದರು. 9 ಶೋಗಳಿಗೆ ಹೋಸ್ಟ್&zwnj; ಆಗಿದ್ದೇನೆ. ಇದಕ್ಕಿಂತ ಇನ್ನೇನು ಬೇಕು!?&lt;/p&gt;&lt;p&gt;&lt;strong&gt;ನಿರೂಪಣೆ ಜೊತೆಗೆ ಖಾಲಿ ಇರುವಾಗ ಬೇರೆ ಕೆಲಸಗಳನ್ನೂ ಮಾಡಬಹುದಿತ್ತಲ್ಲ?&lt;/strong&gt;&lt;/p&gt;&lt;p&gt;ಎರಡು ದೋಣಿಯ ಪ್ರಯಾಣ ಅಭ್ಯಾಸ ಇಲ್ಲ. ಸಿನಿಮಾ ಅಂದರೆ ಸಿನಿಮಾ, ನಿರೂಪಣೆ ಅಂದ್ರೆ ನಿರೂಪಣೆ ಮಾತ್ರ. ಆ್ಯಂಕರಿಂಗ್&zwnj; ಜೊತೆಗೆ ಖಾಲಿ ಇರೋ ಆರು ತಿಂಗಳಲ್ಲಿ ಏನಂತ ಮಾಡಲಿ. ಎಂಟು ವರ್ಷ ಆ್ಯಂಕರಿಂಗ್&zwnj; ಮಾಡಿದ್ದೇನೆ.&lt;/p&gt;&lt;p&gt;&lt;strong&gt;ಸ್ವಂತವಾಗಿ ಏನಾದರು ಮಾಡಬೇಕು ಅಂದ್ರಿ, ಏನು?&lt;/strong&gt;&lt;/p&gt;&lt;p&gt;ಸದ್ಯಕ್ಕೆ ಒಂದು ಸಿನಿಮಾ ಶೂಟಿಂಗ್&zwnj; ಮುಗಿಸಿದ್ದೇನೆ. ಒಂದು ವೆಬ್&zwnj; ಸರಣಿ ಆಗಿದೆ. ನಾನೇ ಒಂದು ಕಿರು ಚಿತ್ರ ನಿರ್ದೇಶಿಸಿದ್ದು, ಈಗ ಅದರ ಎಡಿಟಿಂಗ್&zwnj; ನಡೆಯುತ್ತಿದ್ದೆ. &lsquo;ಪ್ರೆಸ್ಟೀಜ್&zwnj;&rsquo; ಎಂಬುದು ಆ ಕಿರುಚಿತ್ರದ ಹೆಸರು. ಕಲಾವಿದರ ಕೆರಿಯರ್&zwnj; ಯಾವಾಗ ಶುರುವಾಗುತ್ತೆ, ಯಾವಾಗ ನಿಂತೋಗುತ್ತೆ, ಮತ್ತೆ ಯಾವಾಗ ಓಪನ್&zwnj; ಆಗುತ್ತೆ ಅಂತ ಗೊತ್ತಿರಲ್ಲ.&lt;/p&gt;&lt;p&gt;&lt;strong&gt;&lsquo;ಆ ಕರಾಳ ರಾತ್ರಿ&rsquo; ಚಿತ್ರದ ನಂತರ ನಿಮಗೆ ಸಿನಿಮಾಗಳು ಅವಕಾಶಗಳು ಬರಲಿಲ್ಲವೇ?&lt;/strong&gt;&lt;/p&gt;&lt;p&gt;ಬಂದಿದ್ದವು. ಆದರೆ, ಎಲ್ಲಾ ಪಾತ್ರಗಳಲ್ಲೂ ಅದೇ &lsquo;ಆ ಕರಾಳ ರಾತ್ರಿ&rsquo; ಚಿತ್ರದ ನೆರಳು. ಒಂದೇ ರೀತಿಯ ಪಾತ್ರದ 10 ಸಿನಿಮಾ ಮಾಡೋದಕ್ಕಿಂತ ಒಂದು ಸಿನಿಮಾ ಮಾಡಬೇಕು ಅನ್ನೋ ನಿಲುವು ನನ್ನದು. ಹಾಗೆ ಬಂದಿದ್ದೆಲ್ಲ ಒಪ್ಪಿಕೊಂಡಿದ್ದರೆ ಕನಿಷ್ಠ 15 ಸಿನಿಮಾಗಳಲ್ಲಿ ನಟಿಸುತ್ತಿದ್ದೆ.&lt;/p&gt;&lt;p&gt;&lt;strong&gt;ಹೌದು, ಈಗ ನಿಮ್ಮ ಆದಾಯ ಏನು?&lt;/strong&gt;&lt;/p&gt;&lt;p&gt;ಇಲ್ಲಿಯವರೆಗೂ ನಿರೂಪಣೆಯಿಂದ ಬರುತ್ತಿತ್ತು. ಈಗ ಮೊದಲಿಗಿಂತ ಸೋಷಿಯಲ್&zwnj; ಮೀಡಿಯಾ ಸ್ಟ್ರಾಂಗ್&zwnj; ಆಗಿದೆ. ಇನ್&zwnj;ಸ್ಟಗ್ರಾಮ್&zwnj; ಕೋಲಾಬರೇಷನ್&zwnj;, ಪ್ರಚಾರಗಳಿಂದ ಆದಾಯ ಬರುತ್ತಿದೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/six-months-without-work-every-year-anchoring-didnt-bring-me-joy-anupama-gowda/articleshow-au5gt2e"/>
        </item>
        <item>
            <title><![CDATA[40ನೇ ಹುಟ್ಟುಹಬ್ಬ ಆಚರಿಸಿಕೊಂಡ ಡಾಲಿ ಧನಂಜಯ]]></title>
            <link>https://www.kannadaprabha.in/entertainment-news/dolly-dhananjaya-celebrates-his-40th-birthday/articleshow-eginmpu</link>
            <guid isPermaLink="true">https://www.kannadaprabha.in/entertainment-news/dolly-dhananjaya-celebrates-his-40th-birthday/articleshow-eginmpu</guid>
            <pubDate>Mon, 24 Aug 2026 13:07:51 +0530</pubDate>
            <description><![CDATA[&lt;p&gt;ನಟ ಡಾಲಿ ಧನಂಜಯ ಅವರು ಅಭಿಮಾನಿಗಳ ಜೊತೆಗೆ ಭಾನುವಾರ (ಆ.23) ತಮ್ಮ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಬೆಂಗಳೂರಿನ ಜಯನಗರದಲ್ಲಿರುವ ಎಂಇಎಸ್ ಮೈದಾನದಲ್ಲಿ ನಡೆದ ಸಂಭ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ದೊಡ್ಡ ಮಟ್ಟದಲ್ಲಿ ಧನಂಜಯ ಅವರ ಅಭಿಮಾನಿಗಳು ಆಗಮಿಸಿದ್ದರು&lt;/p&gt;]]></description>
            <media:content url="https://static-gi.asianetnews.com/images/01m0j19jw4ajeygadxyfhrtz0n/gg-1787311737732.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt; ಸಿನಿವಾರ್ತೆ&lt;/strong&gt;&lt;/h2&gt;&lt;p&gt;ನಟ ಡಾಲಿ ಧನಂಜಯ ಅವರು ಅಭಿಮಾನಿಗಳ ಜೊತೆಗೆ ಭಾನುವಾರ (ಆ.23) ತಮ್ಮ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಬೆಂಗಳೂರಿನ ಜಯನಗರದಲ್ಲಿರುವ ಎಂಇಎಸ್ ಮೈದಾನದಲ್ಲಿ ನಡೆದ ಸಂಭ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ದೊಡ್ಡ ಮಟ್ಟದಲ್ಲಿ ಧನಂಜಯ ಅವರ ಅಭಿಮಾನಿಗಳು ಆಗಮಿಸಿದ್ದರು. ತಮ್ಮ ಹುಟ್ಟುಹಬ್ಬದ ಅಂಗವಾಗಿ ಬಿಬಿಎಂಪಿ ಪೌರಕಾರ್ಮಿಕರಿಗೆ ಹಾಗೂ ಆಟೋ ಚಾಲಕರಿಗೆ ಧನಂಜಯ ಅವರೇ ಹೊಸ ಬಟ್ಟೆ ವಿತರಣೆ ಮಾಡಿದರು.&lt;/p&gt;&lt;h3&gt;ಸಿದ್ದಗಂಗಾ ಮಠಕ್ಕೆ 3.5 ಟನ್&zwnj; ಅಕ್ಕಿ&lt;/h3&gt;&lt;p&gt;ಇದೇ ಸಂದರ್ಭದಲ್ಲಿ ಹಾಸನ ಜಿಲ್ಲಾ ಡಾಲಿ ಅಭಿಮಾನಿಗಳ ಸಂಘದಿಂದ ತುಮಕೂರಿನ ಸಿದ್ದಗಂಗಾ ಮಠಕ್ಕೆ 3.5 ಟನ್&zwnj; ಅಕ್ಕಿ ನೀಡುವ ಮೂಲಕ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದರು. ಇನ್ನೂ ಎಂಇಎಸ್&zwnj; ಮೈದಾನದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಅಲ್ಲದೆ &lsquo;ಅಣ್ಣ ಫ್ರಮ್&zwnj; ಮೆಕ್ಸಿಕೋ&rsquo;, &lsquo;ಜಿಂಗೋ&rsquo;, &lsquo;666 ಆಪರೇಷನ್&zwnj; ಡ್ರೀಮ್ ಥಿಯೇಟರ್&zwnj;&rsquo; ಹಾಗೂ ತೆಲುಗಿನ &lsquo;ಎಸ್&zwnj;ವೈಜಿ&rsquo; ಚಿತ್ರಗಳ ವಿಶೇಷ ಪೋಸ್ಟರ್&zwnj; ಬಿಡುಗಡೆ ಮಾಡುವ ಮೂಲಕ ಆಯಾ ಚಿತ್ರತಂಡಗಳ ವತಿಯಂದಲೂ ಧನಂಜಯ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲಾಯಿತು.&lt;/p&gt;&lt;p&gt;ಡಾಲಿ ಧನಂಜಯ ಮಾತನಾಡಿ, &lsquo;ನನ್ನ ಹುಟ್ಟುಹಬ್ಬವನ್ನು ಅಭಿಮಾನಿಗಳು ಹೀಗೆ ಪ್ರತಿ ವರ್ಷವೂ ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ. ಆ ಮೂಲಕ ನನ್ನ ಕಲಾ ಪಯಣದ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ. ಅಭಿಮಾನಿಗಳ ಸಂಭ್ರಮ ನೋಡಿದಾಗ ಖುಷಿ ಮತ್ತು ಸಾರ್ಥಕದ ಭಾವನೆ ಮೂಡುತ್ತದೆ&rsquo; ಎಂದು ಸಂಭ್ರಮ ವ್ಯಕ್ತಪಡಿಸಿದರು.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/dolly-dhananjaya-celebrates-his-40th-birthday/articleshow-eginmpu"/>
        </item>
        <item>
            <title><![CDATA[ಮಣ್ಣಿನ ಕಥೆಗಳಿಗಷ್ಟೇ ಗೆಲುವು]]></title>
            <link>https://www.kannadaprabha.in/entertainment-news/only-stories-rooted-in-the-soil-find-success/articleshow-f05gi8q</link>
            <guid isPermaLink="true">https://www.kannadaprabha.in/entertainment-news/only-stories-rooted-in-the-soil-find-success/articleshow-f05gi8q</guid>
            <pubDate>Fri, 04 Sep 2026 11:55:51 +0530</pubDate>
            <description><![CDATA[&lt;p&gt;ಗಿರೀಶ್ ಕಾರ್ನಾಡ್ ಬರೆದಿರುವ &lsquo;ರಕ್ಕಸ ತಂಗಡಿ&rsquo; ನಾಟಕದ ಒಂದು ಸಾಲು ಇದು. ಅದನ್ನೇ ಸೀರಿಯಸ್ಸಾಗಿ ನಂಬಿಕೊಂಡಿರುವ ಚಿತ್ರರಂಗ &lsquo;ಬಿಗ್ ಬಜೆಟ್&rsquo; ಮತ್ತು ಸ್ಟಾರ್&zwnj; ಸಿನಿಮಾಗಳ ಭ್ರಮೆಯಲ್ಲಿ ಬಿದ್ದು ನಾಶದ ಹಾದಿಯಲ್ಲಿದೆ.&lt;/p&gt;]]></description>
            <media:content url="https://static-gi.asianetnews.com/images/01kcdtb2ze1cnq3thr4efsjrf8/2025-imdb-highest-rated-films-3-1765695392750.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;- ಇಂಟ್ರೋವರ್ಟ್ ರಿಪೋರ್ಟರ್&lt;/strong&gt;&lt;/p&gt;&lt;h2&gt;&lsquo;ಬದುಕಲಿಕೊಂದು ಭ್ರಾಂತಿ ಇರಬೇಕು&rsquo;.&lt;/h2&gt;&lt;p&gt;ಗಿರೀಶ್ ಕಾರ್ನಾಡ್ ಬರೆದಿರುವ &lsquo;ರಕ್ಕಸ ತಂಗಡಿ&rsquo; ನಾಟಕದ ಒಂದು ಸಾಲು ಇದು. ಅದನ್ನೇ ಸೀರಿಯಸ್ಸಾಗಿ ನಂಬಿಕೊಂಡಿರುವ ಚಿತ್ರರಂಗ &lsquo;ಬಿಗ್ ಬಜೆಟ್&rsquo; ಮತ್ತು ಸ್ಟಾರ್&zwnj; ಸಿನಿಮಾಗಳ ಭ್ರಮೆಯಲ್ಲಿ ಬಿದ್ದು ನಾಶದ ಹಾದಿಯಲ್ಲಿದೆ. ಥಿಯೇಟರ್&zwnj;ಗೆ ಜನರನ್ನು ಕರೆತರುವುದೇ ಸ್ಟಾರ್&zwnj;ಗಳ ಬಿಗ್&zwnj; ಬಜೆಟ್ ಸಿನಿಮಾ ಎಂಬ ನಂಬಿಕೆಯಲ್ಲಿ ಪದೇ ಪದೇ ಸೋಲುತ್ತಿದೆ. ಆ ನಂಬಿಕೆಯನ್ನು ಹೊಡೆಯುವಂತಹ ಸಿನಿಮಾಗಳು ಬಂದರೂ ಆ ಭ್ರಮೆ ಹರಿದಿಲ್ಲ. ಈಗ ಮತ್ತೆರಡು ಸಿನಿಮಾಗಳು ಆ ನಂಬಿಕೆಯನ್ನು ಸೋಲಿಸಿವೆ. ಅದರಲ್ಲಿ ಒಂದು ಹಿಂದಿಯ &lsquo;ಹನುಮಾನ್ ಅಂಶ್&rsquo; ಮತ್ತು ಮಲಯಾಳಂನ &lsquo;ಬೆತ್ಲೆಹೆಮ್ ಕುಟುಂಬ ಯೂನಿಟ್&rsquo;.&lt;/p&gt;&lt;p&gt;ಎಷ್ಟೇ ಅದ್ದೂರಿತನ ಮಾಡಲಿ, ಎಷ್ಟೇ ಬಿಲ್ಡಪ್&zwnj; ಇರಲಿ, ವಿಮಾನಗಳು ಬಿದ್ದುಹೋಗಲಿ, ಹಡಗುಗಳು ಹಾರಿಹೋಗಲಿ, ವಿಎಫ್&zwnj;ಎಕ್ಸ್&zwnj; ಮೂಲಕ ಹೊಸ ಲೋಕ ಸೃಷ್ಟಿ ಮಾಡಲಿ ಕೊನೆಗೂ ಗೆಲ್ಲುವುದು ಒರಿಜಿನಾಲಿಟಿ, ಅಪ್ಪಟ ಸ್ವಂತ ಕತೆ ಮಾತ್ರ ಅಂತ ಈ ಸಿನಿಮಾಗಳು ಮತ್ತೆ ನೆನಪಿಸಿವೆ.&lt;/p&gt;&lt;p&gt;ಡಾ. ವಿಶಾಲ್ ಚತುರ್ವೇದಿಯವರು ತಾವು ನೀಮ್ ಕರೋಲಿ ಬಾಬಾ ಅವರ ಜೀವನ ಕಥೆ ಆಧರಿಸಿ ಬರೆದ &lsquo;ಡಿವೈನ್ ಡಿಟೋರ್: ದ್ಯಾಟ್ ಚೇಂಜ್&zwnj;ಡ್&zwnj; ಮೈ ಲೈಫ್&zwnj;&rsquo; ಎಂಬ ಕೃತಿಯನ್ನು ಇಟ್ಟುಕೊಂಡು &lsquo;ಹನುಮಾನ್ ಅಂಶ್&rsquo; ಎಂಬ ಸಿನಿಮಾ ರೂಪಿಸಿದ್ದಾರೆ.&lt;/p&gt;&lt;p&gt;ಚಿರಂಜೀವಿ ಆಂಜನೇಯನ ದೈವಿಕ ಶಕ್ತಿಯನ್ನು ಸಮಕಾಲೀನ ಸಮಾಜದ ಸವಾಲುಗಳು ಮತ್ತು ಒಬ್ಬ ಸಾಮಾನ್ಯ ಮನುಷ್ಯನ ಅಂತರಾತ್ಮದಲ್ಲಿ ಆ ದೈವಾಂಶ ಹೇಗೆ ಜಾಗೃತಗೊಳ್ಳುತ್ತದೆ ಎಂಬ ಎಳೆಯನ್ನು ಕಟ್ಟಿಕೊಡಲು ಯತ್ನಿಸಿರುವ ಈ ಸಿನಿಮಾ ಕಡಿಮೆ ಬಜೆಟ್&zwnj;ನಲ್ಲಿ ರೂಪುಗೊಂಡ ಸಿನಿಮಾ. ಅಂಥಾ ಪ್ರಚಾರವೂ ಮಾಡಿಲ್ಲ. ಇದರ ಕತೆಯಿಂದಲೇ, ಕತೆಯ ಶಕ್ತಿಯ ಬಾಯಿ ಮಾತಿನಿಂದಲೇ ಈಗ ಈ ಚಿತ್ರ ಭಾರತದಾದ್ಯಂತ ಸಿನಿ ಪ್ರೇಕ್ಷಕರನ್ನು ಅಯಸ್ಕಾಂತದಂತೆ ಸೆಳೆಯುತ್ತಿದೆ.&lt;/p&gt;&lt;p&gt;ಇನ್ನೊಂದು, &lsquo;ಪ್ರೇಮಲು&rsquo; ಎಂಬ ಸೂಪರ್&zwnj;ಹಿಟ್&zwnj; ಸಿನಿಮಾ ನಿರ್ದೇಶಿಸಿದ್ದ ಗಿರೀಶ್&zwnj; ಎ.ಡಿ. ನಿರ್ದೇಶನದ &lsquo;ಬೆತ್ಲೆಹೆಮ್ ಕುಟುಂಬ ಯೂನಿಟ್&rsquo;. ಯಾವುದೇ ಆಡಂಬರವಿಲ್ಲದೆ, ಕೌಟುಂಬಿಕ ಬಾಂಧವ್ಯ, ಆಂತರಿಕ ಬಿಕ್ಕಟ್ಟುಗಳು, ಆಚರಣೆಗಳು ಮತ್ತು ಮನಸ್ಸನ್ನು ತಟ್ಟುವ ಸೂಕ್ಷ್ಮ ಭಾವನೆಗಳನ್ನು ದಾಟಿಸುವ ಸಿನಿಮಾ.&lt;/p&gt;&lt;p&gt;ಎರಡರಲ್ಲೂ ಕೃತಕ ಮಸಾಲಗಳಿಲ್ಲ, ಬದಲಿಗೆ ತಮ್ಮ ಮಣ್ಣಿನ ಕಥೆಯನ್ನು ಅತ್ಯಂತ ಪ್ರಾಮಾಣಿಕವಾಗಿ ಹೇಳುವ ಗುಣವಿದೆ. ಹಾಗಾಗಿಯೇ ಈ ಎರಡೂ ಸಿನಿಮಾಗಳನ್ನು ಪ್ರೇಕ್ಷಕ ಯಾವುದೇ ಗದ್ದಲವಿಲ್ಲದೆ, ಹೋರಾಟವಿಲ್ಲದೆ, ನೆಗೆಟಿವಿಟಿಯಿಲ್ಲದೆ ಗೆಲ್ಲಿಸಿದ್ದಾನೆ.&lt;/p&gt;&lt;h3&gt;ಈ ಸಿನಿಮಾಗಳು ಕಲಿಸಿದ ಪಾಠಗಳು:&lt;/h3&gt;&lt;p&gt;1. ಸ್ವಂತಿಕೆಯೇ ನಿಜವಾದ ಅಸ್ತ್ರ&lt;/p&gt;&lt;p&gt;ಪ್ಯಾನ್ ಇಂಡಿಯಾ ಕಾರಣದಿಂದಲೋ, ಹಾಲಿವುಡ್&zwnj;ನವರು ಬಾಲಿವುಡ್&zwnj;ನವರು ಮೆಚ್ಚಬೇಕು ಎಂಬ ಕಾರಣದಿಂದಲೋ ನಮ್ಮದಲ್ಲದ, ಮನಸ್ಸು ತಟ್ಟದ ಕತೆಗಳಿಗೆ ಶರಣಾದರೆ ಗೆಲುವು ಕೈಹಿಡಿಯದು. ಪ್ರೇಕ್ಷಕ ಈಗ ಜಗತ್ತಿನ ಸಿನಿಮಾ ನೋಡುತ್ತಾನೆ. ಆತನಿಗೆ ಬೇಕಿರುವುದು ನಕಲಿ ದೃಶ್ಯಗಳಲ್ಲ, ನಮ್ಮದೇ ನೆಲದ ಹೊಸತನ. ಒರಿಜಿನಲ್ ಕತೆಗಳು.&lt;/p&gt;&lt;p&gt;2. ಕಡಿಮೆ ಬಜೆಟ್, ಶಕ್ತಿಶಾಲಿ ಕತೆ&lt;/p&gt;&lt;p&gt;&lsquo;ಹನುಮಾನ್ ಅಂಶ್&rsquo; ಲಭ್ಯವಿರುವ ಮಿತ ಬಜೆಟ್&zwnj;ನಲ್ಲೇ ಕಲಾತ್ಮಕವಾಗಿ ತಂತ್ರಜ್ಞಾನ ಬಳಸಿಕೊಂಡಿದ್ದರೆ, &lsquo;ಬೆತ್ಲೆಹೆಮ್ ಕುಟುಂಬ ಯೂನಿಟ್&rsquo; ಸಹಜ ಲೊಕೇಶನ್&zwnj;ಗಳು ಮತ್ತು ಕಲಾವಿದರ ನೈಜ ಅಭಿನಯವನ್ನೇ ದೊಡ್ಡ ಬಂಡವಾಳವಾಗಿಸಿಕೊಂಡಿದೆ. ಇಲ್ಲಿ ಬಜೆಟ್&zwnj;ಗಿಂತ ಮುಖ್ಯವಾಗಿದ್ದು ಕಾಗದದ ಮೇಲಿನ ಗಟ್ಟಿಯಾದ ಚಿತ್ರಕಥೆ ಮತ್ತು ಶಿಸ್ತಿನ ಪ್ರಿ-ಪ್ರೊಡಕ್ಷನ್ ಹಾಗೂ ಶೂಟಿಂಗ್ ಯೋಜನೆ. ಈಗೀಗ ಕನ್ನಡದಲ್ಲಿ ಶೂಟಿಂಗ್ ವೆಚ್ಚಗಳು ಅತಿಯಾಗಿವೆ. ಬಜೆಟ್ ಸಣ್ಣದಾಗಿದ್ದಷ್ಟೂ ನಿರ್ಮಾಪಕನ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗಿ, ಚಿತ್ರ ಲಾಭದ ದಡ ಮುಟ್ಟುವುದು ಸುಲಭವಾಗುತ್ತದೆ.&lt;/p&gt;&lt;p&gt;3. ಸ್ಟಾರ್&zwnj;ಗಳು ಕತೆ ತಿರುಚುವುದು ನಿಲ್ಲಬೇಕು&lt;/p&gt;&lt;p&gt;ಮೊದಲು ಸ್ಟಾರ್&zwnj;ಗಳ ಇಮೇಜ್ ಮತ್ತು ಕಟೌಟ್&zwnj;ಗೆ ತಕ್ಕಂತೆ ಕಥೆ ಹೆಣೆಯುತ್ತಿರುವುದು ನಿಲ್ಲಬೇಕು. ಆಮೇಲೆ ಸ್ಟಾರ್&zwnj;ಗಳು ತಮಗೆ ಹಿಡಿತವಿಲ್ಲದೆ, ಕತೆ ತಿರುಚುವುದು ನಿಲ್ಲಿಸಬೇಕು. ಕಥೆಯಲ್ಲೇ ದಮ್ಮಿಲ್ಲದಿದ್ದಾಗ ಯಾವ ಸೂಪರ್&zwnj;ಸ್ಟಾರ್ ಕೂಡ ಸಿನಿಮಾವನ್ನು ದಡ ಸೇರಿಸಲಾರ.&lt;/p&gt;&lt;p&gt;4. ಎಲ್ಲರನ್ನೂ ಮೆಚ್ಚಿಸುವ ಮಸಾಲಾ ಸೂತ್ರದ ಅಂತ್ಯ&lt;/p&gt;&lt;p&gt;ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಒಟ್ಟಿಗೆ ಖುಷಿಪಡಿಸಲು ಹೋಗಿ ನಾಲ್ಕು ಫೈಟ್, ಮೂರು ಡ್ಯುಯೆಟ್, ಕೃತಕ ಕಾಮಿಡಿ ತುರುಕುವ ಕಾಲ ಮುಗಿದುಹೋಗಿದೆ. ನಿರ್ದಿಷ್ಟ ಪ್ರೇಕ್ಷಕ ವರ್ಗವನ್ನು ಗುರುತಿಸಿ, ಅವರಿಗೆ ಸಂಪೂರ್ಣ ಪ್ರಾಮಾಣಿಕತೆಯಿಂದ ಸಿನಿಮಾ ಕಟ್ಟಿಕೊಟ್ಟರೆ ಸಾಕು. 100 ಜನರನ್ನೂ ತೃಪ್ತಿಪಡಿಸಲು ಹೋಗಿ ಸೋಲುವ ಬದಲು, 30 ಜನರ ನಿಷ್ಠಾವಂತ ಪ್ರೇಕ್ಷಕರನ್ನು ತಲುಪಿದರೆ ಸಣ್ಣ ಬಜೆಟ್&zwnj;ನ ಸಿನಿಮಾ ಗೆಲ್ಲಬಲ್ಲದು.&lt;/p&gt;&lt;p&gt;5. ಪ್ರಚಾರದಲ್ಲಿ ಸಿನಿಮಾ ಗೆಲ್ಲಿಸುವುದು ಬಿಡಬೇಕು&lt;/p&gt;&lt;p&gt;ಕತೆ ಚೆನ್ನಾಗಿ ಮಾಡುವುದು ಬಿಟ್ಟು ಪ್ರಚಾರದಲ್ಲಿ ಸಿನಿಮಾ ಗೆಲ್ಲಿಸಲು ಹೊರಡಬಾರದು. ಕಂಟೆಂಟ್ ಚೆನ್ನಾಗಿದ್ದಾಗ ಮಾತ್ರ ಪ್ರಚಾರ ಕೈಹಿಡಿಯಬಹುದೇ ಹೊರತು, ಕಂಟೆಂಟ್ ಹಾಳುಗೆಡವಿದರೆ ಯಾವ ಪ್ರಚಾರದಿಂದಲೂ ಒಳಿತಾಗದು.&lt;/p&gt;&lt;p&gt;ಆ್ಯಂಟಿ ಕ್ಲೈಮ್ಯಾಕ್ಸ್&lt;/p&gt;&lt;p&gt;&lsquo;ಹನುಮಾನ್ ಅಂಶ್&rsquo; ಮತ್ತು &lsquo;ಬೆತ್ಲೆಹೆಮ್ ಕುಟುಂಬ ಯೂನಿಟ್&rsquo;ನಂತಹ ಚಿತ್ರಗಳು ಚಿತ್ರರಂಗಕ್ಕೆ ನೀಡುತ್ತಿರುವ ಎಚ್ಚರಿಕೆಯ ಸಂದೇಶ ಒಂದೇ -ದೊಡ್ಡ ಬಂಡವಾಳ, ಸ್ಟಾರ್&zwnj; ವರ್ಚಸ್ಸು, ಅದ್ದೂರಿ ಪ್ರಚಾರ ಚಿತ್ರವನ್ನು ರಕ್ಷಿಸಲಾರದು. ಕಥೆಯ ಸ್ವಂತಿಕೆ, ಮಣ್ಣಿನ ಮೇಲಿನ ನಿಷ್ಠೆ ಮತ್ತು ಪ್ರಾಮಾಣಿಕ ನಿರೂಪಣೆಯಿಂದ ಮಾತ್ರವೇ ಪ್ರೇಕ್ಷಕರ ಹೃದಯ ತಲುಪಲು ಸಾಧ್ಯ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/only-stories-rooted-in-the-soil-find-success/articleshow-f05gi8q"/>
        </item>
        <item>
            <title><![CDATA[ಗೆಲುವು ಕೊಟ್ಟ ನಿರ್ದೇಶಕರು ಕಾಣೆಯಾಗಿದ್ದಾರೆ!]]></title>
            <link>https://www.kannadaprabha.in/entertainment-news/the-directors-who-delivered-hits-have-disappeared/articleshow-gr834eo</link>
            <guid isPermaLink="true">https://www.kannadaprabha.in/entertainment-news/the-directors-who-delivered-hits-have-disappeared/articleshow-gr834eo</guid>
            <pubDate>Thu, 13 Aug 2026 12:54:43 +0530</pubDate>
            <description><![CDATA[&lt;p&gt;&lsquo;777 ಚಾರ್ಲಿ&rsquo; ಸಿನಿಮಾ ಕೊಟ್ಟ ಕಿರಣ್&zwnj; ರಾಜ್&zwnj;, &lsquo;ಮಿಸ್ಟರ್&zwnj; ಆಂಡ್&zwnj; ಮಿಸಸ್&zwnj; ರಾಮಾಚಾರಿ&rsquo;, &lsquo;ರಾಜಕುಮಾರ&rsquo;, &lsquo;ಯುವರತ್ನ&rsquo; ಚಿತ್ರಗಳ ಸಂತೋಷ್&zwnj; ಆನಂದ್&zwnj;ರಾಮ್&zwnj;, &lsquo;ಮಫ್ತಿ&rsquo; ಚಿತ್ರದ ನರ್ತನ್&zwnj;, &lsquo;ಲೂಸಿಯಾ&rsquo;, &lsquo;ಯೂ ಟರ್ನ್&zwnj;&rsquo; ಚಿತ್ರಗಳ ಪವನ್&zwnj; ಕುಮಾರ್&zwnj;, &lsquo;ಕಾಟೇರ&rsquo; ನಿರ್ದೇಶಕ ತರುಣ್&zwnj; ಸುಧೀರ್&zwnj;, &lsquo;ಗುರುಶಿಷ್ಯರು&rsquo; ಜಡೇಶ್ ಹಂಪಿ ಇವರೆಲ್ಲಾ ಯಾವ ಸಿನಿಮಾ ಮಾಡುತ್ತಿದ್ದಾರೆ&lt;/p&gt;]]></description>
            <media:content url="https://static-gi.asianetnews.com/images/01kycjeyxw1bmp9mqh1q2fxr86/nvn-1784980929468.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಸೇವ್ ಸ್ಯಾಂಡಲ್&zwnj;ವುಡ್&zwnj;&amp;nbsp;&lt;/strong&gt;&lt;/h2&gt;&lt;h3&gt;ಸಿನಿವಾರ್ತೆ&lt;/h3&gt;&lt;p&gt;&lsquo;777 ಚಾರ್ಲಿ&rsquo; ಸಿನಿಮಾ ಕೊಟ್ಟ ಕಿರಣ್&zwnj; ರಾಜ್&zwnj;, &lsquo;ಮಿಸ್ಟರ್&zwnj; ಆಂಡ್&zwnj; ಮಿಸಸ್&zwnj; ರಾಮಾಚಾರಿ&rsquo;, &lsquo;ರಾಜಕುಮಾರ&rsquo;, &lsquo;ಯುವರತ್ನ&rsquo; ಚಿತ್ರಗಳ ಸಂತೋಷ್&zwnj; ಆನಂದ್&zwnj;ರಾಮ್&zwnj;, &lsquo;ಮಫ್ತಿ&rsquo; ಚಿತ್ರದ ನರ್ತನ್&zwnj;, &lsquo;ಲೂಸಿಯಾ&rsquo;, &lsquo;ಯೂ ಟರ್ನ್&zwnj;&rsquo; ಚಿತ್ರಗಳ ಪವನ್&zwnj; ಕುಮಾರ್&zwnj;, &lsquo;ಕಾಟೇರ&rsquo; ನಿರ್ದೇಶಕ ತರುಣ್&zwnj; ಸುಧೀರ್&zwnj;, &lsquo;ಗುರುಶಿಷ್ಯರು&rsquo; ಜಡೇಶ್ ಹಂಪಿ ಇವರೆಲ್ಲಾ ಯಾವ ಸಿನಿಮಾ ಮಾಡುತ್ತಿದ್ದಾರೆ ಎಂದು ಕೇಳಿದರೆ ಉತ್ತರ ಸಿಗುವುದಿಲ್ಲ.&lt;/p&gt;&lt;p&gt;ತರುಣ್&zwnj; ಸುಧೀರ್&zwnj; ಕಿರುತೆರೆಯಲ್ಲಿ ಸುದ್ದಿಯಾಗುತ್ತಿದ್ದಾರೆ. ನರ್ತನ್&zwnj; ರೈಟಿಂಗ್&zwnj;ನಲ್ಲಿ ಬ್ಯುಸಿ ಇದ್ದೇನೆ ಎನ್ನುತ್ತಾರೆ. ಪ್ರಯೋಗ ಮತ್ತು ಕಂಟೆಂಟ್&zwnj; ಸಿನಿಮಾಗಳ ಪವನ್&zwnj; ಕುಮಾರ್&zwnj; ಯಾವ ಚಿತ್ರವನ್ನೂ ಘೋಷಣೆ ಮಾಡಿಲ್ಲ. ಸಂತೋಷನ್&zwnj; ಆನಂದರಾಮ್&zwnj; ಅವರು &lsquo;ಯುವ&rsquo; ನಂತರ ಕಾಣೆಯಾಗಿದ್ದಾರೆ. ಕ್ಲಾಸ್&zwnj; ಸಿನಿಮಾ ಮಾಡಿ ಎಲ್ಲಾ ವರ್ಗದ ಪ್ರೇಕ್ಷಕರನ್ನು ತಲುಪಿದ ಕಿರಣ್&zwnj; ರಾಜ್&zwnj; ಅವರ ಮುಂದಿನ ಸಿನಿಮಾ ಯಾವಾಗ ಗೊತ್ತಿಲ್ಲ.&lt;/p&gt;&lt;p&gt;&lsquo;ನಿರ್ದೇಶಕ ಹೇಳಿದ ಕತೆ ಸರಿ ಇದ್ದರೆ ಅದಕ್ಕೆ ನಿರ್ಮಾಪಕನ ಬಜೆಟ್&zwnj; ತೂಗಲ್ಲ. ಕತೆ, ಬಜೆಟ್&zwnj; ಎರಡೂ ಇದ್ದಾಗ ಹೀರೋ ಕಾಲ್&zwnj;ಶೀಟ್&zwnj; ಸಿಗಲ್ಲ. ಹೋಗಲಿ ಹೊಸ ಹೀರೋಗಳ ಜತೆಗೆ ಸಿನಿಮಾ ಮಾಡೋಣ ಅಂದರೆ ನಿರ್ಮಾಪಕರು ರಿಟರ್ನ್&zwnj; ಗ್ಯಾರಂಟಿ ಕೇಳ್ತಾರೆ&rsquo; ಎನ್ನುತ್ತಾರೆ ನಿರ್ದೇಶಕರೊಬ್ಬರು. &lsquo;ನಾನು ಸ್ಟಾರ್&zwnj; ಹೀರೋಗೇ ಸಿನಿಮಾ ಮಾಡಬೇಕು ಅಂತ ಕಾಯುತ್ತಿಲ್ಲ. ಆದರೆ, ಹೊಸ ಹೀರೋ ಜೊತೆಗೆ ಸಿನಿಮಾ ಮಾಡುತ್ತೇನೆ ಎಂದರೆ ನಿರ್ಮಾಪಕರೇ ಒಪ್ಪಲ್ಲ. ಯಾಕೆಂದರೆ ಕಾಂಬಿನೇಶನ್ ವರ್ಕ್&zwnj; ಆಗಲ್ಲ ಅಂತಾರೆ&rsquo; ಅಂತಾರೆ ಮತ್ತೊಬ್ಬ ನಿರ್ದೇಶಕ. &lsquo;ನಮ್ಮಲ್ಲಿ ಬ್ಯಾನರ್&zwnj;, ಪ್ರೊಡಕ್ಷನ್&zwnj; ಹೌಸ್&zwnj; ಕಲ್ಚರ್&zwnj; ಕಣ್ಮರೆಯಾಗಿದೆ. ಈ ಹಿಂದೆ ವಜ್ರೇಶ್ವರಿ ಕಂಬೈನ್ಸ್&zwnj;, ಈಶ್ವರಿ ಪ್ರೊಡಕ್ಷನ್&zwnj;, ಕೆಸಿಎನ್&zwnj;, ರಾಕ್&zwnj;ಲೈನ್&zwnj; ಸಿನಿಮಾಸ್&zwnj;, ಜಯಣ್ಣ- ಭೋಗೇಂದ್ರ ಸಿನಿಮಾಸ್&zwnj;, ದ್ವಾರಕೀಶ್&zwnj; ಫಿಲಮ್ಸ್&zwnj; ಹೀಗೆ ಹೆಸರಿನಿಂದಲೇ ಗಮನ ಸೆಳೆಯುತ್ತಿದ್ದ ನಿರ್ಮಾಪಕ ಹಾಗೂ ನಿರ್ಮಾಣ ಸಂಸ್ಥೆಗಳು ಇದ್ದವು. ಅವರಿಗೆ ಕತೆಗಳು ಬರುತ್ತಿದ್ದವು. ಆ ಕತೆಗಳಿಗೆ ಅವರು ನಿರ್ದೇಶಕ, ನಟ- ನಟಿಯರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಎಲ್ಲರೂ ಒಂದು ನಂಬಿಕೆಯ ಮೇಲೆ ಸಿನಿಮಾ ಮಾಡುತ್ತಿದ್ದರು. ನಂಬಿಕೆಯ ಕೊಂಡಿಗಳಾಗಿರುವ ಬ್ಯಾನರ್&zwnj; ಸಂಸ್ಕೃತಿ ಈಗಿಲ್ಲ. ಯಾರು ಯಾರನ್ನೂ ನಂಬುತ್ತಿಲ್ಲ. ನಿರ್ದೇಶಕ ಸಿನಿಮಾ ಮಾಡೋ ಜೊತೆಗೆ ನಿರ್ಮಾಪಕನಿಗೆ ಬ್ಯುಸಿನೆಸ್&zwnj; ಗ್ಯಾರಂಟಿ ಕೊಡಬೇಕಿದೆ. ಆದರೂ ಯಾರೋ ಒಬ್ಬರು ರಿಸ್ಕ್&zwnj; ತೆಗೆದುಕೊಳ್ಳಬೇಕು. ಎಲ್ಲರೂ ಸೇರಿ ಮಾತುಕತೆ ಮಾಡಬೇಕು. ಕನ್ನಡದ ಹೀರೋಗಳು, ಕಲಾವಿದರು, ತಂತ್ರಜ್ಞರು ಮೊದಲು ಕನ್ನಡದಲ್ಲೇ ಸಿನಿಮಾ ಮಾಡಿ ಎಂದು ಹೇಳುವವರು ಬೇಕು. ಹೀಗೆ ಮಾಡಿದರೆ ಖಂಡಿತ ಬದಲಾವಣೆ ಸಾಧ್ಯ&rsquo; ಎನ್ನುವುದು ಯಶಸ್ವಿ ನಿರ್ದೇಶಕರೊಬ್ಬರ ನಂಬಿಕೆ.&lt;/p&gt;&lt;p&gt;&lsquo;ಪ್ರತಿ ಚಿತ್ರವೂ ಕೆಜಿಎಫ್&zwnj; ಆಗಬೇಕು, ಎಲ್ಲವೂ ಕಾಂತಾರ ಆಗಬೇಕು ಅನ್ನೋ ನಿರ್ಮಾಪಕರ ಸಂಖ್ಯೆ ಹೆಚ್ಚಿದೆ. ನಾವು ಅವರ ಮೂಗಿನ ನೇರಕ್ಕೆ ಸಿನಿಮಾ ಮಾಡಬೇಕು. ಇದು ಸಾಧ್ಯವಿಲ್ಲ. ಯಾಕೆಂದರೆ ಒಬ್ಬೊಬ್ಬ ನಿರ್ದೇಶಕನ ಸಿನಿಮಾ ಶೈಲಿಯೂ ಒಂದೊಂದು ರೀತಿ ಇರುತ್ತದೆ. ಕೆಜಿಎಫ್&zwnj; ಅಥವಾ ಕಾಂತಾರ ಸಿನಿಮಾಗಳ ಯಶಸ್ಸು ನಮಗೆ ಸ್ಫೂರ್ತಿ ಆಗಬೇಕೆ ಹೊರತು, ಅದೇ ರೀತಿಯ ಸಿನಿಮಾ ಮಾಡಿ ಅಂತ ಹೇಳಬಾರದು. ಈ ವಿಚಾರದಲ್ಲಿ ನಿರ್ಮಾಪಕರು ಬದಲಾದರೆ. ನಾವು ಖಾಲಿ ಕೂರಬೇಕಿಲ್ಲ&rsquo; ಎನ್ನುತ್ತಾರೆ ಯುವ ನಿರ್ದೇಶಕ.&lt;/p&gt;&lt;p&gt;ಚಿತ್ರರಂಗದಲ್ಲಿ ಪ್ರತಿಭಾವಂತ ಯುವ ನಿರ್ದೇಶಕರು ಸಿಗುತ್ತಾರೆ, ಈ ಎಲ್ಲಾ ನಿರ್ದೇಶಕರನ್ನು ದುಡಿಸಿಕೊಳ್ಳುವ ಸವಾಲನ್ನು ನಿರ್ಮಾಪಕರು ಸ್ವೀಕರಿಸಬೇಕಿದೆ ಅನ್ನುವುದು ಬಹುತೇಕ ನಿರ್ದೇಶಕರ ಮಾತು. ಯಾಕೆಂದರೆ ಎಲ್ಲರಿಗೂ ಪ್ರಶಾಂತ್&zwnj; ನೀಲ್&zwnj; ಬೇಕು ಅಂದರೆ ಸಿಗಲ್ಲ. ಯಶ್&zwnj;, ರಿಷಬ್&zwnj; ಶೆಟ್ಟಿ ಬ್ಯುಸಿ ಮತ್ತು ದುಬಾರಿ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/the-directors-who-delivered-hits-have-disappeared/articleshow-gr834eo"/>
        </item>
        <item>
            <title><![CDATA[ಚಿಕ್ಕಣ್ಣ ಮದುವೆಗೆ ದರ್ಶನ್‌ಗೆ ಆಹ್ವಾನವಿಲ್ಲ]]></title>
            <link>https://www.kannadaprabha.in/entertainment-news/darshan-not-invited-to-chikkanna/articleshow-hmdmkg4</link>
            <guid isPermaLink="true">https://www.kannadaprabha.in/entertainment-news/darshan-not-invited-to-chikkanna/articleshow-hmdmkg4</guid>
            <pubDate>Thu, 27 Aug 2026 12:31:28 +0530</pubDate>
            <description><![CDATA[&lt;p&gt;ಯಶ್&zwnj; ಅವರನ್ನು ನಾನು ಭಯ್ಯಾ ಅಂತ ಕರೀತೀನಿ. ಅವರಿಗೆ ಆಮಂತ್ರಣ ಪತ್ರಿಕೆ ಕೊಡಲು ಹೋಗಿದ್ದಾಗ ಗಂಡ ಹೇಗಿರ್ಬೇಕು, ಏನೇನು ತಪ್ಪು ಮಾಡಬಾರದು ಅನ್ನೋದನ್ನು ರಾಧಿಕಾ ಹತ್ರ ಕೇಳ್ಕೊಂಡು ಬಿಡಪ್ಪ ಅಂದ್ರು. ಮದುವೆ ಆದಮೇಲೆ ಹೆಂಡತಿ ಜೊತೆಗೆ ಟಾಕ್ಸಿಕ್&zwnj; ಸಿನಿಮಾ ನೋಡ್ತೀನಿ &rsquo;&lt;/p&gt;]]></description>
            <media:content url="https://static-gi.asianetnews.com/images/01j4xk7qa3sarz1xf3nap350rw/1.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt; ಸಿನಿವಾರ್ತೆ&amp;nbsp;&lt;/strong&gt;&lt;/h2&gt;&lt;p&gt;&lsquo;ನನ್ನದು ಮನೆಯವರು ನೋಡಿ ನಿಶ್ಚಯಿಸಿದ ಮದುವೆ. ಆದರೆ ಮದುವೆ ಫಿಕ್ಸ್ ಆದಮೇಲೆ ಲವ್&zwnj; ಆಗೋಯ್ತು. ಹೀಗಾಗಿ ಅರೇಂಜ್ಡ್&zwnj; ಕಮ್&zwnj; ಲವ್&zwnj; ಮ್ಯಾರೇಜ್&zwnj;. ಯಶ್&zwnj; ಅವರನ್ನು ನಾನು ಭಯ್ಯಾ ಅಂತ ಕರೀತೀನಿ. ಅವರಿಗೆ ಆಮಂತ್ರಣ ಪತ್ರಿಕೆ ಕೊಡಲು ಹೋಗಿದ್ದಾಗ ಗಂಡ ಹೇಗಿರ್ಬೇಕು, ಏನೇನು ತಪ್ಪು ಮಾಡಬಾರದು ಅನ್ನೋದನ್ನು ರಾಧಿಕಾ ಹತ್ರ ಕೇಳ್ಕೊಂಡು ಬಿಡಪ್ಪ ಅಂದ್ರು. ಮದುವೆ ಆದಮೇಲೆ ಹೆಂಡತಿ ಜೊತೆಗೆ ಟಾಕ್ಸಿಕ್&zwnj; ಸಿನಿಮಾ ನೋಡ್ತೀನಿ &rsquo;&lt;/p&gt;&lt;h3&gt;- ಹೀಗೆ ಹೇಳಿದ್ದು ಹಾಸ್ಯನಟ ಚಿಕ್ಕಣ್ಣ.&lt;/h3&gt;&lt;p&gt;ತನ್ನ ಮದುವೆ ಕುರಿತಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, &lsquo;ಮದುವೆಗೆ ದರ್ಶನ್&zwnj; ಅವರಿಗೆ ಆಮಂತ್ರಣ ಪತ್ರಿಕೆ ನೀಡಿಲ್ಲ. ದರ್ಶನ್&zwnj; ಅವರ ಪ್ರಕರಣದಲ್ಲಿ ನಾನು ಸಾಕ್ಷಿಯಾಗಿರುವುದರಿಂದ ಅವರು ಜೈಲಲ್ಲಿ ಇದ್ದರೂ, ಹೊರಗಿದ್ದರೂ ಅವರನ್ನು ಮದುವೆಗೆ ಕರೆಯುವಂತಿಲ್ಲ&rsquo; ಎಂದರು.&lt;/p&gt;&lt;p&gt;ಆಗಸ್ಟ್&zwnj; 29 ಹಾಗೂ 30ಕ್ಕೆ ಮೈಸೂರಿನಲ್ಲಿ ಚಿಕ್ಕಣ್ಣ ಹಾಗೂ ಪಾವನಾ ಮದುವೆ ನಡೆಯಲಿದೆ. ಚಿಕ್ಕಣ್ಣ ಅವರ ಭಾವೀ ಪತ್ನಿ ಪಾವನಾ ಉದ್ಯಮಿಯಾಗಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/darshan-not-invited-to-chikkanna/articleshow-hmdmkg4"/>
        </item>
        <item>
            <title><![CDATA[ಟಾಕ್ಸಿಕ್ ಯಶ್ ಚಿತ್ರ ಅಲ್ಲ, ಭಾರತೀಯ ಸಿನಿಮಾ : ಯಶ್]]></title>
            <link>https://www.kannadaprabha.in/entertainment-news/toxic-isnt-just-a-yash-film-its-an-indian-film-yash/articleshow-iep4vpl</link>
            <guid isPermaLink="true">https://www.kannadaprabha.in/entertainment-news/toxic-isnt-just-a-yash-film-its-an-indian-film-yash/articleshow-iep4vpl</guid>
            <pubDate>Mon, 10 Aug 2026 13:14:42 +0530</pubDate>
            <description><![CDATA[&lt;p&gt;&lsquo;ಇನ್ನುಮುಂದೆ ಕನ್ನಡ, ಹಿಂದಿ, ತೆಲುಗು ಸಿನಿಮಾ ಎಂಬ ಪ್ರತ್ಯೇಕತೆ ಇರಲ್ಲ. ಟಾಕ್ಸಿಕ್&zwnj; ಯಶ್ ಚಿತ್ರ ಅಲ್ಲ, ಅದು ಭಾರತೀಯ ಸಿನಿಮಾ. ಇಂಡಿಯನ್&zwnj; ಸಿನಿಮಾಕ್ಕೆ ಟಾಕ್ಸಿಕ್ ಒಂದು ಲೇಬಲ್. ನಾವೆಲ್ಲ ಭಾರತೀಯ ಸಿನಿಮಾ ಮೂಲಕ ಗುರುತಿಸಿಕೊಂಡು ವಿಶ್ವಮಟ್ಟಕ್ಕೆ ನಮ್ಮ ಸಿನಿಮಾಗಳನ್ನು ತಲುಪಿಸಬೇಕು&lt;/p&gt;]]></description>
            <media:content url="https://static-gi.asianetnews.com/images/01kzks682qhyfa6k6qqmfjcjxj/whatsapp-image-2026-08-07-at-4.37.54-pm--2--1786296606807.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಸಿನಿವಾರ್ತೆ&lt;/strong&gt;&lt;/p&gt;&lt;p&gt;ರಾಕಿಂಗ್ ಸ್ಟಾರ್ ಯಶ್ ನಟನೆಯ &lsquo;ಟಾಕ್ಸಿಕ್&rsquo; ಸಿನಿಮಾದ ಟ್ರೇಲರ್ ಪಂಚಭಾಷೆಗಳಲ್ಲಿ ಬಿಡುಗಡೆಯಾಗಿ ಅತ್ಯುತ್ತಮ ಸ್ಪಂದನೆ ಪಡೆಯುತ್ತಿದೆ.&lt;/p&gt;&lt;p&gt;ಟ್ರೇಲರ್&zwnj; ಲಾಂಚ್&zwnj; ವೇಳೆ ಯಶ್&zwnj;, &lsquo;ಇನ್ನುಮುಂದೆ ಕನ್ನಡ, ಹಿಂದಿ, ತೆಲುಗು ಸಿನಿಮಾ ಎಂಬ ಪ್ರತ್ಯೇಕತೆ ಇರಲ್ಲ. ಟಾಕ್ಸಿಕ್&zwnj; ಯಶ್ ಚಿತ್ರ ಅಲ್ಲ, ಅದು ಭಾರತೀಯ ಸಿನಿಮಾ. ಇಂಡಿಯನ್&zwnj; ಸಿನಿಮಾಕ್ಕೆ ಟಾಕ್ಸಿಕ್ ಒಂದು ಲೇಬಲ್. ನಾವೆಲ್ಲ ಭಾರತೀಯ ಸಿನಿಮಾ ಮೂಲಕ ಗುರುತಿಸಿಕೊಂಡು ವಿಶ್ವಮಟ್ಟಕ್ಕೆ ನಮ್ಮ ಸಿನಿಮಾಗಳನ್ನು ತಲುಪಿಸಬೇಕು. ದಾರಿ ಯಾವುದೇ ಇರಬಹುದು, ಗುರಿ ಮುಟ್ಟಬೇಕು. ಕಾಲಕ್ಕೆ ತಕ್ಕ ಹಾಗೆ ಕುಣಿಯಬೇಕು. ತಾಳಕ್ಕೆ ತಕ್ಕ ಹಾಗೆ ಕುಣಿಯಬೇಕು. ಸಿನಿಮಾ ನಿರ್ಮಾಣ ಮಾಡುವುದು ಇಡೀ ಜಗತ್ತಿನ ವಿರುದ್ಧ ಮಾಡಿದಂತೆ. ಎಷ್ಟೋ ಸಲ ಒಂದೊಳ್ಳೆ ಸಿನಿಮಾ ಶುರುವಾದ ಹತ್ತಿಪ್ಪತ್ತು ದಿನಗಳಲ್ಲೇ ಚಿತ್ರ ಸ್ಥಗಿತಗೊಂಡಿದೆ ಎಂಬ ಸುಳ್ಳು ಸುದ್ದಿ ಬರುತ್ತದೆ. ಇದನ್ನೆಲ್ಲ ಅರಗಿಸಿಕೊಳ್ಳುವುದು ಕಷ್ಟ. ಟಾಕ್ಸಿಕ್ ಸಿನಿಮಾಕ್ಕೆ ಎರಡು ವರ್ಷನ್&zwnj;ಗಳಲ್ಲಿ 200 ದಿನಗಳ ಕಾಲ ಶೂಟಿಂಗ್ ಮಾಡಿದ್ದೇವೆ&rsquo; ಎಂದರು.&lt;/p&gt;&lt;h2&gt;ಐ ಯ್ಯಾಮ್ ಫ್ರಂ ಪಡುವಾರಳ್ಳಿ&lt;/h2&gt;&lt;p&gt;&lsquo;ಯೂ ನೋ ಮೈ ಇಂಗ್ಲೀಷ್ ಬಿ ಫೋರ್ ಯಾ, ಐ ಯ್ಯಾಮ್ ಫ್ರಂ ಪಡುವಾರಳ್ಳಿ&rsquo; ಎಂದು ಯಶ್&zwnj; ಹೇಳಿದಾಗ ಫ್ಯಾನ್ಸ್ ಕಡೆಯಿಂದ ಜೋರಾದ ವಿಷಲ್, ಕೇಕೆ ಕೇಳಿಬಂತು.&lt;/p&gt;&lt;h3&gt;ಗೀತು ಮೋಹನ್&zwnj; ದಾಸ್ ಭಾವುಕ&lt;/h3&gt;&lt;p&gt;ನಿರ್ದೇಶಕಿ ಗೀತು ಮೋಹನ್&zwnj; ದಾಸ್ ಭಾವುಕವಾಗಿ ಮಾತನಾಡಿದರು. &lsquo;ಎಲ್ಲರೂ ನನ್ನನ್ನು ಅನುಮಾನದಲ್ಲಿ ನೋಡುತ್ತಿದ್ದಾಗ ನನಗೆ ಅವಕಾಶ ಕೊಟ್ಟವರು ಯಶ್. ಅವರ ಬಗೆಗೆ ನನಗೆ ಬಹಳ ಆಳವಾದ ಎಮೋಶನ್ ಇದೆ&rsquo; ಎಂದರು.&lt;/p&gt;&lt;p&gt;ಕಳೆದ 10 ವರ್ಷಗಳಿಂದ ಸಿನಿಮಾ ಪ್ರಚಾರದಿಂದ ದೂರ ಉಳಿದಿದ್ದ ನಯನತಾರ &lsquo;ಟಾಕ್ಸಿಕ್&zwnj;&rsquo; ಟ್ರೇಲರ್&zwnj; ಲಾಂಚ್&zwnj;ನಲ್ಲಿ ಹಾಜರಿದ್ದರು. &lsquo;ಯಶ್&zwnj; ಕರೆಗೆ ಓಗೊಟ್ಟು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಯಶ್ ಸಿನಿಮಾದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಲಾರ್ಜರ್&zwnj; ದ್ಯಾನ್ ಲೈಫ್&zwnj; ವ್ಯಕ್ತಿತ್ವ ಹೊಂದಿರುವವರು. ಸಿನಿಮಾಕ್ಕೆ ರಾಕ್ಷಸನಂತೆ ಕೆಲಸ ಮಾಡುವ ಇಂಥಾ ನಟ, ನಿರ್ಮಾಪಕನನ್ನು ಮತ್ತೆಲ್ಲೂ ಕಂಡಿಲ್ಲ&rsquo; ಎಂದರು.&lt;/p&gt;&lt;p&gt;ನಿರ್ಮಾಪಕ ವೆಂಕಟ್ ಹೊಸ ಸಿನಿಮಾಳನ್ನು ಸದಾ ಬೆಂಬಲಿಸುವುದಾಗಿ ಹೇಳಿದರು.&lt;/p&gt;&lt;p&gt;ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ, ಬಾಲಾಜಿ ಮನೋಹರ್&zwnj; ಸೇರಿದಂತೆ ಚಿತ್ರತಂಡದವರು ಭಾಗಿಯಾಗಿದ್ದರು.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/toxic-isnt-just-a-yash-film-its-an-indian-film-yash/articleshow-iep4vpl"/>
        </item>
        <item>
            <title><![CDATA[ಟಾಕ್ಸಿಕ್‌ ಚಿತ್ರದ ಮೊದಲ ದಿನದ ಶೋಗಳ ಟಿಕೆಟ್‌ ಬಹುತೇಕ ಸೋಲ್ಡ್‌ ಔಟ್‌]]></title>
            <link>https://www.kannadaprabha.in/entertainment-news/tickets-for-toxics-first-day-shows-are-almost-sold-out/articleshow-ivs8ka6</link>
            <guid isPermaLink="true">https://www.kannadaprabha.in/entertainment-news/tickets-for-toxics-first-day-shows-are-almost-sold-out/articleshow-ivs8ka6</guid>
            <pubDate>Sat, 22 Aug 2026 12:02:26 +0530</pubDate>
            <description><![CDATA[&lt;p&gt;ಆ.26ಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿರುವ ಯಶ್&zwnj; ನಟನೆಯ &lsquo;ಟಾಕ್ಸಿಕ್&zwnj;&rsquo; ಚಿತ್ರದ ಟಿಕೆಟ್&zwnj;ಗಳ ಮುಂಗಡ ಬುಕಿಂಗ್&zwnj; ಓಪನ್&zwnj; ಆಗುತ್ತಿದ್ದಂತೆಯೇ ರಾಜ್ಯದ ಬಹುತೇಕ ಚಿತ್ರಮಂದಿರಗಳ ಮೊದಲ ದಿನದ ಬಹುತೇಕ ಎಲ್ಲಾ ಶೋಗಳ ಟಿಕೆಟ್&zwnj;ಗಳು ಸೋಲ್ಡ್&zwnj; ಔಟ್&zwnj; ಆಗಿವೆ.&lt;/p&gt;]]></description>
            <media:content url="https://static-gi.asianetnews.com/images/01m0jf210ec00n9me4mr81ntq1/toxic-advance-booking-data-1787326170126.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt; ಸಿನಿವಾರ್ತೆ&lt;/strong&gt;&lt;/p&gt;&lt;p&gt;ಆ.26ಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿರುವ ಯಶ್&zwnj; ನಟನೆಯ &lsquo;ಟಾಕ್ಸಿಕ್&zwnj;&rsquo; ಚಿತ್ರದ ಟಿಕೆಟ್&zwnj;ಗಳ ಮುಂಗಡ ಬುಕಿಂಗ್&zwnj; ಓಪನ್&zwnj; ಆಗುತ್ತಿದ್ದಂತೆಯೇ ರಾಜ್ಯದ ಬಹುತೇಕ ಚಿತ್ರಮಂದಿರಗಳ ಮೊದಲ ದಿನದ ಬಹುತೇಕ ಎಲ್ಲಾ ಶೋಗಳ ಟಿಕೆಟ್&zwnj;ಗಳು ಸೋಲ್ಡ್&zwnj; ಔಟ್&zwnj; ಆಗಿವೆ.&lt;/p&gt;&lt;h2&gt;&lt;strong&gt;ಪ್ರತಿ ಗಂಟೆಗೆ 25 ಸಾವಿರ ಟಿಕೆಟ್&zwnj; ಸೇಲ್&zwnj;&lt;/strong&gt;&lt;/h2&gt;&lt;p&gt;ಮಲ್ಟಿಪ್ಲೆಕ್ಸ್​​ಗಳ ಮೊದಲ ದಿನದ ಬಹುತೇಕ ಪ್ರದರ್ಶನಗಳ ಎಲ್ಲಾ ಟಿಕೆಟ್&zwnj;ಗಳು ಕೆಲವೇ ನಿಮಿಷಗಳಲ್ಲಿ ಸಂಪೂರ್ಣವಾಗಿ ಮಾರಾಟ ಆಗಿದ್ದು, ಬುಕ್&zwnj;ಮೈಶೋ ಆ್ಯಪ್&zwnj;ನಲ್ಲೇ ಪ್ರತಿ ಗಂಟೆಗೆ 25 ಸಾವಿರಕ್ಕೂ ಹೆಚ್ಚು ಟಿಕೆಟ್&zwnj;ಗಳು ಸೇಲ್&zwnj; ಆಗುವ ಮೂಲಕ &lsquo;ಟಾಕ್ಸಿಕ್&zwnj;&rsquo; ಸಿನಿಮಾ ಮುಂಗಡ ಬುಕ್ಕಿಂಗ್&zwnj;ನಲ್ಲಿ ದಾಖಲೆ ನಿರ್ಮಿಸಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಈ ಪರಿ ಟಿಕೆಟ್&zwnj; ಬುಕಿಂಗ್&zwnj; ಆಗುತ್ತಿರುವುದು ಕನ್ನಡ ಚಿತ್ರವೊಂದರ ಮಟ್ಟಿಗೆ ಸಾರ್ವಕಾಲಿಕ ದಾಖಲೆ ಎನ್ನುತ್ತಿದೆ ಚಿತ್ರರಂಗ.&lt;/p&gt;&lt;h3&gt;ಬೆಂಗಳೂರಿನಲ್ಲಿ ಟಿಕೆಟ್&zwnj; ಬೆಲೆ 250 ರು. ನಿಂದ 2000 ಸಾವಿರ&lt;/h3&gt;&lt;p&gt;ಸಿನಿಮಾ ಬಿಡುಗಡೆಗೆ ನಾಲ್ಕು ದಿನಗಳು ಇರುವಾಗಲೇ ಹೀಗೆ ಬಾಕ್ಸ್&zwnj; ಅಫೀಸ್&zwnj;ನಲ್ಲಿ ಸದ್ದು ಮಾಡುತ್ತಿರುವ ಯಶ್&zwnj; ಅವರ &lsquo;ಟಾಕ್ಸಿಕ್&zwnj;&rsquo; ಚಿತ್ರದ ಟಿಕೆಟ್&zwnj;ಗಳ ಬೆಲೆ ಗಗನಕ್ಕೇರಿದೆ. ಬೆಂಗಳೂರಿನಲ್ಲಿ ಸಿಂಗಲ್&zwnj; ಸ್ಕ್ರೀನ್&zwnj;ಗಳಲ್ಲಿ 250- 300 ರು., ಮಲ್ಟಿಪ್ಲೆಕ್ಸ್&zwnj;ಗಳಲ್ಲಿ ಸಾಮಾನ್ಯ ವರ್ಗದಲ್ಲಿ 350 ರಿಂದ 500 ರು, ಪ್ರೀಮಿಯಂ ಸೀಟ್&zwnj; ಹಾಗೂ ವಿಶೇಷ ಶೋಗಳಿಗೆ 600 ರಿಂದ 800 ರು., ಪ್ರೀಮಿಯಂ ಮಲ್ಟಿಪ್ಲೆಕ್ಸ್&zwnj; ಸ್ಕ್ರೀನ್&zwnj;ಗಳು 900 ರಿಂದ 1,500 ರು. ಅತಿ ಪ್ರೀಮಿಯಂ ಸ್ಕ್ರೀನ್&zwnj;ಗಳಲ್ಲಿ 1,900 ರಿಂದ 2000 ಸಾವಿರ ವರೆಗೂ ಟಿಕೆಟ್&zwnj; ಸೇಲ್ ಆಗುತ್ತಿವೆ.&lt;/p&gt;&lt;p&gt;&lt;strong&gt;ರಾಜ್ಯದ ಬೇರೆ ಭಾಗಗಳಲ್ಲಿ 200 ರಿಂದ 700 ರು.&lt;/strong&gt;&lt;/p&gt;&lt;p&gt;ರಾಜ್ಯದ ಬೇರೆ ಬೇರೆ ಭಾಗಗಳಲ್ಲೂ ಬೇರೆ ಟಿಕೆಟ್&zwnj; ದರಗಳನ್ನು ನಿಗದಿ ಮಾಡಲಾಗಿದೆ. ಮೈಸೂರಿನಲ್ಲಿ ಸಾಮಾನ್ಯ ಟಿಕೆಟ್&zwnj; 200-400 ರು., ಪ್ರೀಮಿಯಂ 400-700 ರು., ಮಂಗಳೂರು 200-350 ರು., ಪ್ರೀಮಿಯಂ 350-600 ರು., ಹುಬ್ಬಳ್ಳಿ ಮತ್ತು ಧಾರವಾಡ 150-300 ರು., ಪ್ರೀಮಿಯಂ 300-500 ರು, ತುಮಕೂರು 150-300 ರು., 300-500 ರು., ಶಿವಮೊಗ್ಗ 150-300 ರು., ಪ್ರೀಮಿಯಂ 300- 500 ರು., ದಾವಣಗೆರೆ 150-300 ರು., 300-500 ರು., ಉಡುಪಿ 180-350 ರು., 350-600 ರು, ಕುಂದಾಪುರ 150-300 ರು., 300- 500 ರು., ರಾಯಚೂರು 150-300 ರು, 300-500 ರು., ಕಲಬುರಗಿ 150-300 ರು., 300-500 ರು. ವರೆಗೂ ಟಿಕೆಟ್&zwnj; ಬೆಲೆ ನಿಗದಿಯಾಗಿದೆ.&lt;/p&gt;&lt;p&gt;ದೇಶದ ಬೇರೆ ಬೇರೆ ನಗರಗಳ ಪೈಕಿ ಮುಂಬೈ ಹಾಗೂ ದೆಹಲಿಯಲ್ಲಿ 800 ರಿಂದ 900 ರು. ಗೆ &lsquo;ಟಾಕ್ಸಿಕ್&zwnj;&rsquo; ಚಿತ್ರದ ಟಿಕೆಟ್&zwnj;ಗಳು ಮಾರಾಟ ಆಗುತ್ತಿವೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/tickets-for-toxics-first-day-shows-are-almost-sold-out/articleshow-ivs8ka6"/>
        </item>
        <item>
            <title><![CDATA[ಶಾಂತಿಕ್ರಾಂತಿ ಮರು ಬಿಡುಗಡೆ ಇಷ್ಟ, ಆ ಪ್ರಕ್ರಿಯೆ ಕಷ್ಟ: : ವಿಕ್ರಂ ರವಿಚಂದ್ರನ್]]></title>
            <link>https://www.kannadaprabha.in/entertainment-news/id-love-to-see-shantikranti-re-released-but-the-process-is-difficult-vikram-ravichandran/articleshow-kndxtqw</link>
            <guid isPermaLink="true">https://www.kannadaprabha.in/entertainment-news/id-love-to-see-shantikranti-re-released-but-the-process-is-difficult-vikram-ravichandran/articleshow-kndxtqw</guid>
            <pubDate>Mon, 10 Aug 2026 13:07:27 +0530</pubDate>
            <description><![CDATA[&lt;p&gt;ದೇಶದ ಮೊದಲ ಪ್ಯಾನ್&zwnj; ಇಂಡಿಯಾ ಸಿನಿಮಾ ಎಂದು ಕರೆಸಿಕೊಳ್ಳುವ ರವಿಚಂದ್ರನ್&zwnj; ನಟನೆಯ &lsquo;ಶಾಂತಿ ಕ್ರಾಂತಿ&rsquo; ಮರು ಬಿಡುಗಡೆಗೆ ಅಭಿಮಾನಿಗಳ ಒತ್ತಾಯ ಹೆಚ್ಚಾಗುತ್ತಿದೆ. ಈ ಬಗ್ಗೆ ವಿಕ್ರಂ ರವಿಚಂದ್ರನ್&zwnj; ಅಪ್&zwnj;ಡೇಟ್&zwnj; ನೀಡಿದ್ದಾರೆ. ಜೊತೆಗೆ ತನ್ನ &lsquo;ಮುಧೋಳ್&rsquo; ಸಿನಿಮಾ ಸಮಸ್ಯೆ ಬಗೆಗೂ ಮಾತನಾಡಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/01kzc0p8fmt9a38vqevn9tqmsg/kk-1786036036084.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಪ್ರಿಯಾ ಕೆರ್ವಾಶೆ&lt;/strong&gt;&lt;/h2&gt;&lt;h3&gt;1. ರವಿಚಂದ್ರನ್&zwnj; ಅವರ ಶಾಂತಿಕ್ರಾಂತಿ ರೀ ರಿಲೀಸ್ ಪ್ಲಾನ್&zwnj; ಏನು?&lt;/h3&gt;&lt;p&gt;ಚಿತ್ರ ಮರುಬಿಡುಗಡೆ ಮಾತುಕತೆ ನಡೆಯುತ್ತಿದೆ. ಆ ಪ್ರಕ್ರಿಯೆ, ಸಾಧ್ಯತೆ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಜೊತೆಗೆ ಸಿನಿಮಾದ ನೆಗೆಟಿವ್&zwnj; ರೀಲ್&zwnj; ಚೆಕ್&zwnj; ಮಾಡಬೇಕು, ಸಿನಿಮಾಕ್ಕೆ ಸಂಬಂಧಿಸಿದವರ ಜೊತೆಗೆ ಮಾತುಕತೆ ಆಗಬೇಕು. ಇನ್ನೊಂದು ಹತ್ತು ದಿನದಲ್ಲಿ ಮರು ಬಿಡುಗಡೆ ಬಗ್ಗೆ ಸ್ಪಷ್ಟತೆ ಸಿಗುತ್ತದೆ. ಸಾಧ್ಯತೆ ಇಲ್ಲ ಅಂದರೆ ಆಗಲ್ಲ ಅಂತ ನೇರವಾಗಿ ಜನರಿಗೆ ಹೇಳ್ತೀವಿ.&lt;/p&gt;&lt;p&gt;&lt;strong&gt;2. ಇದ್ದಕ್ಕಿದ್ದ ಹಾಗೆ ಶಾಂತಿಕ್ರಾಂತಿ ಬಗ್ಗೆ ಅಲೆ ಎದ್ದಿದ್ದು ಯಾಕೆ?&lt;/strong&gt;&lt;/p&gt;&lt;p&gt;ಈ ವರ್ಷ ಸೆಪ್ಟೆಂಬರ್&zwnj; 19 ಬಂದರೆ &lsquo;ಶಾಂತಿ ಕ್ರಾಂತಿ&rsquo; ಬಿಡುಗಡೆಯಾಗಿ 35 ವರ್ಷಗಳಾಗುತ್ತದೆ. 90ನೇ ದಶಕದ ಆರಂಭಕ್ಕೇ 10 ಕೋಟಿಯಲ್ಲಿ ತಯಾರಾದ ಸಿನಿಮಾ ಅಂತ ಜನ ಹೇಳುತ್ತಾರೆ. ಆದರೆ ಅದಕ್ಕೂ ಹೆಚ್ಚೇ ಬಜೆಟ್&zwnj; ಇತ್ತು ಅಂತ ತಂದೆಯವರು ಹೇಳುತ್ತಿದ್ದರು. ಕಳೆದ ಒಂದು ವಾರದಿಂದ ಸೋಷಿಯಲ್&zwnj; ಮೀಡಿಯಾ ತೆಗೆದರೆ ಬರೀ ಶಾಂತಿ ಕ್ರಾಂತಿ ಸಿನಿಮಾ ಮರುಬಿಡುಗಡೆ ಮಾಡಿ ಅನ್ನುವ ಪೋಸ್ಟ್&zwnj;ಗಳೇ ಕಣ್ಣಿಗೆ ಬೀಳುತ್ತಿವೆ. ಅಭಿಮಾನಿಗಳ ಒತ್ತಾಯ ನೋಡಿ, ಅಪ್ಪನೂ ರೀರಿಲೀಸ್&zwnj; ಚಾನ್ಸ್&zwnj; ಇದೆಯಾ ನೋಡು ಅಂದಿದ್ದಾರೆ. ಅದು ಜನರ ಪ್ರೀತಿ. ಆ ಪ್ರೀತಿಗೆ ಸ್ಪಂದಿಸಬೇಕು ಅಂತ ನನ್ನ ಯೋಚನೆ. ಅದರ ಹೊರತು ಹಿಟ್&zwnj; ಫ್ಲಾಪ್&zwnj; ಬಗ್ಗೆ ತಲೆ ಕೆಡಿಸಿಕೊಳಲ್ಲ.&lt;/p&gt;&lt;p&gt;3. &lt;strong&gt;ಆರು ತಿಂಗಳ ಹಿಂದೆ ಸೋಷಲ್&zwnj; ಮೀಡಿಯಾದಿಂದ ಔಟ್ ಆದ್ರಿ. ಸಡನ್ನಾಗಿ ಮತ್ತೆ ಕಾಣಿಸಿಕೊಂಡು ಮುಧೋಳ್&zwnj; ಸಿನಿಮಾ ಬಗ್ಗೆ ಮಾತಾಡಿದ್ರಿ. ಈ ಆರು ತಿಂಗಳಲ್ಲಿ ಏನಾಗಿತ್ತು?&lt;/strong&gt;&lt;/p&gt;&lt;p&gt;ಮುಧೋಳ್ ಸಿನಿಮಾವನ್ನು ಈ ವರ್ಷ ಜನವರಿಗೆ ಬಿಡುಗಡೆ ಮಾಡುವ ಪ್ಲಾನ್&zwnj; ಇತ್ತು. ಆದರೆ ಸಿನಿಮಾದ ಔಟ್&zwnj;ಪುಟ್&zwnj; ನಾವಂದುಕೊಂಡ ಹಾಗೆ ಬರಲಿಲ್ಲ. ರೀ ವರ್ಕ್&zwnj; ಮಾಡಬೇಕಿತ್ತು. ಹಾಗೆಂದು ನಾವೇನು ದೊಡ್ಡ ಬಜೆಟ್&zwnj; ಸಿನಿಮಾ ಮಾಡ್ತಿಲ್ಲ. ಆದರೆ ಮಾಡುವ ಸಿನಿಮಾವನ್ನು ಅಚ್ಚುಕಟ್ಟಾಗಿ ಮಾಡಿ ಜನರ ಮುಂದಿಡಬೇಕು, ನಾವು ಅಂದುಕೊಂಡಿರುವ ಹಾಗೆಯೇ ಮಾಡಬೇಕು ಅನ್ನುವುದಿತ್ತು. ಸೋಷಿಯಲ್&zwnj; ಮೀಡಿಯಾದಲ್ಲಿದ್ದರೆ ಜನ ಮತ್ತೆ ಆ ಬಗ್ಗೆ ಪ್ರಶ್ನೆ ಮಾಡುತ್ತಾರೆ, ಅವರಿಗೆ ಉತ್ತರ ರೂಪದಲ್ಲಿ ಸಿನಿಮಾ ಅಪ್&zwnj;ಡೇಟ್&zwnj; ಅನ್ನೇ ಕೊಡೋಣ ಅಂದುಕೊಂಡು ಹೊರಬಂದೆ.&lt;/p&gt;&lt;p&gt;&lt;strong&gt;- ವಿಜಯ್&zwnj; ಟಾಟಾ ನಿಮಗೀಗ ಸಾಥ್&zwnj; ನೀಡುತ್ತಿದ್ದಾರಲ್ವಾ?&lt;/strong&gt;&lt;/p&gt;&lt;p&gt;ಅವರು ಕಳೆದ ವರ್ಷವೇ ನಮ್ಮ ಟೀಂಗೆ ಬಂದರು. ಅವರು ನಿರ್ಮಾಪಕರು ಅನ್ನುವುದಕ್ಕಿಂತಲೂ ನಮ್ಮ ಕುಟುಂಬದ ಸದಸ್ಯರ ಹಾಗಿದ್ದಾರೆ. ಮುಧೋಳ್&zwnj; ಕಂಟೆಂಟ್&zwnj; ನೋಡಿ ಇಷ್ಟಪಟ್ಟರು. ದುಡ್ಡು ಮಾಡಬೇಕು ಅನ್ನೋದಕ್ಕಿಂತಲೂ ಒಂದೊಳ್ಳೆ ಸಿನಿಮಾ ಮಾಡುವ ಹಂಬಲ ಇತ್ತು. ಅವರ ಸಹಕಾರದಿಂದ ಮುಧೋಳ್&zwnj; ರಿಲೀಸ್&zwnj; ಪ್ರಕ್ರಿಯೆ ಸರಾಗವಾಗಿದೆ.&lt;/p&gt;&lt;p&gt;&lt;strong&gt;- ರವಿಚಂದ್ರನ್&zwnj; ಅವರಂಥಾ ನಟನ ಮಗನ ಸಿನಿಮಾಕ್ಕೇ ಪ್ರೊಡ್ಯೂಸರ್ಸ್&zwnj; ಸಿಗುತ್ತಿಲ್ಲವಾ?&lt;/strong&gt;&lt;/p&gt;&lt;p&gt;ಅದು ನಿರ್ಮಾಪಕರ ತಪ್ಪಲ್ಲ. ನನ್ನ ಪ್ರತಿಭೆ ಏನು ಅಂತ ಜಗತ್ತಿಗೆ ಪರಿಚಯವಾಗುವ ದಿನಕ್ಕಾಗಿ ಎದುರು ನೋಡುತ್ತಿದ್ದೇನೆ. ಆಗ ನಿರ್ಮಾಪಕರು ತಾನೇ ತಾನಾಗಿ ಬಂದು ಸಿನಿಮಾ ಮಾಡುತ್ತಾರೆ. ಅವರಿಗೂ ತಮ್ಮ ಬಂಡವಾಳ ವಾಪಸ್&zwnj; ಬರುವ ವಿಶ್ವಾಸ ಬರಬೇಕಲ್ವ, ನಾವೂ ಸ್ಪಂದಿಸಬೇಕು. ಒಳ್ಳೆ ಕತೆ ಸಿಗಬೇಕು. ಇವತ್ತು ಇರುವ ಟ್ರೆಂಡ್&zwnj;ಗೆ ರೆವೆನ್ಯೂ ತಂದುಕೊಡುವಷ್ಟು ನಾವೂ ಬೆಳೆದಿರಬೇಕು. ಮುಧೋಳ್&zwnj; ನನ್ನ ನಟನೆಯ ಮತ್ತೊಂದು ಸಿನಿಮಾ. ಇದನ್ನು ನೋಡಿ ಚೆನ್ನಾಗಿ ಆ್ಯಕ್ಟ್&zwnj; ಮಾಡಿದ ಹುಡುಗ ಅಂತ ಪ್ರೇಕ್ಷಕ ಹೇಳಿದರೂ ನನಗೆ ತೃಪ್ತಿ.&lt;/p&gt;&lt;p&gt;&lt;strong&gt;- ಯಾವಾಗ ಮುಧೋಳ್&zwnj; ರಿಲೀಸ್&zwnj;?&lt;/strong&gt;&lt;/p&gt;&lt;p&gt;ಶೂಟಿಂಗ್&zwnj; ಮುಗಿದಿದೆ. ಪೋಸ್ಟ್&zwnj; ಪ್ರೊಡಕ್ಷನ್&zwnj; ನಡೆಯುತ್ತಿದೆ. ಈ ವರ್ಷ ಅಕ್ಟೋಬರ್&zwnj; 15 ನಂತರ ಡಿಸೆಂಬರ್&zwnj;ಗೂ ಮೊದಲು ಬರ್ತೀವಿ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/id-love-to-see-shantikranti-re-released-but-the-process-is-difficult-vikram-ravichandran/articleshow-kndxtqw"/>
        </item>
        <item>
            <title><![CDATA[ಯಶ್‌ ಟಾಕ್ಸಿಕ್‌ ಮೊದಲ ದಿನದ ಕಲೆಕ್ಷನ್ ರು.125 ಕೋಟಿ]]></title>
            <link>https://www.kannadaprabha.in/entertainment-news/yashs-toxic-earns-rs-125-crore-on-its-opening-day/articleshow-o39gbue</link>
            <guid isPermaLink="true">https://www.kannadaprabha.in/entertainment-news/yashs-toxic-earns-rs-125-crore-on-its-opening-day/articleshow-o39gbue</guid>
            <pubDate>Thu, 27 Aug 2026 07:21:18 +0530</pubDate>
            <description><![CDATA[&lt;p&gt;ಯಶ್&zwnj; ನಟನೆಯ &lsquo;ಟಾಕ್ಸಿಕ್&zwnj;&rsquo; ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಹರಿದುಬಂದಿದೆ. ಆದರೆ ಇದು ಸಿನಿಮಾದ ಮೊದಲ ದಿನದ ಕಲೆಕ್ಷನ್&zwnj; ಮೇಲೆ ಅಷ್ಟೇನೂ ಪರಿಣಾಮ ಬೀರಿದಂತಿಲ್ಲ. ವಿಶ್ವಾದ್ಯಂತ ಚಿತ್ರದ ಮೊದಲ ದಿನದ ಕಲೆಕ್ಷನ್&zwnj; ರೂ.125 ಕೋಟಿಗಿಂತ ಅಧಿಕ ಎಂದು ಅಂದಾಜಿಸಲಾಗಿದೆ.&lt;/p&gt;]]></description>
            <media:content url="https://static-gi.asianetnews.com/images/01m0ycapw48fw9d12tbrvazhqr/yash-toxic-movie-1787725962116.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಸಿನಿವಾರ್ತೆ&lt;/strong&gt;&lt;/h2&gt;&lt;p&gt;ಯಶ್&zwnj; ನಟನೆಯ &lsquo;ಟಾಕ್ಸಿಕ್&zwnj;&rsquo; ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಹರಿದುಬಂದಿದೆ. ಆದರೆ ಇದು ಸಿನಿಮಾದ ಮೊದಲ ದಿನದ ಕಲೆಕ್ಷನ್&zwnj; ಮೇಲೆ ಅಷ್ಟೇನೂ ಪರಿಣಾಮ ಬೀರಿದಂತಿಲ್ಲ. ವಿಶ್ವಾದ್ಯಂತ ಚಿತ್ರದ ಮೊದಲ ದಿನದ ಕಲೆಕ್ಷನ್&zwnj; ರೂ.125 ಕೋಟಿಗಿಂತ ಅಧಿಕ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಸಿನಿಮಾ ರೂ.90ರಿಂದ 95 ಕೋಟಿ ರು.ಗಳಷ್ಟು ಗಳಿಕೆ ಮಾಡಿದೆ ಎನ್ನಲಾಗಿದೆ.&lt;/p&gt;&lt;h3&gt;ಆರು ಭಾಷೆಗಳಲ್ಲಿ ರಿಲೀಸ್&zwnj;&lt;/h3&gt;&lt;p&gt;ಯಾವುದೇ ಪ್ರೀಮಿಯರ್&zwnj; ಶೋ, ಸೆಲೆಬ್ರಿಟಿ ಶೋಗಳಿಲ್ಲದೇ ಆರು ಭಾಷೆಗಳಲ್ಲಿ ರಿಲೀಸ್&zwnj; ದಿನದಂದೇ ತೆರೆಗೆ ಬಂದ ಸಿನಿಮಾದ ಹೆಚ್ಚಿನೆಲ್ಲ ಫ್ಯಾನ್&zwnj; ಶೋಗಳು ಹೌಸ್&zwnj;ಫುಲ್&zwnj; ಆಗಿದ್ದವು. ಕನ್ನಡದಲ್ಲಿ ಚಿತ್ರ ಮೊದಲ ದಿನ 20 ಕೋಟಿ ರು.ಗೂ ಅಧಿಕ ಗಳಿಕೆ ಮಾಡಿದರೆ, ಹಿಂದಿ ಭಾಷೆಯಲ್ಲಿ 50 ಕೋಟಿ ರು.ಗಳಿಗೂ ಹೆಚ್ಚು ಕಲೆಕ್ಷನ್&zwnj; ಆಗಿದೆ. ತೆಲುಗು ಭಾಷೆಯಲ್ಲಿ 11 ಕೋಟಿ ರು.ಗಳಷ್ಟು ಗಳಿಕೆ ದಾಖಲಾಗಿದೆ.&lt;/p&gt;&lt;p&gt;ಕನ್ನಡದಲ್ಲಿ ಈ ಹಿಂದೆ &lsquo;ಕೆಜಿಎಫ್&zwnj; 2&rsquo; ಈ ರೀತಿಯ ತೀವ್ರ ಗಳಿಕೆಯ ಮೂಲಕ ಸುದ್ದಿಯಾಗಿತ್ತು. ಆ ಬಳಿಕ ಯಶ್&zwnj; ಅವರದೇ ಎರಡನೇ ಸಿನಿಮಾ ಮತ್ತೆ ದಾಖಲೆ ಮಾಡುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ಈ ವರ್ಷ ಮಾರ್ಚ್&zwnj;ನಲ್ಲಿ ತೆರೆಕಂಡ &lsquo;ಧುರಂಧರ್&zwnj; 2&rsquo; ಸಿನಿಮಾ 146 ಕೋಟಿ ರು. ಮೂಲಕ ಮೊದಲ ದಿನವೇ ಅತ್ಯಧಿಕ ಗಳಿಕೆ ದಾಖಲಿಸಿತ್ತು. ಎರಡನೇ ಸ್ಥಾನದಲ್ಲಿ &lsquo;ಟಾಕ್ಸಿಕ್&zwnj;&rsquo; ಇದೆ.&lt;/p&gt;&lt;p&gt;ಯಶ್&zwnj; ಅಭಿಮಾನಿಗಳು 4 ವರ್ಷಗಳ ಬಳಿಕ ಬಂದ ಯಶ್&zwnj; ಸಿನಿಮಾವನ್ನು ಸಂಭ್ರಮಿಸಿದ್ದಾರೆ. ಒಟ್ಟಾರೆಯಾಗಿ ಟಾಕ್ಸಿಕ್&zwnj;ಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/yashs-toxic-earns-rs-125-crore-on-its-opening-day/articleshow-o39gbue"/>
        </item>
        <item>
            <title><![CDATA[ಸುಂದರ್‌ರಾಜ್‌ 75ಕ್ಕೆ 250 - ನೂರಾರು ಪಾತ್ರಗಳಿಗೆ ಜೀವ ನೀಡಿದ ಮಹಾ ಕಲಾವಿದ]]></title>
            <link>https://www.kannadaprabha.in/entertainment-news/sundarraj-at-75-250-roles-a-legendary-actor-who-brought-hundreds-of-characters-to-life/articleshow-qepv3yt</link>
            <guid isPermaLink="true">https://www.kannadaprabha.in/entertainment-news/sundarraj-at-75-250-roles-a-legendary-actor-who-brought-hundreds-of-characters-to-life/articleshow-qepv3yt</guid>
            <pubDate>Fri, 14 Aug 2026 13:29:34 +0530</pubDate>
            <description><![CDATA[&lt;p&gt;ಸುಂದರ್&zwnj;ರಾಜ್&zwnj; ಮುಖ್ಯ ಪಾತ್ರದಲ್ಲಿ ನಟಿಸಿರುವ, ವೆಂಕಟ್&zwnj; ಭಾರದ್ವಾಜ್&zwnj; ನಿರ್ದೇಶನದ, ಹಿರಿಯ ಪೊಲೀಸ್&zwnj; ಅಧಿಕಾರಿ ಎಸ್&zwnj;.ಕೆ. ಉಮೇಶ್&zwnj; ಕಥೆ ಆಧರಿಸಿದ &lsquo;ಚಾರ್ಜ್&zwnj;ಶೀಟ್&zwnj;&rsquo; ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಇದು ಸುಂದರ್&zwnj;ರಾಜ್&zwnj; ನಟನೆಯ 250ನೇ ಸಿನಿಮಾ. ಮಾತನಾಡಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/01epkqs7k6r4vwh7khyq2my0vd/whatsapp-image-2020-11-08-at-1-44-22-pm-jpeg.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;- ಪ್ರಿಯಾ ಕೆರ್ವಾಶೆ&lt;/strong&gt;&lt;/h2&gt;&lt;p&gt;- ನಿಮಗೀಗ 75 ವರ್ಷ. ಚಾರ್ಜ್&zwnj;ಶೀಟ್&zwnj; ನಿಮ್ಮ 250ನೇ ಸಿನಿಮಾ. ಬಂದ ಹಾದಿಯ ಆತ್ಮಾವಲೋಕನ ಮಾಡಿಕೊಂಡರೆ?&lt;/p&gt;&lt;p&gt;ಖುಷಿಯೇ ಇದೆ. ಬೇರೆ ಯಾವುದೇ ರಂಗದಲ್ಲಿ 60ಕ್ಕೆ ನಿವೃತ್ತಿ ಅಂತಿರುತ್ತೆ. ಭಾರತೀಯ ಚಿತ್ರರಂಗದಲ್ಲಿ ಕಲಾವಿದರಿಗೆ ವಯಸ್ಸಿನ ಮಿತಿಯೇ ಇಲ್ಲ. ಸೆಲ್ಯುಲಾಯ್ಡ್&zwnj;ನಿಂದ ಡಿಜಿಟಲ್&zwnj;, ಎಐ ವರೆಗಿನ ಸಿನಿಮಾಗಳಲ್ಲಿ ನಟಿಸುವ ಅವಕಾಶ ನನಗೆ ಸಿಕ್ಕಿದೆ. ಇಷ್ಟು ಕಾಲ ಬದುಕಿ ಉಳಿಯಲು ಸಾಧ್ಯವಾದದ್ದೂ ದೈವೀ ಕೃಪೆ. ಸಿನಿಮಾರಂಗಕ್ಕೆ ಬಂದ ಶುರುವಿನಲ್ಲಿ &lsquo;ಕಾಡು&rsquo;, &lsquo;ಚೋಮನ ದುಡಿ&rsquo;, &lsquo;ತಬ್ಬಲಿಯು ನೀನಾದೆ ಮಗನೇ&rsquo;, &lsquo;ಒಂದಾನೊಂದು ಕಾಲದಲ್ಲಿ&rsquo;, &lsquo;ಅನ್ವೇಷಣೆ&rsquo;ವರೆಗೆ ನನಗೆ ಬಂದಿದ್ದೆಲ್ಲ ಕ್ಲಾಸಿಕ್&zwnj; ಚಿತ್ರಗಳು. ಆಗ ವ್ಯವಸ್ಥೆಗೆ ಕನ್ನಡಿ ಹಿಡಿಯುವ ಚಿತ್ರಗಳಿದ್ದವು. ಬರುಬರುತ್ತ ಸಿನಿಮಾ ಕಮರ್ಷಿಯಲ್&zwnj; ಆಗಿ ಬೇರೆ ಆಯಾಮ ಪಡೆಯಿತು. ಮನರಂಜನೆಯೇ ಮುಖ್ಯವಾಯಿತು. ಇವುಗಳಿಗೆಲ್ಲ ಸಾಕ್ಷಿಯಾಗಿದ್ದು ಒಂದೊಳ್ಳೆ ಅನುಭವ.&lt;/p&gt;&lt;h3&gt;&lt;strong&gt;- ನಿಮ್ಮ 250ನೇ ಸಿನಿಮಾ ಚಾರ್ಜ್&zwnj;ಶೀಟ್&zwnj; ಬಗ್ಗೆ ಹೇಳಿ.&lt;/strong&gt;&lt;/h3&gt;&lt;p&gt;ಇದು ನನಗೆ ಬಯಸದೇ ಬಂದ ಭಾಗ್ಯ. ನಮ್ಮ ಏರಿಯಾದಲ್ಲೇ ಕೆಲವು ವರ್ಷಗಳ ಹಿಂದೆ ನಡೆದ ನೈಜ ಘಟನೆ ಆಧರಿಸಿ ಈ ಸಿನಿಮಾ ಮಾಡಿದ್ದಾರೆ. ಮಗಳು ಗಗನಸಖಿ. ಬೆಂಗಳೂರಿಂದ ಸಿಂಗಾಪೂರ್&zwnj;ಗೆ ಹೋಗಿ ಬರುವಾಗ ಕಾಣೆಯಾಗುತ್ತಾಳೆ. ಅವಳ ತಂದೆ ಇಂಜಿನಿಯರ್&zwnj;. ಅವರು ಗಾಬರಿಬಿದ್ದು ಕಂಪ್ಲೇಟ್&zwnj; ಕೊಟ್ಟರೆ ಪೊಲೀಸ್&zwnj; ಸ್ಟೇಶನ್&zwnj;ನಲ್ಲಿ ಉಡಾಫೆಯ ಉತ್ತರ ಬರುತ್ತದೆ. ಆದರೆ ಇನ್ನೊಬ್ಬ ಪೊಲೀಸ್&zwnj; ಅಧಿಕಾರಿ ಪರಿಸ್ಥಿತಿ ಅರಿತು ಈ ಕೇಸ್&zwnj; ಹಿಂದೆ ಬೀಳುತ್ತಾನೆ. ಅಲ್ಲಿಗೆ ಈ ಸಿನಿಮಾ ಪೊಲೀಸ್&zwnj; ಡಿಪಾರ್ಟ್&zwnj;ಮೆಂಟ್&zwnj;ನ ವಾಸ್ತವ ಸ್ಥಿತಿಗೂ ಕನ್ನಡಿ ಹಿಡಿಯುತ್ತದೆ. ಹಿರಿಯ ಪೊಲೀಸ್&zwnj; ಅಧಿಕಾರಿ ಎಸ್&zwnj;.ಕೆ. ಉಮೇಶ್&zwnj; ತನ್ನ ಅನುಭವದ ಘಟನೆಗೆ ಕಥೆಯ ರೂಪ ಕೊಟ್ಟಿದ್ದಾರೆ.&lt;/p&gt;&lt;p&gt;- ನಿಮಗೆ ಈ ಪಾತ್ರ ಹೇಗೆ ಕನೆಕ್ಟ್&zwnj; ಆಯ್ತು?&lt;/p&gt;&lt;p&gt;ಚಿತ್ರತಂಡ ಈ ಪಾತ್ರಕ್ಕೆ ನನ್ನ ಆರಿಸಿದ್ದಕ್ಕೆ ನಿರ್ದಿಷ್ಟ ಕಾರಣಗಳಿರಬಹುದು. ಆದರೆ ಕತೆಯನ್ನು ನನಗೆ ಹೇಳಿದಾಗ ಹಿಂದು ಮುಂದು ನೋಡದೇ ಒಪ್ಪಿಬಿಟ್ಟೆ. ನನ್ನ ಒಳಗೂ ಒಬ್ಬ ಅಪ್ಪ ಇದ್ದಾನೆ. ಮಗಳನ್ನು ಬಹಳ ಪ್ರೀತಿಸುವ ಅಪ್ಪ. ಹೀಗಾಗಿ ತಂದೆಯ ಪಾತ್ರಕ್ಕೆ ಕನೆಕ್ಟ್&zwnj; ಆಗುವುದು ಸುಲಭವಾಯಿತು. ರಾಮಣ್ಣ ಅಂತ ನನ್ನ ಪಾತ್ರದ ಹೆಸರು.&lt;/p&gt;&lt;p&gt;- ವೆಂಕಟ್&zwnj; ಭಾರದ್ವಾಜ್&zwnj; ಅವರ ಕೆಲಸದ ಬಗ್ಗೆ?&lt;/p&gt;&lt;p&gt;ಬದುಕಿನಲ್ಲಿ ನಾನು ಮೊದಲ ಬಾರಿ ಶೂಟಿಂಗ್&zwnj; ನೋಡಿದ ಸಿನಿಮಾ ಸಿ.ವಿ ಶಿವಶಂಕರ್&zwnj; ನಿರ್ದೇಶನದ &lsquo;ಮನೆ ಕಟ್ಟಿ ನೋಡು&rsquo;. ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ, ಭಿಕ್ಷುಕನಾದರೂ ಕನ್ನಡ ನಾಡಲ್ಲೇ ಮಡಿವೆ ಎಂಬ ಹಾಡು ನಮ್ಮೆಲ್ಲ ಕನ್ನಡಿಗರ ಮನಸ್ಸಿನ ಮಾತಾಗಿತ್ತು. &lsquo;ಚಾರ್ಜ್&zwnj;ಶೀಟ್&zwnj;&rsquo; ಸಿನಿಮಾದಲ್ಲಿ ವೆಂಕಟ್&zwnj; ಅವರ ಕೆಲಸ, ಅವರು ಕಥೆಯನ್ನು ನಿರೂಪಿಸುವ ರೀತಿ ನೋಡಿ ಸಿ.ವಿ. ಶಿವಶಂಕರ್&zwnj; ನೆನಪು ಬಂತು. ಚಿತ್ರದಲ್ಲಿ ಯುವ ಕಲಾವಿದರು ಎನರ್ಜಿಟಿಕ್&zwnj; ಆಗಿ ನಟಿಸಿದ್ದಾರೆ. ಎಸ್&zwnj;.ಕೆ ಉಮೇಶ್&zwnj; ಅವರು ಉತ್ತಮ ಸಾಥ್&zwnj; ನೀಡಿದ್ದಾರೆ. ಈ ಸಿನಿಮಾದಲ್ಲಿ ನನಗೆ ಫುಲ್&zwnj; ಮೀಲ್ಸ್&zwnj; ಸಿಕ್ಕಿದೆ.&lt;/p&gt;&lt;p&gt;- ಸ್ವಾತಂತ್ರ್ಯೋತ್ಸವದ ಸಂದರ್ಭ ಸಿನಿಮಾ ಬರ್ತಿದೆ. ಸ್ಪರ್ಧೆಯೊಡ್ಡುವಂಥಾ ಬೇರೆ ಚಿತ್ರಗಳಿಲ್ಲ.&lt;/p&gt;&lt;p&gt;ಅದು ನಮ್ಮ ಸುದೈವ. ಇದು ಥಿಯೇಟರ್&zwnj;ನಲ್ಲೇ ನೋಡುವಂಥಾ ಕಥಾನಕ. ಕನ್ನಡ ಸಿನಿಮಾಗಳಿಗೆ ಮಾರ್ನಿಂಗ್&zwnj; ಶೋ ಕೊಡುವ ಬಗ್ಗೆ ನನಗೆ ಬಹಳ ನೋವಿದೆ. ಕೇಳಿದರೆ ಸರ್&zwnj; ನಮ್ಗೂ ಥಿಯೇಟರ್&zwnj; ನಡೆಸಬೇಕಲ್ವಾ ಅಂತಾರೆ. ಜನ ಬರುವ ಸಂಜೆ ಶೋಗಳಿಗೆ ಅನ್ಯ ಭಾಷೆ ಸಿನಿಮಾಗಳನ್ನು ಹಾಕಿರುತ್ತಾರೆ. ಇದು 60ರ ದಶಕದಿಂದಲೇ ಇರುವ ಸಮಸ್ಯೆ. ಇರಲಿ, ನಮ್ಮ ಸಿನಿಮಾಕ್ಕೆ ಸ್ವಾತಂತ್ರ್ಯೋತ್ಸವಕ್ಕಿಂತ ಒಂದು ದಿನ ಮೊದಲೇ ಸ್ವಾತಂತ್ರ್ಯ ಸಿಗುತ್ತಿದೆ. ಈ ಸಮಸ್ಯೆಗಳಿಂದಲೂ ಮುಕ್ತಿ ಸಿಗಬೇಕಿದೆ.&lt;/p&gt;&lt;p&gt;ಕನ್ನಡಪ್ರಭದಲ್ಲಿ 6 ತಿಂಗಳು ಕೆಲಸ ಮಾಡಿದ್ದೀನಿ&lt;/p&gt;&lt;p&gt;&lsquo;ಒಂಟಿಧ್ವನಿ&rsquo; ಅನ್ನುವ ಸಿನಿಮಾಕ್ಕೆ ಆರಂಭದಲ್ಲಿ ನಾನು ನಾಯಕನಾಗುವುದು ಅಂತಿತ್ತು. ಅದು ಪತ್ರಕರ್ತನ ಪಾತ್ರ. ಆ ಪಾತ್ರದ ಆಳ ಅರಿಯಬೇಕು ಅಂತ ಸುಮಾರು 6 ತಿಂಗಳ ಕಾಲ ಕನ್ನಡಪ್ರಭದಲ್ಲಿ ಪತ್ರಕರ್ತನಾಗಿ ಕೆಲಸ ಮಾಡಿದ್ದೆ. ಆದರೆ ಮುಂದೆ ಒಂಟಿಧ್ವನಿ ಸಿನಿಮಾದ ಪತ್ರಕರ್ತನ ಪಾತ್ರದಲ್ಲಿ ಅಂಬರೀಶ್&zwnj; ನಟಿಸಿದರು. ನಾನು ಮತ್ತೊಂದು ಪಾತ್ರದಲ್ಲಿ ನಟಿಸಿದೆ. ಆದರೆ ಕನ್ನಡಪ್ರಭದಲ್ಲಿ ಕೆಲಸ ಮಾಡಿದ ಅನುಭವ ಸದಾ ನೆನಪಿನಲ್ಲಿ ಉಳಿಯುವಂಥಾದ್ದು.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/sundarraj-at-75-250-roles-a-legendary-actor-who-brought-hundreds-of-characters-to-life/articleshow-qepv3yt"/>
        </item>
        <item>
            <title><![CDATA[ನನ್ನ ಸಂಭಾವನೆ 50 ಕೋಟಿ ರೂ.ಗೂ  ಹೆಚ್ಚು : ಯಶ್‌]]></title>
            <link>https://www.kannadaprabha.in/entertainment-news/my-remuneration-is-more-than-rs-50-crore-yash/articleshow-r7szpgk</link>
            <guid isPermaLink="true">https://www.kannadaprabha.in/entertainment-news/my-remuneration-is-more-than-rs-50-crore-yash/articleshow-r7szpgk</guid>
            <pubDate>Mon, 17 Aug 2026 05:17:44 +0530</pubDate>
            <description><![CDATA[&lt;p&gt;ಖಾಸಗಿ ವಾಹಿನಿ ಇಂಡಿಯಾ ಟಿವಿಯಲ್ಲಿ ರಜತ್ ಶರ್ಮಾ ನಡೆಸಿಕೊಡುವ &lsquo;ಆಪ್&zwnj; ಕಿ ಅದಾಲತ್&rsquo; ಕಾರ್ಯಕ್ರಮದಲ್ಲಿ ರಾಕಿಂಗ್&zwnj; ಸ್ಟಾರ್&zwnj; ಯಶ್ ಭಾಗವಹಿಸಿದ್ದಾರೆ. ದೇಶದ ಅತ್ಯಂತ ಪ್ರಸಿದ್ಧ ಈ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೊದಲ ಕನ್ನಡಿಗ ಯಶ್&zwnj; ಆಗಿದ್ದಾರೆ. ಹಿಂದಿ ಭಾಷೆಯಲ್ಲಿ ನಡೆದ ಅವರ ಕುತೂಹಲಕರ ಸಂದರ್ಶನದ ಆಯ್ದಭಾಗ ಇಲ್ಲಿದೆ.&lt;/p&gt;]]></description>
            <media:content url="https://static-gi.asianetnews.com/images/01m05tb3fhprhyjfxpsv84rap1/yash-1786901794289.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಯಶ್ ತುಂಬಾ ಮೊಂಡು ಎಂಬ ಆರೋಪವಿದೆ. ನೀವು ಯಾರ ಮಾತನ್ನೂ ಕೇಳದೆ ನಿಮ್ಮಿಷ್ಟದಂತೆ ಇರುತ್ತೀರಾ?&lt;/strong&gt;&lt;/p&gt;&lt;p&gt;ಇದರಲ್ಲಿ ತಪ್ಪೇನಿದೆ ಸರ್? ಇರುವುದು ಒಂದೇ ಜೀವನ. ನಾವು ಏನಾಗಬೇಕೆಂದು ಬಯಸುತ್ತೇವೆಯೋ, ಏನನ್ನು ಸಾಧಿಸಬೇಕೋ ಅದನ್ನು ಮಾಡಬೇಕು. ಅದನ್ನು ಮೊಂಡುತನ ಎನ್ನುವುದಾದರೆ ಪ್ರತಿಯೊಬ್ಬರೂ ಒಳ್ಳೆಯ ವಿಷಯಗಳಿಗೆ ಮೊಂಡುತನ ಹೊಂದಿರಬೇಕು.&lt;/p&gt;&lt;h2&gt;&lt;strong&gt;ಬಾಲ್ಯದಲ್ಲಿ ನೀವು ಮೊಂಡುತನ ಮಾಡಿದಾಗ ತಂದೆಯಿಂದ ಏಟು ಬೀಳುತ್ತಿತ್ತಂತೆ?&lt;/strong&gt;&lt;/h2&gt;&lt;p&gt;ಹೌದು, ತುಂಬಾ ಹೊಡೆಯುತ್ತಿದ್ದರು. ನಾನು ಬಾಲ್ಯದಲ್ಲಿ ಅಷ್ಟು ಚೇಷ್ಟೆ ಮಾಡುತ್ತಿದ್ದೆ. ನನ್ನ ತಂಗಿ ಈಗಲೂ ಹೇಳುತ್ತಾಳೆ, &lsquo;ನೀನು ನಟನಾಗಿ ಎಲ್ಲರೂ ನಿನಗೆ ಇಷ್ಟೊಂದು ಗೌರವ ಕೊಡುತ್ತಿದ್ದಾರೆ, ಆದರೆ ಚಿಕ್ಕವನಿದ್ದಾಗ ನಿನ್ನನ್ನು ನೋಡಿದವರು ಇವನು ಜೀವನದಲ್ಲಿ ಏನೂ ಉದ್ದಾರ ಆಗಲ್ಲ ಎನ್ನುತ್ತಿದ್ದರು&rsquo; ಎಂದು. ಆದರೆ ಜೀವನದಲ್ಲಿ ಕಲಿತ ಆ ಪಾಠಗಳು ನನ್ನನ್ನು ದೊಡ್ಡ ಯುದ್ಧಗಳಿಗೆ ಸಿದ್ಧಪಡಿಸಿದವು ಎಂದೆನಿಸುತ್ತದೆ.&lt;/p&gt;&lt;p&gt;&lt;strong&gt;ತಂದೆ ನಿಮ್ಮನ್ನು ಫ್ಯಾನ್&zwnj;ಗೆ ತಲೆಕೆಳಗಾಗಿ ನೇತುಹಾಕಿ ಫ್ಯಾನ್ ಆನ್ ಮಾಡಿದ್ದರಂತೆ? ನಿಮ್ಮ ಸ್ನೇಹಿತರು ತಂದೆಯನ್ನು &lsquo;ಟೈಗರ್&rsquo; ಎನ್ನುತ್ತಿದ್ದರಂತೆ?&lt;/strong&gt;&lt;/p&gt;&lt;p&gt;ಹೌದು. ನಾನು ಶಾಲೆಯಿಂದ 10 ನಿಮಿಷ ತಡವಾಗಿ ಬಂದರೂ ಪೊಲೀಸ್ ಗಾಡಿಯಂತೆ ವಾಹನ ತಂದು ಹುಡುಕುತ್ತಿದ್ದರು. ನನ್ನ ಸ್ನೇಹಿತರು &lsquo;ಬೇಗ ಮನೆಗೆ ಹೋಗು, ನಿಮ್ಮಪ್ಪ ಬಂದುಬಿಡುತ್ತಾರೆ&rsquo; ಎಂದು ಓಡಿಹೋಗುತ್ತಿದ್ದರು. ಕಾಲೇಜು ದಿನಗಳಲ್ಲೂ ಅವರು ಎಲ್ಲರ ಮುಂದೆ ಹೊಡೆಯುತ್ತಿದ್ದರು. ಕೊನೆಗೆ ಒಂದು ದಿನ ನಾನು ಅವರ ಮುಂದೆ ಕೆಳಗೆ ಬಿದ್ದು ನಾಟಕ ಮಾಡಿದೆ, ಅಂದಿನಿಂದ ಹೊಡೆಯುವುದನ್ನು ಬಿಟ್ಟರು.&lt;/p&gt;&lt;h3&gt;&lt;strong&gt;ನಿಮ್ಮ ತಂದೆ ನಿರ್ದೇಶಕರೋ, ನಿರ್ಮಾಪಕರೋ ಅಲ್ಲ ಎಂಬ ಕೊರಗು ಇತ್ತಾ?&lt;/strong&gt;&lt;/h3&gt;&lt;p&gt;ಎಂದಿಗೂ ಇಲ್ಲ ಸರ್. ನನ್ನ ಹೆತ್ತವರು ನನಗೆ ಕಲಿಸಿದ ಮುಖ್ಯ ಪಾಠ, &lsquo;ಯಾರ ಮೇಲೂ ಅವಲಂಬಿತನಾಗಿ ಬದುಕಬೇಡ, ನಿನ್ನ ಕೆಲಸವನ್ನು ನೀನೇ ಮಾಡು, ಯಾರ ಮುಂದೆಯೂ ತಲೆತಗ್ಗಿಸಬೇಡ&rsquo; ಎಂಬುದು. ಪ್ರತಿಯೊಬ್ಬ ಮಗುವಿಗೂ ಅವರ ತಂದೆಯೇ ಹೀರೋ. ನಮ್ಮ ತಂದೆ-ತಾಯಿ ಹೆಚ್ಚು ಹಣ ಗಳಿಸದೇ ಇರಬಹುದು, ಆಸ್ತಿ ಮಾಡದೇ ಇರಬಹುದು. ಆದರೆ ನಮ್ಮನ್ನೇ ತಮ್ಮ ಆಸ್ತಿ ಎಂದು ನಂಬಿ ಬೆಳೆಸಿದರು.&lt;/p&gt;&lt;p&gt;&lt;strong&gt;ನಿಮ್ಮ ತಂದೆ ಬಿಎಂಟಿಸಿ ಬಸ್ ಡ್ರೈವರ್ ಆಗಿದ್ದರು. ಆರಂಭದಲ್ಲಿ ದಿನಕ್ಕೆ ₹14 ದುಡಿಯುತ್ತಿದ್ದ ದಿನಗಳಿದ್ದವು...&lt;/strong&gt;&lt;/p&gt;&lt;p&gt;ನಾನು ಓದುವಾಗ ನಮ್ಮ ತಂದೆ ಬಡವರು ಎಂಬ ಭಾವನೆ ನನಗೆ ಬರಲು ಅವರು ಬಿಡಲೇ ಇಲ್ಲ. ಕಾಲೇಜಿಗೆ ಬಂದಾಗ ಎಲ್ಲರ ಬಳಿ ಬೈಕ್, ಹೊಸ ಬಟ್ಟೆ ಇರುತ್ತಿತ್ತು. ನನ್ನ ಬಳಿ ತಂದೆಯ ಹಳೆಯ ಸ್ಕೂಟರ್ ಇತ್ತು. ನಮ್ಮ ಮನಸ್ಥಿತಿ ಮತ್ತು ದುಡಿಮೆಯಿಂದ ಗೌರವ ಸಿಗುತ್ತದೆಯೇ ಹೊರತು ಹೊರಗಿನ ಆಡಂಬರದಿಂದಲ್ಲ ಎಂದು ನನಗೆ ಬಹಳ ಬೇಗ ಅರ್ಥವಾಯಿತು.&lt;/p&gt;&lt;p&gt;&lt;strong&gt;ನೀವು ಅತ್ಯುತ್ತಮ ಡ್ಯಾನ್ಸರ್ ಆಗಿದ್ದಿರಿ, ಹುಡುಗಿಯರೆಲ್ಲ ನಿಮ್ಮ ಡ್ಯಾನ್ಸ್&zwnj;ಗೆ ಫಿದಾ ಆಗಿದ್ದರು...&lt;/strong&gt;&lt;/p&gt;&lt;p&gt;ಹೌದು, ನನಗೆ ಡ್ಯಾನ್ಸ್ ಎಂದರೆ ಪ್ರಾಣ. ಶಾಲೆಯಲ್ಲಿ ಶಿಕ್ಷಕರು ನನ್ನನ್ನು &lsquo;ಹೀರೋ&rsquo; ಎಂದೇ ಕರೆಯುತ್ತಿದ್ದರು. ನಾನೂ ಸಹ ಹುಟ್ಟಿನಿಂದಲೇ ಹೀರೋ ಎಂದು ನಂಬಿಬಿಟ್ಟಿದ್ದೆ. ಒಮ್ಮೆ ವೀರಪ್ಪನ್ ಹಾವಳಿ ಇದ್ದಾಗ, &lsquo;ನನಗೆ ರಜೆ ಕೊಡಿ, ನಾನೇ ಹೋಗಿ ವೀರಪ್ಪನ್ ಹಿಡಿದು ತರುತ್ತೇನೆ&rsquo; ಎಂದು ಶಾಲೆಯಲ್ಲಿ ಡೈಲಾಗ್ ಹೊಡೆದಿದ್ದೆ. 7ನೇ ತರಗತಿಯವರೆಗೂ ಟೀಚರ್&zwnj;ಗಳು &lsquo;ಏನೋ, ವೀರಪ್ಪನ್ ಹಿಡಕೊಂಡು ಬಂದ್ಯಾ?&rsquo; ಎಂದು ಕಾಲೆಳೆಯುತ್ತಿದ್ದರು.&lt;/p&gt;&lt;p&gt;&lt;strong&gt;ಚಿತ್ರರಂಗದಲ್ಲಿ ಚಿರಂಜೀವಿ, ಅಲ್ಲು ಅರ್ಜುನ್ ಮುಂತಾದವರ ಕುಟುಂಬದ ಹಿನ್ನೆಲೆ ಇರುವ ನಟರಿಗೆ ಆರಂಭದಲ್ಲಿ ಬೆಂಬಲ ಸಿಗುತ್ತದೆ. ನಿಮ್ಮಂತಹ ಹೊರಗಿನವರಿಗೆ ಕಷ್ಟ ಅನಿಸಲಿಲ್ಲವೇ?&lt;/strong&gt;&lt;/p&gt;&lt;p&gt;ಹಿನ್ನೆಲೆ ಇರಲಿ, ಬಿಡಲಿ, ಕೊನೆಗೆ ನಿರ್ಧರಿಸುವುದು ಪ್ರೇಕ್ಷಕರೇ. ಸ್ಟಾರ್ ಮಕ್ಕಳಿಗೂ ಅವರದೇ ಆದ ತಂದೆಯ ಹೆಸರಿನ ದೊಡ್ಡ ಹೊರೆ ಇರುತ್ತದೆ. ಆದರೆ ನಮ್ಮಂತಹವರಿಗೆ ಆ ಮೊದಲ ಮೆಟ್ಟಿಲು ಹುಡುಕುವುದೇ ಕಷ್ಟ. ಒಮ್ಮೆ ಮೆಟ್ಟಿಲು ಸಿಕ್ಕ ಮೇಲೆ ಹತ್ತುವುದು ನಮ್ಮ ಕೈಯಲ್ಲಿದೆ. ನನ್ನನ್ನು ನಾನೇ ಬೆಳೆಸಿಕೊಂಡಿದ್ದಕ್ಕಿಂತ ಜನರ ಪ್ರೀತಿಯೇ ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ.&lt;/p&gt;&lt;p&gt;&lt;strong&gt;ಅಲ್ಲು ಅರವಿಂದ್ ಒಮ್ಮೆ ಹೇಳಿದ್ದರು, &lsquo;ಕೆಜಿಎಫ್&zwnj;ಗಿಂತ ಮೊದಲು ಯಶ್ ಏನಾಗಿದ್ದರು? ಸಿನಿಮಾ ಮಾಡುವುದು ನಿರ್ಮಾಪಕ, ಅದರ ಲಾಭ ನಟನಿಗೆ ಸಿಗುತ್ತದೆ&rsquo; ಎಂದು...&lt;/strong&gt;&lt;/p&gt;&lt;p&gt;ನಿಜ ಸರ್, ಸಿನಿಮಾದಲ್ಲಿ ನೂರಾರು ಜನರು ಕೆಲಸ ಮಾಡುತ್ತಾರೆ. ಆದರೆ ಆ ಎಲ್ಲರ ಶ್ರಮ ನಟನ ಮೂಲಕ ಪರದೆಯ ಮೇಲೆ ಬರುತ್ತದೆ. ನಟ ಅದನ್ನು ಸರಿಯಾಗಿ ಹೊರಹಾಕದಿದ್ದರೆ ಸಿನಿಮಾ ಓಡುವುದಿಲ್ಲ. ಜಗತ್ತಿನ ಇತಿಹಾಸದಲ್ಲೇ ನಟರಿಗೆ ಹೆಚ್ಚು ಮನ್ನಣೆ ಸಿಗುತ್ತದೆ, ಏಕೆಂದರೆ ಕ್ಯಾಮೆರಾ ಎದುರು ನಿಂತು ಆ ಭಾವನೆಗಳನ್ನು ಜನರಿಗೆ ಮುಟ್ಟಿಸುವ ಜವಾಬ್ದಾರಿ ನಟನ ಮೇಲಿರುತ್ತದೆ. ಪ್ರೇಕ್ಷಕರು ಎಂದಿಗೂ ತಪ್ಪಾಗುವುದಿಲ್ಲ.&lt;/p&gt;&lt;p&gt;&lt;strong&gt;ದಕ್ಷಿಣದ ರಾಮ್ ಚರಣ್, ಜೂ. ಎನ್&zwnj;ಟಿಆರ್, ಮಹೇಶ್ ಬಾಬು ದೊಡ್ಡ ಕುಟುಂಬದಿಂದ ಬಂದರೂ ನಿಮ್ಮಂತೆ ಪ್ಯಾನ್ ಇಂಡಿಯಾ ಸ್ಟಾರ್ ಆಗಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ?&lt;/strong&gt;&lt;/p&gt;&lt;p&gt;ಇಲ್ಲ ಸರ್, ಎಲ್ಲರೂ ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ. ಈ &lsquo;ಪ್ಯಾನ್ ಇಂಡಿಯಾ&rsquo;, &lsquo;ಸ್ಟಾರ್ಡಮ್&rsquo; ಎಂಬುದೆಲ್ಲ ಶಾಶ್ವತವಲ್ಲ. ಈ ಶುಕ್ರವಾರ ನೀವು ಸೂಪರ್ ಸ್ಟಾರ್ ಆಗಿರಬಹುದು, ಮುಂದಿನ ಶುಕ್ರವಾರ ಏನೂ ಇಲ್ಲದಂತಾಗಬಹುದು. ಯಾರು ಮುಂದು, ಯಾರು ಹಿಂದು ಎನ್ನುವುದಕ್ಕಿಂತ ಜನರ ಮನಸ್ಸಿನಲ್ಲಿ ಎಷ್ಟು ಕಾಲ ನೆಲೆಸುತ್ತೇವೆ ಎಂಬುದು ಮುಖ್ಯ.&lt;/p&gt;&lt;p&gt;&lt;strong&gt;ಇಲ್ಲಿಯವರೆಗೆ ಬರಲು ನೀವು ನಾಟಕ ರಂಗದಲ್ಲಿ ನೆಲ ಒರೆಸಿದ್ದೀರಿ, ಚಹಾ ಕೊಟ್ಟಿದ್ದೀರಿ...&lt;/strong&gt;&lt;/p&gt;&lt;p&gt;ಅದನ್ನೆಲ್ಲಾ ಸಾಮಾನ್ಯವಾಗಿ ಜನ ಸ್ಟ್ರಗಲ್ ಎಂದು ಕರೆಯುತ್ತಾರೆ. ಆದರೆ ನನಗೆ ಅದು ಕಷ್ಟ ಎನಿಸಲಿಲ್ಲ. ಆ ಕೆಲಸದಲ್ಲೂ ನಾನು ಖುಷಿ ಕಂಡುಕೊಂಡಿದ್ದೆ. ಕಸ ಗುಡಿಸುವುದರಲ್ಲೂ ಖುಷಿ ಇರಬಹುದು, ದೊಡ್ಡ ಅವಾರ್ಡ್ ತಗೊಂಡಾಗಲೂ ಖುಷಿ ಇಲ್ಲದಿರಬಹುದು. ಮನಸ್ಥಿತಿ ಮುಖ್ಯ.&lt;/p&gt;&lt;p&gt;&lt;strong&gt;ನಿಮ್ಮಲ್ಲಿ ಆರಂಭದಿಂದಲೂ ಹೀರೋ ಎಂಬ ಇಗೋ ಇತ್ತು?&lt;/strong&gt;&lt;/p&gt;&lt;p&gt;ಅದನ್ನು ನೀವು ಇಗೋ ಅಂದರೆ ಇಗೋ, ನನ್ನ ಮಟ್ಟಿಗೆ ಅದು ಆತ್ಮಗೌರವ, ಸೆಲ್ಫ್ ರೆಸ್ಪೆಕ್ಟ್. 17ನೇ ವಯಸ್ಸಿನಲ್ಲಿ ರಂಗಭೂಮಿಗೆ ಹೋದಾಗ, &lsquo;ನೀನಿನ್ನೂ ಚಿಕ್ಕವನು ಸುಮ್ಮನಿರು&rsquo; ಎನ್ನುತ್ತಿದ್ದರು. ನಾನು ಹೇಳುವ ಮಾತಿಗೆ ವಯಸ್ಸಿನ ಹಂಗಿಲ್ಲದೆ ಬೆಲೆ ಸಿಗಬೇಕೆಂದೇ ನಾನು ಗಡ್ಡ ಬಿಡಲು ಶುರುಮಾಡಿದೆ.&lt;/p&gt;&lt;p&gt;&lt;strong&gt;ರಾತ್ರೋರಾತ್ರಿ ಇಷ್ಟು ದೊಡ್ಡ ಸೂಪರ್ ಸ್ಟಾರ್ ಆದಾಗ ನಿಮ್ಮ ಶಾಲಾ-ಕಾಲೇಜು ಸ್ನೇಹಿತರ ಪ್ರತಿಕ್ರಿಯೆ ಹೇಗಿತ್ತು?&lt;/strong&gt;&lt;/p&gt;&lt;p&gt;ಕರ್ನಾಟಕದಲ್ಲಿ ನನಗೆ ಸಿಕ್ಕ ಗೆಲುವು ರಾತ್ರೋರಾತ್ರಿ ಸಿಕ್ಕಿದ್ದಲ್ಲ. ಒಂದೊಂದೇ ಹೆಜ್ಜೆ ಇಟ್ಟು, ಹಲವು ಹಿಟ್ ಸಿನಿಮಾಗಳ ನಂತರ &lsquo;ಕೆಜಿಎಫ್&rsquo; ಸಾಧ್ಯವಾಯಿತು. ನಮ್ಮ ಚಿತ್ರರಂಗವನ್ನು ಯಾರಾದರೂ ಕಡೆಗಣಿಸಿದರೆ ನನಗೆ ಬೇಸರವಾಗುತ್ತಿತ್ತು. ಅದಕ್ಕೇ ಇಡೀ ತಂಡವನ್ನು ಒಪ್ಪಿಸಿ ಪ್ಯಾನ್ ಇಂಡಿಯಾ ಮಟ್ಟಕ್ಕೆ ಹೋದೆವು. ದೇಶದ ಜನರು ನನ್ನನ್ನು ಒಪ್ಪಿಕೊಂಡರು. ಕರ್ನಾಟಕದ ಜನರಿಗೆ ನನ್ನ ಬೆಳವಣಿಗೆ ತಮ್ಮದೇ ಮನೆಯ ಮಗನ ಗೆಲುವು ಎನಿಸುತ್ತದೆ.&lt;/p&gt;&lt;p&gt;&lt;strong&gt;ನೀವು ಅಹಂಕಾರಿಯಂತೆ, ಟಿವಿ ಸೀರಿಯಲ್&zwnj;ನಲ್ಲಿರುವಾಗಲೇ 7 ಸಿನಿಮಾಗಳ ಆಫರ್ ಬಂದಾಗ, &lsquo;ನನಗೆ ಮೊದಲು ಸ್ಕ್ರಿಪ್ಟ್ ಕೊಡಿ&rsquo; ಎಂದು ಕೇಳಿ ಸಿನಿಮಾಗಳನ್ನೇ ಕಳೆದುಕೊಂಡಿರಂತೆ?&lt;/strong&gt;&lt;/p&gt;&lt;p&gt;ಹೌದು, ಟಿವಿ ನಟ ಸ್ಕ್ರಿಪ್ಟ್ ಕೇಳಬಾರದು ಎಂಬ ನಿಯಮ ಎಲ್ಲಿದೆ? ನಾನು ಮಾಡುವ ಪಾತ್ರ ನನಗೆ ಇಷ್ಟವಾಗಬೇಕು, ನಾನು ಪ್ರಾಮಾಣಿಕವಾಗಿರಬೇಕು. ಅದಕ್ಕಾಗಿ ಸ್ಕ್ರಿಪ್ಟ್ ಕೇಳಿದೆ. ಆ 7 ಸಿನಿಮಾಗಳು ಕೈತಪ್ಪಿದರೂ ನನಗೆ ಬೇಸರವಿಲ್ಲ.&lt;/p&gt;&lt;p&gt;&lt;strong&gt;ಈಗ ನೀವು ಒಂದು ಚಿತ್ರಕ್ಕೆ ₹50 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತೀರಾ?&lt;/strong&gt;&lt;/p&gt;&lt;p&gt;ಅದಕ್ಕೂ ಜಾಸ್ತಿ. ನಮ್ಮ ಮೌಲ್ಯಕ್ಕೆ ತಕ್ಕಂತೆ ಸಂಭಾವನೆ ಸಿಗುತ್ತದೆ. ನಾನು ಕೇವಲ ನಟನಾಗಿ ಹಣ ಪಡೆಯುವುದಿಲ್ಲ. ಕೆಜಿಎಫ್&zwnj;ಗಿಂತ ಮುಂಚಿನಿಂದಲೂ ನಿರ್ಮಾಪಕರ ಜೊತೆ ಪಾಲುದಾರನಾಗಿ ರಿಸ್ಕ್ ತೆಗೆದುಕೊಳ್ಳುತ್ತೇನೆ. ಸಿನಿಮಾ ಹಣ ಗಳಿಸಿದರೆ ನನಗೂ ಪಾಲು, ಸೋತರೆ ನಷ್ಟದಲ್ಲೂ ಪಾಲು.&lt;/p&gt;&lt;p&gt;&lt;strong&gt;ನೀವು ಶಾರುಖ್ ಖಾನ್ ಅವರ ಬಹುದೊಡ್ಡ ಅಭಿಮಾನಿ. ಆದರೆ &lsquo;ಜೀರೋ&rsquo; ಚಿತ್ರದ ಎದುರೇ &lsquo;ಕೆಜಿಎಫ್&rsquo; ಬಿಡುಗಡೆ ಮಾಡಿ ಕ್ಲ್ಯಾಶ್ ಮಾಡಿದಿರಿ?&lt;/strong&gt;&lt;/p&gt;&lt;p&gt;ನಾನು ಶಾರುಖ್ ಸರ್ ಅವರ ಬಹುದೊಡ್ಡ ಫ್ಯಾನ್. ಪ್ಯಾನ್ ಇಂಡಿಯಾ ಸಿನಿಮಾ 5 ಭಾಷೆಗಳಲ್ಲಿ ಏಕಕಾಲಕ್ಕೆ ಬರುವಾಗ ಕ್ಲ್ಯಾಶ್ ಅನಿವಾರ್ಯ. ಅವರ ಚಿತ್ರ ದೊಡ್ಡದಾಗಿತ್ತು, ನಮ್ಮದು ಚಿಕ್ಕದಾಗಿತ್ತು. ಅದಕ್ಕೆ ಬಿಡುಗಡೆ ಮಾಡಿದೆವು. ನಮ್ಮ ಸಿನಿಮಾ ಚೆನ್ನಾಗಿ ಓಡಿತು ಎಂದ ಮಾತ್ರಕ್ಕೆ ನಾನು ಶಾರುಖ್ ಸರ್&zwnj;ಗಿಂತ ದೊಡ್ಡವನಾಗುವುದಿಲ್ಲ. ನಾನು ನಮ್ಮ ಹಿರಿಯರಿಗಿಂತ ದೊಡ್ಡವನು ಅಂದುಕೊಂಡ ಕ್ಷಣ ನನ್ನ ಅಂಗಡಿ ಬಂದ್ ಆಗುತ್ತದೆ.&lt;/p&gt;&lt;p&gt;&lt;strong&gt;ಅಮೀರ್ ಖಾನ್ ಕೂಡ &lsquo;ಕೆಜಿಎಫ್ 2&rsquo; ನೋಡಿ ಹೆದರಿ ತಮ್ಮ ಚಿತ್ರದ ರಿಲೀಸ್ ಡೇಟ್ ಮುಂದೂಡಿದರು ಎನ್ನುತ್ತಾರೆ?&lt;/strong&gt;&lt;/p&gt;&lt;p&gt;ಯಾರೂ ಯಾರಿಗೂ ಹೆದರುವುದಿಲ್ಲ ಸರ್. ಅವರವರ ಸಿನಿಮಾಗಳ ಅನುಕೂಲಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುತ್ತಾರೆ.&lt;/p&gt;&lt;p&gt;&lt;strong&gt;ನಿಮ್ಮ ಹೊಸ ಚಿತ್ರ &lsquo;ಟಾಕ್ಸಿಕ್&rsquo; ರಿಲೀಸ್ ಡೇಟ್ ಮುಂದೂಡಿದಾಗ ಯಶ್ ಕೂಡ ಹೆದರಿದರು ಎಂಬ ಮಾತಿದೆ?&lt;/strong&gt;&lt;/p&gt;&lt;p&gt;ನನ್ನ ಬಳಿ ಕಳೆದುಕೊಳ್ಳಲು ಏನೂ ಇಲ್ಲದಿರುವಾಗ ನನಗೆ ಭಯ ಏಕೆ ಸರ್? 100-200 ಕೋಟಿ ಕಡಿಮೆ ಬಂದರೆ ನನಗೇನೂ ಆಗುವುದಿಲ್ಲ. ನಾನು ಜನರಿಗೆ ನೀಡಿದ ಭರವಸೆಗೆ ತಕ್ಕಂತೆ ಸಿನಿಮಾ ಬರಬೇಕು. ಚಿತ್ರಕ್ಕೆ ಹೆಚ್ಚಿನ ಸಮಯ ಬೇಕು ಎನಿಸಿದಾಗ ಮುಂದೂಡಿದೆವು. ಕೇವಲ ಇಮೇಜ್ ಉಳಿಸಿಕೊಳ್ಳಲು ಹಠ ಹಿಡಿದು ರಿಲೀಸ್ ಮಾಡಿದ್ದರೆ ಅದು ಅಹಂಕಾರವಾಗುತ್ತಿತ್ತು.&lt;/p&gt;&lt;p&gt;&lt;strong&gt;ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ &lsquo;ಯಶ್ ಮಿಸ್ಟರ್ ಶೋ ಆಫ್&rsquo; ಎಂದಾಗ ನಿಮ್ಮ ಅಭಿಮಾನಿಗಳು ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದರು...&lt;/strong&gt;&lt;/p&gt;&lt;p&gt;ಅವರು ಆಗಷ್ಟೇ ಚಿತ್ರರಂಗಕ್ಕೆ ಬಂದ ಹೊಸಬರಾಗಿದ್ದರು. ಕೆಲವು ಶೋಗಳಲ್ಲಿ ವಿವಾದ ಹುಟ್ಟುಹಾಕಲೆಂದೇ ಆಯ್ಕೆಗಳನ್ನು ಕೊಟ್ಟು ಪ್ರಶ್ನೆ ಕೇಳುತ್ತಾರೆ. ಬಹುಶಃ ಅವರಿಗೆ ನನ್ನ ಹೆಸರು ಸೂಕ್ತ ಎನಿಸಿರಬಹುದು. ಅದರಿಂದ ಹಲವು ನಿರ್ದೇಶಕರಿಗೆ ಬೇಸರವಾಗಿತ್ತು. ಆದರೆ ನನಗೆ ಬೇಸರವಾಗಲಿಲ್ಲ. ಯಾರಾದರೂ ನನ್ನ ಬಗ್ಗೆ ಅಭಿಪ್ರಾಯ ಹೇಳುವ ಹಕ್ಕಿದೆ. ಆದರೆ ಬೇರೆಯವರ ಅಭಿಪ್ರಾಯ ನನ್ನ ವ್ಯಕ್ತಿತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ. ನನ್ನ ಹೆಸರಿನಲ್ಲಿ ಬೇರೆ ಕಲಾವಿದರನ್ನು ನಿಂದಿಸುವವರು ನನ್ನ ನಿಜವಾದ ಅಭಿಮಾನಿಗಳೇ ಅಲ್ಲ.&lt;/p&gt;&lt;p&gt;&lt;strong&gt;&lsquo;ನಾನು ಪೋಷಕರ ಜೊತೆ ಕುಳಿತು ನೋಡಲಾಗದ ದೃಶ್ಯಗಳಲ್ಲಿ ನಟಿಸುವುದಿಲ್ಲ&rsquo; ಎಂದಿದ್ದ ನೀವು, ಈಗ &lsquo;ಟಾಕ್ಸಿಕ್&rsquo;ನಲ್ಲಿ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದೀರಾ?&lt;/strong&gt;&lt;/p&gt;&lt;p&gt;ಮನುಷ್ಯ ಕಾಲಕ್ಕೆ ತಕ್ಕಂತೆ ಬದಲಾಗುತ್ತಾನೆ. ಕಲೆಯು ಸಮಾಜಕ್ಕೆ ಕಠಿಣ ಪ್ರಶ್ನೆಗಳನ್ನು ಕೇಳಬೇಕು. ಈ ಚಿತ್ರದ ಟ್ಯಾಗ್ಲೈನ್ &lsquo;ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್&rsquo;. ಇದು ಮಕ್ಕಳಿಗಲ್ಲ ಎಂದು ನಾವೇ ಸ್ಪಷ್ಟಪಡಿಸಿದ್ದೇವೆ. ಮಹಿಳಾ ನಿರ್ದೇಶಕಿ ಗೀತು ಮೋಹನ್&zwnj;ದಾಸ್ ಮಹಿಳೆಯರ ಆಸೆ ಮತ್ತು ಕಲ್ಪನೆಗಳನ್ನು ಧೈರ್ಯವಾಗಿ ಚಿತ್ರಿಸಿದ್ದಾರೆ. ಕಥೆಯ ಅಗತ್ಯಕ್ಕೆ ತಕ್ಕಂತೆ ಆ ದೃಶ್ಯಗಳಿವೆ.&lt;/p&gt;&lt;p&gt;&lt;strong&gt;ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ 14 ಮಿಲಿಯನ್ ಫಾಲೋವರ್ಸ್ ಇದ್ದರೂ ನೀವು ಕೇವಲ ಒಬ್ಬರನ್ನು (ಪತ್ನಿ ರಾಧಿಕಾ ಪಂಡಿತ್) ಮಾತ್ರ ಫಾಲೋ ಮಾಡುತ್ತೀರಾ?&lt;/strong&gt;&lt;/p&gt;&lt;p&gt;ಹೌದು, ರಾಧಿಕಾ ನನ್ನ ಜೀವನದ ಏಕೈಕ ಆಪ್ತ ಗೆಳತಿ. ಸೀರಿಯಲ್ ದಿನಗಳಿಂದ ನಾವಿಬ್ಬರೂ ಏನೂ ಇಲ್ಲದ ಕಾಲದಿಂದ ಒಟ್ಟಿಗೆ ಬೆಳೆದಿದ್ದೇವೆ. ನನ್ನ ಬದುಕಿನ ಆಧಾರಸ್ತಂಭ ಅವರು.&lt;/p&gt;&lt;p&gt;&lt;strong&gt;₹4000 ಕೋಟಿ ಬಜೆಟ್&zwnj;ನ &lsquo;ರಾಮಾಯಣ&rsquo; ಚಿತ್ರದಲ್ಲಿ ನೀವೇಕೆ ರಾಮನ ಬದಲಿಗೆ ರಾವಣನ ಪಾತ್ರ ಆಯ್ದುಕೊಂಡಿರಿ?&lt;/strong&gt;&lt;/p&gt;&lt;p&gt;ಶ್ರೀರಾಮನ ಧರ್ಮ ಮತ್ತು ಒಳ್ಳೆಯತನದ ತೀವ್ರತೆಯನ್ನು ತೋರಿಸಲು ಅಷ್ಟೇ ಪ್ರಬಲವಾದ, ಭಯಂಕರವಾದ ರಾವಣನ ಪಾತ್ರ ಬೇಕು. ಆ ಪಾತ್ರವನ್ನು ನನಗಿಂತ ಚೆನ್ನಾಗಿ ಯಾರೂ ಮಾಡಲು ಸಾಧ್ಯವಿಲ್ಲ ಎಂಬ ನಂಬಿಕೆಯಿದೆ. ರಣಬೀರ್ ಕಪೂರ್ ರಾಮನಾಗಿ ಅದ್ಭುತವಾಗಿ ನಟಿಸುತ್ತಿದ್ದಾರೆ. ಹ್ಯಾನ್ಸ್ ಜಿಮ್ಮರ್ ಹಾಗೂ ಎ.ಆರ್. ರೆಹಮಾನ್ ಜಾಗತಿಕ ಮಟ್ಟದ ಸಂಗೀತ ನೀಡುತ್ತಿದ್ದಾರೆ.&lt;/p&gt;&lt;p&gt;&lt;strong&gt;ದಳಪತಿ ವಿಜಯ್ ಅವರಂತೆ ನೀವೂ ರಾಜಕೀಯಕ್ಕೆ ಬಂದು ಮುಖ್ಯಮಂತ್ರಿಯಾಗುವ ಆಸಕ್ತಿ ಇದೆಯೇ?&lt;/strong&gt;&lt;/p&gt;&lt;p&gt;ಸದ್ಯಕ್ಕೆ ನಟನಾಗಿ ಈ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ದೊಡ್ಡ ಜವಾಬ್ದಾರಿಯಿದೆ. ಆದರೆ ರಾಜಕೀಯ ಎಂದರೆ ಸಾರ್ವಜನಿಕ ಸೇವೆ, ಭವಿಷ್ಯದಲ್ಲಿ ಅಂತಹ ಅಗತ್ಯ ಬಂದರೆ ನೋಡೋಣ. ಸದ್ಯಕ್ಕಂತೂ ರಾಜಕೀಯದ ಯಾವುದೇ ಯೋಚನೆಗಳಿಲ್ಲ.&lt;/p&gt;&lt;p&gt;&lt;strong&gt;ನೀವು ದೊಡ್ಡ ಸ್ಟಾರ್ ಆದಾಗ ನಿಮ್ಮ ತಂದೆಯ ಮೊದಲ ಪ್ರತಿಕ್ರಿಯೆ ಹೇಗಿತ್ತು?&lt;/strong&gt;&lt;/p&gt;&lt;p&gt;ಅವರು ಯಾವಾಗಲೂ ಸಪೋರ್ಟಿವ್. ಆದರೆ ಈಗಲೂ ನಾನು ಚೇಷ್ಟೆ ಮಾಡುತ್ತೇನೆ, ಅವರು ನನ್ನನ್ನು ಯಾರಾದರೂ ಯಾಮಾರಿಸಬಹುದು ಎಂದು ಕಮೆಂಟ್ ಮಾಡುತ್ತಿರುತ್ತಾರೆ. ಅದು ಭಾರತೀಯ ಪೋಷಕರ ಪ್ರೀತಿ, &lsquo;ಜಾಸ್ತಿ ಹಾರಬೇಡ, ನೆಲದಲ್ಲೇ ಇರು&rsquo; ಅಂತ ಹೇಳುವ ರೀತಿ.&lt;/p&gt;&lt;p&gt;&lt;strong&gt;ನಿಮ್ಮ ಸಂಬಂಧಿಕರು ಕೆಲವರು &lsquo;ಇವನಿಗೆ ಊಟ ಇರಲಿಲ್ಲ ನಾವೇ ಹಾಕಿದ್ದು, 5 ದಿನ ಸ್ನಾನ ಮಾಡುತ್ತಿರಲಿಲ್ಲ ನಾವೇ ಮಾಡಿಸಿದ್ದು&rsquo; ಅಂತೆಲ್ಲ ಹೇಳಿದ್ದಾರಂತೆ?&lt;/strong&gt;&lt;/p&gt;&lt;p&gt;ಒಬ್ಬ ವ್ಯಕ್ತಿ ದೊಡ್ಡವನಾದಾಗ ಹಲವರು ಬಂದು &lsquo;ನಾನು ಹಾಗೆ ಮಾಡಿದೆ, ಹೀಗೆ ಮಾಡಿದೆ&rsquo; ಎನ್ನುತ್ತಾರೆ. ಜೇಬಿನಲ್ಲಿ ದುಡ್ಡು ಇಲ್ಲದಿದ್ದಾಗಲೂ ನಾನು ಸ್ಟೈಲ್ ಬಿಟ್ಟಿರಲಿಲ್ಲ, ಸ್ನಾನವಂತೂ ಪ್ರತಿದಿನ ಮಾಡುತ್ತಿದ್ದೆ. ಯಾರಾದರೂ ನೆರವಾಗಿದ್ದರೆ ಎಲ್ಲರಿಗೂ ಧನ್ಯವಾದ.&lt;/p&gt;&lt;p&gt;&lt;strong&gt;700 ಅಭಿಮಾನಿಗಳಿಗೆ ಪ್ರತ್ಯೇಕವಾಗಿ ನಿಂತು ಫೋಟೋ ಕೊಟ್ಟಿರಂತೆ?&lt;/strong&gt;&lt;/p&gt;&lt;p&gt;ಗ್ರೂಪ್ ಫೋಟೋ ತೆಗೆದರೆ ಅವರ ನೆನಪು ಉಳಿಯಲ್ಲ. ವೈಯಕ್ತಿಕವಾಗಿ ಫೋಟೋ ಕೊಟ್ಟರೆ ಅವರಿಗೆ ಲೈಫ್&zwnj;ಟೈಮ್ ಮೆಮೊರಿ. ಅವರ ಸಮಯಕ್ಕೂ ಬೆಲೆಯಿದೆ.&lt;/p&gt;&lt;p&gt;&lt;strong&gt;ನೀವು ಸ್ಟಾರ್ ಆದ ಮೇಲೂ ನಿಮ್ಮ ತಂದೆ ಬಸ್ ಡ್ರೈವಿಂಗ್ ಕೆಲಸ ಮುಂದುವರಿಸಿದ್ದರು...&lt;/strong&gt;&lt;/p&gt;&lt;p&gt;ಹೌದು ಸರ್. ಮಗ ಆಡಿ ಕಾರಿನಲ್ಲಿ ತಿರುಗಾಡುತ್ತಾನೆ, ಅಪ್ಪ ಬಸ್ ಓಡಿಸುತ್ತಾನೆ ಅಂತ ಜನ ಮಾತನಾಡಿಕೊಳ್ಳುತ್ತಿದ್ದರು. ನಾನು ಅವರಿಗೆ ದುಬಾರಿ ಕಾರು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ಅವರು &lsquo;ನನಗೆ ಯಶ್ ತಂದೆ ಅಂತ ಸಿಗುವ ಗೌರವಕ್ಕಿಂತ, ನನ್ನ ಕಾಯಕಕ್ಕೆ ನನ್ನ ಸಹೋದ್ಯೋಗಿಗಳು ಕೊಡುವ ಗೌರವವೇ ನನಗೆ ಮುಖ್ಯ&rsquo; ಎಂದು ಹೆಮ್ಮೆಯಿಂದ ಕೆಲಸ ಮಾಡುತ್ತಿದ್ದರು.&lt;/p&gt;&lt;p&gt;&lt;strong&gt;ಮಕ್ಕಳು ಟಾಕ್ಸಿಕ್ ಚಿತ್ರದಿಂದ ಏನು ಕಲಿಯುತ್ತಾರೆ?&lt;/strong&gt;&lt;/p&gt;&lt;p&gt;ಏನು ಮಾಡಬಾರದು ಎಂಬುದನ್ನು ಕಲಿಯುತ್ತಾರೆ. ಇದು ಮಕ್ಕಳಿಗಾಗಿ ಮಾಡಿದ ಚಿತ್ರವಲ್ಲ.&lt;/p&gt;&lt;p&gt;&lt;strong&gt;ಸಂಜಯ್ ದತ್ ಜೊತೆ ನಟಿಸಿದ ಅನುಭವ ಹೇಗಿತ್ತು?&lt;/strong&gt;&lt;/p&gt;&lt;p&gt;ಕೆಜಿಎಫ್ 2 ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಅವರ ಆರೋಗ್ಯ ಸರಿಯಿರಲಿಲ್ಲ. ಅಷ್ಟು ಧೂಳಿನಲ್ಲಿ ನಾವು ಬಾಡಿ ಡಬಲ್ ಬಳಸೋಣ ಎಂದರೂ ಅವರು ಒಪ್ಪಲಿಲ್ಲ. &lsquo;ನನ್ನ ಕಾಯಕಕ್ಕೆ ಅಗೌರವ ಮಾಡಬೇಡಿ&rsquo; ಎಂದು ಸ್ವತಃ ಬಂದು ಅದ್ಭುತವಾಗಿ ನಟಿಸಿದರು. ಅವರ ಬದ್ಧತೆ ಅಸಾಧಾರಣ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/my-remuneration-is-more-than-rs-50-crore-yash/articleshow-r7szpgk"/>
        </item>
        <item>
            <title><![CDATA[ಹೇಗಿದೆ ಟಾಕ್ಸಿಕ್ : ರಣರಣ ರಣರಂಗದ ನಡುವೆ ಪ್ರೇಮ, ಕಾಮ, ನಿರ್ನಾಮ]]></title>
            <link>https://www.kannadaprabha.in/entertainment-news/toxic-love-lust-and-destruction-amid-the-raging-battlefield/articleshow-tcw8yzo</link>
            <guid isPermaLink="true">https://www.kannadaprabha.in/entertainment-news/toxic-love-lust-and-destruction-amid-the-raging-battlefield/articleshow-tcw8yzo</guid>
            <pubDate>Thu, 27 Aug 2026 07:14:56 +0530</pubDate>
            <description><![CDATA[&lt;p&gt;ಗ್ಯಾಂಗ್&zwnj;ಸ್ಟರ್ ಸಿನಿಮಾಗಳಿಗೆ ಒಂದು ಸಿದ್ಧ ಮಾದರಿ ಇರುತ್ತದೆ. ಅದು ಯಾವತ್ತೂ ಆತನ ಅಂತರಂಗವನ್ನು ಪೂರ್ತಿಯಾಗಿ ತೆರೆದಿಡುವುದಿಲ್ಲ. ಪ್ರೇಕ್ಷಕನ ಭಾವುಕತೆಯನ್ನು ಗ್ಯಾಂಗ್&zwnj;ಸ್ಟರ್ ಸಿನಿಮಾಗಳು ಎಷ್ಟು ಬೇಕೋ ಅಷ್ಟು ಮಾತ್ರ ಪ್ರಚೋದಿಸುತ್ತಿರುತ್ತವೆ. ಟಾಕ್ಸಿಕ್ ಹೀಗೆ ಮಾಡುವುದಿಲ್ಲ ಅನ್ನುವ ಕಾರಣಕ್ಕೇ ವಿಶಿಷ್ಟವಾಗಿದೆ.&lt;/p&gt;]]></description>
            <media:content url="https://static-gi.asianetnews.com/images/01m0zm3eyxmjf9r5dy9by2r8v9/toxic-day-1-collection-1787767667676.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಚಿತ್ರ: ಟಾಕ್ಸಿಕ್&zwnj;&lt;/strong&gt;&lt;/h2&gt;&lt;h3&gt;&lt;strong&gt;ನಿರ್ದೇಶನ: ಗೀತು ಮೋಹನ್&zwnj;ದಾಸ್&zwnj;&lt;/strong&gt;&lt;/h3&gt;&lt;p&gt;&lt;strong&gt;ತಾರಾಗಣ: ಯಶ್, ನಯನತಾರಾ, ಕಿಯಾರ ಅಡ್ವಾಣಿ, ಹುಮಾ ಖುರೇಶಿ, ಸುದೇವ್ ನಾಯರ್, ರುಕ್ಮಿಣಿ ವಸಂತ್&lt;/strong&gt;&lt;/p&gt;&lt;p&gt;&lt;strong&gt;ರೇಟಿಂಗ್: 3&lt;/strong&gt;&lt;/p&gt;&lt;p&gt;&lt;strong&gt;- ಜೋಗಿ&lt;/strong&gt;&lt;/p&gt;&lt;p&gt;ಗ್ಯಾಂಗ್&zwnj;ಸ್ಟರ್ ಸಿನಿಮಾಗಳಿಗೆ ಒಂದು ಸಿದ್ಧ ಮಾದರಿ ಇರುತ್ತದೆ. ಅದು ಯಾವತ್ತೂ ಆತನ ಅಂತರಂಗವನ್ನು ಪೂರ್ತಿಯಾಗಿ ತೆರೆದಿಡುವುದಿಲ್ಲ. ಪ್ರೇಕ್ಷಕನ ಭಾವುಕತೆಯನ್ನು ಗ್ಯಾಂಗ್&zwnj;ಸ್ಟರ್ ಸಿನಿಮಾಗಳು ಎಷ್ಟು ಬೇಕೋ ಅಷ್ಟು ಮಾತ್ರ ಪ್ರಚೋದಿಸುತ್ತಿರುತ್ತವೆ. ಟಾಕ್ಸಿಕ್ ಹೀಗೆ ಮಾಡುವುದಿಲ್ಲ ಅನ್ನುವ ಕಾರಣಕ್ಕೇ ವಿಶಿಷ್ಟವಾಗಿದೆ. ಇದು ಒಬ್ಬ ಡಾನ್&zwnj;ನ ಬದುಕನ್ನು ಹೊರಗಿನಿಂದ ನೋಡುವ ಸಿನಿಮಾ ಮಾತ್ರ ಅಲ್ಲ. ಅವನ ಹೊರ ಬದುಕಿನಷ್ಟೇ ತೀವ್ರವಾಗಿ, ಅವನ ಮನಸ್ಸಿನೊಳಗೆ ಏನೇನು ನಡೆಯುತ್ತಿದೆ ಎನ್ನುವುದನ್ನು ಹೇಳಲು ಪ್ರಯತ್ನಿಸುವ ಸಿನಿಮಾ.&lt;/p&gt;&lt;p&gt;ಒಬ್ಬ ಗ್ಯಾಂಗ್&zwnj;ಸ್ಟರ್- ರಾಯ. ಅವನಿಗೆ ಸಿಗದ ಪ್ರೀತಿ. ಅವನು ಕಳೆದುಕೊಂಡ ಪ್ರೀತಿಯ ನೆನಪು, ಅವನಿಗೆ ನಿಜವೋ ಅಲ್ಲವೋ ಕೊನೆಗೂ ತಿಳಿಯದಂತೆ ಕಾಡುವ ಮಗಿರಿ- ಈ ಮೂರರ ನಡುವೆ ತಲ್ಲಣಿಸುತ್ತಿರುವ ಬದುಕು. ಬದುಕಿಗೆ ಅಂಟಿಕೊಳ್ಳಲು ಅವನು ಮೊರೆಹೋಗುವ ಅಮಲು, ಕ್ರೌರ್ಯ, ಹಿಂಸೆ ಮತ್ತು ಮೋಹಕ ಹುಚ್ಚುತನ.&lt;/p&gt;&lt;h2&gt;ಒಳಗಿನ ಜಗತ್ತು ಕೂಡ ಇಷ್ಟೇ ವಿಚಿತ್ರ.&lt;/h2&gt;&lt;p&gt;ಅವನ ಹೊರಗಿನ ಜಗತ್ತು ಹಿಂಸೆ, ಅಧಿಕಾರ, ಭಯ ಮತ್ತು ಅಪರಾಧಗಳದ್ದು. ಒಳಗಿನ ಜಗತ್ತು ಕೂಡ ಇಷ್ಟೇ ವಿಚಿತ್ರ. ಅಲ್ಲಿ ನೆನಪುಗಳು ವರ್ತಮಾನಕ್ಕೆ ಬಂದು ನಿಲ್ಲುತ್ತವೆ. ಭೂತಕಾಲ ಇದ್ದಕ್ಕಿದ್ದಂತೆ ವರ್ತಮಾನವನ್ನು ನಿಯಂತ್ರಿಸುತ್ತದೆ. ಇಲ್ಲದವರು ಎದುರು ನಿಂತಂತೆ ಕಾಣುತ್ತಾರೆ. ನಡೆದ ಘಟನೆಗಳಿಗಿಂತ ಮನಸ್ಸಿನಲ್ಲಿ ನಡೆದ ಘಟನೆಗಳೇ ಕೆಲವೊಮ್ಮೆ ಹೆಚ್ಚು ನಿಜವಾಗಿರುತ್ತವೆ. ಕಲ್ಪನೆಯ ನಿಯತ್ತಿಗಿಂತ ವಾಸ್ತವದ ದ್ರೋಹವೇ ಹೆಚ್ಚು ಪ್ರಾಮಾಣಿಕ ಅನ್ನುವ ಮಾತು ರಾಯನ ಬಾಯಿಯಿಂದಲೇ ಬರುತ್ತದೆ.&lt;/p&gt;&lt;p&gt;ಟಾಕ್ಸಿಕ್&zwnj;ನಲ್ಲಿ ಯಾವುದು ವಾಸ್ತವ, ಯಾವುದು ನೆನಪು, ಯಾವುದು ಭ್ರಮೆ, ಯಾವುದು ಅವನ ಕಲ್ಪನೆ ಎನ್ನುವುದು ಸ್ಪಷ್ಟವಾಗುವುದೇ ಇಲ್ಲ. ಇವೆಲ್ಲವುಗಳ ಕೊಲಾಜ್ ನಮ್ಮ ಮುಂದೆ ಹಾದು ಹೋಗುತ್ತಿರುತ್ತದೆ. ಅವನು ಕೇಡಿಗಳ ಮಹರಾಯನಾಗಿ ಎಲ್ಲವನ್ನೂ ನಿಯಂತ್ರಿಸಬಲ್ಲ. ಜನರನ್ನು ಹೆದರಿಸಬಲ್ಲ. ಎದುರಾಳಿಗಳನ್ನು ಸೋಲಿಸಬಲ್ಲ. ತನ್ನ ಸುತ್ತಲಿನ ಜಗತ್ತನ್ನು ತನ್ನ ನಿಯಮಗಳಂತೆ ನಡೆಸಬಲ್ಲ. ಪ್ರೀತಿಯನ್ನು ಮಾತ್ರ ಆಳುವುದು ಸಾಧ್ಯವಾಗುವುದಿಲ್ಲ.&lt;/p&gt;&lt;p&gt;ಅವನಿಗೆ ಸಿಗದ ಪ್ರೀತಿ ಅವನೊಳಗಿನ ದುರ್ಬಲ ಮನುಷ್ಯನನ್ನು ಹೊರಗೆ ತರುತ್ತದೆ. ಅವನು ಎಷ್ಟೇ ಕ್ರೂರಿಯಾಗಿದ್ದರೂ, ಆ ಪ್ರೀತಿಯ ಮುಂದೆ ಅವನು ಅಸಹಾಯಕ. ಅವನು ಕಳೆದುಕೊಂಡ ಪ್ರೀತಿ ಅವನ ನೆನಪಿನಲ್ಲಿ ಬದುಕುತ್ತಲೇ ಇರುತ್ತದೆ. ಅದು ಕೇವಲ ನೆನಪೇ ಅಥವಾ ಅವನ ಅಪರಾಧಪ್ರಜ್ಞೆ, ನೋವು ಮತ್ತು ಏಕಾಂತ ಸೇರಿ ಸೃಷ್ಟಿಸಿರುವ ಭ್ರಮೆಯೇ ಎಂಬುದೂ ಇಲ್ಲಿ ಅಸ್ಪಷ್ಟ. ಗೀತು ಮೋಹನ್&zwnj;ದಾಸ್ ಇವನ್ನೆಲ್ಲ ರೂಪಕಗಳಲ್ಲಿ ಮತ್ತು ತುಣುಕು ಸಂಭಾಷಣೆಗಳಲ್ಲಿ ಹಿಡಿದಿಡುತ್ತಾ ಹೋಗಿದ್ದಾರೆ.&lt;/p&gt;&lt;p&gt;ಇಲ್ಲಿ ಹಿಂಸೆಯ ಮಧ್ಯೆ ಪ್ರೀತಿ ಬರುತ್ತದೆ. ಪ್ರೀತಿಯ ಮಧ್ಯೆ ಹಿಂಸೆ ನುಗ್ಗುತ್ತದೆ. ಒಂದು ನೆನಪು ಅವನನ್ನು ಇನ್ನೊಂದು ಕಾಲಕ್ಕೆ ಕರೆದೊಯ್ಯುತ್ತದೆ. ಒಂದು ಘಟನೆ ಅವನೊಳಗಿನ ಮತ್ತೊಂದು ಗಾಯವನ್ನು ತೆರೆದುಬಿಡುತ್ತದೆ. ಇದನ್ನೆಲ್ಲ ಒಂದು ಓದಲಾಗದ ಭಾಷೆಯಲ್ಲಿ ಗೀತು ಮೋಹನ್&zwnj;ದಾಸ್ ಬರೆದಿದ್ದಾರೆ. ಟಾಕ್ಸಿಕ್ ಚಿತ್ರದ ವೈಚಿತ್ರ್ಯವೇ ಅದರ ಚಿತ್ರಭಾಷೆ. ಸಿನಿಮಾ ಅವನ ಬದುಕನ್ನು ಸರಳವಾಗಿ ಹೇಳುವುದಕ್ಕಿಂತ, ಅವನ ಮನಸ್ಸು ಹೇಗೆ ಅವನ ಸ್ಥಿತಿಯನ್ನು ಅನುಭವಿಸುತ್ತಿದೆ ಎಂಬುದನ್ನು ತೋರಿಸಲು ಪ್ರಯತ್ನಿಸುತ್ತದೆ. ಅವನ ಭಯ, ಕೋಪ, ಕಾಮನೆ, ಪ್ರೀತಿ, ಅಪರಾಧಪ್ರಜ್ಞೆ, ಏಕಾಂತ ಎಲ್ಲವೂ ಒಂದಕ್ಕೊಂದು ಬೆರೆತು ಹೋಗುತ್ತವೆ.&lt;/p&gt;&lt;p&gt;ಹೀಗಾಗಿ ಟಾಕ್ಸಿಕ್ ಒಬ್ಬ ಡಾನ್&zwnj;ನ ಏಳು-ಬೀಳುಗಳ ಕಥೆ ಮಾತ್ರ ಅಲ್ಲ. ಹೊರಗೆ ಅವನು ನಿರ್ಮಿಸಿಕೊಂಡಿರುವ ಜಗತ್ತಿಗಿಂತ, ತನ್ನೊಳಗೆ ಅವನು ಸಿಕ್ಕಿಹಾಕಿಕೊಂಡಿರುವ ಜಗತ್ತಿನ ಕಥೆ ಇದು. ಅವನು ತನ್ನ ಶತ್ರುಗಳನ್ನು ಕೊಲ್ಲಬಹುದು. ತನ್ನೊಳಗೆ ಬದುಕುತ್ತಿರುವ ಭೂತಕಾಲ ಎಂಬ ಮಹಾವೈರಿಯನ್ನು ಕೊಲ್ಲಲಾರ.&lt;/p&gt;&lt;p&gt;ಒಬ್ಬ ಗ್ಯಾಂಗ್&zwnj;ಸ್ಟರ್&zwnj;ನ ಕಥೆಯಾಗಿ ಶುರುವಾಗುವ ಟಾಕ್ಸಿಕ್, ತನ್ನದೇ ಮನಸ್ಸಿನೊಳಗೆ ಸಿಕ್ಕಿಹಾಕಿಕೊಂಡಿರುವ ಒಬ್ಬ ಮನುಷ್ಯನ ಕಥೆಯಾಗಿ ಬದಲಾಗುತ್ತದೆ. ಅದೇ ಈ ಸಿನಿಮಾದ ಶಕ್ತಿ, ಮಿತಿ ಮತ್ತು ವೈಚಿತ್ರ್ಯ. ಅದೇ ಇದರ ಟಾಕ್ಸಿಸಿಟಿ.&lt;/p&gt;&lt;p&gt;ಈ ಕಥನದ ಉದ್ದಕ್ಕೂ ವೀರನಂತೆ, ವಿಕ್ಷಿಪ್ತನಂತೆ, ಮಹಾ ಪ್ರೇಮಿಯಂತೆ, ಕಾಮುಕನಂತೆ, ಲೋಲುಪನಂತೆ ಯಶ್ ನಟನೆಯ ಛಾಯೆ ಬದಲಾಗುತ್ತಾ ಹೋಗುತ್ತದೆ. ಆ ಪಾತ್ರಕ್ಕಿರುವ ಹತ್ತಾರು ನೆರಳುಗಳನ್ನು ಯಶ್ ಅದ್ಭುತವಾಗಿ ನಿಭಾಯಿಸಿದ್ದಾರೆ. ಸೋಲೊಪ್ಪಿಕೊಂಡ ದಂಡನಾಯಕನಂತೆ, ಮಗನನ್ನು ನಿಭಾಯಿಸಲಾರದ ಹತಾಶ ತಂದೆಯಂತೆ, ತಾನು ತಾನೇ ಆಗಿರುವವಳ ತೆಕ್ಕೆಗೆ ಮರಳಲಾರದ ದುರಂತ ಪ್ರೇಮಿಯಂತೆ ಬದಲಾಗುತ್ತಾ ಹೋಗುವ ಸಂಕೀರ್ಣ ಪಾತ್ರವನ್ನು ಯಶ್ ಬದುಕಿದ್ದಾರೆ. ಕೆಲವೊಂದು ದೃಶ್ಯದಲ್ಲಿ ಯಶ್ ಅಭಿನಯ, ರಾವಣನ ಪಾತ್ರಕ್ಕಾಗಿ ಮಾಡುತ್ತಿರುವ ರಿಹರ್ಸಲ್&zwnj;ನಂತೆ ಭಾಸವಾಗುತ್ತದೆ. ನಯನತಾರಾ, ಕಿಯಾರ ಇವರಿಬ್ಬರು ಬರೀ ರಕ್ತವಲ್ಲ, ಕಂಬನಿಯೂ ಕಣ್ಣಲ್ಲಿದೆ ಅಂತ ತೋರಿಸುತ್ತಾರೆ. ಕತೆಯ ಅಂತರಾಳದಲ್ಲಿರುವ ಹಿಂಸೆ, ಅಧಿಕಾರ ಮತ್ತು ದಾಹವನ್ನು ರವಿ ಬಸ್ರೂರು ಸಂಗೀತ ಸಮರ್ಥವಾಗಿ ಎತ್ತಿ ಹಿಡಿಯುತ್ತದೆ.&lt;/p&gt;&lt;h3&gt;ಇಡೀ ಚಿತ್ರ ಹಾಲಿವುಡ್ ಶೈಲಿಯಲ್ಲಿ&lt;/h3&gt;&lt;p&gt;ಇಡೀ ಚಿತ್ರ ಹಾಲಿವುಡ್ ಶೈಲಿಯಲ್ಲಿದೆ. ಹೀಗಾಗಿ ಅನೇಕ ದೃಶ್ಯಗಳಲ್ಲಿ ಪಾತ್ರಗಳು ಆಡುವ ಕನ್ನಡ ಮಾತು ಆ ಸಂದರ್ಭಕ್ಕೆ ಹೊಂದುತ್ತಿಲ್ಲ ಅನ್ನಿಸುತ್ತಾ, ಕನ್ನಡಕ್ಕೆ ಡಬ್ ಆದ ಹಾಲಿವುಡ್ ಸಿನಿಮಾ ನೋಡಿದ ಭಾವನೆ ಮೂಡಿಸುತ್ತದೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/toxic-love-lust-and-destruction-amid-the-raging-battlefield/articleshow-tcw8yzo"/>
        </item>
        <item>
            <title><![CDATA[ಸೆ.6ರಿಂದ ಬಿಗ್‌ ಬಾಸ್‌  13ನೇ ಸೀಸನ್‌ ಆರಂಭ]]></title>
            <link>https://www.kannadaprabha.in/entertainment-news/bigg-boss-season-13-to-begin-on-september-6/articleshow-vlump3o</link>
            <guid isPermaLink="true">https://www.kannadaprabha.in/entertainment-news/bigg-boss-season-13-to-begin-on-september-6/articleshow-vlump3o</guid>
            <pubDate>Mon, 31 Aug 2026 11:38:17 +0530</pubDate>
            <description><![CDATA[&lt;p&gt;ನಟ ಸುದೀಪ್&zwnj; ಅವರ ನಿರೂಪಣೆಯಲ್ಲಿ 13ನೇ ಕನ್ನಡ ಬಿಗ್&zwnj;ಬಾಸ್&zwnj; ರಿಯಾಲಿಟಿ ಶೋ ಸೆ.6ರಿಂದ ಆರಂಭವಾಗಲಿದೆ. ಸೆ.6 ರಂದು ಸಂಜೆ 7ಕ್ಕೆ ಗ್ರ್ಯಾಂಡ್&zwnj; ಪ್ರೀಮಿಯರ್&zwnj; ನಡೆಯಲಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಕಲರ್ಸ್&zwnj; ಕನ್ನಡ ಹಾಗೂ ಜಿಯೋ ಹಾಟ್&zwnj;ಸ್ಟಾರ್&zwnj;ನಲ್ಲಿ ಶೋ ಪ್ರಸಾರ ಆಗಲಿದೆ.&lt;/p&gt;]]></description>
            <media:content url="https://static-gi.asianetnews.com/images/01m19demeytgb0asjf6vrft7yg/bigg-boss-13-1788096238046.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು : &lt;/strong&gt;ನಟ ಸುದೀಪ್&zwnj; ಅವರ ನಿರೂಪಣೆಯಲ್ಲಿ 13ನೇ ಕನ್ನಡ ಬಿಗ್&zwnj;ಬಾಸ್&zwnj; ರಿಯಾಲಿಟಿ ಶೋ ಸೆ.6ರಿಂದ ಆರಂಭವಾಗಲಿದೆ. ಸೆ.6 ರಂದು ಸಂಜೆ 7ಕ್ಕೆ ಗ್ರ್ಯಾಂಡ್&zwnj; ಪ್ರೀಮಿಯರ್&zwnj; ನಡೆಯಲಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಕಲರ್ಸ್&zwnj; ಕನ್ನಡ ಹಾಗೂ ಜಿಯೋ ಹಾಟ್&zwnj;ಸ್ಟಾರ್&zwnj;ನಲ್ಲಿ ಶೋ ಪ್ರಸಾರ ಆಗಲಿದೆ.&lt;/p&gt;&lt;h2&gt;ಎಂದಿನಂತೆ 100 ದಿನ ಶೋ ನಡೆಯಲಿದೆ&lt;/h2&gt;&lt;p&gt;ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟ ಸುದೀಪ್&zwnj; ಅವರು, &lsquo;ಎಂದಿನಂತೆ 100 ದಿನ ಶೋ ನಡೆಯಲಿದೆ. ಎಷ್ಟು ಮಂದಿ ಸ್ಪರ್ಧಿಗಳು ಎಂಬುದು ಸೆ.6ಕ್ಕೆ ಗೊತ್ತಾಗಲಿದೆ. ಈ ಬಾರಿ ಫ್ಲೈಟ್&zwnj; ಥೀಮ್&zwnj;ನಲ್ಲಿ ಶೋ ಡಿಸೈನ್&zwnj; ಮಾಡಲಾಗಿದೆ. ಬಿಗ್&zwnj;ಬಾಸ್&zwnj; ಅಗ್ನಿ ಪರೀಕ್ಷೆ ಕಾರ್ಯಕ್ರಮದಿಂದ 3 ಮಂದಿ ಸಾಮಾನ್ಯ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದ್ದು, ಉಳಿದವರು ಸೆಲೆಬ್ರಿಟಿಗಳಾಗಿರುತ್ತಾರೆ&rsquo; ಎಂದರು.&lt;/p&gt;&lt;h3&gt;ಚಿತ್ರರಂಗದ ಪ್ರತಿಯೊಬ್ಬರ ಮೇಲೂ ಪ್ರೀತಿ ಇದೆ&lt;/h3&gt;&lt;p&gt;ಇದೇ ಸಂದರ್ಭದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುದೀಪ್&zwnj;, &lsquo;ಬಿಗ್&zwnj; ಬಾಸ್&zwnj; ಮನೆಯಲ್ಲಿ ದರ್ಶನ್&zwnj; ಅಭಿನಯದ ಹಾಡುಗಳನ್ನು ಹಾಕದೆ ಇರುವುದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಕೆಲವೊಮ್ಮೆ ಯಾಕೆ ಈ ಹಾಡುಗಳನ್ನು ಪ್ಲೇ ಮಾಡುತ್ತಿದ್ದೀರಿ ಎಂದು ಪ್ರಶ್ನಿಸುವವರೂ ಇರುತ್ತಾರೆ, ಕೆಲವೊಮ್ಮೆ ಬೆದರಿಕೆಗಳು ಸಹ ಇರಬಹುದು. ಆದರೆ, ನಮಗೆ ಚಿತ್ರರಂಗದ ಪ್ರತಿಯೊಬ್ಬರ ಮೇಲೂ ಪ್ರೀತಿ ಇದೆ. ಯಾರ ಮೇಲೂ ದ್ವೇಷವಿಲ್ಲ&rsquo; ಎಂದರು.&lt;/p&gt;&lt;p&gt;ಪತ್ರಿಕಾಗೋಷ್ಠಿಯಲ್ಲಿ ಕಲರ್ಸ್&zwnj; ಕನ್ನಡ ವಾಹಿನಿಯ ಪ್ರಕಾಶ್&zwnj; ಸೇರಿ ಪ್ರಮುಖರು ಹಾಜರಿದ್ದರು.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/bigg-boss-season-13-to-begin-on-september-6/articleshow-vlump3o"/>
        </item>
        <item>
            <title><![CDATA[ಟಾಕ್ಸಿಕ್ ವಿರುದ್ಧ ಕಿಡಿ ಕಾರಿದ ರಾಜೇಂದ್ರ ಸಿಂಗ್ ಬಾಬು ಪುತ್ರಿ ರಿಷಿಕಾ ಸಿಂಗ್]]></title>
            <link>https://www.kannadaprabha.in/entertainment-news/rajendra-singh-babus-daughter-rishika-singh-lashes-out-at-toxic/articleshow-zrc5i2e</link>
            <guid isPermaLink="true">https://www.kannadaprabha.in/entertainment-news/rajendra-singh-babus-daughter-rishika-singh-lashes-out-at-toxic/articleshow-zrc5i2e</guid>
            <pubDate>Thu, 13 Aug 2026 12:51:35 +0530</pubDate>
            <description><![CDATA[&lt;p&gt;ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್&zwnj; ಬಾಬು ಪುತ್ರಿ, ನಟಿ ರಿಷಿಕಾ ಸಿಂಗ್&zwnj; ಯಶ್&zwnj; ಅವರ &lsquo;ಟಾಕ್ಸಿಕ್&zwnj;&rsquo; ಟ್ರೇಲರ್&zwnj; ವಿರುದ್ಧ ವಾಚಾಮಗೋಚರವಾಗಿ ಮಾತು ಹರಿಯಬಿಟ್ಟಿದ್ದಾರೆ. ಇದು ಯಶ್&zwnj; ಫ್ಯಾನ್ಸ್&zwnj; ಕೆಂಗಣ್ಣಿಗೆ ಗುರಿಯಾಗಿದೆ&lt;/p&gt;]]></description>
            <media:content url="https://static-gi.asianetnews.com/images/01kzwc83dp7jtzdmd4cn5yv929/rishika-singh-1786585025974.jpg" type="image/jpeg" height="390" width="690"/>
            <content:encoded><![CDATA[&lt;h2&gt;ಸಿನಿವಾರ್ತೆ&lt;/h2&gt;&lt;p&gt;ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್&zwnj; ಬಾಬು ಪುತ್ರಿ, ನಟಿ ರಿಷಿಕಾ ಸಿಂಗ್&zwnj; ಯಶ್&zwnj; ಅವರ &lsquo;ಟಾಕ್ಸಿಕ್&zwnj;&rsquo; ಟ್ರೇಲರ್&zwnj; ವಿರುದ್ಧ ವಾಚಾಮಗೋಚರವಾಗಿ ಮಾತು ಹರಿಯಬಿಟ್ಟಿದ್ದಾರೆ. ಇದು ಯಶ್&zwnj; ಫ್ಯಾನ್ಸ್&zwnj; ಕೆಂಗಣ್ಣಿಗೆ ಗುರಿಯಾಗಿದೆ.&lt;/p&gt;&lt;h3&gt;ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ&lt;/h3&gt;&lt;p&gt;ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿರುವ ರಿಷಿಕಾ, &lsquo;ಹೆಣ್ಮಕ್ಳಿಗೆ ಅಂದ ಇದ್ರೆ ಚಂದ, ಗಂಡು ಮಕ್ಳಿಗೆ ಮರ್ಯಾದೆ ಇದ್ರೆ ಚೆಂದ ಕಂದ, ಇದೇನು ಪ್ಯಾಂಟ್ ಬಿಚ್ಕೊಂಡು ಆಗ್ಬಿಟ್ಟಿದ್ದೀಯ ಮಂಗ. ಮನೆಯಲ್ಲಿ ಹೆಂಡ್ತಿ ಇದಾಳೆ, ಇದೇನು ಹೀರೋಯಿನ್​​​ಗಳ ಜೊತೆ ನಿನ್ನ ಚಕ್ಕಂದ ಕಂದ. ನಿಂಗೂ ಹೆಣ್ ಮಗ್ಳು ಇದಾಳೆ ದೊಡ್ಡದಾಗಿ ಡೈಲಾಗ್ ಹೊಡೆಯೋಕೆ ಬಂದ.. ಹೆಣ್ಮಕ್ಕಳಿಗೆ ರೆಸ್ಪೆಕ್ಟ್ ಇರ್ಲಿ, ಇಲ್ಲಾಂದ್ರ ಜಾಗ ಖಾಲಿ ಮಾಡ್ಸಿಬಿಡ್ತೀವಿ ಕರ್ನಾಟಕದಿಂದ. ಐ ಆಮ್ ಟಾಕ್ಸಿಕ್&rsquo;ಎಂದು ವಿಚಿತ್ರ ರೀತಿಯಲ್ಲಿ ಮಾತನಾಡಿದ್ದಾರೆ.&lt;/p&gt;]]></content:encoded>
            <category>entertainment</category>
            <dc:creator>Sujatha NR</dc:creator>
            <atom:link href="https://www.kannadaprabha.in/entertainment-news/rajendra-singh-babus-daughter-rishika-singh-lashes-out-at-toxic/articleshow-zrc5i2e"/>
        </item>
    </channel>
</rss>
