<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Kannada Prabha</title>
        <link>https://www.kannadaprabha.in</link>
        <description><![CDATA[Kannada Prabha - No.1 News channel in Karnataka, which delivers Local and International news in Marathi language.]]></description>
        <image>
            <url>https://static-assets.asianetnews.com/images/ogimages/OG_Bangla.jpg</url>
            <width>143</width>
            <height>100</height>
            <link>https://www.kannadaprabha.in</link>
            <title>Kannada Prabha</title>
        </image>
        <lastBuildDate>Mon, 20 Apr 2026 06:11:10 +0530</lastBuildDate>
        <atom:link href="https://www.kannadaprabha.in/rss/india-news" rel="self" type="application/rss+xml"/>
        <item>
            <title><![CDATA[ವಿಪಕ್ಷಗಳ ವಾಟ್ಸಾಪ್‌ಗೆ ಕೇಂದ್ರದ ಮಸೂದೆ ಆಫ್!]]></title>
            <link>https://www.kannadaprabha.in/india-news/how-opposition-s-whatsapp-group-strategy-ensured-defeat-of-women-s-quota-linked-delimitation-bill/articleshow-0tiyao8</link>
            <guid isPermaLink="true">https://www.kannadaprabha.in/india-news/how-opposition-s-whatsapp-group-strategy-ensured-defeat-of-women-s-quota-linked-delimitation-bill/articleshow-0tiyao8</guid>
            <pubDate>Mon, 20 Apr 2026 04:41:18 +0530</pubDate>
            <description><![CDATA[&lt;p&gt;131ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಅಪರೂಪದ ಒಗ್ಗಟ್ಟಿನಿಂದ ಸೋಲಿಸಿದ ವಿಪಕ್ಷಗಳು, ಇದನ್ನು ಸಾಧ್ಯವಾಗಿಸಲು ಮುಂಚಿನಿಂದಲೇ ರಣತಂತ್ರ ಹೆಣೆದಿದ್ದವು. ಮಸೂದೆಗೆ ಸೋಲುಣಿಸಲು ವಾಟ್ಸಾಪ್&zwnj; ಗ್ರೂಪ್&zwnj; ರಚಿಸಿ ಕಾರ್ಯತಂತ್ರ ರೂಪಿಸಲಾಗಿತ್ತು ಎಂಬ ಅಚ್ಚರಿಯ ಮಾಹಿತಿ ಹೊರಬಿದ್ದಿದೆ.&lt;/p&gt;]]></description>
            <media:content url="https://static-assets.asianetnews.com/kp/json/19042026/pictures/WHATSAPP_333.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ನವದೆಹಲಿ:&lt;/strong&gt; ಶನಿವಾರ ಲೋಕಸಭೆಯಲ್ಲಿ 131ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು (ಮಹಿಳಾ ಮೀಸಲು ತಿದ್ದುಪಡಿ ಮಸೂದೆ) ಅಪರೂಪದ ಒಗ್ಗಟ್ಟಿನಿಂದ ಸೋಲಿಸಿದ ವಿಪಕ್ಷಗಳು, ಇದನ್ನು ಸಾಧ್ಯವಾಗಿಸಲು ಮುಂಚಿನಿಂದಲೇ ರಣತಂತ್ರ ಹೆಣೆದಿದ್ದವು. ಮಸೂದೆಗೆ ಸೋಲುಣಿಸಲು ವಾಟ್ಸಾಪ್&zwnj; ಗ್ರೂಪ್&zwnj; ರಚಿಸಿ ಕಾರ್ಯತಂತ್ರ ರೂಪಿಸಲಾಗಿತ್ತು ಎಂಬ ಅಚ್ಚರಿಯ ಮಾಹಿತಿ ಹೊರಬಿದ್ದಿದೆ.&lt;/p&gt;&lt;p&gt;ಕೇಂದ್ರ ಸರ್ಕಾರ ಮಹಿಳಾ ಮೀಸಲು ಮತ್ತು ಕ್ಷೇತ್ರ ಮರುವಿಂಗಡನೆ ವಿಧೇಯಕ ಮಂಡನೆ ಮತ್ತು ಅದರ ಅಂಗೀಕಾರಕ್ಕೆ ಯತ್ನಿಸುತ್ತಿರುವ ವಿಷಯ ಗೊತ್ತಾಗುತ್ತಲೇ ವಿಪಕ್ಷಗಳು ಹಲವು ವಾಟ್ಸಾಪ್ ಗ್ರೂಪ್&zwnj; ರಚಿಸಿದ್ದವು. ಅದರಲ್ಲಿ ಸಂಸದರ ಕಡ್ಡಾಯ ಹಾಜರಾತಿ, ಸರ್ಕಾರದ ಸಂಭಾವ್ಯ ಕ್ರಮಗಳಿಗೆ ಪ್ರತಿತಂತ್ರ ರೂಪಿಸುವುದು ಮತ್ತು ಕ್ಷೇತ್ರ ಮರುವಿಂಗಡಣೆ ಬಗ್ಗೆ ಪ್ರತಿ ನಿರೂಪಣೆಗಳನ್ನು (ಕೌಂಟರ್&zwnj; ನರೇಟಿವ್&zwnj;) ಚರ್ಚಿಸಲಾಗುತ್ತಿತ್ತು.&amp;nbsp;&lt;/p&gt;&lt;h2&gt;ಗೈರು ಹಾಜರಾಗುವ ಸಾಧ್ಯತೆ ಇದೆಯೇ ಎಂದು ನಿಗಾ&lt;/h2&gt;&lt;p&gt;ಯಾವುದೇ ಸಂಸದ ಗೈರು ಹಾಜರಾಗುವ ಸಾಧ್ಯತೆ ಇದೆಯೇ ಎಂದು ನಿಗಾ ಇಡಲಾಗಿತ್ತು. ಕೊನೆಯ ಕ್ಷಣದಲ್ಲಿ ಯಾವುದೇ ಗೊಂದಲವಾಗದಂತೆ ಸಮಗ್ರ ಮಾಹಿತಿ ಹಂಚಿಕೊಂಡು, ಸಂಪೂರ್ಣ ಕಾರ್ಯಸೂಚಿಯನ್ನು ಸಿದ್ಧಪಡಿಸಲಾಗಿತ್ತು.&amp;nbsp;&lt;/p&gt;&lt;h3&gt;ಮಲ್ಲಿಕಾರ್ಜುನ ಖರ್ಗೆ ಸೂಚನೆ&lt;/h3&gt;&lt;p&gt;ಸ್ವತಃ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಪಕ್ಷಗಳ ಸಂಸದರಿಗೆ, &lsquo;ಯಾವುದೇ ಪ್ರಚೋದನೆಗೆ ಬಲಿಯಾಗಬೇಡಿ. ನಮ್ಮ ಪಕ್ಷ ಅಥವಾ ನಾಯಕರ ವಿರುದ್ಧ ಸರ್ಕಾರದವರು ಅವಹೇಳನಕಾರಿಯಾಗಿ ಮಾತನಾಡಿದರೂ ತಾಳ್ಮೆ ಕಳೆದುಕೊಳ್ಳಬೇಡಿ. ಸಭಾತ್ಯಾಗ ಮಾಡಬೇಡಿ. ಸರ್ಕಾರದಿಂದ ಎಂಥ ಹೇಳಿಕೆಗಳು ಬಂದರೂ ಶಾಂತವಾಗಿ ವರ್ತಿಸಿ&rsquo; ಎಂದು ಸೂಚನೆ ನೀಡಿದ್ದರು. &amp;nbsp;&lt;/p&gt;&lt;p&gt;ಹೀಗಾಗಿ ವಿಪಕ್ಷಗಳು ಅಂದುಕೊಂಡಂತೆಯೇ ಒಗ್ಗಟ್ಟಿನಿಂದ ವರ್ತಿಸಿ, ಮಸೂದೆಯನ್ನು ಸೋಲಿಸುವಲ್ಲಿ ಸಫಲವಾದವು ಎಂದು ತಿಳಿದುಬಂದಿದೆ.&lt;/p&gt;&lt;p&gt;ರಣನೀತಿ- ಮಹಿಳಾ ಮೀಸಲು ತಿದ್ದುಪಡಿಬಿಲ್&zwnj; ಸಂದೇಹಗಳಿಗೆ ಕೇಂದ್ರಸರ್ಕಾರದ ಸವಿಸ್ತಾರ ಉತ್ತರ- ವಿವರ ಪುಟ 7--ವಾಟ್ಸಾಪ್&zwnj; ರಣನೀತಿ ಹೇಗೆ?- ಕೇಂದ್ರವು ಮಸೂದೆ ಮಂಡಿಸುವ ನಿರ್ಧಾರ ಮಾಡಿದ ಬೆನ್ನಲ್ಲೇ ವಿಪಕ್ಷಗಳು ಒಗ್ಗಟ್ಟು- ವಾಟ್ಸಾಪ್ ಗ್ರೂಪ್ ರಚಿಸಿ ಎಲ್ಲ ವಿಪಕ್ಷಗಳ ಸಂಸದರ ಸೇರ್ಪಡೆ, ಅದರಲ್ಲಿ ಸಂವಹನ- ಸಂಸದರ ಕಡ್ಡಾಯ ಹಾಜರಾತಿ ಮೇಲೆ ನಿಗಾ , ಸರ್ಕಾರದ ಕ್ರಮಗಳಿಗೆ ಪ್ರತಿತಂತ್ರ&lt;/p&gt;&lt;p&gt;- ಕೊನೆಯ ಕ್ಷಣದಲ್ಲಿ ಯಾವುದೇ ಗೊಂದಲವಾಗದಂತೆ ಸಮಗ್ರ ಮಾಹಿತಿ ವಿನಿಮಯ&lt;/p&gt;&lt;p&gt;- ಗ್ರೂಪ್&zwnj;ನಲ್ಲಿ ಖುದ್ದು ಸಲಹೆ ಸೂಚನೆಗಳನ್ನು ನೀಡುತ್ತಿದ್ದ ಪ್ರತಿಪಕ್ಷ ನಾಯಕ ಖರ್ಗೆ&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/how-opposition-s-whatsapp-group-strategy-ensured-defeat-of-women-s-quota-linked-delimitation-bill/articleshow-0tiyao8"/>
        </item>
        <item>
            <title><![CDATA[ಮೋದಿ ಸರ್ಕಾರಕ್ಕಿಂದು ಅಗ್ನಿಪರೀಕ್ಷೆ]]></title>
            <link>https://www.kannadaprabha.in/politics-news/agnipariksha-for-the-government-of-india-today/articleshow-22pgqmf</link>
            <guid isPermaLink="true">https://www.kannadaprabha.in/politics-news/agnipariksha-for-the-government-of-india-today/articleshow-22pgqmf</guid>
            <pubDate>Fri, 17 Apr 2026 06:57:15 +0530</pubDate>
            <description><![CDATA[&lt;p&gt;ಲೋಕಸಭೆ ಹಾಗೂ ವಿಧಾಮನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ಮತ್ತು ಕ್ಷೇತ್ರ ಮರುವಿಂಗಡಣೆಯ ಕುರಿತಾದ ಮಹತ್ವದ ಮೂರು ವಿಧೇಯಕಗಳನ್ನು ಕೇಂದ್ರ ಸರ್ಕಾರ ಗುರುವಾರ ಲೋಕಸಭೆಯಲ್ಲಿ ಮಂಡಿಸಿದೆ.&lt;/p&gt;]]></description>
            <media:content url="https://static-gi.asianetnews.com/images/01kmfgw5hc7ftk54ed1x6cy72s/fotojet---2026-03-24t142450.005-1774342510124.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;strong&gt;ನವದೆಹಲಿ: &lt;/strong&gt;ಲೋಕಸಭೆ ಹಾಗೂ ವಿಧಾಮನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ಮತ್ತು ಕ್ಷೇತ್ರ ಮರುವಿಂಗಡಣೆಯ ಕುರಿತಾದ ಮಹತ್ವದ ಮೂರು ವಿಧೇಯಕಗಳನ್ನು ಕೇಂದ್ರ ಸರ್ಕಾರ ಗುರುವಾರ ಲೋಕಸಭೆಯಲ್ಲಿ ಮಂಡಿಸಿದೆ. ಇವುಗಳ ಕುರಿತು ಶುಕ್ರವಾರ ಸಂಜೆ 4 ಗಂಟೆಗೆ ಮತದಾನ ನಡೆಯಲಿದೆ.&lt;/p&gt;&lt;p&gt;ಸಾಂವಿಧಾನಿಕ ತಿದ್ದುಪಡಿ ಇರುವ ಕಾರಣ ಈ ಮಸೂದೆಗಳನ್ನು ಮೂರನೇ ಎರಡರಷ್ಟು ಬಹುಮತದಿಂದ ಅಂಗೀಕರಿಸುವುದು ಕಡ್ಡಾಯ. ಆದರೆ ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್&zwnj;ಡಿಎ ಕೂಟಕ್ಕೆ ಅಷ್ಟು ಬಲ ಇಲ್ಲ. ಮತ್ತೊಂದೆಡೆ ವಿಪಕ್ಷಗಳು ಈ ವಿಧೇಯಕವನ್ನು ವಿರೋಧಿಸುವುದಾಗಿ ಘೋಷಿಸಿವೆ. ಹೀಗಾಗಿ ವಿಧೇಯಕ ಅಂಗೀಕಾರ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯಾವ ತಂತ್ರ ರೂಪಿಸಲಿದೆ ಎಂಬ ಕುತೂಹಲ ಮೂಡಿದೆ.&lt;/p&gt;&lt;p&gt;ಒಂದು ವೇಳೆ ಈಗಾಗಲೇ ಘೋಷಿಸಿರುವಂತೆ ವಿಪಕ್ಷಗಳು, ಮಹಿಳಾ ಮೀಸಲು ವಿಧೇಯಕ ವಿರೋಧಿಸಿದರೆ ಅದನ್ನು ಮುಂಬರುವ ತಮಿಳುನಾಡು, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಮತ್ತು ಮುಂಬರುವ ದಿನಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಮುಖ ವಿಷಯವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ವಿಪಕ್ಷಗಳ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಮಂಡನೆ&lt;/strong&gt;:&lt;/h2&gt;&lt;p&gt;ಮಹಿಳಾ ಮೀಸಲು ಮತ್ತು ಕ್ಷೇತ್ರ ಮರುವಿಂಗಡಣೆ ವಿಧೇಯಕ ಸೇರಿ 3 ಮಸೂದೆಗಳನ್ನು ಗುರುವಾರ ಲೋಕಸಭೆಯಲ್ಲಿ ಮಂಡಿಸಿದ್ದು, ಅದರ ಬಗ್ಗೆ ಆಡಳಿತ ಮತ್ತು ವಿಪಕ್ಷಗಳು ಸುದೀರ್ಘ ಚರ್ಚೆ ನಡೆಸಿವೆ.&lt;/p&gt;&lt;p&gt;ವಿಧೇಯಕ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್&zwnj; ಶಾ ಸೇರಿ ಬಿಜೆಪಿಯ ನಾಯಕರು ಮಹಿಳಾ ಮೀಸಲು ಜಾರಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಮಹಿಳಾ ಮೀಸಲು ಜಾರಿಯಿಂದ ಪುರುಷರಿಗಾಗಲೀ ಅಥವಾ ದಕ್ಷಿಣದ ಸೇರಿದಂತೆ ಯಾವುದೇ ರಾಜ್ಯಗಳಿಗಾಗಲೀ ಅನ್ಯಾಯವಾಗದು. ಶೇ.50ರಷ್ಟು ಸೀಟು ಹೆಚ್ಚಳದ ಕಾರಣ ಎಲ್ಲಾ ರಾಜ್ಯಗಳು ಏರಿಕೆಯ ಲಾಭ ಪಡೆದುಕೊಳ್ಳಲಿವೆ. ಲೋಕಸಭಾ ಸ್ಥಾನವನ್ನು 543ರಿಂದ 816ಕ್ಕೆ ಏರಿಸುವ ಕಾರಣ ಮಹಿಳೆಯರಿಗೆ 272 ಸೀಟು ಲಭ್ಯವಾಗಲಿವೆ ಎಂದು ಭರವಸೆ ನೀಡಿದ್ಧಾರೆ. ಆದರೆ ಮತ್ತೊಂದೆಡೆ, ಈ ಮಸೂದೆ ಅಂಗೀಕಾರವಾದರೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಕಥೆಯೇ ಮುಗಿದು ಹೋಗಲಿವೆ ಎಂದು ಕಳವಳ ವ್ಯಕ್ತಪಡಿಸಿವೆ.&lt;/p&gt;&lt;h3&gt;ಅಗ್ನಿಪರೀಕ್ಷೆ:&lt;/h3&gt;&lt;p&gt;ಲೋಕಸಭೆಯಲ್ಲಿ ವಿಧೇಯಕಕ್ಕೆ ಅಂಗೀಕಾರ ಪಡೆದುಕೊಳ್ಳಲು 360 ಮತಗಳ ಅಗತ್ಯವಿದೆ. ಆದರೆ ಎನ್&zwnj;ಡಿಎ ಬಲ ಇರುವುದು 293 ಮಾತ್ರ. ವಿಪಕ್ಷಗಳ ಬಲ 233 ಇದೆ. ಉಳಿದಂತೆ 7 ಪಕ್ಷೇತರರು, 7 ಜನ ವೈಎಸ್&zwnj;ಆರ್&zwnj;ಪಿ, ಎಂಐಎಂ, ಶಿರೋಮಣಿ ಅಕಾಲಿದಳ ಸದಸ್ಯರಿದ್ದಾರೆ. ಆದರೆ ಇವರು ಇನ್ನೂ ಬಹಿರಂಗವಾಗಿ ತಮ್ಮ ನಿರ್ಧಾರ ಪ್ರಕಟಿಸಿಲ್ಲ.&lt;/p&gt;&lt;p&gt;ಹೀಗಾಗಿ ವಿಧೇಯಕ ಅಂಗೀಕಾರಕ್ಕೆ 360 ಮತಗಳನ್ನು ಪಡೆಯಲು, ಒಂದೋ ಅತಿದೊಡ್ಡ ವಿಪಕ್ಷವಾಗಿರುವ ಕಾಂಗ್ರೆಸ್&zwnj; (98) ಬೆಂಬಲಿಸಬೇಕು. ಇಲ್ಲದೇ ಹೋದಲ್ಲಿ ಎಸ್&zwnj;ಪಿ (37), ಟಿಎಂಸಿ (28), ಡಿಎಂಕೆ (22) ಪೈಕಿ ಯಾವುದಾದರೂ ಎರಡು ಪಕ್ಷಗಳು ಬೆಂಬಲಿಸಬೇಕು. ಒಂದು ವೇಳೆ ಬೆಂಬಲಿಸದಿದ್ದರೂ, ಮತದಾನದ ವೇಳೆ ಗೈರಾದರು ಸದನದ ಬಲ ಕುಸಿದು ಸರ್ಕಾರ ಸುಲಭವಾಗಿ ಅಂಗೀಕಾರ ಪಡೆದುಕೊಳ್ಳಬಹುದು.&lt;/p&gt;&lt;p&gt;ಒಂದು ವೇಳೆ ವಿಧೇಯಕ ಲೋಕಸಭೆಯಲ್ಲಿ ಅಂಗೀಕಾರವಾದರೆ ಮಾತ್ರವೇ ಅದನ್ನು ರಾಜ್ಯಸಭೆಯಲ್ಲೂ ಪರಿಗಣಿಸಲಾಗುವುದು.&lt;/p&gt;&lt;p&gt;ಮಹಿಳಾ ಮೀಸಲು, ಕ್ಷೇತ್ರ ಮರುವಿಂಗಡನೆ ಬಿಲ್&zwnj; ಕುರಿತು ಇಂದು ಮತ&lt;/p&gt;&lt;p&gt;ಮಧ್ಯಾಹ್ನ 4 ಗಂಟೆಗೆ ಲೋಕಸಭೆಯಲ್ಲಿ ಮತದಾನ, ಭಾರೀ ಕುತೂಹಲ&lt;/p&gt;&lt;p&gt;ಲೋಕಸಭೆಯಲ್ಲಿ 2/3 ಬಹುಮತ ಇಲ್ಲದ ಸರ್ಕಾರ ಏನು ಮಾಡುತ್ತೆ?&lt;/p&gt;]]></content:encoded>
            <category>India</category>
            <dc:creator>Sujatha NR</dc:creator>
            <atom:link href="https://www.kannadaprabha.in/politics-news/agnipariksha-for-the-government-of-india-today/articleshow-22pgqmf"/>
        </item>
        <item>
            <title><![CDATA[ಈಗ ಮಹಿಳಾ ಮೀಸಲು ಸೋಲು ಚುನಾವಣಾ ಅಸ್ತ್ರ]]></title>
            <link>https://www.kannadaprabha.in/india-news/constitution-amendment-bill-part-of-delimitation-package-defeated/articleshow-3nka5v1</link>
            <guid isPermaLink="true">https://www.kannadaprabha.in/india-news/constitution-amendment-bill-part-of-delimitation-package-defeated/articleshow-3nka5v1</guid>
            <pubDate>Sat, 18 Apr 2026 03:00:00 +0530</pubDate>
            <description><![CDATA[&lt;p&gt;ಮಹಿಳಾ ಮೀಸಲು ಮಸೂದೆಯ ಸೋಲನ್ನು ಬಿಜೆಪಿ ಹಾಗೂ ಪ್ರತಿಪಕ್ಷಗಳು ಮುಂಬರುವ 2 ವಿಧಾನಸಭೆ ಚುನಾವಣೆಗಳಲ್ಲಿ ಹಾಗೂ ಮುಂದಿನ ದಿನಗಳಲ್ಲಿ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಎನ್&zwnj;ಡಿಎ-ಪ್ರತಿಪಕ್ಷಗಳ ವಾಕ್ಸಮರ ನಿಶ್ಚಿತನ&lt;/p&gt;]]></description>
            <media:content url="https://static-assets.asianetnews.com/kp/json/17042026/pictures/17041_PTI04_17_2026_000562B_233.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವದೆಹಲಿ: &lt;/strong&gt;ಮಹಿಳಾ ಮೀಸಲು ಮಸೂದೆಯ ಸೋಲನ್ನು ಬಿಜೆಪಿ ಹಾಗೂ ಪ್ರತಿಪಕ್ಷಗಳು ಮುಂಬರುವ 2 ವಿಧಾನಸಭೆ ಚುನಾವಣೆಗಳಲ್ಲಿ ಹಾಗೂ ಮುಂದಿನ ದಿನಗಳಲ್ಲಿ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ.&lt;/p&gt;&lt;h2&gt;ಬೆಂಬಲ ಇಲ್ಲದ ಕಾರಣ ಬಿಜೆಪಿಗೆ ಮಸೂದೆ ಜಾರಿಯ ಬಗ್ಗೆ ಅನುಮಾನ&lt;/h2&gt;&lt;p&gt;&lsquo;ಸಂಸತ್ತಿನಲ್ಲಿ 3ನೇ 2ರಷ್ಟುಬೆಂಬಲ ಇಲ್ಲದ ಕಾರಣ ಬಿಜೆಪಿಗೆ ಈ ಮಸೂದೆ ಜಾರಿಯ ಬಗ್ಗೆ ಅನುಮಾನ ಇತ್ತು. ಆದರೂ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಈ ಮಸೂದೆಯನ್ನು ಮುಂದುವರಿಸಿತು. ಈ ಸೋಲನ್ನು ರಾಜಕೀಯ ಲಾಭಕ್ಕೆ ಬಿಜೆಪಿ ಬಳಸಿಕೊಳ್ಳುವ ಸಾಧ್ಯತೆಯಿದೆ&rsquo; ಎಂಬ ರಾಜಕೀಯ ವಿಶ್ಲೇಷಣೆ​ಗಳು ಕೇಳಿಬರುತ್ತಿವೆ. &amp;nbsp;&lt;/p&gt;&lt;h3&gt;ಅವೈಜ್ಞಾನಿಕವಾಗಿ ಕ್ಷೇತ್ರ ಮರುವಿಂಗಡಣೆ&lt;/h3&gt;&lt;p&gt;ಇನ್ನು ಪ್ರತಿಪಕ್ಷಗಳು ಕೂಡ, &lsquo;ಮಹಿಳಾ ಮೀಸಲು ನೆಪದಲ್ಲಿ ಅವೈಜ್ಞಾನಿಕವಾಗಿ ಕ್ಷೇತ್ರ ಮರುವಿಂಗಡಣೆ ಮಾಡಲು ಕೇಂದ್ರ ಹೊರಟಿತ್ತು. ಅದನ್ನು ನಾವು ತಡೆದಿದ್ದೇವೆ&rsquo; ಎಂದು ಮತದಾರರ ಮುಂದೆ ಪ್ರಮುಖವಾಗಿ ಬಿಂಬಿಸಲು ಯತ್ನಿಸಬಹುದು ಎಂದೂ ಮೂಲಗಳು ಹೇಳಿವೆ.ಇದೇ ಏ.23ಕ್ಕೆ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯ​ಲಿದೆ.&amp;nbsp;&lt;/p&gt;&lt;p&gt;ಇದೇ ವೇಳೆ ಸರ್ಕಾರದ ಮಹತ್ವದ ನಿರ್ಣ​ಯಕ್ಕೆ ಸೋಲಾಗಿರುವುದರಿಂದ ಈ ವಿಷಯ ಪ್ರಮುಖ ಪಾತ್ರ ವಹಿಸಿದೆ. ಡಿಎಂಕೆ, ಟಿಎಂಸಿ ಹಾಗೂ ಕಾಂಗ್ರೆಸ್&zwnj;ಗಳು ಬಿಜೆಪಿ ವಿರುದ್ಧ ಮುಗಿಬಿದ್ದು, ತಮಗೆ ಜಯ ಸಂದಿದೆ ಎಂದು ಹೇಳಲಿವೆ. ಇನ್ನು ಬಿಜೆಪಿ, &lsquo;ವಿಪಕ್ಷಗಳು ಮಹಿಳಾ ವಿರೋಧಿ&rsquo; ಎಂದು ಪ್ರಚಾರ ಮಾಡುವುದು ಪಕ್ಕಾ ಎನ್ನಲಾಗಿದೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/constitution-amendment-bill-part-of-delimitation-package-defeated/articleshow-3nka5v1"/>
        </item>
        <item>
            <title><![CDATA[‘ಜನನಾಯಗನ್’ ಲೀಕ್‌ : ಸ್ಟುಡಿಯೋದಿಂದ ರೀಲ್‌ ಕದ್ದಿದ್ದ ಆರೋಪಿ ಬಂಧನ]]></title>
            <link>https://www.kannadaprabha.in/india-news/jananayagan-leak-suspect-arrested-for-stealing-reel-from-studio/articleshow-3sswesz</link>
            <guid isPermaLink="true">https://www.kannadaprabha.in/india-news/jananayagan-leak-suspect-arrested-for-stealing-reel-from-studio/articleshow-3sswesz</guid>
            <pubDate>Fri, 17 Apr 2026 01:45:00 +0530</pubDate>
            <description><![CDATA[ವಿಜಯ್&zwnj; ಅಭಿನಯದ ಬಹುನಿರೀಕ್ಷಿತ ಚಿತ್ರ &lsquo;ಜನನಾಯಗನ್&rsquo; ಆನ್&zwnj;ಲೈನ್&zwnj;ನಲ್ಲಿ ಲೀಕ್ ಆಗಿರುವ ಪ್ರಕರಣದಲ್ಲಿ, ತಮಿಳುನಾಡು ಪೊಲೀಸರು ಬುಧವಾರ ಮೂವರು ಮುಖ್ಯ ಆರೋಪಿಗಳನ್ನು ಬಂಧಿಸಿದ್ದಾರೆ. ಈಗ ಬಂಧಿತರ ಸಂಖ್ಯೆ 9ಕ್ಕೇರಿದೆ.]]></description>
            <media:content url="https://static-assets.asianetnews.com/kp/json/16042026/pictures/VIJAY_725.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚೆನ್ನೈ:&lt;/strong&gt; ವಿಜಯ್&zwnj; ಅಭಿನಯದ ಬಹುನಿರೀಕ್ಷಿತ ಚಿತ್ರ &lsquo;ಜನನಾಯಗನ್&rsquo; ಆನ್&zwnj;ಲೈನ್&zwnj;ನಲ್ಲಿ ಲೀಕ್ ಆಗಿರುವ ಪ್ರಕರಣದಲ್ಲಿ, ತಮಿಳುನಾಡು ಪೊಲೀಸರು ಬುಧವಾರ ಮೂವರು ಮುಖ್ಯ ಆರೋಪಿಗಳನ್ನು ಬಂಧಿಸಿದ್ದಾರೆ. ಈಗ ಬಂಧಿತರ ಸಂಖ್ಯೆ 9ಕ್ಕೇರಿದೆ.&lt;/p&gt;&lt;p&gt;ಪ್ರಮುಖ ಆರೋಪಿ ಫ್ರೀಲ್ಯಾನ್ಸ್ ಅಸಿಸ್ಟಂಟ್ ಎಡಿಟರ್ ಆಗಿದ್ದು, ಇನ್ನೊಂದು ಚಿತ್ರದ ಕೆಲಸ ಮಾಡುತ್ತಿದ್ದ. ಆದರೂ ಜನನಾಯಗನ್&zwnj; ಚಿತ್ರದ ಎಡಿಟಿಂಗ್ ಸ್ಟುಡಿಯೋಗೆ ಅನಧಿಕೃತ ಪ್ರವೇಶ ಪಡೆದು ಚಿತ್ರದ ಮೂಲ ರೀಲ್&zwnj;ಗಳನ್ನು ಕದ್ದಿದ್ದ. ನಂತರ ಆ ರೀಲ್&zwnj;ಗಳನ್ನು ಪೂರ್ಣ ಚಿತ್ರವಾಗಿ ರೂಪಿಸಿ, ಇತರ ಆರೋಪಿಗಳೊಂದಿಗೆ ಹಂಚಿಕೊಂಡಿದ್ದ. ಬಳಿಕ ಇದು ವೈರಲ್&zwnj; ಆಯಿತು ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಕರ್ನಾಟಕದ ರೀತಿ 3 ಗ್ಯಾರಂಟಿ&amp;nbsp;&lt;/strong&gt;&lt;/h2&gt;&lt;p&gt;&lt;strong&gt;ಚೆನ್ನೈ:&lt;/strong&gt; ಏ.23ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಟಿವಿಕೆ ಮುಖ್ಯಸ್ಥ ವಿಜಯ್&zwnj; ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಕರ್ನಾಟಕದ &lsquo;ಗೃಹಲಕ್ಷ್ಮೀ&rsquo; ಯೋಜನೆ ಹೋಲುವಂಥ 60 ವರ್ಷದ ಒಳಗಿನ ಮಹಿಳೆಯರ ಖಾತೆಗೆ ಮಾಸಿಕ 2,500 ರು. ಸಹಾಯಧನ, &lsquo;ಯುವನಿಧಿ&rsquo; ಮಾದರಿ ನಿರುದ್ಯೋಗಿ ಪದವೀಧರರಿಗೆ ಮಾಸಿಕ 4,000 ರು.ವರೆಗೆ ಸಹಾಯಧನ, &lsquo;ಗೃಹಜ್ಯೋತಿ&rsquo; ರೀತಿ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿದ್ದಾರೆ.&lt;/p&gt;&lt;h3&gt;ವಧುವಿಗೆ 8 ಗ್ರಾಂ ಚಿನ್ನ&lt;/h3&gt;&lt;p&gt;ಜೊತೆಗೆ, ವಧುವಿಗೆ 8 ಗ್ರಾಂ ಚಿನ್ನ, ರೇಷ್ಮೆ ಸೀರೆ, ವೃದ್ಧರು ಮತ್ತು ಅಂಗವಿಕಲರಿಗೆ ಮಾಸಿಕ 3,000 ರು. ಪಿಂಚಣಿ, 100 ವಸತಿ ಶಾಲೆಗಳ ನಿರ್ಮಾಣ, 20 ಲಕ್ಷ ರು.ವರೆಗೆ ಉನ್ನತ ಶಿಕ್ಷಣಕ್ಕೆ ಸಾಲ, ಮಹಿಳಾ ಸ್ವಸಹಾಯ ಸಂಘಗಳಿಗೆ 5 ಲಕ್ಷ ರು.ವರೆಗೆ ಬಡ್ಡಿರಹಿತ ಸಾಲ, ಶಾಲೆ ಬಿಡುವುದನ್ನು ತಡೆಯಲು ತಾಯಂದಿರಿಗೆ ವಾರ್ಷಿಕವಾಗಿ 15,000 ರು., 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಸಂಪೂರ್ಣ ಸಹಕಾರಿ ಬೆಳೆ ಸಾಲ ಮನ್ನಾ ಮತ್ತು ಭತ್ತಕ್ಕೆ ಕ್ವಿಂಟಲ್&zwnj;ಗೆ 3,500 ರು. ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿದ್ದಾರೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/jananayagan-leak-suspect-arrested-for-stealing-reel-from-studio/articleshow-3sswesz"/>
        </item>
        <item>
            <title><![CDATA[ತ.ನಾಡು ಪಟಾಕಿ ಕಾರ್ಖಾನೆ  ಸ್ಫೋಟಕ್ಕೆ 23 ಕಾರ್ಮಿಕರು ಬಲಿ]]></title>
            <link>https://www.kannadaprabha.in/india-news/23-workers-killed-in-firecracker-factory-explosion-in-tamil-nadu/articleshow-4rpgf0s</link>
            <guid isPermaLink="true">https://www.kannadaprabha.in/india-news/23-workers-killed-in-firecracker-factory-explosion-in-tamil-nadu/articleshow-4rpgf0s</guid>
            <pubDate>Mon, 20 Apr 2026 06:02:54 +0530</pubDate>
            <description><![CDATA[&lt;p&gt;ತಮಿಳುನಾಡಿನ ವಿರುಧುನಗರ ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಭಾನುವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ 23 ಕಾರ್ಮಿಕರು ಸಾವನ್ನಪ್ಪಿದ್ದಾರೆ. ದುರಂತದಲ್ಲಿ 6 ಮಂದಿ ಗಾಯಗೊಂಡಿದ್ದು, ಈ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ.&lt;/p&gt;]]></description>
            <media:content url="https://static-gi.asianetnews.com/images/01kpk6fxky696c033m9sj9t25q/pattasu-accident-1776613324414.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ವಿರುಧನಗರ : &amp;nbsp;&lt;/strong&gt;ತಮಿಳುನಾಡಿನ ವಿರುಧುನಗರ ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಭಾನುವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ 23 ಕಾರ್ಮಿಕರು ಸಾವನ್ನಪ್ಪಿದ್ದಾರೆ. ದುರಂತದಲ್ಲಿ 6 ಮಂದಿ ಗಾಯಗೊಂಡಿದ್ದು, ಈ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ. ಜೊತೆಗೆ ಘಟನೆ ನಡೆದ ಕಟ್ಟಡದ ಅವಶೇಷಗಳಗಡಿ ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಏರಿಕೆಯ ಭೀತಿ ಇದೆ.&lt;/p&gt;&lt;h2&gt;ಕಟ್ಟನಾರಪಟ್ಟಿಯಲ್ಲಿರುವ ವನಜಾ ಪಟಾಕಿ ಕಾರ್ಖಾನೆ&lt;/h2&gt;&lt;p&gt;ಕಟ್ಟನಾರಪಟ್ಟಿಯಲ್ಲಿರುವ ವನಜಾ ಪಟಾಕಿ ಕಾರ್ಖಾನೆಯಲ್ಲಿ 100ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಆದರೆ ಪಟಾಕಿ ತಯಾರಿಕೆಯ ಸಮಯದಲ್ಲಿ ಸುರಕ್ಷತಾ ಮಾನದಂಡಗಳನ್ನು ನಿರ್ಲಕ್ಷಿಸುವುದರಿಂದ ಅಪಘಾತ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.&lt;/p&gt;&lt;p&gt;ಸ್ಫೋಟದ ಸುದ್ದಿ ತಿಳಿಯುತ್ತಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರಾದರೂ, ಮುಖ್ಯ ಸ್ಫೋಟದ ಹಲವು ಗಂಟೆಗಳ ಬಳಿಕವೂ ಸ್ಥಳದಲ್ಲಿ ಪಟಾಕಿ ಸಿಡಿಯುತ್ತಲೇ ಇದ್ದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಸ್ಫೋಟದ ತೀವ್ರತೆಗೆ ಸ್ಥಳದಲ್ಲೇ 23 ಜನರು ಸುಟ್ಟುಕರಕಲಾಗಿದ್ದು, ಹಲವರ ಗುರುತು ಪತ್ತೆ ಹಿಡಿಯುವುದು ಕಷ್ಟವಾಗಿದೆ. ಕಳೆದ ತಿಂಗಳು ಜಿಲ್ಲೆಯಲ್ಲಿ ಇಂತಹದ್ದೇ ಘಟನೆ ನಡೆದು ನಾಲ್ವರು ಸಾವನ್ನಪ್ಪಿದ್ದರು.&lt;/p&gt;&lt;h3&gt;ಆಗಿದ್ದೇನು?&lt;/h3&gt;&lt;p&gt;- ಭಾನುವಾರ ವಿರುಧುನಗರ ವಜನಾ ಪಟಾಕಿ ಕಾರ್ಖಾನೆಯಲ್ಲಿ 100 ಕಾರ್ಮಿಕರ ಕೆಲಸ&lt;/p&gt;&lt;p&gt;- ಈ ವೇಳೆ ಏಕಾಏಕಿ ಭಾರಿ ಸ್ಫೋಟ, ಪಟಾಕಿ ಕಾರ್ಖಾನೆಯ ಕಟ್ಟಡ ದಿಢೀರ್&zwnj; ಕುಸಿತ&lt;/p&gt;&lt;p&gt;- ಅವಶೇಷಗಳ ಅಡಿ ಇನ್ನಷ್ಟು ಜನ ಸಿಲುಕಿರುವ ಶಂಕೆ. ಶೋಧ ಕಾರ್ಯ ಮುಂದುವರಿಕೆ&lt;/p&gt;&lt;p&gt;- ಸ್ಫೋಟ ಘಟನೆಗೆ ನಿಖರ ಕಾರಣ ಇನ್ನೂ ನಿಗೂಢ. ಸುರಕ್ಷತಾ ಲೋಪವಾಗಿರುವ ಶಂಕೆ&lt;/p&gt;]]></content:encoded>
            <category>India</category>
            <dc:creator>Sujatha NR</dc:creator>
            <atom:link href="https://www.kannadaprabha.in/india-news/23-workers-killed-in-firecracker-factory-explosion-in-tamil-nadu/articleshow-4rpgf0s"/>
        </item>
        <item>
            <title><![CDATA[ಇಸ್ರೇಲ್‌-ಲೆಬನಾನ್‌ ಕದನಕ್ಕೆ 10 ದಿನ ವಿರಾಮ : ಟ್ರಂಪ್‌]]></title>
            <link>https://www.kannadaprabha.in/india-news/trump-says-israel-lebanon-agreed-to-10-day-ceasefire/articleshow-5ywlqsy</link>
            <guid isPermaLink="true">https://www.kannadaprabha.in/india-news/trump-says-israel-lebanon-agreed-to-10-day-ceasefire/articleshow-5ywlqsy</guid>
            <pubDate>Fri, 17 Apr 2026 01:45:00 +0530</pubDate>
            <description><![CDATA[ಇರಾನ್&zwnj;-ಅಮೆರಿಕ ಕದನವಿರಾಮದ ಬೆನ್ನಲ್ಲೇ ಇದೀಗ ಇಸ್ರೇಲ್&zwnj; ಮತ್ತು ಲೆಬನಾನ್&zwnj; ನಡುವೆಯೂ 10 ದಿನಗಳ ಕದನವಿರಾಮ ಏರ್ಪಟ್ಟಿದ್ದು, ಇದು ಶುಕ್ರವಾರ (ಭಾರತೀಯ ಕಾಲಮಾನ )ಬೆಳಗಿನಜಾವ 2:30ರಿಂದ ಜಾರಿಗೆ ಬರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್&zwnj; ಟ್ರಂಪ್&zwnj; ಘೋಷಿಸಿದ್ದಾರೆ.]]></description>
            <media:content url="https://static-assets.asianetnews.com/kp/json/16042026/pictures/PETE_277.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೈರೋ&lt;/strong&gt;: ಇರಾನ್&zwnj;-ಅಮೆರಿಕ ಕದನವಿರಾಮದ ಬೆನ್ನಲ್ಲೇ ಇದೀಗ ಇಸ್ರೇಲ್&zwnj; ಮತ್ತು ಲೆಬನಾನ್&zwnj; ನಡುವೆಯೂ 10 ದಿನಗಳ ಕದನವಿರಾಮ ಏರ್ಪಟ್ಟಿದ್ದು, ಇದು ಶುಕ್ರವಾರ (ಭಾರತೀಯ ಕಾಲಮಾನ )ಬೆಳಗಿನಜಾವ 2:30ರಿಂದ ಜಾರಿಗೆ ಬರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್&zwnj; ಟ್ರಂಪ್&zwnj; ಘೋಷಿಸಿದ್ದಾರೆ. ಲೆಬನಾನ್&zwnj; ಮತ್ತು ಇಸ್ರೇಲ್&zwnj;ನ ನಾಯಕರು ವಾಷಿಂಗ್ಟನ್&zwnj;ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಅತ್ತ ಲೆಬನಾನ್&zwnj; ಅಧ್ಯಕ್ಷ ಜೋಸೆಫ್ ಔನ್ ಮತ್ತು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಜತೆ ತಾವು ಉತ್ತಮ ಮಾತುಕತೆ ನಡೆಸಿದ್ದಾಗಿ ಟ್ರಂಪ್&zwnj; ಟ್ರುತ್&zwnj; ಸೋಷಿಯಲ್&zwnj;ನಲ್ಲಿ ಪೋಸ್ಟ್&zwnj; ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ಹೋರ್ಮುಜ್&zwnj;ಗೆ 10000 ಯೋಧರು, 16 ನೌಕೆಗಳ ದಿಗ್ಬಂಧನ: ಅಮೆರಿಕ&lt;/strong&gt;&lt;/h2&gt;&lt;p&gt;&lt;strong&gt;ವಾಷಿಂಗ್ಟನ್&zwnj;&lt;/strong&gt;: ಸದ್ಯ ಹೋರ್ಮುಜ್&zwnj; ಜಲಸಂಧಿಯನ್ನು ನಿರ್ಬಂಧಿಸಿರುವ ಅಮೆರಿಕ ಸೇನೆಯು, ಇದಕ್ಕಾಗಿ ದೇಶದ ನೌಕಾಪಡೆಯ ಶೇ.10ರಷ್ಟು ಶಕ್ತಿಯನ್ನು ಬಳಸಿದೆ ಎಂದು ರಕ್ಷಣಾ ಸಚಿವ ಪೀಟ್&zwnj; ಹೆಗ್ಸೆತ್&zwnj; ಹೇಳಿದ್ದಾರೆ.ನಿಯೋಜನೆಯಾಗಿರುವ ಶಕ್ತಿಯ ಬಗ್ಗೆ ಮಾಹಿತಿ ನೀಡಿರುವ ಹೆಗ್ಸೆತ್&zwnj;, &lsquo;ಅಮೆರಿಕದ 10 ಸಾವಿರಕ್ಕೂ ಹೆಚ್ಚು ಯೋಧರು ಆ ಜಲಸಂಧಿಯನ್ನು ಕಾಯುತ್ತಿದ್ದಾರೆ. 11 ವಿಧ್ವಂಸಕ ನೌಕೆ, 3 ದಾಳಿ ಹಡಗು ಮತ್ತು ಒಂದು ಯುದ್ಧವಿಮಾನ ವಾಹಕ ನೌಕೆ ಹಾಗೂ ಒಂದು ಯುದ್ಧನೌಕೆಯನ್ನು ನಿಯೋಜನೆ ಮಾಡಲಾಗಿದೆ&rsquo; ಎಂದರು. ಈ ಬಲಪ್ರದರ್ಶನದ ಬೆನ್ನಲ್ಲೇ, &lsquo;ಅಂತಿಮವಾಗಿ ಇರಾನಿಗಳು ಒಪ್ಪಂದ ಮಾಡಿಕೊಳ್ಳಲು ಬರಲೇಬೇಕು&rsquo; ಎಂದು ಹೆಗ್ಸೆತ್&zwnj; ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ಟ್ರಂಪ್&zwnj; ಸಂದೇಶ ಹೊತ್ತು ಜ। ಮುನೀರ್&zwnj; ಇರಾನ್&zwnj;ಗೆ&lt;/strong&gt;&lt;/h3&gt;&lt;p&gt;&lt;strong&gt;ಟೆಹ್ರಾನ್&zwnj;&lt;/strong&gt;: ತಮ್ಮ ನೆಲದಲ್ಲಿ ಅಮೆರಿಕ ಮತ್ತು ಇರಾನ್&zwnj; ನಡುವೆ ನಡೆದ ಸಂಧಾನ ಮಾತುಕತೆ ಫಲಪ್ರದವಾಗದ ಬೆನ್ನಲ್ಲೇ ಮರಳಿ ಯತ್ನವ ಮಾಡುವ ಸಲುವಾಗಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಜ। ಅಸೀಂ ಮುನೀರ್&zwnj; ಇರಾನ್&zwnj;ಗೆ ತೆರಳಿದ್ದು, ಗುರುವಾರ ಅಲ್ಲಿನ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ. ಇವರೊಂದಿಗೆ ಆಂತರಿಕ ಸಚಿವ ಮೊಹ್ಸೀನ್&zwnj; ನಖ್ವಿ ಕೂಡ ಹೋಗಿದ್ದಾರೆ. ಅಮೆರಿಕ ಮತ್ತು ಇರಾನ್&zwnj; ನಡುವೆ ಇನ್ನೊಂದು ಸುತ್ತಿನ ಮಾತುಕತೆಯು ಇಸ್ಲಾಮಾಬಾದ್&zwnj;ನಲ್ಲಿ ನಡೆಸಲು ನಿರ್ಧರಿಸಲಾಗಿರುವ ಹೊತ್ತಿನಲ್ಲಿ ಅದರ ಪೂರ್ವತಯಾರಿಯಾಗಿ ಟ್ರಂಪ್&zwnj;ರ ಸಂದೇಶವನ್ನು ಹೊತ್ತು ಮುನೀರ್&zwnj; ಈ ಪ್ರಯಾಣ ಬೆಳೆಸಿದ್ದಾರೆ. ಈ ಭೇಟಿಯ ಬಳಿಕ ಮುನೀರ್&zwnj;, ಇರಾನ್&zwnj; ಸಂದೇಶ ಹೊತ್ತು ಅಮೆರಿಕಕ್ಕೆ ತೆರಳುವ ಸಾಧ್ಯತೆ ಇದೆ. ಇತ್ತ ಪಾಕ್&zwnj; ಪ್ರಧಾನಿ ಶೆಹಬಾಜ್&zwnj; ಷರೀಫ್&zwnj; ಅವರು ವಿದೇಶಾಂಗ ಸಚಿವ ಇಶಾಕ್&zwnj; ದರ್&zwnj; ಜತೆ ಸೌದಿ ಅರೇಬಿಯಾಗೆ ತೆರಳಿದ್ದು, ಯುವರಾಜ ಭೇಟಿಯಾಗಿ, ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ತಾವು ಪಡುತ್ತಿರುವ ಶ್ರಮವನ್ನು ಬಣ್ಣಿಸಿದ್ದಾರೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/trump-says-israel-lebanon-agreed-to-10-day-ceasefire/articleshow-5ywlqsy"/>
        </item>
        <item>
            <title><![CDATA[2023ರ ಮಹಿಳಾ ಮೀಸಲು ಕಾಯ್ದೆಗೆ ಅಧಿಸೂಚನೆ]]></title>
            <link>https://www.kannadaprabha.in/india-news/women-reservation-act-2023-comes-into-force-ahead-of-voting-to-its-amendment-in-ls/articleshow-6acl2wm</link>
            <guid isPermaLink="true">https://www.kannadaprabha.in/india-news/women-reservation-act-2023-comes-into-force-ahead-of-voting-to-its-amendment-in-ls/articleshow-6acl2wm</guid>
            <pubDate>Sat, 18 Apr 2026 06:03:59 +0530</pubDate>
            <description><![CDATA[ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33 ಮೀಸಲಾತಿ ನೀಡುವ 2023ರ ನಾರಿ ಶಕ್ತಿ ವಂದನ ಅಧಿನಿಯಮಕ್ಕೆ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಕೇಂದ್ರ ಸರ್ಕಾರ ತರಾತುರಿಯಲ್ಲಿ ಅಧಿಸೂಚನೆ ಹೊರಡಿಸಿದೆ.]]></description>
            <media:content url="https://static-assets.asianetnews.com/kp/json/17042026/pictures/NARI_926.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ನವದೆಹಲಿ: &lt;/strong&gt;ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33 ಮೀಸಲಾತಿ ನೀಡುವ 2023ರ ನಾರಿ ಶಕ್ತಿ ವಂದನ ಅಧಿನಿಯಮಕ್ಕೆ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಕೇಂದ್ರ ಸರ್ಕಾರ ತರಾತುರಿಯಲ್ಲಿ ಅಧಿಸೂಚನೆ ಹೊರಡಿಸಿದೆ.&lt;/p&gt;&lt;p&gt;ಈ ಪ್ರಕಾರ, ಲೋಕಸಭಾ ಸ್ಥಾನಗಳು 850ಕ್ಕೆ ಏರಿಕೆ ಆದ ನಂತರವಷ್ಟೇ ಮೀಸಲು ಜಾರಿಗೆ ಬರಬೇಕು ಎಂಬ ನಿಯಮವಿದೆ. ಅಂದರೆ ಕ್ಷೇತ್ರ ಮರುವಿಂಗಡಣೆ ಆಗದ ಹೊರತು ಇದು ಜಾರಿಗೆ ಬಾರದು.&lt;/p&gt;&lt;h2&gt;ಮೊದಲು ಕಾನೂನಾಗಿ ಜಾರಿಗೆ ಬಂದಿರುವುದು ಅಗತ್ಯ&lt;/h2&gt;&lt;p&gt;ಅದಕ್ಕೆ ತಿದ್ದುಪಡಿ ತರಬೇಕಾದರೆ, ಮೊದಲು ಕಾನೂನಾಗಿ ಜಾರಿಗೆ ಬಂದಿರುವುದು ಅಗತ್ಯ. ಹಾಗಾಗಿ ಕಾಯಿದೆಗೆ ತಿದ್ದುಪಡಿ ತರುವ ಮಸೂದೆಗಳನ್ನು ಸಂಸತ್ತಿನಲ್ಲಿ ಚರ್ಚಿಸುತ್ತಿರುವಾಗಲೇ, ಏ.16ರಿಂದ ಜಾರಿಗೆ ಬರುವಂತೆ ಕಾನೂನು ಸಚಿವಾಲಯ ಅಧಿಸೂಚನೆ ಹೊರಡಿಸಿದೆ.&lt;/p&gt;&lt;p&gt;&lsquo;2023ರಲ್ಲಿ ಸಂಸತ್ತು ಅಂಗೀಕರಿಸಿದ ಮಹಿಳಾ ಮೀಸಲು ಮಸೂದೆ ಕಾನೂನಾಗಿ ಅಂಗೀಕೃತವಾಗಿದ್ದರೂ, ಅದನ್ನು ಸಂವಿಧಾನದ ಭಾಗವಾಗಿ ಮಾಡಲು ಇದುವರೆಗೆ ಅಧಿಸೂಚನೆ ಹೊರಡಿಸಿರಲಿಲ್ಲ. ಆದರೆ ಯಾವುದೇ ಕಾಯಿದೆಯನ್ನು ಅಧಿಸೂಚನೆ ಹೊರಡಿಸಿ ಜಾರಿಗೆ ತರದಿದ್ದರೆ ಅದಕ್ಕೆ ತಿದ್ದುಪಡಿ ತರುವುದು ಸಾಧ್ಯವಿಲ್ಲ. ಹೀಗಾಗಿ ಈಗ ಅಧಿಸೂಚನೆ ಹೊರಡಿಸಲಾಗಿದೆ&rsquo; ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.&lt;/p&gt;&lt;p&gt;2023ರ ಕಾಯ್ದೆಯ ಅನ್ವಯ ಮುಂದಿನ ಜನಗಣತಿ ನಂತರ ಕ್ಷೇತ್ರ ಮರುವಿಂಗಡಣೆ ನಡೆದ ನಂತರವೇ ಮಹಿಳಾ ಮೀಸಲಾತಿ ಜಾರಿಗೆ ಬರಬೇಕಿತ್ತು. ಅಂದರೆ 2034ರವರೆಗೂ ಕಾಯಬೇಕಿತ್ತು. ಆದರೆ ಇದೀಗ ಸರ್ಕಾರ ಈ ಕಾನೂನಿಗೆ ತಿದ್ದುಪಡಿ ತಂದು ಹಿಂದಿನ ಜನಗಣತಿ ಅನ್ವಯ, 2029ರಿಂದಲೇ ಜಾರಿಗೆ ತರಲು 3 ಹೊಸ ಮಸೂದೆಗಳನ್ನು ಲೋಕಸಭೆಯಲ್ಲಿ ಚರ್ಚಿಸುತ್ತಿದೆ. ಇದು ಸಾಧ್ಯವಾಗಬೇಕಾದರೆ ಹಿಂದಿನ ಕಾಯ್ದೆ ಜಾರಿಯಾಗಬೇಕಿತ್ತು. ಆದ್ದರಿಂದ ಅದನ್ನೀಗ ತುರ್ತಾಗಿ ಜಾರಿಗೆ ತಂದಿದೆ.&lt;/p&gt;&lt;h3&gt;&lt;strong&gt;ವಿಪಕ್ಷಗಳ ಪ್ರಶ್ನೆ: &amp;nbsp;&lt;/strong&gt;&lt;/h3&gt;&lt;p&gt;ಲೋಕಸಭೆಯಲ್ಲಿ ವಿಪಕ್ಷಗಳಾದ ಕಾಂಗ್ರೆಸ್&zwnj;ನ ಕೆ.ಸಿ. ವೇಣುಗೋಪಾಲ್ ಮತ್ತು ಡಿಎಂಕೆಯ ಕನಿಮೊಳಿ ಸರ್ಕಾರದ ಈ ನಡೆಯನ್ನು ಪ್ರಶ್ನಿಸಿದ್ದಾರೆ.&lt;/p&gt;&lt;p&gt;&lsquo;ಪ್ರಧಾನ ಕಾಯಿದೆಯನ್ನು ಜಾರಿಗೆ ತರದೆ ಅದಕ್ಕೆ ತಿದ್ದುಪಡಿ ಮಸೂದೆ ತರುವುದು ಹೇಗೆ ಸಾಧ್ಯ?&rsquo; ಎಂದು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರಿಂದ ಸ್ಪಷ್ಟೀಕರಣ ಕೇಳಿದ್ದಾರೆ.&lt;/p&gt;&lt;p&gt;ಆದರೆ ಅಧಿಕಾರಿಯೊಬ್ಬರು ಈ ಬಗ್ಗೆ ಸ್ಪಷ್ಟನೆ ನೀಡಿ, &lsquo;ಅಧಿಸೂಚನೆ ಜಾರಿಯಾಗದೇ ಹಾಲಿ ಕಾಯ್ದೆಯನ್ನು ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅಧಿಸೂಚನೆ ಹೊರಡಿಸಲಾಗಿದೆ&rsquo; ಎಂದಿದ್ದಾರೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/women-reservation-act-2023-comes-into-force-ahead-of-voting-to-its-amendment-in-ls/articleshow-6acl2wm"/>
        </item>
        <item>
            <title><![CDATA[ಡಯಟ್‌ ಸೋಡಾ ಕ್ಯಾನ್ಸರ್‌ ಔಷಧಿ ಇದ್ದಂತೆ : ಟ್ರಂಪ್‌]]></title>
            <link>https://www.kannadaprabha.in/india-news/diet-soda-is-like-a-cancer-cure-trump/articleshow-7mhoow1</link>
            <guid isPermaLink="true">https://www.kannadaprabha.in/india-news/diet-soda-is-like-a-cancer-cure-trump/articleshow-7mhoow1</guid>
            <pubDate>Fri, 17 Apr 2026 01:45:00 +0530</pubDate>
            <description><![CDATA[&lt;p&gt;ಕೋಕ್&zwnj; ಪ್ರಿಯ ಅಮೆರಿಕ ಅಧ್ಯಕ್ಷ ಡೊನಾಲ್ಡ್&zwnj; ಟ್ರಂಪ್&zwnj;, &lsquo;ಡಯಟ್&zwnj; ಸೋಡಾ ಕುಡಿಯುವುದರಿಂದ ದೇಹದೊಳಗಿರುವ ಕ್ಯಾನ್ಸರ್&zwnj; ಕೋಶ &amp;nbsp;ಸಾಯುತ್ತವೆ&rsquo; ಎಂದು ಹೇಳಿದ್ದಾರೆ. &amp;nbsp; ಟ್ರಂಪ್&zwnj;ರ ಈ ಸಲಹೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ&lt;/p&gt;]]></description>
            <media:content url="https://static-assets.asianetnews.com/kp/json/16042026/pictures/TRUMP_COKE_363.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಾಷಿಂಗ್ಟನ್&zwnj;&lt;/strong&gt;: ಕೋಕ್&zwnj; ಪ್ರಿಯ ಅಮೆರಿಕ ಅಧ್ಯಕ್ಷ ಡೊನಾಲ್ಡ್&zwnj; ಟ್ರಂಪ್&zwnj;, &lsquo;ಡಯಟ್&zwnj; ಸೋಡಾ ಕುಡಿಯುವುದರಿಂದ ದೇಹದೊಳಗಿರುವ ಕ್ಯಾನ್ಸರ್&zwnj; ಕೋಶಗಳು ಸಾಯುತ್ತವೆ&rsquo; ಎಂದು ಹೇಳಿದ್ದಾರೆ. ಅಮೆರಿಕದ ಮೆಡಿಕೇರ್ ಕೇಂದ್ರಗಳ ಮುಖ್ಯಸ್ಥ ಡಾ. ಮೆಹ್ಮೆಟ್ ಓಜ್ ಅವರು ಟ್ರಂಪ್&zwnj; ಪುತ್ರನ ಪಾಡ್&zwnj;ಕಾಸ್ಟ್&zwnj;ನಲ್ಲಿ ಮಾತನಾಡುತ್ತಾ, &lsquo;ಹುಲ್ಲಿನ ಮೇಲೆ ಕೋಕ್&zwnj; ಹಾಕಿದರೆ ಹುಲ್ಲು ಸಾಯುತ್ತದೆ. ಅದನ್ನು ಕುಡಿದರೆ ದೇಹದಲ್ಲಿರುವ ಕ್ಯಾನ್ಸರ್&zwnj; ಕೋಶಗಳೂ ಸಾಯುತ್ತವೆ ಎಂದು ಟ್ರಂಪ್&zwnj; ಹೇಳುತ್ತಿದ್ದರು. ಕಿತ್ತಳೆ ಹಣ್ಣನ್ನು ಕಿವುಚಿ ಮಾಡುವ ಆರೆಂಜ್&zwnj; ಸೋಡಾ ಕೂಡ ಆರೋಗ್ಯಕರ ಎನ್ನುತ್ತಿದ್ದರು&rsquo; ಎಂದು ಮೆಲುಕು ಹಾಕಿದ್ದಾರೆ.&lt;/p&gt;&lt;h2&gt;ಸಲಹೆಗೆ ಭಾರೀ ಆಕ್ರೋಶ&lt;/h2&gt;&lt;p&gt;ಟ್ರಂಪ್&zwnj;ರ ಈ ಸಲಹೆಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, &lsquo;ಕೋಲಾದಿಂದ ಶೌಚಾಲಯ ಸ್ವಚ್ಛವಾಗುತ್ತದೆ. ಹಾಗೆಂದು ದೇಹಶುದ್ಧಿಗೆ ನಾನದನ್ನು ಶಿಫಾರಸು ಮಾಡುವುದಿಲ್ಲ&rsquo; ಎಂದು ವ್ಯಕ್ತಿಯೊಬ್ಬರು ತಿರುಗೇಟು ನೀಡಿದ್ದಾರೆ.&lt;/p&gt;&lt;h3&gt;12 ಕ್ಯಾನ್&zwnj; ಡಯಟ್&zwnj; ಕೋಕ್&zwnj; ಕುಡಿಯುವ ಟ್ರಂಪ್&zwnj;&lt;/h3&gt;&lt;p&gt;ದಿನವೊಂದಕ್ಕೆ 12 ಕ್ಯಾನ್&zwnj; ಡಯಟ್&zwnj; ಕೋಕ್&zwnj; ಕುಡಿಯುವ ಟ್ರಂಪ್&zwnj;, ಅದನ್ನು ತರಿಸಿಕೊಳ್ಳಲೆಂದೇ ಕಚೇರಿಯಲ್ಲಿ ಪ್ರತ್ಯೇಕ ಕರೆಗಂಟೆ ಇಟ್ಟುಕೊಂಡಿದ್ದಾರೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/diet-soda-is-like-a-cancer-cure-trump/articleshow-7mhoow1"/>
        </item>
        <item>
            <title><![CDATA[ದಿಲ್ಲಿ ಏರ್ಪೋರ್ಟ್‌ನಲ್ಲಿ 2 ವಿಮಾನಗಳ ಡಿಕ್ಕಿ : ತಪ್ಪಿದ  ಅನಾಹುತ]]></title>
            <link>https://www.kannadaprabha.in/india-news/akasa-air-spicejet-planes-come-in-contact-at-delhi-airport-suffer-damages/articleshow-8zdvsg8</link>
            <guid isPermaLink="true">https://www.kannadaprabha.in/india-news/akasa-air-spicejet-planes-come-in-contact-at-delhi-airport-suffer-damages/articleshow-8zdvsg8</guid>
            <pubDate>Fri, 17 Apr 2026 01:45:00 +0530</pubDate>
            <description><![CDATA[ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಕಾಸಾ ಏರ್ ಮತ್ತು ಸ್ಪೈಸ್&zwnj; ಜೆಟ್&zwnj; ವಿಮಾನಗಳು ಪರಸ್ಪರ ಡಿಕ್ಕಿ ಆಗಿವೆ. ಅದೃಷ್ಟವಶಾತ್&zwnj; ಪ್ರಯಾಣಿಕರು ಸೇಫ್&zwnj; ಆಗಿದ್ದು ಭಾರೀ ಅನಾಹುತವೊಂದು ತಪ್ಪಿದೆ.]]></description>
            <media:content url="https://static-assets.asianetnews.com/kp/json/16042026/pictures/FLIGHT_NEW_964.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ&lt;/strong&gt;: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಕಾಸಾ ಏರ್ ಮತ್ತು ಸ್ಪೈಸ್&zwnj; ಜೆಟ್&zwnj; ವಿಮಾನಗಳು ಪರಸ್ಪರ ಡಿಕ್ಕಿ ಆಗಿವೆ. ಅದೃಷ್ಟವಶಾತ್&zwnj; ಪ್ರಯಾಣಿಕರು ಸೇಫ್&zwnj; ಆಗಿದ್ದು ಭಾರೀ ಅನಾಹುತವೊಂದು ತಪ್ಪಿದೆ.&amp;nbsp;&lt;/p&gt;&lt;h2&gt;ಆಕಾಸಾ ಏರ್&zwnj;ಲೈನ್ಸ್&zwnj; ವಿಮಾನ&lt;/h2&gt;&lt;p&gt;ಆಕಾಸಾ ಏರ್&zwnj;ಲೈನ್ಸ್&zwnj; ವಿಮಾನವು ದೆಹಲಿಯಿಂದ ಹೈದರಾಬಾದ್&zwnj;ಗೆ ತೆರಳಲು ಸಿದ್ಧವಾಗಿತ್ತು. ಇತ್ತ ಸ್ಪೈಸ್&zwnj; ಜೆಟ್ ಲೇಹ್&zwnj;ನಿಂದ ದೆಹಲಿಯ ರನ್&zwnj;ವೇಗೆ ಬಂದಿಳಿದಿತ್ತು.&lt;/p&gt;&lt;h3&gt;ರೆಕ್ಕೆ ಪರಸ್ಪರ ಡಿಕ್ಕಿ&lt;/h3&gt;&lt;p&gt;ಈ ವೇಳೆ ಎರಡೂ ವಿಮಾನಗಳ ರೆಕ್ಕೆ ಪರಸ್ಪರ ಡಿಕ್ಕಿ ಆಗಿದೆ. ಇದರಿಂದ ಸ್ಪೈಸ್&zwnj;ಜೆಟ್ ರೆಕ್ಕೆಗೆ ಹಾನಿಯಾಗಿದ್ದರೆ ಅಕಾಸಾ ಏರ್ ವಿಮಾನದ ಎಡಭಾಗದ ರೆಕ್ಕೆ ಜಖಂಗೊಂಡಿದೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/akasa-air-spicejet-planes-come-in-contact-at-delhi-airport-suffer-damages/articleshow-8zdvsg8"/>
        </item>
        <item>
            <title><![CDATA[ರಾಹುಲ್‌ ದ್ವಿಪೌರತ್ವ : ಎಫ್ಐಆರ್‌ಗೆ ಆದೇಶ]]></title>
            <link>https://www.kannadaprabha.in/india-news/allahabad-high-court-orders-case-against-rahul-gandhi-in-dual-citizenship-case/articleshow-b7373rq</link>
            <guid isPermaLink="true">https://www.kannadaprabha.in/india-news/allahabad-high-court-orders-case-against-rahul-gandhi-in-dual-citizenship-case/articleshow-b7373rq</guid>
            <pubDate>Sat, 18 Apr 2026 03:00:00 +0530</pubDate>
            <description><![CDATA[&lt;p&gt;&amp;nbsp;ರಾಹುಲ್&zwnj; ಗಾಂಧಿ ದ್ವಿಪೌರತ್ವ ಹೊಂದಿದ್ದಾರೆ ಎಂಬ ಆರೋಪಕ್ಕೆ ತನಿಖೆಯ ಅಗತ್ಯವಿದೆ ಎಂದಿರುವ ಅಲಹಾಬಾದ್&zwnj; ಹೈಕೋರ್ಟ್&zwnj;ನ ಲಖನೌ ಪೀಠ, ಈ ಬಗ್ಗೆ ಎಫ್&zwnj;ಐಆರ್ ದಾಖಲಿಸಬೇಕು. ಉತ್ತರ ಪ್ರದೇಶ ಸರ್ಕಾರವು ತಾನೇ ತನಿಖೆ ನಡೆಸಬೇಕು ಅಥವಾ ಪ್ರಕರಣವನ್ನು ಕೇಂದ್ರೀಯ ತನಿಖಾ ಸಂಸ್ಥೆಗೆ ರವಾನಿಸಬೇಕು ಎಂದು ಆದೇಶಿಸಿದೆ.&lt;/p&gt;]]></description>
            <media:content url="https://static-assets.asianetnews.com/kp/json/17042026/pictures/RAHUL_GANDHI_751.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಲಖನೌ : &amp;nbsp;&lt;/strong&gt;ಲೋಕಸಭೆಯ ವಿಪಕ್ಷ ನಾಯಕ ರಾಹುಲ್&zwnj; ಗಾಂಧಿಯವರು ದ್ವಿಪೌರತ್ವ ಹೊಂದಿದ್ದಾರೆ ಎಂಬ ಆರೋಪಕ್ಕೆ ತನಿಖೆಯ ಅಗತ್ಯವಿದೆ ಎಂದಿರುವ ಅಲಹಾಬಾದ್&zwnj; ಹೈಕೋರ್ಟ್&zwnj;ನ ಲಖನೌ ಪೀಠ, ಈ ಬಗ್ಗೆ ಎಫ್&zwnj;ಐಆರ್ ದಾಖಲಿಸಬೇಕು. ಉತ್ತರ ಪ್ರದೇಶ ಸರ್ಕಾರವು ತಾನೇ ತನಿಖೆ ನಡೆಸಬೇಕು ಅಥವಾ ಪ್ರಕರಣವನ್ನು ಕೇಂದ್ರೀಯ ತನಿಖಾ ಸಂಸ್ಥೆಗೆ ರವಾನಿಸಬೇಕು ಎಂದು ಶುಕ್ರವಾರ ಆದೇಶಿಸಿದೆ.&lt;/p&gt;&lt;h2&gt;ಎಫ್&zwnj;ಐಆರ್ ದಾಖಲಿಸುವಂತೆ ಸಲ್ಲಿಸಿದ್ದ ಅರ್ಜಿ&lt;/h2&gt;&lt;p&gt;ಗಾಂಧಿ ವಿರುದ್ಧ ಎಫ್&zwnj;ಐಆರ್ ದಾಖಲಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ವಿಶೇಷ ಸಂಸದ/ಶಾಸಕ ವಿಶೇಷ ನ್ಯಾಯಾಲಯದ 2026ರ ಜ.28ರ ಆದೇಶ ಪ್ರಶ್ನಿಸಿ ಕರ್ನಾಟಕದ ಬಿಜೆಪಿ ಕಾರ್ಯಕರ್ತ ವಿಘ್ನೇಶ್ ಶಿಶಿರ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ। ಸುಭಾಷ್ ವಿದ್ಯಾರ್ಥಿ ಅವರ ಪೀಠವು ಈ ಆದೇಶ ನೀಡಿದೆ.ಆರಂಭದಲ್ಲಿ ರಾಯ್ ಬರೇಲಿಯ ವಿಶೇಷ ಸಂಸದ/ಶಾಸಕ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು. ಆದರೆ, ಅರ್ಜಿದಾರರ ಕೋರಿಕೆಯ ಮೇರೆಗೆ, ಹೈಕೋರ್ಟು 2025ರ ಡಿ.17 ರಂದು ಪ್ರಕರಣವನ್ನು ಲಖನೌಗೆ ವರ್ಗಾಯಿಸಿತ್ತು. ನಂತರ ಲಖನೌ ಸಂಸದ/ಶಾಸಕ ನ್ಯಾಯಾಲಯವು 2026ರ ಜ.28ರಂದು ಅರ್ಜಿಯನ್ನು ವಜಾಗೊಳಿಸಿತ್ತು. ಪೌರತ್ವಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ತೀರ್ಪು ನೀಡಲು ವಿಶೇಷ ನ್ಯಾಯಾಲಯವು ಸಮರ್ಥವಾಗಿಲ್ಲ ಎಂದು ಈ ಹಿಂದೆ ತೀರ್ಪು ನೀಡಿತ್ತು.&lt;/p&gt;&lt;h3&gt;ಅರ್ಜಿದಾರರು ಹೈಕೋರ್ಟ್&zwnj;ಗೆ ಮೊರೆ ಹೋಗಿದ್ದರು&lt;/h3&gt;&lt;p&gt;ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್&zwnj;ಗೆ ಮೊರೆ ಹೋಗಿದ್ದರು. ಅದು ಈಗ ಎಫ್&zwnj;ಐಆರ್ ದಾಖಲಿಸಲು ಆದೇಶಿಸಿದೆ.&lt;/p&gt;&lt;p&gt;ಏನಿದು ಪ್ರಕರಣ?:&lsquo;ರಾಹುಲ್&zwnj; ಭಾರತ ಮತ್ತು ಬ್ರಿಟನ್&zwnj;, ಎರಡೂ ದೇಶಗಳ ಪೌರತ್ವ ಹೊಂದಿದ್ದಾರೆ. ನನ್ನ ಬಳಿ ದಾಖಲೆ ಮತ್ತು ಬ್ರಿಟಿಷ್ ಸರ್ಕಾರದ ಇಮೇಲ್&zwnj;ಗಳಿದ್ದು, ಅವು ರಾಹುಲ್ ಬ್ರಿಟಿಷ್ ಪೌರತ್ವ ಹೊಂದಿದ್ದಾರೆ ಎಂದು ಸಾಬೀತುಪಡಿಸುತ್ತವೆ. ಇದರಿಂದಾಗಿ ಅವರು ಭಾರತದಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಥವಾ ಲೋಕಸಭಾ ಸದಸ್ಯರಾಗುವ ಅರ್ಹತೆ ಕಳೆದುಕೊಂಡಿದ್ದಾರೆ&rsquo; ಎಂದು ಶಿಶಿರ್&zwnj; ಆರೋಪಿಸಿದ್ದರು.&lt;/p&gt;&lt;p&gt;ಹೀಗಾಗಿ ರಾಹುಲ್&zwnj; ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್&zwnj;ಎಸ್), ಅಧಿಕೃತ ರಹಸ್ಯ ಕಾಯ್ದೆ, ವಿದೇಶಿಗರ ಕಾಯ್ದೆ ಮತ್ತು ಪಾಸ್&zwnj;ಪೋರ್ಟ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಆರೋಪ ಹೊರಿಸಿ, ಎಫ್&zwnj;ಐಆರ್ ದಾಖಲಿಸಿ ವಿವರವಾದ ತನಿಖೆ ನಡೆಸುವಂತೆ ಕೋರಿದ್ದರು.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/allahabad-high-court-orders-case-against-rahul-gandhi-in-dual-citizenship-case/articleshow-b7373rq"/>
        </item>
        <item>
            <title><![CDATA[ಹಿಮಾಚಲ ನೌಕರರ ವೇತನಕ್ಕೂ ದುಡ್ಡಿಲ್ಲ!]]></title>
            <link>https://www.kannadaprabha.in/india-news/himachal-govt-defers-30-per-cent-salary-of-top-officials-for-six-months/articleshow-edth5i4</link>
            <guid isPermaLink="true">https://www.kannadaprabha.in/india-news/himachal-govt-defers-30-per-cent-salary-of-top-officials-for-six-months/articleshow-edth5i4</guid>
            <pubDate>Mon, 20 Apr 2026 04:45:18 +0530</pubDate>
            <description><![CDATA[ಸದ್ಯ ನಡೆಯುತ್ತಿರುವ ಪಂಚರಾಜ್ಯ ಚುನಾವಣೆಯಲ್ಲಿ ಬಹುತೇಕ ಪಕ್ಷಗಳು ಭರ್ಜರಿ ಉಚಿತ ಕೊಡುಗೆ ಘೋಷಿಸುತ್ತಿರುವ ನಡುವೆಯೇ, ಹಲವು ಗ್ಯಾರಂಟಿ ಘೋಷಿಸಿ ಆರ್ಥಿಕ ಸಂಕಷ್ಟದಲ್ಲಿರುವ ಹಿಮಾಚಲ ಪ್ರದೇಶದ ಕಾಂಗ್ರೆಸ್&zwnj; ಸರ್ಕಾರ, ಇದೀಗ ಸರ್ಕಾರಿ ನೌಕರರ ವೇತನ ಪಾವತಿಗೂ ಸಂಕಷ್ಟ ಪಡುವ ಸ್ಥಿತಿಗೆ ತಲುಪಿದೆ.]]></description>
            <media:content url="https://static-assets.asianetnews.com/kp/json/19042026/pictures/HIMA_CM_646.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಶಿಮ್ಲಾ : &amp;nbsp;&lt;/strong&gt;ಸದ್ಯ ನಡೆಯುತ್ತಿರುವ ಪಂಚರಾಜ್ಯ ಚುನಾವಣೆಯಲ್ಲಿ ಬಹುತೇಕ ಪಕ್ಷಗಳು ಭರ್ಜರಿ ಉಚಿತ ಕೊಡುಗೆ ಘೋಷಿಸುತ್ತಿರುವ ನಡುವೆಯೇ, ಹಲವು ಗ್ಯಾರಂಟಿ ಘೋಷಿಸಿ ಆರ್ಥಿಕ ಸಂಕಷ್ಟದಲ್ಲಿರುವ ಹಿಮಾಚಲ ಪ್ರದೇಶದ ಕಾಂಗ್ರೆಸ್&zwnj; ಸರ್ಕಾರ, ಇದೀಗ ಸರ್ಕಾರಿ ನೌಕರರ ವೇತನ ಪಾವತಿಗೂ ಸಂಕಷ್ಟ ಪಡುವ ಸ್ಥಿತಿಗೆ ತಲುಪಿದೆ.&lt;/p&gt;&lt;p&gt;ಹಣಕಾಸು ವೆಚ್ಚ ನಿರ್ವಹಿಸುವ ಸಲುವಾಗಿ ಹಿರಿಯ ಸರ್ಕಾರಿ ಅಧಿಕಾರಿಗಳ ವೇತನದ ಶೇ.30ರಷ್ಟನ್ನು 6 ತಿಂಗಳ ಕಾಲ ಮುಂದೂಡಲು ನಿರ್ಧರಿಸಿದೆ. ಇನ್ನೂ ಕೆಲವು ವರ್ಗದ ನೌಕರರ ಶೇ.20ರಷ್ಟು ವೇತನ ಮುಂದೂಡಿಕೆ ಆಗಿದೆ.&lt;/p&gt;&lt;h2&gt;ಯಾರಿಗೆ ಶಾಕ್&zwnj;?:&lt;/h2&gt;&lt;p&gt;ಮುಂದಿನ 6 ತಿಂಗಳ ಕಾಲ ಮುಖ್ಯಮಂತ್ರಿ, ಸಚಿವರು, ಶಾಸಕರ ವೇತನದಲ್ಲಿ ಶೇ.50ರಿಂದ ಶೇ.20ರವರೆಗೆ ಕಡಿತ ಘೋಷಣೆ ಬೆನ್ನಲ್ಲೇ, ಇದೀಗ ಹಿರಿಯ ಸರ್ಕಾರಿ ನೌಕರರ ವೇತನ ಪಾವತಿ ಮುಂದೂಡಿಕೆ ನಿರ್ಧಾರ ಹೊರಬಿದ್ದಿದೆ. ರಾಜ್ಯ ಸರ್ಕಾರ ಭಾರೀ ಆರ್ಥಿಕ ಸಂಕಷ್ಟದಲ್ಲಿರುವ ಕಾರಣ, ಕೇಂದ್ರ ಸರ್ಕಾರದ ಕೆಲ ಅನುದಾನಗಳಿಗೆ ಕತ್ತರಿ ಬಿದ್ದಿದೆ. ಹೀಗಾಗಿ ಪರಿಸ್ಥಿತಿ ನಿರ್ವಹಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸುಖವಿಂದರ್&zwnj; ಸಿಂಗ್&zwnj; ಸುಖು ಪ್ರಕಟಿಸಿದ್ದಾರೆ.&lt;/p&gt;&lt;h3&gt;ಯಾರಿಗೆ ಎಷ್ಟು ವೇತನ ವಿಳಂಬ?:&lt;/h3&gt;&lt;p&gt;ಹಣಕಾಸು ಇಲಾಖೆ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಈ ವೇತನ ಮುಂದೂಡಿಕೆ ಮೇ 2026ರಿಂದ ಜಾರಿಗೆ ಬರುತ್ತದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕ, ಹೆಚ್ಚುವರಿ ಮಹಾನಿರ್ದೇಶಕ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ವೇತನದ ಶೇ.30 ಭಾಗ ವಿಳಂಬವಾಗಿ ಪಾವತಿ ಮಾಡಲಾಗುವುದು.&lt;/p&gt;&lt;p&gt;ಕಾರ್ಯದರ್ಶಿಗಳು, ಇಲಾಖೆ ಮುಖ್ಯಸ್ಥರು, ಪೊಲೀಸ್ ಇನ್&zwnj;ಸ್ಪೆಕ್ಟರ್ ಜನರಲ್, ಡೆಪ್ಯೂಟಿ ಇನ್&zwnj;ಸ್ಪೆಕ್ಟರ್ ಜನರಲ್, ಸೂಪರಿಂಟೆಂಡೆಂಟ್ ಆಫ್ ಪೊಲೀಸ್, ಜಿಲ್ಲಾ ಮಟ್ಟದವರೆಗಿನ ಪೊಲೀಸ್ ಅಧಿಕಾರಿಗಳು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಜಿಲ್ಲಾ ಮಟ್ಟದ ಅರಣ್ಯ ಅಧಿಕಾರಿಗಳ ಸಂಬಳದ ಶೇ.20 ಭಾಗ ಮುಂದೂಡಿಕೆಯಾಗಲಿದೆ.&lt;/p&gt;&lt;p&gt;ಗ್ಯಾರಂಟಿ ತಂದ ಸಂಕಷ್ಟ: ಹಿಮಾಚಲ ಪ್ರದೇಶದ 2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್&zwnj; 10 ಗ್ಯಾರಂಟಿ ಘೋಷಿಸಿತ್ತು. ಮುಖ್ಯಮಂತ್ರಿ ಸುಖ್&zwnj;ವಿಂದರ್ ಸಿಂಗ್ ಸುಖು ಸರ್ಕಾರ ಇವುಗಳಲ್ಲಿ ಕೆಲವನ್ನು ಜಾರಿಗೊಳಿಸಿದೆ. ಪ್ರಮುಖವಾಗಿ ಮಹಿಳೆಯರಿಗೆ 1,500 ರು. ಮಾಸಿಕ ನೆರವು, ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ಜಾರಿಗೊಳಿಸಿದೆ. ಇದರಿಂದ 2017ರಲ್ಲಿ ಅಧಿಕಾರಕ್ಕೆ ಬರುವ ವೇಳೆ ಇದ್ದ ಅಂದಾಜು 50000 ಕೋಟಿ ರು. ಸಾಲದ ಹೊರೆ ಇದೀಗ 1 ಲಕ್ಷ ಕೋಟಿ ರು. ಮೀರಿದೆ. &amp;nbsp;&lt;/p&gt;&lt;p&gt;ಈ ಸಂಕಷ್ಟದ ಹಿನ್ನೆಲೆಯಲ್ಲಿ ಹಿಂದಿನ ವರ್ಷ 58,514 ಕೋಟಿ ರು. ಇದ್ದ ಬಜೆಟ್&zwnj; ಅನ್ನು 2026-27ರಲ್ಲಿ 54,928 ಕೋಟಿ ರು.ಗೆ ಇಳಿಸಲಾಗಿದೆ. ಅದರ ಮುಂದುವರೆದ ಭಾಗವಾಗಿ ಇದೀಗ ವೇತನ ಕಡಿತ, ಪಾವತಿ ಮುಂದೂಡಿಕೆ ನಿರ್ಧಾರ ಪ್ರಕಟಿಸಲಾಗಿದೆ. ಈ ಕ್ರಮವು ತಾತ್ಕಾಲಿಕವಾಗಿದ್ದು, ರಾಜ್ಯದ ಹಣಕಾಸು ಸ್ಥಿತಿ ಸುಧಾರಿದ ನಂತರ ಮುಂದೂಡಲಾದ ವೇತನವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.&lt;/p&gt;&lt;p&gt;&lt;strong&gt;ರಾಜ್ಯದ ಗಂಭೀರ ಆರ್ಥಿಕ ದುಸ್ಥಿತಿ&lt;/strong&gt;&lt;/p&gt;&lt;p&gt;- ಹಿಮಾಚಲ ಸರ್ಕಾರದ ಮಾಸಿಕ ಆದಾಯ 100 ರು. ಎಂದಿಟ್ಟುಕೊಳ್ಳೋಣ&lt;/p&gt;&lt;p&gt;- ಅದರಲ್ಲಿ ₹27 ವೇತನ, ₹21 ಪಿಂಚಣಿ, ₹13 ಸಾಲದ ಬಡ್ಡಿಗೆ ಪಾವತಿ&lt;/p&gt;&lt;p&gt;- ₹9 ಸಾಲ ಮರುಪಾವತಿಗೆ ಮತ್ತು ₹10 ಸ್ವಾಯತ್ತ ಸಂಸ್ಥೆಗಳಿಗೆ ಹಂಚಿಕೆ&lt;/p&gt;&lt;p&gt;- ಕೊನೆಗೆ ಅಭಿವೃದ್ಧಿ ಕೆಲಸಗಳಿಗೆ ಉಳಿಯುವುದು ಕೇವಲ ₹20 ಮಾತ್ರ&lt;/p&gt;&lt;p&gt;- 10 ಗ್ಯಾರಂಟಿ ಘೋಷಿಸಿದ್ದರಿಂದಲೇ ಈ ಮುಗ್ಗಟ್ಟು ಎಂಬ ಸಂದೇಹ&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/himachal-govt-defers-30-per-cent-salary-of-top-officials-for-six-months/articleshow-edth5i4"/>
        </item>
        <item>
            <title><![CDATA[ಹೋರ್ಮುಜ್‌ ಸಂಪೂರ್ಣ ಮುಕ್ತ : ಇರಾನ್‌ ಘೋಷಣೆ]]></title>
            <link>https://www.kannadaprabha.in/india-news/iran-says-passage-for-all-commercial-vessels-through-strait-of-hormuz-is-completely-open-for-remaining-period-of-ceasefire/articleshow-f7gy4k1</link>
            <guid isPermaLink="true">https://www.kannadaprabha.in/india-news/iran-says-passage-for-all-commercial-vessels-through-strait-of-hormuz-is-completely-open-for-remaining-period-of-ceasefire/articleshow-f7gy4k1</guid>
            <pubDate>Sat, 18 Apr 2026 03:45:00 +0530</pubDate>
            <description><![CDATA[ಫೆ.28ರಂದು ಅಮೆರಿಕ-ಇರಾನ್&zwnj; ಯುದ್ಧ ಆರಂಭವಾದಾಗಿನಿಂದಲೂ ಬಂದ್&zwnj; ಆಗಿದ್ದ ಹೋರ್ಮುಜ್&zwnj; ಜಲಸಂಧಿಯನ್ನು ಎಲ್ಲಾ ವಾಣಿಜ್ಯ ನೌಕೆಗಳಿಗೆ ಸಂಪೂರ್ಣವಾಗಿ ಮುಕ್ತಗೊಳಿಸುತ್ತಿರುವುದಾಗಿ ಇರಾನ್&zwnj; ಶುಕ್ರವಾರ ಘೋಷಿಸಿದೆ. ಇದು ಇಸ್ರೇಲ್&zwnj;-ಲೆಬನಾನ್&zwnj; ನಡುವಿನ 10 ದಿನಗಳ ಕದನ ವಿರಾಮ ಅಂತ್ಯವಾಗುವವರೆಗೆ ಅನ್ವಯವಾಗಲಿದೆ.]]></description>
            <media:content url="https://static-assets.asianetnews.com/kp/json/17042026/pictures/DONALD_TRUMP_152.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಟೆಹ್ರಾನ್:&lt;/strong&gt; ಫೆ.28ರಂದು ಅಮೆರಿಕ-ಇರಾನ್&zwnj; ಯುದ್ಧ ಆರಂಭವಾದಾಗಿನಿಂದಲೂ ಬಂದ್&zwnj; ಆಗಿದ್ದ ಹೋರ್ಮುಜ್&zwnj; ಜಲಸಂಧಿಯನ್ನು ಎಲ್ಲಾ ವಾಣಿಜ್ಯ ನೌಕೆಗಳಿಗೆ ಸಂಪೂರ್ಣವಾಗಿ ಮುಕ್ತಗೊಳಿಸುತ್ತಿರುವುದಾಗಿ ಇರಾನ್&zwnj; ಶುಕ್ರವಾರ ಘೋಷಿಸಿದೆ. ಇದು ಇಸ್ರೇಲ್&zwnj;-ಲೆಬನಾನ್&zwnj; ನಡುವಿನ 10 ದಿನಗಳ ಕದನ ವಿರಾಮ ಅಂತ್ಯವಾಗುವವರೆಗೆ ಅನ್ವಯವಾಗಲಿದೆ.&lt;/p&gt;&lt;h2&gt;ಎಕ್ಸ್&zwnj;ನಲ್ಲಿ ಪೋಸ್ಟ್&zwnj; ಮಾಡಿರುವ ಇರಾನ್&zwnj;&lt;/h2&gt;&lt;p&gt;ಈ ಬಗ್ಗೆ ಎಕ್ಸ್&zwnj;ನಲ್ಲಿ ಪೋಸ್ಟ್&zwnj; ಮಾಡಿರುವ ಇರಾನ್&zwnj; ವಿದೇಶಾಂಗ ಸಚಿವ ಅಬ್ಬಾಸ್&zwnj; ಅರಾಗ್ಚಿ, &lsquo;ಹೋರ್ಮುಜ್ ಜಲಸಂಧಿಯ ಮೂಲಕ ಎಲ್ಲಾ ವಾಣಿಜ್ಯ ಹಡಗುಗಳ ಮಾರ್ಗವನ್ನು ಲೆಬನಾನ್&zwnj; ಕದನ ವಿರಾಮದ ಉಳಿದ ಅವಧಿಯವರೆಗೆ ಸಂಪೂರ್ಣವಾಗಿ ಮುಕ್ತವೆಂದು ಘೋಷಿಸಲಾಗಿದೆ&rsquo; ಎಂದಿದ್ದಾರೆ.&lt;/p&gt;&lt;p&gt;ಇರಾನ್&zwnj; ನಿರ್ಣಯವನ್ನು ಅಮೆರಿಕ ಅಧ್ಯಕ್ಷ ಟ್ರಂಪ್&zwnj; ಸ್ವಾಗತಿಸಿದ್ದು, &lsquo;ಥ್ಯಾಂಕ್&zwnj; ಯೂ&rsquo; ಎಂದಿದ್ದಾರೆ.&lt;/p&gt;&lt;h3&gt;ಹೋರ್ಮುಜ್&zwnj; ತೆರವು ಮಾಡಲು ಇರಾನ್&zwnj; ಒಪ್ಪಿದೆ&lt;/h3&gt;&lt;p&gt;ಇತ್ತೀಚೆಗೆ ಅಮೆರಿಕ ತಾತ್ಕಾಲಿಕ ಕದನವಿರಾಮ ಸಾರಿದರೂ, ಲೆಬನಾನ್&zwnj; ಮೇಲೆ ಇಸ್ರೇಲ್&zwnj; ಯುದ್ಧ ಮುಂದುವರಿಸಿದೆ. ಆ ಯುದ್ಧ ನಿಲ್ಲುವವರೆಗೆ ಹೋರ್ಮುಜ್&zwnj; ಮುಕ್ತ ಮಾಡಲ್ಲ ಎಂದು ಇರಾನ್ ಹೇಳಿತ್ತು. ಈಗ ಲೆಬನಾನ್ ಮೇಲೆ ಇಸ್ರೇಲ್&zwnj; 10 ದಿನ ಯುದ್ಧ ನಿಲ್ಲಿಸುವುದಾಗಿ ಹೇಳಿರುವ ಕಾರಣ ಹೋರ್ಮುಜ್&zwnj; ತೆರವು ಮಾಡಲು ಇರಾನ್&zwnj; ಒಪ್ಪಿದೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/iran-says-passage-for-all-commercial-vessels-through-strait-of-hormuz-is-completely-open-for-remaining-period-of-ceasefire/articleshow-f7gy4k1"/>
        </item>
        <item>
            <title><![CDATA[ನಂಗೂ ಮೋದಿಗೂ ಹೆಂಡತಿ ಸಮಸ್ಯೆ ಇಲ್ಲ : ರಾಗಾ ಚಟಾಕಿ]]></title>
            <link>https://www.kannadaprabha.in/india-news/pm-modi-and-myself-dont-have-wife-issue-rahul-gandhi/articleshow-g30tvsx</link>
            <guid isPermaLink="true">https://www.kannadaprabha.in/india-news/pm-modi-and-myself-dont-have-wife-issue-rahul-gandhi/articleshow-g30tvsx</guid>
            <pubDate>Sat, 18 Apr 2026 06:00:53 +0530</pubDate>
            <description><![CDATA[&lt;p&gt;ಸದನದಲ್ಲಿರುವ ನಾವೆಲ್ಲರೂ ಮಹಿಳೆಯರಿಂದ ಬಹಳಷ್ಟು ಪ್ರಭಾವಿತರಾಗಿದ್ದೇವೆ. ತಾಯಂದಿರು, ಸೋದರಿಯರು, ಪತ್ನಿಯರು, ಎಲ್ಲರಿಂದಲೂ ಬಹಳಷ್ಟು ಕಲಿತಿದ್ದೇವೆ. ಆದರೆ ಪ್ರಧಾನಿ ಮೋದಿ ಮತ್ತು ನನಗೆ ಪತ್ನಿ ಸಮಸ್ಯೆ ಇಲ್ಲ ಎಂದು ವಿಪಕ್ಷ ನಾಯಕ ರಾಹುಲ್&zwnj; ಗಾಂಧಿ ಶುಕ್ರವಾರ ಹಾಸ್ಯ ಚಟಾಕಿ ಹಾರಿಸಿದರು. &amp;nbsp;&lt;/p&gt;]]></description>
            <media:content url="https://static-gi.asianetnews.com/images/01kpdkadn1gy9w8zatd4xdxjjy/rahul-gandhi-sparks-uproar-in-lok-sabha-jadugar-exposed-remark-triggers-political-storm-over-womens-bill-1776425449120.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ನವದೆಹಲಿ : &amp;nbsp;&lt;/strong&gt;ಸದನದಲ್ಲಿರುವ ನಾವೆಲ್ಲರೂ ಮಹಿಳೆಯರಿಂದ ಬಹಳಷ್ಟು ಪ್ರಭಾವಿತರಾಗಿದ್ದೇವೆ. ತಾಯಂದಿರು, ಸೋದರಿಯರು, ಪತ್ನಿಯರು, ಎಲ್ಲರಿಂದಲೂ ಬಹಳಷ್ಟು ಕಲಿತಿದ್ದೇವೆ. ಆದರೆ ಪ್ರಧಾನಿ ಮೋದಿ ಮತ್ತು ನನಗೆ ಪತ್ನಿ ಸಮಸ್ಯೆ ಇಲ್ಲ ಎಂದು ವಿಪಕ್ಷ ನಾಯಕ ರಾಹುಲ್&zwnj; ಗಾಂಧಿ ಶುಕ್ರವಾರ ಹಾಸ್ಯ ಚಟಾಕಿ ಹಾರಿಸಿದರು. &amp;nbsp;&lt;/p&gt;&lt;h2&gt;ಮಹಿಳಾ ಮೀಸಲು ಮಸೂದೆ ಮೇಲಿನ ಚರ್ಚೆ&lt;/h2&gt;&lt;p&gt;ಇದರಿಂದ ಸದನದಲ್ಲಿ ನಗುವಿನ ಅಲೆ ಎದ್ದಿತು. ಮಹಿಳಾ ಮೀಸಲು ಮಸೂದೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಅವರು, &lsquo;ಈ ಸದನದಲ್ಲಿರುವ ನಾವೆಲ್ಲರೂ ನಮ್ಮ ಜೀವನದಲ್ಲಿ ಮಹಿಳೆಯರಿಂದ ಬಹಳಷ್ಟು ಪ್ರಭಾವಿತರಾಗಿದ್ದೇವೆ ಮತ್ತು ಕಲಿತಿದ್ದೇವೆ. ನಮ್ಮ ತಾಯಂದಿರು, ಸೋದರಿಯರು, ಪತ್ನಿಯರಿಂದ ಬಹಳಷ್ಟು ತಿಳಿದುಕೊಂಡಿದ್ದೇವೆ.&amp;nbsp;&lt;/p&gt;&lt;h3&gt;ತಾಯಂದಿರು ಮತ್ತು ಸೋದರಿಯರು ಇದ್ದಾರೆ&lt;/h3&gt;&lt;p&gt;&amp;nbsp;ಆದರೆ ಪ್ರಧಾನಿ ಮತ್ತು ನನಗೆ ಪತ್ನಿ ಸಮಸ್ಯೆ ಇಲ್ಲ. ಆದ್ದರಿಂದ ಆ ಇನ್&zwnj;ಪುಟ್ (ಅನುಭವ) ನಮಗೆ ಸಿಗುವುದಿಲ್ಲ. ಆದರೆ ನಮಗೆ ತಾಯಂದಿರು ಮತ್ತು ಸೋದರಿಯರು ಇದ್ದಾರೆ&rsquo; ಹಾಸ್ಯ ಮಾಡಿದರು.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/pm-modi-and-myself-dont-have-wife-issue-rahul-gandhi/articleshow-g30tvsx"/>
        </item>
        <item>
            <title><![CDATA[ಬೀದಿ ಬದಿ ಅಂಗಡಿಯಲ್ಲಿ ಮೋದಿ ಚುರುಮುರಿ ಖರೀದಿ ಭರಾಟೆ!]]></title>
            <link>https://www.kannadaprabha.in/india-news/narendra-modi-buys-churmuri-at-a-roadside-stall/articleshow-nfnhxfp</link>
            <guid isPermaLink="true">https://www.kannadaprabha.in/india-news/narendra-modi-buys-churmuri-at-a-roadside-stall/articleshow-nfnhxfp</guid>
            <pubDate>Mon, 20 Apr 2026 06:11:07 +0530</pubDate>
            <description><![CDATA[&lt;p&gt;&amp;nbsp; ಜನಸಾಮಾನ್ಯರು, ರೈತರು ಹಾಗೂ ಮಕ್ಕಳೊಂದಿಗೆ ಬೆರೆಯುವ ತಮ್ಮ ಖಯಾಲಿಯನ್ನು ಪ್ರಧಾನಿ ನರೇಂದ್ರ ಮೋದಿ ಮುಂದುವರಿಸಿದ್ದಾರೆ. ಭಾನುವಾರ ಪಶ್ಚಿಮ ಬಂಗಾಳಕ್ಕೆ ತೆರಳಿದ್ದ ಮೋದಿ ಈ ವೇಳೆ ಅನಿರೀಕ್ಷಿತವಾಗಿ, ರಸ್ತೆ ಬದಿಯಲ್ಲಿದ್ದ ಕುರುಕಲು ತಿಂಡಿಯ ಅಂಗಡಿಗೆ ತೆರಳಿ ಮಂಡಕ್ಕಿ ಖರೀದಿಸಿದರು&lt;/p&gt;]]></description>
            <media:content url="https://static-gi.asianetnews.com/images/01kpkbdr8f1pmq36jhj5k5b37j/modi-at-shop--1--1776618496268.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಝಾರ್&zwnj;ಗ್ರಾಂ (ಪ.ಬಂಗಾಳ) : &amp;nbsp;&lt;/strong&gt;ಚುನಾವಣಾ ಪ್ರಚಾರಕ್ಕೆಂದು ಹೋದಾಗ ಜನಸಾಮಾನ್ಯರು, ರೈತರು ಹಾಗೂ ಮಕ್ಕಳೊಂದಿಗೆ ಬೆರೆಯುವ ತಮ್ಮ ಖಯಾಲಿಯನ್ನು ಪ್ರಧಾನಿ ನರೇಂದ್ರ ಮೋದಿ ಮುಂದುವರಿಸಿದ್ದಾರೆ. ಭಾನುವಾರ ಪಶ್ಚಿಮ ಬಂಗಾಳಕ್ಕೆ ತೆರಳಿದ್ದ ಮೋದಿ ಈ ವೇಳೆ ಅನಿರೀಕ್ಷಿತವಾಗಿ, ರಸ್ತೆ ಬದಿಯಲ್ಲಿದ್ದ ಕುರುಕಲು ತಿಂಡಿಯ ಅಂಗಡಿಗೆ ತೆರಳಿ ಮಂಡಕ್ಕಿ ಖರೀದಿಸಿದರು ಹಾಗೂ ಅದನ್ನು ಮಕ್ಕಳಿಗೆ ಹಂಚುವ ಮೂಲಕ ಗಮನ ಸೆಳೆದರು.&lt;/p&gt;&lt;h2&gt;4 ರ್&zwj;ಯಾಲಿಗಳಲ್ಲಿ ಭಾಗವಹಿಸಿದ ಮೋದಿ&lt;/h2&gt;&lt;p&gt;ಶನಿವಾರ ಒಂದಾದ ಮೇಲೊಂದರಂತೆ 4 ರ್&zwj;ಯಾಲಿಗಳಲ್ಲಿ ಭಾಗವಹಿಸಿದ ಮೋದಿ, ಝಾರ್&zwnj;ಗ್ರಾಂ ಎಂಬಲ್ಲಿರುವ ಪುಟ್ಟ ಅಂಗಡಿಯೊಂದಕ್ಕೆ ತೆರಳಿ, ಒಳ್ಳೆ ಗುಣಮಟ್ಟದ ಝಾಲ್ಮುರಿ (ಚುರುಮುರಿ) ತಯಾರಿಸುವಂತೆ ಕೇಳಿದರು. ಅದಕ್ಕೆ ಪ್ರತಿಯಾಗಿ ಸ್ವಂತ ಜೇಬಿನಿಂದ 10 ರು.ನ ಗರಿಗರಿ ನೋಟನ್ನು ತೆಗೆದು, ಅಂಗಡಿಯಾತ ನಿರಾಕರಿಸಿದರೂ ಕೇಳದೆ ಆತನ ಕೈಗಿಟ್ಟರು.&lt;/p&gt;&lt;p&gt;ಇದೇ ವೇಳೆ ಆರೋಗ್ಯ ದೃಷ್ಟಿಯಿಂದ ಮಂಡಕ್ಕಿಗೆ ಉಪ್ಪು ಹಾಕದಂತೆ ಮನವಿ ಮಾಡಿದ ಪ್ರಧಾನಿ ಮೋದಿ, ಬಳಿಕ ಅದನ್ನು ಸುತ್ತಲಿದ್ದ ಮಕ್ಕಳಿಗೆ ಹಂಚಿದರು. ಇದರ ಫೋಟೋ ಮತ್ತು ವಿಡಿಯೋಗಳನ್ನು ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.&lt;/p&gt;&lt;p&gt;ಕೆಲ ದಿನಗಳ ಹಿಂದಷ್ಟೇ ಅಸ್ಸಾಂಗೆ ತೆರಳಿದ್ದ ವೇಳೆ ಅಲ್ಲಿನ ಚಹಾ ತೋಟವೊಂದಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಅಲ್ಲಿನ ಕೆಲಸಗಾರರೊಂದಿಗೆ ಮಾತನಾಡುತ್ತಾ ಚಹಾ ಎಲೆಗಳನ್ನು ಕಟಾವು ಮಾಡಿದ್ದರು. ಇದಕ್ಕೂ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು.&lt;/p&gt;&lt;h3&gt;ಜನಸಾಮಾನ್ಯರ ಜತೆ ಮೋದಿ ನಡೆಗಳು&amp;nbsp;&lt;/h3&gt;&lt;p&gt;ವಿವಿಧ ಕಡೆ ಚುನಾವಣಾ ಪ್ರಚಾರಕ್ಕೆ ಹೋದಾಗ ಜನರೊಂದಿಗೆ ಬೆರೆಯುವ ಮೋದಿ&lt;/p&gt;&lt;p&gt;- ಬಿಜೆಪಿಯ ಸಾಮಾನ್ಯ ಕಾರ್ಯಕರ್ತರ ಜತೆ ಅನೇಕ ಸಲ ಏರ್&zwnj;ಪೋರ್ಟಲ್ಲಿ ಮಾತುಕತೆ&lt;/p&gt;&lt;p&gt;- ಇತ್ತೀಚೆಗೆ ಅಸ್ಸಾಂಗೆ ಹೋದಾಗ ಚಹಾ ತೋಟದಲ್ಲಿ ಟೀ ಎಲೆಗಳ ಬಿಡಿಸಿದ್ದ ಪ್ರಧಾನಿ&lt;/p&gt;&lt;p&gt;- ತಮಿಳುನಾಡಿಗೆ ಮೊನ್ನೆ ಹೋದಾಗ ಪುಟ್ಟ ಮಕ್ಕಳ ಜತೆ ಗಾಯತ್ರಿ ಮಂತ್ರ ಹೇಳಿದ್ದರು&lt;/p&gt;]]></content:encoded>
            <category>India</category>
            <dc:creator>Sujatha NR</dc:creator>
            <atom:link href="https://www.kannadaprabha.in/india-news/narendra-modi-buys-churmuri-at-a-roadside-stall/articleshow-nfnhxfp"/>
        </item>
        <item>
            <title><![CDATA[ಲೋಕಸಭೆಯಲ್ಲಿ ಮಸೂದೆ ಸೋಲಿಸಿ ಕಾಂಗ್ರೆಸ್ಸಿಂದ  ಭ್ರೂಣಹತ್ಯೆಯಂಥ ಪಾಪ ಕೃತ್ಯ : ಮೋದಿ]]></title>
            <link>https://www.kannadaprabha.in/politics-news/pm-narendra-modi-slams-congress/articleshow-ok6a85m</link>
            <guid isPermaLink="true">https://www.kannadaprabha.in/politics-news/pm-narendra-modi-slams-congress/articleshow-ok6a85m</guid>
            <pubDate>Sun, 19 Apr 2026 12:44:04 +0530</pubDate>
            <description><![CDATA[&lt;p&gt;ಸಾಂವಿಧಾನಿಕ ತಿದ್ದುಪಡಿ ಮಸೂದೆಯ ಮೂಲಕ ಲೋಕಸಭೆ ಸ್ಥಾನಗಳನ್ನು ಹೆಚ್ಚಿಸಿ, ತ್ವರಿತವಾಗಿ ಶೇ.33 ಮಹಿಳಾ ಮೀಸಲಾತಿ ಜಾರಿಗೊಳಿಸುವ ಮಸೂದೆ ಅಂಗೀಕಾರಕ್ಕೆ ಸರ್ಕಾರ ಸಾಧ್ಯವಿರುವ ಎಲ್ಲ ಪ್ರಯತ್ನ ನಡೆಸಿದ ಹೊರತಾಗಿಯೂ ವಿಪಕ್ಷಗಳು ಅದನ್ನು ತಡೆಯುವ ಮೂಲಕ ಮಹಿಳೆಯರ ಕನಸುಗಳನ್ನು ಕರುಣೆ ಇಲ್ಲದೆಯೇ ಪುಡಿಗಟ್ಟಿದವು&lt;/p&gt;]]></description>
            <media:content url="https://static-gi.asianetnews.com/images/01kneqa3qyxxmxb8b3htehxezb/asianet-news-bangla-images-size---2026-04-05t171118.934-1775389445886.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ : &lt;/strong&gt;ಸಾಂವಿಧಾನಿಕ ತಿದ್ದುಪಡಿ ಮಸೂದೆಯ ಮೂಲಕ ಲೋಕಸಭೆ ಸ್ಥಾನಗಳನ್ನು ಹೆಚ್ಚಿಸಿ, ತ್ವರಿತವಾಗಿ ಶೇ.33 ಮಹಿಳಾ ಮೀಸಲಾತಿ ಜಾರಿಗೊಳಿಸುವ ಮಸೂದೆ ಅಂಗೀಕಾರಕ್ಕೆ ಸರ್ಕಾರ ಸಾಧ್ಯವಿರುವ ಎಲ್ಲ ಪ್ರಯತ್ನ ನಡೆಸಿದ ಹೊರತಾಗಿಯೂ ವಿಪಕ್ಷಗಳು ಅದನ್ನು ತಡೆಯುವ ಮೂಲಕ ಮಹಿಳೆಯರ ಕನಸುಗಳನ್ನು ಕರುಣೆ ಇಲ್ಲದೆಯೇ ಪುಡಿಗಟ್ಟಿದವು. ಕಾಂಗ್ರೆಸ್&zwnj; ಹಾಗೂ ಅದರ ಮಿತ್ರಪಕ್ಷಗಳ ವರ್ತನೆ ಭ್ರೂಣಹತ್ಯೆಯಂತಹ ಪಾಪ ಕೃತ್ಯಕ್ಕೆ ಸಮ. ಇದಕ್ಕಾಗಿ ದೇಶದ ಮಹಿಳೆಯರು ಕಠಿಣವಾಗಿ ಶಿಕ್ಷಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಬ್ಬರಿಸಿದ್ದಾರೆ.&lt;/p&gt;&lt;p&gt;ಶನಿವಾರ ರಾತ್ರಿ 8.30ಕ್ಕೆ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ, ಮಹಿಳಾ ಮೀಸಲಿಗೆ ಅವಕಾಶ ಕಲ್ಪಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲು ಆಗದ್ದಕ್ಕೆ ದೇಶದ ಮಹಿಳೆಯರ ಕ್ಷಮೆ ಯಾಚಿಸಿದರು.&lt;/p&gt;&lt;p&gt;ಇದೇ ವೇಳೆ, ವಿಧೇಯಕ ಅಂಗೀಕಾರಕ್ಕೆ ಬೇಕಾದ ಶೇ.66ರಷ್ಟು ಮತಗಳು ನಮಗೆ ಸಿಕ್ಕಿಲ್ಲದೇ ಇರಬಹುದು. ಆದರೆ ಶೇ.100ರಷ್ಟು ನಾರಿಶಕ್ತಿಯ ಬೆಂಬಲವನ್ನು ಗಳಿಸಿದ್ದೇವೆ. ಸರ್ಕಾರ ಮತಗಳನ್ನು ಕಳೆದುಕೊಂಡಿರಬಹುದು. ಆದರೆ ಮಹಿಳಾ ಸಬಲೀಕರಣದ ಪ್ರಯತ್ನಗಳನ್ನು ಅಲ್ಲ. ಮಹಿಳಾ ಮೀಸಲು ಹಾಗೂ ಸ್ತ್ರೀಯರ ಸಬಲೀಕರಣಕ್ಕೆ ಇರುವ ಎಲ್ಲ ತೊಡಕುಗಳನ್ನು ಸರ್ಕಾರ ತೆಗೆದು ಹಾಕಲಿದೆ ಎಂದು ಹೇಳಿದರು.&lt;/p&gt;&lt;p&gt;ಮಹಿಳಾ ಸಬಲೀಕರಣದ ಪ್ರಾಮಾಣಿಕ ಯತ್ನದಂತಹ ಭ್ರೂಣದ ಹತ್ಯೆಯನ್ನು ಕಾಂಗ್ರೆಸ್&zwnj; ಹಾಗೂ ಅದರ ಮಿತ್ರರು ಲೋಕಸಭೆಯಲ್ಲಿ ದೇಶದ ಎದುರು ಮಾಡಿದ್ದಾರೆ. ಕಾಂಗ್ರೆಸ್&zwnj;, ಡಿಎಂಕೆ, ಟಿಎಂಸಿ ಹಾಗೂ ಸಮಾಜವಾದಿ ಪಕ್ಷಗಳು ಈ ಭ್ರೂಣಹತ್ಯೆಯ ಅಪರಾಧಿಗಳು. ಅವರು ದೇಶದ ಸಂವಿಧಾನದ ವಿರುದ್ಧದ ಕ್ರಿಮಿನಲ್&zwnj;ಗಳು, ಮಹಿಳಾ ಶಕ್ತಿ ವಿರುದ್ಧದ ಕ್ರಿಮಿನಲ್&zwnj;ಗಳು. ಮಹಿಳಾ ಮೀಸಲು ವಿಷಯವನ್ನೇ ಕಾಂಗ್ರೆಸ್&zwnj; ದ್ವೇಷಿಸುತ್ತದೆ ಎಂದು 30 ನಿಮಿಷಗಳ ಭಾಷಣದಲ್ಲಿ ಹರಿಹಾಯ್ದರು.&lt;/p&gt;&lt;p&gt;ಕಾಂಗ್ರೆಸ್&zwnj; ಪಕ್ಷ ವಿಭಜನೆಯ ವಾದವನ್ನು ದೇಶದಲ್ಲಿ ಪಸರಿಸಿತು. ಕ್ಷೇತ್ರ ಮರುವಿಂಗಡಣೆಯಿಂದ ಕೆಲವು ರಾಜ್ಯಗಳಿಗೆ ಅಪಾಯವಾಗಲಿದೆ ಎಂದು ಸುದ್ದಿ ಹರಡಿತು. ಯಾವ ರಾಜ್ಯದ ಪಾಲೂ ತಗ್ಗುವುದಿಲ್ಲ, ಸ್ಥಾನಗಳು ಸಮಪ್ರಮಾಣದಲ್ಲಿ ಹೆಚ್ಚಾಗಲಿವೆ ಎಂದು ಸರ್ಕಾರ ಆರಂಭದಿಂದಲೂ ಹೇಳಿಕೊಂಡೇ ಬಂದಿತು. ಆದರೆ ಕಾಂಗ್ರೆಸ್&zwnj;, ಡಿಎಂಕೆ, ಟಿಎಂಸಿ ಹಾಗೂ ಎಸ್&zwnj;ಪಿ ಇದನ್ನು ಒಪ್ಪಿಕೊಳ್ಳಲೇ ಸಿದ್ಧವಿರಲಿಲ್ಲ ಎಂದು ಕಿಡಿಕಾರಿದರು.&lt;/p&gt;&lt;h2&gt;ನಮ್ಮದು ಮಹಾಯಜ್ಞ:&lt;/h2&gt;&lt;p&gt;&lsquo;ಮಹಿಳೆಯರ ಸಬಲೀಕರಣದ ಗುರಿ ಹೊಂದಿರುವ ನಾರಿ ಶಕ್ತಿ ಉಪಕ್ರಮವು ಒಂದು ಮಹಾಯಜ್ಞ. ನಮ್ಮ ಪ್ರಯತ್ನ ನಿಲ್ಲುವುದಿಲ್ಲ, ಕುಗ್ಗುವುದಿಲ್ಲ. ನಮ್ಮ ಆಂತಃಶಕ್ತಿ ಶಕ್ತಿ ಅಜೇಯವಾಗಿದೆ. ಇನ್ನಷ್ಟು ಅವಕಾಶಗಳು ನಮ್ಮ ಮುಂದೆ ಬರಲಿವೆ&rsquo; ಎಂದರು.&lt;/p&gt;&lt;h3&gt;ಮೋದಿ ಹೇಳಿದ್ದೇನು?:&lt;/h3&gt;&lt;p&gt;ಇದೇ ವೇಳೆ ಶುಕ್ರವಾರ ಲೋಕಸಭೆಯಲ್ಲಿ ವಿಧೇಯಕಕ್ಕೆ ಸೋಲಾದ ಬಳಿಕ ವಿಪಕ್ಷಗಳ ಸಂಭ್ರಮಾಚರಣೆ ಬಗ್ಗೆ ಕಿಡಿಕಾರಿದ ಪ್ರಧಾನಿ ಮೋದಿ, &lsquo;ಕಾಂಗ್ರೆಸ್, ಟಿಎಂಸಿ, ಡಿಎಂಕೆ ಪಕ್ಷಗಳು ತಮ್ಮ ಸ್ವಾರ್ಥದ ರಾಜಕೀಯವನ್ನು ಹೇಗೆ ಸಂಭ್ರಮಿಸಿದವು ಎಂಬುದನ್ನು ಇಡೀ ದೇಶದ ಮಹಿಳೆಯರು ವೀಕ್ಷಿಸಿದ್ದಾರೆ. ಅವರ ಬಣ್ಣ ಇದೀಗ ಬಯಲಾಗಿದೆ. ಮಹಿಳಾ ಮೀಸಲು ವಿರೋಧಿಸುವ ಮೂಲಕ ವಿಪಕ್ಷಗಳು ಅಪರಾಧ ಎಸಗಿವೆ. ಇದಕ್ಕೆ ಅವರು ಖಂಡಿತವಾಗಿಯೂ ಶಿಕ್ಷೆ ಅನುಭವಿಸಲಿದ್ದಾರೆ. ವಿಧೇಯಕಕ್ಕೆ ಸೋಲುಣಿಸುವ ಮೂಲಕ ವಿಪಕ್ಷಗಳು ನಮ್ಮ ಸಂವಿಧಾನವನ್ನು ಅವಮಾನಿಸಿದ್ದಾರೆ&rsquo; ಎಂದು ಗುಡುಗಿದರು.&lt;/p&gt;&lt;p&gt;&lt;strong&gt;ಕುಟುಂಬವಾದಕ್ಕೆ ಕುಟುಕು:&lt;/strong&gt;&lt;/p&gt;&lt;p&gt;&lsquo;ಯಾರಿಂದಲೂ ಏನನ್ನೂ ಕಸಿದುಕೊಳ್ಳದೆಯೇ, ಮಹಿಳೆಯರಿಗೆ ಸಬಲೀಕರಣದ ರೆಕ್ಕೆಗಳನ್ನು ಕಲ್ಪಿಸುವುದು ವಿಧೇಯಕದ ಉದ್ದೇಶವಾಗಿತ್ತು. ಈ ಹಿಂದೆ ತಾನು ಮಾಡಿದ ತಪ್ಪನ್ನು ಕಾಂಗ್ರೆಸ್&zwnj; ತಿದ್ದಿಕೊಳ್ಳುತ್ತದೆ ಎಂದು ನಾನು ಎಣಿಸಿದ್ದೆ. ಆದರೆ ಅವರು ತಮಗೆ ಸಿಕ್ಕ ಅವಕಾಶವನ್ನು ಕೈಚೆಲ್ಲಿದರು. ಕುಟುಂಬಗಳೇ ಮುನ್ನಡೆಸುವ ರಾಜಕೀಯ ಪಕ್ಷಗಳು, ಬೇರೆ ಮಹಿಳೆಯರು ರಾಜಕೀಯದಲ್ಲಿ ಮುಂದೆ ಬರುವುದನ್ನು ಬಯಸುವುದಿಲ್ಲ. ಏಕೆಂದರೆ ಅಂಥ ಬೆಳವಣಿಗೆ ಸ್ವಾರ್ಥದ ರಾಜಕೀಯಕ್ಕೆ ಕೊನೆ ಹಾಡಬಹುದು ಎಂಬ ಆತಂಕ ಅವರನ್ನು ಕಾಡುತ್ತಿರುತ್ತದೆ&rsquo; ಎಂದು ಹೆಸರು ಹೇಳದೆಯೇ ನಾಲ್ಕೂ ಪ್ರಮುಖ ವಿಪಕ್ಷಗಳ ವಿರುದ್ಧ ಹರಿಹಾಯ್ದರು.&lt;/p&gt;&lt;p&gt;ಇದೇ ವೇಳೆ ಕಾಂಗ್ರೆಸ್&zwnj; ವಿಭಜಕ ರಾಜಕೀಯ ನೀತಿ ಅನುಸರಿಸುತ್ತಿದೆ ಎಂದು ದೂರಿದ ಮೋದಿ, &lsquo;ವಿಧೇಯಕವು ಉತ್ತರ- ದಕ್ಷಿಣವನ್ನು ವಿಭಜಿಸುತ್ತದೆ ಎಂಬ ಸುಳ್ಳು ಆರೋಪವನ್ನು ವಿಪಕ್ಷ ಮಾಡಿತು. ಮಹಿಳೆ ಯಾವುದನ್ನು ಬೇಕಾದರೂ ಮರೆಯಬಲ್ಲಳು; ಆದರೆ ತನಗೆ ಆದ ಅವಮಾನವನ್ನು ಎಂದಿಗೂ ಸಹಿಸಲಾರಳು. ಇದೀಗ ಕಾಂಗ್ರೆಸ್&zwnj; ಮತ್ತು ಅದರ ಮಿತ್ರಪಕ್ಷಗಳು ಮಾಡಿದ ಅವಮಾನವು ಎಂದೆಂದಿಗೂ ಮಹಿಳೆಯ ಹೃದಯದಲ್ಲಿ ಹಾಗೆಯೇ ಉಳಿದುಕೊಂಡಿರುತ್ತದೆ&rsquo; ಎಂದು ಚಾಟಿ ಬೀಸಿದರು.&lt;/p&gt;&lt;p&gt;ನಾರಿ ಶಕ್ತಿ ಉಪಕ್ರಮ ಮಹಾಯಜ್ಞ:&lt;/p&gt;&lt;p&gt;&lsquo;21ನೇ ಶತಮಾನದಲ್ಲಿ ಮಹಿಳೆಯರ ಸಬಲೀಕರಣದ ಗುರಿಯನ್ನು ಹೊಂದಿರುವ ನಾರಿ ಶಕ್ತಿ ಉಪಕ್ರಮವು ಮಹಾಯಜ್ಞ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿಯನ್ನು ಹರಡುತ್ತಿವೆ. ಸಾರ್ವಜನಿಕರಲ್ಲಿ ಗೊಂದಲ ಮೂಡಿಸಲು ದಾರಿತಪ್ಪಿಸುವ ನಿರೂಪಣೆಗಳನ್ನು ಬಳಸುತ್ತಿವೆ. ಇಂದು ನನ್ನ ದೇಶದ ತಾಯಂದಿರು, ಸಹೋದರಿಯರು, ಹೆಣ್ಣುಮಕ್ಕಳು... ನೀವೆಲ್ಲರೂ ದುಃಖಿಸುತ್ತಿದ್ದೀರಿ ಎಂದು ನನಗೆ ತಿಳಿದಿದೆ. ನಾನು ಕೂಡ ನಿಮ್ಮ ದುಃಖದಲ್ಲಿ ಭಾಗಿಯಾಗಿದ್ದೇನೆ. ಆದರೆ ನಮ್ಮ ಪ್ರಯತ್ನ ನಿಲ್ಲುವುದಿಲ್ಲ, ನಮ್ಮ ಪ್ರಯತ್ನ ಕುಗ್ಗುವುದಿಲ್ಲ, ನಮ್ಮ ಆಂತರಿಕ ಶಕ್ತಿ ಅಜೇಯವಾಗಿದೆ. ಹೆಚ್ಚಿನ ಅವಕಾಶಗಳು ನಮ್ಮ ಮುಂದೆ ಬರಲಿವೆ&rsquo; ಎಂದು ವಿಶ್ವಾಸ ವ್ಯಕ್ತಪಡಿಸಿದರು.&lt;/p&gt;&lt;p&gt;++++++&lt;/p&gt;&lt;p&gt;ಕಾಂಗ್ರೆಸ್&zwnj; ಸುಧಾರಣಾ ವಿರೋಧಿ:&lt;/p&gt;&lt;p&gt;&lsquo;ನಾರಿ ಶಕ್ತಿ ವಂದನಾ ಅಧಿನಿಯಮವು, ಈ ಕಾಲದ ಅಗತ್ಯವಾಗಿತ್ತು. ಜೊತೆಗೆ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮದ ನಡುವೆ ಸಮತೋಲಿತ ಸಬಲೀಕರಣದ ಪ್ರಾಮಾಣಿಕ ಪ್ರಯತ್ನವಾಗಿತ್ತು. ಆದರೆ ದೇಶವನ್ನು ಕಟ್ಟುವ ಮತ್ತು ದೇಶದ ಅಭ್ಯುದಯದ ಎಲ್ಲಾ ಪ್ರಯತ್ನಗಳನ್ನು ಕಾಂಗ್ರೆಸ್&zwnj; ಎಂದೆಂದಿಗೂ ವಿರೋಧಿಸಿಕೊಂಡೇ ಬಂದಿದೆ. ನಮ್ಮೊಂದಿಗೆ ಇತರ ಹಲವಾರು ದೇಶಗಳು ಸ್ವಾತಂತ್ರ್ಯವನ್ನು ಗಳಿಸಿದವು. ಹೆಚ್ಚಿನ ದೇಶಗಳು ನಮಗಿಂತ ಬಹಳ ಮುಂದೆ ಹೋಗಿವೆ. ಇದರ ಹಿಂದಿನ ಕಾರಣವೆಂದರೆ ಕಾಂಗ್ರೆಸ್ ಎಲ್ಲಾ ಸುಧಾರಣೆಗಳನ್ನು ನಿಲ್ಲಿಸಿತು&rsquo; ಎಂದು ಮೋದಿ ಟೀಕಿಸಿದರು.&lt;/p&gt;&lt;p&gt;&lsquo;ಲಟ್ಕಾನಾ, ಭಟ್ಕಾನಾ, ಅಟ್ಕಾನಾ&rsquo; (ತಡೆಗಳು, ಅಡ್ಡಿ, ತೊಂದರೆ) ಎಂಬುದು ಕಾಂಗ್ರೆಸ್ಸಿನ ತತ್ವ ಮತ್ತು ಕಾರ್ಯವಿಧಾನ. ಅದು ನೆರೆಯ ರಾಷ್ಟ್ರಗಳೊಂದಿಗಿನ ಗಡಿ ಸಮಸ್ಯೆಗಳನ್ನು ಸ್ಥಗಿತಗೊಳಿಸಿತು. ಪಾಕಿಸ್ತಾನದೊಂದಿಗಿನ ಜಲ ವಿವಾದಗಳನ್ನು ಸ್ಥಗಿತಗೊಳಿಸಿತು. 40 ವರ್ಷಗಳ ಕಾಲ ಒಬಿಸಿ ಮೀಸಲಾತಿ ನಿರ್ಧಾರವನ್ನು ಸ್ಥಗಿತಗೊಳಿಸಿತು. 40 ವರ್ಷಗಳ ಕಾಲ &lsquo;ಏಕ ಶ್ರೇಣಿ ಏಕ ಪಿಂಚಣಿ&rsquo;ಯನ್ನು ಸ್ಥಗಿತಗೊಳಿಸಿತು. ಕಾಂಗ್ರೆಸ್ಸಿನ ಈ ವರ್ತನೆ ಯಾವಾಗಲೂ ದೇಶಕ್ಕೆ ಹಾನಿ ಮಾಡಿದೆ. ಕಾಂಗ್ರೆಸ್ಸಿನ ಎಲ್ಲಾ ವಿರೋಧ, ನಿರ್ಣಯವಿಲ್ಲದಿರುವಿಕೆ ಮತ್ತು ವಂಚನೆಯಿಂದಾಗಿ ದೇಶವು ಸಂಕಷ್ಟಕ್ಕೆ ಸಿಲುಕಿದೆ. ಇಂದು ದೇಶ ಎದುರಿಸುತ್ತಿರುವ ಎಲ್ಲಾ ದೊಡ್ಡ ಸವಾಲುಗಳು ಕಾಂಗ್ರೆಸ್ಸಿನ ಈ ನಡವಳಿಕೆಯಿಂದ ಹುಟ್ಟಿಕೊಂಡಿವೆ&rsquo; ಎಂದು ಆಕ್ರೋಶಿಸಿದರು.&lt;/p&gt;&lt;p&gt;ಇದನ್ನು ಒಂದು ದೊಡ್ಡ ಸೈದ್ಧಾಂತಿಕ ಯುದ್ಧ ಎಂದು ಕರೆದ ಪ್ರಧಾನಿ, &lsquo;ಈ ಹೋರಾಟವು ಕೇವಲ ಕಾನೂನಿನ ಕುರಿತಾಗಿ ಇರುವಂಥದ್ದಲ್ಲ. ಬದಲಿಗೆ, ಕಾಂಗ್ರೆಸ್ಸಿನ ಸುಧಾರಣಾ ವಿರೋಧಿ ಮನಃಸ್ಥಿತಿಯ ಬಗ್ಗೆ ಇರುವಂಥದ್ದು. ದೇಶದ ಮಹಿಳೆಯರು ಕಾಂಗ್ರೆಸ್ಸಿನ ಈ ಮನಃಸ್ಥಿತಿಗೆ ಸೂಕ್ತ ಉತ್ತರ ನೀಡುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ&rsquo; ಎಂದು ವಿಶ್ವಾಸ ವ್ಯಕ್ತಪಡಿಸಿದರು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>India</category>
            <dc:creator>Sujatha NR</dc:creator>
            <atom:link href="https://www.kannadaprabha.in/politics-news/pm-narendra-modi-slams-congress/articleshow-ok6a85m"/>
        </item>
        <item>
            <title><![CDATA[ಧರ್ಮದ ಆಧಾರದಲ್ಲಿ ಮುಸ್ಲಿಂ ಮೀಸಲು ಇಲ್ಲ : ಅಮಿತ್‌ ಶಾ]]></title>
            <link>https://www.kannadaprabha.in/india-news/no-reservation-to-muslims-quota-on-basis-of-religion-unconstitutional-shah/articleshow-pgz90zk</link>
            <guid isPermaLink="true">https://www.kannadaprabha.in/india-news/no-reservation-to-muslims-quota-on-basis-of-religion-unconstitutional-shah/articleshow-pgz90zk</guid>
            <pubDate>Fri, 17 Apr 2026 01:45:00 +0530</pubDate>
            <description><![CDATA[&lt;p&gt;ಮುಸ್ಲಿಮರಿಗೆ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲಾಗುವುದಿಲ್ಲ. ಏಕೆಂದರೆ ಅಂತಹ ಮೀಸಲು ಸಂವಿಧಾನ ಬಾಹಿರವಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ. ಅಖಿಲೇಶ್&zwnj; ಯಾದವ್&zwnj; ಮತ್ತು ಧರ್ಮೇಂದ್ರ ಯಾದವ್&zwnj;, ಶೇ.33 ಮಹಿಳಾ ಮೀಸಲಿನಲ್ಲಿ ಮುಸ್ಲಿಮರಿಗೆ ಪ್ರತ್ಯೆಕ ಮೀಸಲು ನೀಡಬೇಕು ಎಂದರು&lt;/p&gt;]]></description>
            <media:content url="https://static-assets.asianetnews.com/kp/json/16042026/pictures/AMIT_SHA_138.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ:&lt;/strong&gt; ಮುಸ್ಲಿಮರಿಗೆ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲಾಗುವುದಿಲ್ಲ. ಏಕೆಂದರೆ ಅಂತಹ ಮೀಸಲು ಸಂವಿಧಾನ ಬಾಹಿರವಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.&lt;/p&gt;&lt;h2&gt;ಮುಸ್ಲಿಮರಿಗೆ ಪ್ರತ್ಯೆಕ ಮೀಸಲು ನೀಡಬೇಕು&lt;/h2&gt;&lt;p&gt;ಗುರುವಾರ ಲೋಕಸಭೆಯಲ್ಲಿ ಮಾತನಾಡಿದ ಸಮಾಜವಾದಿ ಪಕ್ಷದ ನಾಯಕರಾದ ಅಖಿಲೇಶ್&zwnj; ಯಾದವ್&zwnj; ಮತ್ತು ಧರ್ಮೇಂದ್ರ ಯಾದವ್&zwnj;, ಶೇ.33 ಮಹಿಳಾ ಮೀಸಲಿನಲ್ಲಿ ಮುಸ್ಲಿಮರಿಗೆ ಪ್ರತ್ಯೆಕ ಮೀಸಲು ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾ, &lsquo;ಧರ್ಮದ ಆಧಾರದ ಮೇಲೆ ಮುಸ್ಲಿಂ ಮಹಿಳೆಯರಿಗೆ ಮೀಸಲಾತಿ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಮ್ಮ ಸಂವಿಧಾನವು ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಅವಕಾಶ ನೀಡುವುದಿಲ್ಲ. ಅಂತಹ ಮೀಸಲಾತಿ ಸಂವಿಧಾನ ಬಾಹಿರ. ನಮ್ಮ ಸರ್ಕಾರದ ಈ ನಿರ್ಧಾರವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ&rsquo; ಎಂದರು.&lt;/p&gt;&lt;h3&gt;ಸಮಾಜವಾದಿ ಪಕ್ಷ ತನ್ನೆಲ್ಲಾ ಸ್ಥಾನಗಳನ್ನೂ ಮುಸ್ಲಿಮರಿಗೆ ಬಿಟ್ಟುಕೊಡಲಿ&lt;/h3&gt;&lt;p&gt;ಜೊತೆಗೆ ಬೇಕಿದ್ದರೆ ಸಮಾಜವಾದಿ ಪಕ್ಷ ತನ್ನೆಲ್ಲಾ ಸ್ಥಾನಗಳನ್ನೂ ಮುಸ್ಲಿಮರಿಗೆ ಬಿಟ್ಟುಕೊಡಲಿ ಎಂದು ಸಲಹೆ ನೀಡಿದರು.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/no-reservation-to-muslims-quota-on-basis-of-religion-unconstitutional-shah/articleshow-pgz90zk"/>
        </item>
        <item>
            <title><![CDATA[ದಕ್ಷಿಣಕ್ಕೆ ಅನ್ಯಾಯ ಆಗಲ್ಲ, ಇದು ಗ್ಯಾರಂಟಿ : ಮೋದಿ]]></title>
            <link>https://www.kannadaprabha.in/india-news/no-state-be-it-north-or-south-will-be-discriminated-against-in-delimitation-exercise-pm-in-ls/articleshow-qxwbqwz</link>
            <guid isPermaLink="true">https://www.kannadaprabha.in/india-news/no-state-be-it-north-or-south-will-be-discriminated-against-in-delimitation-exercise-pm-in-ls/articleshow-qxwbqwz</guid>
            <pubDate>Fri, 17 Apr 2026 04:23:24 +0530</pubDate>
            <description><![CDATA[&lt;p&gt;ಭಾರೀ ಕುತೂಹಲ ಮೂಡಿಸಿದ್ದ ಕ್ಷೇತ್ರ ಮರುವಿಂಗಡಣೆ ಕುರಿತ ಚರ್ಚೆಗೆ ವೇದಿಕೆಯಾಗಿರುವ ಲೋಕಸಭೆ ವಿಶೇಷ ಅಧಿವೇಶನದಲ್ಲಿ ಆ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, &lsquo;ಕ್ಷೇತ್ರಗಳ ಪುನರ್&zwnj;ವಿಂಗಡಣೆಯಿಂದ ದಕ್ಷಿಣ ಸೇರಿದಂತೆ ಯಾವ ರಾಜ್ಯಗಳಿಗೂ ಅನ್ಯಾಯ ಆಗುವುದಿಲ್ಲ&rsquo; ಎಂಬ ಭರವಸೆ ನೀಡಿದ್ದಾರೆ. &amp;nbsp;&lt;/p&gt;]]></description>
            <media:content url="https://static-assets.asianetnews.com/kp/json/16042026/pictures/MODI_67.JPG" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;strong&gt;ನವದೆಹಲಿ:&lt;/strong&gt; ಭಾರೀ ಕುತೂಹಲ ಮೂಡಿಸಿದ್ದ ಕ್ಷೇತ್ರ ಮರುವಿಂಗಡಣೆ ಕುರಿತ ಚರ್ಚೆಗೆ ವೇದಿಕೆಯಾಗಿರುವ ಲೋಕಸಭೆ ವಿಶೇಷ ಅಧಿವೇಶನದಲ್ಲಿ ಆ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, &lsquo;ಕ್ಷೇತ್ರಗಳ ಪುನರ್&zwnj;ವಿಂಗಡಣೆಯಿಂದ ದಕ್ಷಿಣ ಸೇರಿದಂತೆ ಯಾವ ರಾಜ್ಯಗಳಿಗೂ ಅನ್ಯಾಯ ಆಗುವುದಿಲ್ಲ&rsquo; ಎಂಬ ಭರವಸೆ ನೀಡಿದ್ದಾರೆ. ಅತ್ತ ಪ್ರತಿಪಕ್ಷ ಕಾಂಗ್ರೆಸ್&zwnj;, &lsquo;ಮೋದಿ ಉದ್ದೇಶಪೂರ್ವಕವಾಗಿ ಕ್ಷೇತ್ರ ಮರುವಿಂಗಡಣೆ ವಿಷಯದ ಬಗ್ಗೆ ಮಾತನಾಡಲಿಲ್ಲ&rsquo; ಎಂದು ಆರೋಪಿಸಿದೆ.&lt;/p&gt;&lt;p&gt;ಮಹಿಳಾ ಮೀಸಲು ತಿದ್ದುಪಡಿ ಮತ್ತು ಕ್ಷೇತ್ರ ಮರುವಿಂಗಡಣೆಗೆ ಆಯೋಗ ರಚನೆಗೆ ಸಂಬಂಧಿಸಿದ ಮಸೂದೆ ಮಂಡನೆಯಾದ ಬಳಿಕ ಸದನವನ್ನುದ್ದೇಶಿಸಿ ಮಾತನಾಡಿದ ಮೋದಿ, &lsquo;ಈ ಪ್ರಕ್ರಿಯೆಯಲ್ಲಿ ಉತ್ತರದಿಂದ ದಕ್ಷಿಣದ ವರೆಗೆ, ಪೂರ್ವದಿಂದ ಪಶ್ಚಿಮದ ವರೆಗೆ ಯಾವ ರಾಜ್ಯಗಳಿಗೂ ಅನ್ಯಾಯ ಆಗುವುದಿಲ್ಲ. ಯಾವುದೇ ರಾಜ್ಯದ ಲೋಕಸಭಾ ಸೀಟುಗಳ ಅನುಪಾತದಲ್ಲಿ ಇಳಿಕೆ ಆಗದು. ಹೆಚ್ಚಳವಾದರೂ ಅದು ಎಲ್ಲರಿಗೂ ಸಮಾನವಾಗಿರುತ್ತದೆ ಎಂದು ಜವಾಬ್ದಾರಿಯುತವಾಗಿ ಹೇಳುತ್ತಿದ್ದೇನೆ&rsquo; ಎಂದರು.&lt;/p&gt;&lt;h2&gt;ಮೀಸಲಾತಿ ಮಹಿಳೆಯರ ಹಕ್ಕು:&lt;/h2&gt;&lt;p&gt;ಸದನದಲ್ಲಿ ಮಹಿಳೆಯರಿಗೆ ಶೇ.33ರಷ್ಟು ಪ್ರಾತಿನಿಧ್ಯ ಕೊಡುವ ಬಗ್ಗೆ ಮಾತನಾಡುತ್ತಾ, &lsquo;ಮೀಸಲಾತಿ ಮಹಿಳೆಯರ ಹಕ್ಕು. ನಾವು ಅವರಿಗೆ ಏನೋ ಕೊಡುತ್ತಿದ್ದೇವೆ ಎಂಬ ಭ್ರಮೆಯಲ್ಲಿ ಯಾರೂ ಇರಬಾರದು. ಇದು ರಾಷ್ಟ್ರೀಯ ಹಿತಾಸಕ್ತಿಯ ನಿರ್ಧಾರವಾಗಿದೆ. ದೇಶ-ವಿದೇಶಗಳಲ್ಲಿರುವ ಮಹಿಳೆಯರು ನಮ್ಮನ್ನು ನೋಡುತ್ತಿದ್ದಾರೆ ಹಾಗೂ ನಮ್ಮ ಉದ್ದೇಶವನ್ನು ಅಳೆಯುತ್ತಿದ್ದಾರೆ. 2023ರಲ್ಲಿ ಮಹಿಳಾ ಮೀಸಲಾತಿ ಬಗ್ಗೆ ಚರ್ಚೆಯಾಗುತ್ತಿದ್ದಾಗ ಅವಸರಿಸಲಾಯಿತು. ಆದರೆ ಈಗ ಅದಕ್ಕಾಗಿ ಸಮಯ ತೆಗೆದುಕೊಂಡು ಮಾಡುತ್ತಿದ್ದೇವೆ. ಈ ಕೆಲಸಕ್ಕಿದು ಸಕಾಲ&rsquo; ಎಂದು ಪ್ರತಿಪಾದಿಸಿದರು.&lt;/p&gt;&lt;p&gt;ಜತೆಗೆ, &lsquo;ಮಹಿಳಾ ಮೀಸಲನ್ನು ವಿರೋಧಿಸಿದವರನ್ನು ಈ ದೇಶದ ಸ್ತ್ರೀಯರು ಮರೆತಿಲ್ಲ. ಈಗಲೂ ನೀವದನ್ನು ವಿರೋಧಿಸಿದರೆ ರಾಜಕೀಯವಾಗಿ ನನಗೇ ಲಾಭವಾಗುತ್ತದೆ. ಆದರೆ ಇದನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು. ನನಗಿದರ ಶ್ರೇಯ ಬೇಡ. ಇದನ್ನು ಗ್ಯಾರೆಂಟಿ ಎನ್ನಬಹುದು ಇಲ್ಲವೇ ಭರವಸೆ ಎನ್ನಲೂಬಹುದು. ಉದ್ದೇಶ ಸ್ಪಷ್ಟವಾಗಿದ್ದರೆ ಪದಗಳೊಂದಿಗೆ ಆಟವಾಡುವ ಅಗತ್ಯ ಇರುವುದಿಲ್ಲ &rsquo; ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.&lt;/p&gt;&lt;h3&gt;ಸ್ತ್ರೀಯರು ಇನ್ನು ಕಾಯೋದಿಲ್ಲ:&lt;/h3&gt;&lt;p&gt;&lsquo;ಕಳೆದ 25-30 ವರ್ಷಗಳಲ್ಲಿ ಪಂಚಾಯಿತಿ ಚುನಾವಣೆಗಳಲ್ಲಿ ಗೆದ್ದ ಮಹಿಳೆಯರಲ್ಲಿ ರಾಜಕೀಯ ಪ್ರಜ್ಞೆ ಇದೆ. ಮೊದಲಾದರೆ ಎಲ್ಲಾ ತಿಳಿದಿದ್ದರೂ ಮಾತನಾಡುತ್ತಿರಲಿಲ್ಲ. ಆದರೆ ಈಗ ಅವರು ಅನ್ನಿಸಿದ್ದನ್ನು ಹೇಳುತ್ತಾರೆ. ಇನ್ನು ಸಂಕೀರ್ಣ ಕಾರ್ಯವಿಧಾನದ ನೆಪವೊಡ್ಡಿ ಅವರನ್ನು ಕಾಯಿಸಿದರೆ, ಅವರು ತಾಳ್ಮೆ ಕಳೆದುಕೊಳ್ಳುತ್ತಾರೆ&rsquo; ಎಂದ ಮೋದಿ, &lsquo;ಪ್ರಜಾಪ್ರಭುತ್ವದಲ್ಲಿ ಮಹಿಳೆಯರ ಭಾಗವಹಿಸುವಿಕೆ ಕೇವಲ ಸಂಖ್ಯೆಯಲ್ಲ, ಬದಲಿಗೆ ಪ್ರಜಾಪ್ರಭುತ್ವ ಮೌಲ್ಯಗಳ ಪ್ರತಿ ಇರುವ ಬದ್ಧತೆಯಾಗಿದೆ&rsquo; ಎಂದು ಹೇಳಿದರು.&lt;/p&gt;&lt;p&gt;ನಾರಿಶಕ್ತಿಯನ್ನು ಬಣ್ಣಿಸುತ್ತಾ, &lsquo;ಎಲ್ಲಾ ವಯೋಮಾನದ ಸ್ತ್ರೀಯರು ದೇಶದ ಹೆಮ್ಮೆಯನ್ನು ಹೆಚ್ಚಿಸುತ್ತಿದ್ದಾರೆ. ದೇಶದ ತಾಯಂದಿರು, ಸಹೋದರಿಯರು ಮತ್ತು ಪುತ್ರಿಯರು ಎಲ್ಲಾ ಕ್ಷೇತ್ರಗಳಲ್ಲಿ ಅದ್ಭುತಗಳನ್ನು ಮಾಡುತ್ತಿದ್ದಾರೆ. ಅವರ ಪಾಲ್ಗೊಳ್ಳುವಿಕೆಯಿಂದ ದೇಶದ ಸಾಮರ್ಥ್ಯ ಹೆಚ್ಚಲಿದೆ. ತಳಮಟ್ಟದಲ್ಲಿ ನಾಯಕಿಯರು ಹುಟ್ಟಿಕೊಂಡು ನಿರ್ಧಾರ ಕೈಗೊಳ್ಳುವಲ್ಲಿ ತೊಡಗಿದರೆ, ಇದು ವಿಕಸಿತ ಭಾರತ ನಿರ್ಮಾಣಕ್ಕಿದು ಪ್ರಮುಖವಾಗಲಿದೆ&rsquo; ಎಂದರು.&lt;/p&gt;&lt;p&gt;ಉದ್ದೇಶಪೂರ್ವಕ ಕುರುಡು-ಕೈ:&lt;/p&gt;&lt;p&gt;ಪ್ರಧಾನಿಯವರ ಭಾಷಣವನ್ನು ಟೀಕಿಸಿರುವ ಕಾಂಗ್ರೆಸ್&zwnj;, &lsquo;ಕ್ಷೇತ್ರ ಮರುವಿಂಗಡಣೆ ಬಿಟ್ಟು ಬೇರೆಲ್ಲಾ ವಿಷಯಗಳ ಬಗ್ಗೆ ಮೋದಿ ಮಾತನಾಡಿದರು. ಇದು, ಆ ವಿಷಯದ ಬಗ್ಗೆ ಅವರ ಉದ್ದೇಶಪೂರ್ವಕ ಕುರುಡುತನವನ್ನು ತೋರಿಸುತ್ತದೆ&rsquo; ಎಂದು ವ್ಯಂಗ್ಯವಾಡಿದೆ.&lt;/p&gt;&lt;p&gt;ಕಾಂಗ್ರೆಸ್&zwnj; ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್&zwnj; ಅವರು ಮೋದಿಯನ್ನು &lsquo;ಗೃಹಸ್ಥರಲ್ಲದ ಪ್ರಧಾನಿ&rsquo; ಎಂದು ಸಂಬೋಧಿಸುತ್ತಾ, &lsquo;ಮಸೂದೆ ಬಗ್ಗೆ ಎದ್ದಿರುವ ಯಾವೊಂದೂ ಕಳವಳದ ಬಗ್ಗೆ ಉಲ್ಲೇಖವನ್ನೇ ಮಾಡಿಲ್ಲ. ಎಲ್ಲಾ ಪಕ್ಷಗಳೂ ಸರ್ವಾನುಮತದಿಂದ ಮಸೂದೆಗಳನ್ನು ಅಂಗೀಕರಿಸಬೇಕೆಂದು ಅವರು ಕರೆ ನೀಡಿರುವರಾದರೂ, ಅಂತಹ ವಿಶ್ವಾಸ ಗಳಿಸುವ ಕೆಲಸವನ್ನು ಅವರ ಸರ್ಕಾರ ಮಾಡಿಯೇ ಇಲ್ಲ. ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಚುನಾವಣೆಗಳು ಮುಗಿದಮೇಲೆ ಸರ್ವಪಕ್ಷ ಸಭೆ ಕರೆಯುವಂತೆ ವಿಪಕ್ಷ ನಾಯಕ ರಾಹುಲ್&zwnj; ಗಾಂಧಿ ಆಗ್ರಹಿಸಿದರೂ ಅದನ್ನು ತಿರಸ್ಕರಿಸಲಾಯಿತು. ಕ್ಷೇತ್ರ ಮರುವಿಂಗಡಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳನ್ನು ಸಂಪರ್ಕಿಸಿಲ್ಲ. ಅವರ ಆತಂಕಗಳನ್ನೂ ಕಠೋರವಾಗಿ ತಿರಸ್ಕರಿಸಲಾಯಿತು. ಆ ಪ್ರಕ್ರಿಯೆಯ ಬಗ್ಗೆ ಲಿಖಿತರೂಪದಲ್ಲೂ ಸ್ಪಷ್ಟ ಮಾಹಿತಿ ನೀಡಿಲ್ಲ&rsquo; ಎಂದು ಆರೋಪಗಳ ಸುರಿಮಳೆಗೈದರು.&lt;/p&gt;&lt;p&gt;ಜತೆಗೆ, &lsquo;ಮಹಿಳೆಯರಿಗೆ ನೀಡಲಾಗುವ ಶೇ.33ರಷ್ಟು ಮೀಸಲಾತಿಯ ಒಳಗೆ ಎಸ್&zwnj;ಸಿ ಮತ್ತು ಎಸ್&zwnj;ಟಿಗೆ ಸೇರಿದವರಿಗೆ ಮೀಸಲಾತಿಯನ್ನು ನೀಡಬೇಕು. ಈ ಆಗ್ರಹವನ್ನೂ ಅವರು ಕಿವಿಗೆ ಹಾಕಿಕೊಳ್ಳುತ್ತಿಲ್ಲ&rsquo; ಎಂದೂ ಆಪಾದಿಸಿದರು.&lt;/p&gt;&lt;p&gt;&lt;strong&gt;ದಕ್ಷಿಣಕ್ಕೆ ಅನ್ಯಾಯ ಆಗಲ್ಲ: ಅಮಿತ್&zwnj; ಶಾ&amp;nbsp;&lt;/strong&gt;&lt;/p&gt;&lt;p&gt;&lt;strong&gt;ನವದೆಹಲಿ:&lt;/strong&gt; ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣದ ರಾಜ್ಯಗಳ ಲೋಕಸಭಾ ಸ್ಥಾನ ಮತ್ತು ಸಂಸತ್ತಿನ ಒಟ್ಟು ಸ್ಥಾನದಲ್ಲಿ ಶೇಕಡವಾರು ಪ್ರಮಾಣ ಇಳಿಕೆಯಾಗುತ್ತದೆ ಎಂಬ ಅಸಮಾಧಾನದ ನಡುವೆಯೇ, ಈ ವಾದವನ್ನು ಕೇಂದ್ರ ಗೃಹ ಸಚಿವ ಅಮಿತ್&zwnj; ಶಾ ಅಲ್ಲಗಳೆದಿದ್ದು, &lsquo;ಸುಳ್ಳು ನಿರೂಪಣೆಯನ್ನು ಹರಡಲಾಗುತ್ತಿದೆ&rsquo; ಎಂದಿದ್ದಾರೆ. &amp;nbsp;&lt;/p&gt;&lt;p&gt;ಅಲ್ಲದೆ ಅಂಕಿ ಅಂಶಗಳ ಸಮೇತ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳ ಸ್ಥಾನ, ಪಾಲು ಹೇಗೆ ಏರಿಕೆಯಾಗುತ್ತದೆ ಎಂದು ವಿವರಿಸಿದ್ದಾರೆ.ಗುರುವಾರ ಲೋಕಸಭೆಯಲ್ಲಿ ಮಹಿಳಾ ಮೀಸಲು ವಿಧೇಯಕ ಪರ ಮಾತನಾಡಿದ ಅಮಿತ್&zwnj; ಶಾ &lsquo;ಸದ್ಯ 129 ಲೋಕಸಭಾ ಸ್ಥಾನ ಹೊಂದಿರುವ ದಕ್ಷಿಣದ 5 ರಾಜ್ಯಗಳ ಬಲವು, ಕ್ಷೇತ್ರ ಮರುವಿಂಗಡಣೆಯ ಬಳಿಕ 195ಕ್ಕೆ ಏರಲಿದೆ. ಶೇಕಡವಾರು ನೋಡುವುದಾದರೆ ದಕ್ಷಿಣದ ಪಾಲು ಶೇ.23.76ರಿಂದ ಶೇ.23.87 ಅಥವಾ ಶೇ.24ಕ್ಕೆ ತಲುಪಲಿದೆ.&lt;/p&gt;&lt;p&gt;&amp;nbsp;ಇದು ಸೀಟು ಮತ್ತು ಪಾಲು ಎರಡೂ ಏರಿಕೆಗೆ ಸಾಕ್ಷಿ ಎಂದು ಹೇಳಿದರುಜೊತೆಗೆ ದಕ್ಷಿಣದ ರಾಜ್ಯವಾರು ಮಾಹಿತಿ ಹಂಚಿಕೊಂಡ ಶಾ, &lsquo;ಕರ್ನಾಟಕದಲ್ಲಿ ಈಗಿರುವ 28 ಸೀಟುಗಳು ಪ್ರಮಾಣ 42ಕ್ಕೇರಲಿದೆ. ಅಂತೆಯೇ ಆಂಧ್ರದಲ್ಲಿ 25ರಿಂದ 38ಕ್ಕೆ, ತೆಲಂಗಾಣದಲ್ಲಿ 17ರಿಂದ 26ಕ್ಕೆ, ತಮಿಳುನಾಡಿನಲ್ಲಿ 39 ರಿಂದ 59ಕ್ಕೆ, ಕೇರಳದಲ್ಲಿ 20ರಿಂದ 30ಕ್ಕೆ ಏರಿಕೆ ಆಗಲಿದೆ&rsquo; ಎಂದು ಶಾ ಮಾಹಿತಿ ನೀಡಿದರು. ಈ ಮೂಲಕ, ಶೇ.50ರಷ್ಟು ಏರಿಕೆಯಾಗಲಿದೆ ಎಂಬ ಸುಳಿವು ನೀಡಿದರು.&amp;nbsp;&lt;/p&gt;&lt;p&gt;ಇದೇ ವೇಳೆ, &lsquo;ಕಾಂಗ್ರೆಸ್&zwnj; ಸರ್ಕಾರ ತಂದ ಕ್ಷೇತ್ರ ಮರುವಿಂಗಡಣೆ ಕಾನೂನಲ್ಲಿ ಎನ್&zwnj;ಡಿಎ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ. ಒಂದು ಪೂರ್ಣವಿರಾಮ, ಅಲ್ಪವಿರಾಮ ಕೂಡ ಬದಲಾಗಿಲ್ಲ&rsquo; ಎಂದು ಸ್ಪಷ್ಟಪಡಿಸಿದರು.ಜೊತೆಗೆ 2029ರ ಲೋಕಸಭಾ ಚುನಾವಣೆವರೆಗೆ ನಡೆಯುವ ಎಲ್ಲಾ ಚುನಾವಣೆಗಳು ಹಾಲಿ ಇರುವ ಸ್ವರೂಪದಲ್ಲೇ ಮುಂದುವರೆಯಲಿದೆ ಎಂದು ಹೇಳಿದರು.&lt;/p&gt;&lt;p&gt;&lt;strong&gt;ರಾಜ್ಯಗಳ ಲೋಕಸಭಾ ಸ್ಥಾನ ಶೇ.50ರಷ್ಟು ಏರಿಕೆ: ಕೇಂದ್ರ&amp;nbsp;&lt;/strong&gt;&lt;/p&gt;&lt;p&gt;&lt;strong&gt;ನವದೆಹಲಿ&lt;/strong&gt;: ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವೇಳೆ ಅನುಸರಿಸುವ ಮಾನದಂಡಗಳ ಕುರಿತು ಇದ್ದ ಅನುಮಾನಗಳಗೆ ತೆರೆ ಎಳೆದಿರುವ ಕೇಂದ್ರ ಸರ್ಕಾರ, ಪ್ರಸಕ್ತ ಪ್ರತಿ ರಾಜ್ಯಗಳು ಹೊಂದಿರುವ ಲೋಕಸಭಾ ಸ್ಥಾನದ ಶೇ.50ರಷ್ಟು ಸ್ಥಾನವನ್ನು ಹೆಚ್ಚಳ ಮಾಡಲಾಗುವುದು ಎಂದು ಘೋಷಿಸಿದೆ.&amp;nbsp;&lt;/p&gt;&lt;p&gt;ಅಲ್ಲದೆ ಲೋಕಸಭೆಯ ಒಟ್ಟು ಸ್ಥಾನವನ್ನು ಗರಿಷ್ಠ 850ಕ್ಕೆ ಹೆಚ್ಚಿಸಲಾಗುವುದು. ಇದರಲ್ಲಿ 272 ಸ್ಥಾನಗಳ ಮಹಿಳೆಯರಿಗೆ ಮೀಸಲಿರಲಿದೆ. ಮಹಿಳಾ ಮೀಸಲು ಜಾರಿಯಿಂದಾಗಿ ಯಾವುದೇ ಪುರುಷರು ಅಥವಾ ರಾಜ್ಯಗಳಿಗೆ ಅನ್ಯಾಯವಾಗದು ಎಂದು ಭರವಸೆ ನೀಡಿದೆ.&amp;nbsp;&lt;/p&gt;&lt;p&gt;ಗುರುವಾರ ಲೋಕಸಭೆಯಲ್ಲಿ ಮಹಿಳಾ ಮೀಸಲು ಕಲ್ಪಿಸುವ ಮಸೂದೆ ಮಂಡಿಸಿ ಮಾತನಾಡಿದ ಕಾನೂನು ಖಾತೆ ಸಚಿವ ಅರ್ಜುನ್&zwnj; ರಾಂ ಮೇಘ್ವಾಲ್&zwnj;, &lsquo;ನಾರಿಶಕ್ತಿ ವಂದನಾ ಅಧಿನಿಯ, 2023 ಅನ್ನು ಪ್ರಸಕ್ತ ಸ್ವರೂಪದಲ್ಲೇ ಮುಂದುವರೆಸಿದರೆ, ಅದು 2029ರ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ಕಲ್ಪಿಸಲು ಅವಕಾಶ ಮಾಡಿಕೊಡುವುದಿಲ್ಲ. ಕಾರಣ ಈಗಾಗಲೇ ಅಂಗೀಕಾರವಾಗಿರುವ ಮಸೂದೆಯನ್ನು 2026ರ ಜನಗಣತಿ ಆಧಾರದಲ್ಲಿ ಮಾಡಬೇಕಾಗುತ್ತದೆ. ಆದರೆ ಅದರ ಅಂಕಿ ಅಂಶಗಳು ತಕ್ಷಣಕ್ಕೆ ಲಭ್ಯವಿಲ್ಲದ ಕಾರಣ ಮಹಿಳಾ ಮೀಸಲು ಮಸೂದೆಗೆ ತಿದ್ದುಪಡಿ ತರಲಾಗಿದೆ. ಮಸೂದೆಯ ಪ್ರಮುಖ ಉದ್ದೇಶವೇ ಅವರಿಗೆ ಅವರ ಹಕ್ಕುಗಳನ್ನು ದೊರಕಿಸಿಕೊಡುವುದೇ ಆಗಿದೆ&rsquo; ಎಂದು ಹೇಳಿದರು.&amp;nbsp;&lt;/p&gt;&lt;p&gt;ಒಳಮೀಸಲು:ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33ರಷ್ಟು ಮಹಿಳಾ ಮೀಸಲಿನಲ್ಲೇ ಎಸ್&zwnj;ಸಿ ಮತ್ತು ಎಸ್ಟಿ ಸಮುದಾಯದ ಮಹಿಳೆಯರಿಗೆ ಒಳ ಮೀಸಲು ನೀಡಲಾಗುವುದು ಎಂದು ಮೇಘ್ವಾಲ್&zwnj; ತಿಳಿಸಿದ್ದಾರೆ.ಅಮೆರಿಕದಲ್ಲಿ ಪುರುಷರಿಗೆ ಮತದಾನದ ಹಕ್ಕು ಸಿಕ್ಕ 144 ವರ್ಷಗಳ ಬಳಿಕ ಮಹಿಳೆಯರಿಗೆ ಮತದಾನ ಹಕ್ಕು ನೀಡಲಾಗಿತ್ತು. ಬ್ರಿಟನ್&zwnj;ನಲ್ಲಿ ಪುರುಷರಿಗೆ 1918ರಲ್ಲಿ ಮತ್ತು ಮಹಿಳೆಯರಿಗೆ 2028ರಲ್ಲಿ ಮತದಾನದ ಹಕ್ಕು ನೀಡಲಾಗಿತ್ತು. ಆದರೆ ಭಾರತದಲ್ಲಿ ಮೊದಲ ಚುನಾವಣೆಯಿಂದಲೇ ಪುರುಷರ ಜೊತೆಗೆ ಮಹಿಳೆಯರಿಗೂ ಮತದಾನದ ಹಕ್ಕು ಕಲ್ಪಿಸಲಾಗಿತ್ತು ಎಂದು ಮೇಘ್ವಾಲ್&zwnj; ಹೇಳಿದರು.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/no-state-be-it-north-or-south-will-be-discriminated-against-in-delimitation-exercise-pm-in-ls/articleshow-qxwbqwz"/>
        </item>
        <item>
            <title><![CDATA[ಮಹಿಳಾ ಮೀಸಲು ಸೋಲು - ಬಿಜೆಪಿಗೆ ರಾಜಕೀಯ ಅಸ್ತ್ರ]]></title>
            <link>https://www.kannadaprabha.in/india-news/womens-reservation-defeat-is-a-political-weapon-for-bjp/articleshow-tgrtl59</link>
            <guid isPermaLink="true">https://www.kannadaprabha.in/india-news/womens-reservation-defeat-is-a-political-weapon-for-bjp/articleshow-tgrtl59</guid>
            <pubDate>Sat, 18 Apr 2026 01:15:00 +0530</pubDate>
            <description><![CDATA[ಮಹಿಳಾ ಮೀಸಲು ಮಸೂದೆಯ ಸೋಲನ್ನು ಬಿಜೆಪಿ, ಪ್ರತಿಪಕ್ಷಗಳ ವಿರುದ್ಧ ಮುಂಬರುವ 2 ವಿಧಾನಸಭೆ ಚುನಾವಣೆಗಳಲ್ಲಿ ಹಾಗೂ ಮುಂದಿನ ದಿನಗಳಲ್ಲಿ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ.]]></description>
            <media:content url="https://static-assets.asianetnews.com/kp/json/17042026/pictures/17041_PTI04_17_2026_000501B_500.JPG" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;strong&gt;ನವದೆಹಲಿ: &lt;/strong&gt;ಮಹಿಳಾ ಮೀಸಲು ಮಸೂದೆಯ ಸೋಲನ್ನು ಬಿಜೆಪಿ ಹಾಗೂ ಪ್ರತಿಪಕ್ಷಗಳು ಮುಂಬರುವ 2 ವಿಧಾನಸಭೆ ಚುನಾವಣೆಗಳಲ್ಲಿ ಹಾಗೂ ಮುಂದಿನ ದಿನಗಳಲ್ಲಿ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ.&amp;nbsp;&lt;/p&gt;&lt;h2&gt;3ನೇ 2ರಷ್ಟುಬೆಂಬಲ ಇಲ್ಲದ ಕಾರಣ&lt;/h2&gt;&lt;p&gt;&lsquo;ಸಂಸತ್ತಿನಲ್ಲಿ 3ನೇ 2ರಷ್ಟುಬೆಂಬಲ ಇಲ್ಲದ ಕಾರಣ ಬಿಜೆಪಿಗೆ ಈ ಮಸೂದೆ ಜಾರಿಯ ಬಗ್ಗೆ ಅನುಮಾನ ಇತ್ತು. ಆದರೂ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಈ ಮಸೂದೆಯನ್ನು ಮುಂದುವರಿಸಿತು. ಈ ಸೋಲನ್ನು ರಾಜಕೀಯ ಲಾಭಕ್ಕೆ ಬಿಜೆಪಿ ಬಳಸಿಕೊಳ್ಳುವ ಸಾಧ್ಯತೆಯಿದೆ&rsquo; ಎಂಬ ರಾಜಕೀಯ ವಿಶ್ಲೇಷಣೆ​ಗಳು ಕೇಳಿಬರುತ್ತಿವೆ.&lt;/p&gt;&lt;h3&gt;ಅವೈಜ್ಞಾನಿಕವಾಗಿ ಕ್ಷೇತ್ರ ಮರುವಿಂಗಡಣೆ&lt;/h3&gt;&lt;p&gt;ಇನ್ನು ಪ್ರತಿಪಕ್ಷಗಳು ಕೂಡ, &lsquo;ಮಹಿಳಾ ಮೀಸಲು ನೆಪದಲ್ಲಿ ಅವೈಜ್ಞಾನಿಕವಾಗಿ ಕ್ಷೇತ್ರ ಮರುವಿಂಗಡಣೆ ಮಾಡಲು ಕೇಂದ್ರ ಹೊರಟಿತ್ತು. ಅದನ್ನು ನಾವು ತಡೆದಿದ್ದೇವೆ&rsquo; ಎಂದು ಮತದಾರರ ಮುಂದೆ ಪ್ರಮುಖವಾಗಿ ಬಿಂಬಿಸಲು ಯತ್ನಿಸಬಹುದು ಎಂದೂ ಮೂಲಗಳು ಹೇಳಿವೆ.&lt;/p&gt;&lt;p&gt;ಇದೇ ಏ.23ಕ್ಕೆ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯ​ಲಿದೆ. ಇದೇ ವೇಳೆ ಸರ್ಕಾರದ ಮಹತ್ವದ ನಿರ್ಣ​ಯಕ್ಕೆ ಸೋಲಾಗಿರುವುದರಿಂದ ಈ ವಿಷಯ ಪ್ರಮುಖ ಪಾತ್ರ ವಹಿಸಿದೆ. ಡಿಎಂಕೆ, ಟಿಎಂಸಿ ಹಾಗೂ ಕಾಂಗ್ರೆಸ್&zwnj;ಗಳು ಬಿಜೆಪಿ ವಿರುದ್ಧ ಮುಗಿಬಿದ್ದು, ತಮಗೆ ಜಯ ಸಂದಿದೆ ಎಂದು ಹೇಳಲಿವೆ. ಇನ್ನು ಬಿಜೆಪಿ, &lsquo;ವಿಪಕ್ಷಗಳು ಮಹಿಳಾ ವಿರೋಧಿ&rsquo; ಎಂದು ಪ್ರಚಾರ ಮಾಡುವುದು ಪಕ್ಕಾ ಎನ್ನಲಾಗಿದೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/womens-reservation-defeat-is-a-political-weapon-for-bjp/articleshow-tgrtl59"/>
        </item>
        <item>
            <title><![CDATA[ಮೋದಿ ಸರ್ಕಾರದ  ಮೊದಲ ಮಸೂದೆ ಮಹಿಳಾ ಮೀಸಲಿಗೆ ಸೋಲು]]></title>
            <link>https://www.kannadaprabha.in/politics-news/modi-governments-first-bill-for-womens-reservation-fails/articleshow-wrqrn15</link>
            <guid isPermaLink="true">https://www.kannadaprabha.in/politics-news/modi-governments-first-bill-for-womens-reservation-fails/articleshow-wrqrn15</guid>
            <pubDate>Sat, 18 Apr 2026 05:38:31 +0530</pubDate>
            <description><![CDATA[&lt;p&gt;ಇಡೀ ದೇಶದ ಗಮನ ಸೆಳೆದಿದ್ದ, ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33 ಮೀಸಲಾತಿ ನೀಡಲು ಉದ್ದೇಶಿಸಿದ್ದ &lsquo;ಸಂವಿಧಾನ (131ನೇ ತಿದ್ದುಪಡಿ) ಮಸೂದೆ-2026&rsquo; ಲೋಕಸಭೆಯಲ್ಲಿ ಶುಕ್ರವಾರ ಸೋಲು ಕಂಡಿದೆ.&lt;/p&gt;]]></description>
            <media:content url="https://static-gi.asianetnews.com/images/01kpb49rb8hfeakevx8wh4nywt/thumb-20-1776342589800.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ನವದೆಹಲಿ : &amp;nbsp;&lt;/strong&gt;ಇಡೀ ದೇಶದ ಗಮನ ಸೆಳೆದಿದ್ದ, ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.33 ಮೀಸಲಾತಿ ನೀಡಲು ಉದ್ದೇಶಿಸಿದ್ದ &lsquo;ಸಂವಿಧಾನ (131ನೇ ತಿದ್ದುಪಡಿ) ಮಸೂದೆ-2026&rsquo; ಲೋಕಸಭೆಯಲ್ಲಿ ಶುಕ್ರವಾರ ಸೋಲು ಕಂಡಿದೆ. ಈ ಮೂಲಕ 2029ರ ಲೋಕಸಭೆ ಚುನಾವಣೆಯಿಂದ ಶೇ.33 ಮಹಿಳಾ ಮೀಸಲು ಜಾರಿಗೊಳಿಸುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕನಸು ಭಗ್ನವಾಗಿದೆ. ಸಾಂವಿಧಾನಿಕ ತಿದ್ದುಪಡಿ ಆದ ಕಾರಣ ಅಂಗೀಕಾರಕ್ಕೆ ಅಗತ್ಯವಾಗಿದ್ದ ಮೂರನೇ 2ರಷ್ಟು ಬಹುಮತ ಬಾರದೇ ಮಸೂದೆಗೆ 54 ಮತ ಅಂತರದಿಂದ ಸೋಲಾಗಿದೆ.&lt;/p&gt;&lt;p&gt;ಇದರ ಬೆನ್ನಲ್ಲೇ ಲೋಕಸಭಾ ಕ್ಷೇತ್ರಗಳನ್ನು 543ರಿಂದ 850ಕ್ಕೆ ಹೆಚ್ಚಿಸುವ &lsquo;ಕ್ಷೇತ್ರ ಮರುವಿಂಗಡಣೆ ಮಸೂದೆ-2026&rsquo; ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳಾ ಮೀಸಲಾತಿ ಅನುಷ್ಠಾನಕ್ಕೆ ಸಂಬಂಧಿಸಿದ ಕಾನೂನುಗಳನ್ನು ತಿದ್ದುಪಡಿ ಮಾಡುವ &lsquo;ಕೇಂದ್ರಾಡಳಿತ ಪ್ರದೇಶ ಕಾನೂನು (ತಿದ್ದುಪಡಿ) ಮಸೂದೆ -2026&rsquo;ಗಳನ್ನು ಮುಂದುವರಿಸುವುದಿಲ್ಲ ಎಂದು ಸರ್ಕಾರ ಹೇಳಿಕೊಂಡಿದೆ.&lt;/p&gt;&lt;p&gt;ಮಹಿಳಾ ಮೀಸಲು ಮಸೂದೆ ರೀತಿಯಲ್ಲೇ ಇವೂ ಸೋಲು ಕಾಣುವುದು ನಿಚ್ಚಳವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಆದಾಗ್ಯೂ ಶನಿವಾರ ಬೆಳಗ್ಗೆ 11ಕ್ಕೆ ಕಲಾಪದ ಕೊನೆಯ ದಿನ ಆಗಿರುವ ಕಾರಣ ಸರ್ಕಾರ ಏನು ಕ್ರಮ ತೆಗೆದುಕೊಳ್ಳಲಿದೆ ಎಂಬುದು ಕುತೂಹಲ.&lt;/p&gt;&lt;p&gt;ವಿರೋಧ ಪಕ್ಷಗಳು ಮಹಿಳಾ ಮೀಸಲಾತಿಗೆ ಬೆಂಬಲ ವ್ಯಕ್ತಪಡಿಸಿದ್ದರೂ, ಅದನ್ನು ಕ್ಷೇತ್ರ ಮರುವಿಂಗಡಣೆಗೆ ಜೋಡಿಸಿರುವುದನ್ನು ವಿರೋಧಿಸಿದ್ದವು. ಹಾಗಾಗಿ ಮಸೂದೆಯನ್ನು ಪಾಸ್&zwnj; ಮಾಡುವಲ್ಲಿ ಸರ್ಕಾರ ವಿಫಲವಾಗಿದೆ.&lt;/p&gt;&lt;h2&gt;ಆಗಿದ್ದೇನು?:&lt;/h2&gt;&lt;p&gt;543 ಸದಸ್ಯ ಬಲದ ಸದನದಲ್ಲಿ 528 ಸಂಸದರು ಮತದಾನದ ವೇಳೆ ಹಾಜರಿದ್ದರು. ಆಗ ಸಂವಿಧಾನದ 131ನೇ ತಿದ್ದುಪಡಿ (2023ರ ನಾರಿ ಶಕ್ತಿ ವಂದನ ಅಧಿನಿಯಮ ಮಹಿಳಾ ಮೀಸಲು ತಿದ್ದುಪಡಿ) ಮಸೂದೆಯನ್ನು ಬೆಂಬಲಿಸಿ 298 ಸದಸ್ಯರು ಮತ ಚಲಾಯಿಸಿದರೆ, ವಿರುದ್ಧವಾಗಿ 230 ಸಂಸದರು ಮತ ಚಲಾಯಿಸಿದರು. ಮತ ಚಲಾಯಿಸಿದ 528 ಸದಸ್ಯರಲ್ಲಿ, ಮಸೂದೆಗೆ ಮೂರನೇ ಎರಡರಷ್ಟು ಬಹುಮತಕ್ಕೆ 352 ಮತಗಳು ಬೇಕಾಗಿದ್ದವು. ಹೀಗಾಗಿ ಅಷ್ಟೊಂದು ಮತ ಸಿಗದೇ ವಿಧೇಯಕಕ್ಕೆ ಸೋಲಾಯಿತು.&lt;/p&gt;&lt;p&gt;ಬಳಿಕ ಕೇಂದ್ರ ಸಂಸದೀಯ ಸಚಿವ ಕಿರಣ್ ರಿಜಿಜು ಅವರು, &lsquo;ಇತರ ಎರಡು ಶಾಸನಗಳಾದ ಡಿಲಿಮಿಟೇಶನ್ ಬಿಲ್, 2026 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಬಿಲ್, 2026 ಅನ್ನು ಮುಂದುವರಿಸಬೇಡಿ&rsquo; ಎಂದು ಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ಕೋರಿದರು.&lt;/p&gt;&lt;p&gt;ಬಳಿಕ ಓಂ ಬಿರ್ಲಾ ಅವರು ಕಲಾಪವನ್ನು ಶನಿವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿದರು. ಹೀಗಾಗಿ ಈ ವೇಳೆ ಸರ್ಕಾರ ಏನು ಮಾಡಲಿದೆ ಎಂಬುದೇ ಪ್ರಶ್ನೆಯಾಗಿದೆ. ಮಸೂದೆಗೆ ಸಂಸತ್ತಿನ ಅನುಮೋದನೆ ಪಡೆಯಲು ಏಪ್ರಿಲ್ 16 ರಿಂದ 18 ರವರೆಗೆ ಮೂರು ದಿನಗಳ ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. ಶನಿವಾರ ಕಲಾಪದ ಕೊನೆಯ ದಿನ.&lt;/p&gt;&lt;h3&gt;ಸರ್ಕಾರದ ಉದ್ದೇಶ ಏನಿತ್ತು?:&lt;/h3&gt;&lt;p&gt;ಸರ್ಕಾರ 131ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯ ಮೂಲಕ 2023ರ ಮಹಿಳಾ ಮೀಸಲಾತಿ ಕಾಯಿದೆಯನ್ನು ಬದಲಾಯಿಸಿ, 2029ರ ಲೋಕಸಭಾ ಚುನಾವಣೆಯಿಂದಲೇ ಶೇ.33 ಮಹಿಳಾ ಮೀಸಲಾತಿ ಜಾರಿಗೆ ತರಲು ಯೋಜಿಸಿತ್ತು. ಇನ್ನು ಕ್ಷೇತ್ರ ಮರುವಿಂಗಡಣೆ ಮಸೂದೆಯು ಲೋಕಸಭೆಯ ಸೀಟುಗಳನ್ನು 543ರಿಂದ 850ಕ್ಕೆ ಹೆಚ್ಚಿಸುವ ಇರಾದೆ ಹೊಂದಿತ್ತು.&lt;/p&gt;&lt;p&gt;&lt;strong&gt;ಸೋಲುವ ಅನುಮಾನ ಇತ್ತು:&lt;/strong&gt;&lt;/p&gt;&lt;p&gt;ಸರ್ಕಾರಕ್ಕೆ ಈ ಸೋಲು ಪೂರ್ಣವಾಗಿ ಅಂದಾಜಿತ್ತು. ಎನ್&zwnj;ಡಿಎ ಬಳಿ ಸುಮಾರು 293 ಸಂಸದರಿದ್ದರೂ, ಸಂವಿಧಾನ ತಿದ್ದುಪಡಿ ಮಸೂದೆಗೆ ಬೇಕಾದ 2/3ರಷ್ಟು ಬಹುಮತ (ಸುಮಾರು 360 ಮತಗಳು) ಸಿಗುವುದು ಕಷ್ಟ ಎಂದು ಸರ್ಕಾರಕ್ಕೆ ಗೊತ್ತಿತ್ತು. ವಿರೋಧ ಪಕ್ಷಗಳು ಕ್ಷೇತ್ರ ಮರುವಿಂಗಡಣೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದುದರಿಂದ ಮಸೂದೆ ಸೋಲುತ್ತದೆ ಎಂದು ಮುಂಚಿತವಾಗಿಯೇ ಲೆಕ್ಕ ಹಾಕಲಾಗಿತ್ತು. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಅನೇಕ ಪ್ರಮುಖರು ಅನೇಕ ಬಾರಿ ಮನವಿ ಮಾಡಿ ವಿಪಕ್ಷಗಳ ಮನವೊಲಿಸಲು ಯತ್ನಿಸಿದ್ದರು.&lt;/p&gt;&lt;p&gt;&lt;strong&gt;ಸಂಸತ್ತಿನಲ್ಲಿ ಸೋಲು!&lt;/strong&gt;&lt;/p&gt;&lt;p&gt;ಮಹಿಳಾ ಮೀಸಲು ಮಸೂದೆಗೆ 3ನೇ 2ರಷ್ಟು ಬಹುಮತ ಬಾರದ ಕಾರಣ ಲೋಕಸಭೆಯಲ್ಲಿ ಸೋಲಾಗಿದೆ. ಮೋದಿ ಸರ್ಕಾರದ ಅವಧಿಯಲ್ಲಿ ಮಸೂದೆಯೊಂದು ಸಂಸತ್ತಿನಲ್ಲಿ ಸೋಲನುಭವಿಸಿದ್ದು ಇದೇ ಮೊದಲು.&lt;/p&gt;&lt;p&gt;&lt;strong&gt;ಇದು ನಮ್ಮ ಗೆಲುವು: ವಿಪಕ್ಷಗಳ ಸಂಭ್ರಮ&lt;/strong&gt;&lt;/p&gt;&lt;p&gt;ನವದೆಹಲಿ: ಸಂಸತ್&zwnj;ನಲ್ಲಿ ಬಹು ನಿರೀಕ್ಷಿತ ಮಹಿಳಾ ಮೀಸಲಾತಿಗೆ ಸೋಲಾಗಿರುವುದನ್ನು ವಿಪಕ್ಷಗಳು ಸಂಭ್ರಮಿಸಿವೆ. ಲೋಕಸಭಾ ವಿಪಕ್ಷ ನಾಯಕ ರಾಹುಲ್&zwnj; ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್&zwnj; ಸೇರಿ ಹಲವರು ಇದಕ್ಕೆ ಸಂತಸ ವ್ಯಕ್ತಪಡಿಸಿದ್ದು &lsquo;ಇದು ವಿಪಕ್ಷಗಳಿಗೆ ಸಂದ ಜಯ&rsquo; ಎಂದಿದ್ದಾರೆ.&lt;/p&gt;&lt;p&gt;ಇದು ನಮ್ಮ ಗೆಲುವು: ಪ್ರತಿಪಕ್ಷಗಳ ವಿರುದ್ಧ ಬಿಜೆಪಿಗರ ಪ್ರತಿಭಟನೆ&lt;/p&gt;&lt;p&gt;ನವದೆಹಲಿ: ಲೋಕಸಭೆಯಲ್ಲಿ ಮಹಿಳಾ ಮೀಸಲು ಮಸೂದೆಗೆ ಸೋಲುಂಟಾದ ಬೆನ್ನಲ್ಲೇ ಎನ್&zwnj;ಡಿಎ ಸಂಸದರು ಸಂಸತ್&zwnj;ನ ಹೊರಗೆ ಮತ್ತು ಸದನದ ಒಳಗೆ ತೀವ್ರ ಪ್ರತಿಭಟನೆ ನಡೆಸಿದರು. ಬಿಜೆಪಿ ಮಹಿಳಾ ಸಂಸದರು &lsquo;ವಿಪಕ್ಷಗಳು ಮಹಿಳೆಯರನ್ನು ಮತ್ತೆ ವಂಚಿಸಿವೆ&rsquo;, &lsquo;ನಾವು ಮಹಿಳೆಯರ ಹಕ್ಕಿಗಾಗಿ ಹೋರಾಡುತ್ತೇವೆ&rsquo; ಎಂಬ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆಯಲ್ಲಿ ಭಾಗವಹಿಸಿದರು.&lt;/p&gt;&lt;p&gt;ಕಾಂಗ್ರಸ್&zwnj; ಬಿಡಲಿಲ್ಲ&lt;/p&gt;&lt;p&gt;ಮಹಿಳಾ ಮೀಸಲು ಮಸೂದೆ ಅಂಗೀಕರಿಸಲು ಕಾಂಗ್ರೆಸ್&zwnj;, ಅದರ ಮಿತ್ರರು ಬಿಡಲಿಲ್ಲ. ಅವರು ಹೀಗೆ ಮಾಡುತ್ತಿರುವುದು ಇದೇ ಮೊದಲಲ್ಲ. ಹಲವು ಬಾರಿ ಮಾಡಿವೆ. ಅವರ ಮನಸ್ಥಿತಿ ಮಹಿಳೆಯರ ಪರವಾಗಿಯೂ ಇಲ್ಲ, ದೇಶದ ಪರವಾಗಿಯೂ ಇಲ್ಲ.&lt;/p&gt;&lt;p&gt;- ಅಮಿತ್&zwnj; ಶಾ ಕೇಂದ್ರ ಗೃಹ ಸಚಿವ&lt;/p&gt;&lt;p&gt;&lt;strong&gt;ಬಿಜೆಪಿಗೆ ಸಿಕ್ತು ಪ್ರಬಲ ಅಸ್ತ್ರ&lt;/strong&gt;&lt;/p&gt;&lt;p&gt;ನವದೆಹಲಿ: ಮಹಿಳಾ ಮೀಸಲು ಮಸೂದೆಯ ಸೋಲನ್ನು ಬಿಜೆಪಿಯು ಪ್ರತಿಪಕ್ಷಗಳ ವಿರುದ್ಧ ಮುಂಬರುವ 2 ವಿಧಾನಸಭೆ ಚುನಾವಣೆಗಳಲ್ಲಿ ಹಾಗೂ ಮುಂದಿನ ದಿನಗಳಲ್ಲಿ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಇದೇ ಏ.23ಕ್ಕೆ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯಲಿದೆ.&lt;/p&gt;&lt;p&gt;&lt;strong&gt;ಮಸೂದೆಗೆ ಸೋಲಾಗಿದ್ದು ಹೇಗೆ?&lt;/strong&gt;&lt;/p&gt;&lt;p&gt;- ಇದು ಸಾಂವಿಧಾನಿಕ ತಿದ್ದುಪಡಿ ಮಸೂದೆ. ಸರಳ ಬಹುಮತದ ಬದಲು 3ನೇ ಎರಡರಷ್ಟು ಬಹುಮತದೊಂದಿಗೆ ಅಂಗೀಕರಿಸಬೇಕು&lt;/p&gt;&lt;p&gt;- ಬಿಜೆಪಿ ನೇತೃತ್ವದ ಎನ್&zwnj;ಡಿಎಗೆ ಲೋಕಸಭೆಯಲ್ಲಿ ಅಷ್ಟು ಬಹುಮತವಿರಲಿಲ್ಲ. ಅನಿರೀಕ್ಷಿತ ಘಟನೆ ನಡೆಯಲಿಲ್ಲ. ಹೀಗಾಗಿ ಸೋಲು&lt;/p&gt;&lt;p&gt;ವಿಪಕ್ಷಗಳು ಮಣಿಸಿದ್ದೇಕೆ?&lt;/p&gt;&lt;p&gt;- ಮಹಿಳಾ ಮೀಸಲಾತಿಗೆ ಪ್ರತಿಪಕ್ಷಗಳ ವಿರೋಧ ಇರಲಿಲ್ಲ. ಮೀಸಲು ಜತೆ ಲೋಕಸಭೆ ಕ್ಷೇತ್ರ ಹೆಚ್ಚಳಕ್ಕೆ ತೀವ್ರ ಆಕ್ಷೇಪ ಇತ್ತು&lt;/p&gt;&lt;p&gt;- ಲೋಕಸಭಾ ಕ್ಷೇತ್ರಗಳನ್ನು ಹೆಚ್ಚಳ ಮಾಡುವ ಉದ್ದೇಶದಿಂದ ಮಹಿಳಾ ಮೀಸಲು ತರುತ್ತಿದೆ ಎಂಬುದು ಅವುಗಳ ಆರೋಪ&lt;/p&gt;&lt;p&gt;- 543 ಸದಸ್ಯ ಬಲದ ಲೋಕಸಭೆಯಲ್ಲೇ ಮಹಿಳಾ ಮೀಸಲಿಗೆ ಪಟ್ಟು. ಸರ್ಕಾರ ಒಪ್ಪದ ಕಾರಣ ಮಸೂದೆ ವಿರುದ್ಧ ಮತ&amp;nbsp;&lt;/p&gt;]]></content:encoded>
            <category>India</category>
            <dc:creator>Sujatha NR</dc:creator>
            <atom:link href="https://www.kannadaprabha.in/politics-news/modi-governments-first-bill-for-womens-reservation-fails/articleshow-wrqrn15"/>
        </item>
        <item>
            <title><![CDATA[10,000ಕ್ಕಿಂತ ಹೆಚ್ಚಿನ ಯುಪಿಐ ಪಾವತಿಗೆ ಇನ್ನು 1 ಗಂಟೆ ಕಾಯುವ ನಿಯಮ ಕಡ್ಡಾಯ?]]></title>
            <link>https://www.kannadaprabha.in/india-news/will-the-1-hour-waiting-period-be-mandatory-for-upi-payments-above-rs-10-000/articleshow-xmeuile</link>
            <guid isPermaLink="true">https://www.kannadaprabha.in/india-news/will-the-1-hour-waiting-period-be-mandatory-for-upi-payments-above-rs-10-000/articleshow-xmeuile</guid>
            <pubDate>Sat, 18 Apr 2026 03:00:00 +0530</pubDate>
            <description><![CDATA[ಡಿಜಿಟಲ್&zwnj; ಪಾವತಿ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತದ ಯುಪಿಐ ಪೇಮೆಂಟ್&zwnj; ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಇದೀಗ ರಿಸರ್ವ್&zwnj; ಬ್ಯಾಂಕ್&zwnj; ಆಫ್&zwnj; ಇಂಡಿಯಾ (ಆರ್&zwnj;ಬಿಐ) ಮುಂದಾಗಿದೆ.]]></description>
            <media:content url="https://static-assets.asianetnews.com/kp/json/17042026/pictures/UPI_563.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ:&lt;/strong&gt; ಡಿಜಿಟಲ್&zwnj; ಪಾವತಿ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತದ ಯುಪಿಐ ಪೇಮೆಂಟ್&zwnj; ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಇದೀಗ ರಿಸರ್ವ್&zwnj; ಬ್ಯಾಂಕ್&zwnj; ಆಫ್&zwnj; ಇಂಡಿಯಾ (ಆರ್&zwnj;ಬಿಐ) ಮುಂದಾಗಿದೆ.&lt;/p&gt;&lt;p&gt;₹10,000ಗಿಂತ ಹೆಚ್ಚಿನ ಮೌಲ್ಯದ ವರ್ಗಾವಣೆಗಳಿಗೆ ತಕ್ಷಣ ಹಣ ಕಡಿತವಾಗುವ ಬದಲು ಒಂದು ಗಂಟೆವರೆಗೆ ಆ ಹಣವನ್ನು ಬ್ಯಾಂಕ್&zwnj;ಗಳು ಹಿಡಿದಿಟ್ಟುಕೊಳ್ಳುವ ವ್ಯವಸ್ಥೆ ಜಾರಿಗೆ ಮುಂದಾಗಿದೆ.&lt;/p&gt;&lt;h2&gt;&lt;strong&gt;ಹೇಗೆ ಕಾರ್ಯ ನಿರ್ವಹಣೆ?:&lt;/strong&gt;&lt;/h2&gt;&lt;p&gt;ಆರ್&zwnj;ಬಿಐ ಪ್ರಸ್ತಾಪಿಸಿರುವ ಈ ನಿಯಮದ ಪ್ರಕಾರ ₹10 ಸಾವಿರಕ್ಕಿಂತ ಹೆಚ್ಚಿನ ಮೌಲ್ಯದ ಹಣ ಯಾರ ಖಾತೆಗೆ ವರ್ಗಾವಣೆ ಮಾಡಲು ಉದ್ದೇಶಿಸಲಾಗಿತ್ತೋ ಅವರ ಖಾತೆಗೆ ತಕ್ಷಣ ಪಾವತಿ ಆಗುವುದಿಲ್ಲ. ಒಂದು ಗಂಟೆ ಕಾಲ ಬ್ಯಾಂಕ್&zwnj; ಆ ಹಣವನ್ನು ಹಿಡಿದಿಟ್ಟುಕೊಳ್ಳುತ್ತದೆ, ಬಳಿಕ ಬಿಡುಗಡೆ ಮಾಡುತ್ತದೆ. ಈ ಅವಧಿಯಲ್ಲಿ ತಪ್ಪಾಗಿ ಅಥವಾ ಗೊತ್ತಿಲ್ಲದೆ ಹಣ ವರ್ಗಾವಣೆಯಾಗಿದ್ದರೆ ಈ ಪಾವತಿಯನ್ನು ರದ್ದು ಮಾಡಲು ಗ್ರಾಹಕರಿಗೆ ಅವಕಾಶ ಸಿಗುತ್ತದೆ.&lt;/p&gt;&lt;h3&gt;&lt;strong&gt;ಯಾಕೆ ಈ ನಿರ್ಧಾರ?&lt;/strong&gt;&lt;/h3&gt;&lt;p&gt;ಕಳೆದ ವರ್ಷ ಭಾರತದಲ್ಲಿ 22,931 ಕೋಟಿ ರು. ಡಿಜಿಟಲ್&zwnj; ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ಜತೆಗೆ, ದೇಶದಲ್ಲಿ 10 ಸಾವಿರಕ್ಕಿಂತ ರು.ಗಿಂತ ಮೇಲಿನ ಹಣ ವರ್ಗಾವಣೆ ಪ್ರಕರಣಗಳಲ್ಲಿ ಹೆಚ್ಚಿನ ವಂಚನೆ, ತಪ್ಪಾಗಿ ಹಣ ವರ್ಗಾವಣೆ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಆರ್&zwnj;ಬಿಐ ಇಂಥದ್ದೊಂದು ಪ್ರಸ್ತಾಪ ಮುಂದಿಟ್ಟಿದೆ. ಇದರಿಂದ ತಕ್ಷಣಕ್ಕೆ ಬಳಕೆದಾರರಿಗೆ ಕಿರಿಕಿರಿಯೆನಿಸಿದರೂ ದೀರ್ಘಕಾಲದಲ್ಲಿ ಅನಾನುಕೂಲಕ್ಕಿಂತ ಅನುಕೂಲವೇ ಹೆಚ್ಚು ಎಂದು ಹೇಳಲಾಗುತ್ತಿದೆ. ಅಕ್ರಮಗಳಿಗೆ ಕಡಿವಾಣ ಹಾಕಲು ಇದು ಮಹತ್ವದ ಪಾತ್ರವಹಿಸಲಿದೆ ಎಂಬುದು ತಜ್ಞರ ಅಭಿಪ್ರಾಯ.&lt;/p&gt;&lt;p&gt;&lt;strong&gt;ನಿತ್ಯದ ಪಾವತಿಗಳ ಮೇಲೆ ಪರಿಣಾಮ ಇಲ್ಲ?&amp;nbsp;&lt;/strong&gt;&lt;/p&gt;&lt;p&gt;ಅಂಗಡಿಗಳಲ್ಲಿ ಖರೀದಿಯ ಮೇಲಿನ ಪಾವತಿಗಳು, ಇಎಂಐಗಳು, ಮ್ಯೂಚುವಲ್&zwnj; ಫಂಡ್&zwnj; ಎಸ್&zwnj;ಐಪಿ, ಎಲ್&zwnj;ಐಸಿ ಪ್ರೀಮಿಯಂ ಕಡಿತಗಳು, ಸಬ್&zwnj;ಸ್ಕ್ರಿಪ್ಷನ್&zwnj;ಗಳ ಮೇಲೆ ಈ ಹೊಸ ನಿಯಮದಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ. ಇದಕ್ಕಾಗಿ ಬಳಕೆದಾರರು ನಿರ್ದಿಷ್ಟ ವ್ಯಕ್ತಿಗಳ ಪಟ್ಟಿ ಮಾಡುವ ಮೂಲಕ ಆ ವ್ಯಕ್ತಿಗಳಿಗೆ ಯಾವುದೇ ಅಡೆತಡೆ ಇಲ್ಲದೆ ಹಣದ ವರ್ಗಾವಣೆಯಾಗುವಂತೆ ನೋಡಿಕೊಳ್ಳಬಹುದಾಗಿದೆ. ಅನುಮಾನಾಸ್ಪದ ಹಾಗೂ ಹೊಸ ವರ್ಗಾವಣೆಗಳಿಗೆ ಇದು ಅನ್ವಯವಾಗಲಿದೆ ಎಂದು ಹೇಳಲಾಗಿದೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/will-the-1-hour-waiting-period-be-mandatory-for-upi-payments-above-rs-10-000/articleshow-xmeuile"/>
        </item>
    </channel>
</rss>
