<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Kannada Prabha</title>
        <link>https://www.kannadaprabha.in</link>
        <description><![CDATA[Kannada Prabha - No.1 News channel in Karnataka, which delivers Local and International news in Marathi language.]]></description>
        <image>
            <url>https://static-assets.asianetnews.com/images/ogimages/OG_Bangla.jpg</url>
            <width>143</width>
            <height>100</height>
            <link>https://www.kannadaprabha.in</link>
            <title>Kannada Prabha</title>
        </image>
        <lastBuildDate>Thu, 04 Jun 2026 07:40:16 +0530</lastBuildDate>
        <atom:link href="https://www.kannadaprabha.in/rss/india-news" rel="self" type="application/rss+xml"/>
        <item>
            <title><![CDATA[ಲಂಚದ ಹಣ ವಾಪಸ್‌ ನೀಡುತ್ತಿರುವ ಟಿಎಂಸಿ ನಾಯಕರು!- ಅಚ್ಚರಿ- ಪ.ಬಂಗಾಳದಲ್ಲಿ ಬಿಜೆಪಿ ಸರ್ಕಾರದ ಎಫೆಕ್ಟ್‌ । ಕಾನೂನು ಕ್ರಮ, ಜನರ ದಾಳಿ ಭೀತಿಗೆ ಹೆದರಿ ಹಣ ವಾಪಸ್‌- ಮಮತಾ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಯೋಜನೆ ನೀಡಲು ಹಣ ಸುಲಿಗೆ ಮಾಡಿದ್ದ ಟಿಎಂಸಿ ಪುಡಾರಿಗಳು]]></title>
            <link>https://www.kannadaprabha.in/india-news/amid-public-fury-tramid-public-fury-trinamool-leaders-return-cut-money-in-bengal-village/articleshow-359xbxg</link>
            <guid isPermaLink="true">https://www.kannadaprabha.in/india-news/amid-public-fury-tramid-public-fury-trinamool-leaders-return-cut-money-in-bengal-village/articleshow-359xbxg</guid>
            <pubDate>Wed, 03 Jun 2026 03:00:00 +0530</pubDate>
            <description><![CDATA[ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಒಂದೆಡೆ ಅಕ್ರಮ ಬಾಂಗ್ಲಾ ವಲಸಿಗರು ದೇಶ ತೊರೆಯುತ್ತಿದ್ದರೆ, ಮತ್ತೊಂದೆಡೆ ಹಿಂದಿನ ಮಮತಾ ಸರ್ಕಾರದ ಅವಧಿಯಲ್ಲಿ ಜನರಿಂದ ಹಣ ಲೂಟಿ ಮಾಡಿದ್ದ ಟಿಎಂಸಿ ಪುಡಾರಿಗಳು, ತಾವು ಪಡೆದಿದ್ದ ಹಣವನ್ನು ಜನರಿಗೆ ಮರಳಿಸುತ್ತಿದ್ದಾರೆ.]]></description>
            <media:content url="https://static-assets.asianetnews.com/kp/json/02062026/pictures/CUT_MONEY_881.JPG" type="image/jpeg" height="390" width="690"/>
            <content:encoded><![CDATA[&lt;p&gt;ಶಿವಸೇನೆ ರೀತಿಯಲ್ಲಿ ಟಿಎಂಸಿ 2 ಹೋಳು?- ಶಾಸಕಾಂಗ ಪಕ್ಷದಲ್ಲಿ ಭಾರಿ ಒಡಕುಕೋಲ್ಕತಾ: ಬಂಗಾಳದ ರಾಜಕೀಯ ದಿನಕ್ಕೊಂದು ಸ್ಫೋಟಕ ತಿರುವು ತೆಗೆದುಕೊಳ್ಳುತ್ತಿದ್ದು, ಮಮತಾ ಬ್ಯಾನರ್ಜಿ ಅವರ ಟಿಎಂಸಿ ವಿಭಜನೆಯ ಹಂತಕ್ಕೆ ಹೋಗಿದೆ. ಈ ಹಿಂದೆ ಮಹಾರಾಷ್ಟ್ರದಲ್ಲಿ ಏಕನಾಥ ಶಿಂಧೆ ಅವರು ಹೇಗೆ ಶಿವಸೇನೆ ವಿಭಜಿಸಿದರೋ ಆ ರೀತಿ ಟಿಎಂಸಿ ವಿಭಜನೆ ಆಗಬಹುದು ಎಂಬ ಗುಲ್ಲು ಹರಿದಾಡುತ್ತಿದೆ.ಮಮತಾ ವಿರೋಧಿ ಬಣವಾದ ಉಚ್ಚಾಟಿತ ಟಿಎಂಸಿ ಶಾಸಕ ರಿತಬೃತ ಬಂಡೋಪಾಧ್ಯಾಯ ಅವರಿಗೆ 50 ಶಾಸಕರ ಬೆಂಬಲವಿದೆ ಎಂದು ಮತ್ತೊಬ್ಬ ಉಚ್ಚಾಟಿತ ನಾಯಕ ರಿಜು ದತ್ತಾ ಹೇಳಿಕೊಂಡಿದ್ದಾರೆ. ಇದು ಪಕ್ಷದ ವಿಭಜನೆಯ ಸೂಚಕ ಎಂದು ವಿಶ್ಲೇಷಿಸಲಾಗಿದೆ.&lt;/p&gt;==ಏನಿದು ಕಟ್&zwnj; ಮನಿ?&lt;p&gt;ಮಮತಾ ಬ್ಯಾನರ್ಜಿ ಅಧಿಕಾರಾವಧಿಯಲ್ಲಿ &lsquo;ಸರ್ಕಾರದ ಯೋಜನೆಗಳನ್ನು ಕೊಡಿಸುತ್ತೇನೆ&rsquo; ಎಂದು ಜನರಿಂದ ಟಿಎಂಸಿ ನಾಯಕರು ಹಾಗೂ ಕಾರ್ಯಕರ್ತರು ಸಾಕಷ್ಟು ಹಣ ವಸೂಲಿ ಮಾಡಿದ್ದರು ಎನ್ನಲಾಗಿತ್ತು, ಇದಕ್ಕೆ &lsquo;ಕಟ್&zwnj; ಮನಿ&rsquo; ಅಥವಾ &lsquo;ಕಮಿಷನ್&zwnj; ಹಣ&rsquo; ಅಥವಾ &lsquo;ಸುಲಿಗೆ ಹಣ&rsquo; ಎನ್ನಲಾಗುತ್ತಿತ್ತು.&lt;/p&gt;==&lt;p&gt;ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಒಂದೆಡೆ ಅಕ್ರಮ ಬಾಂಗ್ಲಾ ವಲಸಿಗರು ದೇಶ ತೊರೆಯುತ್ತಿದ್ದರೆ, ಮತ್ತೊಂದೆಡೆ ಹಿಂದಿನ ಮಮತಾ ಸರ್ಕಾರದ ಅವಧಿಯಲ್ಲಿ ಜನರಿಂದ ಹಣ ಲೂಟಿ ಮಾಡಿದ್ದ ಟಿಎಂಸಿ ಪುಡಾರಿಗಳು, ತಾವು ಪಡೆದಿದ್ದ ಹಣವನ್ನು ಜನರಿಗೆ ಮರಳಿಸುತ್ತಿದ್ದಾರೆ. ಸರ್ಕಾರದ ಕಾನೂನು ಕ್ರಮ ಮತ್ತು ಜನರಿಂದ ದಾಳಿಯ ಭೀತಿಗೆ ಒಳಗಾದ ಟಿಎಂಸಿ ನಾಯಕರು ಹೀಗೆ ಲಂಚದ ಹಣ ಮರಳಿಸುತ್ತಿರುವ ಅತ್ಯರೂಪದ ವಿಡಿಯೋಗಳು ಎಲ್ಲೆಡೆ ವೈರಲ್&zwnj; ಆಗಿದೆ.ಬಂಗಾಳದ ಬಿಜೆಪಿ ಸರ್ಕಾರ, ಭ್ರಷ್ಟಾಚಾರ ಆರೋಪ ಹೊರಿಸಿ ಇತ್ತೀಚೆಗೆ ಕೆಲ ಟಿಎಂಸಿ ನಾಯಕರನ್ನು ಬಂಧಿಸಿತ್ತು. ಜತೆಗೆ ಈ ಹಿಂದೆ ಹಣಕ್ಕೆ ಗೂಂಡಾಗಿರಿ ಮಾಡಿದ್ದ ಹಲವು ಟಿಎಂಸಿ ನಾಯಕರ ಮೇಲೆ ಜನರೇ ದಾಳಿ ನಡೆಸಿದ ಹಲವು ಘಟನೆಗಳು ನಡೆದಿದ್ದವು. ಅದರ ಬೆನ್ನಲ್ಲೇ &lsquo;ಸರ್ಕಾರದ ಯೋಜನೆಗಳನ್ನು ಕೊಡಿಸುತ್ತೇನೆ&rsquo; ಎಂದು ಮಮತಾ ಸರ್ಕಾರದ ಅವಧಿಯಲ್ಲಿ ಜನರಿಂದ ವಸೂಲಿ ಮಾಡಿದ ಕಮಿಷನ್&zwnj; ಹಣವನ್ನು ತಾವಾಗಿಯೇ ಹಿಂತಿರುಗಿಸುತ್ತಿದ್ದಾರೆ.&lt;/p&gt;ಇಲ್ಲಿನ ದಕ್ಷಿಣ-24 ಪರಗಣ ಜಿಲ್ಲೆ ನಾಮ್&zwnj;ಖಾನಾದಲ್ಲಿ ಸ್ಥಳೀಯ ಟಿಎಂಸಿ ನಾಯಕರೊಬ್ಬರು, &lsquo;ಪ್ರಧಾನ ಮಂತ್ರಿ ವಸತಿ ಯೋಜನೆಯಡಿ ಮನೆ ಕೊಡಿಸುತ್ತೇನೆ&rsquo; ಎಂದು ಮಮತಾ ಬ್ಯಾನರ್ಜಿ ಅಧಿಕಾರದಲ್ಲಿದ್ದಾಗ 45 ಮಂದಿಯಿಂದ ಕಮಿಷನ್&zwnj; ರೂಪದಲ್ಲಿ ತಲಾ 5000 ರು. ಸುಲಿಗೆ ಮಾಡಿದ್ದರು ಎನ್ನಲಾಗಿತ್ತು.&lt;p&gt;ಇದೀಗ ಆ ನಾಯಕ, ತಾನು ಪೀಕಿದ್ದ ತಲಾ 5000 ರು. ಹಣವನ್ನು, ಎಲ್ಲ 45 ಫಲಾನುಭವಿಗಳಿಗೂ ಸೋಮವಾರ ಬಹಿರಂಗವಾಗಿಯೇ ವಾಪಸ್&zwnj; ನೀಡಿದ್ದಾನೆ.&lt;/p&gt;ಇನ್ನು ಪಚಗಢ ಗ್ರಾಮ ಪಂಚಾಯತ್ ವ್ಯಾಪ್ತಿಯ ಫಕೀರರ್ ಕುಥಿ ಎಂಬಲ್ಲಿ ಪಂಚಾಯತ್&zwnj; ಸದಸ್ಯರೊಬ್ಬರು ಶಾಲಾ ಮೈದಾನದಲ್ಲಿ ಜನರನ್ನು ಒಟ್ಟು ಸೇರಿಸಿ ಹಣ ಮರಳಿಸಿದ್ದಾರೆ. ಇನ್ನು ಕೆಲ ಕಡೆ ಸುಲಿಗೆ ಹಣ ಪಡೆದಿದ್ದ ಟಿಎಂಸಿ ನಾಯಕರು ನಾಪತ್ತೆಯಾಗಿದ್ದಾರೆ. ಆದರೆ ಬಂಧನಕ್ಕೆ ಭಯ ಬಿದ್ದು ಅವರ ಪೋಷಕರು ಫಲಾನುಭವಿಗೆ ಹಣ ಮರಳಿಸಿರುವ ಬಗ್ಗೆಯೂ ವರದಿಯಾಗಿದೆ.==]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/amid-public-fury-tramid-public-fury-trinamool-leaders-return-cut-money-in-bengal-village/articleshow-359xbxg"/>
        </item>
        <item>
            <title><![CDATA[ಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ? : ಹೊಸ ಪಕ್ಷ ಸ್ಥಾಪನೆಯ ವದಂತಿ ಕುತೂಹಲ]]></title>
            <link>https://www.kannadaprabha.in/india-news/bjp-s-annamalai-lis-bjp-s-annamalai-launching-new-party-in-tn-posters-across-coimbatore-spark-buzz/articleshow-3s1r2iy</link>
            <guid isPermaLink="true">https://www.kannadaprabha.in/india-news/bjp-s-annamalai-lis-bjp-s-annamalai-launching-new-party-in-tn-posters-across-coimbatore-spark-buzz/articleshow-3s1r2iy</guid>
            <pubDate>Tue, 02 Jun 2026 07:04:30 +0530</pubDate>
            <description><![CDATA[&lt;p&gt;ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದು ಹೊಸ ಪಕ್ಷ ಸ್ಥಾಪಿಸಲಿದ್ದಾರೆ ಎಂಬ ವದಂತಿಯ ನಡುವೆಯೇ, ಸೋಮವಾರ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಮಂಗಳವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್&zwnj; ನವೀನ್&zwnj; ಜತೆ ಸಭೆ ನಡೆಸಿ, ಆ ಬಳಿಕ ರಾಜೀನಾಮೆ ಪ್ರಕಟಿಸಲಿದ್ದಾರೆ ಎನ್ನಲಾಗಿದೆ&lt;/p&gt;]]></description>
            <media:content url="https://static-assets.asianetnews.com/kp/json/01062026/pictures/ANNAMALAI_909.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚೆನ್ನೈ: &lt;/strong&gt;ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದು ಹೊಸ ಪಕ್ಷ ಸ್ಥಾಪಿಸಲಿದ್ದಾರೆ ಎಂಬ ವದಂತಿಯ ನಡುವೆಯೇ, ಸೋಮವಾರ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಮಂಗಳವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್&zwnj; ನವೀನ್&zwnj; ಜತೆ ಸಭೆ ನಡೆಸಿ, ಆ ಬಳಿಕ ರಾಜೀನಾಮೆ ಪ್ರಕಟಿಸಲಿದ್ದಾರೆ ಎನ್ನಲಾಗಿದೆ. ದೆಹಲಿಗೆ ತೆರಳುವ ಮುನ್ನ ಚೆನ್ನೈ ಏರ್ಪೋರ್ಟ್&zwnj;ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, &lsquo;ಇನ್ನು 2 ದಿನಗಳಲ್ಲಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ&rsquo; ಎಂದಿದ್ದಾರೆ. ದೆಹಲಿಯಲ್ಲಿ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನೂ ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;h2&gt;ಗೌರವಯುತ ನಿರ್ಗಮನ ಅಪೇಕ್ಷೆ:&lt;/h2&gt;&lt;p&gt;ಅಣ್ಣಾಮಲೈ ಬಿಜೆಪಿಯಿಂದ ಗೌರವಯುತವಾಗಿ ಮತ್ತು ಎಲ್ಲರಿಗೂ ಒಪ್ಪಿಗೆಯಾಗುವಂತೆ ನಿರ್ಗಮಿಸಲು ಬಯಸುತ್ತಿದ್ದಾರೆ. ಬಿಜೆಪಿ ನಾಯಕರೊಂದಿಗೆ ಮುಕ್ತ ಚರ್ಚೆ ಅಪೇಕ್ಷಿಸುತ್ತಿರುವ ಅವರು, ಪಕ್ಷವನ್ನು ವಿರೋಧಿಸುವ ಯಾವುದೇ ಯೋಚನೆ ಹೊಂದಿಲ್ಲ ಎನ್ನಲಾಗಿದೆ.&lt;/p&gt;&lt;h3&gt;ವಿಜಯ್&zwnj;ಗೆ ಪ್ರತಿಸ್ಪರ್ಧಿಯಾಗಲು ತಂತ್ರ:&lt;/h3&gt;&lt;p&gt;ತಮಿಳುನಾಡಿನಲ್ಲಿ ಸಿಎಂ ವಿಜಯ್&zwnj;ಗೆ ಶಕ್ತಿಶಾಲಿ ರಾಜಕೀಯ ಎದುರಾಳಿ ಇಲ್ಲ. ಆ ಜಾಗವನ್ನು ತುಂಬಲು ಅಣ್ಣಾಮಲೈ ಯತ್ನಿಸುತ್ತಿದ್ದಾರೆ. ಅದಕ್ಕಾಗಿ ಮೊದಲು ಒಂದು ರಾಜಕೀಯೇತರ ಚಳವಳಿಯನ್ನು ಆರಂಭಿಸಲಿದ್ದಾರೆ. &lsquo;ರಾಷ್ಟ್ರೀಯ-ತಮಿಳು ತತ್ವಜ್ಞಾನ&rsquo; ಅದರ ಮುಖ್ಯ ಸಿದ್ಧಾಂತವಾಗಿರಲಿದೆ ಎನ್ನಲಾಗಿದೆ.&lt;/p&gt;&lt;p&gt;&lt;strong&gt;ಬಿಡಲು ಕಾರಣ ಏನು?&lt;/strong&gt;&lt;/p&gt;&lt;p&gt;ಅಣ್ಣಾಡಿಎಂಕೆ ಜತೆ ಮೈತ್ರಿಯನ್ನು ಅವರು ವಿರೋಧಿಸಿದ್ದರು. ಅಣ್ಣಾಮಲೈ ವಿದೇಶದಲ್ಲಿದ್ದಾಗಲೇ ಕೊಯಮತ್ತೂರಿನಲ್ಲಿ ಬಿಜೆಪಿ ಕೇಂದ್ರ ಸಮಿತಿ ಸಭೆ ನಡೆಸಲಾಯಿತು. ಅಲ್ಲದೆ, ಈ ಹಿಂದೆ 2 ಕೇಂದ್ರ ಸಮಿತಿ ಸಭೆಗಳಿಗೆ ಅವರು ಹಾಜರಾಗಿರಲಿಲ್ಲ. ಇತ್ತೀಚೆಗೆ ಕೇಂದ್ರ ಸರ್ಕಾರದ ಸಿಬಿಎಸ್&zwnj;ಇ ತ್ರಿಭಾಷಾ ಸೂತ್ರವನ್ನು ಅವರು ವಿರೋಧಿಸಿದ್ದರು. ಆಗಿಂದಲೇ ಅವರು ಪಕ್ಷ ತೊರೆಯುವ ಗುಸುಗುಸು ಆರಂಭವಾಗಿತ್ತು.&lt;/p&gt;&lt;p&gt;&lt;strong&gt;ತಲೆಯೆತ್ತಿದ ಅಣ್ಣಾಮಲೈ ಪೋಸ್ಟರ್&zwnj;:&lt;/strong&gt;&lt;/p&gt;&lt;p&gt;ಈ ನಡುವೆ, ಕೊಯಮತ್ತೂರಿನಲ್ಲಿ ಅಣ್ಣಾಮಲೈ ಫೋಟೊ ಇರುವ ಪೋಸ್ಟರ್&zwnj;ಗಳು ಕಾಣಿಸಿಕೊಂಡಿವೆ. ಅವುಗಳ ಮೇಲೆ &lsquo;ಭಯವಿಲ್ಲದ ಮನಸ್ಸುಗಳಿಗೆ ಮಿತಿಯಿಲ್ಲ&rsquo; ಎಂಬ ಬರಹವನ್ನು ಬರೆಯಲಾಗಿದೆ. ಇದರಿಂದ ಅಣ್ಣಾಮಲೈ ಹೊಸ ರಾಜಕೀಯ ಪಕ್ಷವನ್ನು ಆರಂಭಿಸುತ್ತಾರಾ ಎಂಬ ಊಹಾಪೋಹಗಳು ಹೆಚ್ಚಾಗಿವೆ. ಇತ್ತ ಅವರ ಅಭಿಮಾನಿ ಸಂಘಟನೆ &lsquo;ಅಣ್ಣಾಮಲೈ ಅನ್ಬು ಕೂಟ್ಟಂ&rsquo;ಗೆ ಹೊಸ ಸದಸ್ಯರನ್ನು ಸೇರಿಸಿಕೊಳ್ಳಲಾಗುತ್ತಿದೆ ಎಂದು ಅವರ ಅಭಿಮಾನಿಗಳು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಹೊಸ ಹೆಜ್ಜೆ ಏಕೆ?&lt;/strong&gt;&lt;/p&gt;&lt;p&gt;ತಮಿಳ್ನಾಡಲ್ಲಿ ಇದೀಗ ವಿಜಯ್&zwnj;ಗೆ ಸೂಕ್ತ ಪ್ರತಿಸ್ಪರ್ಧಿಗಳಿಲ್ಲ&lt;/p&gt;&lt;p&gt;ಈ ಸ್ಥಾನ ಯಶಸ್ವಿಯಾಗಿ ತುಂಬುವ ಇರಾದೆ ಅಣ್ಣಾಮಲೈಗೆ&lt;/p&gt;&lt;p&gt;ಈ ಕಾರಣಕ್ಕೆ ಬಿಜೆಪಿಗೆ ಗೌರವಯುತ ವಿದಾಯದ ನಿರೀಕ್ಷೆ&lt;/p&gt;&lt;p&gt;ಬಳಿಕ ರಾಜಕೀಯೇತರ ಸಂಘಟನೆ ಸ್ಥಾಪಿಸಿ ರಾಜ್ಯಪ್ರವಾಸ&lt;/p&gt;&lt;p&gt;ಪ್ರಯತ್ನ ಫಲ ಕೊಟ್ಟರೆ ಮುಂದೆ ರಾಜಕೀಯ ಪಕ್ಷ ಸ್ಥಾಪನೆ&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/bjp-s-annamalai-lis-bjp-s-annamalai-launching-new-party-in-tn-posters-across-coimbatore-spark-buzz/articleshow-3s1r2iy"/>
        </item>
        <item>
            <title><![CDATA[ದಿಲ್ಲಿ ರೆಸ್ಟೋರೆಂಟ್‌ ಭಾರಿ ಬೆಂಕಿ ದುರಂತಕ್ಕೆ 21 ಬಲಿ]]></title>
            <link>https://www.kannadaprabha.in/india-news/delhi-hotel-blaze-residents-break-windows-to-help-people-escape-rush-with-blankets/articleshow-4b7ggsd</link>
            <guid isPermaLink="true">https://www.kannadaprabha.in/india-news/delhi-hotel-blaze-residents-break-windows-to-help-people-escape-rush-with-blankets/articleshow-4b7ggsd</guid>
            <pubDate>Thu, 04 Jun 2026 05:07:45 +0530</pubDate>
            <description><![CDATA[ದಕ್ಷಿಣ ದೆಹಲಿಯ ಮಾಳವೀಯ ನಗರದಲ್ಲಿರುವ &lsquo;ಫ್ಲರಿಶ್&zwnj; ಸ್ಟೇ ಲಾಡ್ಜ್&zwnj; ಕಂ ರೆಸ್ಟೋರೆಂಟ್&zwnj;&rsquo;ನಲ್ಲಿ ಶಂಕಿತ ಎಲ್ಪಿಜಿ ಸ್ಫೋಟದ ಕಾರಣ ಭಾರೀ ಬೆಂಕಿ ಅವಘಡ ಸಂಭವಿಸಿದೆ. ದುರ್ಘಟನೆಯಲ್ಲಿ 18 ವಿದೇಶಿ ಪ್ರಜೆಗಳು ಸೇರಿ 21 ಮಂದಿ ಸಾವನ್ನಪ್ಪಿದ್ದಾರೆ.]]></description>
            <media:content url="https://static-assets.asianetnews.com/kp/json/03062026/pictures/03061_AP06_03_2026_000072B_614.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ನವದೆಹಲಿ : &amp;nbsp;&lt;/strong&gt;ದಕ್ಷಿಣ ದೆಹಲಿಯ ಮಾಳವೀಯ ನಗರದಲ್ಲಿರುವ &lsquo;ಫ್ಲರಿಶ್&zwnj; ಸ್ಟೇ ಲಾಡ್ಜ್&zwnj; ಕಂ ರೆಸ್ಟೋರೆಂಟ್&zwnj;&rsquo;ನಲ್ಲಿ ಶಂಕಿತ ಎಲ್ಪಿಜಿ ಸ್ಫೋಟದ ಕಾರಣ ಭಾರೀ ಬೆಂಕಿ ಅವಘಡ ಸಂಭವಿಸಿದೆ. ದುರ್ಘಟನೆಯಲ್ಲಿ 18 ವಿದೇಶಿ ಪ್ರಜೆಗಳು ಸೇರಿ 21 ಮಂದಿ ಸಾವನ್ನಪ್ಪಿದ್ದಾರೆ.5 ಅಂತಸ್ತಿನ ಕಟ್ಟಡದಲ್ಲಿ ನೆಲ ಮಾಳಿಗೆ ರೆಸ್ಟೋರೆಂಟ್&zwnj; ಆಗಿತ್ತು. ಉಳಿದ ಅಂತಸ್ತುಗಳನ್ನು ಲಾಡ್ಜ್&zwnj; ಆಗಿ ಬಳಸಲಾಗುತ್ತಿತ್ತು.&amp;nbsp;&lt;/p&gt;&lt;p&gt;&amp;nbsp;ಬೆಳಿಗ್ಗೆ 8.30ರ ಸುಮಾರಿಗೆ ಹೋಟೆಲ್&zwnj;ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆ ಬಳಿಕ ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಇಡೀ ಕಟ್ಟಡವನ್ನೇ ಆವರಿಸಿದೆ. ದಾರಿಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಹೋಟೆಲ್&zwnj;ನಿಂದ ಹೊಗೆ ಹೋಗುತ್ತಿರುವುದನ್ನು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ.ವಿಷಯ ತಿಳಿದ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿ 40ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿದ್ದಾರೆ. ಆದರೆ ದುರಾದೃಷ್ಟವಾತ್&zwnj; ವಿದೇಶಿಗರು ಸೇರಿದಂತೆ 21 ಮಂದಿ ಸಾವನ್ನಪ್ಪಿದ್ದಾರೆ. ಮಧ್ಯ ಏಷ್ಯಾ ಮತ್ತು ಆಫ್ರಿಕನ್ ದೇಶದ ಪ್ರಜೆಗಳಿದ್ದರು ಎಂದು ತಿಳಿದು ಬಂದಿದೆ. ಕೆಲವರು ಕಟ್ಟಡದಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದರೆ, ಇನ್ನು ಕೆಲವರನ್ನು ಕಿಟಕಿ ಗಾಜು ಒಡೆದು ಸ್ಥಳೀಯರು ರಕ್ಷಿಸಿದ್ದಾರೆ.&lt;/p&gt;&lt;p&gt;ಗಾಯಗೊಂಡ ಕೆಲವರ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಸೃಷ್ಟಿಯಾಗಿದೆ.&lt;/p&gt;&lt;p&gt;ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣವೇನೆಂದು ತಿಳಿದು ಬಂದಿಲ್ಲ. ಆದರೆ ಸಿಲಿಂಡರ್&zwnj; ಸ್ಫೋಟ ಕಾರಣವಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಟ್ಟಡದಲ್ಲಿ ಅನೇಕ ಅಕ್ರಮ ನಿರ್ಮಾಣಗಳು ನಡೆದಿದ್ದು, ಪೊಲೀಸರು ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ ಮಾಲೀಕ ನಾಪತ್ತೆ ಆಗಿದ್ದು, ಆತನಿಗೆ ಲುಕೌಟ್&zwnj; ನೋಟಿಸ್&zwnj; ಹೊರಿಡಿಸಲಾಗಿದೆ.&lt;/p&gt;&lt;h2&gt;&lt;strong&gt;ಮೋದಿ ಸಂತಾಪ:&lt;/strong&gt;&lt;/h2&gt;&lt;p&gt;ಅವಘಢಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ಮೋದಿ 2 ಲಕ್ಷ ರು. ಪರಿಹಾರ ಘೋಷಿಸಿದ್ದು, ಗಾಯಾಳುಗಳಿಗೆ 50,000 ರು. ನೆರವು ನೀಡುವುದಾಗಿ ಹೇಳಿದ್ದಾರೆ.&lt;/p&gt;&lt;p&gt;ಎಲ್ಲಿ?&lt;/p&gt;&lt;p&gt;ದೆಹಲಿ ಮಾಳವೀಯ ನಗರದ ಫ್ಲರಿಶ್ ಸ್ಟೇ ಲಾಡ್ಜ್&zwnj; ಕಂ ರೆಸ್ಟೋರೆಂಟ್&zwnj;ನಲ್ಲಿ&lt;/p&gt;&lt;p&gt;ಯಾವಾಗ?&lt;/p&gt;&lt;p&gt;ಬೆಳಗ್ಗೆ 8.30ಕ್ಕೆ&lt;/p&gt;&lt;p&gt;ಏನಾಯ್ತು?&lt;/p&gt;&lt;p&gt;ಬೆಳಗ್ಗೆ ಏಕಾಏಕಿ ಹೋಟೆಲ್&zwnj;ನಲ್ಲಿ ಸ್ಫೋಟ, ಇಡೀ ಕಟ್ಟಡ ಬೆಂಕಿಗೆ ಆಹುತಿ. ಸಿಲಿಂಡರ್&zwnj; ಸ್ಫೋಟ ಶಂಕೆ&lt;/p&gt;&lt;h3&gt;&lt;strong&gt;ಮಗುವಿನೊಂದಿಗೆ 3ನೇ ಮಹಡಿಯಿಂದ ಜಿಗಿದು ಜೀವ ಉಳಿಸಿಕೊಂಡ ತಾಯಿ!&amp;nbsp;&lt;/strong&gt;&lt;/h3&gt;&lt;p&gt;ಪಿಟಿಐ ನವದೆಹಲಿದಕ್ಷಿಣ ದೆಹಲಿಯ ಮಾಳವೀಯ ನಗರದ ಬೆಡ್-ಅಂಡ್ ಬ್ರೇಕ್&zwnj;ಫಾಸ್ಟ್&zwnj; ರೆಸ್ಟೋರೆಂಟ್&zwnj;ನಲ್ಲಿ ಬೆಳ್ಳಂಬೆಳಿಗ್ಗೆ ಬೆಂಕಿ ಹತ್ತಿಕೊಂಡಿದ್ದರಿಂದ ಹೋಟೆಲ್&zwnj;ನಲ್ಲಿದ್ದ ಗ್ರಾಹಕರೆಲ್ಲರೂ ಆತಂಕಕ್ಕೆ ಒಳಗಾಗಿದ್ದರು. ಹೀಗಿರುವಾಗಲೇ ತಾಯಿಯೊಬ್ಬರು ಮೂರನೇ ಮಹಡಿಯಿಂದ ಮಗು ಹೊತ್ತುಕೊಂಡು ಜಿಗಿದು ಜೀವ ಉಳಿಸಿಕೊಂಡಿದ್ದಾರೆ.&lt;/p&gt;&lt;p&gt;ಘಟನೆ ಬಗ್ಗೆ ಸ್ಥಳೀಯರೊಬ್ಬರು ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. &lsquo;ಮಹಿಳೆ ತಮ್ಮ ಮಗುವನ್ನು ಹಿಡಿದು ಪ್ರಾಣ ಉಳಿಸಿಕೊಳ್ಳಲು ಮೂರನೇ ಮಹಡಿಯಿಂದ ಜಿಗಿದರು. ಆಗ ಹಾಸಿಗೆ ಅಂಗಡಿ ಮಾಲೀಕರು ಹಾಗೂ ಸ್ಥಳೀಯರು ನೆಲದ ಮೇಲೆ ಹಾಸಿಗೆಗಳನ್ನು ಹರಡಿ ಆಕೆಯನ್ನು ರಕ್ಷಿಸಿದ್ದಾರೆ. ಇಬ್ಬರೂ ಪಾರಾಗಿದ್ದಾರೆ. ಆದರೆ ತಾಯಿಗೆ ಸಣ್ಣಪುಟ್ಟ ಗಾಯಗಳಾಗಿವೆ&rsquo; ಎಂದಿದ್ದಾರೆಮತ್ತೊಬ್ಬ ಮಹಿಳೆ ಕೂಡ ಇದೇ ರೀತಿ ತಮ್ಮ ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದಿದ್ದಾರೆ ಎಂದು ವರದಿಯಾಗಿದೆ. ಆದರೆ ಅವರ ಸದ್ಯದ ಸ್ಥಿತಿ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.ಗಾಜು ಒಡೆದು ರಕ್ಷಿಸಿದ ಸ್ಥಳೀಯರು:ಕಟ್ಟಡದಲ್ಲಿ ದಟ್ಟ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಹೋಟೆಲ್&zwnj;ನಲ್ಲಿದ್ದವರು ರಕ್ಷಣೆಗಾಗಿ ಕೂಗಿಕೊಂಡರು. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸುವಷ್ಟರಲ್ಲಿ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ. ಒಂದೆಡೆ ನೆಲದ ಮೇಲೆ ಹಾಸಿಗೆ, ಕಂಬಳಿಗಳನ್ನು ಹಾಸಿ ಹೊರ ಬರಲು ಪ್ರಯತ್ನಿಸುತ್ತಿದ್ದವರಿಗೆ ನೆರವಾಗಿದ್ದರೆ, ಮತ್ತೊಂದೆಡೆ ಕಿಟಕಿ ಗಾಜುಗಳನ್ನು ಒಡೆದು ರಕ್ಷಿಸಿದ್ದಾರೆ. ಇನ್ನು ಸ್ಥಳೀಯರು ರಕ್ಷಣೆ ಮಾಡುತ್ತಿರುವ ವಿಡಿಯೋಗಳು ಸೆರೆಯಾಗಿದ್ದು, ಘಟನೆಯ ಭೀಕರತೆ ಸಾಕ್ಷೀಕರಿಸುವಂತಿದೆ.&amp;nbsp;&lt;/p&gt;&lt;p&gt;&lt;strong&gt;6 ರೂಂಗೆ ಅನುಮತಿ ಪಡೆದು 25 ರೂಂ ನಿರ್ಮಾಣ!&amp;nbsp;&lt;/strong&gt;&lt;/p&gt;&lt;p&gt;ನವದೆಹಲಿ: ಮಾಳವೀಯ ನಗರದಲ್ಲಿ ಬೆಂಕಿ ದುರಂತಕ್ಕೀಡಾದ ಬೆಡ್-ಅಂಡ್ ಬ್ರೇಕ್&zwnj;ಫಾಸ್ಟ್&zwnj; ರೆಸ್ಟೋರೆಂಟ್&zwnj;ನಲ್ಲಿ 6 ಕೊಠಡಿಗಳನ್ನು ನಿರ್ಮಿಸಲು ಮಾತ್ರ ದೆಹಲಿ ಸರ್ಕಾರ ಪರವಾನಗಿ ನೀಡಿತ್ತು. ಆದರೆ ಹೋಟೆಲ್&zwnj;ನವರು ಆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ 25 ರೂಂಗಳನ್ನು ನಿರ್ಮಿಸಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ,ಇದರ ಜತೆಗೆ ಪೊಲೀಸರ ಮಾಹಿತಿ ಪ್ರಕಾರ, 5 ಅಂತಸ್ತಿನ ಕಟ್ಟಡದಲ್ಲಿ ಪ್ರವೇಶ ದ್ವಾರ ಮತ್ತು ನಿರ್ಗಮನ ದ್ವಾರ ಬೇರೆ ಬೇರೆ ಆಗಿರದೇ ಒಂದೇ ಆಗಿತ್ತು. ಇಂಥ ಉಲ್ಲಂಘನೆಯೂ ಹೆಚ್ಚಿನ ಸಂಖ್ಯೆಯ ಜೀವಹಾನಿಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.ಕಟ್ಟಡವು ಹೊಟೇಲ್&zwnj; ಪ್ರಾರಂಭಕ್ಕೂ ಮುನ್ನ ಖಾದಿ ಭಂಡಾರವಾಗಿತ್ತು. ಲಾಡ್ಜ್&zwnj; ನಿರ್ಮಾಣವಾದ ಬಳಿಕ ಹತ್ತಿರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಸಂಬಂಧಿಕರು ಇಲ್ಲಿ ಉಳಿದುಕೊಳ್ಳುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/delhi-hotel-blaze-residents-break-windows-to-help-people-escape-rush-with-blankets/articleshow-4b7ggsd"/>
        </item>
        <item>
            <title><![CDATA[ರುಪಾಯಿಗಾಗಿ 75 ಟನ್‌ಚಿನ್ನ ಮಾರಿದ ಆರ್ಬಿಐ?- ವಿದೇಶಿ ವಿನಿಮಯ ಉಳಿಸಲು ಸೇಲ್‌- ರು.ಮೌಲ್ಯ ಕುಸಿತ ತಡೆಗೆ ಈ ಕ್ರಮ]]></title>
            <link>https://www.kannadaprabha.in/india-news/us-iran-war-impact-rbi-likely-sold-12-billion-gold-reserves-to-shield-foreign-currency-assets-says-report/articleshow-5wagh38</link>
            <guid isPermaLink="true">https://www.kannadaprabha.in/india-news/us-iran-war-impact-rbi-likely-sold-12-billion-gold-reserves-to-shield-foreign-currency-assets-says-report/articleshow-5wagh38</guid>
            <pubDate>Wed, 03 Jun 2026 03:00:00 +0530</pubDate>
            <description><![CDATA[ಮಧ್ಯಪ್ರಾಚ್ಯ ಸಂಘರ್ಷದಿಂದ ಉಂಟಾಗಿರುವ ರುಪಾಯಿ ಮೌಲ್ಯ ಕುಸಿತ ಹಾಗೂ ವಿದೇಶಿ ವಿನಿಮಯ ಕುಸಿತದ ಬಿಕ್ಕಟ್ಟಿನಿಂದ ಪಾರಾಗಲು ಭಾರತೀಯ ರಿಸರ್ವ್&zwnj; ಬ್ಯಾಂಕ್&zwnj; (ಆರ್&zwnj;ಬಿಐ) ತನ್ನ ಸಂಗ್ರಹದಿಂದ 1.14 ಲಕ್ಷ ಕೋಟಿ ಮೌಲ್ಯದ ಅಂದಾಜು 75 ಟನ್&zwnj; ಚಿನ್ನ ಮಾರಾಟ ಮಾಡಿರುವ ಸಾಧ್ಯತೆ ಇದೆ.]]></description>
            <media:content url="https://static-assets.asianetnews.com/kp/json/02062026/pictures/RBI1_917.JPG" type="image/jpeg" height="390" width="690"/>
            <content:encoded><![CDATA[&lt;p&gt;ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಡಾಲರ್&zwnj; ಎದುರು ರು.ಮೌಲ್ಯ ಭಾರೀ ಕುಸಿತ&lt;/p&gt;ಇಂತ ಸಂದರ್ಭ ಸಾಮಾನ್ಯವಾಗಿ ಡಾಲರ್&zwnj; ಮಾರಾಟ ಮಾಡುವ ಆರ್&zwnj;ಬಿಐ&lt;p&gt;ಆದರೆ ಈ ಬಾರಿ ಡಾಲರ್ ಜೊತೆಗೆ ಭಾರೀ ಪ್ರಮಾಣದ ಚಿನ್ನವೂ ಮಾರಾಟ&lt;/p&gt;ಈ ಮೂಲಕ ರುಪಾಯಿ ಮೌಲ್ಯ ಕುಸಿತ ತಡೆಯಲು ಭಾರೀ ಹರಸಾಹಸ&lt;p&gt;ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷದಿಂದ ಉಂಟಾಗಿರುವ ರುಪಾಯಿ ಮೌಲ್ಯ ಕುಸಿತ ಹಾಗೂ ವಿದೇಶಿ ವಿನಿಮಯ ಕುಸಿತದ ಬಿಕ್ಕಟ್ಟಿನಿಂದ ಪಾರಾಗಲು ಭಾರತೀಯ ರಿಸರ್ವ್&zwnj; ಬ್ಯಾಂಕ್&zwnj; (ಆರ್&zwnj;ಬಿಐ) ತನ್ನ ಸಂಗ್ರಹದಿಂದ 1.14 ಲಕ್ಷ ಕೋಟಿ ಮೌಲ್ಯದ ಅಂದಾಜು 75 ಟನ್&zwnj; ಚಿನ್ನ ಮಾರಾಟ ಮಾಡಿರುವ ಸಾಧ್ಯತೆ ಇದೆ.&lt;/p&gt;ಭಾರತವು ವಿಶ್ವದಲ್ಲೇ ಮೂರನೇ ಅತಿದೊಡ್ಡ ತೈಲ ಆಮದುದಾರ ದೇಶವಾಗಿದೆ. ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಇಂಧನ ದರ ಏರಿಕೆ ಹಿನ್ನೆಲೆಯಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹದ ಮೇಲೆ ಭಾರೀ ಹೊಡೆತ ಬಿದ್ದಿದ್ದು, ರುಪಾಯಿ ಮೌಲ್ಯ ಕೂಡ ತೀರಾ ಕುಸಿದಿದೆ. ಈ ಬಾಹ್ಯ ಆಘಾತಗಳಿಂದ ತಪ್ಪಿಸಿಕೊಂಡು ವಿದೇಶಿ ವಿನಿಮಯ ಸಂಗ್ರಹವನ್ನು ಬಲಪಡಿಸಲು ಆರ್&zwnj;ಬಿಐ ತನ್ನ ಸಂಗ್ರಹದಲ್ಲಿರು ಚಿನ್ನದಲ್ಲಿ ಒಂದಷ್ಟನ್ನು ಮಾರಾಟಕ್ಕೆ ಮುಂದಾಗಿರುವ ಸಾಧ್ಯತೆ ಇದೆ ಎಂದು ಬ್ಲೂಮ್&zwnj;ಬರ್ಗ್&zwnj; ಎಕನಾಮಿಕ್ಸ್&zwnj; ಸುದ್ದಿ ಪೋರ್ಟಲ್&zwnj; ತಿಳಿಸಿದೆ.&lt;p&gt;ಬ್ಲೂಮ್&zwnj;ಬರ್ಗ್&zwnj; ಎಕನಾಮಿಕ್ಸ್&zwnj; ಸುದ್ದಿ ಸಂಸ್ಥೆ ಪ್ರಕಾರ ಮೇ ತಿಂಗಳ ಎರಡು ವಾರಗಳಲ್ಲಿ 1.14 ಲಕ್ಷ ಕೋಟಿ ರು. ಚಿನ್ನ ಮಾರಾಟ ಮಾಡಿದೆ. ಈ ಮೂಲಕ ಆರ್&zwnj;ಬಿಐ ತನ್ನ ವಿದೇಶಿ ವಿನಿಮಯ ಸಂಗ್ರಹಕ್ಕೆ 71,400 ಕೋಟಿ ರು.ನಷ್ಟು ಮೊತ್ತದ ಕರೆನ್ಸಿ ಸೇರ್ಪಡೆ ಮಾಡಿದೆ.&lt;/p&gt;ಮಾರುಕಟ್ಟೆ ಪರಿಸ್ಥಿತಿಯು ತನ್ನ ಪರವಾಗಿರುವಾಗಲೆಲ್ಲ ಆರ್&zwnj;ಬಿಐ ತನ್ನ ವಿದೇಶಿ ವಿನಿಮಯ ಸಂಗ್ರಹ ಬಲಪಡಿಸಲು ಕ್ರಮ ಕೈಗೊಳ್ಳಲಿದೆ.&lt;p&gt;ಮಾರ್ಚ್&zwnj; ಅಂತ್ಯದ ವರೆಗೆ ಆರ್&zwnj;ಬಿಐ 880.52 ಮೆಟ್ರಿಕ್&zwnj; ಟನ್&zwnj;ನಷ್ಟು ಚಿನ್ನದ ಸಂಗ್ರಹ ಹೊಂದಿತ್ತು.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/us-iran-war-impact-rbi-likely-sold-12-billion-gold-reserves-to-shield-foreign-currency-assets-says-report/articleshow-5wagh38"/>
        </item>
        <item>
            <title><![CDATA[ಭಾರತದ ವಿರುದ್ಧ ಮತ್ತೆ ಟ್ರಂಪ್‌ ತೆರಿಗೆ ಕಿರಿಕ್]]></title>
            <link>https://www.kannadaprabha.in/india-news/us-trade-team-in-delhi-trump-plans-new-tariffs-on-india-over-forced-labour/articleshow-6swhhpo</link>
            <guid isPermaLink="true">https://www.kannadaprabha.in/india-news/us-trade-team-in-delhi-trump-plans-new-tariffs-on-india-over-forced-labour/articleshow-6swhhpo</guid>
            <pubDate>Thu, 04 Jun 2026 05:00:23 +0530</pubDate>
            <description><![CDATA[&lt;p&gt;ಈ ಹಿಂದೆ ತಾವು ವಿಶ್ವದ ವಿವಿಧ ದೇಶಗಳ ಮೇಲೆ ಹೇರಿದ್ದ ತೆರಿಗೆಯನ್ನು ಸುಪ್ರೀಂ ಕೋರ್ಟ್&zwnj; ರದ್ದು ಮಾಡಿದ ಬೆನ್ನಲ್ಲೇ ಅಮೆರಿಕದ ಡೊನಾಲ್ಡ್&zwnj; ಟ್ರಂಪ್&zwnj; ಸರ್ಕಾರ, ಇದೀಗ ಭಾರತವೂ ಸೇರಿ 60 ರಾಷ್ಟ್ರಗಳ ಮೇಲೆ ಅಡ್ಡದಾರಿ ಮೂಲಕ ಹೊಸದಾಗಿ ತೆರಿಗೆ ಹೇರಲು ಹೊರಟಿದೆ.&lt;/p&gt;]]></description>
            <media:content url="https://static-assets.asianetnews.com/kp/json/03062026/pictures/DONALD_TRUMP_690.JPG" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;strong&gt;ವಾಷಿಂಗ್ಟನ್&zwnj;: &lt;/strong&gt;ಈ ಹಿಂದೆ ತಾವು ವಿಶ್ವದ ವಿವಿಧ ದೇಶಗಳ ಮೇಲೆ ಹೇರಿದ್ದ ತೆರಿಗೆಯನ್ನು ಸುಪ್ರೀಂ ಕೋರ್ಟ್&zwnj; ರದ್ದು ಮಾಡಿದ ಬೆನ್ನಲ್ಲೇ ಅಮೆರಿಕದ ಡೊನಾಲ್ಡ್&zwnj; ಟ್ರಂಪ್&zwnj; ಸರ್ಕಾರ, ಇದೀಗ ಭಾರತವೂ ಸೇರಿ 60 ರಾಷ್ಟ್ರಗಳ ಮೇಲೆ ಅಡ್ಡದಾರಿ ಮೂಲಕ ಹೊಸದಾಗಿ ತೆರಿಗೆ ಹೇರಲು ಹೊರಟಿದೆ.&lt;/p&gt;&lt;p&gt;&lsquo;ಶೋಷಿತ ಕಾರ್ಮಿಕ&rsquo;ರಿಂದ (ಫೋರ್ಸ್ಡ್ ಲೇಬರ್) ತಯಾರಾದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತಿವೆ ಎಂಬ ಆರೋಪ ಹೊರಿಸಿ 60 ರಾಷ್ಟ್ರಗಳ ಮೇಲೆ ಶೇ.10ರಿಂದ ಶೇ.12.5ರಷ್ಟು ತೆರಿಗೆ ವಿಧಿಸಲು ಚಿಂತನೆ ನಡೆಸುತ್ತಿದೆ. ಆದರೆ ತಕ್ಷಣ ಇದು ಜಾರಿಯಾಗಲ್ಲ. ಸಾರ್ವಜನಿಕರ ಅಭಿಪ್ರಾಯ ಕೋರಲಾಗಿದೆ. ಬಳಿಕ ಮುಂದಿನ ಕ್ರಮ ಜರುಗಿಸಲಾಗುತ್ತದೆ.&lt;/p&gt;&lt;p&gt;ಅಮೆರಿಕದ ವ್ಯಾಪಾರ ಪ್ರತಿನಿಧಿ (ಯುಎಸ್&zwnj;ಟಿಆರ್&zwnj;) ಬುಧವಾರ ಈ ಕುರಿತು ವರದಿ ಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತ, ಚೀನಾ, ಜಪಾನ್&zwnj;, ದಕ್ಷಿಣ ಕೊರಿಯಾ, ಬ್ರೆಜಿಲ್&zwnj;, ಸ್ವಿಜರ್ಲೆಂಡ್&zwnj;, ಬ್ರಿಟನ್&zwnj; ಮತ್ತಿತರ ದೇಶಗಳ ಮೇಲೆ ಶೇ.12.5ರಷ್ಟು ತೆರಿಗೆ ವಿಧಿಸುವ ಪ್ರಸ್ತಾಪ ಮಾಡಲಾಗಿದೆ. ಇನ್ನು ಈ ರೀತಿಯ ನಿರ್ಬಂಧವನ್ನು ಭಾಗಶಃ ಅನುಷ್ಠಾನಗೊಳಿಸಿರುವ ಕೆನಡಾ, ಮೆಕ್ಸಿಕೋ, ಈಕ್ವಡೋರ್&zwnj;, ಇಯು, ಪಾಕಿಸ್ತಾನ, ಇಂಡೋನೇಷ್ಯಾದಂಥ ದೇಶಗಳ ಮೇಲೆ ಶೇ.10ರಷ್ಟು ತೆರಿಗೆ ವಿಧಿಸಲು ಪ್ರಸ್ತಾಪಿಸಲಾಗಿದೆ.&lt;/p&gt;&lt;h2&gt;ಹೇಗೆ ಜಾರಿ?: &amp;nbsp;&lt;/h2&gt;&lt;p&gt;ಅಮೆರಿಕ ತನ್ನ ವ್ಯಾಪಾರ ಪಾಲುದಾರ ದೇಶಗಳ ಮೇಲೆ 1974ರ ವ್ಯಾಪಾರ ಕಾಯ್ದೆಯ ಸೆಕ್ಷನ್&zwnj; 301(ಬಿ), (1) ಅಡಿ ತನಿಖೆ ನಡೆಸಿದ್ದು, ಬಲವಂತದ (ಶೋಷಣೆ) ದುಡಿಮೆ ಮೂಲಕ ತಯಾರಿಸಿದ ವಸ್ತುಗಳ ಆಮದು ತಡೆಯುವಲ್ಲಿ 60 ದೇಶಗಳು ವಿಫಲವಾಗಿವೆ ಎನ್ನಲಾಗಿದೆ.&lt;/p&gt;&lt;h3&gt;ಏನಿದು ಫೋರ್ಸ್ಡ್&zwnj; ಲೇಬರ್&zwnj;?:&lt;/h3&gt;&lt;p&gt;ಯಾವುದೇ ಕಾರ್ಮಿಕನ ಮೇಲೆ ಬಲವಂತ ಮಾಡಿ ಅಥವಾ ಶೋಷಣೆ ಮಾಡಿ ಮಾಡಿಸಿಕೊಂಡ ಕೆಲಸಕ್ಕೆ ಬಲವಂತದ ಕೆಲಸ (ಫೋರ್ಸ್ಡ್&zwnj; ಲೇಬರ್) ಎಂದು ಕರೆಯಲಾಗುತ್ತದೆ. ಇದೊಂದು ರೀತಿಯಲ್ಲಿ ಆಧುನಿಕ ಕಾಲದ ಜೀತಪದ್ಧತಿ. ಈ ರೀತಿಯ ಫೋರ್ಸ್ಡ್&zwnj; ಲೇಬರ್&zwnj; ಮೂಲಕ ಮಾನವಹಕ್ಕುಗಳ ಉಲ್ಲಂಘನೆಗೆ ಸಮ.&lt;/p&gt;&lt;p&gt;ಯಾವ್ಯಾವ ದೇಶಗಳ ಮೇಲೆ ತೆರಿಗೆ?ಚೀನಾ, ಭಾರತ, ಬಾಂಗ್ಲಾದೇಶ, ವಿಯೆಟ್ನಾಂ, ತೈವಾನ್&zwnj;, ಇರಾಕ್&zwnj;, ಇಸ್ರೇಲ್&zwnj;, ಜಪಾನ್&zwnj;, ಕತಾರ್&zwnj;, ರಷ್ಯಾ, ಸೌದಿ ಅರೇಬಿಯಾ, ಸಿಂಗಾಪುರ, ಯುಎಇ, ಬ್ರಿಟನ್&zwnj;, ಕೆನಡಾ, ಈಕ್ವೆಡಾರ್&zwnj;, ಇಯು, ಇಂಡೋನೇಷ್ಯಾ, ಮೆಕ್ಸಿಕೋ, ಪಾಕಿಸ್ತಾನ ಮತ್ತಿತರ ದೇಶಗಳ ಮೇಲೆ ಶೇ.11ರಿಂದ 12.5ರಷ್ಟು ಹೆಚ್ಚುವರಿ ತೆರಿಗೆ ಬೀಳುವ ನಿರೀಕ್ಷೆ ಇದೆ.&lt;/p&gt;&lt;p&gt;--&lt;/p&gt;&lt;p&gt;ಅಮೆರಿಕದ ಆರೋಪ ನಿರಾಕರಿಸಿದ ಭಾರತ&lsquo;ಶೋಷಿತ ಕಾರ್ಮಿಕರ&rsquo; ಕುರಿತ ಅಮೆರಿಕ ಆರೋಪವನ್ನು ಭಾರತ ಸ್ಪಷ್ಟವಾಗಿ ತಳ್ಳಿಹಾಕಿದೆ. &lsquo;ಇದು ಆಧಾರರಹಿತ ಆರೋಪ. ಈ ರೀತಿಯ ಆರೋಪಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ&rsquo; ಎಂದು ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ. ಇದೇ ವೇಳೆ ಈ ವಿಚಾರವನ್ನು ಸದ್ಯ ಎರಡೂ ದೇಶಗಳ ನಡುವೆ ನಡೆಯುತ್ತಿರುವ ದ್ವಿಪಕ್ಷೀಯ ವ್ಯಾಪಾರ ಮಾತುಕತೆ ವೇಳೆ ಚರ್ಚಿಸಲಾಗುವುದು ಎಂದೂ ತಿಳಿಸಿದೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/us-trade-team-in-delhi-trump-plans-new-tariffs-on-india-over-forced-labour/articleshow-6swhhpo"/>
        </item>
        <item>
            <title><![CDATA[ ‘ಬಿಜೆಪಿ ಹಿಂಸೆ’ ಖಂಡಿಸಿ ಮಮತಾ ಬೀದಿಗೆ]]></title>
            <link>https://www.kannadaprabha.in/india-news/mamata-sits-on-dharna-in-kolkata-to-protest-post-poll-violence/articleshow-9x6gi5i</link>
            <guid isPermaLink="true">https://www.kannadaprabha.in/india-news/mamata-sits-on-dharna-in-kolkata-to-protest-post-poll-violence/articleshow-9x6gi5i</guid>
            <pubDate>Wed, 03 Jun 2026 01:45:00 +0530</pubDate>
            <description><![CDATA[ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ನಡೆದ ಚುನಾವಣೋತ್ತರ ಹಿಂಸಾಚಾರವನ್ನು ಖಂಡಿಸಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.]]></description>
            <media:content url="https://static-assets.asianetnews.com/kp/json/02062026/pictures/MAMATA_995.JPG" type="image/jpeg" height="390" width="690"/>
            <content:encoded><![CDATA[&lt;p&gt;- ಮೈಕ್&zwnj; ಬಳಕೆಗೂ ಅನುಮತಿಯಿಲ್ಲ&lt;/p&gt;- ಮೆಗಾಫೋನ್&zwnj; ಬಳಸಿ ದೀದಿ ಪ್ರತಿಭಟನೆ&lt;p&gt;- ಹೋರಾಡುವೆ, ಇಲ್ಲವೇ ಸಾಯುವೆ: ಮಮತಾ&lt;/p&gt;ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ನಡೆದ ಚುನಾವಣೋತ್ತರ ಹಿಂಸಾಚಾರವನ್ನು ಖಂಡಿಸಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಅವರಿಗೆ ಭಾಷಣಕ್ಕೆ ಮೈಕ್&zwnj; ಬಳಕೆ ಅನುಮತಿ ಸಿಗದ ಕಾರಣ ಹೆಚ್ಚಾಗಿ ತರಕಾರಿ ಮಾರಾಟಗಾರರು ಬಳಸುವ ಮೆಗಾಫೋನ್&zwnj; ಬಳಸಿಯೇ ಮಾತನಾಡಿದರು ಹಾಗೂ &lsquo;ಹೋರಾಡುವೆ ಇಲ್ಲವೇ ಸಾಯುವೆ&rsquo; ಎಂದು ಗುಡುಗಿದರು.&lt;p&gt;ಚುನಾವಣೆ ಬಳಿಕ ಪಕ್ಷದ ಕಾರ್ಯಕರ್ತರು ಮತ್ತು ನಾಯಕರ ಮೇಲೆ ಬಿಜೆಪಿ ಹಿಂಸಾಚಾರ ನಡೆಸುತ್ತಿದೆ ಎಂದು ಆರೋಪಿಸಿ ಮಮತಾ, ರಾಣಿ ರಶ್ಮೋನಿ ರಸ್ತೆಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದರು. ಆದರೆ ಪೊಲೀಸರು ಅದಕ್ಕೆ ಅನುಮತಿಸಲಿಲ್ಲ. ಬಳಿಕ ದೀದಿ ಅದನ್ನು ವೈ ಚಾನೆಲ್&zwnj; ಎಂಬ ಕಡೆಗೆ ಸ್ಥಳಾಂತರಿಸಿದರು, ಈ ವೇಳೆಯೂ ಅವರಿಗೆ ವೇದಿಕೆ ಮೇಲೆ ಮೈಕ್&zwnj; ಬಳಸುವುದಕ್ಕೆ ಪೊಲೀಸರು ಅನುಮತಿ ನೀಡಿರಲಿಲ್ಲ. ಆಗ ಅವರು ಮೆಗಾಫೋನ್&zwnj; ಬಳಸಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿ ವಿರುದ್ಧ ಹರಿಹಾಯ್ದರು.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/mamata-sits-on-dharna-in-kolkata-to-protest-post-poll-violence/articleshow-9x6gi5i"/>
        </item>
        <item>
            <title><![CDATA[‘ಧುರಂಧರ್‌’ಗೆ ಬೆದರಿ ಅಲರ್ಟ್‌ ಆದ ಪಾತಕಿ ದಾವೂದ್‌ ಗ್ಯಾಂಗ್‌!]]></title>
            <link>https://www.kannadaprabha.in/india-news/dhurandhar-angered-d-company-then-dawood-gang-made-a-mumbai-move-sources/articleshow-b0qyfta</link>
            <guid isPermaLink="true">https://www.kannadaprabha.in/india-news/dhurandhar-angered-d-company-then-dawood-gang-made-a-mumbai-move-sources/articleshow-b0qyfta</guid>
            <pubDate>Tue, 02 Jun 2026 07:16:38 +0530</pubDate>
            <description><![CDATA[ಇತ್ತೀಚೆಗೆ ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾದ ಭೂಗತ ಲೋಕದ ಪಾತಕಿ ದಾವೂದ್&zwnj; ಇಬ್ರಾಹಿಂ ಗ್ಯಾಂಗ್&zwnj;ನ ಉಗ್ರರು &lsquo;ಧುರಂಧರ್&zwnj;&rsquo; ಚಿತ್ರದ ಯಶಸ್ಸಿಗೆ ಬೆದರಿ ಉಗ್ರಕೃತ್ಯಗಳನ್ನು ತೀವ್ರಗೊಳಿಸಿದ್ದರು ಎಂಬ ಆಘಾತಕಾರಿ ಮಾಹಿತಿಯನ್ನು ಮೂಲಗಳು ಬಹಿರಂಗಪಡಿಸಿವೆ.]]></description>
            <media:content url="https://static-assets.asianetnews.com/kp/json/01062026/pictures/DAWOOD_740.JPG" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;strong&gt;ಮುಂಬೈ:&lt;/strong&gt; ಇತ್ತೀಚೆಗೆ ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾದ ಭೂಗತ ಲೋಕದ ಪಾತಕಿ ದಾವೂದ್&zwnj; ಇಬ್ರಾಹಿಂ ಗ್ಯಾಂಗ್&zwnj;ನ ಉಗ್ರರು &lsquo;ಧುರಂಧರ್&zwnj;&rsquo; ಚಿತ್ರದ ಯಶಸ್ಸಿಗೆ ಬೆದರಿ ಉಗ್ರಕೃತ್ಯಗಳನ್ನು ತೀವ್ರಗೊಳಿಸಿದ್ದರು ಎಂಬ ಆಘಾತಕಾರಿ ಮಾಹಿತಿಯನ್ನು ಮೂಲಗಳು ಬಹಿರಂಗಪಡಿಸಿವೆ.&lt;/p&gt;&lt;p&gt;ಇತ್ತೀಚೆಗೆ ತೆರೆಕಂಡ ರಣವೀರ್&zwnj; ಸಿಂಗ್&zwnj; ಅಭಿನಯದ &lsquo;ಧುರಂಧರ್&zwnj;&rsquo; ಚಿತ್ರದಲ್ಲಿ ದಾವೂದ್&zwnj; ಇಬ್ರಾಹಿಂನನ್ನು ಪ್ರತಿಬಿಂಬಿಸುವ ಪಾತ್ರವೊಂದನ್ನು ಚಿತ್ರಿಸಲಾಗಿದೆ. ಅದರಲ್ಲಿ ಭಾರತೀಯ ಗೂಢಚರರು ನಿಧಾನ ವಿಷವನ್ನು ದಾವೂದ್&zwnj;ಗೆ ನೀಡಿ, ಆತ ಮರಣಶಯ್ಯೆಯಲ್ಲಿರುವಂತೆ ತೋರಿಸಲಾಗಿದೆ. ಇದರಿಂದ ಬೆಚ್ಚಿದ ಉಗ್ರರು, ಆತ ಇನ್ನೂ ಬದುಕಿದ್ದಾನೆ ಎಂದು ಸಾಬೀತುಪಡಿಸುವ ಅನಿವಾರ್ಯತೆಗೆ ಸಿಲುಕಿದರು. ಹಾಗಾಗಿ ಮುಂಬೈನಲ್ಲಿ ಉಗ್ರಜಾಲಕ್ಕೆ ಮರುಜೀವ ನೀಡಿದರು ಎಂದು ಮೂಲಗಳು ತಿಳಿಸಿವೆ.&amp;nbsp;&lt;/p&gt;&lt;h2&gt;&lt;strong&gt;ಮುಂಬೈ ಬೀದಿಗಳಿಂದ ಉಗ್ರರ ಆಯ್ಕೆ:&amp;nbsp;&lt;/strong&gt;&lt;/h2&gt;&lt;p&gt;ನೈಜ ಕಾರಣವನ್ನು ತಿಳಿಸದೆ ಮುಂಬೈನ ಬೀದಿಗಳಿಂದ ಹೊಸಬರನ್ನು ಸಂಘಟನೆಗೆ ಸೇರಿಸಿಕೊಳ್ಳಲಾಯಿತು. ಬಾಂದ್ರಾ ಗರೀಬ್&zwnj; ನಗರದಲ್ಲಿನ ಅಕ್ರಮ ಮಸೀದಿಯನ್ನು ತೆರವುಗೊಳಿಸಿದ ಬುಲ್ಡೋಜರ್&zwnj; ಕಾರ್ಯಾಚರಣೆ ವಿರುದ್ಧ ಅವರಿಗೆ ಪ್ರಚೋದನೆ ನೀಡಲಾಯಿತು. ಹೀಗೆ ನೇಮಕ ಮಾಡಿಕೊಂಡ ಹೊಸ ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಕೆ, ತರಬೇತಿ ಮೊದಲಾದ ಹೊಣೆಗಾರಿಕೆಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್&zwnj;ಐ ಹೊತ್ತುಕೊಂಡಿತು ಎಂದು ತಿಳಿದುಬಂದಿದೆ. &amp;nbsp;&lt;/p&gt;&lt;p&gt;ಶೂಟರ್&zwnj; ಮುನ್ನಾ ಜಿಂಗಡ, ಶಕೀಲ್ ಗ್ಯಾಂಗ್&zwnj; ಇತ್ಯಾದಿಗಳಿಗೆ ಉಗ್ರ ಚಟುವಟಿಕೆ ನಡೆಸಲು ವಿವಿಧ ಜವಾಬ್ದಾರಿ ನೀಡಲಾಯಿತು. ಭೂಗತ ಲೋಕದಲ್ಲಿ ದಾವೂದ್&zwnj; ಪ್ರಭಾವ ಕ್ಷೀಣಿಸುತ್ತಿರುವುದರಿಂದ, ತಮ್ಮ ಅಸ್ತಿತ್ವ ಮರುಸ್ಥಾಪಿಸುವುದು ಗ್ಯಾಂಗ್&zwnj;ನ ಮೊದಲ ಉದ್ದೇಶವಾಗಿತ್ತು. ಐಎಸ್&zwnj;ಐ ಸಹಾಯದಿಂದ ಭಾರತದ ಪ್ರಬಲ ವ್ಯಕ್ತಿಗಳನ್ನು ಹತ್ಯೆ ಮಾಡುವ ಸಂಚೂ ರೂಪುಗೊಂಡಿತ್ತು ಎಂದು ಮೂಲಗಳು ಶಂಕಿಸಿವೆ.&lt;/p&gt;&lt;h3&gt;-ಇತ್ತೀಚೆಗೆ ದೆಹಲಿ ಪೊಲೀಸರಿಂದ ಉಗ್ರರ ವಶ&lt;/h3&gt;&lt;p&gt;-ಮುಂಬೈನಲ್ಲಿ ಮತ್ತೆ ಸಕ್ರಿಯವಾಗಿದ್ದ ಸಂಘಟನೆ&lt;/p&gt;&lt;p&gt;-ಮುಂಬೈ ಬೀದಿಗಳಿಂದ ಹೊಸ ಉಗ್ರರ ನೇಮಕ&lt;/p&gt;&lt;p&gt;-ಭೂಗತ ಲೋಕಕ್ಕೆ ಮರುಜೀವ ನೀಡಲು ಸಿದ್ಧತೆ&lt;/p&gt;&lt;p&gt;-ಭಾರತದ ಪ್ರಭಾವಿ ವ್ಯಕ್ತಿಗಳ ಹತ್ಯೆಗೆ ಷಡ್ಯಂತ್ರ&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/dhurandhar-angered-d-company-then-dawood-gang-made-a-mumbai-move-sources/articleshow-b0qyfta"/>
        </item>
        <item>
            <title><![CDATA[ಸೂಟ್‌ ರಹಸ್ಯ ಬಿಚ್ಚಿಟ್ಟ ತಮಿಳುನಾಡು ಸಿಎಂ ವಿಜಯ್‌]]></title>
            <link>https://www.kannadaprabha.in/india-news/i-see-everything-in-black-and-white-vijay-on-questions-on-his-suit/articleshow-f25b493</link>
            <guid isPermaLink="true">https://www.kannadaprabha.in/india-news/i-see-everything-in-black-and-white-vijay-on-questions-on-his-suit/articleshow-f25b493</guid>
            <pubDate>Tue, 02 Jun 2026 03:30:00 +0530</pubDate>
            <description><![CDATA[ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ ಹಲವು ಬಾರಿ ಸೂಟ್&zwnj;ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದ ತಮಿಳುನಾಡು ಸಿಎಂ ವಿಜಯ್&zwnj;, ಅದರ ಕಾರಣವನ್ನು ಬಹಿರಂಗಪಡಿಸಿದ್ದಾರೆ. ನಾನು ಎಲ್ಲವನ್ನೂ ಕಪ್ಪು ಬಿಳುಪಾಗಿ (ಅಕ್ರಮ ಹಾಗೂ ಸಕ್ರಮ) ನೋಡುವುದರ ಸಂಕೇತವಿದು ಎಂದಿದ್ದಾರೆ.]]></description>
            <media:content url="https://static-assets.asianetnews.com/kp/json/01062026/pictures/VIJAY_NEW_845.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತಿರುಚಿರಾಪಳ್ಳಿ&lt;/strong&gt;: ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ ಹಲವು ಬಾರಿ ಸೂಟ್&zwnj;ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದ ತಮಿಳುನಾಡು ಸಿಎಂ ವಿಜಯ್&zwnj;, ಅದರ ಕಾರಣವನ್ನು ಬಹಿರಂಗಪಡಿಸಿದ್ದಾರೆ. &amp;nbsp;&lt;/p&gt;&lt;p&gt;ನಾನು ಎಲ್ಲವನ್ನೂ ಕಪ್ಪು ಬಿಳುಪಾಗಿ (ಅಕ್ರಮ ಹಾಗೂ ಸಕ್ರಮ) ನೋಡುವುದರ ಸಂಕೇತವಿದು ಎಂದಿದ್ದಾರೆ.ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿ ಸಾರ್ವಜನಿಕರ ಎದುರು ತಮ್ಮ ಕ್ಷೇತ್ರವಾದ ತಿರುಚಿರಾಪಳ್ಳಿಯಲ್ಲಿ ಮಾತನಾಡಿದ ಅವರು, &lsquo;ನನ್ನ ಸೂಟ್&zwnj; ಬಣ್ಣ ಯಾವಾಗಲೂ ಕಪ್ಪು ಮತ್ತು ಬಿಳಿ ಆಗಿರುತ್ತದೆ. &amp;nbsp;&lt;/p&gt;&lt;h2&gt;ನಡುವಿನ ಯಾವ ಬಣ್ಣವನ್ನೂ ಧರಿಸುವುದಿಲ್ಲ ಹಾಗೂ ನೋಡುವುದಿಲ್ಲ&rsquo;&lt;/h2&gt;&lt;p&gt;ಕಾರಣ ನಾನು ಎಲ್ಲವನ್ನು ಈ ಎರಡು ಬಣ್ಣಗಳಲ್ಲಷ್ಟೇ ನೋಡುತ್ತೇನೆ. ಅದರ ನಡುವಿನ ಯಾವ ಬಣ್ಣವನ್ನೂ ಧರಿಸುವುದಿಲ್ಲ ಹಾಗೂ ನೋಡುವುದಿಲ್ಲ&rsquo; ಎಂದಿದ್ದಾರೆ.&amp;nbsp;&lt;/p&gt;&lt;h3&gt;ಮತದಾರರಿಗೆ ಧನ್ಯವಾದ&lt;/h3&gt;&lt;p&gt;&amp;nbsp;ಇದೇ ವೇಳೆ ಚೊಚ್ಚಲ ಚುನಾವಣೆಯಲ್ಲಿ ತಮ್ಮ ಕೈಹಿಡಿದು ಅಧಿಕಾರಕ್ಕೇರಿಸಿದ ಮತದಾರರಿಗೆ ಧನ್ಯವಾದವನ್ನು ಅರ್ಪಿಸಿದ ವಿಜಯ್&zwnj;, &lsquo;ಇಷ್ಟು ವರ್ಷ ನಿಮಗೆ ಮೋಸ ಮಾಡಿದ ಇಬ್ಬರನ್ನು (ಡಿಎಂಕೆ ಮತ್ತು ಅಣ್ಣಾಡಿಎಂಕೆ) ನಿರ್ಲಕ್ಷಿಸಿ ನನ್ನನ್ನು ಬೆಂಬಲಿಸಿದ್ದಕ್ಕೆ ಶಿರಬಾಗಿ ವಂದಿಸುತ್ತೇನೆ&rsquo; ಎಂದರು. ಜತೆಗೆ, &lsquo;ನನ್ನ ಆಡಳಿತವನ್ನು ನೀವೆಲ್ಲಾ ಮೆಚ್ಚುತ್ತೀರಿ ಹಾಗೂ ಮುಂದೆಯೂ ಬೆಂಬಲಿಸುತ್ತೀರಿ ಎಂಬ ನಂಬಿಕೆಯಿದೆ&rsquo; ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/i-see-everything-in-black-and-white-vijay-on-questions-on-his-suit/articleshow-f25b493"/>
        </item>
        <item>
            <title><![CDATA[ಅಮೆರಿಕ ಜತೆ ಮಾತುಕತೆ ಸ್ಥಗಿತ : ಇರಾನ್]]></title>
            <link>https://www.kannadaprabha.in/india-news/iran-put-break-on-deal-with-us/articleshow-fbfym9g</link>
            <guid isPermaLink="true">https://www.kannadaprabha.in/india-news/iran-put-break-on-deal-with-us/articleshow-fbfym9g</guid>
            <pubDate>Tue, 02 Jun 2026 07:18:43 +0530</pubDate>
            <description><![CDATA[ಇರಾನ್ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕತೆಯ ಮತ್ತೊಂದು ರಸ್ತೆ ಅಡಚಣೆಯನ್ನು ಎದುರಿಸಿದೆ. ಇಸ್ರೇಲಿ ಪಡೆಗಳು ಲೆಬನಾನ್ ಮತ್ತು ಗಾಜಾದಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವವರೆಗೆ ಮಧ್ಯವರ್ತಿಗಳ ಮೂಲಕ ಯಾವುದೇ ಮಾತುಕತೆ ಮುಂದುವರಿಯಲು ಸಾಧ್ಯವಿಲ್ಲ. ಅವರ ಮೂಲಕ ಯಾವುದೇ ವಿಚಾರ ವಿನಿಮಯ ಮಾಡಿಕೊಳ್ಳುವುದಿಲ್ಲ ಎಂದಿದೆ ಎಂದು ಇರಾನ್&zwnj;ನ ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.]]></description>
            <media:content url="https://static-assets.asianetnews.com/kp/json/01062026/pictures/IRAN_WAR_881.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಟೆಹ್ರಾನ್: &lt;/strong&gt;ಇರಾನ್ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕತೆಯ ಮತ್ತೊಂದು ರಸ್ತೆ ಅಡಚಣೆಯನ್ನು ಎದುರಿಸಿದೆ. ಇಸ್ರೇಲಿ ಪಡೆಗಳು ಲೆಬನಾನ್ ಮತ್ತು ಗಾಜಾದಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವವರೆಗೆ ಮಧ್ಯವರ್ತಿಗಳ ಮೂಲಕ ಯಾವುದೇ ಮಾತುಕತೆ ಮುಂದುವರಿಯಲು ಸಾಧ್ಯವಿಲ್ಲ. ಅವರ ಮೂಲಕ ಯಾವುದೇ ವಿಚಾರ ವಿನಿಮಯ ಮಾಡಿಕೊಳ್ಳುವುದಿಲ್ಲ ಎಂದಿದೆ ಎಂದು ಇರಾನ್&zwnj;ನ ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.&lt;/p&gt;&lt;p&gt;ಇರಾನ್ ಮತ್ತು ಅಮೆರಿಕ ನಡುವಿನ ಕದನ ವಿರಾಮವು ಇಡೀ ಪ್ರದೇಶಕ್ಕೆ ಅನ್ವಯವಾಗಬೇಕು ಎಂಬ ಟೆಹ್ರಾನ್&zwnj;ನ ನಿಲುವನ್ನು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಪುನರುಚ್ಚರಿಸಿದ್ದಾರೆ. ಅಲ್ಲದೆ, &lsquo;ಕದನವಿರಾಮ ಇಡೀ ಪ್ರದೇಶದ ತುಂಬ ವ್ಯಾಪಿಸಿರಬೇಕು. ಒಂದು ಕಡೆ ಅದರ ಉಲ್ಲಂಘನೆ ಆದರೂ ಎಲ್ಲ ಕಡೆ ಕದನ ವಿರಾಮದ ಉಲ್ಲಂಘನೆಯಾದಂತೆ&rsquo; ಎಂದಿದ್ದಾರೆ.&lt;/p&gt;&lt;p&gt;ಅಮೆರಿಕ ಅಧ್ಯಕ್ಷ ಡೊನಾಲ್ಡ್&zwnj; ಟ್ರಂಪ್ ಅವರು ಮೊನ್ನೆ ಮಾತನಾಡಿ, &lsquo;ಇರಾನ್&zwnj; ಸಂಧಾನಕ್ಕೆ ಹಾತೊರೆಯುತ್ತಿದೆ. ಸಂಧಾನ ಏರ್ಪಟ್ಟರೆ ಒಳ್ಳೆಯದು. ಇಲ್ಲದಿದ್ದರೆ ಅಮೆರಿಕ ಮತ್ತೆ ದಾಳಿ ಮಾಡಬೇಕಾಗಬಹುದು&rsquo; ಎಂದಿದ್ದರು. ಅದರ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ.&lt;/p&gt;&lt;h2&gt;&lt;strong&gt;ಶಾಂತಿ ಮಾತುಕತೆ ನಡುವೆ ಅಮೆರಿಕ-ಇರಾನ್ ದಾಳಿ-ಪ್ರತಿದಾಳಿ&amp;nbsp;&lt;/strong&gt;&lt;/h2&gt;&lt;p&gt;ದುಬೈ: ಅಮೆರಿಕ-ಇರಾನ್&zwnj; ನಡುವಿನ ಶಾಂತಿ ಮಾತುಕತೆ ನಡುವೆಯೇ ಇರಾನ್&zwnj;ನ ರೇಡಾರ್&zwnj; ಹಾಗೂ ಡ್ರೋನ್&zwnj; ಕಂಟ್ರೋಲ್&zwnj; ಕೇಂದ್ರಗಳ ಮೇಲೆ ಅಮೆರಿಕ ಶನಿವಾರ ಹಾಗೂ ಭಾನುವಾರ ವಾಯುದಾಳಿ ನಡೆಸಿದೆ. ಇದಕ್ಕೆ ಅಮೆರಿಕದ ಮಿತ್ರದೇಶ ಕುವೈತ್&zwnj; ಮೇಲೆ ಇರಾನ್ ಪ್ರತಿದಾಳಿ ಮಾಡಿದೆ.ತನ್ನ ಎಂಕ್ಯು-1 ಪರಿವೀಕ್ಷಣಾ ಡ್ರೋನ್ ನಾಶಪಡಿಸಿದ್ದಕ್ಕೆ ಪ್ರತೀಕಾರವಾಗಿ ಅಮೆರಿಕ ಈ ದಾಳಿ ನಡೆಸಿದೆ ಎನ್ನಲಾಗಿದೆ. ಆದರೆ ಇದಕ್ಕೆ ಕುವೈತ್&zwnj;ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ಇರಾನ್&zwnj; ತಿರುಗೇಟಿಗೆ ಯತ್ನಿಸಿದೆ. ಆದಾಗ್ಯೂ ಇರಾನ್&zwnj;ನ ಕ್ಷಿಪಣಿ, ಡ್ರೋನ್&zwnj;ಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಲಾಗಿದೆ ಎಂದು ಎಂದು ಕುವೈತ್&zwnj; ಹೇಳಿಕೊಂಡಿದೆ.&lt;/p&gt;&lt;h3&gt;&lt;strong&gt;ಅಮೆರಿಕ ಹೇಳಿದ್ದೇನು?&amp;nbsp;&lt;/strong&gt;&lt;/h3&gt;&lt;p&gt;ಗೋರುಕ್&zwnj;, ಕೇಶಂ ದ್ವೀಪದಲ್ಲಿರುವ ಇರಾನ್&zwnj; ರೇಡಾರ್&zwnj; ಮತ್ತು ಕಮಾಂಡ್&zwnj; ಆ್ಯಂಡ್&zwnj; ಕಂಟ್ರೋಲ್&zwnj; ಕೇಂದ್ರಗಳ ಮೇಲೆ ಅಮೆರಿಕದ ವಿಮಾನಗಳು ಬಾಂಬ್&zwnj; ದಾಳಿ ನಡೆಸಿವೆ.&lt;/p&gt;&lt;p&gt;ಅಂತಾರಾಷ್ಟ್ರೀಯ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ತನ್ನ ಎಂಕ್ಯು-1ಪ್ರಿಡೇಟರ್&zwnj; ಡ್ರೋನ್&zwnj; ಅನ್ನು ಹೊಡೆದುರುಳಿಸಿದಕ್ಕಾಗಿ ಈ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಸೇನೆ ಹೇಳಿಕೊಂಡಿದೆ.ತನ್ನ ಯುದ್ಧವಿಮಾನಗಳು ಇರಾನ್&zwnj;ನ ಗ್ರೌಂಡ್&zwnj; ಕಂಟ್ರೋಲ್&zwnj; ಸ್ಟೇಷನ್&zwnj; ಮತ್ತು ಹೋರ್ಮುಜ್&zwnj; ಜಲಾಶಯದಲ್ಲಿ ವಾಣಿಜ್ಯ ಹಡಗುಗಳಿಗೆ ಆತಂಕವೊಡ್ಡುತ್ತಿರುವ 2 ಆತ್ಮಾಹುತಿ ದಾಳಿ ಡ್ರೋನ್&zwnj;ಗಳನ್ನು ಹೊಡೆದುರುಳಿಸಿವೆ ಎಂದೂ ಅಮೆರಿಕ ತಿಳಿಸಿದೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/iran-put-break-on-deal-with-us/articleshow-fbfym9g"/>
        </item>
        <item>
            <title><![CDATA[ನೀಟ್‌ ವಿವಾದದಲ್ಲಿ ಮೋದಿಗೆ ಕಾಂಗ್ರೆಸಿಗ ದಿಗ್ವಿಜಯ್‌ ಸಾಥ್‌]]></title>
            <link>https://www.kannadaprabha.in/india-news/now-that-pm-has-stepped-in-digvijaya-singh-hopeful-of-resolution-to-neet-crisis/articleshow-fe2aw45</link>
            <guid isPermaLink="true">https://www.kannadaprabha.in/india-news/now-that-pm-has-stepped-in-digvijaya-singh-hopeful-of-resolution-to-neet-crisis/articleshow-fe2aw45</guid>
            <pubDate>Tue, 02 Jun 2026 03:30:00 +0530</pubDate>
            <description><![CDATA[ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿ, ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್&zwnj; ಹರಿಹಾಯುತ್ತಿರುವ ನಡುವೆ ಅಚ್ಚರಿಯೆಂಬಂತೆ ಕಾಂಗ್ರೆಸ್&zwnj; ನಾಯಕ ದಿಗ್ವಿಜಯ್&zwnj; ಸಿಂಗ್&zwnj; ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸವಿದೆ ಎಂದಿದ್ದಾರೆ.]]></description>
            <media:content url="https://static-assets.asianetnews.com/kp/json/01062026/pictures/DIGVIJAY_945.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ನವದೆಹಲಿ:&lt;/strong&gt; ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿ, ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್&zwnj; ಹರಿಹಾಯುತ್ತಿರುವ ನಡುವೆ ಅಚ್ಚರಿಯೆಂಬಂತೆ ಕಾಂಗ್ರೆಸ್&zwnj; ನಾಯಕ ದಿಗ್ವಿಜಯ್&zwnj; ಸಿಂಗ್&zwnj; ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸವಿದೆ ಎಂದಿದ್ದಾರೆ.&lt;/p&gt;&lt;h2&gt;ಜೂ. 21ರಂದು ನಡೆಯಲಿರುವ ಮರುಪರೀಕ್ಷೆಯ ಸಿದ್ಧತೆ&lt;/h2&gt;&lt;p&gt;ಜೂ. 21ರಂದು ನಡೆಯಲಿರುವ ಮರುಪರೀಕ್ಷೆಯ ಸಿದ್ಧತೆ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡುತ್ತಿದ್ದ ಸಿಂಗ್&zwnj;, &lsquo;ನಾವು ಪ್ರಧಾನಿ ಹಾಗೂ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟಿದ್ದೇವೆ. ನೀಟ್&zwnj; ವಿಷಯದಲ್ಲಿ ಪ್ರಧಾನಿ ಮಧ್ಯಪ್ರವೇಶಿಸಿದ್ದಾರೆ. ವಿದ್ಯಾರ್ಥಿಗಳಿಗೆ ಯಾವುದೇ ಅನ್ಯಾಯವಾಗದು ಎಂಬುದು ನಮ್ಮ ವಿಶ್ವಾಸ&rsquo; ಎಂದರು.&lt;/p&gt;&lt;h3&gt;ಇದು ರಾಜಕೀಯ ವಿಷಯವಲ್ಲ&lt;/h3&gt;&lt;p&gt;ಸಭೆಗೂ ಮುನ್ನ ನಡೆದ ಅನೌಪಚಾರಿಕ ಚರ್ಚೆಯ ವೇಳೆ ಈ ವಿವಾದವನ್ನು ರಾಜಕೀಯಗೊಳಿಸಲಾಗುತ್ತಿದೆ ಎಂಬ ಆಡಳಿತ ಪಕ್ಷದವರ ಕಳವಳಕ್ಕೆ ಪ್ರತಿಕ್ರಿಯಿಸಿದ ಸಿಂಗ್&zwnj;, &lsquo;ಇದು ರಾಜಕೀಯ ವಿಷಯವಲ್ಲ. ಬದಲಿಗೆ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರ ಮೇಲೆ ಪರಿಣಾಮ ಬೀರಿರುವ ಘಟನೆ. ಸಮಿತಿಯ ಉದ್ದೇಶವು ಪರೀಕ್ಷೆ ಬಗೆಗಿನ ಕಳವಳಗಳನ್ನು ಇತ್ಯರ್ಥಗೊಳಿಸಿ ನ್ಯಾಯಯುತವಾಗಿ ಪರೀಕ್ಷೆ ನಡೆಸುವುದಾಗಿದೆ&rsquo; ಎಂದರು. ಜತೆಗೆ ಇದಕ್ಕಾಗಿ ಅವರು ಶಿಕ್ಷಣ ಸಚಿವಾಲಯ ಮತ್ತು ಅಧಿಕಾರಿಗಳಿಗೆ ಶುಭ ಕೋರಿದರು.&lt;/p&gt;&lt;p&gt;ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್&zwnj; ಅವರ ರಾಜೀನಾಮೆ ಕೇಳಿದ್ದ ಕಾಂಗ್ರೆಸ್&zwnj; ಪಕ್ಷದ ಹಿರಿಯರೊಬ್ಬರ ಈ ನಡೆ ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/now-that-pm-has-stepped-in-digvijaya-singh-hopeful-of-resolution-to-neet-crisis/articleshow-fe2aw45"/>
        </item>
        <item>
            <title><![CDATA[ ಬಿಜೆಪಿಗೆ ಗುಡ್‌ಬೈ: ವರಿಷ್ಠರ ಮುಂದೆ ಅಣ್ಣಾಮಲೈ ಇಂಗಿತ]]></title>
            <link>https://www.kannadaprabha.in/india-news/-want-cordial-separa-want-cordial-separation-what-annamalai-told-bjp-president-nitin-nabin/articleshow-he0ilwt</link>
            <guid isPermaLink="true">https://www.kannadaprabha.in/india-news/-want-cordial-separa-want-cordial-separation-what-annamalai-told-bjp-president-nitin-nabin/articleshow-he0ilwt</guid>
            <pubDate>Wed, 03 Jun 2026 03:00:00 +0530</pubDate>
            <description><![CDATA[ಹೊಸ ಪಕ್ಷ ಸ್ಥಾಪನೆಗೆ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾದ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್&zwnj; ನವೀನ್, ಕೇಂದ್ರ ಗೃಹ ಸಚಿವ ಅಮಿತ್&zwnj; ಶಾ ಹಾಗೂ ಬಿಜೆಪಿ ಮುಖಂಡ ಬಿ.ಎಲ್&zwnj;. ಸಂತೋಷ್&zwnj; ಅವರನ್ನು ಮಂಗಳವಾರ ಭೇಟಿ ಮಾಡಿ ಪಕ್ಷಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.]]></description>
            <media:content url="https://static-assets.asianetnews.com/kp/json/02062026/pictures/ANNAMALAI_SHAH_442.JPG" type="image/jpeg" height="390" width="690"/>
            <content:encoded><![CDATA[&lt;p&gt;- ನಿತಿನ್&zwnj; ನವೀನ್&zwnj;, ಅಮಿತ್&zwnj; ಶಾ, ಬಿ.ಎಲ್&zwnj;. ಸಂತೋಷ್&zwnj; ಜತೆಗೂ ಭೇಟಿ- ಪಕ್ಷದಿಂದ ಸೌಹಾರ್ದಯುತವಾಗಿ ನಿರ್ಗಮನದ ಇಚ್ಛೆ&lt;/p&gt;- ಮೂರೂ ನಾಯಕರಿಂದ ನಾಯಕರಿಂದ ಮನವೊಲಿಕೆ ಯತ್ನ&lt;p&gt;- ತ.ನಾಡು ಬಿಜೆಪಿ ಅಧ್ಯಕ್ಷಗೆ ಇಂದು ದಿಲ್ಲಿಗೆ ಬುಲಾವ್&zwnj;&lt;/p&gt;&lt;p&gt;ನವದೆಹಲಿ: ಹೊಸ ಪಕ್ಷ ಸ್ಥಾಪನೆಗೆ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾದ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್&zwnj; ನವೀನ್, ಕೇಂದ್ರ ಗೃಹ ಸಚಿವ ಅಮಿತ್&zwnj; ಶಾ ಹಾಗೂ ಬಿಜೆಪಿ ಮುಖಂಡ ಬಿ.ಎಲ್&zwnj;. ಸಂತೋಷ್&zwnj; ಅವರನ್ನು ಮಂಗಳವಾರ ಭೇಟಿ ಮಾಡಿ ಪಕ್ಷಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. &lt;/p&gt;ಅವರನ್ನು ಉಳಿಸಿಕೊಳ್ಳಲು ಆರ್&zwnj;ಎಸ್&zwnj;ಎಸ್&zwnj; ಮತ್ತು ಬಿಜೆಪಿ ನಾಯಕರಿಂದ ಅಂತಿಮ ಕ್ಷಣದವರೆಗೆ ಪ್ರಯತ್ನಗಳು ನಡೆದರೂ, ಅವ್ಯಾವವೂ ಫಲ ಕೊಡದೆ ಅವರು ಪಕ್ಷವನ್ನು ತೊರೆಯುವ ಮಾತನ್ನು ಪುನರುಚ್ಚರಿಸಿದ್ದಾರೆ ಎಂದು ವರದಿಯಾಗಿದೆ. &lt;p&gt;ಅಣ್ಣಾಮಲೈ ಮಂಗಳವಾರ ಬೆಳಿಗ್ಗೆ ನಿತಿನ್&zwnj; ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್&zwnj;. ಸಂತೋಷ್&zwnj; ಅವರನ್ನು ಭೇಟಿಯಾದರು. ಸ್ವತಂತ್ರವಾಗಿ ರಾಜಕೀಯವಾಗಿ ಮುನ್ನಡೆಯುವ ಅಭಿಲಾಷೆ ವ್ಯಕ್ತಪಡಿಸಿದ ಅವರು, ಸೌಹಾರ್ದಯುತವಾಗಿ ಪಕ್ಷದಿಂದ ಹೊರನಡೆಯುತ್ತಿರುವುದಾಗಿ ತಿಳಿಸಿದರು. ನಂತರ ಪಕ್ಷದ ಅಧ್ಯಕ್ಷ ನಿತಿನ್&zwnj; ನವೀನ್&zwnj; ಅವರನ್ನು ಭೇಟಿ ಮಾಡಿ, &lsquo;ಪಕ್ಷದಲ್ಲಿ ಇನ್ನು ಮುಂದುವರಿಯಲು ಆಗದು&rsquo; ಎಂದು ಬರೆದಿದ್ದ ಕಾಗದ ನೀಡಿದರು ಎಂದು ಗೊತ್ತಾಗಿದೆ, ಆದರೆ ಇದು ರಾಜೀನಾಮೆ ಪತ್ರವಲ್ಲ ಎಂದು ಬಿಜೆಪಿ ಮೂಲಗಳು ಸ್ಪಷ್ಟಪಡಿಸಿವೆ.&lt;/p&gt;ಬಳಿಕ ಸಂಜೆ ಕೇಂದ್ರ ಗೃಹ ಸಚಿವ ಅಮಿತ್&zwnj; ಶಾ ಅವರನ್ನೂ ಅಣ್ಣಾಮಲೈ ಭೇಟಿಯಾಗಿ ತಾವು ಪಕ್ಷ ಬಿಡಬೇಕಾದ ಅನಿವಾರ್ಯ ಪರಿಸ್ಥಿತಿ ಬಗ್ಗೆ ವಿವರ ನೀಡಿದರು. ತಮಿಳುನಾಡು ಬಿಜೆಪಿ ಅಧ್ಯಕ್ಷಗೆ ಬುಲಾವ್&zwnj;:&lt;p&gt;ಈ ನಡುವೆ, ಭೇಟಿ ವೇಳೆ ನಾಯಕರು ಪಕ್ಷದಲ್ಲೇ ಉಳಿಯಿರಿ ಎಂದು ಅಣ್ಣಾಮಲೈಗೆ ಕೋರಿದರು ಎನ್ನಲಾಗಿದೆ. ಹೀಗಾಗಿ ಅಣ್ಣಾಮಲೈ ರಾಜೀನಾಮೆ ಬಗ್ಗೆ ಮಾತನಾಡಲು, ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್&zwnj; ನಾಗೇಂದ್ರನ್&zwnj;ಗೆ ಬುಲಾವ್&zwnj; ನೀಡಿದ್ದಾರೆ. ಈ ವೇಳೆ ಅಣ್ಣಾಮಲೈರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಬಗ್ಗೆ ಮಾತುಕತೆಗಳು ನಡೆಯುವ ಸಾಧ್ಯತೆಯಿದೆ. ಆರ್&zwnj;ಎಸ್&zwnj;ಎಸ್&zwnj; ಮಧ್ಯಸ್ಥಿಕೆ ವಿಫಲ:&lt;/p&gt;ಅಣ್ಣಾಮಲೈ ಪಕ್ಷ ತೊರೆಯುವ ನಿರ್ಧಾರದಿಂದ ಆರ್&zwnj;ಎಸ್&zwnj;ಎಸ್&zwnj; ನಿರಾಶೆಗೊಂಡಿದೆ. ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಆರ್&zwnj;ಎಸ್&zwnj;ಎಸ್&zwnj; ನಾಯಕರು ಮಧ್ಯಸ್ಥಿಕೆ ವಹಿಸಿದ್ದರು. ಆದರೂ ಅಣ್ಣಾಮಲೈ ನಿರ್ಧಾರ ಬದಲಿಸಲಿಲ್ಲ. ಆದಾಗ್ಯೂ ಅವರು ಹೊಸ ಚಳವಳಿಯನ್ನು ಆರಂಭಿಸಿದರೆ, ಆರ್&zwnj;ಎಸ್&zwnj;ಎಸ್&zwnj; ತಾತ್ವಿಕ ಬೆಂಬಲ ನೀಡಲು ಸಿದ್ಧವಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ತೊರೆಯಲು ಕಾರಣ:ತಮಿಳುನಾಡಿನಲ್ಲಿ ಬಿಜೆಪಿಯು ಅಣ್ಣಾಡಿಎಂಕೆ ಜತೆ ಮೈತ್ರಿ ಮಾಡಿಕೊಳ್ಳುವುದು ಅಣ್ಣಾಮಲೈಗೆ ಇಷ್ಟವಿರಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಬೇಕೆಂಬುದು ಅವರ ಇಚ್ಛೆಯಾಗಿತ್ತು. ಆದರೆ ಬಿಜೆಪಿ ಮೈತ್ರಿ ಮಾಡಿಕೊಂಡಿತು. ಆಗಿನಿಂದಲೇ ಬಿರುಕು ಆರಂಭವಾಯಿತು. ನಂತರ ಅವರು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದರು. ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ರಾಜ್ಯದಲ್ಲಿ ಬಿಜೆಪಿ ಹೆಚ್ಚಿನ ಆಸಕ್ತಿಯಿಂದ ಕೆಲಸ ಮಾಡುತ್ತಿಲ್ಲ ಎಂದು ಅಣ್ಣಾಮಲೈ ಅಸಮಾಧಾನಗೊಂಡಿದ್ದರು. ಇತ್ತೀಚೆಗೆ ಸಿಬಿಎಸ್&zwnj;ಇ ವಿದ್ಯಾರ್ಥಿಗಳಿಗೆ ತ್ರಿಭಾಷಾ ಸೂತ್ರವನ್ನು ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನೂ ಅವರು ವಿರೋಧಿಸಿದ್ದರು.ಅಣ್ಣಾಮಲೈ ಮುಂದಿನ ನಡೆ?:ಅಣ್ಣಾಮಲೈ ಈಗಾಗಲೇ &lsquo;ವಿ ದ ಲೀಡರ್ಸ್&zwnj;&rsquo; ಎಂಬ ಲಾಭರಹಿತ ಸಂಘಟನೆಯೊಂದನ್ನು ನಡೆಸುತ್ತಿದ್ದಾರೆ. ಹೊಸ ಪಕ್ಷವನ್ನು ಸ್ಥಾಪಿಸುವ ಮೊದಲ ಈ ಸಂಘಟನೆಯನ್ನು ಬಲಪಡಿಸಿ, ಬೃಹತ್&zwnj; ಚಳವಳಿಯನ್ನು ಆರಂಭಿಸುವ ಸಾಧ್ಯತೆಯಿದೆ. ರಾಷ್ಟ್ರೀಯತೆ ಮತ್ತು ತಮಿಳು ತತ್ವಜ್ಞಾನವನ್ನು ಒಳಗೊಂಡ ಸಿದ್ಧಾಂತದ ಮೇಲೆ ಅವರ ಚಳವಳಿ ನಡೆಯಲಿದೆ.&lt;p&gt;ಇದಲ್ಲದೆ ಅಣ್ಣಾಮಲೈ ಹೊಸ ಪಕ್ಷದ ಹೆಸರು &lsquo;ತಮಿಳಗ ಮಕ್ಕಳ್ ಶಕ್ತಿ ಕಚ್ಚಿ&rsquo; (ಟಿಎಂಎಸ್&zwnj;ಕೆ) ಎಂದಾಗಬಹುದು ಎಂಬ ಎಂಬ ವರದಿಗಳಿವೆ, ಆದರೆ ಆ ಮಾಹಿತಿಯು ಅಧಿಕೃತವೇ ಎಂಬುದು ಸ್ಪಷ್ಟವಾಗಿಲ್ಲ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/-want-cordial-separa-want-cordial-separation-what-annamalai-told-bjp-president-nitin-nabin/articleshow-he0ilwt"/>
        </item>
        <item>
            <title><![CDATA[ಮಮತಾಗೆ ಶಾಕ್‌ ಮೇಲೆ ಶಾಕ್‌  - ಅಭಿಷೇಕ್‌ ಬಳಿಕ ಮತ್ತೋರ್ವ ಸಂಸದ ಕಲ್ಯಾಣ್ ಮೇಲೆ ಹಲ್ಲೆ]]></title>
            <link>https://www.kannadaprabha.in/politics-news/shock-after-shock-for-mamata-after-abhishek-another-mp-kalyan-comes-under-attack/articleshow-kh44tua</link>
            <guid isPermaLink="true">https://www.kannadaprabha.in/politics-news/shock-after-shock-for-mamata-after-abhishek-another-mp-kalyan-comes-under-attack/articleshow-kh44tua</guid>
            <pubDate>Mon, 01 Jun 2026 12:47:45 +0530</pubDate>
            <description><![CDATA[&lt;p&gt;ಇತ್ತೀಚಿನ ವಿಧಾನಸಭಾ ಚುನಾವಣೆಯ ಆಘಾತಕಾರಿ ಸೋಲಿನಿಂದ ಚೇತರಿಸಿಕೊಳ್ಳುವ ಮೊದಲೇ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಮತ್ತಷ್ಟು ಆಘಾತ ಎದುರಾಗಿದೆ. ಸಂಸದ ಕಲ್ಯಾಣ್&zwnj; ಬ್ಯಾನರ್ಜಿ ಮೇಲೆ ಭಾನುವಾರ ಗುಂಪೊಂದು ಕೋಲ್ಕತಾದಲ್ಲಿ ಹಲ್ಲೆ ನಡೆಸಿದೆ&lt;/p&gt;]]></description>
            <media:content url="https://static-gi.asianetnews.com/images/01ksyxen4wf09mywjdapvn9d2d/tmc-mp-kalyan-banerjee-allegedly-attacked-near-chanditala-police-station-1780227724444.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಕೋಲ್ಕತಾ : &amp;nbsp;&lt;/strong&gt;ಇತ್ತೀಚಿನ ವಿಧಾನಸಭಾ ಚುನಾವಣೆಯ ಆಘಾತಕಾರಿ ಸೋಲಿನಿಂದ ಚೇತರಿಸಿಕೊಳ್ಳುವ ಮೊದಲೇ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಮತ್ತಷ್ಟು ಆಘಾತ ಎದುರಾಗಿದೆ. ಶನಿವಾರ ಮಮತಾರ ಸೋದರಳಿಯ ಅಭಿಷೇಕ್&zwnj; ಬ್ಯಾನರ್ಜಿ ಮೇಲಿನ ಹಲ್ಲೆಯ ಬೆನ್ನಲ್ಲೇ ಟಿಎಂಸಿಯ ಮತ್ತೋರ್ವ ಸಂಸದ ಕಲ್ಯಾಣ್&zwnj; ಬ್ಯಾನರ್ಜಿ ಮೇಲೆ ಭಾನುವಾರ ಗುಂಪೊಂದು ಕೋಲ್ಕತಾದಲ್ಲಿ ಹಲ್ಲೆ ನಡೆಸಿದೆ. ಇದು ಪಕ್ಷದ ನಾಯಕರು ಮತ್ತು ಕಾರ್ಯಕರ್ತರಲ್ಲಿ ಭಾರೀ ಕಳವಳ ಹುಟ್ಟಿಸಿದೆ.&lt;/p&gt;&lt;p&gt;ಈ ಬೆಳವಣಿಗೆ ನಡುವೆಯೇ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಭಾನುವಾರ ಇಲ್ಲಿ ಕರೆದಿದ್ದ ನೂತನ ಶಾಸಕರ ಸಭೆಗೆ 80 ಶಾಸಕರ ಪೈಕಿ ಕೇವಲ 20 ಮಂದಿ ಮಾತ್ರ ಹಾಜರಾಗಿದ್ದಾರೆ. ಮಮತಾ ಅವರ ಕಾಳಿಘಾಟ್&zwnj; ನಿವಾಸದಲ್ಲಿ ಸಭೆ ಆಯೋಜಿಸಲಾಗಿತ್ತು. ಆದರೆ ಶಾಸಕರ ಸಭೆಗೆ ನಾಲ್ಕನೇ ಒಂದು ಭಾಗದಷ್ಟು ಶಾಸಕರು ಗೈರಾಗಿದ್ದ ಕಾರಣ ಸಭೆಯನ್ನೇ ರದ್ದುಗೊಳಿಸಲಾಯಿತು.&lt;/p&gt;&lt;p&gt;ಇಬ್ಬರು ನಾಯಕರ ಮೇಲಿನ ದಾಳಿಯಿಂದ ಭೀತಿಗೊಳಗಾಗಿ ಶಾಸಕರು ಸಭೆಗೆ ಗೈರಾಗಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿದ್ದರೆ, ಚುನಾವಣಾ ಫಲಿತಾಂಶದ ಬಳಿಕ ಟಿಎಂಸಿಯಲ್ಲಿ ಒಡಕು ಮೂಡಿರುವುದೇ ಶಾಸಕರು ಸಭೆಗೆ ಗೈರಾಗಲು ಕಾರಣ ಎಂದು ವರದಿಗಳು ಹೇಳಿವೆ.&lt;/p&gt;&lt;h2&gt;* ಅಭಿಷೇಕ್&zwnj;ರನ್ನು ದಾಖಲಿಸದ್ದಕ್ಕೆ ಮಮತಾ ಕೂಗಾಟ: ವಿಡಿಯೋ&amp;nbsp;&lt;/h2&gt;&lt;p&gt;ಕೋಲ್ಕತಾ: ಟಿಎಂಸಿ ಸಂಸದ ಅಭಿಷೇಕ್&zwnj; ಬ್ಯಾನರ್ಜಿ ಮೇಲೆ ಹಲ್ಲೆ ಸಂಬಂಧ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ್ದಕ್ಕೆ ಆಸ್ಪತ್ರೆ ಸಿಇಒ ಮೇಲೆಯೇ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಕೂಗಾಟ ನಡೆಸಿದ್ದಾರೆ. ಇದರ ವಿಡಿಯೋ ಹಂಚಿಕೊಂಡು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.&lt;/p&gt;&lt;p&gt;ಹಲ್ಲೆ ಬಳಿಕ ಅಭಿಷೇಕ್&zwnj; ಅವರನ್ನು ಕೋಲ್ಕತ್ತಾದ ಬೆಲ್ಲೆ ವ್ಯೂ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪ್ರಾಥಮಿಕ ಚಿಕಿತ್ಸೆ ನೀಡಿದ್ದ ವೈದ್ಯರು, ಅವರನ್ನು ದಾಖಲಿಸಿಕೊಳ್ಳುವ ಅಗತ್ಯವಿರಲಿಲ್ಲ ಎಂದಿದ್ದರು. ಇಷ್ಟಕ್ಕೆ ಸಿಟ್ಟಾದ ಮಮತಾ ಆಸ್ಪತ್ರೆ ಸಿಇಒ ಪ್ರದೀಪ್&zwnj; ಟಂಡನ್&zwnj; ವಿರುದ್ಧ ಕಿಡಿಕಾರಿದ್ದಾರೆ. &lsquo;ನೀವು ತಪ್ಪು ಮಾಡುತ್ತಿದ್ದೀರಿ. ದೇವರು ನಿಮ್ಮನ್ನು ಕ್ಷಮಿಸುವುದಿಲ್ಲ. ನೀವು ನಾಚಿಕೆ ಪಡಬೇಕು. ಬಿಜೆಪಿ ಅಧಿಕಾರದಲ್ಲಿರುವುದರಿಂದ ನೀವು ಆಸ್ಪತ್ರೆ ನಡೆಸುತ್ತಿದ್ದೀರಿ. ವೈದ್ಯರನ್ನು ಬೆದರಿಸುತ್ತಿದ್ದೀರಿ. ಒಂದು ವೇಳೆ ನಾಳೆ ಕೇಂದ್ರ ಅಧಿಕಾರದಲ್ಲಿರದಿದ್ದರೆ ನಾವು ಇದನ್ನು ನೋಡಿಕೊಳ್ಳುತ್ತೇವೆ&rsquo; ಎಂದು ಬೆದರಿಸಿದ್ದಾರೆ.&lt;/p&gt;&lt;p&gt;ಬಿಜೆಪಿ ರಾಜ್ಯ ವಕ್ತಾರ ದೇವಜಿತ್&zwnj; ಸರ್ಕಾರ್ ಈ ವಿಡಿಯೋ ಎಕ್ಸ್&zwnj;ನಲ್ಲಿ ಹಂಚಿಕೊಂಡಿದ್ದು, &lsquo;ಗಂಭೀರ ಗಾಯಗಳಾಗದಿದ್ದರೂ ತಮ್ಮ ಸೋದರಳಿಯನನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಮಮತಾ ಬ್ಯಾನರ್ಜಿ ಆಸ್ಪತ್ರೆಯವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದು ಸಿಐಡಿ ಸಮನ್ಸ್&zwnj;ನಿಂದ ತಪ್ಪಿಸಿಕೊಳ್ಳುವ ಪ್ರಯತ್ನವೇ? &rsquo; ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;h3&gt;&amp;nbsp;* ಟಿಎಂಸಿಯಲ್ಲಿ ಒಡಕು?: ಸಭೆಗೆ 20 ಶಾಸಕರಷ್ಟೆ ಭಾಗಿ&amp;nbsp;&lt;/h3&gt;&lt;p&gt;ಕೋಲ್ಕತಾ: ಪಶ್ಚಿಮ ಬಂಗಾಳ ಚುನಾವಣಾ ಬಳಿಕ ಟಿಎಂಸಿಯಲ್ಲಿ ಒಡಕು ಮೂಡಿದೆ ಎನ್ನುವ ವದಂತಿ ನಡುವೆ ಅದನ್ನು ಪುಷ್ಟೀಕರಿಸುವಂತೆ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕರೆದಿದ್ದ ನೂತನ ಶಾಸಕರ ಸಭೆಗೆ 80 ಶಾಸಕರ ಪೈಕಿ ಕೇವಲ 20 ಮಂದಿ ಮಾತ್ರ ಹಾಜರಾಗಿದ್ದಾರೆ.&lt;/p&gt;&lt;p&gt;ಮಮತಾ ಅವರ ಕಾಳಿಘಾಟ್&zwnj; ನಿವಾಸದಲ್ಲಿ ಸಭೆ ಆಯೋಜಿಸಲಾಗಿತ್ತು. ಆದರೆ ಶಾಸಕರ ಸಭೆಗೆ ನಾಲ್ಕನೇ ಒಂದು ಭಾಗದಷ್ಟು ಶಾಸಕರು ಗೈರಾಗಿದ್ದ ಕಾರಣ ಸಭೆಯನ್ನೇ ರದ್ದುಗೊಳಿಸಲಾಯಿತು.&lt;/p&gt;&lt;p&gt;ಆದರೆ ಇದಕ್ಕೆ ಸ್ಪಷ್ಟನೆ ನೀಡಿದ ಟಿಎಂಸಿ ವಕ್ತಾರ ಕುನಾಲ್&zwnj; ಘೋಷ್&zwnj;, &lsquo;ನಮ್ಮ ನಾಯಕ ಅಭಿಷೇಕ್&zwnj; ಬ್ಯಾನರ್ಜಿ ಮತ್ತು ಸಂಸದ ಕಲ್ಯಾಣ್&zwnj; ಬ್ಯಾನರ್ಜಿ ಅವರ ಮೇಲಿನ ಹಲ್ಲೆ ಕಾರಣದಿಂದ ಆತಂಕಗೊಂಡಿರುವ ಶಾಸಕರು ಸಭೆಗೆ ಬಂದಿಲ್ಲ. ಗೈರಾದ ಶಾಸಕರ ವಿನಂತಿ ಮೇರೆಗೆ ಸಭೆ ಮುಂದೂಡಲಾಗಿದೆ. ಶೀಘ್ರದಲ್ಲಿ ಮುಂದಿನ ದಿನಾಂಕ ನಿಗದಿಪಡಿಸಲಾಗುವುದು&rsquo; ಎಂದರು.&lt;/p&gt;&lt;p&gt;* ಅಭಿಷೇಕ್ ಬ್ಯಾನರ್ಜಿ ಹಲ್ಲೆ ಪ್ರಕರಣ: 6 ಜನರ ಬಂಧನ&amp;nbsp;&lt;/p&gt;&lt;p&gt;ಕೋಲ್ಕತಾ: ಬಂಗಾಳ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಸೋದರಳಿಯ, ಟಿಎಂಸಿ ಸಂಸದ ಅಭಿಷೇಕ್&zwnj; ಬ್ಯಾನರ್ಜಿ ಮೇಲೆ ಶನಿವಾರ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾನುವಾರ 6 ಜನರನ್ನು ಬಂಧಿಸಿದ್ದಾರೆ.&lt;/p&gt;&lt;p&gt;ಶನಿವಾರ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಷೇಕ್&zwnj; ಬ್ಯಾನರ್ಜಿ ಆಗಲಿ ಅಥವಾ ತೃಣಮೂಲ ಕಾಂಗ್ರೆಸ್&zwnj; ಯಾವುದೇ ದೂರು ನೀಡಿರಲಿಲ್ಲ. ಹೀಗಾಗಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅದರಂತೆ ಸೋನಾರ್ಪುರ್ ದಕ್ಷಿಣದಲ್ಲಿ ಶನಿವಾರ ನಡೆದಿದ್ದ ಹಲ್ಲೆ ಸಂದರ್ಭದಲ್ಲಿನ ಸಿಸಿಟೀವಿ ದೃಶ್ಯಗಳ ಪರಿಶೀಲಿಸಿ ಪೊಲೀಸರು ರಾತ್ರಿಯಿಡೀ ಶೋಧ ನಡೆಸಿ 6 ಜನರನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಚುನಾವಣೋತ್ತರ ಹಿಂಸಾಚಾರಕ್ಕೆ ತುತ್ತಾಗಿದ್ದ ಪಕ್ಷದ ಕಾರ್ಯಕರ್ತರ ಮನೆಗೆ ತೆರಳಿದ್ದ ಟಿಎಂಸಿ ನಂ.2 ನಾಯಕನ ಮೇಲೆ ಶನಿವಾರ ಗುಂಪೊಂದು ಕಲ್ಲು, ಚಪ್ಪಲಿ, ಮೊಟ್ಟೆಯಿಂದ ದಾಳಿ ಮಾಡಿತ್ತು. ಆಗ ಪೊಲೀಸರು ಹೆಲ್ಮೆಟ್&zwnj; ಹಾಕಿ ರಕ್ಷಣೆ ಮಾಡಿದ್ದರು.&lt;/p&gt;&lt;p&gt;ಬಂಧಿತರಲ್ಲಿ ಹಲವರು ಟಿಎಂಸಿಯವರೇ?&amp;nbsp;&lt;/p&gt;&lt;p&gt;ಬಂಧಿತರಲ್ಲಿ ತಪನ್ ಮೈಟಿ, ಆಕಾಶ್, ನಿರ್ಮಾಲ್ಯ ಸೇನ್&zwnj;ಗುಪ್ತಾ, ಕಾಜಲ್ ದಾಸ್ ಮತ್ತು ದೇಬಾಶಿಶ್ ದತ್ತಾ ಎಂಬುವರು ಇದ್ದಾರೆ. ಇವರಲ್ಲಿ ದಾಸ್&zwnj;, ನಿರ್ಮಾಲ್ಯ ಹಾಗೂ ದತ್ತಾ ಟಿಎಂಸಿಯ ಮಾಜಿ ಶಾಸಕಿ ಲವ್ಲಿ ಮೈತ್ರಾ ಅವರ ಆಪ್ತರಾಗಿದ್ದರು. ಬಹುಶಃ ಪಕ್ಷದಲ್ಲಿನ ಒಳಜಗಳ ಘಟನೆಗೆ ಕಾರಣವಾಗಿರಬಹುದೆ ಎಂದು ಪ್ರಶ್ನೆ ಉದ್ಭವಿಸಿದೆ.&lt;/p&gt;]]></content:encoded>
            <category>India</category>
            <dc:creator>Sujatha NR</dc:creator>
            <atom:link href="https://www.kannadaprabha.in/politics-news/shock-after-shock-for-mamata-after-abhishek-another-mp-kalyan-comes-under-attack/articleshow-kh44tua"/>
        </item>
        <item>
            <title><![CDATA[ಆನ್‌ಲೈನ್‌ ಹೋರಾಟ ಬಳಿಕ ಈಗ ಬೀದಿಗಿಳಿದ ಜಿರಳೆ ಪಕ್ಷ ಬೆಂಬಲ- ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಸಮರ]]></title>
            <link>https://www.kannadaprabha.in/india-news/cjp-founder-to-return-to-india-announces-june-protest-for-education-ministers-resignation/articleshow-okg7krr</link>
            <guid isPermaLink="true">https://www.kannadaprabha.in/india-news/cjp-founder-to-return-to-india-announces-june-protest-for-education-ministers-resignation/articleshow-okg7krr</guid>
            <pubDate>Tue, 02 Jun 2026 07:14:17 +0530</pubDate>
            <description><![CDATA[&lt;p&gt;ಆನ್&zwnj;ಲೈನ್&zwnj;ನಲ್ಲಿ ಕಾಕ್ರೋಚ್&zwnj; ಜನತಾ ಪಾರ್ಟಿ (ಸಿಜೆಪಿ) ಸ್ಥಾಪಿಸುವ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದ ಅಭಿಜಿತ್&zwnj; ದೀಪ್ಕೆ, ಇದೀಗ ನೇರವಾಗಿ ಬೀದಿಗಿಳಿದು ಹೋರಾಟದ ಘೋಷಣೆ ಮಾಡಿದ್ದಾರೆ. ಸದ್ಯ ಅಮೆರಿಕ ವಾಸಿಯಾಗಿರುವ ದೀಪ್ಕೆ ಜೂ.6ರಂದು ಭಾರತಕ್ಕೆ ಆಗಮಿಸುವುದಾಗಿ ತಿಳಿಸಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/01ks4sz7rnpk5a8knte1xp789t/untitled-design---2026-05-21t134858.236-1779351658261.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;strong&gt;ನವದೆಹಲಿ&lt;/strong&gt;: ಆನ್&zwnj;ಲೈನ್&zwnj;ನಲ್ಲಿ ಕಾಕ್ರೋಚ್&zwnj; ಜನತಾ ಪಾರ್ಟಿ (ಸಿಜೆಪಿ) ಸ್ಥಾಪಿಸುವ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದ ಅಭಿಜಿತ್&zwnj; ದೀಪ್ಕೆ, ಇದೀಗ ನೇರವಾಗಿ ಬೀದಿಗಿಳಿದು ಹೋರಾಟದ ಘೋಷಣೆ ಮಾಡಿದ್ದಾರೆ. ಸದ್ಯ ಅಮೆರಿಕ ವಾಸಿಯಾಗಿರುವ ದೀಪ್ಕೆ ಜೂ.6ರಂದು ಭಾರತಕ್ಕೆ ಆಗಮಿಸುವುದಾಗಿ ತಿಳಿಸಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್&zwnj; ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್&zwnj;ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿಯೂ ಘೋಷಿಸಿದ್ದಾರೆ.&lt;/p&gt;&lt;p&gt;ದೀಪ್ಕೆ ಸದ್ಯ ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಿಜೆಪಿ ಸ್ಥಾಪನೆಯ ಬಳಿಕ ಇದು ಅವರ ಮೊದಲ ಭಾರತ ಭೇಟಿ. ಈ ಬಗ್ಗೆ ಎಕ್ಸ್&zwnj;ನಲ್ಲಿ ಮಾಹಿತಿ ನೀಡಿರುವ ಅವರು, &lsquo;ನೀಟ್&zwnj; ಪ್ರಶ್ನೆಪತ್ರಿಕೆ ಸೋರಿಕೆಯಿಂದ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳ ಪರಿಶ್ರಮ ವ್ಯರ್ಥವಾಯಿತು. ಹೀಗಾಗಿ ಶಿಕ್ಷಣ ಸಚಿವ ಪ್ರಧಾನ್&zwnj; ಅವರ ರಾಜೀನಾಮೆ ಕೇಳಲು ಭಾರತಕ್ಕೆ ಮರಳಲು ನಿರ್ಧರಿಸಿದ್ದೇನೆ. ಶನಿವಾರ ಬೆಳಿಗ್ಗೆ ನೀವೆಲ್ಲರೂ ನನ್ನನ್ನು ಏರ್ಪೋರ್ಟ್&zwnj;ನಲ್ಲಿ ಭೇಟಿಯಾಗಿ. ನಾವೆಲ್ಲ ಸಂಸತ್&zwnj; ಮಾರ್ಗದ ಪೊಲೀಸ್&zwnj; ಠಾಣೆಗೆ ತೆರಳಿ, ಜಂತರ್&zwnj; ಮಂತರ್&zwnj;ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಅನುಮತಿ ಕೇಳೋಣ&rsquo; ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ನಾನು ಗಾಂಧಿ ಅನುಯಾಯಿ:&lt;/h2&gt;&lt;p&gt;&lsquo;ಈ ದೇಶ ಯಾವುದೇ ಒಂದು ಪಕ್ಷಕ್ಕೆ ಸೇರಿದ್ದಲ್ಲ. ಇದು ನಮ್ಮೆಲ್ಲರಿಗೂ ಸೇರಿದ್ದು. ಇದು ನಮ್ಮ ಭವಿಷ್ಯದ ಪ್ರಶ್ನೆ. ನಮ್ಮದು ಪ್ರಜಾಪ್ರಭುತ್ವದ ದೇಶ ಎಂಬುದನ್ನು ನಾನಿಂದೂ ನಂಬುತ್ತೇನೆ. ನಮಗೆ ಪ್ರತಿಭಟನೆ ನಡೆಸಲು ಅನುಮತಿ ಸಿಗುತ್ತದೆ ಎಂಬ ವಿಶ್ವಾಸವಿದೆ. ನಾನೊಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ. ನಾನು ಗಾಂಧಿ, ಅಂಬೇಡ್ಕರ್&zwnj;, ಭಗತ್&zwnj; ಸಿಂಗ್&zwnj; ಹಾಗೂ ನೆಹರೂ ಅವರ ದೊಡ್ಡ ಅನುಯಾಯಿ. ಪ್ರಜಾಪ್ರಭುತ್ವದಲ್ಲಿ ನಮಗೆ ಧ್ವನಿಯೆತ್ತುವ ಹಕ್ಕು ನೀಡಿದ ಸಂವಿಧಾನದ ಮೇಲೆ ನನಗೆ ಎಲ್ಲಕ್ಕಿಂತ ಹೆಚ್ಚು ನಂಬಿಕೆಯಿದೆ&rsquo; ಎಂದಿದ್ದಾರೆ.&lt;/p&gt;&lt;p&gt;ಸುಪ್ರೀಂ ಕೋರ್ಟ್&zwnj; ಮುಖ್ಯ ನ್ಯಾಯಮೂರ್ತಿ ಹೇಳಿಕೆ ಹಾಗೂ ದೇಶದ ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ಹೊರಹಾಕಲು ಹುಟ್ಟಿಕೊಂಡ ಸಿಜೆಪಿ, ನೀಟ್&zwnj; ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಹಲವು ವಿಚಾರಗಳ ವಿರುದ್ಧ ಧ್ವನಿಯೆತ್ತುತ್ತಿದೆ.&lt;/p&gt;&lt;h3&gt;ಮೊದಲ ಹೋರಾಟಕ್ಕೆ ಸಜ್ಜು&lt;/h3&gt;&lt;p&gt;ತಮಿಳ್ನಾಡಲ್ಲಿ ಇದೀಗ ವಿಜಯ್&zwnj;ಗೆ ಸೂಕ್ತ ಪ್ರತಿಸ್ಪರ್ಧಿಗಳಿಲ್ಲ. ಈ ಸ್ಥಾನ ತುಂಬುವ ಇರಾದೆ&lt;/p&gt;&lt;p&gt;ನಿರುದ್ಯೋಗಿಗಳು ಜಿರಳೆ ಎಂಬ ಇತ್ತೀಚಿನ ಸುಪ್ರೀಂ ಜಡ್ಜ್&zwnj; ಹೇಳಿಕೆಯಿಂದ ಭಾರೀ ವಿವಾದ&lt;/p&gt;&lt;p&gt;ಅದರ ಬೆನ್ನಲ್ಲೇ ಆನ್&zwnj;ಲೈನಲ್ಲಿ ಕಾಕ್ರೋಚ್&zwnj; ಜನತಾ ಪಕ್ಷ ಸ್ಥಾಪಿಸಿದ್ದ ಅಮೆರಿಕ ವಾಸಿ ದೀಪ್ಕೆ&lt;/p&gt;&lt;p&gt;ಇದಕ್ಕೆ ಜನ ಬೆಂಬಲ. ಈ ಹಿನ್ನೆಲೆಯಲ್ಲಿ ಜೂ.6ಕ್ಕೆ ದಿಲ್ಲಿಗೆ ಆಗಮನ.&lt;/p&gt;&lt;p&gt;ಜಂತರ್&zwnj;ಮಂತರ್&zwnj;ನಲ್ಲಿ ನೀಟ್&zwnj; ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಸಮರ&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/cjp-founder-to-return-to-india-announces-june-protest-for-education-ministers-resignation/articleshow-okg7krr"/>
        </item>
        <item>
            <title><![CDATA[ಇಬ್ಭಾಗದತ್ತ ಮಮತಾ ಪಕ್ಷ ಟಿಎಂಸಿ!]]></title>
            <link>https://www.kannadaprabha.in/india-news/58-rebel-mlas-elect-ritabrata-as-lop-speaker-accepts-claim-formalising-split-in-tmc/articleshow-psta62h</link>
            <guid isPermaLink="true">https://www.kannadaprabha.in/india-news/58-rebel-mlas-elect-ritabrata-as-lop-speaker-accepts-claim-formalising-split-in-tmc/articleshow-psta62h</guid>
            <pubDate>Thu, 04 Jun 2026 05:05:21 +0530</pubDate>
            <description><![CDATA[ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಅಧಿಕಾರ ಕಳೆದುಕೊಂಡ ಟಿಎಂಸಿಯೊಳಗಿನ ಬಂಡಾಯ ಬುಧವಾರ ನಿರ್ಣಾಯಕ ತಿರುವು ಪಡೆದುಕೊಂಡಿದ್ದು, ತನ್ನ 28 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಬುಧವಾರ ಪಕ್ಷ ಬಹುತೇಕ ವಿಭಜನೆ ಆಗಿದೆ.]]></description>
            <media:content url="https://static-assets.asianetnews.com/kp/json/03062026/pictures/MAMATA_810.JPG" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;strong&gt; ಕೋಲ್ಕತಾ : &lt;/strong&gt;ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಅಧಿಕಾರ ಕಳೆದುಕೊಂಡ ಟಿಎಂಸಿಯೊಳಗಿನ ಬಂಡಾಯ ಬುಧವಾರ ನಿರ್ಣಾಯಕ ತಿರುವು ಪಡೆದುಕೊಂಡಿದ್ದು, ತನ್ನ 28 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಬುಧವಾರ ಪಕ್ಷ ಬಹುತೇಕ ವಿಭಜನೆ ಆಗಿದೆ. ಪಕ್ಷದಿಂದ ಉಚ್ಚಾಟಿಸಲ್ಪಟ್ಟ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರ ವಿರೋಧಿ ಶಾಸಕ ಋತಬ್ರತ ಬ್ಯಾನರ್ಜಿ ಅವರನ್ನು ವಿಧಾನಸಭೆ ಪ್ರತಿಪಕ್ಷ ನಾಯಕ ಎಂದು ಸ್ಪೀಕರ್ ರತೀಂದ್ರ ಬೋಸ್ ಮಾನ್ಯ ಮಾಡಿದ್ದಾರೆ.&lt;/p&gt;&lt;p&gt;ಇದರೊಂದಿಗೆ ಮಹಾರಾಷ್ಟ್ರದಲ್ಲಿ ಕೆಲವು ವರ್ಷ ಹಿಂದೆ ಎನ್&zwnj;ಸಿಪಿ ಹಾಗೂ ಶಿವಸೇನೆ ಇಭ್ಭಾಗವಾದ ಘಟನೆಗಳನ್ನು ನೆನಪಿಸಿದೆ. ಮೇಲಾಗಿ, &lsquo;ನಮ್ಮದೇ ನಿಜವಾದ ಟಿಎಂಸಿ. ನಮ್ಮ ಪಕ್ಷದ ಅಧ್ಯಕ್ಷ ಮಮತಾ ಬ್ಯಾನರ್ಜಿ&rsquo; ಎಂದು ಬಂಡುಕೋರರು ಹೇಳಿದ್ದಾರೆ. ಹೀಗಾಗಿ ಇಂದಿನ ವಿದ್ಯಮಾನಕ್ಕೆ ಮಮತಾ ದೀದಿ ಏನು ಹೇಳುತ್ತಾರೆ ಎಂದು ಕಾದು ನೋಡಬೇಕಿದೆ. ಆದರೆ ಸ್ಪೀಕರ್&zwnj; ನಡೆ ವಿರುದ್ಧ ಟಿಎಂಸಿ ಕೋರ್ಟ್&zwnj;ಗೆ ಹೋಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.&lt;/p&gt;&lt;h2&gt;ಬಂಡಾಯಕ್ಕೆ ಸಿಕ್ತು ಮಾನ್ಯತೆ:&lt;/h2&gt;&lt;p&gt;ಟಿಎಂಸಿ ಶಾಸಕಾಂಗ ಪಕ್ಷದಲ್ಲಿ ಒಡಕು ಮೂಡಲು ಆರಂಭವಾಗಿದ್ದು, ವಿಧಾನಸಭೆ ಪ್ರತಿಪಕ್ಷ ನಾಯಕರ ಆಯ್ಕೆ ಆದಾಗಿನಿಂದ. ಮಮತಾ ಆಪ್ತರಾದ ಶೋಭನ್&zwnj;ದೇಬ್&zwnj; ಚಟ್ಟೋಪಾಧ್ಯಾಯ ಅವರು ಪಕ್ಷದ ಶಾಸಕಾಂಗ ನಾಯಕ ಎಂಬ ನಿರ್ಣಯ ಇತ್ತೀಚೆಗೆ ಅಂಗೀಕಾರವಾಗಿತ್ತು. ಆದರೆ &lsquo;ಸಭೆ ನಡೆಸದೇ ಈ ಆಯ್ಕೆ ಮಾಡಲಾಗಿದೆ. ಅಲ್ಲದೆ, ನಿರ್ಣಯಕ್ಕೆ ತಮ್ಮ ನಕಲಿ ಸಹಿ ಬಳಸಲಾಗಿದೆ&rsquo; ಎಂದು ಶಾಸಕರಾದ ಋತಬ್ರತ ಬ್ಯಾನರ್ಜಿ ಹಾಗೂ ಸಂದೀಪನ್&zwnj; ಸಾಹಾ ಸ್ಪೀಕರ್&zwnj;ಗೆ ದೂರಿದ್ದರು. ಹೀಗಾಗಿ ಶೋಭನ್&zwnj; ಆಯ್ಕೆಯನ್ನು ಸ್ಪೀಕರ್&zwnj; ಮಾನ್ಯ ಮಾಡಿರಲಿಲ್ಲ. ಇದರಿಂದ ಕುಪಿತರಾದ ಮಮತಾ, ಈ ಇಬ್ಬರನ್ನೂ ಪಕ್ಷದಿಂದ ಉಚ್ಚಾಟಿಸಿದ್ದರು.&lt;/p&gt;&lt;p&gt;ಆದರೆ ಇದರಿಂದ ಸಿಟ್ಟಿಗೆದ್ದ ಋತಬ್ರತ ಹಾಗೂ ಸಾಹಾ ಬುಧವಾರ ಬೆಳಗ್ಗೆ ಬಂಡಾಯ ಶಾಸಕರ ಸಭೆ ಆಯೋಜಿಸಿದ್ದರು. ಆಗ, ಟಿಎಂಸಿಯ ಅಧಿಕೃತ 80 ಶಾಸಕರ ಪೈಕಿ 58 ಶಾಸಕರು ಈ ಸಭೆಗೆ ಆಗಮಿಸಿ, &lsquo;ಋತಬ್ರತ ಅವರೇ ನಮ್ಮ ನಾಯಕ. ಅವರಿಗೆ ವಿಪಕ್ಷ ನಾಯಕ ಎಂಬ ಮಾನ್ಯತೆ ನೀಡಬೇಕು. ನಮ್ಮದೇ ನಿಜವಾದ ಟಿಎಂಸಿ ಎಂದು ಸ್ಪೀಕರ್ ರತೀಂದ್ರ ಬೋಸ್ ಅವರಿಗೆ ಕೋರಿಕೆ ಸಲ್ಲಿಸಿದ್ದರು. ವಿಚಿತ್ರವೆಂದರೆ ಮಮತಾ ನಿಲುವಿನ ವಿರುದ್ಧ ಬಂಡೆದ್ದರೂ ಮಮತಾ ಬ್ಯಾನರ್ಜಿ ಅವರನ್ನೇ ತಮ್ಮ ಅಧ್ಯಕ್ಷೆ ಎಂದು ಸ್ಪೀಕರ್&zwnj;ಗೆ ನೀಡಿರುವ ಪತ್ರದಲ್ಲಿ ಬಂಡಾಯ ಶಾಸಕರು ಬರೆದಿದ್ದರು.ಇದೇ ವೇಳೆ ಶಾಸಕಾಂಗ ಪಕ್ಷದ ನಾಯಕರಾಗಿ ಋತಬ್ರತ ಬ್ಯಾನರ್ಜಿ ಅಲ್ಲದೆ, ಉಪ ನಾಯಕರಾಗಿ ಜಾವೇದ್ ಖಾನ್, ಸಂದೀಪನ್ ಸಾಹಾ ಮತ್ತು ಶಿಯುಲಿ ಸಾಹಾ ಅವರನ್ನು ಮತ್ತು ಸಚೇತಕರಾಗಿ ರಘುನಾಥ್&zwnj;ಗಂಜ್ ಶಾಸಕ ಅಕ್ರುಝಮಾನ್ ಅವರನ್ನು ಸಭೆ ಆಯ್ಕೆ ಮಾಡಿತ್ತು.&lt;/p&gt;&lt;p&gt;ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ, ಅನರ್ಹತೆಯಿಂದ ಬಚಾವಾಗಲು ಬೇರ್ಪಟ್ಟ ಬಣಕ್ಕೆ ಶಾಸಕಾಂಗ ಪಕ್ಷದ ಕನಿಷ್ಠ 3ನೇ 2ರಷ್ಟು ಬೆಂಬಲ ಬೇಕಾಗುತ್ತದೆ. ಟಿಎಂಸಿ ವಿಧಾನಸಭೆಯಲ್ಲಿ 80 ಶಾಸಕರನ್ನು ಹೊಂದಿರುವುದರಿಂದ, 3/2 ಮಿತಿ 54 ಆಗಿದೆ. ಆದರೆ ಋತಬ್ರತ ಬಣ 58 ಶಾಸಕರ ಬೆಂಬಲ ಬೆಂಬಲ ತೋರಿಸಿದ ಕಾರಣ ಅನರ್ಹತೆಯ ಆಂಕ ಇರಲಿಲ್ಲ. ಹೀಗಾಗಿ ಆ ಬಣವನ್ನೇ ಅಧಿಕೃತ ಎಂದು ಪರಿಗಣಿಸಿದ ಸ್ಪೀಕರ್&zwnj;. ಅವರಿಗೆ ವಿಪಕ್ಷ ನಾಯಕ ಮಾನ್ಯತೆ ನೀಡಿದ್ದಾರೆ ಹಾಗೂ ವಿಧಾನಸೌಧದಲ್ಲಿನ ವಿಪಕ್ಷ ನಾಯಕ ಕೊಠಡಿಯ ಕೀಲಿಕೈ ಅನ್ನೂ ಹಸ್ತಾಂತರಿಸಿದ್ದಾರೆ.&lt;/p&gt;&lt;h3&gt;ಮಮತಾ ನಮ್ಮ ಸಲಹೆಗಾರ್ತಿ:&lt;/h3&gt;&lt;p&gt;ಸ್ಪೀಕರ್&zwnj;ರಿಂದ ಮಾನ್ಯತೆ ಸಿಕ್ಕ ಬಳಿಕ ಮಾತನಾಡಿದ ಋತಬ್ರತ, &lsquo;ಮಮತಾ ನಮ್ಮ ಸಲಹೆಗಾರ್ತಿ ಆಗಿರಲಿ ಎಂದು ಕೋರುತ್ತೇವೆ&rsquo; ಎಂದರು.&lt;/p&gt;&lt;p&gt;&amp;nbsp;&lt;strong&gt;ತನ್ನ ಎಲ್ಲ ಸಮಿತಿ ವಿಸರ್ಜಿಸಿದ ಟಿಎಂಸಿ&lt;/strong&gt;&lt;/p&gt;&lt;p&gt;&amp;nbsp;ಕೋಲ್ಕತಾ : &amp;nbsp;ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್&zwnj;ನಲ್ಲಿ (ಟಿಎಂಸಿ) ಆಂತರಿಕ ಅಸಮಾಧಾನ ಭುಗಿಲೆದ್ದಿರುವ ನಡುವೆ, ಪಕ್ಷವು ತನ್ನ ಎಲ್ಲ ಸಾಂಸ್ಥಿಕ ಸಮಿತಿಗಳನ್ನು ಬುಧವಾರ ವಿಸರ್ಜಿಸಿದೆ ಹಾಗೂ ಎಲ್ಲ ಘಟಕಗಳ ಸಮಗ್ರ ಪುನಾರಚನೆ ಮಾಡುವುದಾಗಿ ಘೋಷಿಸಿದೆ.ಬಹುಸಂಖ್ಯೆಯಲ್ಲಿ ಟಿಎಂಸಿ ಶಾಸಕರು ಬಂಡಾಯ ಎದ್ದು ತಮಗೆ ಪ್ರತ್ಯೇಕ ಶಾಸಕಾಂಗ ಪಕ್ಷದ ಮಾನ್ಯತೆ ಕೋರಿ ವಿಧಾನಸಭಾ ಸ್ಪೀಕರ್&zwnj; ಬಳಿ ಅರ್ಜಿ ಹಾಕಿದ್ದರು.ಇದರ ಬೆನ್ನಲ್ಲೇ ಟಿಎಂಸಿಯಲ್ಲಿ ಈ ನಾಟಕೀಯ ಬೆಳವಣಿಗೆ ನಡೆದಿದೆ.&lt;/p&gt;&lt;p&gt;&lsquo;ಪಕ್ಷದ ಎಲ್ಲ ಸಮಿತಿಗಳು, ಮುಂಚೂಣಿ ಸಂಸ್ಥೆಗಳು ತಕ್ಷಣದಿಂದ ವಿಸರ್ಜಿಸಲು ನಿರ್ಧರಿಸಲಾಗಿದೆ. ಪ್ರತಿ ಹಂತದಲ್ಲೂ ಸಮಗ್ರ ಆತ್ಮಾವಲೋಕನ, ಕಾರ್ಯಕ್ಷಮತೆಯ ವಿಮರ್ಶೆ, ಸಾಂಸ್ಥಿಕ ಮೌಲ್ಯಮಾಪನ ನಡೆಸಲಾಗುತ್ತದೆ&rsquo; ಎಂದು ಪಕ್ಷ ಹೇಳಿದೆ.ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಹೀನಾಯ ಸೋಲಿನ ಬಳಿಕ ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಆಳವಾಗುತ್ತಿದೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/58-rebel-mlas-elect-ritabrata-as-lop-speaker-accepts-claim-formalising-split-in-tmc/articleshow-psta62h"/>
        </item>
        <item>
            <title><![CDATA[ಕುವೈತ್‌ ಮೇಲೆ ಇರಾನ್‌ ದಾಳಿ: ಭಾರತೀಯ ಸಾವು]]></title>
            <link>https://www.kannadaprabha.in/india-news/us-strikes-iran-s-qeshm-islands-as-tehran-fires-missiles-at-kuwait-bahrain/articleshow-qf9r7kq</link>
            <guid isPermaLink="true">https://www.kannadaprabha.in/india-news/us-strikes-iran-s-qeshm-islands-as-tehran-fires-missiles-at-kuwait-bahrain/articleshow-qf9r7kq</guid>
            <pubDate>Thu, 04 Jun 2026 04:57:31 +0530</pubDate>
            <description><![CDATA[ಬುಧವಾರ ಅಮೆರಿಕದ ಮಿತ್ರದೇಶ ಕುವೈತ್&zwnj; ಮೇಲೆ ಇರಾನ್ ನಡೆಸಿದ ಪ್ರತಿದಾಳಿಯಲ್ಲಿ ಓರ್ವ ಭಾರತೀಯ ನಾಗರಿಕ ಸಾವನ್ನಪ್ಪಿದ್ದಾನೆ. ಇದರಿಂದಾಗಿ ಫೆ.28 ರಂದು ಇರಾನ್ ಮತ್ತು ಅಮೆರಿಕ ನಡುವೆ ಯುದ್ಧ ಭುಗಿಲೆದ್ದ ನಂತರ ಯುದ್ಧದ ವೇಳೆ ಸಾವನ್ನಪ್ಪಿದ ಭಾರತೀಯರ ಸಂಖ್ಯೆ 10ಕ್ಕೇರಿದೆ.]]></description>
            <media:content url="https://static-assets.asianetnews.com/kp/json/03062026/pictures/IRAN_KUWAIT_AIRPORT_133.JPG" type="image/jpeg" height="390" width="690"/>
            <content:encoded><![CDATA[&lt;p&gt;ವಾಷಿಂಗ್ಟನ್&zwnj;/ತೆಹ್ರಾನ್&zwnj;/ನವದೆಹಲಿ: ಶಾಂತಿ ಮಾತುಕತೆ ಮುಂದುವರಿದಿರುವ ನಡುವೆಯೇ ಅಮೆರಿಕ-ಇರಾನ್&zwnj; ಮಧ್ಯೆ ಮತ್ತೆ ಸಂಘರ್ಷ ಭುಗಿಲೆದ್ದಿದೆ. ಬುಧವಾರ ಅಮೆರಿಕದ ಮಿತ್ರದೇಶ ಕುವೈತ್&zwnj; ಮೇಲೆ ಇರಾನ್ ನಡೆಸಿದ ಪ್ರತಿದಾಳಿಯಲ್ಲಿ ಓರ್ವ ಭಾರತೀಯ ನಾಗರಿಕ ಸಾವನ್ನಪ್ಪಿದ್ದಾನೆ. ಇದರಿಂದಾಗಿ ಫೆ.28 ರಂದು ಇರಾನ್ ಮತ್ತು ಅಮೆರಿಕ ನಡುವೆ ಯುದ್ಧ ಭುಗಿಲೆದ್ದ ನಂತರ ಯುದ್ಧದ ವೇಳೆ ಸಾವನ್ನಪ್ಪಿದ ಭಾರತೀಯರ ಸಂಖ್ಯೆ 10ಕ್ಕೇರಿದೆ.&lt;/p&gt;&lt;p&gt;ಮಂಗಳವಾರ ತಡರಾತ್ರಿ ಮೊದಲು ಹೋರ್ಮುಜ್&zwnj; ಜಲಸಂಧಿ ಸಮೀಪದ ಕ್ವೆಶ್ಮ್&zwnj; ದ್ವೀಪದ ಮೇಲೆ ಅಮೆರಿಕ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ, ಇರಾನ್&zwnj; ಕೂಡ ಅಮೆರಿಕದ ಮಿತ್ರದೇಶಗಳಾದ ಕುವೈತ್&zwnj; ಹಾಗೂ ಬಹ್ರೇನ್&zwnj; ಮೇಲೆ ಡ್ರೋನ್&zwnj; ಹಾಗೂ ಕ್ಷಿಪಣಿ ಬಳಸಿ ದಾಳಿ ಮಾಡಿದೆ. ಇದು ಭಾರತೀಯನ ಸಾವಿಗೆ ಕಾರಣವಾಗಿದೆ.&lt;/p&gt;&lt;p&gt;ಇದರ ಬೆನ್ನಲ್ಲೇ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. &lsquo;ಇಂತಹ ಹಿಂಸಾಚಾರ ನಿಲ್ಲಬೇಕು. ಸಂಘರ್ಷ ಆರಂಭವಾದಾಗಿನಿಂದಲೂ ನಾಗರಿಕರು ಮತ್ತು ನಾಗರಿಕರ ಮೂಲಕಸೌಕರ್ಯಗಳನ್ನು ಗುರಿಯಾಗಿಸಬಾರದು ಎಂದು ನಾವು ಆಗ್ರಹಿಸಿದ್ದೆವು. ಅಂತಹ ದಾಳಿಗಳನ್ನು ನಿಲ್ಲಿಸುವಂತೆ ನಾವು ಮತ್ತೊಮ್ಮೆ ಎರಡೂ ಕಡೆಯವರಿಗೆ ಒತ್ತಾಯಿಸುತ್ತೇವೆ&rsquo; ಎಂದಿದೆ.ಮೊದಲು ಅಮೆರಿಕ ದಾಳಿ:&lt;/p&gt;&lt;p&gt;ಮೊದಲು ಅಮೆರಿಕವು ಆತ್ಮರಕ್ಷಣೆಯ ಭಾಗವಾಗಿ ಕ್ವೆಶ್ಮ್&zwnj; ದ್ವೀಪದ ಸೇನಾ ನೆಲೆ ಮೇಲೆ ದಾಳಿ ನಡೆಸಿದ್ದಾಗಿ ತಿಳಿಸಿದೆ. ಆ ಬಳಿಕ ಇರಾನ್&zwnj; ತನ್ನ ನೆರೆ ದೇಶಗಳ ಮೇಲೆ ಹಲವು ಸುತ್ತಿನ ದಾಳಿ ನಡೆಸಿದ್ದು, ಆ ದಾಳಿಗಳನ್ನೆಲ್ಲ ವಿಫಲಗೊಳಿಸಲಾಗಿದೆ ಎಂದಿದೆ.&lt;/p&gt;&lt;p&gt;&lsquo;ಇದಕ್ಕೆ ಪ್ರತಿಯಾಗಿ ಇರಾನ್&zwnj;, ಕುವೈತ್&zwnj;ನತ್ತ ಹಾರಿಸಿಬಿಟ್ಟ 2 ಕ್ಷಿಪಣಿಗಳು ಮಾರ್ಗ ಮಧ್ಯೆ ಪತನವಾಗಿದ್ದರೆ, ಬಹ್ರೇನ್&zwnj;ಅನ್ನು ಗುರಿಯಾಗಿರಿಸಿ ಹಾರಿಸಿಬಿಟ್ಟಿದ್ದ 3 ಕ್ಷಿಪಣಿಗಳನ್ನು ಮಾರ್ಗ ಮಧ್ಯೆ ಹೊಡೆದುರುಳಿಸಲಾಗಿದೆ. ಹೋರ್ಮುಜ್&zwnj; ದಾಟುತ್ತಿದ್ದ ಸಾಮಾನ್ಯ ನಾವಿಕರಿದ್ದ ಹಡಗುಗಳನ್ನು ಗುರಿಯಾಗಿಸಿಯೂ ಇರಾನ್&zwnj; 3 ಡ್ರೋನ್&zwnj;ಗಳನ್ನು ಹಾರಿಸಿಬಿಟ್ಟಿದ್ದು, ಅವುಗಳನ್ನು ಹೊಡೆದುರುಳಿಸಲಾಗಿದೆ&rsquo; ಎಂದು ಅಮೆರಿಕ ಹೇಳಿಕೊಂಡಿದೆ.&lt;/p&gt;&lt;h2&gt;ಭಾರತೀಯ ಬಲಿ:&lt;/h2&gt;&lt;p&gt;ಇದಾದ ಬಳಿಕ ಅಮೆರಿಕ ದಾಳಿಗೆ ಪ್ರತಿಯಾಗಿ ಕುವೈತ್&zwnj;ನ ಅಲ್&zwnj; ಸಲೇಂ ಏರ್&zwnj;ಬೇಸ್&zwnj; ಹಾಗೂ ಬಹರೈನ್&zwnj;ನ ಇಸಾ ಏರ್&zwnj;ಬೇಸ್&zwnj; ಅನ್ನು ಗುರಿಯಾಗಿರಿಸಿಕೊಂಡು ಇರಾನ್&zwnj; ಬುಧವಾರ ಬೆಳಗ್ಗೆ ದಾಳಿ ನಡೆಸಿದೆ. ಇರಾನ್&zwnj; ದಾಳಿಯಿಂದ ಕುವೈತ್&zwnj; ಅಂತಾರಾಷ್ಟ್ರೀಯ ಏರ್ಪೋರ್ಟಲ್ಲಿ ಓರ್ವ ಮೃತಪಟ್ಟಿದ್ದು, ಕೆಲವರಿಗೆ ಗಾಯಗಳಾಗಿವೆ. ಮೃತನನ್ನು ಭಾರತೀಯ ವ್ಯಕ್ತಿ ಎಂದು ಕುವೈತ್&zwnj;ನಲ್ಲಿನ ಭಾರತೀಯ ದೂತಾವಾಸ ಹೇಳಿದೆ. ಆದರೆ ಆತನ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ.ಈ ಹಿನ್ನೆಲೆಯಲ್ಲಿ ವಿಮಾನ ಹಾರಾಟ ರದ್ದು ಮಾಡಲಾಗಿದ್ದು, ಕೆಲ ವಿಮಾನಗಳ ಮಾರ್ಗ ಬದಲಾಯಿಸಲಾಗಿದೆ. ಮಧ್ಯಾಹ್ನದ ಬಳಿಕ ಕುವೈಟ್&zwnj; ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರ ಭಾಗಶಃ ಪುನರ್&zwnj; ಆರಂಭವಾಗಿದೆ.&lt;/p&gt;&lt;h3&gt;ಹಡಗುಗಳ ಮೇಲೆ ದಾಳಿ:&lt;/h3&gt;&lt;p&gt;ಇರಾನ್&zwnj; ಪ್ರಕಾರ, ಅಮೆರಿಕವು ಹೋರ್ಮುಜ್&zwnj; ಜಲಸಂಧಿ ಸಮೀಪ ಇರಾನ್&zwnj;ನ ತೈಲ ಹಡಗೊಂದರ ಮೇಲೆ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಪನಾಮಾ ಮೂಲದ ಹಡಗಿನ ಮೇಲೆ ಇರಾನ್&zwnj; ಪ್ರತಿದಾಳಿ ನಡೆಸಿದೆ.&lt;/p&gt;&lt;p&gt;ಅಮೆರಿಕವು ತನ್ನ ದಾಳಿಯನ್ನು ಸಮರ್ಥಿಸಿಕೊಂಡಿದ್ದು, ಒಂದು ವೇಳೆ ಬೇರೆ ದೇಶಗಳ ಹಡಗುಗಳು ಹೋರ್ಮುಜ್&zwnj; ಮೂಲಕ ಸಾಗಲು ಅವಕಾಶ ನೀಡದಿದ್ದರೆ, ಇರಾನ್&zwnj;ನ ಹಡಗು ಸಾಗಲೂ ಅವಕಾಶ ಸಿಗುವುದಿಲ್ಲ ಎಂದು ಹೇಳಿಕೊಂಡಿದೆ.&lt;/p&gt;&lt;p&gt;ಲೆಬನಾನ್&zwnj; ಮೇಲೆ ಇಸ್ರೇಲ್ ದಾಳಿ:&lt;/p&gt;&lt;p&gt;ಈ ನಡುವೆ ದಾಳಿ ಮಾಡದಂತೆ ಟ್ರಂಪ್ ಸೂಚನೆ ಹೊರತಾಗ್ಯೂ ಲೆಬನಾನ್ ರಾಜಧಾನಿ ಬೈರೂತ್ ಮೇಲೆ ಇಸ್ರೇಲ್&zwnj; ವಾಯುದಾಳಿ ಮಾಡಿದೆ. ಒಂದು ಕಾರಿಗೆ ಹಾನಿ ಆಗಿದೆ.&lt;/p&gt;&lt;p&gt;- ಇರಾನ್&zwnj; ಹಡಗು, ಕ್ವೆಶ್ಮ್&zwnj; ದ್ವೀಪದ ಮೇಲೆ ಅಮೆರಿಕ ದಾಳಿ&lt;/p&gt;&lt;p&gt;- ಇರಾನ್&zwnj;ನಿಂದ ಕುವೈತ್&zwnj;, ಬಹ್ರೇನ್&zwnj; ಮೇಲೆ ಪ್ರತಿದಾಳಿ&lt;/p&gt;&lt;p&gt;- ಕುವೈತ್ ಏರ್&zwnj;ಪೋರ್ಟ್&zwnj; ಮೇಲೆ ದಾಳಿ: ಭಾರತೀಯ ಬಲಿ&lt;/p&gt;&lt;p&gt;- ಸಮರದ ವೇಳೆ ಮೃತರಾದ ಭಾರತೀಯರ ಸಂಖ್ಯೆ 10ಕ್ಕೆ&lt;/p&gt;&lt;p&gt;- ಇಂಥ ದಾಳಿ ಸಲ್ಲದು, ಕೂಡಲೇ ನಿಲ್ಲಿಸಿ: ಭಾರತ ಆಕ್ರೋಶ&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/us-strikes-iran-s-qeshm-islands-as-tehran-fires-missiles-at-kuwait-bahrain/articleshow-qf9r7kq"/>
        </item>
        <item>
            <title><![CDATA[8,750 ಅಕ್ರಮ ಬೆಟ್ಟಿಂಗ್ ಜಾಲ ಪತ್ತೆ ಹಚ್ಚಿದ ಸೈಬರ್‌ ಕಮಾಂಡ್‌ ಘಟಕ!]]></title>
            <link>https://www.kannadaprabha.in/india-news/8-750-illegal-betting-network-detectedattacked-cyber-command-unit/articleshow-qk62roz</link>
            <guid isPermaLink="true">https://www.kannadaprabha.in/india-news/8-750-illegal-betting-network-detectedattacked-cyber-command-unit/articleshow-qk62roz</guid>
            <pubDate>Tue, 02 Jun 2026 04:59:29 +0530</pubDate>
            <description><![CDATA[ರಾಜ್ಯ ಸೈಬರ್&zwnj; ಕಮಾಂಡ್ ಘಟಕ (ಸಿಸಿಯು) ಇಂಡಿಯನ್ ಸೈಬರ್&zwnj; ಕ್ರೈಂ ಕೋ ಆರ್ಡಿನೇಷನ್ ಸೆಂಟರ್&zwnj; (ಐ4ಸಿ) ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ, ದೇಶಾದ್ಯಂತ 8,750 ಅಕ್ರಮ ಬೆಟ್ಟಿಂಗ್ ವೆಬ್&zwnj;ಸೈಟ್&zwnj;ಗಳು, ಮೊಬೈಲ್ ಅಪ್ಲಿಕೇಶನ್&zwnj;ಗಳು ಹಾಗೂ ಬೆಟ್ಟಿಂಗ್&zwnj; ಯುಆರ್&zwnj;ಎಲ್&zwnj; ಜಾಲ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.]]></description>
            <media:content url="https://static-gi.asianetnews.com/images/01kkn475zkqnchpe4yza3grvc2/how-to-report-private-photo-leak-online-blackmail-stopncii-case-create-cyber-crime-protection-dsp-santosh-patel-guide-1773456824307.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಬೆಂಗಳೂರು : &amp;nbsp;&lt;/strong&gt;ರಾಜ್ಯ ಸೈಬರ್&zwnj; ಕಮಾಂಡ್ ಘಟಕ (ಸಿಸಿಯು) ಇಂಡಿಯನ್ ಸೈಬರ್&zwnj; ಕ್ರೈಂ ಕೋ ಆರ್ಡಿನೇಷನ್ ಸೆಂಟರ್&zwnj; (ಐ4ಸಿ) ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ, ದೇಶಾದ್ಯಂತ 8,750 ಅಕ್ರಮ ಬೆಟ್ಟಿಂಗ್ ವೆಬ್&zwnj;ಸೈಟ್&zwnj;ಗಳು, ಮೊಬೈಲ್ ಅಪ್ಲಿಕೇಶನ್&zwnj;ಗಳು ಹಾಗೂ ಬೆಟ್ಟಿಂಗ್&zwnj; ಯುಆರ್&zwnj;ಎಲ್&zwnj; ಜಾಲ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.&lt;/p&gt;&lt;h2&gt;ಐಪಿಎಲ್ ಪಂದ್ಯಾವಳಿ ವೇಳೆ ಭಾರೀ ಕ್ರಿಕೆಟ್ ಬೆಟ್ಟಿಂಗ್&zwnj;&lt;/h2&gt;&lt;p&gt;ಇತ್ತೀಚೆಗೆ ಐಪಿಎಲ್ ಪಂದ್ಯಾವಳಿ ವೇಳೆ ಭಾರೀ ಕ್ರಿಕೆಟ್ ಬೆಟ್ಟಿಂಗ್&zwnj; ವಹಿವಾಟು ನಡೆದಿತ್ತು. ಇದರ ಬೆನ್ನಲ್ಲೇ ರಾಜ್ಯ ಸೈಬರ್&zwnj; ಕಮಾಂಡ್ ಘಟಕ ಈ ಕಾರ್ಯಾಚರಣೆ ನಡೆಸಿದೆ. ಗುಪ್ತಚರ ಮಾಹಿತಿ ಆಧರಿಸಿ ವಿಶೇಷ ಸೈಬರ್ ತಂಡಗಳು ತನಿಖೆ ನಡೆಸಿ, ಕ್ರಿಕೆಟ್ ಬೆಟ್ಟಿಂಗ್ ವೇದಿಕೆಗಳನ್ನು ನಿರ್ವಹಿಸುತ್ತಿದ್ದ ಸಂಘಟಿತ ಗುಂಪುಗಳನ್ನು ಪತ್ತೆ ಹಚ್ಚಿದೆ. ಈ ವೇದಿಕೆಗಳು ಮಿರರ್&zwnj; ಡೊಮೇನ್, ಸಬ್ ಡೊಮೇನ್&zwnj;ಗಳ ಮತ್ತು ನಕಲಿ ಯುಆರ್&zwnj;ಎಲ್&zwnj;ಗಳ ಮೂಲಕ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ. ಈ ಸಂಬಂಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66ಸಿ, 66ಡಿ ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್&zwnj;ಎಸ್&zwnj;) ಸೆಕ್ಷನ್&zwnj; 318 (4) ಮತ್ತು 319 (2) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h3&gt;ಸೈಬರ್ ಪೊಲೀಸರ ತಂಡ ಈ ಕಾರ್ಯಾಚರಣೆ&lt;/h3&gt;&lt;p&gt;ಸೈಬರ್ ಕಮಾಂಡ್ ಸೆಂಟರ್&zwnj;ನ ಡಿಜಿಪಿ ಪ್ರಣವ್ ಮೊಹಂತಿ, ಡಿಐಜಿಪಿ ಎಚ್.ಡಿ.ಆನಂದ್&zwnj; ಕುಮಾರ್ ನೇತೃತ್ವದಲ್ಲಿ ಮತ್ತು ಸೈಬರ್ ಪೊಲೀಸರ ತಂಡ ಈ ಕಾರ್ಯಾಚರಣೆ ನಡೆಸಿದೆ.&lt;/p&gt;&lt;p&gt;ಈ ಅಕ್ರಮ ಬೆಟ್ಟಿಂಗ್ ಜಾಲಗಳ ಪರಿಣಾಮ ಸಾವಿರಾರು ನಾಗರಿಕರು ಆರ್ಥಿಕ ಸಂಕಷ್ಟ, ಮಾನಸಿಕ ಕಿರುಕುಳ, ಸಾಲದ ಒತ್ತಡದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ದಾಳಿಯಿಂದಾಗಿ ಹಲವರಿಗೆ ಆರ್ಥಿಕ ನಷ್ಟ ಉಂಟಾಗುವುದನ್ನು ತಡೆಯಲಾಗಿದೆ. ಬೆಟ್ಟಿಂಗ್&zwnj;ಗೆ ತೊಡಗಿಸುತ್ತಿದ್ದ ಹಣದ ಮೂಲ, ಬೆಟ್ಟಿಂಗ್ ನಿರ್ವಾಹಕರ ಪತ್ತೆ ಮಾಡುವುದು ಸೇರಿ ಸುಧಾರಿತ ತಾಂತ್ರಿಕ ತನಿಖೆಗಳು ಪ್ರಗತಿಯಲ್ಲಿವೆ ಎಂದು ಸೈಬರ್ ಕಮಾಂಡ್ ಸೆಂಟರ್&zwnj;ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/8-750-illegal-betting-network-detectedattacked-cyber-command-unit/articleshow-qk62roz"/>
        </item>
        <item>
            <title><![CDATA[ 700 ಪಾಕಿಸ್ತಾನೀಯರಿಂದ ಬ್ರಿಟಿಷ್‌ ಅಪ್ರಾಪ್ತೆ ಮೇಲೆ ರೇಪ್‌!]]></title>
            <link>https://www.kannadaprabha.in/india-news/british-mp-rupert-lowe-has-revealed-that-a-gang-of-pakistani-taxi-drivers-and-market-vendors-are-involved-in-child-sexual/articleshow-r2fs6ag</link>
            <guid isPermaLink="true">https://www.kannadaprabha.in/india-news/british-mp-rupert-lowe-has-revealed-that-a-gang-of-pakistani-taxi-drivers-and-market-vendors-are-involved-in-child-sexual/articleshow-r2fs6ag</guid>
            <pubDate>Wed, 03 Jun 2026 01:45:00 +0530</pubDate>
            <description><![CDATA[ಪಾಕಿಸ್ತಾನ ಮೂಲದ ಟ್ಯಾಕ್ಸಿ ಚಾಲಕರು ಮತ್ತು ಮಾರುಕಟ್ಟೆ ವ್ಯಾಪಾರಿಗಳನ್ನೊಳಗೊಂಡ ಗ್ಯಾಂಗ್&zwnj; ಬ್ರಿಟನ್&zwnj;ನಾದ್ಯಂತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಅಪ್ರಾಪ್ತೆಯೊಬ್ಬಳ ಮೇಲೆ 600-700 ಜನ ಅತ್ಯಾಚಾರ ಎಸಗಿದ ಆಘಾತಕಾರಿ ವಿಷಯವನ್ನು ಬ್ರಿಟಿಷ್&zwnj; ಸಂಸದ ರೂಪರ್ಟ್ ಲೋವ್ ಬಹಿರಂಗಪಡಿಸಿದ್ದಾರೆ.]]></description>
            <media:content url="https://static-assets.asianetnews.com/kp/json/02062026/pictures/GROOM_826.JPG" type="image/jpeg" height="390" width="690"/>
            <content:encoded><![CDATA[&lt;p&gt;-ಬ್ರಿಟನ್&zwnj;ನಲ್ಲಿದೆ ಲೈಂಗಿಕ ಶೋಷಕರ ಗ್ಯಾಂಗ್&zwnj; &lt;/p&gt;-ಬಹುತೇಕರು ಪಾಕ್&zwnj; ಮೂಲದ ಟ್ಯಾಕ್ಸಿ ಚಾಲಕರು &lt;p&gt;-ಬ್ರಿಟನ್&zwnj; ಸಂಸತ್ತಿಗೆ ಸಂಸದ ರೂಪರ್ಟ್&zwnj; ವರದಿ&lt;/p&gt;-ನಾಯಿಯಿಂದಲೂ ರೇಪ್&zwnj; ಮಾಡಿಸಿದ್ದ ಪಾಪಿಗಳು&lt;p&gt;ಲಂಡನ್&zwnj;: ಪಾಕಿಸ್ತಾನ ಮೂಲದ ಟ್ಯಾಕ್ಸಿ ಚಾಲಕರು ಮತ್ತು ಮಾರುಕಟ್ಟೆ ವ್ಯಾಪಾರಿಗಳನ್ನೊಳಗೊಂಡ ಗ್ಯಾಂಗ್&zwnj; ಬ್ರಿಟನ್&zwnj;ನಾದ್ಯಂತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಅಪ್ರಾಪ್ತೆಯೊಬ್ಬಳ ಮೇಲೆ 600-700 ಜನ ಅತ್ಯಾಚಾರ ಎಸಗಿದ ಆಘಾತಕಾರಿ ವಿಷಯವನ್ನು ಬ್ರಿಟಿಷ್&zwnj; ಸಂಸದ ರೂಪರ್ಟ್ ಲೋವ್ ಬಹಿರಂಗಪಡಿಸಿದ್ದಾರೆ.&lt;/p&gt;ಇತ್ತೀಚೆಗೆ ತಾವು ವೈಯಕ್ತಿಕವಾಗಿ ನಡೆಸಿದ ಕನಿಷ್ಠ 85 ಪ್ರಕರಣಗಳ ತನಿಖಾ ವರದಿಯನ್ನು ಸಂಸತ್ತಿನಲ್ಲಿ ಹಂಚಿಕೊಂಡಿರುವ ಅವರು, ಸಂತ್ರಸ್ತರ ಮೇಲಿನ ತೀವ್ರ ಲೈಂಗಿಕ ಶೋಷಣೆ, ಅಪ್ರಾಪ್ತರ ಗರ್ಭಧಾರಣೆ, ಬೆದರಿಕೆ, ಪೊಲೀಸ್&zwnj; ದುಷ್ಕೃತ್ಯ ಹಾಗೂ ಸಾಂಸ್ಥಿಕ ವೈಫಲ್ಯದ ಕುರಿತು ಸಾಕ್ಷ್ಯಗಳ ಸಮೇತ ಮಾಹಿತಿ ನೀಡಿದ್ದಾರೆ. 600-700 ಜನರಿಂದ ಅತ್ಯಾಚಾರ: ಸಂಸದ ಲೋವ್ ಅತ್ಯಾಚಾರ ಸಂತ್ರಸ್ತೆಯರ ಹೇಳಿಕೆಗಳನ್ನು ವರದಿ ಮಾಡಿದ್ದಾರೆ. &lsquo;ನಾನು 13 ವರ್ಷದವಳಿದ್ದಾಗ ಲೈಂಗಿಕ ದೌರ್ಜನ್ಯ ಆರಂಭವಾಯಿತು. 600-700 ಜನ 3 ವರ್ಷಗಳ ಕಾಲ ನನ್ನ ಮೇಲೆ ಅತ್ಯಾಚಾರ ಎಸಗಿದ್ಧಾರೆ&rsquo; ಎಂದು ಯುವತಿಯೊಬ್ಬಳು ಹೇಳಿಕೊಂಡಿದ್ದಾಳೆ. &lsquo;ನನ್ನ ಯೋನಿಯಿಂದ ರಕ್ತಸ್ರಾವವಾಗುತ್ತಿತ್ತು. ಕುಳಿತುಕೊಳ್ಳಲು ಸಾಧ್ಯವಾಗದಷ್ಟು ಊದಿಕೊಂಡಿತ್ತು. ಪಾನೀಯದಲ್ಲಿ ಮದ್ಯ ಬೆರೆಸಿ ನನಗೆ ಕುಡಿಸಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿಗೆ ಹೇಳಿದೆ. ಅವರು ಯಾವುದೇ ಪ್ರಶ್ನೆಗಳನ್ನು ಕೇಳಲಿಲ್ಲ. ಮಾತ್ರೆಗಳನ್ನು ನೀಡಿ ನನ್ನನ್ನು ಬಿಡುಗಡೆ ಮಾಡಿದರು. ನನಗೆ ಆಗ 15 ವರ್ಷ ವಯಸ್ಸಾಗಿತ್ತು&rsquo; ಎಂದು ಇನ್ನೊಬ್ಬ ಸಂತ್ರಸ್ತೆ ತಿಳಿಸಿದ್ದಾರೆ.&lsquo;ನನ್ನ ಸುತ್ತಲೂ ಪುರುಷರಿದ್ದರು. ಅವರು ವಿಡಿಯೋ ಚಿತ್ರೀಕರಿಸುತ್ತಾ ನಗುತ್ತಿದ್ದರು. ನಾಯಿ ನಿಜವಾಗಿಯೂ ನನ್ನ ಮೇಲೆ ಅತ್ಯಾಚಾರ ಮಾಡಬಹುದೇ ಅಥವಾ ಇಲ್ಲವೇ ಎಂದು ಅವರು ಪಂದ್ಯ ಕಟ್ಟಿದ್ದರು. ಕೊನೆಗೆ ನಾಯಿ ನನ್ನ ಮೇಲೆ ಅತ್ಯಾಚಾರ ಮಾಡಿತು&rsquo; ಎಂದು ಮತ್ತೊಬ್ಬ ಮಹಿಳೆ ಭಯಾನಕ ಅನುಭವವನ್ನು ಬಿಚ್ಚಿಟ್ಟಿದ್ದಾರೆ. 25 ವರ್ಷಗಳ ಹಿಂದಿನಿಂದ ಸಕ್ರಿಯ:1997ರ ಅವಧಿಯಿಂದಲೇ ಈ ಗ್ಯಾಂಗ್&zwnj; ಸಕ್ರಿಯವಾಗಿದೆ. 2010ರಲ್ಲಿ ಬಾಲಕಿಯರ ಮೇಲಿನ ಅತ್ಯಾಚಾರ ಆರೋಪದಲ್ಲಿ ಐವರು ಪಾಕಿಸ್ತಾನೀಯರನ್ನು ಬಂಧಿಸಲಾಯಿತು. ಆ ಬಳಿಕ ಇವರ ಜಾಲ ಬೆಳಕಿಗೆ ಬಂತು. ಬ್ರಿಟನ್&zwnj;ನ ಸುಮಾರು 50 ನಗರಗಳಲ್ಲಿ ಇವರ ಜಾಲ ಸಕ್ರಿಯವಾಗಿದೆ ಎನ್ನಲಾಗಿದೆ. 1997ರಿಂದ 2013ರ ಅವಧಿಯಲ್ಲಿ 1,400 ಮಕ್ಕಳ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು 2014ರಲ್ಲಿ ಪ್ರೊ. ಅಲೆಕ್ಸಿಸ್&zwnj; ಜೈ ಅವರು ನೀಡಿದ ವರದಿ ತಿಳಿಸಿದೆ.]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/british-mp-rupert-lowe-has-revealed-that-a-gang-of-pakistani-taxi-drivers-and-market-vendors-are-involved-in-child-sexual/articleshow-r2fs6ag"/>
        </item>
        <item>
            <title><![CDATA[ಮುಸುರೆ ತಿಕ್ಕುತ್ತಿದ್ದ ಕಲಿತಾ  ಇದೀಗ ಬಂಗಾಳದ ಸಚಿವೆ!]]></title>
            <link>https://www.kannadaprabha.in/politics-news/once-a-woman-who-earned-a-living-by-doing-household-chores-she-is-now-a-minister-in-bengal/articleshow-wr8zrd1</link>
            <guid isPermaLink="true">https://www.kannadaprabha.in/politics-news/once-a-woman-who-earned-a-living-by-doing-household-chores-she-is-now-a-minister-in-bengal/articleshow-wr8zrd1</guid>
            <pubDate>Tue, 02 Jun 2026 11:18:24 +0530</pubDate>
            <description><![CDATA[&lt;p&gt;ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಬಿಜೆಪಿಯ ಸುವೇಂದು ಅಧಿಕಾರಿ ಅಧಿಕಾರ ವಹಿಸಿಕೊಂಡ 3 ವಾರ ಬಳಿಕ ಇದೀಗ ಸಂಪುಟ ವಿಸ್ತರಣೆ ಆಗಿದ್ದು, ಪಕ್ಷದ 35 ಶಾಸಕರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.&lt;/p&gt;]]></description>
            <media:content url="https://static-gi.asianetnews.com/images/01kqw0thbanbcgtzw4k72yezfh/----------------------2026-05-05t171538.510-1777983112554.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಕೋಲ್ಕತಾ : &amp;nbsp;&lt;/strong&gt;ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಬಿಜೆಪಿಯ ಸುವೇಂದು ಅಧಿಕಾರಿ ಅಧಿಕಾರ ವಹಿಸಿಕೊಂಡ 3 ವಾರ ಬಳಿಕ ಇದೀಗ ಸಂಪುಟ ವಿಸ್ತರಣೆ ಆಗಿದ್ದು, ಪಕ್ಷದ 35 ಶಾಸಕರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.&lt;/p&gt;&lt;p&gt;ವಿಶೇಷವೆಂದರೆ, ಈ ಹಿಂದೆ ಅನ್ಯರ ಮನೆಗಳ ಮುಸುರೆ ತಿಕ್ಕಿ ಜೀವನ ನಡೆಸುತ್ತಿದ್ದ ಹಾಗೂ ಇತ್ತೀಚೆಗೆ ಶಾಸಕಿ ಆಗಿ ಆಯ್ಕೆ ಆಗಿದ್ದ ಕಲಿತಾ ಮಾಝಿ ಅವರೂ ಸಚಿವರ ಪಟ್ಟಿಯಲ್ಲಿ ಇದ್ದಾರೆ. ಇವರಿಗೆ ರಾಜ್ಯ ಸಚಿವೆ ಸ್ಥಾನಮಾನ ನೀಡಲಾಗಿದೆ. ಮಾಜಿ ಕ್ರಿಕೆಟಿಗ ಅಶೋಕ್&zwnj; ದಿಂಡಾ ಹಾಗೂ ಪತ್ರಕರ್ತ ಸ್ವಪನ್&zwnj; ದಾಸ್&zwnj; ಗುಪ್ತಾ ಕೂಡ ಸಚಿವ ಸ್ಥಾನ ಪಡೆದಿದ್ದಾರೆ.&lt;/p&gt;&lt;p&gt;ಕೋಲ್ಕತಾದ ಲೋಕಭವನದಲ್ಲಿಯ ಕಾರ್ಯಕ್ರಮದಲ್ಲಿ ರಾಜ್ಯಪಾಲ ಆರ್&zwnj;.ಎನ್&zwnj;.ರವಿ ಪ್ರಮಾಣ ಬೋಧಿಸಿದರು. ಕೆಲವರು ಸಂಪುಟ ಸಚಿವರಾಗಿ ಪ್ರಮಾಣ ಸ್ವೀಕರಿಸಿದರೆ ಇನ್ನು ಕೆಲವರು ರಾಜ್ಯ ಸಚಿವರಾಗಿ ಪ್ರಮಾಣ ಪಡೆದರು. ಈ ಮೂಲಕ ಮಂತ್ರಿಮಂಡಲ ಸಾಮರ್ಥ್ಯ 41ಕ್ಕೆ ಏರಿಕೆಯಾಗಿದೆ. ಈಗ ಸುವೇಂದು ಸರ್ಕಾರ ವಿಧಾನಸಭೆಯಲ್ಲಿ 294 ಸದಸ್ಯ ಬಲ ಹೊಂದಿದೆ.&lt;/p&gt;&lt;p&gt;ಇತ್ತೀಚಿನ ಚುನಾವಣೆಯಲ್ಲಿ ಬಜೆಪಿ ಗೆಲುವಿನ ಬಳಿಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ಸುವೇಂದು ಮೇ 3ಕ್ಕೆ ಪ್ರಮಾಣ ಸ್ವೀಕರಿಸಿದ್ದರು.&lt;/p&gt;&lt;h2&gt;&lt;strong&gt;2021ರಲ್ಲೂ ಸ್ಪರ್ಧಿಸಿದ್ದ ಕಲಿತಾ:&lt;/strong&gt;&lt;/h2&gt;&lt;p&gt;ರಾಜಕೀಯ ಪ್ರವೇಶಕ್ಕೂ ಮುನ್ನ ಮುಸುರೆ ತಿಕ್ಕುತ್ತಿದ್ದ ಕಲಿತಾ, ಈ ಹಿಂದಿನ 2021ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಇದೀಗ ಮತ್ತೆ ಪೂರ್ವ ಬರ್ಧಮಾನ್&zwnj; ಜಿಲ್ಲೆಯ ಆಸುಗ್ರಾಮ ಕ್ಷೇತ್ರದಿಂದ ಪಕ್ಷದ ಟಿಕೆಟ್&zwnj; ಪಡೆದು ಗೆದ್ದಿದ್ದರು. ಅವರ ಪತಿ ಪ್ಲಂಬರ್&zwnj; ಆಗಿದ್ದಾರೆ.&lt;/p&gt;&lt;h3&gt;- ಸಿಎಂ ಸುವೇಂದು ಸಂಪುಟದಲ್ಲಿ ಬಡ ಮಹಿಳೆಗೆ ಸ್ಥಾನ&lt;/h3&gt;&lt;p&gt;- ಮಾಜಿ ಕ್ರಿಕೆಟಿಗ ಅಶೋಕ್&zwnj; ದಿಂಡಾಗೂ ಸಚಿವ ಸ್ಥಾನ&lt;/p&gt;&lt;p&gt;ಕಂಡವರ ಮನೆಯಲ್ಲಿ ಮುಸುರೆ ತಿಕ್ಕುತ್ತಿದ್ದ ಕಲಿತಾಗೆ 2021ರಲ್ಲಿ ಬಿಜೆಪಿಯಿಂದ ಟಿಕೆಟ್&zwnj; ಪ್ರಕಟ&lt;/p&gt;&lt;p&gt;ಆಗ ಬಂಗಾಳದ ಅಸುಗ್ರಾಮ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ದಿಸಿ ಸೋಲುಕಂಡಿದ್ದ ಕಲಿತಾ&lt;/p&gt;&lt;p&gt;ಇದರ ಹೊರತಾಗಿಯೂ 2026ರಲ್ಲಿ ಮತ್ತೆ ಬಡಮಹಿಳೆಗೆ ಅದೇ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್&zwnj;&lt;/p&gt;&lt;p&gt;ಈ ಬಾರಿ ಟಿಎಂಸಿ ವಿರುದ್ಧ 12535 ಮತಗಳ ಅಂತರದಿಂದ ಗೆಲುವು. ಈಗ ಸಚಿವ ಸ್ಥಾನ&lt;/p&gt;&lt;p&gt;ಕಲಿತಾ ಜೊತೆಗೆ ಟೀಂ ಇಂಡಿಯಾದ ಮಾಜಿ ಆಟಗಾರ ಅಶೋಕ್&zwnj; ದಿಂಡಾಗೂ ಮಂತ್ರಿಗಿರಿ&lt;/p&gt;]]></content:encoded>
            <category>India</category>
            <dc:creator>Sujatha NR</dc:creator>
            <atom:link href="https://www.kannadaprabha.in/politics-news/once-a-woman-who-earned-a-living-by-doing-household-chores-she-is-now-a-minister-in-bengal/articleshow-wr8zrd1"/>
        </item>
        <item>
            <title><![CDATA[ಪಹಲ್ಗಾಂ ದಾಳಿ ಹಿಂದೆ ಪಾಕ್‌ ಸಂಚು ಮತ್ತೊಮ್ಮೆ ದೃಢ]]></title>
            <link>https://www.kannadaprabha.in/india-news/pakistan-link-in-pahalgam-attack-established-phone-recovered-from-terrorists-traces-to-karachi-bank/articleshow-xkpvw79</link>
            <guid isPermaLink="true">https://www.kannadaprabha.in/india-news/pakistan-link-in-pahalgam-attack-established-phone-recovered-from-terrorists-traces-to-karachi-bank/articleshow-xkpvw79</guid>
            <pubDate>Tue, 02 Jun 2026 03:15:00 +0530</pubDate>
            <description><![CDATA[26 ಭಾರತೀಯರನ್ನು ಬಲಿ ಪಡೆದ ಕಳೆದ ವರ್ಷದ ಪಹಲ್ಗಾಂ ಉಗ್ರದಾಳಿಯ ಹಿಂದೆ ನೆರೆದೇಶ ಪಾಕಿಸ್ತಾನದ ಕೈವಾಡವಿರುವುದನ್ನು ದೃಢಪಡಿಸುವ ಸಾಕ್ಷಿಯೊಂದು ಲಭಿಸಿದೆ. ದಾಳಿಕೋರರು ಬಳಸಿದ್ದ ಮೊಬೈಲ್&zwnj;ಅನ್ನು 2021ರಲ್ಲಿ ಪಾಕ್&zwnj;ಗೆ ಆಮದು ಮಾಡಿಕೊಳ್ಳಲಾಗಿತ್ತು. ಅದನ್ನೇ ಉಗ್ರರು ಬಳಸಿದ್ದರು ಎಂದು ಗೊತ್ತಾಗಿದೆ.]]></description>
            <media:content url="https://static-assets.asianetnews.com/kp/json/01062026/pictures/PAK_FLAG_280.JPG" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;strong&gt;ನವದೆಹಲಿ&lt;/strong&gt;: 26 ಭಾರತೀಯರನ್ನು ಬಲಿ ಪಡೆದ ಕಳೆದ ವರ್ಷದ ಪಹಲ್ಗಾಂ ಉಗ್ರದಾಳಿಯ ಹಿಂದೆ ನೆರೆದೇಶ ಪಾಕಿಸ್ತಾನದ ಕೈವಾಡವಿರುವುದನ್ನು ದೃಢಪಡಿಸುವ ಸಾಕ್ಷಿಯೊಂದು ಲಭಿಸಿದೆ. ದಾಳಿಕೋರರು ಬಳಸಿದ್ದ ಮೊಬೈಲ್&zwnj;ಅನ್ನು 2021ರಲ್ಲಿ ಪಾಕ್&zwnj;ಗೆ ಆಮದು ಮಾಡಿಕೊಳ್ಳಲಾಗಿತ್ತು. ಅದನ್ನೇ ಉಗ್ರರು ಬಳಸಿದ್ದರು ಎಂದು ಗೊತ್ತಾಗಿದೆ.&lt;/p&gt;&lt;h2&gt;3 ಉಗ್ರರಿಂದ ವಶಪಡಿಸಿಕೊಳ್ಳಲಾದ ಮೊಬೈಲ್&zwnj;&amp;nbsp;&lt;/h2&gt;&lt;p&gt;ಭದ್ರತಾಪಡೆಗಳು ಕೈಗೊಂಡಿದ್ದ ಆಪರೇಷನ್&zwnj; ಮಹಾದೇವ್&zwnj;ಗೆ ಬಲಿಯಾಗಿದ್ದ 3 ಉಗ್ರರಿಂದ ವಶಪಡಿಸಿಕೊಳ್ಳಲಾದ ಮೊಬೈಲ್&zwnj;ಗಳಲ್ಲಿ ಒಂದು 2021ರಲ್ಲಿ ಪಾಕಿಸ್ತಾನಕ್ಕೆ ಆಮದಾದ ಕಿತ್ತಳೆ ಬಣ್ಣದ ರೆಡ್&zwnj;ಮಿ 9ಟಿ ಮತ್ತು 2023ರಲ್ಲಿ ಆಮದು ಮಾಡಿಕೊಳ್ಳಲಾದ ಕಪ್ಪು ಬಣ್ಣದ ರೆಡ್&zwnj;ಮಿ ನೋಟ್&zwnj; 12 ಇತ್ತು. ಇದರಲ್ಲಿ ಒಂದನ್ನು ಕರಾಚಿಯಲ್ಲಿರುವ ಟೆಕ್ ಸಿರಾಟ್ ಪ್ರೈವೇಟ್ ಲಿ. ಎಂಬ ಕಂಪನಿ ತರಿಸಿಕೊಂಡಿತ್ತು ಹಾಗೂ ಫೈಸಲ್&zwnj; ಎಂಬ ಬ್ಯಾಂಕ್&zwnj; ಆರ್ಥಿಕ ನೆರವು ನೀಡಿತ್ತು ಎನ್ನಲಾಗಿದೆ.&lt;/p&gt;&lt;h3&gt;ಕಳ್ಳತನವಾಗಿ ಲಷ್ಕರ್&zwnj; ಉಗ್ರರರ ಪಾಲಾಗಿರಬಹುದು ಎಂಬ ಶಂಕೆ&lt;/h3&gt;&lt;p&gt;&amp;nbsp;ಇನ್ನೊಂದನ್ನು ಏರ್&zwnj; ಲಿಂಕ್&zwnj; ಕಮ್ಯುನಿಕೇಷನ್ಸ್&zwnj; ಎಂಬ ಕಂಪನಿ ಆರ್ಡರ್&zwnj; ಮಾಡಿತ್ತು.ಈ ಮೊಬೈಲ್&zwnj;ಗಳು ಕಂಪನಿಗಳನ್ನು ತಲುಪುವ ಮೊದಲೇ ಕಳ್ಳತನವಾಗಿ ಲಷ್ಕರ್&zwnj; ಉಗ್ರರರ ಪಾಲಾಗಿರಬಹುದು ಎಂಬ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಅತ್ತ ಅಮೆರಿಕದಲ್ಲಿ ನಡೆದ 9/11 ದಾಳಿಯ ಹಿಂದಿದ್ದ ಅಲ್&zwnj;-ಖೈದಾ ಉಗ್ರಸಂಘಟನೆಯ ಖಾತೆಯೊಂದು ಪೈಸಲ್&zwnj; ಬ್ಯಾಂಕ್&zwnj;ನಲ್ಲಿ ಇದ್ದುದು ಪತ್ತೆಯಾಗಿತ್ತು. ಆದರೆ ಉಗ್ರರೊಂದಿಗಿನ ನಂಟನ್ನು ತಳ್ಳಿಹಾಕಿರುವ ಬ್ಯಾಂಕ್&zwnj;, &lsquo;ಸಂಘಟನೆಗಳು ಬ್ಯಾನ್&zwnj; ಆಗುತ್ತಿದ್ದಂತೆ ಅವುಗಳ ಖಾತೆಗಳನ್ನು ಜಪ್ತಿ ಮಾಡಲಾಗಿತ್ತು&rsquo; ಎಂದಿದೆ.&lt;/p&gt;]]></content:encoded>
            <category>India</category>
            <dc:creator>KannadaprabhaNewsNetwork</dc:creator>
            <atom:link href="https://www.kannadaprabha.in/india-news/pakistan-link-in-pahalgam-attack-established-phone-recovered-from-terrorists-traces-to-karachi-bank/articleshow-xkpvw79"/>
        </item>
        <item>
            <title><![CDATA[ಬಂಗಾಳದಲ್ಲಿ ಮಹಿಳೆಯರಿಗೆ ಗೃಹಲಕ್ಷ್ಮಿ ರೀತಿ ಮಾಸಿಕ 3000 ರು.]]></title>
            <link>https://www.kannadaprabha.in/politics-news/in-bengal-women-to-receive-rs-3000-per-month-under-a-scheme-similar-to-gruha-lakshm/articleshow-ymsbrsd</link>
            <guid isPermaLink="true">https://www.kannadaprabha.in/politics-news/in-bengal-women-to-receive-rs-3000-per-month-under-a-scheme-similar-to-gruha-lakshm/articleshow-ymsbrsd</guid>
            <pubDate>Thu, 04 Jun 2026 07:40:12 +0530</pubDate>
            <description><![CDATA[&lt;p&gt;ಪಶ್ಚಿಮ ಬಂಗಾಳ ಸರ್ಕಾರ ಬುಧವಾರ ಮಹಿಳೆಯರಿಗಾಗಿ ಕರ್ನಾಟಕ ಮಾದರಿಯಲ್ಲಿ &lsquo;ಅನ್ನಪೂರ್ಣ ಯೋಜನೆ&rsquo;ಯನ್ನು ಪ್ರಾರಂಭಿಸಿದ್ದು, ಮೊದಲ ಹಂತದಲ್ಲಿ 28.25 ಲಕ್ಷ ಫಲಾನುಭವಿಗಳಿಗೆ ಮಾಸಿಕ 3,000 ರೂ. ನೆರವು ನೀಡುವುದಾಗಿ ಘೋಷಿಸಿದೆ.&lt;/p&gt;]]></description>
            <media:content url="https://static-gi.asianetnews.com/images/01kt0jg5vk346vjby8g827j5gq/asianet-news-bangla-images-size---2026-06-01t083845.740-1780283348851.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೋಲ್ಕತಾ:&lt;/strong&gt; ಪಶ್ಚಿಮ ಬಂಗಾಳ ಸರ್ಕಾರ ಬುಧವಾರ ಮಹಿಳೆಯರಿಗಾಗಿ ಕರ್ನಾಟಕ ಮಾದರಿಯಲ್ಲಿ &lsquo;ಅನ್ನಪೂರ್ಣ ಯೋಜನೆ&rsquo;ಯನ್ನು ಪ್ರಾರಂಭಿಸಿದ್ದು, ಮೊದಲ ಹಂತದಲ್ಲಿ 28.25 ಲಕ್ಷ ಫಲಾನುಭವಿಗಳಿಗೆ ಮಾಸಿಕ 3,000 ರೂ. ನೆರವು ನೀಡುವುದಾಗಿ ಘೋಷಿಸಿದೆ.&lt;/p&gt;&lt;h2&gt;ಯೋಜನೆಯನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ&lt;/h2&gt;&lt;p&gt;ಈ ಯೋಜನೆಯನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಮೊದಲ ಹಂತದಲ್ಲಿ 28,25,769 ಫಲಾನುಭವಿಗಳನ್ನು ಪೋರ್ಟಲ್&zwnj;ನಲ್ಲಿ ನೋಂದಾಯಿಸಲಾಗಿದೆ . ಮುಂದಿನ 3 ತಿಂಗಳಲ್ಲಿ ಹೊಸ ಅರ್ಜಿದಾರರ ಪರಿಶೀಲನೆ ಮಾಡಿ ಮತ್ತಷ್ಟು ಮಹಿಳೆಯರಿಗೆ ಮುಂದಿನ ಹಂತದಲ್ಲಿ ಯೋಜನೆ ವಿಸ್ತರಿಸುತ್ತೇವೆ ಎಂದರು.&lt;/p&gt;&lt;h3&gt;&lsquo;ಲಕ್ಷ್ಮಿ ಭಂಡಾರ್&zwnj;&rsquo; ಹೆಸರಿನ ಯೋಜನೆ ಹೊಂದಿತ್ತು&lt;/h3&gt;&lt;p&gt;ಹಿಂದಿನ ಟಿಎಂಸಿ ಸರ್ಕಾರದ &lsquo;ಲಕ್ಷ್ಮಿ ಭಂಡಾರ್&zwnj;&rsquo; ಹೆಸರಿನ ಯೋಜನೆ ಹೊಂದಿತ್ತು. ಇದರ ಅಡಿಯಲ್ಲಿ 2.42 ಕೋಟಿ ಫಲಾನುಭವಿಗಳು ತಿಂಗಳಿಗೆ ಗರಿಷ್ಠ 1,500 ರು. ಪಡೆಯುತ್ತಿದ್ದರು.&lt;/p&gt;]]></content:encoded>
            <category>India</category>
            <dc:creator>Sujatha NR</dc:creator>
            <atom:link href="https://www.kannadaprabha.in/politics-news/in-bengal-women-to-receive-rs-3000-per-month-under-a-scheme-similar-to-gruha-lakshm/articleshow-ymsbrsd"/>
        </item>
    </channel>
</rss>
