- ಪ್ರಿಯಾ ಕೆರ್ವಾಶೆ
ಗಜರಾಮ ಕುಸ್ತಿ ಆಧರಿತ ಚಿತ್ರ. ಶ್ರೀರಂಗಪಟ್ಟಣದಂಥಾ ಊರಲ್ಲಿರುವ ಮುಗ್ಧ ಯುವಕನ ಕಥೆ. ಅವನು ಕುಸ್ತಿ ಚಾಂಪಿಯನ್. ಬೆಂಗಳೂರಿಗೆ ಬಂದ ಮೇಲೆ ಅವನು ಏನಾಗ್ತಾನೆ ಅನ್ನುವ ಕಥೆ ಸಿನಿಮಾದ್ದು. ಈ ಪಾತ್ರಕ್ಕಾಗಿ ಮೂರು ತಿಂಗಳು ಮಡಿವಾಳದ ಗರಡಿ ಮನೆಯಲ್ಲಿ ಕುಸ್ತಿ ಪ್ರಾಕ್ಟೀಸ್ ಮಾಡಿದೆ. ಕುಸ್ತಿ ಪಟುಗಳ ದೇಡಧಾರ್ಢ್ಯ ಭಿನ್ನ, ಅದು ಜಿಮ್ನಲ್ಲಿ ಬಿಲ್ಡ್ ಮಾಡುವ ಬಾಡಿ ಥರ ಅಲ್ಲ. ಅವರ ಮ್ಯಾನರಿಸಂ ಬೇರೆ ಥರ ಇರುತ್ತೆ. ಇಂಥಾ ಸೂಕ್ಷ್ಮಗಳನ್ನೆಲ್ಲ ಅರಿತುಕೊಂಡೆ. ಕಾನ್ಫಿಡೆನ್ಸ್ ಬಂದ ಮೇಲೆ ಶೂಟ್ ಶುರು ಮಾಡಿದೆ. ಮೈನವಿರೇಳಿಸುವ ಆ್ಯಕ್ಷನ್ ಇರುವ ಅದ್ಭುತ ಸಿನಿಮಾದಲ್ಲಿ ನಟಿಸಿದ್ದು ಒಂದೊಳ್ಳೆ ಅನುಭವ.
- ಸಾಕಷ್ಟು ಸಿನಿಮಾಗಳು ಕುಸ್ತಿ ಸಬ್ಜೆಕ್ಟ್ ಮೇಲೆ ಬಂದಿವೆ. ಈ ಸಿನಿಮಾದ ವಿಶೇಷತೆ ಏನು?ಕಥೆ, ಮೇಕಿಂಗೇ ನಮ್ಮ ಕಾನ್ಫಿಡೆನ್ಸ್. ನಾವಿಲ್ಲಿ ಯಾರಿಗೂ ಬುದ್ಧಿವಾದ ಹೇಳೋದಕ್ಕೆ ಬಂದಿಲ್ಲ. ಹೀರೋ ಬದುಕು ತೋರಿಸಿ ಸಿಂಪಥಿ ತಗೊಳ್ಳೋದೆಲ್ಲ ಮಾಡ್ತಿಲ್ಲ. ಕಮರ್ಷಿಯಲ್ ಆಗಿ 2 ಗಂಟೆ ಮನರಂಜನೆ ನೀಡ್ತೀವಿ ಅಷ್ಟೇ.
ನಾವು ತುಂಬಾ ಕಮ್ಮಿ ಮಾತಾಡೋದು. ತಂದೆ ಬಗ್ಗೆ ಭಯ ಭಕ್ತಿ ಜಾಸ್ತಿ. ಇವತ್ತಿಗೂ ಪಕ್ಕದಲ್ಲಿ ಕೂತ್ಕೊಳ್ಳಲ್ಲ. ಎಂಟೂವರೆಗೆಲ್ಲ ಮನೆ ಸೇರ್ತೀವಿ. ಅಪ್ಪ ತುಂಬಾ ಸ್ಟ್ರಿಕ್ಟ್, ಸೀನ್ ಮೇಲೆ ನೋಡೋ ಥರ ಅಲ್ವೇ ಅಲ್ಲ. ಕಂಪ್ಲೀಟ್ ಅಪೊಸಿಟ್. ಆದರೆ ನನ್ನ ಸಿನಿಮಾ ರಿಲೀಸ್ಗೆ ಅವರ ಸ್ನೇಹಿತರನ್ನು ಕರ್ಕೊಂಡು ಬರ್ತಾರೆ. ಅವರಿಗೆಲ್ಲ ಪಾರ್ಟಿ ಕೊಡಿಸಿ ನನ್ನ ಆ್ಯಕ್ಟಿಂಗ್ ಬಗ್ಗೆ ಪಾಸಿಟಿವ್ ಆಗಿ ಮಾತಾಡ್ತಾರೆ. ನನ್ನ ಎದುರು ಮಾತ್ರ ತುಟಿ ಬಿಚ್ಚಲ್ಲ.
- ಕಲಾವಿದನ ಮಗನಾಗಿ ಇಂಡಸ್ಟ್ರಿಗೆ ಬಂದು ಎದುರಿಸಿದ ಸವಾಲುಗಳೇನು?