<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Kannada Prabha</title>
        <link>https://www.kannadaprabha.in</link>
        <description><![CDATA[Kannada Prabha - No.1 News channel in Karnataka, which delivers Local and International news in Marathi language.]]></description>
        <image>
            <url>https://static-assets.asianetnews.com/images/ogimages/OG_Bangla.jpg</url>
            <width>143</width>
            <height>100</height>
            <link>https://www.kannadaprabha.in</link>
            <title>Kannada Prabha</title>
        </image>
        <lastBuildDate>Sun, 19 Jul 2026 07:11:00 +0530</lastBuildDate>
        <atom:link href="https://www.kannadaprabha.in/rss/india-news" rel="self" type="application/rss+xml"/>
        <item>
            <title><![CDATA[ಅಯೋಧ್ಯೆ ಹುಂಡಿ ಕಳವು ಪತ್ತೆಮಾಡಿದ್ದು ಸೆಕ್ಯುರಿಟಿ ಗಾರ್ಡ್‌ !]]></title>
            <link>https://www.kannadaprabha.in/india-news/heft-of-money-from-the-donation-box-at-the-ayodhya-ram-mandir-was-discovered-after-a-security-guard-found-in-a-restroom/articleshow-188r6tv</link>
            <guid isPermaLink="true">https://www.kannadaprabha.in/india-news/heft-of-money-from-the-donation-box-at-the-ayodhya-ram-mandir-was-discovered-after-a-security-guard-found-in-a-restroom/articleshow-188r6tv</guid>
            <pubDate>Sat, 18 Jul 2026 05:18:04 +0530</pubDate>
            <description><![CDATA[: ಅಯೋಧ್ಯೆ ರಾಮಮಂದಿರದಲ್ಲಿನ ಹುಂಡಿ ಹಣ ಕಳವು ಪ್ರಕರಣ ಬೆಳಕಿಗೆ ಬಂದಿದ್ದು ದೇಗುಲದ ಭದ್ರತಾ ಸಿಬ್ಬಂದಿಯೊಬ್ಬರಿಗೆ ಶೌಚಾಲಯದಲ್ಲಿ ಸಿಕ್ಕ 40000 ರು. ಹಣದಿಂದ ಎಂಬ ವಿಷಯ ಬೆಳಕಿಗೆ ಬಂದಿದೆ.]]></description>
            <media:content url="https://static-assets.asianetnews.com/kp/json/17072026/pictures/RAM_MANDIR_901.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಯೋಧ್ಯೆ: &lt;/strong&gt;ಅಯೋಧ್ಯೆ ರಾಮಮಂದಿರದಲ್ಲಿನ ಹುಂಡಿ ಹಣ ಕಳವು ಪ್ರಕರಣ ಬೆಳಕಿಗೆ ಬಂದಿದ್ದು ದೇಗುಲದ ಭದ್ರತಾ ಸಿಬ್ಬಂದಿಯೊಬ್ಬರಿಗೆ ಶೌಚಾಲಯದಲ್ಲಿ ಸಿಕ್ಕ 40000 ರು. ಹಣದಿಂದ ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಹಣ ಪತ್ತೆಯಾದ ಬೆನ್ನಲ್ಲೇ ದೇಗುಲದ ಆಡಳಿತ ಮಂಡಳಿ ಅಲರ್ಟ್&zwnj; ಆದ ಕಾರಣ ಕಳ್ಳತನವಾಗಿದ್ದ 80 ಲಕ್ಷ ರು. ಹಣವನ್ನು ಪೊಲೀಸರ ಮುಖಾಂತರ ಕೇವಲ 17 ಗಂಟೆಗಳ ಅವಧಿಯಲ್ಲಿ ವಶಪಡಿಸಿಕೊಳ್ಳಲಾಗಿತ್ತು ಎಂದು ವರದಿಗಳು ತಿಳಿಸಿವೆ.&lt;/p&gt;&lt;p&gt;ಮೇ ತಿಂಗಳ ಕೊನೆಯ ವಾರ ದೇಗುಲದ ಶೌಚಾಲಯದಲ್ಲಿ ನೋಟುಗಳ ಕಂತೆ ಅಡಗಿಸಿಟ್ಟಿರುವುದು ಗಾರ್ಡ್&zwnj; ಕಣ್ಣಿಗೆ ಬಿತ್ತು. ತಕ್ಷಣ ಗಾರ್ಡ್&zwnj; ಈ ಕುರಿತು ದೇಗುಲದ ಟ್ರಸ್ಟ್&zwnj; ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಟ್ರಸ್ಟ್&zwnj; ಅಧಿಕಾರಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾಥಮಿಕ ಆಂತರಿಕ ತನಿಖೆ ನಡೆಸಿದ್ದು, ತರುವಾಯ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.&lt;/p&gt;&lt;p&gt;ಪೊಲೀಸರು ದೇಗುಲದ ದೇಣಿಗೆ ಕೌಂಟರ್&zwnj;ನ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ ಬಳಿಕ ಹಲವೆಡೆ ದಾ&zwj;&zwj;ಳಿ ನಡೆಸಿದರು. ಅಯೋಧ್ಯೆ ಮತ್ತು ಉತ್ತರಪ್ರದೇಶದ ಹಲವೆಡೆ ಪೊಲೀಸರು 80 ಲಕ್ಷ ರು.ಗಳನ್ನು ವಶಕ್ಕೆ ಪಡೆದರು. ಜತೆಗೆ ಎಂಟು ಮಂದಿ ಆರೋಪಿಗಳನ್ನೂ ಬಂಧಿಸಿದ್ದು, ಅವರು ನೀಡಿದ ಮಾಹಿತಿ ಆಧರಿಸಿ ಇನ್ನಷ್ಟು ಆಭರಣಗಳು, ಹಣವನ್ನು ವಶಕ್ಕೆ ಪಡೆಯಲಾಯಿತು.&lt;/p&gt;&lt;p&gt;ಈ ವೇಳೆ ಟ್ರಸ್ಟ್ ಕೂಡ 21 ಮಂದಿಯ ತಂಡವನ್ನು ರಚಿಸಿ ಡೊನೇಷನ್&zwnj; ಕೌಂಟರ್&zwnj;ನ ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸಿತು. ಪೊಲೀಸರ ಜತೆಗೂ ಸಮನ್ವಯ ಸಾಧಿಸಿ ತನಿಖೆಗೆ ಸಹಕರಿಸಿತು. ಇದಾದ ನಂತರವೇ ಪೊಲೀಸರು ಅಧಿಕೃತವಾಗಿ ಕ್ರಿಮಿನಲ್&zwnj; ತನಿಖೆ ಆರಂಭಿಸಿದರು. ಆ ಬಳಿಕ ಪ್ರಕರಣದ ತನಿಖೆಯನ್ನು ಎಸ್&zwnj;ಐಟಿ ವಹಿಸಿಕೊಂಡಿತು.&lt;/p&gt;&lt;h2&gt;&lt;strong&gt;&amp;nbsp;ಅಯೋಧ್ಯೆ ಹುಂಡಿ ಹಣ ಲೂಟಿ: ನಾಡಿದ್ದು ಮಧ್ಯಂತರ ವರದಿ&lt;/strong&gt;&lt;/h2&gt;&lt;p&gt;ಲಖನೌ: ಅಯೋಧ್ಯೆ ರಾಮಮಂದಿರದ ಹುಂಡಿ ಲೂಟಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್&zwnj;ಐಟಿ) ಸೋಮವಾರ ಸುಪ್ರೀಂಕೋರ್ಟ್&zwnj;ಗೆ ತನ್ನ ಮಧ್ಯಂತರ ವರದಿ ಸಲ್ಲಿಸುವ ಸಾಧ್ಯತೆಯಿದೆ. ದೇಣಿಗೆ ಲೂಟಿ ಪ್ರಕರಣದ ಸಿಬಿಐ ತನಿಖೆ ಕೋರಿ ಸುಪ್ರೀಂ ಕೋರ್ಟ್&zwnj;ಗೆ ಅರ್ಜಿ ಸಲ್ಲಿಕೆಯಾಗಿತ್ತು. ಇದರ ವಿಚಾರಣೆ ವೇಳೆ ನ್ಯಾಯಾಲಯ ವಸ್ತು ಸ್ಥಿತಿ ವರದಿ ಕೇಳಿತ್ತು. ಅದನ್ನೀಗ ನೀಡಲು ಎಸ್&zwnj;ಐಟಿ ಮುಂದಾಗಿದೆ. ಮತ್ತೊಂದೆಡೆ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾ ತಂಡವು, ತನಿಖೆಗೆ ಇನ್ನಷ್ಟು ಸಮಯ ಕೋರಿ ಉತ್ತರಪ್ರದೇಶ ಸರ್ಕಾರಕ್ಕೆ ಮನವಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.&lt;/p&gt;&lt;h3&gt;ದೇಗುಲ ಶುದ್ಧೀಕರಣ&lt;/h3&gt;&lt;p&gt;ಅಯೋಧ್ಯೆ: ರಾಮ ಮಂದಿರದಲ್ಲಿ ನಡೆದ ಇತ್ತೀಚಿನ ದೇಣಿಗೆ ವಿವಾದಗಳ ನಡುವೆ ದೇವಸ್ಥಾನ ಮಂಡಳಿಯು ಪ್ರಾಯಃಶ್ಚಿತದ ಭಾಗವಾಗಿ 10 ದಿನಗಳ ಕಾಲ ದೇವಸ್ಥಾನದ ಶುದ್ಧೀಕರಣ ಕಾರ್ಯ ಕೈಗೊಂಡಿದೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/heft-of-money-from-the-donation-box-at-the-ayodhya-ram-mandir-was-discovered-after-a-security-guard-found-in-a-restroom/articleshow-188r6tv"/>
        </item>
        <item>
            <title><![CDATA[1 ವರ್ಷದಲ್ಲೇ ಇಸ್ರೋಗೆ 120  ವಿಜ್ಞಾನಿಗಳಿಂದ ರಾಜೀನಾಮೆ!]]></title>
            <link>https://www.kannadaprabha.in/karnataka-news/mysore-news/120-scientists-quit-isro-in-just-one-year/articleshow-20bl2dq</link>
            <guid isPermaLink="true">https://www.kannadaprabha.in/karnataka-news/mysore-news/120-scientists-quit-isro-in-just-one-year/articleshow-20bl2dq</guid>
            <pubDate>Fri, 17 Jul 2026 08:08:08 +0530</pubDate>
            <description><![CDATA[&lt;p&gt;ಭಾರತವು ಮಾನವಸಹಿತ ಬಾಹ್ಯಾಕಾಶ ಯೋಜನೆಗೆ ಸಜ್ಜಾಗುತ್ತಿರುವ ಹೊತ್ತಿನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ (ಇಸ್ರೋ) ಕಳೆದ 1 ವರ್ಷದಲ್ಲಿ 100ರಿಂದ 120 ಹಿರಿಯ ವಿಜ್ಞಾನಿಗಳು ಹಾಗೂ ತಂತ್ರಜ್ಞರು ರಾಜೀನಾಮೆ ಮತ್ತು ವಿಆರ್&zwnj;ಎಸ್ (ಸ್ವಯಂಪ್ರೇರಿತ ನಿವೃತ್ತಿ) ಪಡೆದಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/01jxqahekwqzbgrcpw1y2jcea5/1567851651557-1749908241020.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ&lt;/strong&gt;: ಭಾರತವು ಮಾನವಸಹಿತ ಬಾಹ್ಯಾಕಾಶ ಯೋಜನೆಗೆ ಸಜ್ಜಾಗುತ್ತಿರುವ ಹೊತ್ತಿನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ (ಇಸ್ರೋ) ಕಳೆದ 1 ವರ್ಷದಲ್ಲಿ 100ರಿಂದ 120 ಹಿರಿಯ ವಿಜ್ಞಾನಿಗಳು ಹಾಗೂ ತಂತ್ರಜ್ಞರು ರಾಜೀನಾಮೆ ಮತ್ತು ವಿಆರ್&zwnj;ಎಸ್ (ಸ್ವಯಂಪ್ರೇರಿತ ನಿವೃತ್ತಿ) ಪಡೆದಿದ್ದಾರೆ. ಇದರಿಂದ ಮಹತ್ವದ ಯೋಜನೆಗಳಿಗೆ ಹಿನ್ನಡೆ ಆಗಿದ್ದು, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ರಾಜೀನಾಮೆ/ವಿಆರ್&zwnj;ಎಸ್ ನಿಯಮ ಬಿಗಿಗೊಳಿಸಿದೆ.&lt;/p&gt;&lt;p&gt;ಇಸ್ರೋಗೆ ಪ್ರತಿಭಾ ಪಲಾಯನ ಹೊಸ ವಿಚಾರವೇನಲ್ಲ. ಆದರೆ, ರಾಷ್ಟ್ರೀಯ ಮಹತ್ವದ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ವಿಜ್ಞಾನಿಗಳು ಹಾಗೂ ಅನುಭವಿ ತಜ್ಞರ ರಾಜೀನಾಮೆ ಆ ಯೋಜನೆಗಳಿಗೆ ಹಿನ್ನಡೆ ಸೃಷ್ಟಿಸುತ್ತಿದೆ. ಅವರ ಜಾಗಕ್ಕೆ ತಕ್ಷಣ ಬದಲಿ ವ್ಯವಸ್ಥೆ ಮಾಡುವುದು ಅಷ್ಟು ಸುಲಭವೂ ಅಲ್ಲ. ಹೀಗಾಗಿ ಇಸ್ರೋಗೆ ಈಗ ದಿಢೀರ್&zwnj; ಪ್ರತಿಭಾ ಪಲಾಯನದಿಂದಾಗಿ ಸಮಸ್ಯೆ ಉಂಟಾಗುತ್ತಿದೆ ಎಂದು ವರದಿಯಾಗಿದೆ.&lt;/p&gt;&lt;h2&gt;&lt;strong&gt;ಏಕೆ ರಾಜೀನಾಮೆ?:&lt;/strong&gt;&lt;/h2&gt;&lt;p&gt;ದೇಶದ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಹಿರಿಯ ವಿಜ್ಞಾನಿಗಳು ಹಾಗೂ ತಂತ್ರಜ್ಞರು ಖಾಸಗಿ ಕಂಪನಿಗಳತ್ತ ಮುಖ ಮಾಡುತ್ತಿದ್ದಾರೆ. ಹಲವು ಸ್ಟಾರ್ಟಪ್&zwnj;ಗಳು ಮತ್ತು ಖಾಸಗಿ ಕಂಪನಿಗಳು ಇಸ್ರೋದ ಅನುಭವಿ ವಿಜ್ಞಾನಿಗಳು ಹಾಗೂ ತಂತ್ರಜ್ಞರನ್ನು ಸೆಳೆಯಲು ಹೆಚ್ಚಿನ ಒಲವು ತೋರುತ್ತಿವೆ. ಜತೆಗೆ, ನಾಯಕತ್ವ, ಆಡಳಿತಾತ್ಮಕ ವಿಚಾರಗಳು, ಉದ್ಯೋಗದಲ್ಲಿನ ಬೆಳವಣಿಗೆ ಮತ್ತಿತರ ವಿಚಾರಗಳಿಗೆ ಸಂಬಂಧಿಸಿಯೂ ಹಲವು ವಿಜ್ಞಾನಿಗಳು, ತಂತ್ರಜ್ಞರು ಖಾಸಗಿ ಕಂಪನಿಗಳತ್ತ ಮುಖ ಮಾಡುತ್ತಿದ್ದಾರೆ ಎನ್ನಲಾಗಿದೆ.&lt;/p&gt;&lt;h3&gt;ರಾಜೀನಾಮೆಗೆ ಕಡಿವಾಣ:&lt;/h3&gt;&lt;p&gt;ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಬಾಹ್ಯಾಕಾಶ ಇಲಾಖೆಯು ಜು.14ರಂದು ಆಂತರಿಕ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಗಗನಯಾನ ಮತ್ತು ಇತರೆ ರಾಷ್ಟ್ರೀಯ ಹಿತಾಸಕ್ತಿಯ ಪ್ರಮುಖ ಯೋಜನೆಗಳ ಭಾಗವಾಗಿರುವ ಹಿರಿಯ ವಿಜ್ಞಾನಿಗಳು ಹಾಗೂ ತಂತ್ರಜ್ಞರ ರಾಜೀನಾಮೆ ಮತ್ತು ವಿಆರ್&zwnj;ಎಸ್&zwnj; ಕುರಿತ ನಿಯಮಾವಳಿಗಳನ್ನು ಬಿಗಿಗೊಳಿಸಿದೆ.&lt;/p&gt;&lt;p&gt;ಈ ಹಿಂದೆ ವಿಜ್ಞಾನಿಗಳ ರಾಜೀನಾಮೆ ಮತ್ತು ವಿಆರ್&zwnj;ಎಸ್&zwnj; ಕುರಿತ ಮನವಿಗೆ ಇಸ್ರೋ ನಿರ್ದೇಶಕರು ಅನುಮತಿ ನೀಡುತ್ತಿದ್ದರು. ಆದರೆ, ಪರಿಷ್ಕೃತ ನಿಯಮಾವಳಿ ಪ್ರಕಾರ ರಾಷ್ಟ್ರೀಯ ಹಿತಾಸಕ್ತಿಯ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ವಿಜ್ಞಾನಿಗಳು ಮತ್ತು ತಂತ್ರಜ್ಞರು ರಾಜೀನಾಮೆ ಅಥವಾ ವಿಆರ್&zwnj;ಎಸ್&zwnj; ಕೋರಿ ಸಲ್ಲಿಸಲಿರುವ ಅರ್ಜಿಗಳನ್ನು ಇನ್ನು ಮುಂದೆ ತೀವ್ರ ಪರಿಶೀಲನೆ ನಡೆಸಲಾಗುತ್ತದೆ. ಅದೇ ರೀತಿ ಇದಕ್ಕೆ ಅಂತಿಮ ಒಪ್ಪಿಗೆಯನ್ನು ಬಾಹ್ಯಾಕಾಶ ಇಲಾಖೆಯೇ ನೀಡುತ್ತದೆ.&lt;/p&gt;&lt;p&gt;&lt;strong&gt;ಬರೋದು ಹೋಗೋದು ಮಾಮೂಲಿ: ಸಚಿವ ಸಿಂಗ್&zwnj;&lt;/strong&gt;&lt;/p&gt;&lt;p&gt;ನವದೆಹಲಿ: ಇಸ್ರೋ ರಾಜೀನಾಮೆ ಪರ್ವದ ಬಗ್ಗೆ ಕೇಂದ್ರ ವಿಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್&zwnj; ಪ್ರತಿಕ್ರಿಯಿಸಿದ್ದು &lsquo;ಕೆಲವರು ಆಡಳಿತಾತ್ಮಕ ಕಾರಣಗಳಿಗಾಗಿ ಇಂಥ ನಿರ್ಧಾರ ತೆಗೆದುಕೊಳ್ಳಬಹುದು. ಇಸ್ರೋ ಬಹಳ ದೊಡ್ಡ ಕಾರ್ಯಪಡೆ ಹೊಂದಿದೆ. ಹೋಗುವುದು, ಬರುವುದು ಇರುತ್ತದೆ. ಜನರು ಹೊರಟು ಹೋದಂತೆ ಅನೇಕರು ಸೇರುತ್ತಾರೆ. ಈ ವಿಷಯದಲ್ಲಿ ಯಾವುದೇ ವಿವಾದವಿಲ್ಲ&rsquo; ಎಂದರು.&lt;/p&gt;&lt;p&gt;ಇಸ್ರೋ ಅಧ್ಯಕ್ಷ ವಿ. ನಾರಾಯಣನ್&zwnj; ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, &lsquo;ಹೌದು, ಬಹಳಷ್ಟು ಜನರು ಹೋಗುತ್ತಾರೆ. ಅದು ಪ್ರತಿ ಸಂಸ್ಥೆಯಲ್ಲಿನ ವಿದ್ಯಮಾನ. ಆದರೆ ಪ್ರಮುಖ ಯೋಜನೆಗಳು ಹಠಾತ್ತನೆ ತೊಂದರೆ ಅನುಭವಿಸದಂತೆ ನೋಡಿಕೊಳ್ಳುತ್ತಿದ್ದೇವೆ. ಯಾರಾದರೂ ಹೋದರೆ ಅನ್ಯರಿಗೆ ಜವಾಬ್ದಾರಿ ವಹಿಸುತ್ತಿದ್ದೇವೆ&rsquo; ಎಂದರು.&lt;/p&gt;&lt;p&gt;&lt;strong&gt;ರಾಜೀನಾಮೆ ಪರ್ವ&lt;/strong&gt;&lt;/p&gt;&lt;p&gt;- ಮಾನವಸಹಿತ ಅಂತರಿಕ್ಷ ಯಾನ ಸೇರಿ ಹಲವು ಕಾರ್ಯಕ್ರಮಕ್ಕೆ ಸಜ್ಜಾಗಿರುವ ಇಸ್ರೋ&lt;/p&gt;&lt;p&gt;- ಇಂತಹ ಹೊತ್ತಿನಲ್ಲೇ 1 ವರ್ಷದಲ್ಲಿ 100ರಿಂದ 120 ವಿಜ್ಞಾನಿಗಳಿಂದ ರಾಜೀನಾಮೆ&lt;/p&gt;&lt;p&gt;- ಇದರಿಂದ ಮಹತ್ವದ ಯೋಜನೆಗಳಿಗೆ ಹಿನ್ನಡೆ. ಕೇಂದ್ರದಿಂದ ರಾಜೀನಾಮೆ ನೀತಿ ಬಿಗಿ&lt;/p&gt;&lt;p&gt;- ವಿಜ್ಞಾನಿಗಳು ಬರ್ತಾರೆ, ಹೋಗ್ತಾರೆ ಎಂದ ಇಸ್ರೋ ಅಧ್ಯಕ್ಷ, ಕೇಂದ್ರ ಸಚಿವ ಜಿತೇಂದ್ರ&lt;/p&gt;]]></content:encoded>
            <category>India</category>
            <dc:creator>Sujatha NR</dc:creator>
            <atom:link href="https://www.kannadaprabha.in/karnataka-news/mysore-news/120-scientists-quit-isro-in-just-one-year/articleshow-20bl2dq"/>
        </item>
        <item>
            <title><![CDATA[ಪುರಿ ರಥಯಾತ್ರೆ ವೇಳೆ /ನೂಕುನುಗ್ಗಲು : ಓರ್ವ ಸಾವು, 200 ಭಕ್ತರು ಅಸ್ವಸ್ಥ]]></title>
            <link>https://www.kannadaprabha.in/india-news/tampede-like-situation-during-jagannath-rath-yatra-in-puri-one-dead-over-200-hospitalised/articleshow-2yrf9sy</link>
            <guid isPermaLink="true">https://www.kannadaprabha.in/india-news/tampede-like-situation-during-jagannath-rath-yatra-in-puri-one-dead-over-200-hospitalised/articleshow-2yrf9sy</guid>
            <pubDate>Fri, 17 Jul 2026 03:00:00 +0530</pubDate>
            <description><![CDATA[ಗುರುವಾರದಿಂದ ಆರಂಭವಾಗಿರುವ ಐತಿಹಾಸಿಕ ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಜನದಂದಣಿ ಏರ್ಪಟ್ಟು ನೂಕುನುಗ್ಗಲು ಉಂಟಾಗಿದೆ. ಘಟನೆಯಲ್ಲಿ ಓರ್ವ ಭಕ್ತ ಹೃದಯಾಘಾತದಿಂದ ಸಾವನ್ನಪ್ಪಿದ್ದರೆ, 200 ಮಂದಿ ಅಸ್ವಸ್ಥರಾಗಿದ್ದಾರೆ.]]></description>
            <media:content url="https://static-assets.asianetnews.com/kp/json/16072026/pictures/PURI_331.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭುವನೇಶ್ವರ:&lt;/strong&gt; ಗುರುವಾರದಿಂದ ಆರಂಭವಾಗಿರುವ ಐತಿಹಾಸಿಕ ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಜನದಂದಣಿ ಏರ್ಪಟ್ಟು ನೂಕುನುಗ್ಗಲು ಉಂಟಾಗಿದೆ. ಘಟನೆಯಲ್ಲಿ ಓರ್ವ ಭಕ್ತ ಹೃದಯಾಘಾತದಿಂದ ಸಾವನ್ನಪ್ಪಿದ್ದರೆ, 200 ಮಂದಿ ಅಸ್ವಸ್ಥರಾಗಿದ್ದಾರೆ.&lt;/p&gt;&lt;h2&gt;ಪಹಂಡಿ ಆಚರಣೆಯ ಸಂದರ್ಭದಲ್ಲಿ ಅವಘಢ&lt;/h2&gt;&lt;p&gt;ಪ್ರಾಥಮಿಕ ಮಾಹಿತಿ ಪ್ರಕಾರ ಪಹಂಡಿ ಆಚರಣೆಯ ಸಂದರ್ಭದಲ್ಲಿ ಹೊರ ಭದ್ರತಾ ವಲಯದ 500 ಮೀ.ದೂರದಲ್ಲಿಯೇ ಅವಘಢ ಸಂಭವಿಸಿದೆ. ಭಾರೀ ಜನಸಂದಣಿ ಏಕಾಏಕಿ ಉಂಟಾದ ಪರಿಣಾಮ ಸುಮಾರು 200 ಭಕ್ತರಿಗೆ ಉಸಿರಾಟದ ಸಮಸ್ಯೆ ಎದುರಾಗಿದ್ದು,ಆಗ ಒಬ್ಬ ಭಕ್ತ ಹೃದಯಾಘಾತ ಉಂಟಾಗಿ ಅಸುನೀಗಿದ್ದಾನೆ. &amp;nbsp;&lt;/p&gt;&lt;h3&gt;ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ&lt;/h3&gt;&lt;p&gt;ಉಳಿದವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕಳೆದ ವರ್ಷವೂ ರಥಯಾತ್ರೆಯ ಸಂದರ್ಭದಲ್ಲಿ ಇಂತಹದ್ದೇ ಅನಾಹುತ ನಡೆದಿತ್ತು. ಗುಂಡಿಚಾ ದೇವಸ್ಥಾನದ ಬಳಿ ಕಾಲ್ತುಳಿತ ಸಂಭವಿಸಿ ಮೂವರು ಭಕ್ತರು ಸಾವನ್ನಪ್ಪಿ, 50ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದರು.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/tampede-like-situation-during-jagannath-rath-yatra-in-puri-one-dead-over-200-hospitalised/articleshow-2yrf9sy"/>
        </item>
        <item>
            <title><![CDATA[ಭಾರತದ ಮೊದಲ ಖಾಸಗಿ ರಾಕೆಟ್‌ ನಭಕ್ಕೆ]]></title>
            <link>https://www.kannadaprabha.in/india-news/countrys-first-pvt-suborbital-rocket-successfully-places-tech-payloads-pm-calls-it-defining-moment/articleshow-367csn9</link>
            <guid isPermaLink="true">https://www.kannadaprabha.in/india-news/countrys-first-pvt-suborbital-rocket-successfully-places-tech-payloads-pm-calls-it-defining-moment/articleshow-367csn9</guid>
            <pubDate>Sun, 19 Jul 2026 07:00:57 +0530</pubDate>
            <description><![CDATA[&lt;p&gt;ಭಾತದ ಪ್ರಥಮ ಸ್ವದೇಶಿ ಖಾಸಗಿ ರಾಕೆಟ್&zwnj; ವಿಕ್ರಂ-1 ಶನಿವಾರ ನಭಕ್ಕೆ ನೆಗೆದಿದ್ದು, ಯಶಸ್ವಿಯಾಗಿ ಭೂಮಿಯ ಕೆಳಕಕ್ಷೆಯಲ್ಲಿ ಪೇಲೋಡ್&zwnj;ಅನ್ನು ಇಳಿಸಿದೆ. ಹೈದರಾಬಾದ್&zwnj;ನ ಸ್ಕೈರೂಟ್&zwnj; ಏರೋಸ್ಪೇಸ್&zwnj; ಎಂಬ ಸ್ಟಾರ್ಟ್&zwnj;ಅಪ್&zwnj;ನ &amp;nbsp;ಸಾಹಸದೊಂದಿಗೆ ದೇಶದ ಬಾಹ್ಯಾಕಾಶ ಕ್ಷೇತ್ರದ ಬಾಗಿಲು ಖಾಸಗಿಯವರಿಗೂ ತೆರೆದುಕೊಂಡಂತಾಗಿದೆ.&lt;/p&gt;]]></description>
            <media:content url="https://static-assets.asianetnews.com/kp/json/18072026/pictures/CHANDANA_531.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಶ್ರೀಹರಿಕೋಟ : &amp;nbsp;&lt;/strong&gt;ಭಾತದ ಪ್ರಥಮ ಸ್ವದೇಶಿ ಖಾಸಗಿ ರಾಕೆಟ್&zwnj; ವಿಕ್ರಂ-1 ಶನಿವಾರ ನಭಕ್ಕೆ ನೆಗೆದಿದ್ದು, ಯಶಸ್ವಿಯಾಗಿ ಭೂಮಿಯ ಕೆಳಕಕ್ಷೆಯಲ್ಲಿ ಪೇಲೋಡ್&zwnj;ಅನ್ನು ಇಳಿಸಿದೆ. ಹೈದರಾಬಾದ್&zwnj;ನ ಸ್ಕೈರೂಟ್&zwnj; ಏರೋಸ್ಪೇಸ್&zwnj; ಎಂಬ ಸ್ಟಾರ್ಟ್&zwnj;ಅಪ್&zwnj;ನ ಈ ಸಾಹಸದೊಂದಿಗೆ ದೇಶದ ಬಾಹ್ಯಾಕಾಶ ಕ್ಷೇತ್ರದ ಬಾಗಿಲು ಖಾಸಗಿಯವರಿಗೂ ತೆರೆದುಕೊಂಡಂತಾಗಿದೆ.&lt;/p&gt;&lt;p&gt;ಈ ಸಾಧನೆಗೈದವರನ್ನು ಪ್ರಧಾನಿ ನರೇಂದ್ರ ಮೋದಿ, ಇಸ್ರೋ ಮುಖ್ಯಸ್ಥ ವಿ. ನಾರಾಯಣನ್&zwnj; ಅವರು ಅಭಿನಂದಿಸಿದ್ದಾರೆ.&lt;/p&gt;&lt;p&gt;7 ಅಂತಸ್ತಿನ ಕಟ್ಟಡದಷ್ಟು ಎತ್ತರವಿರುವ ವಿಕ್ರಂ-1 ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್&zwnj; ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಧ್ಯಾಹ್ನ 11.30ಕ್ಕೆ ಉಡ್ಡಯನ ಮಾಡಲು ನಿರ್ಧರಿಸಲಾಗಿತ್ತು. ಆದರೆ ರಾಕೆಟ್&zwnj;ನ ಸಂಚಾರ ವ್ಯವಸ್ಥೆಯಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅದನ್ನು ಮುಂದೂಡಿ, 12.05ಕ್ಕೆ ಉಡಾವಣೆ ಮಾಡಲಾಯಿತು.&lt;/p&gt;&lt;p&gt;ಹೀಗೆ ಆಗಸಕ್ಕೆ ಚಿಮ್ಮಿದ ರಾಕೆಟ್&zwnj;, ಭೂಮಿಯಿಂದ 450 ಕಿ.ಮೀ. ದೂರದಲ್ಲಿರುವ ಕೆಳಕಕ್ಷೆಯನ್ನು ತಲುಪುತ್ತಿದ್ದಂತೆ ಗ್ರಹಾ ಸ್ಪೇಸ್, ​​ಕಾಸ್ಮೋಸರ್ವ್, ಡಿ-ಕ್ಯೂಬ್ಡ್ ಮತ್ತು ಸ್ಕೈರೂಟ್&zwnj;ನ ಸ್ಕೋಪ್ ಉಪಗ್ರಹಗಳನ್ನು ಒಂದೊಂದಾಗಿ ಇಳಿಸಿತು. ಎಲ್ಲಾ ಹಂತಗಳನ್ನು ನಿರೀಕ್ಷೆಯಂತೆ ದಾಟಿದ ವಿಕ್ರಂ ಕೆಳಕಕ್ಷೆಯನ್ನು ತಲುಪುತ್ತಿದ್ದಂತೆ, &lsquo;ಮಿಷನ್&zwnj; ಆಗಮನ್&zwnj; ಅದ್ಭುತ ಯಶಸ್ಸು ಕಂಡಿದೆ&rsquo; ಎಂದು ಸ್ಕೈರೂಟ್&zwnj; ಹರ್ಷ ವ್ಯಕ್ತಪಡಿಸಿದೆ.&lt;/p&gt;&lt;p&gt;ಜತೆಗೆ, ಈ ಯೋಜನೆ ವೇಳೆ ಸಂಗ್ರಹಿಸಲಾದ ದತ್ತಾಂಶಗಳನ್ನು ಮುಂದಿನ ಯೋಜನೆಗಳಿಗೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದೆ. &amp;nbsp;&lt;/p&gt;&lt;h2&gt;&lt;strong&gt;ಚಿನ್ನ, ವಜ್ರವೂ ಕಕ್ಷೆಗೆ&lt;/strong&gt;:&lt;/h2&gt;&lt;p&gt;ಉಪಗ್ರಹಗಳ ಜತೆಗೆ ಪ್ರತ್ಯೇಕ ಪೇಲೋಡ್&zwnj; ಒಂದರಲ್ಲಿ ಕಲಾತ್ಮಕ ವಸ್ತುಗಳನ್ನಿಟ್ಟು ಕಳಿಸಲಾಗಿದೆ. ಅಲ್ಯೂಮಿನಿಯಂ ಫಲಕದ ಮೇಲೆ ವಜ್ರಗಳನ್ನು ಜೋಡಿಸಿ ತಯಾರಿಸಿದ ಆಭರಣದ ರಚನೆ, 18 ಕ್ಯಾರಟ್ ಚಿನ್ನ ಬಳಸಿ ತಯಾರಿಸಿದ ಪುಟಾಣಿ ರಾಕೆಟ್&zwnj; ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು &lsquo;ವಂದೇ ಮಾತರಂ&rsquo; ಎಂದು ಬರೆದ ಪೋಸ್ಟ್&zwnj;ಕಾರ್ಡ್&zwnj; ಜತೆಗೆ ಎಂಜಿನಿಯರ್&zwnj;, ವಿಜ್ಞಾನಿಗಳು ಮತ್ತು ಭಾರತೀಯ ಗಗನಯಾತ್ರಿಗಳ ಶುಭಾಶಯಗಳಿರುವ ಪೋಸ್ಟ್&zwnj;ಕಾರ್ಡ್&zwnj; ಅದರಲ್ಲಿತ್ತು. ಜತೆಗೆ, ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ವಿಕ್ರಮ್ ಸಾರಾಭಾಯಿ, ವಿಜ್ಞಾನಿ ಸರ್ ಸಿ.ವಿ. ರಾಮನ್ ಮತ್ತು ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸಣ್ಣ ಕಲಾಕೃತಿಯನ್ನೂ ಕಳಿಸುವ ಮೂಲಕ ಆ ದಿಗ್ಗಜರಿಗೆ ಗೌರವ ಅರ್ಪಿಸಲಾಗಿದೆ. ಇವನ್ನು ಹೊತ್ತೊಯ್ದ ರಾಕೆಟ್&zwnj;ಗೆ ಇಟ್ಟಿರುವ ಹೆಸರು ವಿಕ್ರಂ ಸಾರಾಭಾಯಿ ಅವರದ್ದೆನ್ನುವುದು ಗಮನಾರ್ಹ. &amp;nbsp;&lt;/p&gt;&lt;h3&gt;&lt;strong&gt;ದಿಗ್ಗಜರ ಉಪಸ್ಥಿತಿಯಲ್ಲಿ ಉಡಾವಣೆ&lt;/strong&gt;:&lt;/h3&gt;&lt;p&gt;ವಿಕ್ರಂ-1 ರಾಕೆಟ್&zwnj; ಬೆಂಕಿಯುಗುಳುತ್ತ ಉಡಾವಣೆಯಾಗುವುದನ್ನು, ಇಸ್ರೋ ಮುಖ್ಯಸ್ಥ ನಾರಾಯಣನ್&zwnj;, ಗಗನಯಾನಿ ಶುಭಾಂಶು ಶುಕ್ಲಾ, ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್&zwnj; ಅವರೊಂದಿಗೆ ಸ್ಕೈರೂಟ್&zwnj;ನ ಸ್ಥಾಪಕರಾದ ಪವನ್&zwnj; ಕುಮಾರ್&zwnj; ಚಂದನ ಮತ್ತು ದಾಕಾ ಅವರು ನಿಯಂತ್ರಣ ಕೇಂದ್ರದಲ್ಲಿ ವೀಕ್ಷಿಸಿದರು. ಇವರಿಬ್ಬರು ಇಸ್ರೋದ ಮಾಜಿ ವಿಜ್ಞಾನಿಗಳು ಎಂಬುದು ಗಮನಾರ್ಹ. &amp;nbsp;&lt;/p&gt;&lt;p&gt;&lt;strong&gt;ಸ್ಟಾರ್ಟ್&zwnj;ಅಪ್&zwnj; ಪರ್ವ ಶುರು&lt;/strong&gt;:&lt;/p&gt;&lt;p&gt;ಇಷ್ಟು ವರ್ಷ ಎಲ್ಲಾ ಬಾಹ್ಯಾಕಾಶ ಯೋಜನೆಗಳನ್ನು ಸರ್ಕಾರಿ ಸಂಸ್ಥೆಯಾದ ಇಸ್ರೋ ಕೈಗೊಳ್ಳುತ್ತಿತ್ತು. ಆದರೆ ಇದೀಗ ಖಾಸಗಿ ಕಂಪನಿಗಳಿಗೂ ಈ ಅವಕಾಶ ಲಭಿಸಿರುವುದಕ್ಕೆ ಇಸ್ರೋ ಮುಖ್ಯಸ್ಥ ವಿ. ನಾರಾಯಣನ್&zwnj; ಅವರು ಹರ್ಷಿಸಿದ್ದು, &lsquo;ಇದೊಂದು ತೃಪ್ತಿದಾಯಕ ಕ್ಷಣ. ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯವರಿಗೆ ತೆರೆಯುವ ನಿರ್ಧಾರವನ್ನು ಪ್ರಧಾನಿ ಮೋದಿ ಕೈಗೊಂಡಾಗ ದೇಶದಲ್ಲಿ ಒಂದೇ ನವೋದ್ಯಮವಿತ್ತು. ಆದರೀಗ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ 400ಕ್ಕೂ ಹೆಚ್ಚು ಸ್ಟಾರ್ಟ್&zwnj;ಅಪ್&zwnj;ಗಳಿವೆ. ರಾಕೆಟ್&zwnj; ತಯಾರಿ ಅತ್ಯಂತ ಕಠಿಣವಾದ ಕೆಲಸ. ಆದರೆ ಇದನ್ನು ಮೊದಲ ಪ್ರಯತ್ನದಲ್ಲೇ ಮಾಡಿದ ಸ್ಕೈರೂಟ್&zwnj;ಗೆ ಅಭಿನಂದನೆ&rsquo; ಎಂದಿದ್ದಾರೆ.&lt;/p&gt;&lt;p&gt;&lt;strong&gt;ಶಾಲೇಲಿ ಗಣಿತದಲ್ಲಿ 51 ಅಂಕ ಪಡೆದಿದ್ದ ವಿಕ್ರಂ ರೂವಾರಿ&lt;/strong&gt;&lt;/p&gt;&lt;p&gt;&lt;strong&gt;ಹೈದರಾಬಾದ್&zwnj;&lt;/strong&gt;: ವಿಜ್ಞಾನಿಗಳೆಂದರೆ ಹುಟ್ಟಿನಿಂದಲೇ ಪ್ರತಿಭಾವಂತರು ಎಂದು ಭಾವಿಸಲಾಗುತ್ತದೆ. ಆದರೆ, ದೇಶದ ಮೊದಲ ಸ್ವದೇಶಿ ನಿರ್ಮಿತ ಖಾಸಗಿ ರಾಕೆಟ್&zwnj; ವಿಕ್ರಂ-1ನ್ನು ಭೂಮಿಯ ಕೆಳಕಕ್ಷೆಗೆ ತಲುಪಿಸಿದ ಸ್ಕೈರೂಟ್&zwnj;ನ ಸಂಸ್ಥಾಪಕರಲ್ಲೊಬ್ಬರಾದ ಪವನ್&zwnj; ಕುಮಾರ್&zwnj; ಚಂದನ ಅವರು ಶಾಲೆಯಲ್ಲಿದ್ದಾಗ ಗಣಿತದಲ್ಲಿ 51 ಅಂಕಗಳನ್ನು ಪಡೆದಿದ್ದರಂತೆ.ಬಾಲ್ಯದಿಂದಲೇ ಸಂಖ್ಯೆಗಳಲ್ಲಿ ನಿರಾಸಕ್ತಿ ಹೊಂದಿದ್ದ ಹೈದರಾಬಾದ್&zwnj;ನ ಚಂದನ ಅವರನ್ನು ಯಂತ್ರಗಳು ಮತ್ತು ತಂತ್ರಜ್ಞಾನ ಸೆಳೆಯುತ್ತಿದ್ದವು. ವರ್ಷ ಕಳೆದಂತೆ ಗಣಿತದೊಂದಿಗೂ ಸ್ನೇಹ ಮಾಡಿಕೊಂಡ ಅವರು, ಮೊದಲ ಯತ್ನದಲ್ಲೇ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಖರಗ್&zwnj;ಪುರದ ಐಐಟಿ ಸೇರಿಕೊಂಡರು. &amp;nbsp;&lt;/p&gt;&lt;p&gt;ಬಾಹ್ಯಾಕಾಶ ಮತ್ತು ರಾಕೆಟ್&zwnj;ಗಳ ಮೇಲೆ ಅವರಿಗೆ ಒಲವು ಶುರುವಾಗಿದ್ದು ಅಲ್ಲೇ. ಅಲ್ಲಿಂದ ಅವರು ಇಸ್ರೋಗೆ ಸೇರಿಕೊಳ್ಳುತ್ತಾರೆ. ತಿರುವನಂತಪುರಂನ ಕೇಂದ್ರದಲ್ಲಿ ಕೆಲಸ ಆರಂಭಿಸಿದ ಚಂದನ, ಜಿಎಸ್&zwnj;ಎಲ್&zwnj;ವಿ ಮಾರ್ಕ್&zwnj;-3 ಅಭಿವೃದ್ಧಿ ವಿಭಾಗದಲ್ಲಿದ್ದರು. ಅಲ್ಲಿ 6 ವರ್ಷಗಳ ಅನುಭವ ಪಡೆದ ಅವರು ತಮ್ಮದೇ ಆದ ಸ್ಪೇಸ್&zwnj; ಸ್ಟಾರ್ಟ್&zwnj;ಅಪ್&zwnj; ಆರಂಭಿಸಲು ಮುಂದಾದಾಗ ಐಐಟಿ ಬಾಂಬೆಯ ನಾಗಾ ಭರತ್&zwnj; ಡಾಕಾ ಜತೆಯಾದರು.&amp;nbsp;&lt;/p&gt;&lt;p&gt;ಇವರಿಬ್ಬರು ಸೇರಿ 2018ರಲ್ಲಿ ಹುಟ್ಟುಹಾಕಿದ ಸ್ಕೈರೂಟ್&zwnj; ಕಂಪನಿ ರಾಮನ್&zwnj;-1 ಎಂಬ ರಾಕೆಟ್&zwnj; ಎಂಜಿನ್&zwnj; ಪರೀಕ್ಷೆ ಮಾಡಿತು. ಇದು ದೇಶದ ಮೊದಲ ಖಾಸಗಿ ರಾಕೆಟ್&zwnj; ಎಂಜಿನ್&zwnj; ಎನಿಸಿಕೊಂಡಿತ್ತು. ಬಳಿಕ 2022ರಲ್ಲಿ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ಭಾರತದ ಮೊದಲ ಸಬ್&zwnj;ಆರ್ಬಿಟಲ್ ರಾಕೆಟ್ ಆದ ''''''''ವಿಕ್ರಮ್-ಎಸ್'''''''' ಅನ್ನು ಉಡಾವಣೆ ಮಾಡಿತು. ಇದರ ಮುಂದುವರಿದ ಭಾಗವಾಗಿ ವಿಕ್ರಂ-1 ಇದೀಗ ಕಕ್ಷೆ ತಲುಪಿದ್ದು, ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭಿಸಿದೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/countrys-first-pvt-suborbital-rocket-successfully-places-tech-payloads-pm-calls-it-defining-moment/articleshow-367csn9"/>
        </item>
        <item>
            <title><![CDATA[ದೇಶದ ಮೊದಲ ಹೈಡ್ರೋಜನ್‌ ರೈಲಿಗೆ ಮೋದಿ ಹಸಿರು ನಿಶಾನೆ]]></title>
            <link>https://www.kannadaprabha.in/india-news/hydrogen-powered-train-successful-example-of-make-in-india-campaign-pm-modi/articleshow-396ageu</link>
            <guid isPermaLink="true">https://www.kannadaprabha.in/india-news/hydrogen-powered-train-successful-example-of-make-in-india-campaign-pm-modi/articleshow-396ageu</guid>
            <pubDate>Sat, 18 Jul 2026 05:20:50 +0530</pubDate>
            <description><![CDATA[ಹರ್ಯಾಣದ ಜಿಂದ್&zwnj;ನಿಂದ ಸೋನಿಪತ್&zwnj; ಅನ್ನು ಸಂಪರ್ಕಿಸುವ ದೇಶದ ಮೊದಲ ಹೈಡ್ರೋಜನ್&zwnj; ಇಂಧನ ಚಾಲಿತ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಜಿಂದ್&zwnj;ನಲ್ಲಿ ಹಸಿರು ನಿಶಾನೆ ನೀಡಿದರು.]]></description>
            <media:content url="https://static-assets.asianetnews.com/kp/json/17072026/pictures/17071_PTI07_17_2026_000113B_463.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಜಿಂದ್&zwnj; (ಹರ್ಯಾಣ): &lt;/strong&gt;ಹರ್ಯಾಣದ ಜಿಂದ್&zwnj;ನಿಂದ ಸೋನಿಪತ್&zwnj; ಅನ್ನು ಸಂಪರ್ಕಿಸುವ ದೇಶದ ಮೊದಲ ಹೈಡ್ರೋಜನ್&zwnj; ಇಂಧನ ಚಾಲಿತ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಜಿಂದ್&zwnj;ನಲ್ಲಿ ಹಸಿರು ನಿಶಾನೆ ನೀಡಿದರು. ಈ ಮೂಲಕ ಭಾರತವು ಹೈಡ್ರೋಜನ್ ಚಾಲಿತ ರೈಲುಗಳನ್ನು ಹೊಂದಿರುವ ಕೆಲವೇ ಕೆಲವು ದೇಶಗಳ ಸಾಲಿಗೆ ಸೇರ್ಪಡೆಯಾದಂತಾಗಿದೆ. ಜರ್ಮನಿ, ಜಪಾನ್&zwnj;, ಚೀನಾ, ಫ್ರಾನ್ಸ್&zwnj;ನಂಥ ದೇಶಗಳು ಹೈಡ್ರೋಜನ್&zwnj; ಶಕ್ತಿಯಿಂದ ಚಾಲಿತ ರೈಲುಗಳನ್ನು ಓಡಿಸುತ್ತಿವೆ. ಭಾರತ 5ನೇ ದೇಶವಾಗಿದೆ. ಈ ರೈಲು ಹೊಗೆಯ ಬದಲು ಹಬೆಯನ್ನು ಹೊರ ಹಾಕುತ್ತದೆ.&lt;/p&gt;&lt;p&gt;&lsquo;ಭಾರತದ ಈ ಹೈಡ್ರೋಜನ್&zwnj; ರೈಲು ಹೊಗೆರಹಿತ ಅಷ್ಟೇ ಅಲ್ಲ, ಮೇಕ್&zwnj; ಇನ್&zwnj; ಇಂಡಿಯಾ ಉಪಕ್ರಮದ ಯಶಸ್ಸಿಗೆ ಅತ್ಯುತ್ತಮ ಉದಾಹರಣೆಯೂ ಆಗಿದೆ. ಈ ರೈಲನ್ನು ವಿನ್ಯಾಸಗೊಳಿಸಿದ್ದು ಭಾರತೀಯ ಎಂಜಿನಿಯರ್&zwnj;ಗಳು ಮತ್ತು ಉತ್ಪಾದಿಸಿದ್ದು ಭಾರತೀಯ ಕಂಪನಿ&rsquo; ಎಂದು ಮೋದಿ ಹರ್ಷ ವ್ಯಕ್ತಪಡಿಸಿದರು.2014ಕ್ಕಿಂತ ಮೊದಲಾಗಿದ್ದರೆ...:&lt;/p&gt;&lt;p&gt;ಭಾಷಣದಲ್ಲಿ ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ಪ್ರಸ್ತಾಪಿಸಿದ ಮೋದಿ, ಭಾರತವು ದೊಡ್ಡ ಪ್ರಮಾಣದ ಪೆಟ್ರೋಲ್&zwnj;, ಡೀಸೆಲ್&zwnj;, ಎಲ್&zwnj;ಪಿಜಿ ಮತ್ತು ಗೊಬ್ಬರವನ್ನು ಹೋರ್ಮುಜ್&zwnj; ಜಲಸಂಧಿ ಮೂಲಕ ತರಿಸಿಕೊಳ್ಳುತ್ತದೆ. ಆದರೆ ಕಳೆದ ಮೂರ್ನಾಲ್ಕು ತಿಂಗಳಿಂದ ಈ ಜಲಸಂಧಿಯು ಯುದ್ಧ ರಂಗಭೂಮಿಯಾಗಿ ಪರಿವರ್ತನೆಯಾಗಿದೆ. ಯುದ್ಧ ಮತ್ತು ತೈಲ ಸಂಘರ್ಷದ ಹೊರತಾಗಿಯೂ ಭಾರತೀಯ ರೈಲ್ವೆ ಹಾಗೂ ದೇಶದ ಅಭಿವೃದ್ಧಿಯ ಚಕ್ರ ನಿಂತಿಲ್ಲ ಎಂದರು.&lt;/p&gt;&lt;p&gt;1925ರಿಂದ 2014ರ ನಡುವೆ ದೇಶದ ಶೇ.30ರಷ್ಟು ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಆಗಿತ್ತು. ಉಳಿದ ಶೇ.70 ರೈಲು ಸಂಪರ್ಕವು ಡೀಸೆಲ್&zwnj; ಅನ್ನೇ ಅವಲಂಬಿಸಿತ್ತು. ಇದೇ ವೇಗದಲ್ಲಿ ನಾವು ಹೋಗುತ್ತಿದ್ದರೆ ಭಾರತೀಯ ರೈಲ್ವೆಯ ಸಂಪೂರ್ಣ ವಿದ್ಯುದೀಕರಣಕ್ಕೆ 200 ವರ್ಷ ಬೇಕಾಗುತ್ತಿತ್ತು. ಆದರೆ, ಕಳೆದ 12 ವರ್ಷಗಳಿಂದ ಭಾರತೀಯ ರೈಲ್ವೆಯ ವಿದ್ಯುದ್ದೀಕರಣ ಕಾರ್ಯ ವ್ಯಾಪಕವಾಗಿ ನಡೆಯುತ್ತಿದೆ. ಶೇ.99ರಷ್ಟು ಪ್ರಮಾಣದ ವಿದ್ಯುದ್ದೀಕರಣ ಪೂರ್ಣಗೊಂಡಿದೆ. ಇದು ಅಂತಾರಾಷ್ಟ್ರೀಯ ಇಂಧನ ಬಿಕ್ಕಟ್ಟಿನಂಥ ಪರಿಸ್ಥಿತಿ ಎದುರಿಸುವ ದೇಶದ ಸಾಮರ್ಥ್ಯವನ್ನು ಬಲಪಡಿಸುತ್ತದೆ ಎಂದರು.&lt;/p&gt;&lt;p&gt;ಈಗ ಎದುರಾಗಿರುವ ಪಶ್ಚಿಮ ಏಷ್ಯಾ ಬಿಕ್ಕಟ್ಟು 2014ಕ್ಕಿಂತ ಮೊದಲು ಸಂಭವಿಸಿದ್ದರೆ ರೈಲ್ವೆ ಸಂಪರ್ಕ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತಿತ್ತು. ಯಾಕೆಂದರೆ ದೇಶದ ಬಹುಪಾಲು ರೈಲುಗಳು ಡೀಸೆಲ್&zwnj; ಅನ್ನೇ ಅವಲಂಬಿಸಿದ್ದವು. ಒಂದು ವೇಳೆ ಡೀಸೆಲ್&zwnj; ಆಮದು ಸ್ಥಗಿತಗೊಳ್ಳುತ್ತಿದ್ದರೆ ಡೀಸೆಲ್&zwnj; ಚಾಲಿತ ರೈಲುಗಳು ಕಾರ್ಯಾಚರಿಸಲು ಸಾಧ್ಯವಿತ್ತಾ ಎಂದು ಪ್ರಶ್ನಿಸಿದ ಅವರು, 2014ರಲ್ಲಿ ಏನಿತ್ತೋ ಆ ಪರಿಸ್ಥಿತಿ ಈಗ ಸಂಪೂರ್ಣ ಬದಲಾಗಿದೆ. ಇದು ಮೋದಿ ಅವಧಿ. ಮೋದಿ ಯಾವತ್ತೂ ಮೊದಲೇ ಯೋಚಿಸುತ್ತಾರೆ ಮತ್ತು ಮೊದಲೇ ಯೋಜಿಸುತ್ತಾರೆ ಎಂದು ಹೇಳಿದರು.&lt;/p&gt;&lt;h2&gt;89 ಕಿ.ಮೀ. ಸಂಚರಿಸುವ ರೈಲು:&lt;/h2&gt;&lt;p&gt;ಜಿಂದ್&zwnj;ನಿಂದ ಸೋನಿಪತ್&zwnj; ನಡುವಿನ 89 ಕಿ.ಮೀ. ಅಂತರವನ್ನು ಈ ರೈಲು ಕೇವಲ ಎರಡೇ ಗಂಟೆಗಳಲ್ಲಿ ಕ್ರಮಿಸುತ್ತದೆ. ಒಟ್ಟು 12 ಕಡೆ ಈ ರೈಲು ನಿಲುಗಡೆಯಾಗುತ್ತದೆ. ವಿಶ್ವದ ಇತರೆ ಭಾಗಗಳಲ್ಲಿರುವ ಹೈಡ್ರೋಜನ್&zwnj; ಶಕ್ತಿಯಿಂದ ಚಾಲಿತ ರೈಲುಗಳು ಕೇವಲ ಮೂರರಿಂದ ನಾಲ್ಕು ಕೋಚ್&zwnj;ಗಳನ್ನಷ್ಟೇ ಹೊಂದಿವೆ. ಆದರೆ, ಭಾರತವು 10 ಕೋಚ್&zwnj;ಗಳ ಹೈಡ್ರೋಜನ್&zwnj; ರೈಲನ್ನು ಓಡಿಸುವ ಮೂಲಕ ಇತಿಹಾಸ ಬರೆದಿದಿದೆ. ಈ ರೈಲು 3,200 ಅಶ್ವಶಕ್ತಿಯ ಎಂಜಿನ್&zwnj;ನಿಂದ ಸಂಚರಿಸಲಿದೆ ಎಂದು ಮೋದಿ ತಿಳಿಸಿದರು.&lt;/p&gt;&lt;h3&gt;ಭದ್ರತಾ ವ್ಯವಸ್ಥೆ:&lt;/h3&gt;&lt;p&gt;ಹೈಡ್ರೋಜನ್&zwnj; ಉತ್ಪಾದನಾ ಘಟಕ ಅಥವಾ ರೈಲಿನಲ್ಲಿ ಹೈಡ್ರೋಜನ್&zwnj; ಸೋರಿಕೆಯಾದರೆ ತಂತಾನೆ ಪತ್ತೆ ಆಗಿ, ಯಾವುದೇ ವ್ಯಕ್ತಿಯ ಮಧ್ಯಪ್ರವೇಶದ ಅಗತ್ಯವಿಲ್ಲದೇ ಹೈಡ್ರೋನ್&zwnj; ಪೂರೈಕೆ ಸ್ಥಗಿತಗೊಳಿಸುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ.&lt;/p&gt;&lt;p&gt;ಜಿಂದ್&zwnj; ಮಾರ್ಗವೇ ಏಕೆ?&lt;/p&gt;&lt;p&gt;ಜಿಂದ್&zwnj; ರೈಲ್ವೆ ನಿಲ್ದಾಣದ ಬಳಿ ಹೈಡ್ರೋಜನ್&zwnj; ಉತ್ಪಾದನೆ ಮತ್ತು ಸಂಗ್ರಹಕ್ಕೆ ಸಾಕಷ್ಟು ಪ್ರದೇಶ ರೈಲ್ವೆಗೆ ಲಭ್ಯವಿದೆ. ಇದರ ಜೊತೆಗೆ ಜಿಂದ್&zwnj;- ಸೋನಿಪತ್&zwnj; ಮಾರ್ಗದಲ್ಲಿ ರೈಲುಗಳ ಸಂಚಾರ ದಟ್ಟಣೆ ಕಡಿಮೆ. ಹೀಗಾಗಿ ಮೊದಲ ಪ್ರಯೋಗ, ಬಳಿಕದ ಯಾವುದೇ ಪ್ರಯೋಗಗಳಿಗೂ ಇದು ಸೂಕ್ತ ಎಂದು ಈ ಮಾರ್ಗ ಆರಿಸಿಕೊಳ್ಳಲಾಗಿದೆ.&lt;/p&gt;&lt;p&gt;&lt;strong&gt;ಟಿಕೆಟ್&zwnj; ದರ ₹5ರಿಂದ ಆರಂಭ&lt;/strong&gt;&lt;/p&gt;&lt;p&gt;ಶುಕ್ರವಾರ ಚಾಲನೆ ಪಡೆದರುವ ದೇಶದ ಮೊದಲ ಹೈಡ್ರೋಜನ್&zwnj; ರೈಲು ಅತ್ಯಂತ ಅಗ್ಗದ ಟಿಕೆಟ್&zwnj; ದರವನ್ನು ಹೊಂದಿದೆ. ಈ ರೈಲು ಕನಿಷ್ಠ 5 ರು.ನಿಂದ ಗರಿಷ್ಠ 25 ರು. ತನಕ ಪ್ರಯಾಣ ದರ ಹೊಂದಿದೆ ಎಂದು ತಿಳಿದು ಬಂದಿದೆ. ಕನಿಷ್ಠ ಪ್ರಯಾಣದರ ಪ್ಲಾಟ್&zwnj;ಫಾರ್ಮ್ ಟಿಕೆಟ್&zwnj; ದರಕ್ಕಿಂತಲೂ ಕಡಿಮೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/hydrogen-powered-train-successful-example-of-make-in-india-campaign-pm-modi/articleshow-396ageu"/>
        </item>
        <item>
            <title><![CDATA[ಭಾರತಕ್ಕೂ ಬಂತು ಗ್ಯಾಸ್‌ ಕುಡಿದು ನೀರು ಬಿಡುವ ರೈಲು]]></title>
            <link>https://www.kannadaprabha.in/india-news/india-gets-its-first-gas-powered-water-emitting-train/articleshow-40b80ma</link>
            <guid isPermaLink="true">https://www.kannadaprabha.in/india-news/india-gets-its-first-gas-powered-water-emitting-train/articleshow-40b80ma</guid>
            <pubDate>Sat, 18 Jul 2026 11:40:40 +0530</pubDate>
            <description><![CDATA[&lt;p&gt;ವಿಶ್ವದ ನಾಲ್ಕನೇ ಅತಿ ದೊಡ್ಡ ರೈಲ್ವೆ ಜಾಲವಾಗಿರುವ ಭಾರತೀಯ ರೈಲ್ವೆಯು ಐತಿಹಾಸಿಕ ದಾಪುಗಾಟ್ಟಿದೆ. ನಿತ್ಯ ಸುಮಾರು ಎರಡೂವರೆ ಕೋಟಿ ಜನರನ್ನು ಸಾಗಿಸುವ ಈ ಸಾರಿಗೆಗೆ ಹೊಸ ಎಂಜಿನ್&zwnj; ಸೇರ್ಪಡೆಗೊಂಡಿದೆ.&lt;/p&gt;]]></description>
            <media:content url="https://static-gi.asianetnews.com/images/01kxr2t1scd1h9m7w7ae139j79/india-first-hydrogen-train-icf-chennai-pm-modi-integral-coach-factory-1784293426988.png" type="image/jpeg" height="390" width="690"/>
            <content:encoded><![CDATA[&lt;p&gt;ವಿಶ್ವದ ನಾಲ್ಕನೇ ಅತಿ ದೊಡ್ಡ ರೈಲ್ವೆ ಜಾಲವಾಗಿರುವ ಭಾರತೀಯ ರೈಲ್ವೆಯು ಐತಿಹಾಸಿಕ ದಾಪುಗಾಟ್ಟಿದೆ. ನಿತ್ಯ ಸುಮಾರು ಎರಡೂವರೆ ಕೋಟಿ ಜನರನ್ನು ಸಾಗಿಸುವ ಈ ಸಾರಿಗೆಗೆ ಹೊಸ ಎಂಜಿನ್&zwnj; ಸೇರ್ಪಡೆಗೊಂಡಿದೆ. ಪರಿಸರ ಸಂರಕ್ಷಣೆ, ಆತ್ಮನಿರ್ಭರತೆ, ಸ್ವದೇಶಿ ತಂತ್ರಜ್ಞಾನವನ್ನು ಹೊತ್ತ ದೇಶದ ಮೊದಲ ಹೈಡ್ರೋಜನ್&zwnj; ರೈಲು ಜು.17ರಂದು ಹರ್ಯಾಣದ ಜಿಂದ್&zwnj;ನಿಂದ ಸೋನಿಪತ್&zwnj;ವರೆಗೆ ಸಂಚರಿಸಿದೆ. ಈ ಮೂಲಕ ಹೈಡ್ರೋಜನ್&zwnj; ರೈಲು ಸಂಚಾರ ಆರಂಭಿಸಿದ ವಿಶ್ವದ 4ನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಈ ಹೈಡ್ರೋಜನ್&zwnj; ರೈಲು ಹೇಗಿದೆ? ಹೇಗೆ ಕಾರ್ಯನಿರ್ವಹಿಸುತ್ತದೆ? ಇದು ಪರಿಸರ ಸ್ನೇಹಿ ಎನಿಸಿಕೊಂಡಿರುವುದೇಕೆ? ಹೈಡ್ರೋಜನ್&zwnj; ರೈಲಿಗೆ ತಗುಲುವ ವೆಚ್ಚ ಮತ್ತಿತರ ಮಾಹಿತಿ ಇಲ್ಲಿದೆ.&lt;/p&gt;&lt;h2&gt;&lt;strong&gt;ಗಂಟೆಗೆ 75 ಕಿ.ಮೀ. ವೇಗ&lt;/strong&gt;&lt;/h2&gt;&lt;p&gt;ಹೈಡ್ರೋಜನ್&zwnj;ನಿಂದ ಓಡುವ &lsquo;ನಮೋ ಗ್ರೀನ್&zwnj; ರೈಲ್&zwnj;&rsquo; ಪರೀಕ್ಷಾರ್ಥ ಸಂಚಾರದ ವೇಳೆ 120 ಕಿ.ಮೀ. ಗರಿಷ್ಠ ವೇಗವನ್ನು ತಲುಪಿದೆ. ಆದರೆ ಸುರಕ್ಷತಾ ದೃಷ್ಟಿಕೋನದಿಂದಾಗಿ ವಾಣಿಜ್ಯ ಸಂಚಾರದ ವೇಗಮಿತಿಯನ್ನು 75 ಕಿ.ಮೀಗೆ ನಿರ್ಬಂಧಿಸಲಾಗಿದೆ.&lt;/p&gt;&lt;h3&gt;10 ಬೋಗಿ, 683 ಆಸನ 2300 ಜನರ ಸಂಚಾರ&lt;/h3&gt;&lt;p&gt;ಈ ರೈಲಿನಲ್ಲಿ ಎಂಜಿನ್&zwnj; ಸೇರಿ 10 ಬೋಗಿಗಳಿವೆ. ಅದರಲ್ಲಿ 1200 ಕಿ.ವ್ಯಾಟ್&zwnj; ಸಾಮರ್ಥ್ಯದ 2 ಎಂಜಿನ್&zwnj;ಗಳನ್ನು ಹೊರತುಪಡಿಸಿದರೆ, 8 ಬೋಗಿಗಳಲ್ಲಿ 683 ಆಸನಗಳಿದ್ದು, 2300 ಜನರು ಸಂಚರಿಸಬಹುದಾಗಿದೆ.&lt;/p&gt;&lt;p&gt;&lt;strong&gt;1 ರೈಲಿಗೆ ₹80 ಕೋಟಿ&lt;/strong&gt;&lt;/p&gt;&lt;p&gt;ಒಂದು ಹೈಡ್ರೋಜನ್&zwnj; ರೈಲು ಉತ್ಪಾದಿಸಲು 80 ಕೋಟಿ ರು. ಖರ್ಚಾಗಲಿದೆ. ಸಾಮಾನ್ಯ ಎಲ್&zwnj;ಎಚ್&zwnj;ಬಿ ಕೋಚ್&zwnj;ನ (ಕೆಂಪು ಬಣ್ಣದ) 16 ಬೋಗಿಗಳ ರೈಲಿಗೆ ಸರಿಸುಮಾರು 30-40 ಕೋಟಿ ರು. ವೆಚ್ಚವಾಗುತ್ತದೆ. ಹೈಡ್ರೋಜನ್&zwnj; ರೈಲು ಅವುಗಳಿಗಿಂತ ಅರ್ಧದಷ್ಟು ತುಟ್ಟಿ.&lt;/p&gt;&lt;p&gt;&lt;strong&gt;ರೈಲುಗಳು ಹೇಗೆ ಓಡುತ್ತವೆ?&lt;/strong&gt;&lt;/p&gt;&lt;p&gt;1. ಕಲ್ಲಿದ್ದಲು ರೈಲು: ಕಲ್ಲಿದ್ದಲನ್ನು ಉರಿಸಿ ನೀರು ಕಾಯಿಸಿ, ಅದರಿಂದ ಬರುವ ಹಬೆಯಿಂದ ರೈಲನ್ನು ಓಡಿಸಲಾಗುತ್ತಿತ್ತು&lt;/p&gt;&lt;p&gt;2. ಡೀಸೆಲ್&zwnj; ರೈಲು: ಡೀಸೆಲ್&zwnj; ಅನ್ನು ಇಂಧನವಾಗಿ ಬಳಸಿ ವಿದ್ಯುತ್&zwnj; ಉತ್ಪಾದಿಸಲಾಗುತ್ತದೆ. ಅದನ್ನು ರೈಲಿನ ಚಲನೆಗೆ ಬಳಸಲಾಗುತ್ತದೆ&lt;/p&gt;&lt;p&gt;3. ಎಲೆಕ್ಟ್ರಿಕ್&zwnj; ರೈಲು: ಹಳಿಗಳ ಮೇಲೆ ಅಳವಡಿಸಲಾಗಿರುವ ವಿದ್ಯುತ್&zwnj; ತಂತಿಯನ್ನು ಎಂಜಿನ್&zwnj;ನಲ್ಲಿನ ಪ್ಯಾಂಟೋಗ್ರಾಫ್&zwnj; (ಆ್ಯಂಟಿನಾ ಆಕಾರದ ಕೊಂಡಿ) ಸ್ಪರ್ಶಿಸುತ್ತದೆ. ಆ ವಿದ್ಯುತ್&zwnj; ರೈಲಿನಲ್ಲಿರುವ ಟ್ರಾನ್ಸ್&zwnj;ಫಾರ್ಮರ್&zwnj;ಗೆ ಸರಬರಾಜಾಗುತ್ತದೆ. ಬಳಿಕ ಚಕ್ರಗಳು ತಿರುಗಲಾರಂಭಿಸುತ್ತವೆ.&lt;/p&gt;&lt;p&gt;&lt;strong&gt;ಹೈಡ್ರೋಜನ್&zwnj; ರೈಲಲ್ಲಿ ವಿಶೇಷ ಏನು?&lt;/strong&gt;&lt;/p&gt;&lt;p&gt;ಇವುಗಳ ಪ್ರಮುಖ ಇಂಧನ ಹೈಡ್ರೋಜನ್&zwnj; (ಜಲಜನಕ-ಎಚ್&zwnj;2). ಇದನ್ನು ತುಂಬಿಸಲು ಎಂಜಿನ್&zwnj;ನಲ್ಲಿ ಭಾರ ಒತ್ತಡವಿರುವ ಟ್ಯಾಂಕ್&zwnj; ಅಳವಡಿಸಲಾಗಿರುತ್ತದೆ. ಈ ಟ್ಯಾಂಕ್&zwnj;ನಿಂದ ಬರುವ ಹೈಡ್ರೋಜನ್&zwnj;, ಇಂಧನ ಕೋಶ (ಫ್ಯುಯಲ್ ಸೆಲ್&zwnj;) ಒಳಗೆ ಹೋಗುತ್ತದೆ. ಅಲ್ಲಿ ಹೈಡ್ರೋಜನ್&zwnj; ಮತ್ತು ಆಮ್ಲಜನಕ (ಒ2) ಬೆರೆತಾಗ ಪ್ರೋಟಾನ್&zwnj; ಮತ್ತು ಎಲೆಕ್ಟ್ರಾನ್&zwnj; ಎಂಬ 2 ಅಂಶಗಳು ಉತ್ಪತ್ತಿಯಾಗುತ್ತವೆ. ಇದರಲ್ಲಿ ಎಲೆಕ್ಟ್ರಾನ್&zwnj; ಎಂಬುದು ವಿದ್ಯುತ್&zwnj; ಶಕ್ತಿಯಾಗಿ ಪರಿವರ್ತನೆಗೊಳ್ಳುತ್ತದೆ. ಈ ವಿದ್ಯುತ್&zwnj; ಶಕ್ತಿಯು ನೇರವಾಗಿ ಗಾಲಿಗಳೊಂದಿಗೆ ಸಂಪರ್ಕ ಹೊಂದಿರುತ್ತದೆ. ಇದು ರೈಲಿನ ಚಲನೆಗೆ ಕಾರಣವಾಗುತ್ತದೆ. ಇದರ ಜೊತೆಗೇ ಹೆಚ್ಚುವರಿಯಾಗಿ ವಿದ್ಯುತ್&zwnj; ಲೀಥಿಯಂ ಬ್ಯಾಟರಿಯಲ್ಲಿ ಸಂಗ್ರಹವಾಗುತ್ತದೆ. ಹೀಗೆ ಸಂಗ್ರಹವಾಗುವ ವಿದ್ಯುತ್&zwnj; ಶಕ್ತಿಯು ರೈಲು ನಿಲ್ದಾಣದಿಂದ ಹೊರಡುವ ವೇಳೆ, ಭಾರ ಜಾಸ್ತಿಯಿರುವ ಸಮಯದಲ್ಲಿ ಹೆಚ್ಚುವರಿ ಶಕ್ತಿಯನ್ನು ಪೂರೈಸುತ್ತದೆ. ಇಂಧನ ಕೋಶದಲ್ಲಿ ಹೈಡ್ರೋಜನ್&zwnj; ಮತ್ತು ಆಮ್ಲಜನಕ ಬೆರೆತಾಗ ಉತ್ಪತ್ತಿಯಾಗುವುದು ನೀರು (ಎಚ್&zwnj;2ಒ) ಮಾತ್ರ. ಹೀಗಾಗಿ ಈ ರೈಲುಗಳು ಹೊಗೆ ಬದಲಿಗೆ ನೀರಿನ ಆವಿಯನ್ನು ಹೊರಸೂಸುತ್ತವೆ. ಆದ್ದರಿಂದಲೇ ಇದನ್ನು ಪರಿಸರ ಸ್ನೇಹಿ ಎನ್ನಲಾಗುತ್ತದೆ.&lt;/p&gt;&lt;p&gt;&lt;strong&gt;ಭಾರತೀಯ ರೈಲ್ವೆಯ 4ನೇ ಮಾದರಿ ಎಂಜಿನ್&zwnj;&lt;/strong&gt;&lt;/p&gt;&lt;p&gt;ಮೊದಲು ಸ್ಟೀಂ ಎಂಜಿನ್&zwnj; (ಉಗಿಬಂಡಿ), ಅದರ ನಂತರ ಡೀಸೆಲ್&zwnj; ಎಂಜಿನ್&zwnj;, ಬಳಿಕ ವಿದ್ಯುತ್&zwnj; ಎಂಜಿನ್&zwnj;ಗಳನ್ನು ರೈಲ್ವೆ ಬಳಸಲಾರಂಭಿಸಿತು. ಈಗ ಈ ಸಾಲಿಗೆ ನಾಲ್ಕನೇ ಇಂಧನ ಮಾದರಿಯಾದ ಹೈಡ್ರೋಜನ್&zwnj; ರೈಲು ಸೇರಿಕೊಳ್ಳುತ್ತಿದೆ&lt;/p&gt;&lt;p&gt;&lt;strong&gt;ಭಾರತದ್ದು ವಿಶ್ವದ ಬಲಿಷ್ಠ ಹೈಡ್ರೋಜನ್&zwnj; ರೈಲು&lt;/strong&gt;&lt;/p&gt;&lt;p&gt;ಜಗತ್ತಿನಲ್ಲಿ ಹೈಡ್ರೋಜನ್&zwnj; ರೈಲು ಮೊದಲು ಆರಂಭವಾಗಿದ್ದು ಜರ್ಮನಿಯಲ್ಲಿ. ಆದರೆ ಅಲ್ಲಿನ ರೈಲಿಗೆ ಕೇವಲ 2-4 ಬೋಗಿಗಳಿದ್ದು, 300 ಜನರನ್ನಷ್ಟೇ ಹೊತ್ತೊಯ್ಯಬಲ್ಲದು. ಮಿಕ್ಕಂತೆ ಜಪಾನ್&zwnj;ನಲ್ಲಿ ಜನಸಂಚಾರಕ್ಕೆ ಈ ರೈಲು ಇನ್ನೂ ಮುಕ್ತವಾಗಿಲ್ಲ. ದಕ್ಷಿಣ ಕೊರಿಯಾ, ಅಮೆರಿಕದಲ್ಲಿ ಕೇವಲ 120-150 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯದ ರೈಲುಗಳಿವೆ. ಭಾರತದ &lsquo;ನಮೋ ಗ್ರೀನ್&zwnj; ರೈಲ್&zwnj;&rsquo; 10 ಬೋಗಿಗಳನ್ನು ಒಳಗೊಂಡಿದ್ದು, 2600 ಜನರನ್ನು ಹೊತ್ತೊಯ್ಯಬಲ್ಲದ್ದಾಗಿದೆ. ಇದು ವಿಶ್ವದ ಅತಿ ಉದ್ದದ ಮತ್ತು ಶಕ್ತಿಶಾಲಿ ಹೈಡ್ರೋ ರೈಲು ಎಂಬ ಕೀರ್ತಿಗೆ ಪಾತ್ರವಾಗಲಿದೆ.&lt;/p&gt;&lt;p&gt;&lt;strong&gt;ಹಳೆ ರೈಲು ಹೊಸ ಹುರುಪು:&lt;/strong&gt;&lt;/p&gt;&lt;p&gt;ಭಾರತವು ಹಾಲಿ ಸೇವೆಯಲ್ಲಿರುವ ಡಿಇಎಂಯು (ಡೆಮು) ರೈಲುಗಳನ್ನು ಹೈಡ್ರೋಜನ್&zwnj; ರೈಲುಗಳಾಗಿ ಪರಿವರ್ತಿಸುತ್ತಿದೆ. ಡೆಮು ಎಂಜಿನ್&zwnj;ನಲ್ಲಿನ ಡೀಸೆಲ್&zwnj; ಯಂತ್ರಗಳನ್ನು ಸಂಪೂರ್ಣವಾಗಿ ತೆಗೆದು ಹೈಡ್ರೋಜನ್&zwnj; ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ. ಇದರಿಂದಾಗಿ ಹೊಸದಾಗಿ ರೈಲು ತಯಾರಿಸುವ ಕೆಲಸ ತಪ್ಪುತ್ತಿದೆ.&lt;/p&gt;&lt;p&gt;&lt;strong&gt;3000 ಕೇಜಿ ಹೈಡ್ರೋಜನ್&zwnj; ಸಂಗ್ರಹ ಕೇಂದ್ರ ಸ್ಥಾಪನೆ&lt;/strong&gt;&lt;/p&gt;&lt;p&gt;ಹೈಡ್ರೋ ರೈಲಿಗಾಗಿ ಹರ್ಯಾಣದ ಜಿಂದ್&zwnj;ನಲ್ಲಿ 3000 ಕೇಜಿ ಸಾಮರ್ಥ್ಯದ ಹೈಡ್ರೋಜನ್&zwnj; ಕೇಂದ್ರವನ್ನು ಸ್ಥಾಪಿಸಲಾಗಿದೆ. ಪೆಟ್ರೋಲಿಯಂ ಮತ್ತು ಸ್ಫೋಟಕಾ ಸುರಕ್ಷತಾ ಸಂಸ್ಥೆ (ಪಿಇಎಸ್&zwnj;ಓ) ಸುರಕ್ಷತಾ ಪರವಾನಗಿಯನ್ನು ವಿತರಿಸಿದೆ.&lt;/p&gt;&lt;p&gt;&lt;strong&gt;880 ಕೇಜಿ ಜಲಜನಕ ಸಾಮರ್ಥ್ಯ&lt;/strong&gt;&lt;/p&gt;&lt;p&gt;ರೈಲಿನಲ್ಲಿ ಎರಡೂ ಬದಿ ಎಂಜಿನ್&zwnj; ಇದ್ದು, ಪ್ರತಿ ಎಂಜಿನ್&zwnj;ನಲ್ಲಿ 440 ಕೇಜಿ ಸಾಂದ್ರೀಕೃತ ಜಲಜನಕ (ಕಂಪ್ರೆಸ್ಡ್&zwnj; ಹೈಡ್ರೋಜನ್&zwnj;) ಸಂಗ್ರಹಿಸುವ ಟ್ಯಾಂಕ್&zwnj;ಗಳಿವೆ. ರೈಲು ಪ್ರತಿ ಕಿ.ಮೀ. ಸಂಚಾರಕ್ಕೆ 1.18 ಕೇಜಿ ಹೈಡ್ರೋಜನ್&zwnj; ಬಳಸಲಿದೆ. ಹೀಗಾಗಿ ಜಿಂದ್&zwnj; ಮತ್ತು ಸೋನಿಪತ್&zwnj; ಮಾರ್ಗದಲ್ಲಿ ದಿನಕ್ಕೆ 2 ಟ್ರಿಪ್&zwnj;ಗಳನ್ನು ಪೂರೈಸುವ ರೈಲು 300 ಕೇಜಿ ಜಲಜನಕ ಬಳಸಲಿದೆ ಎಂದು ಅಂದಾಜಿಸಲಾಗಿದೆ.&lt;/p&gt;&lt;p&gt;&lt;strong&gt;ಶೂನ್ಯ ಹೊರಸೂಸುವಿಕೆ ಗುರಿ ಸಾಕಾರಕ್ಕೆ ಪೂರಕ:&lt;/strong&gt;&lt;/p&gt;&lt;p&gt;ಭಾರತವು 2070ರ ವೇಳೆಗೆ ಶೂನ್ಯ ಕಾರ್ಬನ್&zwnj; ಹೊರಸೂಸುವಿಕೆಯ ಗುರಿ ಹೊಂದಿದ್ದು, ಹೈಡ್ರೋಜನ್&zwnj; ರೈಲುಗಳು ಯಾವುದೇ ರೀತಿಯ ಕಾರ್ಬನ್&zwnj; ಹೊರಚೆಲ್ಲದ ಕಾರಣ, ಗುರಿ ಸಾಧನೆಗೆ ಇದು ಅತ್ಯಂತ ದೊಡ್ಡ ಮೈಲುಗಲ್ಲಾಗಲಿದೆ.&lt;/p&gt;&lt;p&gt;ಎಲ್ಲಿ ಉಪಯೋಗ:&lt;/p&gt;&lt;p&gt;ಈ ರೈಲುಗಳು ಇನ್ನೂ ವಿದ್ಯುದ್ದೀಕರಣಗೊಳ್ಳದ ಮಾರ್ಗದಲ್ಲಿ ಡೀಸೆಲ್&zwnj; ರೈಲುಗಳಿಗೆ ಪರ್ಯಾಯವಾಗಿ ಬಳಸಲು ಬಹಳ ಉಪಯುಕ್ತವಾಗಿವೆ. ಭಾರತೀಯ ರೈಲ್ವೆಯು ಈಗಾಗಲೇ 10 ರೈಲುಗಳ ಉತ್ಪಾದನೆಯ ಗುರಿ ಹೊಂದಿದೆ.&lt;/p&gt;&lt;p&gt;ಫಾಸಿಲ್&zwnj; ಇಂಧನದ ಮೇಲಿನ ಹೊರೆ ಇಳಿಕೆ&lt;/p&gt;&lt;p&gt;ಭಾರತೀಯ ರೈಲ್ವೆಯು 2024-25ರ ಆರ್ಥಿಕ ವರ್ಷದಲ್ಲಿ ಸರಿಸುಮಾರು 108 ಕೋಟಿ ಲೀ. ಡೀಸೆಲ್&zwnj; ಬಳಸಿದೆ. ಭಾರತವು ಕಚ್ಚಾ ತೈಲವನ್ನು ವಿದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತಿರುವ ಕಾರಣ ಹೈಡ್ರೋ ರೈಲಿನ ಅಭಿವೃದ್ಧಿಯು ಗಣನೀಯವಾಗಿ ಕಚ್ಚಾ ತೈಲದ ಅವಲಂಬನೆ ಇಳಿಸಲಿದೆ.&lt;/p&gt;]]></content:encoded>
            <category>India</category>
            <dc:creator>Sujatha NR</dc:creator>
            <atom:link href="https://www.kannadaprabha.in/india-news/india-gets-its-first-gas-powered-water-emitting-train/articleshow-40b80ma"/>
        </item>
        <item>
            <title><![CDATA[ಇರಾನ್‌ನ ವಿದ್ಯುತ್‌, ನೀರು ಶುದ್ಧೀಕರಣ ಘಟಕ ಧ್ವಂಸ]]></title>
            <link>https://www.kannadaprabha.in/india-news/kuwait-says-iran-has-struck-water-desalination-plant-second-such-attack-in-2-days/articleshow-4yva416</link>
            <guid isPermaLink="true">https://www.kannadaprabha.in/india-news/kuwait-says-iran-has-struck-water-desalination-plant-second-such-attack-in-2-days/articleshow-4yva416</guid>
            <pubDate>Sun, 19 Jul 2026 03:00:00 +0530</pubDate>
            <description><![CDATA[&lt;p&gt;ಇರಾನ್&zwnj;ನ ದಕ್ಷಿಣ ಹಾರ್ಮೋಜ್ಗಾನ್&zwnj; ಪ್ರಾಂತ್ಯದ ವಿದ್ಯುತ್&zwnj; ಮತ್ತು ನೀರು ಶುದ್ಧೀಕರಣ ಸ್ಥಾವರದ ಮೇಲೆ ಅಮೆರಿಕದ ದಾಳಿ ಮಾಡಿದರೆ, ಕುವೈತ್&zwnj;ನ ಇದೇ ಘಟಕಗಳ ಮೇಲೆ ದಾಳಿ ಮಾಡುವ ಮೂಲಕ ಇರಾನ್&zwnj; ಪ್ರತೀಕಾರ ತೆಗೆದುಕೊಂಡಿದೆ.&lt;/p&gt;]]></description>
            <media:content url="https://static-assets.asianetnews.com/kp/json/18072026/pictures/BOOOD_614.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಟೆಹ್ರಾನ್/ವಾಷಿಂಗ್ಟನ್&zwnj;/ದುಬೈ : &amp;nbsp;&lt;/strong&gt;ಅಮೆರಿಕ ಮತ್ತು ಇರಾನ್&zwnj; ನಡುವಿನ ಹೊಸ ಸುತ್ತಿನ ಸಮರ ಶನಿವಾರ 7 ದಿನಗಳನ್ನು ಪೂರೈಸಿದ್ದು, ಎರಡೂ ದೇಶಗಳು ದಾಳಿ ಪ್ರತಿದಾಳಿ ಮುಂದುವರಿಸಿವೆ. ಇರಾನ್&zwnj;ನ ದಕ್ಷಿಣ ಹಾರ್ಮೋಜ್ಗಾನ್&zwnj; ಪ್ರಾಂತ್ಯದ ವಿದ್ಯುತ್&zwnj; ಮತ್ತು ನೀರು ಶುದ್ಧೀಕರಣ ಸ್ಥಾವರದ ಮೇಲೆ ಅಮೆರಿಕದ ದಾಳಿ ಮಾಡಿದರೆ, ಕುವೈತ್&zwnj;ನ ಇದೇ ಘಟಕಗಳ ಮೇಲೆ ದಾಳಿ ಮಾಡುವ ಮೂಲಕ ಇರಾನ್&zwnj; ಪ್ರತೀಕಾರ ತೆಗೆದುಕೊಂಡಿದೆ. &amp;nbsp;&lt;/p&gt;&lt;h2&gt;&lt;strong&gt;ಅಮೆರಿಕ ದಾಳಿ:&lt;/strong&gt;&lt;/h2&gt;&lt;p&gt;ಅಮೆರಿಕವು ಇರಾನ್&zwnj;ನ ದಕ್ಷಿಣ ಹಾರ್ಮೋಜ್ಗಾನ್ ಪ್ರಾಂತ್ಯದಲ್ಲಿ ವಿದ್ಯುತ್ ಮತ್ತು ನೀರು ಶುದ್ಧೀಕರಣ ಸ್ಥಾವರವನ್ನು ಧ್ವಂಸ ಮಾಡಿದೆ. ಇರಾನ್&zwnj; ಕರಾವಳಿಯ ಬೊಂಜಿ ಗ್ರಾಮ, ಸುರಂಗಗಳು, ಸೇತುವೆಗಳು, ಬಂದರ್ ಅಬ್ಬಾಸ್&zwnj;ಗೆ ಹೋಗುವ ಹೆದ್ದಾರಿಗಳು ಮತ್ತು ಕ್ವೆಷ್ಮ್ ದ್ವೀಪದ ಮೇಲೆ ದಾಳಿಗಳು ನಡೆದಿವೆ. ಇರಾನ್ ಪ್ರಕಾರ, ಅಮೆರಿಕದ ದಾಳಿಗೆ ಕನಿಷ್ಠ 46 ಜನ ಸಾವಿಗೀಡಾಗಿದ್ದು, 400ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. &amp;nbsp;&lt;/p&gt;&lt;h3&gt;&lt;strong&gt;ಇರಾನ್&zwnj; ಪ್ರತಿದಾಳಿ:&lt;/strong&gt;&lt;/h3&gt;&lt;p&gt;ಇರಾನ್ ಶನಿವಾರ ಕುವೈತ್&zwnj;ನ ನೀರು ಶುದ್ಧೀಕರಣ ಮತ್ತು ವಿದ್ಯುತ್ ಉತ್ಪಾದನಾ ಸ್ಥಾವರದ ಮೇಲೆ ದಾಳಿ ಮಾಡಿದೆ. &lsquo;ಇರಾನ್&zwnj;ನ ಕ್ಷಿಪಣಿ ಮತ್ತು ಡ್ರೋನ್&zwnj;ಗಳನ್ನು ಅಂತರಿಕ್ಷದಲ್ಲೇ ನಾಶಪಡಿಸಲಾಗಿದೆ. ಆದರೂ ಕೆಲವು ಸ್ಥಾವರಗಳು ದಾಳಿಗೊಳಗಾಗಿ ಬೆಂಕಿ ಉಂಟಾಗಿದೆ. ಫೈರ್ ಫೈಟರ್&zwnj;ಗಳು ಮತ್ತು ಒಬ್ಬ ಕಾರ್ಮಿಕರು ಗಾಯಗೊಂಡಿದ್ದಾರೆ&rsquo; ಎಂದು ಕುವೈತ್&zwnj; ಅಧಿಕಾರಿಗಳು ತಿಳಿಸಿದ್ದಾರೆ. ಇರಾನ್ ಇತರ ಗಲ್ಫ್ ದೇಶಗಳ ಮೇಲೂ ದಾಳಿ ನಡೆಸಿದೆ ಎಂದು ವರದಿಯಾಗಿದೆ.&lt;/p&gt;&lt;p&gt;&lt;strong&gt;ರಕ್ತಕ್ಕಾಗಿ ರಕ್ತ: ಟ್ರಂಪ್&zwnj; ಕುಟಂಬದ ವಿರುದ್ಧ ಇರಾನ್&zwnj; ಪೋಸ್ಟರ್&zwnj;&lt;/strong&gt;&lt;/p&gt;&lt;p&gt;ರಕ್ತಕ್ಕಾಗಿ ರಕ್ತ ಎಂಬ ಪರ್ಷಿಯನ್ ಘೋಷಣೆಯುಳ್ಳ ಪೋಸ್ಟರ್&zwnj; ಟೆಹ್ರಾನ್&zwnj;ನಲ್ಲಿ ಪ್ರತ್ಯಕ್ಷವಾಗಿದೆ. ಇದರಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಕುಟುಂಬವು ಅಮೆರಿಕದ ಧ್ವಜವನ್ನು ಹೊದಿಸಿದ ಶವಪೆಟ್ಟಿಗೆಯ ಮೇಲೆ ಇದೆ. ಇದರಲ್ಲಿ ಟ್ರಂಪ್ ಜೊತೆಗೆ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಮತ್ತು ಇವಾಂಕಾ, ಡೊನಾಲ್ಡ್ ಜೂನಿಯರ್, ಎರಿಕ್, ಟಿಫಾನಿ ಮತ್ತು ಬ್ಯಾರನ್ ಟ್ರಂಪ್ ಸೇರಿದಂತೆ ಅವರ ಐದು ಮಕ್ಕಳಿದ್ದಾರೆ. ಉರಿಯುತ್ತಿರುವ ಶ್ವೇತಭವನವು ಹಿನ್ನೆಲೆಯಾಗಿ ಇದೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/kuwait-says-iran-has-struck-water-desalination-plant-second-such-attack-in-2-days/articleshow-4yva416"/>
        </item>
        <item>
            <title><![CDATA[21 ದಿನದಿಂದ ನಿರಶನ ನಿರತ ವಾಂಗ್ಚುಕ್‌ ಆಸ್ಪತ್ರೆಗೆ ಶಿಫ್ಟ್‌ - ಬೆಡ್‌ಶೀಟ್‌ ಸುತ್ತಿ ಹೊತ್ತೊಯ್ದ ಪೊಲೀಸರು]]></title>
            <link>https://www.kannadaprabha.in/india-news/delhi-police-shifts-sonam-wangchuk-to-safdarjung-hospital-on-21st-day-of-hunger-strike/articleshow-aagnfcg</link>
            <guid isPermaLink="true">https://www.kannadaprabha.in/india-news/delhi-police-shifts-sonam-wangchuk-to-safdarjung-hospital-on-21st-day-of-hunger-strike/articleshow-aagnfcg</guid>
            <pubDate>Sun, 19 Jul 2026 02:45:00 +0530</pubDate>
            <description><![CDATA[ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್&zwnj; ರಾಜೀನಾಮೆಗೆ ಆಗ್ರಹಿಸಿ ಕಳೆದ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್ಚುಕ್&zwnj; ಅವರನ್ನು ನಾಗರಿಕರ ವೇಷದಲ್ಲಿ ಬಂದ ಪೊಲೀಸರು ನಾಟಕೀಯವಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.]]></description>
            <media:content url="https://static-assets.asianetnews.com/kp/json/18072026/pictures/WANG_787.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್&zwnj; ರಾಜೀನಾಮೆಗೆ ಆಗ್ರಹಿಸಿ ಕಳೆದ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್ಚುಕ್&zwnj; ಅವರನ್ನು ನಾಗರಿಕರ ವೇಷದಲ್ಲಿ ಬಂದ ಪೊಲೀಸರು ನಾಟಕೀಯವಾಗಿ ಆಸ್ಪತ್ರೆಗೆ ಸ್ಥಳಾಂತರಿಸಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಈ ವೇಳೆ ಜಿರಳೆ ಪಕ್ಷದ ಕಾರ್ಯಕರ್ತರು ಮಾನವ ಸರಪಳಿ ರಚಿಸಿ ಕೋಲಾಹಲವೆಬ್ಬಿಸಿದ ಪ್ರಸಂಗವೂ ನಡೆದಿದೆ.&lt;/p&gt;&lt;p&gt;ಶನಿವಾರ ಮುಂಜಾನೆ ಜಂತರ್&zwnj; ಮಂತರ್&zwnj; ವೇದಿಕೆ ಮೇಲೆ ಇತರ ಪ್ರತಿಭಟನಾಕಾರರ ಜತೆ ವಾಂಗ್ಚುಕ್&zwnj; ಕುಳಿತಿದ್ದರು. ಆಗ ಪೊಲೀಸರು ಸಾಮಾನ್ಯ ನಾಗರಿಕರ ವೇಷಭೂಷಣದಲ್ಲಿ ಆಗಮಿಸಿದ್ದಾರೆ. ಕೆಲವರು ನೀಲಿ ಮತ್ತು ಬಿಳಿ ಶರ್ಟ್&zwnj;ಗಳನ್ನು ತೊಟ್ಟಿದ್ದರೆ, ಇನ್ನು ಕೆಲವರು ಹಳದಿ, ಕೇಸರಿ, ಕಪ್ಪು ಟಿ-ಶರ್ಟ್&zwnj;ಗಳನ್ನು ಧರಿಸಿದ್ದರು.&amp;nbsp;&lt;/p&gt;&lt;p&gt;&amp;nbsp;ಅಲ್ಲಿ ಏನು ನಡೆಯುತ್ತಿದೆ ಎಂದು ಸುತ್ತಮುತ್ತಲಿನವರಿಗೆ ಅರ್ಥವಾಗುವ ಮುನ್ನವೇ, ಪೊಲೀಸರು ಬಿಳಿ ಬೆಡ್&zwnj;ಶೀಟ್&zwnj;ನಲ್ಲಿ ವಾಂಗ್ಚುಕ್&zwnj;ರನ್ನು ಸುತ್ತಿ ಅಲ್ಲಿಂದ ಕೊಂಡೊಯ್ದಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಅಡೆತಡೆ ಉಂಟುಮಾಡಿದ್ದರಿಂದ ಸಣ್ಣ ಪ್ರಮಾಣದ ಗದ್ದಲ ಉಂಟಾಗಿದೆ. ನಂತರ ಅವರನ್ನು ಸಫ್ದರ್&zwnj;ಗಂಜ್&zwnj; ಆಸ್ಪತ್ರೆಗೆ ದಾಖಲಿಸಲಾಗಿದೆ.&lsquo;ಹೈಕೋರ್ಟ್&zwnj;ನ ಆದೇಶ ಹಾಗೂ ಹದಗೆಡುತ್ತಿರುವ ಆರೋಗ್ಯದ ಕಾರಣದಿಂದಾಗಿ ತಜ್ಞ ವೈದ್ಯರ ಸಲಹೆಯ ಮೇರೆಗೆ ವಾಂಗ್ಚುಕ್&zwnj;ರನ್ನು ಪ್ರತಿಭಟನಾ ಸ್ಥಳದಿಂದ ಕರೆದೊಯ್ಯಲಾಯಿತು. ಸಾಧ್ಯವಾದಷ್ಟು ಶಾಂತ ರೀತಿಯಲ್ಲಿ ಅವರನ್ನು ಸ್ಥಳಾಂತರಿಸಿದ್ದೇವೆ. ಅವರಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ&rsquo; ಎಂದು ಪೊಲೀಸರು ತಿಳಿಸಿದ್ದಾರೆ. &amp;nbsp;&lt;/p&gt;&lt;h2&gt;&lt;strong&gt;ಇತರ ಮೂವರಿಂದಲೂ ಉಪವಾಸ:&amp;nbsp;&lt;/strong&gt;&lt;/h2&gt;&lt;p&gt;&lt;strong&gt;&amp;nbsp;&lt;/strong&gt;ಸೋನಂ ವಾಂಗ್ಚುಕ್&zwnj; ಜತೆಯಲ್ಲೇ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ ಮೂವರು ಕಾರ್ಯಕರ್ತರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇವರ ಉಪವಾಸವೂ 21ನೇ ದಿನ ಪೂರ್ಣಗೊಳಿಸಿದೆ. ಶುಕ್ರವಾರ ವಾಂಗ್ಚುಕ್&zwnj;ರನ್ನು ಕರೆದೊಯ್ಯಲು ಬಂದ ಪೊಲೀಸರು ಈ ಮೂವರ ಸ್ಥಳಾಂತರಕ್ಕೂ ಯತ್ನಿಸಿದ್ದಾರೆ. ಆದರೆ ಜಿರಳೆ ಕಾರ್ಯಕರ್ತರು ಮಾನವ ಸರಪಳಿ ರಚಿಸಿ ತಡೆಯೊಡ್ಡಿದ್ದರಿಂದ ಇವರ ಸ್ಥಳಾಂತರ ವಿಫಲವಾಗಿದೆ. ಈ ಮೂವರ ಪೈಕಿ ನೇಹಾ ಎಂಬಾಕೆಯ ರಕ್ತದಲ್ಲಿನ ಸಕ್ಕರೆ ಮಟ್ಟ ಅಪಾಯಕಾರಿ ಮಟ್ಟಕ್ಕೆ ಕುಸಿದಿದ್ದರೆ, ಆಮೀನ್ ಮತ್ತು ಮನೀಶ್ 14 ಮತ್ತು 10 ಕೆಜಿ ತೂಕ ಕಳೆದುಕೊಂಡಿದ್ದಾರೆ. &amp;nbsp;&lt;/p&gt;&lt;h3&gt;&lt;strong&gt;ಪೊಲೀಸರಿಂದ ಹಲ್ಲೆ- ದೀಪ್ಕೆ ಆರೋಪ:&lt;/strong&gt;&lt;/h3&gt;&lt;p&gt;ಈ ಬೆಳವಣಿಗೆ ಬೆನ್ನಲ್ಲೇ ಜಿರಳೆ ಪಕ್ಷದ ಸ್ಥಾಪಕ ಅಭಿಜೀತ್&zwnj; ದೀಪ್ಕೆ, ಪೊಲೀಸರು ನನಗೆ ಹೊಡೆದರು ಎಂದು ಆರೋಪಿಸಿದ್ದಾರೆ. ಎಕ್ಸ್&zwnj;ನಲ್ಲಿ ಪೋಸ್ಟ್&zwnj; ಮಾಡಿರುವ ಅವರು, &lsquo;ವಾಂಗ್ಚುಕ್&zwnj;ರನ್ನು ಕೊಂಡೊಯ್ಯಲು ಪೊಲೀಸರು ಬಂದಾಗ ಫ್ರೆಶ್&zwnj; ಅಪ್&zwnj; ಆಗಲು ನಾನು ಸ್ನೇಹಿತನ ಮನೆಗೆ ಹೋಗಿದ್ದೆ. ದೆಹಲಿ ಪೊಲೀಸರು ನನ್ನ ಮೇಲೆ ಹಲ್ಲೆ ನಡೆಸಿ, ನನ್ನನ್ನು ವಶಕ್ಕೆ ಪಡೆದಿದ್ದಾರೆ. 20 ದಿನಗಳ ಉಪವಾಸ ಸತ್ಯಾಗ್ರಹದಿಂದ ಅಸ್ವಸ್ಥರಾಗಿರುವ ವೃದ್ಧನನ್ನು (ವಾಂಗ್ಚುಕ್&zwnj;) ಎತ್ತಿಕೊಂಡು, ಬಿಳಿ ಬೆಡ್&zwnj;ಶೀಟ್&zwnj;ನಲ್ಲಿ ಸುತ್ತಿ ಕರೆದೊಯ್ದಿದ್ದಾರೆ. ಇದು ರಾಷ್ಟ್ರೀಯ ಅವಮಾನ&rsquo; ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/delhi-police-shifts-sonam-wangchuk-to-safdarjung-hospital-on-21st-day-of-hunger-strike/articleshow-aagnfcg"/>
        </item>
        <item>
            <title><![CDATA[ರಷ್ಯಾ ತೈಲ ಖರೀದಿಸಿದ್ರೆ 500% ಬದಲು 100% ತೆರಿಗೆ : ಅಮೆರಿಕ ಮಸೂದೆ]]></title>
            <link>https://www.kannadaprabha.in/india-news/relief-for-india-china-as-us-lowers-500-russian-oil-tariff-threat-to-100/articleshow-ab3s5ul</link>
            <guid isPermaLink="true">https://www.kannadaprabha.in/india-news/relief-for-india-china-as-us-lowers-500-russian-oil-tariff-threat-to-100/articleshow-ab3s5ul</guid>
            <pubDate>Thu, 16 Jul 2026 04:56:27 +0530</pubDate>
            <description><![CDATA[&lt;p&gt;ರಷ್ಯಾದ ಆರ್ಥಿಕ ಶಕ್ತಿಯನ್ನು ಕುಂಠಿತಗೊಳಿಸುವ ಉದ್ದೇಶದಿಂದ ಜಾರಿಗೆ ತರಲಾದ &lsquo;ರಷ್ಯಾ ನಿರ್ಬಂಧ ಮಸೂದೆ&rsquo;ಗೆ ಅಮೆರಿಕ ಸಂಸತ್ತು ತಿದ್ದುಪಡಿ ತಂದಿದೆ. ಇದರಲ್ಲಿ, ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಶೇ.500ರಷ್ಟು ವಿಧಿಸಲಾಗುತ್ತಿದ್ದ ತೆರಿಗೆಯನ್ನು, ಶೇ.100ಕ್ಕೆ ಇಳಿಸುವ ಪ್ರಸ್ತಾವ ಮಾಡಲಾಗಿದೆ.&lt;/p&gt;]]></description>
            <media:content url="https://static-assets.asianetnews.com/kp/json/15072026/pictures/TRUMP_DONALD_796.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ವಾಷಿಂಗ್ಟನ್&zwnj; &lt;/strong&gt;: ರಷ್ಯಾದ ಆರ್ಥಿಕ ಶಕ್ತಿಯನ್ನು ಕುಂಠಿತಗೊಳಿಸುವ ಉದ್ದೇಶದಿಂದ ಜಾರಿಗೆ ತರಲಾದ &lsquo;ರಷ್ಯಾ ನಿರ್ಬಂಧ ಮಸೂದೆ&rsquo;ಗೆ ಅಮೆರಿಕ ಸಂಸತ್ತು ತಿದ್ದುಪಡಿ ತಂದಿದೆ. ಇದರಲ್ಲಿ, ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಶೇ.500ರಷ್ಟು ವಿಧಿಸಲಾಗುತ್ತಿದ್ದ ತೆರಿಗೆಯನ್ನು, ಶೇ.100ಕ್ಕೆ ಇಳಿಸುವ ಪ್ರಸ್ತಾವ ಮಾಡಲಾಗಿದೆ. ಇದು ಅಂಗೀಕಾರಗೊಂಡರೆ, ಭಾರತ ಹಾಗೂ ಚೀನಾಕ್ಕೆ ದೊಡ್ಡ ನಿರಾಳತೆ ತರುವ ಸಾಧ್ಯತೆ ಇದೆ.&lt;/p&gt;&lt;h3&gt;4 ವರ್ಷದಿಂದ ಉಕ್ರೇನ್&zwnj; ವಿರುದ್ಧ ರಷ್ಯಾ ಸಮರ&lt;/h3&gt;&lt;p&gt;ಕಳೆದ 4 ವರ್ಷದಿಂದ ಉಕ್ರೇನ್&zwnj; ವಿರುದ್ಧ ರಷ್ಯಾ ಸಮರ ನಡೆಸುತ್ತಿದೆ. ರಷ್ಯಾದ ಆರ್ಥಿಕತೆಯನ್ನು ಕುಂಠಿತಗೊಳಿಸಿದರೆ, ಯುದ್ಧ ನಿಲ್ಲಿಸಬಹುದು ಎಂಬ ಲೆಕ್ಕಾಚಾರದಲ್ಲಿ ಅಮೆರಿಕ ಕೆಲವು ಕಠಿಣ ನಿರ್ಬಂಧಗಳನ್ನು ಜಾರಿಗೆ ತಂದಿತ್ತು. ಅದರಲ್ಲಿ ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ ಶೇ.500ರಷ್ಟು ಕಠಿಣ ತೆರಿಗೆ ವಿಧಿಸುವುದೂ ಸೇರಿತ್ತು. ಇದೀಗ ಆ ತೆರಿಗೆಯನ್ನು ಶೇ.100ಕ್ಕೆ ಇಳಿಸಲು ಪ್ರಸ್ತಾವಿಸಲಾಗಿದೆ. ಇದು ಜಾರಿಗೆ ಬಂದರೆ ಅಧ್ಯಕ್ಷ ಡೊನಾಲ್ಡ್&zwnj; ಟ್ರಂಪ್&zwnj;ಗೆ ಶೇ.100ರವರೆಗೆ ತೆರಿಗೆ ವಿಧಿಸುವ ಅಧಿಕಾರ ಸಿಗಲಿದೆ. &amp;nbsp;&lt;/p&gt;&lt;h2&gt;&lt;strong&gt;ಯಾರಿಗೆ ಲಾಭ?:&lt;/strong&gt;&lt;/h2&gt;&lt;p&gt;ಚೀನಾ, ಭಾರತ, ಸ್ಲೊವಾಕಿಯಾ, ಹಂಗರಿ ಮತ್ತು ಅಜರ್ಬೈಜಾನ್ ರಷ್ಯಾದಿಂದ ತೈಲ ಖರೀದಿಸುವ ಅಗ್ರ ದೇಶಗಳಾದರೆ, ಚೀನಾ, ಫ್ರಾನ್ಸ್, ಜಪಾನ್, ಹಂಗರಿ ಮತ್ತು ಬೆಲ್ಜಿಯಂ ಹೆಚ್ಚು ಅನಿಲ ಖರೀದಿಸುವ ದೇಶಗಳು. ತೆರಿಗೆಯನ್ನು ಇಳಿಸಿದರೆ ಭಾರತ ಸೇರಿದಂತೆ ಈ ದೇಶಗಳಿಗೆ ಲಾಭವಾಗಲಿದೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/relief-for-india-china-as-us-lowers-500-russian-oil-tariff-threat-to-100/articleshow-ab3s5ul"/>
        </item>
        <item>
            <title><![CDATA[ಜೀವ ಅಮೂಲ್ಯ : ಸೋನಂ ಜೀವ ರಕ್ಷಣೆಗೆ ದಿಲ್ಲಿ ಹೈಕೋರ್ಟ್‌ ಸೂಚನೆ]]></title>
            <link>https://www.kannadaprabha.in/india-news/-do-whatever-it-takes-to-save-sonam-wangchuk-s-life-high-court-to-centre/articleshow-cbohfq0</link>
            <guid isPermaLink="true">https://www.kannadaprabha.in/india-news/-do-whatever-it-takes-to-save-sonam-wangchuk-s-life-high-court-to-centre/articleshow-cbohfq0</guid>
            <pubDate>Fri, 17 Jul 2026 04:00:00 +0530</pubDate>
            <description><![CDATA[&lsquo;ಪ್ರತಿಯೊಬ್ಬ ನಾಗರಿಕರ ಜೀವ ಅಮೂಲ್ಯವಾದದ್ದು. ಹಾಗಾಗಿ ಉಪವಾಸನಿರತ ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್ಚುಕ್ ಅವರ ಜೀವ ಉಳಿಸಲು ಯಾವ ಕ್ರಮವನ್ನಾದರೂ ಕೈಗೊಳ್ಳಿ&rsquo; ಎಂದು ದೆಹಲಿ ಹೈಕೋರ್ಟ್&zwnj; ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.]]></description>
            <media:content url="https://static-assets.asianetnews.com/kp/json/16072026/pictures/WANGCHUK_423.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ನವದೆಹಲಿ : &amp;nbsp;&lt;/strong&gt;&lsquo;ಪ್ರತಿಯೊಬ್ಬ ನಾಗರಿಕರ ಜೀವ ಅಮೂಲ್ಯವಾದದ್ದು. ಹಾಗಾಗಿ ಉಪವಾಸನಿರತ ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್ಚುಕ್ ಅವರ ಜೀವ ಉಳಿಸಲು ಯಾವ ಕ್ರಮವನ್ನಾದರೂ ಕೈಗೊಳ್ಳಿ&rsquo; ಎಂದು ದೆಹಲಿ ಹೈಕೋರ್ಟ್&zwnj; ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.&lt;/p&gt;&lt;h2&gt;ವಾಂಗ್ಚುಕ್ 19 ದಿನದಿಂದ ಉಪವಾಸ&lt;/h2&gt;&lt;p&gt;ನೀಟ್&zwnj; ವೈಫಲ್ಯ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್&zwnj; ರಾಜೀನಾಮೆಗೆ ಆಗ್ರಹಿಸಿ ದೆಹಲಿ ಜಂತರ್&zwnj; ಮಂತರ್&zwnj;ನಲ್ಲಿ ನಡೆಯುತ್ತಿರುವ ಜಿರಳೆ ಪಾರ್ಟಿ ಹೋರಾಟದಲ್ಲಿ ವಾಂಗ್ಚುಕ್ 19 ದಿನದಿಂದ ಉಪವಾಸ ಮಾಡುತ್ತಿದ್ದಾರೆ. &lsquo;19 ದಿನಗಳಿಂದ ಉಪವಾಸ ಕೈಗೊಂಡಿರುವ ವಾಂಗ್ಚುಕ್&zwnj; ಇನ್ನೆರೆಡು ದಿನಗಳಲ್ಲಿ ಸಾಯಬಹುದು. ಹಾಗಾಗಿ ಅವರಿಗೆ ಬಲವಂತವಾಗಿ ಆದರೂ ಆಹಾರ ನೀಡಬೇಕು&rsquo; ಎಂದು ದೆಹಲಿ ಹೈಕೋರ್ಟ್&zwnj;ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.&amp;nbsp;&lt;/p&gt;&lt;h3&gt;ಯಾವುದೇ ನಾಗರಿಕರ ಜೀವವು ಅಮೂಲ್ಯ&lt;/h3&gt;&lt;p&gt;&lsquo;ಯಾವುದೇ ನಾಗರಿಕರ ಜೀವವು ಅಮೂಲ್ಯವಾದದ್ದು. ಅದನ್ನು ಉಳಿಸಲು ಅಧಿಕಾರಿಗಳು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ಸೋನಂ ವಾಂಗ್ಚುಕ್&zwnj; ಅವರ ಜೀವವನ್ನು ಉಳಿಸಲು ಅಗತ್ಯವಿರುವ ಯಾವುದೇ ವೈದ್ಯಕೀಯ ಕ್ರಮಗಳನ್ನು ಕೈಗೊಳ್ಳಬೇಕು&rsquo; ಎಂದಿದೆ. ಇದೇ ಸಂದರ್ಭದಲ್ಲಿ ಸೋನಂ ವೈದ್ಯಕೀಯ ಮೇಲ್ವಿಚಾರಣೆ ಸಮರ್ಪಕವಾಗಿ ಆಗುತ್ತಿಲ್ಲ ಎನ್ನುವುದು ಗಮನಿಸಿದ ನ್ಯಾಯಾಲಯ &lsquo; ಸೋನಂ ಅವರಿಗೆ ಸರ್ಕಾರಿ ವೈದ್ಯರಿಂದ ನಿಯಮತ ಮತ್ತು ದೈನಂದಿನ ವೈದ್ಯಕೀಯ ತಪಾಸಣೆಗಳು ನಡೆಸಬೇಕು. &amp;nbsp;ಆ ವರದಿಗಳ ಆಧಾರದಲ್ಲಿ ಕೇಂದ್ರ ಮಧ್ಯಪ್ರವೇಶಿಸಬೇಕು&rsquo; ಎಂದು ಸೂಚನೆ ನೀಡಿತು.&lt;/p&gt;&lt;p&gt;&amp;nbsp;ಆಗ ಸರ್ಕಾರಿ ವಕೀಲರು, &lsquo;ಖಾಸಗಿ ಹಾಗೂ ಸರ್ಕಾರಿ ವೈದ್ಯರಿಬ್ಬರೂ ಅವರನ್ನು ನೋಡಿಕೊಳ್ಳುತ್ತಿದ್ದಾರೆ. ವೈದ್ಯರ ಶಿಫಾರಸಿನಂತೆ ಮುಂದಿನ ಕ್ರಮ ಜರುಗಿಸುತ್ತೇವೆ&rsquo; ಎಂದರು. ಅರ್ಜಿ ವಿಚಾರಣೆ ವೇಳೆ ಅರ್ಜಿದಾರರು, &lsquo;ಸಾರ್ವಜನಿಕ ಸ್ಥಳದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದು ನಾಗರಿಕರ ಹಕ್ಕು. ಆದರೆ ಈ ರೀತಿಯಾಗಿ ವಾಂಗ್ಚುಕ್&zwnj; ಸಾವನ್ನಪ್ಪಿದ್ದರೆ ಅದು ದೇಶ ಮತ್ತು ಜಗತ್ತಿಗೆ ಅವಮಾನಕಾರಿ ಸಂಗತಿ&rsquo; ಎಂದು ಕೋರ್ಟ್&zwnj; ಗಮನಕ್ಕೆ ತಂದರು.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/-do-whatever-it-takes-to-save-sonam-wangchuk-s-life-high-court-to-centre/articleshow-cbohfq0"/>
        </item>
        <item>
            <title><![CDATA[ಕನ್ನಡಕ್ಕೆ 4 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ]]></title>
            <link>https://www.kannadaprabha.in/india-news/national-film-awards-mithya-adjudged-best-kannada-film-bags-more-honours/articleshow-d7r98oc</link>
            <guid isPermaLink="true">https://www.kannadaprabha.in/india-news/national-film-awards-mithya-adjudged-best-kannada-film-bags-more-honours/articleshow-d7r98oc</guid>
            <pubDate>Sun, 19 Jul 2026 06:54:12 +0530</pubDate>
            <description><![CDATA[ತಿಷ್ಠಿತ ರಾಷ್ಟ್ರಿಯ ಚಲನಚಿತ್ರ ಪ್ರಶಸ್ತಿಗಳು ಶನಿವಾರ ಪ್ರಕಟಗೊಂಡಿದ್ದು, ಕನ್ನಡಕ್ಕೆ 4 ಹಾಗೂ ತುಳುವಿಗೆ ಒಂದು ಪ್ರಶಸ್ತಿ ಸಂದಿವೆ. ಈ ಪೈಕಿ &lsquo;ಮಿಥ್ಯ&rsquo; ಸಿನಿಮಾದಲ್ಲಿನ ನಟನೆಗೆ ರೂಪಶ್ರೀ ವರ್ಕಾಡಿಯವರಿಗೆ ಅತ್ಯುತ್ತಮ ಪೋಷಕ ನಟಿ ರಾಷ್ಟ್ರ ಪ್ರಶಸ್ತಿ ಸಂದಿದೆ. ಇದು ಕನ್ನಡ ಚಿತ್ರರಂಗಕ್ಕೆ ದೊರೆತ ಮೊದಲ &lsquo;ಅತ್ಯುತ್ತಮ ಪೋಷಕ ನಟಿ&rsquo; ರಾಷ್ಟ್ರ ಪ್ರಶಸ್ತಿ.]]></description>
            <media:content url="https://static-assets.asianetnews.com/kp/json/18072026/pictures/IMBU_201.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ/ಬೆಂಗಳೂರು:&lt;/strong&gt; ಪ್ರತಿಷ್ಠಿತ ರಾಷ್ಟ್ರಿಯ ಚಲನಚಿತ್ರ ಪ್ರಶಸ್ತಿಗಳು ಶನಿವಾರ ಪ್ರಕಟಗೊಂಡಿದ್ದು, ಕನ್ನಡಕ್ಕೆ 4 ಹಾಗೂ ತುಳುವಿಗೆ ಒಂದು ಪ್ರಶಸ್ತಿ ಸಂದಿವೆ. ಈ ಪೈಕಿ &lsquo;ಮಿಥ್ಯ&rsquo; ಸಿನಿಮಾದಲ್ಲಿನ ನಟನೆಗೆ ರೂಪಶ್ರೀ ವರ್ಕಾಡಿಯವರಿಗೆ ಅತ್ಯುತ್ತಮ ಪೋಷಕ ನಟಿ ರಾಷ್ಟ್ರ ಪ್ರಶಸ್ತಿ ಸಂದಿದೆ. ಇದು ಕನ್ನಡ ಚಿತ್ರರಂಗಕ್ಕೆ ದೊರೆತ ಮೊದಲ &lsquo;ಅತ್ಯುತ್ತಮ ಪೋಷಕ ನಟಿ&rsquo; ರಾಷ್ಟ್ರ ಪ್ರಶಸ್ತಿ.&lt;/p&gt;&lt;p&gt;2024ರಲ್ಲಿ ತೆರೆಕಂಡ, ಅನಾಥ ಬಾಲಕನೊಬ್ಬನ ನೋವಿನ ಕತೆಯನ್ನು ತೆರೆದಿಟ್ಟ ಕನ್ನಡದ &lsquo;ಮಿಥ್ಯ&rsquo; ಎಂಬ ಸಿನಿಮಾಗೆ 3 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಲಭಿಸಿವೆ. ಕೆಂಚನೂರು ಪ್ರದೀಪ್&zwnj; ಕುಮಾರ್&zwnj; ಶೆಟ್ಟಿ ಅವರ &lsquo;ನಾನಿರುವುದೆ ನಿಮಗಾಗಿ ನಾಡಿರುವುದೇ ನನಗಾಗಿ: ಕನ್ನಡ ಸಿನಿಮಾದ ತತ್ವ ಮತ್ತು ರಾಜಕೀಯ&rsquo; ಸಿನಿಮಾ ಬಗೆಗಿನ ಉತ್ತಮ ಪುಸ್ತಕವೆಂಬ ಗೌರವಕ್ಕೆ ಪಾತ್ರವಾಗಿದೆ. ಇನ್ನು ಕರಾವಳಿಯ ಭಾಷೆಯಾದ ತುಳುವಿನ &lsquo;ಇಂಬು&rsquo; ಉತ್ತಮ ತುಳು ಚಿತ್ರ ಎನಿಸಿಕೊಂಡಿದೆ.&lt;/p&gt;&lt;h2&gt;&lt;strong&gt;ಮಿಥ್ಯಕ್ಕೆ 3 ಪ್ರಶಸ್ತಿಗಳ ಗರಿ:&lt;/strong&gt;&lt;/h2&gt;&lt;p&gt;ಮಿಥ್ಯವನ್ನು ರಕ್ಷಿತ್&zwnj; ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್​ ನಿರ್ಮಾಣ ಮಾಡಿದ್ದು, ಸುಮಂತ್ ಭಟ್ ಅವರ ನಿರ್ದೇಶನವಿದೆ. ಇದರಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ಆತಿಶ್&zwnj; ಎಸ್&zwnj;. ಶೆಟ್ಟಿ ಅವರಿಗೆ ಉತ್ತಮ ಬಾಲಕ ನಟ ಪ್ರಶಸ್ತಿ ಹಾಗೂ ಜ್ಯೋತಿ ಪಾತ್ರದಲ್ಲಿ ಕಾಣಿಸಿಕೊಂಡ ರೂಪಶ್ರೀ ವರ್ಕಾಡಿ ಅವರಿಗೆ ಉತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿದೆ.&lt;/p&gt;&lt;p&gt;&lsquo;ಮಿಥ್ಯ&rsquo; ಸಿನಿಮಾದ ಪ್ರಧಾನ ಪಾತ್ರದ ಚಿಕ್ಕಮ್ಮನ ಪಾತ್ರದಲ್ಲಿ ರೂಪಶ್ರೀ ವರ್ಕಾಡಿ ನಟಿಸಿದ್ದಾರೆ. ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಸಂದಿರುವುದು, ಕನ್ನಡ ಚಿತ್ರರಂಗಕ್ಕೆ ದೊರೆತ ಮೊದಲ ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ.&lt;/p&gt;&lt;p&gt;ಈ ಹಿಂದೆ ಅರುಂಧತಿ ನಾಗ್ ಅವರಿಗೆ ಬಾಲಿವುಡ್&zwnj;ನ &lsquo;ಪಾ&rsquo; ಚಿತ್ರದ ನಟನೆಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ದೊರಕಿತ್ತು. ಆದರೆ ಕನ್ನಡ ಚಿತ್ರಕ್ಕೆ ದೊರೆತಿದ್ದು ಇದೇ ಮೊದಲು. ರೂಪಶ್ರೀ ವರ್ಕಾಡಿಯವರು ಮಂಜೇಶ್ವರ ವರ್ಕಾಡಿಯವರಾಗಿದ್ದು, ಹಲವಾರು ಕನ್ನಡ ಮತ್ತು ತು&zwj;ಳು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಮೂಲತಃ ರಂಗಭೂಮಿ ನಟಿ.&lt;/p&gt;&lt;h3&gt;&lt;strong&gt;ಮಿಥ್ಯದಲ್ಲೇನಿದೆ?:&lt;/strong&gt;&lt;/h3&gt;&lt;p&gt;ಅನಿರೀಕ್ಷಿತವಾಗಿ ಹೆತ್ತವರನ್ನು ಕಳೆದುಕೊಂಡ 11 ವರ್ಷದ ಮಿಥುನ್, ಮುಂಬೈನಿಂದ ಕರಾವಳಿ ಉಡುಪಿಗೆ ಸ್ಥಳಾಂತರಗೊಂಡು, ಚಿಕ್ಕಮ್ಮನ ಮನೆಯಲ್ಲಿ ಹೊಸ ಬದುಕಿಗೆ ಹೊಂದಿಕೊಳ್ಳಲು ಹೆಣಗಾಡುವ ಭಾವನಾತ್ಮಕ ಹೋರಾಟವನ್ನು ಈ ಚಿತ್ರದ ಕತೆಯಾಗಿದೆ.&lt;/p&gt;&lt;p&gt;&lt;strong&gt;ಇಂಬು ಚಿತ್ರದಲ್ಲೇನಿದೆ?:&lt;/strong&gt;&lt;/p&gt;&lt;p&gt;ತುಳು ಚಿತ್ರ ''''''''ಇಂಬು'''''''', ಕರಾವಳಿಯ ದೈವಾರಾಧನೆ ಮತ್ತು ಸಾಂಪ್ರದಾಯಿಕ ನಂಬಿಕೆಗಳ ಹಿನ್ನೆಲೆಯಲ್ಲಿ ಹೆಣೆದ ಭಾವನಾತ್ಮಕ ಕತೆ.&lt;/p&gt;&lt;p&gt;&lt;strong&gt;ಮಮ್ಮುಟ್ಟಿ, ಕಾರ್ತಿಕ್ ಶ್ರೇಷ್ಠ ನಟರು, ಯಾಮಿ ಶ್ರೇಷ್ಠ ನಟಿ- &lsquo;ಆರ್ಟಿಕಲ್&zwnj; 370&rsquo; ಅತ್ಯುತ್ತಮ ಚಿತ್ರ । ರಾಜ್&zwnj;ಕುಮಾರ್ ಶ್ರೇಷ್ಠ ನಿರ್ದೇಶಕ&lt;/strong&gt;&lt;/p&gt;&lt;p&gt;ನವದೆಹಲಿ: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಶನಿವಾರ ಘೋಷಣೆಯಾಗಿವೆ. ಮಮ್ಮುಟ್ಟಿ (ಬ್ರಹ್ಮಯುಗಂ) ಹಾಗೂ ಕಾರ್ತಿಕ್ ಆರ್ಯನ್&zwnj; (ಚಂದು ಚಾಂಪಿಯನ್&zwnj;) ಶ್ರೇಷ್ಠ ನಟರು ಹಾಗೂ ಯಾಮಿ ಗೌತಮ್&zwnj; (ಆರ್ಟಿಕಲ್&zwnj; 370) ಶ್ರೇಷ್ಠ ನಟಿ ಪ್ರಶಸ್ತಿ ಪಡೆದಿದ್ದಾರೆ. &lsquo;ಆರ್ಟಿಕಲ್&zwnj; 370&rsquo;ಗೆ ಅತ್ಯುತ್ತಮ ಚಲನಚಿತ್ರ ಹಾಗೂ ತಮಿಳು ಚಿತ್ರ &lsquo;ಅಮರನ್&zwnj;&rsquo;ಗಾಗಿ ರಾಜ್&zwnj;ಕುಮಾರ್ ಪೆರಿಯಸಾಮಿ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/national-film-awards-mithya-adjudged-best-kannada-film-bags-more-honours/articleshow-d7r98oc"/>
        </item>
        <item>
            <title><![CDATA[ಮಮ್ಮುಟ್ಟಿ, ಕಾರ್ತಿಕ್ ಶ್ರೇಷ್ಠ ನಟರು, ಯಾಮಿ ಶ್ರೇಷ್ಠ ನಟಿ]]></title>
            <link>https://www.kannadaprabha.in/india-news/national-awards-article-370-best-feature-film/articleshow-dq5ppib</link>
            <guid isPermaLink="true">https://www.kannadaprabha.in/india-news/national-awards-article-370-best-feature-film/articleshow-dq5ppib</guid>
            <pubDate>Sun, 19 Jul 2026 03:00:00 +0530</pubDate>
            <description><![CDATA[&lt;p&gt;72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಶನಿವಾರ ಘೋಷಣೆಯಾಗಿವೆ. ಮಮ್ಮುಟ್ಟಿ ಹಾಗೂ ಕಾರ್ತಿಕ್ ಆರ್ಯನ್&zwnj; ಶ್ರೇಷ್ಠ ನಟರು ಹಾಗೂ ಯಾಮಿ ಗೌತಮ್&zwnj; ಶ್ರೇಷ್ಠ ನಟಿ ಪ್ರಶಸ್ತಿ ಪಡೆದಿದ್ದಾರೆ. &lsquo;ಆರ್ಟಿಕಲ್&zwnj; 370&rsquo;ಗೆ ಅತ್ಯುತ್ತಮ ಚಲನಚಿತ್ರ,ರಾಜ್&zwnj;ಕುಮಾರ್ ಪೆರಿಯಸಾಮಿ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಗೆ ಪಾತ್ರ&lt;/p&gt;]]></description>
            <media:content url="https://static-assets.asianetnews.com/kp/json/18072026/pictures/ARTICLE_370_145.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ&lt;/strong&gt;: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಶನಿವಾರ ಘೋಷಣೆಯಾಗಿವೆ. ಮಮ್ಮುಟ್ಟಿ ಹಾಗೂ ಕಾರ್ತಿಕ್ ಆರ್ಯನ್&zwnj; ಶ್ರೇಷ್ಠ ನಟರು ಹಾಗೂ ಯಾಮಿ ಗೌತಮ್&zwnj; ಶ್ರೇಷ್ಠ ನಟಿ ಪ್ರಶಸ್ತಿ ಪಡೆದಿದ್ದಾರೆ. &lsquo;ಆರ್ಟಿಕಲ್&zwnj; 370&rsquo;ಗೆ ಅತ್ಯುತ್ತಮ ಚಲನಚಿತ್ರ ಹಾಗೂ ರಾಜ್&zwnj;ಕುಮಾರ್ ಪೆರಿಯಸಾಮಿ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.&lt;/p&gt;&lt;h2&gt;&lsquo;ಆರ್ಟಿಕಲ್&zwnj; 370&rsquo;ಗೆ ಅತ್ಯುತ್ತಮ ಚಲನಚಿತ್ರ&lt;/h2&gt;&lt;p&gt;ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು 2019ರಲ್ಲಿ ರದ್ದುಪಡಿಸಿದ ಘಟನೆ ಆಧರಿತ &lsquo;ಆರ್ಟಿಕಲ್&zwnj; 370&rsquo;ಗೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಇದೇ ಚಿತ್ರದ ಮುಖ್ಯ ಪಾತ್ರಧಾರಿಯಾಗಿದ್ದ ಯಾಮಿ ಗೌತಂ ಅವರಿಗೆ &lsquo;ಅತ್ಯುತ್ತಮ ನಟಿ&rsquo; ಪ್ರಶಸ್ತಿ ದೊರೆತಿದೆ. ಮಲಯಾಳಂ ಚಿತ್ರ ಬ್ರಮಯುಗಂಗಾಗಿ ಮಮ್ಮುಟ್ಟಿ ಹಾಗೂ ಹಿಂದಿಯ ಚಂದು ಚ್ಯಾಂಪಿಯನ್&zwnj;ಗಾಗಿ ಕಾರ್ತಿಕ್&zwnj; ಆರ್ಯನ್&zwnj;ಗೆ ಶ್ರೇಷ್ಠ ನಟ ಗೌರವ ಲಭಿಸಿದೆ.&lt;/p&gt;&lt;h3&gt;ಮರಾಠಿಯ ''''''''ಹಮಸಫರ್'''''''' ಅತ್ಯುತ್ತಮ ಕಿರುಚಿತ್ರ&lt;/h3&gt;&lt;p&gt;ಮರಾಠಿಯ ''''''''ಹಮಸಫರ್'''''''' ಅತ್ಯುತ್ತಮ ಕಿರುಚಿತ್ರವಾಗಿದೆ. ತಮಿಳು ಚಿತ್ರ &lsquo;ಅಮರನ್&zwnj;&rsquo;ಗಾಗಿ ರಾಜ್&zwnj;ಕುಮಾರ್ ಪೆರಿಯಸಾಮಿ ಅತ್ಯುತ್ತಮ ನಿರ್ದೇಶನ ಪ್ರಶಸ್ತಿಯನ್ನು ಪಡೆದಿದ್ದಾರೆ. ಶಾಶ್ವತ್ ಸಚ್&zwnj;ದೇವ್ ಮತ್ತು ಜಿ.ವಿ. ಪ್ರಕಾಶ್ ಕುಮಾರ್ ಅವರು ಅತ್ಯುತ್ತಮ ಸಂಗೀತ ನಿರ್ದೇಶಕರು ಎನಿಸಿಕೊಂಡಿದ್ದಾರೆ.&lsquo;ಭಕ್ಷಕ್&rsquo;ಗಾಗಿ ಸಂಜಯ್ ಮಿಶ್ರಾ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಹಾಗೂ &lsquo;ಮಹಾರಾಜಾ&rsquo; ಸಿನಿಮಾಗಾಗಿ ಸಚನಾ ನಮಿದಾಸ್ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿದೆ. ಕನ್ನಡತಿ ರೂಪಶ್ರೀ ವರ್ಕಾಡಿ ಅವರೊಂದಿಗೆ ಇದನ್ನು ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಶ್ರೇಷ್ಠ ಹಿನ್ನೆಲೆ ಗಾಯಕರುನವಸಾಚಿ ಗೌರಿ ಮಾಝಿ ಚಿತ್ರದ &lsquo;ಘರಾತ್ ಗಣಪತಿ&rsquo;ಗಾಗಿ ಅಭಯ್ ಜೋಧ್ಪುರ್ಕರ್ ಅವರಿಗೆ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ಪ್ರಶಸ್ತಿ ಹಾಗೂ &lsquo;ಅಂಗು ವನ ಕೊನಿಲು&rsquo;ಗಾಗಿ ವೈಕೋಂ ವಿಜಯಲಕ್ಷ್ಮಿ ಅವರಿಗೆ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿ ಘೋಷಣೆಯಾಗಿದೆ.&lt;/p&gt;&lt;p&gt;ತೆಲುಗು ಚಿತ್ರ &lsquo;ಚಿನ್ನ ಕಥಾ ಕಾದು&rsquo; ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಯನ್ನು ಪಡೆಯಲಿದೆ. ಅದ್ಭುತ ಮನರಂಜನೆ ನೀಡಿದ &lsquo;ಕಲ್ಕಿ 2898 ಎಡಿ&rsquo; ಜನಪ್ರಿಯ ಚಿತ್ರ ಎನಿಸಿಕೊಂಡಿದೆ. ಸುಮಿರಾ ರಾಯ್ ನಿರ್ದೇಶನದ ''''''''ಭಂಗಾರ್'''''''' ಚಿತ್ರವು ಅತ್ಯುತ್ತಮ ನಾನ್-ಫೀಚರ್ ಸಿನಿಮಾ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಇದೇ ವಿಭಾಗದಲ್ಲಿ ''''''''ಸ್ಟ್ಯಾಚ್ಯೂ ಆಫ್ ಯೂನಿಟಿ-ಏಕ್ತಾ ಕಾ ಪ್ರತೀಕ್&rsquo;ಗಾಗಿ ಆನಂದ್ ಎಲ್. ರೈ ಅವರು ಅತ್ಯುತ್ತಮ ನಿರ್ದೇಶನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅತ್ಯುತ್ತಮ ಸಿನಿಮಾ ವಿಮರ್ಶಕ ಪ್ರಶಸ್ತಿಯನ್ನು ಸಂಜೀವ್ ಶ್ರೀವಾಸ್ತವ ಅವರಿಗೆ ನೀಡಲಾಗುವುದು. ರಾಷ್ಟ್ರೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ಚಲನಚಿತ್ರಕ್ಕಾಗಿ ''''''''ಕ್ಯಾಪ್ಟನ್ ಮಿಲ್ಲರ್'''''''' ಪ್ರಶಸ್ತಿಯನ್ನು ಪಡೆದಿದೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/national-awards-article-370-best-feature-film/articleshow-dq5ppib"/>
        </item>
        <item>
            <title><![CDATA[ಪಾಸ್‌ಪೋರ್ಟೇ ಇಲ್ಲದಿದ್ದರೂ  ಮೈಸೂರಿನಲ್ಲಿದ್ದ ಅಮೆರಿಕನ್‌!]]></title>
            <link>https://www.kannadaprabha.in/karnataka-news/mysore-news/american-found-living-in-mysuru-despite-having-no-passport/articleshow-fgcuqzo</link>
            <guid isPermaLink="true">https://www.kannadaprabha.in/karnataka-news/mysore-news/american-found-living-in-mysuru-despite-having-no-passport/articleshow-fgcuqzo</guid>
            <pubDate>Fri, 17 Jul 2026 07:08:54 +0530</pubDate>
            <description><![CDATA[&lt;p&gt;ಪ್ರಯಾಣ ದಾಖಲೆಗಳಿಲ್ಲದೆ ಭಾರತದಿಂದ ನೇಪಾಳಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದ ಅಮೆರಿಕದ ಪ್ರಜೆ ಜೋರ್ಡಾನ್&zwnj; ಬ್ರೌನ್&zwnj; (36) ಎಂಬಾತನನ್ನು ಇತ್ತೀಚೆಗೆ ಉತ್ತರ ಪ್ರದೇಶದ ಮಹಾರಾಜ್&zwnj; ಗಂಜ್&zwnj; ಪೊಲೀಸರು ಬಂಧಿಸಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/01kt8x8rfc7n82r6f77gg5npwm/arrest--23--1780563075563.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ನವದೆಹಲಿ: &lt;/strong&gt;ಪ್ರಯಾಣ ದಾಖಲೆಗಳಿಲ್ಲದೆ ಭಾರತದಿಂದ ನೇಪಾಳಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದ ಅಮೆರಿಕದ ಪ್ರಜೆ ಜೋರ್ಡಾನ್&zwnj; ಬ್ರೌನ್&zwnj; (36) ಎಂಬಾತನನ್ನು ಇತ್ತೀಚೆಗೆ ಉತ್ತರ ಪ್ರದೇಶದ ಮಹಾರಾಜ್&zwnj; ಗಂಜ್&zwnj; ಪೊಲೀಸರು ಬಂಧಿಸಿದ್ದಾರೆ. ಈತನ ಬಳಿ ಪಾಸ್&zwnj;ಪೋರ್ಟ್&zwnj; ಆಗಲಿ, ವೀಸಾ ಆಗಲಿ ಇಲ್ಲ. ಸಮುದ್ರ ಮಾರ್ಗದಿಂದ ಭಾರತಕ್ಕೆ ಬಂದಿದ್ದ ಎಂಬ ಈತ ಬೆಂಗಳೂರು ಹಾಗೂ ಮೈಸೂರಿಗೂ ಆಗಮಿಸಿದ್ದ. ಬೆಂಗಳೂರಲ್ಲಿ 1 ದಿನ ಹಾಗೂ ಮೈಸೂರಲ್ಲಿ 55 ದಿನ ತಂಗಿದ್ದ ಎಂದು ವಿಚಾರಣೆ ವೇಳೆ ಗೊತ್ತಾಗಿದೆ!&lt;/p&gt;&lt;p&gt;ತನ್ನನ್ನು ತಾನು ಅಮೆರಿಕ ನೌಕಾಪಡೆ ಹಾಗೂ ವಿಶೇಷ ಪಡೆಯ ಮಾಜಿ ಸಿಬ್ಬಂದಿ ಎಂದು ಹೇಳಿಕೊಂಡಿರುವ ಆತನ ಭಾರತ ಪ್ರವೇಶಿಸಿದ ರೀತಿಯೇ ತನಿಖಾ ಸಂಸ್ಥೆಗಳನ್ನು ದಂಗಾಗಿಸಿದೆ. ಆತ ತನ್ನ ಪ್ರಯಾಣದ ಬಗ್ಗೆ ವಿವರಿಸುತ್ತಾ, &lsquo;ನಾನು ಪ್ರವಾಸಿ ವೀಸಾದ ಮೇಲೆ ಥಾಯ್ಲೆಂಡ್&zwnj;ಗೆ ಹೋಗಿದ್ದೆ. ಅಲ್ಲಿ ನನ್ನ ಪಾಸ್&zwnj;ಪೋರ್ಟ್ ಕಳೆದುಹೋಯಿತು. ನಂತರ ಅಲ್ಲಿಂದ ಸಮುದ್ರ ಮಾರ್ಗವಾಗಿ ಶ್ರೀಲಂಕಾಕ್ಕೆ ತಲುಪಿ, ಅಲ್ಲಿಂದ 2025ರ ನವೆಂಬರ್ 2ರಂದು ಸಮುದ್ರ ಮಾರ್ಗದ ಮೂಲಕವೇ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದೆ. ಬಳಿಕ ಗೋವಾದಲ್ಲಿದ್ದೆ&rsquo; ಎಂದು ತಿಳಿಸಿದ್ದಾನೆ.&lt;/p&gt;&lt;h2&gt;&lt;strong&gt;ಮೈಸೂರು, ಬೆಂಗಳೂರಲ್ಲೂ ವಾಸ:&lt;/strong&gt;&lt;/h2&gt;&lt;p&gt;ಮೂಲಗಳ ಪ್ರಕಾರ, ಬ್ರೌನ್ 2025ರ ನ.2ರಂದು ಭಾರತ ಪ್ರವೇಶಿಸಿದ ಬಳಿಕ 2026ರ ಮೇ 7ರವರೆಗೆ ಗೋವಾದ ಕಾಣಕೋಣದಲ್ಲಿ ಉಳಿದುಕೊಂಡಿದ್ದ. ಬಳಿಕ ಕರ್ನಾಟಕದ ಮೈಸೂರಿಗೆ ಪ್ರಯಾಣ ಬೆಳೆಸಿದ. ಅಲ್ಲಿ ಮೇ 14ರಿಂದ ಜುಲೈ 7ರವರೆಗೆ (55 ದಿನ) ಇದ್ದ. ನಂತರ ಜುಲೈ 8ರಂದು ಬೆಂಗಳೂರಿಗೆ ಮತ್ತು ಜುಲೈ 9ರಂದು ಹೈದರಾಬಾದ್&zwnj;ಗೆ ತೆರಳಿದ. ಜುಲೈ 10ರಂದು ಮಧ್ಯಪ್ರದೇಶದ ಬಂದೋಲ್, ಸಿಯೋನಿ ಮೂಲಕ ಪ್ರಯಾಣಿಸಿ ನಂತರ ಉತ್ತರ ಪ್ರದೇಶದ ಪ್ರಯಾಗ್&zwnj;ರಾಜ್&zwnj; ತಲುಪಿದ. ನಂತರ ನೇಪಾಳ ಗಡಿಗೆ ತೆರಳಿದ್ದ.&lt;/p&gt;&lt;h3&gt;ಸಿನಿಮೀಯ ಚೇಸ್&zwnj;, ಬಂಧನ:&lt;/h3&gt;&lt;p&gt;ಜುಲೈ 11ರಂದು ಉ.ಪ್ರದೇಶ-ನೇಪಾಳ ಗಡಿಯ ಸೋನೌಲಿ ಗಡಿಯ ಮೂಲಕ ನೇಪಾಳಕ್ಕೆ ಹೋಗಲು ಯತ್ನಿಸುತ್ತಿದ್ದಾಗ, ನಿಯಮಿತ ತಪಾಸಣೆಯ ವೇಳೆ ಎಸ್&zwnj;ಎಸ್&zwnj;ಬಿ (ಸೀಮಾ ಸುರಕ್ಷಾ ಬಲ) ಸಿಬ್ಬಂದಿ ಆತನನ್ನು ತಡೆದಿದ್ದಾರೆ. ಈ ವೇಳೆ ಆತ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಕಿಲೋಮೀಟರ್&zwnj;ಗಟ್ಟಲೆ ಚೇಸ್ ಬಳಿಕ ಆತನನ್ನು ಸೆರೆಹಿಡಿದಿದ್ದಾರೆ. ಆತನ ಬಳಿ ಆಗ 31 ಸಾವಿರ ರು. ನಗದು ಸಿಕ್ಕಿದೆ. ಯಾವುದೇ ಪ್ರಯಾಣ ದಾಖಲೆ ಇರಲಿಲ್ಲ.&lt;/p&gt;&lt;p&gt;&lt;strong&gt;ಕಾನೂನು ಕ್ರಮ ಮತ್ತು ತನಿಖೆ:&lt;/strong&gt;&lt;/p&gt;&lt;p&gt;ಮಹಾರಾಜ್&zwnj;ಗಂಜ್&zwnj;ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಮಾತನಾಡಿ, &lsquo;ಜೋರ್ಡಾನ್ ಬ್ರೌನ್ ಬಳಿ ಯಾವುದೇ ಮಾನ್ಯವಾದ ವೀಸಾ ಅಥವಾ ಪ್ರಯಾಣ ದಾಖಲೆಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಅಕ್ರಮ ಪ್ರವೇಶ ಪ್ರಕರಣ ದಾಖಲಿಸಲಾಗಿದೆ. ಪ್ರಸ್ತುತ ಅಮೆರಿಕ ಪ್ರಜೆಯ ಹೇಳಿಕೆಗಳನ್ನು ಭದ್ರತಾ ಏಜೆನ್ಸಿಗಳು ಮತ್ತು ಗುಪ್ತಚರ ಇಲಾಖೆಯು ಕೂಲಂಕಷವಾಗಿ ಪರಿಶೀಲಿಸುತ್ತಿದೆ. ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವುದು ದೇಶದ ಭದ್ರತೆಯ ದೃಷ್ಟಿಯಿಂದ ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ&rsquo; ಎಂದಿದ್ದಾರೆ.&lt;/p&gt;&lt;p&gt;&lt;strong&gt;ಯಾರು ಈ ಭೂಪ?&lt;/strong&gt;&lt;/p&gt;&lt;p&gt;- ಪ್ರವಾಸಿ ವೀಸಾದ ಮೇಲೆ ಥಾಯ್ಲೆಂಡ್&zwnj;ಗೆ ಹೋಗಿದ್ದ ಅಮೆರಿಕದ ಜೋರ್ಡಾನ್&zwnj; ಬ್ರೌನ್&zwnj; ಅಲ್ಲಿ ಪಾಸ್&zwnj;ಪೋರ್ಟ್&zwnj; ಕಳೆದುಕೊಂಡಿದ್ದ&lt;/p&gt;&lt;p&gt;- ಸಮುದ್ರ ಮಾರ್ಗವಾಗಿ ಲಂಕಾಕ್ಕೆ ತೆರಳಿ, ಅಲ್ಲಿಂದ ಜಲಮಾರ್ಗದ ಮೂಲಕ ಭಾರತಕ್ಕೆ ನುಸುಳಿ ಗೋವಾದಲ್ಲಿ ಉಳಿದಿದ್ದ&lt;/p&gt;&lt;p&gt;- ಮೈಸೂರಿನಲ್ಲಿ 55 ದಿನ, ಬೆಂಗಳೂರಿನಲ್ಲಿ 1 ದಿನ ಇದ್ದು, ಬಳಿಕ ಹೈದರಾಬಾದ್&zwnj;ಗೆ ಹೋಗಿ ಬೇರೆ ಬೇರೆ ಊರುಗಳ ಸುತ್ತಿದ್ದ&lt;/p&gt;&lt;p&gt;- ಇದೀಗ ಉತ್ತರಪ್ರದೇಶ ಗಡಿ ಮೂಲಕ ನೇಪಾಳಕ್ಕೆ ಹೋಗುವಾಗ ಭದ್ರತಾ ಸಿಬ್ಬಂದಿ ತಪಾಸಣೆ. ತಪ್ಪಿಸಿಕೊಳ್ಳಲು ಯತ್ನ&lt;/p&gt;&lt;p&gt;- ಚೇಸ್&zwnj; ಮಾಡಿ ಸೆರೆ ಹಿಡಿದ ಸೀಮಾ ಸುರಕ್ಷಾ ಸಿಬ್ಬಂದಿ. ವಿಚಾರಣೆ ವೇಳೆ ತನ್ನ ವೃತ್ತಾಂತವನ್ನು ಬಯಲು ಮಾಡಿದ ಬ್ರೌನ್&zwnj;&lt;/p&gt;]]></content:encoded>
            <category>India</category>
            <dc:creator>Sujatha NR</dc:creator>
            <atom:link href="https://www.kannadaprabha.in/karnataka-news/mysore-news/american-found-living-in-mysuru-despite-having-no-passport/articleshow-fgcuqzo"/>
        </item>
        <item>
            <title><![CDATA[ಜಿರಳೆ ಪಾರ್ಟಿ ಸ್ಥಾಪಕ ದೀಪ್ಕೆಯಿಂದ ಕೂಡ ಉಪವಾಸ ಶುರು]]></title>
            <link>https://www.kannadaprabha.in/india-news/cjp-founder-dipke-begins-indefinite-fast-outfit-vows-to-go-ahead-with-parliament-march/articleshow-ib5h6g8</link>
            <guid isPermaLink="true">https://www.kannadaprabha.in/india-news/cjp-founder-dipke-begins-indefinite-fast-outfit-vows-to-go-ahead-with-parliament-march/articleshow-ib5h6g8</guid>
            <pubDate>Sun, 19 Jul 2026 07:10:57 +0530</pubDate>
            <description><![CDATA[ಉಪವಾಸನಿರತ ಸೋನಂ ವಾಂಗ್ಚುಕ್&zwnj;ರನ್ನು ಪೊಲೀಸರು ಆಸ್ಪತ್ರೆಗೆ ಸ್ಥಳಾಂತರಿಸಿದ ಬೆನ್ನಲ್ಲೇ, ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕ ಅಭಿಜೀತ್ ದೀಪ್ಕೆ ಕೂಡಾ ಶನಿವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಘೋಷಿಸಿದ್ದಾರೆ.]]></description>
            <media:content url="https://static-assets.asianetnews.com/kp/json/18072026/pictures/DIPKE_551.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ನವದೆಹಲಿ : &amp;nbsp;&lt;/strong&gt;ಉಪವಾಸನಿರತ ಸೋನಂ ವಾಂಗ್ಚುಕ್&zwnj;ರನ್ನು ಪೊಲೀಸರು ಆಸ್ಪತ್ರೆಗೆ ಸ್ಥಳಾಂತರಿಸಿದ ಬೆನ್ನಲ್ಲೇ, ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕ ಅಭಿಜೀತ್ ದೀಪ್ಕೆ ಕೂಡಾ ಶನಿವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಘೋಷಿಸಿದ್ದಾರೆ. &amp;nbsp;&lt;/p&gt;&lt;p&gt;ಈ ಬಗ್ಗೆ ಎಕ್ಸ್&zwnj;ನಲ್ಲಿ ಪೋಸ್ಟ್&zwnj; ಮಾಡಿರುವ ಅವರು, &lsquo;ನಾನು ಇದೀಗ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸುತ್ತಿದ್ದೇನೆ&rsquo; ಎಂದು ಘೋಷಿಸಿದ್ದಾರೆ. ಕಳೆದ 21 ದಿನಗಳಿಂದ ಉಪವಾಸ ನಡೆಸುತ್ತಿದ್ದ ವಾಂಗ್ಚುಕ್&zwnj;ರನ್ನು ಒತ್ತಾಯಪೂರ್ವಕವಾಗಿ ಆಸ್ಪತ್ರೆಗೆ ಸಾಗಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.&amp;nbsp;&lt;/p&gt;&lt;p&gt;&lt;strong&gt;ಮೋದಿ ರಾಜೀನಾಮೆಗೆ ಆಗ್ರಹ:&lt;/strong&gt;&lt;/p&gt;&lt;p&gt;ಇದುವರೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್&zwnj; ರಾಜೀನಾಮೆಗೆ ಆಗ್ರಹಿಸುತ್ತಿದ್ದ ಸಿಜೆಪಿ, ಇದೀಗ ಮೋದಿ ರಾಜೀನಾಮೆಯ ಆಗ್ರಹ ಮುಂದಿಟ್ಟಿದೆ. &lsquo;ಪ್ರತಿಭಟನಾ ಸ್ಥಳದಿಂದ ವಾಂಗ್ಚುಕ್&zwnj;ರನ್ನು ಸ್ಥಳಾಂತರಿಸಿದ ಹೊರತಾಗಿಯೂ ನಮ್ಮ ಹೋರಾಟ ಮುಂದುವರಿಯಲಿದೆ. ಪ್ರಧಾನಿ ಮೋದಿ ರಾಜೀನಾಮೆ ಕೊಡಲೇಬೇಕು&rsquo; ಎಂದು ಟ್ವೀಟ್&zwnj; ಮಾಡಿದೆ.&lt;/p&gt;&lt;h2&gt;&lt;strong&gt;ಪ್ರತಿಭಟನಾಕಾರರು ಪಾಕಿಗಳೇ?: ದೀಪ್ಕೆ ಪೋಷಕರ ಆಕ್ರೋಶ&lt;/strong&gt;&lt;/h2&gt;&lt;p&gt;&lt;strong&gt;ಛತ್ರಪತಿ ಸಂಭಾಜಿ ನಗರ: &lt;/strong&gt;ಸಿಜೆಪಿ ಪಕ್ಷದ ಸ್ಥಾಪಕ ಅಭಿಜೀತ್&zwnj; ದೀಪ್ಕೆ ಉಪವಾಸ ಆರಂಭಿಸಿರುವ ಬಗ್ಗೆ ಅವರ ಪೋಷಕರು ಕಳವಳ ವ್ಯಕ್ತಪಡಿಸಿದ್ದು, ವಿದ್ಯಾರ್ಥಿ ಪ್ರತಿಭಟನೆಯತ್ತ ಗಮನ ಹರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಅಭಿಜೀತ್&zwnj; ತಂದೆ ಭಗವಾನ್&zwnj; ದೀಪ್ಕೆ ಮಾತನಾಡಿದ್ದು, &lsquo;ದೇಶದ ಅನೇಕ ಕಡೆಗಳಲ್ಲಿ ವಿದ್ಯಾರ್ಥಿಗಳು ನಿರಾಹಾರ ಹೋರಾಟಕ್ಕಿಳಿಸಿದ್ದರೂ ಸರ್ಕಾರ ಅವರ ಪ್ರತಿ ಇಷ್ಟು ಕಠೋರವಾಗಿ ವರ್ತಿಸಲು ಹೇಗೆ ಸಾಧ್ಯ? &amp;nbsp;&lt;/p&gt;&lt;p&gt;ಅವರೇನು ಪಾಕಿಸ್ತಾನಿಗಳೇ? ಯಾರಾದರೂ ಸಾಯಲಿ ಎಂದು ಸರ್ಕಾರ ಕಾಯುತ್ತಿದೆಯೇ? ಗದ್ದುಗೆಯೇರಿ ಕುಳಿತಿರುವ ಪ್ರಧಾನಿ ಮೋದಿಗೆ ಮಕ್ಕಳ ಕೂಗು ಕೇಳಿಸಿಕೊಳ್ಳುವ ಸದ್ಬುದ್ಧಿಯನ್ನು ದೇವರು ಕರುಣಿಸಲಿ&rsquo; ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನ್ನಾಹಾರ ತೊರೆದ ಪುತ್ರನನ್ನು ನೆನೆಯುತ್ತಾ, ತಾವೂ ಅವರೊಂದಿಗೆ ಉಪವಾಸ ಕೂರುವುದಾಗಿಯೂ ಎಚ್ಚರಿಸಿದ್ದಾರೆ.&lt;/p&gt;&lt;h3&gt;&lt;strong&gt;ನಾಳೆ ಜಿರಳೆ ಪಾರ್ಟಿಯಿಂದ &lsquo;ಸಂಸತ್&zwnj; ಚಲೋ&rsquo;ಗೆ ಸಿದ್ಧತೆ&lt;/strong&gt;&lt;/h3&gt;&lt;p&gt;&lt;strong&gt;ನವದೆಹಲಿ: &lt;/strong&gt;ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್&zwnj; ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಸಿಜೆಪಿ, ಸೋಮವಾರ &lsquo;ಸಂಸತ್&zwnj; ಚಲೋ&rsquo;ಗೆ ಕರೆ ನೀಡಿದೆ.ಸಂಸತ್&zwnj; ಮುಂಗಾರು ಅಧಿವೇಶನದ ಮೊದಲ ದಿನವೇ ಈ ಬೃಹತ್&zwnj; ಮೆರವಣಿಗೆ ನಡೆಯಲಿದ್ದು, ಸಂಸತ್ತಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ. ಆದರೆ ಇದುವರೆಗೂ ಸಿಜೆಪಿ ಅನುಮತಿ ಕೇಳಿಲ್ಲ. ಅಧಿವೇಶನದ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ಅಗತ್ಯವಿರುವುದರಿಂದ, ಮೆರವಣಿಗೆಗೆ ಅನುಮತಿ ಸಿಗುವುದು ಅನುಮಾನ ಎಂದು ಮೂಲಗಳು ತಿಳಿಸಿವೆ.ಈ ಮಧ್ಯೆ ದೆಹಲಿಯಲ್ಲಿ ಬಿಗಿ ಭದ್ರತೆ ಹೆಚ್ಚಿಸಲಾಗಿದೆ. ದೆಹಲಿ ಪ್ರವೇಶಿಸುವ ಪ್ರತಿ ವಾಹನವನ್ನೂ ತೀವ್ರ ತಪಾಸಣೆ ನಡೆಸಿ ಒಳಬಿಡಲಾಗುತ್ತಿದೆ.&lt;/p&gt;&lt;p&gt;&lt;strong&gt;ಗೋಡೆ ಮೇಲೆ ವಾಂಗ್ಚುಕ್&zwnj; ಚಿತ್ರ ಬಿಡಿಸಿದವರ ಬಂಧನ&lt;/strong&gt;&lt;/p&gt;&lt;p&gt;&lt;strong&gt;ಗುವಾಹಟಿ:&lt;/strong&gt; ನಗರದ ಸಾರ್ವಜನಿಕ ಗೋಡೆಯೊಂದರ ಮೇಲೆ ಹೋರಾಟಗಾರ ಸೋನಂ ವಾಂಗ್ಚುಕ್&zwnj; ಅವರ ಚಿತ್ರವನ್ನು ಬಿಡಿಸಿದ ಇಬ್ಬರು ಯುವಕರನ್ನು &lsquo;ಗೋಡೆ ವಿರೂಪ&rsquo; ಮಾಡಿದ ಆರೋಪ ಹೊರಿಸಿ ಬಂಧಿಸಲಾಗಿದೆ.ಗಸ್ತು ತಿರುಗುತ್ತಿದ್ದ ವೇಳೆ ಇವರಿಬ್ಬರು ಗೋಡೆಗೆ ಪೇಂಟ್&zwnj; ಮಾಡುತ್ತಿದ್ದುದನ್ನು ಕಂಡು ವಿಚಾರಿಸಿದಾಗ ಸೋನಂರ ಚಿತ್ರ ಬಿಡಿಸುತ್ತಿರುವುದಾಗಿ ಒಪ್ಪಿಕೊಂಡಿದ್ದರು. ಕೂಡಲೇ ಬಂಧಿಸಿ ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.&lt;/p&gt;&lt;p&gt;ಅತ್ತ ಬಸಿಷ್ಠ ಮೇಲ್ಸೇತುವೆಯ ಕಂಬಗಳ ಮೇಲೂ ಚಿತ್ರ ಬಿಡಿಸಲಾಗಿದ್ದು, ಅದನ್ನು ರಚಿಸಿದವರಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.&lt;/p&gt;&lt;p&gt;ಪೂರ್ವಾನುಮತಿ ಪಡೆಯದೆ ಸರ್ಕಾರಿ ಮೂಲಸೌಕರ್ಯಗಳ ಮೇಲೆ ಚಿತ್ರಗಳನ್ನು ಬಿಡಿಸಬಾರದು ಎಂದು ಜು.10ರಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಆದೇಶಿಸಿದ್ದರು ಹಾಗೂ ಇದನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದರು.&lt;/p&gt;&lt;p&gt;&lt;strong&gt;ಚಿಕಿತ್ಸೆ ಬಗ್ಗೆ ವಾಂಗ್ಚುಕ್&zwnj; ಪತ್ನಿ-ಆಸ್ಪತ್ರೆ ಜಟಾಪಟಿ&amp;nbsp;&lt;/strong&gt;&lt;/p&gt;&lt;p&gt;&lt;strong&gt;&amp;nbsp;ನವದೆಹಲಿ : &lt;/strong&gt;ದೆಹಲಿಯ ಸಫ್ದರ್&zwnj;ಜಂಗ್ ಆಸ್ಪತ್ರೆಗೆ ದಾಖಲಾಗಿರುವ ಸೋನಂ ವಾಂಗ್ಚುಕ್&zwnj; ಚಿಕಿತ್ಸೆಗೆ ಸಂಬಂಧಿಸಿದಂತೆ ಆಸ್ಪತ್ರೆ ಹಾಗೂ ವಾಂಗ್ಚುಕ್&zwnj; ಪತ್ನಿ ಗೀತಾಂಜಲಿ ಜೆ ಆಂಗ್ಮೋ ಮಧ್ಯೆ ವಾಕ್ಸಮರ ನಡೆದಿದೆ.&lsquo;ವಾಂಗ್ಚುಕ್&zwnj; ಚಿಕಿತ್ಸೆಗೆ ಸಂಬಂಧಿಸಿದ ವರದಿಯ ಪ್ರತಿಗಳನ್ನು ನೀಡಲು ಆಸ್ಪತ್ರೆ ನಿರಾಕರಿಸಿದೆ. &amp;nbsp;&lt;/p&gt;&lt;p&gt;ಇದು ಚಿಕಿತ್ಸಾ ವಿಧಾನದ ಬಗ್ಗೆ ಅನುಮಾನ ಮೂಡಿಸುವಂತಿದೆ. ನನ್ನ ಅನುಮತಿಯಿಲ್ಲದೇ ಯಾವುದೇ ವೈದ್ಯಕೀಯ ಚಿಕಿತ್ಸೆ ನೀಡಕೂಡದು. ಬಾಯಿ ಅಥವಾ ರಕ್ತನಾಳದ ಮೂಲಕ ಯಾವುದೇ ಔಷಧ ಅಥವಾ ದ್ರವವನ್ನು ಹಾಕಬಾರದು&rsquo; ಎಂದು ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೋ ತಾಕೀತು ಮಾಡಿದ್ದಾರೆ.&lt;/p&gt;&lt;p&gt;ಆದರೆ ಆಸ್ಪತ್ರೆ ಹೇಳಿಕೆ ಬಿಡುಗಡೆ ಮಾಡಿ ಇದಕ್ಕೆ ಉತ್ತರಿಸಿದ್ದು, &lsquo;ವಾಂಗ್ಚುಕ್&zwnj; ಅವರ ಆರೋಗ್ಯದ ಹಿತದೃಷ್ಟಿಯಿಂದ ಚಿಕಿತ್ಸೆಗಾಗಿ ಅವರನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ಸಲಹೆ ನೀಡಲಾಗುತ್ತಿದೆ. ಆದರೆ ರೋಗಿಯು ದ್ರವ ಅಥವಾ ಯಾವುದೇ ಇತರ ಔಷಧಿಗಳನ್ನು ನಿರಾಕರಿಸಿದ್ದಾರೆ. ಅವರ ಕುಟುಂಬಸ್ಥರು ಚಿಕಿತ್ಸೆಗೆ ಅನುಮತಿ ನೀಡಬೇಕು. ಇಲ್ಲದೇ ಹೋದರೆ ಸ್ಥಿತಿ ವಿಷಮಿಸುವ ಆತಂಕವಿದೆ&rsquo; ಎಂದಿದೆ.ಉಪವಾಸ ಸತ್ಯಾಗ್ರಹ ಆರಂಭವಾದಾಗಿನಿಂದ ಅವರ ತೂಕ 9.5 ಕೆಜಿಯಷ್ಟು ಕಡಿಮೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;84ರಲ್ಲಿ ಉಪವಾಸ ನಡೆಸಿದ್ದ ವಾಂಗ್ಚುಕ್&zwnj; ತಂದೆ&lt;/strong&gt;&lt;/p&gt;&lt;p&gt;&lt;strong&gt;ನವದೆಹಲಿ: &lt;/strong&gt;20 ದಿನಗಳ ನಿರಶನದ ಮೂಲಕ ದೇಶದ ಗಮನವನ್ನು ನೀಟ್&zwnj; ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆಯತ್ತ ಸೆಳೆದಿರು/ವ ಹೋರಾಟಗಾರ ಸೋನಂ ವಾಂಗ್ಚುಕ್&zwnj; ಅವರ ತಂದೆ ಸೋನಂ ವಾಂಗ್ಯಾಲ್&zwnj;, ಲಡಾಖ್&zwnj; ಜನರಿಗೆ ಪರಿಶಿಷ್ಟ ಪಂಗಡ ಸ್ಥಾನ ನೀಡಬೇಕೆಂದು ಆಗ್ರಹಿಸಿ 1984ರಲ್ಲಿ ಉಪವಾಸ ಕುಳಿತಿದ್ದರು. ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಖುದ್ದಾಗಿ ಬಂದು ಅವರನ್ನು ಭೇಟಿ ಆಗಿ ಉಪವಾಸ ಕೈಬಿಡುವಂತೆ ಮನವಿ ಮಾಡಿದ್ದರು.&amp;nbsp;&lt;/p&gt;&lt;p&gt;ತಮ್ಮ ಹುಟ್ಟೂರಾದ ಲಡಾಖ್&zwnj; ಜನರಿಗೆ ಸಾಂವಿಧಾನಿಕವಾಗಿ ಪರಿಶಿಷ್ಟ ಪಂಗಡದ ಸ್ಥಾನ ನೀಡಬೇಕೆಂದು ಆಗ್ರಹಿಸಿ 1984ರಲ್ಲಿ ವಾಂಗ್ಯಾಲ್&zwnj; ಅವರು ಲೇಹ್&zwnj;ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಘೋಷಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಅಲ್ಲಿಗಾಗಮಿಸಿದ್ದ ಇಂದಿರಾ, ಅವರ ಬೇಡಿಕೆಯನ್ನು ಪರಿಶೀಲಿಸುವ ಭರವಸೆ ನೀಡಿದ್ದರು ಹಾಗೂ ಉಪವಾಸ ನಿಲ್ಲಿಸುವಂತೆ ಆಗ್ರಹ ಮಾಡಿದ್ದರು. ಇಂದಿರಾ ಹತ್ಯೆಯ ಬಳಿಕ ಪ್ರಧಾನಿಯಾದ ರಾಜೀವ್&zwnj; ಗಾಂಧಿ ಅವರ ಸರ್ಕಾರ 1989ರಲ್ಲಿ ಪರಿಶಿಷ್ಟ ಪಂಗಡದ ಸ್ಥಾನ ನೀಡುವ ಮೂಲಕ ವಾಂಗ್ಯಾಲ್&zwnj; ಅವರ ಆಸೆಯನ್ನು ಈಡೇರಿಸಿತ್ತು.&lt;/p&gt;&lt;p&gt;&lt;strong&gt;ಅಭಿಜೀತ್&zwnj; ದೀಪ್ಕೆ ಮೇಲೆ ಶಾಯಿ ಎರಚಿದ ಮಹಿಳೆ&lt;/strong&gt;&lt;/p&gt;&lt;p&gt;&lt;strong&gt;ನವದೆಹಲಿ:&lt;/strong&gt; ಜಂತರ್ ಮಂತರ್&zwnj;ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಜಿರಳೆ ಪಾರ್ಟಿ ಸ್ಥಾಪಕ ಅಭಿಜೀತ್ ದೀಪ್ಕೆ ಮೇಲೆ ಮಹಿಳೆಯೊಬ್ಬಳು ಶಾಯಿ ಎರಚಿದ ಘಟನೆ ಶನಿವಾರ ನಡೆದಿದೆ. ಶಾಯಿ ಎರಚಿದ ಈಕೆ &lsquo;ಜೈ ಶ್ರೀರಾಂ&rsquo; ಘೋಷಣೆ ಕೂಗಿದ್ದು, ಆಕೆಯನ್ನು ವಶಕ್ಕೆ ಪಡೆಯಲಾಗಿದೆ.ಸೋನಂ ವಾಂಗ್ಚುಕ್&zwnj;ರನ್ನು ಪೊಲೀಸರು ನಾಟಕೀಯವಾಗಿ ಆಸ್ಪತ್ರೆಗೆ ಹೊತ್ತೊಯ್ದ ಕೆಲವೇ ಗಂಟೆಗಳ ನಂತರ ದೀಪ್ಕೆ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಆಗ ಏಕಾಏಕಿ ಮಹಿಳೆಯೊಬ್ಬಳು ಅವರ ಮೇಲೆ ಶಾಯಿ ಎರಚಿದಳು. ತಕ್ಷಣ ಪ್ರತಿಭಟನಾಕಾರರು ವೇದಿಕೆಯತ್ತ ನುಗ್ಗಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಂತರ ಆ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಕೆಯ ಗುರುತು ಮತ್ತು ಕೃತ್ಯದ ಹಿಂದಿನ ಉದ್ದೇಶ ತಿಳಿದುಬಂದಿಲ್ಲ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/cjp-founder-dipke-begins-indefinite-fast-outfit-vows-to-go-ahead-with-parliament-march/articleshow-ib5h6g8"/>
        </item>
        <item>
            <title><![CDATA[ಭಾರತದಿಂದಲೂ ನೀರಿನಲ್ಲಿ ರಾಕೆಟ್‌ ಇಳಿಸುವ ಯೋಜನೆ]]></title>
            <link>https://www.kannadaprabha.in/india-news/agnikul-to-attempt-rocket-stage-recovery/articleshow-ifasqm0</link>
            <guid isPermaLink="true">https://www.kannadaprabha.in/india-news/agnikul-to-attempt-rocket-stage-recovery/articleshow-ifasqm0</guid>
            <pubDate>Sat, 18 Jul 2026 00:15:00 +0530</pubDate>
            <description><![CDATA[&lt;p&gt;ಅಮೆರಿಕ, ಚೀನಾ ಮತ್ತು ಜಪಾನ್&zwnj; ಬಳಿಕ ಇದೀಗ ಭಾರತ ಕೂಡ ಬಾಹ್ಯಾಕಾಶ ಯೋಜನೆಗಳಿಗೆ ನಭಕ್ಕೆ ಹಾರಿಬಿಡುವ ರಾಕೆಟ್&zwnj;ಗಳನ್ನು ಮರುಬಳಕೆ ಉದ್ದೇಶದಿಂದ ಮರಳಿ ನೀರಿನಲ್ಲಿ ಸುರಕ್ಷಿತವಾಗಿ ಇಳಿಸುವ ಪ್ರಯೋಗಕ್ಕೆ ಮುಂದಾಗಿದೆ.&lt;/p&gt;]]></description>
            <media:content url="https://static-assets.asianetnews.com/kp/json/17072026/pictures/AGNIKUL_556.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಾಷಿಂಗ್ಟನ್&zwnj;:&lt;/strong&gt; ಅಮೆರಿಕ, ಚೀನಾ ಮತ್ತು ಜಪಾನ್&zwnj; ಬಳಿಕ ಇದೀಗ ಭಾರತ ಕೂಡ ಬಾಹ್ಯಾಕಾಶ ಯೋಜನೆಗಳಿಗೆ ನಭಕ್ಕೆ ಹಾರಿಬಿಡುವ ರಾಕೆಟ್&zwnj;ಗಳನ್ನು ಮರುಬಳಕೆ ಉದ್ದೇಶದಿಂದ ಮರಳಿ ನೀರಿನಲ್ಲಿ ಸುರಕ್ಷಿತವಾಗಿ ಇಳಿಸುವ ಪ್ರಯೋಗಕ್ಕೆ ಮುಂದಾಗಿದೆ. ಚೆನ್ನೈ ಮೂಲದ ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟ್&zwnj;ಅಪ್&zwnj; ಅಗ್ನಿಕುಲ್&zwnj; ಕಾಸ್ಮೋಸ್&zwnj; ಸಂಸ್ಥೆ ಇಂಥದ್ದೊಂದು &lsquo;ಮಿಷನ್&zwnj;-2&rsquo; ಪ್ರಯೋಗಕ್ಕೆ ಸಜ್ಜಾಗಿದೆ.&lt;/p&gt;&lt;p&gt;ಉಪಗ್ರಹವನ್ನು ಆಗಸಕ್ಕೆ ಹೊತ್ತೊಯ್ದ ಬಳಿಕ ರಾಕೆಟ್&zwnj;ನ ಬೂಸ್ಟರ್&zwnj; ಯಶಸ್ವಿಯಾಗಿ ಸುರಕ್ಷಿತವಾಗಿ ಭೂಮಿಗೆ ತಲುಪುವಂತೆ ಮಾಡುವ ಕಾರ್ಯದಲ್ಲಿ ಚೀನಾ ಯಶಸ್ವಿಯಾದ ಬೆನ್ನಲ್ಲೇ ಅಗ್ನಿಕುಲ ಕಾಸ್ಮೋಸ್&zwnj; ಸಂಸ್ಥೆಯಿಂದ ಈ ಘೋಷಣೆ ಹೊರಬಿದ್ದಿದೆ.&lt;/p&gt;&lt;h2&gt;&lt;strong&gt;ಭಾರೀ ಪ್ರಮಾಣದಲ್ಲಿ ಹೂಡಿಕೆ:&lt;/strong&gt;&lt;/h2&gt;&lt;p&gt;ಸ್ಪೇಸ್&zwnj; ಎಕ್ಸ್&zwnj;, ಬ್ಲೂ ಒರಿಜಿನ್&zwnj; ಮತ್ತು ರಾಕೆಟ್&zwnj; ಲ್ಯಾಬ್&zwnj;ನಂಥ ಕಂಪನಿಗಳು ಮರುಬಳಕೆಯ ರಾಕೆಟ್&zwnj; ತಂತ್ರಜ್ಞಾನ ಮೇಲೆ ಭಾರೀ ಮಟ್ಟದಲ್ಲಿ ಹೂಡಿಕೆ ಮಾಡುತ್ತಿವೆ. ಇದು ಯಾವುದೇ ಬಾಹ್ಯಾಕಾಶ ಯೋಜನೆಗಳ ವೆಚ್ಚವನ್ನು ಇ&zwj;ಳಿಸುತ್ತವೆ. ಅಗ್ನಿಕುಲ್&zwnj; ಸಂಸ್ಥೆ ಕೂಡ ಇದೇ ರೀತಿಯ ಸಾಮರ್ಥ್ಯವನ್ನು ಭಾರತಕ್ಕೆ ತರಲು ಮುಂದಾಗಿದೆ.&lt;/p&gt;&lt;p&gt;ರಾಕೆಟ್&zwnj;ನ ಬೂಸ್ಟರ್&zwnj; ಅನ್ನು ಮರುಪಡೆಯುವುದಷ್ಟೇ ಅಲ್ಲದೆ, ರಾಕೆಟ್&zwnj;ನ ಮೇಲ್ಭಾಗವನ್ನು ವಾತಾವರಣದಲ್ಲೇ ನಾಶಪಡಿಸುವ ಬದಲು ಭೂಕಕ್ಷೆಯಲ್ಲಿ ಉಪಯುಕ್ತ ಪ್ರಯೋಗಗಳಿಗೆ ವೇದಿಕೆಯಾಗಿ ಪರಿವರ್ತಿಸಲೂ ಸಂಸ್ಥೆ ಯೋಜನೆ ಹಾಕಿಕೊಂಡಿದೆ. ಪ್ರಯೋಗಗಳಷ್ಟೇ ಅಲ್ಲದೆ, ತಂತ್ರಜ್ಞಾನಗಳ ಪರೀಕ್ಷೆ ಅಥವಾ ಭವಿಷ್ಯದ ಬಾಹ್ಯಾಕಾಶ ಮೂಲಸೌಲಭ್ಯಗಳಿಗೆ ಬೆಂಬಲ ನೀಡುವಂಥ ಕಾರ್ಯಗಳಿಗೆ ರಾಕೆಟ್&zwnj;ನ ಅನುಪಯುಕ್ತ ಮೇಲ್ಭಾಗ ಬಳಸಲು ಮುಂದಾಗಿದೆ.&lt;/p&gt;&lt;h3&gt;ಪದೇ ಪದೆ ನಡೆಸುವ ಬಾಹ್ಯಾಕಾಶ ಯೋಜನೆಗಳಿಗೆ ವ್ಯಾಪಕ ಮರುಬಳಕೆ&lt;/h3&gt;&lt;p&gt;ಬಾಹ್ಯಾಕಾಶ ತಲುಪುವುದೇ ಏಕೈಕ ಮೂಲ ಗುರಿಯಾಗಿದ್ದಾಗ ಒಂದು ಬಾರಿ ಬಳಸುವ ರಾಕೆಟ್&zwnj;ಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ ಇಂದು ಕಡಿಮ ವೆಚ್ಚದ, ಪದೇ ಪದೆ ನಡೆಸುವ ಬಾಹ್ಯಾಕಾಶ ಯೋಜನೆಗಳಿಗೆ ವ್ಯಾಪಕ ಮರುಬಳಕೆ, ಸಂಪೂರ್ಣ ಸ್ಥಿತಿಸ್ಥಾಪಕತ್ವ ಹಾಗೂ ಮಾಡ್ಯುಲಾರಿಟಿಯೇ ತತ್ವವಾಗಿರಲಿದೆ ಎಂದು ಅಗ್ನಿಕುಲ್&zwnj; ಕಾಸ್ಮೋಸ್&zwnj; ಕಂಪನಿಯ ಸಿಇಒ ಶ್ರೀನಾಥ್&zwnj; ರವಿಚಂದ್ರನ್&zwnj; ತಿಳಿಸಿದರು.&lt;/p&gt;&lt;p&gt;ಅಗ್ನಿಕುಲ್&zwnj; ಕಂಪನಿಯು ಇತ್ತೀಚೆಗಷ್ಟೇ ಇಸ್ರೋದ ಮಾಜಿ ಮುಖ್ಯಸ್ಥ ಎಸ್&zwnj;.ಸೋಮನಾಥ್&zwnj; ಅವರನ್ನು ಕಂಪನಿಯ ನಿರ್ದೇಶಕ ಮಂಡಳಿಗೆ ವೀಕ್ಷಕನಾಗಿ ನೇಮಿಸಿಕೊಂಡಿದೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/agnikul-to-attempt-rocket-stage-recovery/articleshow-ifasqm0"/>
        </item>
        <item>
            <title><![CDATA[ಜು.20 ರ ತನಕ ಜೀವ ಉಳಿಸಿಕೊಂಡಿರುತ್ತೇನೆ: ವಾಂಗ್ಚುಕ್‌]]></title>
            <link>https://www.kannadaprabha.in/india-news/i-will-stay-alive-till-july-20-at-any-cost-says-wangchuk/articleshow-kb6ml4k</link>
            <guid isPermaLink="true">https://www.kannadaprabha.in/india-news/i-will-stay-alive-till-july-20-at-any-cost-says-wangchuk/articleshow-kb6ml4k</guid>
            <pubDate>Sat, 18 Jul 2026 03:30:00 +0530</pubDate>
            <description><![CDATA[ಪರೀಕ್ಷಾ ಅಕ್ರಮಗಳ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ 20ನೇ ದಿನಕ್ಕೆ ಕಾಲಿಟ್ಟಿರುವ ನಡುವೆಯೇ, &lsquo;ಏನೇ ಆದರೂ ಜು.20ರವರೆಗೂ ಜೀವ ಉಳಿಸಿಕೊಂಡಿರುತ್ತೇನೆ&rsquo; ಎಂದು ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್&zwnj; ಹೇಳಿದ್ದಾರೆ.]]></description>
            <media:content url="https://static-assets.asianetnews.com/kp/json/17072026/pictures/SONAM1_977.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಪರೀಕ್ಷಾ ಅಕ್ರಮಗಳ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ 20ನೇ ದಿನಕ್ಕೆ ಕಾಲಿಟ್ಟಿರುವ ನಡುವೆಯೇ, &lsquo;ಏನೇ ಆದರೂ ಜು.20ರವರೆಗೂ ಜೀವ ಉಳಿಸಿಕೊಂಡಿರುತ್ತೇನೆ&rsquo; ಎಂದು ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್&zwnj; ಹೇಳಿದ್ದಾರೆ. ಜು.20ರಂದು ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಅಂದು ಪ್ರತಿಭಟನಾ ಸ್ಥಳದಿಂದ ಸಂಸತ್ತಿನವರೆಗೂ ಜಿರಳೆ ಪಕ್ಷವು ಪಾದಯಾತ್ರೆ ಹಮ್ಮಿಕೊಂಡಿದೆ.&lt;/p&gt;&lt;p&gt;ಈ ಕುರಿತು ಪ್ರತಿಕ್ರಿಯಿಸಿರುವ ವಾಂಗ್ಚುಕ್&zwnj;, &lsquo;ನಾನು ದೈಹಿಕವಾಗಿ ಹೊರಗಡೆಯಿಂದ ದುರ್ಬಲವಾಗಿರಬಹುದು, ಆದರೆ ಮಾನಸಿಕವಾಗಿ ಬಲಿಷ್ಠನಾಗಿದ್ದೇನೆ. ನನ್ನ ಪ್ರಕಾರ ಹೊರಗಡೆ, ಒಳಗಡೆ ಎರಡೂ ಕೂಡ ಸದೃಢನಾಗಿದ್ದೇನೆ. ಈ ಶಕ್ತಿ ಜು. 20ಕ್ಕೆ ನಡೆಯಲಿರುವ ಶಾಂತಿಯುತ ಸಂಸತ್&zwnj; ಚಳುವಳಿಯ ತನಕವೂ ಇರುತ್ತದೆ. ನಾವೆಲ್ಲರೂ ಒಟ್ಟಿಗೆ ಹೋಗಿ ಪ್ರಜಾಪ್ರಭುತ್ವದ ದೇಗುಲದಲ್ಲಿ ಮನವಿ ಸಲ್ಲಿಸೋಣ. ಅಲ್ಲಿಯ ತನಕ ನಾನು ಎಷ್ಟೇ ಕಷ್ಟವಾದರೂ ಜೀವ ಉಳಿಸಿಕೊಂಡು ಇರುತ್ತೇನೆ. ನೀವೆಲ್ಲರೂ ಅಂದು ಬಾರದಿದ್ದರೆ ಪ್ರತಿಭಟನೆ ವಿಫಲಗೊಂಡಂತೆ. ಹಾಗೇನಾದರೂ ಆದರೆ ಮರಳಿ ನಾನು ಭೂತವಾಗಿ ಬರುತ್ತೇನೆ&rsquo; ಎಂದಿದ್ದಾರೆ.&lt;/p&gt;&lt;p&gt;ಇದರ ನಡುವೆ ಕಳೆದ 24 ಗಂಟೆಗಳಲ್ಲಿ ವಾಂಗ್ಚುಕ್&zwnj; ಮತ್ತೆ 350 ಗ್ರಾಂ ತೂಕ ಕಳೆದುಕೊಂಡಿದ್ದಾರೆ. 20 ದಿನದಲ್ಲಿ 9.5ಕೇಜಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.&lt;/p&gt;&lt;p&gt;ಇನ್ನು ವಾಂಗ್ಚುಕ್&zwnj; ಪ್ರತಿಭಟನೆ ಕಾಂಗ್ರೆಸ್&zwnj; ಕೂಡ ಬೆಂಬಲಿಸಿದೆ. ಕಾಂಗ್ರೆಸ್&zwnj; ರಾಜ್ಯಸಭಾ ಸದಸ್ಯ ಪವನ್&zwnj; ಖೇರಾ ಸೇರಿದಂತೆ ವಿವಿಧ ಪಕ್ಷದ ನಾಯಕರು ವಾಂಗ್ಚುಕ್&zwnj; ಅವರನ್ನು ಭೇಟಿಯಾಗಿ ಉಪವಾಸ ಕೈಬಿಡುವಂತೆ ಮನವಿ ಮಾಡಿದರು.&lt;/p&gt;&lt;h2&gt;3 ಈಡಿಯಟ್ಸ್&zwnj;ಗೂ ಸೋನಂಗೆ ಸಂಬಂಧವಿಲ್ಲ: ಅಮೀರ್&zwnj;&lt;/h2&gt;&lt;p&gt;ತಮ್ಮ ಅಭಿನಯದ 3 ಈಡಿಯಟ್ಸ್ ಸೋನಂ ವಾಂಗ್ಚುಕ್&zwnj; ಅವರ ಜೀವನಾಧರಿತ ಎನ್ನುವ ಸುದ್ದಿಯನ್ನು ನಟ ಅಮೀರ್&zwnj; ಖಾನ್&zwnj; ತಳ್ಳಿ ಹಾಕಿದ್ದಾರೆ. &lsquo;ಈ ಸುದ್ದಿ ನಿಜವಲ್ಲ. ಸಿನಿಮಾದ ಸಂದರ್ಭದಲ್ಲಿ ನನಗೆ ಸೋನಂ ಅವರು ಯಾರೂ ಅಂತಲೇ ಗೊತ್ತಿರಲಿಲ್ಲ. ಚಿತ್ರದ ಪಾತ್ರ ಅವರ ಜೀವನಾಧರಿತ ಅಲ್ಲ&rsquo; ಎಂದಿದ್ದಾರೆ.&lt;/p&gt;&lt;h3&gt;ವಾಂಗ್ಚುಕ್&zwnj;ಗೆ, ಜಿರಳೆ ಪಕ್ಷ ಅಮೀರ್&zwnj; ಮಾಜಿ ಪತ್ನಿ ಕಿರಣ್&zwnj; ಬೆಂಬಲ&lt;/h3&gt;&lt;p&gt;ವಾಂಗ್ಚುಕ್ ಅವರ ಹೋರಾಟಕ್ಕೆ ಅಮೀರ್&zwnj; ಖಾನ್&zwnj; ಮಾಜಿ ಪತ್ನಿ, ನಿರ್ದೇಶಕಿ ಕಿರಣ್&zwnj; ರಾವ್&zwnj; ಬೆಂಬಲ ವ್ಯಕ್ತಪಡಿಸಿದ್ದಾರೆ. &lsquo;ನಾನು ಸೋನಂ ವಾಂಗ್ಚುಕ್&zwnj;, ಸಿಜೆಪಿ ಪಕ್ಷವನ್ನು ಬೆಂಬಲಿಸುತ್ತೇನೆ. ಸರ್ಕಾರದ ಮೌನ ಬೇಸರ ತರಿಸಿದೆ. ಕೇಂದ್ರ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು&rsquo; ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/i-will-stay-alive-till-july-20-at-any-cost-says-wangchuk/articleshow-kb6ml4k"/>
        </item>
        <item>
            <title><![CDATA[ಬಿಪಿಎಲ್‌ಗೆ ಆದಾಯ ಮಿತಿ ಹೆಚ್ಚಳಕ್ಕೆ ಶೀಘ್ರ ಕ್ರಮ : ಕೆಎಚ್‌ಎಂ]]></title>
            <link>https://www.kannadaprabha.in/india-news/khm-swift-action-to-raise-the-bpl-income-limit/articleshow-pf4mehc</link>
            <guid isPermaLink="true">https://www.kannadaprabha.in/india-news/khm-swift-action-to-raise-the-bpl-income-limit/articleshow-pf4mehc</guid>
            <pubDate>Fri, 17 Jul 2026 11:54:36 +0530</pubDate>
            <description><![CDATA[&lt;p&gt;ಬಿಪಿಎಲ್&zwnj; ಪಡಿತರ ಚೀಟಿ ಪಡೆಯಲು ಇರುವ ಆದಾಯ ಮಿತಿ ಹೆಚ್ಚಳಕ್ಕೆ ಪ್ರಸ್ತಾವನೆಯಿದ್ದು, ಶೀಘ್ರ ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಹಾಗೆಯೇ, ಅನರ್ಹ ಬಿಪಿಎಲ್&zwnj; ಪಡಿತರ ಚೀಟಿದಾರರನ್ನು ಎಪಿಎಲ್&zwnj;ಗೆ ಸೇರಿಸಿ ಪರಿಷ್ಕರಣೆ ಕಾರ್ಯಕ್ಕೂ ವೇಗ ನೀಡಲಾಗುವುದು&lt;/p&gt;]]></description>
            <media:content url="https://static-gi.asianetnews.com/images/01ehq9d4fgbgy7nq894pgb1sy3/bpl-card-jpg.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಬೆಂಗಳೂರು : &amp;nbsp;&lt;/strong&gt;ಬಿಪಿಎಲ್&zwnj; ಪಡಿತರ ಚೀಟಿ ಪಡೆಯಲು ಇರುವ ಆದಾಯ ಮಿತಿ ಹೆಚ್ಚಳಕ್ಕೆ ಪ್ರಸ್ತಾವನೆಯಿದ್ದು, ಶೀಘ್ರ ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಹಾಗೆಯೇ, ಅನರ್ಹ ಬಿಪಿಎಲ್&zwnj; ಪಡಿತರ ಚೀಟಿದಾರರನ್ನು ಎಪಿಎಲ್&zwnj;ಗೆ ಸೇರಿಸಿ ಪರಿಷ್ಕರಣೆ ಕಾರ್ಯಕ್ಕೂ ವೇಗ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್&zwnj;.ಮುನಿಯಪ್ಪ ತಿಳಿಸಿದರು.&lt;/p&gt;&lt;p&gt;ವಿಧಾನಸೌಧದಲ್ಲಿ ಗುರುವಾರ ಆಹಾರ ನಿಗಮಕ್ಕೆ ನೂತನವಾಗಿ ನೇಮಕವಾಗಿರುವ 376 ಸಿಬ್ಬಂದಿಗೆ ನೇಮಕಾತಿ ಪತ್ರ ವಿತರಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುನಿಯಪ್ಪ, ಬಿಪಿಎಲ್&zwnj; ಪಡಿತರ ಚೀಟಿ ಪಡೆಯಲು ಇರುವ ಆದಾಯ ಮಿತಿ ಬದಲಾವಣೆಗೆ ಹಲವು ವರ್ಷಗಳಿಂದ ಬೇಡಿಕೆಯಿದೆ. ಅಲ್ಲದೆ, ರಾಜ್ಯ ಆಡಳಿತ ಸುಧಾರಣಾ ಆಯೋಗದ ವರದಿಯಲ್ಲೂ ಈ ಕುರಿತು ಶಿಫಾರಸು ಮಾಡಲಾಗಿದೆ. ಹೀಗಾಗಿ ಆದಾಯ ಮಿತಿ ಹೆಚ್ಚಳಕ್ಕೆ ಸಂಬಂಧಿಸಿ ಚರ್ಚೆ ಮಾಡಲಾಗುತ್ತಿದ್ದು, ಶೀಘ್ರ ಈ ಕುರಿತು ನಿರ್ಧರಿಸಲಾಗುವುದು ಎಂದರು.&lt;/p&gt;&lt;p&gt;ಕೇಂದ್ರ ಸರ್ಕಾರ ರಾಜ್ಯದ 7.76 ಲಕ್ಷ ಅನರ್ಹ ಬಿಪಿಎಲ್&zwnj; ಪಡಿತರ ಚೀಟಿಗಳನ್ನು ಗುರುತು ಮಾಡಿದ್ದು, ಅವುಗಳಲ್ಲಿ ಈಗಾಗಲೇ ಶೇ.50ರಷ್ಟನ್ನು ಪರಿಷ್ಕರಿಸಲಾಗಿದೆ. 4.32 ಲಕ್ಷ ಬಿಪಿಎಲ್&zwnj; ಪಡಿತರ ಚೀಟಿಗಳನ್ನು ಎಪಿಎಲ್&zwnj;ಗೆ ಪರಿವರ್ತಿಸಲಾಗಿದೆ. ಉಳಿದ ಅನರ್ಹ ಬಿಪಿಎಲ್&zwnj; ಪಡಿತರ ಚೀಟಿಗಳನ್ನೂ ಎಪಿಎಲ್&zwnj;ಗೆ ಪರಿವರ್ತಿಸಲಾಗುವುದು. ಉಳಿದಂತೆ ರಾಜ್ಯದಲ್ಲಿ 1.25 ಕೋಟಿ ಅಂತ್ಯೋದಯ, ಬಿಪಿಎಲ್&zwnj; ಸೇರಿ ಇನ್ನಿತರ ಪಡಿತರ ಚೀಟಿಗಳ 4.45 ಕೋಟಿ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆ ಸೌಲಭ್ಯ ನೀಡಲಾಗುತ್ತಿದೆ ಎಂದು ವಿವರಿಸಿದರು.&lt;/p&gt;&lt;h2&gt;&lt;strong&gt;ಸ್ಮಾರ್ಟ್&zwnj; ಪಿಡಿಎಸ್&zwnj;:&lt;/strong&gt;&lt;/h2&gt;&lt;p&gt;ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕವನ್ನಾಗಿಸಲು ಸ್ಮಾರ್ಟ್&zwnj; ಪಿಡಿಎಸ್&zwnj; ಯೋಜನೆ ಜಾರಿಗೊಳಿಸಲಾಗುತ್ತಿದೆ. ಅದರಡಿ ಇ-ಪಾಸ್&zwnj; ಯಂತ್ರಗಳು ಮತ್ತು ಎಲೆಕ್ಟ್ರಾನಿಕ್&zwnj; ತೂಕ ಯಂತ್ರಗಳ ಅಳವಡಿಕೆಗೆ ಟೆಂಡರ್&zwnj; ಪ್ರಕ್ರಿಯೆ ಆರಂಭಿಸಲಾಗಿದೆ. ಯೋಜನೆಯಿಂದ ಫಲಾನುಭವಿಗಳಿಗೆ ವೇಗವಾಗಿ, ನಿಖರ ಸೇವೆ ದೊರೆಯಲಿದೆ ಎಂದರು.&lt;/p&gt;&lt;p&gt;2025-26ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ 5.69 ಲಕ್ಷ ಮೆಟ್ರಿಕ್&zwnj; ಟನ್&zwnj; ರಾಗಿ, 2.21 ಲಕ್ಷ ಮೆಟ್ರಿಕ್&zwnj; ಟನ್&zwnj; ಜೋಳ ಸೇರಿ ಭತ್ತವನ್ನು ರೈತರಿಂದ ಖರೀದಿಸಲಾಗಿದೆ. 4422.17 ಕೋಟಿ ರು. ಮೊತ್ತದ ಧಾನ್ಯ ಖರೀದಿಸಲಾಗಿದ್ದು ಅದರಿಂದ 2.89 ಲಕ್ಷ ರೈತರಿಗೆ ಅನುಕೂಲವಾಗಿದೆ. 2026-27ನೇ ಸಾಲಿನಲ್ಲಿ ಪ್ರತಿ ಕ್ವಿಂಟಾಲ್&zwnj; ರಾಗಿಗೆ 5205 ರು., ಜೋಳಕ್ಕೆ 4023 ರು., ಭತ್ತಕ್ಕೆ 2461 ರು.ಗಳನ್ನು ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.&lt;/p&gt;&lt;p&gt;ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಾರ್ಯದರ್ಶಿ ಕನಗವಲ್ಲಿ, ಆಯುಕ್ತ ರವಿಕುಮಾರ್&zwnj;, ಆಹಾರ ನಿಗಮದ ನಿರ್ದೇಶಕ ಜಗದೀಶ್&zwnj; ಇತರರಿದ್ದರು.&lt;/p&gt;&lt;h3&gt;376 ಸಿಬ್ಬಂದಿಗೆ ನೇಮಕಾತಿ ಪತ್ರ ವಿತರಣೆ:&lt;/h3&gt;&lt;p&gt;ಕಾರ್ಯಕ್ರಮದಲ್ಲಿ ಆಹಾರ ನಿಗಮದ ವಿವಿಧ ಹುದ್ದೆಗಳಿಗೆ ನೂತನವಾಗಿ ನೇಮಕವಾಗಿರುವ 376 ಸಿಬ್ಬಂದಿಗೆ ನೇಮಕಾತಿ ಪತ್ರ ವಿತರಿಸಲಾಯಿತು. ಅದರ ಜತೆಗೆ ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ಗ್ರಾಹಕರ ಹಿತರಕ್ಷಣೆಗಾಗಿ ತಪಾಸಣೆ ನಡೆಸಲು ಅನುಕೂಲವಾಗುವಂತೆ 17 ವಾಹನಗಳಿಗೆ ಮುನಿಯಪ್ಪ ಹಸಿರು ನಿಶಾನೆ ತೋರಿಸಿದರು.&lt;/p&gt;]]></content:encoded>
            <category>India</category>
            <dc:creator>Sujatha NR</dc:creator>
            <atom:link href="https://www.kannadaprabha.in/india-news/khm-swift-action-to-raise-the-bpl-income-limit/articleshow-pf4mehc"/>
        </item>
        <item>
            <title><![CDATA[ಜು.20ರಂದು ಸಂಸತ್‌ ಭವನಕ್ಕೆ  ಮುತ್ತಿಗೆ ಹಾಕಿ: ವಾಂಗ್ಚುಕ್‌ ಕರೆ]]></title>
            <link>https://www.kannadaprabha.in/india-news/lay-siege-to-parliament-on-july-20-wangchuk-calls/articleshow-v3ofwa1</link>
            <guid isPermaLink="true">https://www.kannadaprabha.in/india-news/lay-siege-to-parliament-on-july-20-wangchuk-calls/articleshow-v3ofwa1</guid>
            <pubDate>Fri, 17 Jul 2026 08:14:02 +0530</pubDate>
            <description><![CDATA[&lt;p&gt;ನೀಟ್&zwnj; ಪರೀಕ್ಷಾ ವೈಫಲ್ಯ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್&zwnj; ರಾಜೀನಾಮೆಗೆ ಆಗ್ರಹಿಸಿ 19 ದಿನದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್&zwnj;ಚುಕ್&zwnj;, ಜು.20ರ ಜಿರಳೆ ಪಕ್ಷದ ಸಂಸತ್&zwnj; ಚಲೋ ಬೆಂಬಲಿಸಬೇಕು ಎಂದು ಜನತೆಗೆ ಕರೆ ನೀಡಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/01kxn42kdkve827dfmtkhjw03g/environmentalist-sonam-wangchuk-enters-the-19th-day-of-indefinite-hunger-strike-1784194092467.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ನೀಟ್&zwnj; ಪರೀಕ್ಷಾ ವೈಫಲ್ಯ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್&zwnj; ರಾಜೀನಾಮೆಗೆ ಆಗ್ರಹಿಸಿ 19 ದಿನದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್&zwnj;ಚುಕ್&zwnj;, ಜು.20ರ ಜಿರಳೆ ಪಕ್ಷದ ಸಂಸತ್&zwnj; ಚಲೋ ಬೆಂಬಲಿಸಬೇಕು ಎಂದು ಜನತೆಗೆ ಕರೆ ನೀಡಿದ್ದಾರೆ. &amp;nbsp;&lt;/p&gt;&lt;p&gt;ಅಂದು ಸಂಸತ್&zwnj; ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದು, ಅಂದೇ ಈ ಪ್ರತಿಭಟನೆ ನಡೆಯುವುದು ವಿಶೇಷವಾಗಿದೆ.&lt;/p&gt;&lt;h2&gt;19 ದಿನದಿಂದ ವಾಂಗ್ಚುಕ್&zwnj; ಉಪವಾಸ&lt;/h2&gt;&lt;p&gt;ಈ ನಡುವೆ, 19 ದಿನದಿಂದ ವಾಂಗ್ಚುಕ್&zwnj; ಉಪವಾಸನಿರತರಾಗಿದ್ದರೂ ಸರ್ಕಾರ ವಾಂಗ್ಚುಕ್ ಜತೆ ಮಾತನಾಡದೆ ಮೌನಕ್ಕೆ ಶರಣಾಗಿರುವುದಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಆರೋಗ್ಯ ಕ್ಷೀಣಿಸುತ್ತಿದ್ದರೂ ನಿರಶನ ಮುಂದುವರಿಸುತ್ತಿರುವ ಸೋನಂ ವಾಂಗ್ಚುಕ್&zwnj; ಪರ ಬೆಂಬಲವೂ ಹೆಚ್ಚಾಗತೊಡಗಿದೆ.&lt;/p&gt;&lt;h3&gt;ವಿಡಿಯೋ ಸಂದೇಶ ಬಿಡುಗಡೆ&lt;/h3&gt;&lt;p&gt;ಶುಕ್ರವಾರ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, &lsquo;ನಾನು ಉದ್ದೇಶ ಈಡೇರದೇ ಉಪವಾಸ ಅರ್ಧಕ್ಕೇ ನಿಲ್ಲಿಸಿದರೆ ಸರಿ ಇರುವುದಿಲ್ಲ. ಹೋರಾಟ ನಿಲ್ಲಿಸಿದರೆ ಪ್ರತಿಭಟನಾಕಾರರು ಸುಮ್ಮನೇ ಪ್ರತಿಭಟಿಸಿ ಎದ್ದು ಹೋಗುತ್ತಾರೆ ಎನ್ನುವ ಸಂದೇಶ ಸರ್ಕಾರಕ್ಕೆ ಹೋಗುತ್ತದೆ. ಅದರ ಬದಲು ಜು.20ರಂದು ಜಿರಳೆ ಪಕ್ಷ ಕರೆ ನೀಡಿರುವ ಸಂಸತ್&zwnj; ಚಲೋದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನತೆ, ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿ ಹೋರಾಟ ಬಲಪಡಿಸಬೇಕು&rsquo; ಎಂದು ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>India</category>
            <dc:creator>Sujatha NR</dc:creator>
            <atom:link href="https://www.kannadaprabha.in/india-news/lay-siege-to-parliament-on-july-20-wangchuk-calls/articleshow-v3ofwa1"/>
        </item>
        <item>
            <title><![CDATA[ಅಹಮದಾಬಾದ್‌ ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ : 9 ಬಲಿ]]></title>
            <link>https://www.kannadaprabha.in/india-news/4-dead-many-injured-in-blast-fire-at-illegal-ahmedabad-firecracker-unit-toll-could-rise/articleshow-vahqxsy</link>
            <guid isPermaLink="true">https://www.kannadaprabha.in/india-news/4-dead-many-injured-in-blast-fire-at-illegal-ahmedabad-firecracker-unit-toll-could-rise/articleshow-vahqxsy</guid>
            <pubDate>Sun, 19 Jul 2026 06:57:44 +0530</pubDate>
            <description><![CDATA[ದೇಶದಲ್ಲಿ ಮತ್ತೊಂದು ಪಟಾಕಿ ದುರಂತ ಸಂಭವಿಸಿದ್ದು, ಗುಜರಾತಿನ ಅಹಮದಾಬಾದ್&zwnj; ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಪೋಟ ಸಂಭವಿಸಿ 9 ಕಾರ್ಮಿಕರು ಸಾವನ್ನಪ್ಪಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ.]]></description>
            <media:content url="https://static-assets.asianetnews.com/kp/json/18072026/pictures/PATAKI_626.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಹಮದಾಬಾದ್&zwnj;&lt;/strong&gt;: ದೇಶದಲ್ಲಿ ಮತ್ತೊಂದು ಪಟಾಕಿ ದುರಂತ ಸಂಭವಿಸಿದ್ದು, ಗುಜರಾತಿನ ಅಹಮದಾಬಾದ್&zwnj; ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಪೋಟ ಸಂಭವಿಸಿ 9 ಕಾರ್ಮಿಕರು ಸಾವನ್ನಪ್ಪಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ.ಇಲ್ಲಿನ ರಾಮೋಲ್&zwnj; ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ಪಟಾಕಿ ಕಾರ್ಖಾನೆಯಲ್ಲಿ ಮಧ್ಯಾಹ್ನ 3.30ರ ಸುಮಾರಿಗೆ ಈ ಅವಘಢ ಸಂಭವಿಸಿದೆ. ಗಾಯಗೊಂಡಿರುವ ಕೆಲವರ ಪರಿಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಶಂಕೆಯಿದೆ. ಯಾವುದೇ ಪರವಾನಗಿ ಇಲ್ಲದೆ ತೆರೆದ ಜಮೀನಿನಲ್ಲಿ ಕಾರ್ಖಾನೆ ಕಾರ್ಯನಿರ್ವಹಿಸುತ್ತಿತ್ತು ಎಂದು ತಿಳಿದು ಬಂದಿದೆ.&lt;/p&gt;&lt;h2&gt;&lt;strong&gt;ಮೋದಿ ಶೋಕ, ಪರಿಹಾರ:&lt;/strong&gt;&lt;/h2&gt;&lt;p&gt;ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಇನ್ನು ಅವಘಡದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 2 ಲಕ್ಷ ರು. ಹಾಗೂ ಗಾಯಗೊಂಡವರಿಗೆ ತಲಾ 50,000 ರು. ಪರಿಹಾರ ಘೋಷಿಸಿದ್ದಾರೆ.&lt;/p&gt;&lt;h3&gt;&lt;strong&gt;3ನೇ ಮದುವೆ: ಅಮೀರ್&zwnj; ಖಾನ್&zwnj;ಗೆ ಬಿಷ್ಣೋಯಿ ಗ್ಯಾಂಗ್&zwnj; ಬೆದರಿಕೆ?&lt;/strong&gt;&lt;/h3&gt;&lt;p&gt;&lt;strong&gt;ಮುಂಬೈ&lt;/strong&gt;: ಸಲ್ಮಾನ್&zwnj; ಖಾನ್&zwnj; ಆಯ್ತು, ಇದೀಗ ಮತ್ತೊಬ್ಬ ಬಾಲಿವುಡ್&zwnj; ನಟ ಅಮೀರ್&zwnj; ಖಾನ್&zwnj;ಗೆ ಕುಖ್ಯಾತ ಗ್ಯಾಂಗ್&zwnj;ಸ್ಟರ್&zwnj; ಲಾರೆನ್ಸ್&zwnj; ಬಿಷ್ಣೋಯಿ ಅನುಯಾಯಿಗಳು ಎನ್ನಲಾದ ಇಬ್ಬರಿಂದ ಬೆದರಿಕೆ ಕರೆ ಬಂದಿದೆ.ಇತ್ತೀಚೆಗಷ್ಟೇ ಮೂರನೇ ಮದುವೆಯಾಗಿದ್ದ ಅಮಿರ್&zwnj; ಖಾನ್&zwnj; ಅವರು ಲವ್&zwnj; ಜಿಹಾದ್&zwnj;ಗೆ ಉತ್ತೇಜನ ನೀಡುತ್ತಿದ್ದಾರೆಂದು ಆರೋಪಿಸಿ ಬೆದರಿಕೆವೊಡ್ಡಲಾಗಿದೆ.&lt;/p&gt;&lt;p&gt;ಸಾಮಾಜಿಕ ಜಾಲತಾಣ ಪೋಸ್ಟ್ ಹಾಗೂ ವಾಯ್ಸ್&zwnj; ನೋಟ್&zwnj; ಮೂಲಕ ಈ ಬೆದರಿಕೆ ಹಾಕಲಾಗಿದ್ದು, ಈ ಕುರಿತು ಮುಂಬೈ ಪೊಲೀಸರು ಪರಿಶೀಲನೆ ಆರಂಭಿಸಿದ್ದಾರೆ. ಈ ಕುರಿತು ಈವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ.ಆರ್ಜು ಬಿಷ್ಣೋಯಿ ಮತ್ತು ಟೈಸನ್&zwnj; ಬಿಷ್ಣೋಯಿ ಎಂದು ಹೇಳಿಕೊಂಡಿರುವ ಇಬ್ಬರು ವ್ಯಕ್ತಿಗಳು ಈ ಬೆದರಿಕೆ ಕರೆ ಹಾಕಿದ್ದು, ತಮ್ಮನ್ನು ತಾವು ಲಾರೆನ್ಸ್&zwnj; ಬಿಷ್ಣೋಯ್&zwnj; ಗ್ಯಾಂಗ್&zwnj;ನ ಸದಸ್ಯರು ಎಂದು ಹೇಳಿಕೊಂಡಿದ್ದಾರೆ.&lt;/p&gt;&lt;p&gt;ಅಮೀರ್&zwnj; ಖಾನ್&zwnj; ಅವರು ಇತ್ತೀಚೆಗಷ್ಟೇ ಬೆಂಗಳೂರು ಮೂಲದ ಗೌರಿ ಎಂಬವರನ್ನು ಮೂರನೇ ಮದುವೆಯಾಗಿದ್ದರು. ಆಕೆ ಹಿಂದೂ ಎಂದು ಭಾವಿಸಿ ಅನೇಕರು ಲವ್&zwnj; ಜಿಹಾದ್&zwnj; ಆರೋಪ ಹೊರಿಸಿದ್ದರು. ಆದರೆ ಆಕೆ ಕ್ರೈಸ್ತ ಎಂದು ಅಮೀರ್&zwnj; ಇತ್ತೀಚೆಗೆ ಸ್ಪಷ್ಟನೆ ನೀಡಿದ್ದರು.&lt;/p&gt;&lt;p&gt;&lt;strong&gt;ಪತಿ ಆರೋಗ್ಯಕ್ಕಾಗಿ ತಿರುಪತಿ ಮೆಟ್ಟಿಲು ಹತ್ತಿದ ಪವನ್&zwnj; ಪತ್ನಿ&lt;/strong&gt;&lt;/p&gt;&lt;p&gt;&lt;strong&gt;ಹೈದರಾಬಾದ್&zwnj;&lt;/strong&gt;: ಭುಜದ ಶಸ್ತ್ರಚಿಕಿತ್ಸೆಗೆ ಒಳಪಟ್ಟಿರುವ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್&zwnj; ಕಲ್ಯಾಣ್&zwnj;ರ ಆರೋಗ್ಯಕ್ಕಾಗಿ ಅವರ ಪತ್ನಿ, ರಷ್ಯಾ ಮೂಲದ ಅನ್ನಾ ಕೊನಿಡಾಲ ಅವರು ಶುಕ್ರವಾರ ಅಲಿಪಿರಿ ಮಾರ್ಗದ ಮೂಲಕ ನಡೆದುಕೊಂಡೇ ತಿರುಪತಿ ಬೆಟ್ಟವನ್ನೇರಿದ್ದಾರೆ. ಶನಿವಾರ ಬೆಳಗ್ಗೆ ತಿಮ್ಮಪ್ಪನ ದರ್ಶನ ಪಡೆದು ಸುಪ್ರಭಾತ ಸೇವೆಯಲ್ಲೂ ಭಾಗಿಯಾಗಿದ್ದಾರೆ.&lt;/p&gt;&lt;p&gt;ಈ ಬಗ್ಗೆ ಇನ್ಸ್&zwnj;ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, &lsquo;ತಿರುಮಲ ಬೆಟ್ಟವನ್ನು ಹತ್ತುವುದು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಷ್ಟಕರವಾಗಿತ್ತು. ನಡುನಡುವೆ ನಿಲ್ಲಿಸಿಬಿಡೋಣ ಅನ್ನಿಸಿದ್ದೂ ಉಂಟು. ಆದರೆ ಅಂಥ ಸಂದರ್ಭಗಳಲ್ಲಿ ಮೆಟ್ಟಿಲು ಎಣಿಸುವುದರ ಬದಲು ನನಗೆ ಸಿಕ್ಕಿರುವ ಪರಿವಾರ, ಆರೋಗ್ಯದಂತಹ ವರಗಳನ್ನು ಲೆಕ್ಕ ಮಾಡುತ್ತಾ ನಡೆಯತೊಡಗಿದೆ&rsquo; ಎಂದು ಹೇಳಿದ್ದಾರೆ.&lt;/p&gt;&lt;p&gt;ಈ ಮೊದಲು ಶಾಲೆಯೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದ ತಮ್ಮ ಮಗ ಸುರಕ್ಷಿತವಾಗಿ ಚೇತರಿಸಿಕೊಂಡಿದ್ದಕ್ಕಾಗಿ ಕೃತಜ್ಞತೆಯ ಸಂಕೇತವಾಗಿ, ಅನ್ನಾ ಅವರು ತಿರುಮಲ ದೇವಾಲಯದಲ್ಲಿ ಮುಡಿ ಅರ್ಪಿಸಿದ್ದರು.&lt;/p&gt;&lt;p&gt;&lt;strong&gt;6 ಶಿಂಧೆ ಸಂಸದರಿಗೆ ಮಾನ್ಯತೆ, 20 ಟಿಎಂಸಿ ಎಂಪಿಗಳಿಗೆ ಪ್ರತ್ಯೇಕ ಆಸನ&lt;/strong&gt;&lt;/p&gt;&lt;p&gt;&lt;strong&gt;ನವದೆಹಲಿ&lt;/strong&gt;: ಲೋಕಸಭಾ ಮುಂಗಾರು ಅಧಿವೇಶನಕ್ಕೂ ಮುನ್ನ ಸ್ಪೀಕರ್ ಓಂ ಬಿರ್ಲಾ, ಅವರು ಮಹಾರಾಷ್ಟ್ರದಲ್ಲಿ ಶಿವಸೇನೆ ಯುಬಿಟಿ ಬಣದಿಂದ ಪಕ್ಷಾಂತರಗೊಂಡು ಶಿಂಧೆ ಬಣಕ್ಕೆ ಸೇರಿದ 6 ಸಂಸದರಿಗೆ ಶಿವಸೇನಾ ಸಂಸದರು ಎಂಬ ಮಾನ್ಯತೆ ನೀಡಿದ್ದಾರೆ. ಇದರಿಂದ ಶಿಂಧೆ ಶಿವಸೇನೆ ಬಲ ಲೋಕಸಭೆಯಲ್ಲಿ 13ಕ್ಕೇರಿದೆ.ಮತ್ತೊಂದೆಡೆ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್&zwnj; ಸೋಲಿನ ಬಳಿಕ ಬಂಡಾಯವೆದ್ದಿರುವ 20 ಸಂಸದರಿಗೆ ಇನ್ನೂ ಮಾನ್ಯತೆ ಸಿಕ್ಕಿಲ್ಲ. ಆದರೆ ಅವರಿಗೆ ಪ್ರತೇಕ ಆಸನಗಳ ವ್ಯವಸ್ಥೆ ಕಲ್ಪಿಸುವ ಮನವಿಯನ್ನು ಓಂ ಬಿರ್ಲಾ ಅವರು ಅಂಗೀಕರಿಸಿದ್ದಾರೆ. ಸೋಮವಾರದಿಂದ ಮುಂಗಾರು ಅಧಿವೇಶನ ಆರಂಭವಾಗಲಿದೆ.&lt;/p&gt;&lt;p&gt;&lt;strong&gt;ಅಕ್ರಮ ನಿರ್ಮಾಣ: ಅಭಿಷೇಕ್&zwnj; ಬ್ಯಾನರ್ಜಿ ಕಚೇರಿ ಧ್ವಂಸ&lt;/strong&gt;&lt;/p&gt;&lt;p&gt;&lt;strong&gt;ಪಿಟಿಐ ಕೋಲ್ಕತಾ (ಪ.ಬಂಗಾಳ)&lt;/strong&gt;ಕಟ್ಟಡ ಯೋಜನೆ ಅನುಮೋದನೆ ಪಡೆಯದೆ, ನಿಯಮಗಳ ಉಲ್ಲಂಘನೆ ಮಾಡಿ ನಿರ್ಮಿಸಲಾಗಿದ್ದ ತೃಣಮೂಲ ಕಾಂಗ್ರೆಸ್&zwnj; (ಟಿಎಂಸಿ) ಸಂಸದ ಅಭಿಷೇಕ್&zwnj; ಬ್ಯಾನರ್ಜಿ ಅವರ ಕಚೇರಿಯನ್ನು ಜಿಲ್ಲಾಡಳಿತ ಶನಿವಾರ ಧ್ವಂಸ ಮಾಡಿದೆ.&lt;/p&gt;&lt;p&gt;ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಆಮ್&zwnj;ತಾಲಾದಲ್ಲಿ ಅಭಿಷೇಕ್&zwnj;, ಪಕ್ಷದ ಕಚೇರಿಯನ್ನು ನಡೆಸುತ್ತಿದ್ದರು. ಅಕ್ರಮ ನಿರ್ಮಾಣದ ಕಾರಣ ಅದನ್ನು ಕೇಂದ್ರ ಪಡೆಗಳು, ಪೊಲೀಸರ ಭಾರಿ ಭದ್ರತೆಯೊಂದಿಗೆ ತೆರವು ಮಾಡಲಾಗಿದೆ. ಅಗ್ನಿಶಾಮಕ, ತುರ್ತು ಸೇವಾ ಸಿಬ್ಬಂದಿಯೂ ಅಲ್ಲಿದ್ದರು. ಈ ವೇಳೆ ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಸಂಭ್ರಮಾಚರಿಸಿದರು. ಕೆಲವರು ಪಕ್ಷದ ಪರ ಘೋಷಣೆ ಕೂಗಿದರು. ಸ್ಥಳೀಯ ಬಿಜೆಪಿ ಶಾಸಕ ಅಗ್ನಿಶ್ವರ್ ನಸ್ಕರ್ ಜಿಲ್ಲಾಡಳಿತದ ಕ್ರಮವನ್ನು ಸ್ವಾಗತಿಸಿದ್ದಾರೆ.ಅಭಿಷೇಕ್&zwnj; ಕಚೇರಿ ಅಕ್ರಮ ನಿರ್ಮಾಣದ ಬಗ್ಗೆ ದೂರುಗಳು ಬಂದ ನಂತರ ಸಂಬಂಧಿಸಿದವರಿಗೆ ಕಾನೂನು ಪ್ರಕ್ರಿಯೆ ನಡೆಸಲು ಜು.15ಕ್ಕೆ ನೋಟಿಸ್&zwnj; ನೀಡಲಾಗಿದೆ. ಆದರೆ 2 ಬಾರಿ ನೋಟಿಸ್&zwnj; ನೀಡಿದರೂ ಉತ್ತರ ಬಾರದಿದ್ದರಿಂದ ತೆರವು ಕಾರ್ಯ ಕೈಗೊಳ್ಳಲಾಗಿದೆ ಎಂದು ದಕ್ಷಿಣ 24 ಪರಗಣ ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.&lt;/p&gt;&lt;p&gt;ಅಭಿಷೇಕ್&zwnj; ಡೈಮಂಡ್&zwnj; ಹಾರ್ಬರ್&zwnj; ಕ್ಷೇತ್ರ ಟಿಎಂಸಿ ಸಂಸದ. ಅಮತಲಾ ಕ್ಷೇತ್ರದ ಒಂದು ಭಾಗ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/4-dead-many-injured-in-blast-fire-at-illegal-ahmedabad-firecracker-unit-toll-could-rise/articleshow-vahqxsy"/>
        </item>
        <item>
            <title><![CDATA[9,911 ಹೊಸ ಎಂಬಿಬಿಎಸ್‌ ಸೀಟು ಘೋಷಣೆ]]></title>
            <link>https://www.kannadaprabha.in/india-news/9-911-new-seats-added-25-medical-colleges-approved/articleshow-wz1gz2k</link>
            <guid isPermaLink="true">https://www.kannadaprabha.in/india-news/9-911-new-seats-added-25-medical-colleges-approved/articleshow-wz1gz2k</guid>
            <pubDate>Thu, 16 Jul 2026 03:45:00 +0530</pubDate>
            <description><![CDATA[2026-27ನೇ ಶೈಕ್ಷಣಿಕ ವರ್ಷಕ್ಕೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್&zwnj;ಎಂಸಿ) 9911 ಹೊಸ ಎಂಬಿಬಿಎಸ್&zwnj; ಸೀಟುಗಳನ್ನು ಘೋಷಿಸಿದೆ ಹಾಗೂ ಕರ್ನಾಟಕದ 2 ಸೇರಿ 25 ಹೊಸ ವೈದ್ಯಕೀಯ ಕಾಲೇಜುಗಳಿಗೂ ಅನುಮೋದನೆ ನೀಡಿದೆ.]]></description>
            <media:content url="https://static-assets.asianetnews.com/kp/json/15072026/pictures/DOCTOR_27.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ&lt;/strong&gt;: 2026-27ನೇ ಶೈಕ್ಷಣಿಕ ವರ್ಷಕ್ಕೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್&zwnj;ಎಂಸಿ) 9911 ಹೊಸ ಎಂಬಿಬಿಎಸ್&zwnj; ಸೀಟುಗಳನ್ನು ಘೋಷಿಸಿದೆ ಹಾಗೂ ಕರ್ನಾಟಕದ 2 ಸೇರಿ 25 ಹೊಸ ವೈದ್ಯಕೀಯ ಕಾಲೇಜುಗಳಿಗೂ ಅನುಮೋದನೆ ನೀಡಿದೆ.&lt;/p&gt;&lt;p&gt;ಇದರಿಂದಾಗಿ ಸದ್ಯ ಇದ್ದ 1,27,028 ಸೀಟುಗಳ ಸಂಖ್ಯೆ 1,36,939 ಸೀಟಿಗೆ ಏರಿದೆ.&lt;/p&gt;&lt;h2&gt;&amp;nbsp; 25 ಹೊಸ ವೈದ್ಯಕೀಯ ಕಾಲೇಜುಗಳಿಗೆ ಅನುಮೋದನೆ&lt;/h2&gt;&lt;p&gt;ಅತ್ತ 25 ಹೊಸ ವೈದ್ಯಕೀಯ ಕಾಲೇಜುಗಳಿಗೆ ಅನುಮೋದನೆ ದೊರಕಿದೆ. ಇವುಗಳ ಪೈಕಿ 7 ಸರ್ಕಾರಿ ಕಾಲೇಜುಗಳಾದರೆ, 18 ಖಾಸಗಿಯವಾಗಿರಲಿವೆ. ಇದರಿಂದಾಗಿ ದೇಶದ ಹೊಸ ವೈದ್ಯ ಕಾಲೇಜುಗಳ ಸಂಖ್ಯೆ 823ಕ್ಕೇ ಏರಲಿದೆ.&lt;/p&gt;&lt;p&gt;ನೀಟ್&zwnj; ಯುಜಿ ಫಲಿತಾಂಶ ಪ್ರಕಟವಾಗುವ ಮುನ್ನ ಈ ಪಟ್ಟಿ ಬಿಡುಗಡೆಯಾಗಿದೆ.&lt;/p&gt;&lt;h3&gt;&lt;strong&gt;ಕರ್ನಾಟಕಕ್ಕೇ ಹೆಚ್ಚು ಸೀಟ್&zwnj;:&lt;/strong&gt;&lt;/h3&gt;&lt;p&gt;ದೇಶದ ಒಟ್ಟಾರೆ ಮೆಡಿಕಲ್&zwnj; ಸೀಟುಗಳಲ್ಲಿ ಕರ್ನಾಟಕ ಅತಿ ಹೆಚ್ಚು ಸೀಟು ಪಡೆದಿದೆ. ರಾಜ್ಯದ 75 ಕಾಲೇಜುಗಳಲ್ಲಿ 15,395 ಸೀಟುಗಳಿರಲಿವೆ.&lt;/p&gt;&lt;p&gt;&lt;strong&gt;ರಾಜ್ಯದ ಹೊಸ 2 ಕಾಲೇಜು:&lt;/strong&gt;&lt;/p&gt;&lt;p&gt;ತೆಗೆ 2 ಹೊಸ ವೈದ್ಯಕೀಯ ಕಾಲೇಜುಗಳಿಗೂ ಅನುಮೋದನೆ ದೊರೆತಿದೆ. ಒಂದು ಮೂಡುಬಿದಿರೆಯಲ್ಲಿರುವ ಆಳ್ವಾಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಾದರೆ (150 ಸೀಟು), ಇನ್ನೊಂದು ಕೆಜಿಎಫ್&zwnj;ನ ಚೆಟ್ಟಿನಾಡ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (100 ಸೀಟು).&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/9-911-new-seats-added-25-medical-colleges-approved/articleshow-wz1gz2k"/>
        </item>
    </channel>
</rss>
