<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Kannada Prabha</title>
        <link>https://www.kannadaprabha.in</link>
        <description><![CDATA[Kannada Prabha - No.1 News channel in Karnataka, which delivers Local and International news in Marathi language.]]></description>
        <image>
            <url>https://static-assets.asianetnews.com/images/ogimages/OG_Bangla.jpg</url>
            <width>143</width>
            <height>100</height>
            <link>https://www.kannadaprabha.in</link>
            <title>Kannada Prabha</title>
        </image>
        <lastBuildDate>Wed, 02 Sep 2026 04:15:01 +0530</lastBuildDate>
        <atom:link href="https://www.kannadaprabha.in/rss/india-news" rel="self" type="application/rss+xml"/>
        <item>
            <title><![CDATA[ಸ್ಥಳೀಯ ಭಾಷೆ ಬಂದವರಿಗಷ್ಟೇ ಹುದ್ದೆ: ಕನ್ನಡಿಗರ ಹೋರಾಟಕ್ಕೆ ಬಿಒಬಿ ಮಣೆ]]></title>
            <link>https://www.kannadaprabha.in/india-news/bank-of-baroda-to-recruit-2-482-local-bank-officers/articleshow-0b2smmz</link>
            <guid isPermaLink="true">https://www.kannadaprabha.in/india-news/bank-of-baroda-to-recruit-2-482-local-bank-officers/articleshow-0b2smmz</guid>
            <pubDate>Tue, 01 Sep 2026 04:35:31 +0530</pubDate>
            <description><![CDATA[ಬ್ಯಾಂಕ್&zwnj; ಸಿಬ್ಬಂದಿಗೆ ಸ್ಥಳಿಯ ಭಾಷೆ ಬರಬೇಕು ಎಂಬ ಕನ್ನಡಿಗರ ಹೋರಾಟಕ್ಕೆ ಜಯ ಸಂದಿದ್ದು, ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗ ಹುಡುಕುತ್ತಿರುವ ಕನ್ನಡಿಗರಿಗೂ ಮಹತ್ವದ ಸುದ್ದಿ ಲಭಿಸಿದೆ.]]></description>
            <media:content url="https://static-assets.asianetnews.com/kp/json/31082026/pictures/BOB_185.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ:&lt;/strong&gt; ಬ್ಯಾಂಕ್&zwnj; ಸಿಬ್ಬಂದಿಗೆ ಸ್ಥಳಿಯ ಭಾಷೆ ಬರಬೇಕು ಎಂಬ ಕನ್ನಡಿಗರ ಹೋರಾಟಕ್ಕೆ ಜಯ ಸಂದಿದ್ದು, ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗ ಹುಡುಕುತ್ತಿರುವ ಕನ್ನಡಿಗರಿಗೂ ಮಹತ್ವದ ಸುದ್ದಿ ಲಭಿಸಿದೆ. ಕರ್ನಾಟಕ ಸೇರಿದಂತೆ ದೇಶದ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಳೀಯ ಭಾಷೆಗಳನ್ನು ಮಾತನಾಡಬಲ್ಲ 2,482 ಅಧಿಕಾರಿಗಳನ್ನು ನೇಮಿಸಿಕೊಳ್ಳಲು ಬ್ಯಾಂಕ್ ಆಫ್ ಬರೋಡಾ (ಬಿಒಬಿ) ನಿರ್ಧರಿಸಿದೆ.&lt;/p&gt;&lt;h2&gt;ಸ್ಥಳೀಯ ಭಾಷೆಗಳನ್ನು ಮಾತನಾಡಲು ಸಾಧ್ಯವಾಗುತ್ತಿಲ್ಲ&lt;/h2&gt;&lt;p&gt;ಬ್ಯಾಂಕ್ ಸಿಬ್ಬಂದಿ ಗ್ರಾಹಕರಿಗೆ ಸ್ಥಳೀಯ ಭಾಷೆಗಳನ್ನು ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂಬ ಕಳವಳ ಹಾಗೂ ಆಕ್ರೋಶ ಹೆಚ್ಚುತ್ತಿರುವ ಸಮಯದಲ್ಲಿ ಈ ನಿರ್ಧಾರ ಬಂದಿದೆ.&lt;/p&gt;&lt;p&gt;ಹುದ್ದೆಗೆ ಅರ್ಜಿ ಹಾಕಲು ಸೆ.7 ಕೊನೆಯ ದಿನವಾಗಿದೆ. ನೇಮಕವಾದವರನ್ನು ಜೂನಿಯರ್ ಮ್ಯಾನೇಜ್&zwnj;ಮೆಂಟ್ ದರ್ಜೆಯಲ್ಲಿ &lsquo;ಸ್ಥಳೀಯ ಬ್ಯಾಂಕ್ ಅಧಿಕಾರಿಗಳು&rsquo; ಎಂದು ನೇಮಿಸಲಾಗುವುದು. ಈ ಉದ್ಯೋಗಗಳಿಗೆ ಸೇರುವ ಅಭ್ಯರ್ಥಿಗಳು ಮೊದಲ 12 ವರ್ಷಗಳ ಕಾಲ ಅವರು ಕೆಲಸಕ್ಕೆ ಆಯ್ಕೆಯಾದ ರಾಜ್ಯದಲ್ಲಿ ಕೆಲಸ ಮಾಡಬೇಕಾಗುತ್ತದೆ ಅಥವಾ ಬ್ಯಾಂಕಿನಲ್ಲಿ ಒಂದು ನಿರ್ದಿಷ್ಟ ಮಟ್ಟಕ್ಕೆ ಬಡ್ತಿ ಪಡೆಯುವವರೆಗೆ ಅದೇ ರಾಜ್ಯದಲ್ಲಿ ಉಳಿಯಲು ಅವಕಾಶವಿದೆ.&lt;/p&gt;&lt;h3&gt;ಅರ್ಹತೆಗಳು ಏನು?:&lt;/h3&gt;&lt;p&gt;ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 7, 2026 ರವರೆಗೆ ಬ್ಯಾಂಕಿನ ವೆಬ್&zwnj; ಮೂಲಕ ಆನ್&zwnj;ಲೈನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಸೆಪ್ಟೆಂಬರ್ 1, 2026ಕ್ಕೆ 21ರಿಂದ 30 ವರ್ಷ ವಯಸ್ಸಿನವರಾಗಿರಬೇಕು ಮತ್ತು ಮಾನ್ಯತೆ ಪಡೆದ ವಿವಿಯಿಂದ ಯಾವುದೇ ವಿಭಾಗದಲ್ಲಿ ಪದವೀಧರರಾಗಿರಬೇಕು. ಶೆಡ್ಯೂಲ್ಡ್&zwnj; ವಾಣಿಜ್ಯ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಕನಿಷ್ಠ 1 ವರ್ಷ ಅನುಭವವೂ ಅಪೇಕ್ಷಣೀಯವಾಗಿದೆ.&lt;/p&gt;&lt;p&gt;ಅಭ್ಯ ರ್ಥಿಗಳು ತಾವು ಅರ್ಜಿ ಸಲ್ಲಿಸುತ್ತಿರುವ ರಾಜ್ಯದ ಸ್ಥಳೀಯ ಭಾಷೆ ಓದುವುದು, ಬರೆಯುವುದು ಮತ್ತು ಮಾತನಾಡುವುದರಲ್ಲಿ ನಿರರ್ಗಳವಾಗಿರಬೇಕು ಎಂದು ಬ್ಯಾಂಕ್&zwnj; ಹೇಳಿದೆ.&lt;/p&gt;&lt;p&gt;- ರಾಜ್ಯದ ಬ್ಯಾಂಕಲ್ಲಿ ಪರಭಾಷಿಕ ಸಿಬ್ಬಂದಿ ನೇಮಕದಿಂದ ಸ್ಥಳೀಯರಿಗೆ ವ್ಯವಹಾರಕ್ಕೆ ಭಾರೀ ಅಡ್ಡಿ&lt;/p&gt;&lt;p&gt;- ಈ ಬಗ್ಗೆ ಹಲವು ಬಾರಿ ಕನ್ನಡಪರ ಸಂಘಟನೆಗಳಿಂದ ಆಕ್ರೋಶ. ಸರ್ಕಾರಕ್ಕೂ ಮನವಿ ಸಲ್ಲಿಕೆ&lt;/p&gt;&lt;p&gt;- ಈ ಹಿನ್ನೆಲೆಯಲ್ಲಿ ಸ್ಥಳೀಯ ಭಾಷೆ ಬಲ್ಲವರಿಗೇ ಆದ್ಯತೆ ಬಗ್ಗೆ ಕೇಂದ್ರ ಸಚಿವೆ ನಿರ್ಮಲಾ ಭರವಸೆ&lt;/p&gt;&lt;p&gt;- ಅದರ ಬೆನ್ನಲ್ಲೇ ಇದೀಗ ಬ್ಯಾಂಕ್&zwnj; ಆಫ್&zwnj; ಬರೋಡಾದ ನೇಮಕಾತಿ ವೇಳೆ ಹೊಸ ನಿಯಮ ಜಾರಿಗೆ&lt;/p&gt;&lt;p&gt;- ಸ್ಥಳೀಯ ಭಾಷೆ ಬಲ್ಲವರಿಗೆ ನೇಮಕದ ವೇಳೆ ಆದ್ಯತೆ. ನೇಮಕ ಆದ ಕಡೆ 12 ವರ್ಷ ಸೇವೆ ಕಡ್ಡಾಯ&lt;/p&gt;&lt;p&gt;- ಇದರಿಂದ ಪರಭಾಷಿಕ ಸಿಬ್ಬಂದಿ ಬಂದರು ಸ್ಥಳೀಯ ಭಾಷೆ ಕಲಿತು ವ್ಯವಹಾರ ಅನಿವಾರ್ಯ ಆಗಲಿದೆ&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/bank-of-baroda-to-recruit-2-482-local-bank-officers/articleshow-0b2smmz"/>
        </item>
        <item>
            <title><![CDATA[ತರಬೇತಿ ವಿಮಾನ ಪತನ : ಕನ್ನಡಿಗ ಸೇರಿ ಇಬ್ಬರು ಪೈಲಟ್‌ಗಳು ಸಾವು]]></title>
            <link>https://www.kannadaprabha.in/india-news/pilot-instructor-killed-in-training-aircraft-crash-in-kanpur/articleshow-1dae5bg</link>
            <guid isPermaLink="true">https://www.kannadaprabha.in/india-news/pilot-instructor-killed-in-training-aircraft-crash-in-kanpur/articleshow-1dae5bg</guid>
            <pubDate>Fri, 28 Aug 2026 04:15:00 +0530</pubDate>
            <description><![CDATA[ತರಬೇತಿ ವಿಮಾನವೊಂದು ಹಾರಾಟ ಆರಂಭಿಸಿದ 20 ನಿಮಿಷದಲ್ಲಿ ಕ್ರ್ಯಾಶ್&zwnj; ಆಗಿ ನೆಲಕ್ಕಪ್ಪಳಿಸಿ ಇಬ್ಬರು ಪೈಟಲ್&zwnj;ಗಳ ಸಾವಿಗೆ ಕಾರಣವಾದ ಘಟನೆ ಗಂಗಾ ನದಿಯ ತಟದಲ್ಲಿರುವ ಕತ್ರಿ ಎಂಬಲ್ಲಿ ನಡೆದಿದೆ. ತರಬೇತಿ ಪಡೆಯುತ್ತಿದ್ದ ಕನ್ನಡಿಗ ಅಭಿಷೇಕ್&zwnj; ಪೂಜಾರಿ ಹಾಗೂ ತರಬೇತುದಾರ ಗುಜರಾತ್&zwnj;ನ ಸಚಿನ್&zwnj; ಭಾಟಿಯಾ ಮೃತರು.]]></description>
            <media:content url="https://static-assets.asianetnews.com/kp/json/27082026/pictures/CRASH_2_397.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಕಾನ್ಪುರ : &lt;/strong&gt;ತರಬೇತಿ ವಿಮಾನವೊಂದು ಹಾರಾಟ ಆರಂಭಿಸಿದ 20 ನಿಮಿಷದಲ್ಲಿ ಕ್ರ್ಯಾಶ್&zwnj; ಆಗಿ ನೆಲಕ್ಕಪ್ಪಳಿಸಿ ಇಬ್ಬರು ಪೈಟಲ್&zwnj;ಗಳ ಸಾವಿಗೆ ಕಾರಣವಾದ ಘಟನೆ ಗಂಗಾ ನದಿಯ ತಟದಲ್ಲಿರುವ ಕತ್ರಿ ಎಂಬಲ್ಲಿ ನಡೆದಿದೆ. ತರಬೇತಿ ಪಡೆಯುತ್ತಿದ್ದ ಕನ್ನಡಿಗ ಅಭಿಷೇಕ್&zwnj; ಪೂಜಾರಿ ಹಾಗೂ ತರಬೇತುದಾರ ಗುಜರಾತ್&zwnj;ನ ಸಚಿನ್&zwnj; ಭಾಟಿಯಾ ಮೃತರು.&lt;/p&gt;&lt;h2&gt;ಟೆಕ್ನಾಮ್ ಪಿ2006ಟಿ ವಿಮಾನ&lt;/h2&gt;&lt;p&gt;2023ರಲ್ಲಿ ಗಾರ್ಗ್&zwnj; ಏವಿಯೇಷನ್&zwnj;ಗೆ ಸೇರ್ಪಡೆಗೊಂಡಿದ್ದ ಟೆಕ್ನಾಮ್ ಪಿ2006ಟಿ ವಿಮಾನವು ಬೆಳಗ್ಗೆ 11.30ರ ಸುಮಾರಿಗೆ ಟೇಕ್&zwnj;ಆಫ್&zwnj; ಆಗಿತ್ತು. ಅದಾದ 20 ನಿಮಿಷಗಳಲ್ಲೇ ಕಾನ್ಪುರ ಸಿವಿಲ್ ವಿಮಾನ ನಿಲ್ದಾಣದಿಂದ 5 ನಾಟಿಕಲ್&zwnj; ಮೈಲು ದೂರದಲ್ಲಿ ದುರ್ಘಟನೆಗೆ ತುತ್ತಾಗಿದೆ.&lt;/p&gt;&lt;p&gt;ಪರಿಣಾಮ ಇಡೀ ವಿಮಾನ ಛಿದ್ರವಾಗಿ, ಅದರ ಭಾಗಗಳು ಸುಟ್ಟು ಬಿದ್ದಿವೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ, ಪೈಟಲ್&zwnj;ಗಳ ಮೃತದೇಹಗಳನ್ನು ಅಲ್ಲಿಂದ ತೆಗೆದ ಬಳಿಕ ಸಾಕ್ಷ್ಯಗಳನ್ನು ಕಾಪಾಡುವ ಉದ್ದೇಶದಿಂದ ಆ ಸ್ಥಳವನ್ನು ಸೀಲ್&zwnj; ಮಾಡಿದರು. ಪ್ರಾಥಮಿಕ ಮಾಹಿತಿಯ ಪ್ರಕಾರ ಅದು 2 ಎಂಜಿನ್&zwnj;ಗಳನ್ನು ಹೊಂದಿದ್ದ 4 ಸೀಟುಗಳ ವಿಮಾನವಾಗಿತ್ತು. ಅಪಘಾತದ ವೇಳೆ ಪೈಲಟ್&zwnj;ಗಳು ಪಾರಾಗಲು ಯತ್ನಿಸಿದ್ದರೇ ಎಂಬುದು ಸ್ಪಷ್ಟವಿಲ್ಲ. ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ) 3 ಸಿಬ್ಬಂದಿಯ ತಂಡವು ಈ ವಿಮಾನದ ಹಾರಾಟದ ಅರ್ಹತೆ, ನಿರ್ವಹಣಾ ದಾಖಲೆಗಳು ಮತ್ತು ಇತರ ತಾಂತ್ರಿಕ ಅಂಶಗಳನ್ನು ಪರಿಶೀಲಿಸಲಿದೆ. ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಕ್ರ್ಯಾಶ್&zwnj;ಗೆ ಕಾರಣವೇನೆಂಬುದನ್ನು ಪತ್ತೆ ಮಾಡಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;h3&gt;ಸಂತಾಪ:&lt;/h3&gt;&lt;p&gt;ಘಟನೆಗೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್&zwnj; ಅವರು ಸಂತಾಪ ಸೂಚಿಸಿದ್ದಾರೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/pilot-instructor-killed-in-training-aircraft-crash-in-kanpur/articleshow-1dae5bg"/>
        </item>
        <item>
            <title><![CDATA[ಭಾಗವತ್‌ ವಿರುದ್ಧ ನ್ಯೂಯಾರ್ಕಲ್ಲಿ ಖಲಿಸ್ತಾನಿ ಉಗ್ರರಿಂದ ಪ್ರತಿಭಟನೆ]]></title>
            <link>https://www.kannadaprabha.in/india-news/supporters-of-the-sikh-separatist-khalistan-movement-took-part-in-a-protest-against-an-event-featuring-mohan-bhagwat/articleshow-1gv4nhb</link>
            <guid isPermaLink="true">https://www.kannadaprabha.in/india-news/supporters-of-the-sikh-separatist-khalistan-movement-took-part-in-a-protest-against-an-event-featuring-mohan-bhagwat/articleshow-1gv4nhb</guid>
            <pubDate>Mon, 31 Aug 2026 03:15:00 +0530</pubDate>
            <description><![CDATA[ನ್ಯೂಯಾರ್ಕ್&zwnj;ನ ಐಕಾನಿಕ್ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್&zwnj;ನಲ್ಲಿ ಆರ್&zwnj;ಎಸ್&zwnj;ಎಸ್&zwnj; ಮೋಹನ್&zwnj; ಭಾಗವತ್&zwnj; ಅವರು ಭಾಗಹಿಸಿದ್ದ ಕಾರ್ಯಕ್ರಮದಲ್ಲಿ ಭಾಗವತ್&zwnj; ವಿರುದ್ಧ ಖಲಿಸ್ತಾನಿ ಉಗ್ರರು ಪ್ರತಿಭಟನೆ ನಡೆಸಿದ್ದಾರೆ]]></description>
            <media:content url="https://static-assets.asianetnews.com/kp/json/30082026/pictures/KHALISTAN_PROTEST_1_917.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನ್ಯೂಯಾರ್ಕ್&zwnj;: &lt;/strong&gt;ನ್ಯೂಯಾರ್ಕ್&zwnj;ನ ಐಕಾನಿಕ್ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್&zwnj;ನಲ್ಲಿ ಆರ್&zwnj;ಎಸ್&zwnj;ಎಸ್&zwnj; ಮೋಹನ್&zwnj; ಭಾಗವತ್&zwnj; ಅವರು ಭಾಗಹಿಸಿದ್ದ ಕಾರ್ಯಕ್ರಮದಲ್ಲಿ ಭಾಗವತ್&zwnj; ವಿರುದ್ಧ ಖಲಿಸ್ತಾನಿ ಉಗ್ರರು ಪ್ರತಿಭಟನೆ ನಡೆಸಿದ್ದಾರೆ, &lsquo;ಒಂದು ಜಗತ್ತು: ಒಂದು ಮಾನವೀಯತೆ&rsquo; ಕಾರ್ಯಕ್ರಮದಲ್ಲಿ ಭಾಗಿಯಾಗಿ ಶನಿವಾರ ಭಾಗವತ್&zwnj; ಮಾತನಾಡಿದ್ದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಹೊರಗಡೆ ಖಲಿಸ್ತಾನಿ ಪರ ಹೋರಾಟಗಾರರು &lsquo;ಆರ್&zwnj;ಎಸ್&zwnj;ಎಸ್&zwnj; ಹಿಂದೂ ಪ್ರಾಬಲ್ಯ ಮತ್ತು ಅಲ್ಪಸಂಖ್ಯಾತರನ್ನು ಹೊರಗಿಡುವಲ್ಲಿ ಉತ್ತೇಜಿಸುತ್ತಿದೆ&rsquo; ಎಂದು ಆರೋಪಿಸಿ ಪ್ರತಿಭಟಿಸಿದರು. ಈ ವೇಳೆ ಖಲಿಸ್ತಾನಿ ಧ್ವಜಗಳನ್ನು ಪ್ರದರ್ಶಿಸಿ, ಅವರ ಪರ ಘೋಷಣೆಗಳನ್ನು ಕೂಗಿದರು. ಭಾರತದ ರಾಷ್ಟ್ರಧ್ವಜ, ಭಾಗವತ್&zwnj; ಫೋಟೋಗಳನ್ನು ನೆಲಕ್ಕೆ ಹಾಕಿ ಕಾಲಿನಿಂದ ತುಳಿದು ದೇಶವಿರೋಧಿ ಕೃತ್ಯ ಎಸಗಿದರು.&lt;/p&gt;&lt;h2&gt;&lt;strong&gt;ನಿಜವಾದ ಶತ್ರುಗಳನ್ನು ಗುರುತಿಸಿ: ಮುಸ್ಲಿಂ ದೇಶಗಳಿಗೆ ಖಮೇನಿ ಪತ್ರ&lt;/strong&gt;&lt;/h2&gt;&lt;p&gt;ಟೆಹ್ರಾನ್&zwnj;: ಮಧ್ಯಪ್ರಾಚ್ಯ ಯುದ್ಧ ಆರಂಭವಾಗಿ 6 ತಿಂಗಳು ಕಳೆದಿರುವ ಸಂದರ್ಭದಲ್ಲಿ ಇರಾನ್&zwnj;ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಮುಸ್ಲಿಂ ದೇಶಗಳಿಗೆ ಲಿಖಿತ ಸಂದೇಶ ನೀಡಿದ್ದು, &lsquo; ಅಮೆರಿಕ, ಇಸ್ರೇಲ್&zwnj; ವಿರುದ್ಧ ಎಲ್ಲಾ ಇಸ್ಲಾಮಿಕ್&zwnj; ದೇಶಗಳು ಒಗ್ಗೂಡಬೇಕು. ನಿಮ್ಮ ನಿಜವಾದ ಶತ್ರುಗಳು ಯಾರೆಂದು ಗುರುತಿಸಿ&rsquo; ಎಂದು ಕರೆ ನೀಡಿದ್ದಾರೆ.ಆಯತೊಲ್ಲಾ ಖಮೇನಿ ಹತ್ಯೆ ನಂತರ ಸರ್ವೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಎಲ್ಲಿಯೂ ಬಹಿರಂಗವಾಗಿ ಮೊಜ್ತಬಾ ಕಾಣಿಸಿಕೊಂಡಿಲ್ಲ.&lt;/p&gt;&lt;h3&gt;ಅವರ ಯೋಜನೆಯನ್ನು ಅರ್ಥ ಮಾಡಿಕೊಳ್ಳಿ&lt;/h3&gt;&lt;p&gt;ಹೀಗಿರುವಾಗಲೇ ಪತ್ರ ಬರೆದಿದ್ದಾರೆ. ಅದರಲ್ಲಿ ಅವರು, &lsquo;ಯಾರಾದರೂ, ಯಾವುದೇ ಸ್ಥಾನದಲ್ಲಿದ್ದರೂ, ಮುಸ್ಲಿಮರ ವಿಭಜನೆ, ಸಂಘರ್ಷವನ್ನು ತಿಳಿದೋ ಅಥವಾ ತಿಳಿದೆಯೋ ಮಾಡಿದರೆ ಅವರು ಇಸ್ಲಾಂ ಶತ್ರುಗಳ ಉದ್ದೇಶ ಈಡೇರಿಸಿದಂತಾಗುತ್ತದೆ. ನಿಮ್ಮ ನಿಜವಾದ ಶತ್ರುಗಳನ್ನು ಗುರುತಿಸಿ, ಅವರ ಯೋಜನೆಯನ್ನು ಅರ್ಥ ಮಾಡಿಕೊಳ್ಳಿ ಮತ್ತು ಅವರನ್ನು ಎದುರಿಸಿ. ಯಾವುದೇ ರೀತಿಯಲ್ಲಿ ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಉಂಟಾಗಲು ಅವಕಾಶ ನೀಡಬಾರದು &rsquo; ಎನ್ನುವ ಸಂದೇಶ ನೀಡಿದರು.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/supporters-of-the-sikh-separatist-khalistan-movement-took-part-in-a-protest-against-an-event-featuring-mohan-bhagwat/articleshow-1gv4nhb"/>
        </item>
        <item>
            <title><![CDATA[ಭಾರತದಲ್ಲಿ ಮುಸ್ಲಿಮರೇ  ಇರಬಾರದು ಎನ್ನುವ ವ್ಯಕ್ತಿ  ಹಿಂದೂ ಅಲ್ಲ: ಭಾಗ್ವವತ್‌]]></title>
            <link>https://www.kannadaprabha.in/india-news/a-person-who-says-muslims-should-not-exist-in-india-is-not-a-hindu-bhagwat/articleshow-42tohrr</link>
            <guid isPermaLink="true">https://www.kannadaprabha.in/india-news/a-person-who-says-muslims-should-not-exist-in-india-is-not-a-hindu-bhagwat/articleshow-42tohrr</guid>
            <pubDate>Sun, 30 Aug 2026 08:12:38 +0530</pubDate>
            <description><![CDATA[&lt;p&gt;&lsquo;ಧರ್ಮಗಳು ಬೇರೆ ಬೇರೆಯಾಗಿರಬಹುದು, ಮಾನವೀಯತೆ ಒಂದೇ. ಭಾರತದಲ್ಲಿ ಮುಸ್ಲಿಂ ಇರಬಾರದು ಎಂದು ಯಾವುದೇ ಹಿಂದೂ ಭಾವಿಸಿದರೆ, ಅವನು ಹಿಂದೂವಾಗಿ ಉಳಿಯುವುದಿಲ್ಲ&rsquo; ಎಂದು ಆರೆಸ್ಸೆಸ್&zwnj; ಮುಖ್ಯಸ್ಥ ಮೋಹನ ಭಾಗವತ್&zwnj; ಹೇಳಿದರು.&lt;/p&gt;]]></description>
            <media:content url="https://static-gi.asianetnews.com/images/01m184s2qmsjzqpxp999ex3jtv/mohan-bhagwat-rss-new-york-madison-square-garden-unity-diversity-india-america-1788053588724.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ನ್ಯೂಯಾರ್ಕ್&zwnj;: &lsquo;&lt;/strong&gt;ಧರ್ಮಗಳು ಬೇರೆ ಬೇರೆಯಾಗಿರಬಹುದು, ಮಾನವೀಯತೆ ಒಂದೇ. ಭಾರತದಲ್ಲಿ ಮುಸ್ಲಿಂ ಇರಬಾರದು ಎಂದು ಯಾವುದೇ ಹಿಂದೂ ಭಾವಿಸಿದರೆ, ಅವನು ಹಿಂದೂವಾಗಿ ಉಳಿಯುವುದಿಲ್ಲ&rsquo; ಎಂದು ಆರೆಸ್ಸೆಸ್&zwnj; ಮುಖ್ಯಸ್ಥ ಮೋಹನ ಭಾಗವತ್&zwnj; ಹೇಳಿದರು.&lt;/p&gt;&lt;p&gt;ನ್ಯೂಯಾರ್ಕ್&zwnj;ನಲ್ಲಿ ಶನಿವಾರ ನಡೆದ &lsquo;ಒಂದು ಜಗತ್ತು: ಒಂದು ಮಾನವೀಯತೆ&rsquo; ಎಂಬ ಧಾರ್ಮಿಕ ನಾಯಕರ ಸಮ್ಮೇಳನದಲ್ಲಿ ಹಲವಾರು ಧಾರ್ಮಿಕ ನಾಯಕರ ಜೊತೆಗೆ ಮಾತನಾಡಿದ ಭಾಗವತ್, ವಿವಿಧ ಧರ್ಮಗಳ ನಡುವೆ ಏಕತೆ ಮತ್ತು ಸಾಮರಸ್ಯಕ್ಕೆ ಕರೆ ನೀಡಿದರು.&lt;/p&gt;&lt;p&gt;&lsquo;ಇಂದಿನ ಧರ್ಮಗಳನ್ನು ಹೆಚ್ಚಾಗಿ ಆಚರಣೆಗಳಿಂದ ವ್ಯಾಖ್ಯಾನಿಸಲಾಗಿದೆ. ಧಾರ್ಮಿಕ ಶಿಸ್ತನ್ನು ಅನುಸರಿಸಲು ಮತ್ತು ದೈವತ್ವದ ಮಾರ್ಗವನ್ನು ಅನುಸರಿಸಲು, ಈ ಆಚರಣೆಗಳ ಶಿಸ್ತು ಸಹ ಅಗತ್ಯವಾಗಿದೆ. ಆದರೆ ಧರ್ಮದ ಉದ್ದೇಶವೇನು? ಅದು ನಮ್ಮನ್ನು ಸತ್ಯದ ಕಡೆಗೆ ಕರೆದೊಯ್ಯುತ್ತದೆ. ಧರ್ಮಗಳು ಬೇರೆ ಆಗಿರಬಹುದು. ಆದರೆ ಮಾನವೀಯತೆ ಒಂದೇ&rsquo; ಎಂದರು.&lt;/p&gt;&lt;h2&gt;ಮುಸ್ಲಿಮರು ಇರಬೇಕು:&lt;/h2&gt;&lt;p&gt;&lsquo;ನೀವು ನಿಮ್ಮನ್ನು ಹಿಂದೂ ಎಂದು ಕರೆದುಕೊಳ್ಳಲು ಬಯಸಿದರೆ, ಎಲ್ಲಾ ಮಾರ್ಗಗಳು ಒಂದೇ ಕಡೆಗೆ ಕರೆದೊಯ್ಯುತ್ತವೆ ಎಂದು ನೀವು ನಂಬಬೇಕು. ಮತ್ತು ಪ್ರತಿಯೊಬ್ಬ ಮನುಷ್ಯನಿಗೂ ಒಂದು ಘನತೆ ಇರುತ್ತದೆ. ಮನುಷ್ಯರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಾನು ಒಂದು ಕಡೆ ಉಪನ್ಯಾಸ ನೀಡಿದಾಗ ಮುಸ್ಲಿಂ ಸೋದರರೂ ಇದ್ದರು. ಮತ್ತು ಅವರು ನನಗೆ, &lsquo;ನೀವು ಹಿಂದೂ ಸಂಘಟನೆ, ನೀವು ಹಿಂದೂ ರಾಷ್ಟ್ರ ಎನ್ನುತ್ತಿದ್ದೀರಿ. ಮುಸ್ಲಿಮರ ಕತೆ ಏನು? ನೀವು ನಮ್ಮನ್ನು ಓಡಿಸುತ್ತೀರಾ?&rsquo; ಎಂದು ಕೇಳಿದರು. ಅದಕ್ಕೆ ನಾನು, ಇಲ್ಲ ಎಂದೆ. ಅದು ಹಿಂದುತ್ವವಲ್ಲ. ಭಾರತದಲ್ಲಿ ಮುಸ್ಲಿಂ ಇರಬಾರದು ಎಂದು ಯಾವುದೇ ಹಿಂದೂ ಭಾವಿಸಿದರೆ, ಅವನು ಹಿಂದೂವಾಗಿ ಉಳಿಯುವುದಿಲ್ಲ&rsquo; ಎಂದು ಹೇಳಿದರು.&lt;/p&gt;&lt;h3&gt;ಆರೆಸ್ಸೆಸ್&zwnj; ತಾರತಮ್ಯ ಮಾಡಲ್ಲ:&lt;/h3&gt;&lt;p&gt;1996 ರ ಹರ್ಯಾಣ ವಿಮಾನ ಅಪಘಾತದ ಸಮಯದಲ್ಲಿ ಆರ್&zwnj;ಎಸ್&zwnj;ಎಸ್&zwnj;ನ ಕೆಲಸದ ಬಗ್ಗೆ ಮಾತನಾಡಿದ ಭಾಗವತ್, &lsquo;ಆಗ ಹೆಚ್ಚಿನ ಪ್ರಯಾಣಿಕರು ಮುಸ್ಲಿಮರಾಗಿದ್ದರು. ನಮ್ಮ ಸ್ವಯಂಸೇವಕರು ಮೊದಲು ಅಲ್ಲಿಗೆ ತಲುಪಿ ಗಾಯಾಳುಗಳಿಗೆ ಚಿಕಿತ್ಸೆ ನೀಡಿದರು. ಅಂತಿಮ ವಿಧಿವಿಧಾನ ಆ ಸಮಯದಲ್ಲಿ ಸಹಾಯ ಮಾಡಿದರು. ನಾವು ಇವರು ಮುಸ್ಲಿಮರು ಎಂದು ಎಂದಿಗೂ ಭಾವಿಸಿರಲಿಲ್ಲ&rsquo; ಎಂದರು.&lt;/p&gt;&lt;p&gt;ಯುದ್ಧ ನಿಲ್ಲಿಸಲು ಬಯಸುತ್ತೇವೆ:&lt;/p&gt;&lt;p&gt;ನಾವು ಏನಾದರೂ ಆಗುವ ಮುನ್ನ ಅದನ್ನು ತಡೆಯಲು ರಾಜಕೀಯ ಪ್ರಭಾವ ಬೀರಲು ಯತ್ನಿಸುತ್ತೇವೆ. ಯುದ್ಧಗಳನ್ನು ನಿಲ್ಲಿಸಲು ರಾಜಕೀಯದ ಮೇಲೆ ಪ್ರಭಾವ ಬೀರುತ್ತೇವೆ ಎಂದು ಸ್ಪಷ್ಟಪಡಿಸಿದರು.&lt;/p&gt;&lt;p&gt;ಮಾನವೀಯತೆ ಗುಣ:&lt;/p&gt;&lt;p&gt;ಪ್ರಾಚೀನ ಸಂಪ್ರದಾಯಗಳ ಬಗ್ಗೆ ಸಮಾಜಕ್ಕೆ ಶಿಕ್ಷಣ ನೀಡಬೇಕು. ಭಾರತದ ಸಂಪ್ರದಾಯಗಳು ವಿದೇಶಿ ಆಕ್ರಮಣಗಳಿಂದ ಬದುಕುಳಿದಿವೆ, ಇದು ಜನರಿಗೆ ಒಂದು ಪ್ರಪಂಚ, ಒಂದು ಮಾನವೀಯತೆಯ ಬಗ್ಗೆ ಕಲಿಸಿತು ಎಂದು ಅಭಿಪ್ರಾಯಪಟ್ಟರು.&lt;/p&gt;&lt;p&gt;ಭಾಗವತ್&zwnj; ಜತೆ ಚುಂಚಶ್ರೀ&lt;/p&gt;&lt;p&gt;ನ್ಯೂಯಾರ್ಕ್&zwnj;: ನ್ಯೂಯಾರ್ಕ್&zwnj;ನ ಐಕಾನಿಕ್ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್&zwnj;ನಲ್ಲಿ ನಡೆದ &lsquo;ಒಂದು ಜಗತ್ತು: ಒಂದು ಮಾನವೀಯತೆ&rsquo; ಸಮ್ಮೇಳನದಲ್ಲಿ ಆರೆಸ್ಸೆಸ್&zwnj; ಮುಖ್ಯಸ್ಥ ಮೋಹನ ಭಾಗವತ್&zwnj; ಜತೆ ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳೂ ಪಾಲ್ಗೊಂಡಿದ್ದರು.&lt;/p&gt;]]></content:encoded>
            <category>India</category>
            <dc:creator>Sujatha NR</dc:creator>
            <atom:link href="https://www.kannadaprabha.in/india-news/a-person-who-says-muslims-should-not-exist-in-india-is-not-a-hindu-bhagwat/articleshow-42tohrr"/>
        </item>
        <item>
            <title><![CDATA[ಇಡ್ಲಿ ಮಾರುವ ಬೆಂಗಳೂರಿನ ನಿಂಗಮ್ಮಗೆ ಮೋದಿ ಶಹಬ್ಬಾಸ್!]]></title>
            <link>https://www.kannadaprabha.in/india-news/bengaluru-street-vendor-ningamma-finds-mention-in-pms-mann-ki-baat/articleshow-8vhzhg3</link>
            <guid isPermaLink="true">https://www.kannadaprabha.in/india-news/bengaluru-street-vendor-ningamma-finds-mention-in-pms-mann-ki-baat/articleshow-8vhzhg3</guid>
            <pubDate>Mon, 31 Aug 2026 05:13:39 +0530</pubDate>
            <description><![CDATA[ಖಾತರಿ ರಹಿತ ಸಾಲ ಬಳಸಿಕೊಂಡು ಉದ್ಯಮ ಕಟ್ಟಿಕೊಂಡ ಹಲವು ಸಣ್ಣ ವ್ಯಾಪಾರಿಗಳ ಕುರಿತು ಬೆಳಕು ಚೆಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಇಂಥದ್ದೇ ಸಾಧನೆ ಮಾಡಿದ ಬೆಂಗಳೂರಿನ ನಿಂಗಮ್ಮ ಮತ್ತು ಅವರ ಪತಿಯ ಕಥೆಯನ್ನು ದೇಶದ ಜನರ ಮುಂದೆ ತೆರೆದಿಟ್ಟಿದ್ದಾರೆ.]]></description>
            <media:content url="https://static-assets.asianetnews.com/kp/json/30082026/pictures/NINGAMMA_44.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ನವದೆಹಲಿ&lt;/strong&gt;: ಖಾತರಿ ರಹಿತ ಸಾಲ ಬಳಸಿಕೊಂಡು ಉದ್ಯಮ ಕಟ್ಟಿಕೊಂಡ ಹಲವು ಸಣ್ಣ ವ್ಯಾಪಾರಿಗಳ ಕುರಿತು ಬೆಳಕು ಚೆಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಇಂಥದ್ದೇ ಸಾಧನೆ ಮಾಡಿದ ಬೆಂಗಳೂರಿನ ನಿಂಗಮ್ಮ ಮತ್ತು ಅವರ ಪತಿಯ ಕಥೆಯನ್ನು ದೇಶದ ಜನರ ಮುಂದೆ ತೆರೆದಿಟ್ಟಿದ್ದಾರೆ.&lt;/p&gt;&lt;p&gt;ಭಾನುವಾರ ಪ್ರಸಾರವಾದ ತಮ್ಮ ಮಾಸಿಕ &lsquo;ಮನ್&zwnj; ಕಿ ಬಾತ್&zwnj;&rsquo;ನಲ್ಲಿ ಪ್ರಧಾನಿ ಮೋದಿ ಅವರು ಬೆಂಗಳೂರಿನಲ್ಲಿ ಇಡ್ಲಿ ಮಾರುವ ಟಿ.ಎಸ್&zwnj;. ನಿಂಗಮ್ಮ ಹೆಸರು ಉಲ್ಲೇಖಿಸಿದ್ದಾರೆ. &lsquo;ಬೆಂಗಳೂರಿನ ಟಿ.ಎಸ್. ನಿಂಗಮ್ಮ ಮತ್ತು ಅವರ ಪತಿ ಇಡ್ಲಿ, ದೋಸೆ ಮತ್ತು ಸಾಂಬಾರ್ ಮಾರಾಟ ಮಾಡುವ ಸಣ್ಣ ಉದ್ಯಮವೊಂದನ್ನು ಪ್ರಾರಂಭಿಸಿದರು. ಈ ವ್ಯವಹಾರವು ಉತ್ತಮವಾಗಿ ನಡೆಯತೊಡಗಿತಾದರೂ, ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬಂಡವಾಳದ ಅಗತ್ಯವಿತ್ತು. ಈ ವೇಳೆ ಅವರಿಗೆ ನಗರ ಪ್ರದೇಶದ ಬೀದಿಬದಿ ವ್ಯಾಪಾರಿಗಳಿಗೆ ಮೇಲಾಧಾರ ರಹಿತ ಸಾಲ ನೀಡುವ &lsquo;ಪಿಎಂ ಸ್ವನಿಧಿ&rsquo;ಯ (ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ) ಬೆಂಬಲ ದೊರೆಯಿತು.&lt;/p&gt;&lt;p&gt;ಈ ಸಾಲ ಸೌಲಭ್ಯ ಬಳಸಿಕೊಂಡು ನಿಂಗಮ್ಮ ತಳ್ಳುಗಾಡಿಯನ್ನು ಉನ್ನತೀಕರಿಸಿದರು, ಸರಕುಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಪ್ರಾರಂಭಿಸಿದರು ಮತ್ತು ಹೊಸ ತಿನಿಸುಗಳ ಮಾರಾಟ ಆರಂಭಿಸಿದರು. ಪರಿಣಾಮ ಗ್ರಾಹಕರು ಮತ್ತು ಆದಾಯ ಹೆಚ್ಚಾದಂತೆ, ಕುಟುಂಬದ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಯಿತು. ಇಂದು ಅವರು ತಮ್ಮ 3 ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಒದಗಿಸಲು ಸಮರ್ಥರಾಗಿದ್ದಾರೆ&rsquo; ಎಂದು ಮೋದಿ ಹೇಳಿದರು. ಈ ಮೂಲಕ, ಮಹಿಳೆಯೊಬ್ಬರ ವ್ಯವಹಾರ ವೃದ್ಧಿಯಾದಾಗ ಅವರ ಕುಟುಂಬದ ಭವಿಷ್ಯವೂ ಉನ್ನತಗತಿಯತ್ತ ಸಾಗುತ್ತದೆ ಎಂದು ಪ್ರಧಾನಿ ಪ್ರತಿಪಾದಿಸಿದರು.&lt;/p&gt;&lt;h2&gt;&lt;strong&gt;ನಿಂಗಮ್ಮನ ಸಾಧನೆ ಏನು?:&amp;nbsp;&lt;/strong&gt;&lt;/h2&gt;&lt;p&gt;ಮೂಲತಃ ಹಾಸನದರಾದ ನಿಂಗಮ್ಮ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು, ವಿಜಯನಗರದ ಹೊಸಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಹೋಟೆಲ್ ಹಾಕಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿರುವ ಬಗ್ಗೆ ಮಾತನಾಡಿದ ಅವರು, &lsquo;ನನ್ನಂತಹ ಬೀದಿಬದಿ ವ್ಯಾಪಾರಿಯ ಶ್ರಮವನ್ನು ಗುರುತಿಸಿ ಪ್ರಸ್ತಾಪಿಸಿದ ಪ್ರಧಾನಿ ಮೋದಿಯವರಿಗೆ ಧನ್ಯವಾದ. ಪಿಎಂ ಸ್ವನಿಧಿ ಯೋಜನೆಯಿಂದ ಮೊದಲು 10ಸಾವಿರ ರು., ನಂತರ 20 ಸಾವಿರ ರು. ಹಾಗೂ ಬಳಿಕ 50 ಸಾವಿರ ರು. ಸಾಲದ ನೆರವು ಸಿಕ್ಕಿತು. ದಲ್ಲಾಳಿಗಳ ಕಿರಿಕಿರಿಯಿಲ್ಲದೆ ನೇರವಾಗಿ ಸಾಲ ಸಿಕ್ಕಿದ್ದರಿಂದ ವ್ಯಾಪಾರ ವಿಸ್ತರಣೆಯಾಗಿ, ಮಕ್ಕಳ ವಿದ್ಯಾಭ್ಯಾಸಕ್ಕೂ ದೊಡ್ಡ ಅನುಕೂಲವಾಯಿತು. ಇಂದು ಈ ವ್ಯಾಪಾರದ ಮೂಲಕ ನನ್ನನ್ನು ಸೇರಿದಂತೆ 4 ಕುಟುಂಬಗಳು ಜೀವನ ಸಾಗಿಸುತ್ತಿವೆ&rsquo; ಎಂದು ಹರ್ಷಿಸಿದ್ದಾರೆ.&lt;/p&gt;&lt;h3&gt;ನಿಂಗಮ್ಮನ ಸಾಧನೆ ಏನು?&lt;/h3&gt;&lt;p&gt;- ಮೂಲತಃ ಹಾಸನದರಾದ ನಿಂಗಮ್ಮ ಪ್ರಸ್ತುತ ಬೆಂಗಳೂರಿನ ವಿಜಯನಗರ ನಿವಾಸಿ&lt;/p&gt;&lt;p&gt;- ಬೆಂಗಳೂರಿನ ವಿಜಯನಗರದ ಹೊಸಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಅವರ ಹೋಟೆಲ್&lt;/p&gt;&lt;p&gt;- ಮೊದಲು ಚಿಕ್ಕದಾಗಿದ್ದ ಹೋಟೆಲ್&zwnj;, &lsquo;ಪಿಎಂ ಸ್ವಾನಿಧಿ&rsquo; ಯೋಜನೆ ಸಹಾಯ ಬಳಿಕ ವಿಸ್ತರಣೆ&lt;/p&gt;&lt;p&gt;- ಯೋಜನೆಯಿಂದ ಮೊದಲು ₹10,000, ₹20,000, ಬಳಿಕ ₹50,000 ರು. ಸಾಲದ ನೆರವು&lt;/p&gt;&lt;p&gt;- ದಲ್ಲಾಳಿಗಳ ಕಿರಿಕಿರಿಯಿಲ್ಲದೆ ನೇರವಾಗಿ ಸಾಲ ಸಿಕ್ಕಿದ್ದರಿಂದ ವ್ಯಾಪಾರ ವಿಸ್ತರಣೆ ಸಾಕಾರ&lt;/p&gt;&lt;p&gt;- ಮಕ್ಕಳ ವಿದ್ಯಾಭ್ಯಾಸಕ್ಕೂ ಅನುಕೂಲ. ಈಕೆಯ ವ್ಯಾಪಾರದಿಂದ 4 ಕುಟುಂಬಗಳ ಜೀವನ&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/bengaluru-street-vendor-ningamma-finds-mention-in-pms-mann-ki-baat/articleshow-8vhzhg3"/>
        </item>
        <item>
            <title><![CDATA[ಪುತ್ರಿ ಶುಲ್ಕ ಭರಿಸಲು ಬರಿಗಾಲಲ್ಲೇಮ್ಯಾರಾಥಾನ್‌ ಓಡಿ ಗೆದ್ದ ಮಹಿಳೆ!]]></title>
            <link>https://www.kannadaprabha.in/india-news/47-year-old-woman-runs-marathon-barefoot/articleshow-9vvhzug</link>
            <guid isPermaLink="true">https://www.kannadaprabha.in/india-news/47-year-old-woman-runs-marathon-barefoot/articleshow-9vvhzug</guid>
            <pubDate>Wed, 02 Sep 2026 04:15:00 +0530</pubDate>
            <description><![CDATA[ತಾಯಿ ತನ್ನ ಮಕ್ಕಳಿಗಾಗಿ ಯಾವ ರೀತಿ ತ್ಯಾಗಕ್ಕೆ ಬೇಕಿದ್ದರೂ ಸಿದ್ಧಳಾಗುತ್ತಾಳೆ ಎನ್ನುವುದಕ್ಕೆ ಈ ಅಮ್ಮನೇ ಸಾಕ್ಷಿ. ಮಹಾರಾಷ್ಟ್ರದ ಬೀಡ್&zwnj; ಜಿಲ್ಲೆಯಲ್ಲಿ 47 ವರ್ಷದ ತಾಯಿ ರಮಾಬಾಯಿ ರಣವೀರ್&zwnj; ಅವರು ತನ್ನ ಮಗಳ ಶಾಲಾ ಶುಲ್ಕಕ್ಕಾಗಿ ಸೀರೆಯುಟ್ಟು, ಬರಿಗಾಲಿನಲ್ಲಿಯೇ ಮ್ಯಾರಾಥಾನ್&zwnj; ಓಡಿ ಗೆದ್ದಿದ್ದಾರೆ.]]></description>
            <media:content url="https://static-assets.asianetnews.com/kp/json/01092026/pictures/RUN_755.JPG" type="image/jpeg" height="390" width="690"/>
            <content:encoded><![CDATA[&lt;p&gt;ಸೀರೆಯಲ್ಲೇ ರನ್&zwnj; ಮಾಡಿದ 47 ವರ್ಷದ ಮಹಾ ಮಹಿಳೆಬೀಡ್&zwnj;: ತಾಯಿ ತನ್ನ ಮಕ್ಕಳಿಗಾಗಿ ಯಾವ ರೀತಿ ತ್ಯಾಗಕ್ಕೆ ಬೇಕಿದ್ದರೂ ಸಿದ್ಧಳಾಗುತ್ತಾಳೆ ಎನ್ನುವುದಕ್ಕೆ ಈ ಅಮ್ಮನೇ ಸಾಕ್ಷಿ. ಮಹಾರಾಷ್ಟ್ರದ ಬೀಡ್&zwnj; ಜಿಲ್ಲೆಯಲ್ಲಿ 47 ವರ್ಷದ ತಾಯಿ ರಮಾಬಾಯಿ ರಣವೀರ್&zwnj; ಅವರು ತನ್ನ ಮಗಳ ಶಾಲಾ ಶುಲ್ಕಕ್ಕಾಗಿ ಸೀರೆಯುಟ್ಟು, ಬರಿಗಾಲಿನಲ್ಲಿಯೇ ಮ್ಯಾರಾಥಾನ್&zwnj; ಓಡಿ ಗೆದ್ದಿದ್ದಾರೆ.&lt;/p&gt;ಜಿಲ್ಲೆಯ ಅಂಬಾಜೋಗೈನಲ್ಲಿ ಸಂಸ್ಥೆಯೊಂದರ ಅಮೃತಮಹೋತ್ಸವದ ಸವಿ ನೆನಪಿಗಾಗಿ ಅಮೃತ್&zwnj; ದೌಡ್&zwnj; ಎನ್ನುವ ಮ್ಯಾರಾಥಾನ್&zwnj; ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಸಾಕಷ್ಟು ಯುವ ಓಟಗಾರರು ಭಾಗವಹಿಸಿದ್ದರು. ಅದರಲ್ಲಿ 47 ವರ್ಷದ ರಮಾ ಅವರು ಓಟಕ್ಕೆ ಸಿದ್ಧರಾಗಿದ್ದರು. ರಮಾ ಸೀರೆ ಹಾಗೂ ಚಪ್ಪಲಿ ಧರಿಸಿ ಓಡುವುದಕ್ಕೆ ಪ್ರಾರಂಭಿಸಿದರು. ಆದರೆ ಮಾರ್ಗ ಮಧ್ಯದಲ್ಲಿ ಚಪ್ಪಲಿಗಳು ಜಾರುವುದಕ್ಕೆ ಪ್ರಾರಂಭಿಸಿತ್ತು. ಈ ಸಂದರ್ಭದಲ್ಲಿ ಆಕೆ ಚಪ್ಪಲಿ ಕಳಚಿಟ್ಟು ಬರಿಗಾಲಿನಲ್ಲಿಯೇ ಓಡುವುದಕ್ಕೆ ಪ್ರಾರಂಭಿಸಿ ಇತರ ಸ್ಪರ್ಧಿಗಳನ್ನೆಲ್ಲ ಸೋಲಿಸಿ ಮೊದಲು ಗುರಿ ಮುಟ್ಟುವ ಮೂಲಕ ಪ್ರಶಸ್ತಿ ಗೆದ್ದರು. ಇದು ಅಲ್ಲಿದ್ದವರಿಗೂ ಸಹ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. &lt;p&gt;ಈ ಮ್ಯಾರಾಥಾನ್&zwnj;ನಲ್ಲಿ ಗೆದ್ದಿದ್ದಕ್ಕೆ ಅವರಿಗೆ ಬಹುಮಾನ ರೂಪವಾಗಿ 3000 ರು. ನಗದು ನೀಡಲಾಯಿತು,.ಇದನ್ನು ಖುಷಿಯಿಂದ ಸ್ವೀಕರಿಸಿದ ರಮಾಬಾಯಿ ಅವರು &lsquo;ಮಗಳ ಶಿಕ್ಷಣಕ್ಕೆ ಬಳಸುತ್ತೇನೆ&rsquo; ಎಂದು ಆಸೆ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/47-year-old-woman-runs-marathon-barefoot/articleshow-9vvhzug"/>
        </item>
        <item>
            <title><![CDATA[ಇರಾನ್‌ ಮೇಲೆ ಅಮೆರಿಕ ದಾಳಿ : ಹೋರ್ಮುಜ್‌ ಮತ್ತೆ ಉದ್ವಿಗ್ನ]]></title>
            <link>https://www.kannadaprabha.in/india-news/us-strikes-iranian-rocket-launchers-on-strait-of-hormuz-in-first-military-action-in-weeks/articleshow-b2btk9t</link>
            <guid isPermaLink="true">https://www.kannadaprabha.in/india-news/us-strikes-iranian-rocket-launchers-on-strait-of-hormuz-in-first-military-action-in-weeks/articleshow-b2btk9t</guid>
            <pubDate>Tue, 01 Sep 2026 02:15:00 +0530</pubDate>
            <description><![CDATA[ಹೋರ್ಮುಜ್&zwnj; ಜಲಸಂಧಿಯಲ್ಲಿ ಅಮೆರಿಕ ಮತ್ತು ಇರಾನ್&zwnj; ನಡುವಿನ ಸಂಘರ್ಷ ಮತ್ತೆ ತೀವ್ರಗೊಂಡಿದ್ದು, ಇರಾನ್&zwnj;ನ ರಾಕೆಟ್&zwnj; ಲಾಂಚರ್&zwnj;ಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಭಾನುವಾರ ದಾಳಿ ನಡೆಸಿದೆ. ಈ ಮೂಲಕ ಕಳೆದ 1 ತಿಂಗಳಿನಿಂದ ಕಾಯ್ದುಕೊಂಡಿದ್ದ ತಾತ್ಕಾಲಿಕ ಶಾಂತಿಗೆ ತೆರೆ ಬಿದ್ದಿದೆ.]]></description>
            <media:content url="https://static-assets.asianetnews.com/kp/json/31082026/pictures/MISSILE_801.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಾಷಿಂಗ್ಟನ್/ಟೆಹ್ರಾನ್&zwnj;: &lt;/strong&gt;ಹೋರ್ಮುಜ್&zwnj; ಜಲಸಂಧಿಯಲ್ಲಿ ಅಮೆರಿಕ ಮತ್ತು ಇರಾನ್&zwnj; ನಡುವಿನ ಸಂಘರ್ಷ ಮತ್ತೆ ತೀವ್ರಗೊಂಡಿದ್ದು, ಇರಾನ್&zwnj;ನ ರಾಕೆಟ್&zwnj; ಲಾಂಚರ್&zwnj;ಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಭಾನುವಾರ ದಾಳಿ ನಡೆಸಿದೆ. ಈ ಮೂಲಕ ಕಳೆದ 1 ತಿಂಗಳಿನಿಂದ ಕಾಯ್ದುಕೊಂಡಿದ್ದ ತಾತ್ಕಾಲಿಕ ಶಾಂತಿಗೆ ತೆರೆ ಬಿದ್ದಿದೆ.&lt;/p&gt;&lt;h2&gt;ಹಡಗು ಮಾರ್ಗದಲ್ಲಿ ಸಮುದ್ರ ಸ್ಫೋಟಕಗಳನ್ನು ನಿಯೋಜಿಸಲು ಸಿದ್ಧತೆ&lt;/h2&gt;&lt;p&gt;ಹೋರ್ಮುಜ್&zwnj;ನ ಅಂತಾರಾಷ್ಟ್ರೀಯ ಹಡಗು ಮಾರ್ಗದಲ್ಲಿ ಸಮುದ್ರ ಸ್ಫೋಟಕಗಳನ್ನು ನಿಯೋಜಿಸಲು ಸಿದ್ಧತೆ ನಡೆಸುತ್ತಿದ್ದ ಇರಾನ್&zwnj;ನ ರೆವಲ್ಯೂಷನರಿ ಗಾರ್ಡ್ಸ್&zwnj; ಕೋರ್&zwnj;ನ ರಾಕೆಟ್&zwnj; ಲಾಂಚರ್&zwnj;ಗಳ ಮೇಲೆ ಅಮೆರಿಕ ಪಡೆಗಳು ಬೃಹತ್&zwnj; ವೈಮಾನಿಕ ದಾಳಿ ನಡೆಸಿವೆ. ಇರಾನ್&zwnj;ನ ಲಾರಾಕ್&zwnj; ದ್ವೀಪದ ಬಳಿಯೂ ಪ್ರಬಲ ಸ್ಫೋಟಗಳು ಸಂಭವಿಸಿದ್ದು, ಹಲವು ಯೋಧರು ಮೃತಪಟ್ಟಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ.&lt;/p&gt;&lt;h3&gt;ಗಲ್ಫ್ ಮೇಲೆ ಪ್ರತೀಕಾರದ ದಾಳಿ:&lt;/h3&gt;&lt;p&gt;ಅಮೆರಿಕ ತನ್ನ ಈ ಕೃತ್ಯಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿರುವ ಇರಾನ್, ಪ್ರತೀಕಾರವಾಗಿ ಗಲ್ಫ್&zwnj; ದೇಶ ಜೋರ್ಡಾನ್&zwnj;ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ. ಆದರೆ ತನ್ನ ವಾಯುಪ್ರದೇಶವನ್ನು ಪ್ರವೇಶಿಸಿದ ಇರಾನ್&zwnj;ನ 8 ಕ್ಷಿಪಣಿಗಳನ್ನು ಜೋರ್ಡಾನ್ ಸೇನೆ ಯಶಸ್ವಿಯಾಗಿ ಹೊಡೆದುರುಳಿಸಿದೆ. ಇದರ ಬೆನ್ನಲ್ಲೇ ಯುಎಇ ವಾಯುಪ್ರದೇಶದಲ್ಲೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ಯುಎಇ ಜಲಪ್ರದೇಶದ ಕಡೆಗೆ ನುಗ್ಗಲು ಯತ್ನಿಸಿದ ಇರಾನ್&zwnj;ನ ಡ್ರೋನ್ ಒಂದನ್ನು ಯುಎಇ ವಾಯುಪಡೆಯು ಆಕಾಶದಲ್ಲೇ ಹೊಡೆದುರುಳಿಸಿದೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/us-strikes-iranian-rocket-launchers-on-strait-of-hormuz-in-first-military-action-in-weeks/articleshow-b2btk9t"/>
        </item>
        <item>
            <title><![CDATA[ಜೀವನ ನರಕ ಮಾಡಿಬಿಟ್ರಿ : ಕ್ಷಮಿಸಿ ಎಂದಿದ್ದ ಜೆನ್‌ಝೀ ಮತ್ತೆ ಮೋದಿ ವಿರುದ್ಧ ಕಿಡಿ]]></title>
            <link>https://www.kannadaprabha.in/india-news/ruchika-singh-resurfaces-in-viral-video-says-pm-modi-made-my-life-hell-after-jantar-mantar-row/articleshow-f9rlltg</link>
            <guid isPermaLink="true">https://www.kannadaprabha.in/india-news/ruchika-singh-resurfaces-in-viral-video-says-pm-modi-made-my-life-hell-after-jantar-mantar-row/articleshow-f9rlltg</guid>
            <pubDate>Mon, 31 Aug 2026 05:21:06 +0530</pubDate>
            <description><![CDATA[&lt;p&gt;ಕಾಕ್ರೋಚ್&zwnj; ಜನತಾ ಪಾರ್ಟಿಯ (ಸಿಜೆಪಿ) ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನಬಂದಂತೆ ನಿಂದಿಸಿ, ಬಳಿಕ ಕ್ಷಮೆ ಯಾಚಿಸಿದ್ದ 15ರ ಬಾಲಕಿ ಇದೀಗ ಮತ್ತೊಂದು ವಿಡಿಯೋ ಮಾಡಿ ವಾಗ್ದಾಳಿ ನಡೆಸಿದ್ದಾಳೆ.&lt;/p&gt;]]></description>
            <media:content url="https://static-gi.asianetnews.com/images/01kyxwsca4nsydd5bhr3ydgpsg/pm-modi-abuse-video-ruchika-singh-apology-jantar-mantar-fir-delhi-police-noida-news-1785562181955.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಕಾಕ್ರೋಚ್&zwnj; ಜನತಾ ಪಾರ್ಟಿಯ (ಸಿಜೆಪಿ) ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನಬಂದಂತೆ ನಿಂದಿಸಿ, ಬಳಿಕ ಕ್ಷಮೆ ಯಾಚಿಸಿದ್ದ 15ರ ಬಾಲಕಿ ಇದೀಗ ಮತ್ತೊಂದು ವಿಡಿಯೋ ಮಾಡಿ ವಾಗ್ದಾಳಿ ನಡೆಸಿದ್ದಾಳೆ.&lt;/p&gt;&lt;p&gt;ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಂಚಿಕೊಂಡಿರುವ ರುಚಿಕಾ ಸಿಂಗ್&zwnj;, &lsquo;ಮೋದಿ, ನೀವು ನನ್ನ ಜೀವನವನ್ನು ನರಕಸದೃಶ ಮಾಡಿಬಿಟ್ಟಿರಿ. ನನ್ನ ಹಿಂದೆ ಬಿದ್ದು ತುಂಬಾ ಹಿಂಸೆ ನೀಡಿದ್ದೀರಿ. ನನ್ನ ಬಳಿ ಈಗ ಕಳೆದುಕೊಳ್ಳಲು ಏನೂ ಉಳಿದಿಲ್ಲ. ಇದ್ದದ್ದನ್ನೆಲ್ಲಾ ನೀವು ಕಸಿದಿರಿ.&lt;/p&gt;&lt;h2&gt;ಎಲ್ಲರಿಗಾದರೂ ಹೋಗುವ ಸ್ವಾತಂತ್ರ್ಯವೂ ನನಗಿಲ್ಲದಾಗಿದೆ&lt;/h2&gt;&lt;p&gt;ಎಲ್ಲರಿಗಾದರೂ ಹೋಗುವ ಸ್ವಾತಂತ್ರ್ಯವೂ ನನಗಿಲ್ಲದಾಗಿದೆ. ಹೋದಲ್ಲೆಲ್ಲಾ ಮುಖ ಮುಚ್ಚಿಕೊಳ್ಳಬೇಕಾಗಿದೆ&rsquo; ಎಂದು ಹೇಳಿದ್ದಾಳೆ. ಜತೆಗೆ ಮೋದಿಯವರನ್ನು &lsquo;ಹೇಡಿ&rsquo; ಎಂದು ಕರೆದಿದ್ದು, &lsquo;ನಾನು ಹಿಂದೆ ಸರಿಯುವುದಿಲ್ಲ&rsquo; ಎಂದು ಸವಾಲು ಹಾಕಿದ್ದಾಳೆ.&lt;/p&gt;&lt;h3&gt;&lt;strong&gt;ನೀಟ್&zwnj;-ಪಿಜಿ ಪರೀಕ್ಷೆ ವೇಳೆ ಮತ್ತೆಮತ್ತೆ ಕರೆಂಟ್&zwnj; ಕಟ್&zwnj;:&lt;/strong&gt;&lt;/h3&gt;&lt;p&gt;ನವದೆಹಲಿ: ನೀಟ್&zwnj;-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಿಂದ ದೇಶದಲ್ಲಿ ಭಾರೀ ಕೋಲಾಹಲವೆದ್ದು ಸಚಿವರೊಬ್ಬರ ಪದತ್ಯಾಗಕ್ಕೆ ಕಾರಣವಾದ ಬೆನ್ನಲ್ಲೇ, ಭಾನುವಾರ ಜೈಪುರದಲ್ಲಿ ನಡೆದ ನೀಟ್&zwnj;-ಪಿಜಿ ಪರೀಕ್ಷೆ ವೇಳೆ ವಿದ್ಯುತ್&zwnj; ಪೂರೈಕೆಯಲ್ಲಿ ವ್ಯತ್ಯಯವಾಗಿ ಅಭ್ಯರ್ಥಿಗಳು ಸಿಟ್ಟಿಗೆದ್ದಿದ್ದರು. ಇದರ ಬೆನ್ನಲ್ಲೇ ಘಟನೆಗೆ ಕಾರಣ ಪತ್ತೆಗೆಂದು ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿ 3 ಸದಸ್ಯರ ತನಿಖಾ ಸಮಿತಿ ರಚಿಸಿದೆ. ಪರೀಕ್ಷೆ ಆರಂಭವಾದ ಬಳಿಕ ಹಲವು ಬಾರಿ ವಿದ್ಯುತ್&zwnj; ಕೈಕೊಟ್ಟ ಕಾರಣ ಮತ್ತು ಲಾಗ್&zwnj;ಇನ್&zwnj; ಆಗುವಾಗ ತಾಂತ್ರಿಕ ಸಮಸ್ಯೆ ಎದುರಾದ ಕಾರಣ ವಿದ್ಯಾರ್ಥಿಗಳು ಸರಾಗವಾಗಿ ಪರೀಕ್ಷೆ ಬರೆಯಲಾಗಿರಲಿಲ್ಲ. ಮರುಪರೀಕ್ಷೆ ಸೆ.5ರಂದು ನಿಗದಿಯಾಗಿದೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/ruchika-singh-resurfaces-in-viral-video-says-pm-modi-made-my-life-hell-after-jantar-mantar-row/articleshow-f9rlltg"/>
        </item>
        <item>
            <title><![CDATA[3 ದಶಕದ ಭೀಕರ ಪ್ರವಾಹಕ್ಕೆ ಪುಟ್ಟ ದೇಶ ತತ್ತರ]]></title>
            <link>https://www.kannadaprabha.in/india-news/death-toll-rises-to-360-in-nepal-flash-floods/articleshow-g7ltln8</link>
            <guid isPermaLink="true">https://www.kannadaprabha.in/india-news/death-toll-rises-to-360-in-nepal-flash-floods/articleshow-g7ltln8</guid>
            <pubDate>Fri, 28 Aug 2026 04:15:00 +0530</pubDate>
            <description><![CDATA[&lt;p&gt;ಕಳೆದ ಮೂರೂವರೆ ದಶಕಗಳಲ್ಲೇ ಭೀಕರ ಭೀಕರ ಪ್ರವಾಹಕ್ಕೆ ಸಿಲುಕಿರುವ ನೇಪಾಳದಲ್ಲಿ ಮೃತಪಟ್ಟವರ ಸಂಖ್ಯೆ 360ಕ್ಕೆ ಏರಿಕೆಯಾಗಿದ್ದು, 1000ಕ್ಕೂ ಹೆಚ್ಚು ಜನ ನಾಪತ್ತೆ ಆಗಿದ್ದಾರೆ. ದುರಂತದಲ್ಲಿ ನಾಪತ್ತೆಯಾಗಿರುವ 288 ಭಾರತೀಯರು ಸೇರಿದಂತೆ ನೂರಾರು ಜನರಿಗಾಗಿ ರಕ್ಷಣಾ ಪಡೆಗಳು ಸಮರೋಪಾದಿಯಲ್ಲಿ ಶೋಧ&lt;/p&gt;]]></description>
            <media:content url="https://static-assets.asianetnews.com/kp/json/27082026/pictures/27081_PTI08_27_2026_000405A_277.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾಠ್ಮಂಡು: &lt;/strong&gt;ಕಳೆದ ಮೂರೂವರೆ ದಶಕಗಳಲ್ಲೇ ಭೀಕರ ಭೀಕರ ಪ್ರವಾಹಕ್ಕೆ ಸಿಲುಕಿರುವ ನೇಪಾಳದಲ್ಲಿ ಮೃತಪಟ್ಟವರ ಸಂಖ್ಯೆ 360ಕ್ಕೆ ಏರಿಕೆಯಾಗಿದ್ದು, 1000ಕ್ಕೂ ಹೆಚ್ಚು ಜನ ನಾಪತ್ತೆ ಆಗಿದ್ದಾರೆ. ದುರಂತದಲ್ಲಿ ನಾಪತ್ತೆಯಾಗಿರುವ 288 ಭಾರತೀಯರು ಸೇರಿದಂತೆ ನೂರಾರು ಜನರಿಗಾಗಿ ರಕ್ಷಣಾ ಪಡೆಗಳು ಸಮರೋಪಾದಿಯಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದು, ದೇಶದ ಆಧುನಿಕ ಇತಿಹಾಸದಲ್ಲೇ ಇದು ಅತ್ಯಂತ ಭೀಕರ ನೈಸರ್ಗಿಕ ದುರಂತವಾಗಿ ಮಾರ್ಪಟ್ಟಿದೆ.&lt;/p&gt;&lt;p&gt;ಬುಧವಾರ ಸಂಭವಿಸಿದ ಈ ಜಲಪ್ರಳಯವು ನೇಪಾಳದ ಹಲವು ಜಿಲ್ಲೆಗಳಲ್ಲಿ ಭಾರಿ ಹಾನಿ ಉಂಟುಮಾಡಿದೆ. ಗುರುವಾರ ಕಾರ್ಯಾಚರಣೆ ವೇಳೆ ಮತ್ತಷ್ಟು ಶವಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ ದಿಢೀರ್&zwnj; ಏರಿಕೆಯಾಗಿದೆ. ಪೊಲೀಸ್ ವಕ್ತಾರ ಅಬಿ ನಾರಾಯಣ್ ಕಾಫ್ಲೆ ನೀಡಿರುವ ಮಾಹಿತಿಯಂತೆ ಚಿತ್ವಾನ್&zwnj;ನಲ್ಲಿ 108, ನವಲ್&zwnj;ಪರಾಸಿ ಪೂರ್ವದಲ್ಲಿ 62, ಧಾಡಿಂಗ್&zwnj;ನಲ್ಲಿ 27, ಗೋರ್ಖಾದಲ್ಲಿ 20, ರಸುವಾದಲ್ಲಿ 17, ನವಲ್&zwnj;ಪರಾಸಿ ವೆಸ್ಟ್&zwnj;ನಲ್ಲಿ 15, ನುವಾಕೋಟ್&zwnj;ನಲ್ಲಿ 12 ಹಾಗೂ ತನಹುನ್&zwnj;ನಲ್ಲಿ 9 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ.&lt;/p&gt;&lt;h2&gt;800 ಜನರ ರಕ್ಷಣೆ:&lt;/h2&gt;&lt;p&gt;ಇನ್ನು ದುರಂತದಿಂದಾಗಿ 35 ಸೇತುವೆಗಳು, 45 ತೂಗುಸೇತುವೆಗಳು ಹಾಗೂ 40 ಕಿ.ಮೀ.ಗೂ ಹೆಚ್ಚು ಉದ್ದದ ಮುಖ್ಯ ರಸ್ತೆಗಳು ಕೊಚ್ಚಿಹೋಗಿವೆ. ಕಾಠ್ಮಂಡುವನ್ನು ಸಂಪರ್ಕಿಸುವ ಮುಖ್ಯ ಹೆದ್ದಾರಿ ಸೇರಿದಂತೆ ದೇಶದ ಪ್ರಮುಖ ರಸ್ತೆ ಸಂಚಾರ ಸಂಪೂರ್ಣವಾಗಿ ಕಡಿತಗೊಂಡಿದೆ. ಸದ್ಯ ರಕ್ಷಣಾ ಪಡೆಗಳು 800ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದು, ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.&lt;/p&gt;&lt;h3&gt;ಪ್ರವಾಹಪೀಡಿತ ಪ್ರದೇಶಗಳಿಗೆ ಪ್ರಧಾನಿ ಬಲೇಂದ್ರ ಶಾ ಭೇಟಿ&lt;/h3&gt;&lt;p&gt;ಪ್ರವಾಹಪೀಡಿತ ಪ್ರದೇಶಗಳಿಗೆ ನೇಪಾಳ ಪ್ರಧಾನಿ ಬಲೇಂದ್ರ ಶಾ ಅವರು ಮೂಲಸೌಕರ್ಯ ಅಭಿವೃದ್ಧಿ ಸಚಿವ ಸುನಿಲ್ ಲಮ್ಶಾಲ್ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/death-toll-rises-to-360-in-nepal-flash-floods/articleshow-g7ltln8"/>
        </item>
        <item>
            <title><![CDATA[ಎವರೆಸ್ಟ್‌, ಲಾಲ್ಜೀ ಇಂಗು ಮಾರಾಟಕ್ಕೆ ನಿರ್ಬಂಧ]]></title>
            <link>https://www.kannadaprabha.in/india-news/ban-imposed-on-the-sale-of-everest-and-lalji-hing/articleshow-irwdrag</link>
            <guid isPermaLink="true">https://www.kannadaprabha.in/india-news/ban-imposed-on-the-sale-of-everest-and-lalji-hing/articleshow-irwdrag</guid>
            <pubDate>Sun, 30 Aug 2026 12:06:17 +0530</pubDate>
            <description><![CDATA[&lt;p&gt;ಕಳಪೆ ಗುಣಮಟ್ಟ ಹಿನ್ನೆಲೆ ಎವರೆಸ್ಟ್&zwnj; ಫುಡ್&zwnj; ಪ್ರಾಡಕ್ಟ್ಸ್ ಮತ್ತು ಲಾಲ್ಜೀ ಗೋಧೂ ಕಂಪನಿಗಳ ಇಂಗು ಮಾರಾಟಕ್ಕೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್&zwnj;ಎಸ್&zwnj;ಎಸ್&zwnj;ಎಐ) ನಿರ್ಬಂಧ ವಿಧಿಸಿದೆ.&lt;/p&gt;]]></description>
            <media:content url="https://static-gi.asianetnews.com/images/01m16thbvrb1n1gpepaf5yq1y7/fssai-everest-hing-ban-spices-quality-test-asafoetida-food-safety-india-1788009295736.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ&lt;/strong&gt;: ಕಳಪೆ ಗುಣಮಟ್ಟ ಹಿನ್ನೆಲೆ ಎವರೆಸ್ಟ್&zwnj; ಫುಡ್&zwnj; ಪ್ರಾಡಕ್ಟ್ಸ್ ಮತ್ತು ಲಾಲ್ಜೀ ಗೋಧೂ ಕಂಪನಿಗಳ ಇಂಗು ಮಾರಾಟಕ್ಕೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್&zwnj;ಎಸ್&zwnj;ಎಸ್&zwnj;ಎಐ) ನಿರ್ಬಂಧ ವಿಧಿಸಿದೆ.&lt;/p&gt;&lt;h2&gt;ಎಫ್&zwnj;ಎಸ್&zwnj;ಎಸ್&zwnj;ಎಐ ಜಾಲತಾಣದಲ್ಲಿ ಪೋಸ್ಟ್&zwnj;&lt;/h2&gt;&lt;p&gt;ಈ ಕುರಿತು ಎಫ್&zwnj;ಎಸ್&zwnj;ಎಸ್&zwnj;ಎಐ ಜಾಲತಾಣದಲ್ಲಿ ಪೋಸ್ಟ್&zwnj; ಮಾಡಿದೆ. &lsquo;ಎವರೆಸ್ಟ್ ಫುಡ್ ಪ್ರಾಡಕ್ಟ್ಸ್ ಮತ್ತು ಲಾಲ್ಜೀ ಗೋಧೂ ಕಂಪನಿಯ ಉತ್ಪನ್ನಗಳ ಇಂಗು ಕಳಪೆ ಗುಣಮಟ್ಟದ್ದಾಗಿರುವುದರಿಂದ ಅವುಗಳ ವಿರುದ್ಧ ನಿಷೇಧಿತ ಆದೇಶಗಳನ್ನು ಹೊರಡಿಸಲಾಗಿದೆ&rsquo; ಎಂದಿದೆ. ತಕ್ಷಣದಿಂದಲೇ ಈ ಕ್ರಮ ಜಾರಿಗೆ ಬರಲಿದೆ. ಎವರೆಸ್ಟ್&zwnj;ವಿರುದ್ಧ ತಪ್ಪಾಗಿ ಬ್ರ್ಯಾಂಡ್&zwnj; ಮಾಡಿರುವ ಆರೋಪವೂ ಕೇಳಿ ಬಂದಿದೆ.&lt;/p&gt;&lt;h3&gt;ಎಫ್&zwnj;ಎಸ್&zwnj;ಎಸ್&zwnj;ಎಐ ನಿಯಮ ಉಲ್ಲಂಘನೆ&lt;/h3&gt;&lt;p&gt;ಎವರೆಸ್ಟ್&zwnj;ನ ಎಗ್ ಕರಿ ಮಸಾಲ, ಚಿಕನ್ ಮಸಾಲ ಮತ್ತು ಗರಂ ಮಸಾಲಗಳಲ್ಲಿಯೂ ಸಹ ಎಫ್&zwnj;ಎಸ್&zwnj;ಎಸ್&zwnj;ಎಐ ನಿಯಮ ಉಲ್ಲಂಘನೆಯನ್ನು ಪತ್ತೆಹಚ್ಚಿದೆ. ಆದಾಗ್ಯೂ, ಈ ಮೂರು ಉತ್ಪನ್ನಗಳನ್ನು ನಿಷೇಧಿಸಿಲ್ಲ.&lt;/p&gt;]]></content:encoded>
            <category>India</category>
            <dc:creator>Sujatha NR</dc:creator>
            <atom:link href="https://www.kannadaprabha.in/india-news/ban-imposed-on-the-sale-of-everest-and-lalji-hing/articleshow-irwdrag"/>
        </item>
        <item>
            <title><![CDATA[ಶಿಕ್ಷಕನ ಜಾಣ್ಮೆಯಿಂದ 1643 ವಿದ್ಯಾರ್ಥಿಗಳ ಜೀವ ಉಳಿಯಿತು !]]></title>
            <link>https://www.kannadaprabha.in/india-news/how-a-nepali-teacher-s-quick-thinking-saved-1-643-children-from-monster-floods/articleshow-mkmpwcd</link>
            <guid isPermaLink="true">https://www.kannadaprabha.in/india-news/how-a-nepali-teacher-s-quick-thinking-saved-1-643-children-from-monster-floods/articleshow-mkmpwcd</guid>
            <pubDate>Mon, 31 Aug 2026 03:15:00 +0530</pubDate>
            <description><![CDATA[&lt;p&gt;ಶಿಕ್ಷಕರ ಜಾಣ್ಮೆ ಮತ್ತು ತ್ವರಿತ ಚಿಂತನೆಯ ಪರಿಣಾಮ 1643 ವಿದ್ಯಾರ್ಥಿಗಳ ಪ್ರಾಣ ಉಳಿದ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ತ್ರಿಶೂಲಿ ಕಣಿವೆಯ ಮಾಧ್ಯಮಿಕ ಶಾಲೆಯ ಪ್ರಾಂಶುಪಾಲರಾದ ರಾಜೇಂದ್ರ ದಾವಡಿ ಅವರಿಗೆ ಪ್ರವಾಹದ ಬಗ್ಗೆ ಬೆಳಗ್ಗೆ 9:20ರ ವೇಳೆಗೆ ಸ್ನೇಹಿತರೊಬ್ಬರಿಂದ ಎಚ್ಚರಿಕೆ ಬಂದಿತ್ತು.&lt;/p&gt;]]></description>
            <media:content url="https://static-assets.asianetnews.com/kp/json/30082026/pictures/RAJENDRA_495.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾಠ್ಮಂಡು&lt;/strong&gt;: ಶಿಕ್ಷಕರ ಜಾಣ್ಮೆ ಮತ್ತು ತ್ವರಿತ ಚಿಂತನೆಯ ಪರಿಣಾಮ 1643 ವಿದ್ಯಾರ್ಥಿಗಳ ಪ್ರಾಣ ಉಳಿದ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ತ್ರಿಶೂಲಿ ಕಣಿವೆಯ ಮಾಧ್ಯಮಿಕ ಶಾಲೆಯ ಪ್ರಾಂಶುಪಾಲರಾದ ರಾಜೇಂದ್ರ ದಾವಡಿ ಅವರಿಗೆ ಪ್ರವಾಹದ ಬಗ್ಗೆ ಬೆಳಗ್ಗೆ 9:20ರ ವೇಳೆಗೆ ಸ್ನೇಹಿತರೊಬ್ಬರಿಂದ ಎಚ್ಚರಿಕೆ ಬಂದಿತ್ತು.&lt;/p&gt;&lt;h2&gt;ಸುರಕ್ಷತೆಯ ಜವಾಬ್ದಾರಿ&lt;/h2&gt;&lt;p&gt;ಆ ವೇಳೆ ಶಾಲೆಯಲ್ಲಿ ಸಾವಿರಾರು ಮಕ್ಕಳಿದ್ದು, ಅವರೆಲ್ಲರ ಸುರಕ್ಷತೆಯ ಜವಾಬ್ದಾರಿ ದಾವಡಿ ಅವರ ಮೇಲಿತ್ತು. ಮೊದಮೊದಲು ತಮ್ಮ ಶಾಲೆ ನದಿಯಿಂದ 200 ಅಡಿ ಎತ್ತರದಲ್ಲಿರುವ ಕಾರಣ ಸುರಕ್ಷಿತವಾಗಿದ್ದೇವೆ ಎಂದು ಅವರು ಭಾವಿಸಿದ್ದರು.&lt;/p&gt;&lt;h3&gt;ಎತ್ತರದ ಪ್ರದೇಶವೊಂದಕ್ಕೆ ಕರೆದೊಯ್ದು ಕೂರಿಸಿದ್ದರು&lt;/h3&gt;&lt;p&gt;ಆದರೂ ಕೂಡಲೇ ಕಾರ್ಯಪ್ರವೃತರಾದ ಅವರು, ಶಾಲೆಯಿಂದ ಹೊರಬರುವಂತೆ ಎಲ್ಲಾ ಶಿಕ್ಷಕರಿಗೆ ಸೂಚಿಸುವ ಜೊತೆಗೆ, ಶಾಲೆಗೆ ಮಕ್ಕಳನ್ನು ಕರೆತರುತ್ತಿದ್ದ ಶಾಲಾ ಬಸ್&zwnj;ಗಳಿಗೆ ವಾಪಸ್&zwnj; ಹೋಗುವಂತೆ ತಿಳಿಸಿದ್ದರು. ಜೊತೆಗೆ, ಆದಾಗಲೇ ಶಾಲೆಗೆ ಬಂದಿದ್ದ ಮಕ್ಕಳನ್ನೂ ಎತ್ತರದ ಪ್ರದೇಶವೊಂದಕ್ಕೆ ಕರೆದೊಯ್ದು ಬೋಧಿವೃಕ್ಷವೊಂದ ಕೆಳಗೆ ಕೂರಿಸಿದ್ದರು.&lt;/p&gt;&lt;p&gt;ಅದಾದ ಕೆಲವೇ ಕ್ಷಣಗಳಲ್ಲಿ ಭೀಕರ ಪ್ರವಾಹಕ್ಕೆ ಇಡೀ ಶಾಲೆಯೇ ಕೊಚ್ಚಿ ಹೋಗಿತ್ತು. ಒಂದ ವೇಳೆ ರಾಜೇಂದ್ರ ಚಾವಡಿ ಕೆಲವೇ ಕ್ಷಣ ವ್ಯರ್ಥ ಮಾಡಿದ್ದರೂ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಪ್ರಾಣಪಕ್ಷಿ ಹಾರಿ ಹೋಗುತ್ತಿತ್ತು.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/how-a-nepali-teacher-s-quick-thinking-saved-1-643-children-from-monster-floods/articleshow-mkmpwcd"/>
        </item>
        <item>
            <title><![CDATA[ಯುದ್ಧ ನಿಲ್ಲಿಸಿ : ಪುಟಿನ್‌ಗೆ ಮೋದಿ ಮನವಿ]]></title>
            <link>https://www.kannadaprabha.in/india-news/stop-the-war-modi-appeals-to-putin/articleshow-n6hyr9y</link>
            <guid isPermaLink="true">https://www.kannadaprabha.in/india-news/stop-the-war-modi-appeals-to-putin/articleshow-n6hyr9y</guid>
            <pubDate>Tue, 01 Sep 2026 01:15:00 +0530</pubDate>
            <description><![CDATA[ಯುದ್ಧದ ಪ್ರತಿ ದಿನವೂ ಮಾನವೀಯತೆಯನ್ನು ಹಿಂದಕ್ಕೆ ತಳ್ಳುತ್ತದೆ. ನಾವು ಹಗೆತನವನ್ನು ಕೊನೆಗೊಳಿಸುವತ್ತ ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್&zwnj; ಪುಟಿನ್&zwnj; ಅವರಿಗೆ ಮನವಿ ಮಾಡಿದ್ದಾರೆ.]]></description>
            <media:content url="https://static-assets.asianetnews.com/kp/json/31082026/pictures/MODI_PUTIN_192.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬಿಷ್ಕೇಕ್&zwnj;&lt;/strong&gt;: ಯುದ್ಧದ ಪ್ರತಿ ದಿನವೂ ಮಾನವೀಯತೆಯನ್ನು ಹಿಂದಕ್ಕೆ ತಳ್ಳುತ್ತದೆ. ನಾವು ಹಗೆತನವನ್ನು ಕೊನೆಗೊಳಿಸುವತ್ತ ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್&zwnj; ಪುಟಿನ್&zwnj; ಅವರಿಗೆ ಮನವಿ ಮಾಡಿದ್ದಾರೆ.&lt;/p&gt;&lt;p&gt;ಕಿರ್ಗಿಸ್ತಾನದ ಬಿಷ್ಕೇಕ್&zwnj;ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (ಎಸ್&zwnj;ಸಿಒ) ಶೃಂಗಸಭೆ ಪಾರ್ಶ್ವದಲ್ಲಿ ಪುಟಿನ್&zwnj; ಹಾಗೂ ಮೋದಿ ಭೇಟಿ ನಡೆಯಿತು. ಈ ವೇಳೆ ಉಕ್ರೇನ್ ಸಂಘರ್ಷವನ್ನು ಪರಿಹರಿಸಲು ಎಲ್ಲಾ ಶಾಂತಿಯುತ ಪ್ರಯತ್ನಗಳಿಗೆ ಭಾರತದ ಬೆಂಬಲ ನೀಡಲಿದೆ ಎಂದು ಮೋದಿ ಪುನರುಚ್ಚರಿಸಿದರು.&lt;/p&gt;&lt;p&gt;ಇದಕ್ಕೆ ಪ್ರತಿಕ್ರಿಯಿಸಿದ ಪುಟಿನ್&zwnj;, &lsquo;ಮೋದಿ ಅವರ ವೈಯಕ್ತಿಕ ಗಮನದಿಂದ ರಷ್ಯಾ-ಭಾರತ ಸಂಬಂಧಗಳು ಬಲಗೊಳ್ಳುತ್ತಿವೆ &rsquo; ಎಂದರು.&lt;/p&gt;&lt;p&gt;ಈ ನಡುವೆ ಟ್ವೀಟ್&zwnj; ಮಾಡಿರುವ ಮೋದಿ, &lsquo;ಪುಟಿನ್&zwnj; ಜತೆ ಭಾರತ-ರಷ್ಯಾ ನಂಟಿನ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿದೆ. ಇತ್ತೀಚಿನ ವರ್ಷಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಂಬಂಧವು ಗಮನಾರ್ಹ ಪ್ರಗತಿ ಕಾಣುತ್ತಿರುವುದು ಸಂತಸ ತಂದಿದೆ. ಭಾರತ-ರಷ್ಯಾ ಸ್ನೇಹಕ್ಕೆ ಇಂಧನ, ನಾವೀನ್ಯತೆ, ಬಾಹ್ಯಾಕಾಶ, ರಸಗೊಬ್ಬರಗಳು ಸಂಪರ್ಕಗಳಾಗಿ ಉಳಿದಿವೆ&rsquo; ಎಂದು ಹರ್ಷಿಸಿದ್ದಾರೆ.&lt;/p&gt;&lt;p&gt;ಸ್ಪುಟ್ನಿಕ್ ಪ್ರಕಾರ, 2025 ರಲ್ಲಿ ಎರಡೂ ದೇಶಗಳ ನಡುವಿನ ಪ್ರವಾಸಿ ವಿನಿಮಯವು ಶೇ.16ರಷ್ಟು ಹೆಚ್ಚಾಗಿದೆ.&lt;/p&gt;&lt;h2&gt;ಇರಾನ್&zwnj;-ಅಮೆರಿಕ ಮಧ್ಯೆ ಶಾಂತಿ ಸ್ಥಾಪನೆ: ಮೋದಿ ಕರೆ&lt;/h2&gt;&lt;p&gt;- ಇರಾನ್&zwnj; ಅಧ್ಯಕ್ಷ ಪೆಜೆಶ್ಕಿಯಾನ್&zwnj; ಜತೆ ಪ್ರಧಾನಿ ಮೋದಿ ಭೇಟಿಬಿಷ್ಕೇಕ್: ಶಾಂಘೈ ಶೃಂಗಸಭೆಗೆಂದು ಕಿರ್ಗಿಸ್ತಾನ್&zwnj;ಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿ ಇರಾನ್&zwnj; ಅಧ್ಯಕ್ಷ ಮಸೌದ್&zwnj; ಪೆಜೆಶ್ಕಿಯಾನ್&zwnj; ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಅಮೆರಿಕದೊಂದಿಗೆ ಇರಾನ್&zwnj; ಫೆಬ್ರವರಿಯಲ್ಲಿ ಯುದ್ಧಕ್ಕಿಳಿದ ಬಳಿಕ ನಡೆದ ಉಭಯ ನಾಯಕರ ಮೊದಲ ಭೇಟಿ ಇದಾಗಿದ್ದು, ಉಭಯ ದೇಶಗಳ ನಡುವೆ ಶಾಂತಿ ಸ್ಥಾಪನೆಗೆ ಮನವಿ ಮಾಡಿದ್ದಾರೆ.&lt;/p&gt;&lt;h3&gt;ಭಾರತೀಯ ನಾವಿಕರು ಮೃತರಾದ ಬಗ್ಗೆಯೂ ಕಳವಳ&lt;/h3&gt;&lt;p&gt;ಇದಲ್ಲದೆ, ಇರಾನ್&zwnj; ದಾಳಿಯಲ್ಲಿ ಭಾರತೀಯ ನಾವಿಕರು ಮೃತರಾದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದರು ಎಂದು ಮೂಲಗಳು ಹೇಳಿವೆ.&lt;/p&gt;&lt;p&gt;ಈ ಭೇಟಿ ಬಗ್ಗೆ ಎಕ್ಸ್&zwnj;ನಲ್ಲಿ ಪೋಸ್ಟ್&zwnj; ಮಾಡಿರುವ ಮೋದಿ, &lsquo;ಅಧ್ಯಕ್ಷ ಪೆಜೆಶ್ಕಿಯಾನ್&zwnj; ಅವರನ್ನು ಭೇಟಿಯಾಗಿ, ಮಧ್ಯಪ್ರಾಚ್ಯದ ಪ್ರಸ್ತುತ ಸ್ಥಿತಿಗತಿಯ ಕುರಿತು ಚರ್ಚೆ ನಡೆಸಿದೆ. ವಿವಿಧ ಕ್ಷೇತ್ರಗಳಲ್ಲಿ ಇರಾನ್&zwnj;ನೊಂದಿಗಿನ ಭಾರತದ ದೀರ್ಘಕಾಲೀನ ಸ್ನೇಹವನ್ನು ಬಲಪಡಿಸುವ ಬದ್ಧತೆಯನ್ನು ಪುನರುಚ್ಚರಿಸಿದೆ. ಮುಂದಿನ ದಿನಗಳಲ್ಲಿ ವ್ಯಾಪಾರ ವಿಸ್ತರಿಸಲು ಮತ್ತು ವೈವಿಧ್ಯಮಯವಾಗಿಸಲು ನಾವು ಬಯಸುತ್ತೇವೆ&rsquo; ಎಂದು ಬರೆದಿದ್ದಾರೆ. ಮುಂದುವರಿದು, &lsquo;ಶಾಶ್ವತ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ನಡೆಯುವ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುವುದನ್ನು ಭಾರತ ಮುಂದುವರಿಸಲಿದೆ&rsquo; ಎಂಬ ಭರವಸೆ ನೀಡಿದರು.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/stop-the-war-modi-appeals-to-putin/articleshow-n6hyr9y"/>
        </item>
        <item>
            <title><![CDATA[ಪಾಕ್‌, ಚೀನಾ ವಿರುದ್ಧ ಮೋದಿ ಕಿಡಿ]]></title>
            <link>https://www.kannadaprabha.in/india-news/sco-must-confront-countries-using-terrorism-as-instrument-of-state-policy-pm-modi/articleshow-pancoka</link>
            <guid isPermaLink="true">https://www.kannadaprabha.in/india-news/sco-must-confront-countries-using-terrorism-as-instrument-of-state-policy-pm-modi/articleshow-pancoka</guid>
            <pubDate>Wed, 02 Sep 2026 03:00:00 +0530</pubDate>
            <description><![CDATA[ಭಯೋತ್ಪಾದನೆಗೆ ಉತ್ತೇಜನ ನೀಡುವ ಪಾಕಿಸ್ತಾನ ಮತ್ತು ವಿಸ್ತರಣಾವಾದದ ನೀತಿ ಅನುಸರಿಸುತ್ತಿರುವ ಚೀನಾದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ, ಆ ದೇಶಗಳ ನಾಯಕರ ಎದುರೇ ವಿರೋಧ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static-assets.asianetnews.com/kp/json/01092026/pictures/MODI1_797.JPG" type="image/jpeg" height="390" width="690"/>
            <content:encoded><![CDATA[&lt;p&gt;- ಉಗ್ರವಾದ ದಾಳ ಮಾಡಿಕೊಂಡವರ ವಿರುದ್ಧ ಎಸ್&zwnj;ಸಿಒ ಒಂದಾಗಬೇಕು&lt;/p&gt;- ಪ್ರಾದೇಶಿಕ ಸಂಪರ್ಕದ ಯೋಜನೆ ಪ್ರಾದೇಶಿಕ ಸಮಗ್ರತೆ ಗೌರವಿಸಬೇಕು&lt;p&gt;ಬಿಷ್ಕೇಕ್&zwnj;: ಭಯೋತ್ಪಾದನೆಗೆ ಉತ್ತೇಜನ ನೀಡುವ ಪಾಕಿಸ್ತಾನ ಮತ್ತು ವಿಸ್ತರಣಾವಾದದ ನೀತಿ ಅನುಸರಿಸುತ್ತಿರುವ ಚೀನಾದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ, ಆ ದೇಶಗಳ ನಾಯಕರ ಎದುರೇ ವಿರೋಧ ವ್ಯಕ್ತಪಡಿಸಿದ್ದಾರೆ.&lt;/p&gt;ಮಂಗಳವಾರ ಇಲ್ಲಿ ಶಾಂಘೈ ಸಹಕಾರ ಸಂಘ (ಎಸ್&zwnj;ಸಿಒ)ದ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ, &lsquo;ಭಯೋತ್ಪಾದನೆಯನ್ನು ತನ್ನ ಸರ್ಕಾರಿ ನೀತಿಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವ ದೇಶಗಳನ್ನು ಶಾಂಘೈ ಸಹಕಾರ ಒಕ್ಕೂಟ (ಎಸ್&zwnj;ಸಿಒ) ಕಠಿಣವಾಗಿ ಎದುರಿಸಬೇಕು ಮತ್ತು ಉಗ್ರವಾದಕ್ಕೆ ಆರ್ಥಿಕ ನೆರವು ತಡೆಯುವಲ್ಲಿ ಯಾವುದೇ ದ್ವಂದ್ವ ನೀತಿಗಳನ್ನು ಸಹಿಸಬಾರದು ಎಂದು ಆಗ್ರಹಿಸಿದ್ದಾರೆ. ಈ ಮೂಲಕ, ಉಗ್ರಪೋಷಕ ಪಾಕಿಸ್ತಾನದ ಪ್ರಧಾನಿ ಶೆಹಬಾಜ್&zwnj; ಷರೀಫ್&zwnj; ಎದುರಲ್ಲೇ ಆ ದೇಶಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. &lt;p&gt;ಜೊತೆಗೆ &lsquo;ಭಯೋತ್ಪಾದನೆಯು ಇಡೀ ಮಾನವಕುಲಕ್ಕೆ ಅತ್ಯಂತ ದೊಡ್ಡ ಸವಾಲಾಗಿದೆ. ಈ ಕ್ರೌರ್ಯದ ವಿರುದ್ಧದ ಹೋರಾಟವನ್ನು ಕೇವಲ ಘಟನೆ ಮತ್ತು ಪ್ರತಿಕ್ರಿಯೆಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಉಗ್ರವಾದವನ್ನು ಪೋಷಿಸುವ ದೇಶಗಳಿಗೆ ಭಯೋತ್ಪಾದನೆ ಎಂದಿಗೂ ಕಾರ್ಯತಂತ್ರದ ಆಸ್ತಿಯಾಗಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನಾವು ತಲುಪಿಸಬೇಕಿದೆ&rsquo; ಎಂದು ಕರೆ ನೀಡಿದರು. &lt;/p&gt;&lsquo;ಭಯೋತ್ಪಾದನೆಗೆ ಹಣಕಾಸು ನೆರವು, ನೇಮಕಾತಿ, ತೀವ್ರಗಾಮಿ ಚಿಂತನೆಗೆ ಪ್ರಚೋದನೆ ಮತ್ತು ಸುರಕ್ಷಿತ ನೆಲೆಗಳನ್ನು ಒದಗಿಸುವ ಸಂಪೂರ್ಣ ವ್ಯವಸ್ಥೆಯನ್ನು ನಾವು ಬುಡಸಮೇತ ಕಿತ್ತೊಗೆಯಬೇಕಿದೆ. ಈ ಬಗ್ಗೆ ನಾವೆಲ್ಲರೂ ಒಕ್ಕೊರಲಿನಿಂದ ಮಾತನಾಡಬೇಕು ಹಾಗೂ ಈ ಗಂಭೀರ ವಿಷಯದಲ್ಲಿ ದ್ವಂದ್ವ ನಿಲುವಿಗೆ ಯಾವುದೇ ಸ್ಥಾನವಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು&rsquo; ಎಂದು ಆಗ್ರಹಿಸಿದರು. &lt;p&gt;ಚೀನಾ ಬಿಆರ್&zwnj;ಐ ಯೋಜನೆಗೆ ಕಿಡಿ:&lt;/p&gt;ಇದೇ ವೇಳೆ ಚೀನಾದ ಬೆಲ್ಟ್ ಆ್ಯಂಡ್ ರೋಡ್ (ಬಿಆರ್&zwnj;ಐ) ಯೋಜನೆಯನ್ನು ಪರೋಕ್ಷವಾಗಿ ಉಲ್ಲೇಖಿಸಿದ ಪ್ರಧಾನಿ, ಪ್ರಾದೇಶಿಕ ಸಂಪರ್ಕ ಹೆಚ್ಚಿಸುವ ಯಾವುದೇ ಯೋಜನೆಗಳಾಗಲಿ, ಅವು ಎಲ್ಲಾ ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಡ್ಡಾಯವಾಗಿ ಗೌರವಿಸಬೇಕು ಎಂದು ಪ್ರತಿಪಾದಿಸಿದರು. &lt;p&gt;=&lt;/p&gt;ಯುದ್ಧದ ಬಗ್ಗೆ ಕಳವಳ: &lt;p&gt;ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಕುರಿತು ಕಳವಳ ವ್ಯಕ್ತಪಡಿಸಿದ ಅವರು, &lsquo;ಒಂದು ಪ್ರದೇಶದಲ್ಲಿನ ಸಂಘರ್ಷವು ಅಲ್ಲಿಗೆ ಮಾತ್ರ ಸೀಮಿತವಾಗಿರದೆ ಇಡೀ ಜಗತ್ತಿನ ಇಂಧನ ಭದ್ರತೆ, ಸಮುದ್ರ ವ್ಯಾಪಾರ ಮತ್ತು ಪೂರೈಕೆ ಜಾಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ಜಾಗತಿಕ ದಕ್ಷಿಣದ ದೇಶಗಳು ಹೆಚ್ಚು ಸಂಕಷ್ಟಕ್ಕೆ ಈಡಾಗುತ್ತವೆ. ಆದ್ದರಿಂದ ಯಾವುದೇ ಯುದ್ಧವನ್ನು ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಬಗೆಹರಿಸಿಕೊಳ್ಳಬೇಕ&rsquo; ಎಂದು ಒತ್ತಾಯಿಸಿದರು.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/sco-must-confront-countries-using-terrorism-as-instrument-of-state-policy-pm-modi/articleshow-pancoka"/>
        </item>
        <item>
            <title><![CDATA[ಇಂದೇ ಚುನಾವಣೆಯಾದ್ರೆ ಎನ್‌ಡಿಎಗೆ 326 ಸ್ಥಾನ!]]></title>
            <link>https://www.kannadaprabha.in/politics-news/if-elections-were-held-today-nda-would-win-326-seats/articleshow-rt81wrw</link>
            <guid isPermaLink="true">https://www.kannadaprabha.in/politics-news/if-elections-were-held-today-nda-would-win-326-seats/articleshow-rt81wrw</guid>
            <pubDate>Fri, 28 Aug 2026 11:59:15 +0530</pubDate>
            <description><![CDATA[&lt;p&gt;ದೇಶದಲ್ಲಿ ಒಂದು ವೇಳೆ ಇಂದೇ ಲೋಕಸಭಾ ಚುನಾವಣೆ ನಡೆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್&zwnj;ಡಿಎ ಮೈತ್ರಿಕೂಟ 326 ಕ್ಷೇತ್ರಗಳಲ್ಲಿ ಭರ್ಜರಿ ಜಯಭೇರಿ ಬಾರಿಸಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಇಂಡಿಯಾ ಟುಡೆ-ಸಿವೋಟರ್&zwnj; ನಡೆಸಿದ &lsquo;ಮೂಡ್&zwnj; ಆಫ್&zwnj; ದಿ ನೇಷನ್&zwnj;&rsquo; ಸಮೀಕ್ಷೆ ತಿಳಿಸಿದೆ.&lt;/p&gt;]]></description>
            <media:content url="https://static-gi.asianetnews.com/images/01m1356d28tyda15rw9zvww2yz/india-today-cvoter-motn-nda-326-bjp-261-congress-106-lok-sabha-election-survey-1787886253128.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ&lt;/strong&gt;: ದೇಶದಲ್ಲಿ ಒಂದು ವೇಳೆ ಇಂದೇ ಲೋಕಸಭಾ ಚುನಾವಣೆ ನಡೆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್&zwnj;ಡಿಎ ಮೈತ್ರಿಕೂಟ 326 ಕ್ಷೇತ್ರಗಳಲ್ಲಿ ಭರ್ಜರಿ ಜಯಭೇರಿ ಬಾರಿಸಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಇಂಡಿಯಾ ಟುಡೆ-ಸಿವೋಟರ್&zwnj; ನಡೆಸಿದ &lsquo;ಮೂಡ್&zwnj; ಆಫ್&zwnj; ದಿ ನೇಷನ್&zwnj;&rsquo; ಸಮೀಕ್ಷೆ ತಿಳಿಸಿದೆ.&lt;/p&gt;&lt;p&gt;ಪ್ರಧಾನಿ ಮೋದಿ ಅವರ ನಾಯಕತ್ವದ ಮೇಲೆ ದೇಶದ ಜನತೆಗೆ ಇರುವ ವಿಶ್ವಾಸ ಇನ್ನೂ ಭದ್ರವಾಗಿದೆ ಎಂಬುದನ್ನು ಸಮೀಕ್ಷೆ ಸ್ಪಷ್ಟಪಡಿಸಿದೆಯಾದರೂ, ಕಳೆದ ಸಮೀಕ್ಷೆಗೆ ಹೋಲಿಸಿದರೆ ಎನ್&zwnj;ಡಿಎ ಸ್ಥಾನಗಳಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಕಳೆದ ಜನವರಿಯಲ್ಲಿ ನಡೆದಿದ್ದ ಸಮೀಕ್ಷೆಯಲ್ಲಿ ಎನ್&zwnj;ಡಿಎಗೆ 352 ಸ್ಥಾನಗಳನ್ನು ಅಂದಾಜಿಸಲಾಗಿತ್ತು. ಇದೀಗ 26 ಸೀಟುಗಳ ಕುಸಿತದೊಂದಿಗೆ 326 ಸ್ಥಾನಗಳನ್ನು ಅಂದಾಜಿಸಲಾಗಿದೆ.&lt;/p&gt;&lt;h2&gt;&lt;strong&gt;ಏಕಾಂಗಿ ಬಿಜೆಪಿಗೆ 261:&lt;/strong&gt;&lt;/h2&gt;&lt;p&gt;ಪಕ್ಷವಾರು ಲೆಕ್ಕಾಚಾರದಲ್ಲಿ ಬಿಜೆಪಿ ಏಕಾಂಗಿಯಾಗಿ 261 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಜನವರಿಯ ಸಮೀಕ್ಷೆಯಲ್ಲಿ ಬಿಜೆಪಿಗೆ 287 ಸ್ಥಾನಗಳನ್ನು ಅಂದಾಜಿಸಲಾಗಿತ್ತು. ಇತ್ತೀಚೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಎದುರಾದ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಸುದೀರ್ಘ ಪ್ರತಿಭಟನೆಗಳು ಆಡಳಿತಾರೂಢ ಬಿಜೆಪಿಯ ಜನಪ್ರಿಯತೆ ಮೇಲೆ ಕೊಂಚ ಪ್ರಭಾವ ಬೀರಿವೆ.&lt;/p&gt;&lt;h3&gt;&lt;strong&gt;ಇಂಡಿಯಾ ಕೂಟಕ್ಕೆ 185:&lt;/strong&gt;&lt;/h3&gt;&lt;p&gt;ಇಂದೇ ಚುನಾವಣೆ ನಡೆದರೆ ಕಾಂಗ್ರೆಸ್&zwnj; ನೇತೃತ್ವದ ಇಂಡಿಯಾ ಮೈತ್ರಿಕೂಟವು 185 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ. ಕಳೆದ ಜನವರಿಯ ಸಮೀಕ್ಷೆಯಲ್ಲಿ 182 ಸ್ಥಾನಗಳನ್ನು ಅಂದಾಜಿಸಲಾಗಿತ್ತು. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಇಂಡಿಯಾ ಕೂಟ ಭರ್ಜರಿ 234 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆ ಸಂಖ್ಯೆಗೆ ಹೋಲಿಸಿದರೆ ಇಂದಿನ ಅಂದಾಜು ತೀರಾ ಕಮ್ಮಿ.&lt;/p&gt;&lt;p&gt;ಕಾಂಗ್ರೆಸ್&zwnj;ಗೆ 106 ಸ್ಥಾನ:&lt;/p&gt;&lt;p&gt;ಮತ್ತೊಂದೆಡೆ, ವಿಪಕ್ಷ ಕಾಂಗ್ರೆಸ್ ತನ್ನ ಸ್ಥಾನಗಳಲ್ಲಿ ಗಮನಾರ್ಹ ಚೇತರಿಕೆ ಕಂಡುಕೊಂಡಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೊಸ ತಂತ್ರಗಾರಿಕೆಗಳ ಫಲವಾಗಿ ಪಕ್ಷವು 106 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ. ಕಳೆದ ಜನವರಿ ಸಮೀಕ್ಷೆಯಲ್ಲಿ ಕಾಂಗ್ರೆಸ್&zwnj;ಗೆ 80 ಸ್ಥಾನಗಳಷ್ಟೇ ಅಂದಾಜಿಸಲಾಗಿತ್ತು.&lt;/p&gt;&lt;p&gt;ಆಗಸ್ಟ್ 2026ರ ಈ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯನ್ನು ಸಿವೋಟರ್ ಸಂಸ್ಥೆಯು ದೇಶಾದ್ಯಂತ ಜು.1ರಿಂದ ಆ.25ರ ನಡುವೆ 25,184 ಜನರ ನೇರ ಅಭಿಪ್ರಾಯ ಸಂಗ್ರಹಿಸಿ ಸಿದ್ಧಪಡಿಸಿದೆ. ಇದರೊಂದಿಗೆ ಕಳೆದ 6 ತಿಂಗಳಿನಲ್ಲಿ ನಡೆಸಲಾದ ಸುಮಾರು 91,000ಕ್ಕೂ ಹೆಚ್ಚು ಸಂದರ್ಶನಗಳ ಡೇಟಾವನ್ನೂ ಈ ವಿಶ್ಲೇಷಣೆಗೆ ಬಳಸಿಕೊಳ್ಳಲಾಗಿದೆ. ವಿರೋಧ ಪಕ್ಷಗಳು ತಮ್ಮ ನೆಲೆಯನ್ನು ಕೊಂಚ ವಿಸ್ತರಿಸಿಕೊಳ್ಳುತ್ತಿದ್ದರೂ, ಕೇಂದ್ರದಲ್ಲಿ ಮೋದಿ ನೇತೃತ್ವದ ಆಡಳಿತಕ್ಕೆ ಸದ್ಯಕ್ಕೆ ಯಾವುದೇ ಪ್ರಬಲ ತಡೆಗಳಿಲ್ಲ ಎಂಬುದನ್ನು ಈ ಫಲಿತಾಂಶ ತೋರಿಸಿದೆ.&lt;/p&gt;&lt;p&gt;ಪ್ರಧಾನಿ ರೇಸ್&zwnj;ನಲ್ಲಿ ವಿಜಯ್&zwnj; ನಂ.3!&lt;/p&gt;&lt;p&gt;ಇಂಡಿಯಾ ಟುಡೇ - ಸಿವೋಟರ್ ಸಮೀಕ್ಷೆಯ ಪ್ರಕಾರ, ದೇಶದ ಮುಂದಿನ ಪ್ರಧಾನಿ ಅಭ್ಯರ್ಥಿ ರೇಸ್&zwnj;ನಲ್ಲಿ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ (ಶೇ.48.7) ಮೊದಲ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ಶೇ. 27.1) 2ನೇ ಸ್ಥಾನದಲ್ಲಿದ್ದಾರೆ. ಅಚ್ಚರಿಯ ರೀತಿಯಲ್ಲಿ, ಇತ್ತೀಚೆಗಷ್ಟೇ ರಾಜಕೀಯ ಪ್ರವೇಶಿಸಿ ತಮಿಳುನಾಡಿನ ಮುಖ್ಯಮಂತ್ರಿಯಾಗಿರುವ ಸಿ. ಜೋಸೆಫ್ ವಿಜಯ್ ಶೇ.9.2ರಷ್ಟು ಮತಗಳೊಂದಿಗೆ 3ನೇ ಅತ್ಯಂತ ಜನಪ್ರಿಯ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಮತ್ತು ಅರವಿಂದ್ ಕೇಜ್ರಿವಾಲ್ ಅವರಂತಹ ನಾಯಕರನ್ನೇ ಹಿಂದಿಕ್ಕಿ ವಿಜಯ್ 3ನೇ ಸ್ಥಾನಕ್ಕೇರಿರುವುದು ಗಮನ ಸೆಳೆದಿದೆ.&lt;/p&gt;&lt;p&gt;ಸಮೀಕ್ಷೆ&lt;/p&gt;&lt;p&gt;ಕೂಟ ಸ್ಥಾನ&lt;/p&gt;&lt;p&gt;ಎನ್&zwnj;ಡಿಎ 326&lt;/p&gt;&lt;p&gt;ಇಂಡಿಯಾ 185&lt;/p&gt;&lt;p&gt;ಇತರರು 32&lt;/p&gt;]]></content:encoded>
            <category>India</category>
            <dc:creator>Sujatha NR</dc:creator>
            <atom:link href="https://www.kannadaprabha.in/politics-news/if-elections-were-held-today-nda-would-win-326-seats/articleshow-rt81wrw"/>
        </item>
        <item>
            <title><![CDATA[ಪ್ರಧಾನಿ ಮೋದಿಗೆ ಉಜ್ಬೇಕ್‌ ಅತ್ಯುನ್ನತ ಪ್ರಶಸ್ತಿ ಪ್ರದಾನ]]></title>
            <link>https://www.kannadaprabha.in/india-news/pm-modi-conferred-with-uzbekistan-s-prestigious-order-of-oliy-darajali-do-stlik/articleshow-rzsaaw4</link>
            <guid isPermaLink="true">https://www.kannadaprabha.in/india-news/pm-modi-conferred-with-uzbekistan-s-prestigious-order-of-oliy-darajali-do-stlik/articleshow-rzsaaw4</guid>
            <pubDate>Mon, 31 Aug 2026 01:45:00 +0530</pubDate>
            <description><![CDATA[2 ದಿನಗಳ ಭೇಟಿಗಾಗಿ ಮಧ್ಯ ಏಷ್ಯಾ ರಾಷ್ಟ್ರವಾದ ಉಜ್ಬೇಕಿಸ್ತಾನಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಅತ್ಯುನ್ನತ ಪ್ರಶಸ್ತಿಯಾದ &lsquo;ಒಲಿಯ್&zwnj; ದರಜಾಲಿ ದೋಸ್ತ್&zwnj;ಲಿಕ್&zwnj;&rsquo; (ಉನ್ನತ ದರ್ಜೆಯ ಸ್ನೇಹ) ನೀಡಿ ಗೌರವಿಸಲಾಗಿದೆ. ಅಧ್ಯಕ್ಷ ಶವ್ಕತ್ ಮಿರ್ಜಿಯೊಯೆವ್ ಪ್ರದಾನ ಮಾಡಿರುವ ಈ ಪ್ರಶಸ್ತಿಯು, ಮೋದಿಯವರಿಗೆ ದೊರಕಿರುವ 36ನೇ ಅಂತಾರಾಷ್ಟ್ರೀಯ ಪ್ರಶಸ್ತಿಯಾಗಿದೆ.]]></description>
            <media:content url="https://static-assets.asianetnews.com/kp/json/30082026/pictures/MODI_518.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತಾಷ್ಕೆಂಟ್&zwnj;&lt;/strong&gt;: 2 ದಿನಗಳ ಭೇಟಿಗಾಗಿ ಮಧ್ಯ ಏಷ್ಯಾ ರಾಷ್ಟ್ರವಾದ ಉಜ್ಬೇಕಿಸ್ತಾನಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಅತ್ಯುನ್ನತ ಪ್ರಶಸ್ತಿಯಾದ &lsquo;ಒಲಿಯ್&zwnj; ದರಜಾಲಿ ದೋಸ್ತ್&zwnj;ಲಿಕ್&zwnj;&rsquo; (ಉನ್ನತ ದರ್ಜೆಯ ಸ್ನೇಹ) ನೀಡಿ ಗೌರವಿಸಲಾಗಿದೆ. ಅಧ್ಯಕ್ಷ ಶವ್ಕತ್ ಮಿರ್ಜಿಯೊಯೆವ್ ಪ್ರದಾನ ಮಾಡಿರುವ ಈ ಪ್ರಶಸ್ತಿಯು, ಮೋದಿಯವರಿಗೆ ದೊರಕಿರುವ 36ನೇ ಅಂತಾರಾಷ್ಟ್ರೀಯ ಪ್ರಶಸ್ತಿಯಾಗಿದೆ. ಇದನ್ನು ಭಾರತ ಮತ್ತು ಉಜ್ಬೇಕ್&zwnj;ನ ಸ್ನೇಹಕ್ಕೆ ಅರ್ಪಿಸುವುದಾಗಿ ಮೋದಿ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಹಲವು ಒಪ್ಪಂದ&lt;/strong&gt;:&lt;/h2&gt;&lt;p&gt;ಮೋದಿ ಉಜ್ಬೇಕ್&zwnj; ಭೇಟಿ ವೇಳೆ ಉಭಯ ದೇಶಗಳು ಹಲವು ಮಹತ್ವದ ಒಪ್ಪಂದಗಳಿಗೆ ಸಹಿಹಾಕಿವೆ. 2023ರ ಹೊತ್ತಿಗೆ ಉಭಯ ದೇಶಗಳ ವಾರ್ಷಿಕ ವ್ಯಾಪಾರವನ್ನು ಸದ್ಯ ಇರುವ 9,538 ಕೋಟಿ ರು.ನಿಂದ 47,690 ಕೋಟಿ ರು.ಗೆ ಏರಿಸುವುದು, ನಾಗರಿಕ ಪರಮಾಣು ಇಂಧನ ವಲಯದಲ್ಲಿನ ಸಹಕಾರದ ಭಾಗವಾಗಿ ಉಜ್ಬೇಕಿಸ್ತಾನದಿಂದ ಭಾರತಕ್ಕೆ ದೀರ್ಘಕಾಲೀನ ಯುರೇನಿಯಂ ಪೂರೈಕೆಯಂತಹ ಒಡಂಬಡಿಕೆಗಳು ಏರ್ಪಟ್ಟಿವೆ.&lt;/p&gt;&lt;h3&gt;ಶಿಕ್ಷಣ ಕ್ಷೇತ್ರಗಳಲ್ಲಿನ ಸಹಕಾರಕ್ಕೆ ಸಂಬಂಧಿಸಿದ ಒಪ್ಪಂದ&lt;/h3&gt;&lt;p&gt;ಜತೆಗೆ, ವ್ಯಾಪಾರ, ಹೂಡಿಕೆ, ಮೂಲಸೌಕರ್ಯ, ನಿರ್ಣಾಯಕ ಖನಿಜಗಳು, ಗಣಿಗಾರಿಕೆ, ರಕ್ಷಣೆ ಮತ್ತು ಭದ್ರತೆ, ಕೃಷಿ, ಔಷಧೀಯ ವಲಯ, ಆರೋಗ್ಯ, ಮಾಹಿತಿ ತಂತ್ರಜ್ಞಾನ, ಯುಪಿಐ ಸೇರಿದಂತೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿನ ಸಹಕಾರಕ್ಕೆ ಸಂಬಂಧಿಸಿದ ಒಪ್ಪಂದಗಳಿಗೂ ಅಂಕಿತ ಹಾಕಲಾಗಿದೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/pm-modi-conferred-with-uzbekistan-s-prestigious-order-of-oliy-darajali-do-stlik/articleshow-rzsaaw4"/>
        </item>
        <item>
            <title><![CDATA[₹22,000 ಕೋಟಿ ಸಾಲಕ್ಕೆ ಝೀ ಗ್ರೂಪ್‌ ಸಂಸ್ಥಾಪಕನಿಂದ ₹6 ಕೋಟಿ ವಸೂಲಿ!]]></title>
            <link>https://www.kannadaprabha.in/india-news/subhash-chandra-rs-22-000-crore-insolvency-case-why-nclt-approved-only-3-paise-for-every-rs-100-claimed/articleshow-saa13xr</link>
            <guid isPermaLink="true">https://www.kannadaprabha.in/india-news/subhash-chandra-rs-22-000-crore-insolvency-case-why-nclt-approved-only-3-paise-for-every-rs-100-claimed/articleshow-saa13xr</guid>
            <pubDate>Fri, 28 Aug 2026 04:30:00 +0530</pubDate>
            <description><![CDATA[&lt;p&gt;ಝೀ ಗ್ರೂಪ್&zwnj; ಸಂಸ್ಥಾಪಕ, ಉದ್ಯಮಿ ಸುಭಾಷ್&zwnj; ಚಂದ್ರ ಅವರ ವೈಯಕ್ತಿಕ ದಿವಾಳಿತನ ಪ್ರಕರಣದಲ್ಲಿ 22 ಸಾವಿರ ಕೋಟಿ ರು. ಸಾಲಕ್ಕೆ ಪ್ರತಿಯಾಗಿ 6.5 ಕೋಟಿ ರು. ಅಷ್ಟೇ ವಸೂಲಿ ಮಾಡುವ ಪ್ರಸ್ತಾಪಕ್ಕೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್&zwnj;ಸಿಎಲ್&zwnj;ಟಿ) ಒಪ್ಪಿಗೆ ನೀಡಿದೆ.&lt;/p&gt;]]></description>
            <media:content url="https://static-assets.asianetnews.com/kp/json/27082026/pictures/SUBASJ_478.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ&lt;/strong&gt;: ಝೀ ಗ್ರೂಪ್&zwnj; ಸಂಸ್ಥಾಪಕ, ಉದ್ಯಮಿ ಸುಭಾಷ್&zwnj; ಚಂದ್ರ ಅವರ ವೈಯಕ್ತಿಕ ದಿವಾಳಿತನ ಪ್ರಕರಣದಲ್ಲಿ 22 ಸಾವಿರ ಕೋಟಿ ರು. ಸಾಲಕ್ಕೆ ಪ್ರತಿಯಾಗಿ 6.5 ಕೋಟಿ ರು. ಅಷ್ಟೇ ವಸೂಲಿ ಮಾಡುವ ಪ್ರಸ್ತಾಪಕ್ಕೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್&zwnj;ಸಿಎಲ್&zwnj;ಟಿ) ಒಪ್ಪಿಗೆ ನೀಡಿದ್ದು, ಇದು ಭಾರೀ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;ಯೋಜನೆಯಡಿ 22 ಸಾವಿರ ಕೋಟಿ ರು. ಸಾಲದ ಬದಲು ಸಾಲ ನೀಡಿದ ಬ್ಯಾಂಕ್&zwnj;, ಹಣಕಾಸು ಕಂಪನಿಗಳಿಗೆ ಕೇವಲ 6.5 ಕೋಟಿ ರು.(ಉಳಿದ ವೆಚ್ಚ ಪ್ರತ್ಯೇಕ) ಅಷ್ಟೇ ವಸೂಲಿ ಆಗಲಿದೆ. ಸರಳವಾಗಿ ಹೇಳಬೇಕೆಂದರೆ ಬ್ಯಾಂಕ್&zwnj;ಗಳು ನೀಡಿದ ಪ್ರತಿ 100 ರು. ಸಾಲದಲ್ಲಿ ಕೇವಲ ಮೂರು ಪೈಸೆಯಷ್ಟೇ ವಾಪಸ್ ಆಗಲಿದೆ.&lt;/p&gt;&lt;h2&gt;ಏಕೆ ಈ ಯೋಜನೆಗೆ ಒಪ್ಪಿಗೆ?:&lt;/h2&gt;&lt;p&gt;ಪ್ರಕರಣದಲ್ಲಿ ಎನ್&zwnj;ಸಿಎಲ್&zwnj;ಟಿಯ ಇಬ್ಬರು ಸದಸ್ಯರು ವಿಭಜಿತ ಆದೇಶ ನೀಡಿದ್ದು, ಈ ಹಿನ್ನೆಲೆಯಲ್ಲಿ ಈ ವಿಚಾರವನ್ನು ಮೂರನೇ ಸದಸ್ಯರಾದ ನೀಲೇಶ್&zwnj; ಶರ್ಮಾ ಅವರಿಗೆ ವಹಿಸಲಾಯಿತು. ಶರ್ಮಾ ಅವರು ದಿವಾಳಿತನ ಮತ್ತು ದಿವಾಳಿತನ ಸಂಹಿತೆಯ ಸೆಕ್ಷನ್&zwnj; 114ರ ಅಡಿ ಸಾಲ ಮರುಪಾವತಿಯ ಈ ಯೋಜನೆಗೆ ಅನುಮೋದನೆ ನೀಡಿದರು.&lt;/p&gt;&lt;h3&gt;ಅಷ್ಟೊಂದು ಕಡಿಮೆ ಮೊತ್ತಕ್ಕೆ ಒಪ್ಪಿಗೆ ಹೇಗೆ?:&lt;/h3&gt;&lt;p&gt;ಸುಭಾಷ್&zwnj; ಚಂದ್ರ ಅವರ ವೈಯಕ್ತಿಕ ಆಸ್ತಿ ಮೌಲ್ಯ ತೀರಾ ಕಡಿಮೆ ಇರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಪ್ರಸ್ತಾಪಕ್ಕೆ ಸಾಲ ನೀಡಿರುವ ಎಲ್&zwnj;ಐಸಿ ಹೌಸಿಂಗ್&zwnj; ಫೈನಾನ್ಸ್&zwnj;, ಆರ್&zwnj;ಬಿಎಲ್&zwnj;, ಐಡಿಬಿಐ ಸೇರಿ ಸುಭಾಷ್&zwnj;ಚಂದ್ರ ಅವರಿಗೆ ಸಾಲ ನೀಡಿದ ಹಲವು ಕಂಪನಿಗಳು, ಬ್ಯಾಂಕ್&zwnj;ಗಳು ವಿರೋಧ ವ್ಯಕ್ತಪಡಿಸಿವೆ. ಆದರೆ ಈ ದಿವಾಳಿತನ ಯೋಜನೆ ವಿರೋಧಿಸುವ ಸಾಲಗಾರರ ಮತದಾನ ಪ್ರಮಾಣ ಶೇ.20ಕ್ಕಿಂತ ಕಡಿಮೆ ಇದ್ದ ಹಿನ್ನೆಲೆಯಲ್ಲಿ 6.5 ಕೋಟಿ ರು. ಸಾಲ ಮರುಪಾವತಿ ಯೋಜನೆಗೆ ಈಗ ಅನುಮೋದನೆ ಸಿಕ್ಕಿದೆ.&lt;/p&gt;&lt;p&gt;ಇಂಡಿಯಾಬುಲ್ಸ್&zwnj; ಹೌಸಿಂಗ್&zwnj; ಫೈನಾನ್ಸ್&zwnj; ಕಂಪನಿಯು ಕೆಲ ಕಂಪನಿಗಳಿಗೆ 726 ಕೋಟಿ ರು. ಸಾಲ ನೀಡಿತ್ತು. ಸುಭಾಷ್&zwnj;ಚಂದ್ರ ಅವರು ಈ ಸಾಲಕ್ಕೆ ಪ್ರತಿಯಾಗಿ ಗ್ಯಾರಂಟಿ ನೀಡಿದ್ದರು. ಯಾವಾಗ ಕಂಪನಿ ಸಾಲ ಮರುಪಾವತಿಯಲ್ಲಿ ವಿಫಲವಾಯಿತೋ ಆಗ 2022ರಲ್ಲಿ ಸುಭಾಷ್&zwnj;ಚಂದ್ರ ವಿರುದ್ಧ ಕಾನೂನು ಕ್ರಮ ಆರಂಭಿಸಿತು. 2024ರಿಂದಲೂ ಈ ಪ್ರಕರಣ ಎನ್&zwnj;ಸಿಎಲ್&zwnj;ಟಿ ಮುಂದಿದೆ. ಬ್ಯಾಂಕ್&zwnj;ಗಳು ಮೂಲ ಸಾಲದಾತರಿಂದ ಬಾಕಿ ವಸೂಲಿ ಮಾಡಲು ಅವಕಾಶವಿದೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/subhash-chandra-rs-22-000-crore-insolvency-case-why-nclt-approved-only-3-paise-for-every-rs-100-claimed/articleshow-saa13xr"/>
        </item>
        <item>
            <title><![CDATA[ಮಂಗಳೂರು ವಲಯ ಮೈಸೂರಿಗೆ ಗ್ಯಾರಂಟಿ- ಸಚಿವ ವೈಷ್ಣವ್‌ ಮಾಹಿತಿ: ಕೈ ಸಂಸದ]]></title>
            <link>https://www.kannadaprabha.in/india-news/mangaluru-divisions-merger-with-mysuru-is-guaranteed-minister-vaishnaw-tells-congress-mp/articleshow-san0bpg</link>
            <guid isPermaLink="true">https://www.kannadaprabha.in/india-news/mangaluru-divisions-merger-with-mysuru-is-guaranteed-minister-vaishnaw-tells-congress-mp/articleshow-san0bpg</guid>
            <pubDate>Sat, 29 Aug 2026 08:31:27 +0530</pubDate>
            <description><![CDATA[&lt;p&gt;ಕೇರಳದ ಪಾಲಕ್ಕಾಡ್&zwnj; ರೈಲು ವಿಭಾಗದಿಂದ ಮಂಗಳೂರು ಹಾಗೂ ಕರ್ನಾಟಕದ ಕೆಲವು ರೈಲ್ವೆ ನಿಲ್ದಾಣ/ಮಾರ್ಗಗಳನ್ನು ಪ್ರತ್ಯೇಕಿಸಿ ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಸೇರಿಸಿದ್ದನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್&zwnj; ಸ್ಪಷ್ಟಪಡಿಸಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/01m15j2ca85snz8nxyqc6kyn52/mangaluru-railway-station-1787966861640.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತಿರುವನಂತಪುರಂ:&lt;/strong&gt; ಕೇರಳದ ಪಾಲಕ್ಕಾಡ್&zwnj; ರೈಲು ವಿಭಾಗದಿಂದ ಮಂಗಳೂರು ಹಾಗೂ ಕರ್ನಾಟಕದ ಕೆಲವು ರೈಲ್ವೆ ನಿಲ್ದಾಣ/ಮಾರ್ಗಗಳನ್ನು ಪ್ರತ್ಯೇಕಿಸಿ ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಸೇರಿಸಿದ್ದನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್&zwnj; ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;- ಹೀಗಂತ ಕೇರಳದ ಕಾಂಗ್ರೆಸ್&zwnj; ಸಂಸದ ಕೋಡಿಕುನ್ನಿಲ್ ಸುರೇಶ್ ಶುಕ್ರವಾರ ತಿಳಿಸಿದ್ದಾರೆ.&lt;/p&gt;&lt;p&gt;ಪತ್ರಕರ್ತರ ಜತೆ ಮಾತನಾಡಿದ ಸುರೇಶ್&zwnj;, &lsquo;ಪಾಲಕ್ಕಾಡ್ ರೈಲ್ವೆ ವಿಭಾಗದ ಪ್ರಸ್ತಾವಿತ ಪುನರ್ವಿಂಗಡಣೆಯ ಕುರಿತು ಇಂದು ಬೆಳಿಗ್ಗೆ ನಾನು ರೈಲ್ವೆ ಸಚಿವರೊಂದಿಗೆ ಮಾತನಾಡಿದೆ. ವಿಲೀನವನ್ನು ಪುನರ್ವಿಮರ್ಶಿಸಲು ಮತ್ತು ಮರುಪರಿಶೀಲಿಸಲು ಕೋರಿದೆ. ಈ ಬಗ್ಗೆ ಕೇರಳ ಸಂಸದರ ಸಭೆ ಕರೆದು ಮಾತನಾಡಬೇಕು ಎಂದೂ ಕೋರಿದೆ ಆದರೆ ದುರದೃಷ್ಟವಶಾತ್, ರೈಲ್ವೆ ಸಚಿವರು ಆಡಳಿತಾತ್ಮಕ ಮತ್ತು ಅಭಿವೃದ್ಧಿ ದೃಷ್ಟಿಕೋನದಿಂದ ಈ ವಿಲೀನ ಅಗತ್ಯ ಮತ್ತು ಅನಿವಾರ್ಯ ಎಂದು ಉತ್ತರಿಸಿದರು&rsquo; ಎಂದರು.&lt;/p&gt;&lt;h2&gt;ಕೇರಳಕ್ಕೆ ಅನ್ಯಾಯ:&lt;/h2&gt;&lt;p&gt;ಇದೇ ವೇಳೆ, &lsquo;ಕೇರಳ ಸರ್ಕಾರವು ಕೋಚ್ ಕಾರ್ಖಾನೆ ಸ್ಥಾಪಿಸಲು 200 ಎಕರೆ ಭೂಮಿಯನ್ನು ಗುರುತಿಸಿತ್ತು. ಆದರೆ ರೈಲ್ವೆ ಇಲಾಖೆ ಆ ಕೋಚ್ ಕಾರ್ಖಾನೆ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿದೆ ಹಾಗೂ ಭರವಸೆಯಿಂದ ಹಿಂದೆ ಸರಿದಿದೆ. ಈಗ, ಯಾವುದೇ ಭರವಸೆಗಳಿಲ್ಲದೆ, ರೈಲ್ವೆ ಸಚಿವಾಲಯವು ಮಂಗಳೂರು ವಿಭಾಗವನ್ನು ಮೈಸೂರು ವಿಭಾಗಕ್ಕೆ ವಿಲೀನಗೊಳಿಸಲು ನಿರ್ಧರಿಸಿದೆ&rsquo; ಎಂದು ಬೇಸರ ವ್ಯಕ್ತಪಡಿಸಿದರು.==&lt;/p&gt;&lt;h3&gt;ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ ನಿಂತ್ರೂ ಮಂಗ್ಳೂರು ಬಿಡಲ್ಲ&lt;/h3&gt;&lt;p&gt;ಕೇರಳದಲ್ಲಿ ಎಲ್ಲ ವಿರೋಧ ಪಕ್ಷದವರು ಸಹ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಮಾತನಾಡುವವರು ಮಾತನಾಡಲಿ. ಅಲ್ಲಿ ಎಲ್ಲಾ ಪಕ್ಷದವರು ನನ್ನ ವಿರುದ್ಧ ಬಟ್ಟೆ ಬಿಚ್ಚಿ ನಿಂತ್ಕೊಂಡು ಮಾತನಾಡಿದರೂ ಅಷ್ಟೇ. ಮಂಗಳೂರು ರೈಲ್ವೆ ವಲಯ ಮೈಸೂರಿನ ಕೈತಪ್ಪಲ್ಲ.&lt;/p&gt;&lt;p&gt;ವಿ.ಸೋಮಣ್ಣ, ರೈಲ್ವೆ ಖಾತೆ ರಾಜ್ಯ ಸಚಿವ&lt;/p&gt;]]></content:encoded>
            <category>India</category>
            <dc:creator>Sujatha NR</dc:creator>
            <atom:link href="https://www.kannadaprabha.in/india-news/mangaluru-divisions-merger-with-mysuru-is-guaranteed-minister-vaishnaw-tells-congress-mp/articleshow-san0bpg"/>
        </item>
        <item>
            <title><![CDATA[ಮಹಿಳೆಯರು ಮನೆಯಿಂದ ಹೊರಬರಬಾರದು: ಇಸ್ಲಾಂ ಧರ್ಮಗುರು]]></title>
            <link>https://www.kannadaprabha.in/india-news/kanthapuram-over-remarks-on-women-staying-confined-to-homes/articleshow-ti7vryq</link>
            <guid isPermaLink="true">https://www.kannadaprabha.in/india-news/kanthapuram-over-remarks-on-women-staying-confined-to-homes/articleshow-ti7vryq</guid>
            <pubDate>Tue, 01 Sep 2026 04:30:00 +0530</pubDate>
            <description><![CDATA[&lt;p&gt;&lsquo;ಮಹಿಳೆಯರು ಮನೆಯಲ್ಲೇ ಇರಬೇಕು. ಅವರು ಸಾರ್ವಜನಿಕ ಜೀವನವನ್ನು ಪ್ರವೇಶಿಸುವುದು ಪವಿತ್ರ ಕುರಾನ್&zwnj; ಪ್ರಕಾರ ನಿಷಿದ್ಧ&rsquo; ಎಂದು ಕೇರಳದ ಪ್ರಸಿದ್ಧ ಮುಸ್ಲಿಂ ಧರ್ಮಗುರು ಕಾಂತಪುರಂ ಎ.ಪಿ. ಅಬೂಬಕ್ಕರ್&zwnj; ಮುಸ್ಲಿಯಾರ್&zwnj; ಹೇಳಿದ್ದಾರೆ. ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ.&lt;/p&gt;]]></description>
            <media:content url="https://static-assets.asianetnews.com/kp/json/31082026/pictures/MUSLIYAR_66.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಚ್ಚಿ: &lt;/strong&gt;&lsquo;ಮಹಿಳೆಯರು ಮನೆಯಲ್ಲೇ ಇರಬೇಕು. ಅವರು ಸಾರ್ವಜನಿಕ ಜೀವನವನ್ನು ಪ್ರವೇಶಿಸುವುದು ಪವಿತ್ರ ಕುರಾನ್&zwnj; ಪ್ರಕಾರ ನಿಷಿದ್ಧ&rsquo; ಎಂದು ಕೇರಳದ ಪ್ರಸಿದ್ಧ ಮುಸ್ಲಿಂ ಧರ್ಮಗುರು ಕಾಂತಪುರಂ ಎ.ಪಿ. ಅಬೂಬಕ್ಕರ್&zwnj; ಮುಸ್ಲಿಯಾರ್&zwnj; ಹೇಳಿದ್ದಾರೆ. ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ.&lt;/p&gt;&lt;h2&gt;ಕೊಚ್ಚಿಯಲ್ಲಿ ನಡೆದ ಇಸ್ಲಾಮಿಕ್&zwnj; ಸಮ್ಮೇಳನ&lt;/h2&gt;&lt;p&gt;ಕೊಚ್ಚಿಯಲ್ಲಿ ನಡೆದ ಇಸ್ಲಾಮಿಕ್&zwnj; ಸಮ್ಮೇಳನವೊಂದರಲ್ಲಿ ಮಾತನಾಡಿದ ಅವರು, &lsquo;ಸ್ತ್ರೀಯರು ತಮ್ಮ ಮನೆಗೆ ಸೀಮಿತವಾಗಿರಬೇಕು. ಅವರ ಸಾರ್ವಜನಿಕ ಜೀವನಕ್ಕೆ ಬರಬಾರದು ಎಂದು ಕುರಾನ್&zwnj; ಹೇಳುತ್ತದೆ. ಈ ನಿಯಮ ಮಹಿಳೆಯರನ್ನು ಹತ್ತಿಕ್ಕುವ ಸಲುವಾಗಿ ಇರುವುದಲ್ಲ, ಬದಲಾಗಿ ಅವರ ಗೌರವ ಮತ್ತು ರಕ್ಷಣೆಗಾಗಿ ಇದೆ.&lt;/p&gt;&lt;h3&gt;ಸಾರ್ವಜನಿಕ ಜೀವನಕ್ಕೆ ಮಹಿಳೆಯರನ್ನು ತರುವುದು ಮಹಾನ್ ವಿನಾಶಕ್ಕೆ ಕಾರಣ&lt;/h3&gt;&lt;p&gt;ಸಾರ್ವಜನಿಕ ಜೀವನಕ್ಕೆ ಮಹಿಳೆಯರನ್ನು ತರುವುದು ಮಹಾನ್ ವಿನಾಶಕ್ಕೆ ಕಾರಣವಾಗುತ್ತದೆ. ಸ್ತ್ರೀಯರು ನೆಕ್ಲೇಸ್&zwnj; ಇದ್ದಂತೆ. ನೆಕ್ಲೇಸ್&zwnj; ತನ್ನ ಸೌಂದರ್ಯವನ್ನು ಉಳಿಸಿಕೊಳ್ಳಬೇಕಾದರೆ, ಅದನ್ನು ಪೆಟ್ಟಿಗೆಯೊಳಗೆ ಸುರಕ್ಷಿತವಾಗಿ ಇಡಬೇಕು&rsquo; ಎಂದಿದ್ದಾರೆ. ಕಾಂತಪುರಂ ಹೇಳಿಕೆಗೆ ಸಿಪಿಎಂ ನಾಯಕಿ ಹಾಗೂ ಅಖಿಲ ಭಾರತ ಜನತಾಂತ್ರಿಕ ಮಹಿಳಾ ಸಂಘದ ಸದಸ್ಯೆ ಪಿ.ಕೆ. ಶ್ರೀಮತಿ ಕಿಡಿ ಕಾರಿದ್ದಾರೆ. &lsquo;ಮತ್ತೊಮ್ಮೆ ಮಹಿಳಾ ದ್ವೇಷವನ್ನು ಕಾರಲಾಗುತ್ತಿದೆ. ಇಂತಹ ಹೇಳಿಕೆಗಳನ್ನು ಕೇವಲ ಮುಪ್ಪಿನ ಬಡಬಡಿಕೆ ಎಂದು ತಳ್ಳಿಹಾಕಿದರೆ, ಇತಿಹಾಸವು ಆಧುನಿಕ ಕೇರಳವನ್ನು ಕ್ಷಮಿಸುವುದಿಲ್ಲ&rsquo; ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/kanthapuram-over-remarks-on-women-staying-confined-to-homes/articleshow-ti7vryq"/>
        </item>
        <item>
            <title><![CDATA[ಮಂಗಳೂರು ರೈಲು ನಿಲ್ದಾಣಕ್ಕೂ ಬಂದಿದೆ ಕುತ್ತು]]></title>
            <link>https://www.kannadaprabha.in/india-news/mangaluru-railway-station-also-faces-a-threat/articleshow-umbq94d</link>
            <guid isPermaLink="true">https://www.kannadaprabha.in/india-news/mangaluru-railway-station-also-faces-a-threat/articleshow-umbq94d</guid>
            <pubDate>Thu, 27 Aug 2026 05:19:06 +0530</pubDate>
            <description><![CDATA[&lt;p&gt;ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಇದ್ದರೂ ಕಾಸರಗೋಡು ಕರ್ನಾಟಕದ ಕೈತಪ್ಪಿ ಕೇರಳಂ ಪಾಲಾಗಿದ್ದಾಯ್ತು. ಇದೀಗ, 3 ದಶಕಗಳ ಹೋರಾಟದ ಫಲವಾಗಿ ಕರ್ನಾಟಕಕ್ಕೆ ದಕ್ಕಿರುವ ಮಂಗಳೂರು ರೈಲ್ವೆ ವಲಯವನ್ನು ಕೂಡ ಕರ್ನಾಟಕದಿಂದ ಕಸಿಯುವ ಷಡ್ಯಂತ್ರ ಆರಂಭವಾಗಿದೆ&lt;/p&gt;]]></description>
            <media:content url="https://static-gi.asianetnews.com/images/01m0vg4th9wqjjea0gwvbt1s7r/mangaluru-1-1787629300265.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪಾಲಕ್ಕಾಡ್&zwnj;: &lt;/strong&gt;ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಇದ್ದರೂ ಕಾಸರಗೋಡು ಕರ್ನಾಟಕದ ಕೈತಪ್ಪಿ ಕೇರಳಂ ಪಾಲಾಗಿದ್ದಾಯ್ತು. ಇದೀಗ, 3 ದಶಕಗಳ ಹೋರಾಟದ ಫಲವಾಗಿ ಕರ್ನಾಟಕಕ್ಕೆ ದಕ್ಕಿರುವ ಮಂಗಳೂರು ರೈಲ್ವೆ ವಲಯವನ್ನು ಕೂಡ ಕರ್ನಾಟಕದಿಂದ ಕಸಿಯುವ ಷಡ್ಯಂತ್ರ ಆರಂಭವಾಗಿದೆ. ಕರ್ನಾಟಕದ ರಾಜಕೀಯ ಪಕ್ಷಗಳು, ಕನ್ನಡಪರ ಸಂಘಟನೆಗಳು, ಹೋರಾಟಗಾರರು, ಕನ್ನಡಪ್ರೇಮಿಗಳು ಇನ್ನೂ ಮೌನ ವಹಿಸಿದ್ದೇ ಆದಲ್ಲಿ ದೆಹಲಿ ಮಟ್ಟದಲ್ಲಿರುವ ಕೇರಳಂನ ದೊಡ್ಡ ಲಾಬಿ ಕರ್ನಾಟಕಕ್ಕೆ ಮತ್ತೊಮ್ಮೆ ಅನ್ಯಾಯ ಮಾಡುವುದರಲ್ಲಿ ಅನುಮಾನವೇ ಇಲ್ಲ ಎನ್ನುವಂತಾಗಿದೆ.&lt;/p&gt;&lt;p&gt;ಇಂಥದ್ದೊಂದು ಆತಂಕಕ್ಕೆ ಕಾರಣವಾಗಿರುವುದು ಪಾಲಕ್ಕಾಡ್&zwnj; ರೈಲ್ವೆ ವಲಯಕ್ಕೆ ಸೇರಿದ್ದ ಮಂಗಳೂರು ವಲಯದ ರೈಲ್ವೆ ಕಚೇರಿಗಳನ್ನು ಮೈಸೂರಿನಲ್ಲಿರುವ ನೈಋತ್ಯ ರೈಲ್ವೆ ವಿಭಾಗಕ್ಕೆ ಸೇರಿಸುವ ಪ್ರಯತ್ನಕ್ಕೆ ಒಳಗೊಳಗೇ ತಡೆಯೊಡ್ಡಲು ಕೇರಳಂನಲ್ಲಿ ನಡೆದಿರುವ ದೊಡ್ಡಮಟ್ಟದ ಯತ್ನ!&lt;/p&gt;&lt;p&gt;ಪಾಲಕ್ಕಾಡ್&zwnj; ರೈಲ್ವೆ ವಲಯವನ್ನು ವಿಭಜಿಸುವ ರೈಲ್ವೆ ಮಂಡಳಿಯ ನಿರ್ಧಾರ ಕೇರಳಂನಲ್ಲಿ ಭಾರೀ ವಿರೋಧಕ್ಕೆ ಕಾರಣವಾದ ಬೆನ್ನಲ್ಲೇ, ಕೇರಳೀಯರ ಆಕ್ರೋಶ ತಣಿಸಲು ಅಧಿಕಾರಿಗಳ ಮಟ್ಟದಲ್ಲಿ ಹೊಸದೊಂದು ವಿಷಯ ಚರ್ಚೆಗೆ ಬಂದಿದೆ. ಅದೇನೆಂದರೆ ಮಂಗಳೂರು ಕೇಂದ್ರ ಮತ್ತು ಮಂಗಳೂರು ಜಂಕ್ಷನ್&zwnj; ನಿಲ್ದಾಣವನ್ನು ಮರಳಿ ಪಾಲಕ್ಕಾಡ್&zwnj; ವಲಯಕ್ಕೆ ಸೇರಿಸುವುದು, ಅದನ್ನು ಬಿಟ್ಟು ಉಳಿದೆಲ್ಲಾ ನಿಲ್ದಾಣ ಮತ್ತು ಆಸ್ತಿಗಳನ್ನು ಮೈಸೂರಿಗೆ ಬಿಟ್ಟುಕೊಡುವುದಾಗಿದೆ.&lt;/p&gt;&lt;p&gt;ಇದರ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲವಾದರೂ, ಇಂಥದ್ದೊಂದು ಹೊಂದಾಣಿಕೆ ತಂತ್ರ ಪಾಲಕ್ಕಾಡ್&zwnj; ರೈಲ್ವೆ ವಲಯಕ್ಕೆ ಎದುರಾಗಬಹುದಾದ ಹೊಸ ಸಮಸ್ಯೆ ನಿವಾರಿಸುವುದರ ಜೊತೆಗೆ ಕೇರಳಿಯರ ಆಕ್ರೋಶವನ್ನೂ ಬಹುಮಟ್ಟಿಗೆ ತಣ್ಣಗೆ ಮಾಡಬಹುದು ಎಂಬ ಲೆಕ್ಕಾಚಾರ ಸ್ಥಳೀಯ ರೈಲ್ವೆ ಅಧಿಕಾರ ವರ್ಗದ್ದಾಗಿದೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ದೊಡ್ಡ ಮೌನ!:&lt;/strong&gt;&lt;/h2&gt;&lt;p&gt;ಮಂಗಳೂರು ಕರ್ನಾಟಕದ್ದು. ಕರ್ನಾಟಕದ ಮೈಸೂರು ವಿಭಾಗಕ್ಕೆ ಅದನ್ನು ಸೇರಿಸುವುದರಲ್ಲಿ ಯಾವುದೇ ತಪ್ಪೂ ಇಲ್ಲ. ಆದರೂ ಇದಕ್ಕೆ ಕೇರಳಂನಲ್ಲಿ ಉಗ್ರ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಕೇರಳಂನ ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದರೂ, ಕರ್ನಾಟಕದಲ್ಲಿ ಮಾತ್ರ, 3 ದಶಕಗಳ ಹೋರಾಟದ ಫಲವಾಗಿ ಸಿಕ್ಕಿರುವ ಮಂಗಳೂರು ಸುತ್ತಮುತ್ತಲ ರೈಲು ನಿಲ್ದಾಣಗಳನ್ನು ಉಳಿಸಿಕೊಳ್ಳುವ ಬಗ್ಗೆ ಯಾವುದೇ ರಾಜಕೀಯ ಪಕ್ಷಗಳು, ನಾಯಕರು, ಸಂಘಟನೆಗಳಿಗೆ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ಕೇರಳಂ ಹೋರಾಟವನ್ನು ಕನಿಷ್ಠ ಖಂಡಿಸುವ ಧ್ವನಿಯೂ ಕೇಳುತ್ತಿಲ್ಲ.&lt;/p&gt;&lt;p&gt;ರಾಜ್ಯದ ಪರ ಧ್ವನಿ ಎತ್ತಬೇಕಿದ್ದ ಜನಪ್ರತಿನಿಧಿಗಳ ಈ ಮೌನ ಕರ್ನಾಟಕಕ್ಕೆ ಮಂಗಳೂರು ರೈಲ್ವೆ ವಿಷಯದಲ್ಲಿ ಅನ್ಯಾಯ ಮಾಡಿದರೂ ಅಚ್ಚರಿ ಇಲ್ಲ. ಹೀಗಾಗಿ ಈಗಲೂ ಕಾಲ ಮಿಂಚಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡರೆ ಮಂಗಳೂರು ವಲಯ ಕರ್ನಾಟಕದ ಬಳಿ ಉಳಿಯಲಿದೆ. ಇಲ್ಲವಾದರಲ್ಲಿ ಕಾಸರಗೋಡು ಕೈತಪ್ಪಿದಂತೆ ಮಂಗಳೂರು ರೈಲ್ವೆ ವಲಯವೂ ಮರಳಿ ಕೇರಳಂನ ಪಾಲಾಗಲಿದೆ.&lt;/p&gt;&lt;h3&gt;ಪ್ರಸ್ತಾವಕ್ಕೆ ಕಾರಣ?:&lt;/h3&gt;&lt;p&gt;ಪಾಲಕ್ಕಾಡ್&zwnj; ರೈಲ್ವೆ ವಲಯಕ್ಕೆ ಮಂಗಳೂರು ಕೇಂದ್ರ ನಿಲ್ದಾಣ ಅತ್ಯಂತ ಮಹತ್ವದ್ದು. ಕಾರಣ, ಮುಖ್ಯವಾದ ಕೋಚಿಂಗ್&zwnj; ಮತ್ತು ಇತರೆ ನಿರ್ವಹಣಾ ವ್ಯವಸ್ಥೆಗಳು ಮಂಗಳೂರು ಕೇಂದ್ರ ನಿಲ್ದಾಣದ ವ್ಯಾಪ್ತಿಯಲ್ಲೇ ಇವೆ. ಮಂಗಳೂರು ಕೇಂದ್ರ ನಿಲ್ದಾಣ ಪಾಲಕ್ಕಾಡ್&zwnj; ವಲಯದ ರೈಲ್ವೆಗೆ ಈಗಲೂ ಅತ್ಯಂತ ಮಹತ್ವವಾದ ನಿರ್ವಹಣಾ ನೆಲೆಯಾಗಿದೆ. ಹೀಗಾಗಿ ಈ ನಿಲ್ದಾಣ ಪಾಲಕ್ಕಾಡ್&zwnj;ನಲ್ಲೇ ಉಳಿದರೆ ಅದರ ರೈಲಿನ ನಿರ್ವಹಣೆ ಸುಗಮವಾಗಲಿದೆ. ಒಂದು ವೇಳೆ ಕೈತಪ್ಪಿದರೆ ಮತ್ತೆ ಪಾಲಕ್ಕಾಡ್&zwnj; ವಲಯವು ಎಲ್ಲಾ ವ್ಯವಸ್ಥೆಗಳನ್ನು ಹೊಸದಾಗಿ ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಇಂಥದ್ದೊಂದು ಪ್ರಸ್ತಾಪದ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಹೀಗೆ ಮಾಡಿದಲ್ಲಿ ಕೇರಳಂನ ರಾಜಕೀಯ ಪಕ್ಷಗಳ ಆಕ್ರೋಶವನ್ನು ಒಂದು ಹಂತದವರೆಗೆ ತಣ್ಣಗೆ ಮಾಡಬಹುದು ಎಂಬುದು ಅಧಿಕಾರಿಗಳ ಲೆಕ್ಕಾಚಾರ.&lt;/p&gt;&lt;p&gt;ಜೊತೆಗೆ, ಪಾಲಕ್ಕಾಡ್&zwnj; ರೈಲ್ವೆ ವಲಯದ ಪ್ರಮುಖ ಆದಾಯವೇ ಮಂಗಳೂರು ವ್ಯಾಪ್ತಿಯ ರೈಲ್ವೆ ನಿಲ್ದಾಣಗಳು. ಮಂಗಳೂರು ಬಂದರಿಗೆ ಆಗಮಿಸುವ ಸರಕನ್ನು ಹೊತ್ತು ರೈಲುಗಳು ದೇಶವ್ಯಾಪಿ ಸಂಚಾರ ಮಾಡುವ ಕಾರಣ ದೊಡ್ಡಮಟ್ಟದ ಆದಾಯ ಪಾಲಕ್ಕಾಡ್&zwnj; ರೈಲ್ವೆ ವಲಯಕ್ಕೆ ಬರುತ್ತದೆ. ಈ ವಲಯದ ಶೇ.50ಕ್ಕೂ ಹೆಚ್ಚಿನ ಆದಾಯದ ಮೂಲ ಮಂಗಳೂರು ವ್ಯಾಪ್ತಿಯ ನಿಲ್ದಾಣಗಳು. ಹೀಗಾಗಿ ಅದೇ ಕೈತಪ್ಪಿದರೆ ಪಾಲಕ್ಕಾಡ್&zwnj; ವಲಯ ಅಸ್ತಿತ್ವವೇ ಕಳೆದುಕೊಳ್ಳುತ್ತದೆ.&lt;/p&gt;&lt;p&gt;ಜೊತೆಗೆ ಮಂಗಳೂರು ವ್ಯಾಪ್ತಿಯ ನಿಲ್ದಾಣಗಳಲ್ಲಿ ಅಭಿವೃದ್ಧಿ, ಹೊಸ ಚಟುವಟಿಕೆಯ ಪ್ರತಿಯೊಂದಕ್ಕೂ ಇದುವರೆಗೂ ಪಾಲಕ್ಕಾಡ್&zwnj;ನಿಂದಲೇ ಆದೇಶ ಆಗಬೇಕಿತ್ತು. ಬಹಳಷ್ಟು ಸಮಯದಲ್ಲಿ ಮಂಗಳೂರು ವಲಯಕ್ಕೆ ಅನ್ಯಾಯವಾಗುವ ರೀತಿಯಲ್ಲೇ ನಿರ್ಧಾರಗಳು ಪ್ರಕಟವಾಗುತ್ತಿದ್ದವು. ಜೊತೆಗೆ ಸಿಬ್ಬಂದಿಗಳ ನೇಮಕ, ವಿವಿಧ ಕಾಮಗಾರಿಗಳ ಗುತ್ತಿಗೆ ಹೀಗೆ ಎಲ್ಲದರಲ್ಲೂ ಕೇರಳಿಗರ ಲಾಬಿಯೇ ದೊಡ್ಡಮಟ್ಟದಲ್ಲಿ ನಡೆಯುತ್ತಿತ್ತು. ಆದರೆ ಇದೀಗ ಮಂಗಳೂರು ಕೈತಪ್ಪಿದರೆ ಅದೆಲ್ಲಾ ನಿಂತು ಹೋಗಲಿದೆ ಎಂಬುದು ಕೇರಳಂನ ರಾಜಕೀಯ ಪಕ್ಷಗಳ ನಾಯಕರು ಮತ್ತು ಪಕ್ಷಗಳ ಕಳವಳ. ಹೀಗಾಗಿಯೇ ಅವರು ಮಂಗಳೂರನ್ನು ಮರಳಿ ಪಡೆಯಲು ಹೋರಾಡುತ್ತಿದ್ದಾರೆ.&lt;/p&gt;&lt;p&gt;&lt;strong&gt;ಪಾಲಕ್ಕಾಡ್&zwnj; ಕೈತಪ್ಪಲಿರುವ ರೈಲ್ವೆ ನಿಲ್ದಾಣಗಳು:&lt;/strong&gt;&lt;/p&gt;&lt;p&gt;ಸದ್ಯದ ರೈಲ್ವೆ ಮಂಡಳಿ ಪ್ರಸ್ತಾವದ ಅನ್ವಯ ಅ.1ರಿಂದ ದಕ್ಷಿಣ ರೈಲ್ವೆಯ ಪಾಲಕ್ಕಾಡ್&zwnj; ವಲಯದ ವ್ಯಾಪ್ತಿಯಿಂದ ಕರ್ನಾಟಕದ ಮಂಗಳೂರು ಕೇಂದ್ರ, ಮಂಗಳೂರು ಜಂಕ್ಷನ್, ಪಣಂಬೂರು (ನವ ಮಂಗಳೂರು ಬಂದರು ಯಾರ್ಡ್&zwnj;) ಮತ್ತು ಉಳ್ಳಾಲ ಕೇಂದ್ರಗಳು ಮೈಸೂರಿನ ನೈಋತ್ಯ ರೈಲ್ವೆ ವಲಯಕ್ಕೆ ಒಳಪಡಲಿವೆ.&lt;/p&gt;&lt;p&gt;ಏಳಿ ಕನ್ನಡಿಗರೇ, ಎದ್ದೇಳಿ!&lt;/p&gt;&lt;p&gt;- 3 ದಶಕ ಬಳಿಕ ಮೈಸೂರಿಗೆ ಸಿಕ್ಕ ಮಂಗಳೂರು ನಿಲ್ದಾಣ ಕಸಿಯಲು ಪ್ಲಾನ್&zwnj;&lt;/p&gt;&lt;p&gt;- ಕೇರಳಂ ರಾಜಕೀಯ ಪಕ್ಷಗಳ ಆಕ್ರೋಶ ತಣಿಸಲು ಅಧಿಕಾರಿಗಳ ಷಡ್ಯಂತ್ರ&lt;/p&gt;&lt;p&gt;- ಮಂಗಳೂರು ನಿಲ್ದಾಣಗಳನ್ನು ವಾಪಸ್&zwnj; ಪಾಲಕ್ಕಾಡ್&zwnj;ಗೆ ನೀಡುವ ಬಗ್ಗೆ ಚರ್ಚೆ&lt;/p&gt;&lt;p&gt;- ನಮ್ಮದೇ ಊರು ನಮಗೇ ಬೇಡವಾಯಿತೇ? ಇನ್ನೂ ಎಷ್ಟು ದಿನ ಈ ಮೌನ?&lt;/p&gt;]]></content:encoded>
            <category>India</category>
            <dc:creator>Sujatha NR</dc:creator>
            <atom:link href="https://www.kannadaprabha.in/india-news/mangaluru-railway-station-also-faces-a-threat/articleshow-umbq94d"/>
        </item>
        <item>
            <title><![CDATA[ಕೇರಳಂನಲ್ಲಿ ತೀವ್ರಗೊಂಡ  ‘ಮಂಗಳೂರು’ ಪ್ರತಿಭಟನೆ]]></title>
            <link>https://www.kannadaprabha.in/india-news/mangaluru-protests-intensify-in-kerala/articleshow-vbhrzv8</link>
            <guid isPermaLink="true">https://www.kannadaprabha.in/india-news/mangaluru-protests-intensify-in-kerala/articleshow-vbhrzv8</guid>
            <pubDate>Thu, 27 Aug 2026 07:09:10 +0530</pubDate>
            <description><![CDATA[&lt;p&gt;ಸ್ಥಳೀಯ ರೈಲ್ವೆ ವಲಯವನ್ನು ವಿಭಜಿಸಿ ಮಂಗಳೂರು ಮತ್ತು ಅದರ ಸುತ್ತಮುತ್ತಲ ರೈಲ್ವೆ ನಿಲ್ದಾಣಗಳನ್ನು ಮೈಸೂರು ವ್ಯಾಪ್ತಿಗೆ ಸೇರಿಸುವ ನಿರ್ಧಾರದ ವಿರುದ್ಧ ಕೇರಳದ ಆಡಳಿತಾರೂಢ ಕಾಂಗ್ರೆಸ್&zwnj; ನೇತೃತ್ವದ ಯುಡಿಎಫ್&zwnj; ಮೈತ್ರಿಕೂಟ ತನ್ನ ಹೋರಾಟ ತೀವ್ರಗೊಳಿಸಿದೆ.&lt;/p&gt;]]></description>
            <media:content url="https://static-gi.asianetnews.com/images/01m0jjnmnh554s1cj3aqgsmmhv/whatsapp-image-2026-08-21-at-9.42.20-pm-1787329958576.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪಾಲಕ್ಕಾಡ್&zwnj;: &lt;/strong&gt;ಸ್ಥಳೀಯ ರೈಲ್ವೆ ವಲಯವನ್ನು ವಿಭಜಿಸಿ ಮಂಗಳೂರು ಮತ್ತು ಅದರ ಸುತ್ತಮುತ್ತಲ ರೈಲ್ವೆ ನಿಲ್ದಾಣಗಳನ್ನು ಮೈಸೂರು ವ್ಯಾಪ್ತಿಗೆ ಸೇರಿಸುವ ನಿರ್ಧಾರದ ವಿರುದ್ಧ ಕೇರಳದ ಆಡಳಿತಾರೂಢ ಕಾಂಗ್ರೆಸ್&zwnj; ನೇತೃತ್ವದ ಯುಡಿಎಫ್&zwnj; ಮೈತ್ರಿಕೂಟ ತನ್ನ ಹೋರಾಟ ತೀವ್ರಗೊಳಿಸಿದೆ. ಅಲ್ಲದೆ ವಿಭಜನೆಯ ಹಿಂದೆ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ರಣತಂತ್ರ ಅಡಗಿದೆ ಎಂದು ಕೇರಳದ ಆಡಳಿತಾರೂಢ ಯುಡಿಎಫ್&zwnj; ಮೈತ್ರಿಕೂಟದ ನಾಯಕರು ಗಂಭೀರ ಆರೋಪ ಮಾಡಿದ್ದಾರೆ.&lt;/p&gt;&lt;h2&gt;3 ದಶಕಗಳ ಹೋರಾಟದ ಫಲ&lt;/h2&gt;&lt;p&gt;ವಿಶೇಷವೆಂದರೆ 3 ದಶಕಗಳ ಹೋರಾಟದ ಫಲವಾಗಿ ಮಂಗಳೂರು ವಲಯ ಮೈಸೂರಿಗೆ ಸೇರಿದ್ದರ ವಿರುದ್ಧ ಕೇರಳದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಿ ಹೋರಾಟ ನಡೆಸುತ್ತಿದ್ದರೆ ಇತ್ತ ಕರ್ನಾಟಕದಲ್ಲಿ ಯಾವುದೇ ರಾಜಕೀಯ ಪಕ್ಷಗಳಾಗಲೀ, ನಾಯಕರಾಗಲೀ ಮೌನಕ್ಕೆ ಶರಣಾಗಿರುವುದು ಅಚ್ಚರಿ ಮೂಡಿಸಿದೆ.&lt;/p&gt;&lt;h3&gt;ಕೇಂದ್ರ ರೈಲ್ವೆ ಮಂಡಳಿ ನಿರ್ಧಾರ ಖಂಡಿಸಿ ಪ್ರತಿಭಟನೆ&lt;/h3&gt;&lt;p&gt;ಪಾಲಕ್ಕಾಡ್&zwnj; ರೈಲ್ವೆ ವಲಯ ವಿಭಜಿಸುವ ಕೇಂದ್ರ ರೈಲ್ವೆ ಮಂಡಳಿ ನಿರ್ಧಾರ ಖಂಡಿಸಿ ಬುಧವಾರ ಇಲ್ಲಿನ ವಲಯ ರೈಲ್ವೆ ವ್ಯವಸ್ಥಾಪಕರ ಕಚೇರಿ ಮುಂದೆ ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹ ನಡೆಸಿದ ಯುಡಿಎಫ್&zwnj; ನಾಯಕರು, ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯು ರೈಲ್ವೆ ವಲಯ ವಿಭಜನೆಯ ತಂತ್ರ ರೂಪಿಸಿದೆ ಎಂಬ ಗಂಭೀರ ಆರೋಪ ಮಾಡಿದರು.&lt;/p&gt;&lt;p&gt;ಮಂಗಳೂರು ಮತ್ತು ಸುತ್ತಮುತ್ತಲಿನ ರೈಲ್ವೆ ನಿಲ್ದಾಣಗಳು ಕೈತಪ್ಪಿದರೆ ಪಾಲಕ್ಕಾಡ್&zwnj; ರೈಲ್ವೆ ವಲಯಕ್ಕೆ ವಾರ್ಷಿಕ 1000 ಕೋಟಿ ರು.ಗೂ ಹೆಚ್ಚಿನ ನಷ್ಟವಾಗಲಿದೆ. ವಲಯದ ಒಟ್ಟು ಸರಕು ಸಾಗಣೆ ಆದಾಯದಲ್ಲಿ 650 ಕೋಟಿ ರು.ಗಳಷ್ಟು ಕೇವಲ ಮಂಗಳೂರು ವಲಯವೊಂದರಿಂದಲೇ ಬರುತ್ತದೆ. ಜೊತೆಗೆ ವಲಯದ ಒಟ್ಟಾರೆ 1650 ಕೋಟಿ ರು. ಆದಾಯದಲ್ಲಿ ಶೇ.50ಕ್ಕಿಂತ ಹೆಚ್ಚಿನ ಪಾಲು ಮಂಗಳೂರು ವಲಯದಿಂದಲೇ ಬರುತ್ತದೆ. ಹೀಗಿರುವಾಗ ಈ ಪ್ರದೇಶವನ್ನೇ ಹೊರಗೆ ಹಾಕಿದರೆ ನಾಳೆ ಪಾಲಕ್ಕಾಡ್&zwnj; ವಲಯ ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂದು ಘೋಷಿಸಿದರೆ ಆಗ ಮಂಗಳೂರು ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನೂರಾರು ಕಾರ್ಮಿಕರು ಮತ್ತು ಕಿರಿಯ ಸಿಬ್ಬಂದಿ ವರ್ಗಾವಣೆ ಅನಿವಾರ್ಯತೆಗೆ ಸಿಕ್ಕಿಬೀಳುತ್ತದೆ. ಹೀಗಾಗಿ ಇದು ಅತ್ಯಂತ ಸ್ಪಷ್ಟವಾಗಿ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಯ ರಾಜಕೀಯ ಅಜೆಂಡಾ ಎಂದು ಯುಡಿಎಫ್&zwnj; ನಾಯಕರು ಕಿಡಿಕಾರಿದರು.&lt;/p&gt;&lt;p&gt;ಅಲ್ಲದೆ ವಿಭಜನೆ ಕೈಬಿಡದೇ ಹೋದರೆ ನಾವು ಹೋರಾಟ ತೀವ್ರಗೊಳಿಸಲಿದ್ದೇವೆ. ದೆಹಲಿಗೂ ತೆರಳಿ ರೈಲ್ವೆ ಅಧಿಕಾರಿಗಳನ್ನು ಭೇಟಿ ಮಾಡಲಿದ್ದೇವೆ. ದೆಹಲಿಯಲ್ಲೂ ಪ್ರತಿಭಟನೆ ನಡೆಸಲಿದ್ದೇವೆ. ರಾಜ್ಯ ಸರ್ಕಾರದ ಜೊತೆ ಸಮಾಲೋಚನೆ ನಡೆಸದೇ ಕೈಗೊಂಡ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಸಂಸದ ವಿ.ಕೆ.ಶ್ರೀಕಂಠನ್&zwnj;, ಶಫಿ ಪರಾಂಬಿ, ಎಂ.ಕೆ.ರಾಘವನ್&zwnj;, ರಾಜಮೋಹನ್ ಉನ್ನ್ನಿಥನ್&zwnj;, ಆ್ಯಂಟೊ ಆ್ಯಂಟೋನಿ, ಇ.ಟಿ.ಮೊಹ್ಮಮದ್&zwnj; ಬಶೀರ್&zwnj;, ಡೀನ್&zwnj; ಕುರಿಯಾಕೋಸ್&zwnj;, ಕೇರಳದ ಸಚಿವರಾದ ಕೆ.ಎ.ತುಳಸಿ, ಶಾಸಕ ರಮೇಶ್&zwnj; ಮೊದಲಾದವರು ಭಾಗವಹಿಸಿದ್ದರು.&lt;/p&gt;]]></content:encoded>
            <category>India</category>
            <dc:creator>Sujatha NR</dc:creator>
            <atom:link href="https://www.kannadaprabha.in/india-news/mangaluru-protests-intensify-in-kerala/articleshow-vbhrzv8"/>
        </item>
    </channel>
</rss>
